ವೇದವ್ಯಾಸ

ವ್ಯಾಸ ಅಥವಾ ವೇದವ್ಯಾಸ ಹಿಂದೂ ಧರ್ಮ ಪರಂಪರೆ ಮತ್ತು ಸಾಹಿತ್ಯದಲ್ಲಿ ಬಹಳ ಪ್ರಮುಖರು.

ಬ್ರಹ್ಮನ ಸಾರ್ಥಕತೆಯನ್ನು ತಿಳಿದ ಇವರನ್ನು ಆದರ್ಶ ಬ್ರಹ್ಮರ್ಷಿ ಎಂದು ಕರೆಯಲಾಗುತ್ತದೆ.

ವೇದವ್ಯಾಸ
ವೇದ ವ್ಯಾಸ(ಸಮಕಾಲೀನ ಚಿತ್ರ)

ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ

ವ್ಯಾಸರ ಪುರಾಣ ಇತಿಹಾಸ

ವ್ಯಾಸರು ಬಹು ಮುಖ್ಯ ಹಿಂದೂ ಮಹಾಕಾವ್ಯವಾದ ಮಹಾಭಾರತದ ಕರ್ತೃ. ಶತಮಾನಗಳಷ್ಟು ಹಳೆಯದಾದ ಭಾರತದ ಚಾರಿತ್ರಿಕ ಘಟನೆಗಳನ್ನು ಆಧರಿಸಿ ಮಹಾಭಾರತವು ರಚಿತವಾಗಿದ್ದರೂ ಕೂಡ, ಇದು ಪ್ರಾಚೀನ ಭಾರತದ ದಂತಕಥೆಗಳು, ಪುರಾಣಗಳು, ದಾರ್ಶನಿಕತೆ ಮತ್ತು ಅರೆಚಾರಿತ್ರಿಕ ಘಟನೆಗಳ ಒಂದು ಬೃಹತ್ ಕಾವ್ಯ. ಈ ಕಾರಣದಿಂದ ಚಾರಿತ್ರಿಕವಾಗಿ ವ್ಯಾಸರ ಕಾಲ ಮತ್ತು ದೇಶಗಳನ್ನು ದಂತಕಥೆಗಳಿಂದ ಬೇರ್ಪಡಿಸುವುದು ಬಹಳ ಕಷ್ಟ. ಮಹಾಭಾರತದ ಪ್ರಕಾರ, ವ್ಯಾಸರು ಪರಾಶರ ಮುನಿ ಮತ್ತು ಮೀನುಗಾರ[ಬೆಸ್ತ]ನ ಮಗಳಾದ ಮತ್ಸ್ಯಗಂಧಿ ಅಥವಾ ಸತ್ಯವತಿಯ ಪುತ್ರ. ಜನ್ಮ ಯಮುನಾ ನದಿ ಯ ಒಂದು ದ್ವೀಪದಲ್ಲಿ. ಇದು ಈಗಿನ ಕಾಲದ ಉತ್ತರ ಪ್ರದೇಶದ ಜಲುವಾ ಜಿಲ್ಲೆಯ 'ಕಲ್ಪಿ' ಎನ್ನುವ ಸ್ಥಳದ ಬಳಿಯಿದೆ. ವ್ಯಾಸರ ಬಣ್ಣ ಕಪ್ಪಾಗಿದ್ದ ಕಾರಣ 'ಕೃಷ್ಣ' ಎಂದು ಕರೆಯಲಾಗುತ್ತಿತ್ತು. ದ್ವೀಪದಲ್ಲಿ ಜನಿಸಿದ ಕಾರಣ 'ದ್ವೈಪಾಯನ' ಎಂದೂ ಹೆಸರಿತ್ತು. ಈ ಕಾರಣದಿಂದ ಇವರನ್ನು "ಕೃಷ್ಣ-ದ್ವೈಪಾಯನ" ಎಂದೂ ಕರೆಯಲಾಗುತ್ತದೆ. ಮಗು ವಾಗಿ ಹುಟ್ಟಿದ ಕ್ಷಣವೇ ದೊಡ್ಡವರಾಗಿ ಬೆಳೆದು, ತಾಪಸ ಜೀವನ ನಡೆಸಿ ಅತಿ ಪ್ರಮುಖ ಋಷಿಗಳಲ್ಲಿ ಒಬ್ಬರಾಗಿ ಪರಿಗಣಿತರಾಗಿದ್ದಾರೆ. ಪುರಾಣಗಳಲ್ಲಿ ಇವರನ್ನು ವಿಷ್ಣುವಿನ ಒಂದು ಅವತಾರವೆಂದೇ ಪರಿಗಣಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ ಇವರು ಏಳು ಚಿರಂಜೀವಿಗಳಲ್ಲಿ ಒಬ್ಬರು.

ವೇದವ್ಯಾಸ 
ಮಹಾಭಾರತವನ್ನು ಬರೆಯುತ್ತಿರುವ ಗಣೇಶ

'ವೇದ' ವ್ಯಾಸ

ಹಿಂದೂಗಳು ನಂಬುವ ಪ್ರಕಾರ ಇವರು ಪ್ರಾಚೀನ ಕಾಲದ ಒಂದು ವೇದವನ್ನು ನಾಲ್ಕು ವೇದಗಳನ್ನಾಗಿ ವಿಂಗಡಿಸಿದ ಕಾರಣ ವೇದವ್ಯಾಸ ಎಂಬ ಹೆಸರು ಬಂತು. ಈ ಹೆಸರಿನಲ್ಲಿಯೇ ಇವರು ಬಹಳ ಪರಿಚಿತರು. ವ್ಯಾಸರು ಒಬ್ಬ ವ್ಯಕ್ತಿಯೇ ಅಥವಾ ಮೇಧಾವಿಗಳ ಗುಂಪೇ ಎಂದು ತರ್ಕಿಸಲಾಗಿದೆ. ವಿಷ್ಣು ಪುರಾಣದಲ್ಲಿ ಇದರ ಬಗ್ಗೆ ಒಂದು ಕುತೂಹಲಕಾರೀ ವಿವರಣೆಯಿದೆ. ಇದರ ಪ್ರಕಾರ:

ಪ್ರತಿ ಮೂರನೇ (ದ್ವಾಪರ)ಯುಗದಲ್ಲಿ ವಿಷ್ಣು ವ್ಯಾಸರ ರೂಪದಲ್ಲಿ ಬಂದು ಮಾನವ ಕುಲದ ಉದ್ಧಾರಕಾಗಿ ವೇದವನ್ನು ವಿಂಗಡಿಸುತ್ತಾನೆ.

ವೇದವನ್ನು ಇಪ್ಪತ್ತೆಂಟು ಬಾರಿ ವೈವಸ್ವತ ಮನ್ವಂತರದ ಮಹರ್ಷಿಗಳಿಂದ ವಿಂಗಡಿಸಲಾಗಿದೆ. ಆದ್ದರಿಂದ ಇಪ್ಪತ್ತೆಂಟು ವ್ಯಾಸರು ಬಂದು ಹೋಗಿದ್ದಾರೆ. ಇದರಲ್ಲಿ ಪ್ರಥಮವಾಗಿ ವೇದವನ್ನು ವಿಂಗಡಿಸಿದ ಸ್ವಯಂಭೂ (ಬ್ರಹ್ಮ); ಅದರ ನಂತರ ವೇದವನ್ನು ವಿಂಗಡಿಸಿದ್ದು ಪ್ರಜಾಪತಿ... (ಹೀಗೇ ಇಪ್ಪತ್ತೆಂಟು ಬಾರಿ).

ಮಹಾಭಾರತದ ಲೇಖಕ

ವೇದವ್ಯಾಸ 
ವ್ಯಾಸ ಗಣೇಶನಿಗೆ ಮಹಾಭಾರತವನ್ನು ವಿವರಿಸುತ್ತಿರುವುದು, ಆಂಗ್‌ಕರ್ ವಾಟ್.

ಪಾರಂಪರಿಕವಾಗಿ ವ್ಯಾಸರು ಈ ಮಹಾಕಾವ್ಯದ ಲೇಖಕರು. ಆದರೆ ಈ ಮಹಾಕಾವ್ಯದಲ್ಲಿ ಇವರ ಒಂದು ಪಾತ್ರವೂ ಇದೆ. ಇವರ ತಾಯಿ ನಂತರ ಹಸ್ತಿನಾಪುರದ ರಾಜ ಶಂತನುವನ್ನು ಮದುವೆಯಾಗಿ ಇಬ್ಬರು ಗಂಡು ಮಕ್ಕಳನ್ನು ಹೆತ್ತಳು. ಈ ಇಬ್ಬರೂ ಸಂತಾನವಿಲ್ಲದೇ ತೀರಿಕೊಂಡರು. ಪ್ರಾಚೀನ ಪದ್ಧತಿ ನಿಯೋಗವನ್ನು ಅನುಸರಿಸಿ ಸತ್ಯವತಿಯು ವ್ಯಾಸರಿಗೆ ತನ್ನ ಸತ್ತ ಮಗನಾದ ವಿಚಿತ್ರವೀರ್ಯನ ಪರವಾಗಿ ಗಂಡು ಮಕ್ಕಳನ್ನು ಹುಟ್ಟಿಸುವಂತೆ ಕೋರುತ್ತಾಳೆ. ಈ ಪ್ರಕಾರ ವ್ಯಾಸರು ತೀರಿಕೊಂಡ ರಾಜನ ಪತ್ನಿಯರಾದ ಅಂಬಿಕೆ ಮತ್ತು ಅಂಬಾಲಿಕೆಯಿಂದ ಧೃತರಾಷ್ಟ್ರ ಮತ್ತು ಪಾಂಡುವಿನ ತಂದೆಯಾಗುತ್ತಾರೆ. ಇದೇ ಸಂಪ್ರದಾಯದಿಂದ ರಾಣಿಯರ ಸೇವಕಿಯಿಂದ ವಿದುರ ನ ಜನ್ಮವಾಗುತ್ತದೆ.

ಪ್ರಾಯಶಃ ಈ ಮೂರು ಜನ ವ್ಯಾಸರ ಪುತ್ರರಾಗಿ ಪರಿಗಣಿತರಾಗುವುದಿಲ್ಲ. ಇವರ ಇನ್ನೊಬ್ಬ ಪುತ್ರ ಶುಕನು ಇವರ ನಿಜವಾದ ಆಧ್ಯಾತ್ಮಿಕ ಪುತ್ರನೆಂದು ಕರೆಸಿಕೊಳ್ಳುತ್ತಾನೆ. ಈ ಪ್ರಕಾರ ವ್ಯಾಸರು ಮಹಾಭಾರತ ಯುದ್ಧದಲ್ಲಿ ಕಾದಾಡಿದ ಕೌರವರು ಮತ್ತು ಪಾಂಡವರ ತಾತರಾಗುತ್ತಾರೆ. ತದ ನಂತರ ಮಹಾಭಾರತದಲ್ಲಿ ಆಧ್ಯಾತ್ಮಿಕ ಗುರುವಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ.

ಮಹಾಭಾರತದ ಮೊದಲ ಗ್ರಂಥದಲ್ಲಿ ಇವರು ಈ ಮಹಾಕಾವ್ಯವನ್ನು ರಚಿಸಲು ಗಣೇಶನನ್ನು ಕೇಳಿಕೊಂಡರು. ಈ ಪ್ರತೀತಿಯ ಪ್ರಕಾರ ಗಣೇಶನು ವ್ಯಾಸರಿಗೆ ಮಹಾಕಾವ್ಯವನ್ನು ಒಂದು ಕ್ಷಣವನ್ನೂ ನಿಲ್ಲಿಸಿದೇ ಹೇಳಲು ಷರತ್ತು ವಿಧಿಸಿದನು. ಇದಕ್ಕೆ ಪ್ರತಿಯಾಗಿ ವ್ಯಾಸರು ಹಾಕಿದ ಷರತ್ತೇನೆಂದರೆ ತಾವು ಹೇಳಿದ ಪ್ರತಿ ಶ್ಲೋಕವನ್ನು ಗಣೇಶನು ಅರ್ಥ ಮಾಡಿ ಕೊಂಡ ನಂತರವಷ್ಟೇ ಬರೆಯಬೇಕೆಂದು. ಹೀಗೆ ವ್ಯಾಸರಿಗೆ ವಿಶ್ರಾಂತಿ ಬೇಕಿದ್ದಾಗ ಕಷ್ಟಕರವಾದ ಸಂಸ್ಕೃತ ಶ್ಲೋಕಗಳನ್ನು ಹೇಳುತ್ತಿದ್ದರು.

ಇತರ ಕೃತಿಗಳು

  • ಇವರಿಗೆ ಹದಿನೆಂಟು ಮಹಾಪುರಾಣಗಳನ್ನು ಬರೆದ ಕೀರ್ತಿಯೂ ಕೊಡಲಾಗುತ್ತದೆ. ಇವರ ಮಗನಾದ ಶುಕನು ಭಾಗವತ ಪುರಾಣದ ನಿರೂಪಕ.
  • ಬ್ರಹ್ಮ ಸೂತ್ರವನ್ನು ಬರೆದ ಕವಿ ಬಾದರಾಯಣ. ವ್ಯಾಸರು ಹುಟ್ಟಿದ ದ್ವೀಪದಲ್ಲಿ ಬಾದರವೃಕ್ಷಗಳಿದ್ದ ಕಾರಣ ಇವರಿಗೆ ಬಾದರಾಯಣ ಎಂಬ ಹೆಸರೂ ಇದೆ. ಆದರೆ ಇತಿಹಾಸಕಾರರ ಪ್ರಕಾರ ಇವರಿಬ್ಬರೂ ಬೇರೆ ಬೇರೆ ವ್ಯಕ್ತಿಗಳು.
  • ಯೋಗಭಾಷ್ಯ ಪತಂಜಲಿಯ ಯೋಗಸೂತ್ರಗಳು ಎಂಬ ಕೃತಿಯ ವ್ಯಾಖ್ಯಾನ. ವ್ಯಾಸರ ಚಿರಂಜೀವತ್ವವನ್ನು ನಂಬಿದರೆ ಮಾತ್ರ ಅವರನ್ನು ಯೋಗ ಭಾಷ್ಯದ ಲೇಖಕ ಎಂದು ಹೇಳಬಹುದು. ಏಕೆಂದರೆ ಇದು ವ್ಯಾಸರ ಕಾಲದ ನಂತರ ಬರೆದದ್ದು.

ಬೌದ್ಧ ಧರ್ಮದಲ್ಲಿ ವ್ಯಾಸ

ಎರಡು ಜಾತಕ ಕಥೆಗಳಲ್ಲಿ ವ್ಯಾಸರು ಕಾನ್ಹಾದ್ವೈಪಾಯನ (ಪಾಲಿ ಭಾಷೆಯಲ್ಲಿ ವ್ಯಾಸರ ಹೆಸರು) ಜಾತಕ ಮತ್ತು ಘಟ ಜಾತಕ ಎಂಬ ಹೆಸರಿನಲ್ಲಿ ಕಾಣಿಸುತ್ತಾರೆ.

ಅರ್ಥಶಾಸ್ತ್ರದಲ್ಲಿ

ಚಾಣಕ್ಯನ ಅರ್ಥಶಾಸ್ತ್ರದಲ್ಲಿ ವ್ಯಾಸರ ಬಗ್ಗೆ ಕುತೂಹಲಕಾರೀ ಕಥೆಯಿದೆ. ಈ ಕಥೆಯು ಜಾತಕ ಕಥೆಯ ನಿರೂಪಣೆಯನ್ನು ಹೋಲುತ್ತದೆ.

ಆಧಾರ

  • ಕೃಷ್ಣದ್ವೈಪಾಯನ ವ್ಯಾಸರ ಮಹಾಭಾರತ - ಕೇಸರಿ ಮೋಹನ ಗಂಗೂಲಿಯವರಿಂದ ಅನುವಾದ, ೧೮೮೩-೧೮೯೬
  • ಅರ್ಥಶಾಸ್ತ್ರ, ಶಾಮಶಾಸ್ತ್ರಿಯವರಿಂದ ಅನುವಾದ, ೧೯೧೫
  • ವಿಷ್ಣುಪುರಾಣ, ಎಚ್.ಎಚ್. ವಿಲ್ಸನ್ ರಿಂದ ಅನುವಾದ, ೧೮೪೦
  • ಭಾಗವತ ಪುರಾಣ, ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅನುವಾದ, ೧೯೮೮
  • ಬುದ್ಧನ ಪೂರ್ವ ಜನ್ಮಗಳ ಜಾತಕ ಕಥೆಗಳು, ಸಂಕಲನ ಇ.ಬಿ. ಕೊವೆಲ್, ೧೮೯೫

ಹೊರಗಿನ ಸಂಪರ್ಕಗಳು

ಉಲ್ಲೇಖಗಳು

Tags:

ವೇದವ್ಯಾಸ ವ್ಯಾಸರ ಪುರಾಣ ಇತಿಹಾಸವೇದವ್ಯಾಸ ವೇದ ವ್ಯಾಸವೇದವ್ಯಾಸ ಮಹಾಭಾರತದ ಲೇಖಕವೇದವ್ಯಾಸ ಇತರ ಕೃತಿಗಳುವೇದವ್ಯಾಸ ಬೌದ್ಧ ಧರ್ಮದಲ್ಲಿ ವ್ಯಾಸವೇದವ್ಯಾಸ ಅರ್ಥಶಾಸ್ತ್ರದಲ್ಲಿವೇದವ್ಯಾಸ ಆಧಾರವೇದವ್ಯಾಸ ಹೊರಗಿನ ಸಂಪರ್ಕಗಳುವೇದವ್ಯಾಸ ಉಲ್ಲೇಖಗಳುವೇದವ್ಯಾಸಬ್ರಹ್ಮಬ್ರಹ್ಮರ್ಷಿಸಾಹಿತ್ಯಹಿಂದೂ ಧರ್ಮ

🔥 Trending searches on Wiki ಕನ್ನಡ:

ಸಸ್ಯ ಅಂಗಾಂಶಕರ್ನಾಟಕದ ಮುಖ್ಯಮಂತ್ರಿಗಳುಸಜ್ಜೆಹಣಸಾಮ್ರಾಟ್ ಅಶೋಕಜೀವಕೋಶಕರ್ನಾಟಕದ ಹಬ್ಬಗಳುಕರ್ನಾಟಕ ವಿಧಾನ ಸಭೆಜಯಮಾಲಾಯಶವಂತ ಚಿತ್ತಾಲಶಾಲಿವಾಹನ ಶಕೆಯಕೃತ್ತುಪಟ್ಟದಕಲ್ಲುಮುಖ್ಯ ಪುಟಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸೂಳೆಕೆರೆ (ಶಾಂತಿ ಸಾಗರ)ಪಂಚಾಂಗಕಾಂತಾರ (ಚಲನಚಿತ್ರ)ರೇಣುಕನಿರುದ್ಯೋಗಓಂ (ಚಲನಚಿತ್ರ)ಗಣರಾಜ್ಯೋತ್ಸವ (ಭಾರತ)ಹನುಮಂತಕಾಟೇರಭಾರತದ ರಾಷ್ಟ್ರೀಯ ಉದ್ಯಾನಗಳುಪಶ್ಚಿಮ ಘಟ್ಟಗಳುಭಾರತದಲ್ಲಿ ಹತ್ತಿಮಾಹಿತಿ ತಂತ್ರಜ್ಞಾನಭಾರತದಲ್ಲಿ ತುರ್ತು ಪರಿಸ್ಥಿತಿಶಿಕ್ಷಕಪರಿಸರ ವ್ಯವಸ್ಥೆಸಾರ್ವಜನಿಕ ಹಣಕಾಸುಗಗನಯಾತ್ರಿಯೇಸು ಕ್ರಿಸ್ತಶಿವಮೈಸೂರು ಅರಮನೆಜಾಗತೀಕರಣಶಾಂತಕವಿಆದಿಪುರಾಣರಾಮಾಯಣಬಡತನಶುಕ್ರಮಾನಸಿಕ ಆರೋಗ್ಯಕಲಿಯುಗನಾಗರೀಕತೆಕರ್ನಾಟಕ ಸ್ವಾತಂತ್ರ್ಯ ಚಳವಳಿಸಿ. ಎನ್. ಆರ್. ರಾವ್ಕನ್ನಡ ಸಾಹಿತ್ಯಚಂಡಮಾರುತಪ್ರಬಂಧಮದುವೆಶಾಲೆವೈದೇಹಿಅಗ್ನಿ(ಹಿಂದೂ ದೇವತೆ)ಪಿತ್ತಕೋಶಶ್ರೀ ರಾಘವೇಂದ್ರ ಸ್ವಾಮಿಗಳುಧರ್ಮ (ಭಾರತೀಯ ಪರಿಕಲ್ಪನೆ)ಧರ್ಮಸ್ಥಳಅಸ್ಪೃಶ್ಯತೆಶಂಖಅಂತರ್ಜಲರತ್ನತ್ರಯರುಡಾ ಬ್ರೋವೀರೇಂದ್ರ ಹೆಗ್ಗಡೆಸುಗ್ಗಿ ಕುಣಿತಭಾರತದ ವಾಯುಗುಣಆನೆಕೈವಾರ ತಾತಯ್ಯ ಯೋಗಿನಾರೇಯಣರುಪರಮಾಣುವ್ಯಕ್ತಿತ್ವಭೂಮಿಯ ವಾಯುಮಂಡಲಸಂಶೋಧನೆಸೆಲರಿಗೋವಿಂದ ಪೈರೈತರಾಘವಾಂಕ🡆 More