ವಡ್ಡಾರಾಧನೆ

ವಡ್ಡಾರಾಧನೆಯು ಶಿವಕೋಟ್ಯಾಚಾರ್ಯ ಬರೆದಿರುವನೆಂದು ನಂಬಲಾಗಿರುವ ಜೈನ ಧಾರ್ಮಿಕ(ನೋಂಪಿ) ಕಥೆಗಳ ಸಂಗ್ರಹ.

ಕನ್ನಡದಲ್ಲಿ ದೊರೆತಿರುವ ಕೃತಿಗಳಲ್ಲಿ, ಎಲ್ಲದಕ್ಕಿಂತ ಹಳೆಯದಾದ ಮೊಟ್ಟಮೊದಲ ಗದ್ಯಕೃತಿ ಇದಾಗಿದೆ. ಇದನ್ನು ಬರೆದಾತ ಶಿವಕೋಟ್ಯಾಚಾರ್ಯನು, ರಾಷ್ಟ್ರಕೂಟರ ದೊರೆ ನೃಪತುಂಗನ ರಾಜ್ಯದಲ್ಲ. . ಇತ್ತೀಚೆಗಿನ ಸಂಶೋಧನೆಯ ಪ್ರಕಾರ ಈ ಕೃತಿಯು ಬ್ರಾ ಜಿಷ್ಣುವಿನಿಂದ ರಚಿಸಲ್ಪಟ್ಟಿತು. (ಡಾ ಹಂಪನಾ, ಡಾ ಕಲಬುರ್ಗಿ).

ವಡ್ಡಾರಾಧನೆ ರಚನೆ ಆದದ್ದು ಹಳ್ಳಿಖೇಡ(ಬಿ) ಗ್ರಾಮದಲ್ಲಿ ಎಂದು ಹೇಳಲಾಗಿದೆ.

`ವಡ್ಡಾರಾಧನೆ' ಕೃತಿಯ ಹೆಸರು ಮತ್ತು ಅದರ ಕರ್ತೃವಿನ ಬಗ್ಗೆ ಇನ್ನೂ ಖಚಿತ ಅಭಿಪ್ರಾಯ ಹೊಂದಲು ಸಾಕಷ್ಟು ಆಧಾರಗಳಿಲ್ಲ. ಅವು ಇನ್ನೂ ಸಂಶೋಧನೆಗೆ ತೆರೆದ ವಿಷಯಗಳೇ ಆಗಿವೆ

ಇದರ ರಚನೆಯ ಕಾಲ ಸು. 920. ಇದರಲ್ಲಿ ಸುಕುಮಾರಸ್ವಾಮಿ, ವೃಷಭಸೇನರಿಸಿ ಮೊದಲಾದ 19 ಮಹಾಪುರುಷರ ಕಥೆಗಳಿವೆ. ಇವರು ದೇವ, ಮಾನವ, ತಿರ್ಯಕ್ ಮತ್ತು ಅಚೇತನ ಎಂಬ 4 ಬಗೆಯ ಉಪಸರ್ಗಗಳು(ತಪಸ್ಸಿಗೆ ಬರುವ ಅಡ್ಡಿ) ಮತ್ತು 22 ಬಗೆಯ ಪರೀಷಹಗಳನ್ನು(ಕೋಟಲೆ) ಸಹಿಸಿ ತಪಸ್ಸುಮಾಡುವುದು. ಈ ರೀತಿಯ ತಪಸ್ಸನ್ನು ಉಪಾಸನೆ ಅಥವಾ ಆರಾಧನೆ ಎನ್ನುತ್ತಾರೆ. ಮರಣದ ಸಮಯದಲ್ಲಿ ದರ್ಶನ, ಜ್ಞಾನ, ಚಾರಿತ್ರ ಮತ್ತು ತಪಸ್ಸುಗಳೆಂಬ 4 ಗುಣಗಳನ್ನು ಆತ್ಮನಲ್ಲಿ ಸ್ಥಿರವಾಗಿಸಿಕೊಳ್ಳುವುದರಿಂದ ಆತ್ಮ ಶುದ್ಧವಾಗಿ ಮುಕ್ತಿ ಪಡೆಯುತ್ತದೆ; ಕರ್ಮಕ್ಷಯ ಮಾಡಿಕೊಂಡು ಪ್ರಾಯೋಪವೇಶ ದಿಂದ ದೇಹತ್ಯಾಗಮಾಡಿದವರು ಉಪಸರ್ಗ ಕೇವಲಿಗಳಾಗುತ್ತಾರೆ ಎಂದು ನಂಬಿಕೆ. ಈ ಕಥೆಗಳು ಸಂಸ್ಕೃತದ ಆರಾಧನಾ ಎಂಬ ಗ್ರಂಥದಲ್ಲಿವೆ(1539-47). ಇವು ಹರಿಷೇಣ, ಶ್ರೀಚಂದ್ರ ಮೊದಲಾದವರ ಕಥಾಕೋಶ ಗಳಲ್ಲಿಯೂ ಕಾಣಿಸುತ್ತವೆ. ಆರಾಧನೆಯ ಟೀಕೆ ಸಂಸ್ಕೃತದಲ್ಲಿದ್ದರೆ ಉದಾಹರಣೆಯ ಕಥೆಗಳು ಪ್ರಾಕೃತದಲ್ಲಿವೆ. ಆರಾಧನೆಯ ಪ್ರತಿಕಾರರರು ಕಥೆಗಳ ಆರಂಭದಲ್ಲಿ ವಿವಿಧ ಪ್ರಾಕೃತ ಕೃತಿಗಳಿಂದ ಬೇರೆ ಬೇರೆ ಗಾಹೆಗಳನ್ನು ತೆಗೆದು ಸೇರಿಸಿದ್ದಾರೆ. ವಡ್ಡಾರಾಧನೆಯಲ್ಲಿ ಮೊದಲು ಗಾಹೆ ಮತ್ತು ಅದರ ಕನ್ನಡ ಅನುವಾದಗಳನ್ನು ನೀಡಿ ಅನಂತರ ಕಥೆಯನ್ನು ಹೇಳಲಾಗಿದೆ.

ಆರಾಧನೆಯನ್ನು ಬರೆದವರಲ್ಲಿ ಶಿವಾರ್ಯ ಪ್ರಾಚೀನ. ಇವನಿಗೆ ಶಿವಕೋಟಿ ಎಂಬ ಹೆಸರೂ ಇದೆ. ಇವನು ಕ್ರಿ.ಶ.೬ ಸು. 1ನೇ ಶತಮಾನದವನು. ಅರಾಧನಾ ಕೃತಿಗೆ ಭಗವತೀ, ಭಗವತೀ ಆರಾಧನಾ, ಮೂಲಾರಾಧನಾ, ಬೃಹತ್ ಆರಾಧನಾ ಮೊದಲಾದ ಹೆಸರುಗಳಿವೆ. ಆರಾಧನಾ ಗ್ರಂಥಗಳಲ್ಲಿ ಶಿವಾರ್ಯನ ಗ್ರಂಥ ಮಹತ್ವದ್ದು. ಇದರಲ್ಲಿ 5 ಬಗೆಯ ಮರಣಗಳ ವಿವರಣೆಯಿದೆ. 2 ಸಾವಿರಕ್ಕಿಂತ ಹೆಚ್ಚು ಪ್ರಾಕೃತ ಗಾಹೆಗಳಿವೆ. ಇದರಲ್ಲಿ ಶೀರ್ಷಿಕೆಗಳಿರುವ 40 ಅಧಿಕಾರಗಳಿವೆ. `ಕವಚ ಎಂಬ ಶೀರ್ಷಿಕೆ 35ನೆಯದು.

ಬೃಹತ್(ಗಾತ್ರದ ಗ್ರಂಥ)ಆರಾಧನಾ ವಡ್ಡಾರಾಧನಾ ಆಗಿದೆ (ಹೋಲಿಸಿ: ಬೃಹತ್‍ಕಥೆ>ವಡ್ಡಕಥೆ). ಆದ್ದರಿಂದ ಇಲ್ಲಿ ವಡ್ಡ ಎಂದರೆ ವೃದ್ಧ ಎಂಬ ಅರ್ಥ ಹೊಂದುವುದಿಲ್ಲ. ಹಾಗೆಯೇ ಕನ್ನಡದ ವಡ್ಡಾರಾಧನೆಯೇ ಇಡೀ ಬೃಹತ್ ಆರಾಧನೆಯಲ್ಲ. ಏಕೆಂದರೆ ಇದರಲ್ಲಿ ಆರಾಧನೆಯ ಕವಚದ ವರೆಗಿನ ಕಥೆಗಳು ಮಾತ್ರ ಇವೆ. ಇದರಲ್ಲಿ ಉಪಸರ್ಗ ಕೇವಲಿಗಳು, ಮಹಾಪುರುಷರು ಮಾತ್ರ ಇದ್ದಾರೆ. ಆದ್ದರಿಂದ ವಡ್ಡಾರಾಧನೆಯನ್ನು `ಮಹಾಪುರುಷರ್ಕಳ ಕಥೆ ಎಂದು ಕರೆಯುವುದು ಉಚಿತ ಎಂದು ಪ್ರೊ ಆ ನೇ ಉಪಾಧ್ಯೆ ಸೂಚಿಸಿದ್ದಾರೆ. ಶಿವಾರ್ಯನ `ಮೂಲಾರಾಧನೆಗೆ ಭ್ರಾಜಿಷ್ಣು ಬರೆದ ಟೀಕೆಯಿಂದ ಈ ಕಥೆಗಳನ್ನು ಯಾರೊ ಸಂಗ್ರಹಿಸಿ ಇತರ ಕಥಾಕೋಶಗಳ ನೆರವಿನಿಂದ ವಿಸ್ತರಿಸಿ ಕನ್ನಡದ ವಡ್ಡಾರಾಧನೆಯನ್ನು ಸಿದ್ಧಪಡಿಸಿದ್ದಾರೆ. ಅವರು ಯಾರೆಂಬುದನ್ನು ಕೃತಿಯಲ್ಲಿ ಎಲ್ಲಿಯೂ ತಿಳಿಸಿಲ್ಲವಾದರೂ ಅವರು ಶ್ರವಣಬೆಳಗೊಳ ಅಥವಾ ಬಳ್ಳಾರಿ ಜಿಲ್ಲೆಯ ಕೋಗಳಿಯ ಸುತ್ತಮುತ್ತ್ತ ಇದ್ದವರು ಎಂದು ತಿಳಿಯುತ್ತದೆ. ಅವರನ್ನೇ ಮೂಲಾರಾಧನೆಯ ಕರ್ತೃವಿನ ಹೆಸರಿನಿಂದ ` ಶಿವಕೋಟಿ' ಎಂದು ಕರೆಯುವುದು ಸರಿಯಲ್ಲ. ಅವರ ಕಾಲ ಕ್ರಿ. ಶ. ಸು 10-11ನೇ ಶತಮಾನ.

ವಡ್ಡ ಶಬ್ದವು ವರ್ಧಮಾನ (ವಡ್ಡಮಾಣ) ನನ್ನು ಸೂಚಿಸುತ್ತದೆ ಎಂಬುದು ಒಂದು ತೀರ ಇತ್ತೀಚಿನ ಅಭಿಪ್ರಾಯವಾಗಿದೆ.

ಕಥೆಗಳ ಪಟ್ಟಿ

  1. ಸುಕುಮಾರಸ್ವಾಮಿ ಕಥೆ : ಬೇರೆ ಬೇರೆ ಬವಾವಳಿ (ಜನ್ಮಾಂತರ) ಗಳನ್ನು ಎತ್ತಿ , ಹಲವಾರು ರೀತಿಯ ಅನುವ್ರತ ಗಳನ್ನು ಪೂರೈಸಿ ಕೊನೆಗೆ ಮೋಕ್ಷ ಪಡೆದ ವಾಯುಭೂತಿಯ ಕತೆ.
  2. ಸುಕೌಶಳಸ್ವಾಮಿ ಕಥೆ : ಪರ್ವತದ ಮೇಲೆ ಹುಲಿ ಕ್ರೋಧದಿಂದ ಕಿತ್ತು ತಿನ್ನುವುದನ್ನು ಸಹಿಸಿ ಮೋಕ್ಷ ಸಾಧಿಸಿದ ಕಥೆ.
  3. ಗಜಕುಮಾರನ ಕಥೆ : ಹೊಟ್ಟೆ ಅಡಿಯಾಗಿ ಮಲಗಿಸಿ ಚರ್ಮವನ್ನು ಸುಲಿದು, ಕಾದ ಕಬ್ಬಿಣದ ಮೊಳೆಗಳನ್ನು ಹೊಡೆದುದನ್ನು ಸಹಿಸಿದ ಕಥೆ.
  4. ಸನತ್ಕುಮಾರ ಚಕ್ರವರ್ತಿಯ ಕಥೆ : ನೂರಾರು ವರ್ಷ ಕಾಲ ಏಳು ನೂರು ವ್ಯಾಧಿಗಳನ್ನು ಸಹಿಸಿ ಸಮಾಧಿಮರಣ ಪಡೆದ ಕಥೆ.
  5. ಅಣ್ಣಿಕಾ ಪುತ್ರನ ಕಥೆ : ನದಿಯಲ್ಲಿ ನಾವೆ ಮುಳುಗುವಾಗಲೂ ಧ್ಯಾನಮಾಡಿ ಮೋಕ್ಷ ಪಡೆದ ಕಥೆ.
  6. ಭದ್ರಬಾಹು ಭಟ್ಟರರ ಕಥೆ : ಹಸಿವೆಯನ್ನು ಸಹಿಸಿ ರತ್ನತ್ರಯವನ್ನು ಸಾಧಿಸಿದ ಕಥೆ.
  7. ಲಲಿತಘಟೆಯ ಕಥೆ : ನದಿಯಲ್ಲಿ ಕೊಚ್ಚಿಹೋಗುವಾಗ ಲಲಿತ ಘಟೆ ಎಂಬ ಜನರ ಗುಂಪು ಧ್ಯಾನದಿಂದ ಅಹಮಿಂದ್ರ ಪದವಿ ಪಡೆದ ಕಥೆ.
  8. ಧರ್ಮ ಘೋಷ ಭಟ್ಟಾರನ ಕಥೆ : ನದಿಯ ತೀರದಲ್ಲಿ ಉಪವಾಸ ಮಾಡಿ ಬಾಯಾರಿಕೆಯನ್ನು ಗೆದ್ದು ಅಚ್ಚುತೇಂದ್ರನಾದ ಕಥೆ.
  9. ಸಿರಿದಿಣ್ಣ ಭಟ್ಟಾರರ ಕಥೆ : ಶೀತವಾತಗಳನ್ನು ಸಹಿಸಿ ರತ್ನತ್ರಯವನ್ನು ಸಾಧಿಸಿದ ಕಥೆ.
  10. ವೃಷಭಸೇನ ಭಟ್ಟಾರರ ಕಥೆ : ಕಾದ ಬಂಡೆಯ ಮೇಲೆ ಕುಳಿತು ಬಿಸಿಲು, ಬಿಸಿಗಾಳಿಗಳನ್ನು ಸಹಿಸಿ ಸದ್ಗತಿ ಸಾಧಿಸಿದ ಕಥೆ.
  11. ಕಾರ್ತಿಕ ಋಷಿಯ ಕಥ : ಶಕ್ತಿ ಆಯುಧದ ಇರಿತವನ್ನು ಸಹಿಸಿ ಆರಾಧನೆಯನ್ನು ಸಾಧಿಸಿದ ಕಥೆ.
  12. ಅಭಯಘೋಷನೆಂಬ ಮುನಿಯ ಕಥೆ : ಚಕ್ರಾಯುಧದ ಹೊಡೆತವನ್ನು ಸಹಿಸಿ ಇಂದ್ರನಾದ ಕಥೆ.
  13. ವಿದ್ಯುಚ್ಚೋರ ರಿಸಿಯ ಕಥೆ : ಭಯಂಕರ ಶಿಕ್ಷೆಗಳನ್ನು ಸಹಿಸಿ ಕೊನೆಗೆ ಮೋಕ್ಷ ಪಡೆದ ವಿದ್ಯುಚೋರ (ಕಳ್ಳನ) ಕತೆ.
  14. ಗುರುದತ್ತ ಭಟಾರನ ಕಥೆ : ಬೆಂಕಿಯ ವೇದನೆಯನ್ನು ಸಹಿಸಿ ಸದ್ಗತಿ ಸಾಧಿಸಿದ ಕಥೆ.
  15. ಚಿಲಾತಪುತ್ರನ ಕಥೆ: ಗಾಯಗಳಿಗೆ ಕಟ್ಟಿರುವೆಗಳು ಮುತ್ತಿ ತಿಂದುದನ್ನು ಸಹಿಸಿ ಅಹಮಿಂದ್ರನಾದ ಕಥೆ.
  16. ದಂಡಕ ರಿಸಿಯ ಕಥೆ : ಬಾಣ ನಾಟಿದನ್ನು ಸಹಿಸಿ ರತ್ನತ್ರಯ ಸಾಧಿಸಿದ ಕಥೆ.
  17. ಅಯ್ನೂರು ಋಷಿಗಳ ಕಥೆ : ಗಾಣಕ್ಕೆ ಹಾಕಿ ಹಿಂಸಿಸಿದನ್ನು ಸಹಿಸಿ ಸದ್ಗತಿ ಪಡೆದ ಕಥೆ.
  18. ಚಾಣಕ್ಯರಿಸಿಯ ಕಥೆ : ಗೊಬ್ಬರದ ರಾಶಿಯ ನಡುವೆ ಸುಟ್ಟುದನ್ನು ಸಹಿಸಿ ಕ್ಷಮೆ ಮೆರೆದು ಸದ್ಗತಿ ಪಡೆದ ಕಥೆ.
  19. ವೃಷಭಸೇನ ರಿಸಿಯ ಕಥೆ : ಸಜೀವ ದಹನವನ್ನು ಸಹಿಸಿ ರತ್ನತ್ರಯ ಸಾಧಿಸಿದ ಕಥೆ.

ನಿರೂಪಣೆ

ಕಥೆಯ ನಿರೂಪಣೆ ಸರಳವಾಗಿದೆ. ಪ್ರಾರಂಭದಲ್ಲಿ ಪ್ರಾಕೃತ ಗಾಹೆ ಮತ್ತು ಕನ್ನಡ ಅನುವಾದವಿರುತ್ತದೆ. ಜಂಬೂದ್ವೀಪದ ಭರತಖಂಡದ ಒಂದು ನಾಡು, ಅಲ್ಲಿ ಪಟ್ಟಣ, ಅದನ್ನಾಳುವ ರಾಜ, ರಾಣಿ, ಮಂತ್ರಿ, ಮಂತ್ರಿಪತ್ನಿ ಇವರ ವರ್ಣನೆಯಿಂದ ಕಥೆ ಆರಂಭವಾಗುತ್ತದೆ. ರಾಜಮನೆತನ ಅಥವಾ ವಣಿಕ ಕುಟುಂಬದ ವರ್ಣನೆ. ಕಥಾನಾಯಕನಿಗೆ ವೈರಾಗ್ಯಕ್ಕೆ ಒಂದು ಕಾರಣ, ಅವನ ಕುಟುಂಬ ತ್ಯಾಗ, ಸಂಚಾರ, ಉಪಸರ್ಗಗಳನ್ನು ಸಹಿಸುವುದು, ದೇಹತ್ಯಾಗದೊಂದಿಗೆ ಮುಕ್ತಿ ಪಡೆಯುವಲ್ಲಿಗೆ ಕಥೆ ಮುಗಿಯುತ್ತದೆ. ನಡುವೆ ಅನೇಕ ಉಪಕಥೆಗಳು ಬರುತ್ತವೆ. ಕಥೆಗೆ ಪೂರಕವಾಗಿ ಪಾತ್ರ ಚಿತ್ರಣವಿದೆ. ವರ್ಣನೆಗಳು ಕಣ್ಣಿಗೆ ಕಟ್ಟುತ್ತವೆ. ನಿರೂಪಣೆ ಸರಳ ರೇಖಾತ್ಮಕವಾಗಿದೆ. ಪೂರ್ವಭವಗಳನ್ನು ವರ್ಣಿಸುವಾಗ ಹಿಂದೆ ಬಂದು ಮುಂದುವರೆಯುವ ಕ್ರಮವನ್ನು ಅನುಸರಿಸಲಾಗಿದೆ.

ವಡ್ಡಾರಾಧನೆಯಲ್ಲಿ ದೇಸಿ ಭಾಷೆಯ ಸೊಗಡು ಗಮನಾರ್ಹವಾಗಿದೆ. ಜಾನಪದ ಆಶಯಗಳು ವಿಶೇಷವಾಗಿವೆ. ಬಳಕೆಯಲ್ಲಿರುವ ಜನಪದ ಕಥೆಗಳನ್ನೇ ಧರ್ಮನಿರೂಪಣೆಗೆ ಅಳವಡಿಸಿಕೊಂಡಿರುವಂತಿದೆ. ವಡ್ಡಾರಾಧನೆ ಜೈನ ಧರ್ಮದ ಗ್ರಂಥವಾಗಿರುವಂತೆ 10ನೇ ಶತಮಾನದ ಕನ್ನಡನಾಡಿನ ಜೀವನ ಚಿತ್ರಣದ ದಾಖಲೆಯೂ ಆಗಿದೆ.

ನೋಡಿ

ಉಲ್ಲೇಖ

ವಡ್ಡಾರಾಧನೆ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ವಡ್ಡಾರಾಧನೆ ಕಥೆಗಳ ಪಟ್ಟಿವಡ್ಡಾರಾಧನೆ ನಿರೂಪಣೆವಡ್ಡಾರಾಧನೆ ನೋಡಿವಡ್ಡಾರಾಧನೆ ಉಲ್ಲೇಖವಡ್ಡಾರಾಧನೆಕನ್ನಡಗದ್ಯನೃಪತುಂಗರಾಷ್ಟ್ರಕೂಟಶಿವಕೋಟ್ಯಾಚಾರ್ಯ

🔥 Trending searches on Wiki ಕನ್ನಡ:

ಶಿಶುನಾಳ ಶರೀಫರುಮಲೈ ಮಹದೇಶ್ವರ ಬೆಟ್ಟಅಲಂಕಾರಮುಹಮ್ಮದ್ಕರ್ನಾಟಕದ ಸಂಸ್ಕೃತಿಕರ್ನಾಟಕ ವಿಧಾನ ಸಭೆಬುಧವೆಂಕಟೇಶ್ವರ ದೇವಸ್ಥಾನಸಾಲುಮರದ ತಿಮ್ಮಕ್ಕಕಾಲಾಯ ತಸ್ಮೈ ನಮಃ (ಚಲನಚಿತ್ರ)ತ್ಯಾಜ್ಯ ನಿರ್ವಹಣೆಮಹಾತ್ಮ ಗಾಂಧಿಕೋಟ ಶ್ರೀನಿವಾಸ ಪೂಜಾರಿಭಾರತದ ರಾಷ್ಟ್ರಗೀತೆತ್ರಿಪದಿಹಾಸನಉತ್ತರ ಕರ್ನಾಟಕಮಹಿಳೆ ಮತ್ತು ಭಾರತಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕಲಬುರಗಿಕನ್ನಡ ರಂಗಭೂಮಿಜಲ ಮಾಲಿನ್ಯಕನ್ನಡ ಕಾಗುಣಿತಒಗಟುಬಿ. ಆರ್. ಅಂಬೇಡ್ಕರ್ಭೋವಿಓಂ ನಮಃ ಶಿವಾಯಸೌರಮಂಡಲಎಲೆಕ್ಟ್ರಾನಿಕ್ ಮತದಾನಬ್ಯಾಡ್ಮಿಂಟನ್‌ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಮಾನ್ವಿತಾ ಕಾಮತ್ವಾಸ್ತುಶಾಸ್ತ್ರಯು. ಆರ್. ಅನಂತಮೂರ್ತಿಜಾಗತಿಕ ತಾಪಮಾನಚಿತ್ರದುರ್ಗ ಜಿಲ್ಲೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುರಾಜ್ಯಸಭೆಅಯೋಧ್ಯೆಶುಕ್ರವೀರಗಾಸೆರಾಶಿಯುರೋಪ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ನಿಯತಕಾಲಿಕಮುಖ್ಯ ಪುಟಹಳೇಬೀಡುಕರ್ನಾಟಕದ ಏಕೀಕರಣಮಾಹಿತಿ ತಂತ್ರಜ್ಞಾನಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮಲ್ಲಿಕಾರ್ಜುನ್ ಖರ್ಗೆಜಯಂತ ಕಾಯ್ಕಿಣಿಪಾರ್ವತಿಬಡತನಪ್ರಾಥಮಿಕ ಶಿಕ್ಷಣಕೊಡಗಿನ ಗೌರಮ್ಮದೇವರ/ಜೇಡರ ದಾಸಿಮಯ್ಯಒಕ್ಕಲಿಗಗಣರಾಜ್ಯೋತ್ಸವ (ಭಾರತ)ಪ್ರೀತಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಚೋಮನ ದುಡಿಸಾಮ್ರಾಟ್ ಅಶೋಕಅಂತರ್ಜಲಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಸರ್ವಜ್ಞಶೈಕ್ಷಣಿಕ ಮನೋವಿಜ್ಞಾನಅಲ್ಲಮ ಪ್ರಭುಪೌರತ್ವಜಾಗತಿಕ ತಾಪಮಾನ ಏರಿಕೆಚುನಾವಣೆವಿಧಾನ ಸಭೆಶಾಂತರಸ ಹೆಂಬೆರಳುಕರ್ನಾಟಕದಲ್ಲಿ ಪಂಚಾಯತ್ ರಾಜ್🡆 More