ಕ್ಷಮಾದಾನ

ಕ್ಷಮಾದಾನವು ರಾಜಕೀಯ ಮೊದಲಾದ ಯಾವುದೇ ರೀತಿಯ ಅಪರಾಧಗಳಿಗೆ ನ್ಯಾಯಾಲಯಗಳು ಶಿಕ್ಷೆ ವಿಧಿಸಿದಾಗ ರಾಷ್ಟ್ರದ ಸರ್ವೋಚ್ಚ ಅಧಿಕಾರಿ ಶಿಕ್ಷೆಯನ್ನು ರದ್ದುಪಡಿಸುವ ಕ್ರಮ (ಆಮ್ನೆಸ್ಟಿ).

ದ್ವೇಷೋದ್ರೇಕ ಭಾವನೆಗಳನ್ನು ಉಪಶಮನಮಾಡಿ, ಅಪರಾಧಿಗಳ ಮನಃ ಪರಿವರ್ತನೆ ಮಾಡುವುದರ ಮೂಲಕ ದೇಶದಲ್ಲಿ ಅಥವಾ ದೇಶಗಳಲ್ಲಿ ಮಾಮೂಲು ಸ್ಥಿತಿಯನ್ನು ಏರ್ಪಡಿಸುವುದಕ್ಕೋಸ್ಕರ ಕ್ಷಮಾದಾನವನ್ನು ನೀಡುವ ಸಂಪ್ರದಾಯ ಎಲ್ಲ ರಾಷ್ಟ್ರಗಳಲ್ಲೂ ಆಚರಣೆಯಲ್ಲಿದೆ.

ರಾಜಕೀಯ ಅಪರಾಧಗಳು

ವಿಶ್ವದ ರಾಷ್ಟ್ರಗಳಲ್ಲಿ ಬಹುತೇಕ ರಾಷ್ಟ್ರಗಳು ಸ್ವತಂತ್ರವಾದ ಮತ್ತು ಪರಮಾಧಿಕಾರವುಳ್ಳ ರಾಷ್ಟ್ರಗಳಾಗಿವೆ. ಆಂತರಿಕ ಮತ್ತು ವಿದೇಶಾಂಗ ವ್ಯವಹಾರ ರಾಷ್ಟ್ರಸರ್ಕಾರದ ವ್ಯಾಪ್ತಿಗೆ ಒಳಪಟ್ಟಿದೆ. ರಾಜ್ಯದೊಳಗಿರುವ ಸಂಘಸಂಸ್ಥೆಗಳೂ ಜನರೂ ಒಳಪಟ್ಟಿರುವುದು. ಸರ್ಕಾರದ ಪರಮಾಧಿಕಾರಕ್ಕೆ ಆದ್ದರಿಂದ ರಾಷ್ಟ್ರದ ಮೂಲಶಾಸನವಾದ ಸಂವಿಧಾನವನ್ನೂ ಪ್ರಾದೇಶಿಕ ಸಮಗ್ರತೆಯನ್ನೂ ಪರಮಾಧಿಕಾರವನ್ನೂ ಪ್ರಶ್ನಿಸುವ ಅಧಿಕಾರ ಯಾರಿಗೂ ಇರುವುದಿಲ್ಲ. ಯಾರಾದರೂ ಆಕ್ರಮವಾದ ವಿಧಾನಗಳಿಂದ ರಾಷ್ಟ್ರದ ಅಸ್ತಿತ್ವಕ್ಕೆ ಧಕ್ಕೆಯುಂಟು ಮಾಡುವ ಪ್ರಯತ್ನ ಮಾಡಿದರೆ, ಆ ಪ್ರಯತ್ನವನ್ನು ವಿಫಲಗೊಳಿಸಿ ರಾಷ್ಟ್ರವ್ಯವಸ್ಥೆಯನ್ನು ಕಾಪಾಡುವ ಅಧಿಕಾರ ಪರಮಾಧಿಕಾರದ ವ್ಯಾಪ್ತಿಗೆ ಸೇರಿದೆ. ಆದ್ದರಿಂದ ರಾಷ್ಟ್ರವಿದ್ರೋಹ ಕಾರ್ಯಗಳು, ಸಶಸ್ತ್ರದಂಗೆಗಳು, ಅಂತರ್ಯುದ್ಧಗಳು ಇತ್ಯಾದಿ ಕಾರ್ಯಚಟುವಟಿಕೆಗಳನ್ನು ದಮನಮಾಡುವ ಅಧಿಕಾರ ರಾಷ್ಟ್ರಕ್ಕಿದೆ. ಈ ಕಾರ್ಯಗಳಲ್ಲಿ ತೊಡಗಿದವರನ್ನು ಶಿಕ್ಷಿಸುವ ಅಧಿಕಾರವೂ ರಾಷ್ಟ್ರಕ್ಕಿದೆ. ಈ ವಿಧವಾದ ಅಪರಾಧಗಳನ್ನು ರಾಜಕೀಯ ಅಪರಾಧಗಳೆಂದು ಪರಿಗಣಿಸಲಾಗಿದೆ.

ಕ್ಷಮಾದಾನ

ರಾಷ್ಟ್ರವಿದ್ರೋಹಕಾರಿ ಕೃತ್ಯಗಳಿಂದ ಉಂಟಾದ ಅಶಾಂತಿಯನ್ನು ಉಪಶಮನ ಮಾಡುವುದಕ್ಕಾಗಿ, ಜನರಲ್ಲಿ ಉಂಟಾದ ದ್ವೇಷೋದ್ರೇಕ ಭಾವನೆಗಳನ್ನು ಹೋಗಲಾಡಿಸುವುದಕ್ಕಾಗಿ, ಯಥಾಸ್ಥಿತಿಯನ್ನು ಪುನಃ ಸ್ಥಾಪಿಸುವುದಕ್ಕಾಗಿ, ರಾಜಕೀಯ ಅಪರಾಧಗಳಲ್ಲಿ ತೊಡಗಿದ್ದವರು ಎಸಗಿದ ಪೂರ್ವಾಪರಾಧಗಳನ್ನು ಮರೆಸುವುದಕ್ಕಾಗಿ ಮತ್ತು ಜನರೆಲ್ಲರೂ ಪುನಃ ಅನ್ಯೋನ್ಯ ಸಂಬಂಧದಿಂದ ಜೀವಿಸುವಂತೆ ಮಾಡುವ ಸಲುವಾಗಿ ಅಪರಾಧಿಗಳಿಗೆ ಕ್ಷಮಾದಾನ ನೀಡುವುದೂ ಉಂಟು. ಇತರ ಬಗೆಯ ಅಪರಾಧಿಗಳಿಗೂ ಕೆಲವೊಮ್ಮೆ ಕ್ಷಮಾದಾನ ನೀಡಲಾಗುತ್ತದೆ. ಕ್ಷಮಾದಾನದ ಮೂಲಕ ಅಪರಾಧಿಯ ಮನಸ್ಸನ್ನು ಪರಿವರ್ತನೆ ಮಾಡಬಹುದು.

ಕೆಲವು ನಿದರ್ಶನಗಳು

  • ಇಂಗ್ಲೆಂಡಿನ ದೊರೆಯಾಗಿದ್ದ ೨ನೆಯ ಚಾರ್ಲ್ಸ್ ತನ್ನ ತಂದೆಯನ್ನು ವಧೆ ಮಾಡಿದವರು ಮತ್ತು ಇತರ ಕೆಲವರನ್ನು ಬಿಟ್ಟು, ಆ ಘಟನೆಯಲ್ಲಿ ಭಾಗವಹಿಸಿದ ಉಳಿದವರಿಗೆಲ್ಲ ಸು.1660ರಲ್ಲಿ ಕ್ಷಮಾದಾನ ನೀಡಿದ.
  • ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಆಂಡ್ರ್ಯೂ ಜಾನ್‍ಸನ್, ಸಂಯುಕ್ತವ್ಯವಸ್ಥೆಯ ವಿರುದ್ಧ ಬಂಡಾಯವೆದ್ದಿದ್ದ ಸಹಾಪರಾಧಿಗಳಿಗೆ ಸಂಯುಕ್ತಸಂಸ್ಥಾನ ಸಂವಿಧಾನಕ್ಕೆ ನಿಷ್ಠೆಯಿಂದ ನಡೆದುಕೊಳ್ಳುವ ಪ್ರಮಾಣವಚನದ ಆಧಾರದ ಮೇಲೆ 1865ರಲ್ಲಿ ಕ್ಷಮಾದಾನ ನೀಡಿದ.
  • ಪಾಕಿಸ್ತಾನದ ಮಾಜಿ ಅಧ್ಯಕ್ಷ ಅಯೂಬ್ ಖಾನನ ವಿರುದ್ಧ ಬಂಡಾಯವೆದ್ದು ಅಧಿಕಾರದ ಬದಲಾವಣೆಗೆ ಕಾರಣರಾದ ರಾಜಕಾರಣಿಗಳಿಗೆ ಅಧ್ಯಕ್ಷ ಯಾಹ್ಯಾಖಾನ್ ಕ್ಷಮಾದಾನ ನೀಡಿದ್ದ.
  • ನಾಗಾ ಮತ್ತು ಮಿಜೋ ದಂಗೆಕೋರರಿಗೆ ಭಾರತ ಸರ್ಕಾರ ಕ್ಷಮಾದಾನ ನೀಡಿತು.

ಒಪ್ಪಂದಗಳಲ್ಲಿ ಕ್ಷಮಾದಾನ

ಯುದ್ಧಕಾಲದಲ್ಲಿ ಪರರಾಷ್ಟ್ರಗಳೊಡನೆ ಸೇರಿಕೊಂಡು ಶತ್ರುಗಳಿಗೆ ಸಹಾಯ ಮತ್ತು ಸಹಕಾರ ನೀಡುವ ನಾಗರಿಕರು ಮತ್ತು ಶರಣಾರ್ಥಿಗಳಾದ ಸಶಸ್ತ್ರದಳಗಳವರಿಗೆ ಕ್ಷಮಾದಾನ ನೀಡುವುದಕ್ಕೆ ಸಂಬಂಧಿಸಿದ ಉಪವಿಧಿಗಳು ಸಾಮಾನ್ಯವಾಗಿ ಎಲ್ಲ ಶಾಂತಿ ಒಪ್ಪಂದಗಳಲ್ಲೂ ಇರುವುದುಂಟು. ಈ ಶತಮಾನದಲ್ಲಿ ನಡೆದ ಎರಡು ಮಹಾಯುದ್ಧಗಳ ಅನಂತರ ರಾಷ್ಟ್ರಗಳು ಸಹಿ ಹಾಕಿದ ಶಾಂತಿ ಒಪ್ಪಂದಗಳಲ್ಲಿ ಈ ರೀತಿಯ ಉಪವಿಧಿಗಳು ಕಾಣಬರುವುದಿಲ್ಲ. ಎರಡು ಅಥವಾ ಅನೇಕ ರಾಷ್ಟ್ರಗಳು ಸೇರಿ ಮಾಡಿಕೊಂಡ ಒಪ್ಪಂದಗಳ ಮೂಲಕ ಈ ರೀತಿಯ ಕ್ಷಮಾದಾನವನ್ನು ನೀಡಲಾಗುತ್ತಿತ್ತು ಎಂಬುದಕ್ಕೆ ಈ ಕೆಳಕಂಡ ನಿದರ್ಶನಗಳನ್ನು ಕೊಡಬಹುದು:

ಕ್ರಿ.ಪೂ.404ರಲ್ಲಿ 30 ಜನ ನಿರಂಕುಶಾಧಿಕಾರಿಗಳ ದಬ್ಬಾಳಿಕೆಯನ್ನು ಸದೆಬಡಿದ ಅನಂತರ ಅಥೆನ್ಸ್ ನ ಥ್ರ್ಯಾಸಿಬ್ಯೂಲಸ್ ಆ ಮೂವತ್ತು ಜನರನ್ನು ಬಿಟ್ಟು ಉಳಿದವರಿಗೆಲ್ಲ ಕ್ಷಮಾದಾನ ನೀಡಿದ. ರೋಮನ್ ಚಕ್ರಾಧಿಪತ್ಯದ ಕಾಲದಲ್ಲೂ ಕ್ಷಮಾದಾನ ನೀಡುವುದಕ್ಕೆ ಪೋಷಕವಾದ ಕಾನೂನು ತತ್ತ್ವಗಳಿದ್ದುವು. ಆಧುನಿಕ ಯುಗದಲ್ಲಿ 1815ರ ವಿಯೆನ್ನ ಒಪ್ಪಂದದ ವಿಧಿಗಳಿಂದಾಗಿ ಪೋಲಿಷ್ ಮತ್ತು ಸ್ವೀಡಿಷ್ ಜನರಿಗೆ ಕ್ಷಮಾದಾನ ದೊರೆಯಿತು. 1871ರ ಫ್ರಾಂಕ್‍ಫರ್ಟ್ ಒಪ್ಪಂದದ ವಿಧಿಗಳಿಂದಾಗಿ ಜರ್ಮನಿಗೆ ಫ್ರಾನ್ಸ್ ವರ್ಗಾಯಿಸಿದ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರಿಗೆ ಕ್ಷಮಾದಾನ ದೊರೆಯಿತು. 1878ರಲ್ಲಿ ರಷ್ಯ ಮತ್ತು ತುರ್ಕಿ ಮಾಡಿಕೊಂಡ ಸ್ಯಾನ್‍ಸ್ಟಿಫ್ಯಾನೋ ಒಪ್ಪಂದದ ನಿಯಮಗಳಿಂದಾಗಿ ಸಹ ಯುದ್ಧದಲ್ಲಿ ರಷ್ಯದ ಪರವಾಗಿದ್ದ ತುರ್ಕಿ ಜನರಿಗೆ ಕ್ಷಮಾದಾನ ದೊರೆಯಿತು. 1902ರ ಬೋಯರ್ ಒಪ್ಪಂದದಲ್ಲಿ ದಕ್ಷಿಣ ಆಫ್ರಿಕದಲ್ಲಿ ಬೋಯರ್ ಜನರಿಗೆ ಕ್ಷಮಾದಾನ ನೀಡುವುದಕ್ಕೆ ಸಂಬಂಧಿಸಿದ ಉಪವಿಧಿಗಳಿದ್ದುವು.

ಕ್ಷಮಾದಾನ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕ್ಷಮಾದಾನ ರಾಜಕೀಯ ಅಪರಾಧಗಳುಕ್ಷಮಾದಾನ ಕ್ಷಮಾದಾನ ಕೆಲವು ನಿದರ್ಶನಗಳುಕ್ಷಮಾದಾನ ಒಪ್ಪಂದಗಳಲ್ಲಿ ಕ್ಷಮಾದಾನ

🔥 Trending searches on Wiki ಕನ್ನಡ:

ಅಂಬಿಗರ ಚೌಡಯ್ಯಕೃಷ್ಣರಾಜಸಾಗರವಚನ ಸಾಹಿತ್ಯಜೋಗಿ (ಚಲನಚಿತ್ರ)ಭೋವಿಶಂಕರ್ ನಾಗ್ಗೋವಿನ ಹಾಡುಗುಪ್ತ ಸಾಮ್ರಾಜ್ಯಮೈಸೂರು ಅರಮನೆಎಚ್. ತಿಪ್ಪೇರುದ್ರಸ್ವಾಮಿಜವಹರ್ ನವೋದಯ ವಿದ್ಯಾಲಯಆಗಮ ಸಂಧಿವಿಶ್ವ ಕನ್ನಡ ಸಮ್ಮೇಳನಒಗಟುಚಿಕ್ಕಮಗಳೂರುಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರಇಮ್ಮಡಿ ಪುಲಕೇಶಿವೇದಾವತಿ ನದಿತೆಂಗಿನಕಾಯಿ ಮರದಾಸ ಸಾಹಿತ್ಯಕನ್ನಡ ಛಂದಸ್ಸುಚಂಪೂಬರಗೂರು ರಾಮಚಂದ್ರಪ್ಪಸುದೀಪ್ಲಿನಕ್ಸ್ಗರ್ಭಧಾರಣೆವಚನಕಾರರ ಅಂಕಿತ ನಾಮಗಳುಮತದಾನ (ಕಾದಂಬರಿ)ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಒಂದೆಲಗಭಾರತೀಯ ಮೂಲಭೂತ ಹಕ್ಕುಗಳುಜವಾಹರ‌ಲಾಲ್ ನೆಹರುಬುಡಕಟ್ಟುಕರ್ನಾಟಕದ ಜಿಲ್ಲೆಗಳುಸಜ್ಜೆವಿ. ಕೃ. ಗೋಕಾಕಕದಂಬ ರಾಜವಂಶಮೆಕ್ಕೆ ಜೋಳಚೋಮನ ದುಡಿಕುಷಾಣ ರಾಜವಂಶಕನಕದಾಸರುದೇವನೂರು ಮಹಾದೇವಬ್ರಾಹ್ಮಣಸಂಸ್ಕೃತ ಸಂಧಿದೆಹಲಿಕೊಪ್ಪಳಐಹೊಳೆಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಭಾರತೀಯ ಶಾಸ್ತ್ರೀಯ ಸಂಗೀತಅಶ್ವತ್ಥಮರವಿಜಯಪುರ ಜಿಲ್ಲೆಯ ತಾಲೂಕುಗಳುಕೆ ವಿ ನಾರಾಯಣಬೀಚಿಶ್ರೀಕೃಷ್ಣದೇವರಾಯಭಾರತದ ಸಂವಿಧಾನ ರಚನಾ ಸಭೆಕುರು ವಂಶವಾಣಿವಿಲಾಸಸಾಗರ ಜಲಾಶಯಸಾರ್ವಜನಿಕ ಹಣಕಾಸುಸಂಸ್ಕೃತಸ್ವಚ್ಛ ಭಾರತ ಅಭಿಯಾನಕುರುಶಾಲೆಪಟ್ಟದಕಲ್ಲುದುರ್ಯೋಧನಮದುವೆಶ್ರೀನಿವಾಸ ರಾಮಾನುಜನ್ಕನ್ನಡ ಸಾಹಿತ್ಯ ಪ್ರಕಾರಗಳುಇಮ್ಮಡಿ ಪುಲಿಕೇಶಿಸಾಮಾಜಿಕ ಸಮಸ್ಯೆಗಳುಒಂದನೆಯ ಮಹಾಯುದ್ಧತಾಳಗುಂದ ಶಾಸನಮುಹಮ್ಮದ್ಉತ್ತರ ಕರ್ನಾಟಕಭಾರತೀಯ ಭೂಸೇನೆಹನುಮಾನ್ ಚಾಲೀಸಪಂಪ ಪ್ರಶಸ್ತಿವಿಜಯದಾಸರು🡆 More