ಜವಾಹರ‌ಲಾಲ್ ನೆಹರು: ಭಾರತದ ಮೊದಲ ಪ್ರಧಾನ ಮಂತ್ರಿ

ಪಂಡಿತ್ ಜವಾಹರಲಾಲ್ ನೆಹರು (14 ನವೆಂಬರ್ 1889 - 27 ಮೇ 1964)((ನವೆಂಬರ್ ೧೪, ೧೮೮೯ - ಮೇ ೨೭, ೧೯೬೪)) ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮೊದಲ ಪ್ರಧಾನಿ ಮತ್ತು ಭಾರತದ ಸ್ವಾತಂತ್ರ್ಯ ಮೊದಲು ಮತ್ತು ನಂತರ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿ.

ಅವರು ಮಹಾತ್ಮ ಗಾಂಧಿಯವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಒಬ್ಬ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು 1947ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾದಂದಿನಿಂದ 1964 ರಲ್ಲಿ ಅವರ ಮರಣದವರೆಗೂ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಸಮಾಜವಾದ ತತ್ವದ, ಪ್ರಜಾಪ್ರಭುತ್ವ ಗಣರಾಜ್ಯದ ಮತ್ತು ಜಾತ್ಯತೀತತತ್ವದ ಸಾರ್ವಭೌಮ ಸ್ವತಂತ್ರ ಆಧುನಿಕ ಭಾರತದ ಶಿಲ್ಪಿ ಎಂದು ಅವರು ಪರಿಗಣಿಸಲ್ಪಟ್ಟಿದ್ದಾರೆ . ಕಾಶ್ಮೀರಿ ಪಂಡಿತ್ ಸಮುದಾಯದೊಂದಿಗಿನ ಅವರ ಮೂಲ ವಂಶದಿಂದಾಗಿ ಅವರು ಪಂಡಿತ್ ನೆಹರೂ ಎಂದು ಕರೆಯಲ್ಪಡುತ್ತಾರೆ, ಭಾರತೀಯ ಮಕ್ಕಳಲ್ಲಿ ಅವರು ಚಾಚಾ ನೆಹರು ("ಅಂಕಲ್ ನೆಹರು") ಎಂದು ಪ್ರಸಿದ್ಧರಾಗಿದ್ದರು. (ಇಂಗ್ಲಿಷ್ ವಿಬಾಗದ ಅನುವಾದ)

ಪಂಡಿತ್
ಜವಾಹರ‌ಲಾಲ್ ನೆಹರು
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947)
ಜವಾಹರ‌ಲಾಲ್ ನೆಹರು - 1947

ಭಾರತದ ಪ್ರಧಾನ ಮಂತ್ರಿ - 15 ಆಗಸ್ಟ್ 1947 -27 ಮೇ 1964 (16 ವರ್ಷ, 286 ದಿನಗಳು-ನಾಲ್ಕು ಅವಧಿಗಳು- (ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ)
ಹಾಲಿ
ಅಧಿಕಾರ ಸ್ವೀಕಾರ 
15 ಆಗಸ್ಟ್ 1947
Monarch ಜಾರ್ಜ್ VI (26 ಜನವರಿ 1950 ರವರೆಗೆ)
ರಾಷ್ಟ್ರಪತಿ ರಾಜೇಂದ್ರ ಪ್ರಸಾದ್
ಸರ್ವೆಪಲ್ಲಿ ರಾಧಾಕೃಷ್ಣನ್
Governor General ದಿ ಅರ್ಲ್ ಮೌಂಟ್ಬ್ಯಾಟನ್ ಬರ್ಮಾದ ಗವರ್ನರ್ ಜನರಲ್
ಚಕ್ರವರ್ತಿ ರಾಜಗೋಪಾಲಾಚಾರಿ
(26 ಜನವರಿ 1950 ರವರೆಗೆ)
ಪ್ರತಿನಿಧಿ ವಲ್ಲಭಭಾಯಿ ಪಟೇಲ್
ಪೂರ್ವಾಧಿಕಾರಿ ಕಾರ್ಯನಿರ್ವಾಹಕ ಮಂಡಳಿಯ ಉಪಾಧ್ಯಕ್ಷರಾಗಿ ಸ್ವತಃ ಸ್ಥಾನ ಸ್ಥಾಪನೆ.
ಉತ್ತರಾಧಿಕಾರಿ ಗುಲ್ಜಾರಿ ಲಾಲ್ ನಂದಾ (ಹಂಗಾಮಿ)

ರಕ್ಷಣಾ ಸಚಿವ
ಪೂರ್ವಾಧಿಕಾರಿ ವಿ. ಕೆ. ಕೃಷ್ಣ ಮೆನನ್
ಉತ್ತರಾಧಿಕಾರಿ ಯಶವಂತರಾವ್ ಚವಾಣ್
ಉತ್ತರಾಧಿಕಾರಿ ಗುಲ್ಜಾರಿ ಲಾಲ್ ನಂದಾ(ಹಂಗಾಮಿ):ಲಾಲ್ ಬಹದ್ದೂರ್ ಶಾಸ್ತ್ರಿ
ವೈಯಕ್ತಿಕ ಮಾಹಿತಿ
ಜನನ 14-11-1889
ಅಲಹಾಬಾದ್,ಇಂದಿನ ಉತ್ತರ ಪ್ರದೇಶ, ಭಾರತ
ಮರಣ 27 May 1964(1964-05-27) (aged 74)
ನವದೆಹಲಿ, , ದೆಹಲಿ,, ಭಾರತ
ಸಮಾಧಿ ಸ್ಥಳ ರಾಜ್ ಘಾಟ್ - ಶಾಂತಿವನ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಕಮಲಾ ನೆಹರು- 1916 ರಲ್ಲಿ ವಿವಾಹ(1936-ಮರಣ)
ಮಕ್ಕಳು ಇಂದಿರಾ ಗಾಂಧಿ
ತಂದೆ/ತಾಯಿ ಪಂಡಿತ್ ಮೋತಿಲಾಲ್ ನೆಹರು
ಸ್ವರೂಪರಾಣಿ ಥುಸ್ಸು
ಅಭ್ಯಸಿಸಿದ ವಿದ್ಯಾಪೀಠ ಟ್ರಿನಿಟಿ ಕಾಲೇಜ್, ಕೇಂಬ್ರಿಡ್ಜ್;
.ಇನ್ಸ್ ಆಫ್ ಕೋರ್ಟ್
ವೃತ್ತಿ ಬ್ಯಾರಿಸ್ಟರ್;- ಲೇಖಕ;-ರಾಜಕಾರಣಿ
ಸಹಿ ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947)
ಮಿಲಿಟರಿ ಸೇವೆ
ಪ್ರಶಸ್ತಿಗಳು ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) ಭಾರತ ರತ್ನ (1955)
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947)
'ಮಹಾತ್ಮಗಾಂಧಿಯೊಂದಿಗೆ ನೆಹರು'
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947)
'ನೆಹರು ರಾಷ್ಟ್ರಕ್ಕೆ ಸಮರ್ಪಿಸಿದ ಅಲಹಾಬಾದಿನಲ್ಲಿರುವ ನೆಹರೂ ವಂಶದ ಮನೆ'

ಪೀಠಿಕೆ

ನೆಹರುರವರ ಸಾರ್ವಜನಿಕ ಜೀವನ : ೧೮೮೯-೧೯೧೮

  • ಪಂಡಿತ್ ಜವಾಹರಲಾಲ್ ನೆಹರು ಅವರು ಪ್ರಮುಖ ನ್ಯಾಯವಾದಿ ಮತ್ತು ರಾಷ್ಟ್ರೀಯತಾವಾದಿ ರಾಜನೀತಿಜ್ಞ ಮೋತಿಲಾಲ್ ನೆಹರೂ ಮತ್ತು ಸ್ವರೂಪ್ ರಾಣಿ, ಅವರ ಮಗ. ನೆಹರು ಕೇಂಬ್ರಿಡ್ಜ್‍ನ ಟ್ರಿನಿಟಿ ಕಾಲೇಜ್ ಪದವೀಧರರಾಗಿದ್ದರು. ಇಂಗ್ಲೆಂಡ್‌ನಲ್ಲಿದ್ದಾಗ ನೆಹರು ಅವರು ಫೇಬಿಯನ್ ಸಾಮಾಜಿಕ ವಿಧಾನಗಳನ್ನು ಬಹುವಾಗಿ ಮೆಚ್ಚಿದ್ದರು. ಇಂಗ್ಲೆಂಡಿಲ್ಲಿ ಅವರು ಇನ್ನರ್ ಟೆಂಪಲ್ ನಲ್ಲಿ ತರಬೇತಿ ಪಡೆದು ನ್ಯಾಯವಾದಿಯಾಗಿ/ ಬ್ಯಾರಿಸ್ಟರ್’ಆಗಿ ಭಾರತಕ್ಕೆ ಹಿಂದಿರುಗಿದ ನಂತರ, ಅವರು ಅಲಹಾಬಾದ್ ಹೈಕೋರ್ಟ್ ನಲ್ಲಿ ಸೇರಿಕೊಂಡರು. ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿ ಆಸಕ್ತಿಯನ್ನು ತೋರಿದರು, ತಂದೆಯೊಂದಿಗೆ ರಾಜಕೀಯದಲ್ಲಿ ಸಕ್ರಿಯರಾದರು. ಅಂತಿಮವಾಗಿ ಅವರ ಕಾನೂನು ವಿವಾದ ವಕೀಲಿ ಉದ್ಯೋಗವು ಬದಲಾಗಿ ಅವರ ಕಾರ್ಯ ರಾಷ್ರೀಯವಾದದಕಡೆ ತಿರುಗಿತು. ೧೯೧೬ರ ವಸಂತ ಪಂಚಮಿಯ ದಿನದಂದು ನೆಹರು ಅವರು ಕಮಲಾ ಕೌಲ್‌ರವರನ್ನು ಮದುವೆಯಾದರು.
  • ಅವರ ಹದಿಹರೆಯದ ವರ್ಷಗಳಿಂದ ಬದ್ಧ ರಾಷ್ಟ್ರೀಯತಾವಾದಿಯಾಗಿದ್ದು, 1910 ರ ಕ್ರಾಂತಿಗಳ ಸಮಯದಲ್ಲಿ ಅವರು ಭಾರತೀಯ ರಾಜಕೀಯದಲ್ಲಿ ಏರುತ್ತಿರುವ ಉನ್ನತ ವ್ಯಕ್ತಿಯಾಗಿದ್ದರು. ಅವರು 1920 ರ ದಶಕದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ ಎಡಪಂಥೀಯ ಬಣಗಳ ಪ್ರಮುಖ ನಾಯಕರಾದರು ಮತ್ತು ಅಂತಿಮವಾಗಿ ಕಾಂಗ್ರೆಸ್’ನ ಸಂಪೂರ್ಣ ಮಾರ್ಗದರ್ಶಿಯಾದ ಗಾಂಧಿಯವರ ಅನುಮತಿಯೊಂದಿಗೆ ಇಡೀ ಕಾಂಗ್ರೆಸ್’ನ ನಾಯಕರಾದರು. ಕಾಂಗ್ರೆಸ್ ಅಧ್ಯಕ್ಷರಾಗಿ 1929 ರಲ್ಲಿ, ನೆಹರೂ ಬ್ರಿಟಿಷ್ ಆಳ್ವಿಕೆಯಿಂದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಕರೆ ನೀಡಿದರು ಮತ್ತು ಕಾಂಗ್ರೆಸ್’ನ ನಿರ್ಣಾಯಕ ಬದಲಾವಣೆಯಿಂದ ಎಡಪಂಥಕ್ಕೆ ತಿರುಗಿಸಿದರು.

1930- 1947

ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಜವಾಹರಲಾಲ್ ನೆಹರು
  • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ :೧೯೧೮-೧೯೩೭
  • ೧೯೧೯ ರಲ್ಲಿ ಮಗಳು ಇಂದಿರಾ ಪ್ರಿಯದರ್ಶಿನಿ ಜನಿಸಿದಳು. ರಾಜಕೀಯದಲ್ಲಿ, ಮಹಾತ್ಮ ಗಾಂಧಿಯವರ ಶಿಷ್ಯನಾದ ಇವರು, ಮೊದಲ ಬಾರಿಗೆ ೧೯೨೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಉನ್ನತಿಗೇರಿದರು. ಈ ದಿನಗಳನ್ನು ಇವರು ಬಹುವಾಗಿ ಕಾರಾಗೃಹವಾಸದಲ್ಲಿದ್ದು ಪುಸ್ತಕಗಳು, ಪತ್ರಗಳನ್ನು ಬರೆಯುತ್ತಾ ಕಳೆದರು.
  • 1930 ರ ದಶಕದಲ್ಲಿ ಭಾರತೀಯ ರಾಜಕೀಯದಲ್ಲಿ ನೆಹರೂ ಮತ್ತು ಕಾಂಗ್ರೆಸ್ ಪ್ರಮುಖ ಪತ್ರವಾಗಿತ್ತು. ಕಾಂಗ್ರೆಸ್ ನಾಯಕತ್ವದಲ್ಲಿ, 1937 ರ ಪ್ರಾಂತೀಯ ಚುನಾವಣೆಯನ್ನು ಮುನ್ನಡೆಸಿ ಹಲವಾರು ಪ್ರಾಂತ್ಯಗಳಲ್ಲಿ ಸರ್ಕಾರವನ್ನು ರಚಿಸಿದಾಗ ಅವರ “ಜಾತ್ಯತೀತ ರಾಷ್ಟ್ರ/-ದೇಶದ” ಅವರ ಕಲ್ಪನೆಯನ್ನು ಜನರು ಬೆಂಬಲಿಸುವಂತೆ ಕಂಡುಬಂತು; ಮತ್ತೊಂದೆಡೆ, ಪ್ರತ್ಯೇಕತಾವಾದಿ ಮುಸ್ಲಿಂ ಲೀಗ್ ಹೆಚ್ಚು ಕ್ಷೀನ ಬೆಂಬಲವನ್ನು ಗಳಿಸಿತು. ಆದರೆ 1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯ ನಂತರ ಈ ಸಾಧನೆಗಳು ತೀವ್ರವಾಗಿ ಹಿನ್ನಡೆ ಕಂಡು ರಾಜಿಯಾಗಿದ್ದವು, ಅದು ಬ್ರಿಟಿಷರು ಕಾಂಗ್ರೆಸ್ ಅನ್ನು ಒಂದು ರಾಜಕೀಯ ಸಂಘಟನೆಯಾಗಿ ಪರಿಗಣಿಸಿ ಅದನ್ನು ಪರಿಣಾಮಕಾರಿಯಾಗಿ ಬಗ್ಗುಬಡಿಯಿತು. ನೆಹರು ಅವರಿಗೆ ಸ್ವಾತಂತ್ರ್ಯಕ್ಕಾಗಿ ತಕ್ಷಣದ ಕರೆಕೊಡುವ ಮನಸ್ಸಿರಲಿಲ್ಲ, ಆದರೆ ಗಾಂಧಿಯವರ ಕರೆಗೆ ಬೆಂಲಿಸಿದರು. ಏಕೆಂದರೆ ಅವರು ಎರಡನೇ ವಿಶ್ವ ಸಮರ ಸಮಯದಲ್ಲಿ ಮಿತ್ರಪಕ್ಷದ ಯುದ್ಧದ ಚಟುವಟಿಕೆಯನ್ನು ಬೆಂಬಲಿಸಲು ಬಯಸಿದ್ದರು, ಅವರು ಹೆಚ್ಚು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದೀರ್ಘವಾದ ಸೆರೆವಾಸದಿಂದ ಹೊರಬಂದರು. ಅವರ ಹಳೆಯ ಕಾಂಗ್ರೆಸ್ ಸಹೋದ್ಯೋಗಿ ಮತ್ತು ಈಗ ಎದುರಾಳಿ ಮುಹಮ್ಮದ್ ಅಲಿ ಜಿನ್ನಾ ಅವರ ಮುಸ್ಲಿಂ ಲೀಗ್, ಆಗ ಭಾರತದಲ್ಲಿ ಮುಸ್ಲಿಂ ರಾಜಕೀಯವನ್ನು ಮುಸ್ಲಿಂ ರಾಜಕೀಯ ನೀತಿಯಿಂದ ಆಳಲು ಬಂದಿತು. ಅಧಿಕಾರ ಹಂಚಿಕೆಗಾಗಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವಣ ಮಾತುಕತೆಗಳು ವಿಫಲವಾದವು ಮತ್ತು 1947 ರಲ್ಲಿ ಭಾರತದ ಸ್ವಾತಂತ್ರ್ಯ ಗಳಿಕೆಯು ಜೊತೆ ಭಾರತದ ರಕ್ತಸಿಕ್ತ ವಿಭಜನೆಗೆ ಕಾರಣವಾಯಿತು.
  • ನೆಹರು ಅವರನ್ನು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ನೇಮಕ ಮಾಡಲು ಕಾಂಗ್ರೆಸ್’ನಿಂದ ಚುನಾಯಿತರಾದರು, ಆದರೆ ನಾಯಕತ್ವ ಪ್ರಶ್ನೆಯ ವಿಚಾರದಲ್ಲಿ ನೆಹರು ಅವರನ್ನು ರಾಜಕೀಯ ಉತ್ತರಾಧಿಕಾರಿಯಾಗಿ 1941 ರಲ್ಲಿಯೇ ಅವರ ಸ್ಥಾನಮಾನವನ್ನು ಬಗೆಹರಿಸಲಾಗಿತ್ತು. ಗಾಧಿಜಿಯವರು ತಮ್ಮ ನಂತರದ ರಾಜಕೀಯ ಉತ್ತರಾಧಿಕಾರಿಯು ನೆಹರು ಎಂದು 1941 ರಲ್ಲೇ ಒಪ್ಪಿ ಹೇಳಿಕೆ ಕೊಟ್ಟಿದ್ದರು.

ಪ್ರಧಾನಿಯಾಗಿ 1947- 1964

  • ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ ೧೯೪೭-೧೯೬೪
  • ಪ್ರಧಾನಿಯಾಗಿ, ಅವರು ಭಾರತದ ಅವರ ದೃಷ್ಟಿಕೋನದ ರಾಷ್ಟ್ರವನ್ನು ಸಾಧಿಸಲು ಹೊರಟರು. 1950 ರಲ್ಲಿ ಭಾರತದ ಸಂವಿಧಾನವನ್ನು ಜಾರಿಗೊಳಿಸಲಾಯಿತು, ನಂತರ ಅವರು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದರು. ಮುಖ್ಯವಾಗಿ, ಅವರು ಭಾರತವು ಒಂದು ವಸಾಹತು-ದೇಶದಿಂದ ಗಣರಾಜ್ಯವಾಗುದವರೆಗಿನ ರೂಪಾಂತರಕ್ಕೆ ಸಾಕ್ಷಯೂ ಕಾರಣೀಭೂತರೂ ಆದರು, ಬಹುಸಿದ್ಧಾತಗಳ ಬಹು ರಾಜಕೀಯ ಪಕ್ಷಗಳ (ಮಲ್ಟಿ-ಪಾರ್ಟಿ ಸಿಸ್ಟಮ್) ವ್ಯವಸ್ಥೆಯ ಪೋಷಣೆ ಮಾಡಿದರು.. ವಿದೇಶಿ ನೀತಿಯಲ್ಲಿ, ಅವರು ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಮುಖ್ಯ ಸಂಯೊಜಕರಾಗಿ(ಹೆಗ್’ಮನ್) ಆಗಿ ಭಾರತವನ್ನು ಯೋಜಿಸಿ ಅಲಿಪ್ತ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.
  • ನೆಹರೂ ಅವರ ನಾಯಕತ್ವದಲ್ಲಿ, ಕಾಂಗ್ರೆಸ್ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ರಾಜಕೀಯವನ್ನು ನಿಯಂತ್ರಿಸುತ್ತಾ, 1951, 1957, ಮತ್ತು 1962 ರಲ್ಲಿ ಸತತ ಚುನಾವಣೆಯನ್ನು ಗೆದ್ದುಕೊಂಡು ಎಲ್ಲಾ ಪಕ್ಷಗಳನ್ನು ಮೀರಿಸಿದ (ಕ್ಯಾಚ್-ಆಲ್) ಪಕ್ಷವಾಗಿ ಹೊರಹೊಮ್ಮಿತು. ಅವರ ಕೊನೆಯ ವರ್ಷಗಳಲ್ಲಿ ರಾಜಕೀಯ ಸಮಸ್ಯೆಗಳ ನಡುವೆಯೂ. ಮತ್ತು 1962 ರಲ್ಲಿ ಸಿನೋ-ಇಂಡಿಯನ್ ಯುದ್ಧದ ಸಮಯದಲ್ಲಿ ನಾಯಕತ್ವದ ವೈಫಲ್ಯದಲ್ಲೂ ಅವರು ಭಾರತದ ಜನತೆಗೆ ಜನಪ್ರಿಯರಾಗಿದ್ದರು. ಭಾರತದಲ್ಲಿ ಅವರ ಜನ್ಮದಿನವನ್ನು “ಬಾಲ ದಿವಸ್” (ಮಕ್ಕಳ ದಿನ) ಎಂದು ಆಚರಿಸಲಾಗುತ್ತದೆ.
  • ನೆಹರೂರವರು ೧೮ ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. ಇವರು ೧೯೬೪ಮೇ ೨೭ ರಂದು ನಿಧನರಾದರು. ಪಂಡಿತ ಜವಹರಲಾಲ್ ನೆಹರೂರವರು 1947 ಆಗಸ್ಟ್ 14 ರ ಮಧ್ಯರಾತ್ರಿ (೧೨.೨೫), ಸಂಸತ್ತನ್ನುದ್ದೇಶಿಸಿ ಮಾಡಿದ 'ಎ ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ಪ್ರಸಿದ್ಧವಾಗಿದೆ. (It is considered to be one of the greatest speeches of the 20th century and to be a landmark oration that captures the essence of the triumphant culmination of the largely non-violent Indian independence struggle against the British Empire in India. (Tryst with Destiny)
  • ಅದರ ಕನ್ನಡ ಅನುವಾದ -ಆರಂಭದ ವಾಕ್ಯಗಳು:
      "ಹಿಂದೊಮ್ಮೆ ನಾವು ವಿಧಿಗೊಂದು ಮಾತಿತ್ತಿದ್ದೆವು. (ಬಹಳ ವರ್ಷಗಳ ಹಿಂದೆ ನಾವು ಉತ್ತಮ ಭವಿಷ್ಯದ ಗುರಿಸಾಧನೆಗಾಗಿ ವಚನಬದ್ದತೆ ಹೊಂದಿದ್ದೇವೆ) ಅ ಭಾಷೆಯನ್ನು ಕೇವಲ ಸಂಪೂರ್ಣವಾಗಿಯಲ್ಲದೇಇದ್ದರೂ ಮಹತ್ತರವಾಗಿ ಕಾರ್ಯಗತಗೊಳಿಸುವ ಸಮಯ ಇಂದು ಒದಗಿದೆ. ಈ ನಡು ರಾತ್ರಿಯ ವಿಶೇಷ ಘಳಿಗೆಯಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಸ್ವಾತಂತ್ರ್ಯವನ್ನು ಮೈದಳೆದು ಮೇಲೇಳಲಿದೆ. ಹಳೆತೆಲ್ಲವನ್ನೊದರಿ ಹೊಸತನಕ್ಕೆ ಕಾಲಿಡುವ ಮತ್ತು ಶತಮಾನಗಳಿಂದ ಶೋಷಿಸಲ್ಪಟ್ಟ ನಾಡಿನ ಆತ್ಮ ಧ್ವನಿದಳೆವ ಈ ಘಳಿಗೆ, ಇತಿಹಾಸದ ಅಪರೂಪದ ಮುಹೂರ್ತಗಳಲ್ಲೊಂದು. ಈ ಶುದ್ಧ ಸಮಯದಲ್ಲಿ ಭಾರತದ ಮತ್ತು ಭಾರತಾಂಬೆಯ ಸತ್ಪ್ರಜೆಗಳ ಸೇವೆಗಾಗಿ, ಹೆಚ್ಚೇನು ವಿಶ್ವದೊಳಿತಿಗಾಗಿ ನಮ್ಮದೆಲ್ಲವನ್ನು ಮುಡಿಪಿಡುವುದಾಗಿ ಮಾಡುವ ಪ್ರತಿಜ್ಞೆ ಅತೀ ಸಮರ್ಪಕವೆನಿಸುತ್ತದೆ."
      (Long years ago, we made a tryst with destiny, and now the time comes when we shall redeem our pledge, not wholly or in full measure, but very substantially. At the stroke of the midnight hour, when the world sleeps, India will awake to life and freedom. A moment comes, which comes but rarely in history, when we step out from the old to the new, when an age ends, and when the soul of a nation, long suppressed, finds utterance. It is fitting that at this solemn moment we take the pledge of dedication to the service of India and her people and to the still larger cause of humanity.)

ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912)

ಜನನ ಮತ್ತು ಕುಟುಂಬದ ಹಿನ್ನೆಲೆ

  • ಜವಾಹರಲಾಲ್ ನೆಹರು ಬ್ರಿಟಿಷ್ ಭಾರತದ ಅಲಹಾಬಾದಿನಲ್ಲಿ 14 ನವೆಂಬರ್ 1889 ರಂದು ಜನಿಸಿದರು. ಅವರ ತಂದೆ ಮೋತಿಲಾಲ್ ನೆಹರೂ (1861-1931), ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸೇರಿದ ಸ್ವ-ನಿರ್ಮಿತ ಶ್ರೀಮಂತ ವಕೀಲರು, 1919 ಮತ್ತು 1928 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದರು. ಅವರ ತಾಯಿ, ಸ್ವರೂಪ್ರಣಿ ಥುಸು (1868) -1938), ಲಾಹೋರಿನಲ್ಲಿ ನೆಲೆಗೊಂಡಿದ್ದ ಪ್ರಸಿದ್ಧ ಕಾಶ್ಮೀರಿ ಬ್ರಾಹ್ಮಣ ಕುಟುಂಬದಿಂದ ಬಂದವರು, ಮೋತಿಲಾಲ್ ಅವರ ಎರಡನೆಯ ಪತ್ನಿಯಾಗಿದ್ದರು, ಮೊದಲ ಪತ್ನಿ ಮೊದಲ ಮಗುವಿನ ಜನನ ಸಮಯದಲ್ಲಿ ಮರಣ ಹೊಂದಿದ್ದರು. ಜವಾಹರ್’ಲಾಲ್ ಮೂವರು ಮಕ್ಕಳಲ್ಲಿ ಹಿರಿಯರಾಗಿದ್ದರು, ಉಳಿದ ಇಬ್ಬರು ಬಾಲಕಿಯರು.ಹಿರಿಯ ಮಗಳು, ವಿಜಯ ಲಕ್ಷ್ಮಿ ನಂತರ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಮೊದಲ ಮಹಿಳಾ ಅಧ್ಯಕ್ಷರಾದರು. ಕಿರಿಯ ಸಹೋದರಿ ಕೃಷ್ಣ ಹತೀಶಿಂಗ್ ಅವರು ಪ್ರಸಿದ್ಧ ಬರಹಗಾರರಾದರು ಮತ್ತು ಆಕೆಯು ತನ್ನ ಸಹೋದರನ ಮೇಲೆ ಹಲವಾರು ಪುಸ್ತಕಗಳನ್ನು ರಚಿಸಿದರು.

ಬಾಲ್ಯ

  • ನೆಹರೂ ಅವರ ಬಾಲ್ಯವನ್ನು "ಆಶ್ರಯ ಮತ್ತು ಸ್ವಾಭಾವಿಕವಾದುದು" ಎಂದು ಬಣ್ಣಿಸಿದ್ದಾರೆ. ಶ್ರೀಮಂತ ಮನೆಗಳಲ್ಲಿ ಆನಂದ್ ಭವನ ಎಂಬ ಹೆಸರಿನ ಅರಮನೆಯ ಎಸ್ಟೇಟ್ ಸೇರಿದಂತೆ ಅವರು ಸವಲತ್ತುಗಳ ವಾತಾವರಣದಲ್ಲಿ ಬೆಳೆದರು. ಅವರ ತಂದೆ ಅವರು ಖಾಸಗಿ ಗವರ್ನೆಸ್ ಮತ್ತು ಬೋಧಕರಿಂದ ಮನೆಯಲ್ಲಿ ಶಿಕ್ಷಣ ಕೊಡಿಸಿದ್ದರು. ಅವರಲ್ಲಿ ಒಬ್ಬ ಬೋಧಕ ಫರ್ಡಿನ್ಯಾಂಡ್ ಟಿ. ಬ್ರೂಕ್ಸ್ ನ ಪ್ರಭಾವದ ಅಡಿಯಲ್ಲಿ, ಅವರು ವಿಜ್ಞಾನ ಮತ್ತು ತತ್ವಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು. ತರುವಾಯ ಅವರು ಥಿಯಾಸಾಫಿಕಲ್ ಸೊಸೈಟಿಯಲ್ಲಿ ಹದಿಮೂರನೇ ವಯಸ್ಸಿನಲ್ಲಿ ಕುಟುಂಬ ಸ್ನೇಹಿತೆ ಅನ್ನಿ ಬೆಸೆಂಟ್ ಅವರಿಂದ ಬೋಧಿಸಲ್ಪಟ್ಟರು. ಆದಾಗ್ಯೂ, ಥಿಯಾಸಾಫಿಕಲ್ ಸೊಸೈಟಿಯ ತತ್ವಶಾಸ್ತ್ರದ ಬಗೆಗಿನ ಅವರ ಆಸಕ್ತಿಯು ಶಾಶ್ವತವಾಗಿ ಉಳಿಯಲಿಲ್ಲ. ಬ್ರೂಕ್ಸ್ ತನ್ನ ಬೋಧಕನಾಗಿ ಹೊರಟು ಸ್ವಲ್ಪ ಸಮಯದ ನಂತರ ನೆಹರು ಥಿಯಾಸಾಫಿಕಲ್ ಸಮಾಜವನ್ನು ತೊರೆದನು. ಅವರು ಹೀಗೆ ಬರೆದಿದ್ದ್ದಾರೆ: "ಸುಮಾರು ಮೂರು ವರ್ಷಗಳ ಕಾಲ [ಬ್ರೂಕ್ಸ್] ನನ್ನೊಂದಿಗೆ ಇದ್ದರು ಮತ್ತು ಅನೇಕ ವಿಧಗಳಲ್ಲಿ ಅವರು ನನ್ನ ಮೆಲೆಹೆಚ್ಚು ಪ್ರಭಾವ ಬೀರಿದರು".
  • ನೆಹರೂ ಅವರ ತತ್ವಶಾಸ್ತ್ರದ ಈ ಆಸಕ್ತಿಗಳು ಅವರನ್ನು ಬೌದ್ಧ ಮತ್ತು ಹಿಂದೂ ಧರ್ಮಗ್ರಂಥಗಳ ಅಧ್ಯಯನಕ್ಕೆ ಪ್ರೇರೇಪಿಸಿದವು. ಬಾಲ ರಾಮ್ ನಂದರ ಪ್ರಕಾರ, ಈ ಗ್ರಂಥಗಳು ನೆಹರೂರವರಿಗೆ "ಭಾರತದ [ಭಾರತದ] ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೊದಲ ಪರಿಚಯ ಮಾಡಿಕೊಡುವುವಾಗಿತ್ತು. [ಅವರು] ನೆಹರೂ ಅವರ [ತನ್ನ] ಬೌದ್ಧಿಕ ಶೋಧನೆಗೆ ಪ್ರಾರಂಭಿಕ ಉದ್ವೇಗವನ್ನು ಒದಗಿಸಿತು. ಇದು ನಂತರ ಅವರು ಬರೆದ ‘ದಿ ಡಿಸ್ಕವರಿ ಆಫ್ ಇಂಡಿಯಾ" ದಲ್ಲಿ ಪರಿಪಾಕವಾಗಿ ಹೊಮ್ಮಿತು.

ಯೌವನ

  • ನೆಹರೂ ತನ್ನ ಯೌವನದಲ್ಲಿ ತೀವ್ರವಾದ ರಾಷ್ಟ್ರೀಯತಾವಾದಿಯಾಗಿದ್ದರು. ಎರಡನೇ ಬೋಯರ್ ಯುದ್ಧ ಮತ್ತು ರುಸ್ಸೋ-ಜಪಾನೀಸ್ ಯುದ್ಧವು ಅವರ ಭಾವನೆಗಳನ್ನು ತೀವ್ರಗೊಳಿಸಿತು. ಎರಡನೆಯದರ ಬಗ್ಗೆ ಅವರು ಹೀಗೆ ಬರೆದಿದ್ದಾರೆ, "ಜಪಾನೀಯರ ಗೆಲುವುಗಳು ನನ್ನ ಉತ್ಸಾಹಕ್ಕೆ ಸಂಚಲನೆ ನೀಡಿದೆ ... ರಾಷ್ಟ್ರೀಯತಾವಾದಿ ವಿಚಾರಗಳು ನನ್ನ ಮನಸ್ಸನ್ನು ತುಂಬಿವೆ ... ನಾನು ಭಾರತೀಯ ಸ್ವಾತಂತ್ರ್ಯ ಮತ್ತು ಯುರೋಪಿನ ಅಧೀನತೆಯಿಂದ ಏಷ್ಯಾ ಸ್ವಾತಂತ್ರ್ಯದ ಬಗ್ಗೆ ಯೋಚಿಸಿದೆ". ಅವರು 1905 ರಲ್ಲಿ ಇಂಗ್ಲೆಂಡಿನ ಪ್ರಮುಖ ಶಾಲೆಯಾದ ಹ್ಯಾರೋನಲ್ಲಿ ತಮ್ಮ ಸಾಂಸ್ಥಿಕ ಶಿಕ್ಷಣವನ್ನು ಪ್ರಾರಂಭಿಸಿದರು, ಅವರು ಜಿಎಂ ಟ್ರೆವೆಲಿಯನ್’ನ ಗರಿಬಾಲ್ಡಿ ಪುಸ್ತಕಗಳಿಂದ ಪ್ರಭಾವಿತರಾಗಿದ್ದರು, ಅವರು ಶೈಕ್ಷಣಿಕ ಅರ್ಹತೆಗಾಗಿ ಬಹುಮಾನ ಪಡೆದಿದ್ದರು. ಅವರು ಗರಿಬಾಲ್ಡಿಯನ್ನು ಕ್ರಾಂತಿಕಾರಕ ನಾಯಕ ಎಂಬ ದೃಷ್ಠಿಯಿಂದ ನೋಡಿದರು. ಅವರು ಹೀಗೆ ಬರೆದಿದ್ದಾರೆ: "[ಭಾರತ]ದ ಸ್ವಾತಂತ್ರ್ಯಕ್ಕಾಗಿ ನನ್ನ ಧೈರ್ಯದ ಹೋರಾಟ ಮತ್ತು ನನ್ನ ಮನದಲ್ಲಿ ಭಾರತದ ಮತ್ತು ಇಟಲಿಯ ವಿಚಿತ್ರವಾದ ಮಿಶ್ರಣವನ್ನು ಪಡೆಯಿತು" ಎಂದು. (ಭಾರತದಲ್ಲಿ ಇದೇ ರೀತಿಯ ಕಾರ್ಯಗಳ ಕನಸುಗಳು ಬಂದವು).

ಪದವಿ

  • ಅಕ್ಟೋಬರ್ 1907 ರಲ್ಲಿ ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜ್’ಗೆ ನೆಹರು ಸೇರಿದರು ಮತ್ತು 1910 ರಲ್ಲಿ ನೈಸರ್ಗಿಕ ವಿಜ್ಞಾನದಲ್ಲಿ ಗೌರವ (ಆನರ್ಸ್) ಪದವಿ ಪಡೆದರು. ಈ ಅವಧಿಯಲ್ಲಿ ಅವರು ರಾಜಕಾರಣ, ಅರ್ಥಶಾಸ್ತ್ರ, ಇತಿಹಾಸ ಮತ್ತು ಸಾಹಿತ್ಯವನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನ ಮಾಡಿದರು. ಬರ್ನಾರ್ಡ್ ಷಾ, ಎಚ್.ಜಿ.ವೆಲ್ಸ್, ಜೆ.ಎಂ. ಕೀನ್ಸ್, ಬರ್ಟ್ರಾಂಡ್ ರಸ್ಸೆಲ್, ಲೋವೆಸ್ ಡಿಕಿನ್ಸನ್ ಮತ್ತು ಮೆರೆಡಿತ್ ಟೌನ್ಸೆಂಡ್ ಅವರ ಬರಹಗಳು ಅವರ ರಾಜಕೀಯ ಮತ್ತು ಆರ್ಥಿಕ ಚಿಂತನೆಯಿಂದಾಗಿ ರೂಪಿಸಲ್ಪಟ್ಟವು.
  • 1910 ರಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ, ನೆಹರು ಲಂಡನ್ನಿಗೆ ತೆರಳಿ ಇನ್ನರ್ ಟೆಂಪಲ್–ಇನ್’ನಲ್ಲಿ ಕಾನೂನು ಅಧ್ಯಯನ ಮಾಡಿದರು [15] ಈ ಸಮಯದಲ್ಲಿ, ಅವರು ಬೀಟ್ರಿಸ್ ವೆಬ್ ಸೇರಿದಂತೆ ಫ್ಯಾಬಿಯನ್ ಸೊಸೈಟಿಯ ವಿದ್ವಾಂಸರ ಅಧ್ಯಯನವನ್ನು ಮುಂದುವರೆಸಿದರು. ಅವರನ್ನು 1912 ರಲ್ಲಿ ಬಾರ್’ಗೆ (ನ್ಯಾಯವಾದಿಯಾಗಿ) ಕರೆದರು.

ಅಡ್ವೊಕೇಟ್ ಪದವಿ ಅಭ್ಯಾಸ

  • ಆಗಸ್ಟ್ 1912 ರಲ್ಲಿ ಭಾರತಕ್ಕೆ ಹಿಂದಿರುಗಿದ ನಂತರ, ನೆಹರು ಅಲಹಾಬಾದ್ ಹೈಕೋರ್ಟಇನಲ್ಲಿ ವಕೀಲರಾಗಿ ಸೇರಿಕೊಂಡರು ಮತ್ತು ನ್ಯಾಯವಾದಿಯಾಗಿ ನೆಲೆಸಲು ಪ್ರಯತ್ನಿಸಿದರು. ಆದರೆ, ಅವರ ತಂದೆಗಿಂತ ಭಿನ್ನವಾಗಿ, ಅವರ ವೃತ್ತಿಜೀವನದಲ್ಲಿ ಅವರು ಶ್ರದ್ಧೆಯುಳ್ಳ ಆಸಕ್ತಿಯನ್ನು ಹೊಂದಿರಲಿಲ್ಲ ಮತ್ತು ಕಾನೂನಿನ ಅಭ್ಯಾಸ ಅಥವಾ ವಕೀಲರ ಕಂಪನಿಯನ್ನು ಆನಂದಿಸಲಿಲ್ಲ. ಅವರು ಹೀಗೆ ಬರೆದಿದ್ದಾರೆ: "ವಾತಾವರಣವು ಬೌದ್ಧಿಕವಾಗಿ ಉತ್ತೇಜಿಸುವಂತಿಲ್ಲ ಮತ್ತು ಜೀವನದ ಸಂಪೂರ್ಣ ಜಡತೆಯ ರ್ಥಹೀನ ಒಂದು ಭಾವ ನನ್ನ ಮೇಲೆ ಆವರಿಸಿತು." ರಾಷ್ಟ್ರೀಯತೆಯ ರಾಜಕೀಯದಲ್ಲಿ ಅವರ ಒಳಗೊಳ್ಳುವಿಕೆಯು ಅವರ ನ್ಯಾಯವಾದಿ ಉದ್ಯೋಗವನ್ನು ಮುಂಬರುವ ವರ್ಷಗಳಲ್ಲಿ ಕ್ರಮೇಣ ಬದಲಾಯಿಸಿತು.
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಜವಾಹರಲಾಲ್ ನೆಹರು ಅವರ ಹೆತ್ತವರೊಂದಿಗೆ ಚಿಕ್ಕ ಮಗುವಾಗಿದ್ದಾಗ
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಜವಾಹರಲಾಲ್ ನೆಹರು ಇಂಗ್ಲೆಂಡಿನ ಹ್ಯಾರೋ ಶಾಲೆಯಲ್ಲಿ ಕೆಡೆಟ್ ಸಮವಸ್ತ್ರದಲ್ಲಿ
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಸೇವಾ ದಳದ (ಸ್ಕೌಟ್)ಸದಸ್ಯನಾಗಿ ಜವಾಹರಲಾಲ್ ನೆಹರುಖಾಕಿ ಸಮವಸ್ತ್ರದಲ್ಲಿ
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಜವಾಹರಲಾಲ್ ನೆಹರು ಬ್ಯಾರಿಸ್ಟರ್ -ಅಲಹಾಬಾದ್ ಹೈಕೋರ್ಟಿನಲ್ಲಿ

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947)

ಬ್ರಿಟನ್ನಿನಲ್ಲಿ

  • ನೆಹರೂ ಅವರು ಬ್ರಿಟನ್ನಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಮತ್ತು ವಕೀಲರಾಗಿದ್ದಾಗ ಭಾರತೀಯ ರಾಜಕಾರಣದಲ್ಲಿ ಆಸಕ್ತಿ ಹೊಂದಿದ್ದರು.

ಭಾರತಕ್ಕೆ ಮರಳಿದ ನಂತರ ಆರಂಭಿಕ ಕೊಡುಗೆ

  • 1912 ರಲ್ಲಿ ಭಾರತಕ್ಕೆ ಹಿಂದಿರುಗಿದ ಕೆಲವೇ ತಿಂಗಳುಗಳಲ್ಲಿ, ಪಾಟ್ನಾದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಾರ್ಷಿಕ ಅಧಿವೇಶನಕ್ಕೆ ನೆಹರೂ ಹಾಜರಾಗಿದ್ದರು. ಕಾಂಗ್ರೆಸ್ 1912 ರಲ್ಲಿ ಮಧ್ಯಮವರ್ಗ ಮತ್ತು ಗಣ್ಯರ ಪಕ್ಷವಾಗಿತ್ತು ಅವರು "ಇಂಗ್ಲಿಷ್-ತಿಳಿವಳಿಕೆಯ ಉನ್ನತ-ವರ್ಗದ ವ್ಯವಹಾರ" ವನ್ನು ಅಲ್ಲಿನೋಡಿದ್ದರಿಂದ ಅವರಿಗೆ ಮುಜುಗರದ ಗೊಂದಲ ವಿಚಾರವುಂಟಾಯಿತು. ಕಾಂಗ್ರೆsಸ್ಸು ಪರಿಣಾಮಕಾರಿ ಆಗುವುದರ ಬಗ್ಗೆ ನೆಹರೂ ಅನುಮಾನಗಳನ್ನು ಹೊಂದಿದ್ದರು ಆದರೆ ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮಾ ಗಾಂಧಿಯವರು ನೇತೃತ್ವದ ಭಾರತೀಯ ನಾಗರಿಕ ಹಕ್ಕುಗಳ ಚಳವಳಿಯನ್ನು ಬೆಂಬಲಿಸಲು ಪಕ್ಷಕ್ಕೆ ಕೆಲಸ ಮಾಡಲು ಒಪ್ಪಿಕೊಂಡರು,. 1913 ರಲ್ಲಿ ಚಳುವಳಿಗೆ ಹಣವನ್ನು ಸಂಗ್ರಹಿಸಿದರು.ನಂತರ, ಅವರು ಬ್ರಿಟಿಷ್ ವಸಾಹತುಗಳಲ್ಲಿ ಭಾರತೀಯರು ಎದುರಿಸಿದ ಒಪ್ಪಂದಕ್ಕೆ ಒಳಗಾದ ಕಾರ್ಮಿಕರ ಮತ್ತು ಅಂತಹ ಇತರ ತಾರತಮ್ಯಗಳ ವಿರುದ್ಧ ಪ್ರಚಾರ ಮಾಡಿದರು.

ವಿಶ್ವ ಸಮರ I

ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ನೆಹರು 1919 ರಲ್ಲಿ ಪತ್ನಿ ಕಮಲಾ ಮತ್ತು ಮಗಳು ಇಂದಿರಾ ಅವರೊಂದಿಗೆ;
  • ವಿಶ್ವ ಸಮರ- 1 ಆರಂಭವಾದಾಗ, ಭಾರತದಲ್ಲಿ ಸಹಾನುಭೂತಿಯು ಪರ – ವಿರೋಧವಾಗಿ ವಿಭಜಿಸಲ್ಪಟ್ಟಿತು. ಬ್ರಿಟಿಷ್ ಆಡಳಿತಗಾರರು ಶತ್ರುವಿನ ಎದುರು ಅಸಾಹಯಕರಾಗಿದ್ದನ್ನು ನೋಡಿದ ವಿದ್ಯಾವಂತ ಭಾರತೀಯರು "ಹೆಚ್ಚಿನ ಮತ್ತು ಅತೀವವಾದ ವಿನೋದದ ಸಂತಸವನ್ನು ಪಡೆದರು", ಆಡಳಿತದ ಮೇಲ್ವರ್ಗದವರು ಮಿತ್ರರಾಷ್ಟ್ರಗಳೊಂದಿಗೆ ಸಹಾನುಭೂತಿಯಿಂದ ಅವರ ಪರವಾಗಿದ್ದರು. ನೆಹರು ಅವರು ಯುದ್ಧವನ್ನು ಮಿಶ್ರಿತ ಭಾವನೆಗಳೊಂದಿಗೆ ನೋಡಿದ್ದಾಗಿ ನೆಹರೂ ಒಪ್ಪಿಕೊಂಡಿದ್ದಾರೆ. "ನೆಹರೂ ಅವರ ಸಹಾನುಭೂತಿಯು ಯಾವುದೇ ದೇಶದಪರವಾಗಿದ್ದರೆ ಅದು ಫ್ರಾನ್ಸ್’ನೊಂದಿಗೆ ಮಾತ್ರಾ, ಏಕೆಂದರ ಅದು ಅವರ ಸಂಸ್ಕೃತಿಯು ಮೆಚ್ಚುಗೆಯ ಬಹಳಷ್ಟು ಅಂಸಗಳನ್ನು ಪಡೆದಿದೆ" ಎಂದು ಲೇಖಕ ಪ್ರಾಂಕ ಮೊರೆಸ್ ಹೇಳಿದ್ದಾರೆ. ಯುದ್ಧದ ಸಮಯದಲ್ಲಿ, ನೆಹರು ಸೇಂಟ್ ಜಾನ್ ಆಂಬುಲೆನ್ಸ್ಗೆ ಸ್ವಯಂ ಸೇವಕರಾಗಿಸೇರ್ಪಡೆಗೊಂಡರು ಮತ್ತು ಪ್ರಾಂತೀಯ ಕಾರ್ಯದರ್ಶಿಯಾಗಿ ಅಲಹಾಬಾದಿನಲ್ಲಿ ಸಂಘಟನೆ ಮಾಡಿದರು. ಅವರು ಭಾರತದಲ್ಲಿ ಬ್ರಿಟಿಷ್ ಸರಕಾರವು ಜಾರಿಗೊಳಿಸಿದ ಸೆನ್ಸಾರ್ಶಿಪ್ ನಿಯಮಗಳ ವಿರುದ್ಧ ಮಾತನಾಡಿದರು.
  • ಯುದ್ಧದ ವರ್ಷಗಳಲ್ಲಿ ನೆಹರೂ ಅವರ ರಾಜಕೀಯ ದೃಷ್ಟಿಕೋನವು “ತೀವ್ರಗಾಮಿ ಎಂದು ಪರಿಗಣಿಸಲ್ಪಟ್ಟ ನಾಯಕನಾಗಿ” ಹೊರಹೊಮ್ಮಿತು. ರಾಜಕೀಯ ಉಪನ್ಯಾಸದಲ್ಲಿ ಗೋಪಾಲ್ ಕೃಷ್ಣ ಗೋಖಲೆಯವರು ಪ್ರಾಮುಖ್ಯತೆ ಪಡೆದಿದ್ದರೂ ನೆಹರೂ ಅವರ ರಾಜಕೀಯ ದೃಷ್ಟಿಕೋನವು ವಿಚಾರ ಧಾರೆಯು ಗಮನಿಸಲ್ಪಟ್ಟಿತು., ಈ ಮಧ್ಯದಲ್ಲಿ ಪ್ರಾಬಲ್ಯ ಹೊಂದಿದ್ದ, ಗೋಪಾಲ್ ಕೃಷ್ಣ ಗೋಖಲೆಯವರು, ತೀವ್ರಗಾಮಿಗಳನ್ನು ಕುರಿತು "ಸ್ವಾತಂತ್ರ್ಯವನ್ನು ಯೋಚಿಸುವುದು ಹುಚ್ಚುತನ" ಎಂದು ಹೇಳಿದರು, ನೆಹರು ಮಾತನಾಡುತ್ತಾ "ಸಹಕಾರ ರಹಿತ ರಾಜಕೀಯದ ಬಗೆಗೆ ಮತ್ತು ಸರ್ಕಾರದ ಅಡಿಯಲ್ಲಿರುವ ಗೌರವಾನ್ವಿತ ಸ್ಥಾನಗಳಿಗೆ ರಾಜೀನಾಮೆ ನೀಡುವ ಅಗತ್ಯವನ್ನೂ ಮತ್ತು ಕೇವಲ ಜನರ ಪ್ರಾತಿನಿಧ್ಯದ ನಿರರ್ಥಕ ರಾಜಕೀಯವನ್ನು ಮುಂದುವರೆಸದಿರುವುದರ ವಿರುದ್ಧ ಮಾತನಡಿದರು ". ಅವರು ಬ್ರಿಟಿಷ್ ನೀತಿಗಳ ಬೆಂಬಲಕ್ಕಾಗಿ ಭಾರತೀಯ ನಾಗರಿಕ ಸೇವೆಯನ್ನು ಮುಂದುವರಿಸುವುದನ್ನು ಅಪಹಾಸ್ಯ ಮಾಡಿದರು. ಭಾರತೀಯ ನಾಗರಿಕ ಸೇವೆಯನ್ನು ಯಾರೊ ಒಬ್ಬರು ಒಮ್ಮೆ ವಿವರಿಸಿದ್ದಾರೆ- "ಅವರು ಈ ದೇಶದಲ್ಲಿ ದುರದೃಷ್ಟವಶಾತ್ ನಾವು , ಭಾರತೀಯರು ಅಲ್ಲದೆ, ನಾಗರಿಕರೂ ಅಲ್ಲದೆ ಅಥವಾ ನಿಜ ಸೇವೆ ಅಲ್ಲದೆ ಪೀಡಿತರಾಗಿದ್ದೇವೆ", ಎಂದು ಅವರು ಹೇಳಿದರು. ಮೋತಿಲಾಲ್ ನೆಹರು, ಒಬ್ಬ ಪ್ರಮುಖ ಮಧ್ಯಮಮಾರ್ಗ ಅನುಸರಿಸುವ ನಾಯಕರು, ಅವರು ಸಂವಿಧಾನಾತ್ಮಕ ಆಂದೋಲನದ ಇತಿ ಮಿತಿಗಳನ್ನು ಒಪ್ಪಿಕೊಂಡರು, ಆದರೆ ಇದಕ್ಕೆ ಯಾವುದೇ "ಪ್ರಾಯೋಗಿಕ ಪರ್ಯಾಯ" ಇಲ್ಲ ಎಂದು ತನ್ನ ಮಗನಿಗೆ ಸಲಹೆ ನೀಡಿದರು. ಆದಾಗ್ಯೂ, ರಾಷ್ಟ್ರೀಯ ಚಳುವಳಿಯ ವೇಗದಲ್ಲಿ ನೆಹರು ತೃಪ್ತಿ ಹೊಂದಲಿಲ್ಲ. ಅವರು ಭಾರತೀಯರಿಗೆ ಹೋಮ್ ರೂಲ್ ಬೇಡಿಕೆಯಿರುವ ಆಕ್ರಮಣಕಾರಿ ರಾಷ್ಟ್ರೀಯತಾವಾದಿ ಮುಖಂಡರ ಜೊತೆ ತೊಡಗಿಸಿಕೊಂಡರು.
  • 1915 ರಲ್ಲಿ ಗೋಖಲೆ ಮೃತಪಟ್ಟ ನಂತರ ಕಾಂಗ್ರೆಸ್ ರಾಜಕೀಯದ ಮಧ್ಯಮ-ಮಾರ್ಗದವರ ಪ್ರಭಾವವು ಕ್ಷೀಣಿಸಲು ಆರಂಭಿಸಿತು. ಅನ್ನಿ ಬೆಸೆಂಟ್ ಮತ್ತು ಬಾಲ ಗಂಗಾಧರ ತಿಲಕ್ ಮುಂತಾದ ಮಧ್ಯಮಮಾರ್ಗದ ಮುಖಂಡರು ಹೋಮ್ ರೂಲ್ ಗಾಗಿ (ಸ್ವಯಂ ಆಡಳಿತ) ರಾಷ್ಟ್ರೀಯ ಚಳವಳಿಗೆ ಕರೆ ಮಾಡಲು ಈ ಅವಕಾಶವನ್ನು ಉಪಯೋಗಿಸಿದರು. ಆದರೆ, 1915 ರಲ್ಲಿ, ಪ್ರಸ್ತಾವನೆಯನ್ನು ತಿರಸ್ಕರಿಸಲಾಯಿತು ಏಕೆಂದರೆ ಮಧ್ಯಮ ಮಾರ್ಗದವರು ಇಂತಹ ಆಮೂಲಾಗ್ರ ಬದಲಾವಣೆಯ ಕ್ರಮಕ್ಕೆ ಉತ್ಸಾಹ ತೊರಲಿಲ್ಲ.. ಆದಾಗ್ಯೂ, ಬೆಸೆಂಟ್ 1916 ರಲ್ಲಿ ಹೋಮ್ ರೂಲ್ ಅನ್ನು ಸಮರ್ಥಿಸಲು ಲೀಗ್ ಅನ್ನು ರಚಿಸಿದರು; ಮತ್ತು ತಿಲಕ್ ಅವರು ಜೈಲಿನಿಂದ ಹೊರಬಂದಾಗ, ಏಪ್ರಿಲ್ 1916 ರಲ್ಲಿ ತಮ್ಮ ಸ್ವಂತ ಲೀಗ್ ಅನ್ನು ರಚಿಸಿದರು. ನೆಹರೂ ಎರಡೂ ಲೀಗ್’ ಗಳಲ್ಲಿ ಸೇರಿಕೊಂಡರು. ಆದರೆ ವಿಶೇಷವಾಗಿ ಮೊದಲು ಆರಂಭವಾದ ಬೆಸೆಂಟರ ಪರವಾಗಿ ಕೆಲಸ ಮಾಡಿದರು. ನೆಹರು ಬೆಸೆಂಟ್ ಬಗ್ಗೆ - " ಅವರು [ಬೆಸೆಂಟ್] ನನ್ನ ಬಾಲ್ಯದಲ್ಲಿ ನನ್ನ ಮೇಲೆ ತುಂಬಾ ಶಕ್ತಿಯುತವಾದ ಪ್ರಭಾವವನ್ನು ಹೊಂದಿದ್ದರು . ನಂತರ ನಾನು ರಾಜಕೀಯ ಜೀವನಕ್ಕೆ ಪ್ರವೇಶಿಸಿದಾಗ ಅವರ ಪ್ರಭಾವ ಮುಂದುವರೆದಿದೆ" ಎಂದು ಅವರು ನಂತರ ವಿವರಿಸಿದರು. ಭಾರತೀಯ ರಾಜಕೀಯದಲ್ಲಿ ತೀವ್ರಗಾಮಿ ಬದಲಾವಣೆಯನ್ನು ತಂದ ಮತ್ತೊಂದು ಬೆಳವಣಿಗೆಯು, ಡಿಸೆಂಬರ್ 1916 ರಲ್ಲಿ ಕಾಂಗ್ರೆಸ್’ನ ವಾರ್ಷಿಕ ಸಭೆಯಲ್ಲಿ ಲಖನೌ ಒಪ್ಪಂದದೊಂದಿಗೆ ಹಿಂದೂ-ಮುಸ್ಲಿಂ ಏಕತೆಗೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಅಲಹಾಬಾದಿನಲ್ಲಿ ಈ ಒಪ್ಪಂದವನ್ನು ಸೂಚಿಸಲಾಯಿತು. ಇದು ಆನಂದ್ ಭವನದಲ್ಲಿ ನೆಹರು ನಿವಾಸದಲ್ಲಿ ನಡೆಯಿತು. ಇಬ್ಬರು ಭಾರತೀಯ ಸಮುದಾಯಗಳ ನಡುವಿನ ಹೊಂದಾಣಿಕೆಯನ್ನು ನೆಹರೂ ಸ್ವಾಗತಿಸಿದರು ಮತ್ತು ಪ್ರೋತ್ಸಾಹಿಸಿದರು.

ಹೋಂರೂಲ್ ಚಳುವಳಿ

ಹೋಂರೂಲ್ ಚಳುವಳಿ (ಸ್ವಯಮಾಡಳಿತ ಚಳುವಳಿ)

  • ಹಲವಾರು ರಾಷ್ಟ್ರೀಯತಾವಾದಿ ಮುಖಂಡರು 1916 ರಲ್ಲಿ ಅನ್ನಿ ಬೆಸೆಂಟ್ ನಾಯಕತ್ವದಡಿಯಲ್ಲಿ ಸ್ವಯಂ-ಆಡಳಿತಕ್ಕಾಗಿ ಬೇಡಿಕೆಯನ್ನು ಇಟ್ಟರು. ಅದು ಆಸ್ಟ್ರೇಲಿಯಾ, ಕೆನಡಾ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ನ್ಯೂಫೌಂಡ್ಲ್ಯಾಂಡ್’ಗಳಂತೆ ಬ್ರಿಟಿಷ್ ಸಾಮ್ರಾಜ್ಯದೊಳಗೆ ಒಂದು ಪರಮಾಧಿಕಾರದ ಸ್ಥಿತಿಯನ್ನು ಪಡೆದುಕೊಳ್ಳಲು ಒಟ್ಟಿಗೆ ಸೇರಿದರು. ನೆಹರು ಈ ಚಳವಳಿಯಲ್ಲಿ ಸೇರಿಕೊಂಡರು ಮತ್ತು ಅದರಲ್ಲಿ ಬೆಸೆಂಟ್ ಅವರ ಹೋಮ್ ರೂಲ್ ಲೀಗ್‍ಗೆ ಕಾರ್ಯದರ್ಶಿಯಾಗುವ ಮಟ್ಟಕ್ಕೆ ಏರಿದರು. ಜೂನ್ 1917 ರಲ್ಲಿ ಬೆಸೆಂಟ್ ಅವರನ್ನು ಬಂಧಿಸಿ ಬ್ರಿಟಿಷ್ ಸರ್ಕಾರ ಗೃಹಬಂಧನದಲ್ಲಿ ಇರಿಸಿತು. ಕಾಂಗ್ರೆಸ್ ಮತ್ತು ಇತರ ಭಾರತೀಯ ಸಂಘಟನೆಗಳು ಅವರನ್ನು (ಬೆಸೆಂಟ್) ಬಂಧಮುಕ್ತ ಮಾಡದಿದ್ದಲ್ಲಿ ಪ್ರತಿಭಟನೆಗಳನ್ನು ಪ್ರಾರಂಭಿಸಲು ಬೆದರಿಕೆ ಹಾಕಿದರು. ತರುವಾಯ ತೀವ್ರವಾದ ಪ್ರತಿಭಟನೆ ಮತ್ತು ಒತ್ತಾಯದ ಕಾರಣ ಬ್ರಿಟಿಷ್ ಸರ್ಕಾರವು ಬೆಸೆಂಟ್’ ರನ್ನು ಬಿಡುಗಡೆ ಮಾಡಿತು ಮತ್ತು ಅದು ಸ್ವಲ್ಪ ಸಮಯದ ನಂತರ ಅವರಿಗೆ ಗಣನೀಯ ರಿಯಾಯಿತಿಗಳನ್ನು ನೀಡಬೇಕಾಯಿತು.

ಅಸಹಕಾರ ಚಳುವಳಿ

  • 1920 ರಲ್ಲಿ ಅಸಹಕಾರ ಚಳವಳಿಯ ಆರಂಭದಲ್ಲಿ ನೆಹರು ಅವರು ಮೊದಲ ಬಾರಿಗೆ ರಾಷ್ಟ್ರೀಯ ರಾಜಕೀಯ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ತೊಡಗಿಗೊಂಡರು. ಯುನೈಟೆಡ್ ಪ್ರಾಂತ್ಯಗಳಲ್ಲಿ (ಈಗ ಉತ್ತರ ಪ್ರದೇಶ) ಚಳವಳಿಯನ್ನು ಅವರು ಮುನ್ನಡೆಸಿದರು. 1921 ರಲ್ಲಿ ನೆಹರು ಅವರನ್ನು ಸರ್ಕಾರಿ-ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಲಾಯಿತು ಮತ್ತು ಕೆಲವು ತಿಂಗಳುಗಳ ನಂತರ ಬಿಡುಗಡೆ ಮಾಡಲಾಯಿತು. ಚೌರಿ ಚೌರಾ ಘಟನೆಯ ನಂತರ ಅಸಹಕಾರ ಚಳವಳಿಯನ್ನು ನಿಲ್ಲಿಸಿದ ನಂತರ, ಕಾಂಗ್ರೆಸ್‍ಸಿನೊಳಗೆ ರೂಪುಗೊಂಡ ಭಿನ್ನಾಭಿಪ್ರಾಯ-ಬಿರುಕುಗಳಲ್ಲಿ, ನೆಹರು ಗಾಂಧಿಗೆ ನಿಷ್ಠಾವಂತರಾಗಿದ್ದರು. ಅವರ ತಂದೆ ಮೋತಿಲಾಲ್ ನೆಹರೂ ಮತ್ತು ಸಿ.ಆರ್.ದಾಸರಿಂದ ರೂಪುಗೊಂಡ ಸ್ವರಾಜ್ ಪಕ್ಷದೊಂದಿಗೆ ನೆಹರು ಸೇರಲಿಲ್ಲ. [29] [30]

ಭಾರತೀಯ ಸ್ವಾತಂತ್ರ್ಯಕ್ಕಾಗಿ ಅಂತರರಾಷ್ಟ್ರೀಕರಣದ ಹೋರಾಟ

ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ನೆಹರು ಮತ್ತು ಅವರ ಮಗಳು ಇಂದಿರಾ ಬ್ರಿಟನ್ನಿನ ಲ್ಲಿ, - 1930 ರ ದಶಕ
  • ಭಾರತದ ಸ್ವಾತಂತ್ರ್ಯ ಹೋರಾಟದ ಅಂತರರಾಷ್ಟ್ರೀಯ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುವಲ್ಲಿ ನೆಹರು ಪ್ರಮುಖ ಪಾತ್ರ ವಹಿಸಿದರು. ಅವರು ಭಾರತಕ್ಕೆ ವಿದೇಶಿ ಮೈತ್ರಿಕೂಟಗಳನ್ನು ಕೋರಿದರು ಮತ್ತು ಪ್ರಪಂಚದಾದ್ಯಂತ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ನೆಡೆದ ಚಳುವಳಿಗಳೊಂದಿಗೆ ಸಂಪರ್ಕ ಕಲ್ಪಿಸಿದರು. 1927 ರಲ್ಲಿ ಬೆಲ್ಜಿಯಂನಲ್ಲಿ ಬ್ರಸೆಲ್ಸ್’ನಲ್ಲಿ ರಾಷ್ಟ್ರೀಯತೆಯನ್ನು ದಬ್ಬಾಳಿಕೆಗೆಒಳಗಾದ ಕಾಂಗ್ರೆಸ್’(ಸಮ್ಮೇಳನಕ್ಕೆ) ಗೆ ಹಾಜರಾಗಲು ಭಾರತದ ಕಾಂಗ್ರೆಸ್’ಗೆ ಆಹ್ವಾನ ನೀಡಲಾಯಿತು. ಸಾಮ್ರಾಜ್ಯಶಾಹಿ ವಿರುದ್ಧ ಸಾಮಾನ್ಯ ಹೋರಾಟವನ್ನು ಸಂಘಟಿಸಲು ಮತ್ತು ಯೋಜಿಸಲು ಸಭೆಯನ್ನು ಕರೆಯಲಾಯಿತು. ನೆಹರು ಭಾರತವನ್ನು ಪ್ರತಿನಿಧಿಸಿದರು ಮತ್ತು ಈ ಸಭೆಯಲ್ಲಿ ಜನಿಸಿದ ಇಂಪೀರಿಯಲ್’- ವಾದದ ವಿರುದ್ಧ ಲೀಗ್’ನ ಕಾರ್ಯನಿರ್ವಾಹಕ ಕೌನ್ಸಿಲ್ಲಿಗೆ ಆಯ್ಕೆಯಾದರು.
  • ಹೆಚ್ಚೂ ಕಮ್ಮಿ, ಜಗತ್ತಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತ, ಸ್ವಾತಂತ್ರ್ಯಕ್ಕಾಗಿ ಸಾಮ್ರಾಜ್ಯದ ವಿವಿಧ ವಸಾಹತುಗಳು ಮತ್ತು ಅವುಗಳ ಪ್ರಾಬಲ್ಯಗಳ ವಿರುದ್ಧ ಹೋರಾಟ, ಬಹು-ರಾಷ್ಟ್ರೀಯ ಪ್ರಯತ್ನ, ಇವುಗಳನ್ನು ನೆಹರು ಕಂಡರು; ಆದಾಗ್ಯೂ, ಈ ವಿಷಯದ ಬಗ್ಗೆ ಅವರ ಕೆಲವು ಹೇಳಿಕೆಗಳು, ಹಿಟ್ಲರನ ಉದಯ ಮತ್ತು ಅವರ ಸಮರ್ಥನೆಯ ಉದ್ದೇಶಗಳೊಂದಿಗೆ ಜಟಿಲತೆಯಿಂದ ಕೂಡಿದೆ ಎಂದು ವ್ಯಾಖ್ಯಾನಿಸಲ್ಪಟ್ಟಿವೆ. ಈ ಆರೋಪಗಳ ಮುಖಾಂತರ ನೆಹರು, " ನಾವು ಪ್ಯಾಲೆಸ್ಟೈನಿನಲ್ಲಿನ ಅರಬ್ಬರ ರಾಷ್ಟ್ರೀಯ ಚಳವಳಿಯ ಬಗ್ಗೆ ಸಹಾನುಭೂತಿ ಹೊಂದಿದ್ದೇವೆ ಏಕೆಂದರೆ ಅದು ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ನಿರ್ದೇಶಿಸಲ್ಪಟ್ಟಿತ್ತು. ಪ್ಯಾಲೆಸ್ಟೈನ್ ಬಗೆಗೆ ನಮ್ಮ ಸಹಾನುಭೂತಿ ಹಿಟ್ಲರನ ಹಿತಾಸಕ್ತಿಗಳಿಗೆ ಸರಿಹೊಂದುವ ಸಂಗತಿಯಿಂದ ನಮ್ಮ ಆ ಚಳುವಳಿಯ ಬಗ್ಗೆ ಸಹಾನುಭೂತಿಯನ್ನು ದುರ್ಬಲಗೊಳಿಸಲಾಗದು".

1930 ರ ಮಧ್ಯಕಾಲ

  • 1930 ರ ದಶಕದ ಮಧ್ಯಭಾಗದಲ್ಲಿ, ನೆಹರು [[ಯುರೋಪ್‍ನಲ್ಲಿನ ಬೆಳವಣಿಗೆಗಳ ಬಗ್ಗೆ ಬಹಳ ಕಾಳಜಿಯನ್ನು ಹೊಂದಿದ್ದರು, ಅದು ಮತ್ತೊಂದು ವಿಶ್ವ ಯುದ್ಧದ ಕಡೆಗೆ ತಿರುಗುತ್ತಿತ್ತು. ಅವರು 1936 ರ ಆರಂಭದಲ್ಲಿ ಯೂರೋಪಿನಲ್ಲಿದ್ದರು. ಸ್ವಿಜರ್ಲ್ಯಾಂಡ್ನಲ್ಲಿನ ಸ್ಯಾನಿಟೇರಿಯಮ್ನಲ್ಲಿ ಅವರು ಕೆಲವೇ ದಿನಗಳಲ್ಲಿ ಸಾಯುವ ಸ್ಥಿತಿಯಲ್ಲದ್ದ, ಅವರ ಅನಾರೋಗ್ಯದ ಪತ್ನಿಯನ್ನು ಭೇಟಿ ಮಾಡಿದರು. ಈ ಸಮಯದಲ್ಲೂ ಸಹ, ಯುದ್ಧದ ಸಂದರ್ಭದಲ್ಲಿ, ಭಾರತವು ಪ್ರಜಾಪ್ರಭುತ್ವಗಳ ಜೊತೆಯಲ್ಲಿರುವುದಾಗಿಯೂ, ಆದರೂ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್’ನ ಜೊತೆ ಸ್ವತಂತ್ರ ರಾಷ್ಟ್ರವಾಗಿ ಭಾರತವು ಮಾತ್ರ ಹೋರಾಟ ನಡೆಸಬಹುದೆಂದು ಅವರು ಒತ್ತಾಯಿಸಿದರು

ಸುಭಾಷ್ ಚಂದ್ರ ಬೋಸ್ ಅವರಿಂದ ದೂರವಾದುದು

  • ನೆಹರೂ ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಜಗತ್ತಿನಾದ್ಯಂತ ಸ್ವತಂತ್ರ ರಾಷ್ಟ್ರಗಳ ಸರಕಾರಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿದರು. ಆದಾಗ್ಯೂ, 1930 ರ ದಶಕದ ಅಂತ್ಯದಲ್ಲಿ ಪರಸ್ಪರ ದೂರವಾದರು., ಬೋಸರು ಬ್ರಿಟಿಷರನ್ನು ಭಾರತದ ಹೊರಗೆ ಹಾಕುವಲ್ಲಿ ಫ್ಯಾಸಿಸ್ಟರ (ಜರ್ಮನಿಯ ಹಿಟ್ಲರನ ಏಕ ಪಕ್ಷೀಯ ಆಡಳಿತ) ಸಹಾಯ ಪಡೆಯಲು ಒಪ್ಪಿಕೊಂಡಾಗ ನೆಹರೂ ಸುಭಾಷ್’ರಿಂದ ದೂರವಾದರು. ಅದೇ ಸಮಯದಲ್ಲಿ, ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ಫ್ರಾನ್ಸಿಸ್ಕೊ ಫ್ರಾಂಕೊ ಅವರ ಪಡೆಗಳ ವಿರುದ್ಧ ಹೋರಾಡಿದ ರಿಪಬ್ಲಿಕನ್ನರನ್ನು ನೆಹರೂ ಬೆಂಬಲಿಸಿದರು. ನೆಹರು ಅವರ ಸಹಾಯಕ ವಿ. ಕೆ. ಕೃಷ್ಣ ಮೆನನ್ ಅವರೊಂದಿಗೆ ಸ್ಪೇನಿಗೆ ಭೇಟಿ ನೀಡಿದರು ಮತ್ತು ರಿಪಬ್ಲಿಕನ್ ಪಕ್ಷದ ಬೆಂಬಲವನ್ನು ಘೋಷಿಸಿದರು., ಮುಸೊಲಿನಿ ನೆಹರೂ ಅವರನ್ನು ಭೇಟಿಯಾಗಲು ತನ್ನ ಆಸೆಯನ್ನು ವ್ಯಕ್ತಪಡಿಸಿದನು; .ಆದರೆ ನಂತರ ಇಟಲಿಯ ಸರ್ವಾಧಿಕಾರಿಯಾದ ಬೆನಿಟೊ ಅವರನ್ನು ಭೇಟಿಯಾಗಲು ನೆಹರೂ ನಿರಾಕರಿಸಿದರು.

ರಿಪಬ್ಲಿಕನ್ ಸಿದ್ಧಾಂತ

  • ಭಾರತೀಯ ರಾಜಕುಮಾರರು ಆಳಿದ ರಾಜ್ಯಗಳಲ್ಲಿನ ಜನರ ನೋವುಗಳನ್ನು ಅರಿತುಕೊಳ್ಳುವ ಮೊದಲ ರಾಷ್ಟ್ರೀಯ ನಾಯಕರಲ್ಲಿ ನೆಹರು ಒಬ್ಬರಾಗಿದ್ದರು. ಭ್ರಷ್ಟ ಮಹಾಮಂತ್ರಿಗಳ ವಿರುದ್ಧ ಸಿಖ್ಖರು ನಡೆಸುತ್ತಿದ್ದ ಹೋರಾಟವನ್ನು ನೋಡಲು ಅವರು ಅಲ್ಲಿಗೆ ಹೋದಾಗ, ನಭಾ ಎಂಬ ರಾಜನ ಆಜ್ಞೆಯಿಂದ ಅವರು ಜೈಲು ಶಿಕ್ಷೆ ಅನುಭವಿಸಿದರು. ರಾಷ್ಟ್ರೀಯತಾವಾದಿ ಚಳವಳಿಯು ನೇರವಾಗಿ ಬ್ರಿಟಿಷ್ ಆಳ್ವಿಕೆಯ ಅಡಿಯಲ್ಲಿರುಚ ಪ್ರದೇಶಗಳಿಗೆ ಸೀಮಿತವಾಗಿತ್ತು. ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯತಾವಾದಿ ಚಳವಳಿಯ ಭಾಗವಾಗಿ ರಾಜರ ರಾಜ್ಯಗಳಲ್ಲಿ ಜನರು ಹೋರಾಟ ಮಾಡಲು ಅವರು ಸಹಾಯ ಮಾಡಿದರು. 1927 ರಲ್ಲಿ “ಆಲ್ ಇಂಡಿಯಾ ಸ್ಟೇಟ್ಸ್ ಪೀಪಲ್ಸ್ ಕಾನ್ಫರೆನ್ಸ್” (ರಾಜರ ಆಳ್ವಿಕೆಯ ಜನರ ಸಮ್ಮೇಳನ) ರಚನೆಯಾಯಿತು. ಹಲವು ವರ್ಷಗಳ ಕಾಲ ರಾಜ ಸಂಸ್ಥಾನದ ಜನರಿಗೆ ನೆರವಾಗಿದ್ದ ನೆಹರು ಅವರು 1935 ರಲ್ಲಿ ನಡೆದ ಸಮಾವೇಶದ ಅಧ್ಯಕ್ಷರಾದರು.
  • ಅವರು ರಾಜಕೀಯ ಶ್ರೇಣಿಯಕ್ರಮದಿಂದ ಸದಸ್ಯತ್ವ ಪಡೆಯಲು ಅದರ ಶ್ರೇಣಿಯನ್ನು ತೆರೆದರು. ಭಾರತದ ರಾಜಕೀಯ ಏಕೀಕರಣದ ಸಂದರ್ಭದಲ್ಲಿ ಈ ಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ, ಭಾರತೀಯ ನಾಯಕರಿಗೆ ಸಹಾಯ ಮಾಡುತ್ತದೆ ಎಂಬ ಉದ್ದೇಶವಿತ್ತು.
  • ಭಾರತದ ವರ್ಣರಂಜಿತ ರಾಜಕೀಯ ನಾಯಕರಾದ ವಲ್ಲಭಭಾಯ್ ಪಟೇಲ್ ಮತ್ತು ವಿ. ಪಿ. ಮೆನನ್’ರಿಗೆ, "ರಾಜರ ಆಳ್ವಿಕೆಯ ಜನರ ಸಮ್ಮೇ ಳನ"ದ ಅದ್ಯಕ್ಷರಾದ ನೆಹರು ಅವರು ರಾಜಪ್ರಭುತ್ವ ರಾಜ್ಯಗಳನ್ನು ಭಾರತದೊಳಗೆ ಸಂಯೋಜಿಸುವ ಕಾರ್ಯವನ್ನು ನಿಯೋಜಿಸಿದರು (1935). ನೂರಾರು ರಾಜರುಗಳೊಂದಿಗೆ ಮಾತುಕತೆ ನಡೆಸಿ ಭಾರತದ ರಾಜಕೀಯ ಏಕೀಕರಣವನ್ನು ಸಾಧಿಸಲು ಇವರು ಪ್ರಮುಖ ಪಾತ್ರವಹಿಸಬಲ್ಲರು ಎಂದು ಅವರು ನಂಬಿದ್ದರು. (ವಿ.ಪಿ.ಮೆನನ್, ನಂತರ ಪಟೇಲರ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಬ್ರಿಟಿಷರಿಂದ ಭಾರತ ವರ್ಗಾವಣೆಯ ಮತ್ತು ವಿಭಜನೆಯ ನೀತಿನಿಯಮಗಳ ಪತ್ರವನ್ನು ಸಿದ್ಧಪಡಿಸಿದರು.)

ರಾಜರ ಆಡಳಿತದ ರಾಜ್ಯಗಳ ಸಮಸ್ಯೆಗಳು

  • 1946 ರ ಜುಲೈನಲ್ಲಿ ಸ್ವತಂತ್ರ ಭಾರತದ ಸೈನ್ಯದ ವಿರುದ್ಧ ನಿಲ್ಲಬಲ್ಲ ಯಾವುದೇ ರಾಜಪ್ರಭುತ್ವದ ರಾಜ್ಯವು ತನ್ನ (ಬಲಿಷ್ಠ) ಸೈನ್ಯವನ್ನು ಹೊಂದಿಲ್ಲವೆಂದು ನೆಹರು ಗಮನಸೆಳೆದಿದ್ದಾರೆ. ಸ್ವತಂತ್ರ ಭಾರತವು “ರಾಜರ ದೈವಿಕ ಹಕ್ಕು” ನೀತಿನ್ನು ಒಪ್ಪುವುದಿಲ್ಲವೆಂದು 1947 ರ ಜನವರಿಯಲ್ಲಿ ಅವರು ಹೇಳಿದರು, ಮತ್ತು ಮೇ 1947 ರಲ್ಲಿ, “ಸಂವಿಧಾನ ಸಭೆಯೊಂದನ್ನು ಸೇರಲು ನಿರಾಕರಿಸಿದ ಯಾವುದೇ ರಾಜಪ್ರಭುತ್ವದ ರಾಜ್ಯವನ್ನು ಶತ್ರು ರಾಜ್ಯವೆಂದು ಪರಿಗಣಿಸಲಾಗುತ್ತದೆ”, ಎಂದರು. ಭಾರತದ ಸಂವಿಧಾನದ ಕರಡು ತಯಾರಿಸುವಾಗ, ಆ ಸಮಯದಲ್ಲಿನ ಅನೇಕ ಭಾರತೀಯ ಮುಖಂಡರು (ನೆಹರೂ ಹೊರತುಪಡಿಸಿ) ಪ್ರತಿ ರಾಜ ಸಂಸ್ಥಾನವು ಅಥವಾ ಒಡಂಬಡಿಕೆಯ ರಾಜ್ಯವು “ಫೆಡರಲ್ ರಾಜ್ಯವಾಗಿ” ಸ್ವತಂತ್ರವಾಗಿರಲು ಅನುವು ಮಾಡಿಕೊಡಬೇಕು ಎಂಬ ನೀತಿಯ ಪರವಾಗಿದ್ದರು, ಇದು ಮೂಲತಃ ಭಾರತ ಸರ್ಕಾರ ಕಾಯಿದೆ (1935) ರ ಅನುಸಾರವಾಗಿತ್ತು. ಆದರೆ ಸಂವಿಧಾನದ ಕರಡು ರಚನೆಯು ಪ್ರಗತಿಯಾದಾಗ ಮತ್ತು ಗಣರಾಜ್ಯ ರಚಿಸುವ ಕಲ್ಪನೆಯು ನಿರ್ದಿಷ್ಠ ಆಕಾರವನ್ನು ತೆಗೆದುಕೊಂಡಿತು ಅದು ನೆಹರು ಪ್ರಯತ್ನದ ಕಾರಣ, ಎಲ್ಲಾ ರಾಜರ ರಾಜ್ಯಗಳು / ಒಡಂಬಡಿಕೆಯ ರಾಜ್ಯಗಳು ಭಾರತೀಯ ಗಣರಾಜ್ಯದೊಂದಿಗೆ ವಿಲೀನಗೊಳ್ಳುತ್ತವೆ ಎಂದು ನಿರ್ಧರಿಸಲಾಯಿತು. ನೆಹರೂ ಅವರ ಪುತ್ರಿ ಇಂದಿರಾ ಗಾಂಧಿಯವರು 1969 ರಲ್ಲಿ ರಾಷ್ಟ್ರಪತಿ ಆದೇಶ ಹೊರಡಿಸಿ ಎಲ್ಲಾ ರಾಜ್ಯದ ರಾಜರ ರಾಜತ್ವದ ಅಧಿಕಾರವನ್ನು ರದ್ದುಗೊಳಿಸಿದರು. ಆದರೆ ಇದು ಭಾರತದ ಸುಪ್ರೀಂ ಕೋರ್ಟಿನಿಂದ ತಿರಸ್ಕರಿಸಲ್ಪಟ್ಟಿತು. ಅಂತಿಮವಾಗಿ, ಸಂವಿಧಾನದ 26 ನೇ ತಿದ್ದುಪಡಿಯಿಂದ ಸರ್ಕಾರವು ಭಾರತದ ರಾಜಪ್ರಭುತ್ವದ ರಾಜ್ಯಗಳನ್ನು ರದ್ದುಪಡಿಸುವಲ್ಲಿ ಯಶಸ್ವಿಯಾಯಿತು. ನೆಹರು ಪ್ರಾರಂಭಿಸಿದ, ಈ ಸಂಸ್ಥಾನಗಳನ್ನು ಭಾರತದ ಪ್ರಜಾಪ್ರಭುತ್ದ ಆಡಳಿತದೊಳಗೆ ತರುವ ಪ್ರಕ್ರಿಯೆಯು' 1971 ರ ಅಂತ್ಯದ ವೇಳೆಗೆ ಅವರ ಮಗಳಿಂದ ಪೂರ್ಣಗೊಂಡಿತು.

1929ರ ಸ್ವಾತಂತ್ರ್ಯದ ಘೋಷಣೆ

  • ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಎಲ್ಲ ಸಂಬಂಧಗಳಿಂದ ಸಂಪೂರ್ಣ ಮತ್ತು ಸ್ಪಷ್ಟವಾದ ವಿದಾಯವನ್ನು (ಬಿಡುಗಡೆ) ಹೊಂದಲು ಕಾಂಗ್ರೆಸ್ ಪಕ್ಷವು ನಿರ್ಧರಿಸಬೇಕು ಎಂದು ಒತ್ತಾಯಿಸಿದ ಮೊದಲ ನಾಯಕರಲ್ಲಿ ನೆಹರು ಕೂಡ ಒಬ್ಬರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಅವರ ನಿರ್ಣಯವನ್ನು 1927 ರಲ್ಲಿ ಕಾಂಗ್ರೆಸ್’ನ ಮದ್ರಾಸ್ ಅಧಿವೇಶನದಲ್ಲಿ ಗಾಂಧೀಜಿಯವರ ಟೀಕೆಯ ಹೊರತಾಗಿಯೂ ಅಂಗೀಕರಿಸಲಾಯಿತು (ಪೂರ್ಣ ಸ್ವರಾಜ್ಯ ಬೇಡಿಕೆಯ ಘೋಷಣೆಗೆ ಇನ್ನೂ ಕಾಲ ಪಕ್ವವಾಗಿಲ್ಲ ಎಂಬುದು ಗಾಂದೀಜಿಯವರ ಅಭಿಪ್ರಾಯವಾಗಿತ್ತು). ಆ ಸಮಯದಲ್ಲಿ ನೆಹರು ಅವರು ಪೂರ್ಣ ಸ್ವಾತಂತ್ರದ ಬಗ್ಗೆ ಒತ್ತಡ ಹಾಕಲು ಕಾಂಗ್ರೆಸ್ಸಿನ ಒಳಗಿನ ಒಂದು ಒತ್ತಡದ ಗುಂಪನ್ನು ರಚಿಸಿದರು. ಅದು “ಸ್ವಾತಂತ್ರ್ಯಕ್ಕಾಗಿ ಇಂಡಿಯಾ ಲೀಗ್” ಎಂಬ ಎಂಬ ಕೂಟ. [47] [48]
  • 1928 ರಲ್ಲಿ, ಗಾಂಧೀಜಿಯವರು ನೆಹರು ಅವರ ಬೇಡಿಕೆಗಳಿಗೆ ಒಪ್ಪಿಕೊಂಡರು ಮತ್ತು ಬ್ರಿಟಿಷರಿಗೆ ಎರಡು ವರ್ಷಗಳಲ್ಲಿ ಭಾರತಕ್ಕೆ ಡೊಮಿನಿಯನ್ ಅಧಿಕಾರ ಸ್ಥಾನಮಾನ ನೀಡಲು ಕರೆಕೊಡುವ ನಿರ್ಣಯವನ್ನು ಪ್ರಸ್ತಾವಿಸಿದರು. ಗಡುವು ಪೂರೈಸಲು ಬ್ರಿಟಿಷರು ವಿಫಲವಾದರೆ, ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಕಾಂಗ್ರೆಸ್ ಎಲ್ಲಾ ಭಾರತೀಯರಿಗೆ ಕರೆನೀಡುತ್ತದೆ ಎಂಬುದಕ್ಕೆ ನೆಹರು ಒಪ್ಪ್ಪಿದರು. ಆದರೆ ಬ್ರಿಟಿಷರಿಗೆ ನೀಡಿದ ಎರಡು ವರುಷದ ಸಮಯವನ್ನು ವಿರೋಧಿಸಿದ ನಾಯಕರಲ್ಲಿ ನೆಹರೂ ಒಬ್ಬರಾಗಿದ್ದರು - ಅವರು ಬ್ರಿಟಿಷರಿಂದ ತಕ್ಷಣದ ಕ್ರಮಗಳನ್ನು ಒತ್ತಾಯಿಸಲು ಗಾಂಧಜಿಯನ್ನು ಒತ್ತಾಯಿಸಿದರು. ಗಾಂಧಿಯವರು ಎರಡು ವರ್ಷಗಳಿಂದ ಒಂದು ಅವಧಿಗೆ ಸಮಯವನ್ನು ಕಡಿಮೆ ಮಾಡಿ ಮತ್ತಷ್ಟು ರಾಜಿ ಮಾಡಿಕೊಂಡರು. ಹೊಸ ನಿರ್ಣಯಕ್ಕೆ ಮತ ಚಲಾಯಿಸಲು ನೆಹರು ಒಪ್ಪಿಕೊಂಡರು.
  • ಡೊಮಿನಿಯನ್ ಸ್ಥಾನಮಾನದ ಬೇಡಿಕೆಗಳನ್ನು ಬ್ರಿಟಿಷರು 1929 ರಲ್ಲಿ ತಿರಸ್ಕರಿಸಿದರು. 1929 ರ ಡಿಸೆಂಬರ್ 29 ರಂದು ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯನ್ನು ನೆಹರು ವಹಿಸಿಕೊಂಡರು ಮತ್ತು ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಕರೆಕೊಡುವ ಯಶಸ್ವಿ ನಿರ್ಣಯವನ್ನು ಮಂಡಿಸಿದರು.

ಸ್ವಾತಂತ್ರ್ಯದ ಘೋಷಣೆಯ ಕರಡು ಪ್ರತಿ (ಡ್ರಾಫ್ಟ್)

  • ಭಾರತದ ಸ್ವಾತಂತ್ರ್ಯದ ಘೋಷಣೆಯ ಕರಡನ್ನು ನೆಹರೂ ಮಾಡಿದರು. ಅದು ಹೀಗಿತ್ತು(ಕರಡು:ತಿದ್ದುಪಡಿ ಮಾಡದ ಮೂಲ ಪ್ರತಿ):
      ಸ್ವಾತಂತ್ರ್ಯವನ್ನು ಹೊಂದಲು ಮತ್ತು ಅವರ ಶ್ರಮದ ಫಲವನ್ನು ಅನುಭವಿಸಲು ಮತ್ತು ಜೀವನದ ಅಗತ್ಯತೆಗಳನ್ನು ಹೊಂದಲು, ಅವರು ಜನರಿಗೆ ಅಭಿವೃದ್ಧಿಗಾಗಿ ಪೂರ್ಣ ಅವಕಾಶಗಳನ್ನು ಹೊಂದಲು ಸಾಧ್ಯವಾಗುವಂತೆ, ಇತರ ಜನರಂತೆ, ಭಾರತೀಯ ಜನರ ಪ್ರಶ್ನಾತೀತವಾದ ಹಕ್ಕಿದೆ ಎಂದು ನಾವು ನಂಬುತ್ತೇವೆ. ಯಾವುದೇ ಸರ್ಕಾರವು ಈ ಹಕ್ಕುಗಳ ಜನರನ್ನು ಹಿಂತೆಗೆದುಕೊಂಡು ಅವರನ್ನು ದಮನಮಾಡಿದರೆ ಜನರು ಅದನ್ನು ಬದಲಾಯಿಸುವ ಅಥವಾ ಅದನ್ನು ರದ್ದುಗೊಳಿಸುವುದಕ್ಕೆ ಮತ್ತಷ್ಟು ಹಕ್ಕನ್ನು ಹೊಂದಿದ್ದಾರೆ ಎಂದು ನಾವು ನಂಬುತ್ತೇವೆ. ಭಾರತದಲ್ಲಿ ಬ್ರಿಟಿಷ್ ಸರ್ಕಾರವು ಭಾರತೀಯ ಜನರ ಸ್ವಾತಂತ್ರ್ಯವನ್ನು ವಂಚಿತಗೊಳಿಸಿದ್ದು ಮಾತ್ರವಲ್ಲದೆ ಆ ಜನಸಾಮಾನ್ಯರ ಶೋಷಣೆಯ ಮೇಲೆ ತನ್ನನ್ನು ಅವಲಂಬಿಸಿಕೊಂಡಿದೆ ಮತ್ತು ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಭಾರತವನ್ನು ನಾಶಪಡಿಸಿದೆ. ಹಾಗಾಗಿ, ಭಾರತವು ಬ್ರಿಟಿಷ್ ಸಂಪರ್ಕದಿಂದ ಬೇರ್ಪಡಬೇಕು ಮತ್ತು ಪೂರ್ಣ ಸ್ವರಾಜ್ ಅಥವಾ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಬೇಕು ಎಂದು ನಾವು ನಂಬುತ್ತೇವೆ.
  • ಹೊಸ ವರ್ಷದ ಮುನ್ನಾದಿನದ 1929 ರ ಮಧ್ಯರಾತ್ರಿ, ನೆಹರು ಅವರು ಲಾಹೋರ್’ನಲ್ಲಿ ರಾವಿನದಿ ತೀರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. “ಸ್ವಾತಂತ್ರ್ಯದ ಪ್ರತಿಜ್ಞೆಯನ್ನು ಓದಲಾಗಿದೆ, ಇದರಲ್ಲಿ ತೆರಿಗೆಯನ್ನು ತಡೆಹಿಡಿಯುವ ಸಿದ್ಧತೆ ಸೇರಿದೆ”. ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರ ಬೃಹತ್ ಕೂಟವನ್ನು ಅವರು ಈ ಘೋಷಣೆಯನ್ನು ಒಪ್ಪಿಕೊಂಡರೇ ಎಂದು ಕೇಳಲಾಯಿತು, ಮತ್ತು ಬಹುಪಾಲು ಜನರು ತಮ್ಮ ಕೈಗಳನ್ನು ಎತ್ತಿ ಅನುಮೋದನೆಯ ಒಪ್ಪಿಗೆಗೆ ಸಾಕ್ಷಿಯಾಗಿದ್ದರು. ಕೇಂದ್ರ ಮತ್ತು ಪ್ರಾಂತೀಯ ಶಾಸನಸಭೆಗಳ 172 ಭಾರತೀಯ ಸದಸ್ಯರು ಭಾರತೀಯ ಸಾರ್ವಜನಿಕರ ಭಾವನೆಗಳಿಗೆ ಅನುಗುಣವಾಗಿ ನಿರ್ಣಯಕ್ಕೆ ಬೆಂಬಲ ನೀಡಿ ರಾಜಿನಾಮೆ ಸಲ್ಲಿಸಿದರು. ಜನವರಿ 26 ರಂದು ಸ್ವಾತಂತ್ರ್ಯ ದಿನವೆಂದು ಆಚರಿಸಲು ಕಾಂಗ್ರೆಸ್ ಜನರನ್ನು ಕೇಳಿತು. ಭಾರತದ ಧ್ವಜವನ್ನು ಕಾಂಗ್ರೆಸ್’ನ ಸ್ವಯಂಸೇವಕರು, ರಾಷ್ಟ್ರೀಯವಾದಿಗಳು ಮತ್ತು ಸಾರ್ವಜನಿಕರು ಇವರಿಂದ ಸಾರ್ವಜನಿಕವಾಗಿ ಭಾರತದಾದ್ಯಂತ ಹಾರಿಸಲ್ಪಟ್ಟಿತು. ಸಾಮೂಹಿಕ ನಾಗರಿಕ ಅಸಹಕಾರಕ್ಕಾಗಿ ಯೋಜನೆಗಳು ನಡೆಯುತ್ತಿದ್ದವು.
  • 1929 ರಲ್ಲಿ ಕಾಂಗ್ರೆಸ್ನ ಲಾಹೋರ್ ಅಧಿವೇಶನದ ನಂತರ, ನೆಹರೂ ಕ್ರಮೇಣ ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಧಾನ ನಾಯಕನಾಗಿ ಹೊರಹೊಮ್ಮಿದರು. ಗಾಂಧಿಯವರು ಹೆಚ್ಚು ಆಧ್ಯಾತ್ಮಿಕ ಪಾತ್ರಕ್ಕೆ ಮರಳಿದರು. ಗಾಂಧಿಯವರು 1942 ರವರೆಗೆ ನೆಹರು ಅವರನು ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಅಧಿಕೃತವಾಗಿ ನೇಮಿಸಲಿಲ್ಲವಾದರೂ, 1930 ರ ದಶಕದ ಮಧ್ಯಭಾಗದಲ್ಲಿಯೇ ನೆಹರು ದೇಶಕ್ಕೆ ಗಾಂಧಿಯ ಸ್ವಾಭಾವಿಕ ಉತ್ತರಾಧಿಕಾರಿಯಾಗಿ ಪರಿಗಣಿಸಲ್ಪಟ್ಟಿದ್ದರು.

ಅಹಿಂಸಾತ್ಮಕ ಅಸಹಕಾರ ಚಳುವಳಿ

ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಗಾಂಧಿಯವರು 1930ರಲ್ಲಿ 'ದಂಡಿ ಮಾರ್ಚ್' ಅನ್ನು ಮುನ್ನಡೆಸಿದರು, ಇದು ಸತ್ಯಾಗ್ರಹದ ಒಂದು ಗಮನಾರ್ಹ ಉದಾಹರಣೆ.
  • ಬ್ರಿಟಿಷ್’ರಿಂದ ಉಪ್ಪು ತೆರಿಗೆಗೆ ಗುರಿಯಾಗಿದ ಕಾರಣ ಅದರ ವಿರುದ್ಧ ಸತ್ಯಾಗ್ರಹ ಮಾಡುವದರೊಂದಿಗೆ “ನಾಗರಿಕ ಅಸಹಕಾರ ಚಳುವಳಿಯನ್ನು ಪ್ರಾರಂಭಿಸುವ ಗಾಂಧಿಯವರ ಯೋಜನೆ ಬಗ್ಗೆ ನೆಹರು ಮತ್ತು ಕಾಂಗ್ರೆಸ್ನ ಹೆಚ್ಚಿನ ನಾಯಕರು ಆರಂಭದಲ್ಲಿ ಅದರ ಪರಿಣಾಮದ ಬಗ್ಗೆ ಸಂಶಯ ಪಟ್ಟಿದ್ದರು. (ಸಮುದ್ರದಲ್ಲಿಯಾಗಲಿ ಅಥವಾ ಬೇರೆ ವಿಧದಿಂದಲಾಗಲಿ ಬಾರತೀಯರು ಉಪ್ಪು ತಯಾರಿಸುವಂತಿರಲಿಲ್ಲ. ಅದು ಅಪರಾಧವೆಂಬ ಕಾನೂನು. ಉಪ್ಪನ್ನು ತಯಾರಿಸಿ ಕಾನೂನು ಭಂಗ ಮಡುವುದು – ಜೈಲಿಗೆ ಹೋಗುವುದು ಸತ್ಯಾಗ್ರಹ.) ಪ್ರತಿಭಟನೆಯು ಬಿಸಿ ಏರಿದ ನಂತರ, “ಉಪ್ಪಿನ ಸಂಕೇತದ ಶಕ್ತಿ”ಯನ್ನು ನೆಹರು ಅವರು ಅರಿತುಕೊಂಡರು. ನೆಹರು ಈ ಪ್ರತಿಭಟನೆಯ ಅಭೂತಪೂರ್ವ ಜನಪ್ರಿಯ ಪ್ರತಿಕ್ರಿಯೆಯ ಬಗ್ಗೆ ಹೀಗೆ ಪ್ರತಿಕ್ರಿಯಿಸಿದರು: "ಒಂದು ವಸಂತಕಾಲವು ಇದ್ದಕ್ಕಿದ್ದಂತೆ ಹೊರಹೊಮ್ಮಿರುವಂತೆ ಕಾಣುತ್ತದೆ". [57] ನೆಹರು ರಾಯಪುರಕ್ಕೆ ಅಲಹಾಬಾದ್’ನಿಂದ ಬಂದ ರೈಲಿನ ಸಂದರ್ಭದಲ್ಲಿ 14 ಏಪ್ರಿಲ್ 1930 ರಂದು ಅವರನ್ನು ಬಂಧಿಸಲಾಯಿತು. ಅದಕ್ಕೆ ಮೊದಲು ಅವರು ಒಂದು ದೊಡ್ಡ ಸಭೆ ನಡೆಸಿ ದೊಡ್ಡ ಮೆರವಣಿಗೆಯನ್ನು ನಡೆಸಿದ ನಂತರ, ಸರ್ಕಾರದಿಂದ ನಿóಷೇಧಿಸಲ್ಪಟ್ಟ (ಕಾಂಟ್ರಾಬ್ಯಾಂಡ್) ಉಪ್ಪನ್ನು ಸಂಭ್ರಮೋತ್ಸವವದಿಂದ ಬಹಿರಂಗವಾಗಿ ತಯಾರಿಸಿದರು. “ಉಪ್ಪು ಕಾನೂನಿನ” ಉಲ್ಲಂಘನೆಯ ಕಾರಣ ಅವರನ್ನು ಬಂಧಿಸಲಾಯಿತು, ಜೈಲು ಗೋಡೆಗಳ ಹಿಂದೆಯೇ ಅವರನ್ನು ಸಂಕ್ಷಿಪ್ತವಾಗಿ ವಿಚಾರಣೆ ನೆಡೆದರು ಮತ್ತು ಅವರಿಗೆ ಆರು ತಿಂಗಳ ಸೆರೆವಾಸ ವಿಧಿಸಲಾಯಿತು.
  • ನೆಹರು ಅವರು ಜೈಲಿನಲ್ಲಿ ಇದ್ದಾಗ, ಗಾಂಧೀಜಿ ಅನುಪಸ್ಥತಿಯಲ್ಲಿ ಗಾಂಧಿ ಅವರನ್ನು ತಮ್ಮ ಉತ್ತರಾದಿಕಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಿದರು, ಆದರೆ ಗಾಂಧಿಯವರು ಅದನ್ನು ನಿರಾಕರಿಸಿದರು, ಮತ್ತು ನೆಹರು ತನ್ನ ತಂದೆಯವರನ್ನು ಉತ್ತರಾಧಿಕಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ನಾಮಕರಣ ಮಾಡಿದರು. ನೆಹರೂ ಅವರ ಬಂಧನದಿಂದಾಗಿ ನಾಗರಿಕ ಅಸಹಕಾರ ಚಳುವಳಿ ಹೊಸ ಗತಿ ಪಡೆದುಕೊಂಡು ತೀವ್ರವಾಯಿತು, ಮತ್ತು ಬಂಧನಗಳು ನೆಡೆದವು, ಜನಸಮೂಹದ ಮೇಲೆ ಗುಂಡುಹಾರಿಸಲಾಯಿತು ಮತ್ತು ಲಾಠಿ ಛಾರ್ಜಗಳು ಎಲ್ಲೆಡೆಯೂ ಸಾಮಾನ್ಯ ಘಟನೆಗಳಾಗಿ ನೆಡೆಯಿತು.

ಉಪ್ಪಿನ ಸತ್ಯಾಗ್ರಹದ ಯಶಸ್ಸು

ಉಪ್ಪಿನ ಸತ್ಯಾಗ್ರಹವು ಪ್ರಪಂಚದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಇಂಡಿಯನ್, ಬ್ರಿಟಿಷ್, ಮತ್ತು ಪ್ರಪಂಚದ ಅಭಿಪ್ರಾಯಗಳು ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷದ ಹಕ್ಕುಗಳ ನ್ಯಾಯಸಮ್ಮತತೆಯನ್ನು ಹೆಚ್ಚಿಸಲು ಪ್ರಾರಂಭಿಸಿವೆ. ನೆಹರು ಅವರು ಉಪ್ಪಿನ ಸತ್ಯಾಗ್ರಹವನ್ನು ಗಾಂಧಿಯವರೊಂದಿಗಿನ ಅವರ ಸಂಬಂಧದ ಉನ್ನತ-ಚಿನ್ಹೆಯ ಗುರುತು ಎಂದು ಪರಿಗಣಿಸಿದರು, [60] ಮತ್ತು ಭಾರತೀಯರ ವರ್ತನೆಗಳನ್ನು ಬದಲಿಸುವಲ್ಲಿ ಇದು ಶಾಶ್ವತವಾದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಭಾವಿಸಿದರು:

      “ಖಂಡಿತ ಈ ಚಳುವಳಿ ಬ್ರಿಟಿಷ್ ಸರಕಾರದ ಮೇಲೆ ಭಾರಿ ಒತ್ತಡವನ್ನು ಬೀರಿತು ಮತ್ತು ಸರ್ಕಾರಿ ಯಂತ್ರಗಳನ್ನು ಬೆಚ್ಚಿಬೀಳಿಸಿತ್ತು. ಆದರೆ ಇದಕ್ಕೆ ನನ್ನ (ನೆಹರು) ಪ್ರಾಮುಖ್ಯತೆ, ನಮ್ಮ ಜನರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಜನರ ಮೇಲೆ ಬೀರಿದ ಪರಿಣಾಮ. ... ಅಸಹಕಾರ ಅವರನ್ನು ಕಿರಿದಾದಿಂದ ಕೂಪದಿಂದ ಹೊರಗೆ ಎಳೆದುಕೊಂಡು ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ನೀಡಿತು. ... ಅವರು ಧೈರ್ಯದಿಂದ ವರ್ತಿಸಿದರು ಮತ್ತು ಅನ್ಯಾಯದ ದಬ್ಬಾಳಿಕೆಗೆ ಸುಲಭವಾಗಿ ಒಪ್ಪಲಿಲ್ಲ; ಅವರ ದೃಷ್ಟಿಕೋನವು ವಿಸ್ತಾರವಾಯಿತು ಮತ್ತು ಅವರು ಭಾರತವನ್ನು ಒಂದು ಘಟಕವಾಗಿ ಸ್ವಲ್ಪಮಟ್ಟಿಗೆ ಯೋಚಿಸಲಾರಂಭಿಸಿದರು. ... ಇದು ಗಮನಾರ್ಹ ಬದಪಾವಣೆಯಾಗಿತ್ತು. ಇದರ ಕೀರ್ತಿ ಗಾಂಧಿಯವರ ನಾಯಕತ್ವದ ಕಾಂಗ್ರೆಸ್’ಗೆ ಅದರ ಕೀರ್ತಿ ಸೇರಬೇಕು.

ಆಧುನಿಕ ಭಾರತದ ಶಿಲ್ಪಿ

  • (ಭಾರತದ ನಿರ್ಮಾತೃವಾಗಿ)
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
1942 ರಲ್ಲಿ ಗಾಂಧಿ ಮತ್ತು ನೆಹರು
  • ಭವಿಷ್ಯ ಭಾರತದ ಸಂವಿಧಾನದಲ್ಲಿ ಪ್ರಜಾಪ್ರಭುತ್ವದ ಮತ್ತು ಸಾಮಾಜಿಕ ನ್ಯಾಯದ ತಳಹದಿ: 1929 ರಲ್ಲಿ ಕಾಂಗ್ರೆಸ್ಸಿನ ನೀತಿಗಳನ್ನು ಮತ್ತು ಅವರ ನಾಯಕತ್ವದಲ್ಲಿ ಭವಿಷ್ಯದ ಭಾರತ-ರಾಷ್ಟ್ರವನ್ನು ನೆಹರು ವಿವರಿಸಿದರು. ಅವರು ಕಾಂಗ್ರೆಸ್ಸಿನ ಉದ್ದೇಶಗಳು ಧರ್ಮದ ಸ್ವಾತಂತ್ರ್ಯ, ಸಂಘಗಳನ್ನು ರೂಪಿಸುವ ಹಕ್ಕನ್ನು, ಆಲೋಚನೆಯ ಅಭಿವ್ಯಕ್ತಿ ಸ್ವಾತಂತ್ರ್ಯ, ಜಾತಿ, ಬಣ್ಣ, ಮತ ಅಥವಾ ಧರ್ಮದ ವ್ಯತ್ಯಾಸವಿಲ್ಲದೆ ಪ್ರತಿ ವ್ಯಕ್ತಿಗೂ ಸಮಾನತೆಯ ಕಾನೂನು, ಪ್ರಾದೇಶಿಕ ಭಾಷೆಗಳು ಮತ್ತು ಸಂಸ್ಕೃತಿಗಳಿಗೆ ರಕ್ಷಣೆ, ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗಳು, ಅಸ್ಪೃಶ್ಯತೆ ನಿರ್ಮೂಲನೆ, ವಯಸ್ಕ ಮತದಾನದ ಪರಿಚಯ, ನಿಷೇಧ ಹೇರುವುದು, ಕೈಗಾರಿಕೆಗಳ ರಾಷ್ಟ್ರೀಕರಣ, ಸಮಾಜವಾದ, ಮತ್ತು ಜಾತ್ಯತೀತ ಭಾರತವನ್ನು ಸ್ಥಾಪಿಸುವುದು. ಈ ಎಲ್ಲಾ ಉದ್ದೇಶಗಳು 1929-31ರಲ್ಲಿ ನೆಹರುರಿಂದ ರಚಿಸಲ್ಪಟ್ಟ "ಮೂಲಭೂತ ಹಕ್ಕುಗಳು ಮತ್ತು ಆರ್ಥಿಕ ನೀತಿ" ಯ ನಿರ್ಣಯದ ಮೂಲವು ರೂಪಿಸಿವೆ ಮತ್ತು ಅವು ಗಾಂಧಿಯವರ ನಾಯಕತ್ವದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಿಂದ ಅನುಮೋದಿಸಲ್ಪಟ್ಟವು.
  • ಸಮಾಜವಾದದ ಗುರಿಯನ್ನು ಸಾಧಿಸುವುದು ಅತ್ಯಂತ ಕಷ್ಟಕರವಾಗಿತ್ತು. ನೆಹರು ಅವರನ್ನು ಬಲಪಂಥೀಯ ಕಾಂಗ್ರೆಸ್ ಸದಸ್ಯರಾದ ವಲ್ಲಭಭಾಯಿ ಪಟೇಲ್, ರಾಜೇಂದ್ರ ಪ್ರಸಾದ್ ಮತ್ತು ಸಿ. ರಾಜಗೋಪಾಲಾಚಾರಿ ಅವರು ವಿರೋಧಿಸಿದರು. ನೆಹರು ಅವರಿಗೆ ಎಡಪಂಥೀಯ ಕಾಂಗ್ರೆಸ್ ಸದಸ್ಯರಾದ ಮೌಲಾನಾ ಆಜಾದ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಬೆಂಬಲವಿತ್ತು. 1936 ರಲ್ಲಿ ಕಾಂಗ್ರೆಸ್ ಅಧ್ಯಕ್ಷತೆಯಿಂದ ಡಾ.ಪ್ರಸಾದರನ್ನು ಹೊರಗಿಡಲು ಈ ಮೂವರು ಸೇರಿಕೊಂಡರು. ನೆಹರೂ ಅವರ ಸ್ಥಾನದಲ್ಲಿ ಚುನಾಯಿತರಾದರು ಮತ್ತು ಎರಡು ವರ್ಷಗಳ ಕಾಲ (1936-37) ಅಧ್ಯಕ್ಷರಾದರು. ನಂತರ ಅವರ ಸಮಾಜವಾದಿ ಸಹೋದ್ಯೋಗಿಗಳಾದ ಬೋಸ್ (1938-39) ಮತ್ತು ಆಜಾದ್ (1940-46) ಅವರಿಂದ ಯಶಸ್ವಿಯಾದರು. ಭಾರತೀಯ ರಾಜಕೀಯದ ಮುಖ್ಯವಾಹಿನಿಯಿಂದ ಬೋಸರ ನಿರ್ಗಮನದ ನಂತರ (ಬ್ರಿಟಿಷರನ್ನು ಭಾರತದಿಂದ ಹೊರಗೆ ಓಡಿಸುವಲ್ಲಿ ಹಿಂಸಾಚಾರಕ್ಕೆ ನೀಡುವ ಬೆಂಬಲದಿಂದಾಗಿ ಬೋಸರು ಪ್ರತ್ಯೇಕವಾದರು,) ಸಮಾಜವಾದಿಗಳು ಮತ್ತು ಸಂಪ್ರದಾಯವಾದಿಗಳ ನಡುವಿನ ಅಧಿಕಾರದ ಹೋರಾಟ ಸಮತೋಲಿತವಾಗಿತ್ತು.ಆದರೆ, ಸರ್ದಾರ್ ಪಟೇಲ್ 1950 ರಲ್ಲಿ ನಿಧನರಾದರು, ಆಗ ನೆಹರೂ ಅವರು ಉಳಿದಿರುವ ಏಕೈಕ ರಾಷ್ಟ್ರೀಯ ನಾಯಕನಾಗಿದ್ದರು ಮತ್ತು ನೆಹರು ಅವರ ಹಲವು ಮೂಲಭೂತ ನೀತಿಗಳನ್ನು ಯಾರೂ ಅಡ್ಡಿಪಡಿಸದೆಯೇ ಇದ್ದುದರಿಂದ ನೆಹರೂಗೆ ಅವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಯಿತು.ಭಾರತದ ಸಂಪ್ರದಾಯಶೀಲ ಬಲಪಂಥೀಯ ಕಾಂಗ್ರೆಸ್ (ಭಾರತದ ಮೇಲ್ವರ್ಗದ ಗಣ್ಯರು) ಅವರು ಸಮಾಜವಾದಿಗಳ ವಿರುದ್ಧ 1969 ರಲ್ಲಿ ನಡೆದ ದೊಡ್ಡ ಭಿನ್ನಾಭಿಪ್ರಾಯ ಕಾಂಗ್ರಸ್ಸನ್ನು ವಿಭಜಿಸಿತು. ಆಗ ನೆಹರುರ ಮಗಳು ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಪರಿಸ್ಥಿತಿಯಲ್ಲಿ ಅವರು ಭಾರತದ ಸಂವಿಧಾನದ 42 ನೇ ತಿದ್ದುಪಡಿಯಿಂದ (1976) ತನ್ನ ತಂದೆಯ ಕನಸನ್ನು ಪೂರೈಸಲು ಸಮರ್ಥರಾದರು, ಈ ಮೂಲಕ ಭಾರತವು ಅಧಿಕೃತವಾಗಿ "ಸಮಾಜವಾದಿ" "ಜಾತ್ಯತೀತ".ಎಂದು ಆಯಿತು. ಆ ನೀತಿಗೆ ಅನುಸರಿಸಿ ಭಾರತದ ಆರ್ಥಿಕ ಭದ್ರತೆಗೆ ಕಾರಣವಾದ ಬ್ಯಾಂಕ್‍ಗಳ ರಾಷ್ಟ್ರೀಕರಣ , ಜೀವವಿಮೆ ರಾಷ್ಟ್ರೀಕರಣ, ರಾಜಧನ ರದ್ದತಿ - ಬಡವರಿಗಾಗಿ 20 ಅಂಶದ ಕಾರ್ಯಕ್ರಮ ಇತ್ಯಾದಿಯನ್ನು ಜಾರಿಗೆ ತಂದರು.
  • ಭಾರತದ ವಿದೇಶಾಂಗ ನೀತಿಯ ರೂವಾರಿ; 1938 ರಲ್ಲಿಯೇ ರಾಷ್ಟ್ರೀಯ ಯೋಜನಾ ಆಯೋಗ ರಚನೆ: ಕಾಂಗ್ರೆಸ್ಸಿನ ಸಾಮಾನ್ಯ ಕಾರ್ಯದರ್ಶಿಯಾಗಿ ನೆಹರೂ ಅವರ ಎರಡನೆಯ ಅವಧಿಯಲ್ಲಿ, ಅವರು ಭಾರತದ ವಿದೇಶಿ ನೀತಿ ಬಗ್ಗೆ ಕೆಲವು ನಿರ್ಣಯಗಳನ್ನು ಪ್ರಸ್ತಾಪಿಸಿದರು. ಆ ಕಾಲದ ನಂತರ, ಯಾವುದೇ ಭವಿಷ್ಯದ ಭಾರತೀಯ ರಾಷ್ಟ್ರದ ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಅವರಿಗೆ ಪೂರ್ಣ ಸ್ವಾತಂತ್ರ್ಯವನ್ನು (ಕಾರ್ಟೆ ಬ್ಲಾಂಚನ್ನು) ನೀಡಿದರು. ಅವರು ವಿಶ್ವದಾದ್ಯಂತ ಸರ್ಕಾರಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿದರು. ಪ್ರಪಂಚವು ಫ್ಯಾಸಿಸಮ್’ನ ಬೆದರಿಕೆಗೆ ಒಳಗಾದ ಸಮಯದಲ್ಲಿ ಅವರು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಕಡೆಗೆ ಭಾರತವನ್ನು ದೃಢವಾಗಿ ಇರಿಸಿದರು. ಭವಿಷ್ಯದ ಭಾರತದ ಆರ್ಥಿಕತೆಯನ್ನು ಯೋಜಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಯಿತು. ಇಂಥ ನೀತಿಗಳನ್ನು ರಚಿಸುವಲ್ಲಿ ಸಹಾಯ ಮಾಡಲು ಅವರು 1938 ರಲ್ಲಿ ರಾಷ್ಟ್ರೀಯ ಯೋಜನಾ ಆಯೋಗವನ್ನು ನೇಮಿಸಿದರು. ಆದಾಗ್ಯೂ, ನೆಹರು ಮತ್ತು ಅವರ ಸಹೋದ್ಯೋಗಿಗಳು ರಚಿಸಿದ ಅನೇಕ ಯೋಜನೆಗಳು 1947 ರಲ್ಲಿ ಭಾರತದ ಅನಿರೀಕ್ಷಿತ ವಿಭಜನೆಯಾದಾಗ ಕೃತಿಗೆ ಬರಲಾರದೆ ಅಪೂರ್ಣವಾದವು.

1930 ರಲ್ಲಿ ಚುನಾವಣಾ ರಾಜಕೀಯ

ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಜವಾಹರಲಾಲ್ ನೆಹರು ಮತ್ತು ರವೀಂದ್ರನಾಥ ಠಾಗೋರ್
  • ಮಾರ್ಕ್ಸ್‍ವಾದದ ಬಗೆಗೆ ಭ್ರಮನಿರಸನ:1936 ರಲ್ಲಿ ನೆಹರು ಅವರು ಯೂರೋಪಿಗೆ ಭೇಟಿ ನೀಡಿದಾಗ, ತಮ್ಮ ರಾಜಕೀಯ ಮತ್ತು ಆರ್ಥಿಕ ಚಿಂತನೆಯು ನಿಂತ ನೀರಿನಂತಿದೆ ಎಂದು ಅರಿವಾಯಿತು. ಮಾರ್ಕ್ಸಿಸಮ್ ಮತ್ತು ಅವರ ಸಮಾಜವಾದಿ ಚಿಂತನೆಯ ಬಗೆಗಿನ ಅವರ ನಿಜವಾದ ಆಸಕ್ತಿ ಆ ಪ್ರವಾಸದಿಂದ ಉದ್ಭವಿಸಿತು. ಜೈಲಿನಲ್ಲಿ ಅವರು ನಂತರದ ದಿನಗಳಲ್ಲಿ ಕಳೆದ ದಿನಗಳು, ಅವರಿಗೆ ಮಾರ್ಕ್ಸ್ವಾದವನ್ನು ಹೆಚ್ಚು ಆಳವಾಗಿ ಅಧ್ಯಯನ ಮಾಡಲು ನೆರವಾದವು. ಮಾರ್ಕ್ಸ್ ವಾದದ ಚಿಂತನೆಗಳಲ್ಲಿ ಆಸಕ್ತಿ ಹೊಂದಿದರೂ, ಅದರ ಕೆಲವು ಕಾರ್ಯವಿಧಾನಗಳನ್ನು ಅನುಸರಿಸಲು ಹಿಮ್ಮೆಟ್ಟುವಂತಾಯಿತು., ಅವರು ಸ್ವತಃ ಕಾರ್ಲ್ ಮಾರ್ಕ್ಸ ಬರಹಗಳನ್ನು ಪೂಜ್ಯಗ್ರಂಥದಂತೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ನಿರ್ಣಯಿಸಿದರು. ಅಂದಿನಿಂದಲೂ, ಅವರ ಆರ್ಥಿಕ ಚಿಂತನೆಯ ಗಜಕಡ್ಡಿಯು ಭಾರತೀಯ ಪರಿಸ್ಥಿತಿಗಳಿಗೆ ಅಗತ್ಯವಿದ್ದಲ್ಲಿ ಹೊಂದುವಂತೆ ಮಾತ್ರಾ ಮಾರ್ಕ್ಸ್‍ವಾದಿಯಾಗಿದ್ದು, ಆ ವಾದ ಅಲ್ಲಿಯೇ ಉಳಿಯಿತು.
  • 1935 ರ ಅಧಿಯಮದಂತೆ ಪ್ರಾಂತೀಯ ಚುನಾಯಿತ ಸರ್ಕಾರಗಳ ರಚನೆ:ನೆಹರೂ ನೇತೃತ್ವದ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿತು ಮತ್ತು ಒಕ್ಕೂಟದ ಯೋಜನೆಯಡಿಯಲ್ಲಿ ಅಧಿಕಾರವನ್ನು ಸ್ವೀಕರಿಸಿದಾಗ, ಗಾಂಧಿಯವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ನೆಹರೂರವರ ಆಂದೋಲನದ ಬಗೆಗೆ ಗಾಂಧಿಯವರು ಅಸಮ್ಮತಿ ವ್ಯಕ್ತಪಡಿಸಲಿಲ್ಲ, ಆದರೆ ಅವರು ರಾಜೀನಾಮೆ ನೀಡಿದ್ದರಿಂದ, ಭಾರತೀಯರೊಂದಿಗಿನ ಅವರ ಜನಪ್ರಿಯತೆಯು ಚುನಾವಣೆಯಲ್ಲಿ ಪಕ್ಷದಲ್ಲಿ ತಮ್ಮ ಸದಸ್ಯತ್ವದಿಂದ ಪ್ರಭಾವಿಸುವುದನ್ನು ನಿಲ್ಲಿಸಿತು. ಪ್ರಾಂತೀಯ ಸ್ವಾಯತ್ತತೆ (1935 ರ ಭಾರತ ಸರ್ಕಾರದ ಅಧಿನಿಯಮದಡಿಯಲ್ಲಿ) ಪ್ರಾಂತ್ಯದ ಸ್ವಾಯತ್ತತೆಯನ್ನು ಜಾರಿಗೊಳಿಸಿದ ನಂತರ ಚುನಾವಣೆಗಳು ನೆಡೆದು ಅದರಲ್ಲಿ ಬಹುಪಾಲು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಾಗ, ನೆಹರುರ ಜನಪ್ರಿಯತೆ ಮತ್ತು ಅಧಿಕಾರವು ಸಾಟಿಯಿಲ್ಲದವು ಎಮದು ರುಜುವಾತಾಯಿತು. ಮುಹಮ್ಮದ್ ಅಲಿ ಜಿನ್ನಾರವರ ಅಡಿಯಲ್ಲಿ ಮುಸ್ಲಿಮ್ ಲೀಗ್ (ಜಿನ್ನಾ- ಪಾಕಿಸ್ತಾನದ ಸೃಷ್ಟಿಕರ್ತರಾಗಲು ಕಾರಣರು) ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಕಂಡಿತು. ಇದರಿಂದ ಭಾರತದಲ್ಲಿ ಮುಖ್ಯವಾಗಿ ಎರಡು ಪಕ್ಷಗಳು ಮಾತ್ರಾ ಇವೆ; ಅವು ಬ್ರಿಟಿಷ್ ರಾಜ್ ಮತ್ತು ಕಾಂಗ್ರೆಸ್ ಎಂದು ನೆಹರೂ ಘೋಷಿಸಿದರು. ಭಾರತೀಯ ರಾಜಕೀಯದಲ್ಲಿ ಮುಸ್ಲಿಂ ಲೀಗ್ ಮೂರನೆಯ ಮತ್ತು "ಸಮಾನ ಪಾಲುದಾರ" ಎಂಬ ಜಿನ್ನಾ ಹೇಳಿಕೆಗಳು ವ್ಯಾಪಕವಾಗಿ ತಿರಸ್ಕರಿಸಲ್ಪಟ್ಟವು. ಮೌಲಾನಾ ಆಜಾದರನ್ನು ಭಾರತೀಯ ಮುಸ್ಲಿಮರ ಮುಂಚೂಣಿ ಮುಖಂಡನಾಗಿ ನೇಮಕ ಮಾಡಲು ನೆಹರು ಆಶಿಸಿದರು, ಆದರೆ ಇದನ್ನು ಗಾಂಧಿಯವರು ಅಲಕ್ಷಿಸಿದರು, ಅವರು ಜಿನ್ನಾರನ್ನು ಭಾರತೀಯ ಮುಸ್ಲಿಮರ ಧ್ವನಿಯೆಂಬುದನ್ನು ಮುಂದುವರಿಸಿದರು.

ವಿಶ್ವ ಸಮರ- II ಮತ್ತು ಕ್ವಿಟ್ ಇಂಡಿಯಾ ಚಳುವಳಿ

  • 2 ನೇ ವಿಶ್ವ ಯುದ್ಧ ಪ್ರಾರಂಭವಾದಾಗ, ವೈಸ್ರಾಯ್ ಲಿನ್ಲಿತ್ಗೊವ್ ಅವರು ಏಕಪಕ್ಷೀಯವಾಗಿ ಭಾರತವು ಬ್ರಿಟನ್’ನಿನ ಪಕ್ಷದಲ್ಲಿ ಯುದ್ಧಮಾಡುವುದು ಎಂದರು. ಅವರು ಚುನಾಯಿತ ಭಾರತೀಯ ಪ್ರತಿನಿಧಿಗಳನ್ನು ಸಂಪರ್ಕಿಸದೆ ನಿರ್ಣಯ ತೆಗೆದುಕೊಂಡರು. ನೆಹರು ಚೀನಾಕ್ಕೆ ನೀಡಿದ ಭೇಟಿಯನ್ನು ಮೊಟಕುಗೊಲಿಸಿ ಬಾರತಕ್ಕೆ ಹಿಂದಿರುಗಿದರು. ನೆಹರೂ, "ಪ್ರಜಾಪ್ರಭುತ್ವ ಮತ್ತು ಫ್ಯಾಸಿಸಮ್ ನಡುವಿನ ಸಂಘರ್ಷದಲ್ಲಿ, ನಮ್ಮ ಸಹಾನುಭೂತಿಗಳು ಅನಿವಾರ್ಯವಾಗಿ ಪ್ರಜಾಪ್ರಭುತ್ವದ ಬದಿಯಲ್ಲಿರಬೇಕು .... ಭಾರತವು ಈ ವಿಷಯದಲ್ಲಿ ತನ್ನ ಸಂಪೂರ್ಣ ಪಾತ್ರವನ್ನು ತೊಡಗಿಸಲು ಮತ್ತು ತನ್ನ ಎಲ್ಲಾ ಸಂಪನ್ಮೂಲಗಳನ್ನು ಅದಕ್ಕೆ ಹಾಕಲು ನಾನು ಇಷ್ಟಪಡುತ್ತೇನೆ, ಅದು ಹೊಸ ವ್ಯವಸ್ಥೆಗೆ ದಾರಿಯಾಗಬೇಕು." ಎಂದು ಘೋಷಿಸಿದರು.
  • ಹೆಚ್ಚಿನ ವಿವೇಚನೆಯ ನಂತರ, ನೆಹರೂ ನೇತೃತ್ವದ ಕಾಂಗ್ರೆಸ್ ಪಕ್ಷವು ಬ್ರಿಟಿಷ್ ಸರ್ಕಾರಕ್ಕೆ ಸಹಕಾರ ನೀಡಲಿದೆ ಆದರೆ ಕೆಲವು ಷರತ್ತುಗಳೊಂದಿಗೆ ಎಂದು ತಿಳಿಸಿತು. ಮೊದಲನೆಯದಾಗಿ, ಯುದ್ಧದ ನಂತರ ಭಾರತಕ್ಕೆ ಪೂರ್ಣ ಸ್ವಾತಂತ್ರ್ಯ ನೀಡುವ ಭರವಸೆಯನ್ನು ಬ್ರಿಟನ್ ನೀಡಬೇಕು ಮತ್ತು ಹೊಸ ಸಂವಿಧಾನವನ್ನು ರಚಿಸುವ ಒಂದು ಸಂವಿಧಾನ ಸಭೆಯನ್ನು ರಚಿಸಲು ಚುನಾವಣೆಗೆ ಅನುಮತಿಸಬೇಕು; ಎರಡನೆಯದು, ಭಾರತೀಯ ಸೇನಾಪಡೆಯು ಬ್ರಿಟಿಷ್ ಕಮಾಂಡರ್-ಇನ್-ಚೀಫ್’ನ ಅಡಿಯಲ್ಲಿಯೇ ಇದ್ದರೂ, ಭಾರತೀಯರನ್ನು ತಕ್ಷಣವೇ ಕೇಂದ್ರ ಸರ್ಕಾರದಲ್ಲಿ ಸೇರಿಸಿಕೊಳ್ಳಬೇಕು; ಮತ್ತು ಅಧಿಕಾರ ಮತ್ತು ಜವಾಬ್ದಾರಿಯನ್ನು ಹಂಚಿಕೊಳ್ಳಲು ಅವಕಾಶವನ್ನು ನೀಡಬೇಕು. ನೆಹರು ಅವರು ಲೆನ್ಲಿತ್ಗೋವ ಅವರಿಗೆ ಬೇಡಿಕೆಗಳನ್ನು ಮಂಡಿಸಿದಾಗ, ಅವರು ಅದನ್ನುನ್ನು ತಿರಸ್ಕರಿಸುವ ಆಯ್ಕೆ ಮಾಡಿದರು. ಇದರಿಂದ ಪರಿಸ್ಥತಿ ಕಗ್ಗಂಟು ಮಟ್ಟಕ್ಕೆ ತಲುಪಿತು. "ಅದೇ ಹಳೆಯ ಆಟವನ್ನು ಪುನಃ ಆಡಲಾಗುತ್ತದೆ", ಎಂದು ನೆಹರು ಗಾಂಧಿಗೆ ಕಠೋರವಾಗಿ ಬರೆದಿದ್ದಾರೆ, "ಹಿನ್ನೆಲೆ ಒಂದೇ ಆಗಿರುತ್ತದೆ, ವಿವಿಧ ಉಪಭಾಷೆಗಳು ಒಂದೇ ಆಗಿರುತ್ತವೆ ಮತ್ತು ನಟರು (ಪಾತ್ರಧಾರಿಗಳು) ಒಂದೇ ಆಗಿರುತ್ತವೆ ಮತ್ತು ಫಲಿತಾಂಶಗಳು ಒಂದೇ ಆಗಿರಬೇಕು".
  • 23 ಅಕ್ಟೋಬರ್ 1939 ರಂದು, ಕಾಂಗ್ರೆಸ್ ವೈಸ್ರಾಯ್ ಅವರ ವರ್ತನೆಗಳನ್ನು ಖಂಡಿಸಿತು ಮತ್ತು ಪ್ರತಿಭಟನೆಯಾಗಿ ರಾಜೀನಾಮೆ ನೀಡಲು ವಿವಿಧ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಸಚಿವಾಲಯಗಳನ್ನು ಆಹ್ವಾನಿಸಿತು (ಅನೇಕ ಪ್ರಾಂತ್ಯಗಳಲ್ಲಿ ಕಾಂಗ್ರಸ್ಸಿನ ಚುನಾಯಿತ ಸರ್ಕಾರ ಇತ್ತು). ಈ ನಿರ್ಣಾಯಕ ಘೋಷಣೆಗೆ ಮುಂಚಿತವಾಗಿ, ಜಿನ್ನಾ ಮತ್ತು ಮುಸ್ಲಿಂ ಲೀಗ್’ನ್ನು ಪ್ರತಿಭಟನೆಯಲ್ಲಿ ಸೇರಲು ನೆಹರೂ ಆಗ್ರಹಿಸಿದರು ಆದರೆ ಅದಕ್ಕೆ ಅವರು (ಜಿನ್ನಾ ಮತ್ತು ಲೀಗ್) ನಿರಾಕರಿಸಿತು.

ಪಾಕಿಸ್ತಾನ ನಿರ್ಣಯ

  • ಮಾರ್ಚ್ 1940 ರಲ್ಲಿ ಜಿನ್ನಾ "ಪಾಕಿಸ್ತಾನದ ನಿರ್ಣಯ" ಎಂದು ಕರೆಯಲ್ಪಡುವ ನಿರ್ಣಯವನ್ನು ಜಾರಿಗೆ ತಂದರು, ‘ರಾಷ್ಟ್ರ’ ದ ಯಾವುದೇ ವ್ಯಾಖ್ಯಾನದ ಪ್ರಕಾರ ಮುಸ್ಲಿಮರು ಒಂದು ರಾಷ್ಟ್ರ, ಮತ್ತು ಅವರು ತಮ್ಮ ನಾಡನ್ನು ಹೊಂದಲೇಬೇಕು,, ಹಾಗೆಯೇ ಅವರ ಪ್ರದೇಶ ಮತ್ತು ಅವರ ರಾಜ್ಯವನ್ನು ಹೊಂದಿರಬೇಕು" ಎಂದು ಘೋಷಿಸಿದರು.
  • ಈ ಮುಸ್ಲಿಮರ ರಾಜ್ಯವನ್ನು ಪಾಕಿಸ್ತಾನವೆಂದು ಕರೆಯಲಾಗುತ್ತಿತ್ತು, ಇದರ ಅರ್ಥ "ಶುದ್ಧ ಭೂಮಿ" ಎಂದರು. ನೆಹರು ಕೋಪದಿಂದ ಇವು "ಎಲ್ಲಾ ಹಳೆಯ ಸಮಸ್ಯೆಗಳು ... ಲಾಹೋರಿನಲ್ಲಿ ಮುಸ್ಲಿಮ್ ಲೀಗ್ ಮುಖಂಡರು ತೆಗೆದುಕೊಂಡ ಇತ್ತೀಚಿನ ನಿಲುವಿನಲ್ಲಿ ಅವಿಭಾಜ್ಯತೆಗೆ ಒಳಗಾಗಿದ್ದಾರೆ" ಎಂದು ಘೋಷಿಸಿದರು. ಲಿನ್ಲಿತ್ಗೋ ನೆಹರೂಗೆ 8 ಅಕ್ಟೋಬರ್ 1940 ರಂದು ಒಂದು ಪ್ರಸ್ತಾವನೆಯನ್ನು ನೀಡಿದರು. ಬ್ರಿಟಿಷ್ ಸರ್ಕಾರದ ಉದ್ದೇಶವು ಭಾರತಕ್ಕೆ "ಡೊಮಿನಿಯನ್ ಸ್ಥಾನಮಾನ"$ ನೀಡುವುವೆಂದು ಅದು ಹೇಳಿದೆ. ಆದರೆ, ಇದು ಒಂದು ದಿನಾಂಕ ಅಥವಾ ಸಾಧನೆಯ ವಿಧಾನವನ್ನು ಉಲ್ಲೇಖಿಸಿಲ್ಲ. ಆದರೆ ಜಿನ್ನಾಗೆ ಮಾತ್ರ ಹೆಚ್ಚು ನಿಖರವಾದದ್ದು ಸಿಕ್ಕಿತ್ತು (ವಿಭಜನೆಯ ಭರವಸೆ). ವೈಸ್‍ರಾಯ್ ಲಿನ್ಲಿತ್ಗೋ ಹೇಳಿದರು "ಬ್ರಿಟಿಷರು ಕಾಂಗ್ರೆಸ್-ಪ್ರಾಬಲ್ಯದ ರಾಷ್ಟ್ರೀಯ ಸರ್ಕಾರಕ್ಕೆ ಅಧಿಕಾರವನ್ನು ವರ್ಗಾವಣೆ ಮಾಡುವುದನ್ನು ಪರಿಗಣಿಸುವುದಿಲ್ಲ, ಅದರ ಅಧಿಕಾರವನ್ನು" ಭಾರತದ ರಾಷ್ಟ್ರೀಯ ಜೀವನದಲ್ಲಿ ದೊಡ್ಡ ಮತ್ತು ಶಕ್ತಿಯುತ ಅಂಶಗಳಿಂದ ನಿರಾಕರಿಸಲಾಗಿದೆ ". (ಕಾಂಗ್ರೆಸ್-ಪ್ರಾಬಲ್ಯದ ರಾಷ್ಟ್ರೀಯ ಸರ್ಕಾರಕ್ಕೆ ಅಧಿಕಾರವನ್ನು ವರ್ಗಾವಣೆ ಮಾಡುವುದಿಲ್ಲ- ಕಾರಣ ಒಂದು ಶಕ್ತಿಯುತ ಅಂಶ ಅಡ್ಡ ಬಂದಿದೆ- ಅದು ಜಿನ್ನಾ ಮತ್ತು ಲೀಗ್- ಲೀಗ್ ಬ್ರಿಟಿಷರಿಂದ ಭರವಸೆ ಪಡೆದಿದೆ ಎಂದು ಅರ್ಥ)[80] [81]
  • ಅಕ್ಟೋಬರ್ 1940 ರಲ್ಲಿ, ಗಾಂಧಿಯವರು ಮತ್ತು ನೆಹರೂ ಅವರು ಎರಡನೇ ಮಹಾ ಯುದ್ಧಕ್ಕೆ ಬ್ರಿಟನ್ನನ್ನು ಬೆಂಬಲಿಸುವ ತಮ್ಮ ನಿಲುವನ್ನು ಬಿಟ್ಟುಬಿಟ್ಟರು, ಒಂದು ಸೀಮಿತ ನಾಗರಿಕ ಅಸಹಕಾರ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದರು, ಇದರಲ್ಲಿ ಭಾರತದ ಸ್ವಾತಂತ್ರ್ಯದ ಪ್ರಮುಖ ವಕೀಲರು ಒಬ್ಬೊಬ್ಬರಾಗಿ ಭಾಗವಹಿಸಲು ಆಯ್ಕೆಯಾದರು. ನೆಹರುರನ್ನು ಬಂಧಿಸಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಜೈಲಿನಲ್ಲಿ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ದಿನ ಕಳೆದ ನಂತರ, ಹವಾಯಿಯಲ್ಲಿನ ಪರ್ಲ್ ಹಾರ್ಬರ್ ಬಾಂಬ್ ದಾಳಿಯ ಮೂರು ದಿನಗಳ ಮುಂಚೆ, ಇತರ ಕಾಂಗ್ರೆಸ್ ಕೈದಿಗಳ ಜೊತೆಗೆ ಅವರನ್ನು ಬಿಡುಗಡೆ ಮಾಡಲಾಯಿತು.
  • ಪ್ರಧಾನಿ ಪಂಡಿತ ಜವಾಹರ್ ಲಾಲ್ ನೆಹರು (PM Jawahar Lal Nehru) ಅವರ ತಪ್ಪಿನಿಂದಾಗಿ ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿಯಾಯಿತು(POK). ನೆಹರು ಅವರ ಕೈಗೊಂಡು ಎರಡು ತಪ್ಪು ನಿರ್ಧಾರಗಳಿಂದ ಕಾಶ್ಮೀರವು (Jammu and Kashmir) ದಶಕಗಳಿಂದ ಬಳಲುವಂತಾಗಿದೆ. ಆದರೆ ಎಂದೆಂದಿಗೂ ನಮ್ಮದೇ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಬುಧವಾರ ಪ್ರತಿಪಾದಿಸಿದರು. 2023ರ ಜಮ್ಮು ಮತ್ತು ಕಾಶ್ಮೀರ ಮೀಸಲು(ತಿದ್ದುಪಡಿ) ವಿಧೇಯಕ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ(ತಿದ್ದುಪಡಿ) ವಿಧೇಯಕಗಳನ್ನು ಮಂಡಿಸಿ, ಮಾತನಾಡಿದರು(Parliament Session).
    ($"ಡೊಮಿನಿಯನ್ ಸ್ಥಾನಮಾನ" - ಎಂದರೆ ಕೇಂದ್ರ ಸರ್ಕಾರಕ್ಕೆ ರಾಜ್ಯಗಳನ್ನು ಶತ್ರುಗಳಿಂದ ರಕ್ಷಣೆ ಮಾಡುವ ಅಧಿಕಾರ ಮತ್ತು ಗೌರ್ನರುಗಳನ್ನು/ ರಾಜ್ಯದ ಅಧ್ಯಕ್ಷರನ್ನು ನೇಮಿಸುವ ಆಧಿಕಾರ ಮಾತ್ರಾ ಇರುತ್ತದೆ ಉಳಿದ ಎಲ್ಲಾ ವಿಷಯದಲ್ಲಿ ರಾಜ್ಯಗಳು ಸ್ವತಂತ್ರವಾಗಿರುತ್ತವೆ; ರಾಜ್ಯಗಳ ಒಳಾಡತದಲ್ಲಿ ಕೇಂದ್ರಸ್ಕಾರ ಪ್ರವೇಶಿಸುವಂತಿಲ್ಲ. ಈಗ ಇಂಗ್ಲೆಡ್ ಮತ್ತು ಆಸ್ಟ್ರೇಲಿಯಾ ಇದ್ದಂತೆ. ಬ್ರಿಟಿಷ್ ಸರ್ಕಾರ ರಾಷ್ಟ್ರಾಧ್ಯಕ್ಷರನ್ನು ನೇಮಿಸುತ್ತದೆ. ಹಾಗೆ ಭಾರತದ ೫೬೦ ಸಂಸ್ಥಾನ-ರಾಜ್ಯಗಳು ಸ್ವತಂತ್ರವಾಗಿರುವ ಡೊಮಿನಿಯನ್ ಸರ್ಕಾರನೀಡುವ ಯೋಜನೆ ಬ್ರಿಟಿಷರದಾಗಿತ್ತು. ಇದಕ್ಕೆ ಅನೇಕ ಸದಸ್ಯರು ಬೆಂಬಲಿಸಿದರೂ, ಇದನ್ನು ನೆಹರು ವಿರೋಧಿಸಿ ಎಲ್ಲಾ ರಾಜ್ಯಗಳೂ ವಿಲೀನವಾದ ಬಲಿಷ್ಠ ಕೇಂದ್ರವುಳ್ಳ ಸ್ವತಂತ್ರಭಾರತ ರಚನೆಗೆ ಒತ್ತಾಯಿಸಿದರು.)

ಭಾರತದ ಮೇಲೆ ಜಪಾನಿನ ಆಕ್ರಮಣ

ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
1946 ರಲ್ಲಿ ಸಿಮ್ಲಾದಲ್ಲಿ ನೆಹರು ಮತ್ತು ಜಿನ್ನಾ ಒಟ್ಟಾಗಿ ನಡೆದ ಚಿತ್ರ
  • 1942 ರ ವಸಂತ ಋತುವಿನಲ್ಲಿ ಜಪಾನ್ ಬರ್ಮಾದ ಮೂಲಕ (ಈಗ ಮಯನ್ಮಾರ್) ಭಾರತದ ಮೇಲೆ ಆಕ್ರಮಣವನ್ನು ನಡೆಸಿದಾಗ, ಬ್ರಿಟಿಷ್ ಸರ್ಕಾರವು ಈ ಹೊಸ ಮಿಲಿಟರಿ ಬೆದರಿಕೆ ಎದುರಿಸಬೇಕಾಯಿತು, ಅದು ನೆಹರೂ ಮೊದಲಿಗೆ ಬಯಸಿದಂತೆ, ಭಾರತಕ್ಕೆ ಕೆಲವು ಪ್ರಸ್ತಾಪಗಳನ್ನು ಮಾಡಲು ನಿರ್ಧರಿಸಿದರು. ಪ್ರಧಾನ ಮಂತ್ರಿ ವಿನ್ಸ್ಟನ್ ಚರ್ಚಿಲ್ ಯುದ್ಧಸಮಯದ ಕ್ಯಾಬಿನೆಟ್’ನ ಸದಸ್ಯರಾದ ಸರ್ ಸ್ಟಾಫರ್ಡ್ ಕ್ರಿಪ್ಸ್ ರನ್ನು ಭಾರತಕ್ಕೆ ಕಳಿಸಿದರು. ಅವರು ನೆಹರುರನ್ನು ರಾಜಕೀಯವಾಗಿ ನಿಕಟವಾಗಿ ತಿಳಿದಿದ್ದನು ಮತ್ತು ಸಾಂವಿಧಾನಿಕ ಸಮಸ್ಯೆಯ ಪರಿಹಾರಕ್ಕಾಗಿ ಪ್ರಸ್ತಾಪಿಸಲು ಜಿನ್ನಾರನ್ನೂ ತಿಳಿದಿದ್ದನು. ಅವರು ಆಗಮಿಸಿದ ತಕ್ಷಣವೇ ಅವರು ಕಲ್ಪಿಸಿಕೊಂಡಿದ್ದಕ್ಕಿಂತಲೂ ಭಾರತ ಹೆಚ್ಚು ಆಳವಾಗಿ ವಿಭಜನೆಯಾಗಿದೆ ಎಂದು ಕಂಡುಹಿಡಿದನು. ನೆಹರೂ, ರಾಜಿಗಾಗಿ ಉತ್ಸುಕನಾಗಿದ್ದರು ಮತ್ತು ರಾಜಿಯಾಗಬಹುದೆಂದು ಭರವಸೆ ಹೊಂದಿದ್ದರು.,. ಗಾಂಧಿಯವರಿಗೆ ರಾಜಿಯ ಭರವಸೆಯಿರಲಿಲ್ಲ. ಜಿನ್ನಾ ಕಾಂಗ್ರೆಸ್ ವಿರುದ್ಧ ವಿರೋಧವನ್ನು ಮುಂದುವರಿಸಿದರು. "ಪಾಕಿಸ್ತಾನ ನಮ್ಮ ಏಕೈಕ ಬೇಡಿಕೆಯಾಗಿದೆ, ಮತ್ತು ಖಂಡಿತ ದೈವಸಾಕ್ಷಿಯಾಗಿ ಅದನ್ನು ನಾವು ಪಡೆಯುತ್ತೇವೆ" ಎಂದು ಜಿನ್ನಾ ಹೇಳಿದುದನ್ನು ಮುಸ್ಲಿಂ ಲೀಗ್ ಪತ್ರಿಕೆ "ಡಾನ್" ಘೋಷಿಸಿತು. (Jinnah had continued opposing the Congress. "Pakistan is our only demand, and by God we will have it.", declared the Muslim League newspaper "Dawn".[86])
  • ಪೂರ್ಣ ಸ್ವಾತಂತ್ರ್ಯಕ್ಕಿಂತಲೂ ಕಡಿಮೆಯದನ್ನು ಏನನ್ನೂ ಗಾಂಧಿಯವರು ಸ್ವೀಕರಿಸುವುದಿಲ್ಲ ಎಂದಾಗ ಕ್ರಿಪ್ಸ್ನ ಮಿಷನ್ ವಿಫಲವಾಯಿತು. ಕ್ರಿಪ್ಸ್‍ರೊಂದಿಗೆ ಸಹಕರಿಸಲು ಗಾಧೀಜಿಯವರ ನಿರಾಕರಣೆಯಿಂದ ನೆಹರೂ ಮತ್ತು ಗಾಂಧಿಯವರ ನಡುವಿನ ಹಳಸಿದ ಸಂಬಂಧವು ತಂಪುಗೊಂಡಿತು, ಆದರೆ ಇಬ್ಬರೂ ನಂತರ ರಾಜಿ ಮಾಡಿಕೊಂಡರು. 15 ಜನವರಿ 1941 ರಂದು, ಗಾಂಧಿಯವರು ಹೀಗೆ ಹೇಳಿದರು:
      ಕೆಲವರು ಜವಾಹರಲಾಲ್ ಮತ್ತು ನಾನು ಪ್ರತ್ಯೇಕಗೊಂಡಿದ್ದೇವೆ ಎಂದು ಹೇಳುತ್ತಾರೆ. ನಮ್ಮನ್ನು ಬೇರ್ಪಡಿಸಲು ಅಭಿಪ್ರಾಯದ ಬೇಧಕ್ಕಿಂತ ಹೆಚ್ಚು ದೊಡ್ಡದು ಅಗತ್ಯವಿರುತ್ತದೆ. ನಾವು ಸಹೋದ್ಯೋಗಿಗಳಾಗಿದ್ದ ಸಮಯದಿಂದ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇವೆ ಮತ್ತು ಇನ್ನೂ ಕೆಲವು ವರ್ಷಗಳಿಂದ ನಾನು ಹೇಳುತ್ತಿದ್ದೇನೆ ಮತ್ತು ಈಗ ಮತ್ತೆ ಹೇಳುವುದೇನೆಂದರೆ ರಾಜಾಜಿಯಲ್ಲ ಆದರೆ ಜವಾಹರಲಾಲ್ ನನ್ನ ಉತ್ತರಾಧಿಕಾರಿಯಾಗುತ್ತಾರೆ. [87]
  • ಭಾರತವನ್ನು ಬಿಟ್ಟು ಹೋಗಲು (ಕ್ವಿಟ್ ಇಂಡಿಯಾ) ಬ್ರಿಟಿಷರಿಗೆ ಗಾಂಧಿಯವರು ಕರೆ ನೀಡಿದರು; ನೆಹರು, ಮಿತ್ರಪಕ್ಷದ (ಬ್ರಿಟಿಷರಿಗೆ) ಯುದ್ಧದ ಹೋರಾಟಕ್ಕೆ ಮುಜುಗರಕ್ಕೊಳಪಡಿಸಲು ಇಷ್ಟವಾಗದಿದ್ದರೂ, ಗಾಂಧಿಯವರ ಜೊತೆ ಸೇರದೆ ಬೇರೆ ಯಾವುದೇ ಪರ್ಯಾಯವಿಲ್ಲವಾಯಿತು. ಆಗಸ್ಟ್ 8, 1942 ರಂದು ಬಾಂಬೆ (ಈಗ ಮುಂಬೈ) ಕಾಂಗ್ರೆಸ್ ಪಕ್ಷವು “ಕ್ವಿಟ್ ಇಂಡಿಯಾ- ಭಾರತ ಬಿಟ್ಟು ತೊಲಗಿ” ನಿರ್ಣಯವನ್ನು ಅಂಗೀಕರಿಸಿತು. ಅದನ್ನು ಅನುಸರಿಸಿ, ಗಾಂಧಿ ಮತ್ತು ನೆಹರೂ ಸೇರಿದಂತೆ ಇಡೀ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಬಂಧಿಸಲಾಯಿತು. ಇದು ನೆಹರೂ ಅವರ ಒಂಭತ್ತನೇ ಮತ್ತು ಕೊನೆಯ ಬಂಧನ. ನೆಹರು ಅದರಿಂದ - 15 ಜೂನ್ 1945 ರಂದು ಹೊರಬಂದರು.
  • ಎಲ್ಲಾ ಕಾಂಗ್ರೆಸ್ ನಾಯಕತ್ವ ಜೈಲಿನಲ್ಲಿದ್ದ ಈ ಅವಧಿಯಲ್ಲಿ, ಜಿನ್ನಾರ ಮುಸ್ಲಿಂ ಲೀಗ್ ಬಲಪಡೆದು ಬೆಳೆಯಿತು. ಏಪ್ರಿಲ್ 1943 ರಲ್ಲಿ, ಮುಸ್ಲಿಂ ಲೀಗ್ ಚುನಾವಣೆಯಲ್ಲಿ ಬಂಗಾಳ ಸರ್ಕಾರಗಳನ್ನು ವಶಪಡಿಸಿಕೊಂಡಿತು ಮತ್ತು ಒಂದು ತಿಂಗಳ ನಂತರ, ನಾರ್ತ್ ವೆಸ್ಟ್ ಫ್ರಾಂಟೀಯರ್ ಪ್ರಾಂತವನ್ನು ಅದು ಆಕ್ರಮಿಸಿತು. ಈ ಪ್ರಾಂತಗಳಲ್ಲಿ ಯಾವಾಗಲೂ ಹಿಂದೆ ಲೀಗ್ ಬಹುಮತವನ್ನು ಹೊಂದಿರಲಿಲ್ಲ - ಕಾಂಗ್ರೆಸ್ ಸದಸ್ಯರ ಬಂಧನದಿಂದ ಮಾತ್ರಾ ಇದು ಸಾಧ್ಯವಾಯಿತು. ಜಿನ್ನಾ ನಿಯಂತ್ರಣದಡಿಯಲ್ಲಿ ಪಂಜಾಬ್ ಹೊರತುಪಡಿಸಿ ಎಲ್ಲ ಮುಸ್ಲಿಮ್ ಪ್ರಾಬಲ್ಯದ ಪ್ರಾಂತ್ಯಗಳೊಂದಿಗೆ, ಪ್ರತ್ಯೇಕ ಮುಸ್ಲಿಂ ರಾಜ್ಯದ ಕೃತಕ ಪರಿಕಲ್ಪನೆಯು ಒಂದು ವಾಸ್ತವವಾಗಿ (ರಿಯಾಲಿಟಿ) ಆಗಿ ಮಾರ್ಪಟ್ಟಿತು. ಆದಾಗ್ಯೂ, 1944 ರ ಹೊತ್ತಿಗೆ, ಜಿನ್ನಾ ಅವರ ಶಕ್ತಿ ಮತ್ತು ಘನತೆಯು ಕ್ಷೀಣಿಸುತ್ತಿತ್ತು. ಕಾರಾಗೃಹದಲ್ಲಿದ್ದ ಕಾಂಗ್ರೆಸ್ ಮುಖಂಡರಿಗೆ ಸಾಮಾನ್ಯ ಸಹಾನುಭೂತಿಯು ಮುಸ್ಲಿಮರಲ್ಲಿ ಬೆಳೆಯುತ್ತಿತ್ತು ಮತ್ತು ಪ್ರಾಂತ್ಯದ ಮುಸ್ಲಿಮ್ ಲೀಗ್ ಸರಕಾರದ ಹೆಗಲ ಮೇಲೆ ಎರಡು ಮಿಲಿಯನ್ ಜನರ ಸಾವಿನ 1943-44ರ ದುರ್ಘಟನೆಯಲ್ಲಿ 20 ಲಕ್ಷ ಜನ ಸಾವನ್ನಪ್ಪಿದರು. ಹಿಂದೂ ಮುಸ್ಲಿಮ್ ದಂಗೆಯಲ್ಲಿ ಸತ್ತವರ ಜೊತೆ - ಅದರಲ್ಲಿ ಬಂಗಾಳ ಕ್ಷಾಮದ ಮೇಲೆ ಹೆಚ್ಚಿನ ಆಪಾದನೆ ಇತ್ತು. ಒಮ್ಮೆ ಜಿನ್ನಾರವರ ಸಭೆಗಳಲ್ಲಿ, ಸಾವಿರಾರು ಸಂಖ್ಯೆಯಲ್ಲಿ ಎಣಿಸಿದ ಜನರಿದ್ದರೆ ನಂತರ ಸಂಖ್ಯೆಗಳು ಕ್ಷೀಣಿಸಿ ಶೀಘ್ರದಲ್ಲೇ ಕೆಲವು ನೂರಾರು ಸಂಖ್ಯೆಯನ್ನು ಹೊಂದಿತ್ತು. ಹತಾಶೆಯಲ್ಲಿ, ಜಿನ್ನಾ ರಾಜಕೀಯ ವ್ಯವಹಾರವನ್ನು ಬಿಟ್ಟು ಕಾಶ್ಮೀರದ ವಾಸ್ತವ್ಯಕ್ಕಾಗಿ ಹೋದರು.
  • ಮೇ 1944 ರಲ್ಲಿ ವೈದ್ಯಕೀಯ ಕಾರಣಕ್ಕೆ ಸೆರೆಮನೆಯಿಂದ ಬಿಡುಗಡೆಗೊಂಡು ಸೆಪ್ಟೆಂಬರ್ನಲ್ಲಿ ಬಾಂಬೆಯಲ್ಲಿ ಜಿನ್ನಾವನ್ನು ಭೇಟಿಯಾದಾಗ ಗಾಂಧಿಯವರು ತಮಗೆ ಅರಿವಿಲ್ಲದಂತೆ ಅವರ ಪ್ರತಿಷ್ಠೆಯನ್ನು ಹೆಚ್ಚಿಸಿಸಿದರು. ಅಲ್ಲಿ ಅವರು ಭಾರತದ ಉಳಿದ ಭಾಗದಿಂದ ಬೇರ್ಪಡಿಸಲು ಬಯಸುತ್ತಾರೆಯೇ ಎಂದು ತಿಳಿಯಲು ಯುದ್ಧದ ನಂತರ ಮುಸ್ಲಿಂ ಪ್ರದೇಶಗಳಲ್ಲಿ ಮುಸ್ಲಿಂ ಮುಖಂಡರಿಗೆ ಜನಮತ ಸಂಗ್ರಹದ ಅವಕಾಶವನ್ನು ನೀಡಿದರು. ಮೂಲಭೂತವಾಗಿ, ಅದು ಪಾಕಿಸ್ತಾನದ ತತ್ವವನ್ನು ಸ್ವೀಕರಿಸಿದ ಹಾಗೆ ಆಗಿತ್ತು - ಆದರೆ ಅದು ಸ್ಪಷ್ಟವಾದ ಪದಗಳಲ್ಲಿ ಪಾಕಿಸ್ತಾನದ ಉದಯಕ್ಕೆ ಒಪ್ಪಿ ಹೇಳಿದ್ದು ಅಲ್ಲ. ಆದ್ದರಿಂದ ನಿಖರವಾದ ಪದಗಳಲ್ಲಿ ಹೇಳಬೇಕೆಂದು ಜಿನ್ನಾ ಒತ್ತಾಯಿಸಿದರು; ಗಾಂಧಿ ಅದಕ್ಕೆ ನಿರಾಕರಿಸಿದರು ಮತ್ತು ಅದರ ಫಲವಾಗಿ ಮಾತುಕತೆ ಮುರಿಯಿತು. ಆದಾಗ್ಯೂ, ಜಿನ್ನಾ ತನ್ನ ಸ್ಥಾನ ಮತ್ತು ಲೀಗ್’ನ ಬಲವನ್ನು ಹೆಚ್ಚು ಬಲಪಡಿಸಿಕೊಂಡಂತೆ ಆಯಿತು.. ಕಾಂಗ್ರೆಸ್ಸಿನ ಅತ್ಯಂತ ಪ್ರಭಾವಶಾಲಿ ಕಾಂಗ್ರಸ್ ಸದಸ್ಯರು ಜಿನ್ನಾನೊಂದಿಗೆ ಸಮಾನ ಸ್ತರದಲ್ಲಿ ಮಾತುಕತೆ ನಡೆಸಿ ಕಾಣಿಸಿಕೊಂಡಿದ್ದರು. ಆದರ ಕಾರಣ ಜಿನ್ನಾಗೆ ಇತರ ವಿರೋದಿಗಳಾದü ಮುಸ್ಲಿಂ ಲೀಗ್ ಮುಖಂಡರು, ಮತ್ತು ಭಾರತದ ವಿಭಜನೆಗೆ ವಿರೋಧಿಸಿದವರು, ಶಕ್ತಿ ಕಳೆದುಕೊಂಡರು, ಅಥವಾ ಜಿನ್ನಾಗೆ ಸೋತರು.

ಭಾರತದ ಪ್ರಧಾನಿಯಾಗಿ (1947-64)

ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ದಿ.15 ಆಗಸ್ಟ್ 1947 ರಂದು ನಡೆದ ಸಮಾರಂಭದಲ್ಲಿ ಜವಾಹರಲಾಲ್ ನೆಹರೂ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕಾರ.ಲಾರ್ಡ್ ಮೌಂಟ್ಬ್ಯಾಟನ್ ಪ್ರತಿಜ್ಜ್ಞಾವಿಧಿ ಬೋಧಿಸಿದರು.
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಇಂದಿರಾ ಗಾಂಧಿ, ಜವಾಹರಲಾಲ್ ನೆಹರೂ, ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ತೀನ್‍ಮೂರ್ತಿ ಭವನ, ನೆಹರು ಅವರು ಪ್ರಧಾನಮಂತ್ರಿಯಾಗಿ ವಾಸಿಸುತ್ತಿದ್ದರು, ಈಗ ಅದು ಅವರ ಸ್ಮರಣಾರ್ಥ ವಸ್ತುಸಂಗ್ರಹಾಲಯ
  • ಆಗಸ್ಟ್ 15, 1947
  • ನೆಹರು ಮತ್ತು ಅವರ ಸಹೋದ್ಯೋಗಿಗಳನ್ನು 1946 ರ ಕ್ಯಾಬಿನೆಟ್ ಮಿಷನ್’ಗೆ (ಬ್ರಿಟಿಷ್ ಮಂತ್ರಿಮಂಡಲದ ಕಾರ್ಯನಿರ್ವಣೆಯ ದೂತ) ಭಾರತಕ್ಕೆ ಅಧಿಕಾರಕ್ಕೆ ವರ್ಗಾಯಿಸುವ ಯೋಜನೆಗಳನ್ನು ಪ್ರಸ್ತಾವಿಸಲು ಬಿಡುಗಡೆ ಮಾಡಲಾಯಿತು.
  • ಜವಾಹರಲಾಲ್ ನೆಹರೂ ಅವರು ಆಗಸ್ಟ್ 14 - 15, 1947 ರಂದು ನಡೆದ ಸಮಾರಂಭದಲ್ಲಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಲಾರ್ಡ್ ಮೌಂಟ್ಬ್ಯಾಟನ್’ ರಿಂದ ಆದೇಶ ಪಡೆದು ಶಪಥ ಮಾಡಿದರು. ನಾಯಕರಾಗಿ ಚುನಾಯಿತರಾದ, ನೆಹರು ಅವರು ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿದರು (ನಡುಗಾಲ ಸರ್ಕಾರ - ಸ್ವಾತಂತ್ರ ಪೂರ್ವದ ವೈಸ್’ರಾಯ ನೇಮಿತ ಬ್ರಿಟಿಷ್ ಅಧೀನ ತಾತ್ಕಾಲಿಕ ಸರ್ಕಾರ.), ಇದು ಕೋಮು ಹಿಂಸಾಚಾರ (ಪಾಕಿಸ್ತಾನ ಬೇಡಿಕೆಯ ಈಡೇರಿಕೆಗಾಗಿ ಜಿನ್ನಾರ "ಡೈರೆಕ್ಟ್ ಆಕ್ಷನ್" ಎಂಬ ಹಿಂಸೆ ಮತ್ತು ಹತ್ಯೆ - ಲೂಟಿಗೆ ಕರೆಯಿಂದ ಕೋಮುಗಲಭೆ) ಮತ್ತು ರಾಜಕೀಯ ಅವ್ಯವಸ್ಥತೆಯಿಂದಾಗಿ ದುರ್ಬಲಗೊಂಡಿತು ಮತ್ತು ಮುಸ್ಲಿಂ ಲೀಗಿನ ಮುಖಂಡರಾದ ಮುಹಮ್ಮದ್ ಅಲಿ ಜಿನ್ನಾರವರು ಪಾಕಿಸ್ತಾನದ ಪ್ರತ್ಯೇಕ ಮುಸ್ಲಿಂ ರಾಷ್ಟ್ರಕ್ಕಾಗಿ ಒತ್ತಾಯಿಸುತ್ತಿದ್ದರು. ಲೀಗ್ ಮತ್ತು ಕಾಂಗ್ರೆಸ್ ಗಳ ಒಕ್ಕೂಟಗಳನ್ನು ರೂಪಿಸಲು ವಿಫಲವಾದ ನಂತರ, ನೆಹರೂ ಇಷ್ಟವಿಲ್ಲದೆ ಭಾರತ ವಿಭಜನೆಯನ್ನು ಬೆಂಬಲಿಸಿದರು, ದಿ.3 ಜೂನ್ 1947 ರಂದು ಬ್ರಿಟೀಷರಿಂದ ಬಿಡುಗಡೆಯಾದ ಒಂದು ಯೋಜನೆ ಪ್ರಕಾರ, ಅವರು ಆಗಸ್ಟ್ 15 ರಂದು ಸ್ವತಂತ್ರ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು, ಮತ್ತು ಅವರ "ಟ್ರೈಸ್ಟ್ ವಿತ್ ಡೆಸ್ಟಿನಿ ಎಂಬ ಸ್ವತಂತ್ರಭಾರತದ ಉದ್ಘಾಟನೆಯ ಪ್ರಸಿದ್ಧ ಭಾಷಣವನ್ನು ಮಾಡಿದರು.[ಅದೇ]
        “ಬಹಳ ವರ್ಷಗಳ ಹಿಂದೆ ನಾವು ಉತ್ತಮ ಭವಿಷ್ಯದ ಗುರಿಸಾಧನೆಗಾಗಿ ವಚನಬದ್ದತೆ ಹೊಂದಿದ್ದೇವೆ (tryst - ಪ್ರೊಮಿಸ್- ವಚನಬದ್ಧತೆ, with destiny -ಗುರಿ, destination), ಮತ್ತು ಈಗ ನಾವು ನಮ್ಮ ಪ್ರತಿಜ್ಞೆಯ ಗುರಿಯನ್ನು ಪೂರ್ಣವಾಗಿ ಅಥವಾ ಪೂರ್ಣ ಶಕ್ತಿಯಿಂದ ಪಡೆದುಕೊಳ್ಳುವ, ಪೂರ್ಣವಾಗಿ ಅಲ್ಲದಿದ್ದರೂ ಬಹಳ ಮಟ್ಟಿಗೆ ಆದರೆ ಗಣನೀಯವಾಗಿ ಸಾಧಿಸುವ ಸಮಯ ಬಂದಿದೆ. ಈ ದಿನ ಮಧ್ಯರಾತ್ರಿಯ ಗಂಟೆಯ ಹೊಡೆದಾಗ, ಪ್ರಪಂಚವು ನಿದ್ರಿಸುತ್ತಿರುದಾಗ, ಭಾರತ ತನ್ನ ಜೀವನಕ್ಕಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ಎಚ್ಚರಗೊಳ್ಳುತ್ತಿದೆ. ಒಂದು ಶುಭ ಕ್ಷಣವು ಬರುತ್ತದೆ, ಆದರೆ ಇತಿಹಾಸದಲ್ಲಿ ಇದು ಅಪರೂಪವಾಗಿ ಬರುತ್ತದೆ, ನಾವು ಹಳೆಯದರಿಂದ ಹೊಸದಕ್ಕೆ ಬಂದಾಗ, ಒಂದು ಶಕೆಯ ಕೊನೆಗೊಂಡಾಗ ಮತ್ತು ರಾಷ್ಟ್ರದ ಆತ್ಮವು ದೀರ್ಘಕಾಲ ದಮನವಾದ ನಂತರ ಈಗ ಅದು ತನ್ನ ದನಿಯನ್ನು ಕಂಡುಕೊಳ್ಳುತ್ತದೆ. ಈ ಗಂಭೀರ ಕ್ಷಣದಲ್ಲಿ ನಾವು ಭಾರತ ಮತ್ತು ಅದರ ಜನರ ಸೇವೆಗೆ ಸಮರ್ಪಣೆ ಮಾಡುವ ಮತ್ತು ಮಾನವೀಯತೆಗೆ ಇನ್ನೂ ದೊಡ್ಡ ಕೊಡಿಗೆಯನ್ನೂ ನೀಡುವ ಪ್ರತಿಜ್ಞೆಯನ್ನೂ ತೆಗೆದುಕೊಳ್ಳುವುದು ಸೂಕ್ತವಾಗಿದೆ.” - (Tryst with Destiny.
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ನೆಹರೂ ಅವರ ಸಹೋದರಿ ಮೇಡಮ್ ಪಂಡಿತ್ ಅವರೊಂದಿಗೆ ಅಧ್ಯಕ್ಷ ಹ್ಯಾರಿ ಟ್ರೂಮನ್ ಮತ್ತು ಜವಾಹರಲಾಲ್ ನೆಹರು, ನೆಹರೂ ಅವರ ಭೇಟಿ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ಅಕ್ಟೋಬರ್ 1949

ಗಾಂಧೀಜಿಯವರ ಹತ್ಯೆ

  • ಗಾಂಧೀಜಿಯವರು 1948 ರ ಜನವರಿ 30 ರಂದು, ಪ್ರಾರ್ಥನಾ ಸಭೆಗೆ ಅವರು ಪ್ರವಚನ ನೀಡಲು ವೇದಿಕೆಗೆ ಹೋಗುತ್ತಿದ್ದಾಗ ಅವರನ್ನು ನಾಥೂರಾಮ್ ಗೋಡ್ಸೆ ಗುಂಡಿಟ್ಟು ಹತ್ಯೆಗೈದನು.

(ಕಾರಣ :-ಅಖಂಡ ಭಾರತವನ್ನು ಗಾಂಧಿ ಹಾಗೂ ನಹರು ಸೇರಿದ ಪ್ರಮುಖರಿಂದ ವಿಭಜನೆ ಮಾಡಿ, ಪಾಕಿಸ್ತಾನ ಮಾಡಿದ್ದಕ್ಕಾಗಿ.. ಅಲ್ಲದೇ ಗಾಂಧಿಯವರು ಬಂಗಾಳವನ್ನು, ಹೈದರಾಬಾದ್ ಪ್ರಾಂತವನ್ನು ಸಹ ಪಾಕಿಸ್ತಾನಕ್ಕೆ ವಹಿಸಲು ಮುಂದಾಗುತ್ತಿದ್ದರು.)

ಭಾರತ ವಿಭಜನೆಯ ಸಮಯದಲ್ಲಿ ಆದ ಒಪ್ಪಂದದಂತೆ ಪಾಕಿಸ್ತಾನಕ್ಕೆ ಕೊಡಬೇಕಾದ ಹಣವನ್ನು ಭಾರತವು ಪಾವತಿಸುವಂತೆ ಗಾಂಧಿಯವರು ಒತ್ತಾಯಿಸಿ, ಭಾರತವನ್ನು ದುರ್ಬಲಗೊಳಿಸಲು ಜವಾಬ್ದಾರಿಯೆಂದು ಭಾವಿಸಿದ್ದನು.  ಗಾಂಧೀಜಿಯ ಹತ್ಯೆಯ ನಂತರ ನೆಹರು ರೇಡಿಯೊದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು:
        ಸ್ನೇಹಿತರೇ ಮತ್ತು ಒಡನಾಡಿಗಳೇ, ಬೆಳಕು- ನಮ್ಮ ಜೀವಗಳ ಬೆಳಕು ಹೊರಟುಹೋಗಿದೆ, ಮತ್ತು ಎಲ್ಲೆಡೆಯೂ ಕತ್ತಲೆ ತುಂಬಿದೆ, ಮತ್ತು ನಿಮಗೆ ಏನು ಹೇಳಬೇಕೆಂದು ಅಥವಾ ಅದನ್ನು ಹೇಗೆ ಹೇಳಬೇಕೆಂದು ನನಗೆ ಸರಿಯಾಗಿ ಗೊತ್ತಾಗುತ್ತಿಲ್ಲ. ನಮ್ಮ ಪ್ರೀತಿಯ ಮುಖಂಡ, ಬಾಪು ಎಂದು ನಾವು ಕರೆಯುವ, ನಾವು ರಾಷ್ಟ್ರ ಪಿತ ಎಂದು ಕರೆಯುತ್ತಿದ್ದ ಅವರು, ಈಗ ಬದಿಕಿಲ್ಲ. ಬಹುಶಃ ನಾನು ಆ ರೀತಿ ಹೇಳುವುದು ತಪ್ಪಿರಬಹುದು ; ಆದಾಗ್ಯೂ, ನಾವು ಅವರನ್ನು ನಾವು ಈ ಹಲವು ವರ್ಷಗಳಿಂದ ನೋಡಿದಂತೆ ಮತ್ತೆ ಅವರನ್ನು ನೋಡಲಾಗುವುದಿಲ್ಲ, ನಾವು ಅವರ ಬಳಿಗೆ ಸಲಹೆಗಾಗಿ ಓಡುಲಾಗುವುದಿಲ್ಲ ಅಥವಾ ಅವರಿಂದ ಸ್ವಾಂತನವನ್ನು ಪಡೆಯಲಾರೆವು , ಅದು ನನಗೆ ಮಾತ್ರವಲ್ಲ, ಆದರೆ ಅದು ಈ ದೇಶದಲ್ಲಿ ಲಕ್ಷಾಂತರ ಮತ್ತು ಲಕ್ಷಗಟ್ಟಲೆ ಜನರಿಗೆ ಅನ್ವಯಿಸುವುದು.
  • ಗಾಂಧಿಯವರ ಮರಣ ಮತ್ತು ಅಂತ್ಯಕ್ರಿಯೆಯು ನೆಹರು ಮತ್ತು ಪಟೇಲರ ಅಡಿಯಲ್ಲಿ ಹೊಸ ಭಾರತ ರಾಷ್ಟ್ರದ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡಿದೆ ಎಂದು ಯಾಸ್ಮಿನ್ ಖಾನ್ ವಾದಿಸಿದರು. ಎರಡು ವಾರಗಳ ಅವಧಿಯಲ್ಲಿ ಅಂತ್ಯಕ್ರಿಯೆ, ಶವಸಂಸ್ಕಾರದ ಆಚರಣೆಗಳು ಮತ್ತು ಹುತಾತ್ಮರ ಚಿತಾಭಸ್ಮವನ್ನು ವಿತರಿಸುವುದು-ಮಿಲಿಯನ್‍ಗಟ್ಟಲೆ ಜನರು ಭಾಗವಹಿಸಿದ ಮತ್ತು ನೂರಾರು ಮಿಲಿಯನ್ ಜನರು ವೀಕ್ಷಿಸಿದ ಈ ಐತಿಹಾಸಿಕ ಸನ್ನಿವೇಶವನ್ನು ಕಾಂಗ್ರೆಸ್ ಭಾರೀ ದುಃಖದ ಸಾರ್ವಜನಿಕ ಪ್ರದರ್ಶನಗಳನ್ನು ಬಿಗಿಯಾಗಿ -ಸಮರ್ಥವಾಗಿ ನಿಯಂತ್ರಿಸಿತು. ಈ ಸಮಯದಲ್ಲಿ ಸರ್ಕಾರವು ತನ್ನ ಅಧಿಕಾರವನ್ನು ಪ್ರತಿಪಾದಿಸುವುದು, ಕಾಂಗ್ರೆಸ್ ಪಕ್ಷದ ನಿಯಂತ್ರಣವನ್ನು ಕಾನೂನುಬದ್ಧಗೊಳಿಸುವುದು ಮತ್ತು ಎಲ್ಲಾ ಧಾರ್ಮಿಕ ಅನಧಿಕೃತ ಪ್ಯಾರಾ-ಮಿಲಿಟರಿ ಗುಂಪುಗಳನ್ನು ನಿಗ್ರಹಿಸುವುದು ಅಗತ್ಯಗುರಿಯಾಗಿತ್ತು. ನೆಹರೂ ಮತ್ತು ಪಟೇಲ್ ಅವರು ಆರ್‍ಎಸ್ಎಸ್, ಮುಸ್ಲಿಂ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ಖಾಕ್ಸಾರ್ ಗುಂಪುಗಳ ಸುಮಾರು 200,000 ಜನರನ್ನು ಬಂಧನಕ್ಕೊಳಪಡಿಸಿದರು. ಗಾಂಧೀಜಿಯವರ ಮರಣ ಮತ್ತು ಶವಸಂಸ್ಕಾರವು ದೂರ ದೂರದ ಜನರನ್ನು ಭಾರತೀಯ ಜನರೊಂದಿಗೆ ಸಂಪರ್ಕ ಕಲ್ಪಿಸಿತು. ಮತ್ತು ಭಾರತದ ಜನರಿಗೆ ಸ್ವಾತಂತ್ರ್ಯದ ಪರಿವರ್ತನೆಯ ಸಮಯದಲ್ಲಿ ಧಾರ್ಮಿಕ ಪಕ್ಷಗಳನ್ನು ನಿಗ್ರಹಿಸುವ ಅಗತ್ಯವನ್ನು ಇನ್ನಷ್ಟು ಅರ್ಥವಾಗುವಂತೆ ಮಾಡಿಕೊಟ್ಟಿತು.

ತಂದೆಗೆ ಇಂದಿರಾ ಸೇವೆ

ಪಾಕಿಸ್ತಾನಕ್ಕಾಗಿ ಜಿನ್ನಾರವರ ಕಠಿಣ ನಿಲುವು
  • Jinnah, who had embraced separate electorates and the exclusive right of the League to represent Muslims, was converted to the idea that Muslims needed a separate state to protect their rights. Jinnah came to believe that Muslims and Hindus were distinct nations, with unbridgeable differences—a view later known as the Two Nation Theory. Jinnah declared that a united India would lead to the marginalization of Muslims, and eventually civil war between Hindus and Muslims.Muhammad Ali Jinnah:Encyclopedia;Wikis
ಭಾರತ ವಿಭಜನೆಗೆ ನೆಹರೂ ಅಥವಾ ಗಾಂಧಿ ಕಾರಣವೇ?
  • ಮಹಮದಾಲಿ ಜಿನ್ನಾ ಅವರು - ಓಕ್ಕೂಟ ಭಾರತದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಮತದಾನದ ಹಕ್ಕನ್ನು ಮತ್ತು ಲೀಗ್‍ ಮಾತ್ರಾ ಮುಸ್ಲಿಮರನ್ನು ಪ್ರತಿನಿಧಿಸುವ ಪ್ರತ್ಯೇಕ ಹಕ್ಕನ್ನು ಹೊಂದಿರಬೇಕೆಂದು ಮೊದಲು ಬೇಡಿಕೆ ಇಟ್ಟರು. ಅದನ್ನು ಕಾಂಗ್ರೆಸ್ ತಿರಸ್ಕರಿಸಿದಾಗ, ಜಿನ್ನಾ ಅವರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಮುಸ್ಲಿಮರು ಪ್ರತ್ಯೇಕ ರಾಜ್ಯವನ್ನು ಹೊಂದಬೇಕೆಂಬ ಕಲ್ಪನೆಗೆ ಬಂದರು. ಮುಸ್ಲಿಮರು ಮತ್ತು ಹಿಂದೂಗಳು ವಿಭಿನ್ನ ರಾಷ್ಟ್ರಗಳಾಗಿದ್ದಾರೆ ಎಂದು ಜಿನ್ನಾ ನಂಬಿದ್ದರು - ಹೊಂದಾಣಿಕೆಯಾಗದ ಭಿನ್ನತೆಗಳು ಇವೆ; -ನಂತರದಲ್ಲಿ ಇದು "ಎರಡು ರಾಷ್ಟ್ರ ಸಿದ್ಧಾಂತ" ಎಂದು ಕರೆಯಲ್ಪಡುವ ಒಂದು ಸಿದ್ಧಾಂತ ವನ್ನು ಮುಂದಿಟ್ಟರು. [ಮೇಲಿನದು] ಜಿನ್ನಾ ಅವರು, 'ಒಂದು ಏಕೈಕ ಭಾರತವು ಮುಸ್ಲಿಮರನ್ನು ಕಟ್ಟಕಡೆಗೆ ದೂಡುವುದು (ಮೂಲೆಗುಂಪು ಮಾಡುವುದು) ಮತ್ತು ಅಂತಿಮವಾಗಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಜನಾಂಗ ಯುದ್ಧಕ್ಕೆ ಕಾರಣವಾಗಲಿದೆ' ಎಂದು ಘೋಷಿಸಿದರು.
  • ಈ ಜಿನ್ನಾರ ನಿಲುವಿಗೆ ವಿರೋಧ - ಮತ್ತು ಕೇಂದ್ರಪ್ರಧಾನ ಒಕ್ಕೂಟ ಸ್ವತಂತ್ರ ಭಾರತದ ಪರ ತಳೆದ ನೆಹರು ಅವರ ನಿಲುವು- ಭಾರತ ವಿಭಜನೆಗೆ ಕಾರಣ ಎಂಬ ಕೆಲವರ ವಾದ ವಿರೋಧಾಭಾಸವಾಗಿ ತೋರುತ್ತದೆ. "
.
  • ನಂತರದ ವರ್ಷಗಳಲ್ಲಿ, ಭಾರತದ ವಿಭಜನೆಗಾಗಿ ನೆಹರೂರನ್ನು ದೂಷಿಸಲು ಯತ್ನಿಸಿದ ಇತಿಹಾಸದ ಪರಿಷ್ಕೃತವಾದಿ ಶಾಖೆಯೊಂದು ಹೊರಹೊಮ್ಮಿತು, 1947 ರಲ್ಲಿ ಸ್ವತಂತ್ರ ಭಾರತಕ್ಕಾಗಿ ತಮ್ಮ ಹೆಚ್ಚಿನ ಕೇಂದ್ರ ಸರ್ಕಾರ ಅಧಿಕಾರವುಳ್ಳ ಭಾರತವನ್ನು ಸ್ಥಾಪಿಸುವ ಅವರ ನೀತಿಗಳನ್ನು ಉಲ್ಲೇಖಿಸಿ, ಟೀಕಿಸಿದರು. (ಕೆಲವರು ವಿರೋಧಿಸಿದರೂ ನೆಹರು ಸ್ವತಂತ್ರ ರಾಜ್ಯಗಳಿಗೆ ಅವಕಾಶವಿಲ್ಲದ, ಕೇಂದ್ರ ಪ್ರಧಾನ ಒಕ್ಕೂಟದ ಬಾರತಕ್ಕಾಗಿ ಮತ್ತು ಅದಕ್ಕೆ ಪೂರಕವಾದ ಸಂವಿಧಾನವಿರಬೇಕು ಎಂದು ಗಟ್ಟಿ ನಿಲುವು ತಾಳಿದರು. ಭಾರತವು ಇಂದು ಒಂದೇ ರಾಷ್ಟ್ರವಾಗಿ ಉಳಿಯಲು ಅವರ ನಿಲುವು ಕಾರಣವಾಗಿದೆ.) ಜಿನ್ನಾ ವಿಕೇಂದ್ರೀಕೃತ ಭಾರತಕ್ಕೆ ಪರವಾಗಿದ್ದು ಕೇಂದ್ರೀಕೃತ ಭಾರತ ನೀತಿಯನ್ನ ವಿರೋಧಿಸಿದರು. ಜಿನ್ನಾ ಪೂರ್ಣ ಸ್ವತಂತ್ರ ಪಾಕಿಸ್ತಾನದ ಬೇಡಿಕೆಯನ್ನೇ ಇಟ್ಟಿದ್ದರು. ಅವರನ್ನು ಒಲಿಸಲು ಫಡರಲ್ ವ್ಯವಸ್ಥೆಯ ಸಡಿಲವಾದ ಸುಮಾರು ೬೦೦ ಸ್ವತಂತ್ರ ಸಂಸ್ಥಾನಗಲ ಭಾರತ ಒಕ್ಕೂಟ ರಚಿಸಿದ್ದರೆ, ಇಂಗ್ಲೆಂಡಿನಿಂದ ಐರ್ಲೆಂಡ್ ಬೇರೆಯಾದಂತೆ ಎಲ್ಲಾ ಸಂಸ್ಥಾನಗಳೂ ಸ್ವತಂತ್ರವಾಗುತ್ತಿದ್ದವು. ಆ ನೀತಿಯಂತೆ ಎಲ್ಲ ಸಂಸ್ಥಾನಗಳೂ ಸ್ವತಂತ್ರವಾಗಿದ್ದು ನಂತರ ಬಿನ್ನಾಭಿಪ್ರಾಯ ಉದ್ಭವಿಸಿದಾಗ ಬೇರೆಯಾಗುತ್ತಿದ್ದವು ಮತ್ತು ಘರ್ಷಣೆಗೆ ಇಳಿಯುತ್ತಿದ್ದವು. ಭಾರತ ಅನೇಕ ರಾಜ್ಯಗಳಾಗಿ ಛಿದ್ರವಾಗುತ್ತಿತ್ತು.
  • ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ, ನೆಹರೂ ಆಗಾಗ್ಗೆ ಅವರ ಮಗಳು ಇಂದಿರಾಗೆ ಅವಲಂಬಿಸುತ್ತಾ ತನ್ನನ್ನು ನೋಡಿಕೊಳ್ಳಲು ಮತ್ತು ಅವರ ವೈಯಕ್ತಿಕ ವ್ಯವಹಾರಗಳನ್ನು ನಿರ್ವಹಿಸಲು ಹೇಳುತ್ತಿದ್ದರು. ಅವರ ನೇತೃತ್ವದಲ್ಲಿ, ಕಾಂಗ್ರೆಸ್ 1952 ರ ಚುನಾವಣೆಯಲ್ಲಿ ಅಗಾಧವಾದ ಬಹುಮತವನ್ನು ಗಳಿಸಿತು. ಇಂದಿರಾ ನೆಹರು ಅವರ ಅಧಿಕೃತ ನಿವಾಸಕ್ಕೆ ತೆರಳಿದರು ಮತ್ತು ಅವರಿಗೆ ಸೇವೆಮಾಡಲು ನಿಂತರು. ಭಾರತ ಮತ್ತು ಪ್ರಪಂಚದಾದ್ಯಂತ ಅವರ ನಿರಂತರ ಸಹಚರರಾಗಿದ್ದರು. ಇಂದಿರಾ ವಾಸ್ತವವಾಗಿ ನೆಹರುರ ಮುಖ್ಯ (ಉಚಿತ) ಸಿಬ್ಬಂದಿಯಾಗಿದ್ದರು. [105][106]
  • 1957 ರ ಚುನಾವಣೆಯಲ್ಲಿ ನೆಹರೂ ಕಾಂಗ್ರೆಸ್ ಗೆ ಪ್ರಮುಖ ಗೆಲುವು ನೀಡಿತು, ಆದರೆ ಅವರ ಸರ್ಕಾರವು ಏರುತ್ತಿರುವ ಸಮಸ್ಯೆಗಳು ಮತ್ತು ಟೀಕೆಗಳನ್ನು ಎದುರಿಸುತ್ತಿತ್ತು. ಆಂತರಿಕ ಪಕ್ಷದ ಭ್ರಷ್ಟಾಚಾರ ಮತ್ತು ಕಲಹದಿಂದ ನಿರಾಶೆಗೊಂಡ ನೆಹರೂ ಅವರು ರಾಜೀನಾಮೆ ನೀಡಲು ಯೋಚಿಸಿದರು ಆದರೂ ಸೇವೆಯನ್ನು ಮುಂದುವರಿಸಿದ್ದರು. 1959 ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಅವರ ಪುತ್ರಿ ಇಂದಿರಾ ಅವರ ಚುನಾವಣೆಯಾದಾಗ ನೆಪೋಟಿವಾದದ (ನೆಪೋಟಿಸಮ್) ಬಗ್ಗೆ ಟೀಕೆಗೊಳಗಾಯಿತು, ಆದರೆ ನೆಹರು ಇಂದಿರಾ ಅವರ ಚುನಾವಣೆಯ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದರೂ ಸಹ, ಇದು "ರಾಜವಂಶವಾದ" ವನ್ನು ಹೋಲುವುದು ಕಂಡಿದೆ ಎಂಬ ಕಾರಣದಿಂದಾಗಿ; "ಇದು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ಮತ್ತು ಅನಪೇಕ್ಷಿತ ವಿಷಯ" ಎಂದು ಅವರು ಹೇಳಿದರು, ಮತ್ತು ಅವರ ಕ್ಯಾಬಿನೆಟ್ನಲ್ಲಿ ಇಂದಿರಾ ಅವರಿಗೆ ಸ್ಥಾನವನ್ನು ನಿರಾಕರಿಸಿದರು. ಇಂದಿರಾ ಸ್ವತಃ ತನ್ನ ತಂದೆಯೊಂದಿಗೆ ನೀತಿಯವಿಷಯದಲ್ಲಿ ವಿರೋಧಿಸುತ್ತಿದ್ದಳು; ಮುಖ್ಯವಾಗಿ, ಅವರು ತಮ್ಮ ಸ್ವಂತ ಆಕ್ಷೇಪಣೆಗಳನ್ನು ಕೇರಳ ರಾಜ್ಯದ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸರಕಾರವನ್ನು ವಜಾಗೊಳಿಸಲು ಒತ್ತಡ ತಂದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಈ ಮೂಲಕ ತಮ್ಮ ವೈಯಕ್ತಿಕ ವಿರೋಧವನ್ನು ವ್ಯಕ್ತಪಡಿಸಿದರು. ನೆಹರು ಆಗಾಗ್ಗೆ ಇಂದಿರಾ ಅವರ ಹಠ ಮತ್ತು ಸಂಸತ್ತಿನ ಸಂಪ್ರದಾಯದ ಕಡೆಗಣಿಸುವಿಕೆಯಿಂದ ಮುಜುಗರಕ್ಕೊಳಗಾಗಲು ಆರಂಭಿಸಿದರು, ಮತ್ತು ತನ್ನ ತಂದೆಯಿಂದ ಬೇರೆಯಾದ ತನ್ನ ಸ್ವತಂತ್ರವಾದ ಸ್ವಭಾವವನ್ನು ತೋರಿಸಿದಾಗ ಬೇರೆ ದುರುದ್ದೇಶಗಳಿಲ್ಲದಿದ್ದರೂ ತಾನು ಹೇಳಿದ್ದನ್ನೇ ದೃಢೀಕರಿಸಿದಾಗ ನೆಹರು "ನೊಂದುಕೊಳ್ಳುತ್ತ್ತಿದ್ದರು" ಮತ್ತು "ಅಸಮಾಧಾನಗೊಳ್ಳುತ್ತಿದ್ದರು.
  • 1962 ರ ಚುನಾವಣೆಗಳಲ್ಲಿ ನೆಹರೂ ಅವರು ಕಾಂಗ್ರೆಸ್ ಗೆಲುವಿನ ಬಹುಮತದೊಂದಿಗೆ ಜಯಗಳಿಸಿದರು. ಆದರೂ ಕಮ್ಯುನಿಸ್ಟ್ ಮತ್ತು ಸಮಾಜವಾದಿ ಪಕ್ಷಗಳು ಪ್ರಮುಖ ಫಲಾನುಭವಿಗಳಾಗಿದ್ದವು, ಜೊತೆಗೆ ಭಾರತೀಯ ಜನಸಂಘದಂತಹ ಕೆಲವು ಬಲಪಂಥೀಯ ಗುಂಪುಗಳು ಉತ್ತಮ ಫಲಪಡೆದವು.

ಹತ್ಯೆ ಯತ್ನಗಳು ಮತ್ತು ಭದ್ರತೆ

  • ಅಧಿಕೃತವಾಗಿ ತಿಳಿದಂತೆ ನೆಹರು ಅವರ ಮೇಲೆ ನಾಲ್ಕು ಹತ್ಯೆಯ ಪ್ರಯತ್ನಗಳು ನಡೆದಿವೆ. 1947 ರಲ್ಲಿ ಭಾರತ ವಿಭಜನೆಯ ಸಮಯದಲ್ಲಿ ಅವರು ನಾರ್ತ್-ವೆಸ್ಟ್ ಫ್ರಾಂಟಿಯರ್ ಪ್ರಾಂತ್ಯಕ್ಕೆ (ಈಗ ಪಾಕಿಸ್ತಾನದಲ್ಲಿದೆ) ಭೇಟಿ ನೀಡುತ್ತಿರುವಾಗ ಅವರು ಕಾರಿನಲ್ಲಿದ್ದಾಗ ಅವರ ಜೀವಹತ್ಯೆಯ ಮೊದಲ ಪ್ರಯತ್ನವು ನೆಡೆಯಿತು. ಎರಡನೆಯದು ಮಹಾರಾಷ್ಟ್ರದಲ್ಲಿ 1955 ರಲ್ಲಿ ರಿಕ್ಷಾ-ಎಳೆಯುವವನು ಚಾಕು-ಧಾರಿಯಾಗಿ ಆಕ್ರಮಣ ಮಾಡಿದಾಗ;. . ಮೂರನೆಯದು 1956 ರಲ್ಲಿ ಬಾಂಬೆಯಲ್ಲಿ (ಈಗ ಮಹಾರಾಷ್ಟ್ರ) ಸಂಭವಿಸಿತು. ನಾಲ್ಕನೆಯದು ಮಹಾರಾಷ್ಟ್ರದಲ್ಲಿ 1961 ರಲ್ಲಿ ರೈಲು ಹಳಿಗಳ ಮೇಲೆ ವಿಫಲ ಬಾಂಬು ಸ್ಪೋಟ ಪ್ರಯತ್ನವಾಗಿತ್ತು. ತಮ್ಮ ಜೀವಕ್ಕೆ ಬೆದರಿಕೆಗಳಿದ್ದರೂ, ನೆಹರು ತಮ್ಮ ಸುತ್ತ ಹೆಚ್ಚು ಭದ್ರತೆ ಹೊಂದಿರುವುದನ್ನು ತಿರಸ್ಕರಿಸಿದರು ಮತ್ತು ಅವರ ಚಲನ- ವಲನದ ಕಾರಣ ಜನರ ಸಂಚಾರವನ್ನು ಅಡ್ಡಿಪಡಿಸಲು ಇಷ್ಟಪಡಲಿಲ್ಲ.

ನೆಹರು ಅವರ ಆರ್ಥಿಕ ನೀತಿಗಳು

  • ವಿವರಕ್ಕೆ ನೋಡಿ:ಭಾರತ ದೇಶದ ಪಂಚ ವಾರ್ಷಿಕ ಯೋಜನೆಗಳು
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
1956 ರ ಜೂನ್ನಲ್ಲಿ ಪಶ್ಚಿಮ ಜರ್ಮನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನೆಹರು ಅವರು ಚಾನ್ಸೆಲರ್ ಕೊನ್ರಾಡ್ ಅಡೆನೌರ್ ಮತ್ತು ಡಾಯ್ಚ ಬ್ಯಾಂಕ್ ಅಧ್ಯಕ್ಷ ಹರ್ಮನ್ ಜೋಸೆಫ್ ಅಬ್ಸ್‍ರೊಡನೆ ಭೇಟಿ ನೀಡಿದರು.
  • ಆಮದು ಬದಲಿ/ಅಮದನ್ನು ಸರಿತೂಗಿಸುವ ಕೈಗಾರೀಕರಣದ ಆಧಾರದ ಮೇಲೆ ನೆಹರು ಆರ್ಥಿಕ ನೀತಿಗಳನ್ನು ಜಾರಿಗೆ ತಂದರು ಮತ್ತು ಸರ್ಕಾರವು ನಿಯಂತ್ರಣವುಳ್ಳ ಸಾರ್ವಜನಿಕ ವಲಯದ ಮತ್ತು ಖಾಸಗಿ ನಿಯಂತ್ರಣ ವಲಯವುಳ್ಳ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಜಾರಿಗೆ ತಂದರು. ಭಾರತೀಯ ಆರ್ಥಿಕತ ಅಭಿವೃದ್ಧಿ ಮತ್ತು ಆಧುನೀಕರಣಕ್ಕೆ ಮೂಲಭೂತ ಕೈಗಾರಿಕೆಗಳು (ಇತರೆ ಎಲ್ಲಾ ಕೈಗಾರಿಕೆ ಉದ್ಯಮಗಳಿಗೆ ಬೇಕಾದ ಬಿಡಿಭಾಗ ಮತ್ತು ಯಂತ್ರಗಳನ್ನು ತಯಾರಿಸುವ ಉದ್ಯಮಗಳು -ಬಿಇಎಲ್’, ಬಿಎಚ್’ಇಎಲ್’ನಂತೆ) ಮತ್ತು ಭಾರೀ ಉದ್ಯಮದ ಸ್ಥಾಪನೆ ಆಧಾರವಾಗಿದೆ ಎಂದು ಅವರು ನಂಬಿದ್ದರು. ಸರ್ಕಾರ, ಮುಖ್ಯವಾಗಿ ಮುಖ್ಯ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಾದ ಉಕ್ಕು, ಕಬ್ಬಿಣ, ಕಲ್ಲಿದ್ದಲು, ಮತ್ತು ಶಕ್ತಿಗಳಿಗೆ (ವಿದ್ಯತ್) ಬಂಡವಾಳ ಹೂಡಲು ನಿರ್ದೇಶನ ನೀಡಿತು - ಸಬ್ಸಿಡಿಗಳು ಮತ್ತು ರಕ್ಷಣಾ ನೀತಿಯೊಂದಿಗೆ ಅವುಗಳ ಅಭಿವೃದ್ಧಿಗೆ ಉತ್ತೇಜನ ನೀಡಿತು. ಪಂಚವಾರ್ಷಿಕ ಯೋಜನೆಗಳಡಿಯಲ್ಲಿ ಬರಗಾಲ ಮತ್ತು ಆಹಾರದ ಕೊರತೆ ನೀಗಲು ಅನೇಕ ಸಣ್ಣ ಮತ್ತು ದೊಡ್ಡ ನೀರಾವರಿ ಅಣೆಕಟ್ಟುದಳನ್ನು ಕಟ್ಟಲು ಮತ್ತು ಕಾಲುವೆ ನಿರ್ಮಿಸವ ಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು. ಗ್ರಾಮಾಭಿವೃದ್ಧಿ ಯೋಜನೆಗಳು ಜಾರಿಯಾದವು. ನಿರಕ್ಷರತೆ ನೀಗಲು ಪ್ರಾಥಮಿಕ ಕಡ್ಡಾಯ ಶಿಕ್ಷಣ ಜಾರಿಗೆ ಬಂತು. ಅನೇಕ ಉನ್ನತ ಶಿಕ್ಷಣ ಸಂಸ್ತೆಗಳನ್ನೂ, ತಾತ್ರಿಕ ವೈದ್ಯಕೀಯ ಶಿಕ್ಷನ ಸಂಸ್ಥೆಗಳನ್ನೂ ಆರಂಬಿಸಲಾಯಿತು. ಉದ್ಯೋಗ ಸೃಷ್ಟಿಗಾಗಿ ಸಣ್ಣ ಮತ್ತು ಗುಡಿಕೈಗಾರಿಕೆಗೆ ಉತ್ತೇಜನ ಮತ್ತು ರಕ್ಷಣೆ ನೀಡಲಾಯಿತು.
  • ಶೀತಲ ಸಮರದ ಅವಧಿಯಲ್ಲಿ ಅಲಿಪ್ತ- ನೀತಿಯ- ನೀತಿ ಅರ್ಥಾತ್ ನೆಹರೂ ಅವರು ಭಾರತದ ಕೈಗಾರಿಕಾ ತಳಹದಿಯ ಮೂಲವನ್ನು ಮೊದಲಿನಿಂದ ನಿರ್ಮಿಸಲು ವಿದ್ಯುತ್ ಶಕ್ತಿಗಳನ್ನು ವಿಶ್ವದ ಎರಡೂ ಬಣಗಳಿಂದ ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ಪಡೆದರು. (ಅಮೇರಿಕಾ ಮತ್ತು ರಷ್ಯಾ ಎರಡು ಶತ್ರು ಬಣ - ಶೀತಲ ಸಮರದಲ್ಲಿ ತೊಡಗಿದ್ದವು) ಸೋವಿಯೆತ್ ಯೂನಿಯನ್ ಮತ್ತು ಪಶ್ಚಿಮ ಜರ್ಮನಿಯ ಸಹಾಯದಿಂದ ಬೊಕೊರೋ ಮತ್ತು ರೂರ್ಕೆಲಾದಲ್ಲಿ ಸ್ಟೀಲ್ ಗಿರಣಿ ಸಂಕೀರ್ಣಗಳನ್ನು ನಿರ್ಮಿಸಲಾಯಿತು. ಗಣನೀಯ ಪ್ರಮಾಣದ ಕೈಗಾರಿಕಾ ಅಭಿವೃದ್ಧಿ ಇತ್ತು. 1950 ರಿಂದ 1965 ರ ನಡುವೆ ಉದ್ಯಮವು ವಾರ್ಷಿಕವಾಗಿ 7.0 ರಷ್ಟು ಏರಿಕೆ ಕಂಡಿದೆ – ಇದರ ಫಲವಾಗಿ 21 ನೇ ಶತಮಾನದ ಆರಂಭದಲ್ಲಿ ಬಹುತೇಕವಾಗಿ ಕೈಗಾರಿಕಾ ಉತ್ಪಾದನೆಯಲ್ಲಿ ಭಾರತವನ್ನು ವಿಶ್ವದ ಏಳನೇ ಅತಿ ದೊಡ್ಡ ಕೈಗಾರಿಕಾ ದೇಶವೆನಿಸಿದೆ. ಇದು ಭಾರತದಲ್ಲಿ 1947 ರಲ್ಲಿ 35 ಕೋಟಿ ಜನಸಂಖ್ಯೆ ಇದ್ದು ಆಹಾರದ ಕೊರತೆಯನ್ನು ಅನುಭವಿಸುತ್ತಿದ್ದ ಭಾರತ 2011 ರ ಸಮಯಕ್ಕೆ 131 ಕೋಟಿಗೆ ಜನಸಂಖ್ಯೆ ಏರಿದರೂ ಅಭವೃದ್ಧಿ ದರವನ್ನು ಕಾಯ್ದು ಕೊಂಡಿದೆ ಮತ್ತ ಆಹಾರ ಧಾನ್ಯಗಳನ್ನು ರಫ್ತುಮಾಡವ ಮಟ್ಟಕ್ಕೆ ಏರಿದೆ ಆದಾಗ್ಯೂ, ನೆಹರು ಯುಗದ ನಂತರ ಭಾರತವು ಆಮದು ಬದಲಿ ಕೈಗಾರಿಕೀಕರಣವನ್ನು(import substitution industrialisation,) ಮುಂದುವರೆಸಿದೆ ಎಂದು ನೆಹರು ಅವರರ ವಿಮರ್ಶಕರು ವಾದಿಸಿದರು, ಇದು ಅದರ ಉತ್ಪಾದನಾ ಕೈಗಾರಿಕೆಗಳ ಅಂತರರಾಷ್ಟ್ರೀಯ ಸ್ಪರ್ಧಾತ್ಮಕತೆಯನ್ನು ದುರ್ಬಲಗೊಳಿಸಿದೆ ಎಂಬುದು ವಾದ. ೧೯೯೦ ರ ವರೆಗೂ ಭಾರತ ಅಂತರರಾಷ್ಟ್ರೀಯ ಸ್ಪರ್ಧಾತ್ಮಕತೆಗೆ ಮುಕ್ತ ಅವಕಾಶ ನೀಡದೆ ಎಚ್ಚರಿಕೆಯ ಅರ್ಥನೀತಿಯನ್ನು ಅನುಸರಿಸಿತು (ನೆಹರೂ ಅವರ "ಹತೋಟಿಯ ಆರ್ಥಿಕತೆ"; "ಸಂಮಿಶ್ರ ಅರ್ಥನೀತಿ"). ನಂತರ ಬಂದ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಭಾರತವನ್ನು ಮುಕ್ತ ಮಾರುಕಟ್ಟೆಗೆ ತೆರೆದರು. ವಿಶ್ವ ವ್ಯಾಪಾರದ ಭಾರತದ ಪಾಲು 1951-1960ರಲ್ಲಿ 1.4 ಶೇಕಡದಿಂದ 1981-1990 ಕ್ಕಿಂತ 0.5 ಪ್ರತಿಶತಕ್ಕೆ ಇಳಿದಿದೆ. ಮತ್ತೊಂದೆಡೆ, ಭಾರತದ ರಫ್ತು ಕಾರ್ಯಕ್ಷಮತೆಯು ಈ ಅವಧಿಯಲ್ಲಿ ನಿರಂತರವಾದ ಸುಧಾರಣೆಯನ್ನು ತೋರಿಸಿದೆ ಎಂದು ವಾದಿಸಲಾಗಿದೆ. ರಫ್ತುಗಳ ಪ್ರಮಾಣ 1951-1960ರಲ್ಲಿ ವಾರ್ಷಿಕ 2.9 ಶೇಕಡ ಇದ್ದುದು 1971-1980ರಲ್ಲಿ 7.6 ಶೇಕಡಕ್ಕೆ ಏರಿಕೆಯಾಯಿತು.
  • ಜಿಡಿಪಿ ಮತ್ತು ಜಿಎನ್ಪಿ ಯು 1950-51 ಮತ್ತು 1964-65 ರ ನಡುವೆ ವಾರ್ಷಿಕವಾಗಿ 3.9 ಮತ್ತು 4.0 ರಷ್ಟು ಏರಿಕೆ ಕಂಡವು. [ಇದು ಬ್ರಿಟಿಷ್ ವಸಾಹತುಶಾಹಿ ಕಾಲದಲ್ಲಿ ಒಂದು ತೀವ್ರವಾದ ವಿರಾಮವಾಗಿತ್ತು. ಆದರೆ, ಯುರೋಪ್ ಮತ್ತು ಪೂರ್ವ ಏಷ್ಯಾದಲ್ಲಿನ ಇತರ ಕೈಗಾರಿಕಾ ಶಕ್ತಿಗಳಿಗೆ ಹೋಲಿಸಿದರೆ, ಬೆಳವಣಿಗೆಯ ದರಗಳನ್ನು ರಕ್ತಹೀನತೆ – ದುರ್ಬಲ ಎಂದು ಪರಿಗಣಿಸಲಾಗಿದೆ. ಭಾರತವು ಪವಾಡ ಆರ್ಥಿಕತೆಗಳ ದೇಶಗಳಿಗಿಂತ (ಜಪಾನ್, ಪಶ್ಚಿಮ ಜರ್ಮನಿ, ಫ್ರಾನ್ಸ್, ಮತ್ತು ಇಟಲಿ) ಹಿಂದುಳಿದಿದೆ. ರಾಜ್ಯ ಯೋಜನೆ, ನಿಯಂತ್ರಣಗಳು, ಮತ್ತು ನಿಬಂಧನೆಗಳು ಆರ್ಥಿಕ ಬೆಳವಣಿಗೆಯನ್ನು ದುರ್ಬಲಗೊಳಿಸುತ್ತವೆ ಎಂದು ವಾದಿಸಲಾಯಿತು. ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಎರಡೂ ದೇಶಗಳಿಗಿಂತಲೂ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯಲ್ಪಟ್ಟಿದೆ - ಕಡಿಮೆ ಆರಂಭಿಕ ಆದಾಯ ಮತ್ತು ತ್ವರಿತ ಜನಸಂಖ್ಯೆ ಏರಿಕೆಯ ಮಟ್ಟಕ್ಕೆ - ಶ್ರೀಮಂತ ಆದಾಯ ರಾಷ್ಟ್ರಗಳೊಂದಿಗೆ ಹೋಲಿಸಿದಾಗ ಯಾವುದೇ ರೀತಿಯ ಕ್ಯಾಚ್-ಅಪ್’ಗೆ ಬೆಳವಣಿಗೆ ಅಸಮರ್ಪಕವಾಗಿದೆ ಎಂದು ಅರ್ಥ.

ನೆಹರು ಅವರ ಕೃಷಿ ನೀತಿಗಳು

  • ನೆಹರು ಅವರ ನಾಯಕತ್ವದಲ್ಲಿ, ಸರ್ಕಾರವು ಕೃಷಿ ಸುಧಾರಣೆ ಮತ್ತು ಕ್ಷಿಪ್ರ ಕೈಗಾರಿಕೀಕರಣವನ್ನು ಕೈಗೊಳ್ಳುವ ಮೂಲಕ ತ್ವರಿತವಾಗಿ ಭಾರತವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿತು. ದೊಡ್ಡ ಭೂ ಹಿಡುವಳಿಯನ್ನು ನಿಷೇಧಿಸಲಾಯಿತು. ಪರ್ಯಾಯವಾಗಿ ಯಶಸ್ವಿ ಭೂ ಸುಧಾರಣೆಯನ್ನು ಮಾಡಲಾಯಿತು, ಆದರೆ ಭೂಮಿಯ ಮಾಲೀಕತ್ವವನ್ನು ಮಿತಿಗೊಳಿಸುವುದರ ಮೂಲಕ ಭೂಮಿಯನ್ನು ಮರುಹಂಚಿಕೊಳ್ಳುವ ಪ್ರಯತ್ನ ಕೆಲವು ಕಡೆ ವಿಫಲವಾಯಿತು. ಬೃಹತ್-ಪ್ರಮಾಣದ ಸಹಕಾರಿ ಕೃಷಿಯನ್ನು ಪರಿಚಯಿಸುವ ಪ್ರಯತ್ನಗಳು ವಿಫಲಗೊಳಿಸುವ ಗ್ರಾಮೀಣ ಗಣ್ಯರಿಂದ ನಿರಾಶೆಗೊಳಗಾದವು, ಅವರು ಕಾಂಗ್ರೆಸ್’ನ ಬಲಪಂಥೀಯ ವರ್ಗವನ್ನು ರೂಪಿಸಿದರು ಮತ್ತು ನೆಹರು ಅವರರ ಪ್ರಯತ್ನಗಳನ್ನು ವಿರೋಧಿಸುವಲ್ಲಿ ಸಾಕಷ್ಟು ರಾಜಕೀಯ ಬೆಂಬಲವನ್ನು ಹೊಂದಿದ್ದರು. ಕೃಷಿ ಉತ್ಪಾದನೆಯು 1960 ರ ದಶಕದ ಆರಂಭದವರೆಗೂ ವಿಸ್ತರಿಸಿತು, ಹೆಚ್ಚುವರಿ ಭೂಮಿಯನ್ನು ಕೃಷಿ ಅಡಿಯಲ್ಲಿ ತರಲಾಯಿತು ಮತ್ತು ಕೆಲವು ನೀರಾವರಿ ಯೋಜನೆಗಳು ಪರಿಣಾಮ ಬೀರಲಾರಂಭಿಸಿದವು. ಯುನೈಟೆಡ್ ಸ್ಟೇಟ್ಸ್ನ ಲ್ಯಾಂಡ್-ಗ್ರಾಂಟ್ ಕಾಲೇಜುಗಳು ರೂಪಿಸಿದ ಕೃಷಿ ವಿಶ್ವವಿದ್ಯಾನಿಲಯಗಳ ಸ್ಥಾಪನೆಯು ಆರ್ಥಿಕತೆಯ ಅಭಿವೃದ್ಧಿಯಲ್ಲಿ ನೆರವಾಯಿತು. ಈ ವಿಶ್ವವಿದ್ಯಾಲಯಗಳು ಮೆಕ್ಸಿಕೋ ಮತ್ತು ಫಿಲಿಪೈನ್ಸ್ನಲ್ಲಿ ಆರಂಭದಲ್ಲಿ ಅಭಿವೃದ್ಧಿ ಹೊಂದಿದ ಗೋಧಿ ಮತ್ತು ಅಕ್ಕಿಯ ಉನ್ನತ-ಉತ್ಪತ್ತಿಯ ಪ್ರಭೇದಗಳ ತಳಿಗಳೊಂದಿಗೆ ಕೆಲಸ ಮಾಡಿದ್ದವು, 1960 ರ ದಶಕದಲ್ಲಿ ಹಸಿರು ಉತ್ಪಾದನೆಯನ್ನು ವೈವಿಧ್ಯಗೊಳಿಸಲು ಮತ್ತು ಬೆಳೆಸುವ ಪ್ರಯತ್ನವಾಗಿ “”ಹಸಿರು ಕ್ರಾಂತಿ””ಯನ್ನು ಆರಂಭಿಸಲಾಯಿತು. ಅದೇ ಸಮಯದಲ್ಲಿ ವಿಫಲವಾದ ಮಳೆಗಾಲ- (ಮಾನ್ಸೂನ್ಗಳ) ಸರಣಿಯು ಸ್ಥಿರವಾದ ಪ್ರಗತಿಯಲ್ಲಿಯೂ ಮತ್ತು ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವಾಗಿದ್ದ ಹೊರತಾಗಿಯೂ ದೇಶದಲ್ಲಿ ಗಂಭೀರ ಆಹಾರ ಕೊರತೆಯನ್ನು ಉಂಟುಮಾಡಿತ್ತು.

ದೇಶೀಯ ನೀತಿಗಳು

ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ತೀನ್ ಮೂರ್ತಿ ಭವನದಲ್ಲಿ ನೆಹರು ಅವರ ಅಧ್ಯಯನ ಕೊಠಡಿ;TMstudy
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
(ಎಡದಿಂದ ಬಲಕ್ಕೆ): ಭಾರತದ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು, ನಿಜಾಮ್ VII ಮತ್ತು ಜಯಂತ ನಾಥ್ ಚೌಧರಿ
  • ಇಂದಿನ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳನ್ನು ಒಳಗೊಂಡ ಬ್ರಿಟಿಷ್ ಇಂಡಿಯನ್ ಸಾಮ್ರಾಜ್ಯವನ್ನು ಎರಡು ವಿಧದ ಪ್ರದೇಶಗಳಾಗಿ ವಿಂಗಡಿಸಲಾಯಿತು: ಒಂದು :-ಬ್ರಿಟಿಷ್ ಭಾರತದ ಪ್ರಾಂತ್ಯಗಳು,- ಭಾರತದ ವೈಸ್ರಾಯ್’ಗೆ ಜವಾಬ್ದಾರರಾದ ಬ್ರಿಟಿಷ್ ಅಧಿಕಾರಿಗಳು ನೇರವಾಗಿ ಆಡಳಿತ ನಡೆಸಿದವು ; ಎರಡು :- ಸ್ಥಳೀಯ ಸ್ವಾಯತ್ತತೆಗೆ ಪ್ರತಿಯಾಗಿ ಬ್ರಿಟಿಷ್ ಸಾರ್ವಭೌಮತ್ವವನ್ನು ಗುರುತಿಸಿದ ಸ್ಥಳೀಯ ಆನುವಂಶಿಕ ರಾಜತ್ವದ ಆಡಳಿತಗಾರರ ಆಳ್ವಿಕೆಯ ಅಡಿಯಲ್ಲಿ ಇದ್ದ ಪ್ರದೇಶಗಳು, ಅವು ಹೆಚ್ಚಿನ ಸಂದರ್ಭಗಳಲ್ಲಿ ಒಡಂಬಡಿಕೆಯಿಂದ ಬ್ರಿಟಿಷರ ಅಧೀನದಲ್ಲಿ ಸ್ಥಾಪಿಸಲ್ಪಟ್ಟಿತ್ತು . 1947 ಮತ್ತು 1950 ರ ನಡುವೆ, ರಾಜ ಸಂಸ್ಥಾನಗಳ ಪ್ರಾಂತ್ಯಗಳು ನೆಹರು ಮತ್ತು ಸರ್ದಾರ್ ಪಟೇಲರ ಅಡಿಯಲ್ಲಿ ಭಾರತೀಯ ಒಕ್ಕೂಟಕ್ಕೆ ರಾಜಕೀಯವಾಗಿ ಸಂಯೋಜಿಸಲ್ಪಟ್ಟವು. ಹೆಚ್ಚಿನವುಗಳು ಅಸ್ತಿತ್ವದಲ್ಲಿರುವ ಪ್ರಾಂತ್ಯಗಳಲ್ಲಿ ವಿಲೀನಗೊಂಡವು; ಇತರ ಸಂಸ್ಥಾನ ಪ್ರದೇಶಗಳು ಹೊಸ ಪ್ರಾಂತ್ಯಗಳಾಗಿ ರೂಪಿಸಲ್ಪಟ್ಟವು, ಉದಾಹರಣೆಗೆ ರಜಪುತಾನ, ಹಿಮಾಚಲ ಪ್ರದೇಶ, ಮಧ್ಯಭಾರತ್, ಮತ್ತು ವಿಂಧ್ಯ-ಪ್ರದೇಶ, ಅನೇಕ ರಾಜಪ್ರಭುತ್ವದ ರಾಜ್ಯಗಳು; ಮೈಸೂರು, ಹೈದರಾಬಾದ್, ಭೋಪಾಲ್, ಮತ್ತು ಬಿಲಾಸ್ಪುರ ಸೇರಿದಂತೆ ಕೆಲವು, ಪ್ರತ್ಯೇಕ ಪ್ರಾಂತ್ಯಗಳಾಗಿ ಮಾರ್ಪಟ್ಟವು. 1935 ರ ಭಾರತ ಸರ್ಕಾರ ಕಾಯಿದೆ ಭಾರತದ ಸಂವಿಧಾನಾತ್ಮಕ ಕಾನೂನಾಗಿದ್ದು ಅದನ್ನು ಹೊಸ ಸಂವಿಧಾನವನ್ನು ಅಂಗೀಕರಿಸುವ ವರೆಗೆ ಉಳಿಸಿಕೊಳ್ಳಲಾಯಿತು.
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಭಾರತ ಆಡಳಿತ ವಿಭಾಗಗಳು 1951
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ರಾಜ್ಯ ಪುನಸ್ಸಂಘಟನೆ ಕಾಯಿದೆಯ ನಂತರ ಭಾರತೀಯ ರಾಜ್ಯಗಳು - 1953–1956
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ನೆಹರು ಭಾರತೀಯ ಸಂವಿಧಾನಕ್ಕೆ 1950 ರಲ್ಲಿ ಸಹಿ ಹಾಕಿದರು
  • 1950 ರ ಜನವರಿ 26 ರಂದು ಜಾರಿಗೊಳಿಸಲಾದ ಹೊಸ ಸಂವಿಧಾನವು ಭಾರತದ ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವನ್ನಾಗಿ ಮಾಡಿತು. ನೆಹರು ಹೊಸ ಗಣರಾಜ್ಯವನ್ನು "ರಾಜ್ಯಗಳ ಒಕ್ಕೂಟ" ಎಂದು ಘೋಷಿಸಿದರು. 1950 ರ ಸಂವಿಧಾನವು ಮುಖ್ಯವಾದ ಮೂರು ವಿಧದ ರಾಜ್ಯಗಳನ್ನು ಹೊಂದಿದ ವಿಶಿಷ್ಠ ರೂದ್ದಾಗಿತ್ತು: ಬ್ರಿಟಿಷ್ ಭಾರತದ ಮಾಜಿ ಗವರ್ನರ್ಗಳ ಪ್ರಾಂತ್ಯಗಳಾಗಿರುವ ಪಾರ್ಟ್ ‘ಎ’ ರಾಜ್ಯಗಳು; ಚುನಾಯಿತ ಗವರ್ನರ್ ಮತ್ತು ರಾಜ್ಯ ಶಾಸಕಾಂಗದಿಂದ ಆಳಲ್ಪಟ್ಟ ರಾಜ್ಯಗಳು. ಪಾರ್ಟ್ ಬಿ ರಾಜ್ಯಗಳು. ಹಿಂದಿನ ರಾಜವಂಶದ ರಾಜ್ಯಗಳು ಅಥವಾ ಸಂಸ್ಥಾನದ ಗುಂಪುಗಳಾಗಿದ್ದವು, ಇದು ಸಾಮಾನ್ಯವಾಗಿ ರಾಜಪ್ರಮುಖರಿಂದ ಆಳ್ವಿಕೆಯಲ್ಲಿರುವುವು. ಮತ್ತು ಒಂದು ಚುನಾಯಿತ ಶಾಸಕಾಂಗ ಹೊಂದಿದ್ದವು. ರಾಜಪ್ರಮುಖನನ್ನು ಭಾರತದ ರಾಷ್ಟ್ರಪತಿ ನೇಮಕ ಮಾಡಿದರು. ಪಾರ್ಟ್ ಸಿ ರಾಜ್ಯಗಳು ಮಾಜಿ ಮುಖ್ಯ ಆಯುಕ್ತರ ಪ್ರಾಂತ್ಯಗಳು ಮತ್ತು ಕೆಲವು ರಾಜಪ್ರಭುತ್ವ ರಾಜ್ಯಗಳನ್ನು ಒಳಗೊಂಡಿತ್ತು, ಮತ್ತು ಪ್ರತಿಯೊಂದೂ ಭಾರತದ ರಾಷ್ಟ್ರಪತಿಯಿಂದ ನೇಮಕವಾದ ಮುಖ್ಯ ಆಯುಕ್ತರ ಆಡಳಿತದಲ್ಲಿದ್ದವು. ಏಕ ಪಾರ್ಟ್ ಡಿ ರಾಜ್ಯವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಇದು ಕೇಂದ್ರ ಸರ್ಕಾರದಿಂದ ನೇಮಕವಾದ ಲೆಫ್ಟಿನೆಂಟ್ ಗವರ್ನರ್ ಆಡಳಿತಕ್ಕೆ ಒಳಪಟ್ಟಿತು.
  • ಡಿಸೆಂಬರ್ 1953 ರಲ್ಲಿ, ರಾಜ್ಯಗಳ ರಚನೆಗಾಗಿ ರಾಜ್ಯಗಳ ರಚನೆಗೆ ನೆಹರು ಸಂಸ್ಥಾನ ಪುನರ್ ಸಂಘಟನೆ ಆಯೋಗವನ್ನು ನೇಮಿಸಿದರು. ಇದನ್ನು ನ್ಯಾಯಮೂರ್ತಿ ಫಜಲ್ ಅಲಿಯ ನೇತೃತ್ವದಲ್ಲಿ ಮತ್ತು ಆಯೋಗವನ್ನು ಸ್ವತಃ ಫಜಲ್ ಅಲಿ ಕಮಿಷನ್ ಎಂದು ಕರೆಯಲಾಗುತ್ತಿತ್ತು. ಈ ಆಯೋಗದ ಕಾರ್ಯಗಳನ್ನು ಡಿಸೆಂಬರ್ 1954 ರಿಂದ ನೆಹರು ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ಗೋವಿಂದ ಬಲ್ಲಭ್ ಪಂತ್ ಅವರು ಮೇಲ್ವಿಚಾರಣೆ ಮಾಡಿದರು. 1955 ರಲ್ಲಿ ಭಾರತದ ರಾಜ್ಯಗಳ ಮರುಸಂಘಟನೆಗಾಗಿ ಆಯೋಗವು ವರದಿಯನ್ನು ರಚಿಸಿತು. ಏಳನೇ ತಿದ್ದುಪಡಿಯಲ್ಲಿ, ಭಾಗ ಎ, ಭಾಗ ಬಿ, ಭಾಗ ಸಿ, ಮತ್ತು ಭಾಗ ಡಿ ರಾಜ್ಯಗಳ (Part A, Part B, Part C, and Part D states was abolished) ನಡುವಿನ ಅಸ್ತಿತ್ವದಲ್ಲಿರುವ ವ್ಯತ್ಯಾಸವನ್ನು ರದ್ದುಪಡಿಸಲಾಯಿತು. ಪಾರ್ಟ್ ಎ ಮತ್ತು ಪಾರ್ಟ್ ಬಿ ರಾಜ್ಯಗಳ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಲಾಯಿತು, ಇದನ್ನು "ರಾಜ್ಯಗಳು" ಎಂದು ಕರೆಯಲಾಗುತ್ತದೆ. ಒಂದು ಹೊಸ ರೀತಿಯ ಘಟಕ, ಕೇಂದ್ರಾಡಳಿತ ಪ್ರದೇಶ (ಯೂನಿಯನ್ ಪ್ರದೇಶ), ವಿಭಾಗ ಅ ಅಥವಾ ಭಾಗ ಆ ಸ್ಥಿತಿಯಂತೆ ವರ್ಗೀಕರಣವನ್ನು ಬದಲಾಯಿಸಿತು. ನೆಹರು ಭಾರತೀಯರಲ್ಲಿ ಸಾಮಾನ್ಯತೆಯನ್ನು ಮತ್ತು ಪಾನ್-ಇಂಡಿಯನಿಸಮ್ ಅನ್ನು ಉತ್ತೇಜಿಸಿದರು. ಧಾರ್ಮಿಕ ಅಥವಾ ಜನಾಂಗೀಯ ನೀತಿಗಳ ಮೇಲೆ ರಾಜ್ಯಗಳನ್ನು ಮರುಸಂಘಟಿಸಲು ಅವರು ನಿರಾಕರಿಸಿದರು. ಪಾಶ್ಚಾತ್ಯ ವಿದ್ವಾಂಸರು ನೆಹರು ಅವರನ್ನು ಆಧುನಿಕ ಗಣರಾಜ್ಯವಾಗಿ ರಾಜ್ಯಗಳ ಏಕೀಕರಣ ಮಾಡಿದ್ದಕ್ಕಾಗಿ ಪ್ರಶಂಸಿಸಿದ್ದಾರೆ ಆದರೆ ಈ ಮರುಸಂಗಟನೆಯ ಕಾನೂನು (ಆಕ್ಟ್) ಭಾರತದಲ್ಲಿ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿಲ್ಲ.

ಸಾಮಾಜಿಕ ನೀತಿಗಳು

ಶಿಕ್ಷಣ

  • ಜವಾಹರಲಾಲ್ ನೆಹರೂ ಭಾರತದ ಮಕ್ಕಳ ಮತ್ತು ಯುವಜನರಿಗೆ ಶಿಕ್ಷಣದ ಭಾವೋದ್ರಿಕ್ತ ವಕೀಲರಾಗಿದ್ದರು, ಇದು ಭಾರತದ ಭವಿಷ್ಯದ ಪ್ರಗತಿಗೆ ಅವಶ್ಯಕವೆಂದು ನಂಬಿದ್ದರು. ಅವರ ಸರ್ಕಾರವು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಒಳಗೊಂಡಂತೆ ಉನ್ನತ ಶಿಕ್ಷಣದ ಅನೇಕ ಸಂಸ್ಥೆಗಳ ಸ್ಥಾಪನೆಯನ್ನು ಕೈಗೊಂಡಿತು [142] ಭಾರತದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಖಾತರಿಪಡಿಸಿಕೊಳ್ಳಲು ತನ್ನ ಐದು ವರ್ಷಗಳ ಯೋಜನೆಯಲ್ಲಿ ನೆಹರೂ ಒಂದು ಬದ್ಧತೆಯನ್ನು ಕೂಡ ವಿವರಿಸಿದ್ದಾರೆ. ಈ ಉದ್ದೇಶಕ್ಕಾಗಿ, ಸಾಮೂಹಿಕ ಹಳ್ಳಿಯ ದಾಖಲಾತಿ ಕಾರ್ಯಕ್ರಮಗಳ ಸೃಷ್ಟಿ ಮತ್ತು ಸಾವಿರಾರು ಶಾಲೆಗಳ ನಿರ್ಮಾಣವನ್ನು ನೆಹರೂ ಕೈಗೊಂಡರು. ಅಪೌಷ್ಟಿಕತೆಗೆ ಹೋರಾಡಲು ಮಕ್ಕಳಿಗೆ ಉಚಿತ ಹಾಲು ಮತ್ತು ಆಹಾರವನ್ನು ಒದಗಿಸುವಂತಹ ಉಪಕ್ರಮಗಳನ್ನು ಸಹ ನೆಹರೂ ಪ್ರಾರಂಭಿಸಿದರು. ವಯಸ್ಕರಲ್ಲಿ, ವಿಶೇಷವಾಗಿ ವಯಸ್ಕರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಯಸ್ಕರ ಶಿಕ್ಷಣ ಕೇಂದ್ರಗಳು, ವೃತ್ತಿಪರ ಮತ್ತು ತಾಂತ್ರಿಕ ಶಾಲೆಗಳನ್ನು ಆಯೋಜಿಸಲಾಯಿತು. [143]

ವೈವಾಹಿಕ ಕಾನೂನು

  • ನೆಹರೂ ನೇತೃತ್ವದಲ್ಲಿ, ಭಾರತೀಯ ಸಂಸತ್ತು ಜಾತಿ ತಾರತಮ್ಯವನ್ನು ಅಪರಾಧೀಕರಿಸುವ ಮತ್ತು ಕಾನೂನು ಹಕ್ಕುಗಳು ಮತ್ತು ಮಹಿಳೆಯರ ಸಾಮಾಜಿಕ ಸ್ವಾತಂತ್ರ್ಯವನ್ನು ಹೆಚ್ಚಿಸಲು ಹಿಂದೂ ಕಾನೂನಿಗೆ ಹಲವು ಬದಲಾವಣೆಗಳನ್ನು ಜಾರಿಗೊಳಿಸಲಾಯಿತು.
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ದುರ್ಗಾಪುರ್ ಸ್ಟೀಲ್ ಪ್ಲಾಂಟ್ನಲ್ಲಿ ಶಾಲಾ ಮಕ್ಕಳೊಂದಿಗೆ ನೆಹರು. ದುರ್ಗಾಪುರ್, ರೂರ್ಕೆಲಾ ಮತ್ತು ಭಿಲಾಯಿ 1950 ರ ಉತ್ತರಾರ್ಧದಲ್ಲಿ ಭಾರತದ ಎರಡನೇ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ಸ್ಥಾಪಿಸಲಾದ ಮೂರು ಏಕೀಕೃತ ಉಕ್ಕು ಘಟಕಗಳಾಗಿವೆ.
  • ನೆಹರೂ ಅವರೇ ನಿರ್ದಿಷ್ಟವಾಗಿ ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಅಡಿಯಲ್ಲಿ ಭಾರತೀಯ ಸಂವಿಧಾನದ “44 ನೇ ಲೇಖ”ವನ್ನು ಬರೆದಿದ್ದಾರೆ: "ರಾಜ್ಯವು ಭಾರತದ ಭೂಪ್ರದೇಶದಲ್ಲೆಲ್ಲಾ ಸಮಾನ ನಾಗರಿಕ ಸಂಹಿತೆಯನ್ನು ನೀಡಲು ಪ್ರಯತ್ನಿಸಬೇಕು". ಲೇಖವು ಭಾರತದ ಜಾತ್ಯತೀತತೆಯ ಆಧಾರವನ್ನು ರೂಪಿಸಿದೆ. ಆದಾಗ್ಯೂ, ಕಾನೂನಿನ ಅಸಮಂಜಸವಾದ ಅನ್ವಸುವಿಕೆಗಾಗಿ ನೆಹರು ಅವರನ್ನು ಟೀಕಿಸಿದ್ದಾರೆ. ಮುಖ್ಯವಾಗಿ, ನೆಹರೂ ಮುಸ್ಲಿಮರಿಗೆ ತಮ್ಮ ವೈಯಕ್ತಿಕ ಕಾನೂನುಗಳಲ್ಲಿ ಮದುವೆ ಮತ್ತು ಪರಂಪರೆಯ ವಿಷಯಗಳಲ್ಲಿ ಇರಿಸಿಕೊಳ್ಳಲು ಅವಕಾಶ ನೀಡಿದರು ಎಂಬುದು ಟೀಕಕಾರರನಿಲುವು . ಗೋವಾದ ಸಣ್ಣ ರಾಜ್ಯದಲ್ಲಿ, ಹಳೆಯ ಪೋರ್ಚುಗೀಸ್ ಕುಟುಂಬ ಕಾನೂನುಗಳನ್ನು ಆಧರಿಸಿ ನಾಗರಿಕ ಸಂಹಿತೆಯು ಮುಂದುವರೆಸಲು ಅನುಮತಿ ನೀಡಲಾಯಿತು, ಮತ್ತು ಮುಸ್ಲಿಮರ ವೈಯಕ್ತಿಕ ಕಾನೂನನ್ನು ನೆಹರು ನಿಷೇಧಿಸಿದ್ದರು. 1961 ರಲ್ಲಿ ಭಾರತದಿಂದ ಗೋವಾವನ್ನು ಸ್ವಾಧೀನಪಡಿಸಿಕೊಳ್ಳುವುದರ ಪರಿಣಾಮವಾಗಿ, ನೆಹರೂ, ಜನರು ತಮ್ಮ ಕಾನೂನುಗಳನ್ನು ಹಾಗೇ ಉಳಿಸಬಹುದೆಂದು ಭರವಸೆ ನೀಡಿದರು. ಇದು ಆಯ್ದ ಜಾತ್ಯತೀತತೆಯ ಆರೋಪಕ್ಕೆ ಕಾರಣವಾಗಿದೆ ಎಂದು ಕೆಲವರು ಆಕ್ಷೇಪಿಸುತ್ತಾರೆ.
  • ನೆಹರೂ ಅವರು ಮುಸಲ್ಮಾನರಿಗೆ ಕಾನೂನಿನ ತಿದ್ದುಪಡಿಗೆ ವಿನಾಯಿತಿ ನೀಡಿದ್ದರು ಮತ್ತು ಅವುಗಳು ಹಾಗೆಯೇ ಇದ್ದವು, ಅವರು 1954 ರಲ್ಲಿ ವಿಶೇಷ ಮದುವೆ ಕಾಯಿದೆಯನ್ನು ಮಂಜೂರು ಮಾಡಿಸಿದರು. ಈ ಕಾನೂನಿನ ಹಿಂದಿನ ಕಲ್ಪನೆಯೆಂದರೆ ಭಾರತದಲ್ಲಿ ಎಲ್ಲರಿಗೂ ವೈಯಕ್ತಿಕ ಕಾನೂನಿನ ಹೊರಗೆ ಮದುವೆಯಾಗಲು ಒಂದು ನಾಗರಿಕ ವಿವಾಹಕ್ಕೆ ಅವಕಾಶ ನೀಡುವುದು. ಎಂದಿನಂತೆ ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಕಾನೂನು ಎಲ್ಲಾ ಭಾರತಕ್ಕೂ ಅನ್ವಯಿಸುತ್ತದೆ (ಮತ್ತೆ ಆಯ್ದ ಜಾತ್ಯತೀತವಾದದ ಆರೋಪಗಳಿಗೆ ಕಾರಣವಾಯಿತು). ಅನೇಕ ವಿಷಯಗಳಲ್ಲಿ, ಹಿಂದೂ ಮದುವೆ ಕಾನೂನು 1955 ರದಕ್ಕೆ ಹೋಲುತ್ತದೆ, ಹಿಂದೂಗಳ ಬಗೆಗಿನ ಕಾನೂನು ಜಾತ್ಯತೀತವಾಗಿದೆಯೆಂಬ ಕಲ್ಪನೆಯನ್ನು ನೀಡುತ್ತದೆ. ವಿಶೇಷ ವಿವಾಹ ಕಾಯಿದೆಯಡಿ ಮುಸ್ಲಿಮರು ಅದರ ಅಡಿಯಲ್ಲಿ ಮದುವೆಯಾಗಲು ಅವಕಾಶ ಮಾಡಿಕೊಟ್ಟರು ಮತ್ತು ಅದರ ಮೂಲಕ ರಕ್ಷಣೆಗಳನ್ನು ಉಳಿಸಿಕೊಂಡರು, ಸಾಮಾನ್ಯವಾಗಿ ಮುಸ್ಲಿಮ್ ಮಹಿಳೆಯರಿಗೆ ಪ್ರಯೋಜನಕಾರಿ, ಅದು ಅವರ ವೈಯಕ್ತಿಕ ಕಾನೂನಿನಲ್ಲಿ ಕಂಡುಬಂದಿಲ್ಲ. ಈ ಕನೂನು ಅಡಿಯಲ್ಲಿ ಬಹುಪತ್ನಿತ್ವ ಕಾನೂನುಬಾಹಿರವಾಗಿತ್ತು ಮತ್ತು ಆಯಾ ಮುಸ್ಲಿಂ ವೈಯಕ್ತಿಕ ಕಾನೂನಿನ ಬದಲಾಗಿ ಭಾರತೀಯ ಉತ್ತರಾಧಿಕಾರ ಕಾಯಿದೆ ಮೂಲಕ ಉತ್ತರಾಧಿಕಾರ ಮತ್ತು ಉತ್ತರಾಧಿಕಾರವನ್ನು ನಿಯಂತ್ರಿಸಲಾಗುತ್ತದೆ. ವಿಚ್ಛೇದನವು ಜಾತ್ಯತೀತ ಕಾನೂನಿನಿಂದ ನಿಯಂತ್ರಿಸಲ್ಪಡುತ್ತದೆ, ಮತ್ತು ವಿಚ್ಛೇದಿತ ಹೆಂಡತಿಯ ನಿರ್ವಹಣೆ ನಾಗರಿಕ (ಸಿವಿಲ್) ಕಾನೂನಿನಲ್ಲಿ ರೂಪಿಸಲಾದ ಸಾಲುಗಳಲ್ಲಿ ಇರುತ್ತದೆ.

ಸಾಮಾಜಿಕವಾಗಿ ತುಳಿತಕ್ಕೊಳಗಾದ ಸಮುದಾಯಗಳಿಗೆ ಮೀಸಲಾತಿ

  • ಪರಿಶಿಷ್ಟ ಜಾತಿ ಮತ್ತು ನಿಗದಿತ ಬುಡಕಟ್ಟು ಜನರು ಎದುರಿಸುತ್ತಿರುವ ಸಾಮಾಜಿಕ ಅಸಮಾನತೆಗಳನ್ನು ಮತ್ತು ದುಷ್ಪರಿಣಾಮಗಳನ್ನು ನಿರ್ಮೂಲನೆ ಮಾಡಲು ಸರ್ಕಾರಿ ಸೇವೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ವ್ಯವಸ್ಥೆ ರಚಿಸಲಾಗಿದೆ. ನೆಹರು ಜಾತ್ಯತೀತತೆ ಮತ್ತು ಧಾರ್ಮಿಕ ಸಾಮರಸ್ಯವನ್ನು ಉತ್ತೇಜಿಸಿದರು , ಅಲ್ಪಸಂಖ್ಯಾತರು ಸರ್ಕಾರದಲ್ಲಿ ಪ್ರತಿನಿಧಿಸುವುದನ್ನು ಹೆಚ್ಚಿಸಿದರು.
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
1948 ರಲ್ಲಿ ಲಂಡನ್ನಲ್ಲಿ ನಡೆದ ಕಾಮನ್ವೆಲ್ತ್ ಪ್ರಧಾನಿಗಳ ಮೊದಲ ಸಭೆಯಲ್ಲಿ ನೆಹರು, ಗಿರಿಜಾ ಶಂಕರ್ ಬಾಜ್ಪೈ ಅವರೊಂದಿಗೆ
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಪೂರ್ವ ಜರ್ಮನಿಯ ಪ್ರಧಾನ ಮಂತ್ರಿ ಒಟ್ಟೊ ಗ್ರೋಟ್ವೊಲ್ರೊಂದಿಗೆ ನೆಹರು

ಭಾಷಾ ನೀತಿ

  • ಹಿಂದಿ ಭಾಷೆಯನ್ನು ಭಾರತೀಯ ರಾಷ್ಟ್ರದ ವ್ಯವಹಾರ ಭಾಷೆ (ಲಿಂಗ್ವಾ-ಫ್ರಾಂಕ) ಎಂದು ಪ್ರಾಮುಖ್ಯತೆ ಕೊಡುವ ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ನೆಹರು ಅವರು ವಹಿಸಿದರು, ಇದು ಹಿಂದಿಯಲ್ಲಿ ಮಾತನಾಡದೆ ಬೇರೆ ಭಾಷೆಯವವರೊಂದಿಗಿನ ಸಮಗ್ರ ಮತ್ತು ವಿರೋಧ ವಿಚಾರದ ಚರ್ಚೆಯ ನಂತರ, ಹದಿನೈದು ವರ್ಷಗಳ ಕಾಲ ಇಂಗ್ಲಿಷ್ ಭಾಷೆಯನ್ನು ಅಧಿಕೃತ ಭಾಷೆಯಾಗಿ ಮುಂದುವರೆಸುವ ಷರತ್ತಿನೊಂದಿಗೆ 1950 ರಲ್ಲಿ ಭಾರತದ ಅಧಿಕೃತ ಭಾಷೆಯಾಗಿ ಹಿಂದಿಯನ್ನು ಸ್ವೀಕರಿಸಲಾಯಿತು, ನಂತರ ಹಿಂದಿ ಏಕೈಕ ಅಧಿಕೃತ ಭಾಷೆಯಾಯಿತು. 1965 ರ ನಂತರ ಹಿಂದಿ ಏಕೈಕ ಅಧಿಕೃತ ಭಾಷೆಗೆ ಭಾರತೀಯ ಸರ್ಕಾರವು ಮಾಡಿದ ಪ್ರಯತ್ನಗಳು ಹಿಂದಿನದಕ್ಕಿಂತ ಹೆಚ್ಚಾಗಿ ಹಿಂದಿ ಮಾತೃಭಾಷೆಯಲ್ಲದ ಹಲವು ರಾಜ್ಯಗಳಿಗೆ ಸ್ವೀಕಾರಾರ್ಹವಾಗಲಿಲ್ಲ. ಅವರು ಇಂಗ್ಲಿಷ್ ಬಳಕೆಯನ್ನು ಮುಂದುವರಿಸಲು ಬಯಸಿದರು. ದ್ರಾವಿಡರ್ ಕಳಗಂನ ಉಪಶಾಖೆಯಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಿಂದಿಗೆ ವಿರೋಧವನ್ನು ಮಾಡುವ ನಾಯಕತ್ವ ವಹಿಸಿತು. ಅವರ ಭಯವನ್ನು ಕಡಿಮೆ ಮಾಡಲು,1965 ರಲ್ಲಿ, 1965 ರ ಬಳಿಕವೂ ಇಂಗ್ಲಿಷ್‍ನ್ನು ಮುಂದುವರಿದ-ಬಳಕೆಯಾಗಿ ಅಧಿಕೃತ ಭಾಷೆ ಕಾಯಿದೆಯಡಿ ನೆಹರೂ ಜಾರಿಗೆ ತಂದರು. ಕಾಯಿದೆಯ ಪಠ್ಯವು ಡಿಎಮ್’ಕೆಯ ಬೇಡಿಕೆಯನ್ನು ಪೂರೈಸಲಿಲ್ಲ ಮತ್ತು ಅವರ ಭರವಸೆಗಳನ್ನು ಭವಿಷ್ಯದ ಆಡಳಿತಗಳು ಗೌರವಿಸದೆ ಇರಬಹುದು ಎಂಬ ಅವರ ಸಂದೇಹವನ್ನು ಹೆಚ್ಚಿಸಿತು. ನೆಹರೂರ ಮಗಳು, ಇಂದಿರಾ ಗಾಂಧಿಯವರ ಹೆಚ್ಚಿನ ಒತ್ತಡದಲ್ಲಿ, ಇಂಗ್ಲಿಷ್ ಅಲ್ಲದ ಹಿಂದಿ ಮಾತನಾಡುವ ರಾಜ್ಯಗಳು ಬಯಸಿದಷ್ಟು ಕಾಲ ಅಧಿಕೃತ ಭಾಷೆಯಾಗಿ ಇಂಗ್ಲಿಷ್ ಅನ್ನು ಮುಂದುವರೆಸಬಹುದೆಂದು ಭರವಸೆ ನೀಡಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಮಂತ್ರಿಯಾದ ಸಂದರ್ಭದಲ್ಲಿ ಈ ವಿವಾದವನ್ನು ಬಗೆಹರಿಸಲಾಯಿತು. ಅಧಿಕೃತ ಭಾಷೆ ಕಾಯ್ದೆ 1967 ರಲ್ಲಿ ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕೃತ ಭಾಷೆಯಾಗಿ ಹಿಂದಿ ಮತ್ತು ಇಂಗ್ಲಿಷ್’ಗಳನ್ನು ಅನಿರ್ದಿಷ್ಟ ಬಳಕೆಗೆ ಖಾತ್ರಿಪಡಿಸುವಂತೆ ತಿದ್ದುಪಡಿ ಮಾಡಿದೆ. ಇದು ಭಾರತೀಯ ಗಣರಾಜ್ಯದ ಪ್ರಸಕ್ತ "ದ್ವಿಭಾಷಾ ವಾಸ್ತವಿಕ ಅನಿರ್ದಿಷ್ಟ ನೀತಿ" ಯನ್ನು ಪರಿಣಾಮಕಾರಿಯಾಗಿ ಬಗೆಹರಿಸಿತು.

ವಿದೇಶಾಂಗ ನೀತಿ

  • ಇದನ್ನೂ ನೋಡಿ: ಭಾರತ ಮತ್ತು ಅಲಿಪ್ತ ಚಳವಳಿ

ಕಾಮನ್ವೆಲ್ತ್

  • 1947 ರಿಂದ 1964 ರವರೆಗೂ ನೆಹರೂ ಹೊಸದಾಗಿ ಸ್ವತಂತ್ರ ಪಡೆದ ಭಾರತವನ್ನು ಮುನ್ನಡೆಸಿದರು. ಯುನೈಟೆಡ್ ಸ್ಟೇಟ್ಸ್ ಮತ್ತು ಸೋವಿಯೆತ್ ಯೂನಿಯನ್ ಎರಡೂ ಶೀತಲ ಯುದ್ಧದ ಉದ್ದಕ್ಕೂ ಭಾರತವನ್ನು ಮಿತ್ರರಾಷ್ಟ್ರನ್ನಾಗಿ ಮಾಡಲು ಸ್ಪರ್ಧಿಸಿದವು. ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ನೆಹರು ಸಹ ಉತ್ತಮ ಸಂಬಂಧವನ್ನು ಹೊಂದಿದ್ದರು. ಲಂಡನ್ನ ಘೋಷಣೆಯಡಿಯಲ್ಲಿ, ಭಾರತವು 1950 ರ ಜನವರಿಯಲ್ಲಿ ಅದು ಗಣರಾಜ್ಯವಾದಾಗ ಅದು ಕಾಮನ್ವೆಲ್ತ್ ರಾಷ್ಟ್ರಗಳನ್ನು ಸೇರಿಕೊಂಡಿತು ಮತ್ತು ಬ್ರಿಟಿಷ್ ರಾಜನನ್ನು ತನ್ನ ಸ್ವತಂತ್ರ ಸದಸ್ಯ ರಾಷ್ಟ್ರಗಳ ಮುಕ್ತ ಕಾಮನ್ವೆಲ್ತ್ ಸಂಘಟನೆಯ ಸಂಕೇತವೆಂದು ಪರಿಗಣಿಸಿತು. "ಕಾಮನ್ವೆಲ್ತ್ನ ಇತರೆ ರಾಷ್ಟ್ರಗಳು ಭಾರತದ ಈ ಸಂಘಟನೆಯ ಸದಸ್ಯತ್ವವನ್ನು ಒಪ್ಪಿದವು. “ಮರಳಿ ಮನೆಗೆ” ಈ ಕ್ರಮಕ್ಕೆ ಪ್ರತಿಕ್ರಿಯೆ ಅನುಕೂಲಕರವಾಗಿತ್ತು; ನೆಹರೂರ ನಿರ್ಧಾರವನ್ನು ಅತಿ ಎಡದವರು ಮತ್ತು ಅತಿ-ಬಲಪಂಥಿಗಳು ಟೀಕಿಸಿದರು.[154][155]

ವಿದೇಶಿ ನೀತಿ - ಅಲಿಪ್ತ ಚಳುವಳಿ

  • ಅಂತರಾಷ್ಟ್ರೀಯ ಮಟ್ಟದಲ್ಲಿ, ನೆಹರೂ ಶಾಂತಿಪ್ರಿಯರಾಗಿದ್ದರು ಮತ್ತು ವಿಶ್ವಸಂಸ್ಥೆಯ ಪ್ರಬಲ ಬೆಂಬಲಿಗರಾಗಿದ್ದರು. ಅವರು ಯುಎಸ್ ಮತ್ತು ಯುಎಸ್ಎಸ್ಆರ್ ನೇತೃತ್ವದ ರಾಷ್ಟ್ರಗಳ ಪ್ರತಿಸ್ಪರ್ಧಿ ಬ್ಲಾಕ್’ಗಳ ನಡುವಿನ ತಟಸ್ಥತೆಯನ್ನು ದೃಢಪಡಿಸುವ ಅಲಿಪ್ತ ಚಳುವಳಿಯನ್ನು, ಅಲಿಪ್ತ ನೀತಿಯನ್ನು ಅನುಸರಿಸಿದರು ಮತ್ತು ಆ ನೀತಿಯ ಸಹ-ಸಂಸ್ಥಾಪಕರಾಗಿದ್ದರು. ಅಲಿಪ್ತ ನೀತಿಯನ್ನು ಅನುಸರಿಸಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾಕ್ಕೆ ಅಲ್ಲಿ ಸರ್ಕಾರ ರಚನೆಯಾದ, ಶೀಘ್ರದಲ್ಲೇ ಮನ್ನಣೆ ನೀದಿದರು. (ಹೆಚ್ಚಿನ ಪಾಶ್ಚಿಮಾತ್ಯ ತಂಡವು ತೈವಾನ್ನೊಂದಿಗೆ ಸಂಬಂಧವನ್ನು ಮುಂದುವರೆಸಿತು), ನೆಹರೂ ಯುನೈಟೆಡ್ ನೇಷನ್ಸ್’ನಲ್ಲಿ ಅದರ ಸೇರ್ಪಡೆಗಾಗಿ ವಾದಿಸಿದರು ಮತ್ತು ಕೊರಿಯದೊಂದಿಗಿನ ಸಂಘರ್ಷದಲ್ಲಿ ಚೀನಿಯರನ್ನು ಆಕ್ರಮಣಕಾರಿ ಎಂದು ಹೇಳಲು ನಿರಾಕರಿಸಿದರು. ಅವರು 1950 ರಲ್ಲಿ ಚೀನಾದೊಂದಿಗೆ ಆದರದ ಮತ್ತು ಸೌಹಾರ್ದ ಸಂಬಂಧಗಳನ್ನು ಸ್ಥಾಪಿಸಲು ಪ್ರಯತ್ನಿಸಿದರು ಮತ್ತು ಕಮ್ಯೂನಿಸ್ಟ್ ರಾಜ್ಯಗಳು ಮತ್ತು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿ ಪಾಶ್ಚಿಮಾತ್ಯ ಬ್ಲಾಕ್’ಗಳ ನಡುವಿನ ಕಂದಕ ಮತ್ತು ಉದ್ವಿಗ್ನತೆಯನ್ನು ಕಡಿಮೆಮಾಡಲು ಪ್ರಯತ್ನಿಸಿದರು.

ರಕ್ಷಣೆ ಮತ್ತು ಪರಮಾಣು ನೀತಿ

  • 1947 ರಲ್ಲಿ ರಾಜಕೀಯ ಮತ್ತು ಜಾಗತಿಕ ರಾಜತಂತ್ರದ ವಾಸ್ತವತೆಗೆ ನೆಹರೂ ಕುರುಡರಾಗಿರಲಿಲ್ಲ. 1949 ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಅಡಿಪಾಯವನ್ನು ಹಾಕಿದಾಗ,-
        "ನಾವು, ತಲೆಮಾರುಗಳ ಬಗ್ಗೆ ಮಾತನಾಡಿದ್ದೇವೆ ಮತ್ತು ಎಲ್ಲವನ್ನೂ ಪ್ರಯತ್ನಿಸುತ್ತಿದ್ದೇವೆ. ನಮ್ಮ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಗಳನ್ನು ವೈಭವೀಕರಿಸುವ ಒಂದು ಅರ್ಥದಲ್ಲಿ, ಅದು ಶಾಂತಿಯುತವಾದ ರೀತಿಯಲ್ಲಿ ಮತ್ತು ಅಹಿಂಸೆಯನ್ನು ಅನುಷ್ಠಾನಗೊಳಿಸುತ್ತದೆ.ಇದು ವಿಚಿತ್ರವಾಗಿದ್ದರೂ, ಅದು ಜೀವನದ ವಿಚಿತ್ರತೆಯನ್ನು ಪ್ರತಿಬಿಂಬಿಸುತ್ತದೆ ಜೀವನವು ತಾರ್ಕಿಕವಾದರೂ ಎಲ್ಲಾ ಅನಿಶ್ಚಯತೆಗಳನ್ನು ಎದುರಿಸಬೇಕಾಗಿದೆ ಮತ್ತು ನಾವು ಅವುಗಳನ್ನು ಎದುರಿಸಲು ತಯಾರಿಲ್ಲದಿದ್ದರೆ, ನಾವು ಅಡಿಗೆ/ಕೆಳಗೆ ಹೋಗುತ್ತೇವೆ. ನಾವೆಲ್ಲರೂ ಕಳೆದುಕೊಂಡ ಮಹಾತ್ಮ ಗಾಂಧಿಯವರ ಹೊರತು ಅಹಿಂಸಾ ತತ್ವದ ಹೆಚ್ಚಿನ ರಾಜಕುಮಾರ ಮತ್ತು ಹರಿಕಾರ ಮತ್ತೊಬ್ಬ ಇಲ್ಲ. ಅವರು ಶರಣಾಗುವುದಕ್ಕಿಂತ, ವಿಫಲಗೊಳ್ಳುವುದಕ್ಕಿಂತ ಅಥವಾ ಓಡಿಹೋಗುವುದಕ್ಕಿಂತ ಕತ್ತಿಯನ್ನು ತೆಗೆದುಕೊಳ್ಳುವುದು ಉತ್ತಮವೆಂದು ನಾವು ಹೇಳುತ್ತೇವೆ. ನಾವು ಸುರಕ್ಷಿತರಾಗಿದ್ದೇವೆ ಎಂದು ನಾವು ನಿರಾತಂಕವಾಗಿ ಬದುಕಲು ಸಾಧ್ಯವಿಲ್ಲ. ಮಾನವನ ಪ್ರಕೃತಿ ಹಾಗಿದೆ. ನಾವು ಅಪಾಯಗಳನ್ನು ಬರಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ನಮ್ಮ ಪರಿಶ್ರಮದಿಂದ-ಗೆದ್ದ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಆಧುನಿಕ ರಕ್ಷಣಾ ವಿಧಾನಗಳು ಮತ್ತು ಸುಸಜ್ಜಿತ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯೊಂದಿಗೆ ನಾವು ಸದಾ ಸನ್ನದ್ಧರಾಗಿರಬೇಕು".
  • ನೆಹರೂ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನು ರೂಪಿಸಿದರು ಮತ್ತು 1948 ರಲ್ಲಿ ಭಾರತದ ಪರಮಾಣು ಶಕ್ತಿ ಆಯೋಗವನ್ನು ಸ್ಥಾಪಿಸಿದರು. ನೆಹರು ಅವರು ಪರಮಾಣು ಭೌತವಿಜ್ಞಾನಿಯಾದ ಡಾ. ಹೋಮಿ ಜೆ. ಭಾಭಾ ಅವರನ್ನು ಕರೆದು, ಅವರಿಗೆ ಎಲ್ಲಾ ಪರಮಾಣು-ಸಂಬಂಧಿತ ವ್ಯವಹಾರಗಳು ಮತ್ತು ಕಾರ್ಯಕ್ರಮಗಳ ಮೇಲೆ ಸಂಪೂರ್ಣ ಅಧಿಕಾರವನ್ನು ವಹಿಸಿದರು ಮತ್ತು ಅವರು ನೆಹರೂಗೆ ಮಾತ್ರ ಉತ್ತರ ನೀಡಲು ಬಾಧ್ಯರು ಎಂಬ ಅಧಿಕಾರ ನೀಡಿದರು. ಭಾರತದ ಪರಮಾಣು ನೀತಿಯನ್ನು ನೆಹರು ಮತ್ತು ಭಾಭಾ ನಡುವಿನ “ಅಲಿಖಿತ ವೈಯಕ್ತಿಕ ನಂಬುಗೆಯಿಂದ” ಸ್ಥಾಪಿಸಲಾಯಿತು. ನೆಹರು ಪ್ರಸಿದ್ಧರಾದ ಭಾಭಾಗೆ "ಪ್ರೊಫೆಸರ್ ಭಾಭಾ, ಭೌತವಿಜ್ಞಾನವನ್ನು ನೀವು ನೋಡಿಕೊಳ್ಳಿ, ಅಂತರಾಷ್ಟ್ರೀಯ ಸಂಬಂಧ ವಿಚಾರವನ್ನು ನನಗೆ ಬಿಡಿ" ಎಂದು ಹೇಳಿದರು. 1948 ರ ಆರಂಭದಿಂದಲೂ, ಕೈಗಾರಿಕೀಕರಣಗೊಂಡ ಮುಂದುವರಿದ ರಾಷ್ಟ್ರಗಳ ವಿರುದ್ಧ ನಿಲ್ಲಲು- ಈ ಯೋಜನೆಯನ್ನು ಅಭಿವೃದ್ಧಿಪಡಿಸಲು ನೆಹರೂ ಹೆಚ್ಚಿನ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಅಲ್ಲದೆ ಇತರ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ, ವಿಶೇಷವಾಗಿ ಪಾಕಿಸ್ತಾನಕ್ಕೆ ಭಾರತದ ಪ್ರಾದೇಶಿಕ ಶಕ್ತಿಯ ಶ್ರೇಷ್ಠತೆಯ ಭಾಗವಾಗಿ ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಹೊಂದಲು ನಿರ್ಧರಿಸಿದ್ದರು. ನೆಹರು ಸಹ ಭಾಭಾಗೆ ತಿಳಿಸಿದ್ದನ್ನು, ನಂತರ ಅದನ್ನು "ರಾಜಾ ರಾಮಣ್ಣನಿಗೆ ಭಾಭಾ ಅವರು ಹೇಳಿದರು; (ನೆಹರು ಮಾತು) " ನಾವು ಸಾಮರ್ಥ್ಯವನ್ನು ಹೊಂದಿರಬೇಕು, ಮೊದಲು ನಾವು ಶಕ್ತರೆಂದು ಸಾಬೀತು ಮಾಡಬೇಕು ಮತ್ತು ನಂತರ ಗಾಂಧಿ, ಅಹಿಂಸೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳಿಲ್ಲದ ಜಗತ್ತಿನ ವಿಷಯ ಮಾತನಾಡಬೇಕು "ಎಂದು ಹೇಳಿದರು.
  • ಜಾಗತಿಕ ಉದ್ವಿಗ್ನತೆ ಮತ್ತು ಕೊರಿಯನ್ ಯುದ್ಧದ ಬಳಿಕ ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯನ್ನು (1950-1953) ತಗ್ಗಿಸಲು ಕೆಲಸ ಮಾಡುತ್ತಿರುವುದಕ್ಕಾಗಿ ನೆಹರು ಅವರನ್ನು ಹಲವರು ಪ್ರಶಂಸಿಸಿದರು. ಅವರು ಮಾನವನ ಆರೋಗ್ಯದ ಮೇಲೆ ಪರಮಾಣು ಸ್ಫೋಟಗಳ ಪರಿಣಾಮಗಳ ಬಗ್ಗೆ ಅಧ್ಯಯನವನ್ನು ಮೊಟ್ಟ ಮೊದಲು ನಿಯೋಜಿಸಿದರು ಮತ್ತು ಅವರು ಕರೆಯುವ "ಈ ಭಯಾನಕ ಸರ್ವನಾಶದ ಎಂಜಿನ್,ಗಳ" ನಿಷೇಧವನ್ನು ನಿಲ್ಲಿಸಲು ಅವಿರತ ಪ್ರಚಾರ ಮಾಡಿದರು. ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆಯ ಓಟವು, ತಮ್ಮದೇ ಆದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅದರ ವೆಚ್ಚದ ಭಾರ ಹೊರಲು ಅಸಾಧ್ಯವಾಗುವಷ್ಟು ಮಿತಿಮೀರಿದ ಮಿಲಿಟರೀಕರಣಕ್ಕೆ ಕಾರಣವಾಗಬಹುದೆಂದು ಆತಂಕಗೊಂಡಿದ್ದರು. ಅದರಿಂದ ಪರಮಾಣು ನಿಶಸ್ತ್ರೀ ಕರಣವನ್ನು ಉತ್ತೇಜಿಸಲು ಅವರು ವಾಸ್ತವಿಕ ಕಾರಣಗಳನ್ನು ಹೊಂದಿದ್ದರು.

ಕಾಶ್ಮೀರದ ರಕ್ಷಣೆ

  • ಲಾರ್ಡ್ ಮೌಂಟ್ಬ್ಯಾಟನ್ ಅವರು ವಿಶ್ವಸಂಸ್ಥೆ (ಯುಎನ್) ಆಶ್ರಯದಲ್ಲಿ ಕಾಶ್ಮೀರದಲ್ಲಿ ಜನಮತಸಂಗ್ರಹವನ್ನು ನಡೆಸಲು 1948 ರಲ್ಲಿ ನೆಹರು ಭರವಸೆ ನೀಡಿದರು ಎಂದು ಹೇಳಿ ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದಿತ ಪ್ರದೇಶವಾಗಿದೆ ಎಂದರು., ಎರಡೂ ದೇಶಗಳೂ 1947 ರಲ್ಲಿ ಈ ರಾಜ್ಯಕ್ಕಾಗಿ ಯುದ್ಧಕ್ಕೆ ಹೋಗಿದ್ದವು. ಆದಾಗ್ಯೂ, ಯು.ಎನ್. ನಿರ್ಣಯಕ್ಕೆ ಅನುಗುಣವಾಗಿ ಪಾಕಿಸ್ತಾನವು ಆಕ್ರಮಣದಿಂದ ಪಡೆದುಕೊಂಡ ಪ್ರದೇಶವನ್ನು ತೆರವು ಗೊಳಿಸಲು ವಿಫಲವಾದ ಕಾರಣ, ಮತ್ತು ನೆಹರು ಅವರಿಗೆ ಯುಎನ್ ನಿಲುವಿನ ಬಗ್ಗೆ ಅಸಂತುಷ್ಟತೆ ಬೆಳೆಯುತ್ತಿದ್ದಂತೆ ಅವರು 1953 ರಲ್ಲಿ ಜನಾಭಿಪ್ರಾಯ ಸಂಗ್ರಹಣೆಯನ್ನು ನಡೆಸಲು ನಿರಾಕರಿಸಿದರು. ಕಾಶ್ಮೀರ ಮತ್ತು ಅವರ ರಾಜ್ಯವನ್ನು ಭಾರತದೊಳಗೆ ಏಕೀಕರಿಸುವ ಅವರ ನೀತಿಗಳನ್ನು ವಿಶ್ವಸಂಸ್ಥೆ ನ ಮುಂದೆ ಅವರ ಸಹಾಯಕರಾದ ವಿ.ಕೆ. ಕೃಷ್ಣ ಮೆನನ್ ಅವರ ಭಾವೋದ್ರಿಕ್ತ ಭಾಷಣಗಳಿಂದಾಗಿ ಭಾರತದಲ್ಲಿ ಖ್ಯಾತಿಯನ್ನು ಗಳಿಸಿದರು. ಭಾತರದ ಕಾಸ್ಮಿರ ನೀತಿಯನ್ನು ಆಗಾಗ್ಗೆ ಸಮರ್ಥಿಸಿಕೊಂಡರು.
  • 1953 ರಲ್ಲಿ ಕಾಸ್ಮೀರ ಭಾರತದ ಒಕ್ಕೂಟದಲ್ಲಿ ಸೇರಲು ಬೆಂಬಲಸಿದ ಕಾಶ್ಮೀರಿ ರಾಜಕಾರಣಿ ಶೇಖ್ ಅಬ್ದುಲ್ಲಾರನ್ನು ಬಂಧಿಸಿದರು. ಅವರು ಹಿಂದೆ ಬೆಂಬಲಿಸಿದ್ದರು; ಆದರೆ ಈಗ ಪ್ರತ್ಯೇಕತಾವಾದಿ ಮಹತ್ವಾಕಾಂಕ್ಷೆಗಳನ್ನು ಆಶ್ರಯಿಸಿರುವುದಾಗಿ ಶಂಕಿಸಿದ್ದಾಗಿ ನೆಹರೂ ಬಂಧನದ ಆದೇಶ ನೀಡಿದರು. ನೆಹರು ನಂತರ ಬಕ್ಷಿ ಗುಲಾಮ್ ಮೊಹಮ್ಮದ್ ಅವರನ್ನು ಅಬ್ದುಲ್ಲಾರ ಬದಲಿಗೆ ಬದಲಿಸಿ ಕಾಸ್ಮಿರದ ಅಧಿಕಾರ ವಹಿಸಿಕೊಳ್ಳುವಂತೆ ಮಾಡಿದರು.
  • 1957 ರಲ್ಲಿ ಭಾರತ ಹೊಂದಿದ ಕಾಶ್ಮೀರದ ನಿಲುವನ್ನು ಸಮರ್ಥಿಸುವ ಎಂಟು ಗಂಟೆಗಳ ಭಾಷಣವನ್ನು ನೀಡಲು ಮೆನನ್’ಗೆ ಸೂಚನೆ ನೀಡಲಾಯಿತು; ಇಲ್ಲಿಯವರೆಗೆ, ಆ ಭಾಷಣವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಯಾರೂ ಎಂದಿಗೂ ಮಾಡದಿರುವಷ್ಟು ಉದ್ದವಾಗಿದೆ, ಇದು ಜನವರಿ 23 ರಂದು ನೆಡೆದ ಐದು ಗಂಟೆಗಳ 762 ನೆಯ ಸಭೆ ಮತ್ತು 24 ನೇ ದಿನಾಂಕ ಮುಂದುವರಿದ ಎರಡು ಗಂಟೆಗಳ ಮತ್ತು ನಲವತ್ತೆಂಟು ನಿಮಿಷಗಳನ್ನು ಒಳಗೊಂಡ ಭಾಷಣವಾಗಿರುತ್ತದೆ, ಈ ಭಾಷನದ ಅಂತ್ಯದಲ್ಲಿ ಭದ್ರತಾ ಕೌನ್ಸಿಲ್ ಸಭೆಯ ನೆಲದ ಮೇಲೆ ಮೆನನ್’ರ ಕುಸಿತದೊಂದಿಗೆ ಮುಕ್ತಾಯವಾಗುತ್ತದೆ . ಈ ದೀರ್ಘ ಕಾಲದ ಭಾಷಣದ(ಫಿಲಿಬಸ್ಟರ್) ಸಮಯದಲ್ಲಿ, . (ದೊಡ್ಡ ಅಶಾಂತಿ ಅಡಿಯಲ್ಲಿ). ನೆಹರು ಕಾಶ್ಮೀರದಲ್ಲಿ ಭಾರತೀಯ ಸೈನ್ಯ ಶಕ್ತಿಯನ್ನು ಮತ್ತು ಜನಬೆಂಬಲವನ್ನು ವೇಗವಾಗಿ ಕ್ರೋಢೀಕರಿಸಲು ಯಶಸ್ವಿಯಾದರು. ಮೆನನ್ ಕಾಶ್ಮೀರದ ಮೇಲೆ ಭಾರತೀಯ ಸಾರ್ವಭೌಮತ್ವವನ್ನು ತೀವ್ರವಾಗಿ ಸಮರ್ಥಿಸಿಕೊಂಡರು, ಭಾರತದಲ್ಲಿ ತಮ್ಮ ಬೆಂಬಲವನ್ನು ವಿಸ್ತರಿಸಿಕೊಂಡರು. ಭಾರತೀಯ ಪತ್ರಿಕೆಗಳು ಅವರನ್ನು ಸಧ್ಯದ "ಕಾಶ್ಮೀರದ ಹೀರೋ" ಎಂದು ಕರೆದವು. ನಂತರ ಭಾರತದಲ್ಲಿ ನೆಹರೂ ಅವರ ಜನಪ್ರಿಯತೆ ಉತ್ತುಂಗಕ್ಕೇರಿತು; ದೂರದ-ಬಲಪಂಥದಿಂದ ಮಾತ್ರ (ಸಣ್ಣ) ಟೀಕೆಗಳು ಬಂದವು.

ಚೀನಾ ನೀತಿ

  • 1954 ರಲ್ಲಿ ನೆಹರೂ ನೆರೆ ರಾಷ್ಟ್ರ ಚೀನಾದೊಂದಿಗೆ ಶಾಂತಿಯುತ ಸಹಬಾಳ್ವೆಯ ಐದು ತತ್ವಗಳನ್ನ ಒಪ್ಪಿ ಸಹಿ ಹಾಕಿದರು, ಇದು ಭಾರತದಲ್ಲಿ ಪಂಚ ಶೀಲ (ಸಂಸ್ಕೃತ ಪದಗಳು, ಪಂಚ: ಐದು, ಶೀಲ: ಸದ್ಗುಣಗಳ ನೀತಿ), ಎರಡು ದೇಶಗಳ ನಡುವಿನ ಸಂಬಂಧಗಳನ್ನು ನಿಯಂತ್ರಿಸುವ ತತ್ವಗಳ ಒಂದು ಗುಂಪು ಎಂದು ಗುರುತಿಸಲ್ಪಟ್ಟಿತು ಅವರ ಮೊದಲ. ಒಪ್ಪಂದದ ರೂಪದ ಔಪಚಾರಿಕ ಸಂಕೇತೀಕರಣವು 1954 ರಲ್ಲಿ ಚೀನಾ ಮತ್ತು ಭಾರತ ನಡುವಿನ ಒಂದು ಒಪ್ಪಂದದಲ್ಲಿತ್ತು. ಚೀನಾ ಮತ್ತು ಭಾರತದ ಟಿಬೆಟ್ ಪ್ರದೇಶದ ನಡುವೆ ವ್ಯಾಪಾರ ಮತ್ತು ಪರಸ್ಪರ ನೆಡವಳಿಕೆಯ ಮೇಲೆ "ಒಪ್ಪಂದವನ್ನು (ಟಿಪ್ಪಣಿಗಳ ವಿನಿಮಯದೊಂದಿಗೆ) ಪೂರ್ವಭಾವಿಯಾಗಿ ಅವರು ಬೆಳೆಸಿದರು, 29 ಏಪ್ರಿಲ್ 1954 ರಂದು ಪೀಕಿಂಗ್ ನಲ್ಲಿ. ಡಿಸೆಂಬರ್ 1953 ರಿಂದ ಏಪ್ರಿಲ್ 1954 ರವರೆಗೆ ಪಿಆರ್ಸಿ (ಚೀನಾ) ಸರ್ಕಾರದ ನಿಯೋಗ ಅಕ್ಸಾಯ್ ಚಿನ್ ಮತ್ತು ದಕ್ಷಿಣದ ವಿವಾದಿತ ಪ್ರದೇಶಗಳಿಗೆ ಸಂಬಂಧಿಸಿ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳ ಮೇಲೆ, ಭಾರತೀಯ ಸರ್ಕಾರದ ನಿಯೋಗದ ನಡುವೆ ಮಾತುಕತೆಗಳು ನಡೆದವು. ಟಿಬೆಟ್. 1957 ರ ಹೊತ್ತಿಗೆ, ಚೀನೀ ಪ್ರಧಾನಿ ಝೌ ಎನ್ ಲೈ ಟಿಬೆಟ್‍ನಲ್ಲಿ ಚೀನೀಯರು ಅದರ ರಕ್ಷಣೆಯ ಸ್ಥಾನವನ್ನು ಹೊಂದಿದ್ದು ಅದರ ಪೂರ್ಣ ಹೊಣೆ ಸ್ವೀಕರಿಸಲು ನೆಹರು ಅವರಿಗೆ ಮನವೊಲಿಸುವಲ್ಲಿ ಯಶಸ್ವಿಯಾದರು, ಇದರಿಂದಾಗಿ ಟಿಬೆಟ್ ಸಂಭವನೀಯ ಮಿತ್ರರಾಷ್ಟ್ರವಾಗುವ ಸಾಧ್ಯತೆಯನ್ನು ಕಳೆದುಕೊಂಡಿತು. ಆಗ ಭಾರತವೂ ಅದಕ್ಕೆ ಮಿಲಿಟರಿ ಸಹಾಯ ಒದಗಿಸುವ ಸ್ಥಿತಿಯಲ್ಲಿ ಇರಲಿಲ್ಲ. ಈ ಒಪ್ಪಂದವು 1960 ರ ದಶಕದಲ್ಲಿ ಕಡೆಗಣಿಸಲ್ಪಟ್ಟಿತು, ಆದರೆ 1970 ರ ದಶಕದಲ್ಲಿ, ಚೀನಾ-ಭಾರತ ಸಂಬಂಧಗಳಲ್ಲಿ ಫೈವ್ ಪ್ರಿನ್ಸಿಪಲ್ಸ್ ಮತ್ತೊಮ್ಮೆ ಪ್ರಮುಖವಾಗಿ ಕಂಡಿತು, ಮತ್ತು ರಾಷ್ಟ್ರಗಳ ನಡುವಿನ ಸಂಬಂಧಗಳು ಹೆಚ್ಚು ಸಾಮಾನ್ಯವಾಗಿತ್ತು. ಇಂದಿರಾ ಗಾಂಧಿಯವರ ಪ್ರಧಾನಮಂತ್ರಿ ಮತ್ತು ಜನತಾ ಪಕ್ಷದ 3 ವರ್ಷಗಳ ಆಡಳಿತ (1977-1980) ಅವಧಿಯಲ್ಲಿ ಈ ಪ್ರದೇಶದುದ್ದಕ್ಕೂ ವ್ಯಾಪಕವಾಗಿ ಐದು ನೀತಿಗಳು ಅನುಸರಿಸಲ್ಪಟ್ಟವು ಮತ್ತು ಸ್ವೀಕರಿಸಲ್ಪಟ್ಟವು. ಶಾಂತಿಯುತ ಸಹಬಾಳ್ತೆಯ ಐದು ತತ್ವಗಳು 1954 ರ ಚೀನಾ -ಭಾರತದ ಗಡಿ ಒಪ್ಪಂದದ ಆಧಾರವಾಗಿತ್ತು, ಆದರೆ ನಂತರದ ವರ್ಷಗಳಲ್ಲಿ ನೆಹರುರ ಸಹಬಾಳ್ವೆಯ ಒಪ್ಪಂದವನ್ನು ಕಡೆಗಣಿಸಿ ಚೀನಾವು ಗಡಿ ವಿವಾದಗಳ ವಿಚಾರವಾಗಿ ಚೀನಾದ ಒತ್ತಡವನ್ನು ಹೆಚ್ಚಿಸಿತು. ನಂತರ ಚೀನಾದ ಟಿಬೆಟ್ಟಿನ ಮೇಲೆ ಪೂರ್ಣ ಆಕ್ರಮಣ ಮಾಡಿ ಅದನ್ನು ತನ್ನವಶ ಪಡಿಸಿಕೊಂಡಾಗ, 14 ನೆಯ ದಲೈಲಾಮಾ ಭಾರತಕ್ಕೆ ಸಂಗಡಿಗರೊಂದಿಗೆ ಆಶ್ರಯ ಕೋರಿ ಭಾರತಕ್ಕೆ ಗುಳೆ ಬಂದರು. ಅವರಿಗೆ ನೆಹರು ಆಶ್ರಯ ನೀಡುವ ನಿರ್ಧಾರವನ್ನು ತೆಗೆದುಕೊಂಡರು.
  • ಚೀನಾದ ಸಮಾಜವಾದಿ ಕ್ರಾಂತಿಯ ನಂತರ ಕಮ್ಯುನಿಸ್ಟ್ ಪಕ್ಷ ಮಾವೋ ನಾಯಕತ್ವದಲ್ಲಿ ಪೂರ್ಣ ಚೀನಾವನ್ನು ಆಕ್ರಮಿಸಿಕೊಂಡಿತು. ಆದರೆ ರಿಪಬ್ಲಿಕ್ ಚೈನಾ ತೈಫೆಯ ಚಿಕ್ಕ ದ್ವೀಪದಲ್ಲಿ ನೆಪಮಾತ್ರಾ ಅಸ್ತಿತ್ವದಲ್ಲಿತ್ತು. ರಿಪಬ್ಲಿಕ್ ಆಫ್ ಚೀನಾ (ROC) 1945 ರಲ್ಲಿ ವಿಶ್ವಸಂಸ್ಥೆ ಸ್ಥಾಪನೆಯಾದ ನಂತರ ವಿಶ್ವಸಂಸ್ಥೆಗೆ ಸೇರಿತ್ತು. ಅದು ಅಮೆರಿಕ ಸಂ.ಸಂಸ್ಥಾನದ ಬೆಂಬಲದಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಯ ಸದಸ್ಯ ರಾಷ್ಟ್ರವಾಗಿದ್ದು ವಿಟೋ ಅಧಿಕಾರ ಹೊಂದಿತ್ತು. ಕಮ್ಯುನಿಸ್ಟ್ ಚೀನಾ ನೆಹರೂ ಅವರ ಪಂಚ ಶೀಲ ತತ್ವವನ್ನು ಒಪ್ಪಿ ಭಾರತದ ಮಿತ್ರರಾಷ್ಟ್ರವಾದ ನಂತರ ನೆಹರೂ ಅವರು ಚಿಕ್ಕ ದ್ವೀಪದಲ್ಲಿ ಮಾತ್ರಾ ಅಸ್ತಿತ್ವದಲ್ಲಿರುವ ಗಣರಾಜ್ಯ ಚೀನಾದ ಬದಲಿಗೆ ಪೂರ್ಣ ಚೀನಾ ಭೂಭಾಗದ ಒಡೆತನ ಹೊಂದಿದ ಕಮ್ಯೂನಿಸ್ಟ್ ಚೀನಾಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸದಸ್ಯತ್ವವನ್ನು ಕೊಡಬೇಕೆಂದು ಹೇಳಿದರು. ಆದರೆ ರಷ್ಯಾದ ಒತ್ತಡದ ನಂತರವೇ ಅಮೇರಿಕಾ ಮತ್ತು ಇತರ ಸದಸ್ಯರಾಷ್ಟ್ರಗಳು ಕಮ್ಯುನಿಸ್ಟ್ ಚೀನಾಕ್ಕೆ ವಿಟೋ ಮಾಡುವ ಅವಕಾಶ ಹೊಂದಿದ ಭದ್ರತಾ ಸಮಿತಿಯ ಸದಸ್ಯತ್ವದ ಸ್ಥಾನವನ್ನು ಕೊಟ್ಟವು.ಅದಕ್ಕೆ ಇತರೆ ಭದ್ರತಾಸಮಿತಿ ಸದಸ್ಯರು ಮನ್ನಣೆ ಕೊಡಲಿಲ್ಲ.
  • ರಷ್ಯಾ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್ ಮತ್ತು ಇತರ ಅಮೇರಿಕನ್ ಮೈತ್ರಿಕೂಟಗಳು ರಿಪಬ್ಲಿಕ್ ಆಫ್ ಚೀನಾ (ROC)ದಿಂದ ಕಮ್ಯೂನಿಸ್ಟ್‍ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು (PRC) ಬೆಂಬಲಿಸಿದವು. 25 ಅಕ್ಟೋಬರ್ 1971 ರಂದು, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಏಕೈಕ ಕಾನೂನಿನ್ವಯ ಚೀನಾ ಎಂದು ಗುರುತಿಸಲು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ೩ನೇ ೨ ಬಹುಮತದಿಂದ ಒಪ್ಪಲಾಯಿತು.

ಭದ್ರತಾ ಸಮಿತಿಯ ಸದಸ್ಯತ್ವ ಮತ್ತು ಭಾರತ

ರಿಪಬ್ಲಿಕ್ ಚೀನಾವಿಶ್ವ ಸಂಸ್ತೆಯ ಭದ್ರತಾಮಿತಿಯ ವಿಟೋ ಪಡೆದ ರಾಷ್ಟ್ರವಾಗಿತ್ತು. ಅದರೆ ಅದು ಕಮ್ಯೂನಿಸ್ಟ್ ಚೀನಾಕ್ಕೆ ಸಂಪೂರ್ಣ ಭೂಭಾಗವನ್ನು ಸೋತು ಒಂದು ಸಣ್ಣ ದ್ವೀಪದಲ್ಲಿ ಯು.ಎಸ್.ಎ.ಯ (ಅಮೇರಿಕದ)ಬೆಂಬಲದೊಂದಿಗೆ ಅಸ್ಥಿತ್ವ ಹೊಂದಿತ್ತು. ಚೀನಾವನ್ನು ಅದರ ವಿಶ್ವಸಂಸ್ತೆಯ ಭದ್ರತಾ ಸಮಿತಿಯ ಖಾಯಂ ಸ್ಥಾನದಿಂದ ತಪ್ಪಿಸಿ ಅಮೇರಿಕಾ ಸಲಹೆಯಂತೆ ಭಾರತವು ಅದನ್ನು ಪಡೆಯಲು ಪ್ರಯತ್ನಿಸಿದರೆ ಚೀನಾದ ಸತತ ವಿರೋಧವನ್ನು ಕಟ್ಟಿ ಕೊಳ್ಳಬೇಕಾಗಿತ್ತು. ಮತ್ತು ಭದ್ರತಾ ಸಮಿತಿಯ ಎಲ್ಲಾ ಸದಸ್ಯರಾಷ್ಟ್ರಗಳು ಒಪ್ಪಬೇಕಾಗಿತ್ತು; ರಷ್ಯಾವು ಅದನ್ನು ತನ್ನ ವಿಟೋ ಮೂಲಕ ತಡೆಯುವ ಸಾಧ್ಯತೆ ಇತ್ತು. ಅದಲ್ಲದೆ ವಿಶ್ವಸಂಸ್ತೆಯ ಜನರಲ್ ಅಸೆಂಬ್ಲಿಯಲ್ಲಿ ಒಟ್ಟು ಸದಸ್ಯರ ಮೂರನೇ ಎರಡು ಬಹುಮತವನ್ನು ಭಾರತ ಪಡೆಯಬೇಕಿತ್ತು. ಅದು ರಷ್ಯಾ ಚೀನಾ ಬಣಗಳು ಒಪ್ಪದೆ ಅಸಾದ್ಯವಾಗಿತ್ತು, ಕಾರಣ ರಷ್ಯಾ, ಚೀನಾ ಮತ್ತು ಅದರ ಪರ ರಾಷ್ಟ್ರಗಳು ಬೆಂಬಲಿಸುತ್ತಿರಲಿಲ್ಲ. ಹಾಗಾಗಿ ನೆಹರೂ ಅಮೇರಿಕದ ಕಿಸಿಂಜರ್ ಸಲಹೆಯನ್ನು ಕಾರ್ಯಸಾದ್ಯವಲ್ಲ ಮತ್ತು ಭಾರತವನ್ನು ರಷ್ಯಾ ಮತ್ತು ಚೀನಾದಿಂದ ದೂರ ಇಡುವ ಅಮೆರಿಕಾ ತಂತ್ರ ಎಂದು ತಳ್ಳಿಹಾಕಿದರು.

ಅಮೇರಿಕ ಸಂಯುಕ್ತ ಸಂಸ್ಥಾನ (ಯುನೈಟೆಡ್ ಸ್ಟೇಟ್ಸ್)

ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ನೆಹರೂ 1959 ರಲ್ಲಿ ಪಾರ್ಲಿಮೆಂಟ್ ಹೌಸ್ನಲ್ಲಿ ಯು.ಎಸ್. ಅಧ್ಯಕ್ಷ ಡ್ವೈಟ್ ಡಿ ಐಸೆನ್ಹೋವರ್ ಬರಮಾಡಿಕೊಂಡ ಚಿತ್ರ
  • 1956 ರಲ್ಲಿ, ಬ್ರಿಟಿಷ್, ಫ್ರೆಂಚ್ ಮತ್ತು ಇಸ್ರೇಲಿಗಳು ಸೂಯೆಜ್ ಕಾಲುವೆಯ ಜಂಟಿ ಆಕ್ರಮಣ ನೆಡೆಸಿರುವುದನ್ನು ನೆಹರು ಟೀಕಿಸಿದರು. ಭಾರತದ ಪ್ರಧಾನಿಯಾಗಿ ಮತ್ತು ಅಲಿಪ್ತ ಚಳವಳಿಯ ನಾಯಕನಾಗಿ ನೆಹರೂ ಪಾತ್ರವು ಮಹತ್ವದ್ದಾಗಿತ್ತು; ಈಡನ್ ಮತ್ತು ಈ ಆಕ್ರಮಣದ ಸಹ-ಪ್ರಾಯೋಜಕರನ್ನು ತೀವ್ರವಾಗಿ ಖಂಡಿಸಿದ ಸಂದರ್ಭದಲ್ಲಿ, ಅವರು ಎರಡು ಕಡೆಗಳ ನಡುವೆ ಸಹ-ಸಮಾನ ದೂರವನ್ನು ಇಟ್ಟುಕೊಳ್ಳಲು ಪ್ರಯತ್ನಿಸಿದರು. ಯು.ಎಸ್. ಅಧ್ಯಕ್ಷ ಡ್ವೈಟ್ ಐಸೆನ್ಹೋವರ್’ಜೊತೆ ನೆಹರು ಪ್ರಬಲ ಮಿತ್ರತ್ವ ಹೊಂದಿದ್ದರು. ಅವರು ಸಾರ್ವಜನಿಕವಾಗಿ ಮೌನವಾಗಿರುವಾಗ, ಬ್ರಿಟನ್ ಮತ್ತು ಫ್ರಾನ್ಸ್ಗಳನ್ನು ಹಿಂದೆಗೆದುಕೊಳ್ಳುವಂತೆ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಅಮೆರಿಕದ ಪ್ರಭಾವವನ್ನು ಬಳಸಿಕೊಳ್ಳುವ ಮಟ್ಟಿಗೆ ಹೋದರು. ಈ ಘಟನೆಯು ನೆಹರು ಮತ್ತು ಭಾರತವನ್ನು ಮೂರನೆಯ-ವಿಶ್ವಬಣದಲ್ಲಿ ಪ್ರಭಾವಿ ರಾಷ್ಟ್ರವಾಗಿ ಪ್ರತಿಷ್ಠಾಪಿಸಿತು ಸೂಯೆಜ್ ಬಿಕ್ಕಟ್ಟಿನ ಸಂದರ್ಭದಲ್ಲಿ, ನೆಹರುರ ಬಲಗೈ ಮನುಷ್ಯ ಮೆನನ್, ಪಶ್ಚಿಮದೊಂದಿಗೆ ರಾಜಿ ಮಾಡಿಕೊಳ್ಳಲು ಉದಾಸೀನನಾಗಿದ್ದ ಗಮಲ್ ನಾಸರ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರು, ಪಾಶ್ಚಾತ್ಯ ಶಕ್ತಿಗಳು ನಾಸರ್ ಗೆ ರಾಜಿ ಮಾಡಲು ಸಿದ್ಧರಿದ್ದಾರೆ ಎಂಬ ಅರಿವು ಮೂಡಿಸಿತು.
  • ಸೂಯೆಜ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಾಸರ್ ಪರವಾಗಿ ನೆಹರು ತಮ್ಮ ಹಸ್ತಕ್ಷೇಪದ ನಂತರ ನೆಹರು ಅವರನ್ನು ಸಮಾಧಾನ ಪಡಿಸಲು ಯುಎಸ್ ನ ಐಸೆನ್ಹೋವರ್ ಆಶಿಸಿದ್ದರು. ಆದಾಗ್ಯೂ, ಶೀತಲ ಸಮರ, ಸಂಶಯಗಳು ಮತ್ತು ಸಮಾಜವಾದದ ನೆಹರು ಅವರ ಬಗ್ಗೆ ಅಮೆರಿಕ ಅಪನಂಬಿಕೆ, ಇದ್ದರೂ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಶಾಂತಗೊಳಿಸಿತು, ಇದು ಸೋವಿಯೆತ್ ಒಕ್ಕೂಟವನ್ನು ಧೈರ್ಯವಾಗಿ ಬೆಂಬಲಿಸುವ ನೆಹರೂ ಅವರನ್ನು ಶಂಕಿಸಿತು. ಸೂಯೆಜ್ ಬಿಕ್ಕಟ್ಟಿನ ನಂತರವೂ ನೆಹರೂ ಬ್ರಿಟನ್ನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಪರ್ಶಚಮ ನದಿಗಳು ಮತ್ತು ಸಿಂಧೂ ನದಿಗಳ ಬಗೆಗೆ ನೆಹರು ಅವರು ಯುಕೆ ಮತ್ತು ವಿಶ್ವ ಬ್ಯಾಂಕ್’ನ ಮಧ್ಯಸ್ಥಿಕೆ ಯನ್ನು ಒಪ್ಪಿಕೊಂಡರು, ಪಂಜಾಬ್ ಪ್ರಾಂತ್ಯದ ಪ್ರಮುಖ ನದಿಗಳ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಬಗ್ಗೆ ದೀರ್ಘಾವಧಿಯ ವಿವಾದಗಳನ್ನು ಪರಿಹರಿಸಲು 1960 ರಲ್ಲಿ ಸಿಂಧೂ ವಾಟರ್ಸ್ ಒಡಂಬಡಿಕೆಗೆ ಪಾಕಿಸ್ತಾನಿ ಆಡಳಿತಗಾರ ಅಯುಬ್ ಖಾನ್ ರೊಂದಿಗೆ ಸಹಿ ಹಾಕಿದರು.

ಗೋವಾ ಬಿಕ್ಕಟ್ಟು

  • ಗೋವಾವನ್ನು ಭಾರತ ಒಕ್ಕೂಟಕ್ಕೆ ಸೇರುವ ಬಗೆಗೆ ಹಲವು ವರ್ಷಗಳ ಮಾತುಕತೆಗಳು ವಿಫಲವಾದ ನಂತರ, 1961 ರಲ್ಲಿ ಪೋರ್ಚುಗೀಸ್ ನಿಯಂತ್ರಣದ ಗೋವಾದ ಮೇಲೆ ಆಕ್ರಮಣ ಮಾಡಲು ನೆಹರು ಭಾರತೀಯ ಸೈನ್ಯಕ್ಕೆ ಅಧಿಕಾರ ನೀಡಿದರು. ನಂತರ ಅವರು ಅದನ್ನು ಔಪಚಾರಿಕವಾಗಿ ಭಾರತಕ್ಕೆ ಸೇರಿಸಿಕೊಂಡರು. ಇದು ಭಾರತದಲ್ಲಿ ಅವರ ಜನಪ್ರಿಯತೆಯನ್ನು ಹೆಚ್ಚಿಸಿತು, ಆದರೆ ಮಿಲಿಟರಿ ಬಲವನ್ನು ಬಳಸಿದ್ದಕ್ಕಾಗಿ ಭಾರತದಲ್ಲಿನ ಕಮ್ಯುನಿಸ್ಟ್‘ರು ವಿರೋಧಿಸಿ ಅವರನ್ನು ಟೀಕಿಸಿದರು. ಪೋರ್ಚುಗಲ್ ವಿರುದ್ಧ ಸೇನಾಪಡೆಯ ಬಳಕೆಯಿಂದ ಬಲಪಂಥೀಯ ಮತ್ತು –ಅತಿವಾದಿ-ಬಲ ಗುಂಪುಗಳ ಸೌಹಾರ್ದತೆಯನ್ನು ಗಳಿಸಿದರು.
  • ವಿಶ್ವಸಂಸ್ಥೆಯ ಎರಡನೆಯ ಪ್ರಧಾನ ಕಾರ್ಯದರ್ಶಿ ಡಾಗ್ ಹ್ಯಾಮರಷೀಲ್ಡ್, ಅವರು ನೆಹರೂ ಮತ್ತು ಚೀನೀ ಪ್ರಧಾನಿ ಝೌ ಎನ್ ಲಯ್, ಅವರನ್ನು ಅಲೆಕ್ಸಾಂಡರ್ ಗ್ರಂಥಮ್ ಗೆ ಹೋಲಿಸಿ, ನೆಹರೂ ಒಂದು ನೈತಿಕ ದೃಷ್ಟಿಕೋನದಿಂದ ಅವರಿಗಿಂತ ಉತ್ತಮವಾಗಿದ್ದರೆ, ಝೌ ಎನ್ಲೈ ನೈಜ ರಾಜಕೀಯ ತಂತ್ರದಲ್ಲಿ ಹೆಚ್ಚು ಪರಿಣತರು ಎಂದು ಹೇಳಿದ್ದಾರೆ.

1962 ರ ಚೀನಾ ಭಾರತ ಯುದ್ಧ

ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಪ್ರಧಾನ ಮಂತ್ರಿ ನೆಹರೂ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಅಧ್ಯಕ್ಷ ರೊಮುಲೋ (ಅಕ್ಟೋಬರ್ 1949)ಮತ್ತು ಇತರರು.
  • ಇದನ್ನೂ ನೋಡಿ:ಭಾರತ-ಚೀನ ಯುದ್ಧ
  • 1959 ರಿಂದ ಆರಂಭವಾಗಿ 1961 ರಲ್ಲಿ ತೀವ್ರಗೊಂಡ ಒಂದು ಪ್ರಕ್ರಿಯೆಯಲ್ಲಿ, ಚೀನಾ - ಭಾರತ ಗಡಿ ಪ್ರದೇಶದ ವಿವಾದಿತ ಪ್ರದೇಶಗಳಲ್ಲಿ ಮಿಲಿಟರಿ ಹೊರಠಾಣೆಗಳನ್ನು ಸ್ಥಾಪಿಸುವ "ಮುಂಚೂಣಿ ನೀತಿಯನ್ನು" ನೆಹರು ಅಳವಡಿಸಿಕೊಂಡರು, ಅದರಲ್ಲಿ ಭಾರತವು ಹಿಂದೆ ನಿಯಂತ್ರಿಸದೆ ಇದ್ದ ಪ್ರದೇಶಗಳಲ್ಲಿ 43 ಹೊರಠಾಣೆಗಳನ್ನೂ ಹೊಸದಾಗಿ ಸ್ಥಾಪಿಸುವುದೂ ಸಹ ಒಳಗೊಂಡಿತ್ತು. [168] ಚೀನಾ ಈ ಕೆಲವುಹೊರಠಾಣೆಗಳ ಮೇಲೆ ದಾಳಿ ಮಾಡಿತು, ಹೀಗಾಗಿ ಭಾರತವು ಚೀನಾ - ಭಾರತ ಯುದ್ಧ ಆರಂಭವಾಯಿತು. ಅಂತಿಮವಾಗಿ ಭಾರತ ಹಿನ್ನಡೆ ಅನುಭವಿಸಿತು., ಆದರೂ ಚೀನಾದ ಪೂರ್ವ ವಲಯದಲ್ಲಿ ಯುದ್ಧ ಪೂರ್ವದಲ್ಲಿದ್ದ ವಲಯಕ್ಕೆ ಚೀನಾ ವಾಪಸಾಯಿತು. ಆದರೆ ಬ್ರಿಟಿಷ್ ಭಾರತದಲ್ಲಿಯೇ ಇದ್ದ ಅಕ್ಸಾಯ್ ಚಿನ್ ಅನ್ನು ಸ್ವಾಧೀನಪಡಿಸಿಕೊಂಡ ಚೀನಾ ನಂತರ ಭಾರತಕ್ಕೆ ಹಸ್ತಾಂತರಿಸಿತು. . ನಂತರ, 1948 ರಿಂದ ಪಾಕಿಸ್ತಾನವು ನಿಯಂತ್ರಿಸುತ್ತಿದ್ದ ಸಿಯಾಚಿನ್ ಬಳಿಯ ಕಾಶ್ಮೀರದ ಕೆಲವು ಭಾಗವನ್ನು ಚೀನಾಕ್ಕೆ ಪಾಕಿಸ್ತಾನವು ಹಸ್ತಾಂತರಿಸಿತು. ಈ ಯುದ್ಧವು ಭಾರತದ ಮಿಲಿಟರಿಯ ಸಿದ್ಧವಿಲ್ಲದಿರುವಿಕೆಯನ್ನು ಬಹಿರಂಗಪಡಿಸಿತು, ಭಾರತವು 14,000 ಸೈನಿಕರನ್ನು ಯುದ್ಧ ವಲಯಕ್ಕೆ ಕಳುಹಿಸಿತ್ತು, ಆದರೆ ಚೀನೀ ಸೈನ್ಯವು ಅದಕ್ಕೆ ವಿರೋಧವಾಗಿ ಹಲವು ಬಾರಿ ದೊಡ್ಡದಾಗಿತ್ತು. ನೆಹರು ಸರ್ಕಾರವನ್ನು ರಕ್ಷಣಾತ್ಮಕತೆಗೆ ಸಾಕಷ್ಟು ಗಮನವನ್ನು ನೀಡದೆ ಇರುವುದನ್ನು ಮಾದ್ಯಮಗಳು ವಿರೋಧ ಪಕ್ಷದವರು ವ್ಯಾಪಕವಾಗಿ ಟೀಕಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ರಕ್ಷಣಾ ಸಚಿವ ವಿ. ಕೆ. ಕೃಷ್ಣ ಮೆನನ್ ರನ್ನು ನೆಹರೂ ವಜಾಗೊಳಿಸಿದರು. ನೆಹರು ಅಮೆರಿಕದೊಂದಿಗೆ ಉತ್ತಮ ಸಂಬಂಧಗಳನ್ನು ಬೆಳಸಿದರು ಮತ್ತು ಯುದ್ಧಕ್ಕಾಗಿ ಅಮೆರಕದ ಸಹಾಯ ಕೇಳಿದರು. ಜಾನ್ ಎಫ್. ಕೆನಡಿಯವರು ಯುದ್ಧದ ಸಮಯದಲ್ಲಿ ಉಪಯುಕ್ತವೆಂದು ಸಾಬೀತಾಯಿತು, ಅಮೆರಕ ಸಂಸ್ಥಾನ ಪಾಕಿಸ್ತಾನದ ಅಧ್ಯಕ್ಷರು ಭಾರತಕ್ಕೆ ಸಂಬಂಧಿಸಿದಂತೆ 1962 ರಲ್ಲಿ, ತನ್ನ ತಟಸ್ಥತೆಯನ್ನು ಖಾತರಿಪಡಿಸಿಕೊಳ್ಳಲು ಅಯ್ಯಬ್ ಖಾನ್’ಗೆ ಹೇಳಿದರು. ( ಅವರು ಅಮೆರಿಕನ್ನರೊಂದಿಗೆ ನಿಕಟವಾಗಿದ್ದರು). "ರಷ್ಯಾ ಮತ್ತು ಕೆಂಪು ಚೀನಾದ ಕಮ್ಯುನಿಸ್ಟ್ ಆಕ್ರಮಣದ ಬೆದರಿಕೆ ಅಯ್ಯಬ್ ಖಾನ್’ಗೆ ಇತ್ತು". " ಮುಕ್ತ ಮಾರುಕಟ್ಟೆಯ ನೀತಿಗಳನ್ನು ಬೆಂಬಲಿಸುವ ಬಲಪಂಥೀಯ ಗುಂಪುಗಳಿಂದ ನೆಹರು ಅವರ ಸೋವಿಯತ್ ಒಕ್ಕೂಟದೊಂದಿಗಿನ ಭಾರತೀಯ ಸಂಬಂಧವೂ .ಕೂಡಾ ಟೀಕಿಸಲ್ಪಟ್ಟು ಮವಲ್ಯಮಾಪನ ಮಾಡಲ್ಪಟ್ಟಿತು. ಕೆಲವರು ಒಂದು ಶಾಶ್ವತ ಮಿತ್ರರಾಷ್ಟ್ರದ ಮೇಲೆ ನೆಲೆಗೊಳ್ಳಲು ಅಥವಾ ಅವಲಂಬಿಸಲು ಒತ್ತಡಗಳನ್ನು ಮಾಡಿದ್ದರು,. ಆದರೆ ನೆಹರುರವರು ಅಲಿಪ್ತನೀತಿಯ ಚಳುವಳಿಗೆ ತಮ್ಮ ಬದ್ಧತೆಯನ್ನು ಮುಂದುವರಿsಸಿದರು.

ಸೇನಾ ಉನ್ನತೀಕರಣಕ್ಕೆ ಸಿದ್ಧತೆ

  • ಯುದ್ಧದ ನಂತರ ಭಾರತೀಯ ಮಿಲಿಟರಿಯಲ್ಲಿ ಭವಿಷ್ಯದ ರೀತಿಯ ಘರ್ಷಣೆಗಳಿಗೆ ಸಿದ್ಧತೆಗಳನ್ನು ಮಾಡಲಾಯಿತು ಮತ್ತು ನೆಹರು ಅವರಿಗೆ ಆ ಬಗ್ಗೆ ಒತ್ತಡವನ್ನು ತಂದಿತು, ಅವರು ಭಾರತದ ಮೇಲೆ ಚೀನಾದ ಆಕ್ರಮಣವನ್ನು ನಿರೀಕ್ಷಿಸಲು ವಿಫಲವಾದ ಕಾರಣದಿಂದಾಗಿ ಜವಾಬ್ದಾರರಾಗಿದ್ದರು. ಅಮೆರಿಕಾದ ಸಲಹೆಯಡಿಯಲ್ಲಿ (ಅಮೆರಿಕಾದ ರಾಯಭಾರಿ ಜಾನ್ ಕೆನ್ನೆಥ್ ಗಾಲ್ಬ್ರೈಥ್ ಅವರು ಯು.ಎಸ್.ನ ಯುದ್ಧದ ಮತ್ತು ಇತರ ಎಲ್ಲ ಉನ್ನತ ನೀತಿಯನ್ನು ರೂಪಿಸುತ್ತಿದ್ದರು. ಕಾಕತಾಳೀಯವಾಗಿ ಕೆನಡಿ ಮತ್ತು ಇತರರು ಅಮೇರಿಕನ್ ಕ್ಯೂಬಾದ ಕ್ಷಿಪಣಿ ಪ್ರಕ್ಷುಬ್ಧತೆಯ’ನ್ನು ಮತ್ತು ನೀತಿಯನ್ನು ರೂಪಿಸುವುದನ್ನು ನೋಡಿಕೊಳ್ಳುತ್ತಿದ್ದರು- ಆ ಸಮಯದಲ್ಲಿ ರಷ್ಯಾವು ಅಮೇರಿಕಾದ ಮೇಲೆ ಧಾಳಿ ಮಾಡಲು ಕ್ಯೂಬಾಕ್ಕೆ ಉನ್ನತ ಕ್ಷಿಪಣಿಗಳನ್ನು ರವಾನಿಸಿತ್ತು.) ನೆಹರೂ ಅವರು ತಮ್ಮ ಉತ್ತಮ ಆಯ್ಕೆಗಳ ಪ್ರಕಾರ, ಭಾರತೀಯ ವಾಯುಪಡೆಯನ್ನು ಚೀನೀ ಮುನ್ನಗ್ಗುವಿಕೆಯನ್ನು ತಡೆಯಲು ಉಪಯೋಗಿಸಲು ಇಷ್ಟಪಡಲಿಲ್ಲ.. ಟಿಬೆಟ್’ನಲ್ಲಿ ತಮ್ಮ ವಾಯುಪಡೆ ಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಚೀನೀಯರಿಗೆ ಇಂಧನ ಅಥವಾ ಇಳಿಯುವದಾರಿಗಳೆರಡೂ ಇರಲಿಲ್ಲ ಎಂದು ಸಿ.ಐ.ಎ ನಂತರ ಬಹಿರಂಗಪಡಿಸಿತು. ಸಾಮಾನ್ಯವಾಗಿ, ಭಾರತೀಯರು ಚೀನಾ ಮತ್ತು ಅದರ ಮಿಲಿಟರಿ ಬಗ್ಗೆ ಹೆಚ್ಚು ಸಂಶಯ ವ್ಯಕ್ತಪಡಿಸಿದ್ದಾರೆ. ಅನೇಕ ಭಾರತೀಯರು ಈ ಯುದ್ಧವನ್ನು ಚೀನಾದೊಂದಿಗೆ ದೀರ್ಘಕಾಲದ ಶಾಂತಿ ಸ್ಥಾಪಿಸುವ ಭಾರತದ ಪ್ರಯತ್ನಗಳಿಗೆ ಚೀನಾ ಬಗೆದ ದ್ರೋಹವೆಂದು ಪರಿಗಣಿಸುತ್ತಾರೆ ಮತ್ತು "ಹಿಂದಿ-ಚೀನಿ ಭಾಯಿ-ಭಾಯಿ" ("ಭಾರತೀಯರು ಮತ್ತು ಚೀನಿಯರು ಸಹೋದರರು" ಎಂಬ ಅರ್ಥದ ಘೋಷಣೆಯನ್ನು ಚೌಎನ್ ಲಾಯ್ ಭಾರತದ ಭೇಟಿಯಲ್ಲಿ ಘೋಷಿಸಿಸಿದ್ದರು) ಎಂದ ನೆಹರು ಅವರ ಹೇಳಿಕೆಯನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಮಹಾಶಕ್ತಿಗಳ ಶೀತಲ-ಯುದ್ಧದ (ಕೋಲ್ಡ್ ವಾರ್ ಬ್ಲಾಕ್) ಕಾವು ಹೆಚ್ಚುತ್ತಿರುವುದರ ಪ್ರಭಾವವನ್ನು ಪ್ರತಿಭಟಿಸಲು ಭಾರತ ಮತ್ತು ಚೀನಾ ಗಳು ಬಲವಾದ “ಏಷ್ಯಾದ ಆಕ್ಸಿಸ್” ಅನ್ನು (ಏಷಿಯಾದ-ಕೇಂದ್ರ ಪ್ರಭಾವವನ್ನು)) ರೂಪಿಸುತ್ತವೆ ಎಂಬ ನೆಹರುರವರ ಹಿಂದಿನ ಆಶಯವನ್ನು ಯುದ್ಧವು ಅಂತ್ಯಗೊಳಸಿತು.
  • ಸೈನ್ಯದ ಸನ್ನದ್ಧತೆಯು ರಕ್ಷಣಾ ಸಚಿವ ಮೆನನ್ ಅವರ ಮೇಲೆ ಆರೋಪ ಹೊರಿಸಲ್ಪಟ್ಟಿತು, ಅವರು ಭಾರತದ ಮಿಲಿಟರನ್ನು ಮತ್ತಷ್ಟು ಆಧುನಿಕಗೊಳಿಸಬಲ್ಲವರಿಗೆ ಅವಕಾಶ ನೀಡಲು ತಮ್ಮ ಸರ್ಕಾರದ ಹುದ್ದೆಗೆ "ರಾಜೀನಾಮೆ ನೀಡಿದರು". ಭಾರತದ ಸ್ವಂತ ಮೂಲಗಳು ಮತ್ತು ಸ್ವಯಂಪೂರ್ಣತೆಯನ್ನು ಶಾಧಿಸಲು ಭಾರತದ ಶಸ್ತ್ರಾಸ್ತ್ರಗಳ ನೀತಿಯ ಅನುಸಂಧಾನವು ನೆಹರುರವರ ಅಡಿಯಲ್ಲಿ ಶ್ರದ್ಧೆಯಿಂದ ಪ್ರಾರಂಭವಾಯಿತು, ಅದು ಇವರ ಮಗಳು ಇಂದಿರಾ ಗಾಂಧಿಯವರಿಂದ ಪೂರ್ಣಗೊಂಡಿತು, ನಂತರ 1971 ರಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಅದ್ಭುತ ಮಿಲಿಟರಿ ಗೆಲುವು ಸಾಧಿಸಿತು. ಯುದ್ಧದ ಅಂತ್ಯದ ವೇಳೆಗೆ ಭಾರತವು ತನ್ನ ಬೆಂಬಲವನ್ನು ಹೆಚ್ಚಿಸಿಕೊಂಡಿತು. ಟಿಬೆಟಿಯನ್ ನಿರಾಶ್ರಿತರು ಮತ್ತು ಕ್ರಾಂತಿಕಾರಿಗಳಿಗೆ ಅವರು ಬೆಂಬಲಿಸಿದರು, ಅವುಗಳಲ್ಲಿ ಕೆಲವು ಟಿಬೆಟಿಯನ್ನರು ಭಾರತದಲ್ಲಿದ್ದು ಇಬ್ಬರಿಗೂ ಒಂದೇ ಸಾಮಾನ್ಯ ಶತ್ರುವಿನ ವಿರುದ್ಧ ಹೋರಾಡುತ್ತ ಭಾರತದಲ್ಲಿ ನೆಲೆಸಿದ್ದಾರೆ. ಭಿನ್ನತೆಯನ್ನು ಹೊಂದಿದ್ದ ಟಿಬೆಟಿಯನ್ ನಿರಾಶ್ರಿತರು ಸೇರಿದ ಭಾರತೀಯ-ತರಬೇತಿ ಪಡೆದ, ನೆಹರು ಆರಂಭಿಸಿದ "ಟಿಬೆಟಿಯನ್ ಸಶಸ್ತ್ರ ಪಡೆ" 1965 ಮತ್ತು 1971 ರಲ್ಲಿ, ಪಾಕಿಸ್ತಾನದ ವಿರುದ್ಧ ಯುದ್ಧಗಳಲ್ಲಿ ಪರಿಣಾಮಕಾರಿಯಾಗಿ ಹೋರಾಡಿತು.

ಪಶ್ಚಿಮ ದೇಶಗಳ ಸಹಾಯ

  • ಪಾಕಿಸ್ತಾನದ ಸಂಘರ್ಷದ ಸಮಯದಲ್ಲಿ, ನೆಹರು ಅಮೆರಿಕ (ಯುಎಸ್) ಅಧ್ಯಕ್ಷ ಜಾನ್ ಎಫ್. ಕೆನಡಿ ಅವರಿಗೆ ಎರಡು ಹತಾಶ ಪತ್ರಗಳನ್ನು ಬರೆದರು, ಫೈಟರ್ ಜೆಟ್ಗಳ 12 ಸ್ಕ್ವಾಡ್ರನ್ಸ್ ಮತ್ತು ಆಧುನಿಕ ರಾಡಾರ್ ವ್ಯವಸ್ಥೆಯನ್ನು ಭಾರತಕ್ಕೆ ಕೊಡಲು ಕೋರಿದರು. ಈ ಜೆಟ್’ಗಳನ್ನು ಭಾರತೀಯ ವಾಯು ಬಲಕ್ಕೆ ಬಲವನ್ನು ಹೆಚ್ಚಿಸುವುದಕ್ಕೆ ಅವಶ್ಯಕವೆಂದು ಪರಿಗಣಿಸಲಾಯಿತು, ಆದ್ದರಿಂದ ವೈಮಾನಿಕ –ವಾಯುಧಾಳಿ ಪ್ರತಿ –ವಾಯುಧಾಳಿಯನ್ನು ಭಾರತೀಯ ಪಡೆ ಸಮರ್ಥವಾಗಿ ಪ್ರಾರಂಭಿಸಬಹುದು (ಚೀನಾದಮೇಲೆ ವಾಯುಪಡೆ ಧಾಳಿಯನ್ನು ಪ್ರತಿಧಾಳಿಯ ಕಾರಣದಿಂದ ಮಾಡಿರಲಿಲ್ಲ.). ಈ ವಿಮಾನಗಳನ್ನು ಅಮೆರಿಕದ ಪೈಲೆಟ್’ಗಳು ಭಾರತೀಯರು ತರಬೇತಿ ಪಡೆಯುವವರೆಗೆ ಚಲಾಯಿಸಬೇಕೆಂದು ನೆಹರೂ ಅವರು ಕೇಳಿದರು. ಈ ವಿನಂತಿಗಳನ್ನು ಕೆನೆಡಿ ಆಡಳಿತ ತಿರಸ್ಕರಿಸಿತು (ಸಿನೋ-ಇಂಡಿಯನ್ ಯುದ್ಧದ ಸಮಯದಲ್ಲಿ ಅಮೇರಿಕ ಕ್ಯೂಬನ್ ಕ್ಷಿಪಣೆ ಧಾಳಿಯ ಸಮಸ್ಯೆಯಲ್ಲಿ ಭಾಗಿಯಾಗಿತ್ತು), ಆದರೂ ಇದು ಇಂಡೋ-ಯುಎಸ್ ಸಂಬಂಧಗಳು ತಣ್ಣಗಾಗಲು ಕಾರಣವಾಯಿತು. ಮಾಜಿ ಭಾರತೀಯ ರಾಯಭಾರಿ ಜಿ ಪಾರ್ಥಸಾರಥಿ ಅವರ ಪ್ರಕಾರ, "ನಾವು ಯುಎಸ್‍ಸ್ನಿಂದ ಏನೂ ಸಿಕ್ಕದೆಹೋದ ನಂತರ ಮಾತ್ರ ಸೋವಿಯೆಟ್ ಯೂನಿಯನ್’ನಿಂದ ಭಾರತಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡಕೊಳ್ಳಲು ಆರಂಭಿಸಿದೆವು". ಎಂದಿದ್ದಾರೆ. [172] ಪರ್ ಟೈಮ್ ಮ್ಯಾಗಜೀನ್ 1962 ರ ಯುದ್ಧದ ಸಂಪಾದಕೀಯ, ಆದಾಗ್ಯೂ, ಇದು ಈ ರೀತಿ ಇರಲಾರದು ಎಂದು ಸಂಪಾದಕೀಯ ಹೇಳುತ್ತದೆ. 'ವಾಷಿಂಗ್ಟನ್ ಅಂತಿಮವಾಗಿ ಭಾರತಕ್ಕೆ ತನ್ನ ಗಮನವನ್ನು ತಿರುಗಿಸಿದಾಗ, ರಾಯಭಾರಿಯ ವಚನವನ್ನು ಗೌರವಿಸಿತು, 5,000,000 ಡಾಲರ್ ಮೌಲ್ಯದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಹೆವಿ ಮೊರ್ಟರಗಳು ಮತ್ತು ಭೂಸ್ಪೋಟಕಗಳೊಂದಿಗೆ 60 ಯು.ಎಸ್. ಸಂಪೂರ್ಣ ಹನ್ನೆರಡು ದೊಡ್ಡ ಸಿ-130 ಹರ್ಕ್ಯುಲಸ್ ಟ್ರಾನ್ಸ್ಪೋರ್ಟ್ಗಳ ವಿಮಾನಗಳನ್ನು ಭರ್ತಿಮಾಡಿಕೊಂಡು ಯುಎಸ್ ಸಿಬ್ಬಂದಿ ಮತ್ತು ನಿರ್ವಹಣಾ ತಂಡಗಳೊಂದಿಗೆ ಭಾರತೀಯ ಸೇನಾಪಡೆಗಳು ಮತ್ತು ಉಪಕರಣಗಳು ಯುದ್ಧ ವಲಯಕ್ಕೆ ಹಾರಲು ನವ ದೆಹಲಿಗೆ ಕಳಿಸಿದರು. ಬ್ರಿಟನ್ ಬ್ರೆನ್ ಮತ್ತು ಸ್ಟೆನ್ ಬಂದೂಕುಗಳನ್ನು ಇದಕ್ಕೆ ಪೂರಕ ಮಾಡಿತು, ಮತ್ತು ಭಾರತಕ್ಕೆ 150 ಟನ್ ಶಸ್ತ್ರಾಸ್ತ್ರಗಳನ್ನು ಸಾಗಿಸಿತು. ಕೆನಡಾ ಆರು ಸಾರಿಗೆ ವಿಮಾನಗಳನ್ನು ಸಾಗಿಸಲು ತಯಾರಾಯಿತು. ಆಸ್ಟ್ರೇಲಿಯಾ 1,800,000 ಡಾಲರ್ ಮೌಲ್ಯದ ಯುದ್ಧಸಾಮಗ್ರಿಗಳನ್ನು ಭಾರತಕ್ಕೆ ಸಾಲವಾಗಿ ನೀಡಿತು.

ಮರಣ

  • ಯಾವುದೇ ಜನರು ನನ್ನ ಬಗ್ಗೆ ಯೋಚಿಸಲು ಬಯಸಿದರೆ, ನಾನು ಹೀಗೆ ಹೇಳಲು ಬಯಸುತ್ತೇನೆ:
        “ಇವನು ತನ್ನ ಮನಸ್ಸು ಮತ್ತು ಹೃದಯದಿಂದ ಭಾರತ ಮತ್ತು ಭಾರತೀಯ ಜನರನ್ನು ಪ್ರೀತಿಸುತ್ತಾನೆ. ಮತ್ತು ಅವರು ಅದೇ ಪ್ರಕಾರ ತಮ್ಮನ್ನು ಪ್ರೀತಿಸುತ್ತಿದ್ದರು, ಮತ್ತು ಜನರು ತಮ್ಮ ಪ್ರೀತಿಯನ್ನು ಹೇರಳವಾಗಿ ಮತ್ತು ಅತ್ಯತಿಶಯವಾಗಿ ಅವರಿಗೆ ಕೊಟ್ಟರು.” - ಜವಾಹರಲಾಲ್ ನೆಹರು.
  • 1962 ರ ನಂತರ ನೆಹರುರ ಆರೋಗ್ಯವು ಕ್ರಮೇಣವಾಗಿ ಕುಸಿಯಿತು ಮತ್ತು 1963 ರ ಹೊತ್ತಿಗೆ ಕಾಶ್ಮೀರದಲ್ಲಿ ಚೇತರಿಸಿಕೊಳ್ಳಳು ಕೆಲವು ತಿಂಗಳುಗಳನ್ನು ಕಳೆದರು. ಕೆಲವು ಇತಿಹಾಸಕಾರರು ಭಾರತ-ಚೀನಾ ಯುದ್ಧವು ಇವರ ಮೇಲೆ ಈ ಅನಿರೀಕ್ಷಿತ ಆರೋಗ್ಯದ ಕುಸಿತಕ್ಕೆ ಕಾರಣವೆಂದು ಊಹಿಸುತ್ತಾರೆ. ಅವರಿಗೆ ಚೀನಾದ ಆಕಸ್ಮಿಕ ಧಾಳಿಯನ್ನು ನಂಬಿಕೆಯ ದ್ರೋಹವೆಂದು ಭಾವಿಸಿದರು. ಮೇ 26, 1964 ರಂದು ಡೆಹ್ರಾಡೂನ್ನಿಂದ ಮರಳಿದ ನಂತರ ಅವರು ಸಾಕಷ್ಟು ಆರೋಗ್ಯಕರವಾಗಿದ್ದರು ಮತ್ತು ಸಾಮಾನ್ಯವಾಗಿ ಹಿಂದಿನಂತೆ 23:30 ಗಂಟೆಗೆ ಮಲಗುತ್ತಿದ್ದರು. ಅವರು ಬೆಳಿಗ್ಗೆ ಸ್ನಾನದ ಕೊಠಡಿಯಿಂದ ಹಿಂದಿರುಗಿದ ಕೂಡಲೇ ಸುಮಾರು 6:30 ರ ತನಕ ವಿಶ್ರಾಂತಿಯನ್ನು ಹೊಂದುತ್ತಿದ್ದರು, ನೆಹರು ಬೆನ್ನುನೋವಿನ ಸಮಸ್ಯೆಯ ದೂರು ನೀಡಿದರು. ಅವರನ್ನು ಪರೀಕ್ಷಿಸಲು ಬಂದ ವೈದ್ಯರ ಬಳಿ ಸ್ವಲ್ಪಕಾಲ ಮಾತನಾಡಿದ ನೆಹರೂ ಅವರು ತಕ್ಷಣವೇ ಕುಸಿದುಬಿದ್ದರು. ನಂತರ ಅವರು ಸಾಯುವ ತನಕವೂ ಅವರಿಗೆ ಪ್ರಜ್ಞೆ ಮರಳಲಿಲ್ಲ. ಅವರ ಮರಣವನ್ನು ಲೋಕಸಭೆಗೆ 14:00 ಸ್ಥಳೀಯ ಸಮಯಕ್ಕೆ ದಿ.27 ಮೇ 1964 ರಂದು (ಅದೇ ದಿನ) ಘೋಷಿಸಲಾಯಿತು; ಸಾವಿನ ಕಾರಣ ಹೃದಯಾಘಾತ ಎಂದು ನಂಬಲಾಗಿದೆ. ಜವಾಹರಲಾಲ್ ನೆಹರು ದೇಹವನ್ನು ಸಾರ್ವಜನಿಕ ವೀಕ್ಷಣೆಗಾಗಿ ಇರಿಸಲಾಗಿತ್ತು. "ವೇದಿಕೆಯ ಮೇಲೆ ದೇಹವನ್ನು ಇಟ್ಟುಕೊಂಡಿದ್ದರಿಂದ" ರಘುಪತಿ ರಾಘವ ರಾಜರಾಮ್ "ಅನ್ನು ಪಠಿಸಿದರು. ಮೇ 28 ರಂದು, ದೆಹಲಿಯ ಬೀದಿಗಳಲ್ಲಿ ಮತ್ತು ಸಮಾಧಿ ಮೈದಾನದಲ್ಲಿ ಸೇರ್ಪಡೆಯಾದ 15 ಲಕ್ಷ ಜನಕ್ಕೂ ಹೆಚ್ಚು ಶೋಕಾಚರಣೆಗೆ ಯಮುನಾ ತೀರದಲ್ಲಿ ಸಾಕ್ಷಿಯಾಗಿದ್ದರು. ಶಾಂತಿವನದಲ್ಲಿ ಹಿಂದೂ ಧಾರ್ಮಿಕ ಕ್ರಿಯೆಗಳಿಗೆ ಅನುಸಾರವಾಗಿ ನೆಹರು ಅವರ ಅಂತ್ಯಕ್ರಿಯೆ ನೆಡಸಲಾಯಿತು.
    ನೆಹರೂ, ಒಬ್ಬ ವ್ಯಕ್ತಿಯಾಗಿ ಮತ್ತು ರಾಜಕಾರಣಿಯಾಗಿ ಭಾರತದ ಮೇಲೆ ಯಾವಬಗೆಯ ಶಕ್ತಿಯುತ ಪ್ರಭಾವದ ಮುದ್ರೆಯನ್ನು ಮಾಡಿದ್ದರೆಂದರೆ, 1964 ರ ಮೇ 27 ರಂದು ಅವರ ಮರಣದ ನಂತರ ಭಾರತವು ತನ್ನ ನಾಯಕತ್ವಕ್ಕೆ ಸ್ಪಷ್ಟ ರಾಜಕೀಯ ಉತ್ತರಾಧಿಕಾರಿಯಾಗಲು ತಕ್ಕವರನ್ನು ಕಂಡುಕೊಳ್ಳುವುದು ಕಷ್ಟವಾಯಿತು. (ಆನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪ್ರಧಾನಿಯಾಗಿ ಆರಿಸಲಾಯಿತು) ನೆಹರು ಅವರು ಭಾರತದಲ್ಲಿ ಅಂತಹ ಶಕ್ತಿಯುತ ನಾಯಕತ್ವವನ್ನು ಕೊಟ್ಟಿದ್ದರು. ಗಾಂಧಿಯವರ ಹತ್ಯೆಯ ಸಮಯದಲ್ಲಿ ನೆಹರು ಹೇಳಿದ ಆದೇ ಮಾತುಗಳಲ್ಲಿ ಹೇಳಿದರು; "ಬೆಳಕು ಹೊರಟುಹೋಗಿದೆ" ಎಂದು ಭಾರತೀಯ ಸಂಸತ್ತಿಗೆ ಅವರ ಮರಣವನ್ನು ಘೋಷಿಸಲಾಯಿತು.

ವೈಯುಕ್ತಿಕ ಜೀವನ

ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಎಡ್ವಿನಾ ಮೌಂಟ್ಬ್ಯಾಟನ್‍ರೊಂದಿಗೆ ನೆಹರು
  • ನೆಹರೂ ಕಮಲಾ ಕೌಲ್’ರನ್ನು 1916 ರಲ್ಲಿ ವಿವಾಹವಾದರು. ಅವರ ಏಕೈಕ ಪುತ್ರಿ ಇಂದಿರಾ 1917 ರಲ್ಲಿ ಒಂದು ವರ್ಷದ ನಂತರ ಜನಿಸಿದಳು. ಕಮಲಾ ನವೆಂಬರ್ 1924 ರಲ್ಲಿ ಗಂಡುಮಗುವಿಗೆ ಜನ್ಮ ನೀಡಿದರು, ಆದರೆ ಅದು ಕೇವಲ ಒಂದು ವಾರದವರೆಗೆ ಮಾತ್ರಾ ಜೀವಿಸಿತ್ತು. 1942 ರಲ್ಲಿ ಇಂದಿರಾ ಫಿರೋಜ್ ಗಾಂಧಿಯವರನ್ನು ಮದುವೆಯಾದರು. ಅವರಿಗೆ ರಾಜೀವ್ (1944) ಮತ್ತು ಸಂಜಯ್ (1946) ಇಬ್ಬರು ಪುತ್ರರು ಇದ್ದರು.
  • ಕಮಲಾರ ಮರಣದ ನಂತರ, ನೆಹರು, ವಿಧುರನಾಗಿ ಉಳಿದರು, ಅವರು ಕೆಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದನೆಂದು ಆರೋಪಿಸಲಾಯಿತು. ಇವುಗಳಲ್ಲಿ ಶ್ರದ್ಧಾ ಮಾತಾ, ಪದ್ಮಜಾ ನಾಯ್ಡು ಮತ್ತು ಎಡ್ವಿನಾ ಮೌಂಟ್ಬ್ಯಾಟನ್ ಸೇರಿದ್ದಾರೆ. ಎಡ್ವಿನಾ ಅವರ ಪುತ್ರಿ ಪಮೇಲಾ ಎಡ್ವಿನಾದೊಂದಿಗೆ ನೆಹರುರ ಪ್ಲ್ಯಾಟೋನಿಕ್ (ದೈಹಿಕ ಸಂಬಂಧವಿಲ್ಲದ ಪ್ರೇಮ) ಸಂಬಂಧವನ್ನು ಒಪ್ಪಿಕೊಂಡರು. 1960 ರಲ್ಲಿ ಎಡ್ವಿನಾ ಮೌಂಟ್ಬ್ಯಾಟನ್ ಸಮುದ್ರದ ಸಮಾಧಿಗೆ ಭಾರತೀಯ ನೌಕಾದಳದ ಸೈನ್ಯವನ್ನು ಕಳುಹಿಸಲು ವೈಯಕ್ತಿಕ ನಿರ್ಧಾರವನ್ನು ನೆಹರೂ ತೆಗೆದುಕೊಂಡರು.
  • ನೆಹರೂ ಅವರ ಸಹೋದರಿ ವಿಜಯ ಲಕ್ಷ್ಮಿ ಪಂಡಿತ್ ಇಂದಿರಾ ಗಾಂಧಿಯವರ ಸ್ನೇಹಿತ ಮತ್ತು ಜೀವನಚರಿತ್ರೆಕಾರ ಪಪುಲ್ ಜಯಕರ್ ಅವರಿಗೆ ಸರೋಜಿನಿ ನಾಯ್ಡು ಮಗಳು ಸ್ವಾತಂತ್ರ ಹೋರಾಟಗಾರ್ತಿ ಕಾಂಗ್ರೆಸ್ ಕಾರ್ಯಕರ್ತೆ, ನೆಹರೂ ಅಭಿಮಾನಿಯಾದ ಪದ್ಮಜಾ ನಾಯ್ಡು ಅನೇಕ ವರ್ಷಗಳ ಕಾಲ ನೆಹರೂ ಇದ್ದ ತೀನ್ ಮೂರ್ತಿ ಭವನದ ಹೊರಗೃಹದಲ್ಲಿ ವಾಸಿಸುತ್ತಿದ್ದರು ಎಂದು ತಿಳಿಸಿದರು. ನೆಹರು ಅವರು ತಾಯಿಯನ್ನು ಕಳೆದುಕೊಂಡ ಮಗಳು ಇಂದಿರಾ ಮನಸ್ಸಿಗೆ ನೋವಾಗುವುದೆಂದು ಎರಡನೇ ಮದುವೆಗೆ ಮನಸ್ಸು ಮಾಡಲಿಲ್ಲ.
  • ಶ್ರದ್ಧಾ ಮಾತಾ ಸನ್ಯಾಸಿಯಾಗಿದ್ದು ಹಿಂದೂ ಧರ್ಮದ ಬಗೆಗೆ ಅವರು ಉತ್ತಮ ಪ್ರವಚನ ಮಾಡುತ್ತಿದ್ದರು. ನೆಹರು ಮಂತ್ರಿಮಂಡಲದಲ್ಲಿ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿಯವರು ತಮಗೆ ಆಪ್ತರಾಗಿದ್ದ ಮತ್ತು ದೆಹಲಿಗೆ ಬಂದಾಗ ಅವರಲ್ಲಿ ಉಳಿಯುತ್ತಿದ್ದ,ಮತ್ತು ತಮ್ಮ ಆಭಿಮಾನಿಯಾಗಿದ್ದ ಸಂನ್ಯಾಸಿನಿ ಶ್ರದ್ಧಾ ಮಾತಾರನ್ನು ಭೇಟಿಮಾಡಲು ಮತ್ತು ಹಿಂದೂಧರ್ಮದ ಬಗ್ಗೆ ಒಂದು ವಾರ ಅವರ ಪ್ರವಚನ ಕೇಳಲು, ನೆಹರೂ ಬಿಡುವಿಲ್ಲವೆಂದರೂ ಅವರನ್ನು ಮುಖರ್ಜಿ ಬಹಳ ಒತ್ತಾಯಿಸಿದರು. ಅದಕ್ಕೆ ಮಣಿದು ಅವರನ್ನು ಭೇಟಿಮಾಡಲು ನೆಹರೂ ಒಪ್ಪ್ಪಿದರು. ಹಾಗೆ ಆದ ಒಂದು ವಾರದ ನಂತರ ಪಟೇಲರು ಸನ್ಯಾಸಿನಿಯ ಭೇಟಿಯ ವದಂತಿಯ ಬಗೆಗೆ ನೆಹರೂ ಅವರಿಗೆ ಪತ್ರ ಬರೆದು ವಿಚಾರಿಸಿದಾಗ, ಸಂನ್ಯಾಸಿನಿಯು ತಮ್ಮ ಧಾರ್ಮಿಕ ಸಿದ್ದಾಂತವನ್ನು ತಮಗೆ ಹೇಳುತ್ತಿದ್ದಾರೆ – ಮತ್ತು ತಾವು ತಮ್ಮ ಸಿದ್ದಾಂತವನ್ನು ಅವರಿಗೆ ಹೇಳುತ್ತಿದ್ದೇನೆ – ಅಷ್ಟೆ ಎಂದು ಪಟೆಲರಿಗೆ ಪತ್ರ ಬರೆದರು. ಅದು ನಂತರ ಗಾಸಿಪ್ ಆಯಿತು. ಆದರೆ ನೆಹರು ತಮ್ಮ ಜೀವನದಲ್ಲಿ ಯಾವುದನ್ನೂ ಮುಚ್ಚಿಡಲು ಪ್ರಯತ್ನಿಸಲಿಲ್ಲ. ಆ ಸಂಬಂಧ ಎಲ್ಲಾ ಪತ್ರಗಳನ್ನು ದಾಖಲೆ ವಿಭಾಗಕ್ಕೆ ಕಳಿಸಿದರು.
  • ನೆಹರು ಪ್ರಧಾನಿಯಾಗಿದ್ದ ಬಹಳಷ್ಟು ಅವಧಿಯಲ್ಲಿ ಇಂದಿರಾ ತಮ್ಮ ತಂದೆಗೆ ಅನಧಿಕೃತವಾಗಿ ವೈಯಕ್ತಿಕ ಸಹಾಯಕರಾಗಿ ಸೇವೆ ಸಲ್ಲಿಸಿದರು. 1950 ರ ಅಂತ್ಯದ ವೇಳೆಗೆ ಇಂದಿರಾ ಗಾಂಧಿ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಆ ಅಧಿಕಾರದಲ್ಲಿ, 1959 ರಲ್ಲಿ ಕಮ್ಯುನಿಸ್ಟ್ ನೇತೃತ್ವದ ಕೇರಳ ರಾಜ್ಯ ಸರ್ಕಾರವನ್ನು ವಜಾಮಾಡುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ಧರ್ಮ ಮತ್ತು ವೈಯಕ್ತಿಕ ನಂಬಿಕೆಗಳು

  • ಹಿಂದೂ ಅಗ್ನೊಸ್ಟಿಕ್ (ಸಂದೇಹವಾದಿ) ಎಂದು ವರ್ಣಿಸಲ್ಪಟ್ಟ, ಮತ್ತು "ವೈಜ್ಞಾನಿಕ ಮಾನವತಾವಾದಿ" ಎಂದು ನೆಹರು ಅವರ ವ್ಯಕ್ತ್ತಿತ್ವ-ಸ್ವಭಾವವನ್ನು ಹೇಳಬಹುದು. ಧಾರ್ಮಿಕ ನಿಷೇಧದ ನಿಯಮಗಳು ಗಳು ಭಾರತವನ್ನು ಮುಂದೆ ಅಭಿವೃದ್ಧಿಯತ್ತ ಸಾಗಲು ಮತ್ತು ಆಧುನಿಕ ಪರಿಸ್ಥಿತಿಗಳಿಗೆ ಅಳವಡಿಸಿಕೊಳ್ಳುವುದನ್ನು ತಡೆಗಟ್ಟುತ್ತವೆ ಎಂದು ನೆಹರೂ ಅಭಿಪ್ರಾಯಪಟ್ಟರು: "ಯಾವುದೇ ತತ್ತ್ವಗಳಿಗೆ ಮತ್ತು ಧರ್ಮಪ್ರಜ್ಞೆಗೆ ಗುಲಾಮರಲ್ಲದ ಮನಸ್ಥಿತಿಯ ದೇಶ ಅಥವಾ ಜನರು ಪ್ರಗತಿ ಸಾಧಿಸಬಹುದು ಮತ್ತು ನಮ್ಮ ದೇಶ ಮತ್ತು ಜನರು ಬೇಸರಪಡುವಷ್ಟು ಅಸಾಧಾರಣವಾದ ತಾತ್ವಿಕ ಕಟ್ಟಾನಂಬಿಗೆಯವರೂ ಮತ್ತು ಸಂಕುಚಿತ ಮನಸ್ಸಿನವರಾಗಿದ್ದಾರೆ."
        ಧರ್ಮವೆಂದು ಕರೆಯಲ್ಪಡುವ ಅಥವಾ ಆ ಬಗೆಯ ನಂಬುಗೆ ಯಾವುದೇ ಪ್ರಮಾಣದಲ್ಲಿರಲಿ, ಭಾರತದಲ್ಲಿ ಮತ್ತು ಬೇರೆಡೆಯಲ್ಲಿ, ಸಂಘಟಿತ ಧರ್ಮದ ಚಿತ್ರಣವು (ಇತಿಹಾಸವು) ಭೀತಿಯಿಂದ ತುಂಬಿದೆ ಮತ್ತು ನಾನು ಆಗಾಗ್ಗೆ ಅದನ್ನು ಖಂಡಿಸಿದ್ದೇನೆ. ಅದನ್ನು ಶುದ್ಧವಾಗಿ ಮಾಡಲು ಗುಡಿಸಿ ಶುದ್ಧಮಾಡಲು ಬಯಸುತ್ತೇನೆ. ಬಹುಮಟ್ಟಿಗೆ ಅದು ಯಾವಾಗಲೂ ಕುರುಡು ನಂಬಿಕೆ ಮತ್ತು ಪ್ರತಿಭಟನೆಯ ಪ್ರತಿಕ್ರಿಯೆ, ಧರ್ಮಾಂಧತೆ ಮತ್ತು ಹುಸಿ ಧರ್ಮನಿರತೆ, ಮೂಢನಂಬಿಕೆ, ಶೋಷಣೆ ಮತ್ತು ಕೆಲವರ ಹಿತಾಸಕ್ತಿಗಳ ಸಂರಕ್ಷಣೆಗಾಗಿ ನಿಂತಿದೆ.

- ಸ್ವಾತಂತ್ರ್ಯದ ಕಡೆಗೆ: ಜವಾಹರಲಾಲ್ ನೆಹರುರ ಆತ್ಮಚರಿತ್ರೆ (1936); ಪುಟಗಳು 240-241.

  • ಅವರ ಆತ್ಮಚರಿತ್ರೆಯಲ್ಲಿ, ಅವರು ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ, ಮತ್ತು ಭಾರತದಲ್ಲಿ ಅವುಗಳ ಪ್ರಭಾವವನ್ನು ವಿಶ್ಲೇಷಿಸಿದ್ದಾರೆ. ಅವರು ಭಾರತವನ್ನು ಜಾತ್ಯತೀತ ರಾಷ್ಟ್ರವೆಂದು ರೂಪಿಸಲು ಬಯಸಿದ್ದರು; ಅವರ ಜಾತ್ಯತೀತ ನೀತಿಗಳು ಚರ್ಚೆಯ ವಿಷಯವಾಗಿ ಉಳಿದಿವೆ.

ಭಾರತಕ್ಕೆ ನೆಹರು ಕೊಡಿಗೆ (ಲೆಗಸಿ)

ನೆಹರೂ ಒಬ್ಬ ಮಹಾನ್ ವ್ಯಕ್ತಿ ...
ನೆಹರು ಭಾರತೀಯರಿಗೆ ತಮ್ಮದೇ ಆದ ವ್ಯಕ್ತಿತ್ವವನ್ನು ನೀಡಿದರು.
ಇತರರು ಯಶಸ್ವಿಯಾಗಬಹುದಿತ್ತೆಂದು ನಾನು ಭಾವಿಸುವುದಿಲ್ಲ.
- ಸರ್ ಯೆಶಾಯ ಬರ್ಲಿನ್

ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಲಂಡನ್‍ನಲ್ಲಿ ಆಲ್ಡ್ವಿಚ್‍ನಲ್ಲಿ ನೆಹರೂರ ಪ್ರತಿಮೆ-(ಬಸ್ಟ್)
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಕೊಲ್ಕತ್ತಾದ ಪಾರ್ಕ್ ಸ್ಟ್ರೀಟ್‍ನಲ್ಲಿ ನೆಹರು ಪ್ರತಿಮೆ
  • ಭಾರತದ ಮೊದಲ ಪ್ರಧಾನಮಂತ್ರಿಯಾಗಿ ಮತ್ತು ವಿದೇಶ ವ್ಯವಹಾರಗಳ ಸಚಿವರಾಗಿ ಜವಾಹರಲಾಲ್ ನೆಹರೂ ಆಧುನಿಕ ವಿದೇಶಾಂಗ ನೀತಿಯೊಂದಿಗೆ ಆಧುನಿಕ ಭಾರತ ಸರ್ಕಾರ ಮತ್ತು ರಾಜಕೀಯ ಸಂಸ್ಕೃತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗ್ರಾಮೀಣ ಭಾರತದ ದೂರದ ಮೂಲೆಗಳಲ್ಲಿ ಮಕ್ಕಳನ್ನು ತಲುಪುವ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ವ್ಯವಸ್ಥೆಯನ್ನು ರಚಿಸಿದ್ದಕ್ಕಾಗಿ ಅವರು ಪ್ರಶಂಸಿಸಲ್ಪಟ್ಟಿದ್ದಾನೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮುಂತಾದ ವಿಶ್ವ-ಮಟ್ಟದ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಗೆ ನೆಹರೂ ಅವರ 'ಶಿಕ್ಷಣ ನೀತಿ'ಯು ಕೊಡಿಗೆ ನೀಡುತ್ತದೆ. ಆದ್ದರಿಂದ ಅವರು ಆಧುನಿಕ ಭಾರತದ ನಿರ್ಮಾಪಕ ಎಂದು ಗುರಿತಿಸಲ್ಪಟ್ಟಿದ್ದಾರೆ S
  • ಅದಲ್ಲದೆ, ನೆಹರು ಅವರರ ನಿಲುವು ಒಂದು ರಾಷ್ಟ್ರೀಯತಾವಾದಿಯಾಗಿ ನಿಂತಿದ್ದು, ಪ್ರಾದೇಶಿಕ ವೈವಿಧ್ಯತೆಗಳನ್ನು ಅದು ಇರುವ ಹಾಗೆಯೇ ಮೆಚ್ಚಿ ಭಾರತೀಯರ ನಡುವೆ ಒಂದು ಸಾಮಾನ್ಯತೆಯನ್ನು ಒತ್ತಿ ಹೇಳಿದ ನೀತಿಗಳನ್ನು ಜಾರಿಗೆ ತಂದರು. ಉಪಖಂಡದಿಂದ ಬ್ರಿಟಿಷ್ ವಾಪಸಾತಿಯ ನಂತರ ಪ್ರಾದೇಶಿಕ ಮುಖಂಡರು ಪರಸ್ಪರ ಎದುರಾಳಿಗಳಾಗಿ ಪರಸ್ಪರ ವಿರುದ್ಧ ನಿಂತು ಸಂಬಂಧವಿಲ್ಲದ ಕಾರಣಗಳಿಂದ ಭಾರತದಲ್ಲಿ ಸ್ವಾತಂತ್ರ್ಯಾನಂತರದ ಭಿನ್ನಾಭಿಪ್ರಾಯಗಳು ಆವರಿಸಲ್ಪಟ್ಟಿತು. ಆದ್ದರಿಂದ ಅವರು ಭಾರತದ ಪ್ರಾದೇಶಿಕ ವೈವಿಧ್ಯತೆಗಳನ್ನು ಇರುವಹಾಗೆಯೇ ಮೆಚ್ಚಿ ಭಾರತೀಯರ ನಡುವೆ ಒಂದು ಸಾಮಾನ್ಯತೆಯನ್ನು ಒತ್ತಿ ಹೇಳಿದ ನೀತಿ ಪ್ರಮುಖವಾಗಿತ್ತು. ಸಂಸ್ಕೃತಿಯ ವ್ಯತ್ಯಾಸಗಳು ಮತ್ತು ಅದರಲ್ಲೂ ವಿಶೇಷವಾಗಿ, ಹೊಸ ರಾಷ್ಟ್ರದ ಏಕತೆಗೆ ಭಾಷೆ ಬೆದರಿಕೆ ಹಾಕಿದರೂ, (ಭಾಷಾವಾದದ ಅತಿಅಭಿಮಾನ -ಅನ್ಯ ಭಾಷಾ ದ್ವೇಷ) ಅದರ ಸಂತುಲನಕ್ಕಾಗಿ ನ್ಯಾಷನಲ್ ಬುಕ್ ಟ್ರಸ್ಟ್ ಮತ್ತು ನ್ಯಾಷನಲ್ ಲಿಟರರಿ ಅಕಾಡೆಮಿ ಮುಂತಾದ ಕಾರ್ಯಕ್ರಮಗಳನ್ನು ನೆಹರು ಸ್ಥಾಪಿಸಿದರು. ಇದು ಭಾಷೆಗಳ ನಡುವೆ ಪ್ರಾದೇಶಿಕ ಸಾಹಿತ್ಯದ ಅನುವಾದವನ್ನು ಪ್ರೋತ್ಸಾಹಿಸಿತು ಮತ್ತು ಪ್ರದೇಶಗಳ ನಡುವೆ ವಸ್ತು - ವಿಚಾರಗಳ ವರ್ಗಾವಣೆಯನ್ನು ಆಯೋಜಿಸಿತು. ಇವು ಒಂದು ಏಕೀಕೃತ ಭಾರತವನ್ನು ಜನರು ಅನುಸರಿಸುವಲ್ಲಿ ಸಹಕಾರಿಯಾಗಿದೆ, ನೆಹರೂ ಅವರು "ಸಮಗ್ರತೆಯಿಂದ ಸಂಯೋಜಿತರಾಗಿ ಇಲ್ಲವೇ ನಾಶವಾಗಿ" ಎಂದು ಎಚ್ಚರಿಕೆ ನೀಡಿದರು.
  • ಇತಿಹಾಸಕಾರ ರಾಮಚಂದ್ರ ಗುಹಾ ಬರೆಯುತ್ತಾರೆ, "ನೆಹರು 1958 ರಲ್ಲಿ ನಿವೃತ್ತರಾದರು, ಅವರು ಕೇವಲ ಭಾರತದ ಅತ್ಯುತ್ತಮ ಪ್ರಧಾನಿಯಾಗಿರಲಿಲ್ಲ, ಆದರೆ ಆಧುನಿಕ ಪ್ರಪಂಚದ ಮಹಾನ್ ರಾಜಕಾರಣಿಗಳೆಂದು ನೆನಪಿಸಿಕೊಳ್ಳುತ್ತಾರೆ". ಹೀಗೆ ನೆಹರು, ಭಾರತಕ್ಕೆ ಒಂದು ಸಹಬಾಳ್ವೆಯ ಪರಂಪರೆಯನ್ನು ನೀಡಿದರು , ಅದನ್ನು, ವಿವಾದಿತ ಸಹಬಾಳ್ವೆಯ ಕೊಡಿಗೆಯನ್ನು ಬಿಟ್ಟಹೋಗಿದ್ದಾರೆ ಎಂದೂ ಹೇಳುವರು "ಭಾರತದ ಪ್ರಗತಿಗಾಗಿ ಅದನ್ನು- ಅವರ ಕೊಡಿಗೆಯನ್ನು ಮೆಚ್ಚಿ ಆರಾಧಿಸಬಹುದು ಅಥವಾ ಅದನ್ನು ಬಿಟ್ಟು ಹಿಂದೆಬೀಳಬಹುದು".

ಜ್ಞಾಪನೆ (Commemoration)

ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
1989 ರಲ್ಲಿ ಯುಎಸ್ಎಸ್ಆರ್ನಲ್ಲಿ ಜವಾಹರಲಾಲ್ ನೆಹರು ಸ್ಮರಣಾರ್ಥ ಹೊರಡಿಸಿದ ಅಂಚೆ ಚೀಟಿ
  • ಅವರ ಜೀವಿತಾವಧಿಯಲ್ಲಿ, ಜವಾಹರಲಾಲ್ ನೆಹರು ಭಾರತದಲ್ಲಿ ಒಂದು ವಿಶಿಷ್ಟವಾದ ಸ್ಥಾನಮಾನವನ್ನು ಪಡೆದರು ಮತ್ತು ಅವರ ಆದರ್ಶ ಮತ್ತು ನಿಷ್ಠಾವಂತತೆಗಾಗಿ ವಿಶ್ವದಾದ್ಯಂತ ವ್ಯಾಪಕವಾಗಿ ಮೆಚ್ಚುಗೆಯನ್ನು ಪಡೆದರು. ಅವರ ಹುಟ್ಟು ಹಬ್ಬದಂದು, ನವೆಂಬರ್‍ನಲ್ಲಿ ಬಾಲ ದಿವಸ್ ("ಮಕ್ಕಳ ದಿನ") ಎಂದು ಭಾರತದಲ್ಲಿ ಆಚರಿಸಲಾಗುತ್ತದೆ. ಅವರ ಜೀವಿತಾವಧಿಯ ದೊಡ್ಡಬಯಕೆ ಮತ್ತು ಮಕ್ಕಳ ಮತ್ತು ಯುವಜನರ ಕಲ್ಯಾಣ. ನೆಹರು ಅವರ ಶಿಕ್ಷಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಕೆಲಸವನ್ನು ಗುರುತಿಸಿ, ಭಾರತದಾದ್ಯಂತ ಮಕ್ಕಳು ಚಾಚಾ ನೆಹರೂ (ಅಂಕಲ್ ನೆಹರು) ಎಂದು ನೆನಪಿಸಿಕೊಳ್ಳುತ್ತಾರೆ. ನೆಹರು ಅವರು ಕಾಂಗ್ರೆಸ್ ಪಕ್ಷದ ಜನಪ್ರಿಯ ಚಿಹ್ನೆಯಾಗಿದ್ದಾರೆ, ಆ ಪಕ್ಷ ಅವರ ಸ್ಮರಣೆಯನ್ನು ಆಗಾಗ್ಗೆ ಆಚರಿಸುತ್ತದೆ. ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅವರ ಶೈಲಿಯ ಉಡುಪು, ವಿಶೇಷವಾಗಿ ಗಾಂಧಿ ಕ್ಯಾಪ್ ಮತ್ತು "ನೆಹರೂ ಜಾಕೆಟ್", ಧರಿಸಿ ಅವರ ನಡವಳಿಕೆಗಳನ್ನು ಅನುಕರಿಸುತ್ತಾರೆ. ನೆಹರು ಅವರ ಆದರ್ಶಗಳು ಮತ್ತು ನೀತಿಗಳು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮತ್ತು ಪ್ರಮುಖ ರಾಜಕೀಯ ತತ್ತ್ವವನ್ನು ರೂಪಿಸುವಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಕಾಂಗ್ರೆಸ್ ಪಕ್ಷ ಮತ್ತು ರಾಷ್ಟ್ರೀಯ ಸರಕಾರದ ನಾಯಕತ್ವಕ್ಕೆ ಅವರ ಮಗಳು ಇಂದಿರಾ ಅವರ ಉದಯದಲ್ಲಿ ಅವರ ಪರಂಪರೆಗೆ ಭಾವನಾತ್ಮಕ ಸಂಬಂಧವಿದೆ.
ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ನೆಹರೂ, ನಂಗ್ಪೋಹ್'ನಲ್ಲಿ ಮೇಘಾಲಯದಲ್ಲಿ ಮಕ್ಕಳಿಗೆ ಸಿಹಿತಿಂಡಿಗಳನ್ನು ವಿತರಿಸುತ್ತಾರೆ
  • ನೆಹರು ಅವರ ವೈಯಕ್ತಿಕ ಆದ್ಯತೆಯ ಶೆರ್ವಾನಿ ಇಂದು ಉತ್ತರ ಭಾರತದಲ್ಲಿ ಔಪಚಾರಿಕ ಉಡುಗೆ ಎಂದು ಪರಿಗಣಿಸಲಾಗಿದೆ; ತಮ್ಮ ಹೆಸರನ್ನು ಒಂದು ವಿಧದ ಕ್ಯಾಪ್’ಗೆ ನೀಡುವ ಬದಲು, ನೆಹರೂ ಜಾಕೆಟ್- ಅಥವಾ ನೆಹರೂ ಷರಟಿಗೆ ಆ ಶೈಲಿಗೆ ಅವರ ಆದ್ಯತೆಯ ಕಾರಣದಿಂದ ಅವರ ಗೌರವಾರ್ಥವಾಗಿ ಆ ಹೆಸರಿಸಲಾಗಿದೆ.
      1.ಭಾರತದಾದ್ಯಂತ ಹಲವಾರು ಸಾರ್ವಜನಿಕ ಸಂಸ್ಥೆಗಳು ಮತ್ತು ಸ್ಮಾರಕಗಳು ನೆಹರೂ ಅವರ ನೆನಪಿಗಾಗಿ ಸಮರ್ಪಿಸಲಾಗಿದೆ. ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು ಭಾರತದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಮುಂಬೈ ನಗರದ ಸಮೀಪವಿರುವ ಜವಾಹರ್ಲಾಲ್ ನೆಹರು ಬಂದರು ಆಧುನಿಕ ಬಂದರು ಮತ್ತು ದೊಡ್ಡ ಸರಕು ಮತ್ತು ಸಂಚಾರ ಲೋಡ್ ನಿರ್ವಹಿಸಲು ವಿನ್ಯಾಸಗೊಳಿಸಿದ ಡಾಕ್/ ಬಂದರಾಗಿದೆ. ದೆಹಲಿಯಲ್ಲಿ ನೆಹರು ಅವರ ನಿವಾಸವನ್ನು ಈಗ ತೀನ್ ಮೂರ್ತಿ ಹೌಸ್ ಎಂದು ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವಾಗಿ ಮಾರ್ಪಡಿಸಲಾಗಿದೆ. ಮುಂಬೈ, ದೆಹಲಿ, ಬೆಂಗಳೂರು, ಅಲಹಾಬಾದ್ ಮತ್ತು ಪುಣೆಯಲ್ಲಿ ಸ್ಥಾಪಿಸಿರುವ ಐದು ನೆಹರೂ ಪ್ಲಾನೆಟೇರಿಯಂ ಗಳನ್ನು ಅವರ ಹೆಸರಿನಲ್ಲಿ ಸಂರಕ್ಷಿಸಲಾಗಿದೆ. ಜವಹರಲಾಲ್ ನೆಹರು ಸ್ಮಾರಕ ನಿಧಿಯ ಕಚೇರಿಗಳನ್ನು 1964 ರಲ್ಲಿ ಸ್ಥಾಪಿಸಿದ್ದು ಅದರ ಕಛೇರಿ ಈ ಸಂಕೀರ್ಣದಲ್ಲಿದೆ. ಅವನ್ನು ಭಾರತದ ಅಧ್ಯಕ್ಷರಾಗಿದ್ದ ಸರ್ವೆಪಲ್ಲಿ ರಾಧಾಕೃಷ್ಣನ್ ನೇತೃತ್ವದಲ್ಲಿ ಸ್ಥಾಪಿಸಲಾಯಿತು. 1968 ರಲ್ಲಿ ಸ್ಥಾಪನೆಯಾದ ಪ್ರತಿಷ್ಠಿತ 'ಜವಾಹರಲಾಲ್ ನೆಹರು ಸ್ಮಾರಕ ಫೆಲೋಶಿಪ್' ಪ್ರತಿಷ್ಠಾನ ಕೂಡಾ ಹೊರಹೊಮ್ಮಿದೆ. ನೆಹರು ಕುಟುಂಬದ ಮನೆಗಳು ಆನಂದ್ ಭವನ ಮತ್ತು ಸ್ವರಾಜ್ ಭವನಗಳಲ್ಲಿ ನೆಹರು ಮತ್ತು ಅವನ ಕುಟುಂಬದ ಆಸ್ತಿಯನ್ನು ಸಂರಕ್ಷಿಸುವುದಕ್ಕಾಗಿ ಮೀಸಲಿಡಲಾಗಿದೆ.

ಜನಪ್ರಿಯ ಸಂಸ್ಕೃತಿಯಲ್ಲಿ

  • ನೆಹರುರ ಜೀವನ ಕುರಿತು ಹಲವು ಸಾಕ್ಷ್ಯಚಿತ್ರಗಳು ನಿರ್ಮಾಣಗೊಂಡಿವೆ. ಅವರ ಬಗೆಗೆ ಕಾಲ್ಪನಿಕ ಚಿತ್ರಗಳನ್ನೂ ಚಿತ್ರಿಸಲಾಗಿದೆ. ರಿಚರ್ಡ್ ಅಟೆನ್ಬರೋ ಅವರ 1982 ರ ಚಲನಚಿತ್ರ ಗಾಂಧಿ,- ಶ್ಯಾಮ್ ಬೆನೆಗಲ್’ರ 1988 ರ ದೂರದರ್ಶನದ ಸರಣಿಯ ಭಾರತ್ ಎಕ್ ಖೋಜ್,- ನೆಹರು ಅವರ ದಿ ಡಿಸ್ಕವರಿ ಆಫ್ ಇಂಡಿಯಾ ಮತ್ತು 2007 ರ ಟಿವಿ ಚಲನಚಿತ್ರದಲ್ಲಿ ದಿ ಲಾಸ್ಟ್ ಡೇಸ್- ಎಂಬ ಶೀರ್ಷಿಕೆಯಡಿಯಲ್ಲಿ ರಚಿತವಾಗಿದೆ. ಕೇತನ್ ಮೆಹ್ತಾರ ಸರ್ದಾರ್ ಚಿತ್ರದಲ್ಲಿ, ನೆಹರು ಅವರನ್ನು ಬೆಂಜಮಿನ್ ಗಿಲಾನಿ ಚಿತ್ರತಯಾರಿಸಿದ್ದರು. ಗಿರೀಶ್ ಕಾರ್ನಾಡ್ ಅವರ ಐತಿಹಾಸಿಕ ನಾಟಕವಾದ ತುಘಲಕ್ (1962) ನೆಹರುರ ಯುಗದ ಬಗ್ಗೆ ಒಂದು ವಿಚಾರವಾಗಿದೆ. 1970 ರ ದಶಕದಲ್ಲಿ ದೆಹಲಿಯ ಪುರನಾ ಕಿಲಾದಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ರೆಪರ್ಟರಿ ಯೊಂದಿಗೆ ಇಬ್ರಾಹಿಂ ಅಲ್ಕಾಝಿ ಅವರು ಇದನ್ನು ಆಯೋಜಿಸಿದರು ಮತ್ತು ನಂತರ 1982 ರಲ್ಲಿ ಲಂಡನ್’ನ ಭಾರತದ ಉತ್ಸವದಲ್ಲಿ ಪ್ರದರ್ಶಿಸಿದರು.

ಬರಹಗಳು

ನೆಹರು ಇಂಗ್ಲಿಷ್’ನ ಒಬ್ಬ ಸಮೃದ್ಧ ಬರಹಗಾರರಾಗಿದ್ದರು. ಅವರ ಬರಹಗಳು ಇಂದಿಗೂ ಜಗತ್‍ಪ್ರಸಿದ್ಧವಾಗಿವೆ. ಅವರ ‘ದಿ ಡಿಸ್ಕವರಿ ಆಫ್ ಇಂಡಿಯಾ’, ‘ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ’ ಮತ್ತು ಅವರ ‘ಆತ್ಮಚರಿತ್ರೆ’, ‘ಟುವರ್ಡ್ ಫ್ರೀಡಮ್’ ಮೊದಲಾದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರು ತಮ್ಮ ಮಗಳು ಇಂದಿರಾ ಗಾಂಧಿಯವರಿಗೆ 30 ಪತ್ರಗಳನ್ನು ಬರೆದಿದ್ದರು. ಇಂದಿರಾ ಹತ್ತು ವರ್ಷ ವಯಸ್ಸಿನವರಾಗಿದ್ದರು ಮತ್ತು ಮಸ್ಸೂರಿಯ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದರು. ಅವರು ಆ ಪತ್ರಗಳಲ್ಲಿ ನೈಸರ್ಗಿಕ ಇತಿಹಾಸ ಮತ್ತು ನಾಗರೀಕತೆಗಳ ಕಥೆ ಬಗ್ಗೆ ಬೋಧಿಸಿದರು. ಈ ಪತ್ರಗಳ ಸಂಗ್ರಹವನ್ನು ‘ಲೆಟರ್ಸ್ ಫ್ರಮ್ ಎ ಫಾದರ್ ಟು ಹಿಸ್ ಡಾಟರ್ ‘ಎಂಬ ಪುಸ್ತಕವಾಗಿ ಪ್ರಕಟಿಸಲಾಯಿತು.

ಪ್ರಶಸ್ತಿಗಳು

1955 ರಲ್ಲಿ, ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೆಹರು ಅವರಿಗೆ ನೀಡಲಾಯಿತು. ಪ್ರಧಾನ ಮಂತ್ರಿಯಿಂದ ಸಲಹೆ ಪಡೆಯದೆ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ನೆಹರು ಅವರಿಗೆ ನೀಡಿದರು. ಈ ಗೌರವ ಪ್ರದಾನ ಮಾಡಲು ಪ್ರಧಾನಿಯವರಿಂದ ಪಡೆಯಬೇಕಾಗಿದ್ದ ಸಾಮಾನ್ಯ ಸಾಂವಿಧಾನಿಕ ಕಾರ್ಯವಿಧಾನವನ್ನು ಅನುಸರಿಸಲಿಲ್ಲ. ಎಂದರೆ ನೆಹರು ಪ್ರಧಾನಿಯಾಗಿ ತಮಗೆ ತಾವೇ ನಾಗರಿಕ ಗೌರವ ಪಡೆಯಲು ಶಿಪಾರಸು ಮಾಡಿರಲಿಲ್ಲ. ವಿಶೇಷ ಅಧಿಕಾರದಲ್ಲಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ತಾವೇ ನಿರ್ಧರಿಸಿ ಆಗೌರವವನ್ನು ನೆಹರು ಅವರಿಗೆ ನೀಡಿದರು. [214]

ನೆಹರೂ ಅವರ ಅಂತಿಮ ಕವನ/ಬಯಕೆ

  • ಜವಾಹರಲಾಲ್‌ ನೆಹರೂ ಮೃತರಾದಾಗ ಅವರ ಪಕ್ಕದಲ್ಲಿ ಈ ಕವನದ ಸಾಲುಗಳನ್ನು ಗೀಚಿದ ಕಾಗದದ ತುಣುಕು ದೊರಕಿತ್ತು.
      ಕಾಡೂ ಸುಂದರವಾಗಿದೆ, ದಟ್ಟ ಕತ್ತಲೆಯಿಂದ ಕೂಡಿದೆ.
      ಆದರೆ, ನಾನು ಮಾತುಗಳನ್ನು ಉಳಿಸಿಕೊಳ್ಳಬೇಕಿದೆ.
      ನಿದ್ದೆಗೆ ಜಾರುವ ಮುನ್ನ ಮೈಲುಗಟ್ಟಲೆ ಕ್ರಮಿಸಬೇಕಿದೆ, ಮೈಲುಗಟ್ಟಲೆ ಕ್ರಮಿಸಬೇಕಿದೆ.

(ಆಧಾರ:ಲೇಖಕಿ: ಪತ್ರಕರ್ತೆ ಹಾಗೂ ಮಾಧ್ಯಮ ಶಿಕ್ಷಣ ತಜ್ಞೆ) ಆರ್‌. ಅಖಿಲೇಶ್ವರಿ 03/08/2014/ ಪ್ರಜಾವಾಣಿ)

ನೆಹರು ಪ್ರಧಾನಿಯಾಗಿದ್ದ ಅವಧಿಯ ಮುಖ್ಯ ಪದಾಧಿಕಾರಿಗಳು

ಹೆಸರು ಪದವಿ ಸ್ಥಾನ ಅವಧಿ ಇಂದಾ ವರೆಗೆ
ಬ್ರಿಟಿಶರ ಅಧೀನದ ಭಾರತ
ಜಾರ್ಜ್ VI (11 ಡಿಸೆಂಬರ್ 1936 - 6 ಫೆಬ್ರವರಿ 1952) ಬ್ರಿಟನ್ ಚಕ್ರವರ್ತಿ 1857 15 ಆಗಸ್ಟ್ 1947
ತಾತ್ಕಾಲಿಕ ಡೊಮಿನಿಯನ್ ರಾಜ್ಯ ಭಾರತ 15 ಆಗಸ್ಟ್ 1947 ರಿಂದ 26 ಜನವರಿ 1950 ರ ವರೆಗೆ
ದಿ ಅರ್ಲ್ ಮೌಂಟ್ಬ್ಯಾಟನ್ - ಬರ್ಮಾ (ಬ್ರಿಟನ್ ಚಕ್ರವರ್ತಿಯಿಂದ ನೇಮಕ) ಗವರ್ನರ್ 15 ಆಗಸ್ಟ್ 1947 21 ಜೂನ್ 1948
ಚಕ್ರವರ್ತಿ ರಾಜಗೋಪಾಲಾಚಾರಿ(ಬ್ರಿಟನ್ ಚಕ್ರವರ್ತಿಯಿಂದ ನೇಮಕ) ಗವರ್ನರ್ 21 ಜೂನ್ 1948 ರಿಂದ 26 ಜನವರಿ 1950
ಭಾರತ ಗಣರಾಜ್ಯ
ಡಾ. ರಾಜೇಂದ್ರ ಪ್ರಸಾದ್ ರಾಷ್ಟ್ರಪತಿ 26 ಜನವರಿ 1950 13 ಮೇ 1962
ಸರ್ವೆಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿ 14 ಮೇ 1962 - 13 ಮೇ 1967
ಜವಾಹರ‌ಲಾಲ್ ನೆಹರು ಪ್ರಧಾನಿ 5 ಆಗಸ್ಟ್ 1947 27 ಮೇ 1964
ವಲ್ಲಭ್‌ಭಾಯಿ ಪಟೇಲ್ ಭಾರತದ ಮೊದಲ ಉಪ ಪ್ರಧಾನಿ - ಗೃಹ ಸಚಿವ 15 ಆಗಸ್ಟ್ 1947 15 ಡಿಸೆಂಬರ್ 1950 (ಮರಣ)
ಬಲದೇವ್ ಸಿಂಗ್ ರಕ್ಷಣಾ ಸಚಿವ 15 ಆಗಸ್ಟ್ 1947 1952
ಕೈಲಾಶ್ ನಾಥ್ ಕಟ್ಜು ರಕ್ಷಣಾ ಸಚಿವ 1955 1957
ವಿ. ಕೆ. ಕೃಷ್ಣ ಮೆನನ್ ರಕ್ಷಣಾ ಸಚಿವ 17 ಏಪ್ರಿಲ್ 1957 31 ಅಕ್ಟೋಬರ್ 1962
ಕೈಲಾಶ್ ನಾಥ್ ಕಟ್ಜು ಗೃಹ ಸಚಿವ 25 ಅಕ್ಟೋಬರ್ 1951 - 10 ಜನವರಿ 1955
ಗೋವಿಂದ ವಲ್ಲಭ ಪಂತ್ ಗೃಹ ಸಚಿವ 17 ಏಪ್ರಿಲ್ 1957 7 ಮಾರ್ಚ್ 1961
ಲಾಲ್ ಬಹಾದುರ್ ಶಾಸ್ತ್ರಿ (ನಾಲ್ಕನೇ ನೆಹರೂ ಸಚಿವ ಸಂಪುಟ) ಗೃಹ ಸಚಿವ 4 ಏಪ್ರಿಲ್ 1961 29 ಆಗಸ್ಟ್ 1963
ಗುಲ್ಜಾರಿಲಾಲ್ ನಂದಾ- (ನಾಲ್ಕನೇ ನೆಹರೂ ಸಚಿವ ಸಂಪುಟ) ಗೃಹ ಸಚಿವ 29 August 1963 14 November 1966

ನೋಡಿ

ಹೊರ ಸಂಪರ್ಕ


ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947)       ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947)       ಭಾರತದ ಸ್ವಾತಂತ್ರ್ಯ      ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947)            ಜವಾಹರ‌ಲಾಲ್ ನೆಹರು: ಪೀಠಿಕೆ, ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912), ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) 
ಚರಿತ್ರೆ: ವಸಾಹತುಶಾಹಿ - ಈಸ್ಟ್ ಇಂಡಿಯಾ ಕಂಪನಿ - ಪ್ಲಾಸೀ ಕದನ - ಬಕ್ಸರ್ ಕದನ
ತತ್ವಗಳು: ರಾಷ್ಟ್ರೀಯತೆ - ಸ್ವರಾಜ್ - ಗಾಂಧಿವಾದ - ಸತ್ಯಾಗ್ರಹ - ಹಿಂದೂ ರಾಷ್ಟ್ರೀಯತೆ - ಸ್ವದೇಶಿ - ಸಮಾಜವಾದ
ಘಟನೆ-ಚಳುವಳಿಗಳು: ೧೮೫೭ರ ದಂಗೆ - ಬಂಗಾಳದ ವಿಭಜನೆ - ಕ್ರಾಂತಿಕಾರಿಗಳು - ಚಂಪಾರಣ ಮತ್ತು ಖೇಡಾ - ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ - ಅಸಹಕಾರ - ಸೈಮನ್ ಆಯೋಗ - ನೆಹರು ವರದಿ - ಉಪ್ಪಿನ ಸತ್ಯಾಗ್ರಹ - ೧೯೩೫ರ ಭಾರತ ಸರ್ಕಾರ ಕಾಯ್ದೆ - ಕ್ರಿಪ್ ಆಯೋಗ - ಭಾರತ ಬಿಟ್ಟು ತೊಲಗಿ - ಮುಂಬೈ ದಂಗೆ
ಸಂಘಟನೆಗಳು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - ಗದರ್ - ಹೋಂ ರೂಲ್ ಚಳುವಳಿ - ಭಾರತೀಯ ರಾಷ್ಟ್ರೀಯ ಸೇನೆ - ಆಜಾದ್ ಹಿಂದ್ - ಅನುಶೀಲನ ಸಮಿತಿ
ನಾಯಕರು: ಮಂಗಲ ಪಾಂಡೆ - ಝಾನ್ಸಿ ರಾಣಿ ಲಕ್ಷ್ಮೀಬಾಯಿ - ಬಾಲ ಗಂಗಾಧರ ತಿಲಕ್ - ಗೋಪಾಲ ಕೃಷ್ಣ ಗೋಖಲೆ - ಮಹಾತ್ಮಾ ಗಾಂಧಿ - ಸರ್ದಾರ್ ಪಟೇಲ್ - ಸುಭಾಷ್ ಚಂದ್ರ ಬೋಸ್ - ಜವಾಹರಲಾಲ್ ನೆಹರು - ಮೌಲಾನಾ ಆಜಾದ್ - ಚಂದ್ರಶೇಖರ್ ಆಜಾದ್ - ರಾಜಾಜಿ - ಭಗತ್ ಸಿಂಗ್
ಬ್ರಿಟಿಷ್ ಆಡಳಿತ: ರಾಬರ್ಟ್ ಕ್ಲೈವ್ - ಲೂಯಿ ಮೌಂಟ್‌ಬ್ಯಾಟನ್
ಸ್ವಾತಂತ್ರ್ಯ: ಕ್ಯಾಬಿನೆಟ್ ಆಯೋಗ - ಭಾರತದ ಸ್ವಾತಂತ್ರ್ಯ ಕಾಯ್ದೆ - ಭಾರತದ ವಿಭಜನೆ - ಭಾರತದ ರಾಜಕೀಯ ಒಗ್ಗೂಡುವಿಕೆ - ಭಾರತದ ಸಂವಿಧಾನ

ಉಲ್ಲೇಖ

Tags:

ಜವಾಹರ‌ಲಾಲ್ ನೆಹರು ಪೀಠಿಕೆಜವಾಹರ‌ಲಾಲ್ ನೆಹರು ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912)ಜವಾಹರ‌ಲಾಲ್ ನೆಹರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947)ಜವಾಹರ‌ಲಾಲ್ ನೆಹರು ಹೋಂರೂಲ್ ಚಳುವಳಿಜವಾಹರ‌ಲಾಲ್ ನೆಹರು ಭಾರತದ ಪ್ರಧಾನಿಯಾಗಿ (1947-64)ಜವಾಹರ‌ಲಾಲ್ ನೆಹರು ವೈಯುಕ್ತಿಕ ಜೀವನಜವಾಹರ‌ಲಾಲ್ ನೆಹರು ಭಾರತಕ್ಕೆ ನೆಹರು ಕೊಡಿಗೆ (ಲೆಗಸಿ)ಜವಾಹರ‌ಲಾಲ್ ನೆಹರು ನೆಹರೂ ಅವರ ಅಂತಿಮ ಕವನಬಯಕೆಜವಾಹರ‌ಲಾಲ್ ನೆಹರು ನೆಹರು ಪ್ರಧಾನಿಯಾಗಿದ್ದ ಅವಧಿಯ ಮುಖ್ಯ ಪದಾಧಿಕಾರಿಗಳುಜವಾಹರ‌ಲಾಲ್ ನೆಹರು ನೋಡಿಜವಾಹರ‌ಲಾಲ್ ನೆಹರು ಹೊರ ಸಂಪರ್ಕಜವಾಹರ‌ಲಾಲ್ ನೆಹರು ಉಲ್ಲೇಖಜವಾಹರ‌ಲಾಲ್ ನೆಹರು

🔥 Trending searches on Wiki ಕನ್ನಡ:

ಪದ್ಮನಾಭಸ್ವಾಮಿ ದೇವಾಲಯವಿಮರ್ಶೆಕನ್ನಡದಲ್ಲಿ ಕಾವ್ಯ ಮಿಮಾಂಸೆಗಿಳಿಜೀವನಚರಿತ್ರೆಭಾರತೀಯ ಧರ್ಮಗಳುಡಿ.ವಿ.ಗುಂಡಪ್ಪಸಾಲುಮರದ ತಿಮ್ಮಕ್ಕಪತ್ರಕಾಮಹುಲಿಭಾರತದ ಸ್ವಾತಂತ್ರ್ಯ ಚಳುವಳಿಬೌದ್ಧ ಧರ್ಮಭಾರತದ ಜನಸಂಖ್ಯೆಯ ಬೆಳವಣಿಗೆದೇವತಾರ್ಚನ ವಿಧಿಭಾರತಿಯ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡಅಂಬಿಗರ ಚೌಡಯ್ಯಗಾಂಧಿ ಜಯಂತಿಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಭಾರತದ ತುತ್ತತುದಿಗಳುಊಳಿಗಮಾನ ಪದ್ಧತಿತಾಳೀಕೋಟೆಯ ಯುದ್ಧಕವನಆದಿ ಶಂಕರತೆಂಗಿನಕಾಯಿ ಮರಸುಮಲತಾಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಪೃಥ್ವಿ (ಚಲನಚಿತ್ರ)ಸಮಾಸಚೆಕ್ಮಲೈ ಮಹದೇಶ್ವರ ಬೆಟ್ಟಭಾರತದಲ್ಲಿ ತುರ್ತು ಪರಿಸ್ಥಿತಿಸಂದಾಯಕಾಲಾಯ ತಸ್ಮೈ ನಮಃ (ಚಲನಚಿತ್ರ)ಕರ್ನಾಟಕದ ತಾಲೂಕುಗಳುತ್ಯಾಜ್ಯ ನಿರ್ವಹಣೆಕನ್ನಡದ ಕೋಟ್ಯಧಿಪತಿಕಿತ್ತೂರು ಚೆನ್ನಮ್ಮಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಸ್ವಚ್ಛ ಭಾರತ ಅಭಿಯಾನಕರ್ನಾಟಕದ ಸಂಸ್ಕೃತಿಹಲಸುಪಂಜೆ ಮಂಗೇಶರಾಯ್ಕಂದಡಿ.ಎಸ್.ಕರ್ಕಿಕನ್ನಡ ಸಾಹಿತ್ಯ ಪರಿಷತ್ತುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಭಾರತೀಯ ರಿಸರ್ವ್ ಬ್ಯಾಂಕ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಬೆಟ್ಟದ ನೆಲ್ಲಿಕಾಯಿಸರೋಜಿನಿ ನಾಯ್ಡುಪಾರ್ವತಿವಡ್ಡಾರಾಧನೆಸಿದ್ಧಯ್ಯ ಪುರಾಣಿಕಶನಿ (ಗ್ರಹ)ಗೀತಾಪರಿವಾರಛತ್ರಪತಿ ಶಿವಾಜಿಸಂಶೋಧನೆಮುಖ್ಯ ಪುಟಭಾರತದ ರಾಷ್ಟ್ರಗೀತೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕಾರ್ಲ್ ಮಾರ್ಕ್ಸ್ಬೆಂಗಳೂರು ಉಪನಗರ ರೈಲು ಸೇವೆಡಾ ಬ್ರೋವಿಶ್ವ ಮಹಿಳೆಯರ ದಿನಹಂಸಲೇಖವಿಕ್ರಮಾದಿತ್ಯ ೬ರಿಚಾ ಘೋಷ್ಅಭಿಮನ್ಯುಕಲೆಸವರ್ಣದೀರ್ಘ ಸಂಧಿವೇದವ್ಯಾಸರಾಜ್‌ಕುಮಾರ್ಪಂಪರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ದೇವರ/ಜೇಡರ ದಾಸಿಮಯ್ಯ🡆 More