ಕ್ಯಾನ್ಸರ್

ಕ್ಯಾನ್ಸರ್ (/ˈkænsə(r)/  ( listen)ವೈದ್ಯಕೀಯ ಪದಗಳಲ್ಲಿ:ಮಾಲಿಗಂಟ್ (ಕೇಡು ತರುವ)ನಿಯೊಪ್ಲಾಸ್ಮ್ (ಊತದ ಗೆಡ್ಡೆ),ಇದನ್ನು ಅರ್ಬುದ ರೋಗ ಎಂದು ಕರೆಯುತ್ತಾರೆ.ಇದರಲ್ಲಿ ಕೋಶಗಳ ಒಂದು ಸಮೂಹವು ಅನಿಯಂತ್ರಿತ ಬೆಳವಣಿಗೆ ಯನ್ನು ತೋರಿಸುತ್ತವೆ.ಅಂದರೆ ಸಾಮಾನ್ಯಕ್ಕಿಂತಲೂ ಮಿತಿಮೀರಿದ ಕೋಶಗಳ ವಿಭಜನೆ),ಅಂಗಾಂಶಗಳ ಮೇಲೆ ದುರಾಕ್ರಮಣ (ಶರೀರದ ಒಂದು ಭಾಗದಲ್ಲಿ ಇದು ಕಾಣಿಸಿಕೊಂಡರೆ ಅಕ್ಕಪಕ್ಕದ ಕೋಶಗಳನ್ನು ನಾಶಪಡಿಸುತ್ತದೆ).ಇದು ಹಲವು ಬಾರಿ ದೇಹದ ಇತರ ಭಾಗಗಳಿಗೆ ವೇಗವಾಗಿ ಪಸರಿಸು ತ್ತದೆ.(ರಕ್ತ ಅಥವಾ ಕೀವುಗಳಂತಹ ಮಲಿನ ದ್ರವಗಳ ಮೂಲಕ ದೇಹದ ಎಲ್ಲೆಡೆಯೂ ಹಬ್ಬಿಕೊಳ್ಳುತ್ತದೆ.) ಕ್ಯಾನ್ಸರ್ ನ ಹಾನಿಕಾರಕ ಲಕ್ಷಣಗಳು ಇತರೆ ಸಾಮಾನ್ಯ ಗೆಡ್ಡೆಗಳು,ಅಂದರೆ ತಾವೇ ತಾವಾಗಿ ಹುಟ್ಟಿಕೊಂಡವುಗಳು ಸ್ವಯಂ ಮಿತಿಗೊಳಪಟ್ಟವುಗಳು ಇತರ ಅಂಗಾಂಶಗಳ ಮೇಲೆ ಆಕ್ರಮಣ ಅಥವಾ ನಾಶಮಡುವ ಪ್ರವೃತ್ತಿಯು ಕ್ಯಾನ್ಸರ್ ಗಿಂತ ಭಿನ್ನವಾಗಿದೆ.

ಲುಕೆಮಿಯಾ ಕೂಡಾ ನಾಲ್ಕು ಕ್ಯಾನ್ಸರ್ ಗಳಲ್ಲಿ ಒಂದಾದರೂ ಇದು ಊತದ ಗೆಡ್ದೆಯ ಲಕ್ಷಣ ಹೊಂದಿರುವದಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ ಇದರ ಅಧ್ಯಯನ,ರೋಗ ನಿದಾನ ಪತ್ತೆ,ಚಿಕಿತ್ಸೆ ಮತ್ತು ಕ್ಯಾನ್ಸರ್ ನಿರ್ಮೂಲನೆಯ ಅಂಶಗಳನ್ನು ಹೊಂದಿರುವ ವೈದ್ಯಕೀಯ ಶಾಖೆಯನ್ನು ಆಂಕಾಲಜಿ ಎಂದು ಕರೆಯುತ್ತಾರೆ.

Cancer
Classification and external resources
ಕ್ಯಾನ್ಸರ್
A coronal CT scan showing malignant cancer of the lung sac.
Legend: → tumor ←, ★ central pleural effusion, 1&3 lungs, 2 spine, 4 ribs, 5 aorta, 6 spleen, 7&8 kidneys, 9 liver.
DiseasesDB28843
MedlinePlus001289
MeSHD009369

ಕ್ಯಾನ್ಸರ್ ಎಲ್ಲಾ ವಯೋಮಾನದವರಿಗೆ ಗಂಡಾಂತರಕಾರಿ ರೋಗವೆನಿಸಿದೆ,ಇದು ವಯಸ್ಸು ಹೆಚ್ಚಾದಂತೆ ಕಾಡುವ ಕಾಯಿಲೆಯಾಗಿದೆ. ವಿಶ್ವಾದ್ಯಂತ 2007ರಲ್ಲಿ ಒಟ್ಟು ಮಾನವ ಸಾವಿನಲ್ಲಿ 13%ರಷ್ಟು ಕ್ಯಾನ್ಸರ್ ನಿಂದ ಉಂಟಾಗಿವೆ.(7.6 ದಶಲಕ್ಷ)

ವಂಶವಾಹಿನಿಯಲ್ಲಿನ ಅಂಗಾಂಶ ಕೋಶಗಳಲ್ಲಿನ ಪರಿವರ್ತನವು ಅಸ್ವಾಭಾವಿಕತೆಯನ್ನು ತೋರಿಸುತ್ತವೆ.ಕ್ಯಾನ್ಸರ್ ರೋಗಕ್ಕೆ ಇದುಕಾರಣವಾಗಿದೆ. ಇಂತಹ ಅಸ್ವಾಭಾವಿಕ ವೈಪರಿತ್ಯಗಳು ಕ್ಯಾನ್ಸರ್ ಕಾರಕವೆನಿಸಿವೆ.ಉದಾಹರಣೆಗೆ ತಂಬಾಕು ಮತ್ತು ಧೂಮಪಾನ ,ವಿಕಿರಣತೆ,ರಸಾಯನಿಕಗಳು,ಅಥವಾ ಸೋಂಕಿನ ಮೂಲಗಳು ಇಂತಹ ಮಾರಕ ಕಾಯಿಲೆಗೆ ಕಾರಣವಾಗಬಹುದು. ಇನ್ನೂ ಕೆಲವು ವಂಶವಾಹಿನಿಯ ವೈಪರಿತ್ಯಗಳು DNA ದ ಪ್ರತಿಕೃತಿಗಳು,ಅಥವಾ ವಂಶಪಾರಂಪರಿಕವಾಗಿ ಇಡೀ ಜೀವಕೋಶಗಳಲ್ಲಿ ಹುಟ್ಟಿನಿಂದಲೇ ಬರುವ ಸಾಧ್ಯತೆಯು ಈ ಕ್ಯಾನ್ಸರ್ ಗೆ ಮೂಲಕಾರಣವೆನ್ನಬಹುದು. ಅನುವಂಶೀಯ ಕ್ಯಾನ್ಸರ್ ಗಳು ಕ್ಯಾನ್ಸರ್ ಕಾರಕಗಳು ಮತ್ತು ಅವುಗಳಿಗೆ ಆಶ್ರಯ ನೀಡಿದ ಜೀನ್ ಗಳ ನಡುವಿನ ಪರಸ್ಪರ ಪ್ರತಿಕ್ರಿಯೆಗಳನ್ನು ಅವಲಂಬಿಸಿದೆ.

ವಂಶವಾನಿಯ ವೈಪರಿತ್ಯಗಳು ಕ್ಯಾನ್ಸರ್ ಪೀಡಿತ ಜೀನ್ ಗಳ ಎರಡು ಸಾಮಾನ್ಯವರ್ಗಕ್ಕೆ ಸೇರಿವೆ. ಕ್ಯಾನ್ಸರ್ ಹೆಚ್ಚಿಸುವ ಗ್ರಂಥಿಕ ವಾಹಿನಿಗಳು ಮುಖ್ಯವಾಗಿ ಕ್ಯಾನ್ಸರ್ ಕೋಶಗಳಲ್ಲಿ ಕ್ರಿಯಾಶೀಲವಾಗಿರುತ್ತವೆ.ಇವುಗಳು ಗ್ರಂಥಿಕ ವಾಹಿನಿಯಲ್ಲಿ ಹೊಸ ರೋಗಕಾರಕ ಲಕ್ಷಣಗಳಿಗೆ ನಾಂದಿಯಾಗುತ್ತವೆ.ಅತ್ಯಧಿಕ ಬೆಳವಣಿಗೆ ಮತ್ತು ವಿಭಜನೆ,ಯೋಜಿತ ಅವಸಾನದತ್ತ ಸಾಗಿರುವ ಕೋಶಗಳ ರಕ್ಷಣೆ, ಅಂಗಾಂಶಗಳ ಸಾಮಾನ್ಯ ಎಲ್ಲೆಗೆ ಹಾನಿ,ಹೀಗೆ ಕ್ಯಾನ್ಸರ್ ಕಾರಕಗಳು ವಿಭಿನ್ನ ಏಕಾಂಶಗಳ ಪರಿಸರದಲ್ಲಿ ತನ್ನನ್ನು ತಾನು ಪ್ರತಿಷ್ಟಾಪಿಸುವುದು ಪ್ರಮುಖ ಲಕ್ಷಣವಾಗಿದೆ. ಗೆಡ್ದೆ ತಡೆಯುವ ವಂಶವಾಹಿನಿಗಳು ನಂತರ ಕ್ಯಾನ್ಸರ್ ಕೋಶಗಳಲ್ಲಿ ನಿಷ್ಕ್ರಿಯಗೊಳಿಸುತ್ತವೆ.ಇದರಿಂದಾಗಿ ಸಹಜ ಕಾರ್ಯ ನಿರ್ವಹಿಸುವ ಆ ಕೋಶಗಳ ಕಾರ್ಯಕ್ಕೆ ಹಾನಿಸಂಭವಿಸುತ್ತದೆ.ಅವೆಂದರೆ ನಿಖರDNA ಪ್ರತಿಕೃತಿ,ಕೋಶದ ಆವರ್ತನದ ಮೇಲಿನ ನಿಯಂತ್ರಣ,ಅಂಗಾಂಶಗಳಲ್ಲಿ ಅವುಗಳ ಹುಟ್ಟು ಮತ್ತು ಅಲ್ಲಿಯೇ ಅಂಟಿಕೊಳ್ಳುವ ಅವುಗಳ ಗುಣಗಳು,ಅದೂ ಅಲ್ಲದೇ ರೋಗ ನಿರೋಧಕ ಸುರಕ್ಷತಾ ಕೋಶಗಳ ರೋಗಪ್ರತಿರೋಧಕ ವಿಧಾನದ ಕ್ರಿಯೆ ಇವುಗಳೊಂದಿಗೆ ಅಂಗಾಂಶಗಳಲ್ಲೇ ಮುಖಾಮುಖಿ ನಡೆಯುತ್ತಿದೆ.

ಅಂಗಾಂಶದ ಸಮಗ್ರ ವಿಭಜನೆಯ ಹಿಂದಿನ ಗತಕಾಲಿಕದ ಸಂಪೂರ್ಣ ಮಾದರಿಯೊಂದರ ಚಿಕೆತ್ಸೆ ನಂತರ ಇದರ ನಿಖರ ಹಾನಿಕಾರಕ ವಿಷಯ ಲಕ್ಷಣ ಹಾಗು ವೈಪರಿತ್ಯಗಳ ವಿಕಿರಣಗಳ ಛಾಯೆಯನ್ನು ಇಲ್ಲಿ ಗಮನಿಸಿ ಕ್ಯಾನ್ಸರ್ ನ ವಿವಿಧ ಹಾನಿಯ ಬಗ್ಗೆ ಅಂದಾಜಿಸಬಹುದಾಗಿದೆ. ಹಲವು ಬಗೆಯ ಕ್ಯಾನ್ಸರ್ ಗಳನ್ನು ಚಿಕಿತ್ಸೆಯ ಮೂಲಕ ಹರಡುವಿಕೆಯನ್ನು ತಡೆಯಬಹುದು ಅಲ್ಲದೇ ಉತ್ತಮ ರೀತಿಯಲ್ಲಿ ಗುಣಮುಖರನ್ನಾಗಿಯೂ ಮಾಡಬಹುದಾಗಿದೆ.ಇದರ ಫಲಿತಾಂಶವು ಕ್ಯಾನ್ಸರ್ ಯಾವ ರೀತಿಯದ್ದು,ಯಾವ ಭಾಗದಲ್ಲಿದೆ ಮತ್ತು ಯಾವ ಹಂತದಲ್ಲಿದೆ ಎಂಬುದರ ಮೇಲೆ ಅದರ ಗುಣಮುಖದ ರೀತಿ ಅವಲಂಬಿಸಿದೆ. ಒಮ್ಮೆ ಕ್ಯಾನ್ಸರ್ ಇದೆ ಎಂಬುದು ಖಚಿತವಾದರೆ ಅದನ್ನು ಶಸ್ತ್ರ ಚಿಕಿತ್ಸೆ,ಕೆಮೊಥೆರಪಿ ಮತ್ತು ರೇಡಿಯೊ ಥೆರಪಿ ಮೂಲಕ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಸಂಶೋಧನೆಯ ವಲಯ ಅಭಿವೃದ್ಧಿಯಾದಂತೆ ವಿವಿಧ ರೀತಿಯ ಕ್ಯಾನ್ಸರ್ ಗಳಿಗೆ ಅದರದೇ ಆದ ವಿಶೇಷ ಚಿಕಿತ್ಸೆಗಳು ಲಭ್ಯವಾಗುತ್ತಿವೆ. ಸದ್ಯ ನಿರ್ದಿಷ್ಟ ಔಷಧೋಪಚಾರದ ಬಗೆಗಿನ ಸಂಶೋಧನೆಗಳು ಪ್ರಗತಿಯಲ್ಲಿರುವದರಿಂದ ಅಂಗಾಂಶಗಳ ಮೇಲೆ ಖಚಿತವಾಗಿ ಪರಿಣಾಮ ಬೀರುವ ಆವಿಷ್ಕಾರಗಳು ಜೀವಕೋಶಗಳಲ್ಲಿನ ಅಸಹಜ ಬೆಳವಣಿಗೆ ಮತ್ತು ಇತರೆ ಜೀವಕೋಶಗಳ ವಿನಾಶವನ್ನು ತಡೆಯಬಹುದಾಗಿದೆ.ಕ್ಯಾನ್ಸರ್ ಗೆಡ್ಡೆಯಲ್ಲಿನ ನಿರ್ಧಿಷ್ಟ ಕೋಶಗಳನ್ನು ಗುರುತಿಸಿ ನಿಶ್ಚಿತ ಔಷಧೋಪಚಾರ ಮಾಡಬಹುದಾಗಿದೆ. ಕ್ಯಾನ್ಸರ್ ರೋಗಿಗಳ ಮುನ್ಸೂಚನೆ ಲಕ್ಷಣ ಕಾಣಿಸಿದ ನಂತರ ಬಹುತೇಕ ರೋಗಿಗಳು ಕಾಯಿಲೆ ಯಾವ ಹಂತದಲ್ಲಿದೆ,ಇದರ ಮುಂಬರುವ ದುಷ್ಪರಿಣಾಮಗಳ ಬಗ್ಗೆ ಪೂರ್ವದಲ್ಲೇ ಗ್ರಹಿಸಿ ಸೂಕ್ತ ಚಿಕಿತ್ಸೆ ಮಾಡುವುದು ಈಗಿನ ಹೊಸ ಸಂಶೋಧನೆಯಾಗಿದೆ. ಇನ್ನೂ ಹೆಚ್ಚೆಂದರೆ ಕಾಯಿಲೆಯ ಹಿನ್ನೆಲೆ,ಅಲ್ಪಕಾಲೀನವೆ ಅಥವಾ ದೀರ್ಘಕಾಲೀನವೆ ಎಂಬ ಇದರ ವರ್ಗೀಕರಣ ನಡೆಯುತ್ತದೆ.ಜೀವಕೋಶಗಳ ಪರೀಕ್ಷೆಯ ನಂತರ ಅದನ್ನು ಸರಿಯಾಗಿ ರೋಗ ನಿದಾನದ ಕ್ರಮಕ್ಕೊಳಪಡಿಸಿ ಆಯಾ ವ್ಯಕ್ತಿಗೆ ಆಯಾ ಕಾಯಿಲೆಯ ಗುಣಲಕ್ಷಣದ ಮೇಲೆ ಔಷಧೋಪಚಾರ ನಡೆಸಲು ಸಾಧ್ಯವಿದೆ.

ವರ್ಗೀಕರಣ

ಕ್ಯಾನ್ಸರ್ ಗೆಡ್ಡೆಯ ಕೋಶದ ವರ್ಗ ಯಾವದಕ್ಕೆ ಹೋಲುತ್ತದೆ ಎಂಬುದನ್ನು ತಿಳಿದುಕೊಂಡು ಅದೇ ಅಂಗಾಂಶದ ಜೀವಕೋಶಗಳು ಇದಕ್ಕೆ ಕಾರಣವಾಗಿವೆ ಎಂದು ಪತ್ತೆಹಚ್ಚಬಹುದು. ಇವುಗಳು ಕಾಯಿಲೆಯ ಗುಣಲಕ್ಷಣಗಳು ಮತ್ತು ಆ ಭಾಗವನ್ನು ಅನುಕ್ರಮವಾಗಿ ತೋರಿಸುತ್ತವೆ. ಸಾಮಾನ್ಯ ವರ್ಗಕ್ಕೆ ಸೇರಿದ ಉದಾಹರಣೆಗಳು:

  • ಕ್ಯಾರ್ಸಿನೊಮಾ :ಮಾಲಿಗಂಟ್ (ಹಾನಿಕಾರಕ)ಗೆಡ್ಡೆಗಳನ್ನು ಎಪಿಥೆಲೈಲಾ ಕೋಶಗಳಿಂದ ಪಡೆದುಕೊಳ್ಳಲಾಗುತ್ತದೆ. ಈ ಗುಂಪು ಅತ್ಯಂತ ಸರ್ವೆ ಸಾಮಾನ್ಯ ಕ್ಯಾನ್ಸರ್ ಗಳಿಗೆ ಕಾರಣವಾಗುತ್ತದೆ.ಬಹುಮುಖ್ಯ ಭಾಗಗಳೆಂದರೆ ಸ್ತನ,ಮೂತ್ರಕೋಶದ ಗ್ರಂಥಿ,ಶ್ವಾಸನಾಳ ಮತ್ತು ಕೊಲಾನ್ (ದೊಡ್ಡ ಕರುಳು)ಕ್ಯಾನ್ಸರ್ ಇತ್ಯಾದಿ.
  • ಸರ್ಕೊಮಾ :ಹಾನಿಕಾರಕ ಗೆಡ್ಡೆಗಳನ್ನು ಸಂಬಂಧಪಟ್ಟ ಜೋಡಣೆಯ ಅಂಗಾಂಶದಿಂದ ಪಡೆಯಬಹುದಾಗಿದೆ.ಅಥವಾ ಜೀವಕೋಶಗಳನ್ನು ಜೋಡಿಸುವ ಮೆಸೆಂಚಿಮಲ್ ನಿಂದಲೂ ಪಡೆಯಬಹುದು.
  • ಲಿಂಫೊಮಾ (ಹಾನಿಕಾರಕ ಗೆಡ್ದೆ)ಮತ್ತು ಲ್ಯುಕೆಮಿಯಾ (ರಕ್ತ ಕೋಶಗಳನ್ನು ದುರ್ಬಲಗೊಳಿಸುವು)ಗಳಿಗಾಗಿ (ರಕ್ತಕೋಶಗಳನ್ನು ಹುಟ್ಟಿ)ಸುವ ಹೆಮೊಟೊಪೊಯಿಟಿಕ್ ಕೂಡಾ ಇಲ್ಲಿ ಕೆಲಸ ಮಾಡುತ್ತದೆ.
  • ಕ್ರಿಮಿಕಾರಕ ಕೋಶದ ಗೆಡ್ಡೆ :ಟೊಟಿಪೊಟೆಂಟ್ ಕೋಶಗಳಿಂದ ಪಡೆಯಲಾಗುತ್ತದೆ. ಹದಿಹರೆಯದವರಲ್ಲಿ ವೃಷಣ ಮತ್ತು ಅಂಡಾಂಶಗಳಲ್ಲಿ ಇದರ ಲಕ್ಷಣ ಕಾಣಸಿಗಬಹುದು.ಭ್ರೂಣಗಳು,ಹಸುಗೂಸುಗಳು ಮತ್ತು ಯುವ ಮಕ್ಕಳ ದೇಹದಲ್ಲಿನ ಕೆಲವು ಬದಲಾವಣೆಗಳನ್ನು ಬಹುಮುಖ್ಯವಾಗಿ ಎಲುಬಿನ ಮೇಲ್ಭಾಗದಲ್ಲಿ ಇದು ಪ್ರಾರಂಭಿಕವಾಗಿರುವ ಸಾಧ್ಯತೆ ಇದೆ. ಕುದರೆಗಳ ತಲೆಬುರಡೆಯ ಭಾಗದಲ್ಲಿ ಇದರ ಬೆಳವಣಿಗೆ ಕಾಣಬರುತ್ತದೆ.
  • {0)ಬ್ಲಾಸ್ಟಿಕ್ ಗೆಡ್ಡೆ{/0} ಅಥವಾ ಬ್ಲಾಸ್ಟೊಮಾ: ಈ ಗೆಡ್ಡೆಯು(ಸಾಮಾನ್ಯವಾಗಿ ಕೋಶಗಳಿಗೆ ಹಾನಿಕಾರಕ)ಇದು ಇನ್ನೂ ಬೆಳವಣಿಗೆ ಹೊಂದಿರುವುದಿಲ್ಲ ಅಥವಾ ಅಂಗಾಂಶದ ಹುಟ್ಟಿನ ಆರಂಭಿಕ ಸ್ಥಿತಿಯಲ್ಲಿರುತ್ತದೆ. ಇಂತಹ ಬಹುತೇಕ ಗೆಡ್ದೆಗಳು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ಹಾನಿಕಾರಕ ಗೆಡ್ಡೆಗಳು(ಕ್ಯಾನ್ಸರ್ ಗಳು) ಇವುಗಳನ್ನು ಕಾರ್ಸಿನೊಮಾ ,ಸರ್ಕೊಮಾ ಅಥವಾ ಬ್ಲಾಸ್ಟೊಮಾ ಎನ್ನುತ್ತಾರೆ.ಇವುಗಳಿಗೆ ಸಾಮಾನ್ಯವಾಗಿ ಲ್ಯಾಟಿನ್ ಅಥವಾ ಗ್ರೀಕ್ ಮೂಲದ ಪೂರ್ವಪದವನ್ನು ಬಳಸಿ ಹೆಸರಿಸಲಾಗುತ್ತದೆ.ಈ ಪದಗಳು ಮೂಲ ಅದೇ ಭಾಷೆಯ ಮೂಲ ಬೇರಿಗೆ ಸೇರಿದ್ದವು ಎಂದೂ ಹೇಳಲಾಗುತ್ತದೆ. ಉದಾಹರಣೆಗಾಗಿ ಜಠರದ ಕ್ಯಾನ್ಸರ್ ನ್ನು ಹೆಪ್ಟೊಕಾರ್ಸಿನೊಮಾ ;ಕೊಬ್ಬಿನ ಕೋಶಗಳ ಕೋಶಗಳಿಗೆ ಸಂಬಂಧಿಸಿದ ಕ್ಯಾನ್ಸರ್ ನ್ನು ಲಿಪೊಸರ್ಕೊಮಾ ಎಂದು ಹೆಸರಿಸಲಾಗುತ್ತದೆ. ಸಾಮಾನ್ಯ ಕ್ಯಾನ್ಸರ್ ಗಳಿಗಾಗಿ ಇಂಗ್ಲೀಷ್ ನ ಅಂಗದ ಹೆಸರನ್ನಿಡಲಾಗಿದೆ. ಉದಾಹರಣೆಗಾಗಿ ಅತ್ಯಂತ ಸರ್ವೆಸಾಮಾನ್ಯ ಸ್ತನ ಕ್ಯಾನ್ಸರ್ ನ್ನು ಸ್ತನದ ಡಕ್ಟಲ್ (ಪಿತ್ತನಾಳ)ಕಾರ್ಸಿನೊಮಾ ಅಥವಾ ಮಮ್ಮರಿ ಡಕ್ಟಲ್ ಕಾರ್ಸಿನೊಮಾ ಎಂದು ಹೇಳಲಾಗುತ್ತದೆ. ಡಕ್ಟಲ್ ಇದು ಮೈಕ್ರೊಸ್ಕೋಪ್ ನಡಿ ಕಾಣುವ ಕ್ಯಾನ್ಸರ್ ,ಸಹಜ ಸ್ತನದ ನಾಳದಂತೆ ಹೋಲಿಕೆ ಪಡೆದಿರುತ್ತವೆ.

ಬಿನೈನ್ (ತೀವ್ರತರವಲ್ಲದ) ಗೆಡ್ಡೆಗಳು(ಇವು ಕ್ಯಾನ್ಸರ್ ಗೆಡ್ಡೆಗಳಲ್ಲ)ಇವುಗಳನ್ನು-ಒಮಾ ಇದಕ್ಕೆ ಅಂಗಾಂಶದ ಹೆಸರನ್ನು ಮೊದಲು ಸೇರಿಸಿ ಕರೆಯಲಾಗುತ್ತದೆ. ಉದಾಹರಣೆಗಾಗಿ ತೀವ್ರತರವಲ್ಲದ ಗೆಡ್ಡೆ ಎಂದರೆ ಗರ್ಭಕೋಶದ ಮೆದು ಸ್ನಾಯುವಿನ ಸೋಂಕಿಗೆ ಲಿಯೊಮಯೊಮಾ (ಪದೇ ಪದೇ ಮರುಕಳಿಸುವ ಈ ಗೆಡ್ಡೆಯನ್ನು ಫಿಬ್ರೊಯಿಡ್ ಎನ್ನುತ್ತಾರೆ). .ದುರದೃಷ್ಟವಶಾತ್ ಕೆಲವು ಕ್ಯಾನ್ಸರ್ ಗಳಲ್ಲಿ-ಒಮಾ ವನ್ನು ಕೊನೆಯಲ್ಲಿ ಬಳಸುತ್ತಾರೆ,ಉದಾಹರಣೆಯೆಂದರೆ,ಮೆಲೊನೊಮಾ ಮತ್ತು ಸೆಮಿನೊಮಾ

ರೋಗ ಸೂಚನೆ ಹಾಗೂ ಲಕ್ಷಣಗಳು

ಕ್ಯಾನ್ಸರ್ 
ಕ್ಯಾನ್ಸರ್ ಹರಡುವ ಲಕ್ಷಣಗಳು ಗೆಡ್ಡೆ ಬೆಳೆದ ಸ್ಥಳವನ್ನು ಅವಲಂಬಿಸಿದೆ.

ಸರಿಸುಮಾರಾಗಿ ಕ್ಯಾನ್ಸರ್ ಲಕ್ಷಣಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು:

  • ಸ್ಥಳೀಯ ಲಕ್ಷಣಗಳು ,ಅಸಹಜ ಗೆಡ್ಡೆ ಅಥವಾ ಬಾವು (ಗೆಡ್ಡೆ),ಹೆಮ್ಹೊರೇಜ್ (ರಕ್ತಸ್ರಾವ),ನೋವು ಮತ್ತು ಅಥವಾ ಅಲ್ಸರ್ (ಸಣ್ಣ ಗೆಡ್ಡೆ) ಕಾಣಿಸುವುದು. ಸುತ್ತಮುತ್ತಲಿನ ಜೀವಕೋಶಗಳ ಮೇಲಿನ ಒತ್ತಡದ ಭಾರ ಜಾಂಡೀಸ್ (ಕಾಮಾಲೆ)(ಕಣ್ಣುಗಳು ಮತ್ತು ಚರ್ಮ ಹಳದಿಯಾಗುವುದು.
  • ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವರ್ಗಾವಣೆ ಲಕ್ಷಣಗಳು (ಪಸರಿಸು ): ದೊಡ್ಡದಾಗಿರುವ ಗಂಟಿನಿಂದ ಒಸರುವ ದ್ರವ,ಕೆಮ್ಮು ಮತ್ತು ಹೆಮೊಟೈಸಿಸ್ ಹೆಪ್ಟೊಮೆಗಲಿ(ಅಗಲಾದ ಜಠರ),ಎಲುಬು ನೋವು,ಮುರಿತದ ನೋವಿಗೆ ಒಳಗಾದ ಸ್ನಾಯುಗಳು ಮತ್ತು ನರಮಂಡಲಕ್ಕೆ ಸಂಬಂಧಿಸಿದ ಲಕ್ಷಣಗಳು. ಏರಿಕೆ ಗತಿಯಲ್ಲಿರುವ ಕ್ಯಾನ್ಸರ್ ನೋವಿಗೆ ಕಾರಣವಾಗಬಹುದು,ಇದು ಬಹಳಷ್ಟು ಸಲ ಮೊದಲ ಲಕ್ಷಣವಾಗಿರುವದಿಲ್ಲ.
  • ಕ್ರಮಬದ್ದ ಲಕ್ಷಣಗಳು : ತೂಕ ಕಡಿಮೆಯಾಗುವುದು,ಬಾಯಿರುಚಿ ಕೆಡುವುದು,ದಣಿವು ಮತ್ತು ನಿಶಕ್ತಿ,ಪೋಲು,ಅತಿಯಾದ ಬೆವರು,(ರಾತ್ರಿ ಬೆವರುವಿಕೆ),ಅನೀಮಿಯಾ ಮತ್ತುಸೆಳೆತದ ಲಕ್ಷಣ,ಅಂದರೆ ಅಂತಹ ಕೆಲವು ಚಿನ್ಹೆಗಳು ಕ್ರಿಯಾಶೀಲ ಕ್ಯಾನ್ಸರ್ ಗುರುತುಗಳು ಉದಾಹರಣೆಗೆ ರಕ್ತ ಹೆಪ್ಪುಗಟ್ಟುವಿಕೆ ಅಥವಾ ಗ್ರಂಥಿಯಲ್ಲಿನ ಬದಲಾವಣೆಗಳು.

ಮೇಲೆ ಇರುವ ಲಕ್ಷಣಗಳ ಪಟ್ಟಿಯಲ್ಲಿನ ಕ್ಯಾನ್ಸರ್ ಗಳು ವಿವಿಧ ಪರಿಸ್ಥಿತಿಗಳಲ್ಲಿ ಕಾಣಿಸುತ್ತವೆ.(ಈ ಪಟ್ಟಿಯನ್ನು ವಿಭಿನ್ನ ಚಿಕಿತ್ಸಾ ರೋಗ ನಿದಾನದ ಉಲ್ಲೇಖಗಳಿಗೆ ಹೋಲಿಸಲಾಗುತ್ತದೆ) ಈ ವಿಷಯದ ಪಟ್ಟಿಯನ್ನು ಗಮನಿಸಿದರೆ ಕ್ಯಾನ್ಸರ್ ಸರ್ವೆಸಾಮಾನ್ಯ ಅಥವಾ ಸಾಮಾನ್ಯವಲ್ಲದಿರಬಹುದು

ಕಾರಣಗಳು

ಕ್ಯಾನ್ಸರ್ ಒಂದು ವಿಭಿನ್ನ ರೋಗಗಳ ವರ್ಗವೆನಿಸಿದೆ.ಆದರೆ ಇವು ಆಯಾ ಕಾರಣ ಮತ್ತು ಜೀವಶಾಸ್ತ್ರಕ್ಕೆ ಇದು ಸಂಬಂಧಪಟ್ಟಿದೆ. ಯಾವದೇ ಸಜೀವ ಪ್ರಕೃತಿಯ ಕೋಶ ಸಸ್ಯಗಳೂ ಸಹ ಕ್ಯಾನ್ಸರ್ ಗೆ ತುತ್ತಾಗುತ್ತವೆ. ಸಾಮಾನ್ಯವಾಗಿ ಗೊತ್ತಿರುವ ಕ್ಯಾನ್ಸರ್ ಗಳು ನಿಧಾನವಾಗಿ ಉಲ್ಬಣಗೊಳ್ಳುತ್ತವೆ.ಕ್ಯಾನ್ಸರ್ ಕೋಶಗಳಲ್ಲಿನ ದೋಷಗಳು ಬೆಳೆದಂತೆ ಅದರ ಸಂತತಿಯು ಮುಂದುವರೆಯುತ್ತಾ ಮಾರಕವಾಗಿ ಮಾರ್ಪಡುತ್ತದೆ.(ನೋಡಿ ಯಾಂತ್ರಿಕ ವಿಧಾನಗಳು ಸರ್ವೆ ಸಾಮಾನ್ಯ ಕ್ಯಾನ್ಸರ್ ಗೆ ವಿವಿಧ ಕಾರಣಗಳು).

ನಮ್ಮ ಜೀವಕೋಶಗಳನ್ನು ನಕಲು ಮಾಡುವ(ನಮ್ಮ ಕೋಶಗಳು)ಸಂಭವನೀಯತೆಯ ಹಾನಿಕಾರಕಗಳ ಕಾರಣದಿಂದಾಗಿ ಹಲವಾರು ಆಂತರಿಕ ದೋಷಗಳಿಂದ ಬಳಲುತ್ತವೆ.(ರೂಪಾಂತರಗಳು ಅಥವಾ ಹಠಾತ್ ಬದಲಾವಣೆಗೆ ಒಳಪಡುತ್ತವೆ). ಆಂತರಿಕ ರೋಗಪೀಡಿತ ಕೋಶಗಳು ಹಾಗೆಯೇ ಉಳಿದುಕೊಂಡರೆ ಮತ್ತು ಕ್ಯಾನ್ಸರ್ ಸಹಿತದ ಜೀವಕೋಶಗಳ ಸೂಕ್ತ ಚಿಕಿತ್ಸೆಯಾಗದಿದ್ದರೆ ದೋಷಪೂರಿತ ಕೋಶಗಳು ಮುಂದಿನ ಪೀಳಿಗೆಯ ಕೋಶಗಳಿಗೆ ವರ್ಗಾವಣೆಗೊಳ್ಳುತ್ತವೆ. ಸಾಮಾನ್ಯವಾಗಿ ದೇಹ ರಕ್ಷಕ ಕವಚವು ಕ್ಯಾನ್ಸರ್ ಗೆ ವಿರುದ್ಧವಾಗಿ ಹಲವು ವಿಧಗಳಲ್ಲಿ ಹೋರಾಡುತ್ತದೆ,ಉದಾಹರಣೆಗೆ:ಸ್ವಯಂ ಆತ್ಮಹತ್ಯಾ ಕೋಶಗಳು,ಜೀವಕಣಗಳ ಸಹಾಯಕಗಳು(ಕೆಲವುDNA ಪಾಲಿಮೆರೆಸಿಸ್ ಗಳು),ಸಾಧ್ಯವಿದ್ದಷ್ಟು ಮುಪ್ಪಾಗುತ್ತಿರುವ ಕೋಶಗಳು,ಇತ್ಯಾದಿ.ಹೇಗೇ ಆದರೂ ಇಂತಹ ತಪ್ಪು ಸರಿಪಡಿಸುವ ವಿಧಾನಗಳು ಬಹಳಷ್ಟು ಬಾರಿ ಸಣ್ಣ ಪ್ರಮಾಣದಲ್ಲಿ ವಿಫಲಗೊಳ್ಳುತ್ತವೆ.ಸಹಜವಾಗಿ ಕ್ಯಾನ್ಸರ್ ಪೀಡೆಗಳು ಹೆಚ್ಚಾಗಿ ಬೆಳೆಯುವ ಮತ್ತು ಪಸರಿಸುವ ವಾತಾವರಣದಲ್ಲಿ ಇಂತಹ ವಿರೋಧ ಪದ್ದತಿಗಳು ಸಫಲವಾಗುವುದು ಕಡಿಮೆ. ಉದಾಹರಣೆಗೆ ಇಂತಹ ಪರಿಸರದಲ್ಲಿ ವಿನಾಶಕಾರಿ ವಸ್ತುಗಳೆಂದರೆ ಕಾರ್ಸಿನೊಜೀನ್ಸ್(ಕ್ಯಾನ್ಸರ್ ಗೆ ಕಾರಣವಾಗುವ ಪದಾರ್ಥಗಳು,ಅಥವಾ ಪದೇ ಪದೇ ಗಾಯದ ಸಮಸ್ಯೆ(ಶಾರೀರಿಕ,ಉಷ್ಣತೆ,ಇತ್ಯಾದಿ.),ಅಥವಾ ಜೀವಕೋಶಗಳ ಬದುಕಿಗೆ ಗಂಡಾಂತರಕಾರಿ ವಾತಾವರಣ ಅಲ್ಲಿ ಅವುಗಳು ಸ್ಥಿರತೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.ಅಂದರೆ ಹೈಪೊಕ್ಸಿಯಾ (ಉಪ ನಿಭಂದನೆ ನೋಡಬಹುದು). ಹೀಗೆ ಕ್ಯಾನ್ಸರ್ ಒಂದು ಏರಿಕೆ ಪಡೆಯುವ ಕಾಯಿಲೆ,ಇಂತಹ ಬೆಳೆಯುವ ದೋಷಗಳು ಪ್ರಾಣಿಗಳಲ್ಲಿನ ಕ್ರಿಯಾತ್ಮಕ ಜೀವಕೋಶಗಳನ್ನು ನಿಷ್ಕ್ರಿಯೆಗೊಳಿಸುವ ಹಂತಕ್ಕೆ ತಲಪುತ್ತವೆ.

ಇಂತಹ ಸಾಮಾನ್ಯ ತಪ್ಪುಗಳು ಸ್ವಯಂ-ವರ್ಧಿಸಿ ಕೊಂಡು ಸಮಯ ಕಳೆದಂತೆ ಸ್ಫೋಟಕದ ಮಟ್ಟಕ್ಕೆ ಮಾರ್ಪಡುತ್ತವೆ. ಉದಾಹರಣೆಗೆ:

  • ಹೀಗೆ ರೂಪಾಂತರಗೊಳ್ಳುವ ಕೋಶಗಳು ದೋಷ ಸರಿಪಡಿಸುವ ವಿಧಾನವನ್ನೇ ಬಳಸಿಕೊಂಡು ಕ್ಯಾನ್ಸರ್ ತನ್ನ ಪೀಳಿಗೆಯನ್ನು ಒಟ್ಟುಗೂಡಿಸಬಹುದು.
  • ಈ ರೂಪಾಂತರದ ಹಂತದಲ್ಲಿ ದೋಷಯುಕ್ತ ರಕ್ತದ ಮೂಲಕ ಘಾಸಿಯಾಗುವ ಅಂಗಾಂಶವು ಪಕ್ಕದ ಕೋಶಗಳಿಗೆ ಸಂಜ್ಞೆಯನ್ನು ರವಾನಿಸುತ್ತವೆ.ಇದರಿಂದ ಪೀಡಿತ ಜೀವಕೋಶಗಳು ಪರಸ್ಪರ ಚಿನ್ಹೆಗಳನ್ನು ತೋರುತ್ತವೆ.
  • ಈ ತೆರನಾದ ರೂಪಾಂತರವು ಊತದ ಗೆಡ್ದೆಯಾಗಿ ಅಲ್ಲಿನ ಕೋಶಗಳನ್ನು ಒತ್ತಾಯಪೂರ್ವಕ ವಲಸೆಗೆ ಕಾರಣವಾಗುತ್ತವೆ. ಹೀಗಾಗಿ ಅತಿ ಹೆಚ್ಚು ಆರೋಗ್ಯವಂತ ಕೋಶಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.
  • ಹೀಗೆ ರೂಪಾಂತರದ ಕೋಶವು ಅಮರವಾಗಿ(ನೋಡಿ ಟೆಲೊಮರ್ಸ) ಇನ್ನುಳಿದ ಆರೋಗ್ಯವಂತ ಅಂಗಾಂಶಗಳನ್ನು ಯಾವಾಗಲೂ ತೊಂದರೆಗೆ ಈಡು ಮಾಡುತ್ತದೆ.

ಕ್ಯಾನ್ಸರ್ ರೋಗವು ಸರಣಿ ಪ್ರತಿಕ್ರಿಯೆಗಳೊಂದಿಗೆ ಸ್ಫೋಟಕವಾಗಿ ಪರಿಣಮಿಸಬಲ್ಲದು, ಒಂದು ಸಣ್ಣ ದೋಷವು ಒಂದುಗೂಡಿ ಹಲವಾರು ತಪ್ಪುಗಳಿಗೆ ಎಡೆ ಮಾಡಿಕೊಡಬಹುದು. ರೋಗ ಹರಡಲು ಕಾರಣವಾಗುವ ಒಂದೇ ಒಂದು ತಪ್ಪುಅಥವಾ ದೋಷವು ಕ್ಯಾನ್ಸರ್ ಪಸರಿಸಲು ಮೂಲಕಾರಣವಾಗಬಲ್ಲದು,ಯಾಕೆಂದರೆ ಈ ಮಾರಕ ಕಾಯಿಲೆಯ ಚಿಕಿತ್ಸೆ ಕೂಡಾ ಬಹಳಷ್ಟು ಜಟಿಲವಾಗಿದೆ:ಒಂದು ವೇಳೆ ಅಲ್ಲಿ 10,000,000,000 ಕ್ಯಾನ್ಸರ್ ಯುಕ್ತ ಕೋಶಗಳಿದ್ದರೂ ಅವುಗಳಲ್ಲಿನ ಎಲ್ಲವನ್ನೂ ಕೊಂದರೂ ಕೇವಲ 10 ಇಂತಹ ಪೀಡಕ ಕೋಶಗಳು ಆರೋಗ್ಯವಂತ ಜೀವಕೋಶಗಳನ್ನು ಬೆಂಬತ್ತಿ ಕಾಡುತ್ತದೆ.(ರೋಗಪೀಡಿತ ಕೆಲವೇ ಕೋಶಗಳ ನಕಲುಗಳಾಗಿ ರೂಪಾಂತರಗೊಂಡು ದೋಷಯುಕ್ತ ಸಂಜ್ಞೆಗಳನ್ನುಕಳಿಸಲು ಸಮರ್ಥವಾಗಿರುತ್ತದೆ).ಇಂತಹ ಬಂಡಾಯ ಪ್ರವೃತ್ತಿಯ ದೋಷಯುಕ್ತ ಜೀವಕೋಶಗಳು ಅಥವಾ ಕ್ಯಾನ್ಸರ್ ಕಾರಕಗಳು ಇಂತಹ ಅನಾಹುತಕಾರಿ ಪರಿಣಾಮಕ್ಕೆ ಎಡೆ ಮಾಡಿಕೊಡುತ್ತವೆ.ಆಗ ಬಲವಿದ್ದವನೇ ಉಳಿಯುವ,ಕಾಲ ಸನ್ನಿಹತವಾಗಿ ದೇಹದ ಆರೋಗ್ಯ ವರ್ಧಿಸುವ ರೋಗನಿರೋಧಕ ಪಡೆ ಸೋತು ಹೋದರೆ ದೇಹದ ರಚನೆಯ ವಿರುದ್ಧವೇ ಇದೊಂದು ಮಾರಕ ಹೋರಾಟವಾಗಿ ಪರಿಣಮಿಸುತ್ತದೆ. ಹೀಗೆಯೇ ದುರ್ಬಲಗೊಂಡ ದೇಹದಲ್ಲಿ ಕ್ಯಾನ್ಸರ್ ವೇಗವಾಗಿ ಬೆಳೆದು ಶರೀರದಲ್ಲಿ ಇನ್ನಷ್ಟು ತೀವ್ರರೀತಿಯಲ್ಲಿ ಆಕ್ರಮಣಕಾರಿಯಾಗಿ ಇದು ಮಾರ್ಪಟ್ಟಾಗ ಇದನ್ನು ಬೀಜರಹಿತ ಸಂತತಿ ಅಭಿವೃದ್ಧಿಎಂದು ಕರೆಯುತ್ತಾರೆ.

ಕ್ಯಾನ್ಸರ್ ನ ಬಗೆಗಿನ ಸಂಶೋಧನೆಗಳು ಸಹ ಬಹಳಷ್ಟು ಬಾರಿ ಕೈಚೆಲ್ಲಿದ್ದುಂಟು ಉದಾಹರಣೆಗೆ:

  • ಅದಕ್ಕೆ ಕಾರಣವಾದವುಗಳು(ಉದಾ:ವೈರಸ್ ಗಳು) ಮತ್ತು ಸಂದರ್ಭಗಳು(ಉದಾ:ರೂಪಾಂತರಗಳು)ಇವು ಕಾರಣವಾಗಬಹುದು, ಇಲ್ಲವೇ ಕ್ಯಾನ್ಸರ್ ಆಗಿ ಪರಿವರ್ತನೆಯಾಗುವ ಕೋಶಗಳಿಗೆ ಅವಕಾಶ ಮಾಡಿಕೊಡುತ್ತವೆ.
  • ಇದರಿಂದ ವಂಶವಾಹಿನಿಗಳ ಮೇಲೆ ಇಂತಹದೇ ಹಾನಿ ಅಥವಾ ವಂಶವಾಹಿನಿ ಕೋಶಗಳು ಕ್ಯಾನ್ಸರ್ ಪೀಡಿತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
  • ಹೀಗೆ ವಂಶವಾಹಿನಿ ಹೊತ್ತಿರುವ ಅಂಗಾಂಶಗಳಲ್ಲಿ ಬದಲಾದ ರೂಪದ ದುಷ್ಪರಿಣಾಮವು ಕ್ಯಾನ್ಸರ್ ವೇಗದ ಹೆಚ್ಚಳಕ್ಕೆ ಕಾರಣವೆನಿಸುತ್ತದೆ.ಶರೀರದ ಅಂಗಾಂಶಗಳಲ್ಲಿ ಅತ್ಯಧಿಕ ಶರವೇಗದಲ್ಲಿ ವ್ಯಾಪಿಸುವ ಕ್ಯಾನ್ಸರ್ ದೇಹದ ಎಲ್ಲೆಡೆಗೂ ತನ್ನ ಕಬಂದ ಬಾಹುಚಾಚುತ್ತದೆ.

ಪರಿವರ್ತನೆ ಅಥವಾ ರೂಪಾಂತರ:ರಸಾಯನಿಕ ಕಾರ್ಸಿನೊಜೆನ್ಸ್

ಕ್ಯಾನ್ಸರ್ 
ಧೂಮಪಾನದಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಜಾಸ್ತಿಯಲ್ಲದೇ ಇದು ಅದಕ್ಕೆ ಹತ್ತಿರದ ಸಂಬಂಧ ಹೊಂದಿದೆ.Source:NIH.

ಕ್ಯಾನ್ಸರ್ ನ ಸಮಗ್ರ ರೋಗನಿದಾನ ಪ್ರಕ್ರಿಯೆಯು ಮತ್ತೆDNA ದ ರೂಪಾಂತರವು ಜೀವಕೋಶಗಳ ಬೆಳವಣಿಗೆಗೆ ಮತ್ತುರೋಗ ಹರಡುವಿಕೆಗೆ ಕಾರಣಗಳನ್ನು ಹುಡುಕುತ್ತದೆ. DNA ರೂಪಾಂತರಗಳಿಗೆ ಕಾರಣವಾಗುವ ಪದಾರ್ಥಗಳನ್ನು ಮುಟಾಜೆನ್ಸ್ ಎಂದು ಕರೆಯುತ್ತಾರೆ,ಇವೇ ಕ್ಯಾನ್ಸರ್ ಗೆ ಕಾರಣವಾಗುವದರಿಂದ ಇವುಗಳನ್ನು ಕಾರ್ಸಿನೊಜೆನ್ಸ್ ಎನ್ನಲಾಗಿದೆ. ವಿಶಿಷ್ಟ ದ್ರವವಸ್ತುಗಳು ವಿಶಿಷ್ಟ ಮಾದರಿ ಅಥವಾ ನಮೂನೆಯ ಕ್ಯಾನ್ಸರ್ ಗೆ ಮೂಲವಾಗಿರುತ್ತವೆ. ತಂಬಾಕು ಹೊಗೆಸೊಪ್ಪಿನ ಸೇವನೆಯು ಮತ್ತು ಧೂಮಪಾನದಂತಹ ಹಲವಾರು ನಮೂನೆಯ ಕ್ಯಾನ್ಸರ್ ಗಳಿಗೆ ಎಡೆ ಮಾಡಿಕೊಡುತ್ತದೆ.ಇದು 90%ರಷ್ಟು ಶ್ವಾಸಕೋಶದ ಕ್ಯಾನ್ಸರ್ ಗೆ ದಾರಿ ಮಾಡಿಕೊಡುತ್ತದೆ. ಅಸ್ಬೆಸ್ಟೋಸ್ ಫೈಬರ್ ಗಳಿಗೆ ಬಹುಕಾಲದ ವರೆಗಿನ ಒಡ್ಡಿಕೊಳ್ಳುವಿಕೆಯು ಮೆಸೊಥೆಲಿಮಿಯಾ ಕ್ಯಾನ್ಸರ್ ಗೆ ಕಾರಣವಾಗುತ್ತದೆ.

ಮುಟಾಜೆನ್ಸ್ ಗಳು ಕಾರ್ಸಿನೊಜೆನ್ಸ್ ಗಳಾಗಿರುತ್ತವೆ ಆದರೆ ಕೆಲವು ಕಾರ್ಸಿನೊಜೆನ್ಸ್ ಗಳು ಮುಟಾಜೆನ್ಸ್ ಆಗಿರುವದಿಲ್ಲ. ( 0)ಆಲ್ಕೊಹಾಲ್ ಅಥವಾ ಮದ್ಯಸಾರವು ರಸಾಯನಿಕ ಕಾರ್ಸಿಜೆನಿಕ್ ಆದರೆ ಇದು ಮುಟಾಜೆನ. ಇಂತಹ ರಸಾಯನಿಕಗಳು ಕೋಶಗಳ ವಿಭಜನೆಯ ದರವನ್ನು ಉದ್ದೀಪನಗೊಳಿಸಿ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಅತ್ಯಂತ ವೇಗವಾಗಿ ಹರಡುವ ರೋಗಪೀಡಿತ ಪ್ರತಿರೂಪಗಳು ಪಕ್ಕದ ಕೋಶಗಳಿಗೆ ದುರಸ್ತಿಗೊಳ್ಳುವದಕ್ಕೆ ಅವಕಾಶವಿಲ್ಲದಂತೆ ಮಾಡುತ್ತವೆ.ಇಲ್ಲಿ ಹಾನಿಗೊಳಗಾದ DNA ಯು ಅದೇ ಅವಧಿಯಲ್ಲಿ DNA ಪ್ರತಿರೂಪವು ರೂಪಾಂತರದ ಪ್ರಮಾಣವನ್ನು ಅಧಿಕಗೊಳಿಸುತ್ತದೆ.

ದಶಕಗಳಿಂದ ನಡೆಯುತ್ತಿರುವ ಸಂಶೋಧನೆಗಳು ತಂಬಾಕು ಬಳಕೆ ಮತ್ತು ಶ್ವಾಸಕೋಶದಲ್ಲಿ ಕ್ಯಾನ್ಸರ,ಗಂಟಲು,ಜನನಾಂಗ,ತಲೆ,ಕುತ್ತಿಗೆ,ಜಠರ,ಮೂತ್ರಕೋಶ,ಮೂತ್ರಪಿಂಡ,ಅನ್ನನಾಳ ಮತ್ತು ಮೇದೋಜೀರಕ ಗ್ರಂಥಿಗಳು ಇದರ ಬಲಿಪಶುಗಳಾಗುತ್ತಿವೆ. ಕ್ಯಾನ್ಸರ್ ಗೆ ಕಾರಣವಾಗುವ ತಂಬಾಕು ಹೊಗೆಯು ಸುಮಾರು ಐವತ್ತರಷ್ಟು ಕಾರ್ಸಿನೊಜೆನ್ಸ್ ಗೆ ಕಾರಣವಾಗಿದೆ.ಇದರಲ್ಲಿ ನೈಟ್ರೊಸಮೈನ್ ಗಳು ಮತ್ತು ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೊಕಾರ್ಬನ್ ಗಳು ಸೇರಿವೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಮೂರು ಸಾವುಗಳಲ್ಲಿಒಂದು ಕ್ಯಾನ್ಸರ್ ನಿಂದ ಸಾವು ಸಂಭವಿಸುವ ವರದಿಗಳು ದಾಖಲಾಗಿವೆ,ವಿಶ್ವಾದ್ಯಂತದ ಅಂಕಿಅಂಶ ಗಮನಿಸಿದರೆ ಐದರಲ್ಲಿ ಒಬ್ಬ ಕ್ಯಾನ್ಸರ್ ರೋಗದಿಂದ ಸಾವನ್ನಪ್ಪುತ್ತಾನೆ. ನಿಜವಾಗಿಯೂ ಅಧ್ಯಯನದ ಪ್ರಕಾರ ಯುನೈಟೆಡ್ ಸ್ಟೇಟ್ಸ್ ನಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಾವಿನ ಪ್ರಮಾಣವು ಅಲ್ಲಿನ ಹೊಗೆಬತ್ತಿ ಸೇವನೆ ಧೂಮಪಾನದ ವಿವಿಧ ಪ್ರಕಾರವನ್ನು ಹೊಂದಿದೆ.ಆಶ್ಚರ್ಯಕರ ಅಂಶವೆಂದರೆ ಹೊಗೆಸೊಪ್ಪು ಸೇದುವ ಪ್ರಮಾಣ ಕಡಿಮೆಯಾದರೆ ಶ್ವಾಸಕೋಶದ ಕ್ಯಾನ್ಸರ್ ನಿಂದ ಮರಣಿಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಇತ್ತೀಚಿನ ವರದಿಗಳಲ್ಲಿ ಪುರುಷರ ಸಾವಿನ ಪ್ರಮಾಣವು ಶ್ವಾಸಕೋಶದ ಕ್ಯಾನ್ಸರ್ ನಿಂದ ಕಡಿಮೆಯಾಗಿದ್ದು ಅಲ್ಲಿನ ಧೂಮಪಾನದ ವಿರುದ್ಧದ ಪ್ರಚಾರಾಂದೋಲನವೇ ಕಾರಣವೆಂದು ವರದಿಗಳು ತಿಳಿಸಿವೆ. ಆದರೂ ವಿಶ್ವಾದ್ಯಂತ ಧೂಮಪಾನಿಗಳ ಸಂಖ್ಯೆ ಇನ್ನೂ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಕೆಲವು ಸಂಘಟನೆಗಳು ಇದನ್ನು ತಂಬಾಕು ಸೋಂಕುರೋಗ ಎಂದು ಬಣ್ಣಿಸಿವೆ.

ರೂಪಾಂತರ:ವಿಕಿರಣದ ಕಣಗಳು

ವಿಕಿರಣಗಳ ಕಣವಾಗುವಿಕೆ,ಅಂದರೆ ರಾಡಾನ್ ಅನಿಲ್ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ದೀರ್ಘಕಾಲದ ವರೆಗಿನ ಸೂರ್ಯಪ್ರಭೆಯಲ್ಲಿನ ನೇರಳಾತೀತ ವಿಕಿರಣಗಳಿಗೆ ಒಡ್ದಿಕೊಳ್ಳುವುದರಿಂದ ಸೂರ್ಯನ ಬಿಸಿಲು ಮೆಲೊನಿಮಾ ಮತ್ತು ಇತರೆ ಚರ್ಮವ್ಯಾಧಿಗಳಿಗೆ ಕಾರಣವಾಗುತ್ತದೆ.

ರೇಡಿಯೊ ತರಾಂಗಾಂತರಗಳನ್ನು ಹೊರಸೂಸುವ ಕಣಸೃಷ್ಟಿರಹಿತ ಮೊಬೈಲ್ ಫೋನ್ ಗಳ ದೀರ್ಘಕಾಲಿಕ ಬಳಕೆಯು ಕ್ಯಾನ್ಸರ್ ಗೆ ಕಾರಣ ಇವುಗಳಿಗೆ RF ರೇಡಿಯೊ ಫ್ರಿಕ್ವೆನ್ಸಿ ಎಂದು ಹೇಳಲಾಗುತ್ತದೆ ಇದರ ಸಂಪೂರ್ಣ ಅಧ್ಯಯನ ಇನ್ನೂ ಪ್ರಗತಿಯಲ್ಲಿದ್ದು ಇದೇ ಕಾರಣ ಎಂಬುದನ್ನು ನಿಖರವಾಗಿ ಹೇಳಲಾಗಿಲ್ಲ.

ವೈರಲ್ ಅಥವಾ ಬ್ಯಾಕ್ಟೀರಿಯಾಗಳ ಸೋಂಕು.

ಪ್ಯಾಥೊಜೆನ್ ಗಳ ಮೂಲಕ ಸೋಂಕು ಪಸರಿಸಿ ಕೆಲವು ಕ್ಯಾನ್ಸರ್ ಗಳಿಗೆ ಕಾರಣವಾಗುತ್ತದೆ. ಹಲವು ಕ್ಯಾನ್ಸರ್ ಗಳು ವೈರಲ್ ಸೋಂಕಿನ ಮೂಲಕ ಬರುತ್ತವೆ,ಇದು ಪ್ರಾಣಿಗಳಲ್ಲಿ ಕಂಡು ಬರುತ್ತದೆ,ಅದರಲ್ಲೂ ಪಕ್ಷಿಗಳಲ್ಲಿಯೂ,ಸಹ ಕಂಡು ಕಾಣ ಸಿಗುತ್ತದೆ. ಆದರೆ ಮಾನವರಲ್ಲಿನ ಈ ವೈರಸ್ ಗಳು ವಿಶ್ವಾದ್ಯಂತ ಸುಮಾರು 15%ರಷ್ಟು ಜನರನ್ನು ಈ ಸೋಂಕಿಗೆ ಈಡುಮಾಡುತ್ತಿವೆ ಎಂದೂ ಹೇಳಲಾಗಿದೆ. ಮನುಷ್ಯರಿಗೆ ತಗಲುವ ಸೋಂಕಿನ ಕ್ಯಾನ್ಸರ್ ಗಳಲ್ಲಿ ಹುಮನ್ ಪಪಿಲ್ಲೊಮಾವೈರಸ,ಹೆಪಟಿಟಿಸ್ B ಮತ್ತುಹೆಪಟಿಟಿಸ್ C ವೈರಸ,ಎಪೆಸ್ಟೇನ್ -ಬಾರ್ ವೈರಸ,ಮತ್ತು ಹುಮನ್ T-ಲಿಂಪೊಟ್ರೊಪಿಕ್ ವೈರಸ್. ತಂಬಾಕು ಸೇವನೆಯ ಹಾನಿಯ ನಂತರ ಕ್ಯಾನ್ಸರ್ ರೋಗದಿಂದ ಸಾವಿಗೀಡಾಗುವವರ ಸಂಖ್ಯೆ ಇದರಲ್ಲಿ ಎರಡನೆಯ ಸ್ಥಾನದಲ್ಲಿದೆ.ಇಂತಹ ಸೋಂಕು ವೈರಸ್ ಗಳಿಂದ ಬರುವ ಕ್ಯಾನ್ಸರ್ ಪ್ರಾಣಾಪಾಯವನ್ನು ತರುವುದಲ್ಲದೇ ಮನುಷ್ಯರಲ್ಲಿ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ವೈರಸ್ ಗಳ ಮೂಲಕ ಗೆಡ್ಡೆಗೆ ಕಾರಣವಾದ ಪ್ರಕಾರವನ್ನು ಎರಡು ವಿಭಾಗಳನ್ನಾಗಿ ವಿಂಗಡಿಸಲಾಗಿದೆ.ನಿಜಾರ್ಥದಲ್ಲಿ ಸೋಂಕು ಹರಡುವಿಕೆ ಅಥವಾ ನಿಧಾನ ಗತಿಯಲ್ಲಿ ಹರಡುವಿಕೆ . ನೇರವಾಗಿ ಹರಡುವ ವೆರಸ್ ಗಳು,ಆಂಕೊಜೆನ್ ಎಂಬ ವೈರಲ್ ಆಂಕೊಜೆನ್ (v-onc),ಮತ್ತು ಸೋಂಕಿತ ಜೀವಕೋಶವು ಕೂಡಲೇ (v-onc) ಆಗಿ ಪರಿವರ್ತನೆಯಾಗುತ್ತದೆ. ಇದಕ್ಕೆ ವಿರುದ್ಧವಾಗಿ ನಿಧಾನವಾಗಿ ತಗಲುವ ರೋಗದ ಸೋಂಕು ಪ್ರೊಟೊ-ಆಂಕೊಜೆನ್ ನಲ್ಲಿ ತನ್ನ ವಾಸ್ತವ್ಯ ಹೂಡಿ ಕೋಶಗಳನ್ನು ಆವರಿಸಿಕೊಳ್ಳುತ್ತದೆ. ಹೀಗೆ ವೈರಲ್ ಗಳ ಉತ್ತೇಜಕ ಅಥವಾ ಇನ್ನಿತರ ಅಂಶಗಳು ಪ್ರೊಟೊ-ಆಂಕೊಜೆನ್ ಮೂಲಕ ಕಾಯಿಲೆಗೆ ದಾರಿ ಮಾಡಿಕೊಡುತ್ತವೆ. ಇದು ಅನಿಯಂತ್ರಿತ ಜೀವಕೋಶಗಳ ವಿಭಜನೆಗೆ ಕಾರಣವಾಗುತ್ತದೆ. ವಿಶೇಷ ಪ್ರೊಟೊ-ಆಂಕೊಜೆನ್ ಮತ್ತು ಅದರ ಹತ್ತಿರದ ಅಂಗಾಂಶಗಳ ಮೇಲೆ ಇದು ನಿಧಾನಗತಿಯಲ್ಲಿ ಹರಡಿ ಈ ವೈರಸಗಳು ಗೆಡ್ಡೆಗಳ ಉದ್ಭವಕ್ಕೆ ದಾರಿ ಮಾಡುತ್ತವೆ.ಹೀಗೆ ನಿಜವಾಗಿಯೂ ಸೋಂಕು ತಗಲಿದ ಸಮಯಕ್ಕಿಂತ ಕಡಿಮೆ ಅವಧಿಯಲ್ಲಿ ರೋಗದ ಉಲ್ಬಣಾವಸ್ಥೆ ಮಟ್ಟ ವಿಸ್ತರಿಸುತ್ತದೆ.

ಹೆಪಟೈಟಸ್ ವೈರಸ್ ಗಳು ಹೆಪಟೈಟಸ್ B ಮತ್ತು ಹೆಪಟೈಟಸ್C ಗಳ ಸೋಂಕಿನಿಂದಾಗಿ ಜಠರ ಕ್ಯಾನ್ಸರ್ ಗೆ ಕಾರಣವಾಗುತ್ತದೆ.ಇದು ಹಳೆಯ ವೈರಲ್ ಸೋಂಕಿನಿಂದ ಉಲ್ಬಣವಾಗುವ ಸಾಧ್ಯತೆ ಇದೆ. ಇದರಲ್ಲಿಹೆಪಟೈಟಸ್ B ನಿಂದ 0.47%ರಷ್ಟು ರೋಗಿಗಳು (ಬಹುಮುಖ್ಯವಾಗಿ ಏಷಿಯಾ,ಸ್ವಲ್ಪ ಪ್ರಮಾಣದ ಕಡಿಮೆ ಎಂದರೆ ಉತ್ತರ ಅಮೆರಿಕಾದಲ್ಲಿ ಈ ಪಿಡುಗಿಗೆ ಬಲಿಯಾಗುವ ಸಾಧ್ಯತೆ ಇದೆ). ಹೆಪಟೈಟಸ್C ನಿಂದ ಸೋಂಕಿತರಾಗುವವರ ವಾರ್ಷಿಕ ಪ್ರಮಾಣ 1.4% ರಷ್ಟಾಗಿದ್ದು ಹಳೆಯ ಕ್ಯಾನ್ಸರ್ ಸೋಂಕಿನಿಂದ ದುಷ್ಪರಿಣಾಮವು ಅಧಿಕವಾಗಿರುತ್ತದೆ. ಜಠರದ ಯಕೃತ್ತಿನ ತೀವ್ರ ರೋಗವು ಹಳೆಯ ವೈರಲ್ ಹೆಪಟೈಟಿಸ್ ಸೋಂಕಿನಿಂದ ಅಥವಾ ಮದ್ಯಪಾನದ ಪರಿಣಾಮದಿಂದ ಜಠರ ಕ್ಯಾನ್ಸರ್ ತೀವ್ರವಾಗುತ್ತದೆ.ಹೀಗೆ ಯಕೃತ್ತ ರೋಗ ಮತ್ತು ವೈರಲ್ ಹೆಪಟೈಟಸ್ ಸೋಂಕು ಒಟ್ಟಿಗೆ ಸೇರಿದರೆ ಜಠರದ ಕ್ಯಾನ್ಸರ್ ಸಂಭಾವ್ಯತೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ವಿಶ್ವಾದ್ಯಂತ ಜಠರದ ಕ್ಯಾನ್ಸರ್ ಸಾಮಾನ್ಯವಾಗಿದ್ದು,ಅಲ್ಲದೇ ಇದು ತೀವ್ರ ಪ್ರಾಣಾಪಾಯವನ್ನು ತಂದೊಡ್ಡುತ್ತದೆ.ಯಾಕೆಂದರೆ ವೈರಲ್ ಹೆಪಟೈಟಸ್ ಹರಡುವಿಕೆ ಹಾಗು ಕಾಯಿಲೆಯು ಅಪಾಯಕಾರಿಯಾಗಿ ಬೆಳವಣಿಗೆ ಕಾಣುತ್ತದೆ.

ಕ್ಯಾನ್ಸರ್ ಕ್ಷೇತ್ರದ ಸಂಶೋಧನೆಗಳು ಈಗ ಇದಕ್ಕಾಗಿ ಲಸಿಕೆಯೊಂದನ್ನು ಪತ್ತೆ ಹಚ್ಚಿದ್ದು ಕ್ಯಾನ್ಸರ್ ನ ಅಸ್ತಿತ್ವವನ್ನು ಹೋಗಲಾಡಿಸಲು ಇದು ನೆರವಾಗುತ್ತದೆ. ಇಸವಿ 2006ರಲ್ಲಿ U.S.ನ ಆಹಾರ ಮತ್ತು ಔಷಧಿ ನಿರ್ವಹಣಾ ಆಡಳಿತವು ಮಾನವ ಶರೀರದ ಗೆಡ್ಡೆಯಲ್ಲಿನ ವೈರಸ್ ಗಳಿಂದ ಲಸಿಕೆಯೊಂದನ್ನು ಕಂಡುಹಿಡಿದು ಅದನ್ನು ಅನುಮತಿಸಿ ಅದಕ್ಕೆ ಗರ್ಡಾಸಿಲ್ ಎಂದೂ ಹೆಸರಿಸಲಾಯಿತು. ಈ ಲಸಿಕೆಯು ನಾಲ್ಕು ಪ್ರಕಾರದ HPVಗಳ ವಿರುದ್ಧ ರಕ್ಷಣೆ ನೀಡಿತು.ಇದು 70%ರಷ್ಟು ಯಕೃತ್ತಿಗೆ ಸಂಬಂಧಪಟ್ಟದ್ದು ಮತ್ತು90%ರಷ್ಟು ಅನುವಂಶೀಯ ಕೋಶಗಳಿಗೆ ಸಂಬಂಧಿಸಿದವುಗಳನ್ನು ತಡೆಗಟ್ಟಲಾಯಿತು. US ನ ಸೆಂಟರ್ ಫಾರ್ ಡಿಸೀಜ್ ಕಂಟ್ರೊಲ್ ಅಂಡ್ ಪ್ರಿವೆನ್ಶನ್ (CDC)ಮಾರ್ಚ್ 2007ರಲ್ಲಿ ರೋಗನಿರೋಧಕ ಚುಚ್ಚುಮದ್ದು ನೀಡುವ ಸಲಹಾ ಸಮಿತಿಯ (ACIP)ಶಿಫಾರಸ್ಸಿನ ಮೇರೆಗೆ 11–12 ವಯೋಮಾನದ ಮಹಿಳೆಯರು ಈ ಲಸಿಕೆ ಪಡೆಯಬಹುದು. ಅಂದರೆ ಅತ್ಯಂತ ಕಡಿಮೆ 9 ಹಾಗು ಗರಿಷ್ಟ 26ರ ವರೆಗಿನ ವಯೋಮಾನದವರು ಈ ಚುಚ್ಚುಮದ್ದನ್ನು ಮುಂಜಾಗ್ರತಾ ಕ್ರಮವಾಗಿ ಹಾಕಿಸಿಕೊಳ್ಳುವಂತೆ ಸಲಹೆ ಮಾಡಿತು.

ಇದೂ ಅಲ್ಲದೇ ಕೆಲವು ಸಂಶೋಧಕರು ಬ್ಯಾಕ್ಟೀರಿಯಾಗಳಿಗೂ ಕೆಲವು ಕ್ಯಾನ್ಸರ್ ಗಳಿಗೂ ಸಂಬಂಧವನ್ನು ಟಿಪ್ಪಣಿ ಮಾಡಿದರು. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ಹೊಟ್ಟೆಯ ಗೋಡೆ ಪದರಿನ ಹಳೆಯ ಸೋಂಕು ಹೆಲಿಕೊಬ್ಯಾಕ್ಟರ್ ಪಿಲೊರಿ ಮತ್ತು ಗ್ಯಾಸ್ಟ್ರಿಕ್ ಕ್ಯಾನ್ಸರ್ ನೊಂದಿಗೆ ಸೇರಿ ಇದನ್ನು ಉಲ್ಬಣಾವಸ್ಥೆಗೆ ತಂದು ನಿಲ್ಲಿಸುತ್ತದೆ. ಆದಾಗ್ಯೂ ಹೆಲಿಕೊಬ್ಯಾಕ್ಟರ್ ಸೋಂಕಿನಿಂದ ಈ ಕ್ಯಾನ್ಸರ್ ಉಲ್ಬಣಗೊಳ್ಳುತ್ತದೆ.ಇದರ ಲಕ್ಷಣವು ತೀರ ಸಾಮಾನ್ಯವಾದುದಲ್ಲದೇ ಸಂಭಾವ್ಯ ಬಹುತೇಕ ಕ್ಯಾನ್ಸರ್ ಬೆಳೆಯುತ್ತದೆ.

ಹಾರ್ಮೋನ್ ಗಳ ಅಸಮತೋಲನ

ಕೆಲವು ಹಾರ್ಮೋನಗಳು ಅದೇ ಮಾದರಿಯಲ್ಲಿ ಕೋಶಗಳನ್ನು ಕಾರ್ಸಿನೊಜೆನ್ಸ್ ಮೂಲಕ ಹೆಚ್ಚಿನ ಹಾರ್ಮೋನ್ ಗಳ ಬೆಳವಣಿಗೆಗೆ ಕಾರಣವಾಗುತ್ತದೆ;ಇದು ಸ್ಥಿರತೆಯನ್ನು ಕಾಯ್ದುಕೊಳ್ಳಲು ಹೋದರೂ ಅದು ಸಾಧ್ಯವಾಗದ ಕ್ರಿಯೆಯಾಗಿ ಪರಿಣಮಿಸುತ್ತದೆ. ರಕ್ತಕೋಶಗಳಲ್ಲಿನ ಶಕ್ತಿ ಪ್ರಭಾವವು ಕುಗ್ಗಿ ಅದು ಹಾರ್ಮೋನ್ ಗಳ ಮೂಲಕ ಎಂಡೊಮೆಟರಿಯಲ್ ಕ್ಯಾನ್ಸರ್ (ಜೀವಕೋಶದ ವ್ಯತ್ಯಾಸ)ಕ್ಯಾನ್ಸರ್ ಗೆ ದಾರಿ[ಸೂಕ್ತ ಉಲ್ಲೇಖನ ಬೇಕು]ಮಾಡಿಕೊಡಬಹುದು.

ರೋಗನಿರೋಧಕ ಪದ್ದತಿಯ ನಿಷ್ಕ್ರಿಯತೆ

}.HIV ಕೂಡಾ ಹಲವಾರು ಹಾನಿಕಾರಕ ಕೋಶಗಳ ನಿರ್ಮಿತಕ್ಕೆ ಕಾರಣವಾಗುತ್ತದೆ.ಉದಾಹರಣೆಗೆ ಕಾಪೊಸಿಯ ಸರ್ಕೊಮಾ,ನಾನ್ -ಹೊಡ್ಕಿನ್ ನ ಲಿಂಫೊಮಾ ಮತ್ತು[[HPV{/0) ಗಳು ಹಾನಿಕಾರಕಗಳು {0}ಗುದದ್ವಾರದ ಕ್ಯಾನ್ಸರ್]] ಮತ್ತು ಸೆರ್ವಿಕಲ್ ಕ್ಯಾನ್ಸರ್ ಗೆ ಹಾದಿ ಮಾಡುತ್ತವೆ. AIDS-ಸುದೀರ್ಘ ಕಾಯಿಲೆಯು ಇಂತಹ ಚಿಕಿತ್ಸೆಯಿಂದ ಅದರ ಲಕ್ಷಣ ತೋರುತ್ತದೆ. HIV ಯ ಪೀಡಿತರಲ್ಲಿ ರೋಗನಿರೋಧಕ ಶಕ್ತಿ ಕ್ಷೀಣತೆಯಿಂದ ಕ್ಯಾನ್ಸರ್ ಸೋಂಕಿಗೆ ಕಾರಣವಾಗುತ್ತದೆ. ಕೆಲವು ನಿಶ್ಚಿತ ರೋಗನಿರೋಧಕಗಳ ಕೊರತೆಯು ಸಾಮಾನ್ಯ ವ್ಯತ್ಯಾಸವಾಗಿರುವ ನಿರೋಧಕಕೊರತೆ ಮತ್ತುIgAಕೊರತೆಗಳು ಕೋಶಗಳ ನಾಶಕ್ಕೆ ಕಾರಣವಾಗಿ ಮಾರಣಾಂತಿಕವಾಗುವುದು ಸರ್ವೆಸಾಮಾನ್ಯ.

ಅನುವಂಶೀಯತೆ

ಬಹಳಷ್ಟು ಕ್ಯಾನ್ಸರ್ ಗಳಿಗೆ ಅನುವಂಶೀಯತೆ ಕಾರಣವಲ್ಲ. ಇಲ್ಲಿ ತೀರ ವಿರಳವಾದ ಉದಾಹರಣೆಯನ್ನು ಕಾಣಬಹುದು. ಹಲವಾರು ಕ್ಯಾನ್ಸರ್ ಲಕ್ಷಣಗಳನ್ನು ಅನುವಂಶೀಯ ಜೀವಕೋಶಗಳಲ್ಲಿ ಕಂಡು ಬಂದರೂ ಅದು ಹಿಂದಿನ ಕಾರಣವಾಗಲಾರದು.ಆದರೆ ವಂಶವಾಹಿನಿಗಳು ಕ್ಯಾನ್ಸರ್ ಗೆಡ್ಡೆ ರಚನೆಯಾಗದಂತೆ ತಡೆಯೊಡ್ಡುವ ಸಾಧ್ಯತೆಯನ್ನು ತಳ್ಳಿಹಾಕಲಾಗುವದಿಲ್ಲ. ಪ್ರಮುಖ ಉದಾಹರಣೆಗಳೆಂದರೆ:

  • ಕೆಲವು ರೂಪಾಂತರಗೊಂಡ ಜೀವಕೋಶಗಳು BRCA1 ಮತ್ತುBRCA2 ಲಕ್ಷಣಗಳು ಸ್ತನ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ಗಳ ಅಪಾಯವನ್ನು ಅಧಿಕಗೊಳಿಸಬಹುದಾಗಿದೆ.
  • ವಂಶವಾಹಿನಿಗೆ ಸಂಬಂಧಪಟ್ಟ ಅಂಗಾಂಶಗಳು ಗುಣಿತ ಎಂಡೊಕ್ರೈನ್ ನಿಯೊಪ್ಲಾಸಿಯಾ ಗೆಡ್ಡೆಗಳು ಬೆಳೆಯುವ ಸಾಧ್ಯತೆ ಇದೆ.(ಪುರುಷರು ವಿಧಗಳು 1, 2a, 2b)
  • ಲಿ-ಫ್ರಾಮೇನಿ ಲಕ್ಷಣ (ವಿವಿಧ ಗೆಡ್ಡೆಗಳು ಆಸ್ಟಿವೊ ಸರ್ಕೊಮಾ,ಸ್ತನ ಕ್ಯಾನ್ಸರ, ಸಾಫ್ಟ್ ಟಿಶ್ಯು ಸರ್ಕೊಮಾ,ಮೆದುಳಿನ ಗೆಡ್ಡೆಗಳು ಅಂದರೆ p53ನ ಕೋಶಗಳ ರೂಪಾಂತರದಿಂದ ಈ ಚಿನ್ಹೆಗಳನ್ನು ತೋರಿಸಬಹುದು).
  • )ಟರ್ಕೊಟ್ ಲಕ್ಷಣ (ಮೆದಳು ಗೆಡ್ದೆಗಳು ಮತ್ತು ಕೊಲೊನಿಕ್ ಪೊಲಿಪೊಸಿಸ್ )
  • ಕುಟುಂಬದ ಅಂದರೆ ಫ್ಯಾಮಿಲೈಲ್ ಅಡೆನೊಮೆಟಸ್ ಪೊಲಿಪೊಸಿಸ್ ಇದುAPC ಎಂಬ ವಂಶವಾಹಿನಿಯ ರೂಪಾಂತರವು ಕೊಲೊನ್ ಕಾರ್ಸಿನೊಮಾಗೆ ಅನುವು ಮಾಡಿಕೊಡುತ್ತದೆ.ಆದರೂ ಇದನ್ನು ಇಲ್ಲಿ ಆರಂಭಗೊಳ್ಳುವ ಕಾಯಿಲೆಯ ಚಿನ್ಹೆಯನ್ನು ಗಮನಿಸಬಹುದಾಗಿದೆ.
  • ವಂಶವಾಹಿನಿಯ ನಾನ್ ಪೊಲಿಪೊಸಿಸ್ ಕೊಲೊರೆಕ್ಟಲ್ ಕ್ಯಾನ್ಸರ್ (HNPCC,ಅಲ್ಲದೇ ಇದನ್ನು ಲಿಂಚ್ ಸಿಂಡ್ರೊಮ)ಎನ್ನುತ್ತಾರೆ.ಇದರಲ್ಲಿ ಕೊಲೊನ್ ಕ್ಯಾನ್ಸರ,ಯೋನಿ ಕ್ಯಾನ್ಸರ,ಗ್ಯಾಸ್ಟ್ರಿಕ್ ಕ್ಯಾನ್ಸರ,ಮತ್ತುಅಂಡಾಶಯದ ಕ್ಯಾನ್ಸರ,ಗಳು ಕೊಲೊನ್ ಪೊಲಿಪ್ಸ್ ನ ಗುಣಲಕ್ಷಣಗಳಿಲ್ಲದೇ ಕಂಡು ಬರುತ್ತದೆ.
  • ರೆಟಿನೊ ಬ್ಲಾಸ್ಟೊಮಾ,ಅಂದರೆ ಚಿಕ್ಕಮಕ್ಕಳಲ್ಲಿ ವಂಶವಾಹಿನಿಯ ಜೀವಕೋಶಗಳಿಂದ ರೂಪಾಂತರಗೊಂಡು ರೆಟಿನೊ ಬ್ಲಾಸ್ಟೊಮಾ ಆಗಿ ಮಾರ್ಪಡುತ್ತದೆ.
  • ಡೌನ್ ಸಿಂಡ್ರೊಮ್ ಅಂದರೆ ವಿಪರೀತ ಲಕ್ಷಣದ ರೋಗಿಗಳು,ಹೆಚ್ಚುವರಿ ಕ್ರೊಮೊಸೊಮ್ ಹೊಂದಿದ್ದಾಗ,ಅವರಲ್ಲಿ ನ್ಯುಮೋನಿಯಾ,ಲ್ಯುಕೇಮಿಯಾ,ಮತ್ತು ಟೆಸ್ಟಿಕುಲರ್ ಕ್ಯಾನ್ಸರ್(ವೃಷಣ) ಗಳ ಉಲ್ಬಣವಾಗುವ ಸಾಧ್ಯತೆ ಅಧಿಕವಾಗಿರುತ್ತದೆ ಆದರೂ ಕೂಡಾ ಇದರೊಳಗಿನ ವ್ಯತ್ಯಾಸಗಳನ್ನು ಕಂಡು ಹಿಡಿದು ಇನ್ನೂ ತಿಳಿಯಲು ಶಕ್ಯವಾಗಿಲ್ಲ.

ಬೇರೆ ಕಾರಣಗಳು

ಕೆಲವು ಅಪವಾದಗಳನ್ನು ಅಂದರೆ ಗರ್ಭವತಿಯರಲ್ಲಿವಂಶವಾಹಿನಿಯ ಸಂಭವನೀಯತೆಯಾದರೆ ಇನ್ನು ಅಂಗಾಂಗಳ ದಾನಿಗಳಿಂದ ಬರುವ ಸಾಧ್ಯತೆ ಇರುವುದಾದರೂ ಸಾಮಾನ್ಯವಾಗಿ ಕ್ಯಾನ್ಸರ್ ಸೋಂಕಿನಿಂದ ಹರಡಲಾರದು. ಇದಕ್ಕೆ ಮುಖ್ಯ ಕಾರಣವೆಂದರೆ MHCಯ ಮೂಲಕ ಅಂಗಾಂಶಗಳ ಜೋಡಣೆ ನಂತರ ತಿರಸ್ಕೃತವಾದ ಸಂದರ್ಭದಲ್ಲಿಇಲ್ಲವೇ ಅದನ್ನುಭರಿಸುವ ಶಕ್ತಿ ಇರದ ಕಾರಣ ಅಥವಾ ಅಸಾಮರ್ಥ್ಯ ದಿಂದಾಗಿ ಇದು ಸಾಕಷ್ಟು ಉಲ್ಬಣವಾಗುತ್ತದೆ. ಮಾನವರಲ್ಲಿ ಮತ್ತು ಇತರ ಕಶೇರುಕಗಳಲ್ಲಿ ರೋಗ ನಿರೋಧಕ ಪದ್ದತಿಯುMHC ಯ ಪ್ರತಿಜನಕವನ್ನು ಬಳಸಿ "ಅಲ್ಲಿನ" ಮತ್ತು "ಬಾಹ್ಯ" ಕೋಶಗಳ ಬಗ್ಗೆ ತಿಳಿದುಕೊಳ್ಳುತ್ತದೆ.ಈ ಪ್ರತಿಜನಕ ಅಥವಾ ಆಂಟಿಜೆನ್ಸ್ ಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆಹೊಂದುತ್ತವೆ. ಯಾವಾಗ ಬಾಹ್ಯ ಪ್ರತಿಜನಕಗಳು ದಾಳಿ ನಡೆಸುತ್ತವೆಯೋ,ಆಗ ರೋಗನಿರೋಧಕ ವ್ಯೂಹವು ಸೂಕ್ತ ಕೋಶಗಳೊಂದಿಗೆ ಪ್ರತಿಕ್ರಿಯಿಸುತ್ತದೆ. ಇಂತಹ ಪ್ರತಿಕ್ರಿಯೆಗಳು ಗೆಡ್ಡೆಗಳ ರಚನೆಯನ್ನು ವ್ಯವಸ್ಥಿತವಾಗಿ ತಡೆಯುತ್ತವೆ ಅಲ್ಲದೇ ಗೆಡ್ಡೆ ಬೆಳೆಯುವ ಕೋಶಗಳನ್ನು ಹೊಡೆದು ಹಾಕುವಲ್ಲಿ ಯಶಸ್ವಿಯಾಗುತ್ತವೆ. ಯುನೈಟೈಡ್ ಸ್ಟೇಟ್ಸ್ ನಲ್ಲಿ,ಸುಮಾರು 3,500 ಗರ್ಭಿಣಿಯರಲ್ಲಿ ವಾರ್ಷಿಕ ಈ ರೋಗದ ವಿಷಮತೆ ಕಾಣಿಸಿಕೊಳ್ಳುತ್ತದೆ.ಇಲ್ಲಿ ತೀವ್ರತರವಾದ ಲ್ಯುಕೇಮಿಯಾ,ಲಿಂಫೊಮಾ(ಹಾನಿಕಾರಕ ಗೆಡ್ಡೆ),ಮೆಲೊನಿಮಾ ಮತ್ತು ಕಾರ್ಸಿನೊಮಾಗಳು ತಾಯಿಯ ಗರ್ಭಕೋಶದಲ್ಲಿರುವುದನ್ನು ಗುರುತಿಸಲಾಗಿದೆ. ಅಂಗಾಂಶಗಳ ದಾನಿಗಳಿಂದ ಗೆಡ್ಡೆಗಳು ಒಂದೆಡೆಯಿಂದ ಇನ್ನೊಂದೆಡೆಗೆ ಕಸಿ ಮಾಡುವಾಗ ವಿರಳವಾಗಿ ಸೋಂಕಿಗೆ ಕಾರಣವಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಅಂಗಾಂಶ ಕಸಿಯ ಕೋಶಗಳನ್ನು ರೂಪಾಂತರದಲ್ಲಿ ಅಳವಡಿಸಿದಾಗ ಹಾನಿಕಾರಕ ಮೆಲೊನಿಮಾ ಗೆಡ್ಡೆಗೆ ಅನುವು ಮಾಡಿಕೊಡುತ್ತದೆ.ಇದು ಅಂಗಾಂಶದ ಜೋಡಣೆ ಸಂದರ್ಭದಲ್ಲಿ ಗೊತ್ತಾಗದಂತೆ ಇರುವುದಲ್ಲದೇ ಇಂತಹ ಪ್ರಕರಣಗಳು ಸವಾಲೊಡ್ಡುವ ನಿಟ್ಟಿನಲ್ಲಿ ಅಸ್ತಿತ್ವ ಪಡೆಯುತ್ತವೆ. ಪ್ರಾಣಿಗಳ ಒಂದು ಕೋಶದಿಂದ ಇನ್ನೊಂದಕ್ಕೆ ಕ್ಯಾನ್ಸರ್ ವರ್ಗಾವಣೆಯಾಗುತ್ತದೆ,ಎಲ್ಲಿಯವರೆಗೆ ಎರಡೂ ಕೋಶಗಳು ಹಿಸ್ಟೊಕಾಂಪಿಟ್ಯಾಬಿಲಿಟಿ (ಅನುವಂಶೀಯ ಸಾಮರ್ಥ್ಯ)ಜೀವಕೋಶಗಳನ್ನು ಹೊಂದಿರುತ್ತವೆಯೋ ಅಲ್ಲಿಯವರೆಗೆ ಇದರ ಅಪಾಯವನ್ನು ಎದುರಿಸಬೇಕಾಗುತ್ತದೆ.ಆದರೆ ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಇದು ಸಿದ್ದವಾದರೂ ಪ್ರಸ್ತುತದಲ್ಲಿ ಇದು ಅಸಾಧ್ಯವೇ ಎಂದು ಹೇಳಲಾಗುತ್ತದೆ.

ಇನ್ನು ಮಾನವರಲ್ಲದವರಲ್ಲಿ ಅಂದರೆ ಪ್ರಾಣಿಗಳಲ್ಲಿ ಸೋಂಕಿನ ಮೂಲಕ ಕ್ಯಾನ್ಸರ್ ಗೆಡ್ಡೆಯ ವೈರಸ್ ಗಳು ಹರಡುವ ಸಾಧ್ಯತೆ ಇದೆ. ಈ ಲಕ್ಷಣವು ನಾಯಿಗಳಲ್ಲಿ ಕಾಣಸಿಗುತ್ತದೆ.ಸ್ಟಿಕರ್ ಸರ್ಕೊಮಾ ಇದನ್ನು ನಾಯಿಯ ಸೋಂಕಿನ ಲೈಂಗಿಕ ಗೆಡ್ಡೆಯ ರೋಗ ಅದಲ್ಲದೇ ತಾಸ್ಮೇನಿಯನ್ನಲ್ಲಿನ ಡೆವಿಲ್ಸ್ ಡೆವಿಲ್ ಫೇಸಿಯಲ್ ಟ್ಯುಮರ್ ಡಿಸೀಜ್ ಕೂಡಾ ಹರಡುವ ಸಾಧ್ಯತೆ ಹೆಚ್ಚಾಗಿದೆ.

ರೋಗ-ಶರೀರ ವಿಜ್ಞಾನ

ಕ್ಯಾನ್ಸರ್ 
ಸರಣಿ ರೂಪಾಂತರಗಳ ನಂತರ ಕ್ಯಾನ್ಸರ್ ಉಂಟಾಗುವುದು.ಪ್ರತಿಯೊಂದು ರೂಪಾಂತರವು ಕೋಶದ ವರ್ತನೆಯನ್ನು ಬದಲಿಸುತ್ತದೆ.

ಮೂಲಭೂತವಾಗಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆ ನಿಯಂತ್ರಣದ ಪ್ರಕ್ರಿಯೆಯಲ್ಲಿನ ಒಂದು ರೋಗ ಎಂದು ಹೇಳಲಾಗುತ್ತದೆ. ಸಾಮಾನ್ಯ ಜೀವಕೋಶಗಳು ಕ್ಯಾನ್ಸರ್ ಆಗಿ ಮಾರ್ಪಾಡಾಗಲು ಜೀವಕೋಶಗಳ ಬೆಳವಣಿಗೆ ನಿಯಂತ್ರಿಸುವ ಅನುವಂಶೀಯ ಕೋಶಗಳು ವ್ಯತ್ಯಾಸದ ಮಾದರಿಯಲ್ಲಿ ಬದಲಾವಣೆಯಾಗಬೇಕಾಗುತ್ತದೆ. ಅನುವಂಶೀಯ ಬದಲಾವಣೆಗಳು ಹಲವಾರು ಮಟ್ಟದಲ್ಲಿ ಸಂಭವಿಸುವ ಸಾಧ್ಯತೆ ಇದೆ.ಸಂಪೂರ್ಣ ಕ್ರೊಮೊಸೊಮ್ ಗಳ ರೂಪಾಂತರವು DNA ನ ಏಕ ಕೋಶದ ನ್ಯುಕ್ಲಿಟೈಡ್ ಗೆ ಬದಲಾವಣೆಗೊಳ್ಳುತ್ತದೆ. ಇಲ್ಲಿ ಇಂತಹ ಬದಲಾವಣೆಗಳಿಂದ ಪರಿಣಾಮ ಎದುರಿಸುವ ಎರಡು ವಿಶಾಲ ವರ್ಗೀಕರಣದ ಅನುವಂಶೀಯ ಕೋಶಗಳಿವೆ. ಆಂಕೊಕೋಶಗ್ರಂಥಿಗಳು ಉನ್ನತ ಮಟ್ಟದ ವಂಶವಾಹಿನಿಗಳು ಅಥವಾ ಮಾರ್ಪಾಡಾದ ವಂಶವಾಹಿನಿ ಜೀವಕೋಶಗಳು ನೂತನ ಗುಣಲಕ್ಷಣಗಳನ್ನು ಹೊಂದಿರುವದರಿಂದ ಈ ಗ್ರಂಥಿಗಳು ಅಷ್ಟಾಗಿ ರೋಗಕ್ಕೆ ತುತ್ತಾಗುವದಿಲ್ಲ. ಇಂತಹ ಬೇರೆ ಪ್ರಕರಣಗಳಲ್ಲಿ ಈ ಅನುವಂಶೀಯ ಕೋಶಗಳಿಂದ ಏಕರೂಪದ ಕ್ಯಾನ್ಸರ್ ಕೋಶಗಳು ಬೆಳವಣಿಗೆ ಪಡೆಯುತ್ತವೆ. ಗೆಡ್ಡೆಗಳನ್ನು ಹಿಮ್ಮೆಟ್ಟಿಸುವ ಅನುವಂಶೀಯ ಕೋಶಗಳು ಜೀವಕೋಶದ ವಿಭಜನೆ,ಅವುಗಳ ಉಳಿವು ಅಥವಾ ಇನ್ನುಳಿದ ಕ್ಯಾನ್ಸರ್ ಕೋಶಗಳ ಲಕ್ಷಣಗಳನ್ನು ಹೊಂದಿರುತ್ತದೆ. ಗೆಡ್ಡೆ ತಡೆಯುವ ವಂಶವಾಹಿನಿ ಕೋಶಗಳನ್ನು ಕ್ಯಾನ್ಸರ್ ಉತ್ತೇಜಿಸುವ ಅನುವಂಶೀಯ ಬದಲಾವಣೆಗಳು ಅದನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಹಲವಾರು ವಂಶವಾಹಿನಿಯ ಕೋಶಗಳಲ್ಲಿ ಸಹಜ ಕೋಶವನ್ನು ಕ್ಯಾನ್ಸರ್ ಕೋಶವನ್ನಾಗಿ ಪರಿವರ್ತಿಸಲು ಹಲವಾರು ವಂಶವಾಹಿನಿಯ ಕೋಶಗಳಲ್ಲಿ ಬದಲಾವಣೆಯ ಅಗತ್ಯವಿದೆ.

ವಂಶವಾಹಿನಿಯಲ್ಲಿನ ವರ್ಗೀಕರಣವು ಇಂದು ಹಲವು ಜೆನೊಮಿಕ್ ಬದಲಾವಣೆಗೆ ಒಳಪಟ್ಟು ಅದು ಕ್ಯಾನ್ಸರ್ ಕೋಶಗಳ ಕೊಡುಗೆಗೆ ಕಾರಣವಾಗುತ್ತದೆ. ಇವೆಲ್ಲಬದಲಾವಣೆಗಳು ರೂಪಾಂತರಗಳು,ಅಥವಾ ಜೆನೊಮಿಕ್ DNAದ ಸರಣಿಯ ನ್ಯುಕ್ಲೆಟೈಡ್ ನಲ್ಲಿ ಸಂಭವಿಸುತ್ತವೆ.ಆದರೆ ಎನೊಪ್ಲೊಡಿ ಅಂದರೆ ಅಸಹಜ ಸಂಖ್ಯೆ ಕ್ರೊಮೊಸೊಮ್ ಗಳು ಇದರಲ್ಲಿ ಬದಲಾವಣೆ ಹೊಂದಿದರೂ ಅದು ರೂಪಾತರವಲ್ಲ.ಅದರಲ್ಲಿನ ಕೋಶ ಹಾನಿ ಅಥವಾ ಹೆಚ್ಚಳವು ಮಿಟೊಸಿಸ್ ನಲ್ಲಿನ ಇದರ ಬದಲಾವಣೆಗೆ ಅದು ಪೂರಕವಾಗಿರುವದಿಲ್ಲ.

ದೊಡ್ಡ ಪ್ರಮಾಣದ ರೂಪಾಂತರಗಳು ಕ್ರೊಮೊಸೊಮ್ ನ ಕಣ್ಮರೆ ಅಥವಾ ಭಾಗಶ:ನಾಶವಾಗುತ್ತದೆ. ಜೆನೊಮಿಕ್ ಉಲ್ಬಾಣವು ಕೋಶವು ಹಲವಾರು ಪ್ರತಿಕೋಶಗಳ ನಿರ್ಮಿತಿಗೆ ಕಾರಣವಾಗುತ್ತದೆ.(ಹಲವು ಬಾರಿ 20 ಅಥವಾ ಹೆಚ್ಚು)ಇದು ಸಣ್ಣ ಕ್ರೊಮೊಸೊಮಗಳ ಅಕ್ಕಪಕ್ಕದ ಕೋಶಗಳಲ್ಲಿ ಆಂಕೊಜೆನ್ಸ ಮತ್ತು ಅಲ್ಲಿನ ಅನುವಂಶಿಕ ಕೋಶಗಳ ಮೇಲ;ಎ ಪರಿಣಾಮ ಬೀರುತ್ತದೆ. ಎರಡು ಪ್ರತ್ಯೇಕ ಕ್ರೊಮೊಸೊಮಗಳು ತಮ್ಮ ಸ್ಥಳ ಬದಲಾಯಿಸಿದಾಗ ಅಲ್ಲಿ ಅಸಹಜತೆಯಿಂದಾಗಿ ಹಾನಿಕಾರಕ ಗುಣಲಕ್ಷಣಗಳಿಗೆ ಕಾರಣವಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ:ಫಿಲೆಡೆಲ್ಫಿಯಾ ಕ್ರೊಮೊಸೊಮ್ ಅಥವಾ 9ಮತ್ತು 22ರ ಕ್ರೊಮೊಸೊಮ್ ಗಳ ಸ್ಥಳ ಬದಲಾವಣೆಯು ಕ್ರೊನಿಕ್ ಮೈಲೊಜಿನಸ್ ಲ್ಯುಕೇಮಿಯಾದಲ್ಲಿ ಉಂಟಾಗುತ್ತದೆ.ಇದರ ಪರಿಣಾಮವಾಗಿBCR-abl ಗಳ ಉತ್ಪಾದನೆಗೆ ಕಾರಣವಾಗುತ್ತದೆ.ಇಲ್ಲಿ ಪ್ರೊಟೀನ್ ಗಳ ಉತ್ತೇಜನವು ಒಂದು ಆಂಕೊಜೆನಿಕ್ ಟೈರೊಸೈನ್ ಕಿನಾಸೆಯ ಫಲಿತಾಂಶಗಳನ್ನು ಕಾಣಬಹುದಾಗಿದೆ.

ಸಣ್ಣ ಪ್ರಮಾಣದ ರೂಪಾಂತರಗಳು,ಅಳಿಸಿಹೋಗುವುದು ಮತ್ತು ಅದರೊಳಗೆ ಸೇರಿಕೊಳ್ಳುವವುಗಳಿಂದ ತಳಿಯ ಪ್ರವರ್ತಕ ಮತ್ತು ಅದರ ಸಂಭವನೀಯಗಳ ಅಭಿವ್ಯಕ್ತಿಯು ಪ್ರಕರಣಗಳ ಕೋಡಿಂಗ್ ಇಲ್ಲವೆ ಅದರ ಕ್ರಿಯೆ ಅಥವಾ ಪ್ರೊಟೀನ್ ಗಳ ಉತ್ಪಾದನಾ ಸ್ಥಿರತೆಯನ್ನು ಬದಲಾಯಿಸಬಹುದಾಗಿದೆ. DNA ವೈರಸ್ ಅಥವಾ ಪ್ರತಿವೈರಸ್ ನಿಂದ ತಳಿಯ ಏಕಕೋಶವು ಜೆನೊಮಿಕ್ ಸಮಗ್ರತೆಯ ವಸ್ತುವನ್ನುಕ್ಯಾನ್ಸರ್ ವೈರಸ್ ಪ್ರವೇಶಿಸಿ ತನ್ನ ಪ್ರತಾಪವನ್ನು ತೋರಬಹುದು.ಇಲ್ಲಿ ಪೀಡಿತ ಕೋಶ ಮತ್ತು ಅದರ ಮುಂದಿನವುಗಳ ಕೆಲಸ ಸಹಕಾರಿಯಾಗಬಹುದು.

ನಿಯಂತ್ರಣ

ಕ್ಯಾನ್ಸರ್ ನಿರ್ಮೂಲನೆಯ ವ್ಯಾಖ್ಯಾನವು ಕ್ಯಾನ್ಸರ್ ಸಂದರ್ಭಗಳನ್ನು ತಡೆಗಟ್ಟುವದೇ ಆಗಿದೆ. ಬಹಳಷ್ಟು30%ರಷ್ಟು ಕ್ಯಾನ್ಸರ್ ಪಿಡುಗನ್ನು ತಪ್ಪಿಸಬಹುದಾಗಿದೆ.ಇದರಲ್ಲಿ ಅಪಾಯಕಾರಿಯಾಗಿರುವ ಸಂಭವನೀಯ ಕಾರಣಗಳಾದ ತಂಬಾಕು,ಅತಿಯಾದ ತೂಕ,ಅಥವಾ ಅಧಿಕ ಕೊಬ್ಬಿನಾಂಶ,ಕಡಿಮೆ ಹಣ್ಣು ಮತ್ತು ತರಕಾರಿ ಸೇವನೆ,ದೈಹಿಕ ವ್ಯಾಯಾಮದ ಕೊರತೆ,ಮದ್ಯಪಾನ,ಲೈಂಗಿಕ ಸೋಂಕಿನ ಕಾಯಿಲೆ,ವಾಯು ಮಾಲಿನ್ಯ ಇವುಗಳಿಂದ ದೂರವಿದ್ದಷ್ಟು ಇದನ್ನು ತಡೆಗಟ್ಟಬಹುದು. ಇದರಿಂದ ಕಾರ್ಸಿನೊಜಿನ್ ಗಳನ್ನು ದೂರ ಇಡಬಹುದು ಇಲ್ಲವೆ ಕೋಶಗಳಲ್ಲಿನ ಕ್ಯಾನ್ಸರ್ ಮಾರ್ಪಾಡಿನ ಬದಲಾವಣೆಯನ್ನು ಹಾನಿಕಾರವಾಗದಂತೆ ನಿರ್ಭಂದಿಸಬಹುದು.ಇದಕ್ಕಾಗಿ ಜೀವನಶೈಲಿ ಬದಲಾವಣೆ ಅಥವಾ ಆಹಾರ ಪದ್ದತಿ ಕ್ಯಾನ್ಸರ್ ಕಾರಕಗಳನ್ನು ದೂರ ಇಡಬಹುದಲ್ಲದೇ ವೈದ್ಯಕೀಯ ಸೌಕರ್ಯಗಳ ಸಕಾಲಿಕ ಬಳಕೆ ಹಾಗು( ಕೆಮೊಪ್ರೆವೆನ್ಶನ್ ಚಿಕಿತ್ಸೆಗಳನ್ನುಕಾಲಕಾಲಕ್ಕೆ ಪಡೆದರೆ ಈ ಮಾರಕ ಕಾಯಿಲೆಯನ್ನು ತಡೆಯಬಹುದು). ಎಪಿಡೆಮಿಯೊಜಿಕಲ್ (ಪ್ರಾಥಮಿಕ ಚಿಕಿತ್ಸೆ) ಪರಿಕಲ್ಪನೆಯು ಇದರ ಪ್ರಥಮ ನಿರ್ಮೂಲನಾ ಕ್ರಮವಾಗಿದೆ.ಕೆಲವು ಜನರಿಗೆ ಪ್ರಾರಂಭದಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಅಂತವರಿಗೆ ಪ್ರಾಥಮಿಕ ರೋಗಪತ್ತೆ ಕಾರ್ಯದೊಂದಿಗೆ ಎರಡನೆಯ ನಿರ್ಮೂಲನಾ ಕ್ರಮದ ಅನುಷ್ಟಾನಕ್ಕಾಗಿ ಅಗತ್ಯ ಮುನ್ನೆಚ್ಚರಿಕಾ ಸೂಚನೆಗಳನ್ನು ನೀಡಬಹುದಾಗಿದೆ.ಹಿಂದಿನ ರೋಗ ಲಕ್ಷಣಗಳ ಆಧಾರದ ಮೇಲೆ ಹೆಚ್ಚಿನ ಔಷೋಧಪಚಾರ ನೀಡಲಾಗಿದೆ.

ಕೆಂಪು ಈರುಳ್ಳಿ

ಕೆಂಪು ಈರುಳ್ಳಿಯ ಸೇವನೆಯು ಕ್ಯಾನ್ಸರ್‌ ತಡೆಗಟ್ಟಲು ನೆರವಾಗಲಿದೆ ಎಂಬುದು ಹೊಸ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಕೆಂಪು ಈರುಳ್ಳಿಯಲ್ಲಿರುವ ಔಷಧೀಯ ಅಂಶಗಳು ಟ್ಯೂಮರ್‌ ಅನ್ನು ನಾಶಪಡಿಸುವಂಥ ಸಾಮರ್ಥ್ಯ ಹೊಂದಿವೆ ಎಂದು ಕೆನಡಾದ ಗುಲೆಫ್ ವಿಶ್ವವಿದ್ಯಾಲಯದ ಸಂಶೋಧಕ ಅಬ್ದುಲ್‌ಮೊನೆಮ್ ಮುರಯ್ಯನ್ ತಿಳಿಸಿದ್ದಾರೆ. ಕೆಂಪು ಈರುಳ್ಳಿ ಮಾತ್ರವಲ್ಲದೆ ಇತರ ತಳಿಯ ಈರುಳ್ಳಿಯಲ್ಲಿಯೂ ಕ್ಯಾನ್ಸರ್‌ ಕೋಶಗಳನ್ನು ನಾಶಪಡಿಸುವ ಶಕ್ತಿ ಇದೆ ಎಂದು ಅವರು ತಿಳಿಸಿದ್ದಾರೆ.
  • ದೊಡ್ಡ ಕರುಳಿನ ಕ್ಯಾನ್ಸರ್‌ ಕೋಶಗಳನ್ನು ಬಳಸಿಕೊಂಡು ಅಧ್ಯಯನ ನಡೆಸಲಾಗಿತ್ತು. ವಿವಿಧ ತಳಿಯ ಈರುಳ್ಳಿಯಲ್ಲಿರುವ ಔಷಧೀಯ ಅಂಶಗಳನ್ನು ದೊಡ್ಡ ಕರುಳಿನ ಕ್ಯಾನ್ಸರ್‌ ಕೋಶಗಳ ಜತೆ ನೇರ ಸಂಪರ್ಕಕ್ಕೆ ಬರುವಂತೆ ಇರಿಸಿ ಅಧ್ಯಯನ ನಡೆಸಲಾಗಿತ್ತು. ಈ ವೇಳೆ, ಕೆಂಪು ಈರುಳ್ಳಿಯಲ್ಲಿರುವ ಔಷಧೀಯ ಅಂಶಗಳು ಕ್ಯಾನ್ಸರ್‌ಕೋಶಗಳನ್ನು ನಾಶಪಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದು ಕಂಡುಬಂದಿತ್ತು.

ಸುಧಾರಿತ ("ಜೀವನ ಶೈಲಿ")ಅಪಾಯಕಾರಿ ಗಂಡಾಂತರ ಅಂಶಗಳು

ವಿಶ್ವಕ್ಯಾನ್ಸರ್ ದಿನ ಫೆ. 4
(2017)
  • ಹಲವಾರು ವರ್ಷಗಳಿಂದ ಸಾವಿಗೆ ಆರನೇ ಕಾರಣವಾಗಿದ್ದ ಕ್ಯಾನ್ಸರ್ ಮುಂದುವರೆದ ದೇಶಗಳಲ್ಲಂತೂ ಈಗ ಎರಡನೇ ಸ್ಥಾನಕ್ಕೇರಿದೆ. ಲಿಂಗಬೇಧವಿಲ್ಲದೆ, ವಯೋಬೇಧವಿಲ್ಲದೆ ನಿರ್ದಿಷ್ಟ ಕಾರಣಗಳಿಲ್ಲದೆ ಯಾವುದೇ ಅಂಗವನ್ನು ಬಾಧಿಸಬಹುದಾದ ಕಾಯಿಲೆ ಯಾವುದೆಂದು ಕೇಳಿದರೆ, ಉತ್ತರವೇ ಕ್ಯಾನ್ಸರ್.
  • ಕ್ಯಾನ್ಸರ್‌ ಎಂದರೆ:
  • ಕ್ಯಾನ್ಸರ್‌ನಲ್ಲಿ ಜೀವಕೋಶಗಳ ವಿಭಜನೆ ಹಾಗೂ ಬೆಳವಣಿಗೆಗಳು ಸಹಜವಾಗಿ ಆಗದೇ ಅಸಹಜ ಹಾಗೂ ಅನಿಯಂತ್ರಿತವಾಗಿ ಆಗುತ್ತವೆ. ಯಾವುದೇ ಕ್ರಮಬದ್ಧತೆಗೊಳಗಾಗದೆ ವೇಗವಾಗಿ ಸುತ್ತಲಿನ ಪ್ರದೇಶವನ್ನು ಆಕ್ರಮಿಸಿ ಪೋಷಕಾಂಶಗಳನ್ನುಹೀರಿ ಸಹಜಕೋಶಗಳ ಕಾರ್ಯಚಟುವಟಿಕೆಗಳಿಗೆ ಭಂಗವನ್ನುಂಟುಮಾಡುತ್ತದೆ. ಅಷ್ಟೇ ಅಲ್ಲ, ಗಂಥಿಕೋಶಗಳು ಮೂಲ ಅಂಗದಿಂದ ಕಳಚಲ್ಪಟ್ಟು ರಕ್ತ ಅಥವಾ ದುಗ್ದರಸದ ಮೂಲಕ ಬೇರೆ ಅಂಗಗಳಿಗೆ ದಾಳಿಮಾಡಿ (ಉದಾ: ಮೂಳೆ, ಮೆದುಳು, ಶ್ವಾಸಕೋಶ, ಲಿಂಫ್ ನೋಡ್ ಇತ್ಯಾದಿ) ಅಲ್ಲಿನ ಸಹಜ ಕೋಶಗಳನ್ನು ನಾಶಮಾಡುತ್ತದೆ. ಕ್ಯಾನ್ಸರ್ ದೇಹದ ಯಾವುದೇ ಭಾಗದಿಂದ ಬರಬಹುದಾದರೂ ಮುಖ್ಯವಾಗಿ ಶ್ವಾಸಕೋಶ, ಜೀರ್ಣಾಂಗವ್ಯೂಹ, ರಕ್ತ, ದುಗ್ದಗ್ರಂಥಿ, ತ್ಯಾಜ್ಯ ವ್ಯವಸ್ಥೆ, ಪುರುಷರಲ್ಲಿ ಪ್ರಾಸ್ಟೇಟ್, ಸ್ತ್ರೀಯರಲ್ಲಿ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌ಗಳು ಹೆಚ್ಚಾಗಿ ಕಂಡುಬರುತ್ತವೆ.
  • ಕಾರಣ
  • ನಿರ್ದಿಷ್ಟ ಕಾರಣಗಳನ್ನು ಗುರುತಿಸಲು ಸಾಧ್ಯವಾಗದಿದ್ದರೂ ಹಲವು ಕಾರಣಗಳು ಸೇರಿ ಕ್ಯಾನ್ಸರ್ ಸಂಭವಿಸುತ್ತವೆ. (ಮಲ್ಟಿಫ್ಯಾಕ್ಟೋರಿಯಲ್) ಜೊತೆಗೆ ಪರಿಸರದಲ್ಲಿನ ಪರಿಸ್ಥಿತಿಗಳು (ಎನ್ವಿರಾನ್ಮೆಂಟಲ್ ಫ್ಯಾಕ್ಟರ್) ಮುಖ್ಯ ಕಾರಣ. ವಿಕಿರಣ, ಕೆಲವು ವೈರಸ್‌–ಸೋಂಕುಗಳು (ಹೆಪಟೈಟಿಸ್ ಸಿ.ಬಿ ವೈರಸ್, ಲಿವರ್ ಕ್ಯಾನ್ಸರ್ ಸಂಭವ ಹೆಚ್ಚಿಸಿದರೆ ಎಚ್.ಪಿ.ವಿ. ಸೋಂಕಿನಲ್ಲಿ ಗರ್ಭಕೊರಳಿನಕ್ಯಾನ್ಸರ್, ಎಚ್.ಐ.ವಿ. ಸೋಂಕಿನಲ್ಲಿ ಬರ್ಕಿಟ್ಸ್ ಲಿಮ್‌ಫೋಮಾ, ಇತ್ಯಾದಿ) ಜೀವಕೋಶಗಳ ಕಾರ್ಯಪ್ರವೃತ್ತಿಯನ್ನು ಬದಲಿಸಿ ಕ್ಯಾನ್ಸರ್–ಕಾರಕಗಳನ್ನಾಗಿ ಮಾಡುತ್ತದೆ. ಇದರೊಂದಿಗೆ ವಯಸ್ಸು, ಲಿಂಗ, ಪರಿಸರ, ವಂಶಾವಳಿ– ಮುಂತಾದವು ಕೂಡ ಕ್ಯಾನ್ಸರ್ ಕಾರಕವಾಗಿ ಪರಿಣಮಿಸಬಹುದು.
  • ಏನೆಲ್ಲಾ ಮಾಡಬಹುದು
  • ಕ್ಯಾನ್ಸರ್ ಪೀಡಿತರಾಗಿದ್ದರೂ ಕೂಡ ಅಂತರ್ಮುಖಿಯಾಗಿ ಖಿನ್ನತೆಯಿಂದ ಬಳಲುವುದರ ಬದಲು ಸಾಮಾಜಿಕ ನೆರವನ್ನು ಬಯಸಿ, ಕುಟುಂಬದವರೊಂದಿಗೆ, ಬಾಳಸಂಗಾತಿಯೊಂದಿಗೆ ಸಹದ್ಯೋಗಿಗಳೊಂದಿಗೆ, ಆಪ್ತಸಮಾಲೋಚಕರೊಂದಿಗೆ, ಚರ್ಚಿಸುತ್ತಾ ನನ್ನ ಕಹಿಭಾವನೆಗಳನ್ನು ಹೊರಹಾಕಿ ನಿರಾಳತೆಯನ್ನು ಹೊಂದಲು ಅವಕಾಶವಾಗುವುದಾದರೆ ಅದು ಕಾಯಿಲೆ ಗುಣಮುಖವಾಗಲು ಧನಾತ್ಮಕ ಪರಿಣಾಮವನ್ನೇ ಬೀರುತ್ತದೆಯಲ್ಲವೇ? ಜೊತೆಗೆ ನಮ್ಮ ಅನುಭವಗಳನ್ನು ಇತರ ಕ್ಯಾನ್ಸರ್‌ಪೀಡಿತರೊಂದಿಗೆ ಹಂಚಿಕೊಂಡಾಗ ಅದು ಧನಾತ್ಮಕ ಪರಿಣಾಮವನ್ನೇ ಬೀರುತ್ತದೆ. ಅಂಡಾಶಯಕ್ಯಾನ್ಸರ್ ಗೆದ್ದು ಮರುಜನ್ಮಗಳಿಸಿ ಹಲವು ಕ್ಯಾನ್ಸರ್ ಪೀಡಿತರಿಗೆ ಮಾರ್ಗದರ್ಶನ ಕೊಡುತ್ತಿರುವ ಮಾಯಾ ತಿವಾರಿ, ಜೊತೆಗೆ ಇತ್ತೀಚಿಗೆ ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿರುವ ಮನಿಷಾ ಕೊಯಿರಾಲ, ಯುವರಾಜ್ ಸಿಂಗ್ ಮುಂತಾದವರ ಅನುಭವಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ. ಆತ್ಮಸ್ಥೈರ್ಯ ಕಳೆದುಕೊಳ್ಳದೇ ಸೂಕ್ತಬದಲಾವಣಾ ಕ್ರಮಗಳನ್ನು ಅನುಸರಿಸಿ ರೋಗದ ಭಯಾನಕತೆಯಿಂದ ಬಿಡುಗಡೆ ಪಡೆಯಬಹುದು.[೧]
.

ಕ್ಯಾನ್ಸರ್ ಕಾರಕಗಳ ಬಹುತೇಕ ಅಂಶಗಳು ಪರಿಸರದ ಲಕ್ಷಣ ಅಥವಾ ಜೀವನಶೈಲಿ-ಸಂಬಂಧಿತ ಗುಣಲಕ್ಷಣಗಳನ್ನು ಹೊಂದಿರುತ್ತದೆ.ಕಾಯಿಲೆಯ ಅಂಶ ಕಂಡು ಬಂದನಂತರ ಬಹುತೇಕ ಸಂಭವನೀಯ ಕ್ಯಾನ್ಸರ್ ನಿರ್ಭಂದಿಸುವ ಸಾಧ್ಯತೆ ಇದೆ. ಅತ್ಯಾಧುನಿಕ ಜೀವನಶೈಲಿಯಿಂದ ಉಂಟಾಗುವ ಕ್ಯಾನ್ಸರ್ ಕಾಯಿಲೆಯ ಅಪಾಯಗಳು ಬಹುತೇಕ,ಮದ್ಯಪಾನ,(ಇದರ ಅತಿಯಾದ ಸೇವನೆಯು ಮುಖ,ಬಾಯಿ,ಕರಳು,ಸ್ತನ ಮತ್ತು ಇತರ ಕ್ಯಾನ್ಸರ್ ಗೆ ಕಾರಣವಾಗುತ್ತಿದೆ).ಧೂಮಪಾನ (ಮಹಿಳೆಯರಲ್ಲಿ 20%ರಷ್ಟು ಧೂಮಪಾನ ಮಾಡದಿದ್ದರೂ ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗಿರುತ್ತಾರೆ)10%ರಷ್ಟು ಪುರಷರಲ್ಲಿ ಇದು ಕಾಣಿಸಿಕೊಳ್ಳುತ್ತದೆ)ದೈಹಿಕ ಚಟುವಟಿಕೆಯ ಕೊರತೆಯಿಂದ(.ದೊಡ್ಡಕರುಳು,ಸ್ತನ ಮತ್ತು ಸಂಭವನೀಯ ಇತರೆ ಕ್ಯಾನ್ಸರ್ ಗಳು)ಹೆಚ್ಚು ತೂಕದವರ ಕೊಬ್ಬಿನ ಅಂಶದಿಂದ (ದೊಡ್ಡ ಕರಳು,ಸ್ತನ,ಗ್ರಂಥಿಗಳು,ಮತ್ತುಇತರೆ ಕ್ಯಾನ್ಸರ್ ಗಳು ಬರುವ ಅಪಾಯವಿದೆ. ಗ್ರಂಥಿಯ ಸಂಬಂಧಿತ ಸಾಕ್ಷಿಪ್ರಕಾರ ಹೆಚ್ಚು ಪ್ರಮಾಣದ ಮದ್ಯಪಾನವನ್ನು ಕಡಿಮೆ ಮಾಡಿದರೆ ಇದರ ಅಪಾಯ ತಪ್ಪಿಸಬಹುದಾಗಿದೆ.ತಂಬಾಕು ಸೇವನೆಯು ಇದಕ್ಕೆ ಹೋಲಿಸಿದರೆ ಇನ್ನೂ ಹೆಚ್ಚು ಘಾತಕವಾದದೆಂದು ಹೇಳಲಾಗುತ್ತದೆ.ಇದರಲ್ಲಿ ತಂಬಾಕು ಮತ್ತು ಮದ್ಯಪಾನಗಳು ತೀವ್ರ ದುರ್ಬಲತೆಗೆ ಕಾರಣವಾಗುತ್ತದೆ. ಇನ್ನುಳಿದ ಜೀವನಶೈಲಿ ಮತ್ತು ಪರಿಸರದ ಅಂಶಗಳು ಹೆಚ್ಚು ಅಪಾಯ ತಂದೊಡ್ಡುತ್ತವೆ.(ಇಲ್ಲಿ ಲಾಭಕ್ಕಾಗಿ ಅಥವಾ ನಿರ್ಣಾಯಕ ಕಾರಣಗಳಿಗಾಗಿ)ಇದು ಕೆಲವು ಲೈಂಗಿಕ ಸೋಂಕಿಗೆ ತುತ್ತಾದ (ಇವುಗಳು ಮಾನವ ಪಪ್ಪಿಲೋಮಾ ವೈರಸ್ ಗಳಾಗಿವೆ)ಉದ್ದೀಪನಕಾರಿ ಹಾರ್ಮೋನ ಗಳು ಐಯೊನೈಜಡ್ ವಿಕಿರಣ ಮತ್ತು ಸೂರ್ಯನ ಅಲ್ಟ್ರಾ ವೈಲೆಟ್ ಕಿರಣಗಳು ಚರ್ಮ ಹದಮಾಡುವ ಕೇಂದ್ರಗಳಿಂದ ಸೂಸುವ ಕಿರಣ ಹಾಗು ಹಲವು ವೃತ್ತಿಪರ ಮತ್ತು ರಸಾಯನಿಕಗಳ ಬಿಡುಗಡೆಯು ಅಪಾಯದ ಅಂಶಗಳಾಗಬಹುದು.

ಪ್ರತಿವರ್ಷ ಸುಮಾರು 200,000 ಜನರು ತಮ್ಮ ಕೆಲಸ ಮಾಡುವ ಪರಿಸರಗಳಿಂದಾಗಿ ಉಂಟಾದ ಕ್ಯಾನ್ಸರ್ ಗೆ ಬಲಿಯಾಗುತ್ತಿದ್ದಾರೆ. ದಶಲಕ್ಷಗಟ್ಟಲೆ ಕಾರ್ಮಿಕರು ಅಬೆಸ್ಟೋಸ್ ಫೈಬರ್ಸ್ ನ ಸಂಪರ್ಕ ಮತ್ತು ತಂಬಾಕು ಸೇವನೆ ಅಥವಾ ಧೂಮಪಾನದಿಂದ ಕ್ಯಾನ್ಸರ್ ಅಪಾಯವನ್ನು ಎದುರಿಸುತ್ತಿದ್ದಾರೆ.ಶ್ವಾಸಕೋಶ ಕ್ಯಾನ್ಸರ್ ಮತ್ತು ಮೆಸೊಥಿಲಿಯೊಮಾಗಳು ಇಂತಹ ಕಾರ್ಮಿಕರನ್ನು ಕಾಡುತ್ತಿದೆ. ತಮ್ಮ ಕೆಲಸ ಮಾಡುವ ಸ್ಥಳಗಳಲ್ಲಿ ಬೆಂಜೀನಗೆ ಒಡ್ಡಿಕೊಳ್ಳುವದರಿಂದ ಲ್ಯುಕೇಮಿಯಾದಂತಹ ಕಾಯಿಲೆಗೆ ಬಲಿಪಶುವಾಗುತ್ತಿದ್ದಾರೆ. }ಸದ್ಯ ಅಭಿವೃದ್ಧಿಪರ ಜಗತ್ತಿನಲ್ಲಿ ವೃತ್ತಿಪರ ಜಾಗೆಗಳಲ್ಲಿ ಕ್ಯಾನ್ಸರ್ ನ ಅಪಾಯಗಳು ಬಹುತೇಕ ಹೆಚ್ಚಾಗುತ್ತದೆ ಒಂದು ಅಂದಾಜಿನ ಪ್ರಕಾರ U.S.ನಲ್ಲಿ ಪ್ರತಿವರ್ಷ 20,000ಕ್ಯಾನ್ಸರ್ ಸಾವುಗಳು ಮತ್ತು 40,000 ಕ್ಯಾನ್ಸರ್ ಪ್ರಕರಣಗಳು ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಲ್ಲಿನ ಪರಿಸರದಿಂದಾಗಿ ಉಂಟಾದ ಬಗ್ಗೆ ವರದಿಯಾಗುತ್ತಿವೆ.

ಪಥ್ಯದಲ್ಲಿರುವುದು

ಕ್ಯಾನ್ಸರ್‌’ಗೆ ಹೊಸ ಔಷಧ ಸಂಶೋಧನೆ
  • ಸಾಮಾನ್ಯವಾಗಿ ಕ್ಯಾನ್ಸರ್‌ ಕೋಶಗಳು ದೇಹದ ಭಾಗವೊಂದರಲ್ಲಿ ಉತ್ಪಾದನೆಯಾದರೆ, ಆ ಕೋಶಗಳ ವಿಭಜನೆಯಾಗಿ, ದೊಡ್ಡದಾಗುತ್ತಾ ಹೋಗುತ್ತವೆ. ನಂತರ, ಅವು ಗೆಡ್ಡೆಯ ಸ್ವರೂಪ ಪಡೆಯುತ್ತವೆ. ಈ ಗೆಡ್ಡೆಯ ಕೆಲವು ಕೋಶಗಳು ಸಡಿಲವಾಗಿ, ಬಿಡಿಸಿಕೊಂಡು ರಕ್ತದ ಮೂಲಕ ದೇಹದ ಇತರ ಭಾಗಗಳಿಗೆ ಸಂಚರಿಸಿ, ಇತರ ಅಂಗಾಂಗಗಳಲ್ಲಿ ಸೇರಿಕೊಂಡು, ಆ ಅಂಗಗಳಲ್ಲಿ ಗೆಡ್ಡೆ ಬೆಳೆಯುವುದು ಅಥವಾ ಅಂಗದ ವೈಫಲ್ಯ ಆಗಲು ಕಾರಣವಾಗುತ್ತವೆ. ಈ ಸಂಪೂರ್ಣ ಪ್ರಕ್ರಿಯೆಯೇ ಕ್ಯಾನ್ಸರ್‌. ಈ ಪ್ರಕ್ರಿಯೆ ಆಗದಂತೆ ನೋಡಿಕೊಳ್ಳುವುದೇ ಈ ಹೊಸ ಸಂಶೋಧನೆಯ ಉದ್ದೇಶವಾಗಿದೆ.
  • ಗೆಡ್ಡೆಯೊಂದರಿಂದ ಕ್ಯಾನ್ಸರ್‌ ಕೋಶಗಳು ಬಿಡಿಸಿಕೊಂಡು, ರಕ್ತದಲ್ಲಿ ಸಂಚರಿಸುವ ಕ್ರಿಯೆಗೆ ‘ಮೆಟಾಸ್ಟಾಟಿಸ್‌’ ಎನ್ನುತ್ತಾರೆ. ಕ್ಯಾನ್ಸರ್‌ ಕೋಶಗಳಿಗೆ ದೇಹದಲ್ಲಿ ಉತ್ಪಾದನೆಯಾಗುವ ‘ಹೆಪಾರನೀಸ್‌’ ಎನ್ನುವ ಮತ್ತೊಂದು ಕೋಶಗಳು ಅಂಟಿಕೊಂಡು, ಕೋಶಗಳು ಸಡಿಲವಾಗುವಂತೆ ಮಾಡುತ್ತವೆ. ಈ ‘ಹೆಪಾರನೀಸ್‌’ಗಳ ಬದಲಿಗೆ ಕೃತಕ ಕೋಶಗಳನ್ನು ತಯಾರಿಸಿ, ಅವು ಕ್ಯಾನ್ಸರ್‌ ಕೋಶಗಳಿಗೆ ಅಂಟಿಕೊಳ್ಳುವಂತೆ ಪ್ರೊ.ರಂಗಪ್ಪ ಅವರ ತಂಡ ಸಂಶೋಧನೆ ನಡೆಸಿದೆ. ಈ ಕೃತಕ ಕೋಶಗಳು ಕ್ಯಾನ್ಸರ್‌ ಕೋಶಗಳಿಗೆ ಅಂಟಿಕೊಳ್ಳುವುದರಿಂದ, ಆ ಇಡೀ ಕೋಶವೇ ನಿಷ್ಕ್ರಿಯಗೊಂಡು ಮೃತಪಡುತ್ತದೆ. ಹಾಗಾಗಿ, ಕ್ಯಾನ್ಸರ್‌ ಬೇರೆಡೆಗೆ ಹಬ್ಬುವುದನ್ನು ತಡೆದಂತಾಗುತ್ತದೆ.
.

ಅಷ್ಟೇ ಅಲ್ಲದೇ, ಈ ಔಷಧದಿಂದ, ಕ್ಯಾನ್ಸರ್‌ ಗೆಡ್ಡೆ ಇನ್ನಷ್ಟು ಬೆಳೆಯುವುದು ನಿಲ್ಲುತ್ತದೆ. ಆಗ, ಶಸ್ತ್ರಚಿಕಿತ್ಸೆಯ ಮೂಲಕ ಗೆಡ್ಡೆಯನ್ನು ಹೊರತೆಗೆದರೆ ಆಯಿತು. ಹರಡುವ ಕ್ಯಾನ್ಸರ್‌ (ಮ್ಯಾಲಿಗ್ನೆಂಟ್‌) ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಅಸಾಧ್ಯ. ಹಾಗೇನಾದರೂ ಮಾಡಿದಲ್ಲಿ ಕ್ಯಾನ್ಸರ್‌ ಮತ್ತಷ್ಟು ಹರಡಲು ಕಾರಣವಾಗುತ್ತದೆ. ಈ ಹೊಸ ಸಂಶೋಧನೆಯು ಹರಡುವ ಪ್ರಕ್ರಿಯೆಗೇ ತಡೆ ಒಡ್ಡುವುದರಿಂದ, ಕಾಯಿಲೆ ಬಹುತೇಕ ಗುಣವಾದಂತೆಯೇ

ಆಹಾರ ಪದ್ದತಿ ಮತ್ತು ಆಹಾರ ಸೇವನೆಯ ಕ್ರಮವು ಶರೀರದಲ್ಲಿ ಕೊಬ್ಬಿನಂಶವನ್ನು ಅಧಿಕಗೊಳಿಸುವದರಿಂದ ಕ್ಯಾನ್ಸರ್ ಹೆಚ್ಚಾಗುವ ಸಂಭವ ಜಾಸ್ತಿ. .ಸಾಮಾನ್ಯವಾಗಿ ವಿವಿಧ ದೇಶಗಳಲ್ಲಿನ ವಿವಿಧ ಆಹಾರ ಪದ್ದತಿಗಳು ವಿವಿಧ ರೀತಿಯ ಕ್ಯಾನ್ಸರ್ ಗಳಿಗೆ ಕಾರಣವಾಗುತ್ತದೆ.(ಉದಾ:ಗ್ಯಾಸ್ಟ್ರಿಕ್ ಕ್ಯಾನ್ಸರ್ ಜಪಾನಿನಲ್ಲಿ ಸರ್ವೆ ಸಾಮಾನ್ಯ ಅದೇ ರೀತಿ ಯುನೈಟೆಡ್ ಸ್ಟೇಟ್ಸನಲ್ಲಿ ಕರುಳಿನ ಕ್ಯಾನ್ಸರ್ ಸರ್ವೆ ಸಾಮಾನ್ಯವೆನಿಸಿದೆ). ಈ ಉದಾಹರಣೆಗಳಲ್ಲಿ ಸಂಭವನೀಯ (ಹ್ಯಾಪ್ಲೊ ಗ್ರುಪ್ಸ್ ನ್ನು ಪರಿಗಣಿಸಲಾಗಿಲ್ಲ). ಅಧ್ಯಯನಗಳ ಪ್ರಕಾರ ವಲಸಿಗರು ತಾವಿರುವ ಹೊಸ ಪ್ರದೇಶಗಳಲ್ಲಿ ಕ್ಯಾನ್ಸರ್ ಅಪಾಯವನ್ನುಅಧಿಕಗೊಳಿಸುತ್ತಾರೆ.ಇಲ್ಲಿ ಅವರ ಆಹಾರ ಪದ್ದತಿ ಹಾಗು ಕ್ಯಾನ್ಸರ್ ಗೆ ಸಂಬಂಧವಿರುತ್ತದೆ. ಜನರಲ್ಲಿ ಕೊಬ್ಬು ಅಥವಾ ಹೆಚ್ಚು ತೂಕ ಇಳಿಸುವ ಕ್ರಮವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದು ಅಷ್ಟಾಗಿ ತಿಳಿಯದ ವಿಷಯವಾಗಿದೆ.

ಹಲವಾರು ನಿರಂತರ ವರದಿಗಳ ಮೂಲಕ ಕೆಲವು ನಿಗದಿತ ವಸ್ತುಗಳಿಂದ (ಆಹಾರವನ್ನಳಗೊಂಡಂತೆ) ಇವು ಫಲಪ್ರದವೊ ಅಥವಾ ನಿರ್ಣಾಯಕ ಪರಿಣಾಮಗಳನ್ನು ಕ್ಯಾನ್ಸರ್ ಸಾಧ್ಯತೆಯ ಮೇಲೆ ಮಾಡುವುದು ಕಂಡುಬಂದಿದೆ. ಇಂತಹ ವರದಿಗಳು ಕಸಿ ಮಾಡಿದ ಕೋಶಗಳು ಅಥವಾ ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಮೂಲ ಆಧಾರ ಪಡೆದುಕೊಂಡಿರುತ್ತವೆ. ಸಾರ್ವಜನಿಕ ಆರೋಗ್ಯ ಶಿಫಾರಸುಗಳನ್ನು ಈಗಿನ ಅಧ್ಯಯನಗಳ ಮೇಲೆ ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲ.ಈ ಪ್ರಯೋಗಗಳನ್ನು ನಿಯಮಿತವಾಗಿ ಹಾಗು ನಿಖರವಾಗಿ ಮನುಷ್ಯರ ಮೇಲೆ ಮಾಡಿದ ಪ್ರಯೋಗಗಳಿಂದ ಬಂದ ಫಲಿತಾಂಶಗಳಿಂದ ಮಾತ್ರ ನಿರ್ಧಾರಕ್ಕೆ ಬರಬಹುದಾಗಿದೆ.(ಆಗಾಗ್ಗೆ ಸಾಂದರ್ಭಿಕ ಪ್ರಯೋಗಗಳ ಅಗತ್ಯವಿದೆ).

ಪ್ರಸ್ತಾಪಿತ ಆಹಾರ ಪದ್ದತಿಯ ಮೂಲಕ ಪ್ರಾಥಮಿಕವಾಗಿ ಕ್ಯಾನ್ಸರ್ ಅಪಾಯವನ್ನು ರೋಗನಿದಾನ ಶಾಸ್ತ್ರದ ಅಧ್ಯಯನವು ತನ್ನದೇ ಆದ ವಿಚಾರವನ್ನು ಮಂಡಿಸಿದೆ. ಇದರಲ್ಲಿ ಕ್ಯಾನ್ಸರ್ ಅಪಾಯ ಕಡಿಮೆಗೊಳಿಸುವ ಸಂಬಂಧದಲ್ಲಿ ಹಲವೆಡೆಯಿಂದ ಬೆಂಬಲವೂ ದೊರಕಿದೆ. ಉದಾಹರಣೆಗೆ ಇಂತಹ ಅಧ್ಯಯನಗಳ ಪ್ರಕಾರ ಕಡಿಮೆ ಮಾಂಸಾಹಾರ ಸೇವನೆಯು ಕರಳು ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಕಾಫಿ ಕುಡಿಯುವದರಿಂದ ಜಠರ ಕ್ಯಾನ್ಸರ್ ನ ಅಪಾಯದಿಂದ ತಪ್ಪಿಸಿಕೊಳ್ಳಬಹುದಾಗಿದೆ. ಅಧ್ಯಯನಗಳ ಪ್ರಕಾರ ಹೊರಭಾಗದಲ್ಲಿಗ್ರಿಲ್ಲ್ ಗಳ ಮೇಲೆ ಬೇಯಿಸಿದ ಮಾಂಸಾಹಾರದಿಂದ ಉದರ ಕ್ಯಾನ್ಸರ, ಕರಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ಗಳ ಹಾಗು ಅತಿ ಉಷ್ಣತೆಯ ಮೇಲೆ ಬೇಯಿಸಿದ ಆಹಾರದಿಂದ ಅದರಲ್ಲಿನ ಬೆಂಜೊಪೆರಿನ್ ಇತ್ಯಾದಿಗಳಿಂದ ಕ್ಯಾನ್ಸರ್ ನ ಅಪಾಯದ ಸಾಧ್ಯತೆ ಇದೆ ಎನ್ನಲಾಗಿದೆ.

ಸುಮಾರು 2005ರಲ್ಲಿ ನಡೆದ ದ್ವೀತಿಯ ನಿರ್ಮೂಲನಾ ಅಧ್ಯಯನದ ಪ್ರಕಾರ ಸಸ್ಯ ಮೂಲದ ಆಹಾರ ಹಾಗು ಸುಧಾರಿತ ಜೀವನಶೈಲಿಗಳಿಂದ ಕ್ಯಾನ್ಸರ್ ನ್ನು ನಿರ್ಬಂದಿಸಬಹುದೆಂದೂ ವರದಿಗಳು ಹೇಳಿವೆ,ಬಹುತೇಕ ಪುರುಷರಲ್ಲಿನ ಮೂತ್ರಕೋಶಕ್ಕೆ ಸಂಬಂಧಿಸಿದ ಕ್ಯಾನ್ಸರ್ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಬಹುದಾಗಿದೆ. ಇದರ ಫಲಿತಾಂಶದ ಪ್ರಸರಣದ ನಂತರ 2006ರಲ್ಲಿ 2,400 ಮಹಿಳೆಯರ ಬಗ್ಗೆ ಅಧ್ಯಯನ ನಡೆಸಲಾಯಿತು.ಇದರಲ್ಲಿ ಅರ್ಧದಷ್ಟು ಮಹಿಳೆಯರಿಗೆ ವಾಡಿಕೆಯಂತೆ ಸಾಮಾನ್ಯ ಆಹಾರ ನೀಡಲಾಯಿತು,ಇನ್ನುಳಿದವರಿಗೆ 20%ಕಡಿಮೆ ಕೊಬ್ಬಿನ ಕ್ಯಾಲೊರಿ ಆಹಾರ ನೀಡಲಾಯಿತು. ಕಡಿಮೆ ಕೊಬ್ಬಿನಾಂಶದ ಆಹಾರ ಸೇವಿಸಿದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ನ ಲಕ್ಷಣಗಳು ತೀರ ಕಡಿಮೆ ಪ್ರಮಾಣದಲ್ಲಿತ್ತೆಂದು ಡಿಸೆಂಬರ್ 2006ರ ಮಧ್ಯಂತರ ವರದಿಯಲ್ಲಿ ತಿಳಿಸಲಾಯಿತು.

ಇತ್ತೀಚಿನ ಅಧ್ಯಯನಗಳ ಪ್ರಕಾರ ಶುದ್ದೀಕರಿಸಿದ ಸಕ್ಕರೆ ಅಂಶಗಳು ಮತ್ತು ಇನ್ನಿತರ ಸಾದಾರಣ ಕಾರ್ಬೊಹೈಡ್ರೇಟ್ ಗಳ ಸೇವನೆ ಮಾಡುವವರಿಗೆ ಈ ಕಾಯಿಲೆಯ ಜೊತೆಗಿನ ಸಂಬಂಧ ಇರಬಹುದೆಂದು 2/} ಪತ್ತೆಹಚ್ಚಲಾಯಿತು. ಆದರೂ ಇದರ ಅಪಾಯದ ಮಟ್ಟ ಮತ್ತು ಸಂಬಂಧದ ಬಗೆಗೆ ಇನ್ನೂ ಚರ್ಚೆಗಳು ನಡೆಯುತ್ತವೆ.ಇದರಿಂದಾಗಿ ಕೆಲವು ಸಂಘಸಂಸ್ಥೆಗಳು ಶುದ್ದೀಕರಿಸಿದ(ರಿಫೈನ್ಡ್ )ಸಕ್ಕರೆಗಳ ಮತ್ತು ಇನ್ನಿತರ ಸ್ಟಾರ್ಚ್ ಗಳ ಬಳಕೆಯನ್ನು ಕಡಿಮೆ ಮಾಡಲು ಶಿಫಾರಸು ಮಾಡಿದವು.

ನವೆಂಬರ್ 2007ರಲ್ಲಿ ಅಮೆರಿಕನ್ ಇನ್ಸ್ ಸ್ಟಿಟ್ಯೂಟ್ ಫಾರ್ ಕ್ಯಾನ್ಸರ್ ರಿಸರ್ಚ್ (AICR)ಮತ್ತು ವರ್ಲ್ಡ್ ಕ್ಯಾನ್ಸರ್ ರಿಸರ್ಚ್ ಫಂಡ್ (WCRF) ನೊಂದಿಗೂಡಿ ಅತ್ಯಂತ ಪ್ರಚಲಿತ ಮತ್ತು ಸಮಗ್ರ ಆಹಾರ ಪದ್ದತಿ,ವ್ಯಾಯಾಮ ಹಾಗು ಕ್ಯಾನ್ಸರ್ ಕುರಿತಾದ ಸಾಹಿತ್ಯವನ್ನು ಪ್ರಕಟಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು Food, Nutrition, Physical Activity and the Prevention of Cancer: a Global Perspective ಯತ್ನಿಸಿವೆ. ಈ ಜಂಟಿ ಸಂಸ್ಥೆಗಳಾದ WCRF/AICR ಗಳು ಸಾಮಾನ್ಯ ಜನರು ಹೇಗೆ ಕ್ಯಾನ್ಸರ್ ತಡೆಗಟ್ಟಬಹುದು ಮತ್ತುಅದಕ್ಕಾಗಿ ಅನುಸರಿಸಬೇಕಾದ 10 ಆಹಾರ ಕ್ರಮದ ಶಿಫಾರಸುಗಳನ್ನು ಪ್ರಕಟಿಸಿದೆ.ಅದರ ಮಾರ್ಗಸೂತ್ರಗಳು:(1)ತೂಕ ಹೆಚ್ಚಿಸುವ ಆಹಾರ ಪಾನೀಯಗಳ ಸೇವನೆ ನಿರ್ಭಂದ,ಬಹುತೇಕ ಅತ್ಯಂತ ಶಕ್ತಿಮೂಲದ ಆಹಾರ ಮತ್ತು ಸಕ್ಕರೆ ಪ್ರಮಾಣ ಅಧಿಕವಿರುವ ಪಾನೀಯ,(2)ಕೇವಲ ಸಸ್ಯಜನ್ಯ ಪಾನೀಯಗಳ ಸೇವನೆ,(3)ಕೆಂಪು ಮಾಂಸ ಮತ್ತು ಸಂಸ್ಕರಣ ಮಾಡಿದ ಮಾಂಸಾಹಾರ ಸೇವನೆಯನ್ನು ಮಿತಗೊಳಿಸುವುದು,(4)ಮದ್ಯಪಾನ ಹಾಗು ಇತರ ದ್ರವ್ಯ ಪದಾರ್ಥಗಳಿಗೆ ಕಡಿವಾಣ,(5)ಬ್ರೂಸ್ಟು ಹಿಡಿದ ಕಾಳು ಬ್ರೆಡ,ಕಡಿಮೆ ಪ್ರಮಾಣದ ಉಪ್ಪು ಸೇವನೆ ಕ್ಯಾನ್ಸರ್ ಅಪಾಯಗಳನ್ನು ತಪ್ಪಿಸಬಹುದಾಗಿದೆ.

ಕೆಲವು ಅಣಬೆಗಳು ಕ್ಯಾನ್ಸರ್ ಪ್ರತಿರೋಧಕದಂತೆ ಪರಿಣಾಮಕಾರಿಯಾಗಿ ಬಳಕೆ ಮಾಡುವುದನ್ನು ಶಿಫಾರಸು ಮಾಡಲಾಗಿದ್ದು ಅಣಬೆಗಳು ರೋಗಪ್ರತಿರೋಧಕ ವ್ಯೂಹಕ್ಕೆ ಸಹಕಾರಿಯಾಗಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಕೆಲವು ಪ್ರಕಾರದ ಅಣಬೆಗಳು ಇದಕ್ಕೆ ಉದಾಹರಣೆ ರೀಶಿ,[[|[೨]]] ,[[|[೩]]], ಮತ್ತು[[|[೪]]] ಮೊದಲಾದವು ಈ ವರ್ಗಕ್ಕೆ ಸೇರಿವೆ. ಸಂಶೋಧನೆಗಳ ಶಿಫಾರಸುಗಳ ಪ್ರಕಾರ ಔಷಧೀಯ ಗುಣದ ಅಣಬೆಗಳು ರೋಗ ನಿರೋಧಕ ಶಕ್ತಿಯನ್ನು ನಿಯಂತ್ರಣ ಮಾಡುವ ಗುಣಗಳಿವೆ.ಈ ಸಹಜ ಗುಣದಿಂದಾಗಿ ಹಲವು ಅಣಬೆಗಳನ್ನು ಶಿಫಾರಸು ಮಾಡಲಾಗಿದೆ.ಪಾಲಿಸಕ್ಕರೈಡ್ ಸಂಯುಕ್ತಗಳು ಪ್ರಮುಖವಾಗಿ ಬೆಟಾ-ಗ್ಲುಕನ್ಸ್ ಗಳು ಇಂದು ಬಳಕೆಗೆ ಬರುತ್ತಿವೆ. ಬೆಟಾ ಗ್ಲುಕನ್ಸ್ ಗಳನ್ನು "ಜೈವಿಕ ಪ್ರತಿಕ್ರಿಯಾತ್ಮಕ ಪರಿವರ್ತಕಗಳು", ಮುಖ್ಯವಾಗಿ,ಬೆಟಾ-ಗ್ಲುಕನ್ ಗಳು ಆಂತರಿಕ ರೋಗನಿರೋಧಕ ಶಕ್ತಿಯ ವ್ಯೂಹದ ಸ್ಥಿರತೆ ಕಾಪಾಡುವಲ್ಲಿ ನೆರವಾಗುತ್ತಿವೆ ಸಂಶೋಧನೆಗಳಂತೆ ಬೆಟಾ-ಗ್ಲುಕಾನ್ಸ್ ಗಳು ಮೈಕ್ರೊಫೇಜ,NK ಕೋಶಗಳು,T ಕೋಶಗಳು, ಮತ್ತುರೋಗನಿರೋಧಕದ ವ್ಯೂಹ ಸೈಟೊಕೈನ್ಸ್ ಗಳಿಗೆ ರೋಗ ತಡೆಗಟ್ಟುವ ಉತ್ತೇಜನ ಒದಗಿಸುತ್ತವೆ. ಬೆಟಾ-ಗ್ಲುಕನ್ಸ್ ಗಳು ಹೇಗೆ ರೋಗನಿರೋಧಕ ವ್ಯೂಹಾರಚನೆಗೆ ಹೇಗೆ ಸಹಾಯ ಮಾಡುತ್ತವೆ ಎಂಬುದು ಭಾಗಶ: ಕಂಡು ಬಂದಿರುವ ಅಂಶವಾಗಿದೆ. ಒಂದು ಬೆಟಾ-ಗ್ಲುಕನ್ಸ್ ಗಳ ಕಾರ್ಯ ವಿಧಾನದಂತೆ ಅವುಗಳು ಮೈಕ್ರೊಫೇಜ-1ಆಂಟಿಜಿನ್ ,CD18 ರೆಸೆಪ್ಟರಗಳ ಮೇಲೆ ಕೆಲಸ ಮಾಡುವ ಮೂಲಕ ರಕ್ಷಣಾ ಕವಚದ ಕೋಶಗಳಿಗೆ ಬಲ ನೀಡುತ್ತದೆ.

ಜೀವಸತ್ವಗಳು

ವಿಟಾಮಿನ್ ಗಳ ಪೂರೈಕೆಯಿಂದ ಕ್ಯಾನ್ಸರ್ ನಿರ್ಮೂಲನೆ ಕ್ರಮಗಳಲ್ಲಿ ಅಷ್ಟಾಗಿ ಪರಿಣಾಮಕಾರಿಯಾಗಿಲ್ಲ ಆಹಾರದ ಪ್ರಕಾರಗಳ ಬಗ್ಗೆ ಸಹ ಜನರು ಹೆಚ್ಚು ಆಯ್ಕೆ ಮತ್ತು ವಿವಿಧ ಆಹಾರ ಬಳಕೆ ಕೂಡಾ ಅಧ್ಯಯನದಿಂದ ಸಾಬೀತಾಗಿಲ್ಲವಾದರೂ ರೋಗಿಗಳು ಹೆಚ್ಚು ಹೆಚ್ಚು ಹಣ್ಣು ತರಕಾರಿಗಳನ್ನು ಸೇವಿಸುವದರಿಂದ ಹೆಚ್ಚು ಆರೋಗ್ಯದ ಲಾಭ ಪಡೆಯಬಹುದಾಗಿದೆ.

    ಜೀವಸತ್ವ D

ಕಡಿಮೆ ಪ್ರಮಾಣದ ವಿಟಾಮಿನ್ D ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಈ ಸಂಬಂಧವು ಆತಂಕಕಾರಿಯೇ ಎಂಬುದನ್ನು ಇನ್ನೂ ನಿರ್ಧಾರಗೊಂಡಿಲ್ಲ.

    ಬೆಟಾ ಕಾರೊಟೆನ್

ಬೆಟಾ-ಕಾರೊಟೆನೆ ಪೂರೈಕೆಯು ಸಣ್ಣ ಪ್ರಮಾಣದಲ್ಲಿ ಅಪಾಯ ತರಬಹುದಾದರೂ ಶ್ವಾಸಕೋಶದ ಕ್ಯಾನ್ಸರ್ ನ ಉಂಟಾಗಲು ಕಾರಣವಲ್ಲ ಎಂಬುದು ಗೊತ್ತಾಗಿದೆ.

    ಫೋಲಿಕ್ ಆಮ್ಲ

ಕರಳು ಕ್ಯಾನ್ಸರ್ ನಿರ್ಮೂಲನೆಗೆ ಫೊಲಿಕ್ ಆಮ್ಲವು ಪರಿಣಾಮಕಾರಿಯಾದರೂ ಇದು ಕರುಳಿನ ಕೊಲನ್ ಪೊಲಿಪ್ಸ್ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಕೆಮೊನಿರ್ಮೂಲನ

ಕ್ಯಾನ್ಸರ್ ನ ಔಷೋಧಪಚಾರಗಳು ನಿರ್ಮೂಲನಾ ಕ್ರಮಗಳ ಮೂಲಕ ರೋಗಿಗಳನ್ನು ಆಕರ್ಷಿಸುವುದಲ್ಲದೇ ಆದರೆ ಹಲವಾರು ರೋಗ ನಿದಾನ ಕೇಂದ್ರಗಳಲ್ಲಿನ ಕೆಮೊನಿರ್ಮಲನಾ ಪದ್ದತಿಯು ಉನ್ನತ ಮಟ್ಟದ ಚಿಕಿತ್ಸಾ ಪದ್ದತಿ ಎನಿಸಿದೆ.

ಸ್ತನ ಕ್ಯಾನ್ಸರ್ ನ ಬೆಳವಣಿಗೆ ಕಂಡುಬರುವ 50%ರಷ್ಟು ಮಹಿಳೆಯರಿಗಾಗಿ ದಿನಬಳಕೆಗಾಗಿ ಟ್ಯಾಮೊಕ್ಷಿಫೆನ್ ಒಂದು ನಿರ್ಧಾರಿತ ಎಸ್ಟ್ರೊಜೆನ್ ರೆಸೆಪ್ಟರ್ ಮಾಡ್ಯುಲೇಟರ್ (SERM) ನ್ನು ಐದು ವರ್ಷಗಳ ಕಾಲ ಪ್ರಯೋಗಿಸಲಾಯಿತು. ಇತ್ತೀಚಿನ ಅಧ್ಯಯನಗಳ ಪ್ರಕಾರ ಸ್ತನ ಕ್ಯಾನ್ಸರ್ ನಿಂದ ಅಧಿಕ ಅಪಾಯ ಎದುರಿಸುವ ಮಹಿಳೆಯರಿಗೆ ನೀಡುವ ಸೆಲೆಕ್ಟಿವ್ ಎಸ್ಟ್ರೊಜೆನ್ ರೆಸಿಪ್ಟರ್ ಮಾಡುಲ್ಯುಟೇರ್ ರಾಲೊಕ್ಷಿಫೆನ್ ನಷ್ಟೇ ಪರಿಣಾಮಕಾರಿಯಾಗಿದ್ದು ಟ್ಯಾಮೊಕ್ಷಿಫೆನ್ ಕೂಡಾ ಅಡ್ದ ಪರಿಣಾಮಗಳನ್ನು ನಿಯಂತ್ರಿಸಲು ಈ ಪ್ರಕರಣಗಳಲ್ಲಿ ಸಾಧ್ಯವಾಗಿದೆ.

ರಾಲೊಕ್ಷಿಫೆನ್ ಒಂದುSERM ಆಗಿದ್ದು ಇದನ್ನು ( STAR ಪ್ರಯತ್ನದಲ್ಲಿ) ಸ್ತನ ಕ್ಯಾನ್ಸರ್ ಅಪಾಯವನ್ನು ತಪ್ಪಿಸಲಾಗುವ ಟ್ಯಾಮೊಕ್ಷಿಫೆನ್ ನಷ್ಟೇ ಪ್ರಬಲವಾಗಿದ್ದು ಈ ಕ್ಯಾನ್ಸರ್ ಉಲ್ಬಣಗೊಂಡ ಮಹಿಳೆಯರಲ್ಲಿ ಇದರ ಪ್ರಮಾಣವನ್ನು ಅಳೆಯಬಹುದಾಗಿದೆ. ಈ ಪ್ರಯೋಗದಲ್ಲಿ ಸುಮಾರು 20,000 ಮಹಿಳೆಯರನ್ನು ಪರೀಕ್ಷೆಗೊಳಪಡಿಸಿದಾಗ ರಾಲಿಕ್ಷಿಫೆನ್ ಸಂಯುಕ್ತವು ಟ್ಯಾಮ್ಕ್ಷಿಫೆನ್ ಗಿಂತ ಕಡಿಮೆ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತದೆ.ಆದರೂ ಇದು ಅತಿ ಹೆಚ್ಚು DCISಗಳ ರಚನೆಗೆ ಅವಕಾಶ ನೀಡುತ್ತದೆ.

ಫಿನಾಸ್ಟಿರೊಯಿಡ್ ಒಂದು 5-ಅಲ್ಫಾ-ರಿಡಕ್ಟೇಸ್ ಇನ್ ಹ್ಯಾಬಿಟರ್ ಕಡಿಮೆ ಪ್ರಮಾಣದ ಜನನಾಂಗದ ಕ್ಯಾನ್ಸರ್ ಅಪಾಯ ತರಬಹುದು ಅಥವಾ ಸಣ್ಣ ಪ್ರಮಾಣದ ಗೆಡ್ಡೆಗಳನ್ನು ತಡೆಯಲು ಇವು ಸಹಕಾರಿಯಾಗಿವೆ. ಪೊಲಿಪೊಸಿಸ್ ರೋಗಿಗಳ ಫೆಮಿಲೈಲ್ ಅಡೆನೊಮೇಟಸ್ ಪೊಲಿಪೊಸಿಸ್ ಮೇಲೆ ನಡೆಸಿದ ಪ್ರಯೋಗಗಳಿಂದ COX-2 ಅಸ್ತಿತ್ವಗಳ ಉದಾಹರಣೆಗೆ ರೊಫೆಕೊಕ್ಷಿಬ್ ಮತ್ತು ಸೆಲೆಕೊಕ್ಷಿಬ್ ಗಳ ಪರಿಣಾಮವು ಸೋಂಕಿಗೆ ತುತ್ತಾದ ಮಹಿಳೆಯರಲ್ಲಿನ ಕ್ಯಾನ್ಸರ್ ಸಾಧ್ಯತೆಗಳನ್ನು ತಕ್ಕಮಟ್ಟಿಗೆ ಕಡಿಮೆಗೊಳಿಸಬಹುದಾಗಿದೆ.ಅಂದರೆ ಇಲ್ಲಿನ ರಸಾಯನಿಕಗಳ ಸಂಯುಕ್ತವು ಆಯಾ ರೋಗಿಗಳ ಕಾಯಿಲೆಯು ಹಂತದಲ್ಲಿದೆ ಎಂಬುದನ್ನು ಕಾಣಬಹುದಾಗಿದೆ. /}ಮತ್ತು ಸಾಮಾನ್ಯ ಜನಸಂಖ್ಯೆಯನ್ನು ಪರಿಗಣಿಸಿದರೆ ಇವೆರಡೂ ಗುಂಪಿನಲ್ಲಿ ಕರುಳಿನ ಪೊಲಿಪ್ಸ್ ಸಂಭವವನ್ನು ಕಡಿಮೆ ಮಾಡಬಹುದಾಗಿದ್ದರೂ ಹೃದಯದ ಕವಾಟಿಗೆ ಸಂಬಂಧಿಸಿದ ವಿಷಮತೆ ಏರಿಕೆಯಾಗುವ ಸಾಧ್ಯತೆ ಇದೆ.

ತಳಿ ಪರೀಕ್ಷೆ

ಕ್ಯಾನ್ಸರ್ ನ ಹೆಚ್ಚು ಸಾಧ್ಯತೆಗಳಿಗೆ ಒಡ್ಡಿಕೊಳ್ಳುವ ವ್ಯಕ್ತಿಗಳ ತಳಿ ಅಥವಾ ವಂಶವಾಹಿನಿಯ ಪರೀಕ್ಷೆಯು ಪ್ರಗತಿಯಲ್ಲಿದೆ.ಅದೂ ಅಲ್ಲದೇ ಕ್ಯಾನ್ಸರ್ ಸಂಬಂಧಿತ ತಳಿ ರೂಪಾಂತರಗಳ ಬಗೆಗಿನ ಮಾಹಿತಿ ಕಲೆಹಾಕುವ ಪ್ರಕ್ರಿಯೆ ಮುಂದುವರೆದಿದೆ. ತಳಿ ರೂಪಾಂತರಗಳನ್ನು ಹೊತ್ತೊಯ್ಯುವ ಕ್ಯಾನ್ಸರ್ ಕೋಶಗಳು ಹೊಂದಿರುವವರು ಹೆಚ್ಚಿನ ಕಾಳಜಿ,ಔಷಧೋಪಚಾರ,ಕೆಮೊನಿರ್ಮೂಲನೆ ಅಥವಾ ಸಾಧ್ಯತೆಗಳನ್ನು ಕಡಿಮೆಗೊಳಿಸುವ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಕ್ಯಾನ್ಸರ್ ಕಾಯಿಲೆಗೆ ಬೇಗ ತುತ್ತಾಗುವವರ ಮತ್ತು ತಳಿ ಮೂಲದ ರೋಗದ ಲಕ್ಷಣಗಳನ್ನುಹೊಂದಿದವರು ಆರಂಭಮಟ್ಟದಲ್ಲಿ ಇದನ್ನು ಕ್ಯಾನ್ಸರ್ ನಿರ್ಮೂಲನಾ ಕ್ರಮಗಳಲ್ಲದೇ ಕೆಮಿಥೆರೊಪಿಯಂತಹ ಪದ್ದತಿಗಳನ್ನು ಅಳವಡಿಸಿಕೊಳ್ಳುವದರಿಂದ ಇದರ ಉಲ್ಬಣತೆ ತಡೆಯಬಹುದಾಗಿದೆ.

ಜೀನ್‌ ಕ್ಯಾನ್ಸರ್ ನ ವಿಧಗಳು ಲಭ್ಯತೆ
BRCA1, BRCA2 ಸ್ತನ, ಅಂಡಾಶಯ,ಗಂಟಲು ಪ್ರಯೋಗಕ್ಕಾಗಿ ಲಭ್ಯವಿರುವ ವಾಣಿಜ್ಯೋದ್ಯಶದ ಲ್ಯಾಬ್ ರೊಟರಿ ನಮೂನೆಗಳು
MLH1, MSH2, MSH6, PMS1, PMS2 ಕರಳು,ಮೂತ್ರಕೋಶ,ಸಣ್ಣಕರುಳು,ಉದರ,ಮೂತ್ರಾಶದ ಜಾಗೆ Commercially available for clinical specimens

ಲಸಿಕೆಗಳು

ಪ್ರೊಫಿಲ್ಯಾಕ್ಟಿಕ್ ಲಸಿಕೆಯು ಕ್ಯಾನ್ಸರ್ ಗ್ರಂಥಿಗಳ ಮೂಲಕ ಸೋಂಕು ತರುವ ಕೋಶಗಳನ್ನು ಅಂದರೆ ವೈರಸ್ ಗಳನ್ನು ನಿವಾರಿಸುತ್ತದೆ.ಕ್ಯಾನ್ಸರ್ ಕಾರಕಗಳನ್ನು ಸೂಕ್ತ ರೋಗ ನಿದಾನ ಪತ್ತೆ ಮೂಲಕ ಗುರುತಿಸಿ ರೋಗ ನಿರೋಧಕ ಶಕ್ತಿಗೆ ಇನ್ನಷ್ಟು ಉತ್ತೇಜನ ನೀಡಿ ಕ್ಯಾನ್ಸರ್ -ನಮೂನೆಯ ಎಪಿಟೋಪ್ ಗಳನ್ನು ನಿಯಂತ್ರಿಸಬಹುದಾಗಿದೆ.

ವರದಿಗಳ ಪ್ರಕಾರ ಮಾನವ ಪಪಿಲೊಮಾವೈರಸ್ ಲಸಿಕೆಯು ಮಾನವ ಪಪಿಲೊಮಾವೈರಸ್ ನ ಕಾರಣದಿಂದುಟಾಗುವ ಜನನೇಂದ್ರಿಯ ಕ್ಯಾನ್ಸರ್ ಮತ್ತು ತಳಿಯ ಸಂಬಂಧಿತ ಕಾಯಿಲೆ ಹೆಚ್ಚಳದ ಅಪಾಯ ತಡೆಗಟ್ಟಲು ಸಾಧ್ಯವಿದೆ. ಕೇವಲ ಎರಡುHPV ಲಸಿಕೆಗಳು ಅಂದರೆ ಗರ್ಡಾಸಿಲ್ ಮತ್ತು ಸೆರಾವೆರಿಕ್ಸ್ ಇತ್ತೀಚಿಗೆ ಆಕ್ಟೋಬರ್ 2007ರಿಂದ ಮಾರುಕಟ್ಟೆಯಲ್ಲಿ ಲಭ್ಯವಿವೆ. ಹೆಪಟೈಟಿಸ್ B ಲಸಿಕೆ ಕೂಡಾ ಇಲ್ಲಿ ದೊರಕುತ್ತಿದೆ.ಇದು ಹೆಪಟೈಟಿಸ್ B ವೈರಿಸ್ ನಿಂದ ಉಂಟಾಗುವ ಸೋಂಕಿನಿಂದ ಸಂಭವಿಸುವ ಜಠರ ಕ್ಯಾನ್ಸರ್ ನ್ನು ನಿರ್ಮೂಲನೆ ಮಾಡುವ ಸಾಧ್ಯತೆ ಇದೆ. ಚೂಪಾದ ಹಲ್ಲುಗಳಿಗೆ ಬೇಕಾಗುವ ಮೆಲಾನೊಮಾ ಲಸಿಕೆಯನ್ನು ಕೂಡಾ ಅಭಿವೃದ್ಧಿಪಡಿಸಲಾಗಿದೆ.(ಇದು ಬಹುತೇಕ ಮಾಂಸಾಹಾರಿ ಪ್ರಾಣಿಗಳ ದಂತ ಕ್ಯಾನ್ಸರ್ ಗೂ ಬಳಸಬಹುದಾಗಿದೆ.

ರೋಗ ತಪಾಸಣೆ

ಕ್ಯಾನ್ಸರ್ ನ ಸಮಗ್ರ ತಪಾಸಣೆಯು ಯಾವದೇ ಅನುಮಾನಾಸ್ಪದ ಕ್ಯಾನ್ಸರ್ ಲಕ್ಷಣಗಳಿವೆಯೇ ಎಂದು ಗುರುತಿಸಲು ಸ್ಕ್ರೀನಿಂಗ್ ನ ಅಗತ್ಯ ಇರುತ್ತದೆ. ದೊಡ್ಡ ಪ್ರಮಾಣದ ಆರೋಗ್ಯವಂತ ಜನಸಂಖ್ಯೆಯ ಸ್ಕ್ರೀನಿಂಗ್ ಅಗ್ಗ,ಸುರಕ್ಷಿತ,ದುರಾಕ್ರಮಣ ನಡೆಸುವುದಂತಹದಲ್ಲ.ಇಂತಹ ತಪಾಸಣೆಯು ತಪ್ಪಾಗಿ ಗ್ರಹಿಸುವ ಧನಾತ್ಮಕ ಫಲಿತಾಂಶಗಳನ್ನು ಕಡಿಮೆ ಮಾಡುವ ಸಾಧ್ಯತೆಇದೆ. ಒಂದು ವೇಳೆ ಕ್ಯಾನ್ಸರ್ ನ ಚಿನ್ಹೆಗಳು ಕಾಣಿಸಿದರೆ ಅವುಗಳಿಗಾಗಿ ಸೂಕ್ತ ಹಾಗು ಸಕಾಲದಲ್ಲಿ ಪರಿಣಾಮಕಾರಿ ಔಷಧೋಪಚಾರ ಮಾಡಬಹುದಾಗಿದೆ.

ಕ್ಯಾನ್ಸರ್ ನ ಸಕಾಲಿಕ ಸ್ಕ್ರೀನಿಂಗ್ ಅಥವಾ ಪರೀಕ್ಷೆಯಿಂದ ಆರಂಭಿಕ ಪ್ರಮುಖ ಪ್ರಕರಣಗಳನ್ನು ಪತ್ತೆಹಚ್ಚಬಹುದಾಗಿದೆ. ತತ್ ಕ್ಷಣದ ರೋಗ ಪತ್ತೆ ಕಾರ್ಯವು ರೋಗಿಯ ಆಯುಷ್ಯವರ್ಧನೆಗೆ ಕಾರಣವಾಗುತ್ತದೆ.ಆದರೆ ಇದರ ಬಗೆಗಿನ ಊಹಾಪೋಹಗಳಿಗೆ ಬಲಿಯಾಗಿ ರೋಗಿಗೆ ಸಾವಿನ ಭಯದಲ್ಲೇ ಬದುಕುವ ಅನಿವಾರ್ಯತೆ ಉಂಟಾಗಬಹುದು.ಆದ್ದರಿಂದ ಜೀವನದ ಕಾಲಾವಧಿಯ ಮೇಲೆ ಅಥವಾ ಯಾವದೇ ದೀರ್ಘ ಬದುಕಿನ ಬಗೆಗಿನ ವದಂತಿಗಳಿಗೆ ರೋಗಿಯು ಕಿವಿಗೊಡಬಾರದು.

ವಿವಿಧ ರೋಗಕಾರದ ಲಕ್ಷಣಗಳ ಪತ್ತೆಗೆ ವಿವಿಧ ಸ್ಕ್ರೀನಿಂಗ್ ಅಥವಾ ಪರೀಕ್ಷಾ ವಿಧಾನಗಳು ಅಭಿವೃದ್ದಿ ಹೊಂದಿವೆ. ಸ್ತನ ಕ್ಯಾನ್ಸರನ್ನು ಸ್ತನದ ಸ್ವಯಂ ಪರೀಕ್ಷೆಯಿಂದ ಕಂಡುಹಿಡಿಯಬಹುದಾಗಿದೆ.ಆದರೆ 2005ರಲ್ಲಿ ಚೀನಾದ 300,000ಮಹಿಳೆಯರ ಮೇಲೆ ನಡೆಸಿದ ಪ್ರಯೋಗದಿಂದಾಗಿ ಈ ಸ್ವಯಂ ಚಿಕಿತ್ಸೆ ಅಷ್ಟಾಗಿ ಸಫಲವಾಗಿಲ್ಲ. .ಮಮ್ಮೊಗ್ರಾಮ್ ಮೂಲಕ ಸ್ತನ ಕ್ಯಾನ್ಸರ್ ನ್ನು ಕಂಡು ಹಿಡಿದು ಅದನ್ನು ಸಣ್ಣದರಲ್ಲೇ ಕಡಿಮೆ ಮಾಡಿ ಸ್ತನ ಕ್ಯಾನ್ಸರ್ ಗಳ ಪ್ರಕರಣಗಳಿಗೆ ಕಡಿವಾಣ ಹಾಕಬಹುದು. ಮಮ್ಮೊಗ್ರಾಫಿಕ್ ಮೂಲಕ ತಪಾಸಣೆ ಮಾಡುವದರಿಂದ ಹತ್ತು ವರ್ಷಗಳ ಅವಧಿಯಲ್ಲಿ ಇಡೀ ದೇಶದ ಈ ಕಾಯಿಲೆ ಯಾವ ಹಂತದಲ್ಲಿದೆ ಮತ್ತು ಮೂಲ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕರುಳಿಗೆ ಸಂಬಂಧಿಸಿದ ಕ್ಯಾನ್ಸರ್ ನ್ನು ಸಂಪೂರ್ಣ ರಕ್ತ ತಪಾಸಣೆ ಮತ್ತು ಕೊಲೊಸ್ಕೊಪಿ,ಮೂಲಕ ಕ್ಯಾನ್ಸರ್ ಉಲ್ಬಣದ ಗಂಡಾಂತರವನ್ನು ತಕ್ಕ ಮಟ್ಟಿಗೆ ನಿರ್ಮೂಲನೆ ಮಾಡಲು ಸಾಧ್ಯತೆ ಇದೆ.ಇದರಿಂದ ಕೊಲೊನ್ ಕ್ಯಾನ್ಸರ್ ನ ಹರಡುವಿಕೆ ಮತ್ತು ಸಾವಿನ ದುರಂತಗಳನ್ನು ತಪ್ಪಿಸಲು ಸಾಧ್ಯವಿದೆ.ಆರಂಭಿಕ ತಪಾಸಣೆಯು ಆರಂಭಿಕ ಕ್ಯಾನ್ಸರ್ ಪೀಡಿತ ಪೊಲಿಪ್ಸ್ ಗಳನ್ನು ತೊಡೆದು ಹಾಕಬಹುದಾಗಿದೆ. .ಅದೇ ತೆರನಾಗಿ ಸೆರ್ವಿಕಲ್ ಸೈಟೊಲಾಜಿ ಪರೀಕ್ಷೆಯು(ಪಾಪ್ ಸ್ಮೆಅರ್ ಬಳಸಿ)ಮಾಡುವದರಿಂದ ಕಾಯಿಲೆಯ ತೀವ್ರ ಪತ್ತೆ ಮತ್ತು ಗುರುತಿಸುವಿಕೆ ಸಾಧ್ಯ. ಹಲವಾರು ವರ್ಷಗಳಿಂದ ಈ ಪರೀಕ್ಷೆಯು ಸೆರ್ವಿಕಲ್ ಕ್ಯಾನ್ಸರ್ ಮತ್ತು ಕ್ಯಾನ್ಸರ್ ಹೆಚ್ಚಳ ಮತ್ತು ಸಾವಿನ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣಿಸಿದೆ. ವೃಷಣಗಳಿಗೆ ಸಂಬಂಧಿಸಿದ ಟೆಸ್ಟಿಕುಲರ್ ಸ್ವಯಂ ಪರೀಕ್ಷೆಯನ್ನು 15ವರ್ಷಗಳ ವಯೋಮಾನದ ಪುರುಷರು ಮಾಡಿಕೊಳ್ಳಬಹುದಾಗಿದೆ.ಇದರಿಂದ ಬಹುಬೇಗನೆ ವೃಷಣಕೆ ಸಂಬಂಧಿಸಿದ ವೃಷಣ ಕ್ಯಾನ್ಸರ್ ನ್ನು ಪತ್ತೆ ಹಚ್ಚಬಹುದಾಗಿದೆ. ಪುರುಷ ಜನನೇಂದ್ರ ಕ್ಯಾನ್ಸರ್ ನ್ನು ಡಿಜಿಟಲ್ ರೆಕ್ಟಲ್ ಪರೀಕ್ಷೆಯ ಮೂಲಕ ಅಂದರೆ ಪ್ರೊಸ್ಟೇಟ್ ಆಂಟಿಜಿನ್ (PSA)ಜೊತೆಯಲ್ಲಿ ರಕ್ತ ಪರೀಕ್ಷೆಯೊಂದಿಗೆ ಇದನ್ನು ಮಾಡಬಹುದು.ಕೆಲವು ಸಂಘಟನೆಗಳು (ಅಂದರೆUS ನ ಪ್ರೆವೆಂಟಿವ್ ಸರ್ವಿಸಿಸ್ ಟಾಸ್ಕ್ ಫೋರ್ಸ್ )ಶಿಫಾರಿಸ್ಸಿನಂತೆ ಪ್ರತಿಯೊಬ್ಬ ಪುರುಷ ಈ ಸ್ಕ್ರೀನಿಂಗ್ ಗೆ ಒಳಗಾಗಬೇಕೆಂದು ಅದು ಹೇಳುತ್ತದೆ.

ಕೆಲವು ಪ್ರಕರಣಗಳಲ್ಲಿ ಇದರ ಲಕ್ಷಣಗಳು ಸಾಬೀತಾಗದೇ ಇಂತಹ ತಪಾಸಣೆ ಜೀವ ಉಳಿಸಬಲ್ಲದೇ ಎಂಬ ಬಗ್ಗೆ ವಿವಾದವಿದೆ. ರೋಗ ನಿದಾನ ಪ್ರಕ್ರಿಯೆ ಮತ್ತು ಕ್ಯಾನ್ಸರ್ ಚಿಕಿತ್ಸೆಯು ಕ್ಯಾನ್ಸರ್ ಅಪಾಯಗಳನ್ನು ಕಡಿಮೆ ಮಾಡುತ್ತದೆಯೇ ಎಂಬುದು ಸ್ಕ್ರೀನಿಂಗ್ ಎಷ್ಟರ ಮಟ್ಟಿಗೆ ಲಾಭದಾಯಕ ಎಂಬುದರ ಮೇಲೆ ವಿವಾದಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗಾಗಿ: ಪುರುಷರ ಜನನೇಂದ್ರಿಯ ಕ್ಯಾನ್ಸರ,ಅಂದರೆPSAಪರೀಕ್ಷೆಯು ಸಣ್ಣ ಪ್ರಮಾಣದ ಕ್ಯಾನ್ಸರ್ ಕಾಯಿಲೆಯನ್ನು ಗುರುತಿಸಬಹುದು ಆದರೆ ಇದು ಪ್ರಾಣಾಪಾಯನ್ನುಂಟು ಮಾಡಲಾರದಾದರೂ ಇದರ ಚಿಕಿತ್ಸೆ ಮಾತ್ರ ನಿಲ್ಲುವದಿಲ್ಲ. ಇಂತಹ ಸಂದರ್ಭದಲ್ಲಿ ವಿಪರೀತವಾದ ರೋಗನಿದಾನ ಪತ್ತೆ ಎಂದು ಇದನ್ನು ಕರೆಯಬಹುದು,ಇದು ಕೆಲವು ಅನವಶ್ಯಕ ಶಸ್ತ್ರ ಚಿಕಿತ್ಸೆಯಂತಹ ಕ್ರಮಗಳು ಸಂಕೀರ್ಣ ಸಮಸ್ಯೆ ತರಬಹುದಾಗಿದೆ. ಈ ಸಂದರ್ಭದಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಗಾಗಿ ನಡೆಸಿದ ಪ್ರೊಸ್ಟೇಟ್ ಬಯಾಪ್ಸಿಯು ಅಡ್ಡಪರಿಣಾಮಗಳನ್ನು ಅಲ್ಲದೇ ರಕ್ತಸ್ರಾವ ಮತ್ತು ಸೋಂಕಿಗೆ ಕಾರಣವಾಗುವ ಸಾಧ್ಯತೆ ಇದೆ. ಪ್ರೊಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯು ಇನ್ ಕಾಂಟಿನೆನ್ಸ್ (ಮೂತ್ರದ ಹರಿಯುವಿನ ಮೇಲಿನ ನಿಯಂತ್ರಣ ಕಳೆದುಕೊಳ್ಳುವುದು)ಎರೆಕ್ಟೈಲ್ ನಿಷ್ಕ್ರಿಯತೆ (ಜನನಾಂಗದ ಉದ್ರೇಕದ ಸಾಮರ್ಥ್ಯ ಕಡಿಮೆ ಇದರಿಂದ ಸಂಭೋಗ ಅತೃಪ್ತಿದಾಯಕವಾಗುತ್ತದೆ) ಅದೇ ರೀತಿ ಸ್ತನ ಕ್ಯಾನ್ಸರ್ ಗೂ ಇದೇ ತೆರನಾದ ಟೀಕೆಗಳು ಬಂದಿವೆ,ಕೆಲವು ದೇಶಗಳಲ್ಲಿ ಸ್ತನ ಕ್ಯಾನ್ಸರ್ ಕಾರ್ಯಕ್ರಮಗಳು ಸಮಸ್ಯೆ ಬಗೆಹರಿಸುವದಕ್ಕಿಂತ ಹೆಚ್ಚು ವಿಪರೀತಗಳಿಗೆ ಕಾರಣವಾಗುತ್ತಿದೆ. .ದೊಡ್ದ ಪ್ರಮಾಣದಲ್ಲಿ ಮಹಿಳೆಯರನ್ನು ಸ್ತನ ಕ್ಯಾನ್ಸರ್ ಗಾಗಿ ಪರೀಕ್ಷೆಗೆಒಳಪಡಿಸುವದಕಿಂತ ಇದರಲ್ಲಿ ತಪ್ಪು ತಪ್ಪಾಗಿ ಅಚಾತುರ್ಯಗಳಿಂದ ಇಲ್ಲದ ಕ್ಯಾನ್ಸರ್ ಗಾಗಿ ಮಹಿಳೆಯರು ಕಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ಹೆಚ್ಚು ಪ್ರಕರಣಗಳ ತಪಾಸಣೆಯ ಶ್ರಮ ಮತ್ತು ಅದನ್ನು ಬೆನ್ನಟ್ಟಿ ಪರಿಹಾರ ಮತ್ತು ಔಷಧೋಪಚಾರ ಇನ್ನೂ ಜಟಿಲ ಕಾರ್ಯವಾಗುವ ಸಂದರ್ಭವೇ ಹೆಚ್ಚು.ಒಂದೇ ಒಂದು ಸ್ತನ ಕ್ಯಾನ್ಸರ್ ನ ಆರಂಭಿಕ ಹಂತ ಕಂಡುಕೊಳ್ಳಲು ಎಲ್ಲಾ ಜನರಿಗೆ ಪರೀಕ್ಷೆಯ ಆತಂಕ ಒಡ್ಡಿದಂತಾಗುತ್ತದೆ.

ಪ್ಯಾಪ್ ಸ್ಮಿಯರ್ (ಒಂದು ತುದಿಯ ತೊಟ್ಟಿನ )ಮೂಲಕ ಕುತ್ತಿಗೆ ಕ್ಯಾನ್ಸರ್ ನ್ನು ಸ್ಕ್ರೀನಿಂಗ್ ಮಾಡಬಹುದು ಇದು ಎಲ್ಲಾ ಕ್ಯಾನ್ಸರ್ ತಪಾಸಣಾ ಕ್ರಿಯೆಗಳಿಗಿಂತ ಉತ್ತಮವಾದುದೆಂದು ಪರಿಗಣಿಸಲಾಗಿದೆ.ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಇಂಥ ತಪಾಸಣೆಗಳು ಸ್ಪಷ್ಟ ಅಪಾಯಕಾರಿ ಅಂಶಗಳನ್ನು (ಲೈಂಗಿಕ ಸಂಪರ್ಕ)ಹೊರಗೆಡುವುತ್ತವೆ. ಇದು ವೈರಸ್ ಗಳಿಂದ ಹರಡುವ ಸಾಧ್ಯತೆ ಇರುವದರಿಂದ ಇದರ ಸುದೀರ್ಘ ಕಾಲಾವಧಿಯನ್ನು ಪತ್ತೆ ಹಚ್ಚಲು ತೀವ್ರ ಪರೀಕ್ಷೆಗಳು ಬೇಕಾಗುತ್ತವೆ.ಇದು ಸಾಮಾನ್ಯವಾಗಿ ನಿಧಾನ ಹರಡುವ ಗುಣಲಕ್ಷಣ ಹೊಂದಿದೆ. ಹೇಗೆಯಾದರೂ ಈ ಪರೀಕ್ಷೆಯು ಸರಳ ಮತ್ತು ಅಗ್ಗದ ತಪಾಸಣೆಯೂ ಆಗಿದೆ.

ಇದೇ ಕಾರಣಕ್ಕಾಗಿ ಕ್ಯಾನ್ಸರ್ ಚಿಕಿತ್ಸೆಯನ್ನು ಕೈಗೊಳ್ಳುವ ಮುನ್ನ ಇದರ ಲಾಭ ಮತ್ತು ಪರೀಕ್ಷಾ ಸಮಯದ ಪ್ರಕ್ರಿಯೆ ಹಾಗು ಚಿಕಿತ್ಸಾ ವಿಧಾನದ ಬಗ್ಗೆಯೂ ಆಲೋಚನೆ ಮಾಡುವುದು ಒಳಿತು.

ಜನರಲ್ಲಿನ ಕ್ಯಾನ್ಸರ್ ತಪಾಸಣೆಗೆ ವೈದ್ಯಕೀಯ ಛಾಯೆ ಬಳಸುವುದು, ಜನರಲ್ಲಿನ ಸ್ಪಷ್ಟ ಕ್ಯಾನ್ಸರ್ ಚಿನ್ಹೆಗಳನ್ನು ಕಾಣದೇ ಮುಂದುವರೆಯುವುದು ಕೂಡಾ ಒಂದು ಸಮಸ್ಯೆಯ ಆಗರವೇ ಸರಿ. ಇದು ಇತ್ತೀಚಿನ ವರದಿಗಳಂತೆ ರೋಗ ಪತ್ತೆಯು ಒಂದು ಅಪಾಯಕಾರಿ ಅಥವಾ ಗಂಡಾಂತರಕಾರಿಯಾದ ಇನ್ಸೆಡೆಂಟಾಲೊಮಾ ,(ಸಾಂದರ್ಭಿಕ ಆರೋಗ್ಯದ ಸಮಸ್ಯೆ) ಎಂದು ಕರೆಯಲ್ಪಟ್ಟಿದೆ.ಇದನ್ನು ಹಾನಿಕಾರಕ ಮತ್ತು ಅಪಾಯಕಾರಿ ರೋಗಪತ್ತೆ ಕಾರ್ಯವೆಂದೂ ವ್ಯಾಖ್ಯಾನಿಸಲಾಗಿದೆ. ಇತ್ತೀಚಿನCT ಸ್ಕ್ಯಾನ್ ಮೂಲಕ ಧೂಮಪಾನಿಗಳ ಶ್ವಾಸಕೋಶದ ಕ್ಯಾನ್ಸರ್ ತಪಾಸಣೆಯು ಸೂಕ್ತ ಫಲಿತಾಂಶಗಳನ್ನು ನೀಡಿಲ್ಲ ಇದಕ್ಕಾಗಿ ವ್ಯವಸ್ಥಿತ ಸ್ಕ್ಯಾನಿಂಗ್ ಬಗ್ಗೆ ಜುಲೈ2007ರಿಂದಲೂ ಯಾವುದೇ ಶಿಫಾರಸುಗಳು ಬಂದಿಲ್ಲ. ರಾಂಡೊಮೈಜ್ಡ್ ಕ್ಲಿನಿಕಲ್ ಪ್ರಯೋಗಗಳು(ಸರಾಸರಿ ತಪಾಸಣಾ ಪ್ರಯೋಗಗಳು) ಸಾದಾ ಎದೆಯ ಎಕ್ಷರೇ ತೆಗೆದು ಧೂಮಪಾನಿಗಳಲ್ಲಿನ ಶ್ವಾಸಕೋಶದ ಕ್ಯಾನ್ಸರ್ ಕಂಡು ಹಿಡಿಯುವದರಿಂದ ಯಾವದೇ ನಿಶ್ಚಿತ ಲಾಭ ದೊರಕಿಲ್ಲ.ಈ ಟ್ರಯಲ್ ಅಷ್ಟಾಗಿ ಸೂಕ್ತವೆನಿಸಿಲ್ಲ.

ಶ್ವಾನಗಳ ಕ್ಯಾನ್ಸರ್ ಪತ್ತೆ ಕಾರ್ಯ ಕೆಲಮಟ್ಟಿಗೆ ಭರವಸೆ ಮೂಡಿಸಿದೆಯಾದರೂ ಅದಿನ್ನು ಸಂಶೋಧನೆಯ ಆರಂಭಿಕ ಹಂತದಲ್ಲೇ ಉಳಿದುಕೊಂಡಿದೆ.

ರೋಗನಿರ್ಣಯ

ಕ್ಯಾನ್ಸರ್ 
ಎದೆ ಭಾಗದ ಎಡಕ್ಕೆ ಶ್ವಾಸಕೋಶದ ಕ್ಯಾನ್ಸರ್ ಯ ಕ್ಷಕಿರಣ

ಬಹುತೇಕ ಕ್ಯಾನ್ಸರ್ ಗಳು ಆರಂಭಿಕವಾಗಿ ಕೆಲವು ಸಾಮಾನ್ಯ ಲಕ್ಷಣಗಳೊಂದಿಗೆ ಗೋಚರಿಸಬಹುದು ಅಥವಾ ಸ್ಕ್ಯಾನಿಂಗ್ ಮೂಲಕ ಪತ್ತೆಯಾಗಬಹುದು. ಇದರಲ್ಲಿನ ಯಾವೂ ಖಚಿತ ರೋಗ ಪತ್ತೆ ಮಾಡುವದಕ್ಕೆ ವಿಫಲವಾಗುತ್ತವೆ. ಇದಕ್ಕಾಗಿ ರೋಗನಿದಾನ ಶಾಸ್ತ್ರಜ್ಞ,ಅಂದರೆ ಫಿಜಿಸಿಯನ್ (ಔಷಧಿ ತಜ್ಞ) ಈತ ಕ್ಯಾನ್ಸರ್ ಮತ್ತು ಇತರೆ ರೋಗಗಳ ಪತ್ತೆಯಲ್ಲಿ ಪರಣಿತಿ ಪಡೆದಿರಬೇಕಾಗಿರುತ್ತದೆ. ಕ್ಯಾನ್ಸರ್ ರೋಗದ ಅನುಮಾನದ ವ್ಯಕ್ತಿಗಳನ್ನು ವೈದ್ಯಕೀಯ ತಪಾಸಣೆಗಳ ಮೂಲಕ ಆತನನ್ನು ಸಂಶಯದಿಂದ ದೂರ ಮಾಡಬಹುದು. ಇವು ಸಾಮಾನ್ಯವಾಗಿ ರಕ್ತ ತಪಾಸಣೆಗಳು,ಎಕ್ಷರೇಗಳು CT ಸ್ಕ್ಯಾನ್ ಗಳು ಮತ್ತು ಎಂಡೊಸ್ಕೊಪಿ ಮೊದಲಾದವು.

ರೋಗಶಾಸ್ತ್ರ

ವಿಭಿನ್ನ ಕಾರಣಗಳಿಗಾಗಿ ಕ್ಯಾನ್ಸರ್ ರೋಗವೆಂದು ಅನುಮಾನಿಸಬಹುದಾಗಿದೆ.ಆದರೆ ಒಬ್ಬ ವೈದ್ಯಕೀಯ ರೋಗ ನಿದಾನ ಶಾಸ್ತ್ರಜ್ಞ ನಡೆಸುವ ಹಳೆಯ ರೋಗದ ತಪಾಸಣೆ ಬಗ್ಗೆ ಕ್ಯಾನ್ಸರ್ ಗೆ ಕಾರಣವಾಗುವ ನಿಖರ ಕೋಶಗಳ ಪರೀಕ್ಷೆಗಳ ಮೂಲಕ ದೃಢಪಡುತ್ತದೆ. ಅಂಗಾಂಶವನ್ನು ಬಯಾಪ್ಸಿ ಅಥವಾ ಶಸ್ತ್ರಚಿಕಿತ್ಸೆ ಮೂಲಕ ತಪಾಸಣೆಗೆ ಪಡೆಯಬಹುದು. .ಹಲವಾರು ಬಯಾಪ್ಸಿಗಳು(ಚರ್ಮ,ಸ್ತನ ಅಥವಾ ಜಠರ)ವೈದ್ಯರ ಕಚೇರಿ ಅಥವಾ ಕ್ಲಿನಿಕ್ ನಲ್ಲೇ ನಡೆಯುವುದು ಸಾಮಾನ್ಯ. ಜೀವಕೋಶಗಳ ಛೇದದಿಂದ ಅಂಗಾಂಶಗಳ ತಪಾಸಣೆಯನ್ನು ನಡೆಸಲಾಗುತ್ತದೆ.ಇಲ್ಲಿ ಅರಿವಳಿಕೆ ಮತ್ತು ಶಸ್ತ್ರಚಿಕಿತ್ಸೆಗಳು ಆಪ್ ರೇಶನ್ ಕೊಠಡಿಯಲ್ಲಿ ನಡೆಸಲಾಗುತ್ತದೆ.

ಈ ಅಂಗಾಂಶಗಳ ಛೇದನದ ರೋಗ ತಪಾಸಣೆಯು ರೋಗನಿದಾನ ಶಾಸ್ರ್ತಜ್ಞನಿಂದ ಸಂಪೂರ್ಣ ವಿವರ, ರೋಗದ ಉಲ್ಬಣದ ಪ್ರಮಾಣ, ಅದರ ಇತಿಹಾಸ,ಅದರ ಅನುವಂಶೀಯ ಇಲ್ಲವೇ ತಳಿಯ ಅಸಹಜತೆ ಮತ್ತು ಗೆಡ್ಡೆಯ ವಿವರಗಳನ್ನು ವೈದ್ಯರು ನಿಖರಗೊಳಿಸಬೇಕಾಗುತ್ತದೆ. ಇವುಗಳೊಂದಿಗೆ ಈ ಮಾಹಿತಿಯು ರೋಗಿಯ ಪೂರ್ವಸೂಚಕದ ಸಂಪೂರ್ಣ ಮೌಲ್ಯಮಾಪನದಿಂದ ಸರಿಯಾದ ಕ್ರಮ ಮತ್ತು ಸೂಕ್ತ ಚಿಕಿತ್ಸೆಯನ್ನು ನಿರ್ಣಿಯಿಸಬಹುದಾಗಿದೆ. ಸೈಟೊಜೆನೆಟಿಕ್ಸ್ ಮತ್ತು ಇಮ್ಮುನೊಹಿಸ್ಟೊಕೆಮಿಸ್ತ್ರಿ ಪರೀಕ್ಷಾ ವಿಧಾನಗಳು ಕೂಡಾ ರೋಗ ನಿದಾನ ತಪಾಸಣಾ ಶಾಸ್ತ್ರಜ್ಞನ ನೆರವಿಗೆ ಬರುತ್ತವೆ ಇವೆರಡು ಪರೀಕ್ಷೆಗಳ ಮೂಲಕ ಅಂಗಾಂಶದ ಮಾದರಿಯೊಂದಿಗೆ ವೈದ್ಯರು ತಪಾಸಣೆ ಚಿಕಿತ್ಸೆಗೆ ಮುಂದಾಗುತ್ತಾರೆ. ಈ ತಪಾಸಣೆಗಳು ಅಣುಗಳಲ್ಲಿನ ಬದಲಾವಣೆ (ರೂಪಾಂತರಗಳು, ಪ್ರಭಾವೀ ತಳಿಗಳು,ಮತ್ತು ಅಸಂಖ್ಯಾತ ಕ್ರೊಮೊಸೊಮ್ ಗಳ ಬದಲಾವಣೆಗಳು) ಕ್ಯಾನ್ಸರ್ ಕೋಶಗಳಲ್ಲಾದ ಪರಿವರ್ತನೆಗಳನ್ನುಅದು ತಿಳಿಸುತ್ತದೆ.ಇದರ ಮೂಲಕ ಕ್ಯಾನ್ಸರ್ ಯಾವ ಹಂತದಲ್ಲಿದೆ ಅದರ ಭವಿಷ್ಯತ್ ಚಿಕಿತ್ಸೆಗೆ ಇದು ಮಾಹಿತಿ ನೀಡುತ್ತದೆ.

ಆಡಳಿತ ಮಂಡಳಿ

ಕ್ಯಾನ್ಸರ್ ನಿರ್ವಹಣಾ ಆಯ್ಕೆಗಳ ಅಸ್ತಿತ್ವ ಹಲವಾರು ವಿಧಗಳಲ್ಲಿದೆ:ಕೆಮೊಥೆರಪಿ,ರೇಡಿಯೇಶನ್ ಥೆರಪಿ,ಶಸ್ತ್ರ ಚಿಕಿತ್ಸೆ,ಇಮ್ಮ್ಯುನೊಥೆರಪಿ,ಮೊನೊಕ್ಲೊನಿಯಲ್ ಎಂಟಿಬಾಡಿ ಥೆರಪಿ ಮತ್ತು ಇತರೆ ವಿಧಾನಗಳು ಇಲ್ಲಿನ ವ್ಯವಸ್ಥೆಯಲ್ಲಿವೆ. .ಇವುಗಳಲ್ಲಿ ಕ್ಯಾನ್ಸರ್ ಗೆಡ್ದೆಯ ಸ್ಥಳ ಮತ್ತು ಅದು ಯಾವ ಹಂತದಲ್ಲಿದೆ ಎಂಬುದನ್ನು ಪರಿಗಣಿಸಿ ರೋಗದ ನಿರ್ಣಯ ಮಾಡಲಾಗುತ್ತೆ.ಇದರ ಮೇಲಿಂದ ರೋಗಿಯ ಆರೋಗ್ಯದ ಪರೀಕ್ಷೆ ಮತ್ತು ಚಿಕಿತ್ಸೆ ಅವಲಂಬಿಸಿರುತ್ತದೆ ಪ್ರಾಯೋಗಿಕ ಕ್ಯಾನ್ಸರ್ ಚಿಕಿತ್ಸೆಗಳೂ ಅಭಿವೃದ್ಧಿಯಲ್ಲಿವೆ.

ದೇಹದ ಉಳಿದ ಭಾಗದ ಯಾವದಕ್ಕೂ ಹಾನಿಯಾಗದಂತೆ ಕ್ಯಾನ್ಸರ್ ಕೋಶಗಳನ್ನು ಯಶಸ್ವಿಯಾಗಿ ತೆಗೆಯುವುದೇ ಚಿಕಿತ್ಸೆಯ ಗುರಿಯಾಗಿದೆ. ಕೆಲವು ಬಾರಿ ಇದು ಶಸ್ತ್ರ ಚಿಕಿತ್ಸೆ ಮೂಲಕ ಕ್ಯಾನ್ಸರ್ ಕೋಶಗಳನ್ನು ತೆಗೆಯಬೇಕಾದಾಗ ಅಕ್ಕಪಕ್ಕದ ಕೋಶಗಳಿಗೆ ಧಕ್ಕೆಯಾಗದಂತೆ ಪರಿಣಾಮಕಾರಿಯಾಗಿ ಕ್ಯಾನ್ಸರ್ ಮೂಲದ ಅಂಗಾಂಶಗಳಿಗೆ ಒಟ್ಟಾರೆ ಕೊನೆ ಹೇಳುವ ಚಿಕಿತ್ಸೆಗಳು ನಡೆಯಬೇಕಾಗಿದೆ. ಕೆಮೊಥೆರಪಿಯ ಪರಿಣಾಮಗಳು ಸಾಮಾನ್ಯವಾಗಿ ಸೀಮಿತವಾಗಿದ್ದು ದೇಹದ ಇನ್ನುಳಿದ ಕೋಶಗಳಲ್ಲಿ ವಿಷಮತೆಯನ್ನು ಪಸರಿಸಲು ಕಾರಣವಾಗುತ್ತದೆ. ವಿಕಿರಣವೂ ಸಹಾ ಸಾಮಾನ್ಯ ಜೀವಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ.

ಯಾಕೆಂದರೆ ಕ್ಯಾನ್ಸರ್ ಹಲವಾರು ವರ್ಗದ ಕಾಯಿಲೆಗಳಿಗೆ ಉಲ್ಲೇಖನೀಯವಾಗಿದೆ. "ಕ್ಯಾನ್ಸರ್ ಗೆ ಏಕೈಕ ಪರಿಹಾರವಿಲ್ಲ"ಆದರೆ ಅದೇ ತೆರನಾಗಿ ಉಳಿದ ಸಾಂಕ್ರಾಮಿಕ ರೋಗಗಳಿಗೆ ಒಂದೇ ಒಂದು ಪರಿಹಾರ ಸೂತ್ರವಿಲ್ಲ. ಎಂಜಿಯೊಜೆನೆಸಿಸ್ ಇನ್ ಹಿಬಿಟಾರ್ಸ್ ಗಳ "ಸಿಲ್ವರ್ ಬುಲೆಟ"ಎಂಬ ಚಿಕಿತ್ಸೆಯು ಬಹಳಷ್ಟು ವಿಧದ ಕ್ಯಾನ್ಸರ್ ಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ ಆದರೆ ಇದು ಅಷ್ಟಾಗಿ ಚಾಲ್ತಿಯಲ್ಲಿಲ್ಲ.

ಪ್ರಾಗ್ನೋಸೀಸ್‌(ಸಂತತಿ)

ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ ಎಂಬುದು ಜನಜನಿತವಾಗಿದೆ. ಇದು ಕ್ಯಾನ್ಸರ್ ನ ಹಲವಾರು ನಿಶ್ಚಿತ ಕಾಯಿಲೆಗಳಿಗೆ ಇದು ನಿಶ್ಚಿತ ವಿಧವಾಗಿದೆ.ಆದರೆ ಆಧುನಿಕ ವೈದ್ಯಕೀಯ ಔಷಧೋಪಚಾರಗಳು ಇಂದು ಹೊಸ ಹೊಸ ಆವಿಷ್ಕಾರಗಳಿಗೆ ಟಿಪ್ಪಣಿಗಳನ್ನು ಒದಗಿಸಿದೆ. ಅನುವಂಶೀಯ ಕಾರಣಗಳಿಗಾಗಿ ಕೆಲವೇ ಕ್ಯಾನ್ಸರ್ ಗಳು ಬರಬಹುದ ಆದರೆ ಮಾರಣಾಂತಿಕ ಅನುವಂಶೀಯವಾಗಿ ಬರುವ ಹೃದಯಾಘಾತ ಮತ್ತು ಪಾರ್ಶ್ವವಾಯುಗಳು ಇನ್ನೂ ಅಪಾಯಕಾರಿಯಾಗಿವೆ.

ಕ್ಯಾನ್ಸರ್ ರೋಗಿಯ ಜೀವನಮಟ್ಟವು ಇದರ ಕಾರಣದಿಂದಾಗಿ ಚಿಕಿತ್ಸೆಯ ವೇಳೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ.ಇದರ ಅವಧಿಯಲ್ಲಿನ ಅಡ್ಡಪರಿಣಾಮಗಳಿಂದ (ಉದಾ:ಕೆಮೊಥೆರಪಿ ಗಂಭೀರ ಸ್ವರೂಪದ ಅಡ್ಡಪರಿಣಾಮ ಬೀರಬಹುದು) ಕ್ಯಾನ್ಸರ್ ಉಲ್ಬಾವಣಾವಸ್ಥೆಯಲ್ಲಿರುವಾಗ ರೋಗಿಗೆ ತೀವ್ರ ಮಟ್ಟದ ಕಾಳಜಿ ಕಕ್ಕುಲಾತಿಗಳ ಅಗತ್ಯವಿದೆ ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ವಲಯದಲ್ಲಿ ತೀವ್ರ ಪರಿಣಾಮದ ಸಾಧ್ಯತೆ ಹೆಚ್ಚು. ರೋಗಿಯ ಸತತ ಕಾಳಜಿ ದು:ಖ ಹಾಗು ನೋವುಗಳಿಗೆ ಖಾಯಂ ಆಸ್ಪತ್ರೆ ವಾಸ ಅಥವಾ ನಿರಂತರ ವಿಶ್ರಾಂತಿಗೆ ಶರಣಾಗುತ್ತಾನೆ.

ಭಾವನಾತ್ಮಕ ಪ್ರಭಾವ

ಹಲವಾರು ಸ್ಥಳೀಯ ಸಂಘಟನೆಗಳು ಕ್ಯಾನ್ಸರ್ ರೋಗಿಗಳಿಗೆ ಮುಕ್ತವಾಗಿ ವಿವಿಧ ಪ್ರಾಯೋಗಿಕ ಮತ್ತು ಸೇವಾರೀತಿಯ ಅಗತ್ಯಗಳನ್ನು ಪೂರೈಸುತ್ತವೆ. ಈ ಬೆಂಬಲವು; ಸಮೂಹ ಬೆಂಬಲ,ಆಪ್ತಸಮಾಲೋಚನೆ,ಸಲಹೆ,ಹಣಕಾಸಿನ ನೆರವು,ರೋಗಿಗಳಿಗೆ ಸಾರಿಗೆ ವೆಚ್ಚ ಚಿಕಿತ್ಸೆ ಹಾಗು ಕ್ಯಾನ್ಸರ್ ಮಾಹಿತಿಯ ಚಿತ್ರ ವಿವರಣೆ ಇದರಿಂದ ದೊರೆಯುತ್ತದೆ. ನೆರೆಹೊರೆಯ ಸಂಘಟನೆಗಳು,ಸ್ಥಳೀಯ ಆರೋಗ್ಯ ರಕ್ಷಣಾ ಸೇವೆ ಒದಗಿಸುವಿಕೆ ಅಥವಾ ಆಯಾ ಆಸ್ಪತ್ರೆಗಳು ತಮ್ಮದೇಆದ ಸಾಮಾಜಿಕ ಸ್ತರದ ಸೇವಾ ಕೈಂಕರ್ಯಗಳನ್ನು ಒಳಗೊಂಡಿರುತ್ತವೆ.

ಆಪ್ತಸಮಾಲೋಚನೆಯು ಕ್ಯಾನ್ಸರ್ ರೋಗಿಗಳಿಗೆ ಭಾವನಾತ್ಮಕ ಬೆಂಬಲವನ್ನು ಒದಗಿಸುತ್ತದೆ.ಇದು ರೋಗಿಗಳು ತಮ್ಮ ಕಾಯಿಲೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳುವಂತೆ ಮಾಡಿಕೊಡುತ್ತವೆ. ವಿವಿಧ ಆಪ್ತಸಮಾಲೋಚನೆಗಳು ವೈಯಕ್ತಿಕ,ಗುಂಪು,ಕುಟುಂಬ,ಸಮಾನ ಮನಸ್ಕ ಸಮಾಲೋಚನೆ,ಸ್ಪಂದನೆ,ರೋಗಿಯಿಂದ ರೋಗಿಗೆ ಮತ್ತು ಲೈಂಗಿಕ ಸಮಾಲೋಚನೆಗಳು ಒಳಗೊಂಡಿರುತ್ತವೆ.

ಹಲವಾರು ಸರ್ಕಾರ ಮತ್ತು ಚಾರಿಟೇಬಲ್ ಸಂಘಟನೆಗಳು ಕ್ಯಾನ್ಸರ್ ಪೀಡಿತರಿಗೆ ನೆರವು ನೀಡಲೆಂದೇ ಹುಟ್ಟಿಕೊಂಡಿವೆ. ಇವು ಬಹುತೇಕ ಕ್ಯಾನ್ಸರ್ ನಿರ್ಮೂಲನೆ,ಕ್ಯಾನ್ಸರ್ ಚಿಕಿತ್ಸೆ ಮತ್ತು ಕ್ಯಾನ್ಸರ್ ಸಂಶೋಧನೆಯಲ್ಲಿ ತೊಡಗಿಕೊಂಡಿವೆ.

ಸಾಂಕ್ರಾಮಿಕ ಶಾಸ್ತ್ರ

ಕ್ಯಾನ್ಸರ್ 
Death rate from malignant cancer per 100,000 inhabitants in 2004.[176][177][178][179][180][181][182][183][184][185][186][187][188]

ವಿಶ್ವದ ಎಲ್ಲಾ ಸಾವುಗಳಲ್ಲಿ 13%ರಷ್ಟು ಕ್ಯಾನ್ಸರ್ As of 2004ಸಾವುಗಳಾಗಿವೆ (ಸುಮಾರು 7.4 ದಶಲಕ್ಷ) ಅತಿ ಮುಖ್ಯ ಕಾರಣಗಳು:ಶ್ವಾಸ ಕೋಶದ ಕ್ಯಾನ್ಸರ,(1.3ದಶಲಕ್ಷ ಸಾವು/ವರ್ಷ),ಉದರ ಕ್ಯಾನ್ಸರ್ (803,000) ಕರಳು ಕ್ಯಾನ್ಸರ್ (639,000 ಸಾವುಗಳು),ಜಠರ ಕ್ಯಾನ್ಸರ್ (610,000),ಮತ್ತು ಸ್ತನ ಕ್ಯಾನ್ಸರ್ (519,000ಸಾವುಗಳು) ಹೆಚ್ಚೆಂದರೆ 30%ರಷ್ಟು ಕ್ಯಾನ್ಸರ್ ನ್ನು ಅಪಾಯಕಾರಿಗಳನ್ನು ತ್ಯಜಿಸುವದರಿಂದ:ತಂಬಾಕು,ಅತಿಯಾದ ತೂಕ,ಅಥವಾ ಕೊಬ್ಬು,ಕಡಿಮೆ ಹಣ್ಣು ಮತ್ತು ತರಕಾರಿಗಳ ಸೇವನೆ,ದೈಹಿಕ ಚಟುವಟಿಕೆ ನಿಷ್ಕ್ರಿಯತೆ,ಮಧ್ಯಪಾನ,ಲೈಂಗಿಕ ಸೋಂಕಿನಿಂದ ಹರಡುವ ರೋಗಗಳು,ಮತ್ತು ವಾಯುಮಾಲಿನ್ಯ ಇವುಗಳಿಂದ ದೂರವಿದ್ದರೆ ಅದರ ಸಂಭವನೀಯತೆಯನ್ನು ತಡೆಯಬಹುದು.

ಯುನೈಟೆಡ್ ಸ್ಟೇಟ್ಸ್ ನಲ್ಲಿ 25%ರಷ್ಟು ಕ್ಯಾನ್ಸರ್ ಸಾವುಗಳು ಸಂಭವಿಸಿದರೆ ಅದರಲ್ಲಿ 30%ರಷ್ಟು ಶ್ವಾಸಕೋಶದ ಕ್ಯಾನ್ಸರ್ ನಿಂದ ಸಂಭವಿಸುತ್ತವೆ. ಬಹಳಷ್ಟು ಪುರುಷರಲ್ಲಿ ಜನನಾಂಗದ ಸೋಂಕಿನ ಕ್ಯಾನ್ಸರ್ ಬಹಳಷ್ಟು ಸಾಮಾನ್ಯವಾಗಿದೆ.(ಸುಮಾರು 25% ಹೊಸ ಪ್ರಕರಣಗಳು) ಮತ್ತು ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ (ಅದೂ25%ರಷ್ಟು) ಕ್ಯಾನ್ಸರ್ ,ಮಕ್ಕಳು ಮತ್ತು ವಯಸ್ಕರಲ್ಲಿ ಕಾಣಿಸುತ್ತದೆ.ಆದರೆ ಸಾಮಾನ್ಯವಾಗಿ ಸಂಭವಿಸುವದಿಲ್ಲ(U.S.ನಲ್ಲಿ ದಶಲಕ್ಷಕ್ಕೆ ಸುಮಾರು 150ಪ್ರಕರಣಗಳು)ಇದರಲ್ಲಿ ಲ್ಯುಕೇಮಿಯಾ ಸರ್ವೆ ಸಾಮಾನ್ಯ. U.S.ನಲ್ಲಿ ಆರಂಭಿಕ ಮೊದಲ ವರ್ಷದಲ್ಲಿ ಈ ಪ್ರಕರಣವು ದಶಲಕ್ಷಕ್ಕೆ ಸುಮಾರು 230 ಇತ್ತು.ಆಗ ನ್ಯುರೊಬ್ಲಾಸ್ಟಮಾ ಅತ್ಯಂತ ಸಾಮಾನ್ಯ ಕಾಯಿಲೆಯ ಲಕ್ಷಣವಾಗಿತ್ತು.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮೂವರಲ್ಲಿ ಓರ್ವ ತನ್ನ ಜೀವಿತಾವಧಿಯಲ್ಲಿ ಕ್ಯಾನ್ಸರಗೆ ಒಡ್ಡಿಕೊಳ್ಳುವ ಸಂಭವ ಹೆಚ್ಚಾಗಿದೆ. ಒಂದು ವೇಳೆ ಎಲ್ಲಾ ಕ್ಯಾನ್ಸರ್ ರೋಗಿಗಳು ಬದುಕಿದ್ದರೆ ಮತ್ತು ಕ್ಯಾನ್ಸರ್ ಸರಾಸರಿಯಾಗಿ ಲೆಕ್ಕಹಾಕಿದರೆ ಎರಡನೆಯ ದೊಡ್ಡ ಘಾತಕ ಕಾಯಿಲೆ; ಒಂಭತ್ತರಲ್ಲಿ ಓರ್ವ ಇದಕ್ಕೆ ಬಲಿಯಾಗುತ್ತಾನೆ. ಕ್ಯಾನ್ಸರ್ ನಿಂದ ಬಚಾವಾದವರು ಕೆಲಸಮಯದ ನಂತರ ಎರಡನೆಯ ಬಾರಿಗೆ ಇದೇ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ.ಈ ಪ್ರಕರಣದಲ್ಲಿ ಒಂಭತ್ತರಲ್ಲಿ ಇಬ್ಬರೂ ಇಂತಹವರು ಇರಲಿಕ್ಕೆ ಸಾಕು. ಇದರಲ್ಲಿನ ಅರ್ಧದಷ್ಟು ಎರಡನೆಯ ಬಾರಿಯ ಪ್ರಥಮರು ರಾಂಡಮ್ ಆಯ್ಕೆಯಲ್ಲಿ ಒಂಭತ್ತರಲ್ಲಿ ಒಬ್ಬರಂತೆ ಈ ಅಪಾಯವನ್ನು ಎದುರಿಸಬೇಕಾಗುತ್ತದೆ. ಹೆಚ್ಚಾಗುತ್ತಿರುವ ಅಪಾಯಕಾರಿ ಸಾಧ್ಯತೆಗಳು ಮೊದಲಿನ ಕಾಯಿಲೆ ಪ್ರಮಾಣವನ್ನೇ ಮುಂದುವರಿಸಿ ಅದೇ ಅಪಾಯಕಾರಿ ಸಂಗತಿಗಳಿಗೆ ರೋಗಿಗಳು ಬಲಿಯಾಗುತ್ತಾರೆ.ಅದಕ್ಕೆ ಆತನ ಕಾರಣಗಳಾದ ಅನುವಂಶೀಯತೆ ಇತಿಹಾಸ,ಮದ್ಯಪಾನ ಮತ್ತು ತಂಬಾಕು ಬಳಕೆ,ಕೊಬ್ಬು,ಮತ್ತು ಪರಿಸರದ ಪರಿಣಾಮಕ್ಕೆ ಒಡ್ಡುಕೊಳ್ಳುವಿಕೆ,ಇದು ಭಾಗಶಃ ಕೆಲವು ಪ್ರಕರಣಗಳಿಗೆ ಅನ್ವಯಿಸುತ್ತದೆ.ಮೊದಲ ಕ್ಯಾನ್ಸರ್ ಗೆ ನೀಡುವ ಚಿಕಿತ್ಸೆಯಿಂದ ಉಂಟಾಗುವ ಅಡ್ಡಪರಿಣಾಮಗಳು,ಕೆಮೊಥೆರಪಿಟಿಕ್ ಔಷಧಿಗಳು ಮೊದಲಾದವು ಇದರ ಉಲ್ಬಣಕ್ಕೆ ಕಾರಣವಾಗುತ್ತದೆ. ಕ್ಯಾನ್ಸರ್ ನಿಂದ ಬದುಕುಳಿದವರು ಮತ್ತೆ ಸ್ಕ್ರೀನಿಂಗ್ ಗೆ ಶಿಫಾರಸು ಮಾಡಲಾಗುತ್ತೆ.ಹೀಗೆ ಅವರ ಈ ಕಾಯಿಲೆ ಪತ್ತೆಗೆ ಅನುಕೂಲವಾಗುತ್ತಿದೆ.

ಇತಿಹಾಸ

ಇಂದು ಗ್ರೀಕ್ ಪದ ಕಾರ್ಸಿನೊಮಾ ವು ಜೀವಹಾನಿ ಮಾಡುವ ಗೆಡ್ಡೆಗೆ ಎಪಿಥೆಲೈಲ್ ಕೋಶಗಳು ಎಂದು ಹೆಸರಿಸಲಾಗುತ್ತದೆ. ಇದು ಸೆಲ್ಸಸ್ ಎಂಬಾತನು ಇದನ್ನು ಲ್ಯಾಟಿನ್ ಕ್ಯಾನ್ಸರ್ ಅಲ್ಲದೇ ಏಡಿ, ಅರ್ಬುದ ಕಾರ್ಸಿನೊಸ್ ಎಂದೂ ಭಾಷಾಂತರಿಸಿದ. ಗಲಾನ್ ಎಂಬಾತನು "ಆಂಕೊಸ್ " ನ್ನು ಎಲ್ಲಾ ಕ್ಯಾನ್ಸರ್ ಗೆಡ್ಡೆಗಳನ್ನು ಹೆಸರಿಸಲು ಬಳಸಿದ,ಇದು ಇಂದು ಆಧುನಿಕ ಪದ ಆಂಕೊಲಾಜಿಗೆ ಮೂಲಬೇರಾಗಿದೆ.

ಔಷಧಿ ಶಾಸ್ತ್ರದ ಜನಕ ಹಿಪ್ಪೊಕ್ರೇಟ್ಸ್ ತನ್ನ ಪುಸ್ತಕಗಳಲ್ಲಿ ವಿಭಿನ್ನ ಕ್ಯಾನ್ಸರ್ ಗಳ ಬಗ್ಗೆ ವಿವರಿಸಿದ್ದಾನೆ. ಆರಂಭಿಕ ಗೆಡ್ದೆಗಳ ಗೋಚರಿಸುವಿಕೆಯನ್ನು ಆತ ಆಂಕೊಸ ,ಎಂದರೆ ಗ್ರೀಕ್ ನವರು ಇದನ್ನು ಊತಕ್ಕೆ ಹೋಲಿಸಿದರು ಮತ್ತು ಹಾನಿಕಾರಕ ಕ್ಯಾನ್ಸರ್ ಗೆಡ್ದೆಗಳ ಬಗ್ಗೆ ಕಾರ್ಸಿನೊಸ್ ಪತ್ತೆ ಹಚ್ಚಿದರು.ಗ್ರೀಕ್ ರಿಗೆ ಇದು ಏಡಿ ಅಥವಾ ಕ್ರೈಫಿಶ್ ಹೀಗೆ ವಿಭಿನ್ನ ರೀತಿಗಳಲ್ಲಿ ವಿವರಿಸಲ್ಪಟ್ಟಿತು. ಈ ಹೆಸರು ಗಟ್ಟಿ ಗೆಡ್ಡೆಯ ಭಾಗವನ್ನು ಕತ್ತರಿಸಿದ ಮೇಲ್ಮೈಯನ್ನು ನೋಡಿ ವಿವರಿಸಲಾಯಿತು."ಎಲ್ಲಾ ನರಕೋಶಗಳು ಅಲ್ಲಲ್ಲಿ ಚದುರಿ ಪಸರಿಸಿದ್ದು ಏಡಿಯಂತಹ ಪ್ರಾಣಿಗಳು ತಮ್ಮ ಹಲವು ಪಾದಗಳನ್ನು ಅಲ್ಲಲ್ಲಿ ಚಾಚಿದಂತೆ ಇದು ಭಾಸವಾಗುತ್ತದೆ".(ಚಿತ್ರ ನೋಡಿ) ನಂತರ ಇದಕ್ಕೆ ಅಂತ್ಯದಲ್ಲಿ -ಓಮಾ ಎಂಬ ವ್ಯಂಜನವನ್ನು ಅಂಟಿಸಲಾಯಿತು.ಗ್ರೀಕರು ಈ ಊತದ ಗೆಡ್ಡೆ ಭಾಗಕ್ಕೆ ಕಾರ್ಸಿನೊಮಾ ಎಂದು ಹೆಸರಿಸಿದರು. .ಗ್ರೀಕ್ ಸಂಸ್ಕ್ರತಿಯಲ್ಲಿ ದೇಹವನ್ನು ಬಗೆದು ನೋಡುವ ಪದ್ದತಿಯಿಲ್ಲ.ಆದ್ದರಿಂದ ಹಿಪ್ಪೊಕ್ರಟ್ಸ್ ಕೇವಲ ಕ್ಯಾನ್ಸರ್ ಗೆಡ್ದೆಯನ್ನು ಹೊರಭಾಗದಿಂದಲೇ ಚಿತ್ರ ಬಳಸಿ ಈ ಕ್ಯಾನ್ಸರ್ ಗೆಡ್ಡೆಯ ಲಕ್ಷಣಗಳನ್ನು ವಿವಿರಿಸಲು ಚರ್ಮ,ಮೂಗು ಮತ್ತು ಸ್ತನಗಳಲ್ಲಿನ ಕ್ಯಾನ್ಸರ್ ಗೆಡ್ಡೆಗಳನ್ನು ಕೈಯಿಂದ ಬಿಡಿಸಿದ. .ಹ್ಯೂಮರ್ ಪ್ರಮೇಯದಂತೆ ನಾಲ್ಕು ಮೂಲ ಔಷಧಿಗಳನ್ನು ಚಿಕಿತ್ಸೆಗಾಗಿ ಬಳಸಿಕೊಳ್ಳಲಾಯಿತು.ಈ ದ್ರವಗಳು (ಕಪ್ಪುಮತ್ತು ಹಳದಿ ಪಿತ್ತರಸ,ರಕ್ತ ಮತ್ತುಕಫ)ಗಳ ಪರಿಣಾಮಗಳನ್ನು ಇಲ್ಲಿ ಬಳಸಲಾಯಿತು. ರೋಗಿಗಳ ಪ್ರಕಾರ ಹ್ಯೂಮರ್ ಚಿಕಿತ್ಸೆಯು ಆಹಾರ ಪದ್ದತಿ,ರಕ್ತ ಸೇರಿಸುವಿಕೆ,ಮತ್ತುಅಥವಾ ವಿರೇಚಕಗಳನ್ನು ಇದರ ಪರಿಹಾರಕ್ಕಾಗಿ ಬಳಸಲಾಗುತ್ತೆ. ಶತಮಾನಗಳಿಂದಲೂ ಕ್ಯಾನ್ಸರ್ ದೇಹದ ಯಾವ ಭಾಗದಲ್ಲಾದರೂ ಹುಟ್ಟಬಹುದೆಂಬುದನ್ನು ಸಂಶೋಧನೆ ಮಾಡಿದ್ದಾರೆ.ಆದರೆ ಹ್ಯೂಮರ್ ಚಿಕಿತ್ಸಾ ಪದ್ದತಿಯು 19ನೆಯ ಶತಮಾನದ ವರೆಗೂ ಚಾಲ್ತಿಯಲ್ಲಿತ್ತು.ಅದೇ ಸಂದರ್ಭದಲ್ಲಿ ಕೋಶಗಳನ್ನು ಸಂಶೋಧಿಸಲಾಗಿತ್ತು.

ಶಸ್ತ್ರ ಚಿಕಿತ್ಸೆಯು "ಅತ್ಯಂತ ಹಳೆಯ ಚಿಕಿತ್ಸಾ ಪದ್ದತಿ.ಇದು ಈಜಿಪ್ತನಲ್ಲಿ ಜನಪ್ರಿಯ ಶಸ್ತ್ರ ಚಿಕಿತ್ಸಾ ವಿಧಾನವೆಂದು ಬಳಕೆಯಲ್ಲಿತ್ತು.ಸುಮಾರು1600B.C.ನಲ್ಲಿ ಇದರ ಬಹಳಷ್ಟು ವಿಧಾನಗಳು ಬಳಕೆಯಲ್ಲಿದ್ದವು.ಆಕಾಲದ ಪಪಿರಸ(ದಾಖಲಾದ ವಿವರಗಳು) ಪ್ರಕಾರ 8 ಪ್ರಕರಣಗಳನ್ನು ಸ್ತನಗಳಿಗೆ ಸಂಬಂಧಿಸಿದ ಅಲ್ಸರ್ ಗಳನ್ನು ಕ್ವಾಟರೈಜೇಶನ್ (ಬರೆ ಹಾಕುವ ಪದ್ದತಿ) ಮೂಲಕ ಗುಣಪಡಿಸಿದ ಬಗ್ಗೆ ವಿವರಣೆ ಇದೆ.ಇದನ್ನು "ಫೈರ್ ಡ್ರಿಲ್ " ಎಂದು ಕರೆದಿದ್ದಾರೆ. ಇಲ್ಲಿನ ಬರಹವು "ಈ ಕಾಯಿಲೆಗೆ ಚಿಕಿತ್ಸೆ ಇಲ್ಲ ಎಂದು ಹೇಳಲಾಗಿದೆ"ಎಂಬ ವಿವರಣೆ ಇದೆ.

ಸುಮಾರು 1020ನಲ್ಲಿ ಅತ್ಯಂತ ಪ್ರಾರಂಭಿಕ ಎನ್ನಲಾದ ಶಸ್ತ್ರಚಿಕಿತ್ಸೆಯು ಕ್ಯಾನ್ಸರ್ ಗಾಗಿ ಪರಿಹಾರವನ್ನು ಅವಿಸಿನ್ನಾ (ಇಬ್ನ್ ಸಿನಾ) ದಿ ಕ್ಯಾನನ್ ಆಫ್ ಮೆಡಿಸಿನ್ ನಲ್ಲಿ ವಿವರಿಸಲಾಗಿದೆ. ಆತ ಹೇಳಿದ ಪ್ರಕಾರ ರೋಗಗ್ರಸ್ತ ಭಾಗವನ್ನು ಕತ್ತರಿಸಿ ತೆಗೆದು ಅಲ್ಲಿನ ರೋಗಪೀಡಿತ ಕೋಶವನ್ನು ತೆಗೆದು ಹಾಕಬೇಕು.ಇದು ಕತ್ತರಿಸುವಿಕೆ ಅಥವಾ ಗೆಡ್ದೆಯೆಡೆಗೆ ಹೋಗುವ ನರಗಳನ್ನು ತೆಗೆದು ಹಾಕಬೇಕೆಂದು ಸಲಹೆ ಮಾಡಿದ್ದಾನೆ. ಕ್ಯಾನ್ಸರ್ ಪೀಡಿತ ಭಾಗವನ್ನು ಹೊಡೆದು ಹಾಕಲು ಅಗತ್ಯವಿದ್ದರೆ ಕ್ವಾಟರೈಜೇಶನ್ (ಬರೆ ಹಾಕುವ ಮೂಲಕ) ತೆಗೆಯಬಹುದೆಂದು ಆತ ಶಿಫಾರಸು ಮಾಡಿದ್ದಾನೆ.

ಸುಮಾರು 16 ಮತ್ತು 17ನೆಯ ಶತಮಾನದಲ್ಲಿ ಈ ಪದ್ದತಿಯು ಬಹಳಷ್ಟು ಒಪ್ಪಿಗೆ ಪಡೆದುಕೊಂಡಿತು.ಸಾವಿನ ಕಾರಣ ತಿಳಿಯಲು ವೈದ್ಯರು ಆಯಾ ಭಾಗದ ಕೋಶಗಳನ್ನು ಕತ್ತರಿಸುವ ಪರಿಪಾಠಕ್ಕೆ ಅಂಟಿಕೊಂಡರು. ಜರ್ಮನಿಯ ಪ್ರೊಫೆಸರ್ ವಿಲ್ ಹೆಲ್ಮ್ ಫಾಬ್ರಿ ನಂಬಿರುವಂತೆ ಸ್ತನ ಕ್ಯಾನ್ಸರ್ ಗೆ ಅಲ್ಲಿನ ಹಾಲು ಗ್ರಂಥಿಯಲ್ಲಿನ ಕೊಳವೆಯಲ್ಲಿ ಗಟ್ಟಿಕಟ್ಟಿಕೊಳ್ಳುವ್ದಲ್ಲದೇ ಡಚ್ ಪ್ರೊಫೆಸರ್ ಫ್ರಾಂಕೊಯಿಸ್ ಡಿ ಲಾ ಬೊಯಿ ಸಿಲ್ವಿಯಸ್ ಈತ ಡೆಸ್ಕ್ರೇಟ್ಸ್ ನ ಅನುಯಾಯಿಯಾಗಿದ್ದ.ಎಲ್ಲಾ ರೋಗಗಳಿಗೆ ರಸಾಯನಿಕ್ ಸಂಸ್ಕರಣಾ ಪ್ರಕ್ರಿಯೆಗಳೇ ಕಾರಣ.ಅದೂ ಅಲ್ಲದೇ ಆಮ್ಲೀಯ ದ್ರವ ಕೀವಿನಿಂದಾಗಿ ಕ್ಯಾನ್ಸರ್ ಬರುತ್ತದೆ ಎಂದು ಆತ ಹೇಳಿದ್ದಾನೆ. ಆತನ ಸಮಕಾಲೀನ ನಿಕೊಲೇಸ್ ಟಲ್ಪ್ ಪ್ರಕಾರ ಕ್ಯಾನ್ಸರ್ ನಿಧಾನವಾಗಿ ಹರಡುವ ಒಂದು ವಿಷ ಮತ್ತು ಇದು ಸೋಂಕುನಿಂದಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

ಬ್ರಿಟಿಶ್ ಶಸ್ತ್ರಚಿಕಿತ್ಸಕ ಪರ್ಸಿವಾಲ್ ಪಾಟ್ ಮೊಟ್ಟಮೊದಲಬಾರಿಗೆ ಕ್ಯಾನ್ಸರ್ ನ ಮೊದಲ ಕಾರಣವನ್ನು ಪತ್ತೆಹಚ್ಚಿದ.ಸುಮಾರು 1775ರಲ್ಲಿ ವೃಷಣ ಕೋಶದ ಕ್ಯಾನ್ಸರ್ ಚಿಮಣಿ ಕಾರ್ಮಿಕರಿಗೆ ಸಾಮಾನ್ಯವಾಗಿತ್ತೆಂದು ಆತ ಕಂಡು ಹಿಡಿದ. .ಹಲವಾರು ಪರಿಣತರು ಸಾಮಾನ್ಯವಾಗಿ ತಮ್ಮ ವ್ಯಯಕ್ತಿಕ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಿದ್ದಾರೆ.ಆದರೆ ಎಲ್ಲಾ ತಜ್ಞರು ಒಟ್ಟಾಗಿ ಅಧ್ಯಯನ ನಡೆಸಿದಾಗ ಒಂದು ಗಟ್ಟಿ ನಿರ್ಣಯಕ್ಕೆ ಬರಬಹುದಾಗಿದೆ.

ಸೂಕ್ಷ್ಮದರ್ಶಕ ಯಂತ್ರದ ಆವಿಷ್ಕಾರದ 18ನೆಯ ಶತಮಾನದಲ್ಲಿ ಈ ರೋಗದ ಕ್ಯಾನ್ಸರ್ ವಿಷವು ಕೋಶಗಳಲ್ಲಿನ ಬಿಳಿ ದ್ರವ ಅಂದರೆ ಕೀವು ದೇಹದ ಇತರೆ ಭಾಗಗಳಿಗೆ ಪಸರಿಸಲು ಕಾರಣವಾಗುತ್ತದೆ.ಇವುಗಳಿಗೆ ದೇಹದ ಸ್ಥಳಗಳಲ್ಲಿ"ವರ್ಗಾವಣೆಯಿಂದ ವ್ಯಾಧಿ ವ್ಯಾಪಿಸ"ಲು ಕಾರಣವಾಗುತ್ತದೆ. ಕಾಯಿಲೆಯ ವೀಕ್ಷಣೆಯನ್ನು ಮೊದಲ ಬಾರಿಗೆ 1871 ಮತ್ತು 1874ರ ಮಧ್ಯ ಇಂಗ್ಲಿಷ್ ಶಸ್ತ್ರ ಚಿಕಿತ್ಸಕ ಕ್ಯಾಂಪ್ ಬೆಲ್ ಡೆ ಮೊರ್ಗನ್ ಸೃಷ್ಟಿಸಿದ. ಕ್ಯಾನ್ಸರ್ ಗುಣಮುಖಕ್ಕೆ ಬಳಸಿದ ಶಸ್ತ್ರ ಚಿಕಿತ್ಸಾ ಪದ್ದತಿಯು ಅರೋಗ್ಯಕರ ವಾತಾವರಣದ ಸಮಸ್ಯೆಯಿಂದ ಬಳಲಿದ್ದರಿಂದ ಅದರ ಫಲಿತಾಂಶಗಳು ತೃಪ್ತಿಕರವಾಗಿರಲಿಲ್ಲ. ಸ್ಕಾಟಿಶ್ ಜನಪ್ರಿಯ ಶಸ್ತ್ರಚಿಕಿತ್ಸಕ ಅಲೆಕ್ಸಾಂಡರ್ ಮೊನ್ರೊ ಶಸ್ತ್ರಚಿಕಿತ್ಸೆಗೊಳಗಾದ 60 ಮಹಿಳೆಯರಲ್ಲಿ ಇಬ್ಬರಲ್ಲಿ ಮಾತ್ರ ಸ್ತನ ಗೆಡ್ದೆ ಕಾಣಿಸಿಕೊಂಡಿತು.ಎಂದು ತನ್ನ ಪ್ರಯೋಗಗಳಲ್ಲಿ ತಿಳಿಸಿದ್ದಾನೆ. ಸೂಕ್ಷ್ಮ ಮತ್ತು ಸ್ವಯಂ ನಿಯಂತ್ರಿತ ಹಾಗು ಸುಧಾರಿತ ಶಸ್ತ್ರ ಚಿಕಿತ್ಸಾ ಪದ್ದತಿಗಳು 19ನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದವು.ಇದರಿಂದಾಗಿ ಬದುಕುಳಿಯುವವರ ಸಂಖ್ಯೆಯೂ ಹೆಚ್ಚಳ ಕಂಡಿತು,ಇದೂ ಅಲ್ಲದೇ ಕ್ಯಾನ್ಸರ್ ರೋಗ ಪರಿಹಾರಕ್ಕೆ ಶಸ್ತ್ರ ಕ್ರಿಯೆಯು ಪ್ರಾಥಮಿಕ ಪರಿಹಾರವಾಗಿ ಮಾರ್ಪಟ್ಟಿತು. ಅಪರೂಪವೆನ್ನುವಂತೆ ವಿಲಿಯಮ್ ಕೊಲಿ 1800ನೆಯ ಶತಮಾನದಲ್ಲಿ ಶಸ್ತ್ರ ಚಿಕಿತ್ಸೆ ನಂತರ ಗುಣಮುಖತೆ ಪ್ರಮಾಣ ಅಧಿಕಗೊಳ್ಳುವುದು ಎಂದು ಹೇಳಿದನಲ್ಲದೇ ಎಸೆಪ್ಸಿಸ್ (ಕ್ಯಾನ್ಸ್ರರ್ ಗೆಡ್ದೆಯಲ್ಲಿಬ್ಯಾಕ್ಟೀರಿಯಾಗಳನ್ನು ಮಿಶ್ರ ಫಲಿತಾಂಶಕ್ಕಾಗಿ ಒಳಸೇರಿಸಿದ).ಇದಕ್ಕೂ ಮುಂಚಿನ ಸಂದರ್ಭ ಗಿಂತ ರೋಗಿಗಳ ಗುಣಮುಖದ ಮಟ್ಟ ಗಣನೀಯವಾಗಿ ಏರಿಕೆ ಕಂಡಿತು.ಇದು ಶಸ್ತ್ರ ಚಿಕಿತ್ಸಕನ ವೈಯಕ್ತಿಕ ಕಲೆಗಾರಿಕೆಯಾಗಿದ್ದು ನಿಪುಣ ಚಿಕಿತ್ಸದ ಇದನ್ನು ಜಾಣ್ಮೆಯಿಂದ ಕ್ಯಾನ್ಸರ್ ಗೆಡ್ಡೆಯನ್ನು ತೆಗೆಯುವ ಕಾರ್ಯ ನಿರ್ವಹಿಸುತ್ತಾನೆ ಎಂದು ಆತ ಅಭಿಪ್ರಾಯಪಟ್ಟ. ಇದೇ ಸಮಯದಲ್ಲಿ ದೇಹವು ವಿವಿಧ ಅಂಗಾಂಶಗಳಿಂದ ರಚನೆಗೊಂಡಿದ್ದು,ಇದು ದಶಲಕ್ಷಗಟ್ಟಲೇ ಜೀವಕೋಶಗಳಿಂದ ಹೆಣೆಯಲ್ಪಟ್ಟಿದೆ.ಆಗಿನ ಹ್ಯೂಮರ ಪ್ರಮೇಯದ ಪರಿಹಾರಗಳು ದೇಹದಲ್ಲಿ ರಸಾಯನಿಕ ಪ್ರತಿಕ್ರಿಯೆಗಳಿಂದ ಅಸಮತೋಲನಗೊಂಡದ್ದರಿಂದ ಅದಕ್ಕೆ ವಿದಾಯ ಹೇಳಲಾಯಿತು. ಕೋಶ ರಚನಾ ವಿಧಾನಗಳ ಅಧ್ಯಯನ ಮತ್ತು ಚಿಕಿತ್ಸೆ ಕಾಲ ಆಗ ಜನ್ಮ ತಾಳಿತು.

ಯಾವಾಗ ಮೇರಿ ಕ್ಯೂರಿ ಮತ್ತು ಪೀರೆ ಕ್ಯೂರಿಯ ಜೋಡಿ ವಿಕಿರಣಗಳನ್ನು 19ನೆಯ ಶತಮಾನದಲ್ಲಿ ಕಂಡು ಹಿಡಿದರೋ ಆಗ ಮೊದಲ ಬಾರಿಗೆ ಶಸ್ತ್ರ ಕ್ರಿಯೆ ರಹಿತ ಕ್ಯಾನ್ಸರ್ ಪರಿಹಾರಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಯಿತು. ವಿಕಿರಣ ಪದ್ದತಿಯಿಂದ ಕ್ಯಾನ್ಸರ್ ಚಿಕಿತ್ಸೆಗೆ ಬಹುಮುಖ ಪರಿಣಾಮಕಾರಿ ವಿಧಾನಗಳು ಅನುಷ್ಟಾನಕ್ಕೆ ಬಂದವು. ಆ ಅವಧಿಯಲ್ಲಿ ಶಸ್ತ್ರ ಚಿಕಿತ್ಸಕ ಒಬ್ಬನೇ ಕಾರ್ಯನಿರ್ವಹಿಸದೇ ಆತನ ಜೊತೆಗೆ ಆಸ್ಪತ್ರೆಯ ವಿಕಿರಣ ತಜ್ಞರ ತಂಡವೇ ರೋಗಿಗಳ ಶುಶ್ರೂತೆಗೆ ತೊಡಗಿತು. ಹೀಗಾಗಿ ರೋಗಿಯ ಕಾಯಿಲೆಯ ಲಕ್ಷಣಗಳ ಕುರಿತು ಸಮಗ್ರ ಮಾಹಿತಿಯನ್ನು ಕಾಲ ಕಾಲಕ್ಕೆ ಪಡೆದು ಅದನ್ನುಸೂಕ್ತವಾಗಿ ಆಸ್ಪತ್ರೆಯಲ್ಲಿ ಸಂಗ್ರಹಿಸಿ ನಂತರ ರೋಗಿಗಳಲ್ಲೂ ಒಂದು ಸಮಗ್ರ ವಿವರಗಳುಳ್ಳ ದಾಖಲೆ ಸೃಷ್ಟಿಸಿ ಅದರ ಪ್ರಕಾರ ಚಿಕಿತ್ಸೆಗೆ ನೆರವಾಗುವಂತೆ ನೋಡಿಕೊಳ್ಳಲಾಯಿತು.ಇದು ಮೊದಲ ಬಾರಿಗೆ ಕ್ಯಾನ್ಸರ್ ರೋಗಿಗಳ ಅಂಕಿ ಅಂಶಗಳ ವಿಲೆವಾರಿಗೆ ದಾರಿ ಮಡಿತು.

ಕ್ಯಾನ್ಸರ್ ರೋಗದ ಮಾಹಿತಿ ಕಲೆಹಾಕುವ ಕೆಲಸದ ಸಂಪೂರ್ಣ ಕಾರ್ಯವನ್ನು ಜನೆಟ್ ಲೇನ್ -ಕ್ಲೈಪೊನ್ ಮೊದಲು ಮಾಡಿದರು.ಸುಮಾರಿ1926ರಲ್ಲಿ ಬ್ರಿಟಿಷ್ ಆರೋಗ್ಯ ಸಚಿವಾಲಯಕ್ಕಾಗಿ ಸ್ತನ ಕ್ಯಾನ್ಸರ್ ಕುರಿತಾದ 500 ಪ್ರಕರಣಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಿಸಿದರು.ಎಲ್ಲಾ ರೋಗಪೀಡಿತರ ಹಿನ್ನಲೆ ಮತ್ತು ಜೀವನಶೈಲಿ ಹಾಗು ಚಿಕಿತ್ಸಾ ನಿಯಂತ್ರಣಗಳ ಬಗ್ಗೆ ವಿವರಣೆ ಸಲ್ಲಿಸಲಾಗಿತ್ತು. ಈಕೆ ಮಾಡಿದ ಈ ಕಾರ್ಯವನ್ನು ರಿಚರ್ಡ್ ಡೊಲ್ ಮತ್ತು ಆಸ್ಟಿನ್ ಬ್ರಾಡ್ ಫೊರ್ಡ್ ಹಿಲ್ ಮುಂದುವರೆಸಿ ಶ್ವಾಸಕೋಶದ ಕ್ಯಾನ್ಸರ್ "(ಲಂಗ್ ಕ್ಯಾನ್ಸರ್ )"ಮತ್ತು ಧೂಮಪಾನದಿಂದ ಸಾವಿನ ಇತರ ಕಾರಣಗಳು ಮತ್ತುಅದರ ಸಂಬಂಧಿತ ವಿಚಾರಗಳನ್ನು ಪ್ರಕಟಗೊಳಿಸಿದರು. ಎರಡನೆಯ ವರದಿಯು ಸಾವಿನ ಬಗ್ಗೆ ಬ್ರಿಟಿಷ್ ವೈದ್ಯರ ವಿಚಾರವು 1956ರಲ್ಲಿ ಪ್ರಕಟಿಸಲಾಯಿತು.ಇದನ್ನು (ಬ್ರಿಟಿಷ್ ವೈದ್ಯರ ಅಧ್ಯಯನ) ಎಂದೂ ಕರೆಯಲಾಯಿತು. ರಿಚರ್ಡ್ ಡೊಲ್ ಲಂಡನ್ ವೈದ್ಯಕೀಯ ಸಂಶಧೋನಾ ಕೆಂದ್ರವನ್ನು ತೊರೆದು (MRC)ಆಕ್ಸಫರ್ಡ್ ಕ್ಯಾನ್ಸರ್ ರೋಗ ನಿದಾನ ಕುರಿತ ಘಟಕವೊಂದನ್ನು 1968ರಲ್ಲಿ ತೆರೆದು ಅಲ್ಲಿ ಸಮಗ್ರ ಮಾಹಿತಿ ಸಂಗ್ರಹಣಾ ಕಾರ್ಯದಲ್ಲಿ ತೊಡಗಿಕೊಂಡರು. ಕಾಂಪ್ಯೂಟರ್ ಗಳ ಸಹಾಯದಿಂದ ಈ ಘಟಕವು ದೊಡ್ಡ ಪ್ರಮಾಣದ ಕ್ಯಾನ್ಸರ್ ರೋಗ ಪರೀಕ್ಷೆ ಇನ್ನಿತರ ಮಾಹಿತಿ ಕುರಿತ ಅಂಕಿಅಂಶಗಳನ್ನು ಸಂಗ್ರಹಿಸಲಾಯಿತು. ಆಧುನಿಕ ರೋಗ ನಿದಾನ ಮತ್ತು ಚಿಕಿತ್ಸಾ ವಿಧಾನಗಳು ಇವತ್ತಿನ ರೋಗದ ಲಕ್ಷಣ ಮತ್ತು ಸಾರ್ವಜನಿಕ ಆರೋಗ್ಯ ಸೂತ್ರಗಳಲ್ಲಿ ತನ್ನ ಪರಿಕಲ್ಪನೆಯ ಛಾಯೆ ಮೂಡಿಸಿದೆ. ಕಳೆದ 50ವರ್ಷಗಳಿಂದಲೂ ಇಡೀ ವೈದ್ಯಕೀಯ ವಲಯದಲ್ಲಿನ ಅಂಕಿ ಅಂಶಗಳ ಮಾಹಿತಿ ಕಲೆಹಾಕಲು ದೊಡ್ಡ ಪ್ರಮಾಣದ ಪ್ರಯತ್ನಗಳು ನಡೆದಿವೆ.ಆಸ್ಪತ್ರೆ,ಪ್ರಾಂತ್ಯವಾರು,ರಾಜ್ಯ,ಮತ್ತು ನೆರೆಹೊರೆಯ ಗಡಿಭಾಗಗಳಲ್ಲಿನ ಪರಿಸರ ಮತ್ತು ಸಾಂಸ್ಕೃತಿಕ ಸಂಗತಿಗಳು ಕ್ಯಾನ್ಸರ್ ಮೇಲೆ ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಸಹ ಸಂಗ್ರಹಿಸಿ ಮಾಹಿತಿಯನ್ನು ಮುಂದಿನ ಪೀಳಿಗೆಗೆ ಇಡಲಾಗಿದೆ.

ವಿಶ್ವದ ಮಹಾಯುದ್ಧII ದ ಅವಧಿ ವರೆಗೂ ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಮತ್ತು ಅಧ್ಯಯನಗಳ ಬಗ್ಗೆ ಮಾಹಿತಿಯು ಆಯಾ ವೈದ್ಯರ ವೈಯಕ್ತಿಕ ಮಾಹಿತಿಯಾಗಿತ್ತು.ಅದರ ಬಹಿರಂಗಕ್ಕೆ ಆಗ ಸ್ವಲ್ಪ ಮಟ್ಟಿಗೆ ಕಡಿವಾಣವಿತ್ತು.ಎರಡನೆಯ ಮಹಾಯುದ್ಧದ ನಂತರ ಈ ಮಾಹಿತಿ ಬಹಿರಂಗವಾದಾಗ ದೇಶ-ವಿದೇಶಗಳಲ್ಲಿನ ಅಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ಯಾನ್ಸರ್ ಕಾಯಿಲೆಯು ದೊಡ್ದ ಪ್ರಮಾಣದ ವ್ಯತ್ಯಾಸಗಳನ್ನು ಹೊಂದಿದ್ದು ಕಂಡು ಬಂತು. ಈ ಪ್ರಕಾರದ ಆಂತರಿಕ ಜಾಗೃತಿಯು ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಇಡೀ ಜಗತ್ತಿನ ಕ್ಯಾನ್ಸರ್ ಲೋಕದ ಮಾಹಿತಿ ಸಂಗ್ರಹಣೆಯು ಸಾಧ್ಯವಾಯಿತು.ಇಂದೂ ಕೂಡಾ ಹಲವಾರು ದೇಶಗಳಲ್ಲಿ ವಿವಿಧ ಕ್ಯಾನ್ಸರ್ ರೋಗ ಚಿಕಿತ್ಸೆ ಗಳ ಲಕ್ಷಣದ ಮೇಲೆ ಅಧ್ಯಯನ ನಡೆಸಲಾಗುತ್ತದೆ. ಜಪಾನಿನ ಹಿರೊಸಿಮಾ ಮತ್ತು ನಾಗಾಸಾಕಿಗಳ ಮೇಲಿನ ಆಗಿನ ಅಣು ಬಾಂಬ್ ದಾಳಿಯು ಯುದ್ಧದಲ್ಲಿ ಬಲಿಪಶು ಆದವರ ಎಲುಬಿನ ಕೊಬ್ಬಿನಂಶವು ಸಂಪೂರ್ಣವಾಗಿ ನಾಶಗೊಂಡಿತ್ತು.ಎಂದು ಜಪಾನಿನ ವೈದ್ಯ ಸಮೂದಾಯ ತನ್ನ ವರದಿಯಲ್ಲಿ ತಿಳಿಸಿದೆ. ರೋಗಪೀಡಿತ ಈ ಸ್ನಾಯು ಅಥವಾ ಎಲುವು ಖಂಡವು ವಿಕಿರಣದಿಂದಲೂ ನಾಶಗೊಂಡಿದೆ ಎಂದು ತಿಳಿದ ನಂತರ ಲ್ಯುಕೇಮಿಯಾದವರಿಗೆ ಸ್ನಾಯು ಕಸಿಯ ಸಂಶೋಧನೆಯಾಯಿತು. ಎರಡನೆಯ ಮಹಾಯುದ್ಧದII ನಂತರದ ಕ್ಯಾನ್ಸರ್ ಪ್ರಕರಣಗಳನ್ನು ಗಮನಿಸುತ್ತಾ ಬಂದರೆ ಅವುಗಳಿಗೆ ಅತ್ಯಂತ ಸೂಕ್ಷ್ಮ ಮತ್ತು ನಾಜೂಕಿನ ಚಿಕಿತ್ಸಾ ಪದ್ದತಿಗಳು ಪ್ರಗತಿ ಕಾಣುತ್ತಾ ಬಂದಿವೆ.ಹೀಗೆ ವಿಶ್ವದಾದ್ಯಂತದ ಚಿಕಿತ್ಸಾ ವಿಧಾನಗಳ ಜಾಗತೀಕರಣ ಮತ್ತು ವೈದ್ಯಕೀಯ ತಪಾಸಣಾ ವಿಧಾನಗಳಿಗೆ ಅಂತಾರಾಷ್ಟ್ರೀಯ ಸಹಭಾಗಿತ್ವವೂ ಮಾಹಿತಿ ಸಂಗ್ರಹಣೆಗೆ ಅನುಕೂಲ ಒದಗಿಸುತ್ತಿದೆ.

ಸಂಶೋಧನೆ

ಕ್ಯಾನ್ಸರ್ ಸಂಶೋಧನೆಯು ಅತ್ಯಂತ ತೀಕ್ಷ್ಣ ವೈಜ್ಞಾನಿಕ ಪ್ರಯತ್ನವಾಗಿದ್ದು ಇದರ ಮೂಲಕ ಕಾಯಿಲೆಯ ಪ್ರತಿಕ್ರಿಯೆ ಮತ್ತು ಅದಕ್ಕೆ ಸಾಧ್ಯವಿರುವ ಎಲ್ಲಾ ರೀತಿಯ ಚಿಕಿತ್ಸಾ ಪರಿಹಾರಗಳನ್ನು ಕಂಡು ಹಿಡಿಯುವುದೇ ಸಂಶೋಧನೆಯ ಮೂಲೋದ್ದೇಶವಾಗಿದೆ. ಅಂಗಾಂಶಗಳ ಜೀವಕಣಶಾಸ್ತ್ರ ಮತ್ತು ಕೋಶೀಯ ಜೀವಶಾಸ್ತ್ರಗಳ ಸುಧಾರಿತ ತಿಳಿವಳಿಕೆಯಿಂದ ಇಂದು ಕ್ಯಾನ್ಸರ್ ಕಾಯಿಲೆಗೆ ಸೂಕ್ತ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ.ಆಗಿನ ಅಮೆರಿಕೆಯ ಅಧ್ಯಕ್ಷ ನಿಕ್ಸನ್ ಅವರು 1971ರಲ್ಲಿ ಕ್ಯಾನ್ಸರ್ ಮೇಲೆ ಸಮರ ಎಂದು ಘೋಷಿಸಿದಾಗಿನಿಂದ ಹಲವಾರು ಬದಲಾವಣೆ ಮತ್ತು ಅಭಿವೃದ್ಧಿಗಳು ಪ್ರಗತಿ ಕಾಣುತ್ತಿವೆ. ಸುಮಾರು 1971ರಿಂದಲೂ ಯುನೈಟೆಡ್ ಸ್ಟೇಟ್ಸ್ ಕ್ಯಾನ್ಸರ್ ಸಂಶೋಧನೆಗಾಗಿ ಒಟ್ಟು$200ಬಿಲಿಯನ್ ಖರ್ಚು ಮಾಡಿದೆ;ಇದು ಸಾರ್ವಜನಿಕ ಮತ್ತು ಖಾಸಗಿ ಹಾಗು ಪ್ರತಿಷ್ಟಾನಗಳ ಹೂಡಿಕೆಯನ್ನೂ ಒಳಗೊಂಡಿದೆ. ಇಂತಹ ಪರಿಣಾಮಕಾರಿಯಾದ ಹಣಹೂಡಿಕೆಯಿದ್ದರೂ ದೇಶದಲ್ಲಿ ಸುಮಾರು 5%ರಷ್ಟು ಜನರು ಕ್ಯಾನ್ಸರ್ ನಿಂದ ಸಾವಿಗೆ ತುತ್ತಾಗುತ್ತಿದ್ದಾರೆ.(ಜನಸಂಖ್ಯಾ ಗಾತ್ರ ಮತ್ತು ಆಯುಷ್ಯ ಪರಿಗಣಿಸಿ) 1950 ಮತ್ತು 2005ರ ಅವಧಿಯ ಅಂಕಿಅಂಶಗಳ ದಾಖಲೆ ಈ ರೀತಿ ತಿಳಿಸಿದೆ.

ಅತ್ಯಂತ ಪ್ರಮುಖ ಕ್ಯಾನ್ಸರ್ ಸಂಶೋಧನಾ ಸಂಘಟನೆಗಳು ಮತ್ತು ಯೋಜನೆಗಳೆಂದರೆ:ಅಮೆರಿಕನ್ ಅಸೊಸಿಯೇಶನ್ ಫಾರ್ ಕ್ಯಾನ್ಸರ್ ರಿಸರ್ಚ್ ,ದಿ ಅಮೆರಿಕನ್ ಕ್ಯಾನ್ಸರ್ ಸೊಸೈಟಿ(ACS),ದಿ ಅಮೆರಿಕನ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿ,ದಿ ಯುರೊಪಿಯನ್ ಆರ್ಗೈನೈಜೇಶನ್ ಫಾರ್ ರಿಸರ್ಚ್ ಅಂಡ್ ಟ್ರೀಟ್ ಮೆಂಟ್ ಆಫ್ ಕ್ಯಾನ್ಸರ,ದಿ ನ್ಯಾಶನಲ್ ಕ್ಯಾನ್ಸರ್ ಇನ್ ಸ್ಟಿಟ್ಯೂಟ,ದಿ ನ್ಯಾಶನಲ್ ಕಾಂಪ್ರಹೆನ್ಸಿವ್ ಕ್ಯಾನ್ಸರ್ ನೆಟ್ ವರ್ಕ್ ಮತ್ತು NCI ನಲ್ಲಿನ ದಿ ಕ್ಯಾನ್ಸರ್ ಜೆನ್ಯುಮ್ ಅಟ್ಲಾಸ್

ಬೆಂಗಳೂರು ಕಿದ್ವಾಯ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ

  • ಕ್ಯಾನ್ಸರ್‌ ಜೀವಕೋಶಗಳನ್ನು ನಿಖರವಾಗಿ ನಾಶಪಡಿಸುವ ಆಧುನಿಕ ಯಂತ್ರ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅಳವಡಿಕೆ:
  • ವಿಕಿರಣ ಚಿಕಿತ್ಸೆಗೆ ಲೀನಿಯರ್‌ ಆಕ್ಸಿಲರೇಟರ್‌ ಯಂತ್ರ:ಕ್ಯಾನ್ಸರ್‌ ರೋಗಿಗಳ ಹಾನಿಯಾದ ಭಾಗಕಷ್ಟೇ ವಿಕಿರಣವನ್ನು ಹಾಯಿಸುವ ಹಾಗೂ ಕ್ಯಾನ್ಸರ್‌ ಜೀವಕೋಶಗಳನ್ನು ನಿಖರವಾಗಿ ನಾಶಪಡಿಸುವ ‘ಲೀನಿಯರ್‌ ಆಕ್ಸಿಲರೇಟರ್‌’ ಯಂತ್ರಗಳ ಖರೀದಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಮುಂದಾಗಿದೆ.
  • ಕ್ಯಾನ್ಸರ್‌ ರೋಗಿಗಳ ಹಾನಿಯಾದ ಭಾಗಕಷ್ಟೇ ವಿಕಿರಣವನ್ನು ಹಾಯಿಸುವ ಹಾಗೂ ಕ್ಯಾನ್ಸರ್‌ ಜೀವಕೋಶಗಳನ್ನು ನಿಖರವಾಗಿ ನಾಶಪಡಿಸುವ ‘ಲೀನಿಯರ್‌ ಆಕ್ಸಿಲರೇಟರ್‌’ ಯಂತ್ರಗಳ ಖರೀದಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಮುಂದಾಗಿದೆ.
  • ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವ ರೂ.120 ಕೋಟಿ ಅನುದಾನದಲ್ಲಿ ನಾಲ್ಕು ಯಂತ್ರಗಳನ್ನು ಖರೀದಿಸಲಾಗುತ್ತಿದೆ. ಒಂದು ಯಂತ್ರಕ್ಕೆ ₹17 ಕೋಟಿ ವೆಚ್ಚವಾಗಲಿದೆ. ಈ ಯಂತ್ರಗಳನ್ನು ಅಮೆರಿಕದ ‘ಎಲೆಕ್ಟಾ’ ಕಂಪೆನಿ ಉತ್ಪಾದಿಸಲಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಕೆ.ಬಿ. ಲಿಂಗೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
  • ‘ಕಿದ್ವಾಯಿ ಸಂಸ್ಥೆಯಲ್ಲಿ ಪ್ರತಿದಿನ 350–400 ರೋಗಿಗಳಿಗೆ ವಿಕಿರಣ ಚಿಕಿತ್ಸೆ (ರೇಡಿಯೊಥೆರಪಿ) ನೀಡಲಾಗುತ್ತಿದೆ. ಆದರೆ, ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ವಿಕಿರಣ ಚಿಕಿತ್ಸೆ ಮಾಡಿಸಿಕೊಳ್ಳಲು 3–4 ನಾಲ್ಕು ವಾರಗಳವರೆಗೆ ಕಾಯಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಅತ್ಯಾಧುನಿಕ ಯಂತ್ರಗಳನ್ನು ಖರೀದಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಸುರಕ್ಷತಾ ಕ್ರಮಗಳು ಅಗತ್ಯ

  • ‘ಲೀನಿಯರ್‌ ಆಕ್ಸಿಲರೇಟರ್‌ ಯಂತ್ರಗಳನ್ನು ಪ್ರತ್ಯೇಕ ಕೊಠಡಿಗಳಲ್ಲೇ ಅಳವಡಿಸಬೇಕು. ವಿಕಿರಣ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವಿಕಿರಣಗಳು ಹೊರಗೆ ಹೋಗದಂತೆ ತಡೆಗಟ್ಟಬೇಕು. ಇದಕ್ಕಾಗಿ ಎರಡು ಮೀಟರ್‌ ದಪ್ಪವಿರುವ ಗೋಡೆಗಳನ್ನು ನಿರ್ಮಿಸಲಾಗುತ್ತದೆ. ಜತೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಕಟ್ಟಡ ನಿರ್ಮಾಣ, ಯಂತ್ರಗಳ ಅಳವಡಿಕೆಯ ಮೇಲುಸ್ತುವಾರಿಯನ್ನು ಎಲೆಕ್ಟಾ ಕಂಪೆನಿಯವರೇ ನೋಡಿಕೊಳ್ಳಲಿದ್ದಾರೆ’ ಎಂದು ಸಂಸ್ಥೆಯ ರೇಡಿಯೇಷನ್‌ ಆಂಕಾಲಜಿಸ್ಟ್‌ ಡಾ.ಜಗನ್ನಾಥ್‌ ತಿಳಿಸಿದರು.
  • ಮತ್ತೊಂದು ಯಂತ್ರ ಖರೀದಿ: ‘ಸಂಸ್ಥೆಯಲ್ಲಿ ಈಗಾಗಲೇ ಎರಡು ಲೀನಿಯರ್‌ ಆಕ್ಸಿಲರೇಟರ್‌ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇವು ಹಳೆಯದಾಗಿವೆ. ಅಲ್ಲದೆ, ಆಸ್ಪತ್ರೆಗೆ ರೋಗಿಗಳ ಬೇಡಿಕೆಗೆ ಅನುಗುಣವಾಗಿ ವಿಕಿರಣ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದಕ್ಕಿಂತ ಸುಧಾರಿತ ಯಂತ್ರವೊಂದನ್ನು ಈಗಾಗಲೇ ಅಳವಡಿಸಲಾಗಿದೆ. ಇದಕ್ಕೆ ₹5.5 ಕೋಟಿ ವೆಚ್ಚವಾಗಿದ್ದು, ಕಿದ್ವಾಯಿ ಸಂಸ್ಥೆಯೇ ಭರಿಸಿದೆ. ಇದು ತಿಂಗಳೊಳಗೆ ಕಾರ್ಯಾರಂಭ ಮಾಡಲಿದೆ’ ಎಂದು ಡಾ.ಜಗನ್ನಾಥ್‌ ಹೇಳಿದರು.

ಎಚ್‌ಡಿಆರ್‌, ಸಿ.ಟಿ ಸ್ಕ್ಯಾನ್‌ ಯಂತ್ರಗಳ ಖರೀದಿ

  • ‘ಲೀನಿಯರ್‌ ಆಕ್ಸಿಲರೇಟರ್‌ ಯಂತ್ರಗಳ ಜತೆಗೆ ತಲಾ ಎರಡು ಎಚ್‌ಡಿಆರ್‌ (ಹೈ-ಡೋಸ್‌ ರೇಡಿಯೊಥೆರಪಿ) ಹಾಗೂ ಸಿ.ಟಿ. ಸ್ಕ್ಯಾನ್‌ ಯಂತ್ರಗಳನ್ನು ಖರೀದಿಸಲಾಗುತ್ತಿದೆ. ಎಚ್‌ಡಿಆರ್‌ ಯಂತ್ರದ ಮೂಲಕ ಬ್ರಾಕಿಥೆರಪಿ ನೀಡಬಹುದು. ಎಚ್‌ಡಿಆರ್‌ ಯಂತ್ರವೊಂದಕ್ಕೆ ₹3 ಕೋಟಿ ಹಾಗೂ ಸಿ.ಟಿ. ಸ್ಕ್ಯಾನ್‌ ಯಂತ್ರವೊಂದಕ್ಕೆ ₹3–4 ಕೋಟಿ ವೆಚ್ಚವಾಗಲಿದೆ’ ಎಂದು ಡಾ.ಜಗನ್ನಾಥ್‌ ತಿಳಿಸಿದರು.
  • ‘ಬ್ರಾಕಿಥೆರಪಿಯಲ್ಲಿ ವಿಕಿರಣಶೀಲ ವಸ್ತುಗಳನ್ನು ರೋಗಿಯ ದೇಹಕ್ಕೆ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತದೆ. ಉದಾಹರಣೆಗೆ ಅನ್ನನಾಳ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ರೋಗಿಗೆ ವಿಕಿರಣಚಿಕಿತ್ಸೆ ನೀಡಲಾಗಿರುತ್ತದೆ. ಆದರೂ ಕೆಲ ಕ್ಯಾನ್ಸರ್‌ ಜೀವಕೋಶಗಳು ಉಳಿದುಕೊಂಡಿರುತ್ತವೆ. ಈ ವೇಳೆ ರೋಗಿಯ ಬಾಯಿಗೆ ಕೊಳವೆ ಹಾಕಿ ಹಾನಿಯಾದ ಭಾಗಕ್ಕೆ ನೇರವಾಗಿ ವಿಕಿರಣಗಳನ್ನು ಹಾಯಿಸಿ ಚಿಕಿತ್ಸೆ ನೀಡಲಾಗುತ್ತದೆ’ ಎಂದರು.

ಹೊರಸಂಪರ್ಕ

Glossary

ಕೆಳಗಿನ ವಿಷಯ ಪಟ್ಟಿಯು ಅಸಹಜ ಬೆಳವಣಿಗೆ ಬಗ್ಗೆ ಬಳಸುವ ವೈದ್ಯಕೀಯ ಪದ ಸಂಗ್ರಹ:

  • ಕ್ಯಾನ್ಸರ್ ಅಥವಾ ಕ್ಯಾನ್ಸರ್ ಗೆಡ್ಡೆ ಮೂಲತಃ ಅನೈಸರ್ಗಿಕ ಊತ ಅಥವಾ ಗಾತ್ರ ಪರಿಣಾಮ. ಸದ್ಯದ ಇಂಗ್ಲಿಷ್ ನಲ್ಲಿ ಟ್ಯೂಮರ್ ಪದವು ನಿವೊ ಪ್ಲಾಸ್ಮಾ ಪ್ರಮುಖವಾಗಿ ಘನ ನಿವೊ ಪ್ಲಾಸ್ಮಾ ಆಗಿದೆ. ಟಿಪ್ಪಣಿ ಮಾಡಬೇಕಾದುದೇನೆಂದರೆನಿವೊ ಪ್ಲಾಸ್ಮಾಗಳು ಅಂದರೆ ಲ್ಯುಕೇಮಿಯಾ ಗೆಡ್ಡೆಗಳನ್ನು ಉಂಟು ಮಾದುವದಿಲ್ಲ.
  • ನಿವೊಪ್ಲಾಸ್ಮಾ ವು ಅನುವಂಶೀಯವಾಗಿ ಪರಿವರ್ತನೆಯಾದ ಕೋಶಗಳನ್ನು ಕರೆಯುವ ಒಂದು ವೈಜ್ಞಾನಿಕ ಪದ. ನಿವೊಪ್ಲಾಸ್ಮಾಗಳು ಹಾನಿಕಾರಕ ಅಥವಾ ಕ್ಯಾನ್ಸರ್ ಕಾರಿಯಾಗಿರಬಹುದು.
    • ಮಾಲಿಗಂಟ್ ನಿವೊಪ್ಲಾಸ್ಮಾ ಅಥವಾ ಮಾಲಿಗಂಟ್ ಟ್ಯುಮರ್  : ಕ್ಯಾನ್ಸರ್ ಗೆ ಸಮಾನ ಪದಗಳು.
    • ಬೆನಿಗ್ನ್ ನಿವೊಪ್ಲಸ್ಮಾ ಅಥವಾ ಬೆನಿಗ್ನ ಟ್ಯುಮರ್  :(ಘನ ನಿವೊಪ್ಲಾಸ್ಮಾ )ಇದು ತನ್ನಿಂದ ತಾನೆ ಎಳವಣಿಗೆ ನಿಲ್ಲಿಸಿ ಬೇರೆ ಯಾವದೇ ಕೋಶದ ಮೇಲ ದಾಳಿ ಮಾಡದು.
  • ದಾಳಿಕೋರ ಟ್ಯುಮರ್ ಇನ್ನೊಂದು ಕ್ಯಾನ್ಸರ್ ಸಮಾನಪದ ಈ ಹೆಸರು ಅಕ್ಕಪಕ್ಕದ ಅಂಗಾಂಶ ಕೋಶಗಳ ಮೇಲಿನ ದಾಳಿಯನ್ನು ಉಲ್ಲೇಖಿಸುತ್ತದೆ.
  • ಪೂರ್ವ ಮಾಲಿಗನ್ಸಿ ,ಪೂರ್ವ ಕ್ಯಾನ್ಸ್ರರ್ ಅಥವಾ ದಾಳಿಕೋರನಲ್ಲಿರದ ಗೆಡ್ದೆ ಯು ಹರಡುವದಿಲ್ಲವಾದರೂ ಅದರ ಪಸರಿಸುವಿಕೆ ಸಾಮಾನ್ಯ. ಈ ಪ್ರಕಾರಗಳು ಕ್ಯಾನ್ಸರ್ ಹೆಚ್ಕಳಕ್ಕೆ ಪೂರಕವಾಗುತ್ತವೆ.ಅಟಿಪಿಯಾ, ಡಿಸ್ಪಾಲ್ಸ್ ಮಾ ಮತ್ತು ಕಾರ್ಸಿನೊಮಾ

ಕ್ಯಾನ್ಸರ್ ವಿವರಣೆಗೆನಿವುಗಳ ಬಳ್ಕೆ ಮಾಡಲಾಗುತ್ತದೆ.

  • ಸ್ಕ್ರೀನಿಂಗ : ಗೆಡ್ಡೆಗಳು ಗೋಚರಿಸುವ ಮುಂಚೆಯೇ ನಡೆಸುವ ಪರೀಕ್ಷೆ. .ಮಮೊಗ್ರಮ್ ಒಂದು ಸ್ಕ್ರೀನಿಂಗ್ ಪರೀಕ್ಷೆ.
  • ರೋಗನಿದಾನ ಪತ್ತೆ: ಜಾಗದಲ್ಲಿನ ಕ್ಯಾನ್ಸರ್ ಕಾರಕದ ಪತ್ತೆ. This usually requires a biopsy or removal of the tumor by surgery, followed by examination by a pathologist.ಇದು ಸಾಮಾನ್ಯವಾಗಿ ಅಂಗಾಂಶ
  • Surgical excision : the removal of a tumor by a surgeon.
    • Surgical margins : the evaluation by a pathologist of the edges of the tissue removed by the surgeon to determine if the tumor was removed completely ("negative margins") or if tumor was left behind ("positive margins").
  • Grade : a number (usually on a scale of 3) established by a pathologist to describe the degree of resemblance of the tumor to the surrounding benign tissue.
  • ಹಂತ :ದೇಹದ ಅಂಗಾಂಶಗಳ ಮೇಲೆ ಟ್ಯುಮರ್ ನ ಆಕ್ರಮಣ ಇದು 4ರ ಅಳತೆಯಲ್ಲಿ ಆಂಕೊಲಾಜಿಸ್ಟ್ ಗಳು ದಾಖಲಿಸಿದ್ದಾರೆ,.
  • ಮರುಕಳಿಕೆ: ಶಸ್ತ್ರ ಚಿಕಿತ್ಸೆ ನಂತರ ಮತ್ತೆ ಕಾಣಿಸುವ ಗೆಡ್ಡೆ
  • ಮೆಟಾಸ್ಟ್ಯಾಸಿಸ್ :ಹೊಸ ಗೆಡ್ಡೆ ಮೂಲಕ್ಕಿಂತ ದೊಡ್ಡದಾಗಿ ಗೋಚರಿಸುವುದು.
  • ಮಧ್ಯಂತರದ ಬದುಕಿನ ಸರಾಸರಿ ಅವಧಿ : ಇದನ್ನು ಮಾಸ ಅಥವಾ ವರ್ಷಗಳಲ್ಲಿ ಅಳೆಯಬಹುದು.50%ರಷ್ಟು ಕ್ಯಾನ್ಸರ್ ಚಿಕಿತ್ಸೆ ಪಡೆದವರು ಬದುಕು ಸಾಗಿಸುತ್ತಾರೆ.
  • ಪರಿವರ್ತನೆ :ಕಾಲಾನಂತರದಲ್ಲಿ ಸಣ್ಣ ಗೆಡ್ದೆಯು ದೊಡ್ಡ ಪ್ರಮಾಣದ್ದಾಗಿ ಬದಲಾಗುತ್ತದೆ. ಉದಾಹರಣೆ:ರಿಚರ್ಸ್ ನ ಪರಿವರ್ತನೆ
  • ಕೆಮೊಥೆರಪಿ :ಔಷಧಿಗಳೊಂದಿಗೆ ಚಿಕಿತ್ಸೆ
  • Radiation therapy : treatment with radiations.
  • Adjuvant therapy: treatment, either chemotherapy or radiation therapy, given after surgery to kill the remaining cancer cells.
  • Prognosis : the probability of cure after the therapy. It is usually expressed as a probability of survival five years after diagnosis. Alternatively, it can be expressed as the number of years when 50% of the patients are still alive. Both numbers are derived from statistics accumulated with hundreds of similar patients to give a Kaplan-Meier curve.
  • ಗುಣಮುಖತೆ :ಕ್ಯಾನ್ಸರ್ ರೋಗಿಗಳು ಚಿಕಿತ್ಸೆಯನಂತರ 95%ರಷ್ಟು ಗುಣಮುಖರಾದವರು ತಮ್ಮ ರೋಗನಿದಾನ ಪರೀಕ್ಷೆಯ ನಂತರದ ಅವಧಿವರೆಗೂ ಉತ್ತಮ ಬದುಕು ಪಡೆಯಬಹುದು. ವಿವಿಧ ಕ್ಯಾನ್ಸರ್ ಗಳಲ್ಲಿ ಕಾಲಾವಧಿಯ ವ್ಯತ್ಯಾಸಗೊಳ್ಳುತ್ತದೆ.ಹೊಜ್ ಹೊಜ್ ಕಿನ್ಸ್ ನ ಪ್ರಕರಣದಲ್ಲಿ ಈ ಕಾಯಿಲೆಯ ಅವಧಿಯು 10ವರ್ಷ ಆದರೆ ಬರ್ಕಿಟ್ಸ್ ಪ್ರಕಾರ ಇದು 1ವರ್ಷ. "ಕ್ಯುರ್ "ಎಂಬ ಪದವು ಆಂಕೊಲಾಜಿಯಲ್ಲಿ ಕಾಯೊಲೆಯ ಅಂಕಿಅಂಶ ಮತ್ತುಅದರ ಪರಿಕಲ್ಪನೆಗಳನ್ನು ಹೊಂದಿದೆ.

ಉಲ್ಲೇಖಗಳು

This article uses material from the Wikipedia ಕನ್ನಡ article ಕ್ಯಾನ್ಸರ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.

Tags:

ಕ್ಯಾನ್ಸರ್ ವರ್ಗೀಕರಣಕ್ಯಾನ್ಸರ್ ರೋಗ ಸೂಚನೆ ಹಾಗೂ ಲಕ್ಷಣಗಳುಕ್ಯಾನ್ಸರ್ ಕಾರಣಗಳುಕ್ಯಾನ್ಸರ್ ರೋಗ-ಶರೀರ ವಿಜ್ಞಾನಕ್ಯಾನ್ಸರ್ ನಿಯಂತ್ರಣಕ್ಯಾನ್ಸರ್ ಕೆಂಪು ಈರುಳ್ಳಿಕ್ಯಾನ್ಸರ್ ರೋಗನಿರ್ಣಯಕ್ಯಾನ್ಸರ್ ಆಡಳಿತ ಮಂಡಳಿಕ್ಯಾನ್ಸರ್ ಪ್ರಾಗ್ನೋಸೀಸ್‌(ಸಂತತಿ)ಕ್ಯಾನ್ಸರ್ ಸಾಂಕ್ರಾಮಿಕ ಶಾಸ್ತ್ರಕ್ಯಾನ್ಸರ್ ಇತಿಹಾಸಕ್ಯಾನ್ಸರ್ ಸಂಶೋಧನೆಕ್ಯಾನ್ಸರ್ ಬೆಂಗಳೂರು ಕಿದ್ವಾಯ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಕ್ಯಾನ್ಸರ್ ಎಚ್‌ಡಿಆರ್‌, ಸಿ.ಟಿ ಸ್ಕ್ಯಾನ್‌ ಯಂತ್ರಗಳ ಖರೀದಿಕ್ಯಾನ್ಸರ್ ಹೊರಸಂಪರ್ಕಕ್ಯಾನ್ಸರ್ Glossaryಕ್ಯಾನ್ಸರ್ ಉಲ್ಲೇಖಗಳುಕ್ಯಾನ್ಸರ್ ಆಕರಗಳುಕ್ಯಾನ್ಸರ್ ಹೊರಗಿನ ಕೊಂಡಿಗಳುಕ್ಯಾನ್ಸರ್En-us-cancer.oggರೋಗ

🔥 Trending searches on Wiki ಕನ್ನಡ:

ನವೋದಯಫುಟ್ ಬಾಲ್ಶಾಲೆಪ್ರಚ್ಛನ್ನ ಶಕ್ತಿಕನ್ನಡ ಸಾಹಿತ್ಯ ಸಮ್ಮೇಳನರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ವಿಜಯನಗರ ಸಾಮ್ರಾಜ್ಯಕರ್ನಾಟಕ ಸರ್ಕಾರಒಂದನೆಯ ಮಹಾಯುದ್ಧಅಶೋಕನ ಶಾಸನಗಳುಮಹೇಂದ್ರ ಸಿಂಗ್ ಧೋನಿಮತದಾನಭಾರತದ ಪ್ರಧಾನ ಮಂತ್ರಿವಾಣಿಜ್ಯ ಬ್ಯಾಂಕ್ಕನ್ನಡದಲ್ಲಿ ಕಾದಂಬರಿ ಸಾಹಿತ್ಯಮೈಲಾರ ಮಹಾದೇವಪ್ಪಆರೋಗ್ಯಸಾವಿತ್ರಿಬಾಯಿ ಫುಲೆತತ್ತ್ವಶಾಸ್ತ್ರಗೋವಿಂದ ಪೈಕೇಂದ್ರ ಲೋಕ ಸೇವಾ ಆಯೋಗಕನ್ನಡ ಪತ್ರಿಕೆಗಳುವೇಗೋತ್ಕರ್ಷಶೀತಲ ಸಮರಭಾರತದ ರಾಷ್ಟ್ರಗೀತೆಭಾರತದ ರಾಷ್ಟ್ರಪತಿಸೋನಾರ್ಧರ್ಮಸ್ಥಳರಂಗಭೂಮಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಸ್ಫಟಿಕ ಶಿಲೆಪ್ರವಾಹಆಲ್‌ಝೈಮರ್‌‌ನ ಕಾಯಿಲೆತಲಕಾಡುರಾಮಅಮ್ಮಲಿಂಗಾಯತ ಧರ್ಮಕುವೆಂಪುಮಳೆನೀರು ಕೊಯ್ಲುಪಂಚವಾರ್ಷಿಕ ಯೋಜನೆಗಳುಉತ್ಪಾದನೆಹರ್ಡೇಕರ ಮಂಜಪ್ಪಯುನೈಟೆಡ್ ಕಿಂಗ್‌ಡಂವ್ಯವಸಾಯಜೋಡು ನುಡಿಗಟ್ಟುಯೂಟ್ಯೂಬ್‌ಪ್ರವಾಸೋದ್ಯಮಮಾನವ ಹಕ್ಕುಗಳುಕನ್ನಡ ಸಂಧಿಹಸ್ತ ಮೈಥುನಆಹಾರ ಸಂರಕ್ಷಣೆಲೋಹಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುರಾಮಾಯಣಸ್ವಾತಂತ್ರ್ಯಇಂಟೆಲ್ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಭಾರತದ ವಾಯುಗುಣಕೃಷ್ಣ ಜನ್ಮಾಷ್ಟಮಿಭೀಮಸೇನ ಜೋಷಿಮಾವಂಜಿಜೀನ್-ಜಾಕ್ವೆಸ್ ರೂಸೋಮುಮ್ಮಡಿ ಕೃಷ್ಣರಾಜ ಒಡೆಯರುಭಾರತದ ರಾಷ್ಟ್ರೀಯ ಉದ್ಯಾನಗಳುಓಂ ನಮಃ ಶಿವಾಯಭಾರತದ ಬಂದರುಗಳುಕಾಜೊಲ್ನೀತಿ ಆಯೋಗಚದುರಂಗದ ನಿಯಮಗಳುಇಂದಿರಾ ಗಾಂಧಿಪರಮಾಣುಮೊಘಲ್ ಸಾಮ್ರಾಜ್ಯಸೌರಮಂಡಲಓಂ (ಚಲನಚಿತ್ರ)ಪ್ರಜಾವಾಣಿಗೊರೂರು ರಾಮಸ್ವಾಮಿ ಅಯ್ಯಂಗಾರ್ವೀರಗಾಸೆ🡆 More