ವಿಷಮಶೀತ ಜ್ವರ

ವಿಷಮಶೀತ ಜ್ವರ, ಅಥವಾ ಸಾಮಾನ್ಯವಾಗಿ ಟೈಫಾಯ್ಡ್ ಎಂದು ಪರಿಚಿತವಾಗಿರುವ, ಸ್ಯಾಲ್ಮನೆಲಾ ಎಂಟರಿಕಾ ಸಿಯರೋವೇರ್ ಟೈಫೈ ಬ್ಯಾಕ್ಟೀರಿಯದಿಂದ ಉಂಟಾಗುವ ಒಂದು ಕಾಯಿಲೆ.

ವಿಶ್ವಾದ್ಯಂತ ಸಾಮಾನ್ಯವಾಗಿ ಕಂಡುಬರುವ ಇದು, ಸೋಂಕಿರುವ ವ್ಯಕ್ತಿಯ ಮಲದಿಂದ ಕಲುಷಿತಗೊಂಡ ಆಹಾರ ಅಥವಾ ನೀರಿನ ಸೇವನೆಯಿಂದ ಹರಡುತ್ತದೆ. ಆಮೇಲೆ ಬ್ಯಾಕ್ಟೀರಿಯ ಕರುಳಿನ ಗೋಡೆಯ ಮೂಲಕ ಪ್ರವೇಶಿಸುತ್ತವೆ ಮತ್ತು ಮ್ಯಾಕ್ರಫೇಜ್‌ಗಳಿಂದ ಕಬಳಿಸಲ್ಪಡುತ್ತವೆ. ಸಾಲ್ಮೋನೆಲ್ಲಾ ಟೈಫೀ (salmonella typhi) ಎಂಬ ಹೆಸರಿನ ಬ್ಯಾಕ್ಟೀರಿಯಾದ ಸೋಂಕಿನಿಂದ ಎದುರಾಗುವ ಟೈಫಾಯ್ಡ್ ವಾಸ್ತವದಲ್ಲಿ ಜೀವನದಲ್ಲಿ ಕನಿಷ್ಟ ಒಂದು ಬಾರಿಯಾದರೂ ಬರುವ ಜ್ವರವಾಗಿದ್ದು ಕೆಲವರಲ್ಲಿ ಇದಕ್ಕೂ ಹೆಚ್ಚಿನ ಬಾರಿ ಎದುರಾಗಬಹುದು. ಟೈಫಾಯ್ಡ್ ಎಂದರೆ ವಾಸ್ತವವಾಗಿ ನಮ್ಮ ದೇಹ ನಿರೋಧಕ ವ್ಯವಸ್ಥೆ ಈ ಬ್ಯಾಕ್ಟೀರಿಯಾಕ್ಕೆ ಮುಂದೆಂದೂ ಬಾಧೆಗೊಳಗಾಗದಂತೆ ನಿರ್ಮಿಸಿಕೊಳ್ಳುವ ರಕ್ಷಣಾ ವ್ಯವಸ್ಥೆಯಾಗಿದ್ದು ಈ ಹಂತ ಪೂರ್ಣವಾಗಲು ಒಂದು ವಾರದಿಂದ ಹದಿನೈದು ದಿನಗಳಾದರೂ ಬೇಕಾಗುತ್ತದೆ. ಇದೇ ಕಾರಣಕ್ಕೆ ಈ ಅವಧಿಯಲ್ಲಿ ಭಾರೀ ಜ್ವರ, ಸುಸ್ತು ಮೊದಲಾದವು ಎದುರಾಗುತ್ತವೆ.

ವಿಷಮಶೀತ ಜ್ವರ
ವಿಷಮಶೀತ ಜ್ವರ
ಸೂಕ್ಷ್ಮದರ್ಶಕದಲ್ಲಿ ಕಂಡುಬರುವ ಸಾಲ್ಮೊನೆಲ್ಲಾ ಟೈಫಿ ಬ್ಯಾಕ್ಟೀರಿಯಾ
ವೈದ್ಯಕೀಯ ವಿಭಾಗಗಳುInfectious diseases Edit this on Wikidata
ಲಕ್ಷಣಗಳುನಿಧಾನಕ್ಕೆ ಏರುವ ಜ್ವರ, ತೂಕ ಕಡಿಮೆಯಾಗುವುದು, ಮೈಕೈ ನೋವು, ಸುಸ್ತು, ಆಲಸ್ಯ, ತಲೆನೋವು, ಕೆಮ್ಮು
ಕಾಯಿಲೆಯ ಗೋಚರ/ಪ್ರಾರಂಭ೧ರಿಂದ ೨ ವಾರ
ಕಾಲಾವಧಿಸಾಮಾನ್ಯವಾಗಿ ೧ ವಾರದಿಂದ ೧೦ ದಿನಗಳ ಒಳಗೆ.
ಕಾರಣಗಳುಸಾಲ್ಮೊನೆಲ್ಲಾ ಟೈಫಿ ಬ್ಯಾಕ್ಟೀರಿಯ
ತಡೆಗಟ್ಟುವಿಕೆಸಾಮಾನ್ಯ ಪರಿಸ್ಥಿತಿಯಲ್ಲಿ ಚುಚ್ಚುಮದ್ದು, ಕೈಮೀರಿದಾಗ ಶಸ್ತ್ರಚಿಕಿತ್ಸೆಯ ಅಗತ್ಯ ಬೀಳಬಹುದು
ಚಿಕಿತ್ಸೆರೋಗನಿರೋಧಕ ಚುಚ್ಚುಮದ್ದು, ಶುದ್ಧ ಆಹಾರ, ವೈಯಕ್ತಿಕ ಶುಚಿತ್ವ
ವಿಷಮಶೀತ ಜ್ವರ
ವಿಷಮಶೀತ ಜ್ವರದ ರೋಗಿಯ ಎದೆ ಭಾಗದಲ್ಲಿ ಗುಲಾಬಿ ಬಣ್ಣದ ಗುರುತುಗಳು

ಸೇವಿಸಬೇಕಾದ ಆಹಾರ

ಸಾಕಷ್ಟು ದ್ರವಾಹಾರವನ್ನು ಸೇವಿಸಬೇಕು.. ರೋಗ ಪೂರ್ಣವಾಗಿ ಗುಣವಾಗುವವರೆಗೂ ದಿನದ ಎಚ್ಚರವಾಗಿದ್ದಷ್ಟೂ ಕಾಲ ಸಾಕಷ್ಟು ದ್ರವಾಹಾರವನ್ನು ಸೇವಿಸಬೇಕು. ಏಕೆಂದರೆ ಟೈಫಾಯ್ಡ್ ಜ್ವರ ಅತಿಯಾದ ಪ್ರಮಾಣದಲ್ಲಿ ರೋಗಿ ಅತಿಸಾರದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ದೇಹದಿಂದ ನಷ್ಟವಾದ ದ್ರವವನ್ನು ಮರುತುಂಬಿಸದೇ ಇದ್ದರೆ ತೀವ್ರ ನಿರ್ಜಲೀಕರಣಕ್ಕೆ ಒಳಗಾಗಬಹುದು. ಒಂದು ವೇಳೆ ಈ ಜ್ವರದ ಸಮಯದಲ್ಲಿಯೇ ನಿರ್ಜಲೀಕರಣವೂ ಎದುರಾದರೆ ಪರಿಣಾಮ ಭೀಕರ ಸ್ವರೂಪಕ್ಕೆ ತಿರುಗುತ್ತದೆ. ರೋಗಿ ಪ್ರಜ್ಞಾಶೂನ್ಯನೂ ಆಗಬಹುದು. ಹಾಗಾಗಿ ದಿನದಲ್ಲಿ ಹಲವಾರು ಬಾರಿ ನೀರಿನಂಶ ಹೆಚ್ಚಿರುವ ಆಹಾರಗಳು, ತಾಜಾ ಹಣ್ಣಿನ ರಸ ಮೊದಲಾದವುಗಳನ್ನು ಸೇವಿಸುತ್ತಿರಬೇಕು.


ಟೈಫಾಯ್ಡ್ ಜ್ವರ ಪೂರ್ಣವಾಗಿ ಗುಣವಾಗುವವರೆಗೂ ಸೇವಿಸಬಾರದ ಆಹಾರಗಳು:

ಕೋಸು, ಹೂಕೋಸು, ದೊಣ್ಣೆ ಮೆಣಸು, ಬದನೆ, ಮೂಲಂಗಿ, ಕಡ್ಲೆಬೇಳೆ, ಕಡ್ಲೆಕಾಳು, ಗೆಣಸು, ಹಲಸಿನ ಬೀಜ ಮೊದಲಾದ ವಾಯುಪ್ರಕೋಪವುಂಟುಮಾಡುವ ಯಾವುದೇ ಆಹಾರ ಬೇಡ. ಇದರಿಂದ ಹೊಟ್ಟೆಯುಬ್ಬರಿಕೆಯುಂಟಾಗಿ ರೋಗಿ ಇನ್ನಷ್ಟು ತೊಂದರೆ ಅನುಭವಿಸಬಹುದು.

ಖಾರವಾದ ಮತ್ತು ಆಮ್ಲೀಯ ಅಹಾರಗಳು ಬೇಡ. ಹಸಿಮೆಣಸು, ಒಣಮೆಣಸು, ಶಿರ್ಕಾ, ಲಿಂಬೆರಸ ಮೊದಲಾದವು ಜೀರ್ಣವ್ಯವಸ್ಥೆಯನ್ನು ಕದಡಬಹುದು. ಒಣಮೆಣಸು ಟೈಫಾಯ್ಡ್ ರೋಗಿಗಳ ಚೇತರಿಸುವಿಕೆಯ ಮೇಲೆ ಅಪಾರ ಪ್ರಭಾವವುಂಟುಮಾಡುತ್ತದೆ.

Tags:

ಬ್ಯಾಕ್ಟೀರಿಯಮಲ

🔥 Trending searches on Wiki ಕನ್ನಡ:

ಭಾರತೀಯ ಜನತಾ ಪಕ್ಷಸಾಹಿತ್ಯಅಕ್ಷಾಂಶ ಮತ್ತು ರೇಖಾಂಶಹೊಯ್ಸಳೇಶ್ವರ ದೇವಸ್ಥಾನಕ್ರೀಡೆಗಳುಮೊದಲನೇ ಅಮೋಘವರ್ಷಶ್ರೀಕೃಷ್ಣದೇವರಾಯಚೋಳ ವಂಶಭಾರತದ ಸರ್ವೋಚ್ಛ ನ್ಯಾಯಾಲಯಭಾರತದಲ್ಲಿ ಪಂಚಾಯತ್ ರಾಜ್ಕೃಷ್ಣಾ ನದಿ1935ರ ಭಾರತ ಸರ್ಕಾರ ಕಾಯಿದೆಮೂಲಧಾತುಗಳ ಪಟ್ಟಿಕರಗಬಂಗಾರದ ಮನುಷ್ಯ (ಚಲನಚಿತ್ರ)ಹಾಕಿನಕ್ಷತ್ರಓಂ ನಮಃ ಶಿವಾಯಸಮಾಜಶಾಸ್ತ್ರಸಾರಾ ಅಬೂಬಕ್ಕರ್ರಾಷ್ಟ್ರಕವಿಸಂಸ್ಕೃತರಾಜ್ಯಗಳ ಪುನರ್ ವಿಂಗಡಣಾ ಆಯೋಗಮಾಸ್ತಿ ವೆಂಕಟೇಶ ಅಯ್ಯಂಗಾರ್ದೊಡ್ಡಬಳ್ಳಾಪುರಸರಸ್ವತಿಸಮಾಜ ವಿಜ್ಞಾನಕೇದಾರನಾಥಆರ್ಯಭಟ (ಗಣಿತಜ್ಞ)ಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರಯೋಗಕೇಂದ್ರಾಡಳಿತ ಪ್ರದೇಶಗಳುದಲಿತಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕೇದರನಾಥ ದೇವಾಲಯಸ್ವರರಾಜ್ಯಸಭೆಹದ್ದುಜಂಟಿ ಪ್ರವೇಶ ಪರೀಕ್ಷೆರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಪದಬಂಧವಿಜಯಪುರಮಂತ್ರಾಲಯಮಲೆನಾಡುಕೆ. ಎಸ್. ನರಸಿಂಹಸ್ವಾಮಿತೆಂಗಿನಕಾಯಿ ಮರಶೈಕ್ಷಣಿಕ ಮನೋವಿಜ್ಞಾನಹೊಯ್ಸಳಓಂ (ಚಲನಚಿತ್ರ)ಮೌರ್ಯ ಸಾಮ್ರಾಜ್ಯಗೂಗಲ್ಪರಮಾಣುಕೈಮೀರಕೆ ವಿ ನಾರಾಯಣಎಸ್.ಎಲ್. ಭೈರಪ್ಪವಚನಕಾರರ ಅಂಕಿತ ನಾಮಗಳುಅಂತರಜಾಲಸುದೀಪ್ಕೃಷ್ಣ ಮಠಭಾರತದ ಸ್ವಾತಂತ್ರ್ಯ ದಿನಾಚರಣೆಭಾರತದ ಚುನಾವಣಾ ಆಯೋಗಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕನಕದಾಸರುಅಲ್ಲಮ ಪ್ರಭುಬೆಳವಲಜನಪದ ಕಲೆಗಳುಅಂಕಗಣಿತಕೈಲಾಸನಾಥಕೂಡಲ ಸಂಗಮಆದೇಶ ಸಂಧಿಶನಿಭಾರತದ ರಾಜಕೀಯ ಪಕ್ಷಗಳುಚುನಾವಣೆಅನಸುಯ ಸಾರಾಭಾಯ್ಬಲಶಿವನ ಸಮುದ್ರ ಜಲಪಾತ🡆 More