ಯಕೃತ್ತು

ಯಕೃತ್ತು ಕಶೇರುಕಗಳಲ್ಲಿ ಮತ್ತು ಇತರ ಕೆಲವು ಪ್ರಾಣಿಗಳಲ್ಲಿ ಕಂಡುಬರುವ ಒಂದು ಜೀವಧಾರಕ ಅಂಗ.

ವಿಷದ ಅಂಶವನ್ನು ತೆಗೆದುಹಾಕುವುದು, ಪ್ರೋಟೀನ್‌ ಸಂಶ್ಲೇಷಣೆ ಮತ್ತು ಜೀರ್ಣಕ್ರಿಯೆಗೆ ಬೇಕಾಗುವ ಜೀವರಾಸಾಯನಿಕ ವಸ್ತುಗಳನ್ನು ಉತ್ಪತ್ತಿ ಮಾಡುವುದು ಇವೇ ಮೊದಲಾದ ಹಲವಾರು ಕಾರ್ಯಗಳನ್ನು ಇದು ಮಾಡುತ್ತದೆ. ಜೀವದ ಉಳಿವಿಗಾಗಿ ಯಕೃತ್ತು ಅತೀ ಅವಶ್ಯಕ; ಯಕೃತ್ತು ಕಾರ್ಯವನ್ನು ಮಾಡದಿದ್ದರೆ ಅದನ್ನು ಸರಿದೂಗಿಸುವಂತಹ ಬೇರೆ ಯಾವುದೇ ಮಾರ್ಗಗಳು ಪ್ರಸ್ತುತದಲ್ಲಿಲ್ಲ.

Liver
ಯಕೃತ್ತು
Liver of a sheep: (1) right lobe, (2) left lobe, (3) caudate lobe, (4) quadrate lobe, (5) hepatic artery and portal vein, (6) hepatic lymph nodes, (7) gall bladder.
ಯಕೃತ್ತು
Anterior view of the position of the liver (red) in the human abdomen.
ಲ್ಯಾಟಿನ್ jecur, iecer
Gray's subject #250 1188
Vein hepatic vein, hepatic portal vein
Nerve celiac ganglia, vagus
Precursor foregut
MeSH Liver

ಅಂಗವು ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಹಾಗೂ ದೇಹದಲ್ಲಿ ಗ್ಲೈಕೋಜನ್‌ ಸಂಗ್ರಹಣೆ, ಕೆಂಪು ರಕ್ತಕಣಗಳ ವಿಭಜನೆ, ಪ್ಲಾಸ್ಮ ಪ್ರೋಟೀನ್‌ ಸಂಶ್ಲೇಷಣೆ, ಹಾರ್ಮೋನ್ ಉತ್ಪಾದನೆ ಮತ್ತು ವಿಷದ ಅಂಶವನ್ನು ತೆಗೆದುಹಾಕುವುದು ಇತ್ಯಾದಿ ಅಸಂಖ್ಯಾತ ಕಾರ್ಯಗಳನ್ನು ಇದು ಮಾಡುತ್ತದೆ. ಇದು ಕಿಬ್ಬೊಟ್ಟೆಯ ಎದೆಗೂಡಿನ ಜಾಗದಲ್ಲಿ ವಪೆಯ ಕೆಳಗೆ ಇರುತ್ತದೆ. ಲಿಪಿಡ್‌ಗಳ ಎಮಲ್ಸೀಕರಣದ ಮ‌ೂಲಕ ಜೀರ್ಣಕ್ರಿಯೆಯಲ್ಲಿ ನೆರವಾಗುವ ಒಂದು ಕ್ಷಾರೀಯ ಸಂಯುಕ್ತವಾದ ಪಿತ್ತರಸವನ್ನು ಇದು ಉತ್ಪತ್ತಿ ಮಾಡುತ್ತದೆ. ಸಣ್ಣ ಮತ್ತು ಸಂಕೀರ್ಣ ಅಣುಗಳ ಸಂಶ್ಲೇಷಣೆ ಮತ್ತು ವಿಭಜನೆಯನ್ನೂ ಒಳಗೊಂಡಂತೆ, ಅತ್ಯಂತ ವಿಶೇಷೀಕರಿಸಲ್ಪಟ್ಟಿರುವ ಅಂಗಾಂಶಗಳ ಅಗತ್ಯ ಬೀಳುವ ಉನ್ನತ-ಪ್ರಮಾಣದ ಜೀವರಾಸಾಯನಿಕ ಕ್ರಿಯೆಗಳ ಒಂದು ವಿಶಾಲ ವ್ಯಾಪ್ತಿಯನ್ನು ಕೂಡಾ ಇದು ನಿರ್ವಹಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ಈ ಕ್ರಿಯೆಗಳ ಪೈಕಿ ಅನೇಕ ಕ್ರಿಯೆಗಳು ಸಹಜ ಜೀವಾಧಾರಕ ಕ್ರಿಯೆಗಳಿಗೆ ಅತ್ಯವಶ್ಯಕವಾಗಿರುತ್ತವೆ.

ಯಕೃತ್ತಿಗೆ ಸಂಬಂಧಿಸಿದ ವೈದ್ಯಕೀಯ ಪದಗಳು ಯಕೃತ್ತಿನ ಗ್ರೀಕ್ ಪದವಾಗಿರುವ ಹೆಪರ್ (ήπαρ)ನಿಂದ ಜನ್ಯವಾಗಿರುವ ಹೆಪಟೊ- ಅಥವಾ ಹೆಪಾಟಿಕ್ ‌ ಎಂಬುದರಲ್ಲಿ ಆರಂಭವಾಗುತ್ತವೆ.

ರಚನೆಯ ಅವಲೋಕನ

ಯಕೃತ್ತು ಸುಮಾರು ......1.5 kg (3.3 lb)ನಷ್ಟು ತೂಕವನ್ನು ಹೊಂದಿದ್ದು, ಗ್ರಂಥಿಗಳಿರುವ ಅತಿ ದೊಡ್ಡ ಅಂಗವಾಗಿದೆ. ಇದು ಕೆಂಪು-ಕಂದು ಮಿಶ್ರಿತ ಬಣ್ಣದ ಒಂದು ಅಂಗವಾಗಿದ್ದು, ಗಾತ್ರ ಮತ್ತು ಆಕಾರದಲ್ಲಿ ಏಕರೀತಿಯಾಗಿಲ್ಲದ ನಾಲ್ಕು ಹಾಲೆಗಳನ್ನು ಹೊಂದಿದೆ. ಯಕೃತ್ತು ಕಿಬ್ಬೊಟ್ಟೆಯ ಕುಹರದ ಬಲಭಾಗದಲ್ಲಿ ವಪೆಯ ಕೆಳಗಡೆ ಇರುತ್ತದೆ ಹಾಗೂ ಇದು ಯಕೃತ್ತಿನ ಅಪಧಮನಿ ಮತ್ತು ಅಭಿಧಮನಿ ಎಂದು ಕರೆಯಲ್ಪಡುವ ಎರಡು ದೊಡ್ಡ ರಕ್ತ ನಾಳಗಳಿಗೆ ಸಂಪರ್ಕ ಹೊಂದಿದೆ. ಯಕೃತ್ತಿನ ಅಪಧಮನಿಯು ಮಹಾಪಧಮನಿಯಿಂದ ರಕ್ತವನ್ನು ಒಯ್ಯುತ್ತದೆ ಹಾಗೂ ಅಭಿಧಮನಿಯು ಸಣ್ಣ ಕರುಳು ಮತ್ತು ದೊಡ್ಡ ಕರುಳಿನಿಂದ ಬಂದ ಜೀರ್ಣಿಸಿದ ಆಹಾರವನ್ನು ಹೊಂದಿರುವ ರಕ್ತವನ್ನು ಸಾಗಿಸುತ್ತದೆ. ಈ ರಕ್ತ ನಾಳಗಳು ಲೋಮನಾಳಗಳಾಗಿ ವಿಭಾಗಿಸಲ್ಪಡುತ್ತವೆ, ನಂತರ ಅವು ಕಿರುಹಾಲೆಗಳಾಗುತ್ತವೆ. ಪ್ರತಿಯೊಂದು ಕಿರುಹಾಲೆಯು ಮ‌ೂಲತಃ ಚಯಾಪಚಯ ಕ್ರಿಯೆ ನಡೆಸುವ ಜೀವಕೋಶಗಳಾಗಿರುವ ಸಾವಿರಾರು ಯಕೃತ್ತಿನ ಜೀವಕೋಶಗಳಿಂದ ಮಾಡಲ್ಪಟ್ಟಿರುತ್ತವೆ.

ಅಂಗರಚನಾ ಶಾಸ್ತ್ರ

ವಯಸ್ಕ ಮಾನವನ ಯಕೃತ್ತು ಸಾಮಾನ್ಯವಾಗಿ ಸುಮಾರು ....1.4–1.6 kg (3.1–3.5 lb)ನಷ್ಟು ತೂಕವಿರುತ್ತದೆ ಹಾಗೂ ಇದೊಂದು ಮೃದುವಾದ, ಗುಲಾಬಿ-ಕಂದು ಬಣ್ಣದ, ತ್ರಿಕೋನಾಕೃತಿಯ ಅಂಗವಾಗಿದೆ. ಇದು ಮಾನವದೇಹದಲ್ಲಿನ ಆಂತರಿಕ ಅಂಗಗಳ ಪೈಕಿ ಅತಿ ದೊಡ್ಡ ಅಂಗವಾಗಿದೆ (ಒಟ್ಟಾರೆಯಾಗಿ ಚರ್ಮವು ಅತಿ ದೊಡ್ಡ ಅಂಗವಾಗಿದೆ) ಮತ್ತು ಅತಿ ದೊಡ್ಡ ಗ್ರಂಥಿಯಾಗಿದೆ.

ಯಕೃತ್ತು ಕಿಬ್ಬೊಟ್ಟೆಯ ಕುಹರದ ಬಲಬದಿಯ ಮೇಲಿನ ಕಾಲುಭಾಗದಲ್ಲಿ, ವಪೆಯ ಸ್ವಲ್ಪ ಕೆಳಗೆ ನೆಲೆಗೊಂಡಿರುತ್ತದೆ. ಇದು ಜಠರದ ಬಲಭಾಗದಲ್ಲಿದ್ದು, ಪಿತ್ತಕೋಶದ ಮೇಲೆ ಕುಳಿತಿರುವಂತಿರುತ್ತದೆ

ರಕ್ತ ಪರಿಚಲನೆ

ಯಕೃತ್ತಿನ ಅಭಿಧಮನಿ ಮತ್ತು ಯಕೃತ್ತಿನ ಅಪಧಮನಿಗಳಿಂದ ಎರಡು ರೀತಿಯ ರಕ್ತ ಪೂರೈಕೆಯನ್ನು ಯಕೃತ್ತು ಪಡೆಯುತ್ತದೆ. ಯಕೃತ್ತಿನ ರಕ್ತಪೂರೈಕೆಯ ಸರಿಸುಮಾರು 75%ನಷ್ಟು ಭಾಗವನ್ನು ಸರಬರಾಜು ಮಾಡುವ ಯಕೃತ್ತಿನ ಅಭಿಧಮನಿಯು ಗುಲ್ಮ, ಜಠರಗರುಳಿನ ಪ್ರದೇಶ ಹಾಗೂ ಇದಕ್ಕೆ ಸಂಬಂಧಿಸಿದ ಅಂಗಗಳಿಂದ ಹೀರಿದ ಸಿರೆಯ ರಕ್ತವನ್ನು ಒಯ್ಯುತ್ತದೆ. ಯಕೃತ್ತಿನ ಅಪಧಮನಿಗಳು ಅವುಗಳ ಉಳಿದ ರಕ್ತ ಹರಿಯುವಿಕೆಗೆ ಅವಕಾಶ ಮಾಡಿಕೊಟ್ಟು ಶುದ್ಧ ರಕ್ತವನ್ನು ಯಕೃತ್ತಿಗೆ ಒದಗಿಸುತ್ತವೆ. ಆಮ್ಲಜನಕವು ಎರಡು ಮ‌ೂಲಗಳಿಂದಲೂ ಒದಗಿಸಲ್ಪಡುತ್ತದೆ; ಯಕೃತ್ತಿನ ಸುಮಾರು ಅರ್ಧದಷ್ಟು ಆಮ್ಲಜನಕ ಬೇಡಿಕೆಯು ಯಕೃತ್ತಿನ ಅಭಿಧಮನಿಯಿಂದ ಹಾಗೂ ಇನ್ನರ್ಧ ಯಕೃತ್ತಿನ ಅಪಧಮನಿಗಳಿಂದ ಪೂರೈಕೆಯಾಗುತ್ತದೆ.
ರಕ್ತವು ಯಕೃತ್ತಿನ ಸಣ್ಣ ರಕ್ತನಾಳಗಳ (ಸೈನಸಾಯ್ಡ್‌ಗಳ) ಮ‌ೂಲಕ ಹರಿದು ಪ್ರತಿ ಕಿರುಹಾಲೆಯ ಕೇಂದ್ರ ರಕ್ತನಾಳಕ್ಕೆ ಸುರಿಯಲ್ಪಡುತ್ತದೆ. ಕೇಂದ್ರ ರಕ್ತನಾಳಗಳು ಈ ರಕ್ತವನ್ನು ಯಕೃತ್ತಿನಿಂದ ಹೊರಬರುವ ಯಕೃತ್ತಿನ ರಕ್ತನಾಳಗಳಾಗಿ ಒಂದುಗೂಡಿ, ಕೆಳಗಿನ ಮಹಾಸಿರೆಗೆ ಬಿಡುಗಡೆ ಮಾಡುತ್ತವೆ.

ಪಿತ್ತರಸದ ಹರಿಯುವಿಕೆ

ಪಿತ್ತರಸದ ವೃಕ್ಷ ಪದವನ್ನು ಪಿತ್ತರಸ ನಾಳಗಳ ವೃಕ್ಷದ ಮಾದರಿಯ ಕವಲುಗಳಿಂದ ಪಡೆಯಲಾಗಿದೆ. ಯಕೃತ್ತಿನಲ್ಲಿ ಉತ್ಪತ್ತಿಯಾಗುವ ಪಿತ್ತರಸವು ಪಿತ್ತರಸ ಸೂಕ್ಷ್ಮನಾಳಗಳಲ್ಲಿ ಸಂಗ್ರಹವಾಗುತ್ತದೆ, ಈ ಸೂಕ್ಷ್ಮನಾಳಗಳು ಒಂದುಗೂಡಿ ಪಿತ್ತರಸ ನಾಳಗಳಾಗುತ್ತವೆ. ಯಕೃತ್ತಿನೊಳಗೆ ಈ ನಾಳಗಳನ್ನು ಇಂಟ್ರಾಹೆಪಾಟಿಕ್‌ (ಯಕೃತ್ತಿನೊಳಗಿನ) ಪಿತ್ತರಸ ನಾಳಗಳೆಂದೂ, ಯಕೃತ್ತಿನಿಂದ ಒಮ್ಮೆ ಹೊರಬಂದ ನಂತರ ಅವನ್ನು ಎಕ್ಸ್‌ಟ್ರಾಹೆಪಾಟಿಕ್‌ (ಯಕೃತ್ತಿನ ಹೊರಗಿನ) ಪಿತ್ತರಸ ನಾಳಗಳೆಂದೂ ಕರೆಯಲಾಗುತ್ತದೆ. ಇಂಟ್ರಾಹೆಪಾಟಿಕ್‌ ನಾಳಗಳು ಅಂತಿಮವಾಗಿ ಬಲ ಮತ್ತು ಎಡ ಯಕೃತ್ತಿನ ನಾಳಗಳಿಗೆ ಸಾಗಿಸುತ್ತವೆ, ಈ ನಾಳಗಳು ಒಟ್ಟಿಗೆ ಸೇರಿ ಸಾಮಾನ್ಯ ಯಕೃತ್ತಿನ ನಾಳವಾಗುತ್ತದೆ. ಪಿತ್ತಕೋಶದಿಂದ ಬರುವ ಯಕೃತ್ತಿನ ನಾಳವು ಸಾಮಾನ್ಯ ಯಕೃತ್ತಿನ ನಾಳದೊಂದಿಗೆ ಸೇರಿಕೊಂಡು ಸಾಮಾನ್ಯ ಪಿತ್ತರಸ ನಾಳವನ್ನು ರೂಪಿಸುತ್ತದೆ.

ಪಿತ್ತರಸವು ಸಾಮಾನ್ಯ ಪಿತ್ತರಸ ನಾಳದ ಮ‌ೂಲಕ ನೇರವಾಗಿ ಡ್ಯುಯೊಡಿನಮ್‌‌ಗೆ ಬಿಡುಗಡೆಯಾಗಬಹುದು ಅಥವಾ ಪಿತ್ತಕೋಶ-ನಾಳದ ಮ‌ೂಲಕ ಸಾಗಿ ಪಿತ್ತಕೋಶದಲ್ಲಿ ತಾತ್ಕಾಲಿಕವಾಗಿ ಸಂಗ್ರಹವಾಗಬಹುದು. ಸಾಮಾನ್ಯ ಪಿತ್ತರಸ ನಾಳ ಮತ್ತು ಮೇದೋಜೀರಕದ ನಾಳಗಳು ಯಕೃತ್ತು-ಮೇದೋಜೀರಕ ನಾಳದ ಉಬ್ಬಿನೊಂದಿಗೆ ಡ್ಯುಯೊಡಿನಮ್‌ನ ಎರಡನೆಯ ಭಾಗವನ್ನು ಪ್ರವೇಶಿಸುತ್ತವೆ.

ಯಕೃತ್ತು 
ಪಿತ್ತರಸದ ವೃಕ್ಷ

ಮೇಲ್ಮೈ ಅಂಗರಚನೆ

ಪೆರಿಟೋನಿಯಮ್‌ನ ಅಸ್ಥಿರಜ್ಜುಗಳು

ವಪೆಗೆ ಸಂಪರ್ಕ ಹೊಂದುವಲ್ಲಿ ಒಂದು ತೇಪೆ ಹೊಂದಿರುವುದನ್ನು ಬಿಟ್ಟರೆ (ಅದನ್ನು "ಖಾಲಿ ಪ್ರದೇಶ" ಎನ್ನುತ್ತಾರೆ) ಯಕೃತ್ತು ಸಂಪೂರ್ಣವಾಗಿ ಒಳಾಂಗಗಳ ಪೆರಿಟೋನಿಯಮ್‌‌ನಿಂದ ಆವರಿಸಲ್ಪಟ್ಟಿದೆ; ಈ ಪೆರಿಟೋನಿಯಮ್‌ ತೆಳ್ಳಗಿನ ಎರಡು-ಪದರದ ಒಳಪೊರೆಯಾಗಿದ್ದು ಇತರ ಅಂಗಗಳೊಂದಿಗೆ ಯಕೃತ್ತು ಘರ್ಷಣೆ ಹೊಂದುವುದನ್ನು ಕಡಿಮೆ ಮಾಡುತ್ತದೆ. ಕುಡುಗೋಲಿನಂತೆ ಬಾಗಿದ ಅಸ್ಥಿರಜ್ಜು ಹಾಗೂ ಬಲ ಮತ್ತು ಎಡ ತ್ರಿಕೋನಾಕಾರದ ಅಸ್ಥಿರಜ್ಜುಗಳ ರಚನೆಯಾಗಲು ಪೆರಿಟೋನಿಯಮ್‌ ಅದಷ್ಟಕ್ಕೇ ಹಿಂದಕ್ಕೆ ಮಡಚಿಕೊಳ್ಳುತ್ತದೆ.

ಈ "ಅಸ್ಥಿರಜ್ಜುಗಳು" ಕೀಲುಗಳ ನಿಜವಾದ ಅಂಗರಚನಾ ಶಾಸ್ತ್ರದ ಅಸ್ಥಿರಜ್ಜುಗಳಿಗೆ ಯಾವುದೇ ರೀತಿಯ ಸಂಬಂಧವನ್ನು ಹೊಂದಿಲ್ಲ ಹಾಗೂ ಮ‌ೂಲಭೂತವಾಗಿ ಯಾವುದೇ ಕ್ರಿಯಾತ್ಮಕ ಪ್ರಾಮುಖ್ಯತೆಯನ್ನು ಪಡೆದಿಲ್ಲ, ಆದರೆ ಇವು ಸುಲಭವಾಗಿ ಗುರುತಿಸಲ್ಪಡುವ ಮೇಲ್ಮೈ ಎಲ್ಲೆಗುರುತುಗಳಾಗಿವೆ. ಮುಂಭಾಗದ ದೇಹದ ಗೋಡೆಯ ಹಿಂಭಾಗಕ್ಕೆ ಯಕೃತ್ತನ್ನು ಜೋಡಿಸಲ್ಪಡುವ, ಕುಡುಗೋಲಿನಂತೆ ಬಾಗಿದ ಅಸ್ಥಿರಜ್ಜು ಇದಕ್ಕೆ ಹೊರತಾಗಿದೆ.

ಹಾಲೆಗಳು

ಸಾಂಪ್ರದಾಯಿಕ ಸಮಗ್ರ ಅಂಗರಚನಾ ಶಾಸ್ತ್ರವು ಯಕೃತ್ತನ್ನು ಮೇಲ್ಮೈ ಲಕ್ಷಣಗಳ ಆಧಾರದಲ್ಲಿ ನಾಲ್ಕು ಹಾಲೆಗಳಾಗಿ ವಿಭಾಗಿಸುತ್ತದೆ. ಕುಡುಗೋಲಿನಂತೆ ಬಾಗಿದ ಅಸ್ಥಿರಜ್ಜು ಯಕೃತ್ತಿನ ಮುಂಭಾಗದಲ್ಲಿ (ಮುಂದುಗಡೆಯ ಬದಿಯಲ್ಲಿ) ಕಾಣಿಸುತ್ತದೆ. ಇದು ಯಕೃತ್ತನ್ನು ಒಂದು ರಾಚನಿಕ ಎಡ ಹಾಲೆ ಮತ್ತು ಒಂದು ರಾಚನಿಕ ಬಲ ಹಾಲೆಯಾಗಿ ವಿಭಾಗಿಸುತ್ತದೆ.

ಯಕೃತ್ತನ್ನು ತಿರುವಿ ಹಿಂದಿನಿಂದ (ಒಳಾಂಗಗಳ ಮೇಲ್ಮೈ) ನೋಡಿದರೆ, ಬಲ ಮತ್ತು ಎಡದ ಮಧ್ಯೆ ಎರಡು ಹೆಚ್ಚುವರಿ ಹಾಲೆಗಳು ಕಾಣಸಿಗುತ್ತವೆ. ಇವುಗಳಲ್ಲಿ ಹೆಚ್ಚು ಮೇಲಿರುವುದನ್ನು ಬಾಲದಂಥ ಹಾಲೆ ಎಂದೂ, ಇದರ ಕೆಳಗಿರುವುದನ್ನು ಚದರಾಕಾರದ ಹಾಲೆ ಎಂದೂ ಕರೆಯುತ್ತಾರೆ.

ಹಿಂಭಾಗದಿಂದ, ಹಾಲೆಗಳು ಲಿಗಮೆಂಟಮ್‌ ವಿನಸಮ್‌ ಮತ್ತು ಲಿಗಮೆಂಟಮ್‌ ಟೆರೆಸ್‌‌ನಿಂದ ವಿಭಾಗಿಸಲ್ಪಟ್ಟಿವೆ (ಇವುಗಳ ಎಡಕ್ಕಿರುವುದು ಎಡ ಹಾಲೆ). ಅಡ್ಡಡ್ಡವಾಗಿರುವ ಬಿರುಕು (ಅಥವಾ ಪೋರ್ಟಾ ಹೆಪಾಟಿಸ್ ) ಬಾಲದಂಥ ಹಾಲೆಯನ್ನು ಚದರಾಕಾರದ ಹಾಲೆಯಿಂದ ಬೇರ್ಪಡಿಸುತ್ತದೆ ಹಾಗೂ ಕೆಳಗಿನ ಮಹಾಸಿರೆಯು ಹಾದುಹೋಗುವ ಬಲ ಸಮಾಂತರ ತಗ್ಗು ಈ ಎರಡು ಹಾಲೆಗಳನ್ನು ಬಲ ಹಾಲೆಯಿಂದ ಪ್ರತ್ಯೇಕಿಸುತ್ತದೆ.

ಪ್ರತಿಯೊಂದು ಹಾಲೆಯೂ ಕಿರುಹಾಲೆಗಳಿಂದ ಮಾಡಲ್ಪಟ್ಟಿರುತ್ತದೆ; ಪ್ರತಿ ಕಿರುಹಾಲೆಯ ಕೇಂದ್ರಭಾಗದಿಂದ ಹೋಗುವ ರಕ್ತನಾಳವು ನಂತರ ಯಕೃತ್ತಿನಿಂದ ರಕ್ತವನ್ನು ಕೊಂಡೊಯ್ಯುವುದಕ್ಕಾಗಿ ಯಕೃತ್ತಿನ ರಕ್ತನಾಳವನ್ನು ಸೇರಿಕೊಳ್ಳುತ್ತದೆ.

ಕಿರುಹಾಲೆಗಳ ಮೇಲ್ಮೈಯಲ್ಲಿ ಅನೇಕ ನಾಳಗಳು, ಅಭಿಧಮನಿಗಳು ಮತ್ತು ಅಪಧಮನಿಗಳು ಇದ್ದು, ಇವು ಕಿರುಹಾಲೆಗಳಿಂದ ಹೊರಗೆ ಮತ್ತು ಒಳಗೆ ದ್ರವ ಪದಾರ್ಥವನ್ನು ಸಾಗಿಸುತ್ತವೆ.

ಕ್ರಿಯಾತ್ಮಕ ಅಂಗರಚನಾ ಶಾಸ್ತ್ರ

ಸಾಮಾನ್ಯ ಪಿತ್ತರಸ ನಾಳ, ಯಕೃತ್ತಿನ ಅಭಿಧಮನಿ, ಮತ್ತು ಯಕೃತ್ತಿನ ಅಪಧಮನಿಗಳು ಸಂಪೂರ್ಣವಾಗಿ ಒಟ್ಟಿಗೆ ಪ್ರವೇಶಿಸುವ ಕೇಂದ್ರಸ್ಥಳವನ್ನು ಹೈಲಂ ಅಥವಾ "ಪೋರ್ಟ ಹೆಪಾಟಿಸ್" ಎನ್ನುತ್ತಾರೆ. ನಾಳ, ಅಭಿಧಮನಿ, ಮತ್ತು ಅಪಧಮನಿಗಳು ಎಡ ಮತ್ತು ಬಲ ಕವಲುಗಳಾಗಿ ವಿಭಾಗಿಸಲ್ಪಡುತ್ತವೆ ಹಾಗೂ ಈ ಕವಲುಗಳಿಂದ ಪೂರೈಕೆಗೆ ಒಳಗಾಗುವ ಯಕೃತ್ತಿನ ಭಾಗಗಳು ಕ್ರಿಯಾತ್ಮಕ ಎಡ ಮತ್ತು ಬಲ ಹಾಲೆಗಳಾಗುತ್ತವೆ.

ಕ್ರಿಯಾತ್ಮಕ ಹಾಲೆಗಳು ಪಿತ್ತಕೋಶದ ತಗ್ಗನ್ನು ಕೆಳಗಿನ ಮಹಾಸಿರೆಯೊಂದಿಗೆ ಸೇರಿಸುವ ಕಾಲ್ಪನಿಕ ತಲದಿಂದ ಪ್ರತ್ಯೇಕಿಸಲ್ಪಟ್ಟಿವೆ. ಈ ತಲವು ಯಕೃತ್ತನ್ನು ಸರಿಯಾಗಿ ಬಲ ಮತ್ತು ಎಡ ಹಾಲೆಗಳಾಗಿ ವಿಭಾಗಿಸುತ್ತದೆ. ಮಧ್ಯದಲ್ಲಿರುವ ಯಕೃತ್ತಿನ ರಕ್ತನಾಳವೂ ಸಹ ಸರಿಯಾಗಿ ಬಲ ಮತ್ತು ಎಡ ಹಾಲೆಗಳಾಗಿ ವಿಂಗಡಿಸುತ್ತದೆ. ಬಲ ಹಾಲೆಯು ಬಲ ಯಕೃತ್ತಿನ ರಕ್ತನಾಳದಿಂದ ಮುಂಭಾಗದ ಮತ್ತು ಹಿಂಭಾಗದ ಖಂಡವಾಗಿ ಮತ್ತೆ ವಿಭಾಗಿಸಲ್ಪಡುತ್ತದೆ. ಎಡ ಹಾಲೆಯು ಎಡ ಯಕೃತ್ತಿನ ರಕ್ತನಾಳದಿಂದ ಮಧ್ಯದಲ್ಲಿರುವ ಮತ್ತು ಪಾರ್ಶ್ವದಲ್ಲಿರುವ ಭಾಗಗಳಾಗಿ ವಿಂಗಡಿಸಲ್ಪಡುತ್ತದೆ. ಲಿಗಮೆಂಟಮ್‌ ಟೆರೆಸ್‌‌ನ ಬಿರುಕೂ ಸಹ ಮಧ್ಯದಲ್ಲಿರುವ ಮತ್ತು ಪಕ್ಕಕ್ಕಿರುವ ಭಾಗಗಳನ್ನು ಪ್ರತ್ಯೇಕಿಸುತ್ತದೆ. ಮಧ್ಯದಲ್ಲಿರುವ ಭಾಗವನ್ನು ಚದರಾಕಾರದ ಹಾಲೆ ಎಂದೂ ಕರೆಯುತ್ತಾರೆ. ಬಹುವಿಸ್ತಾರವಾಗಿ ಬಳಸುವ ಕೊಯಿನಾಡ್‌ (ಅಥವಾ "ಫ್ರೆಂಚ್") ವ್ಯವಸ್ಥೆಯಲ್ಲಿ, ಕ್ರಿಯಾತ್ಮಕ ಹಾಲೆಗಳು ಅಡ್ಡಡ್ಡವಾಗಿರುವ ಮುಖ್ಯ ಅಭಿಧಮನಿಯ ಇಬ್ಭಾಗಿಸುವಿಕೆಯ ಮ‌ೂಲಕ ತಲದ ಆಧಾರದಲ್ಲಿ ಮತ್ತೆ ಒಟ್ಟು ಎಂಟು ಉಪಭಾಗಗಳಾಗಿ ವಿಭಾಗಿಸಲ್ಪಡುತ್ತವೆ. ಬಾಲದಂಥ ಹಾಲೆಯು ಒಂದು ಪ್ರತ್ಯೇಕ ರಚನೆಯಾಗಿದ್ದು, ಇದು ಬಲ ಮತ್ತು ಎಡ-ಬದಿಯಲ್ಲಿರುವ ಎರಡು ನಾಳೀಯ ಕವಲುಗಳಿಂದಲೂ ರಕ್ತವನ್ನು ಪಡೆಯುತ್ತದೆ.

ಇತರ ಪ್ರಾಣಿಗಳಲ್ಲಿನ ವ್ಯವಸ್ಥೆ

ಯಕೃತ್ತು ಎಲ್ಲಾ ಕಶೇರುಕಗಳಲ್ಲಿ ಕಂಡುಬರುತ್ತದೆ ಹಾಗೂ ಇದು ವಿಶಿಷ್ಟ ರೀತಿಯಲ್ಲಿ ಅತೀ ದೊಡ್ಡ ಒಳಾಂಗವಾಗಿದೆ. ಇದರ ರಚನೆಯು ವಿವಿಧ ಜಾತಿಯ ಜೀವಿಗಳಲ್ಲಿ ಬೇರೆ ಬೇರೆಯಾಗಿರುತ್ತದೆ ಹಾಗೂ ಸುತ್ತಲಿರುವ ಅಂಗಗಳ ಆಕಾರ ಮತ್ತು ವ್ಯವಸ್ಥೆಯಿಂದ ಇದು ಹೆಚ್ಚಿನ ರೀತಿಯಲ್ಲಿ ನಿರ್ಧರಿಸಲ್ಪಡುತ್ತದೆ. ಅದೇನೇ ಇದ್ದರೂ, ಬಹುತೇಕ ಜೀವಿಗಳಲ್ಲಿ ಇದು ಬಲ ಮತ್ತು ಎಡ ಹಾಲೆಗಳಾಗಿ ವಿಭಾಗಿಸಲ್ಪಟ್ಟಿರುತ್ತದೆ; ಸಾರ್ವತ್ರಿಕವಾಗಿರುವ ಈ ನಿಯಮಕ್ಕೆ ಹಾವುಗಳು ಹೊರತಾಗಿವೆ, ಇವುಗಳ ದೇಹರಚನೆಗೆ ಸುರುಳಿಯಾಕಾರದ ರಚನೆಯು ಅವಶ್ಯಕವಾಗಿರುತ್ತದೆ. ಯಕೃತ್ತಿನ ಒಳಗಿನ ರಚನೆಯು ಎಲ್ಲಾ ಕಶೇರುಕಗಳಲ್ಲಿ ಹೆಚ್ಚಾಗಿ ಒಂದೇ ರೀತಿ ಇರುತ್ತದೆ.

ಆದಿಮ ಕಾರ್ಡೇಟ್ ವಿಭಾಗಕ್ಕೆ ಸೇರಿದ ಇಮ್ಮೊನೆ ಮೀನಿನ (ಆಂಫಿಯೋಕ್ಸಸ್) ಜೀರ್ಣಕ್ರಿಯೆಯ ಪ್ರದೇಶದೊಂದಿಗೆ ಯಕೃತ್ತು ಎಂದು ಕೆಲವೊಮ್ಮೆ ಹೇಳಲಾಗುವ ಒಂದು ಅಂಗವು ಸಂಬಂಧ ಹೊಂದಿದೆ ಎಂಬುದು ಕಂಡುಬಂದಿದೆ. ಆದರೂ, ಇದು ಕಿಣ್ವವನ್ನು ಸ್ರವಿಸುವ ಒಂದು ಅಂಗವೇ ಹೊರತು ಚಯಾಪಚಯಿ ಅಂಗವಲ್ಲ, ಹಾಗೂ ಇದು ಕಶೇರುಕ ಯಕೃತ್ತಿಗೆ ನಿಜವಾಗಿ ಹೇಗೆ ಸಮಾನರೂಪವುಳ್ಳದ್ದಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ದೈಹಿಕ ಕ್ರಿಯೆ

ಯಕೃತ್ತಿನ ವಿವಿಧ ರೀತಿಯ ಕಾರ್ಯಗಳನ್ನು ಯಕೃತ್ತಿನ ಜೀವಕೋಶಗಳು ಅಥವಾ ಹೆಪಟೊಸೈಟ್‌ಗಳು ಮಾಡುತ್ತವೆ. ಪ್ರಸ್ತುತ, ಯಕೃತ್ತಿನ ಎಲ್ಲಾ ಕಾರ್ಯಗಳನ್ನು ಸರಿಸಮಾನವಾಗಿ ನಿರ್ವಹಿಸುವ ಸಾಮರ್ಥ್ಯವಿರುವ ಯಾವುದೇ ಕೃತಕ ಅಂಗ ಅಥವಾ ಸಾಧನಗಳಿಲ್ಲ. ಯಕೃತ್ತು ವಿಫಲತೆಗೆ ಮಾಡುವ ಪ್ರಾಯೋಗಿಕ ಚಿಕಿತ್ಸೆಯಾದ ಯಕೃತ್ತು ಡಯಾಲಿಸಿಸ್‌ನಿಂದ ಕೆಲವು ಕ್ರಿಯೆಗಳನ್ನು ಸರಿದೂಗಿಸಬಹುದು.

ಸಂಶ್ಲೇಷಣೆ

  • ಅಮೈನೊ ಆಮ್ಲದ ಸಂಶ್ಲೇಷಣೆಯ ಒಂದು ದೊಡ್ಡಭಾಗವನ್ನು ಇದು ಮಾಡುತ್ತದೆ
  • ಶರ್ಕರಪಿಷ್ಟದ ಚಯಾಪಚಯ ಕ್ರಿಯೆಯಲ್ಲಿ ಯಕೃತ್ತು ಹಲವಾರು ರೀತಿಯಲ್ಲಿ ಪಾತ್ರವಹಿಸುತ್ತದೆ:
    • ನವಶರ್ಕರೋತ್ಪಾದನೆ (gluconeogenesis) (ಕೆಲವು ಅಮೈನೊ ಆಮ್ಲ, ಲ್ಯಾಕ್ಟೇಟ್‌ ಅಥವಾ ಗ್ಲಿಸರಾಲ್‌ನಿಂದ ಗ್ಲೂಕೋಸ್‌ ಸಂಶ್ಲೇಷಣೆ)
    • [ಶರ್ಕರಾಗರ ಲಯನ (glycogenolysis) (ಗ್ಲೈಕೋಜೆನ್‌‌ನ್ನು ಗ್ಲೂಕೋಸ್‌ ಆಗಿ ವಿಭಜನೆ ಮಾಡುವ ಕ್ರಿಯೆ)
    • ಶರ್ಕರೋತ್ಪಾದನೆ (glucogenesis) (ಗ್ಲೂಕೋಸ್‌‌ನಿಂದ ಗ್ಲೈಕೋಜೆನ್‌‌ನ ರೂಪುಗೊಳ್ಳುವಿಕೆ)(ಸ್ನಾಯು ಅಂಗಾಂಶಗಳೂ ಇದನ್ನು ಮಾಡಬಲ್ಲವು)
  • ಪ್ರೋಟೀನ್‌ ಚಯಾಪಚಯ ಕ್ರಿಯೆ, ಸಂಶ್ಲೇಷಣೆ ಮತ್ತು ವಿಭಜನೆಯ ಮೂಲಾಧಾರಕ್ಕೆ ಯಕೃತ್ತು ಹೊಣೆಯಾಗಿದೆ.
  • ಮೇದಸ್ಸಿನ ಚಯಾಪಚಯ ಕ್ರಿಯೆಯಲ್ಲಿಯ‌ೂ ಯಕೃತ್ತು ಹಲವು ಪಾತ್ರಗಳನ್ನು ವಹಿಸುತ್ತದೆ:
    • ಕೊಲೆಸ್ಟರಾಲ್ ಸಂಶ್ಲೇಷಣೆ
    • ಲಿಪೊಜೆನಿಸಿಸ್ - ಟ್ರೈಗ್ಲಿಸರೈಡ್‌ಗಳ (ಕೊಬ್ಬುಗಳ) ಉತ್ಪಾದನೆ.
  • ಹೆಪ್ಪುಗಟ್ಟಿಸುವ ಅಂಶಗಳಾದ I (ಫೈಬ್ರಿನೊಜೆನ್), II (ಪ್ರೊಥ್ರೋಂಬಿನ್), V, VII, IX, X ಮತ್ತು XI- ಇವುಗಳನ್ನಷ್ಟೇ ಅಲ್ಲದೇ, C ಪ್ರೋಟೀನ್‌, S ಪ್ರೋಟೀನ್‌ ಮತ್ತು ಪ್ರತಿಕರಣಿಕಾರಕ (antithrombin)ಗಳನ್ನೂ ಕೂಡ ಯಕೃತ್ತು ಉತ್ಪಾದಿಸುತ್ತದೆ.
  • ಮೊದಲ ಮ‌ೂರುತಿಂಗಳ ಭ್ರೂಣದಲ್ಲಿ ಕೆಂಪು ರಕ್ತಕಣಗಳ ಉತ್ಪತ್ತಿಗೆ ಯಕೃತ್ ಪ್ರಮುಖ ತಾಣವಾಗಿದೆ. ಗರ್ಭಧಾರಣೆಯಾದ 32ನೇ ವಾರದ ಹೊತ್ತಿಗೆ, ಈ ಕಾರ್ಯವನ್ನು ಅಸ್ಥಿ ಮಜ್ಜೆಯು ಬಹುಪಾಲು ಸಂಪೂರ್ಣವಾಗಿ ತೆಗೆದುಕೊಳ್ಳುತ್ತದೆ.
  • ಕೊಬ್ಬಿನ ಹಾಲಂದೀಕರಣಕ್ಕೆ (emulsification) ಅಗತ್ಯವಾಗಿರುವ ಪಿತ್ತರಸವನ್ನು (ಒಂದು ಹಸಿರು ಬಣ್ಣದ ದ್ರವ) ಯಕೃತ್ತು ಉತ್ಪತ್ತಿ ಮಾಡುತ್ತದೆ ಮತ್ತು ಸ್ರವಿಸುತ್ತದೆ. ಪಿತ್ತರಸದ ಕೆಲಭಾಗವು ಡ್ಯುಯೊಡಿನಮ್‌ನೊಳ‌ಗೆ ನೇರವಾಗಿ ಸ್ರವಿಕೆಯಾಗುತ್ತದೆ, ಹಾಗೂ ಸ್ವಲ್ಪ ಭಾಗವು ಪಿತ್ತಕೋಶದಲ್ಲಿ ಶೇಖರಿಸಲ್ಪಡುತ್ತದೆ.
  • [[ಇನ್ಸುಲಿನ್‌-ಸದೃಶ ವರ್ಧನಾಂಶ (insulin-like growth factor-1)ವನ್ನೂ (IGF-1) ಯಕೃತ್ತು ಉತ್ಪಾದಿಸುತ್ತದೆ. ಇದು ಬಾಲ್ಯದಲ್ಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಹಾಗೂ ವಯಸ್ಕರಲ್ಲಿ ಸಂವರ್ಧನ ಕ್ರಿಯೆಯ ಪರಿಣಾಮಗಳನ್ನು ಬೀರುವ ಒಂದು ಪಾಲಿಪೆಪ್ಟೈಡ್‌ ಪ್ರೋಟೀನ್‌ ಹಾರ್ಮೋನು ಆಗಿದೆ.
  • ಮುಚ್ಚಳಿಗೋತ್ಪಾದಕಗಳ (thrombopoietin) ಉತ್ಪತ್ತಿಗೆ ಯಕೃತ್ತು ಒಂದು ಪ್ರಮುಖ ತಾಣವಾಗಿದೆ. ಮುಚ್ಚಳಿಗೋತ್ಪಾದಕ ಒಂದು ಗ್ಲೈಕೊಪ್ರೋಟೀನ್‌ ಹಾರ್ಮೋನು ಆಗಿದ್ದು, ಇದು ಅಸ್ಥಿಮಜ್ಜೆಯಿಂದ ಕಿರುಬಿಲ್ಲೆಗಳು ಉತ್ಪತ್ತಿಯಾಗುವುದನ್ನು ನಿಯಂತ್ರಿಸುತ್ತದೆ.

ವಿಭಜನೆ

  • ಇನ್ಸುಲಿನ್‌ ಮತ್ತು ಇತರ ಹಾರ್ಮೋನುಗಳ ವಿಭಜನೆ
  • ಯಕೃತ್ತು ಹೀಮೋಗ್ಲೋಬಿನ್ಅನ್ನು ವಿಭಜಿಸಿ ಚಯಾಪಚಯಜಗಳನ್ನು ಉತ್ಪತ್ತಿಮಾಡುತ್ತದೆ. ಇವು ಪಿತ್ತರಸಕ್ಕೆ ಸೇರಿ ಅದಕ್ಕೆ ಬಣ್ಣವನ್ನು (ಬೈಲಿರುಬಿನ್‌ ಮತ್ತು ಬೈಲಿವರ್ಡಿನ್‌‌) ನೀಡುತ್ತವೆ.
  • ವಿಷಕಾರಿ ವಸ್ತುಗಳನ್ನು (ಉದಾ. ಮೆಥಿಲೀಕರಣ, ಎಂದರೆ CH3, ಎಂಬ ಒಂದು ಇಂಗಾಲ ಮತ್ತು ಮೂರು ಜಲಜನಕದ ಕಣಗಳಿರುವ ಸಂಯುಕ್ತವನ್ನು ಮತ್ತೊಂದು ಸಂಯುಕ್ತಕ್ಕೆ ಸೇರ್ಪಡೆ ಮಾಡುವುದು) ಹಾಗೂ ಬಹುತೇಕ ಔಷಧೀಯ ಉತ್ಪನ್ನಗಳನ್ನು ಔಷಧ ಚಯಾಪಚಯ ಕ್ರಿಯೆಯ ಮ‌ೂಲಕ ಯಕೃತ್ತು ವಿಭಜಿಸುತ್ತದೆ ಅಥವಾ ಮಾರ್ಪಡಿಸುತ್ತದೆ. ಚಯಾಪಚಯಜವು ಅದರ ಪೂರ್ವವರ್ತಿಗಿಂತ ಹೆಚ್ಚು ವಿಷಕಾರಿಯಾಗಿದ್ದರೆ, ಈ ಕ್ರಿಯೆಯು ಕೆಲವೊಮ್ಮೆ ವಿಷತ್ವವನ್ನು ಉಂಟುಮಾಡುತ್ತದೆ. ಮೇಲಾಗಿ, ಪಿತ್ತರಸ ಅಥವಾ ಮ‌ೂತ್ರದಲ್ಲಿ ವಿಸರ್ಜನೆಯಾಗಿ ಹೋಗುವುದಕ್ಕೆ ಸಹಾಯವಾಗುವಂತೆ ವಿಷಕಾರಿಗಳು ಸಂಯೋಜಿಸಲ್ಪಟ್ಟಿರುತ್ತವೆ.
  • ಯಕೃತ್ತು ಅಮೋನಿಯವನ್ನು ಯ‌ೂರಿಯ ಆಗಿ ಪರಿವರ್ತಿಸುತ್ತದೆ. ಇದು ಮಾನವನ ಬದುಕುಳಿಯುವಿಕೆಗೆ ತುಂಬಾ ಅಗತ್ಯವಾದದ್ದು. ಏಕೆಂದರೆ ಅಮೋನಿಯಾ ಒಂದು ವಿಷೀಯ ಪದಾರ್ಥ. ಅದು ರಕ್ತದಲ್ಲಿ ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾದರೆ ಮನುಷ್ಯನಲ್ಲಿ ಬುದ್ಧಿಭ್ರಮಣೆಗೆ ಹೋಲಿಕೆ ಮಾಡಬಹುದಾದ ಮಾನಸಿಕ ಸ್ಥಿತ್ಯಂತರಗಳು ಕಂಡುಬರುತ್ತವೆ. ಆದರೆ ಯೂರಿಯಾ ವಿಷೀಯ ಸಂಯುಕ್ತವಲ್ಲ.

ಇತರ ಕ್ರಿಯೆಗಳು

  • ಗ್ಲೂಕೋಸ್‌ (ಗ್ಲೈಕೋಜನ್‌ ರೂಪದಲ್ಲಿ), A ಜೀವಸತ್ವ (1-2 ವರ್ಷಗಳ ಪೂರೈಕೆ), D ಜೀವಸತ್ವ (1–4 ತಿಂಗಳ ಪೂರೈಕೆ), B12 ಜೀವಸತ್ವ, ಕಬ್ಬಿಣ ಮತ್ತು ತಾಮ್ರ ಮೊದಲಾದ ವಸ್ತುಗಳ ಬಾಹುಳ್ಯವನ್ನು ಯಕೃತ್ತು ಶೇಖರಿಸುತ್ತದೆ.
  • ಪ್ರತಿರಕ್ಷಾ ಪರಿಣಾಮಗಳಿಗೆ ಯಕೃತ್ತು ಜಬಾಬ್ದಾರನಾಗಿರುತ್ತದೆ - ಯಕೃತ್ತಿನ ರೆಟಿಕ್ಯುಲೊಎಂಡೊಥೀಲಿಯಲ್ ವ್ಯವಸ್ಥೆಯು ಪ್ರತಿರಕ್ಷಣಾತ್ಮಕವಾಗಿ ಸಕ್ರಿಯವಾಗಿರುವ ಅನೇಕ ಜೀವಕೋಶಗಳನ್ನು ಹೊಂದಿರುತ್ತದೆ. ನಾಳ ವ್ಯವಸ್ಥೆಯ ಮ‌ೂಲಕ ಇದಕ್ಕೆ ಒಯ್ಯಲ್ಪಡುವ ಪ್ರತಿಜನಕಗಳಿಗೆ (ಆಂಟಿಜೆನ್‌ಗಳಿಗೆ) ಇದು ಒಂದು 'ಜರಡಿ'ಯಂತೆ ಕಾರ್ಯನಿರ್ವಹಿಸುತ್ತದೆ.
  • ರಕ್ತಸಾರದ ಪ್ರಮುಖ ಪರಾಸರಣದ ಅಂಶವಾದ ಆಲ್ಬುಮಿನ್‌ಅನ್ನು ಯಕೃತ್ತು ಉತ್ಪತ್ತಿ ಮಾಡುತ್ತದೆ.
  • ಯಕೃತ್ತು ನಾಳೊತ್ತುಜನಕ (angiotensinogen) ಎಂಬ ಹಾರ್ಮೋನನ್ನು ಸಂಶ್ಲೇಷಿಸುತ್ತದೆ. ಮ‌ೂತ್ರಪಿಂಡವು ಕಡಿಮೆ ರಕ್ತದೊತ್ತಡವನ್ನು ಕಂಡುಕೊಂಡಾಗ ಬಿಡುಗಡೆಯಾಗುವ ಒಂದು ಕಿಣ್ವವಾದ ರೆನಿನ್‌‌ನಿಂದ ಸಕ್ರಿಯಗೊಳಿಸಲ್ಪಟ್ಟಾಗ ಈ ಹಾರ್ಮೋನು ರಕ್ತದೊತ್ತಡವನ್ನು ಹೆಚ್ಚು ಮಾಡುತ್ತದೆ.

ಯಕೃತ್ತಿನ ಕಾಯಿಲೆಗಳು

ಯಕೃತ್ತು 
ಎಡ ಹಾಲೆ ಯಕೃತ್ತು ಗೆಡ್ಡೆ

ದೇಹದಲ್ಲಿನ ಹೆಚ್ಚುಕಡಿಮೆ ಎಲ್ಲಾ ಅಂಗಗಳಿಗೆ ಯಕೃತ್ತು ಆಸರೆಯನ್ನು ನೀಡುತ್ತದೆ ಹಾಗೂ ಬದುಕಿಗೆ ಜೀವಧಾರಕವಾಗಿದೆ. ರಕ್ಷಣೆಗೆ ಸಹಾಯಕವಾಗುವ ಸ್ಥಾನದಲ್ಲಿ ನೆಲೆಗೊಂಡಿರುವುದರಿಂದ ಮತ್ತು ಅದರ ಬಹು ಆಯಾಮಗಳ ಕಾರ್ಯಗಳಿಂದಾಗಿ, ಯಕೃತ್ತು ಕೂಡಾ ಅನೇಕ ಕಾಯಿಲೆಗಳಿಗೆ ಈಡಾಗುವ ಸಂಭವವಿರುತ್ತದೆ.

ಹೆಚ್ಚು ಸಾಮಾನ್ಯವಾಗಿರುವ ಕಾಯಿಲೆಗಳಲ್ಲಿ ಇವು ಸೇರಿವೆ: ಹೆಪಟೈಟಿಸ್‌ A,B, C, E, ಮದ್ಯಪಾನದಿಂದಾಗುವ ಹಾನಿ, ಕೊಬ್ಬು ತುಂಬಿದ ಯಕೃತ್ತು, ಯಕೃತ್ತಿನ ತೀವ್ರರೋಗ (ಸಿರೋಸಿಸ್), ಕ್ಯಾನ್ಸರ್, ಔಷಧದಿಂದಾಗುವ ಹಾನಿ (ಮುಖ್ಯವಾಗಿ ಅಸೆಟಾಮಿನೊಫೆನ್, ಕ್ಯಾನ್ಸರ್ ಔಷಧಗಳು).

ಯಕೃತ್ತಿನ ಹೆಚ್ಚಿನ ಕಾಯಿಲೆಗಳು, ಇದರ ಕಾರ್ಯ ವ್ಯವಸ್ಥೆಯಲ್ಲಿ ಬೈಲಿರುಬಿನ್ ಮಟ್ಟವು ಹೆಚ್ಚಾಗುವುದರಿಂದ ಉಂಟಾಗುವ ಕಾಮಾಲೆ ರೋಗದೊಂದಿಗೆ ಜೊತೆಗೂಡಿರುತ್ತವೆ. ಸತ್ತ ಕೆಂಪು ರಕ್ತಕಣಗಳ ಹೀಮೋಗ್ಲೋಬಿನ್ ವಿಭಜನೆಯಾಗುವುದರಿಂದಾಗಿ ಬೈಲಿರುಬಿನ್‌ ಮಟ್ಟವು ಅಧಿಕಗೊಳ್ಳುತ್ತದೆ; ಸಾಮಾನ್ಯವಾಗಿ ಯಕೃತ್ತು ರಕ್ತದಿಂದ ಬೈಲಿರುಬಿನ್‌ನ್ನು ತೆಗೆದುಹಾಕಿ ಪಿತ್ತರಸದ ಮ‌ೂಲಕ ಹೊರದೂಡುತ್ತದೆ.

ಮಕ್ಕಳಲ್ಲಿ ಕಂಡುಬರುವ ಯಕೃತ್ತು ಕಾಯಿಲೆಗಳೂ ಹಲವಾರಿವೆ. ಅವುಗಳಲ್ಲಿ ಕೆಲವು ಹೀಗಿವೆ: ಪಿತ್ತರಸದ ನಾಳಬಂಧ (ಬಿಲಿಯರಿ ಆಟ್ರೇಸಿಯಾ), ಆಲ್ಫಾ-1 ಆಂಟಿಟ್ರಿಪ್ಸಿನ್ ಕೊರತೆ, ಅಲಗಿಲ್ಲೆ ಸಿಂಡ್ರೋಮ್, ಆನುವಂಶಿಕವಾಗಿ ಬರುವ ಎಡೆಬಿಡದೆ ಹೆಚ್ಚುವ ಇಂಟ್ರಾಹೆಪಾಟಿಕ್‌ ಕೊಲೆಸ್ಟಾಸಿಸ್ ಮತ್ತು ಲ್ಯಾಂಗರಾನ್ಸ್ ಜೀವಕೋಶದ ಹಿಸ್ಟಿಯೊಸೈಟೋಸಿಸ್.

ಯಕೃತ್ತಿನ ಕಾರ್ಯದಲ್ಲಿ ಮಧ್ಯಪ್ರವೇಶಿಸುವ ಕಾಯಿಲೆಗಳು ಈ ಪ್ರಕ್ರಿಯೆಗಳನ್ನು ಅಸ್ತವ್ಯಸ್ತಗೊಳಿಸುತ್ತವೆ. ಆದರೂ, ಯಕೃತ್ತು ಬೇಗನೆ ಪುನರುಜ್ಜೀವಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಅತಿ ಹೆಚ್ಚಿನ ಕಾದಿರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಅಧಿಕ ಪ್ರಮಾಣದ ಹಾನಿಯಾದ ನಂತರ ಯಕೃತ್ತೇ ಸ್ವತಃ ರೋಗಲಕ್ಷಣಗಳನ್ನು ಉತ್ಪತ್ತಿ ಮಾಡುತ್ತದೆ.

ಯಕೃತ್ತಿನ ಕ್ರಿಯೆಯ ಪರೀಕ್ಷೆಗಳನ್ನು ನಡೆಸುವುದರಿಂದ ಯಕೃತ್ತಿನ ರೋಗಗಳನ್ನು ಪತ್ತೆಮಾಡಬಹುದು. ಉಲ್ಬಣಗೊಂಡ ಹಂತದ ಪ್ರೋಟೀನುಗಳ ಉತ್ಪಾದನೆಯು ಇದಕ್ಕೊಂದು ಉದಾಹರಣೆ.

ಕಾಯಿಲೆಯ ಚಿಹ್ನೆಗಳು

ಯಕೃತ್ತು ಹಾನಿಯಾದಾಗ ಕಂಡುಬರುವ ಮೂಲಭೂತ ಅಥವಾ ಮಾದರಿ ಚಿಹ್ನೆಗಳು ಈ ಕೆಳಗಿನಂತಿವೆ:

  • ವಿವರ್ಣಗೊಂಡ ಮಲ - ಬೈಲಿರುಬಿನ್‌ ಮಲದೊಂದಿಗೆ ಮಿಶ್ರಗೊಂಡರೆ ಅದು ಬಿಳಿಯಾಗಿ ವಿವರ್ಣಗೊಳ್ಳುತ್ತದೆ.
  • ಗಾಢವರ್ಣದ ಮ‌ೂತ್ರ - ಬೈಲಿರುಬಿನ್‌ ಮ‌ೂತ್ರದೊಂದಿಗೆ ಮಿಶ್ರವಾದರೆ ಇದು ಕಂಡುಬರುತ್ತದೆ.
  • ಬೈಲಿರುಬಿನ್‌ ಚರ್ಮದ ಮೇಲೆ ಸಂಗ್ರಹವಾದರೆ ತೀವ್ರ ತುರಿಕೆಗೆ ಕಾರಣವಾಗುತ್ತದೆ. ಯಕೃತ್ತಿನ ವಿಫಲತೆ ಇರುವವರಲ್ಲಿ ತುರಿಕೆಯು ಸಾಮಾನ್ಯ ಕಾಯಿಲೆಯಾಗಿರುತ್ತದೆ. ಹೆಚ್ಚಾಗಿ ಈ ನವೆಯನ್ನು ಔಷಧಗಳಿಂದ ಉಪಶಮನಗೊಳಿಸಲಾಗುವುದಿಲ್ಲ.
  • ಯಕೃತ್ತು ಆಲ್ಬುಮಿನ್‌ನ್ನು ಉತ್ಪತ್ತಿ ಮಾಡಲು ವಿಫಲವಾದರೆ, ಕಿಬ್ಬೊಟ್ಟೆ, ಕಣಕಾಲುಗಳು ಮತ್ತು ಪಾದಗಳ ಊದಿಕೊಳ್ಳುವಿಕೆ ಯು ಸಂಭವಿಸುತ್ತದೆ.
  • ವಿಪರೀತ ಆಯಾಸ - ಪೋಷಕಾಂಶಗಳು, ಖನಿಜಗಳು ಮತ್ತು ಜೀವಸತ್ವಗಳ ಸಾಮಾನ್ಯೀಕರಿಸಿದ ಕೊರತೆಯಿಂದ ಇದು ಕಂಡುಬರುತ್ತದೆ
  • ಮೂಗೇಟಾಗುವಿಕೆ ಮತ್ತು ಸುಲಭವಾಗಿ ರಕ್ತ ಬರುವುದು ಇವು ಯಕೃತ್ತಿನ ಕಾಯಿಲೆಯ ಇತರ ಲಕ್ಷಣಗಳಾಗಿವೆ. ರಕ್ತಸೋರುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುವ ವಸ್ತುಗಳನ್ನು ಯಕೃತ್ತು ಉತ್ಪತ್ತಿ ಮಾಡುತ್ತದೆ. ಯಕೃತ್ತು ಘಾಸಿಗೊಳಗಾದಾಗ, ಈ ವಸ್ತುಗಳು ಉತ್ಪತ್ತಿಯಾಗದೆ, ತೀವ್ರಸ್ವರೂಪದ ರಕ್ತಸೋರುವಿಕೆ ಕಂಡುಬರುತ್ತದೆ.

ರೋಗನಿರ್ಣಯ

ಯಕೃತ್ತು ಕ್ರಿಯೆಯ ರೋಗನಿರ್ಣಯವನ್ನು ರಕ್ತ ಪರೀಕ್ಷೆಗಳಿಂದ ಮಾಡಬಹುದು. ಯಕೃತ್ತು ಕಾರ್ಯದ ಪರೀಕ್ಷೆಗಳು ಅದರ ಹಾನಿಯ ವ್ಯಾಪ್ತಿಯನ್ನು ಸುಲಭರೀತಿಯಲ್ಲಿ ಖಚಿತವಾಗಿ ನಿರೂಪಿಸುತ್ತವೆ. ಸೋಂಕು ತಗಲಿದೆ ಎಂದು ಸಂಶಯ ಉಂಟಾದರೆ ಸೀರಮ್ ಶಾಸ್ತ್ರದ ಇತರ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಕೆಲವೊಮ್ಮೆ ಯಕೃತನ್ನು ಚಿತ್ರಿಸಲು ಶ್ರವಣಾತೀತ ಧ್ವನಿತರಂಗಗಳ ಅಥವಾ CT ಸ್ಕ್ಯಾನ್‌ನ ಅವಶ್ಯಕತೆ ಬರಬಹುದು.

ಯಕೃತ್ತಿನ ಭೌತಿಕ ಪರಿಶೀಲನೆಯು ಅದರ ಹಾನಿಯ ವ್ಯಾಪ್ತಿಯನ್ನು ಕಂಡುಹಿಡಿಯುವಲ್ಲಿ ಹೆಚ್ಚು ನಿಖರವಾದುದಲ್ಲ. ಭೌತಿಕ ಪರಿಶೀಲನೆಯು ಯಕೃತ್ತಿನ ಮೃದುತ್ವ ಅಥವಾ ಗಾತ್ರದ ಬಗ್ಗೆ ಮಾತ್ರ ತಿಳಿಯಪಡಿಸುತ್ತದೆ. ಆದ್ದರಿಂದ ಎಲ್ಲಾ ಸಂದರ್ಭಗಳಲ್ಲಿ ಯಕೃತ್ತಿನ ಬಗ್ಗೆ ಅರಿಯಲು ರೇಡಿಯಾಲಜಿಗೆ ಸಂಬಂಧಿಸಿದ ಕೆಲವು ಪ್ರಕಾರದ ಅಧ್ಯಯನದ ಅಗತ್ಯವಿರುತ್ತದೆ.

ಅಂಗಾಂಶ ಪರೀಕ್ಷೆ

ಯಕೃತ್ತಿಗೆ ಉಂಟಾದ ಹಾನಿಯ ಬಗ್ಗೆ ತಿಳಿಯಲು ಅಂಗಾಂಶ ಪರೀಕ್ಷೆಯು ಅತ್ಯುತ್ತಮ ದಾರಿಯಾಗಿದೆ. ಅಂಗಾಂಶ ಪರೀಕ್ಷೆಯು ಎಲ್ಲಾ ಸಂದರ್ಭಗಳಲ್ಲಿ ಬೇಕಾಗಿಲ್ಲವಾದರೂ, ಕಾರಣ ತಿಳಿಯದಿದ್ದರೆ ಮಾತ್ರ ಅವಶ್ಯಕವಾಗಿರುತ್ತದೆ. ಈ ಪರೀಕ್ಷೆಯನ್ನು ಹಾಸಿಗೆ ಪಕ್ಕದಲ್ಲಿದ್ದುಕೊಂಡೇ ಮಾಡಬೇಕಾಗುತ್ತದೆ ಹಾಗೂ ಸ್ಥಳೀಯ ಅರಿವಳಿಕೆಗಳು ಮಾತ್ರ ಬೇಕಾಗುತ್ತವೆ. ಪಕ್ಕೆಲುಬಿನ ಸ್ವಲ್ಪ ಕೆಳಗಿನ ಚರ್ಮಕ್ಕೆ ಒಂದು ಸಣ್ಣ ತೆಳ್ಳಗಿನ ಸೂಜಿಯನ್ನು ಚುಚ್ಚಿ ಪರೀಕ್ಷೆಗಾಗಿ ಅಂಗಾಂಶವನ್ನು ತೆಗೆಯಲಾಗುತ್ತದೆ. ಆ ಅಂಗಾಂಶವನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ಅಲ್ಲಿ ಅದನ್ನು ಸೂಕ್ಷ್ಮದರ್ಶಕದಡಿಯಲ್ಲಿ ವಿಶ್ಲೇಷಿಸಲಾಗುತ್ತದೆ. ಒಂದು ವೇಳೆ ಕೇವಲ ಸಣ್ಣ ಪ್ರದೇಶ ಮಾತ್ರವೇ ಸೋಂಕಿಗೆ ಒಳಗಾಗಿದ್ದರೆ, ರೇಡಿಯಾಲಜಿ ತಜ್ಞರು ಕೆಲವೊಮ್ಮೆ ಯಕೃತ್ತು ಅಂಗಾಂಶ ಪರೀಕ್ಷೆಯನ್ನು ಶ್ರವಣಾತೀತ ಧ್ವನಿತರಂಗಗಳ ಮಾರ್ಗದರ್ಶನದಡಿಯಲ್ಲಿ ಮಾಡುತ್ತಾರೆ. ಯಕೃತ್ತು ದೇಹದ ಶಕ್ತಿಕೇಂದ್ರ ಮತ್ತು ಉಳಿಯುವಿಕೆಗೆ ಜೀವಧಾರಕವಾಗಿದೆ. ಹೆಚ್ಚಿನ ಯಕೃತ್ತು ಕಾಯಿಲೆಗಳಿಂದ ಮುಕ್ತಿಪಡೆಯುವ ಉತ್ತಮ ದಾರಿಗಳೆಂದರೆ, ಆರೋಗ್ಯಪೂರ್ಣ ಆಹಾರ ಸೇವನೆ, ಮದ್ಯ ಮತ್ತು ತಂಬಾಕು ಸೇವನೆಯಿಂದ ದೂರವಿರುವುದು ಹಾಗೂ ಕ್ರಮಬದ್ಧವಾಗಿ ವ್ಯಾಯಾಮ ಮಾಡುವುದು.

ಪುನರುತ್ಪಾದನೆ

ಕಳೆದುಕೊಂಡ ಅಂಗಾಂಶವನ್ನು ಸ್ವಾಭಾವಿಕವಾಗಿ ಪುನರುತ್ಪಾದನೆ ಮಾಡಿಕೊಳ್ಳಲು ಸಾಮರ್ಥ್ಯವಿರುವ, ಮಾನವನಲ್ಲಿರುವ ಏಕೈಕ ಒಳಾಂಗವೆಂದರೆ ಅದು ಯಕೃತ್ತು ಮಾತ್ರ; ಯಕೃತ್‌ ಒಂದರ 25%ನಷ್ಟು ಚಿಕ್ಕ ಭಾಗವೂ ಒಂದು ಸಂಪೂರ್ಣ ಯಕೃತ್ತಾಗಿ ಮತ್ತೆ ರೂಪುಗೊಳ್ಳಬಲ್ಲದು. ಉಳಿಕೆಯಾಗಿರುವ ಯಕೃತ್ತಿನಲ್ಲಿನ ಹಿಪ್ಟೊಕ್ರೊನಾಟಿನ್ ಜೀವಕೋಶಗಳಿಂದಾಗಿ, ಮಾನವನ ಯಕೃತ್ತೊಂದು 8 ವರ್ಷಗಳಿಗಿಂತ ಕಡಿಮೆ ಇಲ್ಲದಷ್ಟು ಸಮಯದಲ್ಲಿ ಮತ್ತೆಬೆಳೆಯುತ್ತದೆ ಎಂದು ತಿಳಿದುಬಂದಿದೆ.

ಜೀವಕೋಶ ಉತ್ಪತ್ತಿಯಾಗುವ ಚಕ್ರದಲ್ಲಿ ಹೆಪಟೊಸೈಟ್‌‌ಗಳು ಪುನಃ-ಪ್ರವೇಶಿಸುವುದು ಇದರ ಹಿಂದಿರುವ ಪ್ರಧಾನ ಕಾರಣ. ಅಂದರೆ, ಹೆಪಟೊಸೈಟ್‌ಗಳು ಜಡವಾದ G0 ಹಂತದಿಂದ G1 ಹಂತಕ್ಕೆ ಹೋಗಿ, ಕೋಶವಿಭಜನೆಗೆ ಒಳಗಾಗುತ್ತವೆ. ಈ ಪ್ರಕ್ರಿಯೆಯು p75 ಗ್ರಾಹಕಗಳಿಂದ ಸಕ್ರಿಯಗೊಳಿಸಲ್ಪಡುತ್ತದೆ. ಓವಲೊಸೈಟ್‌‌ಗಳು ಅಥವಾ ಯಕೃತ್ತಿನ ಅಂಡಾಕೃತಿಯ ಜೀವಕೋಶಗಳು ಎಂದು ಕರೆಯಲ್ಪಡುವ ದುಪ್ಪಟ್ಟು ಸಾಮರ್ಥ್ಯದ ಕಾಂಡಕೋಶಗಳು ಯಕೃತ್ತಿನೊಳಗಿರುವ ಪಿತ್ತರಸ ನಾಳ)ಗಳಲ್ಲಿ (ಕೆನಾಲ್ಸ್ ಆಫ್ ಹೆರಿಂಗ್) ಇರುತ್ತವೆ ಎಂಬುದಕ್ಕೆ ಕೆಲವು ಸಾಕ್ಷ್ಯಾಧಾರಗಳಿವೆ. ಈ ಜೀವಕೋಶಗಳನ್ನು ಹೆಪಟೊಸೈಟ್‌ಗಳು ಅಥವಾ ಕೊಲಾಂಜಿಯೊಸೈಟ್‌ಗಳೆಂದು ವಿಂಗಡಿಸಬಹುದು. ಈ ಕೊಲಾಂಜಿಯೊಸೈಟ್‌ಗಳು ಪಿತ್ತರಸ ನಾಳಗಳ ಒಳಪದರದಲ್ಲಿರುವ ಜೀವಕೋಶಗಳಾಗಿವೆ.

ಯಕೃತ್ತು ಕಸಿಮಾಡುವಿಕೆ

ಮಾನವ ಯಕೃತ್ತಿನ ಕಸಿಮಾಡುವಿಕೆಯನ್ನು ಪ್ರಪ್ರಥಮವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಥೋಮಸ್ ಸ್ಟಾರ್ಜಲ್ ಮತ್ತು ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನ ರಾಯ್ ಕಾಲ್ನೆ ಎಂಬಿಬ್ಬರು ಕ್ರಮವಾಗಿ 1963ರಲ್ಲಿ ಮತ್ತು 1965ರಲ್ಲಿ ನಿರ್ವಹಿಸಿದರು.

ಯಕೃತ್ತು 
ಎಡ ಹಾಲೆ ಯಕೃತ್ತು ಗೆಡ್ಡೆಯನ್ನು ಕತ್ತರಿಸಿದ ತೆಗೆದ ನಂತರ

ಪೂರ್ವಾವಸ್ಥೆಗೆ ತರಲಾಗದ ಯಕೃತ್ತು ವಿಫಲತೆಗೆ ಯಕೃತ್ತು ಕಸಿಮಾಡುವಿಕೆಯೊಂದೇ ಮಾರ್ಗ. ತೀವ್ರವಾದ ಹೆಪಟೈಟಿಸ್‌ C, ಕುಡಿತದ ಚಟ, ಆಟೊಇಮ್ಯೂನ್ ಹೆಪಟೈಟಿಸ್‌ನಂಥ ಸಿರೋಸಿಸ್‌‌ಗೆ ಕಾರಣವಾಗುವ ದೀರ್ಘಕಾಲದ ಯಕೃತ್ತು ಕಾಯಿಲೆಗಳಿಗೆ ಹಾಗೂ ಇನ್ನೂ ಅನೇಕ ಕಾಯಿಲೆಗಳಿಗೆ ಹೆಚ್ಚಿನ ಕಸಿಮಾಡುವಿಕೆಗಳನ್ನು ನಡೆಸಲಾಗುತ್ತದೆ. ಹಠಾತ್ತನೆ ಕಾಣಿಸಿಕೊಳ್ಳುವ ಯಕೃತ್ತಿನ ವಿಫಲತೆಗೆ ಯಕೃತ್ತು ಕಸಿಮಾಡುವಿಕೆಯನ್ನು ಮಾಡುವುದು ತುಂಬಾ ಅಪರೂಪ. ಇದರಲ್ಲಿ ಯಕೃತ್ತಿನ ವಿಫಲತೆಯು ಕೆಲವು ದಿನಗಳಿಂದ ವಾರಗಳವರೆಗೆ ಕಾಣಿಸಿಕೊಳ್ಳುತ್ತದೆ.

ಕಸಿಮಾಡುವಿಕೆಗೆ ಬೇಕಾಗುವ ಯಕೃತ್ತು ಮಿಶ್ರಕಸಿಕೆಗಳನ್ನು ಮಾರಣಾಂತಿಕ ಮಿದುಳು ಗಾಯದಿಂದ ಸಾವನ್ನಪ್ಪಿದ ದಾನಿಗಳಿಂದ ಸಾಮಾನ್ಯವಾಗಿ ಪಡೆಯಲಾಗುತ್ತದೆ. ಬದುಕಿರುವ ದಾನಿಯಿಂದ ಪಡೆದ ಯಕೃತ್ತಿನ ಕಸಿಮಾಡುವಿಕೆಯು ಒಂದು ಕೌಶಲವಾಗಿದ್ದು, ಜೀವವಿರುವ ವ್ಯಕ್ತಿಯ ಯಕೃತ್ತಿನಿಂದ ಒಂದು ಸಣ್ಣ ಭಾಗವನ್ನು ತೆಗೆದು ಅದನ್ನು ಗ್ರಾಹಕನ ಸಂಪೂರ್ಣ ಯಕೃತ್ತನ್ನು ಬದಲಿಸುವುದಕ್ಕಾಗಿ ಬಳಸಲಾಗುತ್ತದೆ. ಇದನ್ನು ಮೊದಲು 1989ರಲ್ಲಿ ಶಿಶುವಿನ ಯಕೃತ್ತು ಕಸಿಮಾಡುವಿಕೆಯಲ್ಲಿ ನಡೆಸಲಾಯಿತು. ಶಿಶು ಅಥವಾ ಸಣ್ಣ ಮಗುವಿಗೆ ಯಕೃತ್ತು ಮಿಶ್ರಕಸಿಕೆಯಾಗಿ ಬಳಸಲು ವಯಸ್ಕರ ಯಕೃತ್ತಿನ 20%ನಷ್ಟು (ಕೊಯಿನಾಡ್‌ ಭಾಗಗಳು 2 ಮತ್ತು 3) ಭಾಗ ಮಾತ್ರ ಬೇಕಾಗುತ್ತದೆ.

ತೀರಾ ಇತ್ತೀಚೆಗೆ, ಯಕೃತ್ತಿನ 60%ನಷ್ಟಿರುವ ದಾನಿಯ ಬಲ ಯಕೃತ್ತಿನ ಹಾಲೆಯನ್ನು ಬಳಸಿಕೊಂಡು ವಯಸ್ಕನಿಂದ-ವಯಸ್ಕನಿಗೆ ಯಕೃತ್ತು ಕಸಿಮಾಡುವಿಕೆಯನ್ನು ಕೈಗೊಳ್ಳಲಾಯಿತು. ಯಕೃತ್ತಿನ ಪುನರುತ್ಪಾದನೆಯ ಸಾಮರ್ಥ್ಯದಿಂದಾಗಿ, ಎಲ್ಲವೂ ಸರಿಯಾಗಿ ನಡೆದಲ್ಲಿ ದಾನಿ ಮತ್ತು ಗ್ರಾಹಕರಿಬ್ಬರಲ್ಲಿಯ‌ೂ ಯಕೃತ್ತು ಎಂದಿನ ಹಾಗೆಯೇ ಕಾರ್ಯನಿರ್ವಹಿಸುತ್ತವೆ. ಈ ಪ್ರಕ್ರಿಯೆಯು ದಾನಿಯನ್ನು ಅತಿ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದರಿಂದ ಹಾಗೂ ಮೊದಲ ನೂರಾರು ನಿದರ್ಶನಗಳಲ್ಲಿ ಕನಿಷ್ಠ 2 ದಾನಿಗಳು ಸಾವನ್ನಪ್ಪಿರುವುರಿಂದ, ಇದು ಹೆಚ್ಚು ವಿವಾದಾಸ್ಪದವಾಗಿದೆ. ಇತ್ತೀಚಿನ ಪ್ರಕಟಣೆಯೊಂದು ದಾನಿಯ ಪ್ರಾಣಹಾನಿಯ ಸಮಸ್ಯೆಯನ್ನು ಗುರುತಿಸಿದೆ, ಹಾಗೂ ಕನಿಷ್ಠಪಕ್ಷ ಇಂಥ 14 ನಿದರ್ಶನಗಳು ಕಂಡುಬಂದಿವೆ. ಶಸ್ತ್ರಚಿಕಿತ್ಸಾ ನಂತರದ ತೊಂದರೆಗಳಿಂದಾಗುವ ಅಪಾಯಗಳು (ಮತ್ತು ಸಾವು) ಎಡ-ಭಾಗದ ಶಸ್ತ್ರಚಿಕಿತ್ಸೆಗಳಿಗಿಂತ ಬಲ-ಭಾಗದ ಶಸ್ತ್ರಚಿಕಿತ್ಸೆಗಳಲ್ಲಿ ತುಂಬಾ ಹೆಚ್ಚಾಗಿರುತ್ತವೆ.

ಅತಿಕ್ರಮಣಶೀಲವಲ್ಲದ-ಚಿತ್ರಿಸುವಿಕೆಯ (ನಾನ್-ಇನ್ವೇಸಿವ್ ಇಮೇಜಿಂಗ್) ಇತ್ತೀಚಿನ ಪ್ರಗತಿಗಳಿಂದಾಗಿ, ಯಕೃತ್ತಿನ ಅಂಗರಚನೆಯು ಬೇರೆಯವರಿಗೆ ನೀಡಲು ಶಕ್ಯವಾಗಿದೆಯೇ ಎಂದು ನಿರ್ಧರಿಸಲು ಅದರ ಬಗ್ಗೆ ತಿಳಿಯುವುದಕ್ಕಾಗಿ, ಜೀವಂತ ಯಕೃತ್ತು ದಾನಿಗಳು ಸಾಮಾನ್ಯವಾಗಿ ಚಿತ್ರಿಸುವ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಯೋಗ್ಯತೆಯ ನಿರ್ಣಯವನ್ನು ಸಾಮಾನ್ಯವಾಗಿ 'ಮಲ್ಟಿ-ಡಿಟೆಕ್ಟರ್ ರೊ ಕಂಪ್ಯೂಟೆಡ್ ಟೋಮೊಗ್ರಫಿ' (MDCT) ಮತ್ತು 'ಮ್ಯಾಗ್ನೆಟಿಕ್ ರೆಸನನ್ಸ್ ಇಮೇಜಿಂಗ್' (MRI) ಮ‌ೂಲಕ ನಡೆಸಲಾಗುತ್ತದೆ. MDCTಯು ನಾಳೀಯ ಅಂಗರಚನೆ ಮತ್ತು ಗಾತ್ರದ ಬಗ್ಗೆ ತಿಳಿಯಲು ಉತ್ತಮ ವಿಧಾನವಾಗಿದೆ. MRIಅನ್ನು ಪಿತ್ತರಸ ವ್ಯವಸ್ಥೆಯ ಅಂಗರಚನೆಯ ಬಗ್ಗೆ ತಿಳಿಯಲು ಬಳಸಲಾಗುತ್ತದೆ. ದಾನ ಮಾಡುವುದಕ್ಕೆ ತಕ್ಕುದಲ್ಲದ ಅಸಾಮಾನ್ಯ ನಾಳೀಯ ಅಂಗರಚನೆಯನ್ನು ಹೊಂದಿರುವ ದಾನಿಗಳು ಅನವಶ್ಯಕ ಶಸ್ತ್ರಚಿಕಿತ್ಸೆಗೆ ಒಳಾಗುವುದನ್ನು ತಪ್ಪಿಸಲು ಈ ರೀತಿಯ ಚಿತ್ರಿಸುವ ಪರೀಕ್ಷೆಗಳಿಗೆ ಗುರಿಪಡಿಸಬಹುದು.

ಅಭಿವೃದ್ಧಿ

ಭ್ರೂಣದ ರಕ್ತ ಪೂರೈಕೆ

ಬೆಳೆಯುತ್ತಿರುವ ಭ್ರೂಣದಲ್ಲಿ ಯಕೃತ್ತಿಗೆ ರಕ್ತ ಪೂರೈಸುವ ಪ್ರಮುಖ ಮ‌ೂಲವೆಂದರೆ ಭ್ರೂಣಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸುವ ಹೊಕ್ಕುಳಿನ ರಕ್ತನಾಳ. ಹೊಕ್ಕಳಿನ-ರಕ್ತನಾಳವು ಹೊಕ್ಕಳಿನ ಜಾಗದಲ್ಲಿ ಕಿಬ್ಬೊಟ್ಟೆಯನ್ನು ಪ್ರವೇಶಿಸಿ, ಯಕೃತ್ತಿನ ಕುಡುಗೋಲಿನಂತೆ ಬಾಗಿದ ಅಸ್ಥಿರಜ್ಜಿನ ಖಾಲಿ ಅಂಚಿನೊಂದಿಗೆ ಮೇಲಕ್ಕೆ ಚಲಿಸಿ, ಯಕೃತ್ತಿನ ಕೆಳಮೇಲ್ಮೈಗೆ ಹೋಗುತ್ತದೆ. ಅಲ್ಲಿ ಅದು ಅಭಿಧಮನಿಯ ಎಡ ಕವಲಿನೊಂದಿಗೆ ಸೇರಿಕೊಳ್ಳುತ್ತದೆ. ಡಕ್ಟಸ್ ವಿನಸಸ್ ರಕ್ತವನ್ನು ಎಡ ಅಭಿಧಮನಿಯಿಂದ ಎಡ ಯಕೃತ್ತಿನ ರಕ್ತನಾಳಕ್ಕೆ ಮತ್ತು ನಂತರ ಕೆಳಗಿನ ಮಹಾಸಿರೆಗೆ ಒಯ್ಯುವ ಮೂಲಕ ಜರಾಯುವಿನ ರಕ್ತವು ಯಕೃತನ್ನು ದಾಟಿಕೊಂಡು ಹೋಗುವಂತೆ ಮಾಡುತ್ತದೆ.

ಭ್ರೂಣದಲ್ಲಿ ಯಕೃತ್ತು ಗರ್ಭಾವಸ್ಥೆಯಾದ್ಯಂತ ಬೆಳೆಯುತ್ತಿರುತ್ತದೆ ಹಾಗೂ ಶಿಶುವಿನ ಯಕೃತ್ತಿನ ಸಾಮಾನ್ಯ ಸೋಸುವಿಕೆಯನ್ನು ಮಾಡುವುದಿಲ್ಲ. ಭ್ರೂಣವು ನೇರವಾಗಿ ಆಹಾರವನ್ನು ಸೇವಿಸದಿರುವುದರಿಂದ ಇದರ ಯಕೃತ್ತು ಜೀರ್ಣಕ್ರಿಯೆಯನ್ನು ನಡೆಸುವುದಿಲ್ಲ, ಆದರೆ ತಾಯಿಯಿಂದ ಹೊಕ್ಕುಳು ಬಳ್ಳಿಯ ಮ‌ೂಲಕ ಪೋಷಣೆಯನ್ನು ಪಡೆಯುತ್ತದೆ. ಭ್ರೂಣದ ಯಕೃತ್ತು ಕೆಲವು ರಕ್ತ ಕಾಂಡಕೋಶಗಳನ್ನು ಬಿಡುಗಡೆ ಮಾಡುತ್ತದೆ. ಇವು ಭ್ರೂಣದ ತೈಮಸ್ ಗ್ರಂಥಿಗೆ ಚಲಿಸುತ್ತವೆ. ಆದ್ದರಿಂದ T-ಜೀವಕೋಶಗಳೆಂದು ಕರೆಯಲಾಗುವ ದುಗ್ಧಕಣಗಳು ಮೊದಲು ಭ್ರೂಣದ ಯಕೃತ್ತು ಕಾಂಡಕೋಶಗಳಿಂದ ಸೃಷ್ಟಿಯಾಗುತ್ತವೆ. ಒಮ್ಮೆ ಭ್ರೂಣದ ಹೆರಿಗೆಯಾಯಿತೆಂದರೆ, ಶಿಶುವಿನಲ್ಲಿನ ರಕ್ತ ಕಾಂಡಕೋಶಗಳ ರಚನೆಯಾಗುವ ಕ್ರಿಯೆಯು ಕೆಂಪು ಅಸ್ಥಿಮಜ್ಜೆಗೆ ವರ್ಗಾಯಿಸಲ್ಪಡುತ್ತದೆ.

ಜನನದ ನಂತರ ಹೊಕ್ಕಳಿನ ರಕ್ತನಾಳ ಮತ್ತು ಡಕ್ಟಸ್ ವಿನನಸಸ್‌ಗಳು ಎರಡರಿಂದ ಐದು ದಿನಗಳೊಳಗೆ ಸಂಪೂರ್ಣವಾಗಿ ಗುರುತಿಲ್ಲದಂತಾಗಿ ಹೋಗುತ್ತವೆ; ಹೊಕ್ಕಳಿನ ರಕ್ತನಾಳವು ಲಿಗಮೆಂಟಮ್‌ ಟೆರೆಸ್‌ ಆಗುತ್ತದೆ ಮತ್ತು ಡಕ್ಟಸ್ ವಿನಸಸ್‌ ಲಿಗಮೆಂಟಮ್‌ ವಿನಸಮ್‌ ಆಗಿ ಮಾರ್ಪಡುತ್ತದೆ. ಸಿರೋಸಿಸ್‌ ಮತ್ತು ನಾಳದ ಅಧಿಕ ಒತ್ತಡದಂತಹ ಕಾಯಿಲೆಯ ಸ್ಥಿತಿಯಲ್ಲಿ, ಹೊಕ್ಕಳಿನ ರಕ್ತನಾಳವು ಮತ್ತೆ ತೆರೆದುಕೊಳ್ಳಬಹುದು.

ಆಹಾರವಾಗಿ

ಸಾಂಸ್ಕೃತಿಕ ನಂಬಿಕೆಗಳು

The liver has always been an important symbol in occult physiology. As the largest organ, the one containing the most blood, it was regarded as the darkest, least penetrable part of man's innards. Thus it was considered to contain the secret of fate and was used for fortune-telling. In Plato, and in later physiology, the liver represented the darkest passions, particularly the bloody, smoky ones of wrath, jealousy, and greed which drive men to action. Thus the liver meant the impulsive attachment to life itself.

—James Hillman

ಮಾನವರಿಗೆ ಬೆಂಕಿಯನ್ನು ತೋರಿಸಿದಕ್ಕಾಗಿ ಪ್ರೊಮೆಥಿಯಸ್‌ನನ್ನು ಕಲ್ಲಿಗೆ ಕಟ್ಟಿ ದೇವರು ಶಿಕ್ಷೆ ನೀಡಿದ, ಆಗ ಒಂದು ರಣಹದ್ದು (ಅಥವಾ ಗರುಡ) ಬಂದು ಅವನ ಯಕೃತ್ತನ್ನು ಕೊಕ್ಕಿನಿಂದ ಕುಕ್ಕಿ ಕಿತ್ತುಹಾಕಿತು. ಆ ರಾತ್ರಿಯಲ್ಲಿ ಅದು ಮತ್ತೆರಚನೆಯಾಯಿತು ಎಂದು ಗ್ರೀಕ್ ಪುರಾಣದಲ್ಲಿ ತಿಳಿಸಲಾಗಿದೆ. (ಯಕೃತ್ತು, ಮಾನವನಲ್ಲಿರುವ ತನ್ನಷ್ಟಕ್ಕೆ ಪುನಃ ಉತ್ಪತ್ತಿಯಾಗಬಲ್ಲ ಏಕೈಕ ಒಳಾಂಗವಾಗಿದೆ)

ಪೂರ್ವ ಮತ್ತು ಮೆಡಿಟರೇನಿಯನ್ ಸಮುದ್ರ ಪ್ರದೇಶದ ಪುರಾತನ ಕಾಲದ ಅನೇಕ ಜನರು ಹರೂಸ್ಪಿಸಿ ಎಂಬ ಒಂದು ಪ್ರಕಾರದ ಕಣಿ ಹೇಳುವ ವಿದ್ಯೆಯನ್ನು ಬಳಸುತ್ತಿದ್ದರು. ಇದರ ನೆರವಿನಿಂದ ಕುರಿ ಮತ್ತು ಇತರ ಪ್ರಾಣಿಗಳ ಯಕೃತ್ತನ್ನು ಪರಿಶೀಲಿಸಿ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದರು.

ಯಕೃತ್ತು ಸಿಟ್ಟಿನ ಪ್ರಮುಖ ತಾಣವಾಗಿದೆ, ಪಿತ್ತಕೋಶವು ಇದನ್ನು ನಿವಾರಿಸುತ್ತದೆ ಎಂದು ಟಾಲ್ಮುಡ್ (ಪ್ರಕರಣ ಗ್ರಂಥ ಬೆರಖೋಟ್ 61b ) ಧರ್ಮಗ್ರಂಥವು ನಿರೂಪಿಸುತ್ತದೆ.

ಪರ್ಷಿಯನ್, ಉರ್ದು ಮತ್ತು ಹಿಂದಿ ಭಾಷೆಗಳು (جگر ಅಥವಾ जिगर ಅಥವಾ ಜಿಗರ್‌ ) ಆಲಂಕಾರಿಕ ಮಾತಿನಲ್ಲಿ ಧೈರ್ಯ ಮತ್ತು ಪ್ರಬಲ ಭಾವನೆಗಳನ್ನು ಸೂಚಿಸಲು ಅಥವಾ "ಅವರ ಕೈಲಾದಷ್ಟು" ಎಂಬುದನ್ನು ಹೇಳಲು ಯಕೃತ್ತನ್ನು ಉಲ್ಲೇಖಿಸುತ್ತವೆ; ಉದಾ. "ಈ ಮೆಕ್ಕವು ನಿಮಗೆ ಅದರ ಯಕೃತ್ತಿನ ತುಂಡುಗಳನ್ನು ಬಿಸಾಡಿದೆ!" . "ನನ್ನ ಯಕೃತ್ತಿನ ಬಲ(ಶಕ್ತಿ)" ಎಂಬ ಅಕ್ಷರಾರ್ಥವಿರುವ ಜಾನ್ ಇ ಜಿಗಾರ್ ಪದವು ಉರ್ದುವಿನಲ್ಲಿ ಪ್ರೀತಿ ತೋರಿಸುವ ಪದವಾಗಿದೆ. ಪರ್ಷಿಯನ್ ಭಾಷಾ ಶೈಲಿಯಲ್ಲಿ ಜಿಗಾರ್ ಅನ್ನು ಬಯಸತಕ್ಕ ಯಾವುದೇ ವಸ್ತುವಿಗಾಗಿ, ವಿಶೇಷವಾಗಿ ಹುಡುಗಿ, ಗುಣವಾಚಕವಾಗಿ ಬಳಸುತ್ತಾರೆ. ಜುಲು ಭಾಷೆಯಲ್ಲಿ, ಯಕೃತ್ತಿನ ಪದವು (ಇಸಿಬಿಂದಿ) ಧೈರ್ಯಕ್ಕಿರುವ ಪದವೂ ಒಂದೇ ಆಗಿದೆ.

ಯಕೃತ್ತು-ತಿನ್ನುವ ಜಾನ್ಸನ್‌ನ ಪುರಾಣಕಥೆಯು, ಅವನು ಸಾಯಿಸಿದ ಪ್ರತಿಯೊಬ್ಬ ಮನುಷ್ಯನ ಯಕೃತ್ತನ್ನು ಕತ್ತರಿಸಿ ರಾತ್ರಿಯ‌ೂಟ ಮುಗಿಸಿದ ನಂತರ ತಿನ್ನುತ್ತಿದ್ದ ಎಂದು ಹೇಳುತ್ತದೆ.

ದ ಮೆಸೇಜ್ ಚಿತ್ರದಲ್ಲಿ, ಹಿಂದ್ ಬಿಂಟ್ ಉತ್ಬಾಹ್‌ನು ಉಹುದ್ ಯುದ್ಧದ ಸಂದರ್ಭದಲ್ಲಿ ಹಮ್ಜ ಐಬಿನ್ ಅಬ್ದಲ್ ಮುತ್ತಾಲಿಬ್‌ನ ಯಕೃತ್ತು ತಿನ್ನುವುದನ್ನು ಚಿತ್ರಿಸಲಾಗಿದೆ. ಹಿಂದ್ ಹಮ್ಜನ ಯಕೃತ್ತನ್ನು ತಿನ್ನದೆ ಕೇವಲ "ರುಚಿ" ನೋಡಿದ್ದು ಮಾತ್ರ ಎಂಬುದನ್ನು ಸೂಚಿಸುವ ಕಥಾನಿರೂಪಣೆ ಇದ್ದರೂ, ಈ ಕಥನದ ಯಥಾರ್ಥತೆಯನ್ನು ಪ್ರಶ್ನಿಸಲಾಯಿತು.

ಇವನ್ನೂ ಗಮನಿಸಿ

  • ಕೃತಕ ಯಕೃತ್ತು
  • ಪಿತ್ತರಸ
  • ಪಿತ್ತರಸ ಕನಲಿಕ್ಯುಲಸ್
  • ಹೆಪಟೊಸೈಟ್‌
  • ಯಕೃತ್ತು ಕಾರ್ಯ ಪರೀಕ್ಷೆಗಳು
  • ಯಕೃತ್ತು ಹೊಡೆತ (ಕದನ ಕಲೆಗಳ ಹೊಡೆತ)

ಆಕರಗಳು

ಹೆಚ್ಚಿನ ಓದಿಗಾಗಿ

    ಈ ಕೆಳಗಿನವುಗಳು ಪ್ರಮಾಣಿತ ವೈದ್ಯಕೀಯ ಪಠ್ಯಪುಸ್ತಕಗಳು:
  • ಯುಜೀನ್ R. ಸ್ಕಿಫ್, ಮೈಕೆಲ್ F. ಸೊರೆಲ್, ವಿಲ್ಲಿಸ್ C. ಮ್ಯಾಡ್ರಿ. ಸ್ಕಿಫ್ಸ್ ಡಿಸೀಸಸ್ ಆಫ್ ದ ಲಿವರ್ , 9ನೇ ಆವೃತ್ತಿ. ಫಿಲಡೆಲ್ಫಿಯ: ಲಿಪ್ಪಿಂಕೋಟ್, ವಿಲಿಯಮ್ಸ್ & ವಿಲ್ಕಿನ್ಸ್, 2003. ISBN 0-7817-3007-4
  • ಶೈಲ ಶರ್ಲಾಕ್, ಜೇಮ್ಸ್ ಡೂಲೆ. ಡಿಸೀಸಸ್ ಆಫ್ ದ ಲಿವರ್ ಆಂಡ್ ಬಿಲಿಯರಿ ಸಿಸ್ಟಮ್ , 11ನೇ ಆವೃತ್ತಿ. ಆಕ್ಸ್‌ಫರ್ಡ್ UK ; ಮಾಲ್ಡೆನ್, MA : ಬ್ಲ್ಯಾಕ್‌ವೆಲ್ ಸೈನ್ಸ್. 2002. ISBN 0-632-05582-0
  • ಡೇವಿಡ್ ಜಾಕಿಮ್, ಥೋಮಸ್ D. ಬಾಯರ್. ಹೆಪಟಾಲಜಿ: ಯಕೃತ್ತು ಕಾಯಿಲೆಯ ಪಠ್ಯಪುಸ್ತಕ , 4ನೇ ಆವೃತ್ತಿ. ಫಿಲಡೆಲ್ಫಿಯ: ಸಾಂಡರ್ಸ್. 2003 ISBN 0-7216-9051-3
    ಇವು ಸಾಮಾನ್ಯ ಓದುಗರಿಗಾಗಿ ಅಥವಾ ರೋಗಿಗಳಿಗಾಗಿ:

ಹೊರಗಿನ ಕೊಂಡಿಗಳು

ಟೆಂಪ್ಲೇಟು:Digestive glands

Tags:

ಯಕೃತ್ತು ರಚನೆಯ ಅವಲೋಕನಯಕೃತ್ತು ಅಂಗರಚನಾ ಶಾಸ್ತ್ರಯಕೃತ್ತು ದೈಹಿಕ ಕ್ರಿಯೆಯಕೃತ್ತು ಯಕೃತ್ತಿನ ಕಾಯಿಲೆಗಳುಯಕೃತ್ತು ಕಾಯಿಲೆಯ ಚಿಹ್ನೆಗಳುಯಕೃತ್ತು ರೋಗನಿರ್ಣಯಯಕೃತ್ತು ಅಂಗಾಂಶ ಪರೀಕ್ಷೆಯಕೃತ್ತು ಪುನರುತ್ಪಾದನೆಯಕೃತ್ತು ಕಸಿಮಾಡುವಿಕೆಯಕೃತ್ತು ಅಭಿವೃದ್ಧಿಯಕೃತ್ತು ಆಹಾರವಾಗಿಯಕೃತ್ತು ಸಾಂಸ್ಕೃತಿಕ ನಂಬಿಕೆಗಳುಯಕೃತ್ತು ಇವನ್ನೂ ಗಮನಿಸಿಯಕೃತ್ತು ಆಕರಗಳುಯಕೃತ್ತು ಹೆಚ್ಚಿನ ಓದಿಗಾಗಿಯಕೃತ್ತು ಹೊರಗಿನ ಕೊಂಡಿಗಳುಯಕೃತ್ತುಕಶೇರುಕ

🔥 Trending searches on Wiki ಕನ್ನಡ:

ಕಾಂತಾರ (ಚಲನಚಿತ್ರ)ಜನಪದ ಕಲೆಗಳುಡಿ.ಕೆ ಶಿವಕುಮಾರ್ಜಾತಿಮಾನವ ಅಸ್ಥಿಪಂಜರಭಾರತದಲ್ಲಿ ಮೀಸಲಾತಿಹೊಯ್ಸಳಕುವೆಂಪುಕನ್ನಡ ಕಾವ್ಯಜಾಪತ್ರೆಮದುವೆಮೋಕ್ಷಗುಂಡಂ ವಿಶ್ವೇಶ್ವರಯ್ಯಇನ್ಸ್ಟಾಗ್ರಾಮ್ಮಹಮದ್ ಬಿನ್ ತುಘಲಕ್ಅರ್ಥಶಾಸ್ತ್ರಪ್ರಬಂಧ ರಚನೆಕ್ರೀಡೆಗಳುಪರೀಕ್ಷೆಪಠ್ಯಪುಸ್ತಕಮೆಕ್ಕೆ ಜೋಳಕವಿಗಳ ಕಾವ್ಯನಾಮಸಮಾಜ ವಿಜ್ಞಾನಅರವಿಂದ ಘೋಷ್ಸಾಲ್ಮನ್‌ಬಿ. ಆರ್. ಅಂಬೇಡ್ಕರ್ವೀರಗಾಸೆಹೈದರಾಬಾದ್‌, ತೆಲಂಗಾಣಸಂಸ್ಕಾರರವಿಕೆಮುಪ್ಪಿನ ಷಡಕ್ಷರಿಸೀತೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಭಾರತದ ಭೌಗೋಳಿಕತೆಶ್ರೀವಿಜಯಭೂಮಿವಡ್ಡಾರಾಧನೆವಿವಾಹಯೂಟ್ಯೂಬ್‌ನವಿಲುಕರ್ನಾಟಕ ಲೋಕಸಭಾ ಚುನಾವಣೆ, 2019ದಿವ್ಯಾಂಕಾ ತ್ರಿಪಾಠಿಋತುಅರಿಸ್ಟಾಟಲ್‌ಕರ್ನಾಟಕ ಲೋಕಾಯುಕ್ತಮಾರೀಚಯಕ್ಷಗಾನಸರ್ವಜ್ಞಇ-ಕಾಮರ್ಸ್ಭೂತಾರಾಧನೆನ್ಯೂಟನ್‍ನ ಚಲನೆಯ ನಿಯಮಗಳುಮೊದಲನೇ ಅಮೋಘವರ್ಷತಾಳಗುಂದ ಶಾಸನಅಳತೆ, ತೂಕ, ಎಣಿಕೆಜೀವವೈವಿಧ್ಯಅಕ್ಬರ್ಕೋಟ ಶ್ರೀನಿವಾಸ ಪೂಜಾರಿರಾಹುಲ್ ಗಾಂಧಿಅಮೇರಿಕ ಸಂಯುಕ್ತ ಸಂಸ್ಥಾನಅವರ್ಗೀಯ ವ್ಯಂಜನಡಾ ಬ್ರೋವೀರಪ್ಪನ್ಮಾಸಕವಿರಾಜಮಾರ್ಗ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಕೃಷಿದಶಾವತಾರಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಗ್ರಾಮ ಪಂಚಾಯತಿರಾಧೆರೋಸ್‌ಮರಿಮೈಸೂರು ದಸರಾಕಪ್ಪೆ ಅರಭಟ್ಟತ್ರಿಪದಿಸುಮಲತಾ🡆 More