48°42′N 44°31′E / 48.700°N 44.517°E / 48.700; 44.517
ಎರಡನೇ ಜಾಗತೀಕ ಯುದ್ಧದಲ್ಲಿ ಸ್ಟ್ಯಾಲಿನ್ಗ್ರಾಡ್ ಸಮರ ಕ್ಕೆ ಅದರದ್ದೇ ಆದ ಮಹತ್ವವಿದೆ. ಈ ಸಮರದಲ್ಲಿ ನಾಜಿ ಜರ್ಮನಿ ತನ್ನ ಮಿತ್ರಕೂಟದೊಂದಿಗೆ ಸೋವಿಯತ್ ಯೂನಿಯನ್ ಮೇಲೆ ಹಿಡಿತ ಸಾಧಿಸಲು ರಷ್ಯಾದ ನೈರುತ್ಯ ಭಾಗದಲ್ಲಿರುವ ಸ್ಟ್ಯಾಲಿನ್ಗ್ರಾಡ್ (ಈಗಿನ ಒಲ್ಗೊಗ್ರಾದ್) ನಗರದಲ್ಲಿ ಘನಘೋರ ಹೋರಾಟಕ್ಕಿಳಿದಿತ್ತು. 1942 ಜುಲೈ 17 ಹಾಗೂ 1943 ಫೆಬ್ರುವರಿ 2ರ ನಡುವೆ ನಡೆದ ಈ ಕದನ ಒಂದರ್ಥದಲ್ಲಿ ಜರ್ಮನಿಯ ಪಾಲಿಗೆ ಮಾರಣಾಂತಿಕವಾಗಿ ಪರಿಗಣಿಸಿತ್ತು. ಪೂರ್ವ ರಾಷ್ಟ್ರಗಳನ್ನು ತನ್ನ ಹಿಡಿತಕ್ಕೆ ತರಬೇಕೆಂದಿದ್ದ ಅದರ ಮಹತ್ವಾಕಾಂಕ್ಷೆಗೆ ಎಳ್ಳು-ನೀರು ಬಿಟ್ಟಿತ್ತು. ಮಾತ್ರವಲ್ಲ, ಯುದ್ಧದ ಅಲೆಯನ್ನು ಮಿತ್ರಕೂಟದ ಪರವಾಗಿ ತಿರುಗಿಸಿತ್ತು. ಸಮಕಾಲೀನ ರಾಜಕೀಯ ವಿಶ್ಲೇಷಕರು ಸೋವಿಯತ್ ರಾಷ್ಟ್ರದ ಈ ವಿಜಯವನ್ನು ಯೂರೋಪಿಯನ್ ನಾಗರಿಕತೆಗೆ ಪ್ರಾಪ್ತವಾದ ಮುಕ್ತಿ ಎಂದೇ ರಂಗ್ಣಿಸುತ್ತಾರೆ.
ಈ ಯುದ್ಧದಲ್ಲಿ ಈಸ್ಟರ್ನ್ ಫ್ರಂಟ್ಗಿಂತ ಹೆಚ್ಚಿನ ದೇಶಗಳು ಇದರಲ್ಲಿ ಪಾಲ್ಗೊಂಡಿದ್ದವು. ಮುಗಿಲು ಮುಟ್ಟಿದ ಕ್ರೌರ್ಯ ಹಾಗೂ ಎಲ್ಲೆ ಮೀರಿದ ಮಿಲಿಟರಿ ಮತ್ತು ನಾಗರಿಕ ಸಾವು-ನೋವುಗಳಿಂದಾಗಿ ಈ ಯುದ್ಧ ಮನುಕುಲದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಎರಡೂ ಬದಿಗೆ ಸುಮಾರು ಎರಡು ಮಿಲಿಯನ್ ಜನತೆ ಈ ಯುದ್ಧದ ನೇರ ಬಲಿಪಶುಗಳಾಗುವ ಮೂಲಕ ಜಾಗತಿಕ ಯುದ್ಧ ಇತಿಹಾಸದಲ್ಲಿಯೇ ಅತ್ಯಂತ ರಕ್ತಸಿಕ್ತ ಯುದ್ಧಗಳಲ್ಲಿ ಒಂದು ಎಂಬ ಕುಖ್ಯಾತಿಯೂ ಇದಕ್ಕಿದೆ.
ಸ್ಟ್ಯಾಲಿನ್ಗ್ರಾಡ್ ವಶಪಡಿಸಿಕೊಳ್ಳುವ ಜರ್ಮನಿಯ ವಿನಾಶಕಾರಿ ಯೋಜನೆಗೆ ಚಾಲನೆ ದೊರೆತಿದ್ದು 1942ರಲ್ಲಿ. ಅದಕ್ಕೆ ಮುನ್ನುಡಿಯಂತೆ ಜರ್ಮನಿಯ ಲುಫ್ಟ್ವಾಫೆ ವಾಯುಪಡೆ ನಡೆಸಿದ ಸರಣಿ ಬಾಂಬ್ ದಾಳಿ ಇಡೀ ಸ್ಟ್ಯಾಲಿನ್ಗ್ರಾಡ್ ನಗರವನ್ನೇ ಹಾಳು ಹಂಪೆಯನ್ನಾಗಿಸಿತ್ತು. ಅದಾಗ್ಯೂ, ಜರ್ಮನಿಯ ಆಕ್ರಮಣವನ್ನು ನಗರದ ಗಲ್ಲಿ-ಗಲ್ಲಿಗಳಲ್ಲೂ ಸೆದೆಬಡಿಯಲಾಯಿತು. ಶೇ.90ರಷ್ಟು ನಗರವನ್ನು ವಶಪಡಿಸಿಕೊಂಡಾಗ್ಯೂ ಜರ್ಮನಿಯ ’ವ್ಯಾಮಾ’ (ವೇರ್ಮಾಹ್ಟ್ ) ಸೇನಾಪಡೆ ಸೋವಿಯತ್ ಹೋರಾಟಗಾರರನ್ನು ಎದುರಿಸುವಲ್ಲಿ ವಿಫಲಗೊಂಡಿತು. ಅಂತಿಮವಾಗಿ ಶುರುವಾದ ಮಳೆ ಹಾಗೂ ಮೈಕೊರೆಯುವ ಚಳಿಯ ವಾತಾವರಣ ವೈಪರಿತ್ಯವನ್ನೇ ಬಳಸಿಕೊಂಡು ವೋಲ್ಗಾ ನದಿಯ ದಂಡೆಗೆ ಉಡದಂತೆ ಹಿಡಿದು ಹೋರಾಡಿದ ಸೋವಿಯತ್ ಸೈನಿಕರು ಕೊನೆಗೂ ಜರ್ಮನಿಯ ನಡು ಮುರಿಯುವುದರಲ್ಲಿ ಯಶಸ್ವಿಯಾದರು.
1942 ನವೆಂಬರ್ನಲ್ಲಿ ರಷ್ಯಾದ ರೆಡ್ ಆರ್ಮಿ ತನ್ನ ಆಪರೇಷನ್ ಯುರೇನಸ್ ಅನ್ನು ಪ್ರಾರಂಭಿಸಿತು. ಆ ಮೂಲಕ ಸ್ಟ್ಯಾಲಿನ್ಗ್ರಾಡ್ನಲ್ಲಿ ನೆಲೆ ಬಿಟ್ಟಿದ್ದ ಜರ್ಮನಿಯ 6ನೇ ಆರ್ಮಿ ಮೇಲೆ ಏಕಾಏಕಿ ಎರಡೂ ದಿಕ್ಕುಗಳಿಂದ ಮಾರಣಾಂತಿಕ ಆಕ್ರಮಣ ಮಾಡಿತು. ಈ ಕಾರ್ಯಾಚರಣೆ ಯುದ್ಧದ ನಡೆಯನ್ನೇ ನಾಟಕೀಯವಾಗಿ ಬದಲಾಯಿಸಿಬಿಟ್ಟಿತ್ತು. ಆಗ ತಾನೇ ಶಿಥಿಲಗೊಂಡಿದ್ದ ಜರ್ಮನಿಯ ಸೇನೆಯ ಆತ್ಮವಿಶ್ವಾಸದ ಮೇಲೆ ಈ ಕಾರ್ಯಾಚರಣೆ ಯಾವ ಬಗೆಯಲ್ಲಿ ಪ್ರಹಾರ ನಡೆಸಿತೆಂದರೆ ಜರ್ಮನಿಯ 6ನೇ ಆರ್ಮಿ ಸ್ಟ್ಯಾಲಿನ್ಗ್ರಾಡ್ನಲ್ಲಿ ಸಂಪೂರ್ಣ ಶರಣಾಯಿತು. ರಷ್ಯಾದ ಮೈ ಕೊರೆಯುವ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೇ ಜರ್ಮನಿಯ ಸೇನೆ ಚಳಿ, ಹಸಿವು ಹಾಗೂ ಎಡೆಬಿಡದೇ ಮೈಮೇಲೆ ಎರಗುತ್ತಿದ್ದ ಸೋವಿತ್ ಸೇನೆಯಿಂದಾಗಿ ಜರ್ಮನಿಯ ಸೇನೆ ದುರ್ಬಲಗೊಳ್ಳತೊಡಗಿತು. “ಇಚ್ಛಾಶಕ್ತಿಯ ಬಲ” ಹಾಗೂ ಎಂಥದ್ದನ್ನೇ ಆದರೂ ಎದುರಿಸಿ ನಿಲ್ಲಬೇಕಾದ ಆತ್ಮಬಲ ಮುಂತಾದ ಹಿಟ್ಲರ್ನ ಉದ್ಘೋಷಣೆಯ ದೆಸೆಯಿಂದಾಗಿ ಸೇನೆಯನ್ನು ಮುನ್ನಡೆಸಬೇಕಾದ ಸೇನಾಧಿಕಾರಿಗಳ ಗೊಂದಲದ ನಡುವೆಯೂ ಸೇನೆ ತನ್ನೆಲ್ಲಾ ಶಕ್ತಿಯನ್ನು ಬಳಸಿಕೊಂಡು ನಿಂತು ಕಾದಾಡುತ್ತಿತ್ತು. ಡಿಸೆಂಬರ್ನಲ್ಲಿ ತನ್ನ ಸುತ್ತ ಇದ್ದ ವ್ಯೂಹವನ್ನು ಬೇಧಿಸುವ ಜರ್ಮನಿ ಸೈನ್ಯಯ ಪ್ರಯತ್ನ ವಿಫಲಗೊಂಡಿತು ಹಾಗೂ ಎಲ್ಲಾ ಸರಬರಾಜುಗಳೂ ಸ್ಥಗಿತಗೊಂಡವು. 1943 ಫೆಬ್ರುವರಿ ತಿಂಗಳ ಮೊದಲ ಭಾಗದಲ್ಲಿ ಸ್ಟ್ಯಾಲಿನ್ಗ್ರಾಡ್ನಲ್ಲಿನ ಜರ್ಮನಿಯ ಪ್ರತಿರೋಧ ಸಂಪೂರ್ಣವಾಗಿ ಸ್ಥಗಿತಗೊಂಡಿತು ಹಾಗೂ 6ನೇ ಆರ್ಮಿ ಸಂಪೂರ್ಣವಾಗಿ ನಾಶಗೊಂಡಿತು.
1941 ಜೂನ್ 22ರಂದು ಜರ್ಮನಿ ಆಪರೇಷನ್ ಬಾರ್ಬರೋಸಾ(Unternehmen Barbarossa ) ಹೆಸರಿನಲ್ಲಿ ಸೋವಿಯತ್ ನೆಲದ ಮೇಲೆ ಆಕ್ರಮಣಗೈದಿತು. ಜರ್ಮನಿಯ ಸಶಸ್ತ್ರ ಪಡೆಗಳು ಹಾಗೂ ಅದರ ಮಿತ್ರಕೂಟ ಸೋವಿಯತ್ ನೆಲದಲ್ಲಿ ಸರಾಗವಾಗಿ ಹಾಗೂ ತ್ವರಿತಗತಿಯಲ್ಲಿ ಮುಂದುವರಿದವು. ಡಿಸೆಂಬರ್ ತಿಂಗಳಲ್ಲಿ, ಬೇಸಿಗೆಯಲ್ಲಿ ಹಾಗೂ ವಸಂತಕಾಲದಲ್ಲಿ ಹಲವಾರು ಸೋಲುಗಳನ್ನು ಕಂಡ ಬಳಿಕ, ಸೋವಿಯತ್ ಪಡೆಗಳು ಮಾಸ್ಕೋ ಯುದ್ಧದ ಬಳಿಕ ಪ್ರತಿರೋಧ ಒಡ್ಡತೊಡಗಿದವು ಹಾಗೂ ಜರ್ಮನ್ ಸೇನೆಯನ್ನು(ವೇರ್ಮಾಹ್ಟ್ Heer ) ಯಶಸ್ವಿಯಾಗಿ ಮಾಸ್ಕೋದ ವಲಯದಿಂದ ಹೊರಗೆಳೆಯುವಲ್ಲಿ ಸಫಲಗೊಂಡವು.
1942ರ ವಸಂತದಲ್ಲಿ ತಮ್ಮ ಮುಂಚೂಣಿ ಸೈನ್ಯವನ್ನು ಬಲಗೊಳಿಸಿದ ಜರ್ಮನಿ ಉತ್ತರದ ಲೆನಿನ್ಗ್ರಾಡ್ನಿಂದ ದಕ್ಷಿಣದ ರೊಸ್ತೊವ್ವರೆಗೆ ನಿಯೋಜಿಸಿತ್ತು. ಈ ಸಾಲಿನಲ್ಲಿ ಕೆಲವೊಂದು ಪ್ರಮುಖ ಸ್ಥಳಗಳೂ ಇದ್ದವು ಹಾಗೂ ಅಲ್ಲೆಲ್ಲಾ ಸೋವಿಯತ್ ಸೈನ್ಯ ಜರ್ಮನಿಯನ್ನು ಮಾಸ್ಕೋದ ಈಶಾನ್ಯಕ್ಕೆ ಹಾಗೂ ಖಾರ್ಕೊವ್ನ ದಕ್ಷಿಣಕ್ಕೆ ಹಿಮ್ಮೆಟಿಸಿತ್ತಾದರೂ ಅವೆರಡೂ ಜರ್ಮನಿಯ ಪಾಲಿಗೆ ಅಷ್ಟೊಂದು ಆತಂಕಕಾರಿಯಾಗಿರಲಿಲ್ಲ. ಇನ್ನು ದಕ್ಷಿಣ ಭಾಗದಲ್ಲಿ ಉಕ್ರೇನ್ ಹಾಗೂ ಕ್ರಿಮಿಯಾ ಪ್ರಾಂತಗಳನ್ನು ಜರ್ಮನಿಯರು ಭಾಗಶಃ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. ಆದರೂ ಸೆವಾಸ್ತೊಪೊಲ್ ಹಾಗೂ ಕರ್ಚ್ ಪರ್ಯಾಯ ದ್ವೀಪ ಸೋವಿಯತ್ ಕೈಯಲ್ಲಿಯೇ ಇತ್ತು.
1942ರ ಚಳಿಗಾಲ ಪೂರೈಸಿದ ಬಳಿಕ ತಾವು ಸೋವಿಯತ್ ರಾಷ್ಟ್ರದ ರೆಡ್ ಆರ್ಮಿಯನ್ನು ಸುಲಭವಾಗಿ ಮಣಿಸಬಹುದು ಎಂಬ ಆತ್ಮವಿಶ್ವಾಸ ಜರ್ಮನಿ ಪಡೆಗಳಿಗಿತ್ತು. ಅದಕ್ಕೆ ಕಾರಣವೂ ಇಲ್ಲದಿಲ್ಲ; ಜರ್ಮನ್ ಆರ್ಮಿ ಗ್ರೂಪ್ ಸೆಂಟರ್ (Heeresgruppe Mitte ) ಸಾಕಷ್ಟು ಹಾನಿಯನ್ನುಂಡಿತ್ತು. ಪಡೆಯ ಶೇ.65ರಷ್ಟು ಮಂದಿ ಚಳಿಗಾಲದ ಯುದ್ಧದಲ್ಲಿ ತೊಡಗಿಸಿಕೊಂಡಿದ್ದರು ಹಾಗೂ ಅವರಿಗೆ ವಿಶ್ರಾಂತಿ ನೀಡಲಾಗಿತ್ತು ಹಾಗೂ ಅವರಿಗೆ ಮತ್ತೊಮ್ಮೆ ಬಂದೂಕು ನೀಡಲಾಗಿತ್ತು; ಮತ್ತು ಆರ್ಮಿ ಗ್ರೂಪ್ ನಾರ್ತ್ ಹಾಗೂ ಸೌತ್ ಅನ್ನು ಚಳಿಗಾಲದ ಯುದ್ಧಕ್ಕೆ ಅಣಿಗೊಳಿಸಿರಲಿಲ್ಲ.
ಸ್ಟ್ಯಾಲಿನ್ಗ್ರಾಡ್ ಅನ್ನು ವಶಪಡಿಸಿಕೊಳ್ಳುವುದು ಅಡಾಲ್ಫ್ ಹಿಟ್ಲರ್ ಹಾಗೂ ಬೆನಿಟೋ ಮುಸ್ಸಲೋನಿ ಪಾಲಿಗೆ ಎರಡು ಕಾರಣಗಳಿಗೆ ಅತ್ಯವಶ್ಯಕವಾಗಿತ್ತು. ಮೊದಲನೆಯದಾಗಿ, ಸ್ಟ್ಯಾಲಿನ್ಗ್ರಾಡ್ ಕ್ಯಾಸ್ಪಿಯನ್ ಸಮುದ್ರ ಹಾಗೂ ಉತ್ತರ ರಷ್ಯಾ ನಡುವಿನ ವೋಲ್ಗಾ ನದಿಯ ದಡದಲ್ಲಿನ ಅತ್ಯಂತ ಪ್ರಮುಖ ಸಂಚಾರ-ಸಾಗಣೆಯ ಕೇಂದ್ರವಾಗಿತ್ತು. ಇದರ ಪ್ರತಿಫಲವಾಗಿ, ಸ್ಟ್ಯಾಲಿನ್ಗ್ರಾಡ್ ನಗರವನ್ನು ವಶಪಡಿಸಿಕೊಂಡರೆ ರಷ್ಯಾದ ಉತ್ತರ ಭಾಗಕ್ಕೆ ಸಂಪನ್ಮೂಲ ಸರಂಜಾಮು ಸಾಗಣೆಯ ಜೀವನಾಡಿಯನ್ನೇ ಕಡಿದಂತಾಗುತ್ತಿತ್ತು. ಎರಡನೆಯದಾಗಿ, ಇದನ್ನು ವಶಪಡಿಸಿಕೊಳ್ಳುವುದರಿಂದ ಜರ್ಮನಿಯ ಪಾಶ್ಚಿಮಾತ್ಯ ಮಿತ್ರಕೂಟದ ಪಾಲಿಗೆ ತೈಲ ಕಣಜದಂತಿದ್ದ ಕಾಕಸಸ್ ಪ್ರಾಂತದ ಹಾದಿ ಸುಗಮಗೊಳ್ಳುತ್ತಿತ್ತು. ಇದರಿಂದ ಸ್ಟ್ಯಾಲಿನ್ನ ಯುದ್ಧ ಪಡೆಗಳಿಗೆ ಅವಶ್ಯವಿದ್ದ ತೈಲ ಸರಬರಾಜನ್ನು ಒಂದೇ ಹೊಡೆತಕ್ಕೆ ಸ್ಥಗಿತಗೊಳಿಸಬಹುದಿತ್ತು. ಈ ನಗರ ಸೋವಿಯತ್ ಒಕ್ಕೂಟದ ಮಹಾನ್ ನಾಯಕ ಜೋಸೆಫ್ ಸ್ಟ್ಯಾಲಿನ್ನ ಹೆಸರನ್ನು ಹೊಂದಿತ್ತು. ಇಂಥ ನಗರವನ್ನು ವಶಪಡಿಸಿಕೊಳ್ಳುವುದರಿಂದ ರಷ್ಯಾಕ್ಕೆ ಸೈದ್ಧಾಂತಿಕತೆಗೆ ಮತ್ತು ಆಂದೋಲನಕ್ಕೆ ಮುಖಭಂಗ ಮಾಡಿದಂತಾಗುತ್ತಿತ್ತು.
ತನಗೀಗ ಸಮಯ ಹಾಗೂ ಸಂಪನ್ಮೂಲಗಳ ಅಭಾವವಿರುವುದನ್ನು ಮನಗಂಡಿದ್ದ ರಷ್ಯಾಕ್ಕೆ ಈ ಯುದ್ಧ ಒಂದು ಬಗೆಯಲ್ಲಿ ಸಾವು-ಬದುಕಿನ ಪ್ರಶ್ನೆಯಾಗಿತ್ತು. ಆದ್ದರಿಂದ ಬಂದೂಕು ಹಿಡಿಯುವ ಶಕ್ತಿ ಇದ್ದ ಪ್ರತಿಯೊಬ್ಬರಿಗೂ ಬಂದೂಕು ನೀಡಿ ನಗರದ ರಕ್ಷಣೆಗೆ ಅಟ್ಟಲಾಯಿತು. ಯುದ್ಧದ ಈ ಹಂತದಲ್ಲಿ ಜರ್ಮನ್ ಸೇನೆಗೆ ಹೋಲಿಸಿದರೆ ರೆಡ್ ಆರ್ಮಿ ದೂರದಿಂದ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಕಳೆದುಕೊಂಡಿತ್ತು. ಪರಿಸ್ಥಿತಿ ಹಾಗಿದ್ದರೂ, ನಗರ ಪ್ರದೇಶಗಳಲ್ಲಿನ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಯಾವುದೇ ಉತ್ಕೃಷ್ಟ ಯುದ್ಧ ತಂತ್ರಗಳನ್ನು ಹೊಂದಿಲ್ಲದ, ಉನ್ನತ ದರ್ಜೆಯ ಶಸ್ತ್ರಾಸ್ತ್ರಗಳನ್ನೂ ಹೊಂದಿಲ್ಲದ, ಕೇವಲ ಕೈಯಲ್ಲಿನ ಅತ್ಯಂತ ಚಿಕ್ಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಹೋರಾಟಗಾರರಿಂದಾಗಿ ರೆಡ್ ಆರ್ಮಿಯ ಎಷ್ಟೋ ಸಮಸ್ಯೆಗಳು ದೊಡ್ಡ ಅಪಾಯವುಂಟು ಮಾಡದೇ ಹಾಗೆಯೇ ಪರಿಹಾರಗೊಂಡವು.
“ | If I do not get the oil of Maikop and Grozny then I must end this war. | ” |
—Adolf Hitler |
ದಕ್ಷಿಣದ ರಷ್ಯನ್ ಸ್ಟೆಪೀಸ್ ಮೂಲಕ ಸೈನ್ಯವನ್ನು ಮುಂದುವರಿಸುವ ಹಾಗೂ ಕಾಕಾಸಸ್ನಲ್ಲಿದ್ದ ಪ್ರಮುಖ ಸೋವಿಯತ್ ತೈಲಾಗಾರಗಳನ್ನು ವಶಪಡಿಸಿಕೊಳ್ಳುವ ಹೊಣೆಗಾರಿಕೆಯನ್ನು ಆರ್ಮಿ ಗ್ರೂಪ್ ಸೌತ್ ಪಡೆಗೆ ಒಪ್ಪಿಸಲಾಯಿತು. ಬೇಸಿಗೆಯ ಈ ಆಕ್ರಮಣವನ್ನು ಫಾಲ್ ಬ್ಲ್ಯೂ ಎಂಬ ಸಂಕೇತ ಶಬ್ದದಲ್ಲಿ ಕರೆಯಲಾಯಿತು. ಇದು ಜರ್ಮನಿಯ 6ನೇ, 17ನೇ, 4ನೇ ಪಾಂಜರ್ ಹಾಗೂ 1ನೆಯ ಪಾಂಜರ್ ಸೇನೆಗಳನ್ನು ಒಳಗೊಂಡಿತ್ತು. 1941ರಲ್ಲಿ ಇದೇ ಆರ್ಮಿ ಗ್ರೂಪ್ ಸೌತ್ ಉಕ್ರೇನಿನ ಎಸ್ಎಸ್ಆರ್ ಪಡೆಯನ್ನು ಸೋಲಿಸಿತ್ತು. ಉಕ್ರೇನ್ನ ಪೂರ್ವಭಾಗದಿಂದ ದಾಳಿಗೆ ಮುಂದಾದ ಅದು ಆಕ್ರಮಣದ ಮುಂದಾಳತ್ವವನ್ನು ವಹಿಸಿಕೊಂಡಿತು.
ಈ ನಡುವೆ ಮಧ್ಯ ಪ್ರವೇಶಿಸಿದ ಹಿಟ್ಲರ್ ಆರ್ಮಿ ಗ್ರೂಪ್ ಅನ್ನು ಎರಡು ಭಾಗವಾಗುವಂತೆ ಆದೇಶಿಸಿದರು. ವಿಲ್ಹೆಮ್ ಲಿಸ್ಟ್ ಅವರ ಮುಂದಾಳತ್ವದಲ್ಲಿ ಆರ್ಮಿ ಗ್ರೂಪ್ ಸೌತ್(A) 17ನೆ ಆರ್ಮಿ ಹಾಗೂ ಮೊದಲನೇಯ ಪಾಂಜರ್ ಆರ್ಮಿ ಜೊತೆ ಮೊದಲೇ ಯೋಚಿಸಿದಂತೆ ಕಾಕಸಸ್ ಗೆ ಅಭಿಮುಖವಾಗಿ ನಡೆಯುವುದು ಎಂದಾಯಿತು. ಇತ್ತ, ಫೆಡ್ರಿಕ್ ಪೌಲಸ್ ಅವರ 6ನೇ ಆರ್ಮಿ ಹಾಗೂ ಹರ್ಮನ್ ಹೊತ್ ಅವರ 4ನೇ ಪಾಂಜರ್ ಆರ್ಮಿಗಳ ಜೊತೆಗೂಡಿ ಆರ್ಮಿ ಗ್ರೂಪ್ ಸೌತ್(B) ಪೂರ್ವದಲ್ಲಿರುವ ವೋಲ್ಗಾ ಹಾಗೂ ಸ್ಟ್ಯಾಲಿನ್ಗ್ರಾಡ್ ಕಡೆ ಹೆಜ್ಜೆ ಹಾಕುವುದು ಎಂದಾಯಿತು. ಆರ್ಮಿ ಗ್ರೂಪ್ B ಅನ್ನು ಪ್ರಾರಂಭದಲ್ಲಿ ಫೀಲ್ಡ್ ಮಾರ್ಷಲ್ ಫೆಡರ್ ವೊ ಬೊಕ್ ಮುನ್ನಡೆಸಿದರಾದರೂ ನಂತರ ಅದರ ಚುಕ್ಕಾಣಿಯನ್ನು ಜನರಲ್ ಮ್ಯಾಕ್ಸಿಮಿಲನ್ ವೊ ವೇಚ್ ಕೈಗೆತ್ತಿಕೊಂಡರು.
ಕೇಸ್ ಬ್ಲ್ಯೂ ಕಾರ್ಯಾಚರಣೆಯ ಪ್ರಾರಂಭವನ್ನು 1942ರ ಪ್ರಾರಂಭದಲ್ಲಿಯೇ ಯೋಜಿಸಲಾಗಿತ್ತು. ಆದರೆ ಈ ಬ್ಲ್ಯೂ ಕಾರ್ಯಚರಣೆಯಲ್ಲಿ ಭಾಗವಹಿಸಿದ ಬಹುತೇಕ ಮಂದಿ ಜರ್ಮನ್ ಹಾಗೂ ರೋಮೇನಿಯನ್ ಪಡೆಗಳು ಆ ಸಮಯದಲ್ಲಿ ಕ್ರಿಮಿಯನ್ ಪರ್ಯಾಯ ದ್ವೀಪದಲ್ಲಿ ಸೆವಸ್ತೊಪಲ್ಗೆ ಮುತ್ತಿಗೆ ಹಾಕುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಮುತ್ತಿಗೆ ಹಾಕುವಲ್ಲಾದ ವಿಳಂಬದಿಂದಾಗಿ ಬ್ಲ್ಯೂ ಕಾರ್ಯಾಚರಣೆಯನ್ನು ಅನಿವಾರ್ಯವಾಗಿ ಹಲವು ಬಾರಿ ಮುಂದೂಡಬೇಕಾಯಿತು. ಅಷ್ಟೇಲ್ಲಾ ಹೋರಾಟ ಮಾಡಿದ ಬಳಿಕ ಆ ನಗರ ಕೈವಶವಾಗಿದ್ದು ಜೂನ್ ತಿಂಗಳ ಅಂತ್ಯದಲ್ಲಿ. ಈ ನಡುವೆ ಒಂದು ಚಿಕ್ಕ ಸಾಹಸಕ್ಕೆ ಕೈ ಹಾಕಲಾಗಿತ್ತು. ಎರಡನೇ ಖರ್ಕಾವ್ ಯುದ್ಧದಲ್ಲಿ ಸೋವಿಯತ್ನ ಕೆಲವು ಪ್ರಮುಖ ಸ್ಥಳಗಳೆಡೆಗೆ ಸೈನ್ಯ ನುಗ್ಗಿಸಿದ ನಾಟಕವಾಡಲಾಯಿತು. ಇದರಿಂದ ಮೇ 22ರಂದು ಸೋವಿಯತ್ನ ಅಗಾಧ ಪ್ರಮಾಣದ ಸೈನ್ಯ ಒಂದು ಕಡೆ ಬಂದು ಸೇರುವಂತಾಯಿತು.
ಅಂತಿಮವಾಗಿ ಆರ್ಮಿ ಗ್ರೂಪ್ ಸೌತ್ ರೂಪದಲ್ಲಿ ಪ್ರಕಟಗೊಂಡ ಬ್ಲ್ಯೂ 1942 ಜೂನ್ 28ರಂದು ರಷ್ಯಾದ ದಕ್ಷಿಣ ಭಾಗದ ಮೇಲೆ ಆಕ್ರಮಣ ಮಾಡಲಾರಂಭಿಸಿತು. ಜರ್ಮನಿಯ ಈ ’ರಾಜಸೂಯಾ ಯಾಗ’ ಪ್ರಾರಂಭದಲ್ಲಿ ಉತ್ತಮವಾಗಿಯೇ ಪ್ರಾರಂಭಗೊಂಡಿತು. ಅಗಾಧ ಬಯಲಿನಲ್ಲಿ ರಷ್ಯಾದ ಪ್ರತಿರೋಧ ಅಷ್ಟೇನೂ ತೀಕ್ಷ್ಣವಾಗಿರಲಿಲ್ಲ. ಅಲ್ಲದೇ ಜರ್ಮನಿಯ ಹೊಡೆತಕ್ಕೆ ರಷ್ಯಾದ ಸೈನ್ಯ ಪೂರ್ವದ ಕಡೆ ಜಾರತೊಡಗಿತು. ಜರ್ಮನಿಯ ಮರ್ಮಾಘಾತದ ಎದುರು ತನ್ನ ರಕ್ಷಣಾತ್ಮಕ ಮುಂಚೂಣಿ ಪಡೆಯನ್ನು ಪುನರ್ನಿರ್ಮಿಸುವ ಅವಕಾಶವೇ ರಷ್ಯಾಕ್ಕೆ ಸಿಗುತ್ತಿರಲಿಲ್ಲ. ಆ ನಿಟ್ಟಿನಲ್ಲಿ ಅದು ನಡೆಸಿದ ಪ್ರತಿಯೊಂದು ಯತ್ನಗಳೂ ಹೊಳೆ ನೀರಿನಲ್ಲಿ ಹುಣಸೆ ತೊಳೆದಂತೆ ವಿಫಲವಾಗುತ್ತಿದ್ದವು. ಎರಡು ಮುಖ್ಯ ಸೇನಾ ನೆಲೆಗಳು ಸ್ಥಾಪಿಸಿದ ವೇಗದಲ್ಲಿಯೇ ನಿರ್ನಾಮವನ್ನೂ ಹೊಂದಿದವು. ಮೊದಲನೆಯದು, ಜುಲೈ 2ರಂದು ನಿರ್ನಾಮಗೊಂಡ ಈಶಾನ್ಯ ಖರ್ಕಾವ್ನ ನೆಲೆ. ಹಾಗೂ ಎರಡನೆಯದು, ವಾರದ ನಂತರ ಕೈತಪ್ಪಿ ಹೋದ ಮಿಲ್ಲೆರೊವ್ ಸುತ್ತಮುತ್ತಲಿನ, ರೊಸ್ತಾವ್ ಒಬ್ಲಾಸ್ಟ್. ಈ ನಡುವೆ, ಹಂಗೇರಿಯ ಎರಡನೇ ಸೇನೆ ಹಾಗೂ ಜರ್ಮನಿಯ 4ನೇ ಪಂಜಾರ್ ಸೇನೆ ರಷ್ಯಾದ ವೊರೊನೇಜ್ ಮೇಲೆ ಪ್ರಹಾರವನ್ನಾರಂಭಿಸಿತು. ಹಾಗೂ ಮುಂದುವರಿದು ಜುಲೈ 5ರಂದು ಆ ನಗರವನ್ನು ತನ್ನ ವಶಕ್ಕೆ ತೆಗೆದುಕೊಂಡಿತು.
6ನೇ ಸೇನೆಯ ಮೊದಲ ಕೆಲವು ನಡೆಗಳು ಯಶಸ್ವಿಯಾಗಿದ್ದವು. ಈ ಸಮಯದಲ್ಲಿಯೇ ಮಧ್ಯ ಪ್ರವೇಶಿಸಿದ ಹಿಟ್ಲರ್ ಈ ಸೇನೆಗೆ ಆರ್ಮಿ ಗ್ರೂಪ್ ಸೌತ್(A)ಗೆ ಸೇರ್ಪಡೆಗೊಳ್ಳುವಂತೆ ಆದೇಶಿಸಿದರು. ಆ ಪ್ರಾಂತದಲ್ಲಿದ್ದ ಕೆಲವೇ ಕೆಲವು ರಸ್ತೆಗಳನ್ನು 4ನೇ ಪಂಜಾರ ಹಾಗೂ 6ನೇ ಸೇನೆಗಳೆರಡೂ ಬಳಸಬೇಕಾದ ಅನಿವಾರ್ಯತೆ ಇದ್ದುದ್ದರಿಂದ ಅಗಾಧ ಪ್ರಮಾಣದಲ್ಲಿ ಟ್ರಾಫಿಕ್ಜಾಮ್ ಸಂಭವಿಸಿತು. ಸಾವಿರಾರು ವಾಹನಗಳು ರಸ್ತೆಯನ್ನು ಆಕ್ರಮಿಸಿದ್ದರಿಂದ ಸೇನೆಗಳು ಒಂದಿಂಚು ಮುಂದೆ ಹೆಜ್ಜೆ ಇಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಈ ವಿಳಂಬದಿಂದಾಗಿ ಸೇನೆ ಮುಂದುವರಿಯುವುದು ಕನಿಷ್ಟವೆಂದರೂ ಒಂದು ವಾರದಷ್ಟು ತಡವಾಯಿತು ಎನ್ನಲಾಗುತ್ತದೆ. ಸೇನೆಯ ನಡೆ ವಿಳಂಬವಾದದ್ದೇ ಹಿಟ್ಲರ್ ತಮ್ಮ ಮನಸ್ಸು ಬದಲಿಸಿ 4ನೇ ಪಂಜಾರ್ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡು ಸ್ಟ್ಯಾಲಿನ್ಗ್ರಾಡ್ ನಗರವನ್ನು ವಶಪಡಿಸಿಕೊಳ್ಳುವ ಜವಾಬ್ದಾರಿ ವಹಿಸಿದರು.
ಜುಲೈ ಅಂತಿಮ ಭಾಗದಲ್ಲಿ ಜರ್ಮನಿಯ ಸೇನೆ ಸೋವಿಯತ್ ಸೇನೆಯನ್ನು ಡಾನ್ ನದಿಯೆಡೆಗೆ ಅಟ್ಟಿತು. ಈ ಹಂತದಲ್ಲಿ ಡಾನ್ ಹಾಗೂ ವೋಲ್ಗಾ ನದಿಗಳು ಕೇವಲ 40 ಕಿ.ಮೀ. ಅಂತರದಲ್ಲಿದ್ದವು ಹಾಗೂ ಜರ್ಮನಿಯ ಸೈನಿಕರು ತಮ್ಮ ಪ್ರಧಾನ ಸರಬರಾಜು ಘಟಕಗಳನ್ನು ಡಾನ್ ನದಿಯ ಪಶ್ಚಿಮದಲ್ಲಿ ಸ್ಥಾಪಿಸಿ ಮುನ್ನಡೆದಿದ್ದರು. ಜರ್ಮನಿ ಸೈನಿಕರ ಈ ನಡೆಯೇ ಮುಂದೆ ಇಡೀ ಯುದ್ಧದ ಗತಿಯನ್ನೇ ಬದಲಾಯಿಸಿತು ಎಂದರೆ ಉತ್ಪ್ರೇಕ್ಷೆಯೇನೂ ಅಲ್ಲ. ಜರ್ಮನಿಯರು ಉತ್ತರದಲ್ಲಿದ್ದ ತಮ್ಮ ಪ್ರಾಂತಗಳ ರಕ್ಷಣೆಯ ಹೊಣೆಗಾರಿಕೆಯನ್ನು ಇಟಲಿ, ಹಂಗೇರಿ, ಕ್ರೊಯೇಷಿಯಾ ಹಾಗೂ ರೊಮೇನಿಯಾ ಮಿತ್ರಪಡೆಗಳ ಪಾಲಿಗೆ ಬಿಟ್ಟು ಮುನ್ನಡೆಯಿತು. ಇಟಲಿಯನ್ ಸೈನಿಕರು ಯುದ್ದಗಳಲ್ಲಿ ದೊಡ್ಡ ಮಟ್ಟದ ಸಾಧನೆಗೈಯದಿದ್ದರೂ ಅದರ ಬಹುಪಾಲು ಅಧಿಕಾರಿಗಳು ಜರ್ಮನಿಯಿಂದ ಸಾಕಷ್ಟು ಪ್ರಶಂಸೆ ಗಳಿಸಿದ್ದರು. ಇವರ ಕುರಿತು ಜರ್ಮನರಿಗೆ ತೀರಾ ಅನಾದಾರವಿತ್ತು ಹಾಗೂ ಸಂದರ್ಭ ಸಿಕ್ಕಾಗಲೆಲ್ಲಾ ಅವರನ್ನು ಹೇಡಿಗಳೆಂದೂ, ಆತ್ಮವಿಶ್ವಾಸಹೀನರೆಂದೂ ಅವರನ್ನು ಜರಿಯುತ್ತಿದ್ದರು. ಆದರೆ ವಾಸ್ತವದ ಸಂಗತಿಯೇ ಬೇರೆ ಇತ್ತು. ರಣರಂಗದಲ್ಲಿ ಅವರು ತೋರುತ್ತಿದ್ದ ಕಳಪೆ ಸಾಧನೆಗೆ ಅವರು ಎದುರಿಸುತ್ತಿದ್ದ ಶಸ್ತ್ರಾಸ್ತ್ರಗಳ ಕೊರತೆ ಹಾಗೂ ಇಟಲಿಯ ಸೈನ್ಯಾಧಿಕಾರಿಗಳ ಅವಸರದ ಹಾಗೂ ಪೂರ್ವಸಿದ್ಧತೆ ಇಲ್ಲದ ತಂತ್ರಗಾರಿಕೆಗಳೇ ಮುಖ್ಯ ಕಾರಣವಾಗಿದ್ದವು. ಇವೆಲ್ಲಾ ಕಾರಣದಿಂದಾಗಿ ಅವರು ರಣರಂಗದಲ್ಲಿ ಹಿಮ್ಮೆಟ್ಟುತ್ತಿದ್ದರು ಇಲ್ಲವೇ ಪಲಾಯನಗೈಯುತ್ತಿದ್ದರು. ಆದರೂ ನಿಕೊಲೆವ್ಕಾ ಯುದ್ಧವೂ ಸೇರಿದಂತೆ ಹಲವಾರು ಯುದ್ಧಗಳಲ್ಲಿ ವಿಶಿಷ್ಟ ಸಾಧನೆಗೈದ ಇತಿಹಾಸ ಅವರಗಿತ್ತು. ಜರ್ಮನಿಯ 6ನೇ ಪಡೆ ಸ್ಟ್ಯಾಲಿನ್ಗ್ರಾಡ್ನಿಂದ ಕೆಲವೇ ಕೆಲವು ಕಿ.ಮೀಟರ್ಗಳ ಅಂತರದಲ್ಲಿತ್ತು. ದಕ್ಷಿಣ ಭಾಗದಲ್ಲಿದ್ದ 4ನೇ ಪಂಜಾರ ಪಡೆ ಈ ನಗರವನ್ನು ವಶಪಡಿಸಿಕೊಳ್ಳಲು 6ನೇ ಪಡೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಉತ್ತರಾಭಿಮುಖವಾಗಿ ಪ್ರಯಾಣ ಕೈಗೊಂಡಿತ್ತು. ದಕ್ಷಿಣದಲ್ಲಿ ಆರ್ಮಿ ಗ್ರೂಪ್ A ಕಾಕಾಸಸ್ ಕಡೆ ಹೆಜ್ಜೆ ಹಾಕುತ್ತಿತ್ತಾದರೂ ಅವುಗಳ ಸರಬರಾಜು ಮಾರ್ಗಗಳು ವಿಪರೀತ ಉದ್ದವಾಗಿದ್ದರಿಂದ ಅವುಗಳ ನಡೆ ಕ್ರಮೇಣ ನಿಧಾನಗೊಳ್ಳುತ್ತಿತ್ತು. ಜರ್ಮನಿಯ ಎರಡು ಸೇನಾ ಪಡೆಗಳು ತಮ್ಮ ನಡುವಿನ ಅಗಾಧ ಬೌಗೋಳಿಕ ಅಂತರದಿಂದಾಗಿ ಒಬ್ಬರಿಗೊಬ್ಬರು ಹೆಗಲು ನೀಡಲು ಸಾಧ್ಯವಾಗುತ್ತಿರಲಿಲ್ಲ.
ಜುಲೈ ತಿಂಗಳಲ್ಲಿ ಜರ್ಮನಿಯ ಇರಾದೆ ಸ್ಪಷ್ಟಗೊಂಡ ಬಳಿಕ ಸ್ಟ್ಯಾಲಿನ್ 1942 ಆಗಸ್ಟ್ 1ರಂದು ಆಗ್ನೇಯ ಫ್ರಂಟ್ನ ಕಮಾಂಡರ್ ಆಗಿ ಮಾರ್ಷಲ್ ಆಂಡ್ರೇ ಯೆರ್ಯೊಮೆಂಕೊ ಅವರನ್ನು ನಿಯೋಜಿಸಿದರು. ಸ್ಟ್ಯಾಲಿನ್ಗ್ರಾಡ್ ನಗರದ ರಕ್ಷಣೆಯ ಯೋಜನೆ ರೂಪಿಸುವ ಹೊಣೆಗಾರಿಕೆಯನ್ನು ಯೆರ್ಯೊಮೆಂಕೊ ಹಾಗೂ ಕಮಿಸರ್ ನಿಕಿತಾ ಕ್ರುಶ್ಚೇವ್ ಅವರಿಬ್ಬರಿಗೂ ವಹಿಸಿಕೊಡಲಾಯಿತು: 25, 48 . ಸ್ಟ್ಯಾಲಿನ್ಗ್ರಾಡ್ ನಗರದ ಪೂರ್ವ ಗಡಿ ಭಾಗದಲ್ಲಿ ವೋಲ್ಗಾ ನದಿ ವಿಸ್ತಾರವಾಗಿ ಚಾಚಿಕೊಂಡಿತ್ತು. ಆ ನದಿಯಗುಂಟ ಹೆಚ್ಚುವರಿ ಸೋವಿಯತ್ ಪಡೆಗಳನ್ನು ನಿಯೋಜಿಸಲಾಯಿತು. ಈ ಪಡೆಗಳು ಹೊಸದಾಗಿ ಸ್ಥಾಪಿಸಲಾದ 62ನೇ ಸೇನಾ ಪಡೆಯಾಗಿ ಪರಿವರ್ತನೆಗೊಂಡವು. ಈ ಪಡೆಯನ್ನು ಯೆರ್ಯೋಮೆಂಕೊ 1942 ಸೆಪ್ಟೆಂಬರ್ 11ರಂದು ಲೆಫ್ಟಿನೆಂಟ್ ಜನರಲ್ ವಾಸಿಲಿ ಚ್ಯುಕೊವ್ ಅವರ ಸುಪರ್ದಿಗೊಪ್ಪಿಸಿದರು. ಪರಿಸ್ಥಿತಿ ಮಾತ್ರ ತೀರಾ ಗಂಭೀರವಾಗಿತ್ತು. ತಮ್ಮ ಈ ಕಾರ್ಯವನ್ನು ಹೇಗೆ ವ್ಯಾಖ್ಯಾನಿಸುತ್ತೀರಿ ಎಂಬ ಪ್ರಶ್ನೆಗೆ ಅವರು ನೀಡಿದು ಉತ್ತರ ಹೀಗಿದೆ, “ನಾನು ನಗರವನ್ನು ರಕ್ಷಿಸುತ್ತೇವೆ ಇಲ್ಲವೇ ಆ ಪ್ರಯತ್ನದಲ್ಲಿಯೇ ಮರಣವನ್ನಪ್ಪುತ್ತೇವೆ”.: 127 62ನೇ ಸೇನಾ ಮಿಷನ್ ಸ್ಟ್ಯಾಲಿನ್ಗ್ರಾಡ್ ನಗರದ ಸುತ್ತ ಮುತ್ತಲಿನ ಎಲ್ಲಾ ಕರಾವಳಿಗಳನ್ನು ರಕ್ಷಿಸಲು ಪಣತೊಟ್ಟಿತ್ತು. ಚ್ಯುಕೋವ್ ತಮ್ಮ ಪಾಲಿನ ಹೊಣೆಗಾರಿಕೆಯನ್ನು ನಿರ್ವಹಿಸಿದ ಬಗೆ ಹಾಗೂ ದಕ್ಷತೆಯಿಂದಾಗಿ ಸೋವಿಯತ್ ಒಕ್ಕೂಟದ ಪ್ರಶಸ್ತಿ ಪಡೆದ ಇಬ್ಬರು ಹೀರೋಗಳಲ್ಲಿ ಒಬ್ಬರಾದರು.
ಬಂದರಿನ ಮೇಲೆ ಮೇಲೆಯೇ ಕಣ್ಣಿಟ್ಟು ಏಕಾಗ್ರತೆಯಿಂದ ದಾಳಿಯನ್ನು ರೂಪಿಸುತ್ತಿದ್ದ ಜರ್ಮನಿ ಸೈನ್ಯದ ಕುರಿತು ಸಾಕಷ್ಟು ಮನ್ಸೂಚನೆಗಳನ್ನು ಪಡೆದಿದ್ದ ಸೋವಿಯತ್ ಸೈನ್ಯ ನಗರದ ಉಗ್ರಾಣ, ದನಕರುಗಳು ಹಾಗೂ ರೈಲು ರಸ್ತೆಗಳನ್ನು ಅಕ್ಷರಶಃ ವೋಲ್ಗಾ ಅಕ್ಕ ಪಕ್ಕ ಗುಡ್ಡೆ ಹಾಕಿಕೊಂಡಿತ್ತು. ಈ “ಕೊಯ್ಲು ವಿಜಯ” ಜರ್ಮನಿಯ ಸೈನ್ಯ ಆಕ್ರಮಣಗೈಯುವುದಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ನಗರದಲ್ಲಿ ಆಹಾರದ ಅಭಾವವನ್ನು ಸೃಷ್ಟಿಸಿತ್ತು. ಆದರೂ ಕೆಲವು ಕಾರ್ಖಾನೆಗಳಲ್ಲಿ ಉತ್ಪಾದನೆ ಮೊದಲಿನಂತೆಯೇ ನಡೆಯುತ್ತಿತ್ತು, ಅದರಲ್ಲೂ ಮುಖ್ಯವಾಗಿ T-34 ಟ್ಯಾಂಕ್ಗಳನ್ನು ನಿರ್ಮಿಸುವ ಕಾರ್ಖಾನೆ ಎಡೆಬಿಡದೇ ಕಾರ್ಯನಿರ್ವಹಿಸುತ್ತಿತ್ತು. ಜರ್ಮನಿಯ ಸೇನೆ ನಗರವನ್ನು ಎಡತಾಕುವ ಮೊದಲು ಲುಫ್ಟ್ವಫೆ ವಿಮಾನ ನಗರಕ್ಕೆ ಸಾಮಾನು ಸರಂಜಾಮು ಪೂರೈಸುತ್ತಾ ಜೀವನಾಡಿಯಂತೆ ಕಾರ್ಯನಿರ್ವಹಿಸುತ್ತಿದ್ದ ವೋಲ್ಗಾ ನದಿಯ ಮೇಲೆ ದಾಳಿ ಮಾಡಿತು. ಈ ದಾಳಿಯ ದೆಸೆಯಿಂದಾಗಿ ಜುಲೈ 25 ರಿಂದ 31ರ ಒಳಗೆ ಸೋವಿಯತ್ಗೆ ಸೇರಿದ ಕನಿಷ್ಠ 32 ಹಡಗುಗಳು ಮುಳುಗಿದವು. ಇನ್ನುಳಿದ 9 ಹಡಗುಗಳು ಹಾನಿಗೊಳಗಾದವು.: 69
ಜನರಲ್ಒಬರ್ಸ್ಟ ವೊಲ್ಫ್ರಾಮ್ ವೊ ರಿಚತೊಫನ್ ಅವರ ಲುಫ್ಟ್ಲೊಟ್ಟ್ 4 ವಿಮಾನ ನಗರದ ಮೇಲೆ ಬಾಂಬುಗಳ ಸುರಿಮಳೆಗೈಯುವ ಮೂಲಕ ಯುದ್ಧಕ್ಕೆ ಮುನ್ನುಡಿ ಬರೆಯಿತು. 1942ರ ಬೇಸಿಗೆ ಹಾಗೂ ವಸಂತಕಾಲದಲ್ಲಿ ನಡೆದ ಈ ದಾಳಿಯನ್ನು ಜಗತ್ತಿನ ಅತ್ಯಂತ ಪರಿಣಾಮಕಾರಿ ವಾಯುದಾಳಿ ಎಂದೇ ಪರಿಗಣಿಸಲಾಗುತ್ತದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಬಾಂಬುಗಳನ್ನು ಸ್ಟ್ಯಾಲಿನ್ಗ್ರಾಡ್ ಮೇಲೆ ಸುರಿಯಲಾಯಿತು ಎಂದರೆ ಅದರ ಗಂಭೀರತೆ ಎಂಥದ್ದು ಎಂಬುದನ್ನು ಊಹಿಸಿ.: 122 ಇಡೀ ನಗರ ಕ್ಷಣಾರ್ಧದಲ್ಲಿ ಗತಕಾಲದ ಅವಶೇಷವಾದಂತಾಯಿತು. ಕಾರ್ಮಿಕರು ಹೋರಾಟದಲ್ಲಿ ಪಾಲ್ಗೊಂಡರೂ ನಗರದ ಕೆಲವು ಕಾರ್ಖಾನೆಗಳು ಎಡೆಬಿಡದೇ ಕಾರ್ಯನಿರ್ವಹಿಸತೊಡಗಿದ್ದವು. ಸ್ಟ್ಯಾಲಿನ್ಗ್ರಾಡ್ ನಗರ ಪ್ರವೇಶಿಸಲು ವೆರ್ಮಾಕ್ತ್ ಜರ್ಮನ್ ತುಕಡಿಗಳ ಜೊತೆ ಹೆಗಲು ನೀಡಿದ್ದ ಆದರೆ ಜರ್ಮನೇತರ ಪಡೆಯಾಗಿದ್ದ ಕ್ರೋಷಿಯಾದ 369ನೇ ರಿಇನ್ಫೋರ್ಸಡ್ ಇನ್ಫ್ಯಾಂಟ್ರಿ ರೆಜಿಮೆಂಟ್ ಅನ್ನು ಆಯ್ಕೆ ಮಾಡಿಕೊಂಡರು. ಅದು 100ನೇ ಜಾಗರ್ ಘಟಕವಾಗಿ ಕಾರ್ಯ ನಿರ್ವಹಿಸಿತು.
ಲಭ್ಯವಿರುವ ಪ್ರತಿಯೊಂದು ಪಡೆಯನ್ನೂ ಸ್ಟ್ಯಾಲಿನ್ ವೋಲ್ಗಾ ನದಿಯ ಉತ್ತರ ದಂಡೆಯಲ್ಲಿ ನಿಯೋಜಿಸಿದರು. ಕೆಲವು ಪಡೆಗಳು ದೂರದ ಸೈಬಿರಿಯಾದಿಂದ ನಗರದ ರಕ್ಷಣೆಗೆ ದೌಡಾಯಿಸಿದ್ದವು. ಚಿಕ್ಕ-ಪುಟ್ಟ ಸೇತುವೆಗಳೆಲ್ಲವೂ ಲುಫ್ಟ್ವಾಫೆಯ ಬಾಂಬ್ ದಾಳಿಗೆ ನಾಶಗೊಂಡಿದ್ದವು. ಇವೆಲ್ಲವನ್ನೂ ಆಪೋಷನಕ್ಕೆ ತೆಗೆದುಕೊಂಡ ಬಳಿಕ ಲುಫ್ಟ್ವಾಫೆ ನಿಧಾನವಾಗಿ ನದಿಯಗುಂಟ ಚಲಿಸುತ್ತಿದ್ದ ಸೈನ್ಯವನ್ನು ಗುರಿಯಾಗಿಟ್ಟುಕೊಂಡು ದಾಳಿಯನ್ನು ಆರಂಭಿಸಿತು. ದಾಳಿಯ ಗಂಭೀರತೆಯನ್ನು ಅರಿತ ಸೋವಿಯತ್ ಸರ್ಕಾರ ವೋಲ್ಗಾ ನದಿಯ ಅಕ್ಕಪಕ್ಕದ ಹಳ್ಳಿಗಳನ್ನು ಹಾಗೂ ನಾಗರಿಕರನ್ನು ಸ್ಥಳಾಂತರಗೊಳಿಸಿತು. ನಗರದ ನಾಗರಿಕರ ಉಪಸ್ಥಿತಿ ನಗರವನ್ನು ರಕ್ಷಿಸುವ ಯೋಧರ ಆತ್ಮವಿಶ್ವಾಸವನ್ನು ಕಾಪಾಡುತ್ತದೆ ಹಾಗೂ ಹೆಚ್ಚಿಸುತ್ತದೆ ಎಂಬ ಕಾರಣಕ್ಕೆ ಸ್ಟ್ಯಾಲಿನ್ ಯಾವೊಬ್ಬ ನಾಗರಿಕನಿಗೂ ನಗರ ಬಿಡಲು ಅವಕಾಶ ನೀಡಿರಲಿಲ್ಲ ಎಂದು ನಂಬಲಾಗಿದೆ.: 106 ನಾಗರಿಕರನ್ನು, ಮಹಿಳೆಯರು ಹಾಗೂ ಮಕ್ಕಳೂ ಸೇರಿದಂತೆ, ಟ್ರೆಂಚ್ ಹಾಗೂ ರಕ್ಷಣಾತ್ಮಕ ಕೋಟೆಗಳ ನಿರ್ಮಾಣದಲ್ಲಿ ತೊಡಗಿಸಲಾಗಿತ್ತು. ಆಗಸ್ಟ್ 24ರಂದು ನಡೆದ ಜರ್ಮನಿಯ ಬಾಂಬ್ ದಾಳಿ ಇವರೆಲ್ಲರ ಮೇಲೆ ಬೆಂಕಿಯ ಮಳೆಯನ್ನೇ ಸುರಿಸಿತ್ತು . ಸಾವಿರಾರು ಮಂದಿ ಅಸುನೀಗಿದ್ದರು. ಇಡೀ ನಗರ ಅವಶೇಷಗಳಿಂದ ತುಂಬಿ, ಅಕ್ಷರಶಃ ಸ್ಮಶಾನದ ರೀತಿ ಕಾಣುತ್ತಿತ್ತು.: 102–108 ವೊರೊಶಿಲೊವಸ್ಕಿಯ ಶೇ.90ರಷ್ಟು ವಾಸಸ್ಥಳ ಸಂಪೂರ್ಣ ನಿರ್ನಾಮಗೊಂಡಿತ್ತು. ಎಡೆಬಿಡದ ಬಾಂಬ್ ದಾಳಿಯಿಂದಾಗಿ ಆಗಸ್ಟ್ 23 ಹಾಗೂ 26ರ ನಡುವೆ ಸುಮಾರು 955 ಮಂದಿ ಸಾವನ್ನಪ್ಪಿದ್ದರು ಹಾಗೂ 1,181 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು ಎನ್ನುತ್ತದೆ ಸೋವಿಯತ್ ರಷ್ಯಾದ ದಾಖಲೆಯೊಂದು.: 73 ಸಾವಿಗೀಡಾದವರ ಸಂಖ್ಯೆ 40,000 ಎಂದು ಹೇಳಲಾಗಿದ್ದರೂ ಆಗಸ್ಟ್ 25ರ ಬಳಿಕ ಸೋವಿಯತ್ ರಾಷ್ಟ್ರ ವಾಯುದಾಳಿಯಿಂದ ಹಾನಿಗೊಳಗಾದ ಹಾಗೂ ಸಾವಿಗೀಡಾದವರ ಲೆಕ್ಕವಿರಿಸಿಲ್ಲ.
ಸೋವಿಯತ್ ವಾಯುದಳ, ವೊಯೆನ್ನೋ-ವಜ್ದುಶ್ನೆ ಸಿ ಲಿ (VVS) ಲುಫ್ಟ್ವಫೆ ದಾಳಿಯ ಎದುರು ಗರಬಡಿದಂತಾಗಿತ್ತು. ಆಗಸ್ಟ್ 23 ರಿಂದ 31ರ ವರೆಗೆ ಸೋವಿಯತ್ಗೆ ಸೇರಿದ ಸುಮಾರು 201 ಯುದ್ಧವಿಮಾನಗಳು ಪತನಗೊಂಡಿದ್ದವು. ಹಾಗೂ ಆಗಸ್ಟ್ ತಿಂಗಳಲ್ಲಿ 100 ಯುದ್ಧವಿಮಾನಗಳ ಜೊತೆಗೆ ಅದರ ಬಳಿ ಉಳಿದದ್ದು ಕೇವಲ 192 ಸರ್ವೀಸಬಲ್ ವಿಮಾನಗಳು. ಅವುಗಳಲ್ಲಿ 57 ಯುದ್ಧ ವಿಮಾನಗಳಾಗಿದ್ದವು. ಸೋವಿಯತ್ ರಾಷ್ಟ್ರ ಸೆಪ್ಟೆಂಬರ್ ಅಂತಿಮ ಭಾಗದಲ್ಲಿ ಸ್ಟ್ಯಾಲಿನ್ಗ್ರಾಡ್ ಪ್ರಾಂತದಲ್ಲಿ ಸಾಕಷ್ಟು ವೈಮಾನಿಕ ಬಲವರ್ಧಕಗಳನ್ನು ತಂದು ಸುರಿಯತೊಡಗಿತು. ಹಾಗಿದ್ದೂ ಪ್ರತಿನಿತ್ಯ ಹಾನಿ ಅನುಭವಿಸುವುದು ತಪ್ಪಲಿಲ್ಲ.: 74 ಸ್ಟ್ಯಾಲಿನ್ಗ್ರಾಡ್ನ ಸುತ್ತ ಮುತ್ತಲಿನ ವಾಯುಪ್ರದೇಶವೆಲ್ಲವನ್ನೂ ಲುಫ್ಟ್ವಫೆ ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. 1941 ರಲ್ಲಿ ಸೋವಿಯತ್ ತನ್ನೆಲ್ಲಾ ಕೈಗಾರಿಕೆಗಳಿಗೆ ಪುನರ್ನೆಲೆ ಒದಗಿಸಿದ ಕಾರಣ 1942ರ ದ್ವಿತಿಯಾರ್ಧದಲ್ಲಿ ಸೋವಿಯತ್ ಯುದ್ಧವಿಮಾನಗಳ ಉತ್ಪಾದನೆ 15,800 ತಲುಪಿತ್ತು. VVS ತನ್ನೆಲ್ಲಾ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಪಡೆದಿತ್ತು. ಈ ಎಲ್ಲಾ ಸಾಮರ್ಥ್ಯಗಳನ್ನು ಬಳಸಿಕೊಂಡು ತನ್ನೆಲ್ಲಾ ತಂತ್ರಗಾರಿಕೆಯನ್ನು ಪುನರ್ಸಂಪಾದಿಸಿದ ಸೋವಿಯತ್ ಕಾಲ ಕಳೆದಂತೆ ಲುಫ್ಟ್ವಫೆ ದಾಳಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.: 86
ನಗರದ ಮೊದಲ ರಕ್ಷಣೆಯ ಜವಾಬ್ದಾರಿ 1077 ಯುದ್ಧ ವಿಮಾನ ನಿಗ್ರಹ ರೆಜಿಮೆಂಟ್ನ ಹೆಗಲೇರಿತು. ಈ ಪಡೆಯಲ್ಲಿ ಇದ್ದದ್ದೆಲ್ಲಾ ಯಾವುದೇ ಔಪಚಾರಿಕ ಯುದ್ಧ ಶಿಕ್ಷಣ ಪಡೆಯದ ಹಾಗೂ ಸ್ವಯಂ ಇಚ್ಛೆಯಿಂದ ದೇಶ ರಕ್ಷಣೆಗೆ ಧಾವಿಸಿದ ಯುವತಿಯರು.[ಸೂಕ್ತ ಉಲ್ಲೇಖನ ಬೇಕು] ಇದನ್ನೂ ಹೊರತು ಪಡಿಸಿ, ಇನ್ನಿತರ ಯಾವ ಘಟಕದ ಬೆಂಬಲವೂ ಇಲ್ಲದೇ AA ಬಂದೂಕುಧಾರಿಗಳು ತಮ್ಮ ಪೋಸ್ಟ್ನಲ್ಲಿಯೇ ಉಳಿದುಕೊಂಡು ಮುಂದೆ ಹೆಜ್ಜೆ ಇಡುತ್ತಿದ್ದ ಪಂಜಾರ್ಗಳನ್ನು ಧೈರ್ಯವಾಗಿ ಎದುರಿಸಿದರು. ಮಾನವಸಂಪನ್ಮೂಲದ ಕೊರತೆಯಿಂದ ಬಳಲುತ್ತಿರುವ ಸೋವಿಯತ್ನ ನೆಲದಲ್ಲಿ ತಾವೀಗ ಎದುರಿಸುತ್ತಿರುವುದು ಮಹಿಳೆಯರನ್ನು ಎಂದು ತಿಳಿಯುತ್ತಿದ್ದಂತೆ ಜರ್ಮನಿಯ 16ನೇ ಪಾಂಜಾರ್ ವಿಭಾಗಕ್ಕೆ ಎಲ್ಲಿಲ್ಲದ ಅಚ್ಚರಿಯಾಯಿತಂತೆ. ಪ್ರಾರಂಭದಲ್ಲಿ, ಸೋವಿಯತ್ ರಾಷ್ಟ್ರ ಯುದ್ಧ ಸಾಮಗ್ರಿಗಳ ಉತ್ಪಾದನೆಯಲ್ಲಿ ತೊಡಗಿರದ ತನ್ನ “ಕಾರ್ಮಿಕರ ಸೇನೆ”ಯನ್ನೇ ಹೆಚ್ಚಾಗಿ ಅವಲಂಭಿಸಿತ್ತು.: 108 ಕಾರ್ಖಾನೆಯ ಕಾರ್ಮಿಕರ ಬಳಗದಲ್ಲಿ ಕೆಲವರು ಸ್ವ-ಇಚ್ಛೆಯಿಂದ ಯುದ್ಧಸೈನಿಕರಾಗಿ ಮುಂದೆ ಬಂದಿದ್ದರಿಂದ ಯುದ್ಧ ಟ್ಯಾಂಕ್ಗಳ ಉತ್ಪಾದನೆ ಸ್ವಲ್ಪ ದಿನಗಳ ಕಾಲ ಮುಂದುವರಿಯಿತು. ಹಾಗೆ ಉತ್ಪಾದನೆಗೊಂಡ ಎಲ್ಲಾ ಟ್ಯಾಂಕರ್ಗಳು ಕಾರ್ಖಾನೆಯಿಂದ ನೇರವಾಗಿ ಯುದ್ಧಭೂಮಿಗೆ ದೌಡಾಯಿಸುತ್ತಿದ್ದವು. ಕೆಲವೊಮ್ಮೆ ಅವುಗಳಿಗೆ ರಂಗ್ಣವನ್ನೂ ಹಚ್ಚುತ್ತಿರಲಿಲ್ಲ ಹಾಗೂ ಅವುಗಳಲ್ಲಿ ಕೆಲವು ಗನ್ಸೈಟ್ ಅನ್ನೂ ಹೊಂದಿರುತ್ತಿರಲಿಲ್ಲ.: 109–110
ಆಗಸ್ಟ್ನ ಕೊನೆಯ ಭಾಗದಲ್ಲಿ ಅಂತೂ ಇಂತೂ ಆರ್ಮಿ ಗ್ರೂಪ್ ಸೌತ್ (B) ಸ್ಟ್ಯಾಲಿನ್ಗ್ರಾಡ್ನ ಉತ್ತರ ಭಾಗದಲ್ಲಿದ್ದ ವೋಲ್ಗಾ ನದಿಯ ದಡ ತಲುಪಿತು. ನಗರದ ದಕ್ಷಿಣ ಭಾಗದ ನದಿಗೆ ಅಭಿಮುಖವಾಗಿ ಮತ್ತೊಂದು ಉತ್ತಮ ನಡೆ ಕಂಡು ಬಂತು. ಸೆಪ್ಟೆಂಬರ್ 1ರಂದು ಸೋವಿಯತ್ ಯೋಧರು ವೋಲ್ಗಾ ನದಿಯ ದಡದಲ್ಲಿನ ಅಪಾಯಕಾರಿ ತಿರುವುಗಳ ಮೂಲಕ ಜರ್ಮನಿಯ ಯುದ್ಧವಿಮಾನಗಳ ದಾಳಿಯ ನಡುವೆಯೇ ತಮ್ಮ ಪಡೆಗಳಿಗೆ ಸಂಪನ್ಮೂಲ ಸರಬರಾಜು ಮಾಡುವ ಅನಿವಾರ್ಯತೆಗೆ ಸಿಲುಕಿದರು.
ಸೆಪ್ಟೆಂಬರ್ 5ರಂದು ಸೋವಿಯತ್ನ 24ನೇ ಹಾಗೂ 66ನೇ ಸೇನೆಗಳು XIV ಪ್ಯಾನ್ಸೆರ್ಕಾರ್ಪ್ಸ್ ವಿರುದ್ಧ ದೊಡ್ಡ ಪ್ರಮಾಣದ ಪ್ರತಿದಾಳಿಯನ್ನು ಪ್ರಾರಂಭಿಸಿದವು. ಲುಫ್ಟ್ವಫೆ ಸೋವಿಯತ್ ಶಸ್ತ್ರಾಗಾರ ಹಾಗೂ ಅದರ ರಕ್ಷಣಾತ್ಮಕ ಫ್ರಂಟ್ ಮೇಲೆ ದಾಳಿ ನಡೆಸುವ ಮೂಲಕ ತಕ್ಕ ಮಟ್ಟಿಗೆ ಸೋವಿಯತ್ನ ಪ್ರತಿರೋಧವನ್ನು ನಿಯಂತ್ರಿಸಲು ಪ್ರಯತ್ನಿಸಿತು. ಈ ದಾಳಿಯಿಂದಾಗಿ ಸೋವಿಯತ್ ಸೇನೆ ತಾನು ಪ್ರತಿರೋಧವನ್ನಾರಂಭಿಸಿದ ಕೆಲವೇ ಗಂಟೆಗಳಲ್ಲಿ, ದಿನಮಧ್ಯವೇ ತಮ್ಮ ಪ್ರತಿದಾಳಿಯನ್ನು ಕೈ ಬಿಡಬೇಕಾಯಿತು. ಸೋವಿಯತ್ ರಾಷ್ಟ್ರದ 120 ಟ್ಯಾಂಕ್ಗಳಲ್ಲಿ 30 ಟ್ಯಾಂಕ್ಗಳು ಜರ್ಮನಿಯ ವಾಯುದಾಳಿಗೆ ಬಲಿಯಾಗಿದ್ದವು.: 75
ಸೋವಿಯತ್ನ ಪ್ರತಿಯೊಂದು ಯತ್ನಕ್ಕೂ ಜರ್ಮನಿಯ ಲುಫ್ಟ್ವೆಫೆ ತಣ್ಣೀರು ಎರಚಿತು. ಸೆಪ್ಟೆಂಬರ್ 18ರಂದು ಸೋವಿಯತ್ನ 1ನೇ ಗಾರ್ಡ್ಗಳು ಹಾಗೂ 24ನೇ ಸೇನೆ ಕೊತ್ಲುಬಾನ್ನಲ್ಲಿ ಜರ್ಮನಿಯ VIII. ಆರ್ಮೀಕಾರ್ಪ್ಸ್ ಯ ವಿರುದ್ಧ ದಾಳಿಯನ್ನಾರಂಭಿಸಿತ್ತು. ಈ ದಾಳಿಯನ್ನು ವಿಫಲಗೊಳಿಸಲು VIII. ಫ್ಲೀಗರ್ಕಾರ್ಪ್ಸ್ ಸ್ತುಕಾ ಡೈವ್-ಬಾಂಬರ್ಗಳ ಅಲೆಯನ್ನೇ ಸೃಷ್ಟಿಸಿತು. ಅಂತೂ ಪ್ರತಿದಾಳಿಯನ್ನು ನಿಗ್ರಹಿಸಲಾಯಿತು. ಸ್ತುಕಾ ಆ ದಿನ ಮುಂಜಾನೆ ಸೋವಿಯತ್ನ 106 ಟ್ಯಾಂಕರ್ಗಳಲ್ಲಿ 41 ಟ್ಯಾಂಕರ್ಗಳನ್ನು ಹೊಡೆದುರುಳಿಸಿತ್ತು. ಎಸ್ಕಾರ್ಟ್ನ ಪ್ರಯತ್ನದಲ್ಲಿ Bf 109ಗಳು ಸೋವಿಯತ್ನ 77 ಯುದ್ಧವಿಮಾನಗಳನ್ನು ಹೊಡೆದುರುಳಿಸಿತ್ತು.: 80 ನಗರದ ಅವಶೇಷಗಳ ನಡುವೆಯೇ ಸೋವಿಯತ್ 13ನೇ ಗಾರ್ಡ್ಗಳ ರೈಫಲ್ ವಿಭಾಗವನ್ನು ಒಳಗೊಂಡಿದ್ದ 62ನೇ ಹಾಗೂ 64ನೇ ಸೇನೆಗಳು ಮನೆಗಳು ಹಾಗೂ ಕಾರ್ಖಾನೆಗಳಲ್ಲಿ ಅಡಗಿ ಕುಳಿತು ಆಕ್ರಮಣ ಮಾಡುವ ಮೂಲಕ ನಗರದ ದೃಢನೆಲೆಗಳನ್ನು ಬಳಸಿಕೊಂಡು ಜರ್ಮನಿಯ ಸೇನೆಗೆ ಪ್ರತಿರೋಧವೊಡ್ಡುತ್ತಲೇ ಇದ್ದವು.
ಹಾಳು ಹಂಪೆಯಂತಾಗಿದ್ದ ನಗರದ ನಡುವೆ ಯುದ್ಧ ಮಾಡುವುದು ಎಂದರೆ ತೀರಾ ಭಯಾನಕ ಹಾಗೂ ಅದು ಹತಾಶೆಯ ಪರಮಾವಧಿ. ಲೆಫ್ಟಿನೆಂಟ್ ಜನರಲ್ ಅಲೆಕ್ಸಾಂಡರ್ ರೊಡಿಮ್ತ್ಸೆವ್ 13ನೇ ಗಾರ್ಡ್ ರೈಫಲ್ ವಿಭಾಗದ ಮುಖ್ಯಸ್ಥರಾಗಿದ್ದರು ಹಾಗೂ ಅವರ ಕಾರ್ಯದಕ್ಷತೆಯನ್ನು ಗೌರವಿಸಿ ಸೋವಿಯತ್ ಒಕ್ಕೂಟ ಇಬ್ಬರು ಹೀರೋ ಪ್ರಶಸ್ತಿಯನ್ನು ಅವರಿಗೆ ದಯಪಾಲಿಸಿತ್ತು. ಸ್ಟ್ಯಾಲಿನ್ ಅವರ ಆದೇಶ ಸಂಖ್ಯೆ.227 1942 ಜುಲೈ 27ರಲ್ಲಿ ಹೊರಬಿದ್ದಿತು. ಅದರ ಪ್ರಕಾರ, ಅನಧಿಕೃತವಾಗಿ ಆದೇಶ ನೀಡಿದ ಎಲ್ಲಾ ಕಮಾಂಡರ್ಗಳನ್ನೂ ಮಿಲಿಟರಿ ನ್ಯಾಯಾಧಿಕರಣಕ್ಕೆ ಗುರಿಪಡಿಸಲಾಯಿತು. “ಇಟ್ಟ ಹೆಜ್ಜೆ ಹಿಂದೆ ಇಡುವಂತಿಲ್ಲ!” ಹಾಗೂ “ವೋಲ್ಗಾ ನಂತರ ಯಾವ ಪ್ರಾಂತವೂ ಇಲ್ಲ” ಎಂಬ ಘೋಷವಾಕ್ಯಗಳು ಆ ಸಮಯದಲ್ಲಿ ರಾರಾಜಿಸಿದವು. ಇಷ್ಟೆಲ್ಲಾ ಪ್ರತಿರೋಧವನ್ನು ಎದುರಿಸಿಯೂ ಸ್ಟ್ಯಾಲಿನ್ಗ್ರಾಡ್ನ ಹೊಸ್ತಿಲು ತುಳಿದ ಜರ್ಮನಿ ನಂತರ ಮಾರಣಾಂತಿಕ ಘಾತ ಅನುಭವಿಸಿದ್ದು ಈಗ ಇತಿಹಾಸವಷ್ಟೇ.
ಜರ್ಮನಿಯ ಸೈನಿಕ ಸಿದ್ಧಾಂತವು ಸಂಯುಕ್ತ ಸೈನ್ಯ ತಂಡಗಳು ಹಾಗೂ ಅತ್ಯಂತ ಸನಿಹದಿಂದ ಕಾರ್ಯಾಚರಣೆ ನಡೆಸುವ ಟ್ಯಾಂಕ್ ಗಳು, ಪದಾತಿದಳ, ಅಭಿಯಂತರರು, ಫಿರಂಗಿ ಮತ್ತು ನೆಲ ದಾಳಿ ನಡೆಸುವ ವಿಮಾನದ ಮೇಲೆ ಅವಲಂಬಿತವಾಗಿವೆ. ಇದನ್ನು ಅಳೆಯಲು ಸೋವಿಯತ್ ಕಮಾಂಡರುಗಳು ಜರ್ಮನಿಗೆ ಸನಿಹದಲ್ಲಿರುವಂತೆ ದೈಹಿಕವಾಗಿ ಮುಂದಿನ ಸಾಲಿನಲ್ಲಿ ಇರುವ ಯುದ್ಧತಂತ್ರವನ್ನು ಅನುಸರಿಸಿದರು; ಚುಕೋಯ್ ಅವರು ಇದನ್ನು ಜರ್ಮನ್ನರನ್ನು ‘ತಬ್ಬಿಕೊಳ್ಳುವುದು’ ಎಂದು ಕರೆದರು. ಇದು ಜರ್ಮನಿಯ ಲಘು ಪದಾತಿದಳವನ್ನು ತಾವೇ ಹೋರಾಡಬೇಕು ಅಥವಾ ತಮ್ಮದೇ ಬೆಂಬಲದೊಂದಿಗೆ ಹೋರಾಡುವ ತೊಂದರೆ ಪಡೆಯಬೇಕು, ಇದು ಜರ್ಮನ್ನರಿಗೆ ವೈಮಾನಿಕ ಬೆಂಬಲ ನೀಡಿತು ಮತ್ತು ಫಿರಂಗಿಯ ಬೆಂಬಲ ಕ್ಷೀಣವಾಗಿಸಿತು. ಸ್ಟಾಲಿನ್ಗ್ರ್ಯಾಡ್ ನಲ್ಲಿನ ಅನೇಕ ಕಟ್ಟಡಗಳ ಆಧಾರ ಪಡೆದು ಯುದ್ಧತಂತ್ರದಿಂದ ಪ್ರಮುಖ ಗಲ್ಲಿಗಳನ್ನು ಮತ್ತು ಚೌಕಿಗಳನ್ನು ಪರಿಶೀಲಿಸುವುದು ಉತ್ತಮ ರಕ್ಷಣೆಯಾಗಿದೆ ಎಂಬುದನ್ನು ಸೋವಿಯತ್ ಗಳು ಅರ್ಥಮಾಡಿಕೊಂಡರು. ಇಂತಹ ಯುದ್ಧತಂತ್ರವು ಸೋವಿಯತ್ ಗಳು ಸಾಧ್ಯವಿರುವಷ್ಟು ಹೆಚ್ಚು ಸಮಯದವರೆಗೆ ಈ ನಗರದ ಮೇಲೆ ಹಿಡಿತ ಹೊಂದಿರಬಹುದಾಗಿತ್ತು. ಹೀಗೆಯೇ ಅವರು ವಾಸದ ಮಹಡಿಯ ಬೇರೆ ಬೇರೆ ಮಹಡಿಗಳಲ್ಲಿನ ಬ್ಲಾಕ್ ಗಳು, ವಸ್ತು ಸಂಗ್ರಹಾಲಯಗಳು, ಕಾರ್ಖಾನೆಗಳು, ಗಲ್ಲಿಯ ತುದಿಯ ಮನೆಗಳು ಮತ್ತು ಕಚೇರಿ ಕಟ್ಟಡಗಳಲ್ಲಿ ಮಷಿನ್ ಗನ್ ಗಳು, ಟ್ಯಾಂಕ್ ನಿರೋಧಕ ರೈಫಲ್ ಗಳು, ಚಿಕ್ಕ ಫಿರಂಗಿಗಳು, ಸಿಡಿಮದ್ದುಗಳು, ಬಾರ್ಬ್ ಮಾಡಲ್ಪಟ್ಟ ವೈಯರ್ ಗಳು, ದಾಳಿಕಾರಕಗಳು ಮತ್ತು 5 ರಿಂದ 10 ಸಣ್ಣ ಘಟಕಗಳ ಉಪ ಮಶಿನ್ ಗನ್ನರ್ ಗಳು ಹಾಗೂ ಗ್ರೇನೇಡ್ ಎಸೆತಗಾರರು ಸೇರಿಕೊಂಡು ಮನೆಯಿಂದ ಮನೆಗೆ ದಾಳಿ ನಡೆಸಲು ಸಜ್ಜಾಗಿದ್ದರು. ಅಹಿತವಾದ ದಾಳಿಯು ಪ್ರತಿಯೊಂದು ಗಲ್ಲಿ, ಮನೆ, ಕಾರ್ಖಾನೆ, ಮಾಳಿಗೆ ಮನೆ ಹಾಗೂ ಮೆಟ್ಟಿಲುಗಳನ್ನು ನಾಶಮಾಡಿತು. ದಾಳಿ ನಡೆದ ಸುತ್ತು ಬಳಸಿನ ಕೋಟೆಯ ಪ್ರದೇಶದಲ್ಲಿ ಚರಂಡುಗಳಿದ್ದವು. ಜರ್ಮನ್ನರು ಇಂತಹ ನೋಡಿರದ ನಗರದ ಯುದ್ಧವನ್ನು ರಾಟನ್ ಕ್ರೇಗ್ (ಮೊಲದ ಯುದ್ಧ) ಎಂದು ಕರೆಯುತ್ತಿದ್ದರು, ಅಡುಗೆ ಮನೆಯನ್ನು ಹಿಡಿತಕ್ಕೆ ತೆಗೆದುಕೊಂಡಿದ್ದರೂ ವಾಸಿಸುವ ಕೋಣೆಗಾಗಿ ಹೋರಾಟ ನಡೆಸುತ್ತಿರುವುದು ಎಂದು ಹಾಸ್ಯ ಮಾಡುತ್ತಿದ್ದರು. ಇಂತಹ ಹತಾಶ ಅವಸ್ಥೆಯಿಂದ ಕೂಡಿದ್ದಾಗ ಎಲ್ಲ ಯುದ್ಧದ ರೇಖೆಗಳು ನಾಶಗೊಳಿಸಲ್ಪಟ್ಟವು. ಮತ್ತು ಜರ್ಮನಿಯ ಸೈನಿಕರು ಹೆಚ್ಚಾಗಿ ಅವಲಂಬಿತವಾಗಿದ್ದ ಶಸ್ತ್ರಾಸ್ತ್ರ ಹೊಂದಿದ್ದ ಪ್ರಮುಖ ಸೇನೆಯು ಜನವಸತಿ ಪ್ರದೇಶಗಳು, ಕಛೇರಿ ಸಮುಚ್ಛಯಗಳು, ಮತ್ತು ಅಪಾರ್ಟುಮೆಂಟುಗಳ ಮೇಲೆ ಬಾಂಬಿಂಗ್ ಪ್ರಾರಂಭಿಸಿದರು. ಕೆಲವು ಅತ್ಯಂತ ಎತ್ತರದ ಕಟ್ಟಡಗಳು ಜರ್ಮನಿಯ ಆಕಾಶದಾಳಿಯಿಂದಾಗಿ ಚಾವಣಿ ಕಳೆದುಕೊಂಡವು, ನಂತರ ಹೆಜ್ಜೆ ಹೆಜ್ಜೆಗೂ ಪರಸ್ಪರ ಅತ್ಯಂತ ಸಮೀಪದಲ್ಲಿ ಯುದ್ಧಕ್ಕೆ ತೊಡಗಿದರು ಮತ್ತು ಆ ಒಡೆದ ಕಟ್ಟಡಗಳಿಂದಲೂ ಯುದ್ಧಕ್ಕೆ ತೊಡಗಿದರು.
ನಗರದಲ್ಲಿ ಎಚ್ಚರಕ್ಕೆ ಚಾಚಿಕೊಂಡಿರುವ ಮಾಮಯೇವ್ ಕುರ್ಗಾನ್ ಗುಡ್ಡದ ಮೇಲೆ ಹೋರಾಡುವುದು ಸಂಪೂರ್ಣವಾಗಿ ಕರುಣಾರಹಿತವಾಗಿತ್ತು ಮತ್ತು ಅನೇಕ ಬಾರಿ ಕೈಗಳು ಸ್ಥಾನಪಲ್ಲಟವಾಗಿತ್ತು.: p? ಸೆಪ್ಟೆಂಬರ್ 12 ರಂದು 62 ನೇ ಸೋವಿಯತ್ ಸೈನ್ಯವು ಕೇವಲ 90 ಟ್ಯಾಂಕ್ ಗಳು, 700 ಸಣ್ಣ ಫಿರಂಗಿಗಳು ಹಾಗೂ ಕೇವಲ 20 ಸಾವಿರ ಜನರ ಸಂಖ್ಯೆಗೆ ಇಳಿಯಿತು.: 128
ಮಾಮಯೇವ್ ಕುರ್ಗಾನ್ ಹಾಗೂ ರೇಲ್ವೆ ಸ್ಟೇಷನ್ ನಂ. 1 ರನ್ನು ವಾಪಸ್ ಪಡೆಯುವ ಕೆಲಸಕ್ಕೆ ನೇಮಿಸಲ್ಪಟ್ಟ 13 ನೇ ಗಾರ್ಡ್ ರೈಫಲ್ ಡಿವಿಶನ್ ವಿಪರೀತ ನಷ್ಟ ಅನುಭವಿಸಿತು. ಮೊದಲ 24 ಗಂಟೆಗಳಲ್ಲಿ ಡಿವಿಶನ್ ನ ಶೇ. 30 ರಷ್ಟು ಸೈನಿಕರು ಕೊಲ್ಲಲ್ಪಟ್ಟರು ಮತ್ತು ಸಂಪೂರ್ಣ ಯುದ್ಧದಲ್ಲಿ ಒಟ್ಟು 10 ಸಾವಿರ ಸೈನಿಕರಲ್ಲಿ ಕೇವಲ 320 ಸೈನಿಕರು ಮಾತ್ರ ಬದುಕುಳಿದರು.: 135 ಎರಡೂ ಉದ್ದೇಶಗಳೂ ಕೈವಶವಾದರೂ ಕೇವಲ ತಾತ್ಕಾಲಿಕವಾಗಿ ಮಾತ್ರ ಉಳಿಯಿತು. ರೈಲ್ವೆ ಸ್ಟೇಷನ್ 6 ಗಂಟೆಗಳಲ್ಲಿ 14 ಬಾರಿ ಕೈ ಬದಲಾಯಿತು. ಅಂದೇ ಸಂಜೆ 13 ನೇ ಗಾರ್ಡ್ ರೈಫಲ್ ಡಿವಿಶನ್ ಬದುಕುಳಿದಂತೆ ಹಿಡಿಯಲ್ಪಟ್ಟಿತು ಆದರೆ, ಇದರ ಜನರು ಇದೇ ಸಂಖ್ಯೆಯ ಜರ್ಮನ್ನರನ್ನು ಕೊಲೆಗೈದಿತು. ಯುದ್ಧವು ಹತ್ತಿರದ ಧಾನ್ಯದ ತೊಟ್ಟಿಯು 3 ವಾರಗಳ ಕಾಲ ತೀವ್ರ ತೊಂದರೆಗೆ ಒಳಗಾಯಿತು. ಯಾವಾಗ ಕೊನೆಯಲ್ಲಿ ಜರ್ಮನಿ ಸೈನಿಕರು ಹಿಡಿತ ಪಡೆದರೋ ಆಗ ಕೇವಲ 40 ಸೋವಿಯತ್ ಸೈನಿಕರ ಶವ ಪತ್ತೆಯಾಯಿತು, ಆದರೂ ಸೋವಿಯತ್ ಪಡೆ ಅತ್ಯಂತ ಉಗ್ರ ಪ್ರತಿರೋಧ ತೋರಿದ್ದ ಕಾರಣ ಇಲ್ಲಿ ಇನ್ನೂ ಹೆಚ್ಚಿನ ಜನರಿದ್ದರು ಎಂದು ಜರ್ಮನ್ನರು ಅಂದಾಜಿಸಿದರು. ಸೋವಿಯತ್ ಗಳು ತಾವು ಹಿಂತಿರುಗುವ ಸಮಯದಲ್ಲಿ ಅಲ್ಲಿದ್ದ ಧಾನ್ಯದ ರಾಶಿಯನ್ನು ಸುಟ್ಟುಹಾಕಿದರು. ನಗರದ ಮತ್ತೊಂದು ಭಾಗದಲ್ಲಿ ಸೋವಿಯತ್ ನ ಯಾಕೋವ್ ಪಾವ್ಲೋವ್ ಹಿಡಿತದಲ್ಲಿದ್ದ ಮತ್ತೊಂದು ತುಕಡಿಯು ನಗರದ ಮಧ್ಯಭಾಗದಲ್ಲಿದ್ದ ಒಂದು ಅಬೇಧ್ಯವಾದ ಕೋಟೆಯ ವಾಸದ ಮಹಡಿಗೆ ಹಿಂತಿರುಗಿತು, ನಂತರ ಇದಕ್ಕೆ ‘ಪಾವ್ಲೋವ್ ಹೌಸ್’ ಎಂದು ಕರೆಯಲಾಯಿತು. ಇದರ ಸುತ್ತಲೂ ಸೈನಿಕರು ಮೈನ್ ಫೀಲ್ಡ್ ತಯಾರಿಸಿದರು, ಈ ಮನೆಯ ಕಿಟಕಿಗೆ ಮಷಿನ್ ಗನ್ ಹಿಡಿದರು ಹಾಗೂ ಗೋಡೆಗಳ ತಳಬದಿಯನ್ನು ಫಿರಂಗಿಯಿಂದ ತೂತು ಮಾಡಿ ಉತ್ತಮ ಸಂಪರ್ಕ ಕಲ್ಪಿಸಿಕೊಂಡರು.: 198 ಗೋಡೆಯ ತಳಬದಿಯಲ್ಲಿ 10 ಸೋವಿಯತ್ ನಾಗರಿಕರು ಅಗಡಿರುವುದನ್ನು ಸೈನಿಕರು ಪತ್ತೆ ಹಚ್ಚಿದರು. ಅವರು ಎರಡು ತಿಂಗಳುಗಳಿಂದ ಬಿಡುಗಡೆ ಆಗಿರಲಿಲ್ಲ ಮತ್ತು ಹೆಚ್ಚು ಸೈನಿಕರಿಂದ ಬಲಗೊಳಿಸಲ್ಪಟ್ಟಿರಲಿಲ್ಲ. ಯುದ್ಧದ ನಂತರ ಚಿಕೋವ್ ಅವರು ತಮಾಷೆ ಮಾಡುತ್ತ ಪಾವ್ಲೋವ್ ಹೌಸನ್ನು ವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಮಡಿದಷ್ಟು ಜರ್ಮನರು ಪ್ಯಾರಿಸ್ಸನ್ನು ವಶಪಡಿಸಿಕೊಳ್ಳುವಾಗಲೂ ಮಡಿದಿರಲಿಲ್ಲ ಎಂದು ತಮಾಷೆ ಮಾಡುತ್ತಿದ್ದರು. ಬೀವರ್ ಪ್ರಕಾರ ಎರಡು ತಿಂಗಳುಗಳ ಪೂರ್ತಿ ಕಟ್ಟಡದ ಮೇಲೆ ದಾಳಿ ಮಾಡಿದ ಜರ್ಮನ್ನರ ಪ್ರತಿ ದಾಳಿಕಾರರ ಮೊದಲು ಸೋವಿಯತ್ ಗಳು ದ ಸ್ಕ್ವೇರ್ ಸುತ್ತಲೂ ದಾಳಿ ನಡೆಸಲು ಅನುಕೂಲವಾಗುವಂತೆ ಓಡಿಹೋಗಬೇಕಿತ್ತು ಮತ್ತು ಮಷಿನ್ ಗನ್ ಹಾಗೂ ಟ್ಯಾಂಕ್ ನಿರೋಧಕ ಬಂದೂಕುಗಳಿಂದ ಕಟ್ಟಡದೊಳಗೆ ಜರ್ಮನ್ನರ ಹೆಣದ ರಾಶಿ ಹಾಕಬೇಕಿತ್ತು. ಕಟ್ಟಡಕ್ಕೆ ಜರ್ಮನಿಯ ನಕಾಶೆಯಲ್ಲಿ ಫೆಸ್ಟಂಗ್ (ಫೋರ್ಟೆಸ್) ಎಂದು ಹೆಸರಿಸಲಾಯಿತು. ಸಾರ್ಜೆಂಟ್ ಪಾವ್ಲೋವ್ ಅವರನ್ನು ಅವರು ಕೈಗೊಂಡ ಕ್ರಮದ ಕಾರಣ ಸೋವಿಯತ್ ತಂಡದ ಹೀರೋ ಎಂದು ರಂಗ್ಣಿಸಲಾಯಿತು.
ಸ್ಥಳವು ಯಾವುದೇ ಅಂತ್ಯ ಕಾಣದಾದಾಗ ಜರ್ಮನ್ನರು ದೊಡ್ಡ ಗಾತ್ರದ ಫಿರಂಗಿ ಪಡೆಯನ್ನು ನಗರಕ್ಕೆ ತರಲು ಆರಂಭಿಸಿದರು. ದೈತ್ಯಾಕಾರದ 800 ಎಂಎಂ ನ ಡೋರಾ ಹೆಸರಿನ ಬಂದೂಕನ್ನು ಕಷ್ಟಪಟ್ಟು ತಂದರು. ಸೋವಿಯತ್ ಗಳಿಗೆ ಪಶ್ಚಿಮ ಭಾಗದಲ್ಲಿ ದೊಡ್ಡ ಪ್ರಮಾಣದ ಫಿರಂಗಿಗಳ ಬ್ಯಾಟರಿ ನಿರ್ಮಿಸಲು ಅನುವು ಮಾಡಿಕೊಟ್ಟಿತು, ಆದರೆ, ವೋಲ್ಗಾ ಸುತ್ತಲೂ ಯಾವುದೇ ಸೈನ್ಯ ಕಳಿಸುವ ಕ್ರಮ ಕೈಗೊಳ್ಳಲಿಲ್ಲ. ಈ ಫಿರಂಗಿಗಳು ಜರ್ಮನ್ನರ ಸೇನೆಗಳ ಮೇಲೆ ಫಿರಂಗಿ ಗುಂಡು ಹಾರಿಸುವುದನ್ನು ಮುಂದುವರಿಸಿದವು. ಜರ್ಮನ್ ಟ್ಯಾಂಕ್ ಗಳು ಉಪಯೋಗವಿಲ್ಲದಂತಾಯಿತು, ಚೂರು ಚೂರಾಗಿ 8 ಮೀಟರ್ ಎತ್ತರಕ್ಕೆ ಹಾರಲ್ಪಟ್ಟವು.
ಎರಡೂ ಕಡೆಗಳಲ್ಲಿನ ಗುಂಡು ಹಾರಿಸುವವರು ನಾಶಮಾಡಲು ದೊಡ್ಡ ಪ್ರಮಾಣದ ವಿಪತ್ತುಗಳನ್ನು ಸೃಷ್ಟಿಸಿದರು. ಇವರಲ್ಲಿದ್ದ ಹೆಚ್ಚು ಸಫಲತೆ ಹೊಂದಿದ ಹಾಗೂ ಹೆಚ್ಚು ಜನಪ್ರಿಯ ದಾಳಿಕಾರ ವಾಸಿಲಿ ಜೇಟ್ಸೆವ್ ಯುದ್ಧದಲ್ಲಿ 242 ರಿಂದ 400 ವರೆಗೆ ಹತ್ಯೆಗೈದ. ಜೇಟ್ಸೇವ್ ಎಲ್ಲ ದಾಳಿಕೋರರಲ್ಲಿ ಒಬ್ಬರಾಗಿದ್ದರು ಹಾಗೂ 30 ಕ್ಕಿಂತಲೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದರು, ಇವರು ಸುಮಾರು 3,000 ಕ್ಕಿಂತ ಹೆಚ್ಚು ಜರ್ಮನ್ ಸೈನಿಕರನ್ನು ಕೊಂದ ಖ್ಯಾತಿ ಪಡೆದಿದ್ದರು. ಅಲ್ಲದೆ, ಆತನಿಗೆ ಜರ್ಮನ್ ದಾಳಿಕಾರ ಎರ್ವಿನ್ ಕೋನಿಗ್ ಅವರನ್ನು ಕೂಡ ಕೊಲ್ಲುವಂತೆ ಸೂಚನೆ ನೀಡಲ್ಪಟ್ಟಿತ್ತು. ಆದರೂ ಇದು ಕಲ್ಪನೆಯಂತಾಗಿತ್ತು. ಜೆಟ್ಸೇವ್ ಅವರು ಯುದ್ಧದಲ್ಲಿ ಕೈಗೊಂಡ ಕ್ರಮಗಳಿಗಾಗಿ ಸೋವಿಯನ್ ಸಂಯುಕ್ತದಲ್ಲಿ ಹೀರೋ ಎಂದು ಗೌರವಿಸಲ್ಪಟ್ಟರು.
ಸ್ಟಾಲಿನ್ ಹಾಗೂ ಹಿಟ್ಲರ್ ಇಬ್ಬರಿಗೂ ಸ್ಟಾಲಿನ್ಗ್ರ್ಯಾಡ್ ಯುದ್ಧತಂತ್ರದ ಅರ್ಥಕ್ಕಿಂತ ಪ್ರತಿಷ್ಠೆಯ ವಿಷಯವಾಗಿತ್ತು. ಸೋವಿಯತ್ ಆಡಳಿತವು ರೆಡ್ ಆರ್ಮಿಯ ಯುದ್ಧತಂತ್ರವನ್ನು ಮಾಸ್ಕೋವ್ ಕ್ಷೇತ್ರದಿಂದ ಸಣ್ಣ ವೋಲ್ಗಾಕ್ಕೆ ಸ್ಥಳಾಂತರಿಸಿತು ಹಾಗೂ ಸಂಪೂರ್ಣ ದೇಶದಿಂದ ವಿಮಾನವನ್ನು ಸ್ಟಾಲಿನ್ಗ್ರ್ಯಾಡ್ ಪ್ರದೇಶಕ್ಕೆ ಸ್ಥಳಾಂತರಿಸಿತು.
ಎರಡೂ ಸೈನ್ಯಾಧಿಕಾರಿಗಳಿಗೆ ಆಗಾಧವಾದ ತೊಂದರೆ ಉಂಟಾಗಿತ್ತು: ಪಾಲಸ್ ಅವರು ಹಿಡಿಕ್ಕೊಳಪಡಿಸಲಾಗದ ಅನೈಚ್ಛಿಕ ಸಂಕೋಚನವನ್ನು ತಮ್ಮ ಕಣ್ಣಿನಲ್ಲಿ ಅಭಿವೃದ್ಧಿಗೊಳಿಸಿದರು. ಯಾವಾಗ ಚಿಕೋವ್ ಅವರು ಇಸುಬು ಉಂಟಾದಾಗ ಆತನ ಕೈಗಳಿಗೆ ಸಂಪೂರ್ಣವಾಗಿ ಬ್ಯಾಂಡೇಜ್ ಹಾಕಲಾಯಿತು. ಇದು ಕೊಟ್ಟಕೊನೆಯಲ್ಲಿ ಆತನ ಮುಖದ ಎಡಭಾಗದಲ್ಲಿ ನೋವನ್ನು ನೀಡಿತು. ಅತ್ಯಂತ ಹತ್ತಿರದಿಂದ ಮಾಡಲ್ಪಟ್ಟ ಯುದ್ಧದಿಂದ ಎರಡೂ ಬದಿಗಳ ಪಡೆಗಳು ಒಂದೇ ಪ್ರಮಾಣದ ತೊಂದರೆಯನ್ನು ಅನುಭವಿಸಿದವು.
ಸೋವಿಯತ್ ದೇಶದ ತಡೆಯನ್ನು ಸಂಪೂರ್ಣವಾಗಿ ನಾಶಗೊಳಿಸುವ ಉದ್ದೇಶದಿಂದಾಗಿ ಲುಫ್ಟ್ ಫ್ಲೋಟ್ಟೆ 4 ಎಸ್ ಸ್ಟಕೇವಾಫ್ಫೇ ಸೋವಿಯತ್ ವಿರುದ್ಧ ಅಕ್ಟೋಬರ್ 5 ರಂದು ಟ್ರ್ಯಾಕ್ಟರ್ ಫ್ಯಾಕ್ಟರಿ ಮೇಲೆ 900 ವೈಯಕ್ತಿಕ ವಿಮಾನಗಳನ್ನು ಹಾರಿಸಿತು .ಅನೇಕ ಸೋವಿಯತ್ ಸೈನಿಕ ಪಡೆಗಳು ನಾಶಗೊಳಿಸಲ್ಪಟ್ಟವು. ಮರುದಿನ ಬೆಳಿಗ್ಗೆ ಸೋವಿಯತ್ 339 ನೇ ಕಾಲಾಳು ಸೈನಿಕಪಡೆಯು ಗಾಳಿಯಲ್ಲಿ ನಡೆಸಿದ ಆಕ್ರಮಣದಲ್ಲಿ ಕೊಲ್ಲಲ್ಪಟ್ಟವು.: 83
ಅಕ್ಟೋಬರ್ ಮಧ್ಯಭಾಗದಲ್ಲಿ ಲಫ್ಟ್ ವಾಫ್ಫೇ ಅವರು ಉಳಿದ ರೆಡ್ ಆರ್ಮಿ ನೆಲೆಯು ಹಿಡಿತ ಹೊಂದಿರುವ ಪಶ್ಚಿಮ ದಡದ ವಿರುದ್ಧ ಪ್ರಯತ್ನಿಸುವ ಕುರಿತು ಯೋಚಿಸಿದರು. ಲಫ್ಟ್ ಫ್ಲೋಟ್ಟೆ 4 ಬಾರಿ 2000 ರೀತಿಯ 600 ಟನ್ಗಳಷ್ಟು ಬಾಂಬುಗಳನ್ನು ಅಕ್ಟೋಬರ್ 14 ಮತ್ತು ಜರ್ಮನಿ ಲಘುಪದಾತಿದಳವು ಮೂರು ಕಾರ್ಖಾನೆಗಳನ್ನು ಸುತ್ತುವರಿದಿದ್ದಾಗ 600 ಟನ್ ಗಳಷ್ಟು ಬಾಂಬ್ ಗಳನ್ನು ಹಾಕಲಾಯಿತು. ಸ್ಟಕಾಗೆಸ್ಚಾವೇಡರ್ 1, 2 ಮತ್ತು 77 ಗಳು ದೊಡ್ಡ ಪ್ರಮಾಣದಲ್ಲಿ ಸೋವಿಯತ್ ಫಿರಂಗಿಗಳನ್ನು ವೋಲ್ಗಾದ ಪೂರ್ವ ದಡದಲ್ಲಿ ಅವರ ಗಮನ ಹಡಗುಗಳತ್ತ ತಿರುಗುವುದರೊಳಗೆ ಅದು ಮತ್ತೊಮ್ಮೆ ಕಡಿಮೆಯಾಗಿರುವ ಸೋವಿಯತ್ ಪಡೆಯನ್ನು ಒಟ್ಟುಗೂಡಿಸಿ ವಿರೋಧ ವ್ಯಕ್ತಪಡಿಸುವುದರೊಳಗೆ ತಣ್ಣಗಾಗಿಸಿತು. 62 ನೇ ಸೈನ್ಯವು ಎರಡಾಗಿ ಒಡೆಯಲ್ಪಟ್ಟಿತು ಮತ್ತು ಪೂರೈಸಲ್ಪಟ್ಟ ದೋಣಿಯ ಮೇಲಿನಿಂದ ಉದ್ದೇಶಿತ ಗಾಳಿಯಲ್ಲಿನ ದಾಳಿಯು ಈಗ ನಿಷ್ಕ್ರಿಯವಾಯಿತು.
ಸೋವಿಯತ್ ಗಳು ಬಲವಂತವಾಗಿ ವೋಲ್ಗಾದ ಪಶ್ಚಿಮ ದಡದಲ್ಲಿನ 1,000-yard (910 m) ಬಯಲು ಭೂಮಿಯಲ್ಲಿ 1,208 ಕ್ಕಿಂತ ಹೆಚ್ಚು ಸ್ಟುಕಾ ಜನರ ತಂಡವನ್ನು ಅವರನ್ನು ಕೊಲ್ಲುವ ಉದ್ದೇಶದಿಂದ ತುಂಬಲಾಯಿತು. ದ್ವೇಷದಿಂದ ತೀವ್ರವಾಗಿ ಗಾಳಿಯಲ್ಲಿ ಫಿರಂಗಿ ದಾಳಿಯನ್ನು ಮಾಡಲಾಯಿತು.: 84 (ಸ್ಟಾಲಿನ್ಗ್ರ್ಯಾಡ್ ಗಳು ಭಾರೀ ಪ್ರಮಾಣದ ಫಿರಂಗಿ ಸಿಡಿತದಿಂದ ಸೇಡಾನ್ ಅಥವಾ ಸೇವಾಸ್ಟೋಪೋಲ್ ಗಳಿಂತ ಹೆಚ್ಚು ತೊಂದರೆಗೆ ಒಳಗಾದರು) ಸೋವಿಯತ್ ನ 62 ನೇ ಸೈನ್ಯಪಡೆಯ 47,000 ಜನರು ಹಾಗೂ 19 ಟ್ಯಾಂಕ್ ಗಳು ಆರನೇ ಆರ್ಮೀ ಹಾಗೂ ನಾಲ್ಕನೇ ಪ್ಯಾನ್ಜೆರಾರ್ಮೀ ಯನ್ನು ಪಶ್ಚಿಮ ದಡದಲ್ಲಿ ನಾಶಗೊಳಿಸಲ್ಪಟ್ಟವು.
ಲಫ್ಟ್ ವಪ್ಫೇ ವಾಯು ಹಿರಿಮೆಯನ್ನು ನವೆಂಬರ್ ಮೊದಲಿನಲ್ಲಿ ಉಳಿಸಿಕೊಂಡಿತು ಮತ್ತು ಸೋವಿಯತ್ ನ ದಿನದಲ್ಲಿ ವಾಯು ದಾಳಿಯನ್ನು ಎದುರಿಸುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ, 20,000 ದಾಳಿಗಳನ್ನು ದಾಟಿದ ನಂತರ ಅದರ ನಿಜವಾದ ಶಕ್ತಿಯಾಗಿದ್ದ 1,600 ಸೇವಾನಿರತ ವಿಮಾನಗಳು 950 ಕ್ಕೆ ಇಳಿದವು. ಕ್ಯಾಂಪ್ ವಾಫ್ಫೇ (ಬಾಂಬ್ ದಾಳಿ ಮಾಡುವ ದಳ) ಜೋರಾದ ಹೊಡೆತ ನೀಡಿತು, ಇದು 480 ಕೇವಲ 232 ಮಾತ್ರ ಉಳಿಯಿತು.: 95 ಆದರೂ, ವಿವಿಎಸ್ ವಿರುದ್ಧದ ಗುಣಾತ್ಮಕ ದಾಳಿಯ ಶ್ರೇಷ್ಠತೆಯನ್ನು ಮೆಚ್ಚಿಕೊಳ್ಳಲಾಯಿತು ಮತ್ತು ಪಶ್ಚಿಮದಲ್ಲಿ ಶೇ. 80 ರಷ್ಟು ಲಫ್ಟ್ ವೈಫ್ಫೆ ಅವರ ಮೂಲಗಳನ್ನು ಹೊಂದಿದ್ದು, ಲಫ್ಟ್ ಫ್ಲೋಟ್ಟೆ 4 ಸೋವಿಯತ್ ನ ವಾಯು ಶಕ್ತಿ ಬೆಳವಣಿಗೆಯನ್ನು ಕುಂದಿಸಲು ಸಾಧ್ಯವಾಗಲಿಲ್ಲ. ತಿರುಗಿ ಹೇಳುವ ಸಮಯದಲ್ಲಿ ಸೋವಿಯತ್ ಗಳು ಇದನ್ನು ಸಂಖ್ಯೆಯಲ್ಲಿ ಮೀರಿಸಿದವು.
ಸೋವಿಯತ್ ಬಾಂಬ್ ದಳವು ದಿ ಅವೈಟ್ಸಿಯಾ ಡಾಲ್ನೆಗೋ ಡೆಯಸ್ಟವ್ಜ್ಯಾ (ಎಡಿಡಿ) ಹಿಂದಿನ 18 ತಿಂಗಳುಗಳ ಕಾಲ ತೀವ್ರ ನಷ್ಟ ಅನುಭವಿಸಿತು, ರಾತ್ರಿಯಲ್ಲಿ ಹಾರಾಟ ಮಾಡದಂತೆ ನಿರ್ಭಂದಿಸಲ್ಪಟ್ಟಿತು. ಸೋವಿಯತ್ ಗಳು 11,317 ರಾತ್ರಿ ದಾಳಿಗಳನ್ನು ಸ್ಟಾಲಿನ್ಗ್ರ್ಯಾಡ್ ಮತ್ತು ಡಾನ್-ಬೆಂಡ್ ಕ್ಷೇತ್ರದಲ್ಲಿ 17 ಜುಲೈ ಮತ್ತು 19 ನವೆಂಬರ್ ಮಧ್ಯೆ ಮಾಡಿತು. ಈ ದಾಳಿಯು ಕಡಿಮೆ ಪ್ರಮಾಣದ ನಷ್ಟಕ್ಕೆ ಕಾರಣವಾಯಿತು ಮತ್ತು ಅಸಹ್ಯವಾದ ಬೆಲೆಯನ್ನು ಮಾತ್ರ ನೀಡಿತು.: 82
ಲಫ್ಟ್ ವಫ್ಪೆ ಅವರಿಗೆ ಈಗ ಅತ್ಯಂತ ಕಷ್ಟಕರ ಪರಿಸ್ಥಿತಿ ಹೆಚ್ಚಾಗತೊಡಗಿತು. ನವೆಂಬರ್ 8 ರಂದು ಲಫ್ಟ್ ಫ್ಲೋಟ್ಟೆ 4 ಅವರ ಘಟಕವು ಉತ್ತರ ಆಫ್ರಿಕಾದಲ್ಲಿ ಒಟ್ಟುಗೂಡಿದ ನೆಲದ ಯುದ್ಧವನ್ನು ಹಿಂದಕ್ಕೆ ಪಡೆಯಿತು. ಜರ್ಮನಿಯ ವಾಯು ಸೈನ್ಯವು ಸಣ್ಣ ಪ್ರಮಾಣದಲ್ಲಿ ಯುರೋಪಿನೆಲ್ಲೆಡೆ ಹರಡುತ್ತಿರುವುದು ತಿಳಿದುಬಂದಿತು ಮತ್ತು ಇತರ ಸೋವಿಯತ್ – ಜರ್ಮನ್ ಮುಂಭಾಗದ ದಕ್ಷಿಣ ಕ್ಷೇತ್ರಗಳಲ್ಲಿ ತನ್ನ ಶಕ್ತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿತ್ತು. ಅಷ್ಟರಲ್ಲಿ ಅಮೇರಿಕಾ ಸರ್ಕಾರದಿಂದ ಸಾಲ-ಗುತ್ತಿಗೆ ಆಧಾರದ ಮೇಲೆ ಸೋವಿಯತ್ ಸೈನ್ಯವು ಪೂರೈಸಲ್ಪಡುತ್ತಿತ್ತು. 1942 ರ ಕೊನೆಯ ಮೂರು ತಿಂಗಳಿನ ಸಮಯದಲ್ಲಿ ಸಂಯುಕ್ತ ರಾಜ್ಯಗಳು ಸೋವಿಯತ್ ಸಂಯುಕ್ತಕ್ಕೆ 60,000 ಟ್ರಕ್ ಗಳು, 11,000 ಜೀಪ್ ಗಳು, 2 ಮಿಲಿಯನ್ ಬೂಟ್ ಜೊತೆಗಳು, 50,000 ಟನ್ ಗಳಷ್ಟು ಸಿಡಿತಲೆಗಳು, 450,000 ಟನ್ ಗಳಷ್ಟು ಕಬ್ಬಿಣ ಮತ್ತು 250,000 ಟನ್ ನಷ್ಟು ವಾಯುಯಾನ ಅನಿಲವನ್ನು ಪೂರೈಸಿತು. ಮೊದಲು ಸ್ಟಾಲಿನ್ ಕೋರಿದ್ದ[ಸೂಕ್ತ ಉಲ್ಲೇಖನ ಬೇಕು] ಹೆಚ್ಚಿನ ಅಮೇರಿಕಾದ ಬೂಟುಗಳು ಸೈನ್ಯಕ್ಕೆ ತಲುಪಿದವು. ಆದರೂ, ಯುಎಸ್ಎ ಕಳುಹಿಸಿದ್ದ ಯುದ್ಧಸಾಮಗ್ರಿ ಹಾಗೂ ಆಹಾರದಲ್ಲಿನ ಕೆಲವು ಭಾಗದಷ್ಟು ಜರ್ಮನಿಯ ದಾಳಿಯಲ್ಲಿ ನಾಶಗೊಂಡವು,[ಸೂಕ್ತ ಉಲ್ಲೇಖನ ಬೇಕು] ಹಾಗೆಯೇ ಕಾನ್ವೋಯ್ PQ-17 ಸಹಾ.
ನಿಧಾನವಾಗಿ ಮುನ್ನಡೆದು ಮೂರು ತಿಂಗಳುಗಳ ನಂತರ ಜರ್ಮನ್ನರು ಕೊನೆಗೆ ನದಿಯ ದಡವನ್ನು ಮುಟ್ಟಿದರು, ಶೇ. 90 ರಷ್ಟು ಹಾಳು ಮಾಡಲ್ಪಟ್ಟ ನಗರವನ್ನು ವಶಪಡಿಸಿಕೊಂಡರು ಮತ್ತು ಉಳಿತ ಸೋವಿಯತ್ ಸೈನ್ಯವನ್ನು ಎರಡು ಸಣ್ಣ ವಿಭಾಗಗಳನ್ನಾಗಿ ಒಡೆಯಿತು. ರಕ್ಷಿಸಲ್ಪಟ್ಟ ಬೋಟ್ ಗಳ ಮೇಲೆ ವೋಲ್ಗಾದಲ್ಲಿ ಹಿಮಗಳು ಸುರಿಯತೊಡಗಿದವು ಮತ್ತು ಸೋವಿಯತ್ ಪರ ವಾದಿಗಳಿಂದ ಪೂರೈಕೆಯು ಇನ್ನೂ ಇತ್ತು. ಹೋರಾಟ ಮಾಡುವುದು ವಿಶೇಷವಾಗಿ ಮಾಮಯೇವ್ ಕುರ್ಗಾನ್ ಮೇಲಿನ ಇಳಿಜಾರಿನ ಪ್ರದೇಶದಲ್ಲಿ ಮತ್ತು ನಗರದ ಉತ್ತರ ಭಾಗದ ಪ್ರದೇಶಗಳಲ್ಲಿನ ಕಾರ್ಖಾನೆಗಳ ಒಳಭಾಗದಲ್ಲಿ ಎಂದಿನಂತೆ ಉಗ್ರವಾಗಿ ಮುಂದುವರಿದವು. ಕೆಂಪು ಅಕ್ಟೋಬರ್ ಕಬ್ಬಿಣ ಕಾರ್ಖಾನೆಗಾಗಿ ಜೆರ್ಜಿಂಸ್ಕಿ ಟ್ರಾಕ್ಟರ್ ಕಾರ್ಖಾನೆ ಹಾಗೂ ಬಾರ್ರಿಕಡಿ ಬಂದೂಕು ಕಾರ್ಖಾನೆಗಳಿಗಾಗಿ ನಡೆದ ಯುದ್ಧವು ಜಾಗತಿಕವಾಗಿ ಜನಪ್ರಿಯತೆ ಪಡೆಯಿತು.
ಜರ್ಮನ್ ಸೈನ್ಯ ಚಳಿಗಾಲದಲ್ಲಿ ಆಕ್ರಮಣ ನಡೆಸಲು ಸಿದ್ಧವಾಗಿರಲಿಲ್ಲ ಮತ್ತು ಹೆಚ್ಚಿನ ಸೈನ್ಯವನ್ನು ಪೂರ್ವ ಮುಂಭಾಗದಲ್ಲಿನ ದಕ್ಷಿಣ ಪ್ರಾಂತ್ಯದ ಹೊಸ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿದೆ ಎಂಬುದನ್ನು ತಿಳಿದುಕೊಂಡ ಸ್ಟವಾಕ, ಅನೇಕ ಆಕ್ರಮಣಗಳನ್ನು ಮಾಡಲು ನಿರ್ಧರಿಸಿ 1942 ರ ನವೆಂಬರ್ 19 ರಿಂದ ಫೆಬ್ರವರಿ 2 1943 ರವರೆಗೆ ಹಲವು ಆಕ್ರಮಣಗಳನ್ನು ಮಾಡಿತು.
ಕಳೆದ ಯುದ್ದಗಳ ಇತಿಹಾಸವನ್ನು ಗಮನಿಸಿದಾಗ ಯುದ್ದ ತಂತ್ರದ ಪುನಾರವರ್ತನೆಯನ್ನು 2 ನೇ ಬಾರಿ ನಡೆದ ಗ್ರೇಟ್ ಪ್ಯಾಟ್ರಿಯೋಟಿಕ್ ವಾರ್ನಲ್ಲಿ ಗಮನಿಸಬಹುದು. (19 ನವೆಂಬರ್ 1942 ರಿಂದ 31 ಡಿಸೆಂಬರ್ 1943), ಈ ಕಾರ್ಯ ತಂತ್ರ 1942-1943 ರ ಚಳಿಗಾಲದ ದಂಡಯಾತ್ರೆಗಳನ್ನು ಪ್ರಾರಂಬಿಸಿತು.(19 ನವೆಂಬರ್ 1942 ರಿಂದ-3 ಮಾರ್ಚ್ 1943), ಕೆಲವು 15 ತುಕಡಿಗಳನ್ನೊಳಗೊಂಡ ಸೈನ್ಯವು ಹಲವು ಭೂಮಿಕೆಗಳಲ್ಲಿ ಹೋರಾಡಿತು.
ನೈರುತ್ಯ, ಡಾನ್. ಸ್ಟಾಲಿನ್ಗ್ರಾಡ್ ಮುಂಭಾಗ
(ಲಿಟಲ್ ಸ್ಯಾಟರ್ನ್ ಕಾರ್ಯತಂತ್ರ)16 ಡಿಸೆಂಬರ್ 1942 – 30 ಡಿಸೆಂಬರ್ 1942
ಜರ್ಮನ್ ಸ್ಟಾಲಿನ್ಗಾರ್ಡ್ ವಶಪಾಡಿಸಿಕೊಳ್ಳುವ ಉದ್ದೇಶಿತ ಆಕ್ರಮಣವು ಸ್ಥಳಿಯ ಹವಾಮಾನ ಮತ್ತು ನಗರದಲ್ಲಿ ಬೀಡು ಬಿಟ್ಟಿದ್ದ ರೆಡ್ ಸೇನೆಯಿಂದ ತಾತ್ಕಾಲಿಕವಾಗಿ ಸ್ತಗಿತಗೊಂಡಿತು. ಹಾಗೇಯೆ ಸೋವಿಯತ್ ತನ್ನ ವಿರುದ್ಧದ ಆಕ್ರಮಣದ ಕಾರ್ಯತಂತ್ರವು ಮೋಸದ ಅರೆ ಮನಸಿನ ಕಾರ್ಯ ನೀತಿಯನ್ನು ಕಟ್ಟಕಡೆಯದಾಗಿ ಪತ್ತೆ ಹಚ್ಚಿ ನಾಶಗೊಳಿಸಿತಲ್ಲದೆ 6ನೇ ಸೇನಾ ತುಕಡಿಯು ನಗರವನ್ನು ಸುತ್ತುವರೆಯಿತು. ತತ್ಪರಿಣಾಮವಾಗಿ ಜರ್ಮನ್ ಪ್ರಪಂಚ 2ನೇ ಮಹಾಯುದ್ಧದಲ್ಲಿ ತೀವ್ರತರನಾದ ಸೋಲನ್ನು ಕಾಣಬೇಕಾಯಿತು. ಆಕ್ರಮಣದ ಉದ್ದಕ್ಕೂ ಜರ್ಮನ್ ಮತ್ತು ಒಕ್ಕೂಟದ ಇಟಾಲಿಯನ್, ಹಂಗೇರಿಯನ್, ರೊಮೇನಿಯನ್, ಸೈನಿಕರು ತಮ್ಮ ಕೇಂದ್ರ ಕಾರ್ಯಲಯದ ಸಹಾಯದಿಂದ ಬೆನ್ನಟ್ಟಿರುವ ಸೈನ್ಯದಿಂದ ಬೀ ಗುಂಪಿನ ಸೈನ್ಯವನ್ನು ರಕ್ಷಿಸಬೇಕಾಯಿತು. ಹಂಗೇರಿಯಾದ 2ನೇ ಸೇನೆಯು ಅಗತ್ಯ ಯುದ್ಧ ಸಲಕರಣೆಗಳಿಲ್ಲದ, ಹಾಗೂ ಅಗತ್ಯ ತರಭೇತಿ ಇಲ್ಲದ ಸೇನೆಯಾಗಿದ್ದು ಇದನ್ನು ಕ್ಷೇತ್ರ ರಕ್ಷಣಾ200-kilometre (120 mi) ಕಾರಣವಾಗಿ ಉತ್ತರ ಸ್ಟಾಲಿನ್ಗ್ರಾಡ್ನ ಪೂರ್ವ ಭಾಗದಲ್ಲಿ ಇದ್ದ ಇಟಾಲಿಯನ್ ಮತ್ತು ವರೊನಿಶ್ಗಳ ನಡುವೆ ನೇಮಿಸಲಾಗಿದ್ದಿತು. ಈ ಫಲಿತಾಂಶ ಕೆಲವು ಸಣ್ಣ ಬದಲಾವಣೆಗಳೊಂದಿಗೆ ತನ್ನ 1–2-kilometre (0.6–1.2 mi) ವಿಸ್ತಾರವನ್ನು ಕೆಲವೇ ಕೆಲವು ಸೈನಿಕ ತುಕಡಿಗಳನ್ನು ಹೊಂದಿರುವ ಸೈನಿಕರೊಂದಿಗೆ ಹೆಚ್ಚಿಸಿಕೊಂಡಿತು. ಸೋವಿಯತ್ ಸೈನ್ಯವು ಪಶ್ಚಿಮ ಭಾಗದ ನದಿಗಳ ಬಹುತೇಕ ಸೇತುವೆಗಳನ್ನು ವಶಪಡಿಸಿಕೊಂಡು ಗ್ರೂಪ್ ಬೀ ಸೈನ್ಯಕ್ಕೆ ತೀವ್ರ ತರನಾದ ಆತಂಕವನ್ನು ಒಡ್ಡಿತು
ಅದೇ ರೀತಿ ದಕ್ಷಿಣದ ಸ್ಟಾಲಿನ್ಗಾರ್ಡ್ ಭಾಗದ ಸೇನೆಯು ಕೊಟೆಲ್ನಿಕ್ವೊ ದ ಪಶ್ಚಿಮ - ದಕ್ಷಿಣ ಪ್ರದೇಶವು ರುಮೇನಿಯದ ವಿಐಐ ಸೇನೆಗೆ ಒಳಪಟ್ಟಿತ್ತು. ಇದರ ಹಿಂದೆ ಜರ್ಮನ್ನ 16ನೇ ಯಂತ್ರಚಾಲಿತ ಸೈನಿಕರ ಒಂದು ತುಕಡಿ ಹೊದಿದೆ.
ಅದೇನೆ ಇದ್ದರು ಹಿಟ್ಲರ್ ತನ್ನ ಗಮನವನ್ನು ಕೇಂದ್ರಿಕರಿಸಿದ್ದ ನಗರಕ್ಕೆ ಅಗತ್ಯ ಸಹಾಯವನ್ನು ಆಪೇಕ್ಷಿಸಿದಾಗ ಅದನ್ನು ನಿರಾಕರಿಸಲಾಗಿತ್ತು. ಆರ್ಮಿ ಜನರಲ್ನ ಮುಖ್ಯಸ್ಥ ಫ್ರಾನ್ಜ್ ಹೆಲ್ಡರ್, ಹಿಟ್ಲರ್ ಆ ನಗರದ ಬಗೆಗೆ ಹೊಂದಿದ್ದ ಮುಂದಾಲೋಚನೆಯ ಬಗೆಗೆ ತನ್ನ ಕಳಕಳಿಯನ್ನು ವ್ಯಕ್ತಪಡಿಸಿದ್ದನು. ಅವನತಿಯತ್ತ ಮುಖ ಮಾಡಿದ್ದ ಜರ್ಮನ್ ಮುಂದೆ ಎದುರಾಗಬಹುದಾದ ವಿಪತ್ತಿನ ಬಗ್ಗೆ ಗಮನ ಹರಿಸಲಿಲ್ಲ. ಇದಾದ ನಂತರ ಹೆಲ್ಡರ್ನನ್ನು ಉದ್ದೇಶಿಸಿ ಮಾತನಾಡಿದ್ದ ಹಿಟ್ಲರ್ ಇದನ್ನು ತಾನು ನಿರೀಕ್ಷಿಸಿರಲಿಲ್ಲ ಎನ್ನುತ್ತ ಸ್ಟಾಲಿನ್ಗಾರ್ಡ್ ಹಾಗೂ ವೀಕೆಂಡ್ ಸೈನ್ಯದ ಪಾರ್ಶ್ವವವು ರಾಷ್ಟ್ರೀಯ ಸಮಾಜವಾದಿಗಳ ವಶವಾಗಿರುವುದನ್ನು ಮನಗಂಡು ಆತನನ್ನು ಆ ಹುದ್ದೆಯಿಂದ ಕುರ್ಟ್ ಜಿಯಟ್ಜಲರ್ನೊಂದಿಗೆ ಅಕ್ಟೋಬರ್ ನ ಮಧ್ಯಭಾಗದಲ್ಲಿ ವರ್ಗಮಾಡುತ್ತಾನೆ.
ಸ್ಟಾಲಿನ್ಗ್ರಾಡ್ ಪ್ರದೇಶದಲ್ಲಿ ನಡೆಸಿದ ಕಾರ್ಯ ತಂತ್ರದಲ್ಲಿ ಸೋವಿಯತ್ ಜನರಲ್ ಗಿಯೊರ್ಗಿ ಜುಕೊವ್ ಮತ್ತು ಅಲೆಗ್ಸಾಂಡರ್ ವಸಿಲಿವ್ಸ್ಕೈ ರ ಪಾತ್ರ ಹಾಗೂ ಉತ್ತರ ಮತ್ತು ದಕ್ಷಿಣದ ಸೇನೆಯನ್ನು ಅಧಿಕ ಪ್ರಮಾಣಾದಲ್ಲಿ ಒಂದುಗೂಡಿಸುವಲ್ಲಿ ಮಹತ್ತರವಾಗಿತ್ತು. ಜರ್ಮನ್ ಒಕ್ಕೂಟದ ಸೈನ್ಯವು ತೀವ್ರ ತರನಾದ ಹಾನಿಗೊಳಗಾಯಿತು ಇದನ್ನು ಇಟಾಲಿಯನ್, ಹಂಗೇರಿಯನ್, ರುಮನಿಯನ್ ಸೇನಾ ತುಕಡಿಗಳು ಸೂಕ್ತ ಶಸ್ತ್ರಾಸ್ತ್ರ ಸಲಕರಣೆಗಳಿಂದ ವಂಚಿತವಾಗಿದ್ದವು. ಇಂತಹ ದುರ್ಬಲತೆಯನ್ನು ಉಪಯೋಗಿಸಿಕೊಂಡ ಸೋವಿಯತ್, ಜರ್ಮನ್ ಉತ್ತರ ಆಫ್ರಿಕನ್ ನಲ್ಲಿದ್ದಾಗ ಇಟಾಲಿಯನ್ ಸೇನಾ ನೆಲೆಯ ಮೇಲೆ ಬ್ರಿಟೀಷ್ ಆಕ್ರಮಣ ಮಾಡಲು ಮುಂದಾದಂತೆ, ಜರ್ಮನ್ ವಿರುದ್ಧದ ಸೇನದಳವನ್ನು ಜರ್ಮನ್ ವಿರುದ್ಧವಾಗಿ ಸಾಧ್ಯವಾದಗೆಲ್ಲ ಬಳಸಿಕೊಂಡಿತು. ಯೋಜನೆಯಂತೆ ನಗರದಲ್ಲಿ ಜರ್ಮನ್ನ ಪ್ರಾಬಲ್ಯವನ್ನು ಕಡಿಮೆ ಮಾಡುವುದಾಗಿತ್ತು. ನಂತರ ನಿತ್ರಾಣಗೊಂಡ ಜರ್ಮನ್ನನ್ನು ಬಗ್ಗು ಬಡಿದು ಜರ್ಮನ್ ಸೈನ್ಯವನ್ನೂ ಸೇರಿದಂತೆ ಸ್ಟಾಲಿನ್ಗಾರ್ಡ್ ಪ್ರದೇಶವನ್ನು ಮುತ್ತಿಕೊಳ್ಳುವುದಾಗಿತ್ತು. ಸ್ಟಾಲಿನ್ಗಾರ್ಡ್ ನಿಂದ ದೂರದಲ್ಲೆ ಆಕ್ರಮಣ ಮಾಡುವುದರಿಂದ ಸ್ಟಾಲಿನ್ಗ್ರಾಡ್ನ 6ನೇ ದೊಡ್ಡ ಪ್ರಮಾಣದ ಸೈನ್ಯವನ್ನು ಪ್ರತಿ ಆಕ್ರಮಣಕ್ಕೆ ತಕ್ಷಣವೆ ಸ್ಥಳಾಂತರಿಸುವುದು/ ಪುನರ್ನಿಯೋಜಿಸುವುದು ಕಷ್ಟ ಸಾಧ್ಯವಾಗುತ್ತದೆ.: 221, 226 ದಾಳಿಗೆ ತಯಾರಿ ನಡೆಸುವ ಮುನ್ನ ಮಾರ್ಷಲ್ ಜುಕೋವ್ ಖುದ್ದಾಗಿ ಮುಂಭಾಗಕ್ಕೆ ಬಂದದ್ದು ಬಹಳ ವಿರಳವಾದ ಘಟನೆಯಾಗಿತ್ತು ಕಾರಣ ಮಾರ್ಷಲ್ ಅಂಥಹ ದೊಡ್ಡ ಮಟ್ಟದ ಸ್ಥಾನದಲ್ಲಿರುವವರು ಸಾಮಾನ್ಯವಾಗಿ ಸೇನಾ ಮುಂಭಾಗಕ್ಕೆ ಬರುವುದಿಲ್ಲ.: 222–223 ಯುದ್ಧ ಕಾರ್ಯಚರಣೆಯು ಸೇನೆ ಕೇಂದ್ರದ ನಿರ್ದೇಶನದೊಂದಿಗೆ ಜಂಟಿ ಕಾರ್ಯನಿರ್ವಹಿಸಿತ್ತಲ್ಲದೆ ಈ ಕಾರ್ಯತಂತ್ರಕ್ಕೆ ಸೂಚಿಯಾಗಿ "ಯುರೇನಸ್" ಎಂಬ ನಾಮಕರಣವನ್ನು ಮಾಡಿತ್ತು. ಸದೃಶ ಯೋಜನೆಯಂತೆ 3ವರ್ಷಗಳ ಹಿಂದೆಯೆ ಜುಕೊವ್ ಪ್ರಾಯೋಗಿಕವಾಗಿ ಕಾಲ್ಕಿನ್ ಗಾಲ್ನಲ್ಲಿ ಜಿಪ್ ಹೊಂದಿದ್ದ ಬಧ್ರ ಕವಚದ ಲಕೊಟೆ ಲಗತ್ತಿಸುವುದರೊಂದಿಗೆ 23ನೇ ಜರ್ಮನ್ ಸೇನಾ ತುಕಡಿಯನ್ನು ನಾಶಗೊಳಿಸಿ ವಿಜಯವನ್ನು ಸಾಧಿಸಿದ್ದನು. ಆ ಸಮಯದಲ್ಲಿ ಜುಕೊವ್ ಮತ್ತು ಅಲೆಗ್ಸಾಂಡರ್ ವಸಿಲಿವ್ಸ್ಕೈ ತಮ್ಮ ಜನರಲ್ ಕಾರ್ಯವ್ಯಾಪ್ತಿಯಲ್ಲಿ ಸೋವಿಯತ್ ಯುನಿಯನ್ಗಳ ನಾಯಕರಾಗಿ ಮಿಂಚಿದ್ದರು.
1942ರ ನವೆಂಬರ್ 19ರಂದು ಯುರೇನಸ್ ಕಾರ್ಯತಂತ್ರದ ಬಗ್ಗೆ ರೆಡ್ ಆರ್ಮಿ ಮಾಹಿತಿ ಹೊರಹಾಕಿದ್ದವು. ಸೋವಿಯತ್ ಒಕ್ಕೂಟದ ಅಡಿಯಲ್ಲಿ ಜನರಲ್ ನಿಕೊಲಯ್ ವಟುಟಿನ್ 1ನೇ ಅಂಗರಕ್ಷಕದಳ, 5ನೇ ಟ್ಯಾಂಕ್ ಸೇನೆ, 21ನೇ ಆರ್ಮಿ, ಸೇರಿದಂತೆ 18ಕಾಲಾಲುದಳಗಳ 3 ಗುಂಪು, 8 ಅಗ್ನಿಶಾಮಕ ಟ್ಯಾಂಕ್ 2 ಯಂತ್ರಚಾಲಿತ ಕಾಲಾಳು ಸೈನ್ಯ, 6 ಅಶ್ವ ಸೇನಾ ವಿಭಾಗ ಮತ್ತು 1 ಅಗ್ನಿ ನಿರೋಧಕ ಟ್ಯಾಂಕ್ ಒಳಗೊಂಡಂತೆ 3 ಪೂರ್ಣ ಪ್ರಮಾಣದ ಸೇನೆಯೊಂದಿಗೆ ಆಕ್ರಮಣ ಮಾಡಿದ್ದರು. ಆಕ್ರಮಣದ ವಿಷಯವು ಬಹಳಷ್ಟು ಹಿಂದೆಯೆ ರೊಮೇನಿಯನ್ನರಿಂದ ತಿಳಿದುಬಂದಿದ್ದು ಸಹ ಸೇನೆ ಬಲಪಡಿಸುವಲ್ಲಿ ಸಹಾಯವಾಗಿತ್ತು. ಅಂತೆಯೆ ರೊಮೇನಿಯನ್ 3ನೇ ಸೇನೆಯು ಬಡಕಲಾಗಿದ್ದ ಜರ್ಮನ್ ಸೇನೆ ಸಂಪೂರ್ಣವಾಗಿ ನೆಲ ಕಚ್ಚಿತು. ನವೆಂಬರ್ 20ರಂದು ಸೋವಿಯತ್ನ 2ನೇ ಆಕ್ರಮಣವು ದಕ್ಷಿಣ ಸ್ಟಾಲಿನ್ಗ್ರಾಡ್ನಲ್ಲಿ ರೊಮೇನಿಯನ್ ಐ.ವಿ ಸೇನೆಯು ಗುರಿಯಾಗಿಸಿದ್ದ ನೆಲೆಗಳ ವಿರುದ್ಧವಾಗಿ ಪ್ರಾಂಭವಾಯಿತು, ಬಹುತೇಕ ಕಾಲಾಳು ಸೇನಾ ಬಲವನ್ನೆ ಹೊಂದಿದ್ದ ರೊಮೇನಿಯನ್ ಸೇನೆ ಶೀಘ್ರವಾಗಿಯೆ ಸೋತುಹೋಯಿತು. ಸೋವಿಯತ್ ಸೇನೆಯು ಪಶ್ಚಿಮದಲ್ಲಿ ಉಭಯ ಪಾರ್ಶ್ವದ ಆಕ್ರಮಣವನ್ನು ನಡೆಸಿ ಎರಡು ದಿನಗಳ ನಂತರ ಕಲಚ್ ನಗರದ ಹತ್ತಿರ ಸ್ಟಾಲಿನ್ಗ್ರಾಡ್ನ್ನು ಸುತ್ತುವರೆಯಿತು. ಇದು ಆ ಸಮಯದಲ್ಲಿ ಚಿತ್ರಿಕರಣಗೊಳ್ಳಲಿಲ್ಲ. ಸೋವಿಯತ್ ತನ್ನ ಪ್ರಚಾರ ಪ್ರಿಯತೆಯಿಂದ ಜಗತ್ತಿನದಾದ್ಯಂತ ಪ್ರಸಿದ್ಧಿ ಸಾಧಿಸಿತು.
ಸುಮಾರು 290,000 ಜರ್ಮನಿ ಮತ್ತು ರೆಮೇನಿಯಾ ಸೈನಿಕರು[page needed], ಕ್ರೊವೆಷಿಯಾದ 369ನೇಯ ರೀನ್ಫೋರ್ಸ್ಡ್ ಇನ್ಫೆಂಟರಿ ರೆಜಿಮೆಂಟ್, ಮತ್ತು ಇವುಗಳಿಗೆ ಬೆಂಬಲ ನೀಡುತ್ತಿದ್ದ ಸೈನಿಕ ಗುಂಪುಗಳು ಶರಣಾಗತರಾದರು. ಯುದ್ಧದ ಸಮಯದಲ್ಲಿ ಜರ್ಮನಿಯವರು ತಮ್ಮ್ ಪಾಕೆಟ್ ಒಳಗೆ German: [Kessel] Error: {{Lang}}: text has italic markup (help)ಪದಶಃ ಅರ್ಥ ದೊಡ್ಡ ಕಡಾಯಿ) ಸುಮಾರು 10,000 ಜನ ಸೋವಿಯತ್ ನಾಗರಿಕರನ್ನು ಮತ್ತು ಸಾವಿರಾರು ಸೋವಿಯತ್ ಸೈನಿಕರನ್ನು ಸೆರೆ ಹಿಡಿದರು. ಇದೆಲ್ಲವನ್ನು ಆರನೇಯ ಸೈನಿಕ ತುಕಡಿ ಸೆರೆಹಿಡಿದಿದ್ದಲ್ಲದೆ; 50,000 ಜನ ಸೈನಿಕರನ್ನ ಪಾಕೆಟ್ ಆಚೆಗೆ ದೂರ ಪ್ರದೇಶದಲ್ಲಿ ಹೊಸಕಿ ಹಾಕಲಾಯಿತು. ತಕ್ಷಣವೇ ರೆಡ್ ಆರ್ಮಿ ವಿಭಾಗವನ್ನು ಎರಡು ರಕ್ಷಣಾತ್ಮಕ ಸೇನಾಮುಖವಾಗಿ ರೂಪಿಸಲಾಯಿತು; ಒಂದು ಸರ್ಕುಮ್ವೆಲೆಶನ್ ಒಳ ಪ್ರದೇಶವನ್ನು ನೋಡಿಕೊಳ್ಳಲು ಮತ್ತು ಕಾಂಟ್ರಾವೆಲೇಶನ್ ಹೊರ ಪ್ರದೇಶಗಳಿಂದಾಗುವ ಆಕ್ರಮಣವನ್ನು ತಡೆಯುವುದಕ್ಕೆ.
ಸೆಪ್ಟೆಂಬರ್ 30 ,1942ರಂದು ಅಡಾಲ್ಫ್ ಹಿಟ್ಲರ್ ಒಂದು ಸಾರ್ವಜನಿಕ ಭಾಷಣದಲ್ಲಿ (ಬರ್ಲಿನ್ನಲ್ಲಿರುವ ಸ್ಪೊರ್ಟ್ಪಲಾಸ್ಟ್) ಜರ್ಮನಿಯು ನಗರವನ್ನು ಯಾವಾಗಲೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದನು. ಸೋವಿಯತ್ ಸುತ್ತುವರೆದ ನಂತರ ಕರೆದ ಒಂದು ಸಭೆಯಲ್ಲಿ ಜರ್ಮನಿಯ ಸೈನ್ಯದ ಮುಖಂಡರನ್ನು ಡಾನ್ ನಗರದ ಪಶ್ಚಿಮ ಭಾಗಕ್ಕೆ ಹೋರಾಟಕ್ಕೆ ಕಳುಹಿಸಲಾಯಿತು, ಆದರೆ ಅಡಾಲ್ಫ್ ಹಿಟ್ಲರ್ ಲುಫ್ಟ್ವಫೆಯ ಮುಖಂಡ ಹೆರ್ಮನ್ ಗೋರಿಂಗ್ ಜೊತೆಗೆ ತನ್ನ ಆಶ್ರಯದಾಣ ಬ್ಯಾಕ್ಟೆಸ್ಗೇಡನ್ನಲ್ಲಿರುವ ಒಬರ್ಲ್ಯಾಸ್ಜ್ಬೆರ್ಗ್ನ ವೆರಿಯನ್ನಲ್ಲಿದ್ದ. ಹಿಟ್ಲರ್ ಪ್ರಶ್ನಿಸಿದಾಗ, ಹಾನ್ಸ್ ಜೆಶೊನ್ನೆಕ್ನಿಂದ ಒಡಂಬಡಿಕೆ ಮಾಡಿಕೊಂಡ ಮೇಲೆ,: 234 ಲುಫ್ಟ್ವಫೆ 6ನೇ ಸೈನ್ಯಕ್ಕೆ "ಏರ್ ಬ್ರಿಜ್" ಅನ್ನು ಸರಬರಾಜು ಮಾಡುತ್ತದೆಂದು ಗೋರಿಂಗ್ ಹೇಳಿದ. ಇದರಿಂದಾಗಿ ಬೆಂಬಲ ಪಡೆಗಳು ಸಭೆ ಸೇರಿದಾಗ ಜರ್ಮನಿಯವರು ನಗರದ ಮೇಲೆ ಹೋರಾಟ ನಡೆಸಲು ಅನುಕೂಲವಾಗುತ್ತದೆ.
ಡೆಮಿಯಾಸ್ಕ್ ಪಾಕೇಟ್ ಮೇಲೆ ಇದೇ ರೀತಿಯ ಯೋಜನೆಯನ್ನು ಸಣ್ಣ ಪ್ರಮಾಣದಲ್ಲಿ ವರ್ಷದ ಹಿಂದಷ್ಟೆ ಯಶಸ್ವಿಯಾಗಿ ನಡೆಸಲಾಗಿತ್ತು: ಡೆಮಿಯಾನ್ಸ್ಕ್ನಲ್ಲಿ ಇಡೀ ಸೈನ್ಯವಲ್ಲ ಹೊರತಾಗಿ ಒಂದು ತಂಡ. ಈ ನಡುವಿನ ವರ್ಷಗಳಲ್ಲಿ ಸೋವಿಯತ್ ಹೋರಾಟ ಪಡೆಗಳು ತಮ್ಮ ಪಡೆಗಳ ಗುಣಮಟ್ಟವನ್ನು ಮತ್ತು ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡವು. ಆದರೆ ಹಿಟ್ಲರ್ನ ಸ್ವಂತ ಅಭಿಪ್ರಾಯದಲ್ಲಿ ಬಲಪಡಿಸಲಾಗಿದ್ದ ಡೇಮ್ಯಾನ್ಸ್ಕ್ ವಾಯು ಪಡೆಯ ಪೂರೈಕೆಯ ಕಾರ್ಯಾಚರಣೆಯು ಯಶಸ್ವಿಯಾಯಿತು, ಮತ್ತು ತುಂಬಾ ದಿನಗಳ ನಂತರ ಗೋರಿಂಗ್ ಇದನ್ನು ಧೃಢಪಡಿಸಿದನು.
4ನೇಯ ಏರ್ ಪ್ಲೀಟ್ (ಲುಪ್ಟ್ಫ್ಲೋಟ್ 4 )ನ ಮುಖ್ಯಸ್ಥ, ವೋಫ್ರಾನ್ ವ್ಯಾನ್ ರಿಚ್ಥೊಫೆನ್, ಈ ನಿರ್ಧಾರವನ್ನು ಯಶಸ್ವಿಯಾಗದಂತೆ ತಡೆಯಲು ಪ್ರಯತ್ನಿಸಿದನು. 6ನೇಯ ಸೈನ್ಯ ತುಕಡಿಯು ಜಗತ್ತಿನಲ್ಲಿರು ಈ ವಿಧದ ಅತಿ ದೊಡ್ಡ ವಿಭಾಗವಾಗಿದೆ, ಇದು ಜರ್ಮನಿಯ ಸಾಮಾನ್ಯ ಸೈನ್ಯ ತುಕಡಿಗಿಂತ ಸುಮಾರು ಎರಡು ಪಟ್ಟು ದೊಡ್ಡದಾಗಿದೆ, ಇದರ ಜೊತೆಗೆ 4ನೆಯ ಪನ್ಜರ್ ಸೈನ್ಯದಳವು ಪಾಕೇಟ್ನಲ್ಲಿ ಮೋಸಕ್ಕೆ ತುತ್ತಾಯಿತು. ಲಭ್ಯವಿರುವ ಯುದ್ಧವಿಮಾನ ಮತ್ತು ಕೇವಲ ಪಿಟೊಮ್ನಿಕ್ ವಿಮಾನ ನಿಲ್ದಾಣ ಒಂದರ ಮೂಲಕವೇ ಪ್ರತಿನಿತ್ಯ ಅಗತ್ಯವಿರುವ 117.5 ಟನ್ ಸಾಮಾನು ಸರಂಜಾಮುಗಳನ್ನು ವಾಯುಮಾರ್ಗದ ಮೂಲಕ ಸರಬರಾಜು ಮಾಡಲು ಸಾಧ್ಯವಾಗುತ್ತಿರಲಿಲ್ಲ, ಇದು ಕನಿಷ್ಟವಾಗಿ ಅಗತ್ಯವಿದ್ದ 800 ಟನ್ಗಳಿಗಿಂತಾ ತುಂಬಾ ಕಡಿಮೆಯಾಗಿತ್ತು. ಇದಕ್ಕೆ ಪೂರಕವಾಗಿ ಜಂಕರ್ಸ್ ಜು 52 ಸಾಗಾಣಿಕ ವಿಮಾನವು ಮಿತ ಸಂಖ್ಯೆಯಲ್ಲಿತ್ತು , ಆದರೆ ಹೆಂಕಲ್ ಹೆ 117 ಬಾಂಬರ್ನಂತಹ ಕೆಲಸಕ್ಕೆ ಸಂಪೂರ್ಣವಾಗಿ ಅಸಮರ್ಪಕವಾದ ವಿಮಾನಗಳನ್ನು ಬಳಸುತ್ತಿದ್ದರು, (ಕೆಲವೊಂದು ಬಾಂಬರ್ ವಿಮಾನಗಳು ಅಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದ್ದವು- ಹೆಂಕಲ್ ಹೆ 111,ಜೂ 52 ವಿಮಾನಕ್ಕಿಂತ ಹೆಚ್ಚು ವೇಗವಾಗಿಯೂ ಹೆಚ್ಚು ಸಮರ್ಥವಾಗಿಯು ಇತ್ತು. ಆದರೆ ಗೋರಿಂಗ್ ಮಾಡಿದ ಯೋಜನೆಗೆ ಹಿಂದಿರುಗಿದನು ಮತ್ತು ತಮ್ಮನ್ನು ಸಿಕ್ಕಿಹಾಕಿಸಿದ ಶತ್ರುಗಳಿಗೆ "ಶರಣಾಗತರಾಗುವ ಪ್ರಶ್ನೆಯೆ ಇಲ್ಲ" ಎಂದು ಪುನರುಚ್ಚರಿಸಿದನು.
ಯುದ್ಧಕ್ಕೆ ವಿಮಾನ ಒದಗಿಸುವ ಉದ್ದೇಶಿತ ಕಾರ್ಯವು ವಿಫಲವಾಯಿತು. ಹವಾಮಾನ ವೈಪರಿತ್ಯಗಳು, ತಾಂತ್ರಿಕ ದೋಷಗಳು, ಸೋವಿಯತ್ನ ಪ್ರಬಲವಾದ ಪ್ರತಿ-ವಾಯುದಾಳಿ ಮತ್ತು ಹೋರಾಟಕ್ಕೆ ಅಡೆತಡೆ ಒದಗಿಸಿದ್ದರಂದ ಜರ್ಮನಿಯ 488 ಯುದ್ಧವಿಮಾನಗಳು ಪತನವಾದವು, ಪ್ರತಿನಿತ್ಯ 117 ಟನ್ ಸಾಮಾನು ಸರಂಜಾಮು ಸರಬರಾಜು ಮಾಡಲು ಲುಫ್ಟ್ವಫೆ ವಿಫಲವಾಯಿತು. ಪ್ರತಿನಿತ್ಯ ಸುಮಾರು 94 ಟನ್ ಸರಬರಾಜಾದವು. 154 ಯುದ್ಧವಿಮಾನಗಳಲ್ಲಿ ಡಿಸೆಂಬರ್ 19ರಂದು 289 ಟನ್ ಸರಬರಾಜು ಮಾಡಿದ್ದು ಯಶಸ್ವಿ ದಿನವಾಯಿತು. ಸರಬರಾಜು ಮಾಡಿರುವ ಸಾಮಾನುಗಳು ಕೆಲವೊಮ್ಮೆ ವ್ಯರ್ಥವಾಗುತ್ತಿತ್ತು; ಒಂದು ವಿಮಾನವು ಇಪ್ಪತ್ತು ಟನ್ ವೋಡ್ಕಾ ಮತ್ತು ಬೇಸಿಗೆಯ ಸಮವಸ್ತ್ರದ ಜೊತೆಗೆ ಆಗಮಿಸಿತು, ಇನ್ನೊಂದು ವಿಮಾನವು ಮೆಣಸಿನ ಕಾಳು ಮತ್ತು ಮಾಜೊರಮ್ ಸರಬರಾಜು ಮಾಡಿತು. ಹಿಟ್ಲರ್ನ ಆಪರೇಶನ್ ವಿಂಟರ್ ಸ್ಟಾರ್ಮ್ (ಹೋರಾಟ ಮಾಡುವುದು ಅಥವಾ ದಾರಿಯನ್ನು ಕಂಡುಕೊಳ್ಳವುದು) ಉದ್ದೇಶದ ಬಗ್ಗೆ ಸಂದಿಗ್ಧತೆ ಇತ್ತು, ಇದರರ್ಥ ಆಹಾರ ತುಂಬಿದ ಹಡಗು ಮತ್ತು ಯುದ್ಧಸಾಮಗ್ರಿಗಳಿದ್ದಾಗ ಅಪಾರ ಪ್ರಮಾಣದಲ್ಲಿದ್ದ ಇಂಧನವು ಹೋರಾಟ ನಡೆಸಲು ಸಹಾಯಕವಾಗುತ್ತವೆ ಮತ್ತು ಯುದ್ಧಸಾಮಗ್ರಿಗಳು ಬಹಳ ಉಪಯುಕ್ತವಾಗುತ್ತವೆ.: 153 ಸುರಕ್ಷಿತವಾಗಿ ಇಳಿದ ಸಾಗಾಣಿಕ ವಿಮಾನಗಳನ್ನು ಆಕ್ರಮಣದಿಂದ ಸುತ್ತುವರಿದ ಪ್ರದೇಶಗಳಿಂದ ತಾಂತ್ರಿಕ ತಜ್ಞರನ್ನು ಮತ್ತು ರೋಗಪೀಡಿತ ಅಥವಾ ಗಾಯಾಳು ಜನರನ್ನು ಸ್ಥಳಾಂತರಿಸಲು ಬಳಸಿಕೊಳ್ಳಲಾಯಿತು (ಎಲ್ಲಾ ಸೇರಿ 42,000 ಜನರಿದ್ದರು.)
ಆರಂಭದಲ್ಲಿ ಜರ್ಮನಿಯ ಪೈಲಟ್ಗಳಿಂದ ’ಟಾಜಿ’ ಎಂದು ಕರೆಸಿಕೊಳ್ಳುತ್ತಿದ್ದ ಟ್ಯಾಟ್ಸಿನ್ಕಾಯಾ ಪ್ರದೇಶದಿಂದ ಸಾಗಾಣಿಕ ವಿಮಾನಗಳು ಬರುತ್ತಿದ್ದವು. 23 ಡಿಸೆಂಬರ್ 1942ರಂದು, ಸ್ಕಾಸಿರ್ಸ್ಕಾಯಾ ಸಮೀಪ ಮೇಜರ್ ಜನರಲ್ ವ್ಯಾಸಿಲಿ ಮಿಕಾಲ್ವೊವಿಚ್ ಬದನೋವ್ ಮುಖಂಡತ್ವದಲ್ಲಿ ಸೋವಿಯತ್ನ 24ನೇಯ ಟ್ಯಾಂಕ್ ಕಾರ್ಪ್ ತಲುಪಿತು ಮತ್ತು ಡಿಸೆಂಬರ್ 24ರಂದು ಸೈನ್ಯದಳಗಳು ಟ್ಯಾಟ್ಸಿನ್ಕಾಯಾ ತಲುಪಿದವು. ವಾಯುನೆಲೆಯನ್ನು ರಕ್ಷಿಸಲು ಯಾವುದೇ ಸೈನಿಕರಿಲ್ಲದ್ದರಿಂದ ಪ್ರಬಲ ದಾಳಿಯನ್ನು ಕೈಬಿಡಲಾಯಿತು, ತಾಸಿಗಿಂತ ಮೊದಲು 108 Ju 52 ಮತ್ತು Ju 86 ಜೊತೆಗೆ ನೊವೊಚೆಕಾಸ್ಕ್ ಬಿಟ್ಟು ಹೋಗಿದ್ದರು 72 Ju 52 ಮತ್ತು ಇತರೆ ಯುದ್ಧವಿಮಾನಗಳು ವಾಯು ನೆಲೆಯಲ್ಲಿ ಸುಟ್ಟುಹೋದವು. ಸ್ಟಾಲಿನ್ಗ್ರಾಡ್ನಿಂದ ಇನ್ನೂರು ಮೈಲಿ ದೂರದ ಸಲ್ಸ್ಕ್ನಲ್ಲಿ ಒಂದು ಹೊಸ ನೆಲೆಯನ್ನು ಸ್ಥಾಪಿಸಲಾಯಿತು, ಈ ಹೆಚ್ಚುವರಿ ದೂರವು ಪುನರ್ಸರಬರಾಜು ಪ್ರಯತ್ನಕ್ಕೆ ತೊಂದರೆಯುಂಟುಮಾಡಿತು. ಜನವರಿಯ ಮಧ್ಯಭಾಗದಲ್ಲಿ ಶಕ್ತಿ ಸಮೀಪದ ಜೆವೆರೋದಲ್ಲಿನ ಅಹಿತವಾದ ಸೌಲಭ್ಯದಿಂದ ಸಲ್ಸ್ಕ್ ಪ್ರದೇಶವನ್ನು ಮತ್ತೆ ಬಿಡಲಾಯಿತು. ಜೆವೆರೋ ನೆಲೆಯ ಮೇಲೆ 18 ಜನವರಿಯಂದು ಮತ್ತೆ ಆಕ್ರಮಣ ನಡೆಯಿತು ಇದರಿಂದಾಗಿ ಇನ್ನೂ ಹೆಚ್ಚಿಗೆ 50 Ju 52 ಗಳು ನಾಶವಾದವು.
6ನೇಯ ಸೈನಿಕ ತುಕಡಿ ನಿಧಾನವಾಗಿ ಉಪವಾಸಕ್ಕೊಳಗಾಯಿತು. ಪಲಟ್ಗಳು ಸರಕು ಕೆಳಗಿಳಿಸುವಾಗ ಸೈನಿಕರನ್ನು ಕಂಡು ತುಂಬಾ ಆಂತಕಕ್ಕೊಳಗಾದರು ಸೈನಿಕರು ತುಂಬಾ ಹಸಿವಿನಿಂದ ಬಳಲಿದ್ದರು. ಜರ್ಮನಿಯ ಸೈನಿಕರು ಕೇವಲ ಒಂದು ತುಣುಕು ಬ್ರೆಡ್ ತಿಂದು ಹೋರಾಟ ನಡೆಸುತ್ತಿದ್ದರು. ಜನರಲ್ ಜಿಟ್ಲರ್ ಈ ಅವಸ್ಥೆಯನ್ನು ಕಂಡು ಕರಗಿಹೋದನು, ಊಟದ ಸಮಯದಲ್ಲಿ ತನ್ನ ಅಲ್ಪ ರೇಶನ್ಗಳನ್ನು ಕೂಡ ಕಡಿಮೆ ಮಾಡಿಕೊಂಡನು. ಇಂತಹ ಡಯಟ್ನಿಂದಾಗಿ ಕೆಲವು ವಾರಗಳ ನಂತರ ಇಪ್ಪತ್ತಾರು ಪೌಂಡ್ ತೂಕ ಕಳೆದುಕೊಂಡನು ಮತ್ತು ತುಂಬಾ ಬಡಕಲಾದನು ಇದರಿಂದ ಕೆರಳಿದ ಹಿಟ್ಲರ್ ಪ್ರತಿನಿತ್ಯ ಪುನಃ ಕ್ರಮವಾಗಿ ಆಹಾರ ತೆಗೆದುಕೊಳ್ಳುವಂತೆ ಅವನಿಗೆ ಆಜ್ಞೆ ಮಾಡಿದನು.
ಟ್ರಾನ್ಸ್ಫೊರ್ಟ್ಗ್ರಪನ್ ಮೇಲಿನ ಶುಲ್ಕವು ತುಂಬಾ ದುಬಾರಿಯಾಗಿತ್ತು. ಕೆಲವು 266 ಜಂಕರ್ಸ್ ಜು 52 ಗಳು ನಾಶವಾದವು, ಪೂರ್ವ ಯುದ್ಧಭೂಮಿಯಲ್ಲಿ ಒಂದನೇಯ ಮೂರು ಭಾಗ ಪ್ಲೀಟ್ಗಳು ಮೇಲುಗೈ ಸಾಧಿಸಿದ್ದವು. ಹೆ 111 ಗ್ರುಪನ್ 165 ಯುದ್ಧವಿಮಾನವನ್ನು ಸಾಗಾಣಿಕಾ ಕಾರ್ಯಾಚರಣೆಯಲ್ಲಿ ಕಳೆದುಕೊಂಡಿತು. ಕಳೆದುಕೊಂಡ ಇತರೆಗಳು 42 ಜು 86, ಒಂಭತ್ತು Fw 200 "ಕಾಂಡೋರ್ಸ್", ಐದು ಹೆ 177 ಬಾಂಬರ್ಗಳು ಮತ್ತು ಜು 290. ಲುಫ್ಟ್ವಫೆ ಸುಮಾರು 1,000 ಜನ ಅನುಭವಿ ಬಾಂಬರ್ ಪಡೆಗಳ ಸಿಬ್ಬಂದಿಯನ್ನು ಕಳೆದುಕೊಂಡಿತು.: 310 ಲುಫ್ಟ್ವಫೆಯ ನಾಲ್ಕು ಲುಫ್ಟ್ಪ್ಲೋಟ್ 4s ಸಾಗಾಣಿಕ ವಿಭಾಗಗಳಾದ (KGrzbV 700, KGrzbV 900, I./KGrzbV 1 ಮತ್ತು II./KGzbV 1)ಗಳು "ಕಣ್ಮರೆಯಾಗಿ ಹೋದವು": 122
ಸ್ಟಾಲಿನ್ಗ್ರಾಡ್ನಲ್ಲಿರುವ 6ನೇಯ ಸೈನ್ಯ ತುಕಡಿಗೆ ಒದಗಿಸಲಾಗಿದ್ದ ಲುಫ್ಟ್ವಫೆ ಯುದ್ಧವಿಮಾನವು ಪತನವಾಯಿತು, ಮತ್ತು 24 ನವೆಂಬರ್ 1942 ರಿಂದ 31 ಜನವರಿ 1943ವರೆಗೆ ಹಾನಿಗೀಡಾದವುಗಳನ್ನು ಪುನಃ ಪಡೆದುಕೊಳ್ಳಲಾಯಿತು:
ಪತನಗಳು | ಯುದ್ಧವಿಮಾನದ ವಿಧಗಳು |
---|---|
269 | ಜಂಕರ್ಸ್ ಜು 52 |
169 | ಹೆಂಕಲ್ ಹೆ 111 |
42 | ಜಂಕರ್ಸ್ ಜು 86 |
9 | ಫೋಕಲ್-ವುಲ್ಫ್ ಎಫ್ಡಬ್ಲ್ಯೂ 200 |
5 | ಹೆಂಕಲ್ ಹೆ 177 |
1 | ಜಂಕರ್ಸ್ ಜು 290 |
ಒಟ್ಟು: 495 | ಇದು ಐದು ಪಡೆಗಳು ಅಥವಾ ಒಂದು ಏರ್ ಕಾರ್ಪ್ಸ್ಗಳಿಗಿಂತ ಹೆಚ್ಚಾಗಿತ್ತು |
ಬಳಸಲಾದ ಒಟ್ಟು ವಿಮಾನಗಳಲ್ಲಿ 50% ರಷ್ಟು ಪತನವಾಗಿವೆ. ಇದಲ್ಲದೆ, ತರಬೇತಿ ಯೋಜನೆಗಳಿಗೆ ವಿಮಾನ ಸರಬರಾಜು ಮಾಡುವುದನ್ನು ನಿಲ್ಲಿಸಲಾಯಿತು ಮತ್ತು ಸ್ಟಾಲಿನ್ಗ್ರಾಡ್ನಲ್ಲಿ ಬಳಸುವುದಕ್ಕಾಗಿ ಇಂಧನ ಉಳಿಸಲು ಉಳಿದ ಯುದ್ಧ ಪ್ರದೇಶಗಳಲ್ಲಿ ಲುಫ್ಟ್ವಫೆಯಿಂದ ಆಕ್ರಮಣ ಮಾಡುವುದನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಯಿತು.
ಸ್ಟಾಲಿನ್ಗ್ರಾಡ್ ಸುತ್ತಮುತ್ತಲು ಸೋವಿಯತ್ ತನ್ನ ಪಡೆಗಳನ್ನು ಬಲಪಡಿಸಿತು ಮತ್ತೆ ಪಾಕೇಟ್ ಬಲವನ್ನು ಕುಗ್ಗಿಸಲು ಉಗ್ರವಾದ ಹೋರಾಟ ಆರಂಭಿಸಿತು. ವಿಂಟರ್ ಸ್ಟಾರ್ಮ್ ಕಾರ್ಯಾಚರಣೆ (ಆಪರೇಶನ್ ವಿಂಟರ್ಗೆವಿಂಟರ್ ) ಸಮಯದಲ್ಲಿ ದಕ್ಷಿಣದಲ್ಲಿ ಸೆರೆಹಿಡಿದಿದ್ದ ಸೈನ್ಯವನ್ನು ಕಡಿಮೆಮಾಡಲು ಜರ್ಮನಿ ಪ್ರಯತ್ನಿಸಿತು, ಡಿಸೆಂಬರ್ನಲ್ಲಿ ಸೋವಿಯತ್ ಈ ಪ್ರಯತ್ನವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತು. ರಶಿಯಾದ ಭಯಂಕರ ಚಳಿಯು ಜರ್ಮನ್ರ ಮೇಲೆ ಮಹತ್ತರ ಪರಿಣಾಮ ಬೀರಿತು, ವೋಲ್ಗಾ ನದಿಯು ಹೆಪ್ಪುಗಟ್ಟಿದ್ದರಿಂದ ಸೋವಿಯತ್ಗೆ ಅನುಕೂಲವಾಗಿ ಪರಿಣಮಿಸಿ ತನ್ನ ಪಡೆಗಳಿಗೆ ಸಾಮಗ್ರಿಗಳನ್ನು ಸರಬರಾಜು ಮಾಡಲು ಸಹಾಯವಾಯಿತು. ಈ ಪ್ರದೇಶದಲ್ಲಿ ಸಿಕ್ಕಿಬಿದ್ದ ಜರ್ಮನ್ ಪಡೆಗಳು ಶೀಘ್ರವಾಗಿ ಉಷ್ಣತೆ ಇರುವ ಕಡೆ ಮತ್ತು ಔಷಧಿಯ ಸರಬರಾಜಿರುವಲ್ಲಿ ಧಾವಿಸಿದರು, ಸಾವಿರಾರು ಸೈನಿಕರು ಹಿಮವ್ರಣ, ಅಪೌಷ್ಟಿಕತೆ, ಮತ್ತು ಖಾಯಿಲೆಗಳಿಂದ ಸಾವನ್ನಪ್ಪಿದರು.
ಡಿಸೆಂಬರ್ 16ರಂದು ಸೋವಿಯತ್ ತನ್ನ ಎರಡನೇಯ ಆಕ್ರಮಣ ಲಿಟ್ಲ್ ಸ್ಯಾಟರ್ನ್ ಕಾರ್ಯಾಚರಣೆಯನ್ನು ಆರಂಭಿಸಿತು, ಡಾನ್ನಲ್ಲಿರುವ ಆಯ್ಕ್ಸಿಸ್ ಆರ್ಮಿಯ ಮೇಲೆ ತನ್ನ ದಾಳಿಯನ್ನು ಆರಂಭಿಸಿ ರೊಸ್ತೊವ್ ವಶಪಡಿಸಿಕೊಂಡಿತು, ಈ ಆಕ್ರಮಣವು ಯಶಸ್ವಿಯಾದರೆ ರಷ್ಯಾದ ಕೋಕಸಿಸ್ನಲ್ಲಿರುವ ಜರ್ಮನಿ ಪಡೆಯ ಮೂರರಲ್ಲಿ ಒಂದು ಭಾಗ ಉಳಿದ ಆರ್ಮಿ ಗ್ರುಪ್ ಸೌತ್ ಕೂಡ ವಶವಾಯಿತು. ಸಶಸ್ತ್ರ ಪಡೆಗಳು ಬರುವ ವರೆಗೂ ನಗರವನ್ನು ಹಿಡಿತದಲ್ಲಿಟ್ಟುಕೊಳ್ಳಲು ಜರ್ಮನಿಯು ಒಂದು ಮೊಬೈಲ್ ರಕ್ಷಣಾ ವಿಭಾಗ ರಚಿಸಿತು. ಮ್ಯಾಮನ್ನಲ್ಲಿರುವ ಸೋವಿಯತ್ ಸೇತುಶಿರದಿಂದ, ಟ್ಯಾಂಕ್ಗಳ ಬೆಂಬಲವಿದ್ದ ಹದಿನೈದು ವಿಭಾಗಗಳು ಇಟ್ಯಾಲಿಯನ್ ಕೊಸೆರಿಯಾ ಮತ್ತು ರವೆನ್ನಾ ವಿಭಾಗಗಳ ಮೇಲೆ ದಾಳಿ ಮಾಡಿದವು ಮತ್ತು ಕಡಿಮೆ ಸಂಖ್ಯೆಯಲ್ಲಿದ್ದರೂ ಇಟ್ಯಾಲಿಯನ್ ಪಡೆಗಳು 19 ಡಿಸೆಂಬರ್ರಲ್ಲಿ ಹಿಂತೆಗೆಯುವಂತೆ ಎಆರ್ಎಂಐಆರ್ ಮುಖ್ಯ ಕಛೇರಿಯಿಂದ ಆದೇಶ ಬರುವವರೆಗೂ ಸೈನ್ಯಕ್ಕೆ ತಡೆಯೊಡ್ಡಿದವು. ಸೋವಿಯತ್ ಸೈನ್ಯವು ರೊಸ್ತೊವ್ ಸಮೀಪ ಬಂದಿರಲೇ ಇಲ್ಲ ಆದರೆ ಸೈನಿಕ ದಳವು ಕೋಕಸಿಸ್ನಿಂದ ವಾನ್ ಮ್ಯಾನ್ಸ್ಟೇನ್ ಮುಖಂಡತ್ವದ ಆರ್ಮಿ ಗ್ರೂಪ್ ಎ ಕಿತ್ತುಹಾಕಿದರು, ಮತ್ತು ನಗರದಿಂದ ಸುಮಾರು ಇನ್ನೂರು ಕಿಮೀ ದೂರದಲ್ಲಿ ಮತ್ತೆ ಪುನರ್ಸ್ಥಾಪಿಸಲಾಯಿತು. ಲುಫ್ಟ್ವಫೆ ಸಾಗಾಣಿಕಾ ಹಡಗು ಪಡೆ ನಾಶವಾಗಲು ಟ್ಯಾಟ್ಸಿನ್ಕಾಯಾ ರೇಡ್ ಕೂಡ ಕಾರಣವಾದವು.
ಈಗ ಜರ್ಮನಿಯನ್ನು ಬಲಪಡಿಸಲು 6ನೇಯ ಸೈನ್ಯ ಪಡೆಯು ಭರವಸೆ ಇಡಲಿಲ್ಲ. ಸ್ಟಾಲಿನ್ಗ್ರಾಡ್ನಲ್ಲಿರುವ ಜರ್ಮನಿಯ ಪಡೆಗಳು ಈ ಮಾತನ್ನು ಹೇಳಲಿಲ್ಲ ಆದರೂ ಬಲಪಡಿಸುವ ಕ್ರಮ ಮುಂದುವರೆಯುತ್ತಿತ್ತು. ಜರ್ಮನಿಯ ಕೆಲವು ಅಧಿಕಾರಿಗಳು ಪೌಲಸ್ನಿಗೆ ಹಿಟ್ಲರ್ನ ತಳವೂರುವ ಆದೇಶ ಪ್ರತಿಭಟಿಸಲು ಮತ್ತು ಅದಕ್ಕೆ ಬದಲಾಗಿ ಸ್ಟಾಲಿನ್ಗ್ರಾಡ್ ಪಾಕೇಟ್ನಲ್ಲಿ ಹೋರಾಟ ನಡೆಸಲು ವಿನಂತಿಸಿದರು. ಆದರೆ ಇದನ್ನು ಪೌಲಸ್ ವಿರೋಧಿಸಿದನು,ಹಾಗೆಯೇ ಈ ರೀತಿ ಆಜ್ಞೆಯನ್ನು ಉಲ್ಲಂಘಿಸುವ ವಿಚಾರವನ್ನು ತಿರಸ್ಕರಿಸಿದನು. ಚಲಿಸುವ ಪಡೆಗಳು ಮೊದಲ ಕೆಲವು ವಾರ ಹೋರಾಟ ನಡೆಸಲು ಸಾಧ್ಯವಾದರೂ ಸಹ, ಈಗ ಜರ್ಮನಿಯ ಆರನೇಯ ಸೈನ್ಯ ತುಕಡಿಯು ಇಂಧನದ ಕೊರತೆ ಎದುರಿಸಿತು ಮತ್ತು ಕಠಿಣವಾದ ಚಳಿಯಲ್ಲಿ ಪದಾತಿ ದಳದಿಂದ ಮಾತ್ರ ಸೋವಿಯತ್ ಸೈನ್ಯದ ವಿರುದ್ಧ ಹೋರಾಡಲು ತುಂಬಾ ಕಷ್ಟ ಪಡೆಬೇಕಾಯಿತು.[page needed]
ಜರ್ಮನಿಯವರು ತಾವಾಗಿಯೇ ಸ್ಟಾಲಿನ್ಗ್ರಾಡ್ ಪ್ರದೇಶದ ಹೊರವಲಯಯದಿಂದ ಹಿಂದಿರುಗಿ ಹೋದರು. ಜನವರಿ 16 1943ರಂದು ಪಿಟೊಮ್ನಿಕ್ ವಾಯುನೆಲೆ ಮತ್ತು ಜನವರಿ 25,: p96–97 ಅಥವಾ ಜನವರಿ 21/22ರ ರಾತ್ರಿ ಗುಮ್ರಾಕ್ ವಾಯುನೆಲೆಯನ್ನು ಕಳೆದುಕೊಂಡಿತು, ಇದರಿಂದಾಗಿ ವಾಯುಮಾರ್ಗದ ಸರಬರಾಜುಗಳು ಹಾಗೂ ಗಾಯಾಳುಗಳನ್ನು ಸಾಗಿಸುವುದು ಕೊನೆಗೊಂಡಿತು. ಸ್ಟ್ಯಾಲಿನ್ಗ್ರಾಡ್ಸ್ಕಾಜಾದಲ್ಲಿನ ವಾಯುನೆಲೆಯಲ್ಲಿ ಸೇವೆ ಒದಗಿಸುತ್ತಿದ್ದ ಮೂರನೆಯ ಮತ್ತು ಕೊನೆಯ ರನ್ವೇಯಲ್ಲಿ ಜನವರಿ 22–23 ರಂದು ಇಳಿಯುವ ಮತ್ತು ನಿರ್ಗಮಿಸುವುದು ಕೊನೆಯಾಯಿತು. ಯುದ್ಧ ಮುಗಿಯುವ ವರೆಗೂ ನಿರಂತರವಾದ ಯುದ್ಧಸಾಮಗ್ರಿಗಳು ಹಾಗೂ ಆಹಾರ ಎಸೆಯುವುದನ್ನು ಬಿಟ್ಟು ಜನವರಿ 23ರ ಬೆಳಿಗ್ಗೆಯಿಂದ ಯಾವುದೇ ವಿಮಾನಗಳು ಇಳಿದಿಲ್ಲ ಎಂದು ವರದಿಯಾಗಿದೆ.
ಜರ್ಮನ್ನರು ಈಗ ಹಸಿವೆಯಿಂದ ಕಷ್ಟಪಡುವುದಷ್ಟೇ ಅಲ್ಲದೇ ಅವರು ಯುದ್ಧ ಸಾಮಾಗ್ರಿಗಳಿಂದ ವಿಮುಖರಾಗುತ್ತಿದ್ದಾರೆ. ಆದಾಗ್ಯೂ ಜರ್ಮನ್ನರು ತಮ್ಮ ಮೊಂಡುತನದಿಂದ ಸೋವಿಯತ್ ಅನ್ನು ಎದುರಿಸುತ್ತಿದ್ದರು ಅದಕ್ಕೆ ಕಾರಣ ಅವರು ಬಲವಾಗಿ ನಂಬಿದ್ದರು ಯಾರು ಶರಣಾಗುತ್ತಾರೊ ಅವರಿಗೆ ಸೋವಿಯತ್ ಮರಣದಂಡನೆಯನ್ನು ವಿಧಿಸುತ್ತದೆ ಎಂದು. ನಿರ್ದಿಷ್ಟವಾಗಿ ಅದೇ ಸ್ವಪ್ರೇರಿತರಾಗಿ ಸೋವಿಯತ್ ಜನರು ಜರ್ಮನ್ನರಿಗಾಗಿ ಧನಿ ಎತ್ತಿದ್ದರು ಅವರಿಗೆ ಯಾವುದೇ ರೀತಿಯ ಹುಸಿ ನಂಬಿಕೆಗೆಳಿರಲಿಲ್ಲ ಹಾಗೆಯೆ ವಶಪಡಿಸಿಕೊಳ್ಳುವ ವಿಧಿಯ ಯಾವುದೇ ಭ್ರಮೆಯು ಇರಲಿಲ್ಲ. ಸೋವಿಯತ್ ಮೊದಲಿಗೆ ಜರ್ಮನ್ ಸೈನಿಕರ ದಾಳಿಯಿಂದ ಮತ್ತು ಸೈನ್ಯ ಬಲಪಡಿಸುವ ನಿಟ್ಟಿನಿಂದ ನಡೆಸಿದ ಕಾರ್ಯವೈಕರಿಯ ಬಗ್ಗೆ ಆಶ್ಚರ್ಯ ಚಕಿತವಾಗಿತ್ತು. ಸ್ಟಾಲಿನ್ಗ್ರಾಡ್ನಿಂದ ನಗರದಲ್ಲಿನ ಕದನವು ಮತ್ತೆ ಪ್ರಾರಂಭವಾಯಿತು ಆದರೆ ಈ ಸಂದರ್ಭದಲ್ಲಿ ಸೋವಿಯತ್ನ ವಾಯುಪಡೆಯನ್ನು ಹಿಂದಿಕ್ಕಿತು. ಅವರು ಕಾರ್ಖಾನೆಯುಕ್ತ ಪ್ರದೇಶಗಳಲ್ಲಿ ಸೂಕ್ತ ರಕ್ಷಣೆಯನ್ನು ಹೊಂದಿತ್ತು. ಹಾಗೆಯೆ ಸೋವಿಯತ್ ಬಹುತೇಕ ವಶಪಡಿಸಿಕೊಂಡಿತ್ತು ಅಂತೆಯೆ ತಮ್ಮ ಉಗ್ರತ್ವವನ್ನು ತಿಂಗಳ ಹಿಂದೆಯಷ್ಟೆ ತೊರಿಸಿದ್ದರು. ಜರ್ಮನ್ನರು ಬಾಂಬ್ ದಾಳಿಯಿಂದ ರಕ್ಷಿಸಿಕೊಳ್ಳಲು ತಮ್ಮ ಕಿಟಕಿಗಳಿಗೆ ವೈರ್ ನೆಟ್ಗಳನ್ನು ಬಳಸಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಸೋವಿಯತ್ ರಷ್ಯ ಮೀನಿನ ಗಾಳಗಳನ್ನು (ಕೊಕ್ಕೆ) ಮುಂಭಾಗಕ್ಕೆ ಕಟ್ಟಿ ಅದನ್ನು ಎಸೆದಾಗ ಕಂಪನದಿಂದ ಆ ಕೊಕ್ಕೆ ಹಿಂದುಳಿಯುವಂತೆ ಉಪಾಯ ಹೂಡಿತ್ತು. ಈಗ ನಗರದಲ್ಲಿ ಜರ್ಮನ್ನರಿಗೆ ಉಪಯುಕ್ತವಾಗುವಂಥಹ ಯಾವುದೇ ಯುದ್ಧ ಟ್ಯಾಂಕ್ಗಳಿಲ್ಲ. ಆ ಟ್ಯಾಂಕುಗಳು ಇಂದಿಗೂ ಸ್ಥಿರ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸುವಂತೆ ಇವೆ. ನಗರ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದ ಯುದ್ಧಟ್ಯಾಂಕ್ಗಳ ಬಗ್ಗೆ ಹಾಗೂ ಅಲ್ಲಿನ ನಿರ್ಬಂಧ ಪ್ರದೇಶಗಳ ಬಗ್ಗೆ ಸೋವಿಯತ್ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಸೋವಿಯತ್ನ ರಾಯಭಾರಿ ಪಕ್ಷದಲ್ಲಿ ಬಂದಿದ್ದ ಮೇಜರ್ ಅಲೆಗ್ಸಾಂಡರ್ ಸ್ಮೈಸ್ಲೊ, ಕ್ಯಾಪ್ಟನ್ ನಿಕೊಲಯ್ ಡ್ಯಟ್ಲೆಂಕೊ ಹಾಗೂ ಒಬ್ಬ ಕಹಲೆ ಊದುವವ ಒಳಗೊಂಡಂತೆ ಒಂದು ಮಹತ್ತರ ಅವಕಾಶವನ್ನು ನಿಡುತ್ತಾನೆ ಅದೆಂದರೆ 24ಘಂಟೆಗಳ ಒಳಗಾಗಿ ಸೇನೆಗೆ ವಶವಾದಲ್ಲಿ ಎಲ್ಲಾ ಒತ್ತೆಯಾಲುಗಳ ಹಿತ ರಕ್ಷಣೆ, ತಮ್ಮ ಸ್ವತ್ತುಗಳನ್ನು ಕಾಯ್ದುಕೊಳ್ಳುವ,ಎಂದಿನಂತೆ ಸಾಮಾನ್ಯ ಊಟದ ವ್ಯವಸ್ಥೆ, ಹಾಗೂ ಇಶ್ಚಿಸಿದಲ್ಲಿ ಯುದ್ಧದ ನಂತರ ಯಾವೂದೇ ರಾಷ್ಟಗಳಿಗೆ ಕಳುಹಿಸಿಕೊಡುವ ಭರವಸೆಯನ್ನು ನೀಡುತ್ತಾನೆ. ಆದರೆ ಇದನ್ನು ನಿರಾಕರಿಸಿದ ಪೌಲಸ್ ಕೊನೆಯದಾಗಿ ರಾಷ್ಟ್ರೀಯ ಕೆಲಸಕ್ಕೆ ಅಣಿಯಾಗುವುದೊ ಅಥವಾ ತನ್ನ ಮನುಷ್ಯನ ಅವನತಿಗೆ ಸಾಕ್ಷಿಯಾಗುವುದೊ ಎಂಬ ಗೊಂದಲಕ್ಕೆ ಬಿದ್ದನು.
30ರ ಜನವರಿ 1943ರ ವೇಳೆಗೆ ಹಿಟ್ಲರ್ ಅಧಿಕಾರಕ್ಕೆ ಬಂದು 10 ನೇ ವರ್ಷದ ಸಂಭ್ರಮದಾಚರಣೆಯಲ್ಲಿ ಪೌಲಸ್ ಅನ್ನು ಜನರಲ್ ಫೀಲ್ಡ್ ಮಾರ್ಶಲ್ ಆಗಿ ನೇಮಿಸಿದನು ಪ್ರಾಸಂಗಿಕವಾಗಿ ಮಾತನಾಡಿದ ಹಿಟ್ಲರ್ ಅಲ್ಲಿಯವರೆಗೂ ಯಾವುದೇ ಜರ್ಮನ್ ಫೀಲ್ಡ್ ಮಾರ್ಷಲ್ ಕೈದಿಯಾಗಿರಲಿಲ್ಲ ಹಾಗೆ ಪೌಲಸ್ ತನ್ನ ಜಿವನವನ್ನೆ ಇದಕ್ಕಾಗಿ ಮೀಸಲಿಟ್ಟಿದ್ದಾನೆಂದು ಹೇಳಿದನು. ಅದೇನೆ ಇದ್ದರು ಸೋವಿಯತ್ ರಷ್ಯ ಪೌಲಸ್ನ ಮುಖ್ಯ ಕಛೇರಿಯಾದ ಪಾಲು ಕಟ್ಟಡ ಗಮ್ ಮೇಲೆ ದಾಳಿ ಮಾಡಿದ ಮಾರನೆಯ ದಿನ ಪೌಲಸ್ ಸೆರೆಯಾದನು ಅಳಿದುಳಿದ ಅಕ್ಷ ದಳಗಳು ಸ್ಟಾಲಿನ್ಗ್ರಾಡ್ನಲ್ಲಿ ಫೆಬ್ರವರಿ 2ರಂದು ವಶವಾದವು ಅಂತೆಯೆ ಸುಸ್ತಾಗಿದ್ದ, ತುಂಬ ಹಸಿದಿದ್ದ, 19ಸಾವಿರ ಒತ್ತೆಯಾಲುಗಳು, 3,000 ರೊಮೇನಿಯನ್ಸ್, 20ನೇ ಕಾಲಾಲುದಳ, 1ನೇ ಅಶ್ವದಳ,ಸೇರಿದಂತೆ ಹಲವು ದಳಗಳನ್ನು ಪ್ರತ್ಯೆಕಿಸಲಾಯಿತು. ನಿಜವಾಗಿಯೂ ಸೋವಿಯತ್ ರಷ್ಯ ಸಂತೋಷದಲ್ಲಿ ತೇಲಿತು ಕಾರಣ 22ಜನರಲ್ಗಳನ್ನು ಒಳಗೊಂಡಂತೆ ಒತ್ತೆಯಾಳುಗಳನ್ನಾಗಿ ಸೆರೆಹಿಡಿತ್ತು. ಕುಪಿತನಾಗಿದ್ದ ಹಿಟ್ಲರ್ ನಂಬಿಕೆಯಿಂದ ಹೇಳಿದ್ದ ಪೌಲಸ್ ತನ್ನ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ನಿಶ್ಚಿಂತೆಯಿಂದಿರಲು ಹೇಳಿದ್ದನು ಆದರೆ ಪೌಲಸ್ ಮಾಸ್ಕೋಕ್ಕೆ ಹೋಗಲು ನಿರ್ಧರಿಸಿದ್ದನು.
ಜರ್ಮನ್ ಸರ್ಕಾರ 1943ರ ಜನವರಿಯವರೆಗೆ ಅಧಿಕೃತವಾಗಿ ಈ ವಿಪತ್ತನ್ನು ಸ್ಪಷ್ಟಪಡಿಸಿರಲಿಲ್ಲ. ಸ್ಟಾಲಿನ್ಗ್ರಾಡ್ ಮೊದಲ ಬಾರಿಗೆ ನಾಜಿಗಳ ಸರ್ಕಾರ ಸಾರ್ವಜನಿಕವಾಗಿ ಯುದ್ಧದಲ್ಲಿ ಸೋತಿದ್ದನ್ನು ದಾಖಲಿಸಿಕೊಂಡಿತು. ಆದರೆ ಜರ್ಮನಿಗೆ ಇದು ಮೊದಲ ಸೋಲೆನೂ ಆಗಿರಲಿಲ್ಲ. ಸೋವಿಯತ್ ರಷ್ಯವು ಭಾಗಶಃ ಅಧಿಕ ಪ್ರಮಾಣದ ಸಾವು ನೋವುಗಳಿಗೆ ಸಾಕ್ಷಿಯಾಗಿತ್ತು ಅಂತೆಯೆ ಅಭೂತ ಪೂರ್ವ ಗೆಲುವು ಸಾಧಿಸಿತ್ತು. ಪೂರ್ವದಲ್ಲಿ ಜರ್ಮನಿ ಕಂಡದ್ದಕ್ಕಿಂತ 3ಪಟ್ಟು ಹೆಚ್ಚಿನ ಸಾವು ನೋವುಗಳನ್ನು ರಷ್ಯ ಅನುಭವಿಸಿತು. 31ರ ಜನವರಿ ಜರ್ಮನ್ ರಾಜ್ಯ ರೇಡಿಯೊ ತನ್ನ ಸಂಬರ್ ಅಡಗಿಒ ಮೂವ್ಮೆಂಟ್ ಅನ್ಟೊನ್ ಬೃಕ್ನೆರ್ ರ ಸ್ವರ ಮೇಳವನ್ನು ರದ್ದುಗೊಳಿಸಿ ಸ್ಟಾಲಿನ್ಗ್ರಾಡ್ನ ಸೋಲಿನ ಬಗ್ಗೆ ಬಿತ್ತರಿಸಿತ್ತು.
18ನೇ ಫೆಬ್ರವರಿ ಪ್ರಚಾರ ಮತ್ತು ಪ್ರಸಾರ ಮಂತ್ರಿ ಜೋಸೆಫ್ ಗೊಎಬ್ಬೆಲ್ಸ್ ತನ್ನ ಮಹತ್ವದ ಭಾಷಣದಲ್ಲಿ ಜರ್ಮನ್ ನಾಗರಿಕರನ್ನು ಉದ್ದೇಶಿಸಿ ಫಲಿತಾಂಶವನ್ನು ಒಪ್ಪಿಕೊಳ್ಳುವಂತೆ ಮತ್ತು ತನ್ನ ರಾಷ್ಟ್ರದ ಬಹುಸಂಖ್ಯಿತರನ್ನು ಈ ಯುದ್ಧದಲ್ಲಿ ಪಾಲ್ಗೊಲ್ಲುವಂತೆ ಸ್ಪೋರ್ಟ್ಪಲಸ್ಟ್ ಭಾಷಣವನ್ನು ಬರ್ಲಿನ್ನಲ್ಲಿ ಮಾಡಿದನು.
ಜರ್ಮನ್ ಸಾಕ್ಷಚಿತ್ರ ಸ್ಟಾಲಿನ್ಗ್ರಾಡ್ ಪ್ರಕಾರ 11.000ಕ್ಕೂ ಹೆಚ್ಚು ಸೈನಿಕರು ಸಾಯುವುದಕ್ಕಾಗಿ ಯುದ್ಧ ಮಾಡುವುದಕ್ಕಿಂತ ಸೋವಿಯತ್ ಯುದ್ಧ ಕೈದಿಗಳಾಗಿ ಸ್ವಲ್ಪ ದಿನ ಜೀವ ಉಳಿಸಿಕೊಳ್ಳುವುದೆ ಒಳ್ಳೆಯದೆಂದು ಸೋವಿಯತ್ ಸೈನಿಕರಿಗೆ ಶರಣಾದರು. ಅವರು ಸೆರೆಮನೆಯಲ್ಲಿ ಬಂಧಿಸುವುದನ್ನು ಮತ್ತು ಕೊಳಕನ್ನು ವಿರೋಧಿಸಿದರು. ಸೋವಿಯತ್ ಗುಪ್ತಚರ ವರದಿಯೊಂದರ ಸಾಕ್ಷ ಚಿತ್ರವೊಂದರಂತೆ 2418ರಷ್ಟು ಸೈನಿಕರು ಈ ಸಮಯದಲ್ಲಿ ಮೃತಪಟ್ಟರೆ ಸುಮಾರು 8646 ಸೈನಿಕರು ಬಂಧನಕ್ಕೊಳಗಾದರು.
ಸ್ಟಾಲಿನ್ಗ್ರಾಡ್ನಲ್ಲಿ ಒತ್ತೆಯಾಳಾದ ಸುಮಾರು 91ಸಾವಿರದಷ್ಟು ಜರ್ಮನ್ ಸೈನಿಕರಲ್ಲಿ ಕೇವಲ 5000ದಷ್ಟು ಸೈನಿಕರಷ್ಟೆ ವಾಪಸ್ಸಾದರು. ಮೊದಲೆ ಬೇನೆಯಿಂದ ಬಳಲುತ್ತಿದ್ದ ಯುದ್ಧ ಕೈದಿಗಳು ಹಸಿವು, ಮತ್ತು ಅಗತ್ಯ ವೈಧ್ಯಕೀಯ ಕೊರತೆಯಿಂದಾಗಿ ಬಳಲುತ್ತಿದ್ದ ಬಹುತೇಕರನ್ನು ಸೋವಿಯತ್ ಕಾರ್ಮಿಕ ಕ್ಯಾಂಪ್ಗಳಿಗೆ ಸಾಗಿಸಲಾಯಿತು ಆದರೆ ಅವರಲ್ಲಿ ಬಹುತೇಕ ಮಂದಿ ಚಲಿ,(ಮುಖ್ಯವಾಗಿ ವಿಷಮಶೀತ ಜ್ವರ) ಅತಿಯಾದ ಕೆಲಸದೊತ್ತಡ, ಪೌಷ್ಠಿಕ ಆಹಾರಗಳ ಕೊರತೆಯಿಂದಾಗಿ,ಅಮಾನುಷ ವರ್ತನೆಯಿಂದಾಗಿ ಸಾವಿಗೀಡಾಗಿದ್ದರು. ಕೆಲವರನ್ನು ನಗರಗಳ ಪುನಶ್ಚೇತನಕ್ಕಾಗಿ ಬಳಸಿಕೊಳ್ಳಲಾಗುತ್ತಿತ್ತು. ಮಾರ್ಚ್ 1943ರಲ್ಲಿ 40000 ಟ್ಯ್ಫುಸ್(ಸಾಂಕ್ರಾಮಿಕ ರೋಗ) ಕ್ಕೆ ಜರ್ಮನ್ನರು ಸಾಮೊಹಿಕವಾಗಿ ಬಲಿಪಶುಗಳಾದರು.: 369 ಕೆಲವೇ ಕೆಲವು ಮೇಲ್ದರ್ಜೆಯ ಅಧಿಕಾರಿಗಳು ಮಾಸ್ಕೊವನ್ನು ಪ್ರಚಾರಕ್ಕಾಗಿ ಬಳಸಿಕೊಂಡರು ಅಲ್ಲದೆ ಕೆಲವರು ಸ್ವತಂತ್ರ ಜರ್ಮನಿಯ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿ ಸೇರಿಕೊಂಡರು. ಪೌಲಸ್ ಸೇರಿದಂತೆ ಕೆಲವರು ಹಿಟ್ಲರ್ ವಿರುದ್ಧ ಹೇಳಿಕೆಗಳನ್ನು ಜರ್ಮನ್ ಸೈನಿಕರಿಗೆ ನೀಡಿದರು ಪೌಲಸ್ 1952ರವರೆಗೆ ಸೋವಿಯತ್ ಒಕ್ಕೂಟದಲ್ಲಿದ್ದನು, ನಂತರದಲ್ಲಿ ತನ್ನ ಹಳೆಯ ದಿನಗಳಾನ್ನು ನೆನೆಯುತ್ತ ಸ್ಟಾಲಿನ್ಗ್ರಾಡ್ನ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಪಶ್ಚಿಮ ಜರ್ಮನಿಯ ಡ್ರೆಸ್ಡೆನ್ಗೆ ತೆರಳಿದನು, ಕಮ್ಯುನಿಸಮ್ನ ಬಗ್ಗೆ ಒಲವು ತೋರಿದ್ದ ಆತ ಯುರೋಪ್ನ ಕಳೆದ ಯುದ್ಧದ ಮೆಲುಕು ಹಾಕಿದ್ದನು.: 280 ಜನರಲ್ ವಾಲ್ಟರ್ ವಾನ್ ಸೆಯ್ಡ್ಲಿಟ್ಜ್-ಕುರ್ಜ್ಬಚ್ ಸ್ಟಾಲಿನ್ಗ್ರಾಡ್ನಿಂದ ಹಿಟ್ಲರ್ವಿರುದ್ಧದ ಸೈನ್ಯವನ್ನು ಕರೆಸಿಕೊಳ್ಳುವಂತೆ ನಿವೇದಿಸಿಕೊಳ್ಳುತ್ತಾನೆ ಆದರೆ ಸೋವಿಯತ್ ಇದಕ್ಕೆ ಸೊಪ್ಪು ಹಾಕುವುದಿಲ್ಲ. 1955ರ ವರೆಗೂ ಅಂದರೆ ಕೊನ್ರಡ್ ಅಡೆನಎರ್ ರ ಕಮ್ಯುನಿಸ್ಟ್ ಪಕ್ಷದ ನೀತಿ ಸಮಿತಿಯ ರೂಪಿತದ ವರೆಗೂ ಬದುಕುಳಿದಿದ್ದ ಯುದ್ಧಕೈದಿಗಳನ್ನು ತಮ್ಮ ತಾಯ್ನಾಡಿಗೆ ಮರಳಿಸಿರಲಿಲ್ಲ.
ಅನೇಕ ಪರಿಣಿತರ ಅಂದಾಜಿನ ಪ್ರಕಾರ 850,000 ಜನ ಜರ್ಮನಿಯ ಸೈನ್ಯದದವರು ಮತ್ತು ಒಕ್ಕೊಟದವರು ಸತ್ತರು (ಸತ್ತವರು, ಅಂಗನ್ಯೂನ್ಯತೆಗೊಳಗಾದವರು, ಸೆರೆಸಿಕ್ಕವರು), ಅದರಲ್ಲಿ ಅನೇಕ ಪಿಒಡಬ್ಲುಗಳು 1943ರಿಂದ 1955ರಲ್ಲಿ ಸೋವಿಯತ್ ಒಕ್ಕೂಟದಲ್ಲಿ ಸಾವಿಗೊಳಗಾದರು. 400,000 ಜರ್ಮನ್ನರು, 120,000 ರೊಮೇನಿಯನ್ನರು, 120,000 ಹಂಗೇರಿಯನ್ನರು, ಮತ್ತು 120,000 ಇಟಾಲಿಯನ್ನರು ಸತ್ತರು, ಗಾಯಗೊಂಡರು, ಅಥವಾ ಸೆರೆಸಿಕ್ಕರು.: p? ಸ್ಟಾಲಿನ್ಗ್ರಾಡ್ನಲ್ಲಿನ 91,000 ಜರ್ಮನ್ ಪಿಒಡಬ್ಲುಗಳಲ್ಲಿ 27,000 ಒಂದು ವಾರದಲ್ಲಿ ಸತ್ತರು ಮತ್ತು 6,೦೦೦ ಜನ 1955ರಲ್ಲಿ ಜರ್ಮನಿಗೆ ವಾಪಾಸಾದರು. ಸೋವಿಯತ್ ಕ್ಯಾಪ್ಟಿವಿಟಿಯಲ್ಲಿ ಉಳಿದ ಪಿಒಡಬುಗಳು ಸತ್ತರು.: 430 ಸೋವಿಯತ್ ಮೂಲಗಳ ಪ್ರಕಾರ ಸ್ಟಾಲಿನ್ಗ್ರಾಡ್ ಪ್ರದೇಶದಲ್ಲಿ 1.5 ಮಿಲಿಯನ್ ಜನ ಸತ್ತರು, ಗಾಯಗೊಂಡರು ಮತ್ತು ಸೆರೆಸಿಕ್ಕರು. ದಾಖಲೆಯ ಅಂಕಿಅಂಶಗಳ ಪ್ರಕಾರ ರೆಡ್ ಆರ್ಮಿಯು ಒಟ್ಟು 1,129,619 ಜನ ಸಾವು ನೋವಿಗೊಳಗಾದರು; 478,741 ಪುರುಷರು ಸತ್ತರು ಅಥವಾ ಕಾಣೆಯಾದರು 650,878 ಜನರು ಹಾನಿಗೊಳಗಾದರು. ಈ ಸಂಖ್ಯೆಯು ಪೂರ್ಣ ಸ್ಟಾಲಿನ್ಗ್ರಾಡ್ ಪ್ರದೇಶದಿಂದಾಗಿದ್ದು; ಪಟ್ಟಣದಲ್ಲಿ ಮಾತ್ರ 750,000 ಜನ ಸತ್ತರು, ಸೆರೆಸಿಕ್ಕರು ಅಥವಾ ಹಾನಿಗೊಳಗಾದರು. ರೆಡ್ ಆರ್ಮಿ ದಂಡ ಪಡೆಗಳು (ಸ್ಟ್ರಾಫ್ಬ್ಯಾಟಿ ) 278 ಸೋವಿಯತ್ ಸೈನಿಕರನ್ನು ಸಾಯಿಸಿದರು. ಅಲ್ಲದೆ ಜರ್ಮನಿಯ 4ನೇ ಪ್ಯಾನ್ಜರ್ ಮತ್ತು 6ನೇ ಸೈನ್ಯದ ವಾಯು ಬಾಂಬ್ ದಾಳಿಯಿಂದ ಸ್ಟಾಲಿನ್ಗ್ರಾಡ್ನಲ್ಲಿ ಸತ್ತರು ಮತ್ತು ಅದರ ಹೊರವಲಯಗಳಲ್ಲಿ 40,000ಕ್ಕೂ ಹೆಚ್ಚಿನ ಸೋವಿಯತ್ ನಾಗರೀಕರು ಸತ್ತರು, ಅದಲ್ಲದೆ ಪಟ್ಟಣದ ಹೊರಪ್ರದೇಶಗಳಲ್ಲಿ ಸತ್ತವರ ಸಂಖ್ಯೆ ತಿಳಿದಿಲ್ಲ. ಒಟ್ಟು ಯುದ್ಧದಿಂದಾಗಿ ಸೈನ್ಯ ಮತ್ತು ಸೋವಿಯತ್ ಒಕ್ಕೂಟಗಳಲ್ಲಿ 1.7 ಮಿಲಿಯನ್ನಿಂದ 2 ಮಿಲಿಯನ್ ಜನ ಸತ್ತರು.
ವಿವಿಧ ಸಮಯಗಳಲ್ಲಿ ಸೋವಿಯತ್ ಪಡೆಗಳು ಯುದ್ಧ ಮಾಡುವ ಮೊದಲು ಜರ್ಮನ್ನರು ನಗರದ 90%ದವರೆಗೂ ಆಕ್ರಮಿಸಿದ್ದರು. ಯುದ್ಧದ ಕೊನೆಗೆ ಸೋವಿಯತ್ ಸೈನ್ಯವ್ಯ್ 6ನೇ ಸೈನ್ಯವನ್ನು ಸುತ್ತುವರೆದಿತು. ಸೋವಿಯತ್ ಸೈನ್ಯದ ವಿರುದ್ಧದ ದಳಿಯಲ್ಲಿ ಕೆಲವು ಜರ್ಮನ್ನರ 4ನೇ ಪನ್ಜರ್ ಸೈನ್ಯವು ಸ್ಟಾಲಿನ್ಗ್ರಾಡ್ನಲ್ಲಿ ಅನೇಕ ಸಾವು ನೋವುಗಳನ್ನು ಅನುಭವಿಸಿತು.
ಜರ್ಮನ್ ಸೈನ್ಯವು ವೇರ್ಮಾಹ್ಟ್ ಮೊದಲ ಯುದ್ಧಗಳಲ್ಲಿ ಪ್ರಮುಖ ಪಾತ್ರ ವಹಿಸಿತು. ಸ್ಟಾಲಿನ್ಗ್ರಾಡ್ಗಿಂತ ಮೊದಲು ಸೋವಿಯತ್ ಪಡೆಗಳು ತನ್ನ ಸಾಕಷ್ಟು ಪಡೆಯನ್ನು ಕೂಡಿಹಾಕಿ ಮಾಸ್ಕೊವನ್ನು ವಶಪಡಿಸಿಕೊಂಡಿತು. ಸೀಮಿತ ಸೈನಿಕ ನೆಲೆಯನ್ನು ಹೊಂದಿದ್ದು ಎಲ್ಲಾ ಸಂಪತ್ತುಗಳನ್ನು ಕಳೆದುಕೊಂಡಿದ್ದ ಸ್ಟಾಲಿನ್ಗ್ರಾಡ್ ಬಿಟ್ಟು ಆರ್ಮಿ ಗ್ರೂಪ್ ಎ ನೊಂದಿಗೆ ಆರನೇ ಸೈನ್ಯವು ಕಕಾಸಸ್ ಪಡೆಯಲು ಮುಂದುವರೆಯಬಹುದಾಗಿತ್ತು. ಆದರೆ, ಹಿಟ್ಲರ್ ತನ್ನ ಅತ್ಯಂತ ಹೆಚ್ಚಿನ ಅನುಭವವಿದ್ದ ಸೈನಿಕರನ್ನು ಪಟ್ಟಣದ ಮೋಸಯುಕ್ತವಾದ ಓಣಿಗಳಲ್ಲಿ ಯುದ್ಧಮಾಡಿ ಸಾಯಲು ಬಿಟ್ಟುಬಿಟ್ಟ. ಇದು ಸೋವಿಯತ್ ಯೂನಿಯನ್ಗೆ ತನ್ನ ಸೈನ್ಯವನ್ನು ಒಟ್ಟುಗೂಡಿಸಿ ಯುದ್ಧ ಮಾಡಲು ಸಹಾಯ ಮಾಡಿತು. ಕೆಲವು ಜರ್ಮನ್ನರು ಹಿಟ್ಲರ್ ತನ್ನ ಪ್ರತಿಷ್ಠೆಗೋಸ್ಕರ ದೊಡ್ಡ ಮತ್ತು ಉತ್ತಮವಾದ ಸೈನ್ಯವನ್ನು ಬಲಿಕೊಟ್ಟನೆಂದು ಭಾವಿಸಿದರು. 6ನೇ ಸೈನ್ಯವನ್ನು ಕುರ್ಸ್ಕ್ ಯುದ್ಧಕ್ಕಾಗಿ ಮರು ರೂಪಿಸಲಾಯಿತು, ಆದರೆ ಇದನ್ನು ಒತ್ತಾಯದಿಂದ ಸೇರಿಸಿದ ಜನರಿಂದ ಮಾಡಲಾಗಿತ್ತು, ಮತ್ತು ಇದು ಮೊದಲಿನ ಸೈನ್ಯದಂತಿರಲಿಲ್ಲ.: 386
ಸ್ಟಾಲಿನ್ಗ್ರಾಡ್ನಲ್ಲಿನ ಜರ್ಮನಿಯ ಸೋಲಿಗೆ ಪ್ರಮುಖ ಕಾರಣಗಳೆಂದರೆ ಹಿಟ್ಲರ್ನ ಏಕಕಾಲದಲ್ಲಿ ಹೆಚ್ಚಿನದನ್ನು ಸಾಧಿಸುವ ಪ್ರಯತ್ನ. ದಕ್ಷಿಣ ಸ್ಟಾಲಿನ್ಗ್ರಾಡ್ದಲ್ಲಿನ ಕಾಕಸಸ್ನ ವಿಶೇಷವಾಗಿ ಅಜೆರ್ಬೈಜಾನ್ನಲ್ಲಿನ ಬಾಕುನಲ್ಲಿನ ತೈಲಬಾವಿಗಳನ್ನು ಎ ಸೈನ್ಯ ತಂಡವು ವಶಪಡಿಸಿಕೊಳ್ಳಲಾರಂಭಿಸಿತು. 1942ರ ದಾಳಿಯ ನಿಜವಾದ ಗುರಿ ತೈಲಬಾವಿಗಳು ಮತ್ತು ಅದನ್ನು ಗೆದ್ದರೆ ಅತ್ಯಂತ ಮುಖ್ಯವಾದ ಯುದ್ಧವನ್ನು ಗೆದ್ದಂತಾಗುವುದು. ಸ್ಟಾಲಿನ್ಗ್ರಾಡ್ನ್ನು ಆಕ್ರಮಿಸುವ ಬದಲು ಬಿ ಸೈನ್ಯ ತಂಡವೂ ಸಹ ತೈಲಬಾವಿಗಳನ್ನು ಆಕ್ರಮಿಸಲು ಆರಂಭಿಸಿದರೆ ಮಾತ್ರ ಇದನ್ನು ಸಾಧಿಸಬಹುದು. ಇದರಿಂದಾಗಿ ಬಾಕು ಹಿಂದೆಂದಿಗಿಂತ ಗಂಭೀರವಾದ ಆಕ್ರಮಣಗಳನ್ನೆದುರಿಸಿತು. ಹಿಟ್ಲರ್ ಕಾಕಸಸ್ ದಾಳಿಯನ್ನು ರದ್ದುಗೊಳಿಸಿದ್ದರೆ ಸ್ಟಾಲಿನ್ಗ್ರಾಡ್ನ ಸುತ್ತ ಆಕ್ರಮಿಸಿದ್ದ ಎ ಸೈನ್ಯ ತಂಡವನ್ನು ಬೆಂಬಲಿಸಲು ಸೈನ್ಯ ತಂಡ ಬಿಯನ್ನು ಬಳಸಬಹುದಿತ್ತು ಮತ್ತು ನಗರದಲ್ಲಿ ಯುದ್ಧದಲ್ಲಿ ತೊಡಗಿದ್ದವರಿಗೆ ಸಹಾಯಕವಾಗುತಿತ್ತು. ಹಿಟ್ಲರನ ಉದ್ಧೇಶಗಳು ಜರ್ಮನ್ನರು ಭಾವಿಸಿದ್ದಕ್ಕಿಂತ ಭಿನ್ನವಾಗಿತ್ತು.
ಯುದ್ಧಕ್ಕೆ ಇಒಂದು ತಿರುವು ದೊರೆತಿದ್ದಲ್ಲದೆ, ಸ್ಟಾಲಿನ್ಗ್ರಾಡ್ ಜರ್ಮನ್ನರ ವೇರ್ಮಾಹ್ಟ್ ಮತ್ತು ಸೋವಿಯತ್ ರೆಡ್ ಆರ್ಮಿಯ ಶಿಸ್ತನ್ನು ಹೊರಗೆಡಿವಿತು. ಸೋವಿಯತ್ ಮೊದಲು ಸ್ಟಾಲಿನ್ಗ್ರಾಡ್ನಲ್ಲಿ ಜರ್ಮನ್ನರ ತೀವ್ರದಾಳಿಯ ವಿರುದ್ಧ ರಕ್ಷಣಾತಂತ್ರವನ್ನು ಬಳಸಿತು. ಹೀಗಾಗಿ ಆ ಸಮಯದಲ್ಲಿ ಸೋವಿಯತ್ ಕಡೆ ಅನೇಕ ಹಾನಿಗಳು ಸಂಭವಿಸಿತು, ಹೊಸದಾಗಿ ಸೇರಿದ ಸೈನಿಕರ ಆಯುಷ್ಕಾಲವು ಒಂದು ದಿನಕ್ಕಿಂತ ಕಡಿಮೆಯಿರುತಿತ್ತು,[page needed] ಮತ್ತು ಸೋವಿಯತ್ ಅಧಿಕಾರಿಗಳ ಜೀವನಾವಧಿಯು ಮೂರುದಿನಗಳಾಗಿತ್ತು. ಅವರ ತ್ಯಾಗಗಳನ್ನು ಜನರಲ್ ರೋಡಿಮ್ಟ್ಸೆವ್ನ ಸೈನಿಕ ಸಾಯುವಾಗ ಮುಖ್ಯ ರೈಲ್ವೇ ನಿಲ್ದಾಣದ ಗೋಡೆಯ ಮೇಲೆ ಗೀಚಿ ಸ್ಮಾರಕವಾಗಿಸಿದ– ಇದು ಯುದ್ಧದ ಸಮಯದಲ್ಲಿ 15 ಬಾರಿ ಕೈಯನ್ನು ಬದಲಿಸಿತು – “ರೋಡಿಮ್ಟ್ಸೆವ್ನ ರಕ್ಷಕರು ತಾಯ್ನಾಡಿಗಾಗಿ ಯುದ್ಧ ಮಾಡಿ ಮತ್ತು ಪ್ರಾಣನೀಡಿದರು.”
ಸ್ಟಾಲಿನ್ಗ್ರಾಡ್ನಲ್ಲಿನ ಸೋವಿಯತ್ ರಕ್ಷಕರ ನಾಯಕತ್ವಕ್ಕಾಗಿ, ನಗರಕ್ಕೆ 1945ರಲ್ಲಿ ಹಿರೋ ಸಿಟಿ ಬಹುಮಾನವನ್ನು ನೀಡಲಾಯಿತು. ಯುದ್ಧದ ಇಪ್ಪತ್ನಾಲು ವರ್ಷಗಳ ನಂತರ ಅಕ್ಟೋಬರ್ 1967ರಲ್ಲಿ, ಭಾರಿ ಗಾತ್ರದ ಸ್ಮಾರಕವಾದ ಮದರ್ ಮದರ್ಲ್ಯಾಂಡ್ನಲ್ಲಿನ ಮಮಯೆವ್ ಕುರ್ಗನ್ ಪ್ರತಿಮೆಯು ನಗರದ ಮೇಲೆ ಕಣ್ಣು ಹಾಯಿಸುವಂತೆ ಮಾಡುತ್ತದೆ. ಈ ಪ್ರತಿಮೆಯು ಯುದ್ಧ ಸ್ಮಾರಕ ಸಂಕೀರ್ಣದಲ್ಲಿದ್ದು ಯುದ್ಧದಿಂದ ಉದ್ದೇಶಪೂರ್ವಕವಾಗಿ ಹಳುಮಾಡಿದುರಿಂದ ಅಳಿದುಳಿದ ಗೋಡೆಗಳನ್ನೂ ಇದು ಹೊಂದಿದೆ. ಗ್ರೈನ್ ಸಿಲೊ ಮತ್ತು ಸೈನಿಕರು ಎರೆಡು ತಿಂಗಳುಗಳ ಕಾಲ, ಬಿಡುಗಡೆಯಾಗುವವರೆಗೂ ತಂಗಿದ್ದ ಸ್ಥಳವಾದ ಪಾವ್ಲೋವ್ಸ್ ಹೌಸ್ನ್ನು ಈಗಲೂ ಜನರು ಸಂದರ್ಶಿರುತ್ತಾರೆ. ಇಂದಿಗೂ ಸಹ ಮಮಯೆವ್ ಕುರ್ಗಾನ್ನಲ್ಲಿ ಮೂಳೆಗಳು ಮತ್ತು ತುಕ್ಕು ಹಿಡಿದ ಭಾಗಗಳನ್ನು ಕಾಣಬಹುದು, ಇದು ಎರಡೂ ಪಕ್ಷದವರ ಯುದ್ಧದ ಸಮಯದ ಸಾವು ನೋವುಗಳ ಮತ್ತು ಭಾರಿ ವಿರೋಧದ ನಡುವೆಯೂ ಯಶಸ್ವಿಯಾದ ಸಂಕೇತಗಳಾಗಿವೆ.
ಇನ್ನೊಂದೆಡೆಯಲ್ಲಿ ಜರ್ಮನ್ ಸೈನ್ಯವು ಸೆರೆಯಾದ ನಂತರ ಗಮನಾರ್ಹವಾದ ಶಿಸ್ತಿನಿಂದ ವರ್ತಿಸಿತು. ಮೊದಲ ಬಾರಿಗೆ ಅಂತಹ ವ್ಯತಿರಿಕ್ತ ಪರಿಸ್ಥಿತಿಗಳನ್ನು ಅದು ಎದುರಿಸಿತ್ತು. ನಂತರದ ಮುತ್ತಿಗೆಯಲ್ಲಿ ಅನೇಕ ಜರ್ಮನ್ ಸೈನಿಕರು ಅಹಾರ ಮತ್ತು ಬಟ್ಟೆಯ ಕೊರತೆಯಿಂದಾಗಿ ಬಳಲಿದರು ಮತ್ತು ಮರಗಟ್ಟಿ ಸತ್ತರು.[page needed] ಅವರ ಪ್ರತಿಭಟನೆಯು ಯಾವುದೇ ಪರಿಣಾಮವನ್ನು ಬೀರದಿರುವುದರಿಂದ ಕೊನೆಯವರೆಗೂ ಶಿಸ್ತನ್ನು ಕಾಪಾಡಿಕೊಳ್ಳಲಾಯಿತು. ವಾನ್ ಮ್ಯಾನ್ಸ್ಟೈನ್ನೊಳಗೊಂಡಂತೆ ಹಿಟ್ಲರ್ನ ಅನೇಕ ಉನ್ನತ ಮಟ್ಟದ ಜನರಲ್ಗಳ ಸಲಹೆಯ ವಿರುದ್ಧವಾಗಿ ಫ್ರೀಡ್ರಿಕ್ ಪೌಲಸ್ ಹಿಟ್ಲರ್ನ ಆದೇಶಗಳನ್ನು ಪಾಲಿಸಿದನು, ಮತ್ತು ನಗರದಿಂದ ಹೊರಬರುವ ಪ್ರಯತ್ನವನ್ನೂ ಮ್. ಜರ್ಮನ್ನರ ಯುದ್ಧಸಾಮಗ್ರಿಗಳು, ಸರಬರಾಜು ಮತ್ತು ಆಹಾರಗಳು ದುರ್ಲಭವಾದವು.
ಪೌಲಸ್ ವಿಮಾನ ಸಾಗಣೆಯು ವಿಫಲವಾಗಿದೆ ಮತ್ತು ಸ್ಟಾಲಿನ್ಗ್ರಾಡ್ ಕತಪ್ಪಿ ಹೋಗಿದೆ ಎಂದು ತಿಳಿದಿದ್ದನು. ಆತನು ತನ್ನ ತಂದವನ್ನುಳಿಸಿಕೊಳ್ಳಲು ಶರಣಾಗುತ್ತೇವೆಂದು ಅನುಮತಿ ಕೇಳಿದನು, ಆದರೆ ಹಿಟ್ಲರ್ ಅದನ್ನು ಉತ್ತೇಜಿಸಿ ಜನರಲ್ಫೀಲ್ಡ್ಮಾರ್ಶಲ್ ಪದವಿಗೆ ಬಡ್ತಿ ನೀಡುವ ಬದಲು ತಿರಸ್ಕರಿಸಿದನು. ಈ ಸ್ಥರದ ಯವುದೇ ಜರ್ಮನ್ ಅಧಿಕಾರಿಯು ಶರಣಾಗಿರಲಿಲ್ಲ, ಮತ್ತು ಇದರ ಸೂಚನೆಯೆಂದರೆ: ಪೌಲಸ್ ಶರಣಾದರೆ ಅವನಿಗೆ ಅವನೇ ಅವಮಾನ ಮಾಡಿಕೊಂಡಂತೆ ಮತ್ತು ಶರಣಾದ ಅಧಿಕಾರಿಗಳಲ್ಲಿ ಅತ್ಯುನ್ನತ ದರ್ಜೆಯವನಾಗುತ್ತಾನೆ. ಹಿಟ್ಲರ್ ಪೌಲಸ್ ಕೊನೆಯವರೆಗೂ ಹೋರಾಡುತ್ತಾನೆ ಅಥವಾ ಆತ್ಮಹತ್ಯೆಗೆ ಶರಣಾಗುತ್ತಾನೆ ಎಂದು ನಂಬಿದ್ದನು. ಬದುಕನ್ನು ಆರಿಸಿಕೊಂಡ ಪೌಲಸ್ ಶರಣಾದನು ಮತ್ತು ಹೀಗೆ ಹೇಳಿಕೆ ನೀಡಿದನು, "ಆಸ್ಟ್ರಿಯಾದ ಅಧಿಕಾರಿಗಾಗಿ ಗುಂಡಿಟ್ಟುಕೊಂಡು ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಉದ್ಧೇಶವು ನನಗಿರಲಿಲ್ಲ".[ಸೂಕ್ತ ಉಲ್ಲೇಖನ ಬೇಕು]
ಯುದ್ಧದ ಕಟ್ಟಕಡೆಯ ಭಾಗವಾಗಿ ಜರ್ಮನ್ ಸೈನಿಕರ ಸಮೂಹ ಸಾವು, ಸೋವಿಯತ್ನ ಚಲಿ, ಹಾಗೂ ಅವರ ಹಸಿವಿನ ಕೂಗು, ಯದ್ಧ ಬರ್ಬರತೆಯ ಬಗ್ಗೆ ಮನ ಕಲಕುವಂತೆ ಹಲವು ಸಿನಿಮಾಗಳು ಜರ್ಮನ್, ರಷಿಯನ್, ಬ್ರಿಟೀಷ್ ಮತ್ತು ಅಮೆರಿಕನ್ ಮೂಲ ಭಾಷೆಯಲ್ಲಿ ಮೂಡಿ ಬಂದಿತು ಅಲ್ಲದೆ ಹಲವು ಪುಸ್ತಕಗಳಲ್ಲಿ ಯುದ್ಧಾನಂತರದ ನೋವಿನ ಚಿತ್ರಣ ಕಣ್ಣಿಗೆ ಕಟ್ಟುವಂತೆ ಪ್ರತಿಫಲಿಸಿತು. ಜರ್ಮನ್ ಮೇಲಿನ ದಾಳಿಯ ಸತ್ಯ ಮತ್ತು ಜರ್ಮನ್ನ ಹೊರಟುತನ ಅದರಿಂದ ಆದ ಹಿಂದೆಂದೂ ಕಂಡಿರದಂಥಹ ಮಾನವ ಮಾರಣ ಹೋಮಗಳ ಬಗ್ಗೆ ವಿಸ್ಮೃತವಾಗಿ ಚರ್ಚಿಸಿದ್ದವು.
ಸ್ಟಾಲಿನ್ಗ್ರಾಡ್ನ್ನು ವಸ್ತುವನ್ನಾಗಿಟ್ಟುಕೊಂಡು ವೆಸ್ಟ್ಇಂಡಿಯನ್ ಮೂಲದವರಾದ ಕವಿ ರೋಬರ್ಟ್ ಬ್ಲಾಕ್ಮನ್ ಕಾವ್ಯವನ್ನೆ ರಚಿಸಿದ್ದಾರೆ. ಈ ಕಾವ್ಯವೂ ಪ್ರಕಟಗೊಂಡ ಎರಡನೆ ಬದಿಯಲ್ಲಿ ರೊಬರ್ಟ್ ವ್ಯಟ್ಟ್ ಅಡಾಲ್ಫ್ ಹಿಟ್ಲರ್ನನ್ನು 2 ನೇ ವಿಶ್ವ ಸಮರದಲ್ಲಿ ಸೋಲಿಸಿದ ಉದ್ದೇಶ ಮತ್ತು ಪರಿಣಾಮ ಸೋವಿಯತ್ ಒಕ್ಕೂಟದ ಶೀತಲಸಮರದ ಬಗೆಗಿನ ಬೆಳಕು ಚೆಲ್ಲುತ್ತದೆ.
{{cite web}}
: CS1 maint: unrecognized language (link)This article uses material from the Wikipedia ಕನ್ನಡ article ಸ್ಟಾಲಿನ್ಗ್ರಾಡ್ ಸಮರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.