ಚಿಕ್ಕಮಗಳೂರು ಭಾರತ ದೇಶದ, ಕರ್ನಾಟಕ ರಾಜ್ಯದ ಒಂದು ಜಿಲ್ಲೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಚಿಕ್ಕಮಗಳೂರು ಜಿಲ್ಲೆ ಕಾಫಿನಾಡು ಎಂದು ಸಹ ಕರೆಯಲ್ಪಡುತ್ತದೆ. ಕ್ರಿ.ಶ. ೧೬೭೦ ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ದತ್ತಗಿರಿ/ ಚಂದ್ರದ್ರೋಣ ಪರ್ವತ ಭಾಗಗಳಲ್ಲಿ ಬೆಳೆಯಲಾಯಿತು. ಚಿಕ್ಕಮಗಳೂರಿನ ಗಿರಿಶ್ರೇಣಿಗಳು ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದ್ದು, ತುಂಗಾ ಮತ್ತು ಭದ್ರಾ ನದಿಗಳ ಮೂಲಸ್ಥಾನವಾಗಿದೆ. ಕರ್ನಾಟಕದ ಅತ್ಯಂತ ಎತ್ತರ ಶಿಖರವಾದ ಮುಳ್ಳಯ್ಯನ ಗಿರಿ ಚಿಕ್ಕಮಗಳೂರಿನಲ್ಲಿದೆ. ಈ ಜಿಲ್ಲೆಯು ಮಲೆನಾಡು, ಅರೆಮಲೆನಾಡು, ಹಾಗೂ ಬಯಲುಸೀಮೆಗಳನ್ನೊಳಗೊಂಡಿದೆ, ಈ ಜಿಲ್ಲೆಯ ಹೆಚ್ಚು ಪ್ರದೇಶ ಮಲೆನಾಡು'. ವಿವಿಧ ಜಾತಿಯ ಪ್ರಾಣಿಗಳನ್ನೊಳಗೊಂಡ ಅಭಯಾರಣ್ಯಗಳು, ನಿತ್ಯಹರಿದ್ವರ್ಣಕಾಡುಗಳಿಂದ ಕೂಡಿದ ಪರ್ವತ ಶ್ರೇಣಿಗಳು ಹಾಗೂ ಅನೇಕ ಜಲಪಾತಗಳು ಮತ್ತು ಕಾಫಿ, ಟೀ, ಏಲಕ್ಕಿ, ಮೆಣಸು, ಅಡಿಕೆ,ಬಾಳೆ, ತೆಂಗುಗಳನ್ನು ಬೆಳೆಯುವ ನಾಡಾಗಿದೆ. ಜಲ ಮತ್ತು ಪ್ರಕೃತಿ ಸಂಪತ್ತಿನಿಂದ ಪ್ರಸಿದ್ಧಿ ಪಡೆದಿದೆ.
ಚಿಕ್ಕಮ ಗಳೂರು ಜಿಲ್ಲೆ ಕಾಫಿ ನಾಡು | |
---|---|
ಜಿಲ್ಲೆ | |
Nickname(s): ಕಾಫಿಯ ನಾಡು | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಊಗಮ | ೧೯೪೭ |
ಸ್ಥಾಪಿಸಿದವರು | ರುಕ್ಮಾಂಗದ ರಾಜ |
ಹೆಸರಿಡಲು ಕಾರಣ | ಕಾಫಿ, ಪರ್ವತ ಶ್ರೇಣಿ. |
ಕೇಂದ್ರ ಕಛೇರಿ | ಚಿಕ್ಕಮಗಳೂರು |
ತಾಲ್ಲೂಕುಗಳು | ಚಿಕ್ಕಮಗಳೂರು, ಕಡೂರು, ತರೀಕೆರೆ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಕಳಸ, ಅಜ್ಜಂಪುರ ನರಸಿಂಹರಾಜಪುರ |
ಸರ್ಕಾರ | |
• ಮಾದರಿ | ಜಿಲ್ಲಾಧಿಕಾರಿ ಕಚೇರಿ |
• ಪಾಲಿಕೆ | ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ |
• ಜಿಲ್ಲಾಧಿಕಾರಿ | ಷಡಕ್ಷರಿ ಸ್ವಾಮಿ ಎಸ್ ಪಿ |
Area | |
• Total | ೭,೨೦೧ km೨ (೨,೭೮೦ sq mi) |
• ಕಾಡು | ೨,೧೦೮ km೨ (೮೧೪ sq mi) |
Elevation | ೧,೯೨೬ m (೬,೩೧೮ ft) |
Population (೨೦೧೧) | |
• Total | ೧೧,೩೭,೯೬೧ |
• ಶ್ರೇಣಿ | ೪೦೮ ಭಾರತದಲ್ಲಿ |
• ಸಾಂದ್ರತೆ | ೧೫೮,೧೯/km೨ (೪೦,೯೭೦/sq mi) |
Demonym(s) | ಚಿಕ್ಕಮಗಳೂರಿಗರು |
ಭಾಷೆ | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+೫:೩೦ (ಐ. ಎಸ್. ಟಿ) |
ಪಿನ್ ಕೋಡ್ | ೫೭೭೧xx |
ವಾಹನ ನೋಂದಣಿ | ಕೆ.ಏ-೧೮, ಕೆ.ಏ-೬೬ |
ಜಾಲತಾಣ | ಚಿಕ್ಕಮಗಳೂರು ಮಿಂಬಲೆ ತಾಣ |
ಚಿಕ್ಕಮಗಳೂರನ್ನು ಪ್ರವಾಸಿಗರ ತಾಣ. ಪ್ರಕುತಿಯ ಸೌಂದರ್ಯವನ್ನು ಒಳಗೊಂಡಿರುವ ಮಲೆನಾಡು ಯೆಂದು ಹೆಸರನ್ನು ಪಡೆದುಕೊಂಡಿದೆ
ಚಿಕ್ಕಮಗಳೂರು ಜಿಲ್ಲೆಯು ಅದರ ಜಿಲ್ಲಾಕೇಂದ್ರವಾದ ಚಿಕ್ಕಮಗಳೂರು ಪಟ್ಟಣದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಚಿಕ್ಕಮಗಳೂರು ಎಂದರೆ “ಚಿಕ್ಕ ಮಗಳ ಊರು” ಎಂದರ್ಥ. ಈ ಪಟ್ಟಣವನ್ನು ಪ್ರಸಿದ್ಧ ಸಖರಾಯ ಪಟ್ಟಣ ಮುಖ್ಯಸ್ಥನಾದ ರುಕ್ಮಾಂಗದ, ಚಿಕ್ಕ ಮಗಳಿಗಾಗಿ ವರದಕ್ಷಿಣೆಯಾಗಿ ನೀಡಿದ ಎಂದು ಹೇಳಲಾಗಿದೆ. ಅದ್ದರಿಂದ ಈ ನಗರಕ್ಕೆ ಚಿಕ್ಕಮಗಳೂರು ಎಂಬ ಹೆಸರು ಬಂದಿದೆ. ಹಾಗೆಯೇ “ಹಿರಿಯ ಮಗಳ ಊರು” ಹಿರೇಮಗಳೂರು ಎಂಬ ಊರು ಚಿಕ್ಕಮಗಳೂರಿನಿಂದ ೫ ಕೀ.ಮೀ.ದೂರದಲ್ಲಿದೆ. ಅದಾಗ್ಯೂ ಬಹುತೇಕರು ಚಿಕ್ಕಮಗಳೂರನ್ನು ಚಿಕ್ಕಮಂಗಳೂರು ಎಂದು ತಪ್ಪಾಗಿ ಉಚ್ಚರಿಸುತ್ತಾರೆ. ಚಿಕ್ಕಮಗಳೂರು ಜಿಲ್ಲೆ ೧೯೪೭ ರ ತನಕ ಕಡೂರು ಎಂದು ಕರೆಯಲ್ಪಡುತ್ತಿತ್ತು. ಕೆಲವು ಹಳೆಯ ಶಾಸನಗಳ ಪ್ರಕಾರ ಚಿಕ್ಕಮಗಳೂರು ಮತ್ತು ಹಿರೇಮಗಳೂರುಗಳನ್ನು ಕ್ರಮವಾಗಿ ಕಿರಿಯ ಮುಗುಲಿ ಮತ್ತು ಪಿರಿಯ ಮುಗುಲಿ ಎಂದು ಕರೆಯಲಾಗುತ್ತಿತ್ತು.
ಚಿಕ್ಕಮಗಳೂರಿನಲ್ಲಿ ಅತಿಹೆಚ್ಚು ಬೆಳೆಯುವ ಬೆಳೆ ಕಾಫಿ. ಇಲ್ಲಿನ ರೈತರು ಕಾಫಿ ಬೆಳೆಯಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿ ಅತಿಹೆಚ್ಚು ಮಳೆಯಾಗುತ್ತದೆ.ಕಾಫೀಯ ತವರೂರು ಬಾಬಾಬುಡನ್ ಎ಼಼ಂಬ ಅರೇಬಿಯನ್ ಫಕೀರ್ ಕರ್ನಾಟಕದಲ್ಲಿ ಕಾಫಿಯನ್ನು ಪರಿಚಯಿಸಿದರು. ಎಂಬ ಮೂಢನಂಬಿಕೆ ಚಾಲ್ತಿಯಲ್ಲಿದೆ.ಎಲ್ಲಿಯ ಅರಬ್ ದೇಶ, ಎಲ್ಲಿಯ ಕಾಫಿ ಬೆಳೆ ಇದು ನಿಜಕ್ಕೂ ಹಾಸ್ಯಾಸ್ಪದ ಸಂಗತಿಯಾಗಿದೆ..ಯಾಕೆಂದರೆ ಕಾಫಿ ಒಂದು ಅತ್ಯಂತ ಸೂಕ್ಷ್ಮ ಬೆಳೆ ಇದು ಮರುಭೂಮಿಯಲ್ಲಿ ಬೆಳೆಯಲು ಅದೇನು ಪಾಪಸ್ ಕಳ್ಳಿಯೇ ಅಥವಾ ಖರ್ಜೂರ ಗಿಡವೇ...ನಮ್ಮ ಮಲೆನಾಡಿನಲ್ಲೇ ನೆರಳು ಕಡಿಮೆ ಇದ್ದರೆ ಗಿಡಗಳು ಸುಟ್ಟೇ ಹೋಗುತ್ತವೆ.. ಅಂತಹುದರಲ್ಲಿ 50- 60 ಸೆಂಟಿಗ್ರೇಡ್ ಉಷ್ಣಾಂಶ ಇರೋ ಮೆಕ್ಕಾದಲ್ಲಿ ಕಾಫಿ ಬೆಳೆಯಲು ಸಾಧ್ಯವೇ... ಕಾಫೀ ಬೆಳೆಯನ್ನೂ ಸೆಕ್ಯೂಲರ್ ಮಾಡ ಹೊರಟ ಮೂರ್ಖರ ಹಾಸ್ಯಾಸ್ಪದ ಕಟ್ಟು ಕತೆ ಇದು. ಬೆಳೆಯುವ ಕಾಫಿಯ ತಳಿಗಳೆಂದರೆ ಅರೇಬಿಕ್ ರೋಬಸ್ಟ ಅರೇಬಿಕ್ ತಳಿಯನ್ನು ಇಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಆದರೆ ಅರೇಬಿಕ್ ಕಾಫಿಯ ಮೂಲ ತಳಿಗಳ ಹೆಸರು ಚಿಕ್ಕಮಗಳೂರು ತಳಿ ಕಾಫಿ ಎಂದೆ ಕರೆಯಲಾಗುತ್ತಿತ್ತು ಇದು ಹೇಗೆ ಬದಲಾವಣೆಯಾಗಿತ್ತು ಎಂದರೆ ಅರೇಬಿಯನ್ ಲೂಟಿಕೋರರು ಚಿಕ್ಕಮಗಳೂರಿನ ಕಾಫಿಯನ್ನು ಆಮದು ಮಾಡಿಕೊಳ್ಳುತ್ತಿದ್ದರು. ಆಗ ಅರೇಬಿಕ್ ದೇಶಗಳಲ್ಲಿ ಇದರ ಬೇಡಿಕೆ ಹೆಚ್ಚಾಯಿತು. ಆಗ ಮೆಕ್ಕಾ ದೇಶದ ಆಮದು ಕೋರರು ಭಾರತಕ್ಕೆ ವಲಸೆ ಬಂದರು. ಆಗ ಚಿಕ್ಕಮಗಳೂರಿಗೆ ಬಂದು. ಅರೇಬಿಕ್ ದೇಶಗಳಿಗೆ ಕೊಡುತ್ತಿದ್ದ ಕಾಫಿ ಬೀಜಗಳನ್ನು ನಮಗೆ ಕೊಡಿ ಎಂದು ಬೇಡಿಕೆಯಿಟ್ಟರು. ಆಗ ಮತ್ತೊಮ್ಮೆ ಬಂದಾಗ ಅರೇಬಿಕ್ ಕಾಫಿ ಕೊಡಿ ಎಂದು ಹೆಸರನ್ನು ಖ್ಯಾತಿಗಳಿಸಿದರು. ಹಾಗಾಗಿ ಚಿಕ್ಕಮಗಳೂರು ಕಾಫಿ ಹೋಗಿ ಅರೇಬಿಕ್ ಹೆಸರು ಬಂದಿದೆ. ಇದರ ಮೂಲ ಹೆಸರು ಚಿಕ್ಕಮಗಳೂರು ಕಾಫಿ ಎಂದೇ ಹೆಸರುವಾಸಿ.
ಹೊಯ್ಸಳರ ಸಾಮ್ರಾಜ್ಯ ಉಗಮವಾದ ಮತ್ತು ಹೊಯ್ಸಳರು ಸಾಮ್ರಾಜ್ಯದ ತಮ್ಮ ಆರಂಭದಲ್ಲಿ ದಿನಗಳನ್ನು ಕಳೆದ ಸೊಸೆಯೂರು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಸೊಸೆಯೂರು ಕಾಲನಂತರ ಹೊಯ್ಸಳರ ಪ್ರಥಮ ರಾಜಧಾನಿ ಶಶಕಪುರವಾಗಿ ನಿರ್ಮಾಣವಾಯಿತು. ಸೊಸೆಯೂರು ಈಗ ಅಂಗಾಡಿ ಗ್ರಾಮವೆಂದು ಗುರುತಿಸಲ್ಪಡುತ್ತದೆ.ಇದು ಮೂಡಿಗೆರೆ ತಾಲ್ಲೂಕಿನಲ್ಲಿದೆ. ಹಿಂದೊಮ್ಮೆ ದಟ್ಟವಾದ ಗೊಂಡಾರಣ್ಯದಲ್ಲಿ ಜೈನ ಮುನಿಗಳ ಜ್ಞಾನ ತಪಸ್ಸಿಗೆ ಯೋಗ್ಯವಾದ ಸ್ಥಳ ಇದಾಗಿತ್ತೆಂದು, ಚಾಳುಕ್ಯ ನಾಡಿನಿಂದ ಮಲ್ಲಚಂದ್ರದೇವ ಇಲ್ಲಿಗೆ ಬಂದನೆಂಬ ವಿಷಯ ೧೦ನೇ ಶತಮಾನದ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಒಂದು ದಂತಕಥೆಯ ಪ್ರಕಾರ, ಒಂದೊಮ್ಮೆ ಈಗಿನ ಅಂಗಡಿ ಗ್ರಾಮದ ವಾಸಂತಿಕಾದೇವಿಯ ಗುಡಿ ಮುಂದೆ ಸುದತ್ತಾಚಾರ್ಯರು ತಮ್ಮ ಶಿಷ್ಯರಿಗೆ ಪಾಠ-ಪ್ರವಚನ ಕಲಿಸುತ್ತಿದ್ದ ಸಂದರ್ಭದಲ್ಲಿ, ಹುಲಿಯೊಂದು ದಿಢೀರನೆ ಗುಡಿಯ ಬಳಿ ಇದ್ದ ಶಿಷ್ಯಾರ್ಥಿಗಳ ಮೇಲೆ ಎರಗಲು ಬಂದಾಗ ಸುದತ್ತಾಚಾರ್ಯರು ಕೂಡಲೇ ಅದನ್ನು ಹೊಡೆಯಲು, ತನ್ನ ಶಿಷ್ಯ ಸಳನಿಗೆ "ಹೊಯ್ ಸಳ" ಎಂದು ಆಜ್ಞಾಪಿಸಿದರು. ಇದೇ ಹೊಯ್ಸಳ ಶಬ್ದದ ಮೂಲ ಎನ್ನುತ್ತಾರೆ. ಕೂಡಲೇ ಸ್ಥಳದಲ್ಲಿದ್ದ ಸಳನು ತನ್ನ ಗುರುಗಳ ಆಜ್ಞೆಯಂತೆ ಹುಲಿಯೊಂದಿಗೆ ವೀರಾವೇಶದಿಂದ ಹೋರಾಡಿ ಹುಲಿಯನ್ನು ಕೊಂದನಂತೆ. ೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ ಈ ಕಥೆ ಮೊದಲು ಕಾಣಬರುತ್ತದೆ. ಆದರೆ ಇದರ ತಥ್ಯ ಅನುಮಾನಾಸ್ಪದವಾಗಿದ್ದು ಇನ್ನೂ ದಂತಕಥೆಯ ರೂಪದಲ್ಲಿಯೇ ಉಳಿದಿದೆ.ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಶಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು. ಹೊಯ್ಸಳರ ಲಾಂಛನವು ಸಳನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಾಗಿದ್ದು, ಚೋಳರ ಲಾಂಛನವು ಹುಲಿಯಾಗಿತ್ತು ಎಂಬ ಅಂಶಗಳು ಈ ಊಹೆಗೆ ಕಾರಣ .ಕ್ರಿ.ಶ ೧೦೬೨ ರಲ್ಲಿ ವಿನಯಾದಿತ್ಯ ತನ್ನ ರಾಜಧಾನಿಯನ್ನು ಸೊಸೆಯೂರಿನಿಂದ (ಶಶಕಪುರ-ಅಂಗಡಿ) ಬೇಲೂರಿಗೆ ವರ್ಗಾಯಿಸಿದನಂತೆ. ಅಂಗಡಿ ಗ್ರಾಮದ ಹೊಯ್ಸಳರ ಕಾಲದ ವಾಸಂತಿಕ ದೇವಾಲಯ ಹಾಗೂ ಮಕರ ಜಿನಾಲಯ, ನೇಮೀನಾಥ ಬಸದಿ, ಶಾಂತಿನಾಥ ಬಸದಿ, ವೈಷ್ಣವ ಪಂಥದ ಕೇಶವ ದೇವಾಲಯ, ಶೈವ ಪಂಥದ ಪಾತಾಳ ರುದ್ರೇಶ್ವರ ದೇವಾಲಯ ಹಾಗೂ ಮಲ್ಲೇಶ್ವರ, ಮಲ್ಲಿಕಾರ್ಜುನ ದೇವಾಲಯಗಳು ಈ ಸ್ಥಳದ ಮಹಿಮೆಯನ್ನು ಸಾರುತ್ತವೆ. ತರೀಕೆರೆ ತಾಲ್ಲೂಕಿನ ಅಮೃತಪುರದಲ್ಲಿ ಹೊಯ್ಸಳ ಸಾಮ್ರಾಜ್ಯದ ದೊರೆ ಎರಡನೇ ವೀರ ಬಲ್ಲಾಳ (೧೧೭೩-೧೨೨೦ ಸಿ.ಇ.) ನಿರ್ಮಿಸಿದ ಅಮೃತೇಶ್ವರ ದೇವಸ್ಥಾನವಿದೆ. ಕ್ರಿ.ಶ. ೧೬೭೦ ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ಬಾಬಾ ಬುಡನ್ಗಿರಿಯಲ್ಲಿ ಬೆಳೆಯಲಾಯಿತು. ಬಾಬಾ ಬುಡನ್ ಅವರು ಮೆಕ್ಕಾ ತೀರ್ಥಯಾತ್ರೆ ಮಾಡುತ್ತಿರುವಾಗ ಯೆಮೆನ್ನ ಮೋಕಾ ಬಂದರಿನಲ್ಲಿ ಕಾಫಿ ಬಗ್ಗೆ ಅವರಿಗೆ ತಿಳಿಯಿತು. ಅವರು ಏಳು ಕಾಫಿಯ ಬೀಜವನ್ನು ಹೊಕ್ಕಳಿನ ಸುತ್ತ ಆಡಗಿಸಿಟ್ಟುಕೊಂಡು ಅರೇಬಿಯಾದಿಂದ ಹೊರಗೆ ತಂದರು. ಅವರು ಮನೆಗೆ ಮರಳುತ್ತಿರುವಾಗ ಬಾಬಾ ಬುಡನಗಿರಿ/ದತ್ತ ಪೀಠ ಬೆಟ್ಟದಲ್ಲಿ ಕೆಲವು ಬೀಜಗಳನ್ನು ನೆಟ್ಟರು ಎಂದು ಹೇಳುತ್ತಾರೆ. ಈ ಜಿಲ್ಲೆಯಲ್ಲಿ ಕೇಂದ್ರ ಕಾಫಿ ಸಂಶೋಧನ ಸಂಸ್ಥೆಯು ಇದ್ದು. ಇದನ್ನು ಹಿಂದೆ ೧೯೨೫ ರಲ್ಲಿ ಲೇ. ಡಾ. ಲೆಸ್ಲಿ. ಸಿ. ಕೊಲ್ಮನ್ ನೇತೃತ್ವದಲ್ಲಿ ಆರಂಭವಾದ ಕಾಫಿ ಎಕ್ಸ್ಪೆರಿಮೆಂಟಲ್ ಸ್ಟೇಷನ್ ಎಂದು ಕರೆಯಲಾಗಿತ್ತು. ಈ ಸಂಸ್ಥೆ ೧೧೯.೮೬ ಎಕರೆಗಳಷ್ಟು ಪ್ರದೇಶದಲ್ಲಿ ಹರಡಿಕೊಂಡಿದೆ ಮತ್ತು ಸಂಸ್ಥೆಯು ಕಾಫಿ ಗುಣಮಟ್ಟ ಸುಧಾರಿಸಲು ಸಂಶೋಧನೆಯನ್ನು ನಡೆಸುತ್ತದೆ.
ಶಾಸನಗಳಲ್ಲಿ ಚಿಕ್ಕಮಗಳೂರು.
ಚಿಕ್ಕಮಗಳೂರು ಇದ್ದ ಮೇಲೆ ದೊಡ್ಡ ಮಗಳೂರೂ ಇರಬೇಕಲ್ಲ ಎಂಬ ಸಹಜ ಪ್ರಶ್ನೆಗೆ ಪಕ್ಕದಲ್ಲೇ ಇರುವ ‘ಹಿರೇಮಗಳೂರು’ ‘ನಾನಿದ್ದೇನೆ’ ಎನ್ನುತ್ತದೆ. ಇವರಿಬ್ಬರು ಯಾರ ಮಕ್ಕಳು? ಎಂಬ ಪ್ರಶ್ನೆ ಉದಿಸಿದರೆ ಸಖರಾಯಪಟ್ಟಣದ ರುಕ್ಮಾಂಗದ ದೊರೆಯ ಮಕ್ಕಳೆಂದು ಹೇಳುವ ಪುರಾಣ ಕಥೆ ಇದೆ.
ಆದರೆ, ನಮ್ಮ ಶಾಸನಗಳು ಕಟ್ಟಿಕೊಡುವ ಚಿಕ್ಕಮಗಳೂರಿನ ಇತಿಹಾಸ ಬೇರೆಯದೇ ಆಗಿದೆ, ತುಂಬಾ ಕುತೂಹಲಕರವೂ ಆಗಿದೆ. ಚಿಕ್ಕಮಗಳೂರಿನ ಶಾಸನಗಳನ್ನು ಸನ್ಮಾನ್ಯ ಶ್ರೀ ಬಿ.ಎಲ್.ರೈಸ್ ಅವರು ಕ್ರಿ.ಶ. 1900ರ ಸುಮಾರಿನಲ್ಲಿ ಸಂಗ್ರಹಿಸಿ, ಸಂಕಲಿಸಿ, ಸಂಪಾದಿಸಿ, ಪ್ರಕಟಿಸಿದ್ದಾರೆ. ಈ ಜಾಡನ್ನು ಹಿಡಿದು ನೋಡಿದರೆ, ಆಗಿನ ಚಿಕ್ಕಮಗಳೂರು ಪಟ್ಟಣದ ವ್ಯಾಪ್ತಿಗೆ ಸೇರಿದ್ದ ಪ್ರದೇಶಗಳೆಂದರೆ ಕೋಟೆ, ಬಸವನಹಳ್ಳಿ ಎರಡು ಮಾತ್ರವೇ. ಈಗ ಚಿಕ್ಕಮಗಳೂರಿನ ಹೃದಯಭಾಗವೇ ಆಗಿಹೋಗಿರುವ ಉಪ್ಪಳ್ಳಿ, ದಂಟರಮಕ್ಕಿ, ಹಿರೇಮಗಳೂರು ಮುಂತಾದವೂ ಆಗ ಪ್ರತ್ಯೇಕ ಗ್ರಾಮ ವ್ಯಾಪ್ತಿಯನ್ನೇ ಪಡೆದಿದ್ದುವು! ಅದಕ್ಕೂ ಹಿಂದೆ ಚಿಕ್ಕಮಗಳೂರು ಎಂದರೆ ಈಗಿನ ಕೋಟೆ ಪ್ರದೇಶ ಮಾತ್ರವೇ!
ಈಗ ಚಿಕ್ಕಮಗಳೂರಿನ ಅವಿಭಾಜ್ಯ ಭಾಗವಾಗಿರುವ ಹಿರೇಮಗಳೂರಿನ ಯೂಪ ಸ್ತಂಭದ ಶಾಸನ ಕ್ರಿ.ಶ. 2-3 ನೇ ಶತಮಾನದ್ದು. ಆ ಕಾಲದಲ್ಲಿ ಶಾತವಾಹನರ ಆಳ್ವಿಕೆಗೆ ಈ ಪ್ರದೇಶ ಸೇರಿದ್ದುದನ್ನು ದಾಖಲಿಸುತ್ತದೆ. ಇಲ್ಲಿನ ‘ಅಶ್ವಯೂಪ’ ಪದದ ಸುಳಿವಿನಿಂದ ಈ ಶಾಸನ ಅಶ್ವಮೇಧಯಾಗಕ್ಕೆ ಸಂಬಂಧಿಸಿದ್ದೆಂಬುದನ್ನೂ ಊಹಿಸಬಹುದು.
ನಂತರ ಗಂಗ, ನೊಳಂಬ, ಆಳುಪ, ಸಾಂತರ, ತರ್ಯಲ್ಲ, ಸೇನವಾರ, ಚೋಳ, ಚಾಳುಕ್ಯ, ಹೊಯ್ಸಳ, ಸೇಉಣ, ವಿಜಯನಗರ, ಬೇಲೂರು ನಾಯಕರು, ಮೈಸೂರು ಒಡೆಯರು ಮುಂತಾದ ರಾಜ ಮನೆತನಗಳ ಆಳ್ವಿಕೆಗೆ ಈ ಪ್ರದೇಶ ಸೇರಿ ಹೋಗಿರುವುದನ್ನು ಇಲ್ಲಿನ ಶಾಸನಗಳು ದೃಢಪಡಿಸುತ್ತವೆ.
ಹಿರೇಮಗಳೂರಿನ ಪರಶುರಾಮ ದೇವಾಲಯದ ಮಾಳಿಗೆಯ ಕಲ್ಲಿನ ಮೇಲೆ ಕೆತ್ತಿರುವ ಶಾಸನ 8-9 ನೇ ಶತಮಾನಕೆ ಸೇರಿದ್ದು ಗಂಗರ ಕಾಲದ ಆಳ್ವಿಕೆಯಲ್ಲಿ 'ಹಿರಿ ಮುಗುಳಿಯಗ್ರಹಾರ’ ಎಂಬ ಸ್ಪಷ್ಟತೆಯನ್ನು ಊರಿನ ಹೆಸರಿನ ಬಗೆಗೆ ನೀಡುತ್ತದೆ.
ಚಿಕ್ಕಮಗಳೂರು ಕೋಟೆ ಕಲ್ಯಾಣಿಯ ಉತ್ತರಕ್ಕೆ ನೆಟ್ಟಿದ್ದ ಶಾಸನ (ಚಿ.ಮ 3) (ಈಗ ಕಲ್ಯಾಣಿ ಕಣ್ಮರೆ ಆಗಿರುವುದರಿಂದ ಈ ಶಾಸನವನ್ನು ಹುಡುಕಾಡಬೇಕಿದೆ) ನೀತಿಮಾರ್ಗ ಕೊಂಗಣಿವರ್ಮ ಧರ್ಮ ಮಹಾರಾಜಾಧಿರಾಜನ ಕಾಲದಲ್ಲಿ ಕಿರಿಯ ಮುಗಳಿಯ ಪೆಮ್ಮಡಿಗೊಂಡನಿಗೆ ದತ್ತಿ ನೀಡಿದುದನ್ನು ಉಲ್ಲೇಖಿಸುವ ಜೊತೆಗೆ, ಪಿರಿಯ ಮುಗುಳಿಯ ಕೊಮರಯ್ಯ, ಪಲ್ಮಾಡಿಯ ಮೆಂದಮ್ಮ, ಬೆಣ್ಣೆಯೂರಿನ ದೇವಗಣ, ಮಳ್ಳವೂರಿನ ಮೆರ್ಪಾಡಿಗೌಡ, ಉರ್ಪವಳ್ಳಿಯ ಚಾಮಯ್ಯ, ಇನ್ದವೂರಿನ ವಿಟಿಯ್ಯ ಮುಂತಾದವರು ಈ ದತ್ತು ಭೂಮಿಯ ಆಸುಪಾಸಿನಲ್ಲಿದ್ದದನ್ನು ತಿಳಿಸುತ್ತದೆ. ಅನೇಕ ಅಂಶಗಳನ್ನು ತನ್ನೊಳಗೆ ಕಾಪಿಟ್ಟುಕೊಂಡಿರುವ ಈ ಶಾಸನವನ್ನು ಅಧ್ಯಯನ ಮಾಡಿ ಮಾಡಿದಂತೇ ಆ ಕಾಲದ ಸಂಸ್ಕೃತಿ ಪರಂಪರೆಗಳಿಗೆ ತೋರು ಬೆರಳಾಗುತ್ತದೆ.
ಕ್ರಿ.ಶ. 1140ರ (ಚಿ.ಮ- 4) ಶಾಸನವು ಚಿಕ್ಕಮಗಳೂರು, ಕೋಟೆ ಕಂದಕದ ಗೋಡೆಯ ಪಕ್ಕದಲ್ಲಿದ್ದ ವೀರಗಲ್ಲು, ಈ ವೇಳೆಗಾಗಲೇ ಕಿರಿಯ ಮುಗುಳಿಯನ್ನು ‘ಚಿಕ್ಕಮುಗುಳಿ’ ಎಂದು ಕರೆಯುತ್ತಿದ್ದುದನ್ನು ಈ ಶಾಸನ ದಾಖಲಿಸಿದೆ. ಈ ಅವಧಿಯಲ್ಲಿ ಇಲ್ಲಿನ ಮಹಾ ಪ್ರಭು ಚಿಕ್ಕಬಸವಯ್ಯನವರೆಂದೂ ಹೇಳುವ ಈ ಶಾಸನದಲ್ಲಿ ಇವರ ಮಗ ಹೆಮ್ಮಾಡಿಗೌಡ ಮತ್ತು ಮೊಮ್ಮಗ ಮಸಣಿತಂಮ್ಮರ ಉಲ್ಲೇಖಗಳೂ ದೊರೆಯುತ್ತವೆ.
ಇದೇ ಸ್ಥಳದಲ್ಲಿದ್ದ ಮತ್ತೊಂದು ವೀರಗಲ್ಲು ಕ್ರಿ. ಶ. 1205ರ ಅವಧಿಯಲ್ಲಿ ಕಿರಿಯ ಮುಗುಳಿಯ ಕಟ್ಟಿನ ಕಾಳಗವನ್ನು ಉಲ್ಲೇಖಿಸುತ್ತಾ ಚಿಕ್ಕಮುಗುಳಿ, ಕಿರಿಯ ಮುಗುಳಿ ಹೆಸರುಗಳು ಪರ್ಯಾಯವಾಗಿ ಬಳಕೆಯಲ್ಲಿದ್ದುದನ್ನು ತಿಳಿಸುತ್ತದೆ.
ಅಗ್ರಹಾರ ಬೀದಿಯ ದಿಣ್ಣೆಯ ಮೇಲಿರುವ ಎರಡು ನಿಸದಿಗಲ್ಲುಗಳು ಕ್ರಿ.ಶ. 1101ರ ಅವಧಿಯವು, ಇಲ್ಲಿದ್ದ ಜೈನ ಪ್ರಭಾವವನ್ನು ಸಾರಿ ಹೇಳುತ್ತಿವೆ.
ಚಿಕ್ಕಮಗಳೂರಿನ ಕೋಟೆ ವೀರಭದ್ರ ದೇಗುಲದ ಬಳಿ ಇರುವ ದಾನಶಾಸನವು ಕ್ರಿ.ಶ. 1257ರ ಕಾಲದ್ದು (ಚಿ.ಮ-1). ಆ ಸಮಯದಲ್ಲಿ ದ್ವಾರ ಸಮುದ್ರದ ಹೊಯ್ಸಳ ಚಕ್ರವರ್ತಿ ಮೂರನೇ ವೀರನಾರಸಿಂಗ ದೇವನ ಆಳ್ವಿಕೆಯಲ್ಲಿ ದೇವಳಿಗೆ ನಾಡೆಂದು ಹೆಸರಾಗಿದ್ದ ಚಿಕ್ಕಮುಗುಳಿಗೆ ನಾಡಪ್ರಭು ಆಗಿದ್ದವರು ಸೋಮಗೌಡರು. ಇವರ ಮಗ ಮಸಣಗೌಡರು. ಇವರ ಮಗ ಸೋಮಣ್ಣ ಅಥವಾ ಸೋಮಗೌಡ. ಈ ಸೋಮಣ್ಣನ ತಮ್ಮ ಕಲಿಯುಗ ವೀರಭದ್ರ, ಮಹೇಶ್ವರ ಗಣಾವತಾರ, ಶಿವ ಸಮಯವಾರ್ಧಿ ವರ್ಧನ ಸುಧಾಕರ ಎನಿಸಿದ ನಾಳಪ್ರಭು ಬಾಚಯನಾಯಕರು.
ಈ ಬಾಚಯನಾಯಕರ ಶೌರ್ಯ ಸಾಹಸ ವಿನೀತ ಗುಣಗಳನ್ನು ವರ್ಣಿಸುವ ಕಂದ ಪದ್ಯಗಳ ಸೊಗಸು ಇದು!
ದೇವಗುರು ಚರಣ ಸರಸಿಜ
ಕೇವಲಮೇಂ ಸೈವ ಸಮೇಯ ನಿಸ್ತಾರಚ ತಾಂ|
ಭೂ ವಲಯಯದೊಳಗೆ ಬುಧನಿಧಿ
ಭಾವಿಸೆ ವೀರನೊಳಗೇಕವೀರಂ ಬಾಚಂ||
ಆಶ್ರಿತ ಜನರಿಗೆ ಕಲ್ಪವೃಕ್ಷದಂತೆ, ಗೋತ್ರಕ್ಕೆಲ್ಲಾ ಶಾಶ್ವತ ಚಿಂತಾಮಣಿಯಂತೆ, ನಿಜವಾಗಲು ಹಸಣಿ ಹನುಮನ ಧ್ವಜದಂತೆ, ವೀರರೊಳಗೇ ಏಕವೀರನೆಂದು ಬಾಚರಸನು ಪ್ರಸಿದ್ಧನಾಗಿದ್ದನಂತೆ. ಶೈವ ಸಮೇಯ ನಿಸ್ತಾರಕನಾಗಿಯೂ ಹೆಸರುವಾಸಿಯಾಗದ್ದನು. ಇವನು ಚಿಕ್ಕಮಗಳೂರು ಕೋಟೆ ಅಗ್ರಹಾರದ ಈ ಸೋಮನಾಥ ದೇವರನ್ನು ಮತ್ತು ಶ್ರೀ ವೀರಭದ್ರ ದೇವರನ್ನು ಪ್ರತಿಷ್ಠೆ ಮಾಡಿ ಪೂಜೆಯುಪಾರಕ್ಕೆ ದತ್ತಿಯನ್ನೂ ಬಿಟ್ಟಿದ್ದಾನೆ.
ಕ್ರಿ.ಶ. 1280ರ ಮತ್ತೊಂದು ಶಾಸನವು ಲಾಲ್ ಬಾಗಿನಲ್ಲಿ ನೆಟ್ಟಿರುವ ಕಲ್ಲು ಎಂದು ಉಲ್ಲೇಖವಾಗಿದೆ.(ಚಿ.ಮ-2) ಚಿಕ್ಕಮಗಳೂರಿನ ಈ ಲಾಲ್ ಬಾಗ್ ಯಾವುದಿರಬಹುದೆಂಬ ಕುತೂಹಲಕ್ಕೆ ಉತ್ತರವಿನ್ನೂ ಅಸ್ಪಷ್ಟ. ಈ ಶಾಸನದ ಪ್ರಕಾರ ಚಿಕ್ಕಮುಗುಳಿಯ ಮಸಣಗೌಡನ ಹಿರಿಯ ಮಗನಾದ ಸೋಮಗೌಡನು ಅತ್ಯಂತ ಪ್ರಸಿದ್ದ ದೊರೆ. ಈ ಸೋಮಗೌಡನು ಈ ಹಿಂದಿನ ಶಾಸನ(ಚಿ.ಮ-1) ದಲ್ಲಿ 1257ರಲ್ಲಿ ಕಾಣಿಸಿಕೊಂಡಿರುವವನೇ. ಮಸಣಗೌಡನ ಮಗನೂ ಬಾಚರಸನ ಹಿರಿಯ ಸಹೋದರನೂ ಆದ ಚಿಕ್ಕಮಗಳೂರು ಆಳಿದ ದೊರೆ. ಆ ಶಾಸನವು ಬಾಚರಸನನ್ನು ‘ಶೈವ ಸಮೇಯ ನಿಸ್ತಾರಕ’ನೆಂದು ಹೊಗಳಿದರೆ, ಆತನ ಹಿರಿಯಣ್ಣನಾದ, ಶ್ರೀ ಮೂಲಸಂಘದ ದೇಶಿಗಣ ಪುಸ್ತಕ ಗಚ್ಛ ಹನಸೋಗಿಯ ಕೊಂಡಕುಂದಾನ್ವಯದ ಶ್ರೇಯಾಂಸ ಭಟ್ಟಾರಕರ ಗುಡ್ಡ’ ಎನಿಸಿ ಜೈನಧರ್ಮ ಪರಿಪಾಲಕನಾಗಿ ಜನಮಾನಸದಲ್ಲಿ ಸ್ಥಾನ ಪಡೆದಿದ್ದುದನ್ನು ಈ ಶಾಸನ ವರ್ಣಿಸುತ್ತದೆ.
‘ಶ್ರೀ ಮಂನಾಳು ಪ್ರಭು ಸುಚರಿತನೆನೆ ವಿನಯನಿಧಿಯು
ನಿರ್ಮಳಚಿತ್ತಂ ಪ್ರೇಮಂ ಬುಧಜನನಿಕರಕ್ಕಾಲ ವಾಸು
ನೇಮಂ ಸಕಳ ಜನಕ್ಕಾಧಾರಂ ಧಾರ್ಮಿಷ್ಟವೀರಂ ಧುರಂಧುರಂ
ಪುರುಷಾಕಾರಂ ಕಾಮರೂಪಂ ಮಸಣಗಾಉಂಡನಗ್ರತನೂಜಂ
ಸೋಮನಾಮಂ ಧರೆಯೋಳ್’
'ಜಿನ ಸಮಯ ವಾರ್ಧಿ ವರ್ಧನ,
ಅನವರತಂ ಚಾತುವರ್ಣಕ್ಕಿತ್ತುಂ ತಣಿಯನು ಘನಮಹಿಮ
ಶ್ರೇಯಾಂಸ ಮುನಿಯ ಗುಡ್ಡನು
ವಿನಯನಿಧಿ ಛಲದಂಕರಾಮನೆನಿಪಂ ಸೋಮನುಂ||
ಶ್ರೀ ಮನ್ ನಾಡಪ್ರಭು ಸುಚರಿತ, ವಿನಯನಿಧಿ, ನಿರ್ಮಳ ಚಿತ್ತ, ಪ್ರೇಮಮಯಿ, ವಿದ್ಯಾವಂತ ಕಲಾಪೂರ್ಣ ಜನರಿಗೆ ಆಶ್ರಯದಾತ, ಸಕಲ ಜನರಿಗೂ ಆಧಾರ, ಧರ್ಮವೀರ, ಮಹಾನ್ ಸಾಹಸವಂತ, ಪುರುಷಾಕಾರನಾದ ಮನ್ಮಥರೂಪಿ ಸೋಮಗೌಡನು ಜಿನಸಮಯವೆಂಬ ಸಾಗರದಲ್ಲೇ ಸದಾ ಈಜಾಡಿದರೂ ಚತುರ್ವರ್ಣದ ಎಲ್ಲವಕ್ಕೂ, ಎಲ್ಲರಿಗೂ ಸಮಾನವಾಗಿ ದಾನ ನೀಡಿ ತಣಿಸುತ್ತಿದ್ದನು. ಆದರೆ ಅವನಿಗೆ ಎಂದೂ ತಾನು ಕೊಟ್ಟಿರುವುದು ಸಾಕು ಎನಿಸುತ್ತಿರಲಿಲ್ಲ. ಅಂತಹ ವಿನಯನಿಧಿಯೂ, ಛಲದಂಕರಾಮನೂ ಆಗಿದ್ದ ಮಹಾಮಹಿಮನು ಅಂದಿನ ಚಿಕ್ಕಮುಗುಳಿಯ ನಾಡಪ್ರಭು ಸೋಮಗೌಡನು.
ಈ ಮಹಾಮಹಿಮ ದೊರೆಯು 1280ರ ಜುಲೈ 1 ಅಥವಾ 31 ರಂದು ಪ್ರಾಣ ತ್ಯಜಿಸಿ ಸಮಾಧಿ ಪಡೆದು ಸುರಲೋಕ ಪ್ರಾಪ್ತನಾದಾಗ ಆತನ ಮಗ ಹೆಗ್ಗಡೆಗೌಡನು ಇಲ್ಕಿ ನಿಸದಿಯಕಲ್ಲನ್ನು ಪ್ರತಿಷ್ಠೆ ಮಾಡಿಸಿ ಅಷ್ಟವಿಧಾರ್ಚನೆಗೆ, ಪ್ರಸಾದಕ್ಕೆಂದು ಭೂಮಿಯನ್ನೂ ದತ್ತಿ ನೀಡಿದ್ದಾನೆ. ಈ ನಿಸದಿಕಲ್ಲಿನ ಶಾಸನ ನೀಡುವ ವಿವರಣೆಯಲ್ಲಿ ಆ ಸಮಯದಲ್ಲಿ ಚಿಕ್ಕಮಗಳೂರಿನಲ್ಲಿ ಒಂದು ಬಸದಿ ಇದ್ದಿರಬಹುದೆಂಬ ಊಹೆಗೂ ಅವಕಾಶವಿದೆ. ಜೊತೆಗೆ ಈ ಎರಡೂ ಶಾಸನಗಳು ಸೇರಿ ಒಂದೇ ರಾಜ ಮನೆತನದ ಅಣ್ಣ ತಮ್ಮರು ಜೈನ, ಶೈವ, ಧರ್ಮಗಳ ಆರಾಧಕರಾಗಿದ್ದ ಸಮನ್ವಯತೆಯ ಚಿತ್ರವನ್ನು ಸ್ಪಷ್ಟವಾಗಿ ಕಟ್ಟಿಕೊಡುತ್ತಾ ನಮ್ಮ ಚಿಕ್ಕಮಗಳೂರಿನ ಹಿರಿಯ ಪರಂಪರೆಯ ಸಂಸ್ಕೃತಿಯನ್ನು ದಾಖಲಿಸಿವೆ.
ದಾಖಲೆಗೆ ಸಿಕ್ಕಿರುವ ನಾಲ್ಕಾರು ಶಾಸನಗಳೇ ಸಾವಿರಾರು ವರ್ಷಗಳ ಹಿಂದಿನ ಚಿತ್ರವನ್ನು ಸ್ಪಷ್ಟಗೊಳಿಸುವ ಸಾಮರ್ಥ್ಯ ಪಡೆದಿದ್ದಾವೆ. ಇನ್ನು ಅಂದು ಆಳ್ವಿಕೆ ನಡೆಸಿದ ಒಬ್ಬೊಬ್ಬ ರಾಜನ ಒಂದೊಂದು ಶಾಸನವಾದರೂ ಸಿಕ್ಕುವಂತಿದ್ದರೆ ಮತ್ತದೆಷ್ಟು ಸಮಗ್ರ ಚಿತ್ರಣವನ್ನು ಕಟ್ಟಬಹುದಿತ್ತು ಎಂದು ಮನ ಕಲ್ಪನೆಯ ಲಹರಿಗಳ ತೆಕ್ಕೆಗೆ ಸಿಲುಕಿಕೊಳ್ಳುತ್ತದೆ.
ಹೀಗೇ ಚಿಕ್ಕಮಗಳೂರು ಕೋಟೆ ಪ್ರದೇಶದಲ್ಲಿ ದಾಖಲಾಗಿರುವ ಎಂಟು ಶಾಸನಗಳು ಕ್ರಿ.ಶ. 899ರಿಂದ ಕ್ರಿ.ಶ.1280 ರವರೆಗೆ ಕೋಟೆಯಲ್ಲಿ ಆಳಿದ ರಾಜರು, ಅನುಸರಿಸುತ್ತಿದ್ದ ಧರ್ಮ, ಕಟ್ಟಿದ ದೇವಾಲಯಗಳು, ವೀರಪರಂಪರೆಯ ಛಾತಿ ಈ ಮುಂತಾದ ಸುಳಿವುಗಳನ್ನು ನೀಡುತ್ತಾ ಮತ್ತಷ್ಟು ಶಾಸನಗಳನ್ನು ಹುಡುಕಾಡಬೇಕೆಂಬ ಸಂಕಲ್ಪಕ್ಕೆ ಮನವನ್ನು ಗಟ್ಟಿ ಮಾಡುತ್ತವೆ. ಇದಕ್ಕಾಗಿ ಪ್ರಾಜ್ಞರ ಸಹಕಾರಕ್ಕೆ ಮನತುಡಿಯುತ್ತದೆ.
ಚಿಕ್ಕಮಗಳೂರು ಭಾಗವಾಗಿರುವ ಬಸವನಹಳ್ಳಿ, ಉಪ್ಪಳಿ, ಹಿರೇಮಗಳೂರು, ದಂಟರಮಕ್ಕಿ ಪ್ರದೇಶಗಳ ಶಾಸನಮೌಲ್ಯಗಳ ಅವಲೋಕನ ಮತ್ತಷ್ಟು ಸತ್ವವನ್ನು ತುಂಬಿಕೊಡುವುದನ್ನು ಪರಿಭಾವಿಸಬಹುದು.
ಚಿಕ್ಕಮಗಳೂರು ಕರ್ನಾಟಕದ ಮಧ್ಯಭಾಗದಲ್ಲಿ ಇದೆ, ಇದು ರಾಜ್ಯದ ರಾಜಧಾನಿಯಿಂದ ೨೫೧ ಕಿ.ಮೀ. ದೂರದಲ್ಲಿದೆ. ಚಿಕ್ಕಮಗಳೂರು ೧೨° ೫೪' ೪೨“-೧೩° ೫೩' ೫೩“ ಉತ್ತರ ಅಕ್ಷಾಂಶ ಹಾಗೂ ೭೫° ೦೪' ೪೫“'-೭೬° ೨೧' ೫೦'” ಪೂರ್ವ ರೇಖಾಂಶದಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯು ಪೂರ್ವದಿಂದ ಪಶ್ಚಿಮಕ್ಕೆ ೧೩೮.೪ ಕಿ.ಮೀ. ಮತ್ತು ಉತ್ತರದಿಂದ ದಕ್ಷಿಣಕ್ಕೆ ೮೮.೫ ಕಿ.ಮೀ. ಉದ್ದವಿದೆ. ಜಿಲ್ಲೆಯಲ್ಲಿ ಸಮಾನ್ಯವಾಗಿ ವರ್ಷಕ್ಕೆ ಸರಾಸರಿ ೧೯೨೫ ಮಿ.ಮೀ. ಮಳೆಯಾಗುತ್ತದೆ. ಜಿಲ್ಲೆಯ ಅತ್ಯಂತ ಎತ್ತರವಾದ ಸ್ಥಳ ಮುಳ್ಳಯ್ಯನ ಗಿರಿ, ಸಮುದ್ರ ಮಟ್ಟಕ್ಕಿಂತ ೧೯೫೫ ಮೀಟರ್ ಎತ್ತರದಲ್ಲಿ ಇದೆ, ಇದು ಕರ್ನಾಟಕದ ಅತ್ಯಂತ ಎತ್ತರವಾದ ಸ್ಥಳ ಕೂಡ. ಜಿಲ್ಲೆಯ ಒಟ್ಟು ವಿಸ್ತೀರ್ಣ ೨೧೦೮.೬೨ ಕಿ.ಮೀ೨ . ಅದರಲ್ಲಿ ಶೇಕಡ ೩೦ರಷ್ಟು ಕಾಡುಗಳಿಂದ ಆವರಿಸಲ್ಪಟ್ಟದೆ. ಚಿಕ್ಕಮಗಳೂರು ಜಿಲ್ಲೆಯ ಪೂರ್ವಕ್ಕೆ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆ, ದಕ್ಷಿಣಕ್ಕೆ ಹಾಸನ ಜಿಲ್ಲೆ, ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳು ಚಿಕ್ಕಮಗಳೂರನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ ಬೇರ್ಪಡಿಸುತ್ತವೆ ಮತ್ತು ಉತ್ತರದಲ್ಲಿ ಶಿವಮೊಗ್ಗ ಮತ್ತು ದಾವಣಗೆರೆ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ.
ಚಿಕ್ಕಮಗಳೂರು ಭಾರತದ ಎತಿ ದೊಡ್ಡ ಪ್ರದೇಶವಾಗಿದೆ. ಕರ್ನಾಟಕದ ಎತ್ತರದ ತುದಿಯು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟವಾಗಿದೆ.(ಎತ್ತರ ೧೯೨೯ ಮೀ. ೬೩೨೯ ಅಡಿಗಳು ) ಕರ್ನಾಟಕದಲ್ಲಿವೆ. ಇದು ನೋಡಲು ಸುಂದರವಾಗಿದ್ದು . ಹಲವಾರು ಕಡೆಗಳಿಂದ ಬರುತ್ತಾರೆ. ಇಲ್ಲಿ ಎತ್ತರವಾದ ಗಿರಿಗಳನ್ನು ಹೊಂದಿದ್ದೆ. ಇಲ್ಲಿ ಅದಿಕ ಮಳೆಯ ಪ್ರಮಣ ಹೆಚ್ಚಾಗಿದೆ. ಅತಿಯಾಗಿ ಮಳೆ ಆಗುವುದರಿಂದ ಇಲ್ಲಿನ ಗಿಡ ಮರಗಳು ಅಚ್ಚ ಹಸಿರಿನಿಂದ ಕೂಡಿದೆ.
ಚಿಕ್ಕಮಗಳೂರಿಗೆ ಬರುವ ಪ್ರಯಾಣಿಕರು ಇಲ್ಲಿರುವ ಹೆಸರುವಾಸಿಯಾದ ದತ್ತಾತ್ರೇಯ ಪೀಠ ಎಂದೂ ಕರೆಯಲ್ಪಡುವ ಚಂದ್ರದ್ರೋಣ ಶ್ರೇಣಿಯನ್ನು ಭೇಟಿ ಮಾಡಬೇಕು. ಇದು 1895 ಮೀಟರ್ ಎತ್ತರದಲ್ಲಿದೆ. ಚಿಕ್ಕಮಗಳೂರು ಪಟ್ಟಣದಿಂದ 28 ಕಿಮೀ ದೂರದಲ್ಲಿದೆ. ಹಿಂದೂಗಳಿಗೆ ಒಂದು ತೀರ್ಥಯಾತ್ರಾ ಸ್ಥಳವಾಗಿದೆ. ಈ ಕಾರಣದಿಂದಾಗಿ, ಸ್ಥಳವನ್ನು ಹಿಂದೂ ದೇವರು ಗುರು ದತ್ತಾತ್ರೇಯ ಗುರುತಿಸಲಾಗುತ್ತದೆ. ಚಂದ್ರದ್ರೋಣ ಪರ್ವತದಲ್ಲಿ ಪ್ರವಾಸಿಗರು ಮೂರು ಸಿದ್ಧರಿಂದ ಪವಿತ್ರವಾಗಿರುವವೆಂದು ನಂಬಲಾದ ಮೂರು ಗುಹೆಗಳನ್ನು ನೋಡಬಹುದು . ಶೀಥಲ -ಮಲ್ಲಿಕಾರ್ಜುನನ ಗುಡಿ ಮತ್ತು ಮಠಗಳೆರಡನ್ನೂ ಒಳಗೊಂಡಿರುವ ಶೀಥಲ ದೇವಾಲಯ ಹತ್ತಿರದಲ್ಲೇ ಇರುವ ಮತ್ತೊಂದು ಪ್ರಸಿದ್ಧ ಆಕರ್ಷಣೆಯಾಗಿದೆ ಅನುಕೂಲವಾದರೆ ಪ್ರಯಾಣಿಕರು ಈ ಸ್ಥಳದಿಂದ ಕೇವಲ 1 ಕಿಮೀ ದೂರವಿರುವ ಮಾಣಿಕ್ಯಧಾರಾ ಜಲಪಾತವನ್ನು ನೋಡಬಹುದು. ಚಂದ್ರದ್ರೋಣ ಪರ್ವತ ಹೈಕಿಂಗ್ ಮತ್ತು ಚಾರಣಗಳ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳುವ ಆಸಕ್ತಿ ಹೊಂದಿರುವ ಪ್ರವಾಸಿಗರಿಗೆ ಪರಿಪೂರ್ಣವಾದ ಜಾಗ. ಈ ಪ್ರದೇಶದ ವ್ಯಾಪ್ತಿಯ ಎರಡು ಜನಪ್ರಿಯ ಪರ್ವತಗಳೆಂದರೆ ಮುಳ್ಳಯ್ಯನಗಿರಿ (1930 ಮೀಟರ್ ಎತ್ತರದಲ್ಲಿ ಜೊತೆ ಸೈಟ್ ಶಿಖರ) ಮತ್ತು ದತ್ತಗಿರಿ. ಅದೃಷ್ಟವಿದ್ದರೆ ಜನರು 'ಕುರುಂಜಿ' ವೀಕ್ಷಿಸಲು ಅವಕಾಶ ಪಡೆಯುವರು. ಇದು ಒಂದು ಪರ್ವತದ ಹೂವಾಗಿದ್ದು ಪ್ರತಿ 12 ವರ್ಷಗಳಲ್ಲಿ ಒಮ್ಮೆ ಮಾತ್ರ ಅರಳುತ್ತದೆ. ಈ ಪ್ರದೇಶ ಹಕ್ಕಿಗಳ ವೀಕ್ಷಣೆ ಕೈಗೊಳ್ಳಲು ಬಯಸುವ ಜನರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
೨೦೧೧ ರ ಜನಗಣತಿಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯ ಜನಸಂಖ್ಯೆ ೧೧,೩೭,೯೬೧ ಸರಿಸುಮಾರಾಗಿ ಸೈಪ್ರಸ್ ರಾಷ್ಟ್ರಕ್ಕೆ ಸಮನಾಗಿದೆ ಅಥವಾ ಸಂಯುಕ್ತ ಅಮೆರಿಕದ ರೋಡ್ ಐಲೆಂಡ್ ರಾಜ್ಯಕ್ಕೆ ಸಮನಾಗಿದೆ. ಚಿಕ್ಕಮಗಳೂರು ಜನಸಂಖ್ಯೆಯಲ್ಲಿ ಭಾರತದಲ್ಲಿ ೪೦೮ನೇ ಸ್ಥಾನದಲ್ಲಿದೆ (ಒಟ್ಟು ೬೪೦ರಲ್ಲಿ). ಜಿಲ್ಲೆಯ ಪ್ರತಿ ಚದರ ಕಿಲೋ ಮೀಟರ್ ಗೆ(೪೧೦/ಚದರ ಮೈಲಿ) ೧೫೮.೧೯ ನಿವಾಸಿಗಳ ಸಾಂದ್ರತೆಯನ್ನು ಹೊಂದಿದೆ. ಇಲ್ಲಿನ ಜನಸಂಖ್ಯಾ ಬೆಳವಣಿಗೆ ದರವು ೨೦೦೧-೨೦೧೧ ದಶಕದಲ್ಲಿ ಶೇಕಡ ೦.೨೮ ಆಗಿತ್ತು. ಚಿಕ್ಕಮಗಳೂರು ಪ್ರತಿ ೧೦೦೦ ಪುರುಷರಿಗೆ ೧೦೦೮ ಸ್ತ್ರೀ ಯ ಲಿಂಗ ಅನುಪಾತವನ್ನು ಹೊಂದಿದೆ ಮತ್ತು ಶೇಕಡ ೭೯.೨೪ ಸಾಕ್ಷರತಾ ದರವನ್ನು ಹೊಂದಿದೆ. ಒಟ್ಟು ಜನಸಂಖ್ಯೆಯ ಶೇಕಡ ೮೧ ಜನರು ಗ್ರಾಮೀಣ ಪ್ರದೇಶದಲ್ಲಿ ಮತ್ತು ಶೇಕಡ ೧೯ ಜನರು ನಗರದಲ್ಲಿ ವಾಸಿಸುತ್ತಾರೆ. ಶೃಂಗೇರಿ ತಾಲ್ಲೂಕು ಅತಿ ಕಡಿಮೆ ಜನಸಂಖ್ಯೆಯನ್ನು ಮತ್ತು ಚಿಕ್ಕಮಗಳೂರು ತಾಲ್ಲೂಕು ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ.ಬಹುತೇಕರು ಕನ್ನಡ ಭಾಷೆ ಮಾತನಾಡುತ್ತಾರೆ. ಜತೆಗೆ ತುಳು ,ಕೊಂಕಣಿ , ಬ್ಯಾರಿ ಭಾಷೆ ಮಾತನಾಡುವವರನ್ನೂ ಜಿಲ್ಲೆಯಲ್ಲಿ ಕಾಣಬಹುದಾಗಿದೆ.
ಚಿಕ್ಕಮಗಳೂರು ಜಿಲ್ಲೆಯೂ ಕರ್ನಾಟಕದ ಮೈಸೂರು ವಿಭಾಗಕ್ಕೆ ಸೇರುತ್ತದೆ. ಇದನ್ನು ಎರಡು ಉಪ ವಿಭಾಗಗಳಾಗಿ ಮಾಡಲಾಗಿದೆ. ಚಿಕ್ಕಮಗಳೂರು ಉಪ ವಿಭಾಗ ಮತ್ತು ತರೀಕೆರೆ ಉಪ ವಿಭಾಗ. ತರೀಕೆರೆ ಉಪ ವಿಭಾಗ, ತರೀಕೆರೆ ಕಡೂರು ಮತ್ತು ನರಸಿಂಹರಾಜಪುರ ತಾಲ್ಲೂಕುಗಳನ್ನು ಒಳಗೊಂಡಿದೆ ಮತ್ತು ಚಿಕ್ಕಮಗಳೂರು ಉಪ ವಿಭಾಗ ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ ಮತ್ತು ಶೃಂಗೇರಿ ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿ ( ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹ) ಜಿಲ್ಲೆಯ ಕಾರ್ಯಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಪ್ರತಿ ಉಪ ವಿಭಾಗವು ಸಹಾಯಕ ಆಯುಕ್ತರನ್ನುಹೊಂದಿದೆ ಮತ್ತು ಪ್ರತಿ ತಾಲ್ಲೂಕು ಒಬ್ಬ ತಹಸೀಲ್ದಾರರನ್ನು ಹೊಂದಿದೆ. ಇವರು ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ.
ಕೃಷಿಯು ಚಿಕ್ಕಮಗಳೂರಿನ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬು ಮತ್ತು ಕಾಫಿ ಬೆಳೆಯು ಕೃಷಿಯ ಮುಖ್ಯ ಭಾಗವಾಗಿದೆ. ಜಿಲ್ಲೆಯ ಕೃಷಿ ಉತ್ಪಾದನೆಯು ಮೂರು ಋತುಗಳಲ್ಲಿ ಹರಡಿಗೊಂಡಿದೆ. ಅವುಗಳೆಂದರೆ ಮುಂಗಾರು, ಹಿಂಗಾರು ಮತ್ತು ಬೇಸಿಗೆ. ಇಲ್ಲಿನ ಪ್ರಮುಖ ಬೆಳೆಗಳು ಏಕದಳ ಧಾನ್ಯಗಳಾದ ಅಕ್ಕಿ, ರಾಗಿ , ಜೋಳ , ಮೆಕ್ಕೆಜೋಳ ಮತ್ತು ಚಿಕ್ಕ ಕಾಳುಗಳು, ದ್ವಿದಳ ಧಾನ್ಯಗಳಾದ, ತೊಗರಿ, ಹುರುಳಿಕಾಳು, ಹೆಸರು ಕಾಳು, ಅವರೆಕಾಯಿ (ಹಯಸಿಂತ್ ಬೀನ್ಸ್) ಮತ್ತು ಕಡಲೆ ಕಾಳು ಮತ್ತು ಕಡಲೆ. ತೈಲ ಬೀಜಗಳಾದ ಶೇಂಗಾ, ಎಳ್ಳು,, ಸೂರ್ಯಕಾಂತಿ ಮತ್ತು ಕ್ಯಾಸ್ಟರ್ ಮತ್ತು ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ಮತ್ತು ತಂಬಾಕು ಇಲ್ಲಿ ಬೆಳೆಯಲಾಗುತ್ತದೆ. ಚಿಕ್ಕಮಗಳೂರು ಪಟ್ಟಣದಲ್ಲಿ ಸರ್ಕಾರದ ಅಧೀನದಲ್ಲಿರುವ ಕಾಫಿ ಬೋರ್ಡ್, ಜಿಲ್ಲೆಯ ಕಾಫಿ ಉತ್ಪಾದನೆ ಮತ್ತು ಮಾರಾಟದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. ಚಿಕ್ಕಮಗಳೂರಿನಲ್ಲಿ ಕಾಫಿಯನ್ನು ಸುಮಾರು ೮೫.೪೬೫ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಅದರಲ್ಲಿ ಪ್ರಧಾನವಾಗಿ ಅರೇಬಿಕಾ ಎಂಬ ತಳಿಯನ್ನು ಬೆಟ್ಟೆದ ಮೇಲ್ಭಾಗದಲ್ಲಿ ಮತ್ತು ರೊಬಸ್ಟಾ ಎಂಬ ತಳಿಯನ್ನು ಬೆಟ್ಟೆದ ತಳ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಜಿಲ್ಲೆಯಲ್ಲಿ ಸುಮಾರು ೧೫೦೦೦ ಕಾಫಿ ಬೆಳೆಗಾರರಿದ್ದು, ಅದರಲ್ಲಿ ಶೇಕಡ ೯೬ ಬೆಳೆಗಾರರು ೪ ಚದರ ಹೆಕ್ಟೇರ್ ಅಥವ ಅದಕ್ಕಿಂತಲು ಕಡಿಮೆ ಪ್ರಮಾಣದ ಉಳುಮೆ ಪ್ರದೇಶವನ್ನು ಹೊಂದಿರುವ ಸಣ್ಣ ಬೆಳೆಗಾರರಾಗಿದ್ದಾರೆ. ಜಿಲ್ಲೆಯ ಸರಾಸರಿ ಕಾಫಿ ಉತ್ಪಾದನೆ ಅರೇಬಿಕಾ ೫೫,೦೦೦:೩೫,೦೦೦ ಮೆಟ್ರಿಕ್ ಟನ್ ಮತ್ತು ರೊಬಸ್ಟಾ ೨೦,೦೦೦ ಮೆಟ್ರಿಕ್ ಟನ್ ಆಗಿದೆ. ಹೆಕ್ಟೇರಿಗೆ ಸರಾಸರಿ ಉತ್ಪಾದಕತೆ ಅರೇಬಿಕಾ ೮೧೦ ಕೆ.ಜಿ. ಮತ್ತು ರೊಬಸ್ಟಾ ಆಫ್ ೧೧೧೦ ಕೆ.ಜಿ. ಆಗಿದೆ, ಇದು ನಮ್ಮ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು.
ಚಿಕ್ಕಮಗಳೂರು ಜಿಲ್ಲೆ ಕೈಗಾರಿಕೆಯಲ್ಲಿ ಹೆಚ್ಚು ಅಭಿವೃಧ್ಧಿ ಹೊಂದಿಲ್ಲ, ಮೂಲಭೂತ ಸೌಲಭ್ಯಗಳು ಕೊರತೆ, ಕಳಪೆ ರಸ್ತೆಗಳು, ಕಳಪೆ ರೈಲು ಸಂಪರ್ಕಜಾಲ ಮತ್ತು ಕೈಗಾರಿಕೆಗಳಿಗೆ ವಿರೋದ, ಜಿಲ್ಲೆಯ ಕೈಗಾರಿಕಾ ಅಭಿವೃಧ್ಧಿ ಕುಂಟಿತಕ್ಕೆ ಕಾರಣಗಳು ಜಿಲ್ಲೆಯಲ್ಲಿ ಕೇವಲ ಒಂದು ಭಾರಿ ಕೈಗಾರಿಕಾ ಉದ್ಯಮವಿದೆ. ಅದೆ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ, ಇದು ಮೂಡಿಗೆರೆ ತಾಲೂಕಿನ ಕುದುರೆಮುಖ ಪ್ರದೇಶದಲ್ಲಿ ಇದೆ. ಕೆ.ಐ.ಒ.ಸಿ.ಎಲ್ ೧೯೭೬ ರಲ್ಲಿ ಕುದುರೆಮುಖ ಗಣಿ ಅಭಿವೃದ್ಧಿಪಡಿಸಲು ಮತ್ತು ವರ್ಷಕ್ಕೆ ಸಾರೀಕೃತ ೭.೫ ಮಿಲಿಯನ್ ಟನ್ ಉತ್ಪಾದಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಘಟಕವನ್ನು ೧೯೮೦ರಲ್ಲಿ ಕಾರ್ಯಾರಂಭ ಮಾಡಲಾಯಿತು ಮತ್ತು ಸಾರೀಕೃತ ಉತ್ಪನ್ನದ ಮೊದಲ ಸಾಗಣೆಗೆ ಅಕ್ಟೋಬರ್ ೧೯೮೧ ರಲ್ಲಿ ಮಾಡಲಾಯಿತು, ಉನ್ನದ ಗುಣಮಟ್ಟದ ಬ್ಲಾಸ್ಟ್ ಫರ್ನೇಸ್ ಮತ್ತು ನೇರ ಕಡಿಮೆಗೊಳಿಸುವ ಗ್ರೇಡ್ ಅದಿರು ಉಂಡೆಗಳ ಉತ್ಪಾದನೆಗೆ ಮೂರು ಮಿಲಿಯನ್ ಟನ್ ಸಾಮರ್ಥ್ಯದ ಅದಿರು ಉಂಡೆಗಳ ಘಟಕವನ್ನು ೧೯೮೭ರಲ್ಲಿ ಸ್ಥಾಪಿಸಲಾಯಿತು. ಕೆ.ಐ.ಒ.ಸಿ.ಎಲ್ ನ ಗಣಿಗಾರಿಕೆ ಪರವಾನಗಿ ಅವಧಿ ಮುಗಿದ ಮೇಲೆ ಅದರ ಕಾರ್ಯಾಚರಣೆಗಳನ್ನು ಸುಪ್ರೀಂ ಕೋರ್ಟ್ ೩೧ ಡಿಸೇಂಬರ್ ೨೦೦೫ ರಿಂದ ನಿಲ್ಲಿಸಿತ್ತು, ಇದರಿಂದ ಕೆ.ಐ.ಒ.ಸಿ.ಎಲ್ ಭಾರಿ ಹಿನ್ನಡೆ ಉಂಟಾಯಿತು. ಇದರಿಂದ ಅನೇಕ ನೌಕರರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು, ಈ ಪ್ರದೇಶದಲ್ಲಿ ಸಮಾಜಿಕ ಹಿಂಬಡಿತ ಆಗಬಾರದೆಂಬ ಕಾರಣಕ್ಕೆ , ಈ ಕಾರ್ಮಿಕರಿಗೆ ಬೇರೆ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸವ ಪ್ರಯತ್ನ ಮಾಡಲಾಯಿತು.
ಜಿಲ್ಲೆಯಲ್ಲಿ ಕೇವಲ ಒಂದೆ ಒಂದು ಮಧ್ಯಮ ಕೈಗಾರಿಕಾ ಉದ್ಯಮವಿದ್ದು ಇದು ತರೀಕೆರೆ ಪಟ್ಟಣದಲ್ಲಿ ಇದೆ. ತರೀಕೆರೆಯಲ್ಲಿರುವ ಬಿಇಎಂಎಲ್ ಅಂಗಸಂಸ್ಥೆಯಾದ ವಿಜ್ಞಾನ್ ಇಂಡಸ್ಟ್ರೀಸ್ ಲಿಮಿಟೆಡ್ ಉಕ್ಕಿನ ಅಚ್ಚುಗಳಲ್ಲಿ ಉತ್ಪಾದಿಸುತ್ತದೆ. ಜಿಲ್ಲೆಯಲ್ಲಿ ಎರಡು ಕೈಗಾರಿಕಾ ಪ್ರದೇಶಗಳಿವೆ, ಒಂದು ಚಿಕ್ಕಮಗಳೂರು ನಗರದ ಹತ್ತಿರವಿದೆ, ಇನ್ನೊಂದು ಕಡೂರು ತಾಲ್ಲೂಕಿನ ಬೀರೂರು ನಗರದ ಬಳಿಯಿದೆ. ಚಿಕ್ಕಮಗಳೂರು ನಗರದ ಬಳಿಯಿರುವ ಕೈಗಾರಿಕಾ ಪ್ರದೇಶ ೧೩.೨೦ ಎಕರೆಯಲ್ಲಿ (೫೩.೪೦೦ ಮೀ.೨) ಮತ್ತು ಬೀರೂರು ಹತ್ತಿರವಿರುವ ಕೈಗಾರಿಕಾ ಪ್ರದೇಶ ೧೧.೧ ಎಕರೆಯಲ್ಲಿ (೪೫೦೦ ಮೀ೨) ಹರಡಿಕೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಚಿಕ್ಕಮಗಳೂರು ತಾಲ್ಲೂಕಿನ ಅಬ್ಳೆ ಹಳ್ಳಿಯ ಬಳಿ ೧೪೫ ಎಕರೆ (೦.೫೯ ಕಿ. ಮೀ೨) ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸುತ್ತಿದೆ.
೨೦೧೧ರ ಜನಗಣತಿಯ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯ ಶೇಕಡಾವಾರು ಸಾಕ್ಷರತೆಯು ಶೇಕಡ ೭೯.೨೫ ರಷ್ಟು ಆಗಿದೆ, ಇದರಲ್ಲಿ ಶೇಕಡ ೮೪.೪೧ಪುರಷರು ಮತ್ತು ಶೇಕಡ ೭೩.೧೬ ಮಹಿಳೆಯರು ಅಕ್ಷರಸ್ಥರಾಗಿದ್ದಾರೆ. ಚಿಕ್ಕಮಗಳೂರು ಸಾಕ್ಷರತೆ ಪ್ರಮಾಣ ಕರ್ನಾಟಕ ರಾಜ್ಯದ ಸರಾಸರಿ ಸಾಕ್ಷರತಾ ಪ್ರಮಾಣ ಶೇಕಡ ೭೫.೩೬ ಕ್ಕಿಂತ ಹೆಚ್ಚಾಗಿದೆ. ಶೃಂಗೇರಿ ತಾಲ್ಲೂಕು ಶೇಕಡ ೯೨.೬೮ ರೊಂದಿಗೆ ಅತಿ ಹೆಚ್ಚು ಸಾಕ್ಷರತೆ ಪ್ರಮಾಣವನ್ನು ಹೊಂದಿರು ತಾಲ್ಲೂಕು ಆಗಿದೆ ಮತ್ತು ಕಡೂರು ತಾಲ್ಲೂಕು ಶೇಕಡ ೭೪.೩೩ ರೊಂದಿಗೆ ಕನಿಷ್ಟ ಸಾಕ್ಷರತೆಯನ್ನು ಹೊಂದಿದರು ತಾಲ್ಲೂಕು ಆಗಿದೆ.
೨೦೦೧ರಂತೆ, ಚಿಕ್ಕಮಗಳೂರು ಜಿಲ್ಲೆಯು ೧೬೨೦ ಪ್ರಾಥಮಿಕ ಶಾಲೆಗಳನ್ನು(೧೫೧೯೨೩ ವಿದ್ಯಾರ್ಥಿಗಳೊಂದಿಗೆ) ಮತ್ತು ೨೩೫ ಮಾಧ್ಯಮಿಕ ಶಾಲೆಗಳನ್ನು(೩೪೬೦೭ ವಿದ್ಯಾರ್ಥಿಗಳೊಂದಿಗೆ) ಹೊಂದಿದೆ. ಚಿಕ್ಕಮಗಳೂರು ತಾಲ್ಲೂಕು ೪೧೪ ಪ್ರಾಥಮಿಕ ಶಾಲೆಗಳೊಂದಿಗೆ(೪೨೭೭೪ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪ್ರಾಥಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೮೦ ಪ್ರಾಥಮಿಕ ಶಾಲೆಗಳೊಂದಿಗೆ (೫೮೨೨ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಪ್ರಾಥಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ. ಕಡೂರು ೭೪ ಮಾಧ್ಯಮಿಕ ಶಾಲೆಗಳೊಂದಿಗೆ(೯೯೯೦ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಮಾಧ್ಯಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೯ ಮಾಧ್ಯಮಿಕ ಶಾಲೆಗಳೊಂದಿಗೆ(೧೪೯೨ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಮಾಧ್ಯಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ.
೨೦೦೧ ರಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ೪೬ ಪ್ರೌಢ ಶಾಲೆಗಳು (೪೭೧೧ ವಿದ್ಯಾರ್ಥಿಗಳೊಂದಿಗೆ) ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಿಣವನ್ನು ನೀಡುತ್ತೀವೆ. ಕಡೂರು ತಾಲ್ಲೂಕು ೧೨ ಪ್ರೌಢ ಶಾಲೆಗಳೊಂದಿಗೆ (೧೩೨೪ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪ್ರೌಢ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೨ ಪ್ರೌಢ ಶಾಲೆಗಳೊಂದಿಗೆ(೧೬೦ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಪ್ರೌಢ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ
೨೦೦೧ ರಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೩ ಪದವಿ ಕಾಲೇಜುಗಳು (೪೬೧೫ ವಿದ್ಯಾರ್ಥಿಗಳೊಂದಿಗೆ) ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಿಣವನ್ನು ನೀಡುತ್ತೀವೆ. ಈ ಕಾಲೇಜುಗಳು ಕುವೆಂಪು ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದಿವೆ. ಚಿಕ್ಕಮಗಳೂರು ತಾಲ್ಲೂಕು ೪ ಪದವಿ ಕಾಲೇಜುಗಳೊಂದಿಗೆ (೧೬೪೮ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪದವಿ ಕಾಲೇಜುಗಳನ್ನು ಹೊಂದಿರುವ ತಾಲ್ಲೂಕು ಆಗಿದೆ. ಕಡೂರು ತಾಲ್ಲೂಕು ೨ ಮತ್ತು ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲ್ಲೂಕುಗಳು ತಲ ೧ ಪದವಿ ಕಾಲೇಜುಗಳನ್ನು ಹೊಂದಿವೆ.
ಹೊಸ ವೈದ್ಯಕೀಯ ಕಾಲೇಜು ಚಿಕ್ಕಮಗಳೂರು ನಗರಕ್ಕೆ ಮಂಜೂರು ಮಾಡಿಲಾಗಿದೆ ಆದರೆ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭಿಸಿಲ್ಲ. ಚಿಕ್ಕಮಗಳೂರು ಜಿಲ್ಲೆಯ ವೈದ್ಯಕೀಯ ಶಿಕ್ಷಣದ ಮೂಲ ಕೊಪ್ಪದ ಅರೋರ್ ಲಕ್ಷ್ಮಿನಾರಾಯಣ ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಕಾಲೇಜು. ಈ ಕಾಲೇಜು ಆಯುರ್ವೇದಿಕ್ ಮೆಡಿಸಿನ್ ಅಂಡ್ ಸರ್ಜರಿ (ಬಿ ಏ ಎಮ್ ಎಸ್) ಪದವಿ ನೀಡುತ್ತದೆ.
ಚಿಕ್ಕಮಗಳೂರು ಜಿಲ್ಲೆಯ ರಸ್ತೆಗಳು ಸರಿಯಾಗಿ ನಿರ್ವಹಿಸಲ್ಪಡುವ ರಸ್ತೆಗಳ ಪಟ್ಟಿಯಲ್ಲಿ ಬರುವುದಿಲ್ಲ. ದುಸ್ಥಿತಿಯಲ್ಲಿ ಇರುವ ರಸ್ತೆಗಳು ಸ್ವಲ್ಪ ಮಟ್ಟಿಗೆ ಜಿಲ್ಲೆಯ ಅಭಿವೃದ್ಧಿಗ ಅಡ್ಡಿಯಾಗಿವೆ. ಜಿಲ್ಲೆಯು ಉತ್ತಮವಾದ ರೈಲು ಸಂರ್ಪಕ ಜಾಲವನ್ನು ಹೊಂದಿಲ್ಲ. ಜಿಲ್ಲೆಯು ಒಟ್ಟು ೭೨೬೪ ಕೀ. ಮೀ ರಸ್ತೆಯನ್ನು ಹೊಂದಿದೆ. ಜಿಲ್ಲೆಯ ಮೇಲೆ ಕೇವಲ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತದೆ. ರಾಷ್ಟೀಯ ಹೆದ್ದಾರಿ ಎನ್.ಎಚ್.-೧೩(ಶೋಲಾಪೌರದಿಂದ ಮಂಗಳೂರಿಗೆ) ಕೊಪ್ಪ ಮತ್ತು ಶೃಂಗೇರಿ ಮೂಲಕ ಹಾದು ಹೋಗುತ್ತದೆ ಮತ್ತು ರಾಷ್ಟೀಯ ಹೆದ್ದಾರಿ ಎನ್.ಎಚ್.-೨೦೬(ಬೆಂಗಳೂರಿಂದ ಹೋನ್ನವರಗೆ) ಕಡೂರು.ತರೀಕೆರೆ ಮೂಲಕ ಹಾದು ಹೋಗುತ್ತದೆ. ಜಿಲ್ಲೆಯಲ್ಲಿ ಈಗಿರುವ ರಾಜ್ಯ ಹೆದ್ದಾರಿಗಳಾದ ತರೀಕೆರೆ-ಬೇಲೂರು, ಶೃಂಗೇರಿ-ಹಾಸನ್ ಮತ್ತು ಕಡೂರು-ಮಂಗಳೂರು ಹೆದ್ದಾರಿಗಳನ್ನು ನವೀಕರಿಸುವ ಪ್ರಸ್ತಾಪವಿದೆ.
ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ತಾಲ್ಲುಕುಗಳು ರೈಲ್ವೆ ಮಾರ್ಗಗಳನ್ನು ಹೊಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಲಕ ಒಟ್ಟು ೧೩೬ ಕೀ.ಮೀ ರೈಲ್ವೆ ಮಾರ್ಗ ಹಾದು ಹೋಗುತ್ತದೆ. ಬೀರೂರು ಜಿಲ್ಲೆಯ ಅತಿದೊಡ್ಡ ಜಂಕ್ಷನ್ ಆಗಿದೆ. ಹೊಸ ರೈಲು ಮಾರ್ಗ ಚಿಕ್ಕಮಗಳೂರನ್ನು ಹುಬ್ಬಳ್ಳಿ-ಬೆಂಗಳೂರು ಟ್ರಂಕ್ ಮಾರ್ಗಕ್ಕೆ ಸೇರಿಸುತ್ತದೆ, ಚಿಕ್ಕಮಗಳೂರನ್ನು ಬೆಂಗಳೂರು-ಮಂಗಳೂರು ಟ್ರಂಕ್ ಮಾರ್ಗಕ್ಕೆ ಸೇರಿಸುವ ಹೊಸ ಮಾರ್ಗದ ಕಾರ್ಯ ಆರಂಭವಾಗಿದೆ.
ಚಿಕ್ಕಮಗಳೂರಿನಿಂದ ೧೦ ಕೀ.ಮೀ ದೂರದಲ್ಲಿ ಇರುವ ಗೌಡನಹಳ್ಳಿಯಲ್ಲಿ ಸಣ್ಣ ವಿಮಾನ ನಿಲ್ದಾಣ ಇದೆ. ಇದು ಸಣ್ಣ ಗಾತ್ರದ ವಿಮಾನಗಳ ಉಡವಣೆಯ ಸಮಾರ್ಥ್ಯವನ್ನು ಹೊಂದಿದೆ. ಮಂಗಳೂರು , ಹುಬ್ಬಳ್ಳಿ ಮತ್ತು ಬೆಂಗಳೂರು, ಚಿಕ್ಕಮಗಳೂರಿಗೆ ಹತ್ತಿರದ ವಿಮಾನ ನಿಲ್ದಾಣಗಳು.
ಚಿಕ್ಕಮಗಳೂರಿನಲ್ಲಿ ಭೇಟಿ ನೀಡುವ ಸ್ಥಳಗಳು ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ದತ್ತಪೀಠ, ಕೆಮ್ಮಣ್ಗುಂಡಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಲ್ಹತ್ತಿ ಜಲಪಾತ, ಭದ್ರಾ ವನ್ಯಜೀವಿ ಧಾಮ ಮತ್ತು ಪ್ರವಾಸಿಗರು ನೋಡಬಹುದಾದ ಹೆಚ್ಚಿನ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ವ್ಯಾಪಕವಾದ ಪಶ್ಚಿಮ ಘಟ್ಟಗಳಲ್ಲಿ ವಿಸ್ತಾರವಾದ ಸ್ಥಳವು ದಟ್ಟವಾದ ಶೋಲಾ ಕಾಡುಗಳ ಮನೋಹರವಾದ ನೋಟಗಳನ್ನು ಮತ್ತು ದಟ್ಟವಾದ ಹಸಿರು ಪೊದೆಗಳನ್ನು ದಾರಿಗಳಲ್ಲಿ ನೀಡುತ್ತದೆ. ಅತ್ಯುನ್ನತ ಎತ್ತರದಲ್ಲಿ ನೆಲೆಗೊಂಡಿರುವ ಬಹು ಬೆಟ್ಟಗಳು ಅದ್ಭುತ ವಾತಾವರಣದ ವಿಹಂಗಮ ನೋಟವನ್ನು ಆನಂದಿಸಲು ಅವಕಾಶವನ್ನು ನೀಡುತ್ತವೆ. ಈ ಪಟ್ಟಿಯನ್ನು ಪರಿಶೀಲಿಸಿ ಮತ್ತು ಬೆಂಗಳೂರಿನಿಂದ ವಾರಾಂತ್ಯದ ಹೊರಹೋಗುವ ಪ್ರವಾಸವನ್ನು ಯೋಜಿಸಲು ನಿಮ್ಮ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡಲು ಚಿಕ್ಮಗಳೂರು ಪ್ರವಾಸೋದ್ಯಮ ಸ್ಥಳಗಳು ತಮ್ಮ ಸಾಹಸ ಸ್ವರೂಪ ಮತ್ತು ಬಹು ಸಾಹಸ ಚಟುವಟಿಕೆಗಳಿಗೆ ಸ್ಥಳಾವಕಾಶದ ಕಾರಣದಿಂದಾಗಿ ಪ್ರಪಂಚದಾದ್ಯಂತದ ಏಕವ್ಯಕ್ತಿ ಮತ್ತು ಗುಂಪು ಪ್ರಯಾಣಿಕರ ಪೈಕಿ ಪ್ರಸಿದ್ಧವಾಗಿದೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ದೀಪೋತ್ಸವ ದೀಪಾವಳಿಯಂದು ನಡೆಯುವ ವಿಶೇಷ ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ದೀಪಾವಳಿ ದಿನದಂದು ನಡೆಯುವ ಉತ್ಸವ, ಸಂಪ್ರದಾಯ, ದೀಪ ಹಚ್ಚುವುದು ಕಾಪಿsಯ ತವರಿನ ವಿಶೇಷಗಳಲ್ಲಿ ಒಂದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಅನೇಕ, ಆಚರಣೆ, ಸಂಪ್ರದಾಯ, ನಂಬಿಕೆಗಳು ಇವೆ. ಇದರಲ್ಲಿ ಒಂದು ಮಲ್ಲೇನಹಳ್ಳಿ ಸಮೀಪದಲ್ಲಿ ಇರುವ ದೇವಿರಮ್ಮ ಬೆಟ್ಟದಲ್ಲಿ ದೀಪಾವಳಿಯಂದು ನಡೆಯುವ ವಿಶೇಷ ಪೂಜೆ. ವರ್ಷಪೂರ್ತಿ ತಣ್ಣಗೆ ಇರುವ ಈ ಬೆಟ್ಟವನ್ನು ಏರಲು ಮಧ್ಯರಾತ್ರಿಯಿಂದಲೇ ಭಕ್ತರು ಹಾತೊರೆಯುತ್ತಾರೆ. ಕಡಿದಾದ ಅಂಕು ಡೊಂಕಿನ ಹಾದಿಯಲ್ಲಿ ಅಬಾಲವೃದ್ಧರಾಗಿ ಸಾಲು-ಸಾಲಾಗಿ ಜನ ಬೆಟ್ಟ ಹತ್ತುವುದೇ ಒಂದು ರೋಮಂಚನ ಅನುಭವ. ಮಳೆ, ಛಳಿ, ಗಾಳಿಯನ್ನು ಲೆಕ್ಕಿಸದೆ ಜನ ಬೆಟ್ಟವೇರಿ, ದೇವಿಯ ದರ್ಶನ ಪಡೆದು ಧನ್ಯರಾಗುತ್ತಾರೆ. ಬೆಟ್ಟದ ಕೆಳಭಾಗದಲ್ಲಿ ದೇವಿರಮ್ಮ ದೇವಾಲಯ ಇದ್ದು ಪ್ರತಿ ದೀಪಾವಳಿ ದಿನದಂದು ಉತ್ಸವ ಮೂರ್ತಿಯನ್ನು ಬೆಟ್ಟಕ್ಕೆ ತಂದು ಇಡುತ್ತಾರೆ. ಇಲ್ಲಿಗೆ ಆಗಮಿಸುವ ಭಕ್ತರು ದೇವಿ ಪೂಜೆಯಲ್ಲಿ ಭಾಗವಹಿಸಿ ಕೆಳಕ್ಕೆ ಇಳಿಯುತ್ತಾರೆ. ಬೆಟ್ಟ ಏರಿದಷ್ಟೇ ಇಳಿಯುವುದೂ ಸಾಹಸದ ಕೆಲಸ. ದಣಿವು, ಆಯಸವನ್ನು ಲೆಕ್ಕಿಸದೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಇಂದು ಭೇಟಿ ನೀಡಿ ತೆರಳುತ್ತಾರೆ. ಈ ದೃಶ್ಯ ಇರುವೆಗಳು ಸಾಲಾಗಿ ಹರಿದು ಹೋಗುತ್ತಿರುವಂತೆ ಭಾಸವಾಗುತ್ತದೆ. ಜಿಲ್ಲಾ ಕೇಂದ್ರದಿಂದ ವಿಶೇಷ ಬಸ್ಸಿನ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಬೆಳಗ್ಗೆ ಪೂಜೆ ಬಳಿಕ ರಾತ್ರಿ ದೀಪವನ್ನು ಹಚ್ಚುತ್ತಾರೆ. ಇಲ್ಲಿನ ದೀಪ ನೋಡಿ ಮನೆ ಮನೆಗಳಲ್ಲಿ ದೀಪ ಬೆಳಗುವುದು ಅನೂಚಾನವಾಗಿ ನಡೆದು ಬಂದ ಪದ್ಧತಿ. ಮೈಸೂರು ಅರಸರೂ ಇದನ್ನು ಪಾಲಿಸುತ್ತಾರೆ ಎನ್ನಲಾಗುತ್ತದೆ. ಇದಾದ ೨ ದಿನಗಳಲ್ಲಿ ದೇವಿರಮ್ಮ ದೇವಾಲಯದಲ್ಲಿ ಉತ್ಸವ ಜರುಗಿ ತನ್ನಿಂದ ತಾನೇ ಬಾಗಿಲು ತೆರೆದುಕೊಳ್ಳುತ್ತದೆ ಎನ್ನುವ ನಂಬಿಕೆಯೂ ಪ್ರಚಲಿತವಾಗಿದೆ. ಕೊನೆಯ ದಿನ ಕೆಂಡಾರ್ಚನೆ ನಡೆಯುವ ಮೂಲಕ ದೇವಿರಮ್ಮ ವಾರ್ಷಿಕ ಉತ್ಸವಕ್ಕೆ ತೆರೆ ಬೀಳುತ್ತದೆ.
ಕರ್ತಿಕೆರೆ ಗ್ರಾಮವು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.ಚಿಕ್ಕಮಗಳೂರಿನಿಂದ ೪ ಕಿ, ಮೀ, ದೂರದಲ್ಲಿದೆ ಕರ್ತಿಕೆರೆ. ಈ ಗ್ರಾಮದಲ್ಲಿ ಅತ್ಯಂತ ವಿಜ್ರುಂಭಣೆಯಿಂದ ಶ್ರೀ ರಂಗನಾಥಸ್ವಾಮಿ ಮತ್ತು ದುರ್ಗಮ್ಮ ನವರ ಜಾತ್ರಾ ಮಹೋತ್ಸವ ನೆಡೆಯುತ್ತದೆ ಈ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.ಆಗಮಿಸಿ ದೇವರ ದರ್ಶನ ಪಡೆದು ಧನ್ಯರಾಗುತ್ತಾರೆ. ಈ ಜಾತ್ರೆಯಲ್ಲಿ ಭಕ್ತಾದಿಗಳು ದೇವರಿಗೆ ಹರಕೆಯನ್ನು ಸಲ್ಲಿಸಿ ದೇವರ ಕೃಪೇಗೆ ಪಾತ್ರರಾಗುತ್ತಾರೆ. ಈ ಜಾತ್ರೆಯು ಪ್ರಸ್ಸಿದ್ದವಾದ ಒಂದು ಜಾತ್ರೆಯಾಗಿದೆ. ಈ ಜಾತ್ರೆಯಲ್ಲಿ ಬೆಳ್ಳಿಯ ರಥೋತ್ಸವ ನೆಡೆಯುತ್ತದೆ ಬೆಳ್ಳಿಯ ರಥದಲ್ಲಿ ರಂಗನಾಥ ಸ್ವಾಮಿಯನ್ನು ಕೂರಿಸಿ ರಥವನ್ನು ಎಳೆಯುತ್ತಾರೆ.ಸಂಜೆ ಈ ಜಾತ್ರೆ ಪ್ರಯುಕ್ತ ಶನಿ ದೇವರ ನಾಟಕ ಕಾರ್ಯಕ್ರಮ ನೆಡೆಯುತ್ತದೆ.
ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ಬಾಬಾ ಬುಡನ್ಗರಿ, ಕೆಮ್ಮಣ್ಗುಂಡಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಲ್ಹತ್ತಿ ಜಲಪಾತ, ಭದ್ರಾ ವನ್ಯಜೀವಿ ಧಾಮ ಮತ್ತು ಪ್ರವಾಸಿಗರು ನೋಡಬಹುದಾದ ಹೆಚ್ಚಿನ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ವ್ಯಾಪಕವಾದ ಪಶ್ಚಿಮ ಘಟ್ಟಗಳಲ್ಲಿ ವಿಸ್ತಾರವಾದ ಸ್ಥಳವು ದಟ್ಟವಾದ ಶೋಲಾ ಕಾಡುಗಳ ಮನೋಹರವಾದ ನೋಟಗಳನ್ನು ಮತ್ತು ದಟ್ಟವಾದ ಹಸಿರು ಪೊದೆಗಳನ್ನು ದಾರಿಗಳಲ್ಲಿ ನೀಡುತ್ತದೆ.ಅತ್ಯುನ್ನತ ಎತ್ತರದಲ್ಲಿ ನೆಲೆಗೊಂಡಿರುವ ಬಹು ಬೆಟ್ಟಗಳು ಅದ್ಭುತ ವಾತಾವರಣದ ವಿಹಂಗಮ ನೋಟವನ್ನು ಆನಂದಿಸಲು ಅವಕಾಶವನ್ನು ನೀಡುತ್ತವೆ. ಈ ಪಟ್ಟಿಯನ್ನು ಪರಿಶೀಲಿಸಿ ಮತ್ತು ಬೆಂಗಳೂರಿನಿಂದ ವಾರಾಂತ್ಯದಲ್ಲಿ ಹೊರಹೋಗುವ ಪ್ರವಾಸವನ್ನು ಯೋಜಿಸಲು ನಿಮ್ಮ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡಲುು ಚಿಕ್ಕಮಗಳೂರು ಪ್ರವಾಸೋದ್ಯಮ ಸ್ಥಳಗಳು ತಮ್ಮ ಸಾಹಸ ಸ್ವರೂಪ ಮತ್ತು ಬಹು ಸಾಹಸ ಚಟುವಟಿಕೆಗಳಿಗೆ ಸ್ಥಳಾವಕಾಶದ ಕಾರಣದಿಂದಾಗಿ ಪ್ರಪಂಚದಾದ್ಯಂತದ ಏಕವ್ಯಕ್ತಿ ಮತ್ತು ಗುಂಪು ಪ್ರಯಾಣಿಕರ ಪೈಕಿ ಪ್ರಸಿದ್ಧವಾಗಿದೆ.
ಜರಿ ಜಲಪಾತವನ್ನು ಮಜ್ಜಿಗೆ ಜಲಪಾತ ಎಂದೂ ಕರೆಯುತ್ತಾರೆ, ಇದು ಬಾಬಾ ಬುಡನ್ಗಿರಿಯಿಂದ 12 ಕಿಮೀ ದೂರದಲ್ಲಿ ಅತ್ತಿಗುಂಡಿ ಬಳಿ ಇದೆ. ಇದು ಚಿಕ್ಕಮಗಳೂರು ಜಿಲ್ಲೆಯ ಅತ್ಯಂತ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದೆ ಮತ್ತು ಜಿಲ್ಲೆಯ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.ಈ ಸಮ್ಮೋಹನಗೊಳಿಸುವ ಜಲಪಾತವು ದಟ್ಟವಾದ ಕಾಡುಗಳಿಂದ ಆವೃತವಾಗಿದೆ ಮತ್ತು ಕಾಫಿ ತೋಟಗಳು ಪರ್ವತಗಳಲ್ಲಿ ಹುಟ್ಟುವ ಬುಗ್ಗೆಗಳಿಂದ ರಚಿಸಲ್ಪಟ್ಟಿವೆ. .ಪ್ರವಾಸಿಗರು ನೀರಿನಲ್ಲಿ ಈಜಲು ಮತ್ತು ಆಟವಾಡಲು ಮತ್ತು ವಿಶ್ರಾಂತಿ ಪಡೆಯಲು ಜಲಪಾತದ ಕೆಳಭಾಗದಲ್ಲಿ ಪೂಲ್ ಕೂಡ ಇದೆ. ನಗರದ ಬಿಡುವಿಲ್ಲದ ಜೀವನದಿಂದ ಹೊರಬರಲು ಇದು ಸೂಕ್ತ ಸ್ಥಳವಾಗಿದೆ.
ಸಿರಿಮಾನೆ ಫಾಲ್ಸ್ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಬೆಂಗಳೂರಿನಿಂದ ೩೦೦ ಕಿ.ಮೀ ಮತ್ತು ಕಿಗ್ಗಾ ಮತ್ತು ಚಿಕ್ಕಮಗಳೂರಿನಿಂದ ೫ ಕಿ.ಮೀ ದೂರದಲ್ಲಿದೆ. ಇದು ಪಶ್ಚಿಮ ಘಟ್ಟಗಳಲ್ಲಿರುವ ಹಲವಾರು ಜಲಪಾತಗಳಲ್ಲಿ ಒಂದಾಗಿದೆ. ಇದು ಸುಂದರ ನೋಟದಿಂದ ಅದ್ಭುತವಾಗಿದೆ. ನೀರು ಕಾಫಿ ಎಸ್ಟೇಟುಗಳು ಕೆಳಗಿಳಿಯುತ್ತಿದೆ. ಒಂದು ದಿನದಲ್ಲಿ ಇದನ್ನು ಸುಲಭವಾಗಿ ತಲುಪಬಹುದು ಮತ್ತು ಭೇಟಿ ಮಾಡಬಹುದು, ಆದ್ದರಿಂದ, ಶೃಂಗೇರಿ ದೇವಸ್ಥಾನ, ಆಗುಂಬೆ ಮತ್ತು ಇತರ ಸ್ಥಳಗಳೊಂದಿಗೆ ಭೇಟಿ ನೀಡಲು ಸೂಕ್ತವಾಗಿದೆ. ಇದು ೪೦ ಅಡಿ ಎತ್ತರದಲ್ಲಿದೆ ಮತ್ತು ಜಲಪಾತದ ರಸ್ತೆ ಇದೆ, ಅದು ಜಲಪಾತಕ್ಕೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಮಳೆಗಾಲದ ಸಮಯದಲ್ಲಿ ಹತ್ತಿರಕ್ಕೆ ಹೋಗಲುಸಾಧ್ಯವಿರದಿದ್ದರೂ ಸಹ ಕೆಳಗಡೆ ಹೋಗಬಹುದು ಮತ್ತು ಜಲಪಾತವನ್ನು ಆನಂದಿಸಬಹುದು.
ಕಿಗ್ಗಾ: ಇದು ಒಂದು ಸಣ್ಣ ಪಟ್ಟಣವಾಗಿದ್ದು, ಜಲಪಾತದಿಂದ ಸುಲಭವಾಗಿ ತಲುಪಬಹುದು. ಈ ಪಟ್ಟಣವು ಟ್ರೆಕ್ಕಿಂಗ್ ಗೆ ಹೆಸರುವಾಸಿಯಾಗಿದೆ.
ಹರಿ ದೇವಾಲಯ: ಈ ಶಿವ ದೇವಾಲಯವು ಹರಿಹರಪುರದಲ್ಲಿದೆ. ಸುಮಾರು ೪೦೦ ವರ್ಷಗಳ ಹಿಂದೆ ಇದನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.
ಶರದಾ ದೇವಸ್ಥಾನ: ಇದು ೧೪ ನೇ ಶತಮಾನದಲ್ಲಿ ನಿರ್ಮಿಸಲಾದ ದೇವಾಲಯವಾಗಿದ್ದು, ಶರದಾಂಬ ದೇವತೆಗೆ ಅರ್ಪಿತವಾಗಿದೆ. ಈ ದೇವಸ್ಥಾನವು ಹಲವು ಭವ್ಯವಾದ ಕಂಬಗಳು ಮತ್ತು ಮಹಾ ಮಂಟಪವನ್ನು ಹೊಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೆಲ ಇತರ ಮುಖ್ಯ ಪಟ್ಟಣಗಳೆಂದರೆ ಬೀರೂರು, ಕಡೂರು, ನರಸಿಂಹರಾಜಪುರ, ಕೊಪ್ಪ, ಮೂಡಿಗೆರೆ, ತರೀಕೆರೆ.
ಕರ್ನಾಟಕ
This article uses material from the Wikipedia ಕನ್ನಡ article ಚಿಕ್ಕಮಗಳೂರು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.