ಮೂಢನಂಬಿಕೆಗಳು: ಮೂಢ ನಂಬಿಕೆ

  1. 'ಮೂಢನಂಬಿಕೆಗಳು' ಎಲ್ಲ ಕಾಲದ ಎಲ್ಲ ದೇಶದ ಎಲ್ಲ ಜನಾಂಗಗಳಲ್ಲುಂಟಾದರೂ, ಈ ದಿನ ಭಾರತೀಯರಿಗೆ ಮಾತ್ರ ಮೂಢನಂಬಿಕೆ ಹೆಚ್ಚೆಂದೂ ವಾದಿಸುವವರನ್ನು ನಾವು ಕಾಣುತ್ತಿದ್ದೇವೆ. ಭಾರತೀಯರು ಮೂಢನಂಬಿಕೆಗಳಿಂದಲೇ ಹಿಂದೆ ಉಳಿದಿದ್ದಾರೆ ಎಂಬ ಮಾತು ಆಗಗ್ಗೆ ಕೇಳಿ ಬರುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ವಿಚಾರಾರ್ಹವಾಗಿದೆ. ಯಾರು ದೇವರನ್ನು ಕುರಿತು ಪೂಜೆ, ಹರಕೆ, ಇತ್ಯಾದಿಗಳನ್ನು ಮಾಡುತ್ತಿರುವರೋ ಅವರ ಕ್ರಿಯೆಗಳಿಗೆಲ್ಲ ಮೂಢನಂಬಿಕೆಗಳೇ ಕಾರಣವೆಂದೂ, ದೇವರ ಅಸ್ತಿತ್ವವನ್ನು ಒಪ್ಪದವರೆಲ್ಲ ಮೂಢನಂಬಿಕೆಯ ಸರಹದ್ದಿನಿಂದ ದೂರ ಸರಿದಿರುವ ಪ್ರಜ್ಞಾವಂತ ವೈಚಾರಿಕ ಮನುಷ್ಯರೆಂದೂ ಅಬ್ಬರಿಸಿ ಹೇಳುವುದುಂಟು. ಆದರೆ ಯಾವ ನಂಬಿಕೆಗಳಲ್ಲಿ ಮೌಢ್ಯತೆ ತುಂಬಿರುವುದೋ ಅದನ್ನು ಮೂಢನಂಬಿಕೆಗಳೆಂದು ಕರೆಯುವುದು ಯುಕ್ತ.


ಒಂದು ದೃಷ್ಟಿಯಲ್ಲಿ ಆಳವಾಗಿ ಆಲೋಚನೆ ಮಾಡಿದರೆ ನಮ್ಮ ದೇಶದ ಸಿದ್ಧಾಂತಕ್ಕೂ, ಮೂಢನಂಬಿಕೆಗೂ ನೇರ ಸಂಬಂಧವಿಲ್ಲವೆನ್ನಬಹುದು. ಭಗವಂತನು ಸರ್ವಶಕ್ತ ಎಂದು ನಮ್ಮ ತತ್ವಗಳು ಹೇಳಿದ್ದನ್ನು ನಿಲ್ಲಿಸಿ ಹೇಗಿದ್ದರೂ ದೇವರು ಸರ್ವಶಕ್ತನಾಗಿರುವುದರಿಂದ ಓದದೆ ಪಾಸಾಗಲಿ, ಕೆಲಸ ಮಾಡದೆ ಬಡ್ತಿ ದೊರೆಯಲಿ, ದುಡಿಯದೆ ಹಣ ಬರಲಿ ಎಂಬ ಕೆಟ್ಟ ಸ್ವಾರ್ಥಪರ ದೃಷ್ಟಿಯಿಂದ ದೇವರನ್ನು ಪೂಜಿಸಲಾರಂಬಿಸಿದರು. ಒಂದೊಂದರ ಪರಿಹಾರಕ್ಕೆ ಒಂದೊಂದು ಬಗೆಯ ಪೂಜೆ ಮಾಡಬೇಕೆಂದು ಆಯಾ ದೇಶ-ಜನಾಂಗಗಳಲ್ಲಿ ಒಂದೊಂದು ಬಗೆಯಾಗಿ ನಿರ್ಣಯವಾಯಿತು. ಮಾನವನು ಜೀವನದಲ್ಲಿ ಅವನಷ್ಟೇ ಪ್ರಾಮಾಣಿಕವಾಗಿದ್ದರೂ ಹಲವು ಪ್ರಸಂಗಗಳಲ್ಲಿ ಅವನು ಸೋಲಬಹುದು. ಅಂತಹ ಸಂದರ್ಭದಲ್ಲಿ ಅವನು ಹುಚ್ಚನಾಗದಿರಬೇಕಾದರೆ ತನ್ನ ಅಭಿವೃದ್ಧಿಗೆ ದೈವಚಿತ್ತವಿಲ್ಲವೆಂದು ಸಮಾಧಾನಪಟ್ಟು ಕರ್ತವ್ಯಪರಾಜ್ಮಖನಾಗಿ ಬಾಳದಿರುವ ಆತ್ಮಶಕ್ತಿಯನ್ನು ಬೆಳೆಸಿಕೊಳ್ಳುವಂತೆ ನಮ್ಮ ಧರ್ಮ ನಮಗೆ ಉಪದೇಶಿಸಿದೆ. "ಕರ್ತವ್ಯವನ್ನು ಮಾಡು, ಫಲವನ್ನು ನಿರೀಕ್ಷಿಸದಿರು" ಎಂದು ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳಿದನು. ಆದರೆ ತಿಳಿಯದೆ ಜನ ದೇವರ-ಧರ್ಮದ ಹೆಸರಿನಲ್ಲಿ ಮೂಢನಂಬಿಕೆಗಳನ್ನು ಬೆಳೆಸಿಕೊಂಡು ತೊಳಲಾಡುತ್ತಿದ್ದಾರೆ. ಮೂಢನಂಬಿಕೆಗಳಿಗೆ ಧರ್ಮ-ದೇವರು ಕಾರಣವಲ್ಲ. ಮಾನವನ ಸ್ವಾರ್ಥ ಕಾರಣ.

Tags:

🔥 Trending searches on Wiki ಕನ್ನಡ:

ಹರಿಹರ (ಕವಿ)ಎಸ್.ಎಲ್. ಭೈರಪ್ಪಧೃತರಾಷ್ಟ್ರಕನಕಪುರಭಾರತದಲ್ಲಿ ಪಂಚಾಯತ್ ರಾಜ್ಭಾರತದ ಇತಿಹಾಸಆಂಧ್ರ ಪ್ರದೇಶರಾಗಿಸ್ತ್ರೀಮಿಂಚುಉತ್ತರ ಕನ್ನಡಬೆಳ್ಳುಳ್ಳಿವರ್ಣಾಶ್ರಮ ಪದ್ಧತಿಹಸ್ತ ಮೈಥುನಬಸವೇಶ್ವರಪ್ರಜಾವಾಣಿತತ್ಸಮ-ತದ್ಭವಅಮೃತಬಳ್ಳಿಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಮೂಢನಂಬಿಕೆಗಳುಪಂಚಾಂಗಕ್ರೀಡೆಗಳುಬಿ.ಎಲ್.ರೈಸ್ನೈಸರ್ಗಿಕ ಸಂಪನ್ಮೂಲಶುಂಠಿರೋಮನ್ ಸಾಮ್ರಾಜ್ಯಹರಿಶ್ಚಂದ್ರಭ್ರಷ್ಟಾಚಾರನಿರಂಜನಕರ್ನಾಟಕದ ತಾಲೂಕುಗಳುಸೀಮೆ ಹುಣಸೆಚಿತ್ರದುರ್ಗ ಕೋಟೆಗ್ರಂಥ ಸಂಪಾದನೆಕರಡಿಹಾಸನ ಜಿಲ್ಲೆಹಸಿರುಸಂಸ್ಕೃತಿವಾಣಿಜ್ಯ(ವ್ಯಾಪಾರ)ಸಾಲುಮರದ ತಿಮ್ಮಕ್ಕಮೌರ್ಯ ಸಾಮ್ರಾಜ್ಯಜೈನ ಧರ್ಮಚಿಲ್ಲರೆ ವ್ಯಾಪಾರಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕೈಗಾರಿಕೆಗಳುಕಾರ್ಮಿಕರ ದಿನಾಚರಣೆಭಾರತ ಸರ್ಕಾರಚನ್ನವೀರ ಕಣವಿಸಂಸ್ಕಾರಪೊನ್ನಸಮಾಸಪ್ಯಾರಾಸಿಟಮಾಲ್ಎ.ಪಿ.ಜೆ.ಅಬ್ದುಲ್ ಕಲಾಂಜನಪದ ಕಲೆಗಳುಕನ್ನಡ ಛಂದಸ್ಸುಕನ್ನಡ ರಂಗಭೂಮಿಬಾವಲಿಹಲ್ಮಿಡಿಆದಿಪುರಾಣಮಾದರ ಚೆನ್ನಯ್ಯಹಿರಿಯಡ್ಕತಮಿಳುನಾಡುಪಠ್ಯಪುಸ್ತಕಡಿ. ದೇವರಾಜ ಅರಸ್ಭಾರತೀಯ ಸಂವಿಧಾನದ ತಿದ್ದುಪಡಿಅಂಶಗಣಕದಂಬ ರಾಜವಂಶಪರಿಸರ ಕಾನೂನುಗ್ರಾಮ ದೇವತೆಎಕರೆಜಾತ್ರೆಜಾತಿಕರ್ನಾಟಕದ ಅಣೆಕಟ್ಟುಗಳುಉಡುಪಿ ಜಿಲ್ಲೆರಕ್ತಪಿಶಾಚಿಶೂದ್ರ ತಪಸ್ವಿರಾಮಾಯಣ🡆 More