ಈ ಕಾಯಿದೆಯನ್ನು ಮೊದಲು 1935ರ ಆಗಸ್ಟ್ನಲ್ಲಿ (25 ಮತ್ತು 26 Geo.
5 c. 42) ಮಂಜೂರು ಮಾಡಲಾಯಿತು ಮತ್ತು ಇದನ್ನು ಆ ಸಂದರ್ಭದಲ್ಲಿ ಕಾಯಿದೆಯಾಗಿಸಿದುದರಲ್ಲಿ ಅತ್ಯಂತ ದೊಡ್ಡ (ಬ್ರಿಟಿಷ್) ಸಂಸತ್ತಿನ ಕಾಯಿದೆ ಎಂದು ಹೇಳಲಾಗುತ್ತದೆ. ದೀರ್ಘತೆಯಿಂದಾಗಿ[ಸಾಕ್ಷ್ಯಾಧಾರ ಬೇಕಾಗಿದೆ] ಈ ಕಾಯಿದೆಯನ್ನು 1935ರ ಭಾರತ ಸರ್ಕಾರ (ಮರುಮುದ್ರಣ ಮಾಡಿದ) ಕಾಯಿದೆಯಿಂದ (26 Geo. 5 ಮತ್ತು 1 Edw. 8 c. 1) ಪೂರ್ವಾನ್ವಯ ಹೊಂದಿರುವ ಎರಡು ಪ್ರತ್ಯೇಕ ಕಾಯಿದೆಗಳಾಗಿ ವಿಂಗಡಿಸಲಾಯಿತು :
ಆರಂಭದಲ್ಲಿ ಮಂಜೂರು ಮಾಡುವಾಗ ಈ ಕಾಯಿದೆಯ ವಿಷಯವಸ್ತುವಿನ ಬದಲಿಗೆ ಸಂಕ್ಷೇಪಗೊಳಿಸಿದ 1935ರ ಭಾರತ ಸರ್ಕಾರ ಕಾಯಿದೆಗೆ (ಅಂದರೆ 26 Geo. 5 ಮತ್ತು 1 Edw. 8 c. 2) ಭಾರತದ ರಾಜಕೀಯ ಮತ್ತು ಸಂವಿಧಾನಾತ್ಮಕ ಇತಿಹಾಸದ ಸಾಹಿತ್ಯದಲ್ಲಿನ ಉಲ್ಲೇಖಗಳನ್ನು ನೀಡಲಾಯಿತು. ಈ ಕಾಯಿದೆ ಜಾರಿಗೊಳಿಸಲು ಕಾರಣ: 1}.ದುರ್ಬಲ ವರ್ಗಗಳಿಗೆ ಶಿಕ್ಷಣ ಸೌಲಭ್ಯ& ರಾಜಕೀಯದಲ್ಲಿ ಮೀಸಲಾತಿ. 2}.ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ. 3}.ಸಾಮಾಜಿಕ ಬಹಿಷ್ಕಾರ ನಿಷೇಧ. 4}.ಕೋಮು ಪ್ರಾತಿನಿಧ್ಯ. 5}. ಅಸ್ಪೃಶ್ಯರಿಗೆ ಪ್ರತ್ಯೇಕ ಮತಾದಿಕಾರ.
ಇವು ಈ ಕಾಯಿದೆಯ ಪ್ರಮುಖ ಅಂಶಗಳು.
ಈ ಕಾಯಿದೆಯ ಪ್ರಮುಖ ಲಕ್ಷಣಗಳೆಂದರೆ:
ಪ್ರಾಂತ್ಯಗಳ ಮಟ್ಟದಲ್ಲಿ ಅಸ್ತಿತ್ವದಲ್ಲಿದ್ದ ಸ್ವಯಮಾಧಿಪತ್ಯವು ಪ್ರಮುಖ ಮಿತಿಗಳನ್ನು ಹೊಂದಿತ್ತು: ಪ್ರಾಂತ್ಯಗಳ ಗವರ್ನರ್ಗಳು ಮುಖ್ಯ ಮೀಸಲು ಅಧಿಕಾರಿಗಳಾಗಿ ಉಳಿದರು ಮತ್ತು ಬ್ರಿಟಿಷ್ ಅಧಿಕಾರಿಗಳೂ ಸಹ ಜವಾಬ್ದಾರಿಯುತ ಸರ್ಕಾರವನ್ನು ವಜಾಗೊಳಿಸುವ ಹಕ್ಕನ್ನು ಹೊಂದಿದ್ದರು. ರಾಜರ ಆಳ್ವಿಕೆಗೊಳಪಟ್ಟ ರಾಜ್ಯಗಳ ಆಡಳಿತಗಾರರ ವಿರೋಧದಿಂದಾಗಿ ಕಾಯಿದೆಯ ಭಾಗಗಳು ಭಾರತೀಯ ಒಕ್ಕೂಟ ಕಾರ್ಯಗತಗೊಳ್ಳದಂತೆ ಮಾಡುವ ಉದ್ದೇಶವನ್ನು ಹೊಂದಿದ್ದವು. ಕಾಯಿದೆಯ ಉಳಿದ ಭಾಗಗಳು 1937ರಲ್ಲಿ ಚಾಲ್ತಿಗೆ ಬಂದವು. ಅದೇ ಸಂದರ್ಭದಲ್ಲಿ ಈ ಕಾಯಿದೆಯಡಿಯಲ್ಲಿ ಮೊದಲ ಚುನಾವಣೆಗಳನ್ನೂ ನಡೆಸಲಾಯಿತು.
ಭಾರತೀಯರು ಹತ್ತೊಂಭತ್ತನೇ ಶತಮಾನದ ಉತ್ತರಾರ್ಧದಿಂದ ತಮ್ಮ ರಾಷ್ಟ್ರದ ಸರ್ಕಾರದಲ್ಲಿ ಉತ್ತಮ ಆಡಳಿತವು ಅಸ್ತಿತ್ವಕ್ಕೆ ಬರಬೇಕೆಂಬ ಬೇಡಿಕೆಯನ್ನು ನೀಡುತ್ತಲಿದ್ದರು. ಮೊದಲ ವಿಶ್ವ ಸಮರದಲ್ಲಿ ಭಾರತೀಯರು ಬ್ರಿಟಿಷರಿಗೆ ನೀಡಿದ ಕೊಡುಗೆಯು ಬ್ರಿಟಿಷ್ ರಾಜಕೀಯ ವ್ಯವಸ್ಥೆಯ ಹೆಚ್ಚಿನ ಸಂಪ್ರದಾಯವಾದಿಗಳೂ ಸಹ ಸಂವಿಧಾನಾತ್ಮಕ ಬದಲಾವಣೆಯಾಗಬೇಕೆಂದು ಭಾವಿಸುವಂತೆ ಮಾಡಿತು, ಅದರ ಪರಿಣಾಮವಾಗಿ 1919ರ ಭಾರತ ಸರ್ಕಾರ ಕಾಯಿದೆಯು ಅಂಗೀಕಾರವಾಯಿತು. ಈ ಕಾಯಿದೆಯು ಪ್ರಾಂತೀಯ "ದ್ವಿಪ್ರಭುತ್ವ" ಎಂಬ ಒಂದು ಹೊಸ ರೀತಿಯ ಸರ್ಕಾರ ವ್ಯವಸ್ಥೆಯನ್ನು ಚಾಲ್ತಿಗೆ ತಂದಿತು, ದ್ವಿಪ್ರಭುತ್ವ ಅಂದರೆ ಸರ್ಕಾರದ ಕೆಲವು ಕ್ಷೇತ್ರಗಳನ್ನು (ಉದಾ. ಶಿಕ್ಷಣ) ಪ್ರಾಂತೀಯ ಶಾಸಕಾಂಗದ ಜವಾಬ್ದಾರಿಯನ್ನು ಹೊಂದಿರುವ ಮಂತ್ರಿಗಳಿಗೆ ಒಪ್ಪಿಸುವುದು, ಮತ್ತೆ ಕೆಲವು ಕ್ಷೇತ್ರಗಳನ್ನು (ಉದಾ. ಸಾರ್ವಜನಿಕ ಶಿಸ್ತು ಮತ್ತು ಹಣಕಾಸು) ಬ್ರಿಟೀಷ್-ನೇಮಕದ ಪ್ರಾಂತೀಯ ಗವರ್ನರ್ನ ಜವಾಬ್ದಾರಿಯನ್ನು ಹೊಂದಿರುವ ಅಧಿಕಾರಿಗಳ ಕೈಗೆ ಒಪ್ಪಿಸುವುದು. ಈ ಕಾಯಿದೆಯು ಸರ್ಕಾರದಲ್ಲಿ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಆಡಳಿತ ನಡೆಸಬೇಕೆಂಬ ಬೇಡಿಕೆಯ ಪ್ರತಿಬಿಂಬವಾಗಿತ್ತು. ಅಲ್ಲದೆ ಇದು ಈ ಆಡಳಿತವು ಭಾರತದಲ್ಲಿ (ಮತ್ತು ಅಲ್ಲಿದ್ದ ಬ್ರಿಟಿಷರ ಆಸಕ್ತಿಗೆ) ಯಾವ ಪರಿಣಾಮವನ್ನು ಉಂಟುಮಾಡಬಹುದು ಎಂಬ ಬ್ರಿಟಿಷರ ಆತಂಕವನ್ನೂ ಪ್ರತಿಬಂಬಿಸುತ್ತಿತ್ತು. ದ್ವಿಪ್ರಭುತ್ವ ಆಡಳಿತ ಪ್ರಯೋಗವು ಅತೃಪ್ತಿಕರವಾಗಿತ್ತು. ಭಾರತೀಯ ರಾಜಕಾರಣಿಗಳು ನಾಮಮಾತ್ರದ ನಿಯಂತ್ರಣವನ್ನು ಪಡೆದಿದ್ದ ಪ್ರದೇಶಗಳದ್ದೂ "ಹಣದ ಮೇಲಿನ ಹತೋಟಿ"ಯು ಬ್ರಿಟಿಷ್ ಅಧಿಕಾರಿ-ವರ್ಗದ ವಶದಲ್ಲಿದ್ದುದು ಅವರನ್ನು ಹೆಚ್ಚಿನ ಪ್ರಮಾಣದಲ್ಲಿ ಆಶಾಭಂಗಗೊಳಿಸಿತು. ಭಾರತದ ಸಂವಿಧಾನಾತ್ಮಕ ವ್ಯವಸ್ಥೆಗಳ ಮತ್ತು ಅಧಿಕಾರ ವಹಿಸಿಕೊಳ್ಳಲು ಬಯಸುತ್ತಿದ್ದ ರಾಜರ ಆಳ್ವಿಕೆಗೊಳಪಟ್ಟ ರಾಜ್ಯಗಳ ಪುನಃಪರಿಶೀಲನೆ ಮಾಡುವುದು ಮುಖ್ಯ ಉದ್ದೇಶವಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಮುಸ್ಲಿಮ್ ಪ್ರತಿನಿಧಿನಿಗಳ ನಡುವಿನ ಒಡಕು, ಒಕ್ಕೂಟವು ಹೇಗೆ ಕೆಲಸ ಮಾಡುತ್ತದೆ ಎಂಬುದರ ಹೆಚ್ಚಿನ ಪ್ರಮುಖ ವಿವರದ ಕುರಿತಾದ ಒಮ್ಮತವನ್ನು ತಡೆಗಟ್ಟಲು ಒಂದು ಪ್ರಮುಖ ಕಾರಣವಾಯಿತು. ಇದಕ್ಕೆ ವಿರುದ್ಧವಾಗಿ, ಹೊಸ ಸಂಪ್ರದಾಯವಾದಿ-ಪ್ರಬಲತೆಯ ಲಂಡನ್ನ ರಾಷ್ಟ್ರೀಯ ಸರ್ಕಾರವು ಅದರ ಸ್ವಂತ ಪ್ರಸ್ತಾಪಗಳ (ಶ್ವೇತಪತ್ರ) ಕರಡು ತಯಾರಿಸುವುದರೊಂದಿಗೆ ಮುಂದುವರಿಯಲು ನಿರ್ಧರಿಸಿತು. ಲಾರ್ಡ್ ಲಿನ್ಲಿತ್ಗೊ ಅಧ್ಯಕ್ಷತೆಯ ಒಂದು ಜಂಟಿ ಸಂಸತ್ತಿನ ಆಯ್ಕೆ-ಸಮಿತಿಯು ಈ ಶ್ವೇತಪತ್ರ-ಪ್ರಸ್ತಾಪಗಳನ್ನು ಹೆಚ್ಚಿನ ಪ್ರಮಾಣದ ಒತ್ತು ನೀಡಿ ಪುನರ್ಪರಿಶೀಲನೆ ಮಾಡಿತು. ಈ ಶ್ವೇತಪತ್ರದ ಆಧಾರದಲ್ಲಿ, ಭಾರತ ಸರ್ಕಾರ ಕಾಯಿದೆಯನ್ನು ರೂಪಿಸಲಾಯಿತು. ಈ ಸಮಿತಿಯಲ್ಲಿ ಮತ್ತು ನಂತರ ಮೊಂಡ-ಸಂಪ್ರದಾಯವಾದಿಗಳನ್ನು ಒಲಿಸಿಕೊಳ್ಳಲು, "ಸೇಫ್ಗಾರ್ಡ್"ಗಳನ್ನು ಬಲಗೊಳಿಸಲಾಯಿತು ಮತ್ತು ಕೇಂದ್ರ ಶಾಸನ ಸಭೆಗಾಗಿ (ಕೇಂದ್ರ ಶಾಸಕಾಂಗದ ಕೆಳಮನೆ) ಪರೋಕ್ಷ ಚುನಾವಣೆಗಳನ್ನು ಪುನಃಸ್ಥಾಪಿಸಲಾಯಿತು. ಈ ಕಾಯಿದೆಯನ್ನು 1935ರ ಆಗಸ್ಟ್ನಲ್ಲಿ ಕಾನೂನಾಗಿ ಮಂಜೂರು ಮಾಡಲಾಯಿತು. ಈ ಕ್ರಿಯೆಯ ಪರಿಣಾಮವಾಗಿ, 1935ರ ಭಾರತ ಸರ್ಕಾರ ಕಾಯಿದೆಯು ಭಾರತೀಯ ಬೇಡಿಕೆಗಳನ್ನೂ ಪೂರೈಸುವ ಉದ್ದೇಶವನ್ನು ಹೊಂದಿದ್ದರೂ, ಕಾಯಿದೆಯ ವಿವರ ಮತ್ತು ಅದರ ವಿಷಯಗಳ ಕರಡುಪ್ರತಿ ಮಾಡುವಲ್ಲಿ ಭಾರತೀಯರು ಭಾಗವಹಿಸದಿದ್ದುದು ಈ ಕಾಯಿದೆಯು ಭಾರತದಲ್ಲಿ ಆಸಕ್ತಿರಹಿತ ಪ್ರತಿಕ್ರಿಯೆಯನ್ನು ಪಡೆಯಲು ಕಾರಣವಾಯಿತು.
ಸಂಸತ್ತಿನ ಬ್ರಿಟಿಷ್ ಕಾಯಿದೆಗಳು ಪೀಠಿಕೆಭಾಗವನ್ನು ಹೊಂದುವುದು ಅಸಾಧಾರಣವಾದುದರಿಂದ, 1935ರ ಭಾರತ ಸರ್ಕಾರ ಕಾಯಿದೆಯಲ್ಲಿ ಪೀಠಿಕೆಭಾಗವು ಇರದಿದ್ದುದು 1919ರ ಕಾಯಿದೆಯೊಂದಿಗೆ ವೈಲಕ್ಷಣವನ್ನು ತೋರಿಸಿತು, ಇದು ಆ ಕಾಯಿದೆಯ ಗುರಿಗಳ ವ್ಯಾಪಕ ತತ್ತ್ವಚಿಂತನೆಯನ್ನು ಭಾರತೀಯ ರಾಜಕೀಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ಧಗೊಳಿಸಿತು. 1919ರ ಕಾಯಿದೆಯ ಪೀಠಿಕೆಭಾಗವು 1917ರ ಆಗಸ್ಟ್ 20ರಂದು ಭಾರತದ ರಾಜ್ಯ ಕಾರ್ಯದರ್ಶಿ ಎಡ್ವಿನ್ ಮೋಂಟಗು (ಜುಲೈ 17, 1917 – ಮಾರ್ಚ್ 19, 1922) ಜನಸಾಮಾನ್ಯರಿಗೆ ನೀಡಿದ ಹೇಳಿಕೆಯನ್ನು ಕೇಂದ್ರೀಕರಿಸಿದೆ, ಅದೆಂದರೆ:
ಭಾರತದಲ್ಲಿನ ಜವಾಬ್ದಾರಿಯುತ ಸರ್ಕಾರವನ್ನು ಬ್ರಿಟಿಷ್ ಸಾಮ್ರಾಜ್ಯದ ಅವಿಭಾಜ್ಯ ಅಂಗವೆಂದು ಪ್ರಗತಿಪರವಾಗಿ ಕಂಡುಕೊಳ್ಳುವುದರೊಂದಿಗೆ ಸ್ವ-ಆಡಳಿತದ ಸಂಘಟನೆಗಳ ನಿಧಾನಗತಿಯ ಅಭಿವೃದ್ಧಿ.
ಬ್ರಿಟಿಷ್-ಬಾರತವು ಅಸ್ತಿತ್ವದಲ್ಲಿದ್ದ ಪರಮಾಧಿಕಾರಗಳಾದ ಕೆನಡಾ ಮತ್ತು ಆಸ್ಟ್ರೇಲಿಯಾದೊಂದಿಗೆ ಸಂವಿಧಾನಾತ್ಮಕ ಸಮಾನತೆ ಸಾಧಿಸುವುದನ್ನು ಭಾರತೀಯ ಬೇಡಿಕೆಗಳು ಕೇಂದ್ರೀಕರಿಸಿದ್ದವು, ಅವು ಬ್ರಿಟಿಷ್ ಕಾಮನ್ವೆಲ್ತ್ನಲ್ಲಿ ಸಂಪೂರ್ಣ ಸ್ವಯಮಾಧಿಪತ್ಯವನ್ನು ಸಾಧಿಸುವ ಉದ್ದೇಶವನ್ನು ಹೊಂದಿದ್ದವು. ಬ್ರಿಟಿಷ್ ರಾಜಕೀಯ ವ್ಯವಸ್ಥೆಯಲ್ಲಿನ ಪ್ರಮುಖ ಘಟಕವೊಂದು ಭಾರತೀಯರು ಇದರ ಆಧಾರದಲ್ಲಿ ತಮ್ಮ ರಾಷ್ಟ್ರವನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆಂಬ ಸಂಶಯವನ್ನು ಹೊಂದಿತ್ತು ಮತ್ತು ಪರಮಾಧಿಕಾರ ಸ್ಥಿತಿಯು ಬಹುಶಃ ಸಾಕಷ್ಟು "ಸೇಫ್ಗಾರ್ಡ್"ಗಳೊಂದಿಗೆ ದೀರ್ಘಕಾಲದ ಸಂವಿಧಾನದ ನಿಧಾನಗತಿಯ ಅಭಿವೃದ್ಧಿಯ ಉದ್ದೇಶವನ್ನು ಹೊಂದಿದೆ ಎಂದು ಭಾವಿಸಿತು. ಭಾರತೀಯ ಮತ್ತು ಬ್ರಿಟಿಷ್ ಅಭಿಪ್ರಾಯಗಳ ನಡುವಿನ ಈ ಬಿಕ್ಕಟ್ಟು 1935ರ ಕಾಯಿದೆಯು ಅದರ ಸ್ವಂತ ಪೀಠಿಕೆಭಾಗವನ್ನು ಹೊಂದದಂತೆ ಮಾಡಿತು. ಆದರೆ ಅದರ ಸ್ಥಾನದಲ್ಲಿ 1919ರ ಕಾಯಿದೆಯ ಪೀಠಿಕೆಬಾಗವನ್ನು ಇರಿಸಲಾಗಿತ್ತು, ಆ ಕಾಯಿದೆಯ ಉಳಿದಭಾಗವನ್ನು ತೆಗೆದುಹಾಕಿದಾಗಲೂ ಈ ಪೀಠಿಗೆಭಾಗ ಮಾತ್ರ ಉಳಿದಿತ್ತು. ಇದನ್ನು ಭಾರತದಲ್ಲಿ ಬ್ರಿಟಿಷರ ಆಸಕ್ತಿರಹಿತ ಭಾವ ಮತ್ತು ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿನ ಒಂದು "ಕನಿಷ್ಠ ಅಗತ್ಯತೆ"ಯನ್ನು ಸೂಚಿಸುವ ಮಿಶ್ರ ಸಂದೇಶಗಳಾಗಿ ಕಾಣಲಾಯಿತು.
ಹೆಚ್ಚಿನ ಆಧುನಿಕ ಸಂವಿಧಾನಗಳಿಗೆ ವಿರುದ್ಧವಾಗಿ, ಆದರೆ ಆ ಸಂದರ್ಭದ ಕಾಮನ್ವೆಲ್ತ್ ಸಂವಿಧಾನಾತ್ಮಕ ಶಾಸಕಾಂಗಕ್ಕೆ ಸಾಮಾನ್ಯವಾಗಿ, ಈ ಕಾಯಿದೆಯು ರಚಿಸುವ ಗುರಿಯನ್ನು ಹೊಂದಿದ್ದ ಹೊಸ ವ್ಯವಸ್ಥೆಯಲ್ಲಿ "ಹಕ್ಕುಗಳ ಮಸೂದೆ"ಯನ್ನು ಹೊಂದಿರಲಿಲ್ಲ. ಆದರೆ ಪ್ರಸ್ತಾಪಿಸಿದ ಭಾರತೀಯ ಒಕ್ಕೂಟದಲ್ಲಿ ಅಂತಹ ಹಕ್ಕುಗಳನ್ನು ಸೇರಿಸುವಲ್ಲಿ ಇನ್ನಷ್ಟು ಜಟಿಲತೆ ಇತ್ತು ಏಕೆಂದರೆ ಹೊಸ ಅಸ್ತಿತ್ವವು ನಾಮಮಾತ್ರ ಪರಮಾಧಿಕಾರವುಳ್ಳ (ಮತ್ತು ಸಾಮಾನ್ಯವಾಗಿ ನಿರಂಕುಶಪ್ರಭುತ್ವದ) ರಾಜರ ಆಳ್ವಿಕೆಗೊಳಪಟ್ಟ ರಾಜ್ಯಗಳನ್ನು ಒಳಗೊಳ್ಳಬಹುದಾದ ಸಾಧ್ಯತೆ ಇರುತ್ತದೆ. ಆದರೆ ಕೆಲವರು ಒಂದು ವಿಭಿನ್ನ ಪ್ರಸ್ತಾಪವನ್ನು ನೀಡಿದರು ಏಕೆಂದರೆ ನೆಹರು ವರದಿಯಲ್ಲಿನ ಕರಡು ಸಂವಿಧಾನವು ಅಂತಹ ಹಕ್ಕುಗಳ ಮಸೂದೆಯನ್ನು ಒಳಗೊಂಡಿತ್ತು.
1947ರಲ್ಲಿ ಕಾಯಿದೆಯಲ್ಲಿನ ಕೆಲವು ತಿದ್ದುಪಡಿಗಳು ಇದನ್ನು ಭಾರತ ಮತ್ತು ಪಾಕಿಸ್ತಾನದ ಕಾರ್ಯಪ್ರವೃತ್ತ ಹಂಗಾಮಿ ಸಂವಿಧಾನವಾಗಿ ಮಾಡಿದವು.
ಆ ಕಾಯಿದೆಯು ಹೆಚ್ಚು ವಿವರಾತ್ಮಕವಾಗಿದ್ದುದು ಮಾತ್ರವಲ್ಲದೆ ಅದು ಬ್ರಿಟಿಷ್ ಜವಾಬ್ದಾರಿಗಳು ಮತ್ತು ಆಸಕ್ತಿಗಳನ್ನು ನಿರ್ವಹಿಸಲು ಅಗತ್ಯವೆಂದು ಕಂಡುಬಂದಾಗ ಬ್ರಿಟಿಷ್ ಸರ್ಕಾರಕ್ಕೆ ಮಧ್ಯಪ್ರವೇಶಿಸಲು ಅವಕಾಶ ಮಾಡಿಕೊಡುವುದಕ್ಕಾಗಿ ವಿನ್ಯಾಸಗೊಳಿಸಿದ 'ಸೇಫ್ಗಾರ್ಡ್'ಗಳೊಂದಿಗೆ ಸಮಸ್ಯೆಯನ್ನು ಹೊಂದಿತ್ತು. ಇದನ್ನು ಸಾಧಿಸಲು, ಭಾರತ ಸರ್ಕಾರದ ಸಂಘಟನೆಗಳ ನಿಧಾನವಾಗಿ ಹೆಚ್ಚುತ್ತಿರುವ ಭಾರತೀಕರಣದ ಕಾರಣದಿಂದ, ಈ ಕಾಯಿದೆಯು ಭಾರತದ ರಾಜ್ಯ ಕಾರ್ಯದರ್ಶಿಯನ್ನು ನಿಯಂತ್ರಿಸುವ ಪ್ರಾಂತೀಯ ಗವರ್ನರ್ಗಳು ಮತ್ತು ಬ್ರಿಟಿಷ್-ನೇಮಕದ ವೈಸ್ರಾಯ್ರ ಹಿಡಿತದಲ್ಲಿ ಸೇಫ್ಗಾರ್ಡ್ಗಳ ಬಳಕೆ ಮತ್ತು ನಿಜವಾದ ನಿರ್ವಹಣೆಯ ನಿರ್ಧಾರವನ್ನು ಕೇಂದ್ರೀಕರಿಸಿತ್ತು.
‘ಗವರ್ನರ್-ಜನರಲ್ ಆತನ ನಿರ್ಧಾರ-ಸ್ವಾತಂತ್ರ್ಯದಲ್ಲಿ ಹೊಂದಿರುವ ಹೆಚ್ಚಿನ ಅಧಿಕಾರ ಮತ್ತು ಜವಾಬ್ದಾರಿಗಳ ದೃಷ್ಟಿಕೋನದಲ್ಲಿ ಅಥವಾ ಆತನ ವೈಯಕ್ತಿಕ ತೀರ್ಮಾನದ ಪ್ರಕಾರ, ಆತನು (ವೈಸ್ರಾಯ್) ಉತ್ತಮ ವ್ಯಕ್ತಿಯಾಗಿರಬೇಕೆಂಬುದರಲ್ಲಿ ಸಂಶಯವಿಲ್ಲ. ಆತನು ಜಾಣತನ, ಧೈರ್ಯ ಮತ್ತು ಕೌಶಲವನ್ನು ಹೊಂದಿರಬೇಕು ಹಾಗೂ ಕಷ್ಟುಪಟ್ಟು ಕೆಲಸ ಮಾಡಲು ಸಾಕಷ್ಟು ಸಾಮರ್ಥ್ಯವನ್ನು ಒಳಗೊಂಡಿರಬೇಕು. “ನಾವು ಈ ಮಸೂದೆಗೆ ಅನೇಕ ಸೇಫ್ಗಾರ್ಡ್ಗಳನ್ನು ಸೇರಿಸಿದ್ದೇವೆ” ಎಂದು ಹೇಳಿ ಸರ್ ರಾಬರ್ಟ್ ಹಾರ್ನೆ ಹೀಗೆಂದು ಮುಂದುವರಿಸಿದ್ದಾರೆ - “ಆದರೆ ಆ ಎಲ್ಲಾ ಸೇಫ್ಗಾರ್ಡ್ಗಳು ಏಕ ವ್ಯಕ್ತಿಯ ಸುತ್ತ ಸುತ್ತುತ್ತವೆ, ಆ ವ್ಯಕ್ತಿಯೆಂದರೆ ವೈಸ್ರಾಯ್. ಆತನು ಸಂಪೂರ್ಣ ವ್ಯವಸ್ಥೆಯ ಕೇಂದ್ರ-ಬಿಂದುವಾಗಿರುತ್ತಾನೆ. ವೈಸ್ರಾಯ್ ವಿಫಲವಾದರೆ, ಯೋಜಿಸಿದ ವ್ಯವಸ್ಥೆಯನ್ನು ಯಾರೊಬ್ಬರೂ ಉಳಿಸಲಾಗುವುದಿಲ್ಲ.” ಈ ಮಾತು, ಒಂದು ದಿನ ವೈಸ್ರಾಯ್ ಕಾರ್ಮಿಕ ಸರ್ಕಾರದಿಂದ ನೇಮಕಗೊಳ್ಳಬಹುದು ಎಂಬ ನಿರೀಕ್ಷೆಯಿಂದ ಗಾಬರಿಗೊಳ್ಳುವ ಹಠಮಾರಿ ಟೋರಿಗಳ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತದೆ.’
ಕಾಯಿದೆಯ ಹತ್ತಿರದ ವಾಚನವು, ಬ್ರಿಟಿಷ್ ಸರ್ಕಾರವು ಅಪೇಕ್ಷಣೀಯವೆಂದು ಪರಿಗಣಿಸುವ ಯಾವುದೇ ಸಂದರ್ಭದಲ್ಲಿ ಸಂಪೂರ್ಣ ನಿಯಂತ್ರಣವನ್ನು ಹಿಂದೆಗೆದುಕೊಳ್ಳುವ ಕಾನೂನುಬದ್ಧ ಸಾಧನಗಳನ್ನು ಹೊಂದಿದೆ ಎಂದು ತಿಳಿಸುತ್ತದೆ. ಆದರೆ ಯಾವುದೇ ಉತ್ತಮ ಕಾರಣವಿಲ್ಲದೆ ಹಾಗೆ ಮಾಡುವುದರಿಂದ, ಭದ್ರಪಡಿಸುವುದೇ ಕಾಯಿದೆಯನ್ನು ಬೆಂಬಲಿಸುವ ಉದ್ದೇಶವಾಗಿದ್ದ ಭಾರತದ ಗುಂಪುಗಳಲ್ಲಿನ ಬ್ರಿಟಿಷರ ವಿಶ್ವಾಸಾರ್ಹತೆಯು ಸಂಪೂರ್ಣವಾಗಿ ಕುಸಿದು ಬೀಳುತ್ತದೆ. ವೈಲಕ್ಷಣವನ್ನು ತೋರಿಸುವ ಕೆಲವು ಅಭಿಪ್ರಾಯಗಳೆಂದರೆ:
“ಫೆಡರಲ್ ಸರ್ಕಾರದಲ್ಲಿ ಜವಾಬ್ದಾರಿಯುತ ಸರ್ಕಾರವನ್ನು ಹೋಲುವಂಥದ್ದನ್ನು ಸೂಚಿಸಲಾಗುತ್ತದೆ. ಆದರೆ ಮಂತ್ರಿಯ ಕಾರ್ಯ ವ್ಯಾಪ್ತಿಯನ್ನು ಅತ್ಯಗತ್ಯವಾಗಿ ಸೀಮಿತಗೊಳಿಸುವ ಗವರ್ನರ್-ಜನರಲ್ಗೆ ನೀಡಿದ ರಕ್ಷಣಾ ಮತ್ತು ಹೆಚ್ಚುವರಿ ಕಾರ್ಯಗಳ ಅಧಿಕಾರಗಳಲ್ಲಿ ನೈಜತೆ ಇರುವುದಿಲ್ಲ. ಭಾರತದ ರಾಜ್ಯಗಳ ಆಡಳಿತಗಾರರಿಗೆ ನೀಡಿದ ಪ್ರಾತನಿಧ್ಯವು ಪ್ರಜಾಪ್ರಭುತ್ವ ನಿಯಂತ್ರಣದ ಆರಂಭದ ಯಾವುದೇ ಸಂಭಾವ್ಯವನ್ನೂ ತಳ್ಳಿಹಾಕುತ್ತದೆ. ಒಂದು ಪ್ರಕಾರದ ಸರ್ಕಾರದ ಅಭಿವೃದ್ದಿಯನ್ನು ತುಂಬಾ ಅನನ್ಯವಾಗಿ ಪರಿಗಣಿಸುವುದು ಅತ್ಯಧಿಕ ಆಸಕ್ತಿಯ ವಿಷಯವಾಗಿದೆ; ಇದು ಯಶಸ್ವಿಯಾಗಿ ಕಾರ್ಯಗತಗೊಂಡರೆ, ಇದಕ್ಕೆ ಮುಖ್ಯ ಕಾರಣ ಭಾರತೀಯ ಮುಖಂಡರ ರಾಜಕೀಯ ಸಾಮರ್ಥ್ಯವಾಗಿದೆ. ಇವರು ಪರಮಾಧಿಕಾರ ಸ್ಥಿತಿಯಲ್ಲಿ ಈಗ ಉನ್ನತ ಮಟ್ಟಕ್ಕೆ ಬೆಳೆದ ಸ್ವ-ಸರ್ಕಾರ ವ್ಯವಸ್ಥೆಯಲ್ಲಿ ಭಾಗವಹಿಸುವ ವಸಾಹತುಶಾಹಿ ಸಮರ್ಥ-ರಾಜಕಾರಣಿಗಳಿಗಿಂತ ಹೆಚ್ಚಿನ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಾರೆ.”
ನಲವತ್ತೈದು ನಿಮಿಷಗಳ ಮಾತಿನಲ್ಲಿ ಲಾರ್ಡ್ ಲೋಥಿಯನ್ ಈ ಮಸೂದೆಯ ಬಗೆಗಿನ ತನ್ನ ಅಭಿಪ್ರಾಯಗಳನ್ನು ಹೀಗೆಂದು ತಿಳಿಸಿದ್ದಾರೆ:
"ಸೋಲೊಪ್ಪಿಕೊಳ್ಳುವ ಮೊಂಡ-ಸಂಪ್ರದಾಯವಾದಿಗಳ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ. ಯಾವುದೇ ಸಂವಿಧಾನವನ್ನು ಬಳಸದ ನೀವು ಎಷ್ಟು ಮಹತ್ವದ ಅಧಿಕಾರವನ್ನು ಚಲಾಯಿಸುತ್ತೀರಿ ಎಂಬುದನ್ನು ಮನಗಾಣಲು ಸಾಧ್ಯವಾಗುವುದಿಲ್ಲ. ನೀವು ಸಂವಿಧಾನವನ್ನು ಗಮನಿಸಿದರೆ, ಎಲ್ಲಾ ಅಧಿಕಾರಗಳು ಗವರ್ನರ್-ಜನರಲ್ ಮತ್ತು ಗವರ್ನರ್ರ ವಶದಲ್ಲಿರುವಂತೆ ಕಂಡುಬರುತ್ತದೆ. ಆದರೆ ಎಲ್ಲಾ ಅಧಿಕಾರಗಳು ರಾಜನ ವಶದಲ್ಲಿಲ್ಲವೇ? ಎಲ್ಲಾವನ್ನೂ ರಾಜನ ಹೆಸರಲ್ಲಿ ಮಾಡಲಾಗುತ್ತದೆ ಆದರೆ ರಾಜನು ಎಂದಾದರೂ ಮಧ್ಯ ಪ್ರವೇಶಿಸಿದ್ದಾನೆಯೇ? ಒಮ್ಮೆ ಅಧಿಕಾರವು ಶಾಸಕಾಂಗದ ವಶಕ್ಕೆ ಬಂದ ನಂತರ, ಗವರ್ನರ್ ಅಥವಾ ಗವರ್ನರ್-ಜನರಲ್ ಮಧ್ಯೆ ಪ್ರವೇಶಿಸುವುದಿಲ್ಲ. ಸಿವಿಲ್ ಸೇವೆಯು ಸಹಾಯಕವಾಗಿರುತ್ತದೆ. ನೀವೂ ಸಹ ಇದನ್ನು ಮನಗಾಣುತ್ತೀರಿ. ಒಮ್ಮೆ ನಿಮಯವು ರಚಿಸಲ್ಪಟ್ಟರೆ, ಅವರು ಅದನ್ನು ನಿಷ್ಠೆಯಿಂದ ಮತ್ತು ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ತರುತ್ತಾರೆ.
ನಮಗೆ ಸಹಾಯ ಮಾಡಲಾಗಲಿಲ್ಲ. ನಾವು ಮೊಂಡ-ಸಂಪ್ರದಾಯವಾದಿಗಳ ವಿರುದ್ಧ ಕಾದಾಡಬೇಕಾಯಿತು. ಸರ್ ಸ್ಯಾಮ್ಯುಯೆಲ್ ಹೋರೆ ಮತ್ತು ಬಾಲ್ಡ್ವಿನ್ ತೋರಿಸಿದ ಧೈರ್ಯವು ಎಷ್ಟು ಶ್ರೇಷ್ಠವಾದುದೆಂಬುದರ ಬಗ್ಗೆ ನಿಮಗೆ ತಿಳಿಯಲಿಲ್ಲ. ನಾವು ಮೊಂಡ-ಸಂಪ್ರದಾಯವಾದಿಗಳನ್ನು ಬಿಟ್ಟುಕೊಡಲು ಬಯಸಲಿಲ್ಲ ಏಕೆಂದರೆ ನಾವು ಅವರೊಂದಿಗೆ ಬೇರೆ ರೀತಿಯಲ್ಲಿ ಮಾತನಾಡಬೇಕಾಗಿತ್ತು. ಈ ವಿವಿಧ ಭೇಟಿಗಳು - ಮತ್ತು ಕಾಲಕ್ರಮದಲ್ಲಿ G.D. (ಬಿರ್ಲಾ ಸೆಪ್ಟೆಂಬರ್ನಲ್ಲಿ ಹಿಂದಿರುವುದಕ್ಕಿಂತ ಮೊದಲು ಆಂಗ್ಲೊ-ಭಾರತ ವಾಣಿಜ್ಯ-ವ್ಯವಹಾರಗಳಲ್ಲಿ ಪ್ರಮುಖವಾದ ಪ್ರತಿಯೊಬ್ಬರನ್ನೂ ಭೇಟಿಯಾದರು - ಎರಡು ರಾಷ್ಟ್ರಗಳ ನಡುವಿನ ವ್ಯತ್ಯಾಸಗಳು ಹೆಚ್ಚಾಗಿ ಮನೋವೈಜ್ಞಾನಿಕವಾಗಿರುತ್ತದೆಂಬ G.D.ಯ ಮೂಲಭೂತ ಅಭಿಪ್ರಾಯವನ್ನು ದೃಢಪಡಿಸಿದವು, ಅಂತಹುದೇ ಪ್ರಸ್ತಾಪಗಳು ಪೂರ್ಣವಾಗಿ ತದ್ವಿರುದ್ಧವಾದ ವ್ಯಾಖ್ಯಾನಗಳನ್ನು ನೀಡುತ್ತವೆ. ಅವರು ಬ್ರಿಟಿಷ್ ಸಂಪ್ರದಾಯವಾದಿಗಳ ದೃಷ್ಟಿಯಲ್ಲಿ ಬಿಟ್ಟುಕೊಡುವುದು ಎಷ್ಟು ಗಮನಾರ್ಹವಾಗಿರುತ್ತದೆ ಎಂಬುದನ್ನು ಭೇಟಿಗಿಂತ ಮೊದಲು ಕಂಡುಕೊಂಡಿರಲಿಲ್ಲ. ಅನುಕ್ರಮ ಮಾತುಕತೆಗಳು G.D.ಗೆ ಮಸೂದೆಯ ಪ್ರತಿನಿಧಿಗಳು ಭಾರತದಲ್ಲಿ ಹೊಂದಿದಷ್ಟೇ ಹೆಚ್ಚಿನ ವೈಷಮ್ಯವನ್ನು ತಮ್ಮ ನೆಲೆಯಲ್ಲೂ ಹೊಂದಿರುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದವು.
"ಕಾನೂನು ಅದರ ಉದಾತ್ತ ಸಮಾತೆಯಲ್ಲಿ ಶ್ರೀಮಂತರು ಮತ್ತು ಬಡವರು ಸೇತುವೆಗಳಡಿಯಲ್ಲಿ ಮಲಗುವುದನ್ನು, ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುವುದನ್ನು ಮತ್ತು ಆಹಾರ ಕದಿಯುವುದನ್ನು ನಿಷೇಧಿಸುತ್ತದೆ."
ಈ ಕಾಯಿದೆಯಡಿಯಲ್ಲಿ, UK ಕಾನೂನು ಅನ್ಯೋನ್ಯ ವ್ಯವಹಾರವನ್ನು ನಿರಾಕರಿಸದಿದ್ದರೆ UKಯಲ್ಲಿರುವ ಬ್ರಿಟಿಷ್ ನಾಗರಿಕರು ಮತ್ತು UKಯಲ್ಲಿ ನೋಂದಾಯಿಸಲ್ಪಟ್ಟ ಬ್ರಿಟಿಷ್ ಕಂಪನಿಗಳನ್ನು ಭಾರತೀಯ ನಾಗರಿಕರು ಮತ್ತು ಭಾರತದಲ್ಲಿ ನೋಂದಾಯಿಸಲ್ಪಟ್ಟ ಕಂಪನಿಗಳಂತೆಯೇ ನೋಡಿಕೊಳ್ಳಬೇಕು. ಭಾರತದ ಹೆಚ್ಚಿನ ಆಧುನಿಕ ಕ್ಷೇತ್ರದಲ್ಲಿನ ಬ್ರಿಟಿಷ್ ರಾಜಧಾನಿಯ ಪ್ರಾಬಲ್ಯತೆ, ಯುಕ್ತವಲ್ಲದ ವಾಣಿಜ್ಯ ವ್ಯವಹಾರಗಳ ಮೂಲಕ ಭಾರತದ ಅಂತಾರಾಷ್ಟ್ರೀಯ ಮತ್ತು ಕರಾವಳಿಯ ನೌಕಾ ಸಮೂಹದ ಮೇಲೆ UKಯ ಹಡುಗು-ರವಾನೆ ಮಾಡುವ ವ್ಯವಹಾರಗಳು ಸ್ಥಾಪಿಸಿದ ಸಂಪೂರ್ಣ ಪ್ರಾಧಾನ್ಯತೆ, ಬ್ರಿಟನ್ನಲ್ಲಿ ಭಾರತೀಯ ರಾಜಧಾನಿಯ ಪೂರ್ತಿ ನಿಕೃಷ್ಟತೆ ಮತ್ತು UKಗೆ ಹಡಗು-ರವಾನೆ ಮಾಡುವುದರಲ್ಲಿ ಭಾರತೀಯರು ಭಾಗವಹಿಸದಿರುವುದು ಮೊದಲಾವುಗಳನ್ನು ಪರಿಗಣಿಸಿದರೆ ಈ ವ್ಯವಸ್ಥೆಯ ಅಪ್ರಾಮಾಣಿಕತೆಯು ಸ್ಪಷ್ಟವಾಗುತ್ತದೆ. ಭಾರತದ ಯಾವುದೇ ಕಾನೂನು ಅಥವಾ ನಿಯಮವು UK ಮೂಲದ ಬ್ರಿಟಿಷ್ ವ್ಯಕ್ತಿಗಳು, ಬ್ರಿಟಿಷ್ -ನೋಂದಾಯಿಸಲ್ಪಟ್ಟ ಕಂಪನಿಗಳು ಮತ್ತು ವಿಶೇಷವಾಗಿ ಬ್ರಿಟಿಷ್ ಹಡಗು-ರವಾನೆ ವ್ಯವಹಾರಗಳ ವಿರುದ್ಧ ಭೇದ ಕಲ್ಪಿಸುವ ಉದ್ದೇಶವನ್ನು ಹೊಂದಿದ್ದರೆ ವೈಸ್ರಾಯ್ ಮಧ್ಯಪ್ರವೇಶಿಸಬೇಕಾಗುವುದರ ಬಗ್ಗೆ ತುಂಬಾ ವಿವಾರಾತ್ಮಕ ಷರತ್ತುಗಳಿವೆ.
“ವಿದೇಶಿ ಕಂಪನಿಗಳೊಂದಿಗಿನ ವ್ಯವಹಾರವನ್ನು ವಾಣಿಜ್ಯ ಮಂತ್ರಿಯೇ ನಿರ್ವಹಿಸಬೇಕೆಂದು ಜಂಟಿ ಸಮಿತಿಯು ಭಾವಿಸಿತು. ಆದರೆ ಅದು ವಿದೇಶಿ ರಾಷ್ಟ್ರಗಳೊಂದಿಗಿನ ಎಲ್ಲಾ ವ್ಯವಹಾರಗಳನ್ನು ವಿದೇಶಾಂಗ ಖಾತೆ ಅಥವಾ ವಿದೇಶಿ ವ್ಯವಹಾರಗಳ ವಿಭಾಗವು ನಿರ್ವಹಿಸಬೇಕೆಂಬ ನಿರ್ಧಾರವನ್ನು ಮಾಡಿತು, ಏಕೆಂದರೆ ಅವು ಯುನೈಟೆಡ್ ಕಿಂಗ್ಡಮ್ನಲ್ಲಿದ್ದುದರಿಂದ. ಈ ರೀತಿಯ ಒಪ್ಪಂದಗಳನ್ನು ವ್ಯವಸ್ಥೆಗೊಳಿಸುವಾಗ ವಿದೇಶಿ ಕಾರ್ಯದರ್ಶಿಯು ಯಾವಾಗಲೂ ವಾಣಿಜ್ಯ ಮಂಡಳಿಯನ್ನು ಸಂಪರ್ಕಿಸುತ್ತಾರೆ ಹಾಗೂ ಅದೇ ರೀತಿಯಲ್ಲಿ ಗವರ್ನರ್-ಜನರಲ್ ಭಾರತದ ವಾಣಿಜ್ಯ ಮಂತ್ರಿಯ ಅಭಿಪ್ರಾಯ ಪಡೆಯುತ್ತಾರೆಂದು ಭಾವಿಸಲಾಗಿತ್ತು. ಇದು ನಿಜವಾಗಿರಬಹುದು, ಆದರೆ ಅದರ ಹೋಲಿಕೆಯು ತಪ್ಪಾಗಿದೆ. ಯುನೈಟೆಡ್ ಕಿಂಗ್ಡಮ್ನಲ್ಲಿ, ಎರಡೂ ವಿಭಾಗಗಳು ಒಂದೇ ಶಾಸಕಾಂಗದ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಅದೇ ಭಾರತದಲ್ಲಿ ಒಂದು ವಿಭಾಗವು ಫೆಡರಲ್ ಶಾಸಕಾಂಗಕ್ಕೆ ಹಾಗೂ ಮತ್ತೊಂದು ಪರಮಾಧಿಕಾರವುಳ್ಳ ಸಂಸತ್ತಿಗೆ ಜವಾಬ್ದಾರವಾಗಿರುತ್ತದೆ.”
1917ರ ಮೋಂಟಗು ಹೇಳಿಕೆಯಿಂದ, ಬ್ರಿಟಿಷರು ಯುದ್ಧತಂತ್ರದ ಕಾರ್ಯಗಳನ್ನು ಆರಂಭಿಸಿದರೆ ಸಮಸ್ಯೆಗಳನ್ನು ತಡೆಗಟ್ಟುವ ಸುಧಾರಣೆ ಕ್ರಿಯೆಗಳನ್ನು ಮಾಡುವುದು ಅಗತ್ಯವಾಗಿ ಕಂಡುಬಂತು. ಆದರೆ ಬ್ರಿಟಿಷ್ ರಾಜಕೀಯ ವ್ಯವಸ್ಥೆಯಲ್ಲಿನ ಸಾಮ್ರಾಜ್ಯವಾದಿ ಭಾವನೆ ಮತ್ತು ವ್ಯಾವಹಾರಿಕತೆಯ ಕೊರತೆಯು ಇದನ್ನು ಅಸಾಧ್ಯವಾಗಿಸಿತು. ಆದ್ದರಿಂದ 1919 ಮತ್ತು 1935ರ ಕಾಯಿದೆಗಳಲ್ಲಿನ ಅಧಿಕಾರದ ಅಧೀನ ಅನುದಾನಕ್ಕೆ ಸಮ್ಮತಿ ನೀಡದಿರುವಿಕೆಯು ಹೆಚ್ಚಿನ ಅಸಮಾಧಾನಕ್ಕೆ ಕಾರಣವಾಯಿತು ಮತ್ತು ಭಾರತದಲ್ಲಿ ತೀರ ಅಗತ್ಯವಾಗಿದ್ದ ಪ್ರಭಾವಿ ಗುಂಪುಗಳ ಆಧಾರವಾದ ಬ್ರಿಟಿಷ್-ಪ್ರಭುತ್ವವನ್ನು ಗೆಲ್ಲಲು ವಿಫಲಗೊಂಡಿತು. 1919ರಲ್ಲಿ 1935ರ ಕಾಯಿದೆ ಅಥವಾ ಸೈಮನ್ ಆಯೋಗದ ಯೋಜನೆಯು ಉತ್ತಮ ಯಶಸ್ಸು ಕಂಡಿತು. ಮೋಂಟಗು ಈ ರೀತಿಯ ಕಾರ್ಯಕ್ಕೆ ಬೆಂಬಲ ಒದಗಿಸಿರಬಹುದೆಂಬುದಕ್ಕೆ ಸಾಕ್ಷ್ಯಾಧಾರವಿತ್ತು. ಆದರೆ ಅವರ ಕ್ಯಾಬಿನೆಟ್ ಸದಸ್ಯರು ಇದನ್ನು ಪರಿಗಣಿಸಲಿಲ್ಲ. 1935ರಲ್ಲಿ ಬ್ರಿಟಿಷ್ ಸಂಸತ್ತಿನಲ್ಲಿ ಅಂಗೀಕಾರವಾಗದಿದ್ದರೂ ಬ್ರಿಟಿಷ್-ಭಾರತದ ಪ್ರಾಂತ್ಯಗಳನ್ನೊಳಗೊಂಡ, ಭಾರತದಲ್ಲಿ ಪರಮಾಧಿಕಾರವನ್ನು ಸ್ಥಾಪಿಸುವ ಸಂವಿಧಾನವೊಂದನ್ನು ಭಾರತದಲ್ಲಿ ಸ್ವೀಕರಿಸಲಾಯಿತು.
‘ಆ ಸಂದರ್ಭದಲ್ಲಿದ್ದ ಸಂಪ್ರದಾಯವಾದಿ ಪಕ್ಷದಲ್ಲಿನ ಅಧಿಕಾರದ ಸಮತೋಲನವನ್ನು ಪರಿಗಣಿಸಿ, 1935ರಲ್ಲಿ ಕಾನೂನಾಗಿಸಿದ ಮಸೂದೆಗಿಂತ ಹೆಚ್ಚು ಉದಾರವಾಗಿ ಮಸೂದೆಯೊಂದನ್ನು ಮಂಜೂರು ಮಾಡುವುದು ಊಹನಾತೀತವಾಗಿದೆ.’
ಸ್ವಯಂಚಾಲಿತವಾಗಿ ಪರಿಣಾಮಕಾರಿಯಾದ ಕಾಯಿದೆಯ ಪ್ರಾಂತೀಯ ಭಾಗವು ಮೂಲಭೂತವಾಗಿ ಸೈಮನ್ ಆಯೋಗದ ಶಿಫಾರಸುಗಳನ್ನು ಅನುಸರಿಸಿತು. ಪ್ರಾಂತೀಯ ದ್ವಿಪ್ರಭುತ್ವವು ಕೊನೆಗೊಂಡಿತು; ಅಂದರೆ ಎಲ್ಲಾ ಪ್ರಾಂತೀಯ ಕರಸಂಪುಟಗಳನ್ನು ಪ್ರಾಂತೀಯ ಶಾಸಕಾಂಗಗಳ ಬೆಂಬಲದಲ್ಲಿರುವ ಮಂತ್ರಿಗಳ ವಶದಲ್ಲಿರಿಸಲಾಯಿತು. ವೈಸ್ರಾಯ್ ಮತ್ತು ಭಾರತದ ರಾಜ್ಯ ಕಾರ್ಯದರ್ಶಿಯ ಮೂಲಕ ಬ್ರಿಟಿಷ್ ಸರ್ಕಾರದ ಜವಾಬ್ದಾರಿಯನ್ನು ಹೊಂದಿರುವ ಬ್ರಿಟಿಷ್-ನೇಮಕದ ಪ್ರಾಂತೀಯ ಗವರ್ನರ್ಗಳು ಮಂತ್ರಿಗಳ ಶಿಫಾರಸುಗಳನ್ನು ಸ್ವೀಕರಿಸಬೇಕಾಗಿತ್ತು. ಅವರ ದೃಷ್ಟಿಯಲ್ಲಿ, ಸಾವಿನ ಬೆದರಿಕೆಯ ತಡೆಗಟ್ಟುವಿಕೆ ಅಥವಾ ಪ್ರಾಂತ್ಯದಲ್ಲಿ ಶಾಂತತೆಯನ್ನು ಕಾಪಾಡುವುದು ಮತ್ತು ಅಲ್ಪಸಂಖ್ಯಾತರ ನ್ಯಾಯಸಮ್ಮತ ವ್ಯವಹಾರಗಳಿಗೆ ರಕ್ಷಣೆ ಒದಗಿಸುವುದು ಮೊದಲಾದ ಶಾಸನೋಕ್ತ "ವಿಶೇಷ ಜವಾಬ್ದಾರಿ"ಗಳ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರದಿದ್ದರೆ ಮಾತ್ರ ಹೀಗೆ ಮಾಡಬೇಕಾಗಿತ್ತು. ರಾಜಕೀಯ ಕುಸಿತದ ಸಂದರ್ಭದಲ್ಲಿ ಗವರ್ನರ್ ವೈಸ್ರಾಯ್ರ ಮೇಲ್ವಿಚಾರಣೆಯಡಿಯಲ್ಲಿ ಪ್ರಾಂತೀಯ ಸರ್ಕಾರದ ಸಂಪೂರ್ಣ ನಿಯಂತ್ರಣ ವಹಿಸಬಹುದಿತ್ತು. ಇದು ಗವರ್ನರ್ಗಳಿಗೆ ಭಾರತದಲ್ಲಿನ ಬ್ರಿಟಿಷ್ ಪ್ರಭುತ್ವದ ಇತಿಹಾಸದಲ್ಲಿ ಕಂಡುಬಂದ ಯಾವುದೇ ಬ್ರಿಟಿಷ್ ಅಧಿಕಾರಿಗಿಂತ ಹೆಚ್ಚಿನ ಅನಿಯಮಿತ ಆಳ್ವಿಕೆ ನಡೆಸಲು ಅವಕಾಶ ಮಾಡಿಕೊಟ್ಟಿತು. 1939ರಲ್ಲಿ ಕಾಂಗ್ರೆಸ್ ಪ್ರಾಂತೀಯ ಮಂತ್ರಿಗಳ ರಾಜಿನಾಮೆಯ ನಂತರ, ಗವರ್ನರ್ಗಳು ಯುದ್ಧದಾದ್ಯಂತ ಕಾಂಗ್ರೆಸ್-ರಹಿತ ಪ್ರಾಂತ್ಯಗಳ ನೇರ ಆಳ್ವಿಕೆ ನಡೆಸಿದರು. ಕಾಯಿದೆಯ ಪ್ರಾಂತೀಯ ಭಾಗವು, ಬ್ರಿಟಿಷ್ ಅಧಿಕಾರಿಗಳು ಮತ್ತು ಭಾರತೀಯ ರಾಜಕಾರಣಿಗಳು ಆಳ್ವಿಕೆಯ ಮೂಲಕ ದರ್ಬಾರನ್ನು ತೋರಿಸುವವರೆಗೆ ಪ್ರಾಂತೀಯ ರಾಜಕಾರಣಿಗಳಿಗೆ ಉತ್ತಮ ಅಧಿಕಾರ ಮತ್ತು ಪ್ರೋತ್ಸಾಹವನ್ನು ನೀಡಿತು ಎಂದು ತಿಳಿಯಲಾಗಿದೆ. ಆದರೆ ಬ್ರಿಟಿಷ್ ಗವರ್ನರ್ನ ಮಧ್ಯಪ್ರವೇಶದ ಸದುದ್ದೇಶದ ಕಾನೂನುಗಳಿಂದ ಆಳಬೇಕೆನ್ನುವ ಬೆದರಿಕೆಯು ಕಿರಿಕಿರಿಯನ್ನುಂಟುಮಾಡಿತು.
ಕಾಯಿದೆಯ ಪ್ರಾಂತೀಯ ಭಾಗಕ್ಕೆ ಭಿನ್ನವಾಗಿ, ಫೆಡರಲ್ ಭಾಗವು ರಾಜ್ಯಗಳ ಅರ್ಧದಷ್ಟು ಭಾಗವು ಒಡಂಬಡಿಕೆ ಮಾಡಿಕೊಳ್ಳಲು ಒಪ್ಪಿದರೆ ಮಾತ್ರ ಪರಿಣಾಕಾರಿಯಾಗಬಹುದಿತ್ತು. ಇದು ಸಾಧ್ಯವಾಗಲಿಲ್ಲ ಮತ್ತು ಒಕ್ಕೂಟದ ಸ್ಥಾಪನೆಯು ಎರಡನೇ ವಿಶ್ವ ಸಮರದ ಆಸ್ಫೋಟನದಿಂದಾಗಿ ಅನಿಯತವಾಗಿ ಮುಂದೂಡಲ್ಪಟ್ಟಿತು.
ಕಾಯಿದೆಯು ಕೇಂದ್ರದಲ್ಲಿ ದ್ವಿಪ್ರಭುತ್ವದ ಅಸ್ತಿತ್ವಕ್ಕೆ ಕಾರಣವಾಯಿತು. ಭಾರತದ ರಾಜ್ಯ ಕಾರ್ಯದರ್ಶಿಯ ರೂಪದಲ್ಲಿ ಭಾರತದ ಗವರ್ನರ್-ಜನರಲ್ – ಭಾರತದ ವೈಸ್ರಾಯ್ನ ಮೂಲಕ ಬ್ರಿಟಿಷ್ ಸರ್ಕಾರವು ಭಾರತದ ಹಣಕಾಸಿನ ಕರಾರುಗಳು, ರಕ್ಷಣಾ-ವ್ಯವಸ್ಥೆ, ವಿದೇಶಿ ವ್ಯವಹಾರಗಳು ಮತ್ತು ಬ್ರಿಟಿಷ್ ಭಾರತೀಯ ಸೈನ್ಯವನ್ನು ನಿಯಂತ್ರಿಸುವುದನ್ನು ಮುಂದುವರಿಸಬೇಕಾಗಿತ್ತು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ರೈಲ್ವೆ ಮಂಡಳಿಯ ಪ್ರಮುಖ ನೇಮಕಾತಿಗಳನ್ನು ಮಾಡಬೇಕಾಗಿತ್ತು. ಈ ಕಾಯಿದೆಯು ಗವರ್ನರ್ ಜನರಲ್ನ ಒಪ್ಪಿಗೆಯಿಲ್ಲದೆ ಕೇಂದ್ರ ಶಾಸಕಾಂಗದಲ್ಲಿ ಯಾವುದೇ ಹಣಕಾಸು ಮಸೂದೆಯನ್ನು ಮಂಡಿಸಬಾರದೆಂದು ಷರತ್ತು ಹಾಕಿತು. ಕನಿಷ್ಠ 80 ಪ್ರತಿಶತದಷ್ಟು ಫೆಡರಲ್ ಖರ್ಚಿನ ಬ್ರಿಟಿಷ್ ಜವಾಬ್ದಾರಿಗಳಿಗೆ ಮತ್ತು ವಿದೇಶಿ ಕರಾರುಗಳಿಗೆ (ಉದಾ. ಸಾಲ ಮರುಪಾವತಿಗಳು, ಪಿಂಚಣಿಗಳು) ಹಣಕಾಸು ಒದಗಿಸುವುದಕ್ಕೆ ಪ್ರೋತ್ಸಾಹ ನೀಡಬಾರದು ಮತ್ತು ಸಾಮಾಜಿಕ ಅಥವಾ ಆರ್ಥಿಕ ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ಕೋರಿಕೆಗಳು ಕಂಡುಬರುವುದಕ್ಕಿಂತ ಮೊದಲೇ ಅವನ್ನು ತೆಗೆದುಹಾಕಬೇಕು. ಭಾರತದ ರಾಜ್ಯ ಕಾರ್ಯದರ್ಶಿಯ ಮೇಲ್ವಿಚಾರಣೆಯಡಿಯಲ್ಲಿ ವೈಸ್ರಾಯ್ಗೆ ತನ್ನ ಸ್ವೇಚ್ಛೆಯಂತೆ ನಡೆಯುವ ಅಧಿಕಾರವನ್ನು ನೀಡಲಾಯಿತು, ಅದು ಅವನಿಗೆ ನಿರಂಕುಶಪ್ರಭುವಿಂತೆ ಆಳಲು ಅನುವು ಮಾಡಿಕೊಟ್ಟಿತು.
ಕಾಯಿದೆಯ ಫೆಡರಲ್ ಭಾಗವನ್ನು ಸಂಪ್ರದಾಯವಾದಿ ಪಕ್ಷದ ಗುರಿಗಳನ್ನು ಸಾಧಿಸುವುದಕ್ಕಾಗಿ ರೂಪಿಸಲಾಯಿತು. ದೀರ್ಘಕಾಲದಿಂದ ಸಂಪ್ರದಾಯವಾದಿ ಮುಖಂಡರು, ಕಾಯಿದೆಯು ನಾಮಮಾತ್ರ ಪರಮಾಧಿಕಾರ-ಸ್ಥಿತಿಯ ಭಾರತವು ಹಿಂದು ರಾಜರ ಒಕ್ಕೂಟ ಮತ್ತು ಬಲ-ಪಂಥಿ ಹಿಂದೂಗಳಿಂದ ಆಳ್ವಿಕೆಗೆ ಒಳಪಡುವಂತೆ ಮಾಡಬೇಕೆಂಬ ನಿರೀಕ್ಷೆಯಲ್ಲಿದ್ದರು, ಅವರನ್ನು ಯುನೈಟೆಡ್ ಕಿಂಗ್ಡಮ್ನ ಮಾರ್ಗದರ್ಶನ ಮತ್ತು ರಕ್ಷಣೆಯಡಿಯಲ್ಲಿ ಸ್ಥಳಗಳಲ್ಲಿ ಸರಿಯಾಗಿ ವ್ಯವಸ್ಥೆಗೊಳಿಸಬಹುದಾಗಿತ್ತು. ಮಧ್ಯಮಾವಧಿಯಲ್ಲಿ ಕಾಯಿದೆಯು ಈ ಕೆಳಗಿನ ನಿರೀಕ್ಷೆಯನ್ನು ಹೊಂದಿತ್ತು:
ರಾಜರನ್ನು ಹೆಚ್ಚಿಗೆ-ಪ್ರತಿನಿಧಿಸುವ ಮೂಲಕ, ಸಂಭಾವ್ಯ ಅಲ್ಪಸಂಖ್ಯಾತರಿಗೆ ಅವರ ಅನುಕ್ರಮ ಸಮುದಾಯಗಳಿಗೆ ಸೇರಿದ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಚುನಾಯಿಸುವ ಹಕ್ಕನ್ನು ನೀಡುವ ಮೂಲಕ (ಪ್ರತ್ಯೇಕ ಚುನಾಯಕ ಸಮುದಾಯವನ್ನು ಗಮನಿಸಿ) ಮತ್ತು ಕಾರ್ಯಾಂಗವನ್ನು ಶಾಸಕಾಂಗದಿಂದ ಪ್ರಾಯೋಗಿಕವಲ್ಲದೆ ಸೈದ್ಧಾಂತಿಕವಾಗಿ ತೆಗೆದುಹಾಕುವ ಮೂಲಕ ಇದನ್ನು ಮಾಡಲಾಯಿತು.
‘ರಾಜರ ಆಳ್ವಿಕೆಗೊಳಪಟ್ಟ ರಾಜ್ಯ ಬನಾರಸ್ನ ಔತಣ ಕೂಟವೊಂದರಲ್ಲಿ ಹೈಲಿಯು ಹೀಗೆಂದು ಹೇಳಿದ್ದಾರೆ - ಹೊಸ ಫೆಡರಲ್ ಸಂವಿಧಾನವು ಕೇಂದ್ರದ ಸರ್ಕಾರದಲ್ಲಿನ ಅದರ ಸ್ಥಾನವನ್ನು ರಕ್ಷಿಸಿಕೊಂಡಿದ್ದರೂ, ರಾಜ್ಯಗಳ ಆಂತರಿಕ ವಿಕಾಸವು ಸಂದಿಗ್ಧ ಅಂಶವಾಗಿ ಉಳಿಯಿತು. ಹೆಚ್ಚಿನವರು ಅವು ಪ್ರಾತಿನಿಧ್ಯದ ಸಂಘಟನೆಗಳ ಅಭಿವೃದ್ಧಿಯನ್ನು ಮಾಡಬಹುದೆಂದು ನಿರೀಕ್ಷಿಸಿದರು. ವೆಸ್ಟ್ಮಿಂಸ್ಟರ್ನ ಆ ಪರದೇಶೀಯ ಕಾರ್ಯವು ಬ್ರಿಟಿಷ್-ಭಾರತದಲ್ಲಿ ಯಶಸ್ವಿಯಾಗಬಹುದಿತ್ತು, ಆದರೆ ಅದೂ ಸಹ ಅಪನಂಬಿಕೆಯನ್ನು ಉಂಟುಮಾಡಿತು. ನಿರಂಕುಶ ಪ್ರಭುತ್ವವು ಭಾರತದ ರಾಜ್ಯಗಳಲ್ಲಿ ಭದ್ರವಾಗಿ ನೆಲೆನಿಂತಿರುವ ಒಂದು ನೀತಿಯಾಗಿದೆ ಎಂದು ಹೇಳುತ್ತಾ ಅವರು ಹೀಗೆಂದು ಮುಂದುವರಿಸಿದ್ದಾರೆ - ಬಹುಹಿಂದಿನ ಸಂಪ್ರದಾಯದ ಪವಿತ್ರ ಕಿಡಿಯನ್ನು ಸುಟ್ಟುಹಾಕಿಬಿಟ್ಟು, ಮೊದಲು ನ್ಯಾಯವಾದ ಅವಕಾಶವನ್ನು ಒದಗಿಸಬೇಕು. ಬುದ್ಧಿವಂತಿಕೆಯಿಂದ ನಡೆಸುವ, ಮಂದಗತಿಯಲ್ಲಿ ನಿರ್ವಹಿಸುವ ಮತ್ತು ಹುರುಪಿನ ಸೇವೆಯೊಂದಿಗೆ ಸಚೇತನಗೊಳಿಸುವ ನಿರಂಕುಶ ಪ್ರಭುತ್ವವು ಭಾರತದಲ್ಲಿ ಪ್ರತಿನಿಧಿಗಳನ್ನೊಳಗೊಂಡ ಮತ್ತು ಜವಾಬ್ದಾರಿಯುತ ಸಂಘಟನೆಗಳಷ್ಟೇ ಪ್ರಬಲವಾಗಿರಬಹುದು. ಈ ಹುರುಪಿನ ವಾದವು ಪ್ರಗತಿಪರ, ಕ್ರಿಯಾಶೀಲ ಪಾಶ್ಚಿಮಾತ್ಯರ ಪ್ರತಿನಿಧಿಗಳು ಹೇಗೆ ಹಿಂದುಳಿದ, ಜಡ ಪೌರೌತ್ಯರ ಹೆಚ್ಚು ಪ್ರತಿಗಾಮಿಯಾದ ಬಲಗಳೊಂದಿಗೆ ಸಂಬಂಧ ಬೆಳೆಸಿದರು ಎಂಬ ನೆಹರುವಿನ ಮೂಲಭೂತ ವಿರುದ್ಧೋಕ್ತಿಯನ್ನು ನೆನಪಿಗೆ ತರುತ್ತದೆ.’
ಕಾಯಿದೆಯಡಿಯಲ್ಲಿ,
‘ಫೆಡರಲ್ ಶಾಸಕಾಂಗದಲ್ಲಿ ಸ್ವಾತಂತ್ರ್ಯಾದ ಚರ್ಚೆಗೆ ಹಲವಾರು ನಿರ್ಬಂಧಗಳಿವೆ. ಉದಾಹರಣೆಗಾಗಿ, ಭಾರತದ ರಾಜ್ಯಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಅಥವಾ ಚರ್ಚೆ ಮಾಡುವುದನ್ನು ಕಾಯಿದೆಯು ನಿಷೇಧಿಸುತ್ತದೆ. ಆ ವಿಷಯವು ಆ ರಾಜ್ಯಕ್ಕೆ ಫೆಡರಲ್ ಶಾಸಕಾಂಗವು ಕಾನೂನುಗಳನ್ನು ಮಾಡುವ ಅಧಿಕಾರವನ್ನು ಹೊಂದಿರುವ ವಿಷಯವಾಗಿರಬಾರದು, ಗವರ್ನರ್ ಜನರಲ್ ತನ್ನ ನಿರ್ಧಾರ ಸ್ವಾತಂತ್ರ್ಯದಲ್ಲಿ ಆ ವಿಷಯವು ಫೆಡರಲ್ ಆಸಕ್ತಿಗಳ ಮೇಲೆ ಅಥವಾ ಬ್ರಿಟಿಷ್ ವಿಷಯದ ಮೇಲೆ ಪ್ರಭಾವ ಬೀರುತ್ತದೆಂದು ಎಂದು ಭಾವಿಸಬಾರದು. ಆ ವಿಷಯವನ್ನು ಚರ್ಚಿಸಬಹುದು ಅಥವಾ ಆ ಪ್ರಶ್ನೆಯನ್ನು ಕೇಳಬಹುದು ಎಂದು ಆತನು ತನ್ನ ಒಪ್ಪಿಗೆಯನ್ನು ನೀಡಿದರೆ ಮಾತ್ರ ಮುಂದುವರಿಯಬಹುದು.’
‘ನಿಜವಾಗಿಯೂ ಒಬ್ಬ ಭಾರತೀಯನು ಕಾಳಜಿವಹಿಸುವ ವಿಷಯದ ಬಗ್ಗೆ ನೀವು ಮಧ್ಯಪ್ರವೇಶಿಸಲು ಪ್ರಯತ್ನಿಸುವಾಗ ಆ ಪ್ರದರ್ಶನಾವಕಾಶವು ಆತನ ದೃಷ್ಟಿಕೋನದಲ್ಲಿ ಗೌರವಯುತವಾಗಿ ಕಾಣುವಂತೆ ಮಾಡುವ ರೀತಿಯಲ್ಲಿ ಸಮಸ್ಯೆಯನ್ನು ಪ್ರಕಟಪಡಿಸುವುದು ಅಸಾಧ್ಯವೆಂಬುದನ್ನು ನಾನು ನಂಬುವುದಿಲ್ಲ. (ಇರ್ವಿನ್ ಟು ಸ್ಟೋನ್ಹೆವನ್, 12 ನವೆಂಬರ್ 1928)
ಭಾರತದ ಯಾವುದೇ ಪ್ರಮುಖ ಗುಂಪು ಕಾಯಿದೆಯ ಫೆಡರಲ್ ಭಾಗವನ್ನು ಸ್ವೀಕರಿಸಲಿಲ್ಲ. ಒಂದು ಸಾಂಕೇತಿಕ ಪ್ರತಿಕ್ರಿಯೆಯೆಂದರೆ:
‘ಪ್ರತಿ ಸರ್ಕಾರವು ಹೆಸರಿಗೆ ಅರ್ಹವಾಗಿರಬೇಕಾದರೆ ಹೊಂದಿರಬೇಕಾದ ಐದು ಅಂಶಗಳಿವೆ: (a) ಬಾಹ್ಯ ಮತ್ತು ಆಂತರಿಕ ರಕ್ಷಣೆಯ ಹಕ್ಕು ಹಾಗೂ ಆ ಕಾರಣಕ್ಕಾಗಿ ಎಲ್ಲಾ ಸಾಧನಗಳನ್ನು ಹೊಂದಿರುವುದು; (b) ನಮ್ಮ ಹೊರಗಿನ ಸಂಬಂಧಗಳನ್ನು ನಿಯಂತ್ರಿಸುವ ಹಕ್ಕು; (c) ನಮ್ಮ ಚಲಾವಣೆಯಲ್ಲಿರುವ ನಾಣ್ಯ, ನೋಟು(ಕರೆನ್ಸಿ) ಮತ್ತು ವಿನಿಮಯ ದರವನ್ನು ನಿಯಂತ್ರಿಸುವ ಹಕ್ಕು; (d) ನಮ್ಮ ಹಣಕಾಸಿನ ನೀತಿಯನ್ನು ನಿಯಂತ್ರಿಸುವ ಹಕ್ಕು; (e) ಆಸ್ತಿಯ ದಿನ-ದಿನದ ನಿರ್ವಹಣೆ. (ಕಾಯಿದೆಯಡಿಯಲ್ಲಿ) ಹೊರಗಿನ ವ್ಯವಹಾರಗಳೊಂದಿಗೆ ನಿಮಗೆ ಏನನ್ನೂ ಮಾಡಲಾಗುವುದಿಲ್ಲ. ರಕ್ಷಣೆಯೊಂದಿಗೆ ನಿಮಗೆ ಏನನ್ನೂ ಮಾಡಲಾಗುವುದಿಲ್ಲ. ಭವಿಷ್ಯದ ಎಲ್ಲಾ ಪ್ರಾಯೋಗಿಕ ಕಾರಣಗಳಿಗೆ ನಿಮ್ಮ ಕರೆನ್ಸಿ ಮತ್ತು ವಿನಿಮಯ ದರದೊಂದಿಗೆ ಏನನ್ನೂ ಮಾಡಲಾಗುವುದಿಲ್ಲ. ಅಂಗೀಕಾರವಾದ ರಿಸರ್ವ್ ಬ್ಯಾಂಕ್ ಮಸೂದೆಯು ಸಂವಿಧಾನದಲ್ಲಿ ಒಂದು ಹೆಚ್ಚುವರಿ ಮೀಸಲಾತಿ ಹಕ್ಕನ್ನು ಹೊಂದಿದೆ, ಅದೆಂದರೆ ಗವರ್ನರ್-ಜನರಲ್ನ ಒಪ್ಪಿಗೆಯಿಲ್ಲದೆ ಕಾಯಿದೆಯ ಪ್ರಸ್ತಾಪಗಳನ್ನು ಬದಲಾವಣೆಗೊಳಿಸುವ ಉದ್ದೇಶದೊಂದಿಗೆ ಯಾವುದೇ ಕಾನೂನನ್ನು ಮಾಡಬಾರದು. ಕೇಂದ್ರದಲ್ಲಿ ಯಾವುದೇ ನೈಜ ಅಧಿಕಾರವಿರಲಿಲ್ಲ. (1935ರ ಫೆಬ್ರವರಿ 4ರಂದು ಭಾರತೀಯ ಸಂವಿಧಾನಾತ್ಮಕ ಸುಧಾರಣೆಗಾಗಿ ರಚಿಸಿದ ಜಂಟಿ ಸಂಸತ್ತು ಸಮಿತಿಯ ವರದಿ ಒಪ್ಪಿಸುವಾಗ ಭುಲಭೈ ದೇಸಾಯಿ ಮಾಡಿದ ಭಾಷಣ).
ಆದರೆ ಲಿಬರಲ್ ಪಕ್ಷಗಳು ಮತ್ತು ಕಾಂಗ್ರೆಸ್ಸಿನ ಘಟಕಗಳು ಇದನ್ನು ಉತ್ಸಾಹರಹಿತವಾಗಿ ನಿರಾಕರಿಸಲು ಬಯಸಿದವು:
“ಲಿನ್ಲಿತ್ಗೊ 1935ರ ಕಾಯಿದೆಯ ಯೋಜನೆಗೆ ಸೂಕ್ತವಾದ ಪರ್ಯಾಯವಿದೆ ಎಂದು ಭಾವಿಸುತ್ತೀರಾ ಎಂದು ಸ್ಯಾಪ್ರುವನ್ನು ಕೇಳಿದರು. ನಾವು ಕಾಯಿದೆಯ ಮತ್ತು ಅದು ಒಳಗೊಂಡ ಫೆಡೆರಲ್ ಯೋಜನೆಗಳ ಆಧಾರದಲ್ಲಿ ದೃಢವಾಗಿ ನಿಲ್ಲಬೇಕೆಂದು ಸ್ಯಾಪ್ರು ಪ್ರತಿಕ್ರಿಯಿಸಿದರು. ಇದು ಆದರ್ಶಪ್ರಾಯವಾದುದಲ್ಲ, ಆದರೆ ಈ ಸಂದರ್ಭದಲ್ಲಿ ಇದನ್ನು ಮಾತ್ರ ಮಾಡಲು ಸಾಧ್ಯ. ಸ್ಯಾಪ್ರು ಭೇಟಿನೀಡಿದ ಕೆಲವು ದಿನಗಳ ನಂತರ ಬಿರ್ಲಾ ವೈಸ್ರಾಯ್ನನ್ನು ಭೇಟಿಯಾಗಲು ಬಂದರು. ಕಾಂಗ್ರೆಸ್ ಒಕ್ಕೂಟವನ್ನು ಸ್ವೀಕರಿಸುವತ್ತಾ ಸಾಗುತ್ತಿದೆಯೆಂದು ತಿಳಿದರು. ರಕ್ಷಣೆ ಮತ್ತು ಬಾಹ್ಯ ವ್ಯವಹಾರಗಳನ್ನು ಕೇಂದ್ರಕ್ಕೆ ಮೀಸಲು ಮಾಡುವುದರಿಂದ ಗಾಂಧಿ ಹೆಚ್ಚು ಚಿಂತಿತರಾಗಿಲ್ಲ, ಆದರೆ ರಾಜ್ಯಗಳ ಪ್ರತಿನಿಧಿಗಳನ್ನು ಆರಿಸುವ ವಿಧಾನದ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿದ್ದಾರೆಂದು ಬಿರ್ಲಾ ಹೇಳಿದರು. ಪ್ರತಿನಿಧಿಗಳನ್ನು ಪ್ರಜಾಪ್ರಭುತ್ವೀಯ ಚುನಾವಣೆಯಿಂದ ಆರಿಸುವಂತೆ ಅಸಂಖ್ಯಾತ ರಾಜರನ್ನು ಮನವೊಪ್ಪಿಸುವ ಮೂಲಕ ವೈಸ್ರಾಯ್ ಗಾಂಧಿಗೆ ಸಹಾಯ ಮಾಡಬೇಕೆಂದು ಬಿರ್ಲಾ ಬಯಸಿದರು. ಒಕ್ಕೂಟವು ಅಸ್ತಿತ್ವಕ್ಕೆ ಬರಲು ಇರುವ ಏಕೈಕ ಅವಕಾಶವೆಂದರೆ ಸರ್ಕಾರ ಮತ್ತು ಕಾಂಗ್ರೆಸ್ಸಿನ ನಡುವಿನ ಒಪ್ಪಂದ ಹಾಗೂ ವೈಸ್ರಾಯ್ ಮತ್ತು ಗಾಂಧಿಯ ನಡುವಿನ ಮಾತುಕತೆ ಮಾತ್ರ ಇದರ ಅಸ್ತಿತ್ವಕ್ಕಿರುವ ಮುಖ್ಯ ಆಶಯವಾಗಿದೆ ಎಂದು ಬಿರ್ಲಾ ಹೇಳಿದರು.”
ಬ್ರಿಟಿಷ್ ಸರ್ಕಾರವು ಕಾಯಿದೆಯನ್ನು ಪರಿಣಾಮಕಾರಿಯಾಗುವಂತೆ ಮಾಡುವ ಷರತ್ತಿನೊಂದಿಗೆ ಲಾರ್ಡ್ ಲಿನ್ಲಿತ್ಗೊವನ್ನು ಹೊಸ ವೈಸ್ರಾಯ್ ಆಗಿ ಕಳುಹಿಸಿತು. ಲಿನ್ಲಿತ್ಗೊ ಒಬ್ಬ ಬುದ್ಧಿವಂತ, ಬಹಳ ಕಷ್ಟ ಪಟ್ಟು ದುಡಿಯುವ, ಪ್ರಾಮಾಣಿಕ, ಗಂಭೀರ ವ್ಯಕ್ತಿಯಾಗಿದ್ದರು ಮತ್ತು ಅವರು ಕಾಯಿದೆಯನ್ನು ಯಶಸ್ಸುಗೊಳಿಸುವ ನಿರ್ಧಾರವನ್ನು ಮಾಡಿದರು. ಆದರೆ ಅವರೂ ಸಹ ಕಲ್ಪನಾಶೂನ್ಯ, ಜಡ, ಕಾನೂನುವಾದಿಯಾಗಿದ್ದರು ಮತ್ತು ತನ್ನ ವ್ಯಾಪ್ತಿಯಿಂದ ಹೊರಗಿನವರೊಂದಿಗೆ ಅದನ್ನು ನಿಯಮಗಳಿಗೆ ಬದ್ಧವಾಗಿ ಮಾಡುವುದು ಆತನಿಗೆ ಕಷ್ಟವಾಗಿ ಕಂಡುಬಂತು. 1937ರಲ್ಲಿ, ಮುಖಾಮುಖಿ ಒಪ್ಪಂದದ ನಂತರ ಪ್ರಾಂತೀಯ ಸ್ವಯಮಾಧಿಪತ್ಯವು ಆರಂಭವಾಯಿತು. ಅಲ್ಲಿಂದ 1939ರ ಯುದ್ಧದ ಘೋಷಣೆಯವರೆಗೆ, ಲಿನ್ಲಿತ್ಗೊ ಒಕ್ಕೂಟವನ್ನು ಆರಂಭಿಸುವ ಬಗ್ಗೆ ಸಾಕಷ್ಟು ರಾಜರ ಒಪ್ಪಿಗೆಯನ್ನು ಪಡೆಯಲು ತುಂಬಾ ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಅವರು ದೇಶೀಯ ಸರ್ಕಾರದಿಂದ ಅತಿ ಕೆಳಮಟ್ಟದ ಆಧಾರವನ್ನು ಪಡೆದರು ಮತ್ತು ಕೊನೆಯಲ್ಲಿ ರಾಜರು ಒಟ್ಟಾಗಿ ಒಕ್ಕೂಟವನ್ನು ನಿರಾಕರಿಸಿದರು. 1939ರ ಸೆಪ್ಟೆಂಬರ್ನಲ್ಲಿ, ಲಿನ್ಲಿತ್ಗೊ ಭಾರತವು ಜರ್ಮನಿಯೊಂದಿಗೆ ಕದನದಲ್ಲಿದೆಯೆಂದು ಸುಮ್ಮನೆ ಘೋಷಿಸಿದರು. ಲಿನ್ಲಿತ್ಗೊರ ಈ ವರ್ತನೆಯು ಸಂವಿಧಾನಾತ್ಮಕವಾಗಿ ಸರಿಯಾಗಿದ್ದರೂ, ಹೆಚ್ಚಿನ ಭಾರತೀಯರ ಅಭಿಪ್ರಾಯಕ್ಕೆ ಅವಮಾನಿಸುವಂತಿತ್ತು. ಇದು ನೇರವಾಗಿ ಭಾರತೀಯರ ಒಗ್ಗಟ್ಟನ್ನು ಒಳಗೊಳಗೆ ಹಾಳುಮಾಡಿದ ಕಾಂಗ್ರೆಸ್ ಪ್ರಾಂತೀಯ ಮಂತ್ರಿಮಂಡಲದ ರಾಜೀನಾಮೆಗೆ ಕಾರಣವಾಯಿತು. 1939ರಿಂದ ಲಿನ್ಲಿತ್ಗೊ ಯುದ್ಧಕ್ಕೆ ಸಹಾಯ ಒದಗಿಸುವುದರ ಬಗ್ಗೆ ಗಮನ ಹರಿಸಲು ಆರಂಭಿಸಿದರು.
1 ^ ಕೀಯ್, ಜಾನ್. ಇಂಡಿಯಾ: ಎ ಹಿಸ್ಟರಿ . ಗ್ರೂವ್ ಪ್ರೆಸ್ ಬುಕ್ಸ್, ಪಬ್ಲಿಷರ್ಸ್ ಗ್ರೂಪ್ ವೆಸ್ಟ್ನಿಂದ ಹಂಚಿಕೆಯಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನ: 2000 ISBN 0-8021-3797-0, ಪುಟಗಳು 490 2 ^ ಕೀಯ್, ಜಾನ್. ಇಂಡಿಯಾ: ಎ ಹಿಸ್ಟರಿ . ಗ್ರೂವ್ ಪ್ರೆಸ್ ಬುಕ್ಸ್, ಪಬ್ಲಿಷರ್ಸ್ ಗ್ರೂಪ್ ವೆಸ್ಟ್ನಿಂದ ಹಂಚಿಕೆಯಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನ: 2000 ISBN 0-8021-3797-0, ಪುಟಗಳು 490
This article uses material from the Wikipedia ಕನ್ನಡ article 1935ರ ಭಾರತ ಸರ್ಕಾರ ಕಾಯಿದೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.