ವೇದಾಂತ (ದೇವನಾಗರಿ:वेदान्तVedānta )ವೆಂಬುದು ಮೂಲತಃ ಹಿಂದೂ ತತ್ವಶಾಸ್ತ್ರದಲ್ಲಿ ವೇದ ಗ್ರಂಥಗಳ ಭಾಗವಾದ ಉಪನಿಷತ್ತು ಗಳನ್ನು ಸೂಚಿಸುವ ಪರ್ಯಾಯ ಪದ.
ಈ ಪದವು "ವೇದ-ಅಂತ " ಎಂಬ ಪದದ ಸಂಧಿ ರೂಪ= "ವೇದ-ಎಂಡ್" . ಇದು "ವೇದಗಳ ಸ್ತೋತ್ರಪಠಣದ ಅನುಬಂಧ". "ವೇದಾಂತ" ಎಂದರೆ "ವೇದಗಳ ಉದ್ದೇಶ ಅಥವಾ ಗುರಿ [ಅಂತ್ಯ]" ಎಂಬ ಅರ್ಥವನ್ನು ಸಹ ನೀಡುತ್ತದೆಂದು ಊಹಿಸಲಾಗಿದೆ. ಕಳೆದ 8ನೇ ಶತಮಾನ CE ಹೊತ್ತಿಗೆ, ಈ ಪದವನ್ನು ಆತ್ಮಸಾಕ್ಷಾತ್ಕಾರಕ್ಕೆ ಸಂಬಂಧಿಸಿದಂತೆ ತತ್ವಶಾಸ್ತ್ರದ ಪರಂಪರೆಗಳ ಒಂದು ಗುಂಪನ್ನು ವಿವರಿಸಲು ಬಳಸಲಾಗುತ್ತಿತ್ತು. ಈ ಮೂಲಕ ಒಬ್ಬರು ಸತ್ಯದ(ಬ್ರಹ್ಮನ್)ಅಂತಿಮ ಸ್ವರೂಪವನ್ನು ತಿಳಿಯುತ್ತಿದ್ದರು. ಆಸ್ತಿಕರ ಗುರಿಯು ಸ್ವವ್ಯಕ್ತಿತ್ವದ ಮಿತಿಗಳನ್ನು ಮೀರಿರಬೇಕೆಂಬುದನ್ನು ವೇದಾಂತ ಎಂಬ ಪದವು, ಬೋಧಿಸುತ್ತದೆ[ಸೂಕ್ತ ಉಲ್ಲೇಖನ ಬೇಕು]. ವೇದಾಂತಕ್ಕೆ ನಿರ್ಬಂಧವಿಲ್ಲ,ಅಥವಾ ಒಂದು ಪುಸ್ತಕಕ್ಕೆ ಸೀಮಿತವಾಗಿಲ್ಲ; ಜೊತೆಗೆ ವೇದಾಂತದ ತತ್ವಶಾಸ್ತ್ರಕ್ಕೆ ಯಾವುದೇ ಏಕಮಾತ್ರ ಮೂಲವಿಲ್ಲ.
ಹಿಂದೂ ತತ್ತ್ವಶಾಸ್ತ್ರ ಸರಣಿಯ ಲೇಖನ | |
ಪಂಥಗಳು | |
---|---|
ಸಾಂಖ್ಯ · ನ್ಯಾಯ | |
ವೈಶೇಷಿಕ · ಯೋಗ | |
ಪೂರ್ವ ಮೀಮಾಂಸಾ · ವೇದಾಂತ | |
ವೇದಾಂತ ಪಂಥಗಳು | |
ಅದ್ವೈತ · ವಿಶಿಷ್ಟಾದ್ವೈತ | |
ದ್ವೈತ | |
ಪ್ರಮುಖ ವ್ಯಕ್ತಿಗಳು | |
ಕಪಿಲ · ಗೋತಮ | |
ಕಣಾದ · ಪತಂಜಲಿ | |
ಜೈಮಿನಿ · ವ್ಯಾಸ | |
ಮಧ್ಯಕಾಲೀನ | |
ಆದಿಶಂಕರ · ರಾಮಾನುಜ | |
ಮಧ್ವ · ಮಧುಸೂದನ | |
ವೇದಾಂತ ದೇಶಿಕ · ಜಯತೀರ್ಥ | |
ಆಧುನಿಕ | |
ರಾಮಕೃಷ್ಣ · ರಮಣ | |
ವಿವೇಕಾನಂದ · ನಾರಾಯಣ ಗುರು | |
ಅರವಿಂದ ·ಶಿವಾನಂದ | |
ವೇದಾಂತವು ಎರಡು ಸರಳ ಪ್ರತಿಪಾದನೆಗಳ ಮೇಲೆ ಆಧರಿಸಿದೆ:
ವೇದಾಂತದ ಗುರಿಯು ಆತ್ಮಸಾಕ್ಷಾತ್ಕಾರದ ಸ್ಥಿತಿ ಅಥವಾ ಬ್ರಹ್ಮಾಂಡದ ಪ್ರಜ್ಞೆ ಹೊಂದುವುದೇ ಆಗಿದೆ. ಐತಿಹಾಸಿಕವಾಗಿ ಹಾಗು ಇತ್ತೀಚೆಗೆ, ಈ ಸ್ಥಿತಿಯನ್ನು ಯಾರು ಬೇಕಾದರೂ ಅನುಭವಿಸಬಹುದೆಂದು ಭಾವಿಸಲಾಗಿದೆ, ಆದರೆ ಇದನ್ನು ಬರವಣಿಗೆಯ ಮೂಲಕ ಸಮರ್ಪಕವಾಗಿ ತಿಳಿಯಪಡಿಸಲು ಸಾಧ್ಯವಿಲ್ಲ.
ವೇದಾಂತವನ್ನು ಉತ್ತರ ಮೀಮಾಂಸಾ ಎಂದು ಸಹ ಕರೆಯಲಾಗುತ್ತದೆ. ಇದು 'ದ್ವಿತೀಯ ಶೋಧನೆ' ಅಥವಾ 'ಹೆಚ್ಚಿನ ಶೋಧನೆ' ಎಂಬ ಅರ್ಥವನ್ನು ನೀಡುತ್ತದೆ. ಇದನ್ನು ಹಲವು ಬಾರಿ ಪೂರ್ವ ಮೀಮಾಂಸ, 'ಹಿಂದಿನ ಶೋಧನೆ' ಯ ಜೊತೆಗೆ ತಾಳೆ ಹಾಕಲಾಗುತ್ತದೆ. ಪೂರ್ವ ಮೀಮಾಂಸವನ್ನು, ಸಾಧಾರಣವಾಗಿ ಮೀಮಾಂಸ ಎಂದು ಸರಳವಾಗಿ ಕರೆಯಲಾಗುತ್ತದೆ. ಇದು ಹೋಮ-ಹವನಾದಿಗಳಲ್ಲಿ ಪಠಿಸಲಾಗುವ ವೇದ ಮಂತ್ರ ಗಳ ಬಗ್ಗೆ (ವೇದಗಳಲ್ಲಿ ಬರುವ ಸಂಹಿತ ದ ಭಾಗ) ಹಾಗು ಬ್ರಾಹ್ಮಣ ರ ಬಗ್ಗೆ ವಿವರಣೆಯನ್ನು ನೀಡುತ್ತದೆ. ಈ ನಡುವೆ ವೇದಾಂತವು [[Āraṇyaka]]ನ ಅಧಿಕೃತ ಉಪದೇಶಗಳ ಬಗ್ಗೆ ವಿವರವಾಗಿ ಪ್ರತಿಪಾದಿಸುತ್ತದೆ ("ಅರಣ್ಯಕೊಪನಿಶತ್ತು"), ಹಾಗು ಉಪನಿಷತ್ತುಗಳನ್ನು ಸುಮಾರು 9ನೇ ಶತಮಾನ BCಯಿಂದ ಇಂದಿನವರೆಗೂ ರಚಿಸಲಾಗುತ್ತಿದೆ.
ಈ ಸಾಂಪ್ರದಾಯಿಕ ವೇದವು ಪ್ರತಿಪಾದಿಸಿದ ಕರ್ಮ ಕಾಂಡ , ಅಥವಾ ಧಾರ್ಮಿಕ ಸಂಸ್ಕಾರ ಸಂಬಂಧಿತ ಅಂಶಗಳನ್ನು ಬ್ರಾಹ್ಮಣರು ಧ್ಯಾನಸ್ಥ ಹಾಗು ಪಾಪಪರಿಹಾರಾರ್ಥಕ ಕ್ರಿಯೆಗಳಾಗಿ ಸಮಾಜವನ್ನು ಆತ್ಮ-ಜ್ಞಾನಕ್ಕೆ ಮಾರ್ಗದರ್ಶನ ನೀಡಲು ಆಚರಿಸಿದರು. ಹೆಚ್ಚಿನ ಜ್ಞಾನ (ಗ್ನೋಸಿಸ್)- ಅಥವಾ ಜ್ಞಾನ-ಕೇಂದ್ರಿತ ಅರಿವುಗಳು ಹೊರಹೊಮ್ಮಲಾರಂಭಿಸಿದವು. ವೈದಿಕ ಸಂಸ್ಕೃತಿಯ ಈ ಆಧ್ಯಾತ್ಮಿಕ ಹರಿವುಗಳು ಧಾರ್ಮಿಕ ಕ್ರಿಯೆಗಳಿಗಿಂತ ಹೆಚ್ಚಾಗಿ, ಧ್ಯಾನ,ಆತ್ಮಸಂಯಮ ಹಾಗೂ ಆಧ್ಯಾತ್ಮಿಕ ಸಂಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದವು. ಸಂಸ್ಕೃತ ದ ಹಿಂದಿನ ಗ್ರಂಥಗಳಲ್ಲಿ 'ವೇದಾಂತ'ವನ್ನು ಉಪನಿಷತ್ತು ಗಳು ಎಂದು ಸೂಚಿಸಲಾಗುತ್ತಿತ್ತು. ಈ ಉಪನಿಷತ್ತುಗಳುವೇದ ಗ್ರಂಥಗಳ ಅತ್ಯಂತ ಚಿಂತನೆಯ ಹಾಗು ತಾತ್ವಿಕ ಅಂಶಗಳನ್ನು ಒಳಗೊಂಡಿದೆ. ಆದಾಗ್ಯೂ, ಹಿಂದೂಧರ್ಮದ ಮಧ್ಯಯುಗದ ಅವಧಿಯಲ್ಲಿ, ವೇದಾಂತ ಎಂಬ ಪದವನ್ನು ಉಪನಿಷತ್ತುಗಳನ್ನು ವ್ಯಾಖ್ಯಾನಿಸುವ ತತ್ವಶಾಸ್ತ್ರದ ಪರಂಪರೆ ಎಂದು ಕರೆಯಲಾಗುತ್ತಿತ್ತು. ಸಾಂಪ್ರದಾಯಿಕ ವೇದಾಂತವು ಧಾರ್ಮಿಕ ಗ್ರಂಥದ ಪುರಾವೆ, ಅಥವಾ ಶಬ್ದ ಪ್ರಮಾಣ ವನ್ನು ಜ್ಞಾನದ ಅತ್ಯಂತ ವಿಶ್ವಾಸಾರ್ಹ ಮಾರ್ಗವೆಂದು ಪರಿಗಣಿಸುತ್ತದೆ. ಆದರೆ ಗ್ರಹಿಕೆ ಅಥವಾ ಪ್ರತ್ಯಕ್ಷಾ, ಹಾಗು ತಾರ್ಕಿಕ ನಿರ್ಣಯ, ಅಥವಾ ಅನುಮಾನ ವನ್ನು ಅಮುಖ್ಯ ಅಂಶವೆಂದು ಪರಿಗಣಿಸಲಾಗುತ್ತದೆ (ಆದರೆ ಇದು ಕ್ರಮಬದ್ಧ).
ವೇದಾಂತದ ಉದ್ದೇಶಗಳನ್ನು ವ್ಯವಸ್ಥಿತವಾಗಿ ಒಂದು ಸುಸಂಬದ್ಧ ಪ್ರಬಂಧವನ್ನಾಗಿ ಬಾದರಾಯಣ ತಮ್ಮ ವೇದಾಂತ ಸೂತ್ರ ದಲ್ಲಿ ಸುಮಾರು 200 BCEಯಲ್ಲಿ ರಚನೆ ಮಾಡಿದರು. ಈ ವೇದಾಂತ-ಸೂತ್ರವು ವಿವಿಧ ಹೆಸರಿನಿಂದ ಕರೆಯಲ್ಪಡುತ್ತದೆ, ಇದರಲ್ಲಿ (1) ಬ್ರಹ್ಮ-ಸೂತ್ರ, (2) ಶಾರೀರಕ, (3) ವ್ಯಾಸ-ಸೂತ್ರ, (4) ಬಾದರಾಯಣ-ಸೂತ್ರ, ಉತ್ತರ-ಮೀಮಾಂಸ ಹಾಗು ವೇದಾಂತ-ದರ್ಶನ ಎಂಬ ಹೆಸರುಗಳು ಒಳಗೊಂಡಿವೆ. ವೇದಾಂತ ಸೂತ್ರಗಳ ಸಂಕ್ಷಿಪ್ತ ಸಾರೋಕ್ತಿಗಳು ವಿವಿಧ ವ್ಯಾಖ್ಯಾನಗಳಿಗೆ ಮುಕ್ತವಾಗಿದೆ. ಇದು ಹಲವಾರು ವೇದಾಂತ ಪರಂಪರೆಗಳ ಹುಟ್ಟಿನಲ್ಲಿ ಫಲ ನೀಡಿದವು. ಪ್ರತಿ ಪರಂಪರೆಯು ತನ್ನದೇ ಆದ ರೀತಿಯಲ್ಲಿ ಗ್ರಂಥಗಳನ್ನು ವ್ಯಾಖ್ಯಾನಿಸುವುದರ ಜೊತೆಗೆ ತನ್ನದೇ ಆದ ಉಪ-ವ್ಯಾಖ್ಯಾನಗಳನ್ನು ಮಂಡಿಸಿದೆ. ಆದಾಗ್ಯೂ, ಇಡೀ ವೇದಾಂತದಲ್ಲಿ ಸುಸಂಗತವಾದದ್ದೆಂದರೆ ಇದು ಧಾರ್ಮಿಕ ಕ್ರಿಯೆಯನ್ನು ಧ್ಯಾನದ ಮೂಲಕ ವ್ಯಕ್ತಿಯ ಸತ್ಯಶೋಧನೆಯ ಪರವಾಗಿ ಬಿಟ್ಟು ಬಿಡಬೇಕೆಂದು ಪ್ರೇರೇಪಣೆ ನೀಡುತ್ತದೆ. ನೈತಿಕ ಪ್ರೇಮ, ಜ್ಞಾನದ ಅರಿವಿನ ಪ್ರಭಾವಗಳಿಂದ ಶೋಧಕನಿಗೆ ಅನಂತ ಆನಂದವು ಕಾದಿರುತ್ತದೆ. ಹೆಚ್ಚುಕಡಿಮೆ ಅಸ್ತಿತ್ವದಲ್ಲಿರುವ ಹಿಂದೂಧರ್ಮದ ಎಲ್ಲ ಪಂಥಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವೇದಾಂತದ ಚಿಂತಕರು ಅಭಿವೃದ್ಧಿ ಪಡಿಸಿದ ಚಿಂತನಾ ವ್ಯವಸ್ಥೆಯ ಪ್ರಭಾವಕ್ಕೊಳಪಟ್ಟಿವೆ. ಹಿಂದೂ ಧರ್ಮವು ಬಹುಮಟ್ಟಿಗೆ ತನ್ನ ಅಸ್ತಿತ್ವಕ್ಕೆ ಕಾರಣವಾದ ಸುಸಂಬದ್ಧ ಹಾಗು ತಾರ್ಕಿಕವಾಗಿ ಮುಂದುವರಿದ ವೇದಾಂತದ ವ್ಯವಸ್ಥೆಗೆ ಋಣಿಯಾಗಿದೆ.
ವೇದಾಂತದ ಎಲ್ಲ ರೂಪಗಳನ್ನು ಪ್ರಾಥಮಿಕವಾಗಿ ಉಪನಿಷತ್ತುಗಳಿಂದ ತೆಗೆದುಕೊಳ್ಳಲಾಗಿದೆ. ಇದು ತತ್ವಶಾಸ್ತ್ರ ಹಾಗು ಬೋಧಕಾರ್ಹವಾದ ವೈದಿಕ ಗ್ರಂಥಗಳ ಒಂದು ಸಂಗ್ರಹ. ಉಪನಿಷತ್ತುಗಳು ವೇದಗಳ ವ್ಯಾಖ್ಯಾನಗಳು, ಅದರ ಭಾವಿಸಲ್ಪಟ್ಟ ಗುರಿ ಹಾಗು ಸಾರ[ಸೂಕ್ತ ಉಲ್ಲೇಖನ ಬೇಕು], ಈ ಪ್ರಕಾರ ವೇದಾಂತ ಅಥವಾ "ವೇದದ ಗುರಿ" ಎಂದು ಕರೆಯಲಾಗಿದೆ. ಇದನ್ನು ಎಲ್ಲ ವೇದಗಳ ತಳಹದಿಯ ಸಾರ ಎಂದು ಪರಿಗಣಿಸಲಾಗಿದೆ. ಇವುಗಳು ವೇದಾಂತದ ಬೆನ್ನೆಲುಬಾಗಿ ರೂಪಗೊಂಡರೂ, ವೈದಿಕ ಚಿಂತನೆಯ ಭಾಗಗಳು ಕೆಲವು ಹಿಂದಿನ ಅರಣ್ಯಕ ಗಳಿಂದ ಕೂಡ ಹುಟ್ಟಿಕೊಂಡಿದೆ.
ಉಪನಿಷತ್ತುಗಳಲ್ಲಿ ಕಂಡುಬಂದಂತಹ ಪ್ರಾಥಮಿಕ ತತ್ವ, ಒಂದು ಪರಮ ಸತ್ಯವನ್ನು ಬ್ರಹ್ಮನ್ ಎಂದು ಕರೆಯಲಾಗಿದೆ. ಇದೇ ವೇದಾಂತದ ಪ್ರಮುಖ ಮೂಲತತ್ವ. ಉಪನಿಷತ್ತುಗಳನ್ನು ಆಧರಿಸಿದ ಬ್ರಹ್ಮ ಸೂತ್ರಗಳ ಗ್ರಂಥಕರ್ತ, ವ್ಯಾಸ ಋಷಿಗಳು ಈ ತತ್ವದ ಪ್ರಮುಖ ಪ್ರತಿಪಾದಕರು. ಬ್ರಹ್ಮನ್ ನ ಕಲ್ಪನೆಯು - ಅನಂತ, ಸ್ವಯಂಭು, ಸರ್ವಾಂತರ್ಯಾಮಿ ಹಾಗು ಅಲೌಕಿಕ ಶ್ರೇಷ್ಠತೆ ಹಾಗು ಅಂತಿಮ ಸತ್ಯ ಇವೆಲ್ಲವೂ ಎಲ್ಲ ಜೀವಿಗಳ ಅತ್ಯುತ್ಕೃಷ್ಟ ತಳಹದಿಯಾಗಿದೆ - ಇದು ಹೆಚ್ಚಿನ ವೇದಾಂತ ಪರಂಪರೆಗಳಿಗೆ ಕೇಂದ್ರ ಬಿಂದು. ದೇವರು ಅಥವಾ ಈಶ್ವರಎಂಬ ಪರಿಕಲ್ಪನೆಯೂ ಸಹ ಇದೆ ಹಾಗು ವೇದಾಂತದ ಉಪ-ಪರಂಪರೆಗಳು ಪ್ರಮುಖವಾಗಿ ಹೇಗೆ ದೇವರ ಜೊತೆ ಬ್ರಹ್ಮನ್ನ ಗುರುತಿಸುತ್ತಾರೆ ಎಂಬುದರ ಮೇಲೆ ವ್ಯತ್ಯಾಸವನ್ನು ಹೊಂದಿರುತ್ತವೆ.
ಉಪನಿಷತ್ತುಗಳ ಸಾರಗಳು ಸಾಮಾನ್ಯವಾಗಿ ಗೂಢವಾದ ಭಾಷೆಯ ಆಸರೆಯನ್ನು ಹೊಂದಿರುತ್ತದೆ, ಇದು ಹಲವು ವಿಧದ ವ್ಯಾಖ್ಯಾನಗಳಿಗೆ ಮುಕ್ತವಾಗಿ ತೆರೆದುಕೊಂಡಿರುತ್ತದೆ. ಕಾಲಾನುಕ್ರಮದಲ್ಲಿ, ಹಲವಾರು ವಿದ್ವಾಂಸರು ಉಪನಿಷತ್ಗಳು ಹಾಗು ಇತರ ಗ್ರಂಥಗಳಾದ ಬ್ರಹ್ಮ ಸೂತ್ರಗಳನ್ನು ತಮ್ಮ ತಿಳಿವಳಿಕೆಯಂತೆ ಹಾಗು ಕಾಲದ ಆಧಾರದ ಮೇಲೆ ವ್ಯಾಖ್ಯಾನಿಸಿದ್ದಾರೆ. ಈ ಆಧಾರ ಗ್ರಂಥಗಳಲ್ಲಿ ಒಟ್ಟು ಆರು ಪ್ರಮುಖ ವ್ಯಾಖ್ಯಾನಗಳಿವೆ. ಅದರಲ್ಲಿ, ಮೂರು (ಅದ್ವೈತ, ವಿಶಿಷ್ಟಾದ್ವೈತ ಹಾಗು ದ್ವೈತ) ವ್ಯಾಖ್ಯಾನಗಳು ಭಾರತ ಹಾಗು ಹೊರದೇಶಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಈ ವೇದಾಂತದ ಚಿಂತನೆಯ ಪರಂಪರೆಗಳನ್ನು ಶ್ರೀ ಆದಿ ಶಂಕರ, ಶ್ರೀ ರಾಮಾನುಜ ಹಾಗು ಶ್ರೀ ಮಧ್ವಾಚಾರ್ಯ ರು ಕ್ರಮವಾಗಿ ಸ್ಥಾಪನೆ ಮಾಡಿದ್ದಾರೆ. ಆದಾಗ್ಯೂ, ಶಂಕರರಿಗೂ ಮುಂಚೆ ಬಂದ ಬೌದ್ಧ ಗ್ರಂಥಕರ್ತ, ಭವ್ಯ, ತಮ್ಮ ಮಧ್ಯಮಾಕಹೃದಯ ಕಾರಿಕ ದಲ್ಲಿ ವೇದಾಂತ ತತ್ವಶಾಸ್ತ್ರವನ್ನು "ಭೇಧಾಭೇದ" ಎಂದು ವಿವರಿಸಿರುವುದನ್ನು ಗಮನಿಸಬಹುದು. ಇತರ ವೇದಾಂತ ಪರಂಪರೆಯ ಪ್ರತಿಪಾದಕರೂ ಸಹ ತಮ್ಮ ಬರವಣಿಗೆಯನ್ನು ಹಾಗು ತಮ್ಮ ಚಿಂತನೆಯನ್ನು ಅಭಿವೃದ್ಧಿಪಡಿಸಿದರು. ಆದಾಗ್ಯೂ ಇವರ ಚಿಂತನೆಗಳು ಭಾರತದಲ್ಲಿ ಕೇವಲ ಸಣ್ಣ ಗುಂಪುಗಳ ಅನುಯಾಯಿಗಳ ವಲಯಗಳ ಹೊರಗೆ ಹೆಚ್ಚಿನ ವ್ಯಾಪಕತೆಯನ್ನು ಗಳಿಸಿಲ್ಲ.
ಈ ನಡುವೆ ಒಂದು ಶುದ್ಧ ವೈದಿಕ ಗ್ರಂಥವೆಂದು ವಿಶಿಷ್ಟವಾಗಿ ಪರಿಗಣನೆಯನ್ನು ಹೊಂದಿರದಿದ್ದರೂ, ಭಗವದ್ಗೀತೆ ವೇದಾಂತದ ಚಿಂತನೆಯಲ್ಲಿ ಸಂಖ್ಯ, ಯೋಗ, ಹಾಗು ಉಪನಿಷತ್ ನ ಚಿಂತನೆಯ ಪ್ರಾತಿನಿಧಿಕ ಸಮ್ಮಿಳನದೊಂದಿಗೆ ಒಂದು ಪ್ರಮುಖ ಪಾತ್ರವನ್ನು ವಹಿಸಿದೆ. ವಾಸ್ತವವಾಗಿ, ಇದನ್ನೇ ಸ್ವತಃ " " ಎಂದು ಕರೆಯಲಾಗುತ್ತದೆ ಹಾಗು ಈ ಪ್ರಕಾರವಾಗಿ ಎಲ್ಲ ಪ್ರಮುಖ ವೇದಾಂತದ ಗುರುಗಳು ( ಉದಾಹರಣೆಗೆ ಶಂಕರ, ರಾಮಾನುಜ, ಹಾಗು ಮಧ್ವಾಚಾರ್ಯ) ಖುದ್ದು ತಾವುಗಳೇ ವ್ಯಾಪಕವಾದ ವ್ಯಾಖ್ಯಾನಗಳನ್ನು ಉಪನಿಷತ್ತುಗಳು ಹಾಗು ಬ್ರಹ್ಮ ಸೂತ್ರಗಳ ಮೇಲೆ ಮಾತ್ರವಲ್ಲದೆ ಗೀತೆಯ ಮೇಲೂ ರಚಿಸಿದ್ದಾರೆ. ಈ ಪ್ರಕಾರವಾಗಿ, ಹಿಂದಿನ ಹಾಗು ಇಂದಿನ ವೇದಾಂತಿಗಳು, ವೇದಾಂತದ ಚಿಂತನೆ ಹಾಗು ಅಭ್ಯಾಸದ ಅಭಿವೃದ್ಧಿಗಾಗಿ ನಿಸ್ಸಂಶಯವಾಗಿ ಗೀತೆಗೆ ಸ್ಪಷ್ಟ ಮಹತ್ವ ನೀಡಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]
ಅದ್ವೈತ ವೇದಾಂತ ವನ್ನು ಆದಿ ಶಂಕರ ರು ಪ್ರತಿಪಾದಿಸಿದ್ದಾರೆ ಹಾಗು ಅವರ ಹಿರಿಯ ಗುರುಗಳಾದ ಗೌಡಪಾದರು ಇದನ್ನು ಅಜಾತಿವಾದ ಎಂದು ವಿವರಿಸುತ್ತಾರೆ. ವೇದಾಂತದ ಈ ಪರಂಪರೆಯಲ್ಲಿ, ಬ್ರಹ್ಮನ್ ಏಕಮೇವ ಸತ್ಯವಾಗಿದೆ, ಹಾಗು ಹೊರನೋಟಕ್ಕೆ ಕಾಣುವ ಜಗತ್ತು, ಕೇವಲ ಮಿಥ್ಯ. ಬ್ರಹ್ಮನ್ ಏಕಮೇವ ಸತ್ಯವಾದುದರಿಂದ, ಅದು ಯಾವುದೇ ರೀತಿಯ ಲಕ್ಷಣಗಳನ್ನು ಹೊಂದಿರುವುದಿಲ್ಲ. ಬ್ರಹ್ಮನ್ ನ ಭ್ರಾಮಕ ಶಕ್ತಿಯಾದ ಮಾಯಾ ಈ ಜಗತ್ತಿನ ಹುಟ್ಟಿಗೆ ಕಾರಣವಾಗಿದೆ. ಈ ಸತ್ಯದ ಬಗೆಗಿನ ಅಜ್ಞಾನವೇ ಜಗತ್ತಿನ ಎಲ್ಲ ಸಂಕಟಗಳಿಗೆ ಕಾರಣವಾಗಿದೆ ಅಲ್ಲದೆ ಬ್ರಹ್ಮನ್ ಬಗೆಗಿನ ಸಂಪೂರ್ಣ ಜ್ಞಾನದಿಂದ ವಿಮೋಚನೆಯನ್ನು ಹೊಂದಬಹುದಾಗಿದೆ. ಒಬ್ಬ ವ್ಯಕ್ತಿಯು ಬ್ರಹ್ಮನ್ ನನ್ನು ತನ್ನ ಮನಸ್ಸಿನ ಮೂಲಕ ಕಾಣಲು ಪ್ರಯತ್ನಿಸಿದರೆ, ಮಾಯೆಯ ಪ್ರಭಾವದಿಂದ, ಜಗತ್ತಿನಿಂದ ಹಾಗು ವ್ಯಕ್ತಿಯಿಂದ ಬೇರ್ಪಟ್ಟ ಬ್ರಹ್ಮನ್ ದೇವರ(ಈಶ್ವರ) ರೂಪದಲ್ಲಿ ಕಂಡುಬರುತ್ತಾನೆ. ವಾಸ್ತವವಾಗಿ, ವೈಯುಕ್ತಿಕ ಆತ್ಮ ಜೀವಾತ್ಮನ್ (ನೋಡಿ ಆತ್ಮನ್) ಹಾಗು ಬ್ರಹ್ಮನ್ ನಡುವೆ ಯಾವುದೇ ವ್ಯತ್ಯಾಸವು ಕಂಡುಬರುವುದಿಲ್ಲ. ಈ ಅಭಿನ್ನತೆಯ ಸತ್ಯವನ್ನು ಅರಿತರೆ ಅದೇ ವಿಮೋಚನೆಗೆ ಕಾರಣವಾಗುತ್ತದೆ ( ಅದೆಂದರೆ ಅ-ದ್ವೈತ, "ಅದ್ವೈತ").ಆದಿ ಶಂಕರರು ಮತ್ತು ಅದ್ವೈತ
ವಿಶಿಷ್ಟಾದ್ವೈತ ವನ್ನು ರಾಮಾನುಜ ರು ಪ್ರತಿಪಾದಿಸುವುದರ ಜೊತೆಗೆ ಜೀವಾತ್ಮನ್ ಬ್ರಹ್ಮನ್ ನ ಒಂದು ಭಾಗ. ಹೀಗಾಗಿ ಇದು ಸದೃಶವಾಗಿದೆಯೇ ಹೊರತು ತದ್ರೂಪವಲ್ಲ. ಅದ್ವೈತದೊಂದಿಗಿನ ಪ್ರಮುಖ ವ್ಯತ್ಯಾಸವೆಂದರೆ, ವಿಶಿಷ್ಟಾದ್ವೈತದಲ್ಲಿ, ಬ್ರಹ್ಮನ್ ಲಕ್ಷಣಗಳನ್ನು ಹೊಂದಿದ್ದಾನೆಂದು ಪ್ರತಿಪಾದಿಸಲಾಗಿದೆ. ಇದರಲ್ಲಿ ವೈಯುಕ್ತಿಕ ಪ್ರಜ್ಞೆಯ ಆತ್ಮಗಳು ಹಾಗು ಬೌತವಸ್ತು ಸೇರಿಕೊಂಡಿವೆ. ಬ್ರಹ್ಮನ್,ಬೌತವಸ್ತು ಹಾಗು ವೈಯಕ್ತಿಕ ಆತ್ಮಗಳು ಭಿನ್ನವಾಗಿದ್ದರೂ, ಪರಸ್ಪರ ಬೇರ್ಪಡಿಸಲಾಗದ ಅಸ್ತಿತ್ವಗಳಾಗಿವೆ. ಈ ಪರಂಪರೆಯು ಭಕ್ತಿ ಅಥವಾ ವಿಷ್ಣುವಿನ ರೂಪದ ದೇವರ ಮೇಲಿನ ನಿಷ್ಠೆಯನ್ನು ವಿಮೋಚನೆಗೆ ಮಾರ್ಗವೆಂದು ಪ್ರತಿಪಾದಿಸಿದೆ. ಮಾಯೆ ಯನ್ನು ದೇವರ ಸೃಷ್ಟಿಶೀಲ ಶಕ್ತಿಯ ಮೂಲಕ ಕಾಣಲಾಗುತ್ತದೆ.
ದ್ವೈತ ಸಿದ್ಧಾಂತವನ್ನು ಮಧ್ವಾಚಾರ್ಯ ರು ಪ್ರತಿಪಾದಿಸಿದ್ದಾರೆ. ಇದನ್ನು ತತ್ವವಾದ ಎಂದೂ ಕರೆಯಲಾಗುತ್ತದೆ - ಸತ್ಯದ ತತ್ವಶಾಸ್ತ್ರ. ಈ ಪರಂಪರೆಯಲ್ಲಿ ಬ್ರಹ್ಮನ್ ನನ್ನು ಸಂಪೂರ್ಣವಾಗಿ ದೇವರ ಜೊತೆಗೆ ಗುರುತಿಸುವುದರ ಜೊತೆಗೆ ಅನುಕ್ರಮವಾಗಿ ವಿಷ್ಣುವಿನ ವಿವಿಧ ಅವತಾರಗಳಾದ ಕೃಷ್ಣ, ನರಸಿಂಹ, ಶ್ರೀನಿವಾಸ ಮುಂತಾದ ರೂಪಗಳಲ್ಲಿ ಗುರುತಿಸಲಾಗುತ್ತದೆ. ಈ ದೃಷ್ಟಿಯಿಂದ ವಿಶಿಷ್ಟಾದ್ವೈತ ಪರಂಪರೆಯ ಶ್ರೀ-ವೈಷ್ಣವ ತತ್ವದೊಂದಿಗೆ ಭಿನ್ನತೆಯನ್ನು ಗುರುತಿಸುವ ಸಲುವಾಗಿ ಇದನ್ನು ಸತ್-ವೈಷ್ಣವ ತತ್ವವೆಂದೂ ಕರೆಯಲಾಗುತ್ತದೆ. ಇದು ಬ್ರಹ್ಮನ್, ಎಲ್ಲ ವೈಯಕ್ತಿಕ ಆತ್ಮಗಳು (ಜೀವಾತ್ಮ ಗಳು) ಹಾಗು ಬೌತವಸ್ತುಗಳನ್ನು ಅನಂತ ಹಾಗು ಪರಸ್ಪರ ಪ್ರತ್ಯೇಕ ಅಸ್ತಿತ್ವಗಳೆಂದು ಪರಿಗಣಿಸಿದೆ. ಈ ಪರಂಪರೆಯು ಭಕ್ತಿಯೊಂದೇ ಸಾತ್ವಿಕ ವಿಮೋಚನೆಯ ಮಾರ್ಗವೆಂದೂ ಭಗವಂತನೆಡೆಗೆ ಹಗೆತನ (ದ್ವೇಷ) ಹಾಗು ಉಪೇಕ್ಷೆಯು ಕ್ರಮವಾಗಿ ಶಾಶ್ವತವಾದ ನರಕಕ್ಕೆ ಹಾಗು ಶಾಶ್ವತವಾದ ಬಂಧನಕ್ಕೆ ಎಡೆ ಮಾಡಿಕೊಡುತ್ತದೆಂದು ಬೋಧಿಸುತ್ತದೆ. ವಿಮೋಚನೆಯು ಗರಿಷ್ಠ ಸಂತೋಷ ಅಥವಾ ದುಃಖದ ಸ್ಥಿತಿ ಸಾಧನೆ. ಇದು ವೈಯಕ್ತಿಕ ಆತ್ಮಗಳಿಗೆ(ಅವರ ಸಾಧನೆಯ ಅಂತ್ಯದಲ್ಲಿ)ಒಳ್ಳೆಯದು ಅಥವಾ ಕೆಟ್ಟದರತ್ತ ಆತ್ಮಗಳ ಅಂತರ್ಗತ ಅಥವಾ ಸ್ವಾಭಾವಿಕ ಪ್ರವೃತ್ತಿಯ ಆಧಾರದ ಮೇಲೆ ಲಭ್ಯವಾಗುತ್ತದೆ. ಭಗವಾನ್ ವಿಷ್ಣುವಿನ ಅಚಿಂತ್ಯ-ಅದ್ಭುತ ಶಕ್ತಿ (ಅಪರಿಮಿತ ಶಕ್ತಿ)ಯು ಬ್ರಹ್ಮಾಂಡದ ನಿಮಿತ್ತ ಕಾರಣವೆಂದೂ ಹಾಗು ಸೃಷ್ಟಿಕಾಲದ ಬೌತವಸ್ತು ಅಥವಾ ಪ್ರಕೃತಿಯು ಬೌತಿಕ ಕಾರಣ ಎಂದು ಪರಿಗಣಿಸಲಾಗಿದೆ. ದ್ವೈತ ಸಿದ್ಧಾಂತವು, ಎಲ್ಲ ಕಾರ್ಯಗಳನ್ನು ದೇವರು ನಿರ್ವಹಿಸುವುದರ ಜೊತೆಗೆ ಪ್ರತಿ ಆತ್ಮದ ಒಳಗೂ ಶಕ್ತಿಯನ್ನು ತುಂಬುತ್ತಾನೆ. ಜೊತೆಗೆ ಆತ್ಮಕ್ಕೆ ಪರಿಣಾಮಗಳನ್ನು ನೀಡುತ್ತಾನೆ ಆದರೆ ಆತನಿಗೆ ಈ ಪರಿಣಾಮಗಳಿಂದ ಕಿಂಚಿತ್ ಕೂಡ ಹಾನಿಯಾಗುವುದಿಲ್ಲ ಎಂದು ಪ್ರತಿಪಾದಿಸುತ್ತದೆ.
ದ್ವೈತಾದ್ವೈತ ವನ್ನು ನಿಂಬಾರ್ಕರು ಪ್ರತಿಪಾದಿಸಿದ್ದಾರೆ. ಇದು ಪೂರ್ವದ ಭೇಧಾಭೇಧ ಪರಂಪರೆಯನ್ನು ಆಧರಿಸಿದೆ. ಇದನ್ನು ಭಾಸ್ಕರ ಬೋಧಿಸಿದರು. ಈ ಪರಂಪರೆಯ ಪ್ರಕಾರ, ಜೀವಾತ್ಮನ್ ಒಂದೇ ಆಗಿದ್ದರೂ ಬ್ರಹ್ಮನ್ ನಿಂದ ಬೇರೆಯಾಗಿದೆ. ಈ ಜೀವಾ ಸಂಬಂಧವನ್ನು ಒಂದು ದೃಷ್ಟಿಕೋನದಲ್ಲಿ ದ್ವೈತ ಸಿದ್ಧಾಂತದಿಂದ, ಇನ್ನೊಂದು ದೃಷ್ಟಿಕೋನದಲ್ಲಿ ಅದ್ವೈತ ಸಿದ್ಧಾಂತದಿಂದ ಪರಿಗಣಿಸಬಹುದು. ಈ ಪರಂಪರೆಯಲ್ಲಿ, ದೇವರನ್ನು ಕೃಷ್ಣನ ಪ್ರತಿರೂಪದಂತೆ ಕಾಣಲಾಗಿದೆ.
ಶುದ್ಧಾದ್ವೈತ ವನ್ನು ವಲ್ಲಭ ರು ಪ್ರತಿಪಾದಿಸಿದ್ದಾರೆ. ಈ ಪರಂಪರೆಯೂ ಸಹ ಭಕ್ತಿಯನ್ನು ವಿಮೋಚನೆಯ ಏಕೈಕ ಸಾಧನವೆಂದು ಗುರುತಿಸುತ್ತದೆ, 'ಗೋಲೋಕಕ್ಕೆ ಹೋಗುವುದು' (ಅರ್ಥ., ಗೋವುಗಳ ಜಗತ್ತು; ಸಂಸ್ಕೃತ ಪದ 'ಗೋ', 'ಹಸು', 'ನಕ್ಷತ್ರ'ವನ್ನು ಸೂಚಿಸುತ್ತದೆ) ಈ ಜಗತ್ತೇ ಒಂದು ಕೃಷ್ಣನ ಲೀಲೆ ಎಂದು ಹೇಳಲಾಗಿದೆ. ಇವನು ಸತ್-ಚಿತ್-ಆನಂದ .
ಅಚಿಂತ್ಯ ಭೇಧಾಭೇಧ ವನ್ನು ಚೈತನ್ಯ ಮಹಾಪ್ರಭುಗಳು ಪ್ರತಿಪಾದಿಸಿದರು (ಬಂಗಾಳ, 1486-1534) ಇವರು ಶ್ರೀ ಮಧ್ವಾಚಾರ್ಯ ರ ದ್ವೈತವೇದಾಂತದ ಅನುಯಾಯಿಗಳು. ಅಚಿಂತ್ಯ ಹಾಗು ಏಕಕಾಲಿಕವಾದ ಅಭೇದ ಹಾಗು ಭೇದವನ್ನು ಆಧರಿಸಿದ ಈ ಸಿದ್ಧಾಂತವು, ಆತ್ಮ ಅಥವಾ ಭಗವಂತನ ಶಕ್ತಿ ಎರಡೂ ಭಗವಂತನಿಂದ ಭೇದ ಹಾಗು ಅಭೇದವನ್ನು ಹೊಂದಿದೆ. ಇದನ್ನು ಅವರು ಕೃಷ್ಣ, ಗೋವಿಂದ ಎಂಬ ಹೆಸರಿನಿಂದ ಗುರುತಿಸುತ್ತಾರೆ. ಜೊತೆಗೆ ಅಚಿಂತ್ಯವಾದ ಇದನ್ನು, ಅಕ್ಕರೆಯ ಭಕ್ತಿ ಪ್ರಕ್ರಿಯೆಯ ಮೂಲಕ ಅನುಭವಿಸಬಹುದು(ಭಕ್ತಿ ). "ಅಚಿಂತ್ಯ ಅಭೇದ ಹಾಗು ಭೇದ" ದ ಈ ತತ್ವವನ್ನು ISKCON ನ ಒಳಗೊಂಡಂತೆ ಹಲವಾರು ನೂತನ ಗೌಡೀಯ ವೈಷ್ಣವ ಪಂಥಗಳು ಅನುಸರಿಸುತ್ತವೆ.
ತಮ್ಮ ಅನುಯಾಯಿಗಳ ಪ್ರಕಾರ, ಶ್ರೀ ಅರಬಿಂದೋ, ತಮ್ಮ ದಿ ಲೈಫ್ ಡಿವೈನ್ ಪುಸ್ತಕದಲ್ಲಿ, ವೇದಾಂತದ ಎಲ್ಲ ಪರಂಪರೆಗಳನ್ನು ಸಮನ್ವಯಗೊಳಿಸಿ ಪಾಶ್ಚಾತ್ಯ ತತ್ವಮೀಮಾಂಸೆ ಹಾಗು ಆಧುನಿಕ ವಿಜ್ಞಾನದ ಮಾರ್ಗಗಳನ್ನು ಏಕೀಕರಿಸಿ ಸಮಗ್ರ ನಿರ್ಣಯವನ್ನು ನೀಡಿದರು. ಅವರು ವೇದಾಂತದ ವ್ಯಾಖ್ಯಾನದ ಹೊಕ್ಕುಳಬಳ್ಳಿಯನ್ನು ವೇದಗಳಜತೆ ಮರುಸ್ಥಾಪಿಸಿದ್ದಾರೆಂದು ಹೇಳಲಾಗಿದೆ.[ಸೂಕ್ತ ಉಲ್ಲೇಖನ ಬೇಕು]
"ಆಧುನಿಕ ವೇದಾಂತ" ವನ್ನು ಕೆಲವೊಂದು ಬಾರಿ ರಾಮಕೃಷ್ಣ ವರ್ಗದ ಸನ್ಯಾಸಿಗಳಾದ ಸ್ವಾಮಿ ವಿವೇಕಾನಂದ ರು ವ್ಯಾಖ್ಯಾನಿಸಿದ ಅದ್ವೈತ ವೇದಾಂತ ವನ್ನು ವಿವರಿಸಲು ಬಳಸಲಾಗುತ್ತದೆ. [೨] ಅವರು ಒತ್ತುಕೊಡುವ ವಿಷಯವೆಂದರೆ:
ವಿವೇಕಾನಂದರು 1893ರಲ್ಲಿ ಚಿಕಾಗೋ ನಲ್ಲಿ ನಡೆದ ಪಾರ್ಲಿಮೆಂಟ್ ಆಫ್ ವರ್ಲ್ಡ್'ಸ್ ರಿಲಿಜನ್ಸ್ ನಲ್ಲಿ ಭಾಗವಹಿಸಿ ಪೂರ್ವ ಹಾಗು ಪಾಶ್ಚಿಮಾತ್ಯದ ಚಿಂತನೆಯನ್ನು ಏಕೀಕರಿಸಿದ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವೇದಾಂತವನ್ನು ಸಾರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಅವರ ಭೇಟಿಯನ್ನು ಕೆಲವು ಸಾಂಪ್ರದಾಯಿಕ ಹಿಂದೂಗಳು ಟೀಕೆ ಮಾಡುತ್ತಾರೆ. ಅವರು ವೇದಾಂತವನ್ನು ಆಧುನಿಕ ಜಗತ್ತಿಗೆ ಹೇಗೆ ಅನ್ವಯ ಮಾಡಬಹುದೆಂಬುದನ್ನು ಗ್ರಹಿಸಿ ಅದಕ್ಕೆ ತಮ್ಮ ಚೈತನ್ಯವನ್ನು ವಿನಿಯೋಗಿಸುವ ಮೂಲಕ ವೇದಾಂತಕ್ಕೆ ಬದುಕುನೀಡಿದರು ಎಂದು ಅವರ ಪ್ರತಿಪಾದಕರು ಹೇಳುತ್ತಾರೆ.[೩] Archived 2008-09-30 ವೇಬ್ಯಾಕ್ ಮೆಷಿನ್ ನಲ್ಲಿ. ವಿವೇಕಾನಂದರಿಗೆ, ವೇದಾಂತವು ಕೇವಲ ನಿರ್ಭಾವ ಅಥವಾ ಅಧಿಕೃತವಾದುದಲ್ಲ, ಆದರೆ ಒಂದು ಆತ್ಮ-ಜ್ಞಾನ ದ ಶೋಧನೆಯಲ್ಲಿನ ಒಂದು ವರ್ತಮಾನದ ಹಾದಿ.
ತಮ್ಮ ಅದ್ವೈತದ ವ್ಯಾಖ್ಯಾನದಲ್ಲಿ (ಶಂಕರರ ಅದ್ವೈತದಂತೆ), ಭಕ್ತಿ ಯು ಒಂದು ಸ್ಥಾನವನ್ನು ಪಡೆದಿದೆ. ರಾಮಕೃಷ್ಣ ವರ್ಗದ ಸನ್ಯಾಸಿಗಳು, ಎಲ್ಲರೂ ಪೂಜಿಸುವ ನಿರಾಕಾರ ಸ್ವಯಂಭು ವಿಗಿಂತ ದೇವರ ರೂಪ ಹಾಗು ಗುಣಲಕ್ಷಣಗಳನ್ನು ಹೊಂದಿದ ದ್ವೈವಸ್ವರೂಪಿ ವ್ಯಕ್ತಿಯನ್ನು ಕುರಿತು ಧ್ಯಾನಿಸುವುದು ತುಂಬಾ ಸುಲಭದ ಕೆಲಸ ಎಂದು ಸೂಚಿಸುತ್ತಾರೆ. ಸಗುಣ ಬ್ರಹ್ಮನ್ ಹಾಗು ನಿರ್ಗುಣ ಬ್ರಹ್ಮನ್ ಎರಡೂ ಒಂದೇ ನಾಣ್ಯದ ಎರಡು ಮುಖಗಳೆಂದು ಹೇಳಲಾಗುತ್ತದೆ.[೪] Archived 2008-10-12 ವೇಬ್ಯಾಕ್ ಮೆಷಿನ್ ನಲ್ಲಿ.
ಶತಮಾನಗಳಿಂದ ಭಾರತ ದಲ್ಲಿ ಹಾಗು ಇತರ ದೇಶಗಳಲ್ಲಿ ವೇದಾಂತವನ್ನು ನಿರೂಪಿಸುವ ಹಲವು ಗುರುಗಳಿದ್ದಾರೆ. ಶ್ರೀ ರಾಮಕೃಷ್ಣ, ಸ್ವಾಮಿ ವಿವೇಕಾನಂದ, ಸ್ವಾಮಿ ರಾಮ ತೀರ್ಥ, ರಮಣಮಹರ್ಷಿ, ಶ್ರೀ ನಿಸರ್ಗದತ್ತ ಮಹಾರಾಜ್, ಶ್ರೀ ಶಿವರುದ್ರ ಬಾಲಯೋಗಿ, ಶ್ರೀ ರಂಜಿತ್ ಮಹಾರಾಜ್, ಸ್ವಾಮಿ ಶಿವಾನಂದ, ಸ್ವಾಮಿ ಕೃಷ್ಣಾನಂದ, ಸ್ವಾಮಿ ಜ್ಯೋತಿರ್ಮಯಾನಂದ, ಕಂಚಿ ಮಹಾಸ್ವಾಮಿಗಳು, ಸ್ವಾಮಿ ಬ್ರಹ್ಮಾನಂದ ಸರಸ್ವತಿ, A. C. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಮಹರ್ಷಿ ಸ್ವಾಮೀ ದಯಾನಂದ ಸರಸ್ವತಿ (ಆರ್ಯ ಸಮಾಜ), ಹರಿ ಪ್ರಸಾದ ಶಾಸ್ತ್ರಿ, ಸ್ವಾಮಿ ನಿರಂಜನ್ ಜಿ ಮಹಾರಾಜ್, ಸ್ವಾಮಿ ಪರಮಾನಂದ, ಸ್ವಾಮಿ ಚಿನ್ಮಯಾನಂದ, ಅರ್ಶ ವಿದ್ಯಾ ಗುರುಕುಲಂ ನ ಸ್ವಾಮಿ ಶ್ರೀ ದಯಾನಂದ ಸರಸ್ವತಿ, ಸ್ವಾಮಿ ಶ್ರೀ ಲೀಲ ಶಾಹ್ ಜಿ ಮಹಾರಾಜ್, ಸ್ವಾಮಿ ಮನೋಹರ್ ದಾಸ್ ಜಿ ಮಹಾರಾಜ್, ಶ್ರೀ ಮಹರ್ಷಿ ಮಹೇಶ್ ಯೋಗಿ, ಶ್ರೀ ಅರಬಿಂದೋ, ಶ್ರೀ ಸ್ವಾಮಿ ತಪೋವನ್ ಮಹಾರಾಜ್, ಅನಂತರಾಮ ದೀಕ್ಷಿತರ್, ಸ್ವಾಮಿ ರಂಗನಾಥಾನಂದ- ಇವರೆಲ್ಲರೂ ವೇದಾಂತದ ಅತ್ಯಂತ ದೊಡ್ಡ ವಿದ್ವಾಂಸರು. ಸ್ವಾಮಿ ದಯಾನಂದ ಸರಸ್ವತಿ, ಪೂಜ್ಯ ಶ್ರೀ ಪ್ರೇಮ್ ಸಿದ್ಧಾರ್ಥ್, ಪೂಜ್ಯ ಮಹಾಭೈರವ ಸಂಭೋಹ ಶಾಸ್ತ್ರಿ,ನಾರಾಯಣ ಗುರು, ಇವರೆಲ್ಲರೂ ಇಂದು ಪ್ರಾಮುಖ್ಯತೆ ಪಡೆದ ವೇದಾಂತದ ಸಾಂಪ್ರದಾಯಿಕ ವಿದ್ವಾಂಸರು . ಸ್ವಾಮಿ ಪರಮಹಂಸ ಯೋಗಾನಂದ ಈ ಪರಂಪರೆಯ ಪ್ರಮುಖ ಬೋಧಕರಾಗಿದ್ದಾರೆ. , ಸ್ವಾಮಿ ಭೂಮಾನಂದ ತೀರ್ಥ, ಓಶೋ(ಭಗವಾನ್ ರಜನೀಶ್, ಜಗದ್ಗುರು ಶ್ರೀ ಕೃಪಾಳು ಜಿ ಮಹಾರಾಜ್ (ಕಳೆದ 5,000 ವರ್ಷಗಳಲ್ಲಿ ಐದನೇ ಜಗದ್ಗುರು ಎನಿಸಿಕೊಂಡವರು)
ತತ್ವಜ್ಞಾನಿ ಜಾರ್ಜ್ ವಿಲಹೆಲ್ಮ್ ಫ್ರಿಯೆಡ್ ರಿಚ್ ಹೇಗೆಲ್, ಅದ್ವೈತ-ವೇದಾಂತವನ್ನು ಸ್ಮರಣೆಗೆ ತರುವ ಭಾರತೀಯ ಚಿಂತನೆಯನ್ನು ತಮ್ಮ ದಿ ಫಿನಾಮಿನಾಲಾಜಿ ಆಫ್ ಸ್ಪಿರಿಟ್ ಹಾಗು ಸೈನ್ಸ್ ಆಫ್ ಲಾಜಿಕ್ ಪುಸ್ತಕದ ಪ್ರಸ್ತಾವನೆಯಲ್ಲಿ ಉಲ್ಲೇಖಿಸುತ್ತಾರೆ. ಆರ್ಥರ್ ಸ್ಕ್ಹೊಪೇನ್ಹುಯೇರ್, ವೇದಗಳು ಹಾಗು ಉಪನಿಷದ್ ಗಳಿಂದ ಪ್ರಭಾವಿತರಾಗಿದ್ದರು; ಅವರ ವಾಕ್ಯಗಳಲ್ಲಿ: "ಓದುಗನು ಉಪನಿಷತ್ಗಳ ಮಾರ್ಗಗಳ ಮೂಲಕ ಪ್ರವೇಶ ಪಡೆದು,ವೇದಗಳನ್ನು ಓದುವುದರಿಂದ ಪ್ರಯೋಜನವನ್ನು ಪಡೆದರೆ,ನನ್ನ ದೃಷ್ಟಿಯಲ್ಲಿ ಅದು ಎಲ್ಲ ಹಿಂದಿನ ಶತಮಾನಗಳಿಗಿಂತ ಈ ಹೊಸ ಶತಮಾನಕ್ಕೆ(1818) ಅತ್ಯಂತ ದೊಡ್ಡ ಸುಯೋಗವಾಗಿ ಪರಿಣಮಿಸುತ್ತದೆ. ಓದುಗನು ಪ್ರಾಚೀನ ಭಾರತದ ಬಗ್ಗೆ ಜ್ಞಾನದ ಉಪಕ್ರಮವನ್ನು ಮುಕ್ತ ಹೃದಯದಿಂದ ಸ್ವೀಕರಿಸಿದ್ದಲ್ಲಿ ನಾನು ಏನು ಹೇಳಬಯಸುತ್ತೆನೆಂಬುದನ್ನು ಅವನು ಸರಿಯಾದ ರೀತಿಯಲ್ಲಿ ಕೇಳಿಸಿಕೊಳ್ಳಲು ತಯಾರಾಗಿರುತ್ತಾನೆ." (ದಿ ವರ್ಲ್ಡ್ ಆಸ್ ವಿಲ್ ಅಂಡ್ ರೆಪ್ರೆಸೆನ್ಟೇಷನ್ ) ವೇದಾಂತದಿಂದ ಪ್ರಭಾವಿತಗೊಂಡು ಅದರ ಬಗ್ಗೆ ವ್ಯಾಖ್ಯಾನಿಸಿದ ಇತರ ಪಾಶ್ಚಿಮಾತ್ಯರೆಂದರೆ ರಾಮ್ ದಾಸ್ಸ್, ಫ್ರೆಡ್ರಿಚ್ ನಿಯೆಟ್ಜ್ಸೆ, ಮ್ಯಾಕ್ಸ್ ಮುಲ್ಲರ್, ವೋಲ್ಟೈರ್, J.D. ಸಲಿಂಗೆರ್, ಆಲ್ಡಸ್ ಹಕ್ಸ್ಲೇ, T. S. ಎಲಿಯಟ್, J.B. ಪ್ರಿಸ್ಟ್ಲೇಯ್, ಕ್ರಿಸ್ಟೋಫರ್ ಐಶೇರ್ವುಡ್, ರೋಮೈನ್ ರೊಲ್ಲಂಡ್, ಅಲನ್ ವಾಟ್ಸ್, ಯುಜಿನಿ ವಿಗ್ನರ್, ಆರ್ನಾಲ್ಡ್ ಟೋಯ್ನ್ ಬೀ, ಜೋಸೆಫ್ ಕ್ಯಾಂಪ್ಬೆಲ್, ಹರ್ಮನ್ನ್ ಹೆಸ್ಸೆ, ರಾಲ್ಪ್ಹ್ ವಾಲ್ಡೋ ಎಮರ್ಸನ್, ಹೆನ್ರಿ ಡೇವಿಡ್ ತೋರು, ವಿಲ್ ಡುರಂಟ್, ನಿಕೋಲಾ ಟೇಲ್ಸ
ಇರ್ವಿನ್ ಸ್ಚ್ರೋಡಿನ್ಗೆರ್ ಹಾಗು ಜಾನ್ ಡೊಬ್ಸನ್.[ಸೂಕ್ತ ಉಲ್ಲೇಖನ ಬೇಕು]
ತಾತ್ವಿಕ ಭೌತವಿಜ್ಞಾನಿ ಹಾಗು ಮ್ಯಾನ್ಹಟ್ಟನ್ ಯೋಜನೆಯ ನಿರ್ದೇಶಕರಾಗಿದ್ದ J. ರಾಬರ್ಟ್ ಒಪ್ಪೇನ್ಹಿಮೆರ್, ಒಬ್ಬ ತಜ್ಞ ವೇದಾಂತಿಯೂ ಸಹ ಆಗಿದ್ದರು. ನ್ಯೂ ಮೆಕ್ಸಿಕೋನಲ್ಲಿ ನಡೆದ ಟ್ರಿನಿಟಿ ಟೆಸ್ಟ್ ಗೆ ಸಂಬಂಧಿಸಿದಂತೆ, ಅವರ ಲಾಸ್ ಅಲಮೋಸ್ ತಂಡವು ಮೊದಲ ಪರಮಾಣು ಬಾಂಬ್ ನ್ನು ಪರೀಕ್ಷಿಸಿದ ಒಪ್ಪೆನ್ಹಿಮೆರ್ ಭಗವದ್ಗೀತೆಯನ್ನು ಸ್ಮರಿಸಿಕೊಳ್ಳುವುದು ಸುವಿದಿತವಾಗಿದೆ : " ಸಾವಿರ ಸೂರ್ಯರ ಕಾಂತಿ ಒಮ್ಮೆಲೇ ಆಕಾಶದಲ್ಲಿ ಹಠಾತ್ತಾನೆ ಪ್ರಕಾಶಿಸಿದರೆ, ಅದು ಮಹಾನ್ ಶಕ್ತಿಶಾಲಿಯ ಉಜ್ಜ್ವಲ ತೇಜಸ್ಸಿನಂತಿರುತ್ತದೆ.
ಈಗ ನಾನು ಮೃತ್ಯು ದೇವತೆಯಾಗಿದ್ದೇನೆ, ಜಗತ್ತುಗಳ ವಿನಾಶಕ."
ಪಾಲ್ ಡ್ಯುಸ್ಸೇನ್ ರ ದಿ ಸಿಸ್ಟಂ ಆಫ್ ವೇದಾಂತ 1912. ಮರುಮುದ್ರಣ 2007.
ಫ್ರಾನ್ಸಿಸ್ X. ಕ್ಲೂನೆಯ್ ರ ಥಿಯೋಲಜಿ ಆಫ್ಟರ್ ವೇದಾಂತ
ಶ್ರೀ ಅರಬಿಂದೋ ಆಶ್ರಮ್, ಪಾಂಡಿಚೆರಿ. 1972.
|
This article uses material from the Wikipedia ಕನ್ನಡ article ವೇದಾಂತ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.