ಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ

ಕರ್ಮ ಎಂಬುದು ಹಿಂದೂ ಧರ್ಮದ ಕಲ್ಪನೆಯಾಗಿದ್ದು ವ್ಯವಸ್ಥೆಯಲ್ಲಿನ ಕಾರ್ಯಕಾರಣ ಸಂಬಂಧವನ್ನು ವಿವರಿಸುತ್ತದೆ.

ಅಂದರೆ ಹಿಂದಿನ ಪುಣ್ಯದಿಂದ ಪ್ರಸ್ತುತ ಜನ್ಮದಲ್ಲಿ ಒಳ್ಳೆಯದಾಗುತ್ತದೆ ಮತ್ತು ಪಾಪಕಾರ್ಯಗಳಿಂದ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಇದು ಆತ್ಮದ ಅನೇಕ ಜನ್ಮಗಳಲ್ಲಿ ಸಾಗುವಾಗ ಅದರ ಕರ್ಮ ಜನ್ಮದಿಂದ ಜನ್ಮಕ್ಕೆ ಸಾಗುತ್ತಾ ಅದರ ಪ್ರತೀ ಕರ್ಮವೂ ಮುಂದಿನ ಜನ್ಮದ ಮೇಲೆ ಪರಿಣಾಮ ಬೀರುತ್ತಾ ಮರುಜನ್ಮದ ಚಕ್ರವನ್ನೇ ಉಂಟುಮಾಡುತ್ತದೆ. ಕಾರ್ಯಕಾರಣ ಸಂಬಂಧವು ವಾಸ್ತವ ಜಗತ್ತಿಗಷ್ಟೇ ಅಲ್ಲದೆ ನಮ್ಮ ಯೋಚನೆಗಳು, ಮಾತುಗಳು, ಕ್ರಿಯೆಗಳು ಮತ್ತು ನಮ್ಮ ಆದೇಶದನ್ವಯ ಇತರರು ಮಾಡುವ ಕ್ರಿಯೆಗಳಿಗೂ ಅನ್ವಯಿಸುತ್ತದೆನ್ನಲಾಗುತ್ತದೆ. ಪುನರ್ಜನ್ಮದ ಚಕ್ರವು ಕೊನೆಗೊಂಡಾಗ ಮೋಕ್ಷವು ದೊರೆಯುತ್ತದೆ ಅಥವಾ ಸಂಸಾರದಿಂದ ಮುಕ್ತಿ ಪಡೆಯುತ್ತಾರೆ. ಎಲ್ಲಾ ಮರುಜನ್ಮಗಳೂ ಮಾನವನದಾಗಿರುವುದಿಲ್ಲ. ಭೂಮಿಯ ಮೇಲೆ ಜೀವದ ಹುಟ್ಟು ಸಾವುಗಳಲ್ಲಿ ೮.೪ ಮಿಲಿಯನ್‌ಗಳಷ್ಟು ರೀತಿಯ ಜೀವಿಗಳನ್ನುಂಟು ಮಾಡುತ್ತದೆ, ಆದರೆ ಮಾನವ ಜನ್ಮದಲ್ಲಿ ಮಾತ್ರ ಈ ಚಕ್ರದಿಂದ ಮುಕ್ತಿ ಪಡೆಯಬಹುದು.

ಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ
This article contains Indic text. Without proper rendering support, you may see question marks or boxes, misplaced vowels or missing conjuncts instead of Indic text.
ಹಿಂದೂ ಧರ್ಮದ
ಮೇಲಿನ ಒಂದು ಸರಣಿಯ ಭಾಗ
ಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತಹಿಂದೂ ಧರ್ಮ

ಓಂಬ್ರಹ್ಮಈಶ್ವರ
ಹಿಂದೂಹಿಂದೂ ಧರ್ಮದ ಇತಿಹಾಸ

ಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ

ಮೂಲ

ಆತ್ಮಕ್ಕೆ ದೇಹಾಂತರದ ಪ್ರಾಪ್ತಿಯು ಉಪದೇಶವು ಮಾಡಿದ ಪಾಪಫಲಕ್ಕನುಗುಣವಾಗಿ ಆಗುತ್ತದೆ ಎಂಬ ಸಿದ್ಧಾಂತವು ಋಗ್ವೇದದಲ್ಲಿ ಇಲ್ಲ. ಕರ್ಮದ ಪರಿಕಲ್ಪನೆಯು ಮೊದಲು ಭಗವದ್ಗೀತೆಯಲ್ಲಿ ಬಲವಾಗಿ ಕಾಣಿಸಿಕೊಂಡಿತು(c.೩೧೦೦ ಕ್ರಿ.ಪೂ).ಪುರಾಣಗಳಲ್ಲಿ ಕರ್ಮದ ಪ್ರಸ್ತಾಪವಿದೆ. ಪುರಾಣಗಳನ್ನು ವ್ಯಾಸಮಹರ್ಷಿಗಳು ದ್ವಾಪರ ಯುಗದ ಕೊನೆಯಲ್ಲಿ ಕಲಿಯುಗಕ್ಕೆ ಮಾಹಿತಿಯನ್ನು ಸಂರಕ್ಷಿಸುವ ಸಲುವಾಗಿ ರಚಿಸಿದರು ಎನ್ನಲಾಗಿದೆ. ಈ ಜ್ಞಾನವನ್ನು ಕೆಲವು ಸಂತರು ನೆನಪಿಟ್ಟುಕೊಂಡು ಕೇವಲ ಬಾಯಿಯಿಂದ ಬಾಯಿಯ ಮೂಲಕ ಪ್ರಸಾರ ಮಾಡುತ್ತಿದ್ದರು. ಶ್ರೀ ಯುಕ್ತೇಶ್ವರ್ರ ಪ್ರಕಾರ ಕಲಿಯುಗವು ಕ್ರಿ.ಪೂ ೭೦೦ರಲ್ಲಿ ಆರಂಭವಾಯಿತು.

ವ್ಯಾಖ್ಯಾನಗಳು

"ಕರ್ಮ"ದ ಸಾಹಿತ್ಯಿಕ ಅರ್ಥವೆಂದರೆ "ಕೆಲಸ" ಅಥವಾ "ಕ್ರಿಯೆ", ಮತ್ತು ವಿಶಾಲವಾಗಿ ವಿಶ್ವವ್ಯಾಪಿ ತತ್ವದ ಮೂಲಕ ಹೇಳುವುದಾದರೆ ಕಾರ್ಯ ಮತ್ತು ಪರಿಣಾಮವಾಗಿದ್ದು, ಕ್ರಿಯೆ ಮತ್ತು ಪ್ರತಿಕ್ರಿಯೆ, ಇದು ಹಿಂದೂ ನಂಬಿಕೆಯ ಪ್ರಕಾರ ಎಲ್ಲಾ ಅರಿವನ್ನು ಆಳುತ್ತದೆ. ಕರ್ಮವು ವಿಧಿಲಿಖಿತವಲ್ಲ, ಮಾನವನು ಶುದ್ಧ ಮನಸ್ಸಿನಿಂದ ಮಾಡಿದ ಕಾರ್ಯವು ಆತನ ಗಮ್ಯವನ್ನು ನಿರ್ಧರಿಸುತ್ತದೆ. ವೇದಗಳ ಪ್ರಕಾರ ಒಳ್ಳೆಯತನವನ್ನು ಬಿತ್ತಿದರೆ ನಾವು ನಾವು ಒಳ್ಳೆಯದನ್ನು ಕೊಯ್ಯುತ್ತೇವೆ, ನಾವು ಕೆಟ್ಟದ್ದನ್ನು ಬಯಸಿದರೆ ಕೆಟ್ಟದ್ದನ್ನೇ ಪಡೆಯುತ್ತೇವೆ. ಕರ್ಮವು ಈ ಮತ್ತು ಹಿಂದಿನ ಜನ್ಮಗಳಲ್ಲಿ ಮಾಡಿದ ನಮ್ಮ ಪೂರ್ಣ ಕ್ರಿಯೆಗಳು ಮತ್ತು ಅವುಗಳಿಂದಾದ ಪ್ರತಿಕ್ರಿಯೆಗಳ ಪೂರ್ಣಾಂಶವಾಗಿರುತ್ತದೆ, ಮತ್ತು ಅದು ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಕರ್ಮದ ಮೇಲೆ ಬುದ್ಧಿವಂತ ಕ್ರಿಯೆ ಮತ್ತು ನಿರ್ಲೀಪ್ತ ಪ್ರತಿಕ್ರಿಯೆಗಳ ಮೂಲಕ ವಿಜಯವನ್ನು ಸಾಧಿಸಬಹುದು. ಎಲ್ಲಾ ಕರ್ಮಗಳೂ ತಕ್ಷಣ ಪ್ರತಿಕ್ರಿಯೆ ನೀಡುವುದಿಲ್ಲ. ಕೆಲವು ಸಂಗ್ರಹಗೊಂಡು ಈ ಜನ್ಮ ಅಥವಾ ಮುಂದಿನದರಲ್ಲಿ ಅನಿರೀಕ್ಷಿತವಾಗಿ ಬರುತ್ತದೆ. ನಾವು ಕರ್ಮವನ್ನು ನಾಲ್ಕು ವಿಧಗಳಲ್ಲಿ ಹೊಂದಬಹುದು:

  • ಯೋಚನೆಗಳ ಮೂಲಕ
  • ಮಾತಿನ ಮೂಲಕ
  • ನಾವು ಮಾಡುವ ಕ್ರಿಯೆಗಳ ಮೂಲಕ
  • ನಮ್ಮ ಆದೇಶದನ್ವಯ ಇತರರು ಮಾಡುವ ಕ್ರಿಯೆಯ ಮೂಲಕ

ನಾವು ಯಾವಾಗಲಾದರೂ ಯೋಚಿಸಿದ, ಮಾತನಾಡಿದ, ಮಾಡಿದ ಅಥವಾ ಉಂಟಾಗುವುದಕ್ಕೆ ಕಾರಣವಾದುದೇ ಕರ್ಮ; ಈ ಕ್ಷಣದಲ್ಲಿ ಯೋಚಿಸಿದ, ಮಾತನಾಡಿದ ಅಥವಾ ಮಾಡಿದುದೂ ಕರ್ಮವೇ ಆಗಿದೆ. ಹಿಂದೂ ಧರ್ಮಗ್ರಂಥಗಳು ಕರ್ಮವನ್ನು ಮೂರು ಭಾಗಗಳಾಗಿ ವಿಂಗಡಿಸುತ್ತದೆ:

  • ಸಂಚಿತ ವು ಸಂಗ್ರಹಗೊಂಡ ಕರ್ಮವಾಗಿದೆ. ಎಲ್ಲಾ ಕರ್ಮಗಳನ್ನು ಒಂದೇ ಜನ್ಮದಲ್ಲಿ ಅನಭವಿಸಲು ಮತ್ತು ತಡೆದುಕೊಳ್ಳಲು ಅಗುವುದಿಲ್ಲ. ಈ ಸಂಚಿತ ಕರ್ಮ ದ ಸಂಗ್ರಹದ ಒಂದು ಹಿಡಿಯನ್ನು ಒಂದು ಜನ್ಮಕ್ಕೆ ತೆಗೆದುಕೊಳ್ಳಲಾಗುತ್ತದೆ ಮತ್ತು ಅದರ ಫಲವನ್ನು ಅಲ್ಲಿ ಅನುಭವಿಸಲಾಗುತ್ತದೆ, ಹಾಗೆ ಅನುಭವಿಸದೇ ಉಳಿದುಕೊಂಡುದುದನ್ನು ಪ್ರಾರಬ್ಧ ಕರ್ಮ ಎನ್ನುವರು.
  • ಪ್ರಾರಬ್ಧ ಫಲವನ್ನು ನೀಡುವ ಕರ್ಮವು ಸಂಗ್ರಹಿಸಿದ ಕರ್ಮದ ಭಾಗವಾಗಿದ್ದು "ಬಲಿಯುತ್ತದೆ" ಮತ್ತು ಜೀವನದಲ್ಲಿ ನಿರ್ಧಿಷ್ಟ ತೊಂದರೆಯಾಗಿ ಕಾಣಿಸಿಕೊಳ್ಳುತ್ತದೆ.
  • ಕ್ರಿಯಾಮಾನ ವು ಪ್ರಸ್ತುತ ಜನ್ಮದಲ್ಲಿ ಮಾಡಿದುದಾಗಿದೆ. ಎಲ್ಲಾ ಕ್ರಿಯಾಮಾನ ಕರ್ಮಗಳು ಸಂಚಿತ ಕರ್ಮ ವಾಗಿ ಮುಂದಿನ ಜನ್ಮವನ್ನು ರೂಪಿಸುತ್ತದೆ. ಮಾನವ ಜನ್ಮದಲ್ಲಿ ಮಾತ್ರ ನಾವು ನಮ್ಮ ಭವಿಷ್ಯದ ಗಮ್ಯವನ್ನು ಬದಲಾಯಿಸಬಹುದು. ಸಾವಿನ ನಂತರ ನಾವು ಕ್ರಿಯಾಶಕ್ತಿಯನ್ನು (ಕ್ರಿಯೆಯನ್ನು ಮಾಡುವ ಸಾಮರ್ಥ್ಯ) ಕಳೆದುಕೊಳ್ಳುತ್ತೇವೆ ಮತ್ತು ಮತ್ತೆ ಮಾನವನಾಗಿ ಹುಟ್ಟಿವವರೆಗೂ (ಕ್ರಿಯಾಮಾನ) ಕರ್ಮವನ್ನು ಮಾಡುತ್ತಾ ಸಾಗುತ್ತೇವೆ.

ನಾವು ಅರಿವಿದ್ದು ಮಾಡಿದ ಕರ್ಮವು ಅರಿವಿಲ್ಲದೆ ಮಾಡಿದ ಕರ್ಮಕ್ಕಿಂತ ಹೆಚ್ಚು ತೂಗುತ್ತದೆ. ನಮಗೆ ಗೊತ್ತಿಲ್ಲದೆ ತೆಗೆದುಕೊಂಡ ವಿಷದಂತೆ ಮತ್ತು ಉದ್ದೇಶರಹಿತವಾಗಿ ಅನುಭವಿಸುವ ಕಾರಣದಂತೆ ಕರ್ಮವು ಪರಿಣಾಮ ಬೀರುತ್ತದೆ. (ಕ್ರಿಯಾಮಾನ) ಕರ್ಮವನ್ನು ಮಾನವನು ಮಾತ್ರ ಅದನ್ನು ಸರಿ ತಪ್ಪೆಂದು ವಿಂಗಡಿಸಿ ಮಾಡಲು ಸಾಧ್ಯವಾಗುತ್ತದೆ. ಒಳ್ಳೆಯದನ್ನು ಕೆಟ್ಟದರಿಂದ ಬೇರ್ಪಡಿಸುವ ಶಕ್ತಿಯಿಲ್ಲದಿರುವುದರಿಂದ ಪ್ರಾಣಿಗಳು ಮತ್ತು ಎಳೆಯ ಮಕ್ಕಳು ಹೊಸ ಕರ್ಮವನ್ನು ಮಾಡುವುದಿಲ್ಲ (ಮತ್ತು ಅದು ಅವರ ಭವಿಷ್ಯದ ಗಮ್ಯದ ಮೇಲೆ ಪರಿಣಾಮ ಬೀರುವುದಿಲ್ಲ). ಸಚೇತನ ಜೀವಿಗಳು ಕರ್ಮದ ಫಲವನ್ನು ಅನುಭವಿಸಬಲ್ಲವಾಗಿವೆ, ಮತ್ತು ಅದನ್ನು ನಲಿವು ಅಥವಾ ನೋವಾಗಿ ಅನುಭವಿಸಬಹುದು.

ಹಿಂದೂ ಸಂತ ತುಳಸಿದಾಸ‌ ಹೇಳುವಂತೆ: "ನಮ್ಮ ಗುರಿಯು ನಾವು ಅಸ್ತಿತ್ವಕ್ಕೆ (ಜನ್ಮ ಪಡೆಯುವ) ಬರುವ ಮೊದಲೇ ನಿರ್ಧರಿತವಾಗಿರುತ್ತದೆ." ಸಂಚಿತ ಕರ್ಮ ದ ಸಂಗ್ರಹವು ಮುಗಿಯುವವರೆಗೂ ಅದರ ಭಾಗವನ್ನು ಪ್ರಾರಬ್ಧ ಕರ್ಮ ವಾಗಿ ಒಂದೊಂದು ಜನ್ಮದಲ್ಲಿಯೂ ಅನುಭವಿಸಬೇಕಾಗುತ್ತದೆ, ಮತ್ತು ಅದು ಹುಟ್ಟು ಮತ್ತು ಸಾವುಗಳ ಚಕ್ರಕ್ಕೆ ಕಾರಣವಾಗುತ್ತದೆ. ಸಂಗ್ರಹಗೊಂಡ ಸಂಚಿತ ಕರ್ಮಗಳು ಪೂರ್ಣಾಗಿ ಕಾಲಿಯಾಗುವವರೆಗೂ ಜೀವವು ಹುಟ್ಟು ಮತ್ತು ಸಾವುಗಳ ಚಕ್ರದಿಂದ ಮೋಕ್ಷ (ಸ್ವತಂತ್ರ) ಪಡೆಯುವುದಿಲ್ಲ.

ಭೂಮಿಯಲ್ಲಿ ಹುಟ್ಟು ಮತ್ತು ಸಾವುಗಳ ಚಕ್ರವು ೮.೪ ಮಿಲಿಯನ್‌ಗಳಷ್ಟು ರೀತಿಯ ಜೀವಗಳಿಂದ ಆಗಿದೆ ಮತ್ತು ಅದರಲ್ಲೊಂದು ಮಾನವ ಜನ್ಮ. ಕೇವಲ ಮಾನವ ಜನ್ಮದಲ್ಲಿ ಮಾತ್ರ ನಾವು ಸಕಾಲದಲ್ಲಿ ಸಕಾರ್ಯಗಳನ್ನು ಮಾಡಿ ನಮ್ಮ ಗಮ್ಯವನ್ನು ರೂಪಿಸಿಕೊಳ್ಳುವ ಸ್ಥಾನದಲ್ಲಿರುತ್ತೇವೆ. ಧನಾತ್ಮಕ ಕ್ರಿಯೆಗಳು, ಶುದ್ಧ ಯೋಚನೆಗಳು, ಪ್ರಾರ್ಥನೆ, ಮಂತ್ರ ಮತ್ತು ಧ್ಯಾನಗಳಿಂದ ಪ್ರಸ್ತುತ ಜನ್ಮದಲ್ಲಿ ನಾವು ನಮ್ಮ ಕರ್ಮದ ಮೇಲೆ ಪ್ರಭಾವ ಬೀರಿ ನಮ್ಮ ಗಮ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು. ಒಬ್ಬ ಆಧ್ಯಾತ್ಮಿಕ ಗುರುವು ನಮ್ಮ ಕರ್ಮದ ಫಲದ ಕ್ರಮಾನುಗತಿಯನ್ನು ಅರಿಯುತ್ತಾನಾದ್ದರಿಂದ ಆತ ನಮಗೆ ಸಹಾಯ ಮಾಡಬಲ್ಲವನಾಗಿದ್ದಾನೆ. ಒಳ್ಳೆಯ ಕರ್ಮದ ಮೂಲಕ ಮಾನವರಾಗಿ ನಾವು ಮಾತ್ರ ನಮ್ಮ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವ ಅವಕಾಶವನ್ನು ಪಡೆದಿದ್ದೇವೆ. ನಾವು ಜ್ಞಾನದ ಮತ್ತು ಸ್ಪಷ್ಟತೆಯ ಕೊರತೆಯಿಂದಾಗಿ ಋಣಾತ್ಮಕ ಕರ್ಮವನ್ನು ಮಾಡುತ್ತೇವೆ.

ಕರುಣೆಯಿಲ್ಲದ ಕಾರ್ಯದ ಫಲವೇ ಪಾಪ , ಮತ್ತು ಒಳ್ಳೆಯ ಕಾರ್ಯದ ಸಿಹಿಯಾದ ಫಲವೇ ಪುಣ್ಯ . ಒಬ್ಬ ಏನು ಮಾಡುತ್ತಾನೋ ಅದು ಅವನಾಗುತ್ತಾನೆ: ಪುಣ್ಯಪ್ರದವಾದ ಕ್ರಿಯೆಯಿಂದ ಗುಣವಂತನಾಗುತ್ತಾನೆ, ಮತ್ತು ಕೆಟ್ಟ ಕ್ರಿಯೆಯಿಂದ ದುಷ್ಟನಾಗುತ್ತಾನೆ.

ದೈವಿಕ ಶಕ್ತಿಗಳ ಪಾತ್ರಗಳು

ಹಿಂದೂ ಧರ್ಮದಲ್ಲಿ ದೈವೀ ಶಕ್ತಿಗಳು ಮಾಡಿದ ಕರ್ಮದ ಪರಿಣಾಮವನ್ನು ನಿಯಂತ್ರಿಸುವ ಕುರಿತಾದ ಪ್ರಸ್ತುತ ಬಳಕೆಯಲ್ಲಿರುವ ಮತ್ತು ಪೂರ್ವಕಾಲದಲ್ಲಿ ಬಳಕೆಯಲ್ಲಿದ್ದು ಈಗ ಇಲ್ಲದ ಅನೇಕ ನಂಬಿಕೆಗಳಿವೆ.

ವೇದಾಂತ ದೃಷ್ಟಿ

ಹಿಂದೂ ಧರ್ಮದ ಪ್ರಮುಖ ಶಾಖೆಯಾದ ವೇದಾಂತದ ಅನುಯಾಯಿಗಳು, ಈಶ್ವರನನ್ನು ಸರ್ವೋತ್ತಮನಾದ ದೇವರೆಂದು ಪರಿಗಣಿಸುತ್ತಾರೆ. ವೇದಾಂತದ ದೃಷ್ಟಿಯಲ್ಲಿ ಸರ್ವೋತ್ತಮನಾದ ದೇವರೇ ಕರ್ಮವನ್ನು ಜಾರಿಮಾಡುತ್ತಾನೆ, ಆದರೆ ಮಾನವನು ಒಳ್ಳೆಯದನ್ನು ಮತ್ತು ಕೆಟ್ಟದನ್ನು ಆಯ್ಕೆ ಮಾಡಲು ಸ್ವತಂತ್ರರಾಗಿರುತ್ತಾರೆ.

ಈ ರೀತಿಯ ಆಸ್ತಿಕ ನಂಬಿಕೆಯ ಶಾಖೆಗಳಲ್ಲಿ, ಬೌದ್ಧ ಧರ್ಮ ಅಥವಾ ಜೈನಧರ್ಮದಲ್ಲಿ ಹೇಳುವಂತೆ ಕರ್ಮವು ಕಾರ್ಯ ಮತ್ತು ಪರಿಣಾಮಗಳ ನಿಯಮವೆಂದು ನೋಡುವುದಿಲ್ಲ, ಆದರೆ ಕರ್ಮವು ಸರ್ವೋತ್ತಮನಾದ ಪರಮಾತ್ಮನ ಇಚ್ಛೆಯ ಮೇಲೆ ಅವಲಂಬಿತವಾಗಿದೆ ಎಂದು ನಂಬುತ್ತಾರೆ. ಸರ್ವೋತ್ತಮನಾದ ದೇವರುಗಳೆಂದರೆ ಶೈವರಲ್ಲಿ ಶಿವ ಅಥವಾ ವೈಷ್ಣವರಲ್ಲಿ ವಿಷ್ಣು. ಆಸ್ತಿಕ ವಾದದಲ್ಲಿ ಕರ್ಮದ ಸಾರಾಂಶವನ್ನು ಈ ರೀತಿಯಾಗಿ ವ್ಯಕ್ತಪಡಿಸಲಾಗಿದೆ: "ದೇವರು ಒಬ್ಬನನ್ನು ಕಾರಣವಿಲ್ಲದೆ ದುಃಖಿಸುವಂತೆ ಅಥವಾ ಸಂತೋಷವಾಗಿರುವಂತೆ ಮಾಡುವುದಿಲ್ಲ. ಆತ ನಿಷ್ಪಕ್ಷಪಾತನಾಗಿದ್ದು ನಿನಗೆ ಅರ್ಹವಾದುದನ್ನು ಮಾತ್ರ ನೀಡುತ್ತಾನೆ." ಹಾಗಾಗಿ ಆಸ್ತಿಕ ಶಾಖೆಗಳು ಕರ್ಮವೇ ಮಾನವನ ಎಲ್ಲಾ ತೊಂದರೆಗಳಿಗೆ ಕಾರಣವೆಂದು ಒತ್ತಿಹೇಳುತ್ತವೆ; ಆತ್ಮವು ಸರಿಯಾದ ದೇಹದಲ್ಲಿ ಪುನರ್ಜನ್ಮ ಹೊಂದುವುದು ಕರ್ಮವನ್ನವಲಂಬಿಸಿದೆ. ಇದು ಕೆಲವರು ಯಾಕೆ ತಮ್ಮ ಜೀವನದಲ್ಲಿ ತಾವು ಮಾಡಿದ ಫಲವನ್ನು ಅನುಭವಿಸುವುದಿಲ್ಲ ಮತ್ತು ಕೆಲವು ಮಕ್ಕಳು ಯಾವುದೇ ಕಾಯಿಲೆಯಿಲ್ಲದಿದ್ದರೂ ಕೆಲವೊಮ್ಮೆ ಯಾಕೆ ಸಾಯುತ್ತವೆಂದು ವಿವರಿಸುತ್ತದೆಂದು ಹೇಳಲಾಗುತ್ತದೆ. ಆದ್ದರಿಂದ ಒಬ್ಬ ವ್ಯಕ್ತಿಯು ತಾನು ಮಾಡಿದ ಕರ್ಮದ ಫಲವನ್ನು ಆತನೇ ಅನುಭವಿಸಬೇಕು ಮತ್ತು ಅದಕ್ಕಾಗಿ ಸಸ್ಯ, ಪ್ರಾಣಿ ಮತ್ತು ಮಾನವನಂತಹ ಅನೇಕ ಜನ್ಮಗಳನೆತ್ತುತ್ತಾನೆ. (ದೇವರ)ಬ್ಯಾಂಕು ಸದೃಶವೆಂದು ತೋರಿಸುವ ಖಾತೆಯು ಖಾಲಿಯಾಗುವವರೆಗೂ ತಾನು ಮಾಡಿದ ಫಲವನ್ನನುಭವಿಸಬೇಕಾಗುತ್ತದೆ.

ಸಾಂಖ್ಯ ದೃಷ್ಟಿ

ಪೂರ್ವ ಹಿಂದೂ ಧರ್ಮದ ಸಂಪ್ರದಾಯದಲ್ಲಿ ಸಾಂಖ್ಯ ಶಾಖೆಯ ಅನುಯಾಯಿಗಳು ಸರ್ವೋತ್ತಮನಾದ ದೇವರ ಕಲ್ಪನೆಯನ್ನು ಒಪ್ಪುತ್ತಿರಲಿಲ್ಲ. ಸಾಂಖ್ಯ ಶಾಖೆಯ ಪ್ರಕಾರ, ಸರ್ವೋತ್ತಮನಾದ ದೇವರು ಅಸ್ಥಿತ್ವದಲ್ಲಿಲ್ಲ ಆದರೆ ಮೇಲಿನ ಹಂತವನ್ನೇರಿದ ಜೀವಿಗಳು ಕರ್ಮದ ಫಲದಿಂದ ವಿಮುಕ್ತಗೊಳ್ಳಲು ಸಹಾಯಕರಾಗುತ್ತಾರೆ. ಆದ್ದರಿಂದ ಅವರು ದೇವತೆಗಳು ಅಥವಾ ಚೇತನಗಳು ಕೆಲವು ರೀತಿಯ ಪಾತ್ರವನ್ನು ನಿರ್ವಹಿಸುತ್ತಾರೆಂದು ನಂಬುತ್ತಾರೆ. ಇವರು ಮಿಥ್ಯ ಪ್ರಪಂಚದಿಂದ ಮತ್ತು ಜನನ ಮರಣಗಳ ಚಕ್ರದಿಂದ ಮುಕ್ತಗೊಳ್ಳಲು ಸಹಾಯ ಮಾಡುತ್ತಾರೆ.

ಮೀಮಾಂಸಾ ದೃಷ್ಟಿ

ಹಿಂದೂ ಪೂರ್ವ ಸಂಪ್ರದಾಯದಲ್ಲಿ ಅಂದರೆ ಮೀಮಾಂಸಕರು ದೈವತ್ವದ ಕಲ್ಪನೆಯನ್ನು ತಿರಸ್ಕರಿಸುತ್ತಾರೆ ಮತ್ತು ಕರ್ಮವೊಂದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ, ಫಲೋತ್ಪಾದನೆಯೊಂದೇ ಕರ್ಮದ ಫಲವನ್ನು ವಿವರಿಸಲು ಸಾಕಾಗುತ್ತದೆಂದು ಪರಿಗಣಿಸುತ್ತಾರೆ. ಅವರ ದೃಷ್ಟಿಯಲ್ಲಿ ಸರ್ವೋತ್ತಮನಾದ ದೇವರು ಅಥವಾ ಮೇಲಿನ ಹಂತವನ್ನೇರಿದ ಜೀವಿಗಳ ಅಸ್ಥಿತ್ವವನ್ನು ನಂಬುವುದಿಲ್ಲ; ಆಚಾರವೊಂದೇ ಕರ್ಮಗಳ ಫಲವನ್ನುಂಟುಮಾಡುತ್ತದೆ; ಆದ್ದರಿಂದ ಅವರ ನಂಬಿಕೆಯೆಂದರೆ ಕರ್ಮಗಳು (ಆಚಾರಗಳು) ತಾವೇ ಕರ್ಮದ ಫಲವನ್ನುಂಟುಮಾದುತ್ತದೆ, ಮತ್ತು ಸರ್ವೋತ್ತಮ ಅಥವಾ ಈಶ್ವರ ಅಥವಾ ಆ ಹಂತವನ್ನೇರಿದ ದೈವತ್ವವು ಅದರ ಪರಿಣಾಮಗಳನ್ನು ವಿತರಣೆಮಾಡುತ್ತದೆನ್ನುವುದನ್ನು ನಂಬುವುದಿಲ್ಲ.

ವೇದಾಂತದ ಖಂಡನೆಗಳು

ಈ ಭಿನ್ನವಾದ ನಿಲುವನ್ನು ಬ್ರಹ್ಮ ಸೂತ್ರಗಳಲ್ಲಿ ಅನೇಕ ಕಡೆಗಳಲ್ಲಿ ಉಲ್ಲೇಖಿಸಲಾಗಿದೆ, ಹಿಂದೂಧರ್ಮದಲ್ಲಿ ಪ್ರಮುಖ ಶಾಖೆಯಾದ ವೇದಾಂತದಲ್ಲಿ ಪ್ರಮುಖವಾದ ಪಠ್ಯವಾದಬ್ರಹ್ಮ ಸೂತ್ರಗಳಲ್ಲಿ (III.೨.೩೮-೪೦), ಕರ್ಮಗಳ ಫಲದ ಮೂಲವಾದ ಸರ್ವೋತ್ತಮನಾದ ಈಶ್ವರನ ಪರಿಕಲ್ಪನೆಯನ್ನು ಸಮರ್ಥಿಸುತ್ತದೆ, ಆದರೆ ಇದರ ವಿದುದ್ಧವಾದ ನಿಲುವನ್ನು ವಿರೋಧಿಸುತ್ತವೆ. ಉದಾಹರಣೆಗೆ, ಬ್ರಹ್ಮ ಸೂತ್ರಗಳ III.೨.೩೮ ಶ್ಲೋಕಕ್ಕೆ ನೀಡಿದ ವಿವರಣೆಯಲ್ಲಿ ಸ್ವಾಮಿ ಶಿವಾನಂದರು ಈಶ್ವರನ ಪಾತ್ರವನ್ನು(ದೇವರು) ಕರ್ಮಗಳ ಫಲದ ವಿತರಕನೆಂದು ವಿವರಿಸುತ್ತಾರೆ. ಸ್ವಾಮಿ ವೀರೇಶ್ವರಾನಂದರ ವಿವರಣೆಯಲ್ಲಿ ಈ ಶ್ಲೋಕದ ಉದ್ದೇಶವು ಮೀಮಾಂಸಕರ ಕರ್ಮ(ಕೆಲಸ)ವು ಒಬ್ಬನ ಕರ್ಮದ ಫಲವನ್ನು ವಿತರಿಸುತ್ತದೆ, ಈಶ್ವರನಲ್ಲ ಎಂಬ ನಿಲುವನ್ನು ಖಂಡಿಸುದಾಗಿದೆ. ಮೀಮಾಂಸಕರ ಪ್ರಕಾರ ಕರ್ಮವೇ ಭವಿಷ್ಯಕಾಲದ ಫಲವನ್ನು ಉಂಟುಮಾಡುತ್ತದೆ ಆದ್ದರಿಂದ ಆ ಕಾರ್ಯಕ್ಕೆ ಈಶ್ವರನನ್ನು ನಿಯಮಿಸುವುದು ಅರ್ಥಹೀನ.

ಗೀತೆಯ ವ್ಯಾಖ್ಯಾನ ಮತ್ತು ಗುರುವಿನ ಪಾತ್ರ

ಭಗವದ್ಗೀತೆಯ ಕೆಲವು ವ್ಯಾಖ್ಯಾನಗಳು ಇದರ ಮಧ್ಯದ ನಿಲುವನ್ನು ಬೆಂಬಲಿಸುತ್ತದೆ, ಕರ್ಮವು ಕಾರ್ಯ ಮತ್ತು ಪರಿಣಾಮಗಳ ನಿಯಮವಾಗಿದ್ದರೂ ದೇವರು ತನ್ನ ಭಕ್ತರ ಕರ್ಮವನ್ನು ಕಡಿಮೆಗೊಳಿಸಬಹುದಾಗಿದೆ.[ಸೂಕ್ತ ಉಲ್ಲೇಖನ ಬೇಕು] ಭಗವದ್ಗೀತೆಯ ಇನ್ನೊಂದು ಶ್ಲೋಕದ ವ್ಯಾಖ್ಯಾನದಂತೆ ದೇವರ ಒಬ್ಬನೇ ಕಟ್ಟಕಡೆಯ ಕರ್ಮದ ನಿರ್ಧಾರಕನಾಗಿದ್ದಾನೆ.

ಇನ್ನೊಂದು ನಿಲುವಿನಲ್ಲಿ ದೇವರ ಪರವಾಗಿರುವ ಸದ್ಗುರುವು ಕೆಲವು ಹಿಂಬಾಲಕರ ಕರ್ಮವನ್ನು ಕಡಿಮೆಗೊಳಿಸಬಲ್ಲವನಾಗಿದ್ದಾನೆ.

ಸರ್ವೋಚ್ಚ ಭಗವಂತನನ್ನು ನಂಬುವ ಆಸ್ತಿಕ ಹಿಂದೂಗಳ ಸಂಪ್ರದಾಯದ ದೃಷ್ಟಿಕೋನಗಳು

ವೇದಾಂತ

ವೇದಾಂತದಂತಹ ಹಿಂದೂ ಆಸ್ತಿಕ ಶಾಖೆಗಳು ಬೌದ್ಧಧರ್ಮ, ಜೈನಧರ್ಮದ ದೃಷ್ಟಿಕೋನ ಮತ್ತು ಇತರೆ ಹಿಂದೂ ಧರ್ಮದ ಕರ್ಮವು ಕಾರ್ಯಕಾರಣ ಸಂಬಂಧದ ನಿಯಮವೆಂಬ ದೃಷ್ಟಿಕೋನದ ವಿಚಾರಗಳ ಜೊತೆಗೆ ಭಿನ್ನಾಭಿಪ್ರಾಯ ಹೊಂದಿವೆ ಮತ್ತು ಕರ್ಮದ ಫಲವನ್ನು ಸರ್ವನಿಯಾಮಕನಾದ ಭಗವಂತ ನಿರ್ಧರಿಸುತ್ತಾನೆ ಎಂದು ಹೇಳುತ್ತವೆ.

ಶಂಕರ (ಅದ್ವೈತ)

ಹಿಂದೂ ಧರ್ಮಶಾಸ್ತ್ರವಾದ ಬ್ರಹ್ಮ ಸೂತ್ರಗಳ (III, ೨, ೩೮, ಮತ್ತು ೪೧)) ಮೇಲಿನ ವ್ಯಾಖ್ಯಾನದಲ್ಲಿ ಅದ್ವೈತದ ಪ್ರತಿಪಾದಕರಾದ ಆದಿ ಶಂಕರಾಚಾರ್ಯರು ಹೇಳುತ್ತಾರೆ, ಕೇವಲ ಕರ್ಮಗಳು ಮಾತ್ರ ಭವಿಷ್ಯದಲ್ಲಿ ನಿರ್ದಿಷ್ಟ ಫಲವನ್ನು ನೀಡುವುದಿಲ್ಲ, ಹಾಗೆಂದು ಭಗವದ್ ಕರುಣೆ ಎಂದು ನೋಡಲ್ಪಡುವ ಅದೃಷ್ಟವೂ ತಾನೇ ಸರಿಯಾದ ಸುಖ ಅಥವಾ ದುಃಖದ ಫಲವನ್ನು ನೀಡುವುದಿಲ್ಲ. ಆದರೆ ಫಲಗಳು ಈಶ್ವರರೆಂಬ ಕರ್ತಾರನ ಮೂಲಕ ನೀಡಲ್ಪಡುತ್ತವೆ ಎಂದು ಅವರು ಹೇಳುತ್ತಾರೆ.

ಯೋಗ್ಯತೆ ಮತ್ತು ಅಯೋಗ್ಯತೆಯಲ್ಲಿ ಮಾನವನ ಕರ್ಮವು ಪರಿಣಾಮ ಉಂಟುಮಾಡುತ್ತದೆ. ಸಾಮಾನ್ಯವಾಗಿ ನಿರ್ಜೀವ ವಸ್ತುಗಳು ಚಲಿಸಲು ಕೂಡ ಒಬ್ಬ ವ್ಯಕ್ತಿಯ ಅವಶ್ಯಕತೆ ಇದ್ದು ಇಲ್ಲದಿದ್ದಲ್ಲಿ ಅವು ಚಲಿಸಲಾರವು, (ಉದಾಹರಣೆಗೆ, ಒಂದು ಕೊಡಲಿಯು ಚಲಿಸುವಂತೆ ಮಾಡಲು ಒಬ್ಬ ವ್ಯಕ್ತಿ ಕಾರಣವಾಗುತ್ತಾನೆ) ಕರ್ಮದ ಪ್ರಕಾರ ಕರ್ಮವು ಅರಿವಿಲ್ಲದೆ ಮತ್ತು ಪ್ರಜ್ಞೆಯಿಲ್ಲದೆ ಉಂಟಾಗುತ್ತದೆ, ದೇವರು ಒಬ್ಬ ವ್ಯಕ್ತಿಯ ಕೆಲಸದ ಪರಿಣಾಮವನ್ನು ಗಮನಿಸಿ ಅವನ ಗುಣ ಮತ್ತ ಅವಗುಣಗಳನ್ನು ನಿರ್ಧರಿಸುತ್ತಾನೆ, ಇದಕ್ಕಾಗಿ ಅವನು ಸರಿಯಾದ ಪ್ರತಿಫಲವನ್ನು ಪಡೆಯುತ್ತಾನೆ ಎಂದು ಶಂಕರರು ಪ್ರತಿಪಾದಿಸುತ್ತಾರೆ. ಹಾಗೆಯೇ, ದೇವರು ವ್ಯಕ್ತಿಯ ಪರಿಸ್ಥಿತಿಯ ಮೇಲೆ ಹಾಗೂ ಅಣುಗಳ ಮೇಲೆ ಪ್ರಭಾವವನ್ನು ಬೀರುತ್ತಾನೆ, ಮತ್ತು ಆತ್ಮವು ಮತ್ತೆ ಸರಿಹೊಂದುವ ದೇಹದಲ್ಲಿ ಹುಟ್ಟುತ್ತದೆ, ಮತ್ತು ಆ ವ್ಯಕ್ತಿಗೆ ತನ್ನ ಕರ್ಮಕ್ಕೆ ತಕ್ಕಂತೆ ಅನುಭವಗಳು ದೊರೆಯುತ್ತಾ ಹೋಗುತ್ತವೆ. ಹಾಗಾಗಿ, ಕರ್ಮವನ್ನು ನಿರ್ಧರಿಸುವ ಒಬ್ಬ ಕರ್ತಾರ, ಅಂದರೆ ದೇವರು ಇರಲೇಬೇಕು.

ಅದ್ವೈತ ಪರಂಪರೆಯ ವಿದ್ವಾಂಸರಾದ ಸ್ವಾಮಿ ಶಿವಾನಂದ, ಇದೇ ರೀತಿಯಾದ ದೃಷ್ಟಿಕೋನವನ್ನು ತಮ್ಮ ಬ್ರಹ್ಮ ಸೂತ್ರಗಳು ಗ್ರಂಥದಲ್ಲಿ ವೇದಾಂತದ ಸಮನ್ವಯದ ಬಗ್ಗೆ ವ್ಯಾಖ್ಯಾನಿಸಿದ್ದಾರೆ, ಇದು ಒಂದು ವೇದಾಂತದ ಗ್ರಂಥವಾಗಿದೆ. ತಮ್ಮ ವ್ಯಾಖ್ಯಾನವಾದ ಬ್ರಹ್ಮ ಸೂತ್ರಗಳ ಮೂರನೇ ಅಧ್ಯಾಯದಲ್ಲಿ, ಶಿವಾನಂದರು ಕರ್ಮವು ಅಚೇತನವಾದುದ್ದೆಂದು ಹಾಗು ಅಲ್ಪಾವಧಿಯದ್ದೆಂದು ಹೇಳುತ್ತಾರೆ, ಜೊತೆಗೆ ಕರ್ಮವು ನೆರವೇರಿದ ನಂತರ ಅದರ ಅಸ್ತಿತ್ವವು ಕೊನೆಗೊಳ್ಳುತ್ತದೆ. ಈ ರೀತಿಯಾಗಿ, ಕರ್ಮವು ಒಬ್ಬರ ಅರ್ಹತೆಗೆ ಅನುಗುಣವಾಗಿ ಭವಿಷ್ಯದಲ್ಲಿ ಅವರ ಕ್ರಿಯೆಗಳಿಗೆ ಫಲವನ್ನು ನೀಡುವುದಿಲ್ಲ. ಇದಲ್ಲದೆ, ಕರ್ಮವು, ಫಲವನ್ನು ನೀಡುವ ಅಪೂರ್ವ ಅಥವಾ ಪುಣ್ಯವನ್ನು ಹುಟ್ಟುಹಾಕುತ್ತದೆ ಎಂದು ವಾದಿಸಲಾಗುವುದಿಲ್ಲ. ಅಪೂರ್ವವು ಚೇತನವನ್ನು ಹೊಂದಿರುವ ಕಾರಣದಿಂದಾಗಿ, ದೇವರಂತಹ ಬೌದ್ಧಿಕ ಸ್ವರೂಪಿಯ ಹೊರತು ಬೇರಾರಿಂದಲೂ ಚಲಿಸಲು ಸಾಧ್ಯವಿಲ್ಲ. ಇದು ಸ್ವತಂತ್ರವಾಗಿ ಪ್ರತಿಫಲವನ್ನಾಗಲಿ ಅಥವಾ ಶಿಕ್ಷೆಯನ್ನಾಗಲಿ ನೀಡಲು ಸಾಧ್ಯವಿಲ್ಲ.

ಸ್ವಾಮಿ ಶಿವಾನಂದರ ಶ್ವೇತಾಶ್ವತರ ಉಪನಿಷತ್‌ ಮೇಲಿನ ಭಾಷಾಂತರವು ಈ ರೀತಿ ವಿವರಿಸುತ್ತದೆ (೪:೬) :

    ಸುಂದರವಾದ ಗರಿಗಳ ಎರಡು ಹಕ್ಕಿಗಳು-ಬೇರ್ಪಡಿಸಲಾಗದವುಗಳು-ಒಂದೇ ಮರದ ಮೇಲೆ ವಾಸಿಸುತ್ತವೆ. ಇವೆರಡರಲ್ಲಿ ಒಂದು ಸಿಹಿಯಾದ ಹಣ್ಣನ್ನು ತಿನ್ನುತ್ತಿರುತ್ತದೆ ಮತ್ತೊಂದು ತಿನ್ನದೇ ನೋಡುತ್ತಿರುತ್ತದೆ.

ಇವರ ಭಾಷ್ಯದಲ್ಲಿ ಮೊದಲ ಹಕ್ಕಿಯು ವ್ಯಕ್ತಿಯ ಆತ್ಮವನ್ನು ಮತ್ತು ಎರಡನೇಯದು ದೇವರು ಅಥವಾ ಬ್ರಹ್ಮನನ್ನು ಪ್ರತಿನಿಧಿಸುತ್ತದೆ. ಆತ್ಮವು ಮುಖ್ಯವಾಗಿ ಬ್ರಹ್ಮನ ಪ್ರತಿರೂಪವಾಗಿದೆ. ಮರವು ದೇಹವನ್ನು ಪ್ರತಿನಿಧಿಸುತ್ತದೆ. ಆತ್ಮವು ದೇಹದ ಜೊತೆ ಗುರುತಿಸಿಕೊಂಡು ಅದರ ಕರ್ಮದಿಂದ ತಕ್ಕದಾದ ಫಲವನ್ನು ಹೊಂದಿ ಮತ್ತೆ ಪುನರ್ಜನ್ಮ ಪಡೆಯುತ್ತದೆ. ದೇವರು, ಅನುಭವ ಮತ್ತು ಅನುಭವ ಹೊಂದಲು ಕಾರಣಿಭೂತನಾಗಿರುತ್ತಾನೆ ಮತ್ತು ಇವೆರಡಕ್ಕೂ ಅಭೌತಿಕ ಸಾಕ್ಷಿಯಾಗಿರುತ್ತಾನೆ, ಇವನು ಸದಾ ತೃಪ್ತ ಮತ್ತು ಎಂದಿಗೂ ತಿನ್ನುವುದಿಲ್ಲ.

ಸಾಮಾಜಿಕ ಅಸಮಾನತೆ, ಹಣೆಬರಹ, ಮತ್ತು ಜಾಗತೀಕ ಕಷ್ಟಕಾರ್ಪಣ್ಯಗಳ ಕಾರಣಕ್ಕಾಗಿ ಜನರು ಆರೋಪಿಸುವ ಎಲ್ಲ ಪಕ್ಷಪಾತ ಮತ್ತು ಕ್ರೌರ್ಯದ ದೋಷದಿಂದ ದೇವರು ಮುಕ್ತನಾಗಿದ್ದಾನೆ. ಬ್ರಹ್ಮ ಸೂತ್ರದ ಪ್ರಕಾರ ವ್ಯಕ್ತಿಗತ ಆತ್ಮಗಳು ತಮ್ಮ ಹಣೆಬರಹಕ್ಕೆ ಅವುಗಳೆ ಸ್ವಂತ ಜವಾಬ್ದಾರಿ ಹೊಂದಿರುತ್ತವೆ; ದೇವರು ಕೇವಲ ಆತ್ಮದ ಗುಣ ಮತ್ತು ಅವಗುಣಗಳಿಗೆ ಕರ್ಮ ಫಲವನ್ನು ಹಂಚುವವನು ಮತ್ತು ಸಾಕ್ಷಿಯಾಗಿರುತ್ತಾನೆ.

ಬ್ರಹ್ಮಸೂತ್ರದ ಎರಡನೇಯ ಅಧ್ಯಾಯದ ಮೇಲೆ ಶಿವಾನಂದರು ಭಾಷ್ಯವನ್ನು ಈ ರೀತಿ ಬರೆಯುತ್ತಾರೆ; ದೇವರ ಕರ್ಮಕ್ಕೆ ನೀಡುವ ಸ್ಥಾನವನ್ನು ಮಳೆಗೆ ಹೋಲಿಸಬಹುದು, ಮಳೆಯು ಬಿದ್ದಾಗ ಮಳೆಯಿಂದ ಭತ್ತ, ಬಾರ್ಲಿ ಮತ್ತು ಇತರ ಬೆಳೆಗಳು ಬೆಳೆಯುವುದು ನೆಲದಲ್ಲಿ ಯಾವ ಬೀಜವಿದೆಯೋ ಆ ಬೀಜಗಳು ಮಳೆಯನ್ನ ಯಾವರೀತಿ ಬಳಸಿಕೊಳ್ಳುತದೆ ಎಂಬುದನ್ನು ಅವಲಂಬಿಸಿದೆ. ಹಾಗೆಯೇ, ವರ್ಗಗಳ ನಡುವಿನ ಭಿನ್ನತೆಯೂ ಕೂಡ ವ್ಯಕ್ತಿಯ ಆತ್ಮದ ವಿವಿಧ ಗುಣಗಳಿಗೆ ಸಂಬಂಧಿಸಿದೆ ಎಂದು ಶಿವಾನಂದರು ವಿವರಿಸುತ್ತಾರೆ. ದೇವರು ಕೇವಲ ನಿರ್ದಿಷ್ಟವಾದ ಕರ್ಮಕ್ಕೆ ಮಾತ್ರ ಫಲ ಮತ್ತು ಶಿಕ್ಷೆಯನ್ನು ನೀಡುತ್ತಾನೆ ಎಂದು ಕೊನೆಗೊಳಿಸುತ್ತಾರೆ.

ವೇದಾಂತರ ಇತರೆ ಶಾಖೆಗಳು

ವೇದಾಂತದ ಇತರೆ ಶಾಖೆಗಳಲ್ಲಿ ಕರ್ಮವನ್ನು ಯಾವ ರೀತಿ ವ್ಯಾಖ್ಯಾನಿಸುತ್ತರೆ ಎಂಬುದನ್ನು ವೈಷ್ಣವ ಪಂಥದಲ್ಲಿ ಚರ್ಚಿಸಲಾಗಿದೆ.

ಶೈವಪಂಥ

ತಿರುಜ್ಞಾನ ಸಂಬಂಧರ್

ಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ 
ಕ್ರಿಯೆ ಮತ್ತು ಪ್ರತಿಕ್ರಿಯೆಯಾಗಿ ಕರ್ಮ: ಒಳ್ಳೆಯತನವನ್ನು ಬಿತ್ತಿದರೆ ನಾವು ನಾವು ಒಳ್ಳೆಯ ಫಲವನ್ನು ಪಡೆಯುತ್ತೇವೆ.

ಕ್ರಿ.ಶ. ೭ನೇಯ ಶತಮಾನದ ಶೈವ ಸಿದ್ಧಾಂತ ಶಾಖೆಯ ತಿರುಜ್ಞಾನ ಸಂಬಂಧರ್ ಶೈವ ಪಂಥದ ಕರ್ಮದ ಬಗ್ಗೆ ಸ್ಥೂಲವಾಗಿ ಬರೆದಿದ್ದಾರೆ. ಅವರು ಬೌದ್ಧಧರ್ಮ ಮತ್ತು ಜೈನಧರ್ಮದಲ್ಲಿರುವ ಕರ್ಮದ ಪರಿಕಲ್ಪನೆಯನ್ನು ಗುರುತಿಸಿ ಹಿಂದೂ ಧರ್ಮದಲ್ಲಿ ಕರ್ಮದ ಪರಿಕಲ್ಪನೆ ಯಾವ ರೀತಿ ಇದೆ ಎಂಬುದನ್ನು ವಿವರಿಸಿದ್ದಾರೆ, ದೇವರಂತಹ ಬಾಹ್ಯ ಶಕ್ತಿಯ ಅಸ್ತಿತ್ವದ ಅವಶ್ಯಕತೆ ಇಲ್ಲ ಎಂಬುದನ್ನು ಬೌದ್ಧಧರ್ಮ ಮತ್ತು ಜೈನಧರ್ಮ ಪ್ರತಿಪಾದಿಸುತ್ತವೆ. ಹಲವಾರು ಸಂಖ್ಯೆಯಲ್ಲಿ ಆಕಳುಗಳಿದ್ದರೂ, ಮೊಲೆಹಾಲು ಕುಡಿಯುವ ಸಮಯದಲ್ಲಿ ಕರುಗಳು ತಮ್ಮ ತಾಯಿಯನ್ನು ಕಂಡುಕೊಳ್ಳುತ್ತವೆಯೋ, ಹಾಗೆಯೇ ಕರ್ಮವು ಕೂಡ ನಿರ್ದಿಷ್ಟ ವ್ಯಕ್ತಿಯನ್ನು ಹುಡುಕಿಕೊಂಡು ಅವನಿಗೆ ಕರ್ಮದ ಫಲನ್ನು ನೀಡತ್ತದೆ ಎಂದು ಇವರು ನಂಬುತ್ತಾರೆ. ಆದರೆ, ಆಸ್ತಿಕ ಹಿಂದೂಗಳು ಕರ್ಮವನ್ನು ಕರುಗಳಿಗೆ ಹೋಲಿಸದೇ, ಅಪ್ರಜ್ಞಾಪೂರ್ವ ಶಕ್ತಿಯನ್ನು ನಂಬುತ್ತಾರೆ.

ಈ ಕಾರಣದಿಂದ, ಕರ್ಮವು ತಾನಾಗಿಯೇ ಸೂಕ್ತವಾದ ವ್ಯಕ್ತಿಯಲ್ಲಿ ನೆಲೆಗೊಳ್ಳುವುದಿಲ್ಲ. ಕರ್ಮವನ್ನು ಸೂಕ್ತವಾದ ವ್ಯಕ್ತಿಗೆ ಅಂಟಿಸಲು ಪರಿಪೂರ್ಣನಾದ ಮತ್ತು ಸರ್ವಶಕ್ತನಾದ (ಉದಾಹರಣೆಗೆ, ಶಿವ) ಸರ್ವೋತ್ತಮನ ಅವಶ್ಯಕತೆ ಇದೆ ಎಂಬುದನ್ನು ಹಿಂದೂ ಧರ್ಮವು ನಂಬುತ್ತದೆ ಎಂದು ಶ್ರೀ ಸಂಬಂಧವು ತಿಳಿಸುತ್ತದೆ. ಈ ಪ್ರಕಾರ ದೇವರು ಕರಣಿಕ.

ಅಪ್ಪಯ್ಯ ದೀಕ್ಷಿತರು

ಅಪ್ಪಯ್ಯ ದೀಕ್ಷಿತಾ, ಒಬ್ಬ ಶೈವ ಪಂಥೀಯ ದೇವತಾಶಾಸ್ತ್ರಜ್ಞ ಮತ್ತು ಶೈವ ಅದ್ವೈತ ಸಿದ್ಧಾಂತ ಪ್ರತಿಪಾದಕ, ಶಿವನು (ದೇವರು) ಮಾತ್ರ ಕರ್ಮಕ್ಕನುಗುಣವಾಗಿ ಸುಖ, ದುಃಖ ನೀಡುವ ಅಧಿಕಾರ ಹೊಂದಿದ್ದಾನೆ ಎಂದು ಹೇಳುತ್ತಾರೆ. ಹಾಗೆಯೇ ವ್ಯಕ್ತಿಯು ಮಾಡುವ ಒಳ್ಳೆಯ ಅಥವಾ ಕೆಟ್ಟ ಕರ್ಮಗಳು ಅವನ ಹಿಂದಿನ ಜನ್ಮದ ಫಲವಾಗಿದ್ದು ಇಂದಿನ ಜನ್ಮದಲ್ಲಿ ಮಾಡುವ ಕೆಲಸವು ಕರ್ಮದ ನಿಯಮಾನುಸಾರ ಮುಂದಿನ ಜನ್ಮದಲ್ಲಿ ಕಂಡುಬರುತ್ತದೆ. ಕರ್ಮದ ಪ್ರಕಾರ ಆತ್ಮವು ನಿರ್ದಿಷ್ಟವಾದ ದೇಹಕ್ಕೆ ಪ್ರಾಧಾನ್ಯತೆ ನೀಡುತ್ತದೆ ಇದೊಂದು ಸೃಷ್ಟಿಯ ಚಕ್ರವಾಗಿದ್ದು ಇದು ಶಿವನನ್ನು ಅವಲಂಬಿಸಿದೆ ಎಂದು ಶೈವರು ನಂಬುತ್ತಾರೆ. ಹಾಗೆಯೇ ಜಾತಿ ಪದ್ಧತಿ ಕೂಡ ಕರ್ಮಕ್ಕನುಗುಣವಾಗಿದೆ ಎಂದು ಹಲವರು ಅಥೈಸುತ್ತಾರೆ, ಒಳ್ಳೆಯ ಕೆಲಸ ಮಾಡಿದವರು ಆಧ್ಯಾತ್ಮಿಕ ಕುಟುಂಬದಲ್ಲಿ ಜನಿಸುತ್ತಾರೆ (ಬಹುಶಃ ಬ್ರಾಹ್ಮಣ ಜಾತಿಯಲ್ಲಿ).

ಶ್ರೀಕಾಂತ

ಶ್ರೀಕಾಂತ, ಒಬ್ಬ ಶೈವ ಪಂಥೀಯ ದೇವತಾಶಾಸ್ತ್ರಜ್ಞ ಮತ್ತು ಶೈವ ಅದ್ವೈತ ಸಿದ್ಧಾಂತ ಪ್ರತಿಪಾದಕ, ಅವರ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳಿಗನುಗುಣವಾಗಿ ಫಲದ ಸ್ವಭಾವವು ಆತ್ಮಗಳು ನಿರ್ದಿಷ್ಟವಾದ ಕ್ರಿಯೆ ನಡೆಸುವಂತೆ ಅಥವಾ ನಿರ್ದಿಷ್ಟವಾದ ಕ್ರಿಯೆ ನಡೆಸದಂತೆ ಮಾಡಲು ಕಾರಣವಾಗಿದೆ ಎಂದು ನಂಬುತ್ತಾರೆ. ವ್ಯಕ್ತಿಯು ನಿರ್ದಿಷ್ಟವಾದ ದಾರಿಯಲ್ಲಿ ನಡೆಯುವಂತೆ ಅಥವಾ ನಿರ್ದಿಷ್ಟವಾದ ಕ್ರಿಯೆಯಿಂದ ದೂರವಿರುವಂತೆ ಶಿವನು ಮಾತ್ರ ಸಹಾಯ ಮಾಡುತ್ತಾನೆ ಎಂದು ಶ್ರೀಕಾಂತ ಇನ್ನೂ ಹೆಚ್ಚಿಗೆ ನಂಬುತ್ತಾರೆ. ಕರ್ಮವು ನೇರವಾಗಿ ಪರಿಣಾಮವನ್ನು ಉಂಟುಮಾಡುತ್ತದೆ, ಕರ್ಮವು ಯಾವುದೇ ಶಕ್ತಿಯ ಹೊರತಾಗಿ ಹಲವಾರು ಜನ್ಮಗಳ ಮತ್ತು ದೇಹಗಳ ಮೂಲಕ ನಾನಾ ವಿಧವಾದ ಪರಿಣಾಮ ಬೀರುವುದನ್ನು ಊಹಿಸುವುದು ಸಾಧ್ಯವಿಲ್ಲ; ಮನುಷ್ಯನ ಇಚ್ಚಾಶಕ್ತಿಯ ಜೊತೆಗೆ ದೇವರ ಇಚ್ಚಾಶಕ್ತಿ ಸೇರಿಕೊಂಡಾಗ ಅಥವಾ ನಂತರದ ಸ್ಥಿತಿಯಲ್ಲಿ ಮಾನವನ ಸ್ವಂತ ಕರ್ಮದಿಂದ ಮಾತ್ರ ವ್ಯಕ್ತಿಯ ಕರ್ಮವು ನಿರ್ಧರಿಸಲ್ಪಡುತ್ತದೆ, ಹೀಗೆ ನಿರ್ಧರಿಸಲ್ಪಟ್ಟ ಕರ್ಮವು ಸರ್ವೋತ್ತಮನಾದ ಶಿವನಿಂದ ಸರಿಯಾದ ಕ್ರಮದಲ್ಲಿ ಹಂಚಿಕೆಯಾಗುತ್ತದೆ ಎಂದು ಶ್ರೀಕಾಂತ ಅಭಿಪ್ರಾಯ ಪಟ್ಟಿದ್ದಾರೆ. ಈ ವಿಧದಲ್ಲಿ, ದೇವರು ನಮ್ಮ ಕ್ರಿಯೆಗಳಿಗೆ ಅಂತಿಮ ಜವಾಬ್ದಾರಿ ಹೊಂದಿರುತ್ತಾನೆ, ಇನ್ನೊಂದು ಪ್ರಕಾರ ಸಂತೋಷ ಮತ್ತು ದುಃಖಗಳು ಕೂಡ ನಮ್ಮ ಕರ್ಮಕ್ಕನುಗುಣವಾಗಿಯೇ ಇರುತ್ತದೆ, ಮಾನವನ ನೈತಿಕ ಜವಾಬ್ದಾರಿಯು ಇಚ್ಚಾಶಕ್ತಿಯ ಮೂಲಕ ಯಾವುದೇ ಪೂರ್ವಾಗ್ರಹವಿಲ್ಲದೆಯೇ ಪ್ರಕಟವಾಗುತ್ತದೆ ಅಥವಾ ನಂತರದ ಕೆಲಸಗಳಿಂದ ನಿರ್ಧರಿಸಲ್ಪಡುತ್ತದೆ. "ಮಾನವನು ತನ್ನ ಇಚ್ಚಾಶಕ್ತಿಗನುಗುಣವಾಗಿ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಜವಾಬ್ದಾರನಾಗಿರುತ್ತಾನೆ, ಶಿವನು ಮಾತ್ರ ಆತ್ಮಗಳ ಕರ್ಮಕ್ಕನುಗುಣವಾಗಿ ಅವಶ್ಯಕತೆ ಇರುವುದನ್ನು ಈಡೇರಿಸತ್ತಾನೆ ಎಂದು ಇವರ ಒಂದು ಒಳ್ಳೆಯ ಸಂದೇಶವಾಗಿದೆ".

ವೈಷ್ಣವ ಧರ್ಮ

" ಅವರವರ ಕರ್ಮ ಕ್ಕನುಗುಣವಾಗಿ , ಬದುಕರುವ ಎಲ್ಲಾ ಜೀವಿಗಳು ವಿಶ್ವದಾದ್ಯಂತ ಸಂಚರಿಸುತ್ತಿರುತ್ತಾರೆ. ಇವುಗಳಲ್ಲಿ ಕೆಲವು ಜೀವಿಗಳು ಸ್ವರ್ಗಕ್ಕೆ ಮತ್ತು ಕೆಲವು ನರಕಕ್ಕೆ ಹೋಗುತ್ತವೆ. ಸಂಚರಿಸುತ್ತಿರುವ ಕೋಟ್ಯಾಂತರ ಜೀವಿಗಳಲ್ಲಿ ಕೆಲವು ಮಾತ್ರ ಕೃಷ್ಣನ ಅನುಗ್ರಹದಿಂದ ನಿಜವಾದ ಆಧ್ಯಾತ್ಮಿಕ ಗುರುವಿನ ಸಹಯೋಗ ಪಡೆಯುವ ಅದೃಷ್ಟ ಹೊಂದಿರುತ್ತಾನೆ. ಕೃಷ್ಣ ಮತ್ತು ಆಧ್ಯಾತ್ಮಿಕ ಗುರುವಿನ ಕರುಣೆಯಿಂದ ವ್ಯಕ್ತಿಯು ದೈವಿಕ ಪ್ರಪಂಚಕ್ಕೆ ಪ್ರವೇಶ ಪಡೆಯುತ್ತಾನೆ". (ಸಿ.ಸಿ.ಮಧ್ಯ೧೯-೧೫೧-೧೬೪) " ದೇವರ ಸೇವೆ ಮಾಡದ ಜ್ಞಾನಿಗಳು,ಯೋಗಿಗಳು ಮತ್ತು ಕರ್ಮಯೋಗಿಗಳನ್ನು ಅಪರಾಧಿಗಳು ಎಂದು ಕರೆಯಲಾಗುತ್ತದೆ. ಶ್ರೀ ಚೈತನ್ಯ ಮಹಾಪ್ರಭು ಹೇಳುತ್ತಾರೆ; ಮಾಯಾವಾದಿ ಕೃಷ್ಣ ಅಪರಾಧಿ; ಯಾರು ಎಲ್ಲವು ಕೃಷ್ಣ ಎಂದು ನಂಬುವ ಬದಲಿಗೆ ಎಲ್ಲವು ಮಾಯೆ ಎಂದು ನಂಬುವವರನ್ನು ಅಪರಾಧಿ ಅಥವಾ ತಪ್ಪಿತಸ್ಥ ಎಂದು ಕರೆಯುತ್ತಾರೆ". "ಯಾವುದೇ ಚಟುವಟಿಕೆಯನ್ನು ಕರ್ಮ ಎಂದು ಹೇಳಲಾಗುತ್ತದೆ, ಆದರೆ ಕೆಲಸದ ಪರಿಣಾಮವನ್ನು ಅನುಭವಿಸವ ಉದ್ದೇಶದಿಂದ ಕೆಲವೊಮ್ಮೆ ಚಟುವಟಿಕೆಗಳು ವೇದಾಂತದ ಮಿತಿಯಲ್ಲಿಯೇ ಕಾರ್ಯನಿರ್ವಹಿಸುತ್ತವೆ. (ಚಟುವಟಿಕೆಗಳಿಗೆ ವಿಕರ್ಮ ಎಂದು ಬಳಸುವುದನ್ನು ವೇದಗಳು ನಿಷೇಧಿಸಿವೆ.) ಹಾಗೆಯೇ ಕರ್ಮ, ಧರ್ಮದ ಔನ್ನತ್ಯವನ್ನು ಹೊಂದಿದ್ದರೂ, ಭೌತಿಕವಾಗಿದೆ. ಕರ್ಮ ಮಾಡುವವನು ಹಣ,ಮಾನಸಿಕ ನೆಮ್ಮದಿ, ಮತ್ತು ಈಗಿನ ಜೀವನದಲ್ಲಿ ಕೀರ್ತಿ ಪಡೆಯಲು, ಮತ್ತು ಮುಂದಿನ ಜನ್ಮದಲ್ಲಿ ಸ್ವರ್ಗಕ್ಕೆ ಹೋಗವ ಪ್ರತಿಫಲದಲ್ಲಿ ಆಸಕ್ತನಾಗಿರುತ್ತಾನೆ. ಕರ್ಮದ ಒಂದು ಮುಖ್ಯ ನ್ಯೂನ್ಯತೆ ಎಂದರೆ ಫಲಕ್ಕೆ ತಕ್ಕ ಪ್ರತಿಫಲ ನೀಡುತ್ತದೆ, ಆತ್ಮವು ಪುನರ್ಜನ್ಮ ಹೊಂದುವ ಕ್ರಿಯೆಯಿಂದ ಕರ್ಮ ಕರ್ಮಮಾಡುವವನು ಇನ್ನೊಂದು ಭೌತಿಕ ಜನ್ಮ ಹೊಂದಲು ಪ್ರೇರೆಪಿಸುತ್ತದೆ. ಆದರೂ, ಧರ್ಮದ ಅಥವಾ ಅಧರ್ಮದ ಒಳ್ಳೆಯ ಅಥವಾ ಕೆಟ್ಟದ್ದ ಹುಟ್ಟು ಮತ್ತು ಸಾವಿನ ಚಕ್ರಗಳ ನಡುವೆ ಎಲ್ಲ ಕರ್ಮಗಳು ಒಂದು ಪರಿಮಿತಿ ಹೊಂದಿರುತ್ತದೆ."

ವಿಷ್ಣು ಸಹಸ್ರನಾಮ

ವಿಷ್ಣು ಸಹಸ್ರನಾಮದಲ್ಲಿರುವ ಸಾವಿರ ಹೆಸರುಳ್ಳ ವಿಷ್ಣುವು ಕರ್ಮವನ್ನು ನಿಯಂತ್ರಿಸುತ್ತಿರುವಲ್ಲಿ ದೇವರ ಶಕ್ತಿಯಿದೆ ಎಂದು ಸೂಚಿಸುತ್ತವೆ. ಉದಾಹರಣೆಗೆ ವಿಷ್ಣುವಿನ ೧೩೫ನೇಯ ಹೆಸರಾದ ಧರ್ಮಾಧ್ಯಕ್ಷ ಇದರ ಅರ್ಧವನ್ನು ಅದ್ವೈತ ಪ್ರತಿಪಾದಕರಾದ ಶಂಕರರು ಈ ರೀತಿ ವ್ಯಾಖ್ಯಾನಿಸುತ್ತಾರೆ; " ಗುಣ (ಧರ್ಮ)ಮತ್ತು ಅವಗುಣ( ಅಧರ್ಮ)ವನ್ನು ನೇರವಾಗಿ ನೋಡುತ್ತಿರುವ ಒಬ್ಬನು ಧರ್ಮ ಮತ್ತು ಅಧರ್ಮ ಇವುಗಳಿಗನುಗುಣವಾಗಿ ಫಲವನ್ನು ಅನಗ್ರಹಿಸುವವನು".

ವಿಷ್ಣವಿನ ಇತರೆ ಹೆಸರುಗಳು ದೇವರ ಸ್ವಭಾವಕ್ಕನುಗುಣವಾಗಿದೆ, ಭವನಾಹ್ ೩೨ನೇಯ ಹೆಸರು,ವಿಧತಾ, ೪೪ನೇಯ ಹೆಸರು ಅಪ್ರಮತಾಹ್, ೩೨೫ನೇಯ ಹೆಸರು ಸ್ತನದಾ, ೩೮೭ನೇಯ ಹೆಸರು, ೬೦೯ನೇಯ ಹೆಸರು ಶ್ರೀವಿಭವನಾಹ್ ಶಂಕರರು ವ್ಯಾಖ್ಯಾನ ಮಾಡಿದಂತೆ ಭವನಾಹ್ ಹೆಸರಿನ ಅರ್ಥ, "ಜೀವಿಗಳು (ಆತ್ಮ) ಅವುಗಳ ಫಲವನ್ನು ಅನುಭವಿಸಲು ಕರ್ಮಗಳನ್ನು ಸೃಷ್ಟಿಸುವವನು" ಬ್ರಹ್ಮಸೂತ್ರ (೩.೨.೨೮) "ಫಲಮತಃ ಉಪಪತ್ತೇ" ಎಂಬುದು ಜೀವಿಗಳ ಎಲ್ಲ ಕ್ರಿಯೆಗಳಿಗೆ ತಕ್ಕಂತಹ ಫಲವನ್ನು ಭಗವಂತ ನೀಡುವುದನ್ನು ವಿವರಿಸುತ್ತದೆ.

ರಾಮಾನುಜ (ವಿಶಿಷ್ಟಾದ್ವೈತ)

ರಾಮಾನುಜರ ವಿಶಿಷ್ಟಾದ್ವೈತ ಶಾಖೆಯು, ವೇದಾಂತದ ಮತ್ತೊಂದು ಉಪ-ಶಾಖೆಯಾಗಿದ್ದು, ಜೀವಗಳ ಕಷ್ಟಗಳಿಗೆ ಅವರು ಮಾಡಿದ ಕೆಟ್ಟ ಕರ್ಮವೇ ಕಾರಣವಾಗಿರುತ್ತದೆ ಮತ್ತು ದೇವರು ಅಮಲ ಅಥವಾ ಯಾವುದೇ ಮಲಿನತೆ ಇಲ್ಲದೆ ಇರುವವನಾಗಿದ್ದಾನೆ ಎಂದು ಹೇಳುತ್ತದೆ. ಶ್ರೀ ಭಾಷ್ಯದಲ್ಲಿ, ವೈಷ್ಣವ ಧರ್ಮದ ಆಸ್ತಿಕವಾದದ ದೃಷ್ಟಿಯಿಂದ ಬ್ರಹ್ಮ ಸೂತ್ರಗಳ ರಾಮಾನುಜರ ವ್ಯಾಖ್ಯಾನದ ಪ್ರಕಾರ, ವಿಷ್ಣು ಎಂದು ಭಾವಿಸಿರುವ ಬ್ರಹ್ಮ, ವ್ಯಕ್ತಿಯ ಆತ್ಮಗಳ ವಿವಿಧ ಕರ್ಮಗಳಿಗೆ ಅನುಗುಣವಾಗಿ ಸೃಷ್ಟಿಯ ವಿವಿಧತೆಯನ್ನು ಏರ್ಪಡಿಸುತ್ತಾನೆ.

ಶ್ರೀ ಭಾಷ್ಯ ೧.೧.೧.ರಲ್ಲಿ, ರಾಮಾನುಜರು ಹೀಗೆ ಹೇಳಿದ್ದಾರೆ, ಅಸಮತೆ ಮತ್ತು ಪ್ರಪಂಚದ ವೈವಿಧ್ಯತೆಗಳು ವಿವಿಧ ಆತ್ಮಗಳ ಕರ್ಮದ ಫಲವಾಗಿದೆ ಮತ್ತು ಸರ್ವವ್ಯಾಪಿಯಾದ ಆತ್ಮದ ಶಕ್ತಿ ಇದರ ಕರ್ಮದ ಕಾರಣದಿಂದ ಕಷ್ಟ ಅಥವಾ ಸುಖಗಳನ್ನು ಅನುಭವಿಸುತ್ತಾನೆ. ಕರ್ಮದ ಫಲಗಳ ನಡುವಿನ ವ್ಯತ್ಯಾಸ, ಅಂದರೆ ಒಳ್ಳೆಯ ಮತ್ತು ಕೆಟ್ಟ ಕರ್ಮ, ವಿಷ್ಣು ಕರ್ಮದ ಸರ್ವೋಚ್ಚವಾಗಿ ಜಾರಿಗೊಳಿಸಿದರೂ ಆತ್ಮಗಳು ಏಕೈಕವಾಗಿ ಅದರ ಕಾರ್ಯಗಳಿಗೆ ಸ್ವಾತಂತ್ರ್ಯ ಮತ್ತು ಜವಾಬ್ದಾರಿಗಳನ್ನು ಹೊಂದಿವೆ.

ಇನ್ನೂ ಹೆಚ್ಚಾಗಿ, ರಾಮಾನುಜರು ಹೀಗೆ ನಂಬುತ್ತಾರೆ, ಯಾರು ದೇವರನ್ನು ಮೆಚ್ಚಿಸಲು ದೃಢ ಮನಸ್ಸಿನಿಂದ ಕೆಲಸ ಮಾಡುತ್ತಾರೋ ಅವರಿಗೆ ವಿಷ್ಣು ಸಹಾಯ ಮಾಡಲು ಬಯಸುತ್ತಾನೆ, ಅವರ ಮನಸ್ಸುಗಳು ಹೆಚ್ಚು ಪುಣ್ಯಕರ ಕ್ರಿಯೆಗಳ ಕಡೆಗೆ ಒಲವು ತೋರಿಸಲು ಕಾರಣವಾಗುತ್ತಾನೆ; ಹಾಗೆಯೇ ಇನ್ನೊಂದು ರೀತಿಯಲ್ಲಿ, ಯಾರು ಧೃಡ ಮನಸ್ಸಿನಿಂದ ಮಾಡಿದ ಕ್ರಿಯೆಯಿಂದ ಒಟ್ಟಾಗಿ ಅವನನ್ನು ಅಸಂತುಷ್ಟಿಗೊಳಿಸುತ್ತಾರೋ ಅವರನ್ನು ಶಿಕ್ಷಿಸುತ್ತಾನೆ, ಅವನು ಅವರ ಮನಸ್ಸುಗಳು ಅವನತಿಯನ್ನು ಹೊಂದುವಂತಹ ಕ್ರಿಯೆಗಳಲ್ಲಿ ಸಂತೋಷ ಕಾಣುವಂತೆ ಆಗಲು ಕಾರಣವಾಗುತ್ತಾನೆ ಮತ್ತು ಅವು ದೇವರನ್ನು ತಲುಪುವ ಮಾರ್ಗದಲ್ಲಿ ವಿಘ್ನಗಳಾಗಿವೆ.

ಮಧ್ವ (ದ್ವೈತ)

ವೇದಾಂತದ ಮತ್ತೊಂದು ಉಪ-ಶಾಖೆಯಾದ ದ್ವೈತ ಶಾಖೆಯನ್ನು ಮಧ್ವರು ಪ್ರಾರಂಭಿಸಿದರು, ಅವರು ಹೀಗೆ ನಂಬುತ್ತಾರೆ, ಕರ್ಮವು ಪ್ರಾರಂಭವನ್ನು ಹೊಂದಿಲ್ಲದ ಮತ್ತು ಕೆಟ್ಟ ತೊಂದರೆಯ ಕಾರಣವಾಗಿದ್ದರೂ ಕರ್ಮದಲ್ಲಿನ ವೈವಿಧ್ಯತೆಗೆ ಮೂಲ ಕಾರಣವಿದೆ. ಜೀವಗಳು ಒಳ್ಳೆಯದರಿಂದ ಕೆಟ್ಟದರವರೆಗೆ ವಿವಿಧ ರೀತಿಯ ಕರ್ಮವನ್ನು ಹೊಂದಿರುವುದರಿಂದ, ಸಮಯದ ಪ್ರಾರಂಭದಿಂದ ಒಂದೇ ರೀತಿಯ ಕರ್ಮದ ಹೊಂದಿ ಜೀವನ ಪ್ರಾರಂಭಿಸಿರುವುದು ಸಾಧ್ಯವಿಲ್ಲ. ಹೀಗೆ, ಕ್ರಿಶ್ಚಿಯನ್ ಬೋಧನೆಯಂತೆ ಜೀವಗಳು (ಆತ್ಮಗಳು) ದೇವರ ಸೃಷ್ಟಿಯಲ್ಲ, ಆದರೆ ಅದಕ್ಕಿಂತ ಹೆಚ್ಚಾಗಿ ವಿಷ್ಣುವಿನ ಜೊತೆ ಅಸ್ತಿತ್ವದಲ್ಲಿರುವ ಘಟಕಗಳಾಗಿವೆ, ಮತ್ತು ಪೂರ್ಣ ಅವನ ನಿಯಂತ್ರಣದಲ್ಲಿವೆ ಎಂದು ಮಧ್ವರು ನಿರ್ಣಯಕ್ಕೆ ಬರುತ್ತಾರೆ. ಹೀಗೆ ಆತ್ಮಗಳು ಅವುಗಳ ಮೂಲ ಸ್ವಭಾವದಲ್ಲಿ ಅವನ ಮೇಲೆ ಆಧಾರವಾಗಿವೆ ಮತ್ತು ಅವು ಎಲ್ಲ ಮಾರ್ಪಾಡುಗಳಲ್ಲಿ ಒಳಗಾಗಬಹುದು.

ಮಧ್ವರ ಪ್ರಕಾರ, ಅವನ ನಿಯಂತ್ರಣವನ್ನು ಹೊಂದಿದ್ದರೂ ದೇವರು ಮಾನವನ ಮುಕ್ತ ಮನಸ್ಸಿನಲ್ಲಿ ಪ್ರವೇಶಿಸುವುದಿಲ್ಲ; ಅವನು ಸರ್ವಶಕ್ತನಾಗಿದ್ದಾನೆ, ಇದರ ಅರ್ಥ ಅವನು ವಿಶೇಷವಾದ ಸಾಹಸಕಾರ್ಯಗಳಲ್ಲಿ ವ್ಯಸ್ಥನಾಗಿರುತ್ತಾನೆ ಎಂದು ಅಲ್ಲ. ಅದಕ್ಕಿಂತ ಹೆಚ್ಚಾಗಿ, ದೇವರು ಕಾನೂನಿನ ನಿಯಮವನ್ನು ಜಾರಿಮಾಡುತ್ತಾನೆ ಮತ್ತು ಅದರ ಪ್ರಕಾರ ಜೀವಗಳ ಸ್ವಂತ ಸ್ವಭಾವನ್ನು ಅನುಸರಿಸಲು ಅವುಗಳಿಗೆ ಅವಕಾಶ ಕೊಡುತ್ತಾನೆ. ಹೀಗೆ, ದೇವರು ದಯಪಾಲಿಸುವವನಂತೆ ಅಥವಾ ದೈವಿಕ ಲೆಖ್ಖಿಗನಂತೆ ಕಾರ್ಯ ನಿರ್ವಹಿಸುತ್ತಾನೆ, ಮತ್ತು ಅನುಗುಣವಾಗಿ ಜೀವಗಳು ಅವುಗಳ ಸ್ವಭಾವಿಕ ಗುಣದಂತೆ ಮತ್ತು ಶೇಖರಿಸಿದ ಒಳ್ಳೆಯ ಮತ್ತು ಕೆಟ್ಟ ಕರ್ಮಗಳಿಗನುಸಾರವಾಗಿ ಕೆಲಸ ಮಾಡುವ ಸ್ವಾತಂತ್ರ್ಯವನ್ನು ಹೊಂದಿವೆ. ದೇವರು ದಯಪಾಲಕನಾಗಿ ಕೆಲಸ ಮಾಡಲು ಆರಂಭಿಸಿದಾಗಿನಿಂದ, ಎಲ್ಲದ್ದಕ್ಕೂ ಅದ್ಭುತ ಶಕ್ತಿ ದೇವರಿಂದ ಬರುತ್ತದೆ ಮತ್ತು ಅವನ/ಅವಳ ಸ್ವಭಾವಿಕ ಗುಣಕ್ಕನುಗುನವಾಗಿ ಜೀವ ಕೇವಲ ಆ ಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತದೆ. ಅದಾಗ್ಯೂ, ಮೇಲೆ ಹೇಳಿದ ಶಂಕರರ ಬ್ರಹ್ಮ ಸೂತ್ರಗಳ ವ್ಯಾಖ್ಯಾನದಂತೆ, ದೇವರ ಕೊಟ್ಟ ಸಂತೋಷಗಳು ಮತ್ತು ಕಷ್ಟಗಳು ಅವರಿಂದ ಮಾಡಲ್ಪಟ್ಟ ಒಳ್ಳೆಯ ಮತ್ತು ಕೆಟ್ಟ ಕ್ರಿಯೆಗಳಿಗನುಗುಣವಾಗಿ ಅವನ ಮೂಲಕ ನಿಯಂತ್ರಿಸಲ್ಪಡುತ್ತವೆ, ಅವನ ಸ್ವಂತ ಮನಸ್ಸನ್ನು ಸ್ಥಿರವಾಗಿ ನ್ಯಾಯದಲ್ಲಿ ಇಟ್ಟುಕೊಳ್ಳಲು ಅವನು ಹೀಗೆ ಮಾಡುತ್ತಾನೆ ಮತ್ತು ಅವನು ಮಾನವರ ಕರ್ಮದ ಮೂಲಕ ಅವನು ತನ್ನ ಕ್ರಿಯೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಅಥವಾ ಅವನು ಯಾರೊಬ್ಬರ ಪಕ್ಷಪಾತ ಅಥವಾ ಕ್ರೂರತೆಯ ಆಪಾದಿತನಾಗಲು ಸಾಧ್ಯವಿಲ್ಲ ಎಂಬುದನ್ನು ಮಧ್ವರು ಒಪ್ಪಿಕೊಳ್ಳುತ್ತಾರೆ.

ಈ ಹೋಲಿಕೆಯ ಜೊತೆ ಬೋಧನೆಯನ್ನು ಊಹಿಸುವುದರ ಮೂಲಕ ಸ್ವಾಮಿ ತಪಸ್ಯಾನಂದರು ಮಧ್ವರ ಅಭಿಪ್ರಾಯವನ್ನು ಇನ್ನೂ ಹೆಚ್ಚಾಗಿ ವಿವರಿಸುತ್ತಾರೆ; ಒಂದು ಕಾರ್ಖಾನೆಯಲ್ಲಿ ಶಕ್ತಿ ಶಕ್ತಿ ಕೇಂದ್ರ (ದೇವರು)ದಿಂದ ಬರುತ್ತದೆ, ಆದರೆ ವಿವಿಧ cogs(ಜೀವಗಳು ) ಅವುಗಳನ್ನು ನಿಗದಿಪಡಿಸಿದ ಮಾರ್ಗದಲ್ಲಿ ಚಲಿಸುತ್ತವೆ. ಹೀಗೆ ದೇವರ ವಿರುದ್ಧ ಕ್ರೂರತೆ ಮತ್ತು ಪಕ್ಷಪಾತದ ಹೊಣೆ ಬರುವುದಿಲ್ಲ ಎಂದು ಅವರು ಹೇಳುತ್ತಾರೆ.

ಜೀವ ಎನ್ನುವವನು ನಟ ಮತ್ತು ಅವನ/ಅವಳ ಸ್ವಂತ ಕಾರ್ಯಗಳ ಫಲವನ್ನು ಅನುಭವಿಸುವವ ಸಹ ಆಗಿದ್ದಾನೆ.

ಅವರ ಸನಾತನ ಖಂಡನೆಯ ವಿಷಯಕ್ಕೆ ಒತ್ತುಕೊಟ್ಟು, ಸಾಂಪ್ರದಾಯಿಕ ಹಿಂದೂ ನಂಬಿಕೆಗಳಿಂದ ಮಧ್ವರು ವಿಶಿಷ್ಟವಾಗಿ ಬೇರೆಯಾಗಿದ್ದಾರೆ.

ಉದಾಹರಣೆಗೆ, ಅವರು ಆತ್ಮಗಳನ್ನು ಮೂರು ಗುಂಪುಗಳಾಗಿ ವಿಭಾಗಿಸುತ್ತಾರೆ: ವಿಮೋಚನೆಗೆ ಅರ್ಹವಾಗಿರುವ ಆತ್ಮಗಳ ಒಂದು ವರ್ಗ (ಮುಕ್ತಿ-ಯೋಗಗಳು), ಮತ್ತೊಂದು ವರ್ಗ ಚಿರವಾದ ಮರುಹುಟ್ಟು ಅಥವಾ ಪುನರ್ಜನ್ಮಕ್ಕೆ ಸಂಬಂಧಿಸಿದೆ (ನಿತ್ಯ-ಸಂಸಾರಗಳು), ಮತ್ತು ಮೂರನೇ ವರ್ಗಗಳು ಕೊನೆಯಲ್ಲಿನ ಸನಾತನ ನರಕ ಅಥವಾ ಅಂಧತಮಗಳನ್ನು ಖಂಡಿಸುತ್ತವೆ (ತಮೋ-ಯೋಗಗಳು). ಇತರ ಹಿಂದೂ ತತ್ವಜ್ಞಾನಿಗಳು ಅಥವಾ ಹಿಂದುತ್ವದ ಶಾಖೆಗಳು ಇಂತಹ ನಂಬಿಕೆಗಳನ್ನು ಹೊಂದಿಲ್ಲ.

ಬದಲಾಗಿ, ಹೆಚ್ಚಿನ ಹಿಂದೂಗಳು ಸಾರ್ವತ್ರಿಕ ವಿಮೋಚನೆಯಲ್ಲಿ ನಂಬಿಕೆ ಹೊಂದಿದ್ದಾರೆ: ಮಿಲಿಯನ್‌ಗಟ್ಟಲೆ ಮರುಹುಟ್ಟುಗಳ ನಂತರವಾದರೂ, ಎಲ್ಲ ಆತ್ಮಗಳು ಕೊನೆಯಲ್ಲಿ ಮೋಕ್ಷವನ್ನು ಪಡೆಯುತ್ತವೆ.

ಸ್ವಾಮಿನಾರಾಯಣರ ದೃಷ್ಟಿಕೋನ

ಭಾರತದ ಗುಜರಾತನಲ್ಲಿ ಹಲವು ಜನರು ಸ್ವಾಮಿನಾರಾಯಣ ಪಂಥವನ್ನು ಅನುಸರಿಸುತ್ತಾರೆ. ಅವರ ಧಾರ್ಮಿಕ ನಾಯಕರಾದ ಸ್ವಾಮಿನಾರಾಯಣರು ಹೇಳುವ ಪ್ರಕಾರ ’ಕರ್ಮ’ ಎಂದರೆ ನಮ್ಮ ಕಾರ್ಯಗಳಿಗೆ ಫಲವನ್ನು ಕೊಡುವವನು ಎಂದು ಅಪಾರ್ಥ ಮಾಡಿಕೊಳ್ಳಬಾರದು. ಅವರ ಸ್ವಾಮಿನಾರಾಯಣ ಶ್ರದ್ಧೆಯ ಒಂದು ಧರ್ಮಗ್ರಂಥದ ವಚನಾಮೃತದಲ್ಲಿ, ಸ್ವಾಮಿನಾರಾಯಣರು ಹೇಳುತ್ತಾರೆ "ಭೂಮಿಯಲ್ಲಿ ಹುದುಗಿದ್ದ ಬೀಜವು ಹೇಗೆ ಮಳೆಯ ಸಂಪರ್ಕದಿಂದ ಮೊಳಕೆಯೊಡೆಯುತ್ತದೆಯೋ ಹಾಗೆ ಸೃಷ್ಟಿಯ ಸಮಯದಲ್ಲಿ, ಮಾಯೇಯಲ್ಲಿದ್ದ ಜೀವಗಳು ತಮ್ಮ ಕರ್ಮಾನುಸಾರ ಬೇರೆ ಬೇರೆ ದೇಹವನ್ನು ಪಡೆಯುತ್ತವೆ". (ವಾರ್ತಲ ೬)

ಹೀಗೆ, ಇತರ ಎಲ್ಲ ಪಂಥದವರೂ ಇತರ ಹಿಂದು ಶಾಖೆಗಳ ನಂಬಿಕೆಯ ರೀತಿಯೇ ಸ್ವಾಮಿನಾರಾಯಣ ಪಂಥದವರೂ ಕೂಡ ಮನುಷ್ಯರ ಎಲ್ಲ ಕರ್ಮಕ್ಕೆ ಫಲ ನೀಡುವವನು ಭಗವಂತ ಎಂಬುದನ್ನು ನಂಬುತ್ತಾರೆ. ಕೆಟ್ಟ ಕಾರ್ಯಗಳಿಗೆ ದೇವರು ಫಲ ಕೊಡುವಾಗ ಕಠೋರನಾಗುತ್ತಾನೆ ಎಂದು ಜನರು ಅಂದುಕೊಳ್ಳುತ್ತಾರೆ. ಆದರೆ ನಿಜವಾಗಿಯೂ ಅದು ಹಾಗಿರದೆ ಜನರ ಹಿಂದಿನ ಕರ್ಮದ ಅನುಸಾರವಾಗಿ ಫಲ ದೊರೆಯುತ್ತದೆ. ದೇವರು ಒಳ್ಳೆಯವರು ಕೆಟ್ತವರು ಎಂದು ಪಕ್ಷಪಾತಿಯಾಗಿರದೆ ನಿಷ್ಪಕ್ಷಪಾತಿಯಾಗಿರುತ್ತಾನೆ. ವೇದ ವ್ಯಾಸರ ಬ್ರಹ್ಮ ಸೂತ್ರಗಳು ಹೀಗೆ ಹೇಳುತ್ತೇವೆ, "ಖುಷಿ ಹಾಗೂ ದುಃಖ ಕೊಡುವುದರಲ್ಲಿ ದೇವರು ಪಕ್ಷಪಾತ ಮಾಡುವುದಿಲ್ಲ ಆದರೆ ಒಬ್ಬನ ಕರ್ಮಗಳಿಗೆ ಫಲವನ್ನು ಕೊಡುತ್ತಾರೆ." (೨-೧-೩೪) ಅದೇನೆ ಇದ್ದರೂ ಕೂಡ ಉಳಿದ ಹಿಂದು ಶಾಖೆಗಳಲ್ಲಿರುವಂತೆ ಶಿವನನ್ನು ಎಲ್ಲದೇವರಿಗೂ ಉನ್ನತನಾದವನು ಎಂದು ನಂಬಿದರೆ ಸ್ವಾಮಿನಾರಾಯಣ ಪಂಥದವರು ಸ್ವಾಮಿನಾರಾಯಣರನ್ನು ಉತ್ಕೃಷ್ಟ ದೇವರಾಗಿ ನಂಬುತ್ತಾರೆ. ಆದರೆ ಹಿಂದೂತ್ವದ ಅನುಯಾಯಿಗಳು ಇದನ್ನು ನಂಬುವುದಿಲ್ಲ.

ಜಗದ್ಗುರು ಕೃಪಾಳೂಜಿ ಮಹಾರಾಜ್

ಸ್ವಾಮಿಜಿ ಜದದ್ಗುರು ಕೃಪಾಳೂಜಿ ಮಹಾರಾಜ್ ಹೇಳುವ ಪ್ರಕಾರ ಕರ್ಮ ಅದಾಗಲೇ ನಿರ್ಧರಿತವಾಗಿರುವಂತದ್ದು. ಅದಕ್ಕೆ ತಕ್ಕಂತೆ ಮನುಷ್ಯರು ತಮ್ಮ ಕಾರ್ಯಗಳ ಫಲವನ್ನು ಪಡೆಯುತ್ತಾರೆ; ದೇವರು ಕೂಡ ಕರ್ಮದ ನಿಯಮವನ್ನು ಉಲ್ಲಂಘಿಸುವುದಿಲ್ಲ ಎಂದು ಟಿಪ್ಪಣಿಸುತ್ತಾರೆ; ಇದಕ್ಕೆ ಸ್ವಾಮಿಗಳು ಎರಡು ಉದಾಹರಣೆಗಳನ್ನು ತೋರಿಸುತ್ತಾರೆ: ಕೃಷ್ಣನ ಉತ್ಕೃಷ್ಟ ಭಕ್ತರಾದರು ಕೂಡ ಪಾಂಡವರು ಅಪಾರವಾಗಿ ಕಷ್ಟ ಅನುಭವಿಸಬೇಕಾಯಿತು; ದಶರಥ ಹಾಗೂ ಕೌಶಲ್ಯಳ ಪುತ್ರ ವಿಷ್ಣುವಿನ ಅವತಾರ ರಾಮನಾಗಿದ್ದರೂ ಕೂಡ, ದಶರಥರ ಸಾವಿನ ನಂತರ ಕೌಶಲ್ಯ ವಿಧವೆಯಾದಳು ಹಾಗೂ ಅವರ ಕಷ್ಟಗಳನ್ನು ನಿವಾರಿಸಲು ದೇವರು ಹಸ್ತಕ್ಷೇಪ ಮಾಡಲಿಲ್ಲ.

ಹೇಗಿದ್ದರೂ, ಜಗದ್ಗುರು ಕೃಪಾಳೂಜಿ ಮಹಾರಾಜ್‌ರ ಮತ್ತೊಂದು ಟಿಪ್ಪಣಿ ಕರ್ಮವು ಹಲವು ಅಂಶಗಳ ಮೇಲೆ ಆಧಾರಿತವಾಗಿರುತ್ತದೆ ಎಂದು ಹೇಳುತ್ತದೆ: ೧) ಪ್ರಾರಬ್ಧ ಕರ್ಮ, ಅಥವಾ ಜೀವನದಲ್ಲಿ ಅನುಭವಿಸ ಬೇಕಾಗಿದ್ದ ನಿಗಧಿತ ಕರ್ಮ; ೨) ಕ್ರಿಯಾಮಾನ ಕರ್ಮ, ಈ ಜೀವನದಲ್ಲಿ ನಿರ್ವಹಿಸಬಹುದಾದ ಕಾರ್ಯಗಳು, ೩) ದೇವರ ಇಚ್ಛೆ; ೪) ಒಂದು ನಿರ್ಧಿಷ್ಟ ಸಂದರ್ಭದಲ್ಲಿ ಪ್ರಸ್ತುತರಿದ್ದ ಇತರ ಜನರ ಕರ್ಮ; ಹಾಗೂ ೫) ಅವಕಾಶ (ಅಂದರೆ, ಅಕಸ್ಮಾತಾಗಿ ನಾವು ಪ್ರಸ್ತುತರಾಗಬೇಕಿದ್ದ ಘಟನೆಗಳು). ಆದರೆ ಸೃಷ್ಟಿಯ ಕರ್ಮದಲ್ಲಿ ಹಲವು ಸಂಗತಿಗಳು ರಹಸ್ಯಮಯವಾಗಿವೆ ಹಾಗೂ ಮಾನವರು ದೇವ ಜ್ಞಾನ ಹೊಂದುವವರೆಗೂ ಈ ಪ್ರಶ್ನೆಯನ್ನು ದೇವರಿಗೆ ಬಿಡಬೇಕು ಎಂದು ಕೂಡ ಅವರು ಟಿಪ್ಪಣಿಸಿದ್ದಾರೆ.

ಇತರ ವೈಷ್ಣವ ಪಂಥದವರ ಅಭಿಪ್ರಾಯಗಳು

ಒಬ್ಬ ವೈಷ್ಣವರಾದ ಕುಲಶೇಖರ ಅಲ್ವರ್, ತನ್ನ "ಮುಕುಂದಮಾಲಾ ಸ್ತೋತ್ರ"ದಲ್ಲಿ ’ಯದ್‌ ಯದ್‌ ಭವ್ಯಂ ಭವತು ಭಗವಾನ್‌ ಪೂರ್ವ-ಕರ್ಮ-ಅನುರೂಪಂ’ ಎಂದು ಹೇಳುತ್ತಾರೆ. ಮತ್ತು ಪೂರ್ವ-ಕರ್ಮ ಅಥವಾ ಭಾಗ್ಯ ಅಥವಾ ದೈವ ನಮಗೆ ಕಾಣದ ಅದೃಷ್ಟ, ಹಾಗೂ ಬರಿ ವಿಧಾತರಾದ ದೇವರಿಗೆ ಮಾತ್ರ ತಿಳಿದಿದೆ. ದೇವರೆ ಕರ್ಮದ ನಿಯಮ ಸೃಷ್ಟಿಸಿರುವುದು, ಹಾಗೂ ದೇವರು ಇದನ್ನು ಉಲ್ಲಂಘಿಸುವುದಿಲ್ಲ. ಹೇಗಿದ್ದರು, ಕೇಳಿದಲ್ಲಿ, ದೇವರು ಧೈರ್ಯ ಹಾಗೂ ಶಕ್ತಿಯನ್ನು ಕೊಡುವನು.

ಭಾಗವತ ಪುರಾಣ

ಭಾಗವತ ಪುರಾಣದ ೧೦ನೇಯ ಪುಸ್ತಕದ ಅಧ್ಯಾಯ ೧ರಲ್ಲಿ, ಬೃಹದಾರ್ಯಂಕ ಉಪನಿಷಧ, IV:೪:೩ ದಲ್ಲಿನ ಉದ್ಧೃತ ಭಾಗಗಳನ್ನು ಉಲ್ಲೇಖಿಸುತ್ತಾ, ಹುಟ್ಟಿದವರಿಗೆಲ್ಲ ಸಾವು ನಿರ್ಧಿಷ್ಟ ಹಾಗೂ ದೇಹ ಪಂಚಮಹಾಭೂತಗಳಿಗೆ ಮರಳಿದಾಗ, ಆತ್ಮಾ ದೇಹವನ್ನು ಬಿಟ್ಟು ಕರ್ಮದ ನಿಯಮಾನುಸಾರ ಅಸಹಾಯವಾಗಿ ಇನ್ನೋಂದು ರೂಪವನ್ನು ಪಡೆಯುತ್ತದೆ ಎಂದು ಹೇಳಿ ತನ್ನ ಪತ್ನಿ ಹಾಗೂ ಕೃಷ್ಣನ ತಾಯಿಯಾದ ದೇವಕಿಯನ್ನು ಕೊಲ್ಲದಿರಲು ವಸುದೇವ ಕಂಸನಿಗೆ ಒತ್ತಾಯಿಸಿ ಹೇಳುತ್ತಾನೆ. ಅದಕ್ಕಿಂತ ಹೆಚ್ಚಾಗಿ ಅದರ ಪ್ರಕಾರ, ಸಾವಿನ ಸಮಯದಲ್ಲಿ ಮನ್ಸು ಯಾವ ವಿಷಯವನ್ನು ನೆನಪಿಸಿಕೊಳ್ಳುತ್ತದೆಯೋ ಅದೇ ರೀತಿಯಲ್ಲಿ ಮುಂದಿನ ಜನ್ಮದಲ್ಲಿ ಆ ಆತ್ಮವು ಜನ್ಮ ತಾಳುತ್ತದೆ. ಅಂದರೆ ದೇಹದಲ್ಲಿಯ ಆತ್ಮವು ದೇಹವನ್ನು ಬಿಡುವ ಸಂದರ್ಭದಲ್ಲಿ ಯಾವ ರೀತಿಯ ವಾತಾವರಣಕ್ಕೆ ತಾನು ಹೋಗಬೇಕೆಂದು ನಿರ್ಧರಿಸುತ್ತದೆಯೋ ಅದರ ಇಚ್ಚೆಗೆ ಅನುಗುಣವಾಗಿ ಪ್ರಾಣಿ ಅಥವಾ ಮನುಷ್ಯನ ಬ್ರೂಣದೊಳಕ್ಕೆ ಪ್ರವೇಶ ಪಡೆಯುತ್ತದೆ. ಇದಕ್ಕೆ ಸಮನಾದ ಅರ್ಥವನ್ನು ಹೊಂದಿರುವ ಬರವಣಿಗೆಯು ಭಗವದ್‌ಗೀತೆಯ VIII, ಶ್ಲೋಕ ೬ರಲ್ಲಿ ಕಂಡುಬರುತ್ತದೆ ಎಂಬುದನ್ನು ನ್ಯೂಜರ್ಸಿಯ ರುತ್‌ಗೆರ್ ವಿಶ್ವವಿದ್ಯಾಲಯದ ’ಧರ್ಮ’ ವಿಷಯದ ಫ್ರೊಫೆಸರ್ ಎಡ್ವಿನ್ ಬ್ರಿಯಾಂಟ್‌ರ ವಿವರಣೆಯಲ್ಲಿ ಹೇಳುತ್ತಾರೆ.

ನ್ಯಾಯ

ಹಿಂದೂ ತತ್ತ್ವಶಾಸ್ತ್ರದ ಆರು ಸಾಂಪ್ರದಾಯಿಕ ಶಾಖೆಗಳಲ್ಲಿ ಒಂದಾದ ನ್ಯಾಯ ಶಾಖೆಯ ಹೇಳಿಕೆಯ ಅನುಸಾರ,ಎ ಕರ್ಮ ದೇವರ ಅಸ್ತಿತ್ವಕ್ಕೆ ಒಂದು ಪುರಾವೆ; ಈ ಜಗತ್ತಿನಲ್ಲಿ ಕೆಲವು ಜನರು ಸುಖಿಯಾಗಿದ್ದಾರೆ, ಕೆಲವರು ದುಖದಲ್ಲಿ ಇದ್ದಾರೆ ಎಂಬುದನ್ನು ಗಮನಿಸಬಹುದಾಗಿದೆ. ಕೆಲವರು ಶ್ರೀಮಂತರು ಹಾಗೂ ಕೆಲವರು ಬಡವರಾಗಿದ್ದಾರೆ. ಕರ್ಮ ಹಾಗೂ ಪುನರವತಾರದ ಪರಿಕಲ್ಪನೆಯಿಂದ ನೈಯನಿಕಾದಲ್ಲಿ ಇದನ್ನು ವಿವರಿಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯ ಕಾರ್ಯಗಳ ಫಲವು ಹಲವು ಬಾರಿ ಕಾರ್ಯಭಾರಿಗಳಾದ ಪ್ರತಿಯೊಬ್ಬನ ಎಟುಕಿನಲ್ಲಿರುವುದಿಲ್ಲ; ಹೀಗಾಗಿ ಕಾರ್ಯಗಳ ಫಲವನ್ನು ವಿತರಿಸುವ ಒಬ್ಬ ವಿತರಣಕಾರ ಇರಲೇ ಬೇಕು, ಹಾಗೂ ಈ ಉತ್ಕೃಷ್ಟ ವಿತರಣಕಾರ ದೇವರು. ಅನುಕ್ರಮವಾಗಿ ಈ ನ್ಯಾಯದ ನಂಬಿಕೆ, ವೇದಾಂತದಲ್ಲಿ ಇರುವ ಹಾಗೆಯೇ ಇದೆ.

ಧರ್ಮಶಾಸ್ತ್ರಗಳು

ಹಿಂದುತ್ವದಲ್ಲಿ, ನಿರ್ಧಿಷ್ಟವಾಗಿ ಧರ್ಮಶಾಸ್ತ್ರದಲ್ಲಿ, ಒಂದು ತತ್ವವಾದ ಕರ್ಮ "ವಿಜ್ಞಾನದ ವಾಸ್ತವಿಕ ಕ್ಷೇತ್ರದಲ್ಲಿ ಊಹಿಸಿದ ಹಾಗೆ ನೈತಿಕ ಕ್ಷೇತ್ರದಲ್ಲಿ ಕಾರಣ ಹಾಗೂ ಪರಿಣಾಮ ಬೇರ್ಪಡಿಸಲಾಗದಂತೆ ಕೂಡಿವೆ. ಒಳ್ಳೆಯ ಕಾರ್ಯ ಒಳ್ಳೆಯ ಫಲ ಕೊಡುತ್ತದೆ ಹಾಗೆಯೇ ಕೆಟ್ಟ ಕೆಲಸ ಕೆಟ್ಟ ಫಲವನ್ನೇ ನೀಡುತ್ತದೆ. ಈ ಜನ್ಮದಲ್ಲಿ ಕೆಟ್ಟ ಕಾರ್ಯಗಳು ತನ್ನ ಫಲಿತಾಂಶವನ್ನು ನೀಡದಿದ್ದರೂ ಕೂಡ ಮುಂದಿನ ಜನ್ಮದಲ್ಲಿ ಇದರ ಋಣ ತೀರಿಸಬೇಕಾಗುತ್ತದೆ. " ಹೀಗೆ ನಾವು ಮಾಡಿದ ಕರ್ಮ ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಲಾರದು. ನಮ್ಮ ಕರ್ಮಕ್ಕನುಸಾರವಾಗಿ ಒಳ್ಳೆಯ ಫಲವನ್ನೋ ಅಥವಾ ಕೆಟ್ಟ ಫಲವನ್ನೋ ಅನುಭವಿಸಬೇಕಾಗುತ್ತದೆ. ಬೃಹದಾರಣ್ಯಕ ಉಪನಿಷದ್ ಹೇಳುತ್ತದೆ, "ಮಾನವ ತನ್ನ ವರ್ತನೆ ಹಾಗೂ ನಂಬಿಕೆಗಳ ಅನುಸಾರ ಇರುತ್ತಾನೆ; ಪ್ರಶಂಸನೀಯ ವರ್ತನೆಯ ಮನುಷ್ಯ ಪ್ರಶಂಸನೀಯವಾಗಿರುತ್ತಾನೆ. ಪಾಪ ಕಾರ್ಯಗಳ ಮನುಷ್ಯ ಪಾಪಿಯಾಗಿರುತ್ತಾನೆ. ಅವನು ಪರಿಶುದ್ಧ ಕಾರ್ಯಗಳಿಂದ ಪರಿಶುದ್ಧ ಹಾಗೂ ದುಷ್ಟ ಕಾರ್ಯಗಳಿಂದ ದುಷ್ಟನಾಗುತ್ತಾನೆ. ಮತ್ತು ಇಲ್ಲಿ ಮನುಷ್ಯರು ಅಪೇಕ್ಷೆಗಳಿಂದ ಕೂಡಿರುತ್ತಾರೆ ಎಂದು ಅವರು ಹೇಳಿದ್ದಾರೆ. ಹೀಗೆ ತನ್ನ ಅಪೇಕ್ಷೆ ಇದ್ದಂತೆ ತನ್ನ ಸಂಕಲ್ಪವಿರುತ್ತದೆ; ಮತ್ತು ಅವನ ಸಂಕಲ್ಪ ಇದ್ದಂತೆ ಅವನ ಕಾರ್ಯಗಳು; ಮತ್ತು ಅವನು ಮಾಡಿದ ಯಾವುದೇ ಕಾರ್ಯಗಳ ಫಲವನ್ನು ಅವನು ಪಡೆಯುತ್ತಾನೆ". ’ಕರ್ಮ’ದ ಪರಿಕಲ್ಪನೆ ಪುರಾತನ ಕಾಲದಿಂದಲೂ ಇದೆ. ಈ ಪರಿಕಲ್ಪನೆಯನ್ನು ಗೌತಮ ಧರ್ಮ-ಸೂತ್ರ, ಷಟ್ಪಥ ಬ್ರಾಹ್ಮಣ, ಕಥಾಕ-ಗ್ರಾಹ್ಯ-ಸೂತ್ರ, ಚಾಂದೋಗ್ಯ ಉಪನಿಷಧ, ಮಾರ್ಕಂಡೇಯ ಪುರಾಣ ಹಾಗೂ ಇತರರಲ್ಲಿ ನಮೂದಿಸಲಾಗಿದೆ.

ಶಾಸ್ತ್ರಗಳಲ್ಲಿ ಕರ್ಮದ ಸಾಧ್ಯವಾದ ಪ್ರತಿಫಲಗಳ ಕೆಲವು ವಿವರಣೆಗಳನ್ನು ಬರೆಯಲಾಗಿದೆ. ಪುನರ್ಜನ್ಮದ ಮಾತು ಬಂದಾಗ ಪ್ರತಿಯೊಬ್ಬ ವ್ಯಕ್ತಿ ಪ್ರಾಣಿ ಮುಂತಾದವುಗಳು ಪುನರ್‌ಜನ್ಮದಲ್ಲಿ ವಿವಿಧ ಪ್ರಕಾರಗಳಲ್ಲಿ ಜನ್ಮ ತಾಳುತ್ತವೆ. ಇದು ಇಲ್ಲಿಯವರೆಗೂ ನಂಬಿಕೊಂಡು ಬಂದ ನಂಬಿಕೆಯಾಗಿದೆ. ಕಥಾಕ-ಗ್ರಾಹ್ಯ-ಸೂತ್ರ ಹೇಳುತ್ತದೆ, "ಕೆಲವು ಮನುಷ್ಯರು ಸಾಕಾರಾತ್ಮಕ ಅಸ್ತಿತ್ವವನ್ನು ಪಡೆಯಲು ಗರ್ಭಾಶಯವನ್ನು ಪ್ರವೇಶಿಸುತ್ತಾರೆ; ಇನ್ನಿತರರು ಅಜೈವಿಕ ಪದಾರ್ಥಗಳಲ್ಲಿ (ಮರದಲ್ಲಿನ ತುಂಡು ಹಾಗೂ ಸಮಾನ ವಸ್ತುಗಳು) ತಮ್ಮ ಕಾರ್ಯ ಹಾಗೂ ತಮ್ಮ ಜ್ಞಾನದ ಅನುಸಾರ ಹೋಗುತ್ತಾರೆ".

ಪಾಪಕ್ಕೆ ಸಂಬಂಧಿಸಿದಂತೆ, ಕರ್ಮದ ಫಲಾಫಲಗಳನ್ನು ಚರ್ಚಿಸಲಾಗುತ್ತದೆ."ಕರ್ಮವಿಪಾಕ ಅಂದರೆ ದುಷ್ಟ ಕರ್ಮಗಳ ಅಥವಾ ಪಾಪ ಕರ್ಮಗಳು ಫಲಿಸುವುದು (ಅಥವಾ ಫಲಸಾಧನೆ). ಯೋಗಸೂತ್ರ II. ೩ ರಲ್ಲಿ ಹೇಳಿದ ಹಾಗೆ, ಈ ಫಲಸಾಧನೆ ಮೂರು ರೂಪಗಳನ್ನು ತೆಗೆದುಕೊಳ್ಳುತ್ತದೆ, ಜಾತಿ (ಕ್ರಿಮಿ ಅಥವಾ ಪ್ರಾಣಿಯಾಗಿ ಜನನ), ಆಯು (ಜೀವನ ಅಂದರೆ ಐದು ಅಥವಾ ಹತ್ತು ವರ್ಷಗಳಷ್ಟು ಕಡಿಮೆ ಸಮಯದವರೆಗೆ ಜೀವಿತವಿರುವುದು) ಹಾಗೂ ಭೋಗ (ನರಕದ ಯಾತನೆಗಳನ್ನು ಅನುಭವಿಸುವುದು)".

ಕೆಳಮಟ್ಟದ ಪ್ರಾಣಿಗಳ ಜನನ ಹಾಗೂ ರೋಗಗಳು ಹಾಗೂ ವಿಕೃತಿಗಳು ಹೀಗೆ ಪಾಪಿಗಳು ಅನುಭವಿಸುವ ದೊಡ್ಡ ಪಟ್ಟಿಯೇ ಇದೆ. ಕೆಲವು ಬರಹಗಾರರು ನಿರ್ಧಿಷ್ಟ ಪಾಪಗಳಿಗೆ ನಿರ್ಧಿಷ್ಟ ಸಂಕೀರ್ಣವಾದ ಪರಿಣಾಮಗಳನ್ನು ನೀಡುತ್ತಾರೆ. ಉದಾಹರಣೆಗೆ, "ಹರಿತಸಂಹಿತದಲ್ಲಿ ಹೇಳಿದ ಅನುಸಾರ ಬ್ರಾಹ್ಮಣನ ಕೊಲೆಗಾರ ಬಿಳಿ ಕುಷ್ಠರೋಗದಿಂದ ಹಾಗೂ ಹಸುವಿನ ಕೊಲೆಗಾರ ಕಪ್ಪು ಕುಷ್ಠರೋಗದಿಂದ ನರಳುತ್ತಾನೆ." ಪಾಪ ಕರ್ಮದ ಪರಿಣಾಮವನ್ನು ಕಡಿಮೆಗೊಳಿಸುವ ಕುರಿತಾಗಿ ಹೇಳುವಾಗ, ಯಾಜ್ಞವಲ್ಕ್ಯ ಸ್ಮೃತಿಯ ವ್ಯಾಖ್ಯಾನಕಾರರಾದ ಮಿತಾಕ್ಷರನಂತಹ ಕೆಲವು ಬರಹಗಾರರು, ಪಾಪ ಕರ್ಮಫಲದಿಂದ ಪಾರಾಗಲು ಸಾಧ್ಯ ಎಂಬುದು ಅಕ್ಷರಷಃ ಸಾಧ್ಯವಿಲ್ಲ. ಆದರೆ ಪಾಪಿಯಾದವನು ಕೆಲವು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಮೂಲಕ ನಮ್ಮ ಪಾಪ ಕರ್ಮಫಲದ ಪರಿಣಾಮಗಳನ್ನು ದೇವರ ಪಾದಕ್ಕೆ ಅರ್ಪಿಸುವ ಮೂಲಕ ಪಾರಾಗಬಹುದು."

ಮತ್ತು ಕರ್ಮವಿಪಾಕ ಹೇಳುವಂತೆ "ಎಲ್ಲಾ ಆತ್ಮಗಳಿಗೂ ತಮ್ಮ ಕರ್ಮ ಫಲಾಫಲಗಳನ್ನು ಅನುಭವಿಸಿದ ನಂತರದಲ್ಲಿ ಉನ್ನತಿಯ ಸಾಧ್ಯತೆ ಇದೆ. ಉನ್ನತಿಯ ಹಂತವು ಕರ್ಮಫಲಾಫಲ ಅನುಭವಿಸುವುದರಲ್ಲಿ ನಿರತವಾಗಿ ಮರೆಯಾಗಿದ್ದರೂ ಕೂಡ. ಆತ್ಮ ಈ ಎಲ್ಲಾ ಹಂತಗಳಲ್ಲಿ ಉನ್ನತಿಯ ಕಡೆ ಸಾಗುತ್ತಲೇ ಇರುತ್ತದೆ. ಅಂತಿಮವಾಗಿ ಈ ಎಲ್ಲ ಪರಿಸ್ಥಿತಿಗಳನ್ನೂ ಮೀರಿದ ನಂತರದಲ್ಲಿ ನಿಜವಾದ ಉನ್ನತಿ ಮತ್ತು ಶಾಂತಿಯನ್ನು ಪಡೆದುಕೊಳ್ಳುತ್ತದೆ."

ಕೆಟ್ಟ ಕರ್ಮದ ನಿವಾರಣೆ

ಆಸ್ತಿಕ ದೃಷ್ಟಿಕೋನದಲ್ಲಿ ಕೆಟ್ಟ ಕರ್ಮದ ಫಲವನ್ನು ನಿವಾರಣೆ ಮಾಡಬುಹುದು. ಕೆಟ್ಟ ಕರ್ಮವನ್ನು ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಎಂದುದಕ್ಕೆ ಉದಾಹರಣೆಗಳು:ಧರ್ಮವನ್ನ ಅನುಸರಿಸುವದು ಅಥವಾ ಸದ್ಗುಣಿಯಾಗಿ ಬಾಳುವುದು ; ಒಳ್ಳೆಯ ಕೆಲಸ ಮಾಡುವುದು, ಉದಾಹರಣೆಗೆ ಇತರರಿಗೆ ನೆರವಾಗುವುದು; ಭಕ್ತಿಯೋಗ, ಅಥವಾ ದೇವರನ್ನು ಪೂಜಿಸಿ ದೈವಾನುಗ್ರಹ ಪಡೆಯುವುದು, ಮತ್ತು ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸುವುದು, ಉದಾಹರಣೆಗೆ ಚಿದಂಬರಂ ದೇವಾಲಯ ಅಥವಾ ರಾಮೇಶ್ವರಂಗೆ ತೆರಳಿ ದೈವಾನುಗ್ರಹ ಪಡೆಯುವುದು. ಇದಕ್ಕೆ ಇನ್ನೊಂದು ಉದಾಹರಣೆ, ಗಣೇಶನು ಭಕ್ತರನ್ನು ಕೆಟ್ಟ ಕರ್ಮದಿಂದ ಪಾರುಮಾಡುವನು, ಅವರ ಜೀವನದ ಕಷ್ಟಗಳನ್ನು ಕಳೆದು ಜೀವನವನ್ನ ಸರಳಗೊಳಿಸಿ ಪರಿಶುದ್ಧಗೊಳಿಸುವನು. ಆದರೆ ವ್ಯಕ್ತಿಯು ತನ್ನನ್ನು ಭಕ್ತಿಯಿಂದ ಒಪ್ಪಿಸಿಕೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ.

ಈ ಕೆಳಗೆ ದೇವರ ಅನುಗ್ರಹ ಪಡೆಯುವ ವಿಧಾನಗಳನ್ನು ಇನ್ನೂ ವಿಸ್ತಾರವಾಗಿ ನೀಡಲಾಗಿದೆ.

ಪುರಾಣಗಳಲ್ಲಿ

ಮಾರ್ಕಂಡೆಯನ ಕಥೆಯಲ್ಲಿ ಶಿವನು ಅವನನ್ನು ಸಾವಿನಿಂದ ಪಾರುಮಾಡಿದನು. ದೇವರು ತನ್ನ ಅಚ್ಚುಮೆಚ್ಚಿನ ಭಕ್ತರಿಗೆ ಅನುಗ್ರಹ ನೀಡಿ ಕರ್ಮ ಫಲಗಳನ್ನು ಮತ್ತು ಸಾವನ್ನು ಮೀರಿ ಭಕ್ತರನ್ನು ಕಾಪಾಡುತ್ತಾನೆ.

ಇಂತಹುದೇ ಇನ್ನೊಂದು ಕಥೆಯಲ್ಲಿ,ಕೃಷ್ಣನು ತನ್ನ ಗುರುಗಳಾದ ಸಂದಿಪಾಣಿಯ ಮಗನನ್ನು ಯಮನಿಂದ ಕಾಪಾಡಿದ್ದನು. ಗುರುವಿನ ಮಗನು ತನ್ನ ಕರ್ಮದಿಂದ ಸಾವಿಗೀಡಾಗಿ ಯಮಲೋಕದಲ್ಲಿದ್ದಾಗ ಕೃಷ್ಣನು ತನ್ನ ಶಕ್ತಿಯಿಂದ ಯಮನಿಂದ ಅವನನ್ನು ರಕ್ಷಿಸಿದನು. ಸಂದಿಪಾಣಿಯು ಕೃಷ್ಣ'ನ ಬಾಲ್ಯದ ಗುರುಗಳಾಗಿದ್ದರು.

ಭಾಗವತ ಪುರಾಣದ ಅಜಮಿಳನ ಕಥೆಯಲ್ಲಿ ಕೂಡ ಇದೇ ವಿಷಯವಿದೆ. ಅಜಮಿಳನು ತನ್ನ ಜೀವಿತಾವದಿಯಲ್ಲಿ ಕಳ್ಳತನ, ಹೆಂಡತಿ ಮತ್ತು ಮಕ್ಕಳನ್ನು ತ್ಯಜಿಸಿ ಒಬ್ಬ ವೇಶ್ಯೆಯನ್ನು ಮದುವೆಯಾದದ್ದು ಮುಂತಾದ ಕೆಟ್ಟಕೆಲಸವನ್ನು ಮಾಡಿರುತ್ತಾನೆ. ಆದರೆ ಸಾವಿನ ಸಮಯದಲ್ಲಿ, ಅರಿವಿಲ್ಲದೆಯೇ ನಾರಾಯಣನ ನಾಮವನ್ನು ಜಪಿಸಿದ್ದನು, ಇದರಿಂದಾಗಿ ಮೋಕ್ಷ ಅಥವಾ ದೇವರಲ್ಲಿ ಒಂದಾದನು ಮತ್ತು ಯಮನ ಸೇವಕರಿಂದ ರಕ್ಷಿಸಲ್ಪಟ್ಟನು. ಅಜಮಿಳ ಆ ಸಮಯದಲ್ಲಿ ತನ್ನ ಹಿರಿಯ ಮಗ ನಾರಾಯಣನ ಕುರಿತಾಗಿ ವಿಚಾರಮಾಡುತ್ತಿದ್ದನು. ಆದರೆ ದೇವರ ಹೆಸರು ತುಂಬಾ ಶಕ್ತಿಶಾಲಿಯಾಗಿ ಕೆಲಸಮಾಡಿತು, ಅವನ ಕೆಟ್ಟ ಕರ್ಮ ಇದ್ದಾಗ್ಯೂ ಅಜಮಿಳನ ಪಾಪ ಕೃತ್ಯ ಮನ್ನಿಸಿ ಮೋಕ್ಷ ನೀಡಿದನು.

ಉಪನಿಷತ್‌ಗಳು

ಶ್ವೇತಾಶ್ವತರ ಉಪನಿಶತ್ ೭ ಮತ್ತು ೧೨ ಕೂಡ ಇದನ್ನೆ ಒತ್ತಿ ಹೇಳುತ್ತದೆ, ಕೆಲಸ ಮಾಡುವವನು ಅವನ ಕೆಲಸಕ್ಕನುಗುಣವಾಗಿ ಪುನರ್ಜನ್ಮ ಪಡೆಯುತ್ತಾನೆ ಆದರೆ ಸೃಷ್ಟಿಕರ್ತನು ಸರ್ವಶಕ್ತನೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಉದಾಹರಣೆಗೆ ಈಶ್ವರ ಅಥವಾ ಅನುಗ್ರಹಿಸುವವನು. ಈಶ್ವರನು ಎಲ್ಲನು ಎಲ್ಲರಿಗೂ ಆಶ್ರಯ ನೀಡುವವನಾಗಿದ್ದಾನೆ ಮತ್ತು ಈಶ್ವರ ಅಥವಾ ಈಶ್ವರ ಕೃಪೆಯಿಂದ ವ್ಯಕ್ತಿಯು ಮುಕ್ತಿಯನ್ನು ಪಡೆಯುತ್ತಾನೆ.

ಈಶ್ವರನ ಕೃಪೆಯಿಂದ ವ್ಯಕ್ತಿಯು ದುಃಖದಿಂದ ಮುಕ್ತನಾಗಬಹುದು. ಹೀಗಿದ್ದರೂ ಶ್ವೇತಾಶ್ವತರ ಉಪನಿಶತ್ ಸರ್ವಶಕ್ತನಾದ ದೇವರ ಕೃಪೆಯಿಂದ ಕರ್ಮದ ನಿಯಮದಿಂದ ತಪ್ಪಿಸಿಕೊಳ್ಳಬಹು ಎಂದು ಒಪ್ಪಿಕೊಳ್ಳುತ್ತದೆ. ಆದಿಶಂಕರರು ಶ್ವೇತಾಶ್ವತರ ಉಪನಿಶತ್ VI:೪ರ ಮೇಲೆ ವ್ಯಾಖ್ಯಾನಿಸಿ ಈ ರೀತಿ ಹೇಳುತ್ತಾರೆ, "ನಮ್ಮ ಎಲ್ಲಾ ಕೆಲಸವನ್ನು ಈಶ್ವರನಿಗೆ ಸಮರ್ಪಿಸಿದರೇ, ಕರ್ಮದ ನಿಯಮಕ್ಕೆ ಒಳಪಡುವುದಿಲ್ಲ."

ಧರ್ಮಶಾಸ್ತ್ರಗಳು

ಧರ್ಮಶಾಸ್ತ್ರಗಳು ಪಾಪದ ಹೊರೆಯನ್ನು ಕಡಿಮೆ ಗೊಳಿಸುತ್ತವೆ. ಕೆಲವೊಂದು ಕರ್ಮ ಸಿದ್ಧಾಂತದಿಂದ ಪರಿಹರಿಸಿಕೊಳ್ಳಲು ಕಷ್ಟವಾದಂತವುಗಳಾಗಿವೆ. ಉದಾಹರಣೆಗೆ, ಶ್ರಾದ್ಧದಂತಹ ಒಂದು ಆಚರಣೆ ಅಥವಾ ಬ್ರಹ್ಮ ಪುರಾಣ ಹೇಳುವಂತೆ, "ನಿಗದಿಯಾದ ಸಮಯದಲ್ಲಿ, ನಿಗದಿತ ಸ್ಥಳದಲ್ಲಿ, ಯೋಗ್ಯನಾದ ಬ್ರಾಹ್ಮಣ ವ್ಯಕ್ತಿಗಳಿಗೆ ಸೂಚಿಸಿದ ನಿಯಮಗಳಿಗನುಸಾರವಾಗಿ ಏನನ್ನಾದರೂ ನೀಡಿ ಪಿತೃ ಋಣ ತೀರಿಸಲಾಗುತ್ತದೆ, ಇದರರ್ಥ ಪೂರ್ವಿಕರನ್ನು ಗೌರವಿಸುವದು; ಹೀಗಿದ್ದರೂ ಇದಕ್ಕೆ ವಿರೋಧವಾಗಿ, ಕರ್ಮದಲ್ಲಿ ನಂಬಿಕೆ ಇರುವವರು ದೇಹವು ಮೃತವಾದಾಗ, ತನಗೆ ಅಥವಾ ತನ್ನ ಪೂರ್ವಿಕರಿಗೆ ಶ್ರಾದ್ಧ ಮಾಡಲಿ ಬಿಡಲಿ ತಂತಾನೆ ಆತ್ಮವು ಇನ್ನೊಂದು ದೇಹವನ್ನು ಸೇರುತ್ತದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.

ಕರ್ಮದೊಂದಿಗೆ ವಿರೋಧಾಭಾಸ ಹೊಂದಿದ್ದರೂ, ಕಾಣೆ ಹೇಳುವ ಪ್ರಕಾರ ಶ್ರಾದ್ಧ ಎಂದರೆ, " ಪಿಂಡವನ್ನು ಬಿಡಲು ಮೂರು ತಲೆಮಾರುಗಳ ಮೂರು ಪಿತೃಗಳ ಅವಶ್ಯಕತೆ ಇದ್ದು ಸುಮಾರು ೫೦ ಅಥವಾ ೧೦೦ ವರ್ಷಗಳಾದರೂ ಕೂಡ ಗಾಳಿಯ ರೂಪದಲ್ಲಿ ಬಂದು ಅನ್ನದ ವಾಸನೆಯನ್ನು ಹೀರಿಕೊಳ್ಳುತ್ತಾರೆ". ಅದೇನೆ ಇದ್ದರೂ ವಿವಿಧ ಪ್ರಕಾರದ ದೃಷ್ಟಿಕೋನವನ್ನು ಗಮನಿಸಿದಾಗ ಕರ್ಮವನ್ನು ಅದರ ಶಬ್ಧಾರ್ಥದ ಪ್ರಕಾರ ಅರ್ಥೈಸಿಕೊಳ್ಳುವುದು ತಪ್ಪಾಗುತ್ತದೆ ಎಂಬುದನ್ನು ವಿವಿಧ ಶಾಸ್ತ್ರಗಳನ್ನು ಗಮನಿಸುವ ಮೂಲಕ ತಿಳಿದುಕೊಳ್ಳಬಹುದಾಗಿದೆ. ಈ ವಿಷಯದ ಮೇಲೆ ಬರೆಯಲಾದ ಹಲವಾರು ವಿಭಿನ್ನ ಅಭಿಪ್ರಾಯಗಳ ಸಾಕ್ಷಿಯಿಂದ ಕರ್ಮಗಳ ಮೇಲಿನ ವಿಭಿನ್ನ ದೃಷ್ಟಿಕೋನಗಳ ನಡುವಿನ ಹೊಂದಾಣಿಕೆ ಬೇರೆಲ್ಲೂ ಸಿಗುವುದಿಲ್ಲ.

ಒಂದು ನಿರ್ದಿಷ್ಟ ದೇಹದಲ್ಲಿ ಹುಟ್ಟು (ಜನ್ಮ) ಮತ್ತು ಕರ್ಮಗಳ ನಡುವಣ ಸಂಬಂಧ

ಆಸ್ತಿಕವಾದ ಹೇಳುವ ಪ್ರಕಾರ, ಆತ್ಮಗಳು ಕರ್ಮದ ಜೊತೆಗಿನ ಸಂಬಂಧದ ಕಾರಣದಿಂದಾಗಿ ನಿರ್ದಿಷ್ಟವಾದ ದೇಹಗಳ ಕಡೆಗೆ ಆಕರ್ಷಿತವಾಗುತ್ತವೆ ಎಂಬ ನಿರ್ಮಾಣಗಳ ಚಕ್ರಗಳಲ್ಲಿ ನಂಬಿಕೆಯನ್ನು ಇಡುತ್ತವೆ. ಕರ್ಮವು ಕೇವಲ ದೇವರ ಇಚ್ಛೆಯ ಮೇಲೆ ಮಾತ್ರ ಅವಲಂಬಿತವಾಗಿರುವ ಒಂದು ಬುದ್ಧಿವಂತವಲ್ಲದ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ, ಕೌಶಿತಕಿ ಉಪನಿಷತ್ತು ೧.೨ ಹೆಳುವುದೇನೆಂದರೆ ಒಂದು ಕ್ರಿಮಿ, ಕೀಟ, ಮೀನು, ಹಕ್ಕಿ, ಸಿಂಹ, ಹಂದಿ, ಹಾವು ಅಥವಾ ಒಬ್ಬ ಮನುಷ್ಯನಂತೆ ಅಸ್ತಿತ್ವದಲ್ಲಿರುವ ವಿಭಿನ್ನ ವಿಧಗಳಲ್ಲಿನ ಹುಟ್ಟುವಿಕೆಯು ಒಬ್ಬ ಮನುಷ್ಯನ ಕೆಲಸ ಮತ್ತು ಜ್ಞಾನದ ಮೂಲಕ ನಿರ್ಧರಿಸಲ್ಪಡುತ್ತದೆ. ಚಾಂದೋಗ್ಯ ಉಪನಿಷತ್ತು ಒಂದು ಒಳ್ಳೆಯ ಕುಟುಂಬದಲ್ಲಿನ ಒಳ್ಳೆಯ ಹುಟ್ಟು, ಅಂದರೆ, (ಬ್ರಾಹ್ಮಣ ಜಾತಿ) ಅಥವಾ ಒಂದು ನಾಯಿ ಅಥವಾ ಹಂದಿಯ ಜನ್ಮದಂತಹ ಕೆಟ್ಟ ಹುಟ್ಟು ಇವುಗಳ ನಡುವೆ ಭಿನ್ನತೆಯನ್ನು ಮಾಡುತ್ತದೆ.) ಆದ್ದರಿಂದ, ಕರ್ಮದ ಸಿದ್ಧಾಂತವು ವಿಭಿನ್ನವಾದ ಜೀವನ ವಿಧಗಳು ಜೈವಿಕ ಬೆಳವಣಿಗೆಯ ವಿವಿಧ ಹಂತಗಳಾಗಿ ಹೇಗೆ ಅಸ್ತಿತ್ವಕ್ಕೆ ಬಂದವು ಎಂಬುದನ್ನು ವಿಶದಪಡಿಸುತ್ತದೆ, ಅಂದರೆ ಸಸ್ಯಗಳಿಂದ ಪ್ರಾಣಿಗಳ ವಿವಿಧ ವಿಧಗಳವರೆಗಿನ ಗುಣಲಕ್ಷಣಗಳ ವಿಂಗಡಿಸುವಿಕೆ, ಮತ್ತು ಮಾನವರಂತಹ ಒಂದೇ ಜಾತಿಗಳಲ್ಲಿಯೂ ಕೂಡ ಪರಸ್ಪರರಲ್ಲಿನ ಭಿನ್ನತೆಗಳನ್ನು ವಿಶದಪಡಿಸುವುದಕ್ಕೆ ಅಸ್ತಿತ್ವಕೆ ಬಂದವು.

ಆದ್ದರಿಂದ, ಹಲವಾರು, ಅಂದರೆ ಉಪನಿಷತ್ತುಗಳು ಸೂಚಿಸುವುದೇನೆಂದರೆ ಒಂದು ನಿರ್ದಿಷ್ಟ ಜಾತಿಯಲ್ಲಿನ ಹುಟ್ಟು ಕರ್ಮಕ್ಕೆ ಅನುಸಾರವಾಗಿ ಇರುತ್ತದೆ. ಒಳ್ಳೆಯ ಕರ್ಮ(ಕೆಲಸ)ಗಳನ್ನು ಮಾಡಿದವರು ಒಂದು ಒಳ್ಳೆಯ ಆಧ್ಯಾತ್ಮಿಕ ಕುಟುಂಬದಲ್ಲಿ ಜನಿಸುತ್ತಾರೆ ಎಂದು ಹೇಳಲಾಗುತ್ತದೆ. ಒಳ್ಳೆಯ ಕುಟುಂಬ ಎಂಬುದು ಒಂದು ಬ್ರಾಹ್ಮಣ ಕುಟುಂಬಕ್ಕೆ ಸಮಾನವಾಗಿದೆ. ಒಳ್ಳೆಯ ಕರ್ಮಗಳು ಒಬ್ಬ ವ್ಯಕ್ತಿಯನ್ನು ಒಂದು ಆಧ್ಯಾತ್ಮಿಕ ಕುಟುಂಬದಲ್ಲಿ ಜನಿಸುವುದಕ್ಕೆ ಸಹಾಯ ಮಾಡುತ್ತವೆ. ಅಲ್ಲಿ ಅವನ ಭವಿಷ್ಯವು ಅವನ ಪ್ರಸ್ತುತದ ಜೀವನದ ನಡುವಳಿಕೆ ಮತ್ತು ಕೆಲಸಗಳ ಮೂಲಕ ನಿರ್ಧರಿಸಲ್ಪಡುತ್ತದೆ. ಒಬ್ಬ ಬ್ರಾಹ್ಮಣನ ಗುಣಲಕ್ಷಣಗಳು ಅವನ ನಡುವಳಿಕೆಯಿಂದ ನಿರ್ಧರಿಸಲ್ಪಡುತ್ತವೆಯೇ ವಿನಃ ಅವನ ಜನ್ಮದಿಂದಲ್ಲ ಎಂಬುದಾಗಿ ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಭಗವದ್ಗೀತೆಯಲ್ಲಿನ ಒಂದು ಶ್ಲೋಕವು ಈ ಹೇಳಿಕೆಯನ್ನು ವಿವರಿಸುತ್ತದೆ: "ಬ್ರಾಹ್ಮಣರು, ಕ್ಷತ್ರೀಯರು, ವೈಶ್ಯರು ಹಾಗೆಯೇ ಶೂದ್ರರ ಕಾರ್ಯಗಳು, ಶತ್ರುಗಳ ಮನಸ್ಸನ್ನು ದಹಿಸುವವರು, ತಮ್ಮ ಸ್ವಂತ ಜನ್ಮ ಸಹಜಲಕ್ಷಣದ ಗುಣಗಳಿಗೆ (ನಡುವಳಿಕೆ) ಅನುಗುಣವಾಗಿ ವಿಂಗಡಿಸಲ್ಪಡುತ್ತಾರೆ." (ಭಗವದ್ಗೀತೆ ೧೮.೪೧)

ಭಗವದ್ಗೀತೆಯಲ್ಲಿ ಪುನಃ ನಿರೂಪಿಸಲ್ಪಟ್ಟಿರುವ ಈ ಅವಲೋಕನವನ್ನು ಇನ್ನೂ ಹೆಚ್ಚಾಗಿ ವಿವರಿಸುತ್ತ, ಮಾಧವಾಚಾರ್ಯರು ವರ್ಣ (ಹಿಂದೂಧರ್ಮ) ಎಂಬ ವಿಷಯಯದ ಅರ್ಥವನ್ನು ವಿವರಿಸುತ್ತಾರೆ, ವರ್ಣ ಇದು ಗುಣ (ನಡುವಳಿಕೆಗಳು) ಮತ್ತು ಕರ್ಮ (ಕೆಲಸ)ಗಳ ಮೇಲೆ ಆಧಾರಿತವಾಗಿ ಹಿಂದೂ ಸಮಾಜವನ್ನು ನಾಲ್ಕು ಸಾಮಾಜಿಕ ವರ್ಗಗಳಾಗಿ ವಿಂಗಡಿಸುವುದನ್ನು ವಿವರಿಸುವ ಒಂದು ಶಬ್ದವಾಗಿದೆ, ಈ ವಿಂಗಡನೆಗಳು ಜನ್ಮದ ಮೂಲಕ ಮಾಡಲ್ಪಡುವುದಿಲ್ಲ, ಆದರೆ ಆತ್ಮದ ಸ್ವಭಾವದ ಮೂಲಕ ವಿಂಗಡಿಸಲ್ಪಡುತ್ತವೆ.[unreliable source?] ಉದಾಹರಣೆಗೆ, ಒಬ್ಬ ಬ್ರಾಹ್ಮಣನ ಸ್ವಭಾವನ್ನು ಹೊಂದಿರುವ ಒಂದು ಆತ್ಮವು ಒಬ್ಬ ಶೂದ್ರನಾಗಿ ಜನ್ಮತಾಳಬಹುದು ಮತ್ತು ಅದರ ವಿರುದ್ಧದ ಸಂಭವನೀಯತೆಯೂ ಕೂಡ ಅಸ್ತಿತ್ವದಲ್ಲಿರುತ್ತದೆ.[unreliable source?] ಮಾಧವಾಚಾರ್ಯರ ಪ್ರಕಾರ ಜನ್ಮದ ಮೂಲಕ ನಿರ್ಧರಿಸಲ್ಪಡುವ ಜಾತಿ ವ್ಯವಸ್ಥೆಯು ವಾಸ್ತವಿಕವಾಗಿ ಜಾತಿ ಆಗಿರುತ್ತದೆ, ಅದು ಒಂದು ನಿರ್ದಿಷ್ಟ ಸಮುದಾಯವನ್ನು ವರ್ಣಿಸುವ ಒಂದು ಶಬ್ದವಾಗಿರುತ್ತದೆ, ಆದರೆ ವರ್ಣವನ್ನು ವಿವರಿಸುವ ಶಬ್ದವಾಗಿರುವುದಿಲ್ಲ.[unreliable source?] ವರ್ಣಗಳು ಕೇವಲ ಆತ್ಮದ ಅಣಿಗೊಳಿಸುವಿಕೆಯನ್ನು ಉಲ್ಲೇಖಿಸುತ್ತವೆ; ಉದಾಹರಣೆಗೆ, ಬ್ರಾಹ್ಮಣ ವರ್ಣವಾಗಿ ವಿಂಗಡಿಸಲ್ಪಟ್ಟ ಒಂದು ಆತ್ಮವು ಕಲಿಯುವಿಕೆಯೆ ಕಡೆಗೆ ಅಣಿಗೊಳಿಸಲ್ಪಟ್ಟಿರುತ್ತದೆ; ಒಂದು ಕ್ಷತ್ರೀಯ ಆತ್ಮವು ನಿರ್ವಹಣೆಯ ಕಡೆಗೆ ಸಜ್ಜುಗೊಂಡಿರುತ್ತದೆ ಮತ್ತು ಒಂದು ಶೂದ್ರ ಆತ್ಮವು ಸೇವೆಯನ್ನು ನೀಡುವುದರ ಕಡೆಗೆ ಅವ್ಯಾಹತವಾಗಿ ಅಣಿಗೊಂಡಿರುತ್ತದೆ.[unreliable source?] ಆದ್ದರಿಂದ, ಜಾತಿಯು ಒಬ್ಬ ಅಥವಾ ಒಬ್ಬಳ ಜನ್ಮಕ್ಕೆ ಹೊರತಾಗಿ ಅವರ ಸ್ವಭಾವಕ್ಕೆ, ಗುಣಲಕ್ಷಣಗಳಿಗೆ ಸಂಬಂಧಿತವಾಗಿರುತ್ತದೆ ಎಂಬುದನ್ನು ನಂಬಿದ್ದ ಮಧವಾಚಾರ್ಯರು ಜಾತಿ ವ್ಯವಸ್ಥೆಗೆ ಒಂದು ಹೊಸ ಅರ್ಥವಿವರಣೆಯನ್ನು ನೀಡಿದರು; ಮಾಧವಾಚಾರ್ಯರ ಪ್ರಕಾರ, ಜನ್ಮ (ಹುಟ್ಟು) ವರ್ಣದ ನಿರ್ಧಾರಕ ಅಲ್ಲ; ಆಧ್ಯಾತ್ಮಿಕವಾಗಿ ಜ್ಞಾನವನ್ನು ಪಡೆದ ಒಬ್ಬ ಚಾಂಡಾಲನು (ಇತರ ಜಾತಿಯ ವ್ಯಕ್ತಿ) ಒಬ್ಬ ಅಜ್ಞಾನಿ ಬ್ರಾಹ್ಮಣನಿಗಿಂತ ಉತ್ತಮ ಎಂದು ಅವರು ವಿವರಿಸಿದರು.[unreliable source?]

ಜ್ಯೋತಿಷ್ಯ ಶಾಸ್ತ್ರ ಮತ್ತು ಕರ್ಮದ ನಡುವಣ ಸಂಬಂಧ

ವಾಶಿಂಗ್‌ಟನ್ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಚಾರ್ಲ್ಸ್ ಕೆಯೆಸ್ ಮತ್ತು ಕೋಲಂಬಿಯಾ ವಿಶ್ವವಿದ್ಯಾಲಯದ ಮಾನವಶಾಸ್ತ್ರದ ಪ್ರಾಧ್ಯಾಪಕ ಇ. ವ್ಯಾಲಂಟೈನ್ ಇವರುಗಳು, ಗ್ರಹಗಳನ್ನು ಒಳಗೊಂಡಂತೆ ಹಲವಾರು ಸ್ವರ್ಗೀಯ ದೇಹಗಳು ಮಾನವನ ಜೀವನದುದ್ದಕ್ಕೂ ಒಂದು ಪ್ರಭಾವವನ್ನು ಹೊಂದಿವೆ, ಮತ್ತು ಈ ಗ್ರಹೀಯ ಪ್ರಭಾವಗಳು "ಕರ್ಮದ ಫಲ" ಎಂದು ಹೇಳಿದ್ದಾರೆ.

ನವಗ್ರಹ, ಶನಿ (ಸ್ಯಾಟರ್ನ್) ಗ್ರಹವನ್ನೂ ಒಳಗೊಂಡ ಗ್ರಹಗಳ ದೈವೀಕ ಗುಣಗಳು ಈಶ್ವರನಿಗೆ (ಅಂದರೆ ಶ್ರೇಷ್ಠ ಅಸ್ತಿತ್ವತೆ) ಅಧೀನವಾಗಿರುತ್ತವೆ ಎಂಬುದಾಗಿ ಪರಿಗಣಿಸಲ್ಪಡುತ್ತವೆ ಮತ್ತು ಹಲವಾರು ಜನರಿಂದ ನ್ಯಾಯದ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ ಎಂದು ನಂಬಲ್ಪಟ್ಟಿದೆ. ಆದ್ದರಿಂದ, ಈ ಗ್ರಹಗಳು ಭೂಮಿಯ ಮೇಲಿನ ಜೀವನಗಳನ್ನು ಪ್ರಭಾವಿಸುತ್ತವೆ.

ಅಂತಹ ಗ್ರಹೀಯ ಪ್ರಭಾವಗಳು ಜ್ಯೋತಿಷ್ಯಶಾಸ್ತ್ರದ ಹಿಂದೂ ವ್ಯವಸ್ಥೆಯಾದ ಜ್ಯೋತಿಷ್ಯವನ್ನು ಒಳಗೊಂಡಂತೆ ಜ್ಯೋತಿಷ್ಯ ಶಾಸ್ತ್ರದ ವಿಧಾನಗಳನ್ನು ಬಳಸಿಕೊಂಡು ಕಂಡುಹಿಡಿಯಲ್ಪಡುತ್ತವೆ ಎಂದು ಹಲವಾರು ಜನರಿಂದ ನಂಬಲ್ಪಟ್ಟಿದೆ.

ಹಿಂದೂಧರ್ಮದಲ್ಲಿನ ಇತರ ಬಳಕೆಗಳು

ವ್ಯಕ್ತಿಗಳ ಗತ ಜೀವನದ ಕಾರಣದಿಂದ ಮತ್ತು ಒಬ್ಬ ವ್ಯಕ್ತಿಯು ತನ್ನ ಮುಂದಿನ ಜನ್ಮದಲ್ಲಿ ಮತ್ತೊಂದು ದೇಹಕ್ಕೆ ದೇಹಾಂತರವಾಗುತ್ತದೆ ಎಂಬ ಕಾರಣದಿಂದ ಪ್ರತಿಕ್ರಿಯಿಸುವಿಕೆಯ ಅಥವಾ ತೊಂದರೆಯನ್ನು ಅನುಭವಿಸುವಿಕೆಯಂತಹ ಸಂಕುಚಿತ ಅರ್ಥದ ಹೊರತಾಗಿ, ಇದು ಅನೇಕ ವೇಳೆ ಕ್ರಿಯೆ ಅಥವಾ ಪ್ರತಿಕ್ರಿಯೆಯಂತಹ ವಿಶಾಲವಾದ ಅರ್ಥದಲ್ಲಿ ಬಳಸಲ್ಪಟ್ಟಿದೆ.

ಆದ್ದರಿಂದ, ಹಿಂದೂಧರ್ಮದಲ್ಲಿ ಕರ್ಮವು ಒಂದು ಕಾರ್ಯ, ಒಂದು ಕ್ರಿಯೆ ಅಥವಾ ಒಂದು ಭೌತಿಕ ಕಾರ್ಯಚಟುವಟಿಕೆ ಎಂಬ ಅರ್ಥವನ್ನು ನೀಡುತ್ತದೆ. ಅನೇಕ ವೇಳೆ ಒಂದು ನಿರ್ದಿಷ್ಟ ಸಂಯೋಜನದ ಜೊತೆಗೆ ಇದು ಕೆಲವು ನಿರ್ದಿಷ್ಟ ಅರ್ಥಗಳನ್ನು ಪಡೆದುಕೊಳ್ಳುತ್ತದೆ, ಉದಾಹರಣೆಗೆ ಕರ್ಮ-ಯೋಗ ಅಥವಾ ಕರ್ಮ-ಕಾಂಡ ಅಂದರೆ ಅನುಕ್ರಮವಾಗಿ "ಯೋಗ ಅಥವಾ ಕ್ರಿಯೆಗಳು" ಮತ್ತು "ಭೌತಿಕ ಕಾರ್ಯಚಟುವಟಿಕೆಗಳ ಮಾರ್ಗ" ಎಂಬ ಅರ್ಥವನ್ನು ನೀಡುತ್ತವೆ. ಮತ್ತೊಂದು ಉದಾಹರಣೆಯೆಂದರೆ ನಿತ್ಯ ಕರ್ಮ, ಅದು ಹಿಂದೂಗಳಿಂದ ಪ್ರತಿನಿತ್ಯವೂ ಮಾಡಲ್ಪಡಬೇಕಾದ ವಿಧಿಗಳನ್ನು ವಿವರಿಸುತ್ತದೆ, ಉದಾಹರಣೆಗೆ ಗಾಯತ್ರೀ ಮಂತ್ರದ ಉಚ್ಛಾರಣೆಯನ್ನು ಒಳಗೊಂಡಿರುವ ಸಂಧ್ಯಾವಂದನೆ.

ಇತರ ಬಳಕೆಗಳು ಕಹಿಯಾದ, ಅಪೂರ್ಣ ಶ್ರಮವನ್ನು ನೀಡುವ ಎಂಬ ಅರ್ಥವನ್ನು ನೀಡುವ "ಉಗ್ರ-ಕರ್ಮ" ಎಂಬಂತಹ ಅಭಿವ್ಯಕ್ತಿಗಳನ್ನು ಒಳಗೊಳ್ಳುತ್ತವೆ.

ಇವನ್ನೂ ಗಮನಿಸಿ

Page ಮಾಡ್ಯೂಲ್:Portal/styles.css has no content.

  • ಕೆಟ್ಟದ್ದರಿಂದ ಉಂಟಾಗುವ ತೊಂದರೆಗಳಿಗೆ ಹಿಂದೂವಿನ ಉತ್ತರಗಳು
  • ಕೆಟ್ಟದ್ದರಿಂದ ಉಂಟಾಗುವ ತೊಂದರೆಗಳು
  • ಇಚ್ಛೆ
  • ಮರುಜನ್ಮ ಪಡೆಯುವಿಕೆ ಮತ್ತು ಹಿಂದೂಧರ್ಮ
  • ಕರ್ಮ
  • ಬೌದ್ಧಮತದಲ್ಲಿ ಕರ್ಮ
  • ಜೈನಧರ್ಮದಲ್ಲಿ ಕರ್ಮ

ಉಲ್ಲೇಖಗಳು

ಮುಂದಿನ ಓದಿಗಾಗಿ

  • Krishnan, Yuvraj (1997). The Doctrine of Karma. New Delhi: Motilal Banarsidass. ISBN 81-20812-33-6.
  • Michaels, Axel (2004). Hinduism: Past and Present. Princeton, New Jersey: Princeton University Press. ISBN 0-691-08953-1. (Der Hinduismus: Geschichte und Gegenwart , ವೆರ್ಲಾಗ್ ಸಿ. ಹೆಚ್. ಬೆಕ್, ೧೯೯೮ರ ಇಂಗ್ಲೀಷ್ ಅನುವಾದ).
  • Vireswarananda, Swami (1996). Brahma Sūtras. Calcutta: Advaita Ashrama Publication Department. ISBN 81-85301-95-6.

ಬಾಹ್ಯ ಕೊಂಡಿಗಳು

  1. REDIRECT Template:Hinduism (compact)

Tags:

ಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ ಮೂಲಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ ವ್ಯಾಖ್ಯಾನಗಳುಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ ದೈವಿಕ ಶಕ್ತಿಗಳ ಪಾತ್ರಗಳುಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ ಸರ್ವೋಚ್ಚ ಭಗವಂತನನ್ನು ನಂಬುವ ಆಸ್ತಿಕ ಹಿಂದೂಗಳ ಸಂಪ್ರದಾಯದ ದೃಷ್ಟಿಕೋನಗಳುಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ ಧರ್ಮಶಾಸ್ತ್ರಗಳುಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ ಕೆಟ್ಟ ಕರ್ಮದ ನಿವಾರಣೆಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ ಒಂದು ನಿರ್ದಿಷ್ಟ ದೇಹದಲ್ಲಿ ಹುಟ್ಟು (ಜನ್ಮ) ಮತ್ತು ಕರ್ಮಗಳ ನಡುವಣ ಸಂಬಂಧಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ ಜ್ಯೋತಿಷ್ಯ ಶಾಸ್ತ್ರ ಮತ್ತು ಕರ್ಮದ ನಡುವಣ ಸಂಬಂಧಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ ಹಿಂದೂಧರ್ಮದಲ್ಲಿನ ಇತರ ಬಳಕೆಗಳುಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ ಇವನ್ನೂ ಗಮನಿಸಿಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ ಉಲ್ಲೇಖಗಳುಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ ಮುಂದಿನ ಓದಿಗಾಗಿಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತ ಬಾಹ್ಯ ಕೊಂಡಿಗಳುಹಿಂದೂ ಧರ್ಮದಲ್ಲಿ ಕರ್ಮ ಸಿದ್ಧಾಂತಹಿಂದೂ ಧರ್ಮ

🔥 Trending searches on Wiki ಕನ್ನಡ:

ಗುಪ್ತ ಸಾಮ್ರಾಜ್ಯವಿಧಾನಸೌಧತಂತ್ರಜ್ಞಾನದ ಉಪಯೋಗಗಳುಕರ್ನಾಟಕ ವಿಧಾನ ಪರಿಷತ್ಏಡ್ಸ್ ರೋಗಗಂಡಬೇರುಂಡಕೃಷ್ಣರಾಜಸಾಗರತೀ. ನಂ. ಶ್ರೀಕಂಠಯ್ಯಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿತ. ರಾ. ಸುಬ್ಬರಾಯಜೋಗವಿರಾಮ ಚಿಹ್ನೆಹೊಂಗೆ ಮರಸರಸ್ವತಿಕರ್ಬೂಜಮಾಸಸ್ಕೌಟ್ಸ್ ಮತ್ತು ಗೈಡ್ಸ್ಚಿನ್ನಹಿಂದೂ ಮಾಸಗಳುಭಾರತೀಯ ರಿಸರ್ವ್ ಬ್ಯಾಂಕ್ಗಾಳಿ/ವಾಯುಬಾಲ್ಯ ವಿವಾಹಮುಖ್ಯ ಪುಟಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮಧುಮೇಹಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕ್ಯಾರಿಕೇಚರುಗಳು, ಕಾರ್ಟೂನುಗಳುಬ್ಯಾಡ್ಮಿಂಟನ್‌ಪರಮಾಣುನೈಸರ್ಗಿಕ ಸಂಪನ್ಮೂಲಹವಾಮಾನಜೋಡು ನುಡಿಗಟ್ಟುಸಂಗ್ಯಾ ಬಾಳ್ಯಪೆಟ್ರೋಮ್ಯಾಕ್ಸ್ (ಚಲನಚಿತ್ರ)ಶಿಶುಪಾಲಕರ್ನಾಟಕ ಜನಪದ ನೃತ್ಯಜೀವನಬಾದಾಮಿ ಶಾಸನಬೆಳಗಾವಿಕಲ್ಯಾಣಿನೀರುಕರ್ನಾಟಕನಿರ್ವಹಣೆ ಪರಿಚಯಶಬ್ದಮಣಿದರ್ಪಣಚಾಣಕ್ಯಕರ್ನಾಟಕದ ಇತಿಹಾಸಆದಿ ಶಂಕರಸಮುದ್ರಗುಪ್ತಮಂಟೇಸ್ವಾಮಿಕೊಪ್ಪಳಅಸಹಕಾರ ಚಳುವಳಿಬಿ.ಜಯಶ್ರೀಮಹಿಳೆ ಮತ್ತು ಭಾರತಲಕ್ಷ್ಮೀಶವ್ಯಾಪಾರ ಸಂಸ್ಥೆದ್ವಿರುಕ್ತಿನಾಲ್ವಡಿ ಕೃಷ್ಣರಾಜ ಒಡೆಯರುಸಂಜಯ್ ಚೌಹಾಣ್ (ಸೈನಿಕ)ಕ್ಯಾನ್ಸರ್ರಸ(ಕಾವ್ಯಮೀಮಾಂಸೆ)ಗಾದೆಮಜ್ಜಿಗೆಮೋಳಿಗೆ ಮಾರಯ್ಯಚಂದ್ರಯಾನ-೩ವೃದ್ಧಿ ಸಂಧಿಚಪ್ಪಾಳೆರಾಧೆಮದುವೆಬಸವೇಶ್ವರರಕ್ತದೊತ್ತಡಕರ್ಣರಾಯಚೂರು ಜಿಲ್ಲೆಗೋತ್ರ ಮತ್ತು ಪ್ರವರಜಾಗತಿಕ ತಾಪಮಾನಕುಕ್ಕೆ ಸುಬ್ರಹ್ಮಣ್ಯ ದೇವಾಲಯಬ್ರಹ್ಮಶ್ಚುತ್ವ ಸಂಧಿಬಂಜಾರಬಯಲಾಟ🡆 More