ಆಗಮ ಸಂಧಿ

ಕನ್ನಡ ಸಂಧಿಗಳಲ್ಲಿ ಲೋಪ, ಆಗಮ, ಆದೇಶ ಎಂದು ಮೂರು ವಿಧದ ಕನ್ನಡದ ಸಂಧಿಗಳು.

ಇವುಗಳಲ್ಲಿ ಲೋಪ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ.

ಆಗಮ ಸಂಧಿಕಾರ್ಯ

ಆಗಮ ಸಂಧಿಯು ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲ ಅಕ್ಷರಗಳ ಸಂಧಿಸುವಿಕೆಯಲ್ಲಿ ನಡೆಯುತ್ತದೆ.

  1. ಸಂಧಿ ಮಾಡುವಾಗ - ಪೂರ್ವಪದದಲ್ಲಿಯ ಒಂದು ಅಕ್ಷರವು ಸಂಧಿಪದದಲ್ಲಿ ಇಲ್ಲದಿದ್ದರೆ - ಲೋಪಸಂಧಿ. ಉದಾ: ಮಾತಿಲ್ಲ= ಮಾತು+ಇಲ್ಲ=ಇಲ್ಲಿ ‘ಉ’ ಸ್ವರ ಲೋಪ.
  2. ಸಂಧಿ ಮಾಡುವಾಗ - ಪೂರ್ವಪದ ಮತ್ತು ಉತ್ತರ ಪದಗಳಲ್ಲಿಯ ಎಲ್ಲ ಅಕ್ಷರಗಳು ಸಂಧಿಪದದಲ್ಲಿ ಇದ್ದು ಹೊಸದಾಗಿ ಒಂದು ಅಕ್ಷರ ಸಂಧಿಪದದಲ್ಲಿ ಬಂದಿದ್ದರೆ-ಆಗಮಸಂಧಿ. ಉದಾ: ಮನೆ+ಅನ್ನು = ಮನೆಯನ್ನು = ‘ಯ್’ ವ್ಯಂಜನ ಆಗಮ.
  3. ಸಂಧಿ ಮಾಡುವಾಗ - ಉತ್ತರ ಪದದ ಆದಿಯಲ್ಲಿಯ ಒಂದು ವ್ಯಂಜನವು ಸಂಧಿಪದದಲ್ಲಿ ಲೋಪವಾಗಿ ಆ ಸ್ಥಳದಲ್ಲಿ ಹೊಸದಾಗಿ ಮತ್ತೊಂದು ವ್ಯಂಜನವು ಆಗಮವಾಗಿ ಬಂದರೆ - ಆದೇಶ ಸಂಧಿ. ಉದಾ: ಮಳೆ+ಕಾಲ=ಮಳೆಗಾಲ=‘ಕ್’ವ್ಯಂಜನ ಲೋಪ. ‘ಗ್’ ವ್ಯಂಜನ ಆದೇಶ.
  4. ಎಲ್ಲಾ ಅಕ್ಷರಗಳು ಇದ್ದಷ್ಟೇ ಸಂಧಿಪದದಲ್ಲಿ ಇರುವುದು ಪ್ರಕೃತಿ ಭಾವ ಅಥವಾ ವಿಸಂಧಿ.

ಆಗಮಸಂಧಿ

ಇರ್ದುದಂ ಕೆಡಿಸದೆ ಪತ್ತುವುದಾಗಮಂ ಶಬ್ದಮಣಿದರ್ಪಣಂ ಸೂತ್ರ 174 ಕೇಶಿರಾಜನ ಶಬ್ದಮಣಿದರ್ಪಣಂ ಇದ್ದ ವರ್ಣವನ್ನು ನಾಶಮಾಡದೆ ನಯದಿಂದ ಬಂದು ಸೇರಿಕೊಳ್ಳುವ ವರ್ಣವನ್ನು ‘ಆಗಮ’ವೆಂದು ಕೇಶಿರಾಜ ಕರೆದಿದ್ದಾನೆ. “ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ‘ಯ’ಕಾರವನ್ನೋ ಅಥವಾ ‘ವ’ಕಾರವನ್ನೋ ಹೊಸದಾಗಿ ಸೇರಿಸಿ ಹೇಳುವ ಸಂಧಿ ಆಗಮಸಂಧಿ. ಕೇಶಿರಾಜ ಆಗಮ ಸಂಧಿಯನ್ನು ಕಾರಾಗಮ, ಕಾರಾಗಮ ಸಂಧಿಯೆಂದು ಎರಡು ವಿಭಾಗ ಮಾಡುತ್ತಾನೆ.

ಯ ಕಾರಾಗಮ ಸಂಧಿ

ಯ ಕಾರಾಗಮ ಸಂಧಿಯಾಗುವ ನಿಯಮ

  • ಆ, ಇ, ಈ, ಓ, ಐ, ಎ, ಏ ಎಂಬ ವರ್ಣಗಳು ಪೂರ್ವಪದಾಂತ್ಯದಲ್ಲಿದ್ದು ಇವುಗಳ ಮುಂದೆ ಸ್ವರ ಬಂದುದಾದರೆ ನಡುವೆ

‘ಯ’ಕಾರಾಗಮವಾಗುತ್ತದೆ. ಉದಾ:

  • ಆ = ಆ+ಇರ್ದ = ಆಯಿರ್ದ, ಸಾ+ಅಲೆ= ಸಾಯಲೆ, ಕಾ+ಅಲುಂ = ಕಾಯಲುಂ.
  • ಇ= ಕಲಿ+ಆರ್ = ಕಲಿಯಾರ್, ಬಲಿ+ಅಂ = ಬಲಿಯಂ, ಪಿಡಿ+ಎಂದು = ಪಿಡಿಯೆಂದು.
  • ಈ= ಈ+ಅಲ್ = ಈಯಲ್, ಶ್ರೀ+ಅಂ = ಶ್ರೀಯಂ, ಸ್ತ್ರೀ+ ಎಂಬ = ಸ್ತ್ರೀಯೆಂಬ.
  • ಓ= ಜೋ+ಎಂದು = ಜೋಯೆಂದು, ಭೋ+ಎನಲು = ಭೋಯೆನಲು, ನೋ+ಇಸಿದಂ = ನೋಯಿಸಿದಂ.
  • ಐ= ರೈ+ಎಂದು = ರೈಯೆಂದು[ರೈ=ಸಂಪತ್ತು(ಸಂಸ್ಕøತ)], ಥೈ+ ಎಂದು = ಥೈಯೆಂದು.
  • ಎ= ನಡೆನಡೆ+ಎಂದು = ನಡೆನಡೆಯೆಂದು, ತೊರೆ+ಅಂ = ತೊರೆಯಂ, ಪಸೆ+ಇರ್ದ = ಪಸೆಯಿರ್ದ.
  • ಏ= ಉಘೇಉಘೇ+ಎಂದು = ಉಘೇಉಘೇಯೆಂದು, ತೇ+ಇಸಿದಂ = ತೇಯಿಸಿದಂ.
  • ಅವಧಾರಣೆ(ಒತ್ತಿ ಹೇಳುವುದು, ನಿರ್ಣಯಿಸಿ ಹೇಳುವುದು) = ನಿರ್ಧಾರಣಾರ್ಥ ಸೂಚಕ ಪ್ರತ್ಯಯವಾದ ‘ಅ’ಕಾವಿದ್ದರೆ ಆಗಲೂ ‘ ಕಾರಾಗಮವಾಗುತ್ತದೆ. ಅವಧಾರಣೆಯ ‘ಎ’ತ್ವಕ್ಕೆ ಷಷ್ಠಿ ನಿಯಮದಿಂದ ‘ಯ’ಕಾರ. ಆತನ+ಎ = ಆತನಯೆ. (ಆತನೆ ಆಗುವುದಿಲ್ಲ) ಅವಳ+ಎ = ಅವಳಯೆ. ಅದರ+ಎ = ಅದರಯೆ.
  • ಸಂಸ್ಕಂತ ನಾಮಪ್ರಕೃತಿಗಳಿಗೆ ‘ಇಸು’ಪ್ರತ್ಯಯ ಬಂದರೆ ಕಾರಾಗಮವಾಗುತ್ತದೆ. ಶುದ್ಧ+ಇಸು+ದಂ = ಶುದ್ಧಯಿಸಿದಂ. ಕನ್ನಡ ನಾಮಪ್ರಕೃತಿಗಳಿಗೆ ‘ಇಸು’ಪ್ರತ್ಯಯ ಬಂದರೆ ‘ಯ’ಕಾರಾಗಮವಾಗುತ್ತದೆ. ಒರ+ಇಸು+ದಂ = ಒರಯಿಸಿದಂ. (ಕೋರಯಿಸು, ತೇರಯಿಸು, ಮೇಳಯಿಸು)
  • 'ಆ' ಕಾರಾಂತ್ಯದ ಅನುಕರಣವಾಚಿ ಪದಗಳಗೆ ಅನುಕೃತಿ ಸ್ವರ ಬಂದಾಗ 'ಯ'ಕಾರಾಗಮವಾಗುತ್ತದೆ. ಪಳಪಳ+ಎಂದು = ಪಳಪಳಯೆಂದು, ಗುಳುಗುಳು+ಎನುತಂ = ಗುಳುಗುಳುಯೆನುತಂ

ವ ಕಾರಾಗಮ ಸಂಧಿ

‘ವ’ ಕಾರಾಗಮ ಸಂಧಿಯಾಗುವ ನಿಯಮ

  • ಉ, ಊ, ಋ, ಓ, ಔ ಎಂಬಿವುಗಳ ಮುಂದೆ ಸ್ವರ ಬಂದರೆ ನಡುವೆ ‘ವ’ಕಾರಾಗಮವಾಗುತ್ತದೆ. ಅಲ್ಲದೆ ಕೇಶಿರಾಜ ಇ, ಈ ವರ್ಣಗಳಗೂ ಕೂಡ ‘ವ’ಕಾರವೆಂಬುದನ್ನು ವೃತ್ತಿಯಲ್ಲಿ ಹೇಳಿದ್ದಾನೆ.
  • ಇ=ಇದು+ಇದು = ಇದುವಿದು. ಈ=ಈ+ಇದು = ಈವಿದು/ಇವಿದು.} ಇವೆರಡು ಮೇಲಿನ ನಿಯಮದಲ್ಲಿದೆ.
  • ಉ= ಕುಡು+ಉದು = ಕುಡುವುದು, ಮನು+ಇನ = ಮನುವಿನ. ಊ= ಪೂ+ಇನ = ಪೂವಿನ.
  • ಋ= ಕರ್ತೃ+ಆದ= ಕರ್ತೃವಾದ. ಋ= ಋ+ಎಂದ = ಋವೆಂದ. (ಋ=ಭಯ,ಸಹಾನುಭೂತಿ)
  • ಓ= ಗೋ+ಇನ=ಗೋವಿನ. ಔ= ನೌ+ಅಂ=ನೌವಂ, ಗ್ಲೌ+ಅಂ=ಗ್ಲೌವಂ (ಸಂಸ್ಕøತ- ನೌ=ನೌಕೆ, ಗ್ಲೌ=ಚಂದ್ರ)
  • ಸಂಸ್ಕೃತದಲ್ಲಿ ‘ಯತ್ವ’- ‘ವತ್ವ’ಗಳಿಗೆ ಲೋಪವಿಲ್ಲ. ನದಿ+ಎಲ್ಲಂ=ನದಿಯೆಲ್ಲಂ, ವಧು+ಇಲ್ಲ=ವಧುವಿಲ್ಲ, ಮಧುವಿಲ್ಲ. ಈ+ಉದ್ಯಾನಂ=ಈಯುದ್ಯಾನಂ/ ಈವುಧ್ಯಾನಂ, ಈಯೊಕ್ಕಲ್, ಈಯೂರ್. ‘ಯತ್ವ ವತ್ವಂಗಳ್ಗೆ ಕನ್ನಡದೊಳ್ ಬಹುಳತೆಯಿಂ ಲೋಪವುಂಟು’ - ಸಂಸ್ಕೃತದಲ್ಲಿ ಇಲ್ಲ. ಕನ್ನಡದಲ್ಲಿ ನಡೆಯುವುದು. ಈ ಬಹುಳತೆಯು ನಾಮರೂಢಿಯಳಿಯದ ಪಕ್ಷದಲ್ಲಿ - ಮಾತ್ರ. ಉದಾ: ಒತ್ತೆ+ಇಟ್ಟಂ>ಒತ್ತೆಯಿಟ್ಟಂ>ಒತ್ತಿಟ್ಟಂ, ಕರೆಯಿಸು>ಕರೆಸು, ಸ್ತುತಿಯಿಸು>ಸ್ತುತಿಸು, ಇಳಿಯಿಸು>ಇಳಿಸು, ಮಾತು+ಎಲ್ಲಂ> ಮಾತುವೆಲ್ಲಂ>ಮಾತೆಲ್ಲಂ.
    ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಸಾಮಾನ್ಯವಾಗಿ ಹೊಸದಾಗಿ ಒಂದು ವ್ಯಂಜನವು ಉತ್ತರಪದದ ಆದಿಯಲ್ಲಿರುವ ಸ್ವರಕ್ಕೆ ಬಂದು ಸೇರುತ್ತದೆ. ಇದರಲ್ಲಿ ಎರಡು ವಿಧ. 'ಯಕಾರಾಗಮ ಸಂಧಿ' ಹಾಗೂ 'ವಕಾರಾಗಮ ಸಂಧಿ'.
    ಉದಾ:- ಮನೆ(ಎ)+ಅನ್ನು=ಮನೆಯನ್ನು.ಇಲ್ಲಿ ಉತ್ತರಪದದ ಆದಿಯಲ್ಲಿ 'ಯ್ ಕಾರ' 'ಆಗಮ'ವಾಗಿದೆ.
    ಉದಾ:- ಮಗು(ಉ)+ಇಗೆ=ಮಗುವಿಗೆ.ಇಲ್ಲಿ ಉತ್ತರಪದದ ಆದಿಯಲ್ಲಿ 'ವ್ ಕಾರ' 'ಆಗಮ'ವಾಗಿದೆ.
    ಕನ್ನಡದ ಹಲವಾರು ವ್ಯಾಕರಣದ ಹೊತ್ತಗೆಗಳು ಮೇಲಿನಂತೆ ಹೇಳಿದರೂ, ಹೀಗೆ ಹೇಳುವದು ಹಲವು ವಿವಾದಗಳಿಗೆ ಮತ್ತು ತಪ್ಪುತಿಳಿವಿಗೆ ಅನುವು ಮಾಡುವುದು.
    ಈ ಸಂಧಿಯ ವಿವರಣೆಯಲ್ಲಿ ಇರುವಂತೆ "ಸಾಮಾನ್ಯವಾಗಿ ಹೊಸದಾಗಿ ಒಂದು ವ್ಯಂಜನವು ಉತ್ತರಪದದ ಆದಿಯಲ್ಲಿರುವ ಸ್ವರಕ್ಕೆ ಬಂದು ಸೇರುತ್ತದೆ" ಎಂದಾಗ ಆ ಸಾಮಾನ್ಯವಲ್ಲದ( ಅಸಮಾನ್ಯ ) ಸನ್ನಿವೇಶಗಳು ಯಾವುವು ಎಂದು ಯಾವ ಹೊತ್ತಗೆಗಳು ಹೇಳುವುದಿಲ್ಲ.

ಮನೆ + ಅನ್ನು = ಮನೆಗಳನ್ನು ಏಕೆ ಆಗಬಾರದು? "ಗಳ್" ಯಾಕೆ ಆಗಮವಾಗಬಾರದು? ಹಾಗೆ...

  • ಮಗು + ಅನ್ನು = ಮಗುವನ್ನು
  • ನೀರು + ಅನ್ನು = ನೀರುವನ್ನು
  • ಮನೆ + ಅನ್ನು = ಮನೆಯನ್
  • ಹೀಗೆ ಇನ್ನು ಹಲವು ವಿಚಾರಗಳಿಗೆ ಕಾರಣವನ್ನು ಕೊಡಲು ಆಗದು.
    ಅದಕ್ಕೆ ಕೆಲವರು ಕನ್ನಡದಲ್ಲಿ "ಆಗಮಸಂಧಿ" ಎನ್ನವ ಸಂಧಿಯಿಲ್ಲ. ಕನ್ನಡದಲ್ಲಿ "ಲೋಪ ಸಂಧಿ" ಯೊಂದೆ ಸ್ವರ ಸಂಧಿ ಎನ್ನುವರು. ಜತೆಗೆ ಅವರು "ಆಗಮಸಂಧಿ"ಗೆ ಉದಾಹರಣೆಯಾಗಿ ಹೇಳಿರುವ ಪದಗಳನ್ನು ಬಿಡಿಸಲು ಬೇರೆ ಬಗೆಯನ್ನು ಕೂಡ ಸೂಚಿಸಿರುವರು.

ಮನಯು + ಅನ್ನು = ಮನೆಯನ್ನು; ಉ ಕಾರ ಲೋಪ. "ಮನೆಯು => ಒಂದು ಮನೆ" ಮನೆಗಳು + ಅನ್ನು = ಮನೆಗಳನ್ನು :ಉ ಕಾರ ಲೋಪ; "ಮನೆಗಳು => ಹಲವು ಮನೆಗಳು" ಮಗುವು + ಅನ್ನು = ಮಗುವನ್ನು; ಉ ಕಾರ ಲೋಪ


ಉಲ್ಲೇಖ

Tags:

ಆಗಮ ಸಂಧಿ ಕಾರ್ಯಆಗಮ ಸಂಧಿ ಆಗಮಸಂಧಿಆಗಮ ಸಂಧಿ ಯ ಕಾರಾಗಮ ಸಂಧಿಆಗಮ ಸಂಧಿ ವ ಕಾರಾಗಮ ಸಂಧಿಆಗಮ ಸಂಧಿ ಉಲ್ಲೇಖಆಗಮ ಸಂಧಿಆದೇಶ ಸಂಧಿಕನ್ನಡ ಸಂಧಿವ್ಯಂಜನ

🔥 Trending searches on Wiki ಕನ್ನಡ:

ಕೃಷ್ಣದೇವರಾಯಯು.ಆರ್.ಅನಂತಮೂರ್ತಿಸಂಭೋಗಹೊಯ್ಸಳತಾಜ್ ಮಹಲ್ಬೆಳಗಾವಿರಾಷ್ಟ್ರೀಯ ಸೇವಾ ಯೋಜನೆಗ್ರಹಕುಂಡಲಿನಾಗರೀಕತೆಉದಾರವಾದಬಾಬು ಜಗಜೀವನ ರಾಮ್ಭಾರತೀಯ ನದಿಗಳ ಪಟ್ಟಿಪುತ್ತೂರುಅಮೇರಿಕ ಸಂಯುಕ್ತ ಸಂಸ್ಥಾನಅಂತರರಾಷ್ಟ್ರೀಯ ವ್ಯಾಪಾರಮತದಾನಚಂದನಾ ಅನಂತಕೃಷ್ಣಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಒಲಂಪಿಕ್ ಕ್ರೀಡಾಕೂಟರಾಮಾಯಣಮಿಥುನರಾಶಿ (ಕನ್ನಡ ಧಾರಾವಾಹಿ)ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಚರ್ಚೆಭಾರತದ ಆರ್ಥಿಕ ವ್ಯವಸ್ಥೆಕರ್ನಾಟಕ ಸ್ವಾತಂತ್ರ್ಯ ಚಳವಳಿರೋಸ್‌ಮರಿಅಥರ್ವವೇದಕನ್ನಡದಲ್ಲಿ ಕಾದಂಬರಿ ಸಾಹಿತ್ಯರೇಣುಕಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಭಾರತದ ಇತಿಹಾಸಸಿದ್ದರಾಮಯ್ಯಕರ್ನಾಟಕದ ವಿಶ್ವವಿದ್ಯಾಲಯಗಳುಯಕ್ಷಗಾನಕಾಳಿದಾಸರನ್ನಗೊರೂರು ರಾಮಸ್ವಾಮಿ ಅಯ್ಯಂಗಾರ್ಕನ್ನಡಪ್ರಭಬಾದಾಮಿ ಶಾಸನಹೊಯ್ಸಳ ವಾಸ್ತುಶಿಲ್ಪಭಾರತದಲ್ಲಿ ತುರ್ತು ಪರಿಸ್ಥಿತಿಅಜಂತಾರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಸೀತಾ ರಾಮಜೇನು ಹುಳುಸವರ್ಣದೀರ್ಘ ಸಂಧಿಶಾಂತಲಾ ದೇವಿಭಾರತದ ವಾಯುಗುಣಸುಧಾ ಮೂರ್ತಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಅಸಹಕಾರ ಚಳುವಳಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಆದಿ ಶಂಕರಕೆ. ಎಸ್. ನಿಸಾರ್ ಅಹಮದ್ಭಾರತದ ಜನಸಂಖ್ಯೆಯ ಬೆಳವಣಿಗೆಭಾರತದ ವಿಶ್ವ ಪರಂಪರೆಯ ತಾಣಗಳುಹರೇ ರಾಮ ಹರೇ ಕೃಷ್ಣ (ಚಲನಚಿತ್ರ)ವಿಧಿಆತ್ಮಹತ್ಯೆವಿನಾಯಕ ದಾಮೋದರ ಸಾವರ್ಕರ್ಪೆರಿಯಾರ್ ರಾಮಸ್ವಾಮಿಕರ್ನಾಟಕದ ಹಬ್ಬಗಳುಗೋವಿಂದ ಪೈಭಾಷೆಅಮೃತಕೋವಿಡ್-೧೯ಅಯೋಧ್ಯೆವಿಜಯನಗರವ್ಯಕ್ತಿತ್ವಬೈಗುಳರಾಜ್‌ಕುಮಾರ್ಅಯ್ಯಪ್ಪದಶಾವತಾರಅನುಪಮಾ ನಿರಂಜನಮೂತ್ರಪಿಂಡಉಪ್ಪಿನ ಸತ್ಯಾಗ್ರಹಸಾಲುಮರದ ತಿಮ್ಮಕ್ಕ🡆 More