ಭಾರತ ಗಣರಾಜ್ಯದ ಇತಿಹಾಸ

ಭಾರತ ಗಣರಾಜ್ಯದ ಇತಿಹಾಸ - ಭಾಗ ೨->

ಭಾರತ ಗಣರಾಜ್ಯದ ಇತಿಹಾಸ
ಭಾರತದ ರಾಷ್ಟ್ರಚಿಹ್ನೆ
    ಭಾರತ ಗಣರಾಜ್ಯದ ಇತಿಹಾಸ

ಪೀಠಿಕೆ - ಹಿನ್ನಲೆ

ಭಾರತ ಗಣರಾಜ್ಯದ ಇತಿಹಾಸ 
"ಪುರೋಹಿತ ರಾಜ (ಪ್ರೀಸ್ಟ್ ಕಿಂಗ್)" ಪ್ರತಿಮೆ, ಮೊಹೆಂಜೊ-ದಾರೋ, ಪ್ರಬುದ್ಧ ಹರಪ್ಪನ್ ಅವಧಿ, ನ್ಯಾಷನಲ್ ಮ್ಯೂಸಿಯಂ, ಕರಾಚಿ, ಪಾಕಿಸ್ತಾನ.
  • ಭಾರತದ ನಾಗರಿಕ ಇತಿಹಾಸವು 5000 ಸಾವಿರ ವರ್ಷಗಳ ಹಿಂದೆ ಸಿಂಧೂನದೀ ತಿರದ ಹರಪ್ಪ, ಮೊಹೆಂಜೊ-ದಾರೋ ಸಂಸ್ಕøತಿಯಿಂದ ಆರಂಭವಾಗಿ ವೇದಕಾಲದ ಸಂಸ್ಕøತಿಯಲ್ಲಿ ಮುಂದುವರಿದು ಕ್ರಿಪೂ. 4 ನೇ ಶತಮಾನದಲ್ಲಿ ಮೌರ್ಯರು ಮತ್ತು ಕ್ರಿ.ಶ. 4 ನೇ ಶತಮಾನದಲ್ಲಿ ಗುಪ್ತರ ಕಾಲದಲ್ಲಿ ಅಭಿವೃದ್ಧಿಹೊಂದಿತು. ಕ್ರಿಶ.ಹನ್ನರಡನೇ ಶತಮಾನದವರೆಗೆ ಅನೇಕ ರಾಜರ ಆಳ್ವಿಕೆಯನ್ನು ಕಂಡಿತು.
  • ಮಹಮದೀಯರು ಕ್ರಿ.12 ನೇ ಶತಮಾನದ ಅಂತ್ಯದಲ್ಲಿ ಭಾರತದ ಮೇಲೆ ಧಾಳಿನದೆಸಿ 13 ನೇ ಶತಮನದ ಆರಂಭದಲ್ಲಿ ದೆಹಲಿಯಲ್ಲಿ ಗುಲಾಮಿ ಸಂತತಿಯ ಆಡಳಿತ ಆರಂಭವಾಯಿತು. ದೆಹಲಿಯಲ್ಲಿ ಮುಸ್ಲಿಮರ ಆಡಳಿತ ಕ್ರಿ.ಶ.1857 ರ ವರೆಗೆ ನೆಡೆಯಿತು. ದಕ್ಷಿಣದಲ್ಲಿ ಮರಾಠರ ಮತ್ತು ಅರಸರ ಆಡಳಿತ ಇತ್ತು. ಇಂಗ್ಲೆಂಡಿನ ಕಂಪನಿಯ ಆಡಳಿತ ಕ್ರಿ.ಶ.1857 ರ ಸಿಪಾಯಿ ದಂಗೆಯ ವರೆಗೆ ನೆಡೆದು, ಕಂಪನಿಯ ಆಡಳಿತ ಕೊನೆಗೊಂಡು ಇಡೀ ಭಾರತದ ಆಡಳಿತವು ಪೂರ್ಣವಾಗಿ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು.

ಬ್ರಿಟಿಷರ ಆಡಳಿತ:

ಭಾರತ ಗಣರಾಜ್ಯದ ಇತಿಹಾಸ 
ಭಾರತದ ಕೊನೆಯ ವೈಸ್‍ರಾಯ್‍- ಲಾರ್ಡ್ ಮೌಂಟ್ಬ್ಯಾಟನ್ (ಬರ್ಮಾದಲ್ಲಿ ನೇವಲ್ ಅಲನ್ ವಾರೆನ್ ಬಣ್ಣದಲ್ಲಿ)
  • ಹೊಸ ವ್ಯವಸ್ಥೆಯಲ್ಲಿ, ಕ್ರಿ.ಶ.1857 ರಲ್ಲಿ ಭಾರತವು ಬ್ರಿಟಿಷ್ ಸರಕಾರದ ನೇರ ಅಧಿಕಾರಕ್ಕೆ ಒಳಪಟ್ಟಿತು. ಬ್ರಟಿಷ್ ಕ್ಯಾಬಿನೆಟ್ ಸಚಿವರು, ಭಾರತದ ರಾಜ್ಯ ಕಾರ್ಯದರ್ಶಿಯಾಗಿದ್ದರು, ಅವರಿಗೆ ಜವಾಬ್ದಾರರಾಗಿರುವರು ಭಾರತದ ಗವರ್ನರ್-ಜನರಲ್, (ವೈಸ್ರಾಯ್) ಭಾರತ ಸರ್ಕಾರ ನಿರ್ವಹಣೆಯ ಜವಾಬ್ದಾರರಾದರು. ವೈಸ್ರಾಯ್ ಗೆ ಸಲಹೆ ನೀಡಲು ಒಂದು ಸಮಿತಿ ಇತ್ತು. 1858 ರಲ್ಲಿ ಭಾರತದ ಜನರಿಗೆ ರಾಜಮನೆತನದ ಘೋಷಣೆಯೊಂದರಲ್ಲಿ, ರಾಣಿ ವಿಕ್ಟೋರಿಯಾ ಬ್ರಿಟಿಷ್ ಕಾನೂನಿನ ಅಡಿಯಲ್ಲಿ ಸಮಾನ ಅವಕಾಶ ಸಾರ್ವಜನಿಕ ಸೇವೆಗೆ ಭರವಸೆ ನೀಡಿದರು ಮತ್ತು ಸ್ಥಳೀಯ ರಾಜಕುಮಾರರ ಹಕ್ಕುಗಳನ್ನು ಗೌರವಿಸಲು ವಾಗ್ದಾನ ಮಾಡಿದರು. ರಾಜರುಗಳಿಂದ ರಾಜ್ಯವನ್ನು ವಶಪಡಿಸಿಕೊಳ್ಳುವ ನೀತಿಯನ್ನು ಬ್ರಿಟಿಷರು ನಿಲ್ಲಿಸಿದರು, ಧಾರ್ಮಿಕ ಸಹಿಷ್ಣುತೆಯನ್ನು ವಿಧಿಸಿದರು ಮತ್ತು ಭಾರತೀಯರನ್ನು. ಸರ್ಕಾರಕ್ಕೆ ಅಧೀನರಾಗಿರುವಂತೆ ನಾಗರಿಕ ಸೇವೆಗೆ ಪ್ರವೇಶಿಸಿಕೊಳ್ಳಲು ಪ್ರಾರಂಭಿಸಿದರು
ಭಾರತ ಗಣರಾಜ್ಯದ ಇತಿಹಾಸ 
೧೯೪೭ಆಗಸ್ಟ್ ೧೫ರ ಮಧ್ಯರಾತ್ರಿ ಭಾರತಕ್ಕೆ ಅಧಿಕಾರದ ಹಸ್ತಾಂತರ: ದಿ.15 ಆಗಸ್ಟ್ 1947 ರಂದು ಮಧ್ಯರಾತ್ರಿ (12.15/16 AM)ವೈಸ್ ರಾಯ್ ಲಾರ್ಡ್ ಮೌಂಟಬ್ಯಾಟನ್ನರು ನೆಹರೂ ಅವರಿಗೆ ಭಾರತದ ಧ್ವಜ ಏರಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು
  • ಭಾರತೀಯ ಸಾರ್ವಜನಿಕ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಲು ರಾಷ್ಟ್ರೀಯ ಮತ್ತು ಪ್ರಾಂತೀಯ ಮಟ್ಟಗಳಲ್ಲಿ ಭಾರತೀಯ ನಾಯಕತ್ವ ಹುಟ್ಟುವಿಕೆಯ ಕಾಲವಾಗಿತ್ತು. ದಾದಾಭಾಯಿ ನವರೋಜಿ 1867 ರಲ್ಲಿ ಈಸ್ಟ್ ಇಂಡಿಯಾ ಅಸೋಸಿಯೇಷನ್ ಸ್ಥಾಪಿಸಿದರು ಮತ್ತು 1876 ರಲ್ಲಿ ಸುರೇಂದ್ರನಾಥ್ ಬ್ಯಾನರ್ಜಿ ಭಾರತೀಯ ರಾಷ್ಟ್ರೀಯ ಸಂಘಟನೆಯನ್ನು ಸ್ಥಾಪಿಸಿದರು. ಂ.ಔ. ನಿವೃತ್ತ ಬ್ರಿಟಿಷ್ ಸಿವಿಲ್ ಸೇವಕನಾದ ಹ್ಯೂಮ್, ಎಪ್ಪತ್ತೆರಡು ಭಾರತೀಯ ಪ್ರತಿನಿಧಿಗಳು ಮುಂಬೈನಲ್ಲಿ 1885 ರಲ್ಲಿ ಭೇಟಿಯಾದರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸ್ಥಾಪಿಸಿದರು.
  • ಬ್ರಿಟಿಷ್ ದಬ್ಬಾಳಿಕೆಯ ಆಡಳಿತದ ವಿರುದ್ಧ ಜನರ ದನಿ ಜೋರಾಗತೊಡಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ ಬಾಲ ಗಂಗಾಧರ ತಿಲಕ, ಲಾಲ ಲಜಪತ್ ರಾಯ್ ಹಾಗೂ ಬಿಪಿನ್ ಚಂದ್ರ ಪಾಲ್ ಮೊದಲಾದ ಕ್ರಾಂತಿಕಾರಿ ನೇತಾರರು ಸ್ವರಾಜ್ಯಕ್ಕೆ ಆಗ್ರಹಿಸತೊಡಗಿದರು. ಅವರು 1905ರಲ್ಲಿ, ವೈಸ್‍ರಾಯ್ ಹಾಗೂ ಗವರ್ನರ್ ಜನರಲ್ (1899-1905) ಆಗಿದ್ದ ಲಾರ್ಡ್ ಕರ್ಝನ್, ವಂಗದೇಶ ಅಥವಾ ಬಂಗಾಳ ಪ್ರಾಂತ್ಯವನ್ನು ಆಡಳಿತಾತ್ಮಕ ಸುಧಾರಣೆಗೋಸ್ಕರ ವಿಭಜನೆ ಮಾಡಿದಾಗ ಅದರ ವಿರುದ್ಧ ದೊಡ್ಡ ಅಸಹಾಕರ ಚಳುವಳಿಯನ್ನು ಸಂಘಟಿಸಿದರು. ಸೌಮ್ಯವಾದಿಗಳಾದ ಗೋಪಾಲಕೃಷ್ಣ ಗೋಖಲೆ ಮತ್ತು ದಾದಾಭಾಯ್ ನವರೋಜಿಯವರು ಬೇಡಿಕೆ ಈಡೇರಿಕೆಗಾಗಿ ಮಾತುಕತೆ ಹಾಗೂ ರಾಜಕೀಯ ಒತ್ತಡಗಳನ್ನು ತರುವ ಮಾರ್ಗವನ್ನು ಅನುಸರಿಸುತ್ತಿದ್ದರು.
  • 1918 ಹಾಗೂ 1922ರ ನಡುವಿನ ಅವಧಿಯಲ್ಲಿ ಮೋಹನದಾಸ ಗಾಂಧಿಯವರ ನೇತೃತ್ವದಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳವಳಿಯ ಮೊದಲ ಸರಣಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭಿಸಿದೊಡನೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ಹೊಸ ದಿಕ್ಕು ದೊರೆಯಿತು. 1930ರಲ್ಲಿ ಪೂರ್ಣ ಸ್ವರಾಜ್ಯದ ಬೇಡಿಕೆಯ ಘೋಷಣೆ ಮಾಡಿತು.
  • ಭಾರತದಿಂದ ಜಪಾನಿಗೆ ತೆರಳಿ ಬ್ರಿಟಿಷ ಆಡಳಿತವನ್ನು ಕೊನೆಗೊಳಿಸಲು 1942ರಲ್ಲಿ ಸುಭಾಷಚಂದ್ರ ಬೋಸರು ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿ 2 ನೇ ಮಹಾಯುದ್ಧದ ಅವಧಿಯಲ್ಲಿ ಬರ್ಮಾದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದರೂ ಜಪಾನ್ ಶರಣಾಗತವಾದ್ದರಿಂದ ಮತ್ತು ಅವರ ಅಕಾಲ ಮರಣದಿಂದ ಆ ಪ್ರಯತ್ನ ವಿಫಲವಾಯಿತು. ಎರಡನೇ ಮಹಾಯುದ್ಧದ ನಂತರ
  • ಈ ಎಲ್ಲಾ ಪ್ರಯತ್ನಗಳ ನಂತರ 1942 ರ ಆಗಸ್ಟ್ 8 ರಂದು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಮುಂಬೈ ಅಧಿವೇಶನದಲ್ಲಿ ಕ್ವಿಟ್ ಇಂಡಿಯಾ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಚಳವಳಿಯು ಗಾಂಧಿಯವರು ತನ್ನ ಪ್ರಸಿದ್ಧ ಸಂದೇಶವನ್ನು "ಡು ಅಥವಾ ಡೈ!" ಕರೆ ನೀಡಿತು, ಆದರೆ ಗಾಂಧೀಜಿಯವರ ಕರೆಯ 24ಗಂಟೆಗಳಲ್ಲಿ ಕಾಂಗ್ರೆಸ್ಸಿನ ಇಡೀ ನಾಯಕತ್ವವನ್ನು ಬಂಧಿಸಲಾಯಿತು. ಲಾಲ್ ಬಹದ್ದೂರ್ ಶಾಸ್ತ್ರಿಯವರು ನೆಹರೂ ಅವರ ಮನೆ ಆನಂದ ಭವನದಲ್ಲಿ ಕುಳಿತು ಎಲ್ಲೆಡೆ ಸಂದೇಶಗಳನ್ನು ಕಳಿಸಿದ್ದಲ್ಲದೆ ದೇಶಾದ್ಯಂತ ಸಂಚರಿಸಿ ಪ್ರತಿಭಟನೆಗೆ ಕರೆ ನೀಡಿದರು. ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳು ಮತ್ತು ಪ್ರದರ್ಶನಗಳು ನಡೆದವು. ಕಾರ್ಮಿಕರು ಮಿತಿಯಲ್ಲಿಯೇ ಇದ್ದರು ಮತ್ತು ಸ್ಟ್ರೈಕ್ಗಳನ್ನು ಕರೆಯಲಾಯಿತು. ಚಳವಳಿಯು ಸರಿಯಾದ ನಾಯಕರಿಲ್ಲದೆ ವ್ಯಾಪಕವಾಗಿ ವಿಧ್ವಂಸಕ ಕೃತ್ಯಗಳನ್ನು ಕಂಡಿತು, ಗಾಂಧೀಜಿಯವರ ಅಹಿಂಸೆಯ ತತ್ವದಿಂದ ಬೇರೆಡೆಗೆ ತಿರುಗಿತು.
ಭಾರತ ಗಣರಾಜ್ಯದ ಇತಿಹಾಸ 
ಭಾರತದ ತ್ರಿವರ್ಣ ಧ್ವಜ (India flag-XL-anim)
  • ಎರಡನೇ ಮಹಾಯುದ್ಧವು ಕೊನೆಗಂಡಿತು. ಅದರಲ್ಲಿ ದಣಿದಿದ್ದ ಬ್ರಿಟಷ್ ಸರ್ಕಾರ ಭಾರತದ ಜನರ ಮತ್ತು ಸೈನ್ಯದ ವಿರೋಧವನ್ನು ಕಟ್ಟಿಕೊಂಡು ಭಾರತದಲ್ಲಿ ಆಡಳಿತ ಮುಂದುವರಿಸುವುದು ಅಸಾಧ್ಯ ಮತ್ತ ಬ್ರಿಟಿಷರ ಹಿತಾಸಕ್ತಿಗೆ ಅನುಕೂಲವಲ್ಲವೆಂದು ತೀvರ್ಮಾನಿಸಿ ಭಾರತಕ್ಕೆ ಸ್ವಾತಂತ್ರ ನೀಡಲು ನಿರ್ಧರಿಸಿದರು. ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ ಭಾರತ ಹಾಗೂ ಪಾಕಿಸ್ತಾನವೆಂದು ಇಬ್ಭಾಗಿಸುವ ದೇಶ ವಿಭಜನೆಯ ಬಳಿಕ, ಭಾರತವು, ಮಧ್ಯರಾತ್ರಿ 15 ಆಗಸ್ಟ್ 1947 (15-8-1947;12.15/16AM) ರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ವನ್ನು ಪಡೆಯಿತು.

ಸಂವಿಧಾನದ ಬೆಳವಣಿಗೆ:

ಭಾರತ ಗಣರಾಜ್ಯದ ಇತಿಹಾಸ 
1951 ರಲ್ಲಿ ಭಾರತದ ಆಡಳಿತ ವಿಭಾಗಗಳು
  • ದಿ.26 ಜನವರಿ 1950 ರಂದು ಭಾರತವು ಗಣರಾಜ್ಯವಾದ ದೇಶವಾಗಿ ಹೊರಹೊಮ್ಮಲು 300 ವರ್ಷದ ಬೆಳವಣಿಗೆಯ ಹಿಂದಿನ ಇತಿಹಾಸವಿದೆ. ಮೊಟ್ಟಮದಲನೆಯ ಈಸ್ಟ್ ಇಂಡಿಯಾ ಕಂಪನಿಗೆ ಭಾರತದಲ್ಲಿ ವ್ಯಾಪಾರ ಮಾಡಲು ಕೊಟ್ಟ ಬ್ರಿಟಿಷ್ ರಾಣಿ ಕೊಟ್ಟ 1657 ರ ಚಾರ್ಟರ್ ಅಥವಾ ಸನ್ನದು. 2 ನೆಯ ಚಾರ್ಟರ್ 1726- ಇತಿಹಾಸದ ಮುಖ್ಯ ಅಧ್ಯಾಯಗಳಲ್ಲಿ ಒಂದಾಗಿದೆ. ಇದು ಭಾರತದ ನ್ಯಾಯಾಂಗ ಆಡಳಿತವನ್ನು ಆರಂಭಿಸಿತು. ಮೂರನೆಯ ಹಂತದಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಭಾರತದ ವ್ಯವಹಾರಗಳನ್ನು ನಿಯಂತ್ರಿಸಲು ಮತ್ತು ವ್ಯವಸ್ಥೆಗೊಳಿಸಲು 1773 ರ ನಿಯಮವನ್ನು ಜಾರಿಗೆ ತಂದಿತು. ನಾಲ್ಕನೇ ಹಂತದಲ್ಲಿ 1833 ರ ಚಾರ್ಟರ್ ಆಕ್ಟ್ - ಬಂಗಾಳದ ಗವರ್ನರ್-ಜನರಲ್ ರು ಈ ಕಾಯಿದೆ ಮೂಲಕ ಭಾರತದ ಗವರ್ನರ್-ಜನರಲ್ ಆಗಿ ಮರು-ನೇಮಕಗೊಂಡರು. ಇದು ಭಾರತದ ಮೊದಲ ಗವರ್ನರ್-ಜನರಲ್ ಆಗಿದ್ದ ವಿಲಿಯಮ್ ಬೆಂಟಿಂಕ್ ರನ್ನು ಭಾರತದ ಗವರ್ನರ್-ಜನರಲ್ ಮಾಡಿತು. ಹೀಗಾಗಿ, ದೇಶದ ಆಡಳಿತವು ಒಂದು ನಿಯಂತ್ರಣದಲ್ಲಿ ಏಕೀಕರಿಸಲ್ಪಟ್ಟಿತು. ಏಳನೆಯ . ಇಂಡಿಯನ್ ಕೌನ್ಸಿಲ್ ಆಕ್ಟ್ 1892 ಆಕ್ಟ್ ರಾಷ್ಟ್ರೀಯ ಕಾಂಗ್ರೆಸ್ನ ಬೇಡಿಕೆಯ ಕಾರಣದಿಂದಾಗಿ ಬ್ರಿಟಿಷ್ ಇಂಡಿಯಾದಲ್ಲಿ ವಿವಿಧ ಶಾಸಕಾಂಗ ಮಂಡಳಿಗಳ ಗಾತ್ರ ಹೆಚ್ಚಳಕ್ಕೆ ಅನುಮತಿ ನೀಡಿತು. ಎಂಟನೆಯದು ಇಂಡಿಯನ್ ಕೌನ್ಸಿಲ್ ಆಕ್ಟ್ 1909 ಅಥವಾ ಮಾರ್ಲೆ-ಮಿಂಟೋ ಸುಧಾರಣೆಗಳ ಕಾನೂನು. - ಅಥವಾ ಮಿಂಟೊ-ಮಾರ್ಲೆ ಸುಧಾರಣೆಗಳನ್ನು 1909 ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಶಾಸನ ಸಭೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನದಲ್ಲಿ ಅಂಗೀಕರಿಸಿತು. ಒಂಭತ್ತನೆಯ ಹಂತಲ್ಲಿ “ಭಾರತ ಸರ್ಕಾರ ಕಾಯಿದೆ 1919” ನ್ನು ಭಾರತ ಸರಕಾರದಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆಯನ್ನು ಇನ್ನಷ್ಟು ವಿಸ್ತರಿಸಲು ಬ್ರಿಟಿಷ್ ಸಂಸತ್ತು ಅಂಗೀಕರಿಸಿತು. ಎಡ್ವಿನ್ ಮೊಂಟಾಗು {ಭಾರತ ವಿದೇಶಾಂಗ ಕಾರ್ಯದರ್ಶಿ} ಮತ್ತು ಲಾರ್ಡ್ ಚೆಲ್ಮ್ಸ್ಫೋರ್ಡ್ {ವೈಸ್ರಾಯ್ ಮತ್ತು ಗವರ್ನರ್ ಜನರಲ್} ವರದಿಯ ಪ್ರಕಾರ ಶಿಫಾರಸು ಮಾಡಲ್ಪಟ್ಟ ಈ ಸುಧಾರಣೆಗಳು ಮೊಂಟಾಗು-ಚೆಲ್ಮಸಫರ್ಡ್ ರಿಫಾರ್ಮ್ಸ್ ಅಥವಾ ಮೊಂಟ್-ಫೋರ್ಡ್ ಸುಧಾರಣೆ ಎಂದು ಕರೆಯಲ್ಪಡುತ್ತವೆ. ಹತ್ತನೆಯದು 1935 ರ ಭಾರತ ಸರಕಾರ ಕಾಯಿದೆ. ಈ 1935 ರ ಭಾರತ ಸರಕಾರ ಕಾಯಿದೆಯನ್ನು 1935 ರ ಆಗಸ್ಟ್‍ನಲ್ಲಿ ಬ್ರಿಟಿಷ್ ಸಂಸತ್ತು ಅಂಗೀಕರಿಸಿತು. 321 ವಿಭಾಗಗಳು ಮತ್ತು 10 ಶೆಡ್ಯೂಲ್ಗಳೊಂದಿಗೆ ಇದುವರೆಗೆ ಬ್ರಿಟಿಷ್ ಪಾರ್ಲಿಮೆಂಟ್ ಅಂಗೀಕರಿಸಿದ ದೀರ್ಘ ಕಾಯಿದೆ. ನಂತರ ಇದನ್ನು ಎರಡು ಭಾಗಗಳಾಗಿ ಭಾರತ ಸರ್ಕಾರ ಕಾಯಿದೆ ಎಂದು ಕರೆಯಲಾಯಿತು, ಬ್ರಿಟಿಷ್ ಭಾರತದ ಪ್ರಾಂತ್ಯಗಳು ಮತ್ತು ಕೆಲವು ಅಥವಾ ಎಲ್ಲ ರಾಜಪ್ರಭುತ್ವದ ರಾಜ್ಯಗಳನ್ನು ಹೊಂದಿರುವ ಭಾರತದ ಒಕ್ಕೂಟವನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಆದರೆ ಮುಸ್ಲಿಮ್ ಲೀಗಿನ ಬೇಡಿಕೆಯ ಒತ್ತಾಯದಿಂದ ಕೊನೆಯದಾಗಿ “ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ 1947” ಬ್ರಿಟಿಷ್ ಸರ್ಕಾರ ಇಂಡಿಯಾವನ್ನು, ಭಾರತ ಮತ್ತು ಪಾಕಿಸ್ತಾನ ಎಂದು ಎರಡು ಹೊಸ ಸ್ವತಂತ್ರ ಪ್ರಭುತ್ವಗಳಾಗಿ ವಿಭಜಿಸಿತು. 1947 ರ ಜುಲೈ 18 ರಂದು ಈ ಕಾಯಿದೆ ರಾಯಲ್ ಸಮ್ಮತಿಯನ್ನು ಪಡೆದುಕೊಂಡಿತು. 1947 ಆಗಸ್ಟ್ 14 ರಂದು ಪಾಕಿಸ್ತಾನವು ಅಸ್ತಿತ್ವಕ್ಕೆ ಬಂದಿತು, ಮತ್ತು ಭಾರತವು ಅದೇ ಆಗಸ್ಟ್ 15 ರಂದು ಅಸ್ತಿತ್ವಕ್ಕೆ ಬಂದಿತು.

1946 ರ ನಡುಗಾಲ ಸರ್ಕಾರ

  • 1946ರ ಕ್ಯಾಬಿನೆಟ್ ನಿಯೋಗದ ಯೋಜನೆಯಲ್ಲಿ ರಾಷ್ಟ್ರ ವಿಭಜನೆಯ ತತ್ತ್ವವನ್ನು ತಳ್ಳಿಹಾಕಿ - ೧.'ಬ್ರಿಟಿಷ್ ಇಂಡಿಯಾ ಮತ್ತು ರಾಜ್ಯಗಳನ್ನು ಕೂಡಿಸಿಕೊಂಡ ಸ್ವತಂತ್ರ ಸಂಯುಕ್ತ ಭಾರತದ ಸ್ಥಾಪನೆ', ೨.'ಬ್ರಿಟಿಷ್ ಇಂಡಿಯಾ ಮತ್ತು ರಾಜ್ಯಗಳ ಪ್ರತಿನಿಧಿಗಳು ಕೇಂದ್ರ ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಭಾಗವಹಿಸುವಿಕೆ', ೩.'ಒಕ್ಕೂಟಕ್ಕೆ ಕೊಡಲಾದ ಅಧಿಕಾರಿಗಳನ್ನು ಬಿಟ್ಟು ಇತರ ಎಲ್ಲ ಅಧಿಕಾರಗಳು ರಾಜ್ಯಕ್ಕೆ' ಎಂಬ ತತ್ತ್ವ, ೪.'ಮತೀಯ ಪ್ರಾತಿನಿಧ್ಯದ ಮುಂದುವರಿಕೆ' ೫.'ಸಂವಿಧಾನ ರಚನಾ ಸಮಿತಿಗೆ ಪರೋಕ್ಷ ಚುನಾವಣೆ ಮೂಲಕ ಆಯ್ಕೆ', ೬.'ಅಂತಿಮವಾಗಿ ಬ್ರಿಟಿಷ್ ಸಾಮ್ರಾಜ್ಯದಿಂದ ಭಾರತೀಯ ಸಂವಿಧಾನ ರಚನಾ ಸಭೆಗೆ ಅಧಿಕಾರ ವರ್ಗಾವಣೆ'-ಇವಿಷ್ಟನ್ನು ಶಿಫಾರಸ್ಸು ಮಾಡಿತು. ಸಂವಿಧಾನ ರಚನಾ ಸಭೆಗೆ ವಯಸ್ಕ ಮತದಾನ ಪದ್ಧತಿಯ ನೇರ ಚುನಾವಣೆ ವಿಳಂಬದಾಯಕವಾದ್ದರಿಂದ ಪ್ರತಿಯೊಂದು ಪ್ರಾಂತ್ಯಕ್ಕೂ ಆದರದರ ಜನಸಂಖ್ಯೆಯ ಆಧಾರದ ಮೇಲೆ ಸ್ಥೂಲವಾಗಿ ಹತ್ತು ಲಕ್ಷಕ್ಕೆ ಒಂದರಂತೆ ಸ್ಥಾನ ನಿರ್ಧಾರಮಾಡಿ ಎಲ್ಲ ಜನಾಂಗಕ್ಕೂ ಪ್ರಾತಿನಿಧ್ಯವಿರುವಂತೆ ನೋಡಿಕೊಳ್ಳಬೇಕೆಂದು ನಿಯೋಜಿಸಲಾಗಿತ್ತು. ಕಾಂಗ್ರೆಸ್ಸು ಕ್ಯಾಬಿನೆಟ್ ಯೋಜನೆಯನ್ನು ಅನುಮೋದಿಸಿತು. ತತ್ಪಲವಾಗಿ 1946 ಡಿಸೆಂಬರ್ 6ರಂದು ಸಂವಿಧಾನ ರಚನಾಸಭೆ ರಚಿತವಾಯಿತು. ಮುಸ್ಲಿಮ್ ಲೀಗ್ ಸಂವಿಧಾನ ರಚನಾಸಭೆಗೆ ಸೇರುವ ಬದಲು ದೇಶಾದ್ಯಂತ ಸಾರ್ವತ್ರಿಕ ಮತೀಯ ಗಲಭೆಗೆ ಆದೇಶವಿತ್ತಿತು. ಈ ಮಧ್ಯೆ ಗವರ್ನರ್ ಜನರಲ್ಲನು ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಇವುಗಳ ಮನವೊಲಿಸಿ, ನೆಹರು ಪ್ರಧಾನಿಯಾಗಿ ಇರುವಂತೆ, ಅಕ್ಟೋಬರ್ 1946 ರಲ್ಲಿ ನಡುಗಾಲ ಸರ್ಕಾರವನ್ನು ರಚಿಸಿದರು.

1947 ರ ತಾತ್ಕಾಲಿಕ ಸರ್ಕಾರ

ಭಾರತ ಗಣರಾಜ್ಯದ ಇತಿಹಾಸ 
ಪಂ. ಜವಾಹರಲಾಲ್ ನೆಹರು.
ಭಾರತ ಗಣರಾಜ್ಯದ ಇತಿಹಾಸ 
ಡಾ.ರಾಜೇಂದ್ರ ಪ್ರಸಾದ್
  • ಭಾರತವು ಸಂವಿಧಾನವನ್ನು ಹೊಂದಿ ಗಣರಾಜ್ಯವಾಗುವವರೆಗೆ ಬ್ರಿಟಿಷ್ ಸರ್ಕಾರದ ಸಹಯೋಗಿ (ಡೊಮಿನಿಯನ್) ರಾಜ್ಯವಾಗಿ ಉಳಿಯಲು ನಿರ್ಧರಿಸಿತು. 1947 ರ ಆಗಸ್ಟ್ 15 ರಂದು (ಮಧ್ಯರಾತ್ರಿ 12.16 AM) ಪಂಡಿತ ಜವಾಹರ್ ಲಾಲ್ ನೆಹರು ಪ್ರಧಾನ ಮಾಂತ್ರಿಯಾಗಿ ಅಧಿಕೃತವಾಗಿ ಸ್ತಂತ್ರ ಭಾರತದ ಅಧಿಕಾರ ಸ್ವೀಕರಿಸಿದರು. ಅದರಂತೆ ಲಾರ್ಡ ಮೌಂಟ್ ಬ್ಯಾಟನ್ ರು ಭಾರತದ ಗೌರ್ನರ್ ಜನರಲ್ಲರಾಗಿ 1948 ವರೆಗೆ ಮುಂದುವರೆದರು. ನಂತರ ಸಿ.ರಾಜಗೋಪಾಲಾಚಾರಿಯವರು ಗೌರ್ನರ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡರು. ಸರ್ದಾರ್ ಪಟೇಲರು ಉಪಪ್ರಧಾನಿಯಾಗಿ ನೇಮಕವಾದರು. ಇದು ಚುನಾಯಿತವಲ್ಲದ ತಾತ್ಕಾಲಿಕ ಸರ್ಕಾರ.1952ರಲ್ಲಿ ಚುನಾಯಿತ ಸರ್ಕಾರ ರಚನೆಯಾಯಿತು. (ಪಾಕಿಸ್ತಾನದ ಉದಯದೊಂದಿಗೆ ಹಿಂದಿನ 1946 ರ ನಡುಗಾಲ ಸರ್ಕಾರ 1947 ರ ಪ್ರತ್ಯೇಕ ಭಾರತ ಸರ್ಕಾರ ರಚನೆಗೆ ಮುಂಚೆ ರದ್ಧಾಯಿತು.)

ಸಂವಿಧಾನ

  • ಬ್ರಿಟಿಷರ ಈ ಎಲ್ಲಾ ಕಾನೂನುಗಳನ್ನು ಸಮನ್ವಯಗೊಳಿಸಿ ಭಾರತದ ಸ್ವತಂತ್ರ ಗಣರಾಜ್ಯ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿ ಭಾರತ ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಲು ಅಂತರರಾಷ್ಟ್ರಿಯ ಕಾನೂನು ತಜ್ಞ ಬಿ.ಎನ್.ರಾವ್ ನೇಮಕಗೊಂಡು ತಯಾರಿಸಿಕೊಟ್ಟರು. ನಂತರ, ಡಾ.ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ಸಭೆಯ ಅಧ್ಯಕ್ಷರಾಗಿಯೂ, ಸಂವಿಧಾನ ಸಭೆಯ ತೀರ್ಮಾನದಂತೆ ಆ ಕರಡನ್ನು ಅಂತಿಮರೂಪಕ್ಕೆ ತರಲು, ಬಿ.ಆರ್.ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಸಂವಿಧಾನ ಸಬೆಯಲ್ಲಿ, ಲಿಖಿತರೂಪದಲ್ಲಿದ್ದ ಭಾರತದ ಸಂವಿಧಾನ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳ ರಚನೆ, ಅಧಿಕಾರ ಮತ್ತು ಕಾರ್ಯವ್ಯಾಪ್ತಿಗಳನ್ನು ಒಳಗೊಂಡು, ಮೂಲದ 22 ಭಾಗಗಳು 8 ಅನುಚ್ಛೇದಗಳನ್ನೂ, 395 ವಿಧಿಗಳನ್ನು ಮೂಲತಃ ಹೊಂದಿದ್ದ ಈ ಸಂವಿಧಾನವು ಸಂವಿಧಾನ ಸಭೆಯಲ್ಲಿ ಒಪ್ಪಿಗೆ ಪಡೆದು ಜಾರಿಗೆ ಬಂದಿತು. ಅನಂತರ ಅದಕ್ಕೆ ಅನೇಕ ತಿದ್ದುಪಡಿಗಳಾದವು. ಈಗ 25 ಭಾಗಗಳು 12 ಅನುಸೂಚಿಗಳು ಮತ್ತು 450 ವಿಧಿಗಳನ್ನು ಒಳಗೊಂಡಿದೆ.
  • 1813-1823 ರ ವರೆಗೆ ಇಂಡಿಯಾದ ಗೌರ್ನರ್ ಜನರಲ್ ಆಗಿದ್ದ ಮಾರ್ಕ್ವೀಸ್ ಆಫ್ ಹೇಸ್ಟಿಂಗ್ಸ್ (ಲಾರ್ಡ್ ಮಾಯೀರ್)ನು ತನ್ನ ಡೈರಿಯಲ್ಲಿ ಹೀಗೆ ಬರೆದಿದ್ದನು,-
      " ಇದುವರೆವಿಗೆ ತನಗೆ ಇಷ್ಟವಿಲ್ಲದಿದ್ದರೂ ಬ್ರಿಟನ್ ವಹಿಸಿಕೊಂಡಿರುವ ಅಧಿಕಾರವನ್ನು ರಾಜನೀತಿಗೆ ಅನುಸಾರವಾಗಿ ಕ್ರಮಕ್ರಮವಾಗಿ ಇಲ್ಲಿನ ಜನರಿಗೇ ಬಿಟ್ಟುಕೊಡುವ ಕಾಲವು ಬರುವುದು - ಬಹುಬೇಗ ಬರುವುದು"
  • ಹೀಗೆ ಭಾರತದ ಸ್ವಯಂ ಆಡಳಿತವು ಅಥವಾ ಸ್ವಾತಂತ್ರವು ಜನರ ಅಪೇಕ್ಷೆ ಮತ್ತು ಹೋರಾಟದ ಫಲವಾಗಿ ಹಂತ ಹಂತವಾಗಿ ಬಂದಿದೆ.

ಭವಿಷ್ಯದಲ್ಲಿ ಭಾರತವು ಮಹಾಶಕ್ತಿಯಾಗುವ ಲಕ್ಷಣ ಹೊಂದಿದೆ (1950 ರಿಂದ 2018 ರ ಬೆಳವಣಿಗೆ)

  • 1950- 2018:ಭಾರತ ಗಣರಾಜ್ಯದ ಸಂಕ್ಷಿಪ್ತ ಇತಿಹಾಸ (ಇಂಗ್ಲಿಷ್ ಲೇಖನದ ಅನುವಾದ)
  • ಭಾರತದ ಗಣರಾಜ್ಯದ ಇತಿಹಾಸವು 1950 ರ ಜನವರಿ 26 ರಂದು ಪ್ರಾರಂಭವಾಗುತ್ತದೆ. ಬ್ರಿಟಿಷ್ ಕಾಮನ್ವೆಲ್ತ್ ನಲ್ಲಿದ್ದ ಭಾರತ 15 ಆಗಸ್ಟ್ 1947 ರಂದು ಸ್ವತಂತ್ರ ರಾಷ್ಟ್ರವಾಯಿತು. ಬ್ರಿಟಿಷ್ ಭಾರತವು, ಸ್ವತಂತ್ರ ಬಾರತ ಮತ್ತು ಮುಸ್ಲಿಂ ಬಹುಮತವಿದ್ದ ವಾಯುವ್ಯಭಾಗ ಹಾಗೂ ಪೂರ್ವ ಪ್ರದೇಶಗಳು ಒಟ್ಟಾಗಿ ಪಾಕಿಸ್ತಾನ ಡೊಮಿನಿಯನ್ ಆಗಿ ವಿಭಜನೆಯಾಯಿತು. ಭಾರತದ. ಈ ವಿಭಜನೆಯು ಭಾರತ ಮತ್ತು ಪಾಕಿಸ್ತಾನದ ನಡುವೆ ಸುಮಾರು 10 ಮಿಲಿಯನ್ ಗೂ ಹೆಚ್ಚು ಜನಸಂಖ್ಯೆಯ ಮಾನವ-ವರ್ಗಾವಣೆಗೆ ಕಾರಣವಾಯಿತು. ಸುಮಾರು ಒಂದು ದಶಲಕ್ಷ ಜನರ ಸಾವಿಗೆ ಕಾರಣವಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ ಜವಾಹರಲಾಲ್ ನೆಹರು ಭಾರತದ ಮೊದಲ ಪ್ರಧಾನಿಯಾದರು, ಆದರೆ ಸ್ವಾತಂತ್ರ್ಯ ಹೋರಾಟದ ನಾಯಕ ಮಹಾತ್ಮ ಗಾಂಧಿ ಯಾವುದೇ ಅಧಿಕಾರವನ್ನು ಸ್ವೀಕರಿಸಲಿಲ್ಲ. 1950 ರ ಹೊಸ ಸಂವಿಧಾನವು ಭಾರತವನ್ನು ಪ್ರಜಾಪ್ರಭುತ್ವದ ರಾಷ್ಟ್ರವನ್ನಾಗಿ ಮಾಡಿತು.
  • ಆ ಸಮಯದಲ್ಲಿ ರಾಷ್ಟ್ರವು ಧಾರ್ಮಿಕ ಹಿಂಸಾಚಾರ, ಜಾತಿವಾದ, ಮತ್ತು ಪ್ರಾದೇಶಿಕ ಪ್ರತ್ಯೇಕತಾವಾದಿ ದಂಗೆಯನ್ನು ಎದುರಿಸಿತು, ಅದರ ಜೊತೆಗೆ 1947 ಅಕ್ಟೋಬರ್ ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತು 1962 ರಲ್ಲಿ ಈಶಾನ್ಯ ಭಾರತದಲ್ಲಿ.ಚೀನಾ - ಭಾರತ ಯುದ್ಧದಲ್ಲಿ 1965, 1971 ಮತ್ತು 1999 ರಲ್ಲಿ ಪಾಕಿಸ್ತಾನದೊಡನೆ ಯುದ್ಧಗಳಾದವು. ಚೀನಾದೊಂದಿಗೆ ಭಾರತವು ಪ್ರಾದೇಶಿಕ ಗಡಿ ವಿವಾದಗಳನ್ನು ಹೊಂದಿದೆ. ಜಾಗತಿಕ ಅಮೇರಿಕ ಬಣ ಮತ್ತು ರಷ್ಯಾ ಬಣಗಳ ಶೀತಲ ಯುದ್ಧದಲ್ಲಿ ಭಾರತವು ತಟಸ್ಥವಾಗಿತ್ತು, ಭಾರತವು ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಸೋವಿಯತ್ ಒಕ್ಕೂಟದಿಂದಲೂ, ಅದರ ಕಟು-ವೈರಿ ಪಾಕಿಸ್ತಾನವು ಅಮೇರಿಕ ಯುನೈಟೆಡ್ ಸ್ಟೇಟ್ಸ್ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾಗಳೊಂದಿಗೆ ನಿಕಟವಾಗಿ ಬಂಧಿಸಿಕೊಂಡಿತ್ತು.
  • ಭಾರತವು ಪರಮಾಣು-ಶಸ್ತ್ರಾಸ್ತ್ರ ರಾಷ್ಟ್ರವಾಗಿದ್ದು, 1974 ರಲ್ಲಿ ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ನಡೆಸಿದ ನಂತರ 1998 ರಲ್ಲಿ ಮತ್ತೊಮ್ಮೆ ಐದು ಪರೀಕ್ಷೆಗಳನ್ನು ನಡೆಸಿತು. 1950 ರಿಂದ 1980 ರವರೆಗೆ ಭಾರತವು ಸಮಾಜವಾದಿ-ಪ್ರೇರಿತ ನೀತಿಗಳನ್ನು ಅನುಸರಿಸಿತು. ದೇಶದಲ್ಲಿ ಬಂಡವಾಳದ ಕೊರತೆಯಿದ್ದ ಕಾರಣ ಆರ್ಥಿಕ ನಿಯಂತ್ರಣ ಮತ್ತು ಆರ್ಥಿಕ ರಕ್ಷಣಾ ನೀತಿ ಜೊತೆಗೆ ದೊಡ್ಡ ಉದ್ಯಮಕ್ಕೆ ಸಾರ್ವಜನಿಕ ಮಾಲೀಕತ್ವದ ನೀತಿಯನ್ನು ಅನುಸರಿಸಿತ್ತು ನೀರಾವರಿ, ವಿದ್ಯುತ್ ಗ್ರಾಮಾಬ್ಯುದಯ ಗಳನ್ನು ಸಾಧಿಸಿದರೂ ಕ್ರಮೇಣ ಭ್ರಷ್ಟಾಚಾರ ಮತ್ತು ನಿಧಾನಗತಿಯ ಆರ್ಥಿಕ ಬೆಳವಣಿಗೆಗೆ ಕಾರಣವಾಯಿತು. 1991 ರಲ್ಲಿ ಆರಂಭಿಸಿದ ನವ ಲಿಬರಲ್ ಆರ್ಥಿಕ ಸುಧಾರಣೆಗಳು (ಮುಕ್ತ ಮಾರುಕಟ್ಟೆ ನೀತಿ) ಭಾರತದ ಆರ್ಥಿಕ ಸ್ಥಿತಿÀಯನ್ನು ಸುಧಾರಿಸಿತು. ಇಂದು ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವೆಂದೂ ಮತ್ತು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಆದರೂ ವ್ಯಾಪಕ ಭ್ರಷ್ಟಾಚಾರವು ಸಮಸ್ಯೆಯಾಗಿ ಉಳಿದಿದೆ. ಇಂದು, ಜಾಗತಿಕ ವ್ಯವಹಾರಗಳಲ್ಲಿ ಪ್ರಮುಖವಾದ ಧ್ವನಿಯೊಂದಿಗೆ ಭಾರತವು ಒಂದು ಪ್ರಮುಖ ವಿಶ್ವ ಶಕ್ತಿಯಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯಲು ಬಯಸುತ್ತಿದೆ. ಭವಿಷ್ಯದಲ್ಲಿ ಭವಿಷ್ಯದಲ್ಲಿ ಭಾರತವು ಮಹಾಶಕ್ತಿಯಾಗುವ ಲಕ್ಷಣವಿದೆಯೆಂದು ಅನೇಕ ಅರ್ಥಶಾಸ್ತ್ರಜ್ಞರು, ಮಿಲಿಟರಿ ವಿಶ್ಲೇಷಕರು ಮತ್ತು ಚಿಂತಕರ ಚಾವಡಿಗಳು (ಟ್ಯಾಂಕ್) ಗಳು ನಿರೀಕ್ಷಿಸುತ್ತಿವೆ.
ಭಾರತ ಗಣರಾಜ್ಯದ ಇತಿಹಾಸ 
ಗಣರಾಜ್ಯ ಭಾರತದ ಮೊದಲ ಕೇಂದ್ರ ಮಂತ್ರಿಮಂಡಲ
ಜನವರಿ 31,1950 ರಂದು ನವ ದೆಹಲಿಯ ಸರಕಾರಿ ನಿವಾಸದಲ್ಲಿ ಕೇಂದ್ರ ಸಚಿವ ಸಂಪುಟದ ಸದಸ್ಯರೊಂದಿಗೆ ಡಾ. ರಾಜೇಂದ್ರ ಪ್ರಸಾದ್ ಅವರು;(ಎಡದಿಂದ-ಬಲ ಕುಳಿತವರು) ಡಾ.ಬಿ.ಆರ್. ಅಂಬೇಡ್ಕರ್, ರಫಿ ಅಹ್ಮದ್ ಕಿಡ್ವಾಯ್, ಸರ್ದಾರ್ ಬಲ್ದೇವ್ ಸಿಂಗ್, ಮೌಲಾನಾ ಅಬುಲ್ ಕಲಾಮ್ ಆಜಾದ್, ಜವಾಹರಲಾಲ್ ನೆಹರು, ಡಾ. ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಡಾ. ಜಾನ್ ಮಥಾಯ್, ಶ್ರೀ ಜಗ್ಜೀವನ್ ರಾಮ್, ರಾಜ್ ಕುಮಾರಿ ಅಮೃತ್ ಕೌರ್, ಡಾ.ಎಸ್.ಪಿ ಮುಖರ್ಜಿ. (ಎಡದಿಂದ-ಬಲ;ನಿಂತಿರುವುದು) ಖುರ್ಶೀದ್ ಲಾಲ್, ಆರ್.ಆರ್. ದಿವಾಕರ್, ಮೋಹನ್ ಲಾಲ್ ಸಕ್ಸೇನಾ, ಗೋಪಾಲಸ್ವಾಮಿ ಅಯ್ಯಂಗಾರ್, ಎನ್.ವಿ. ಗಾಡ್ಗಿಲ್, ಕೆ.ಸಿ. ನಿಯೋಗಿ, ಜೈರಾದಾಸ್ ದೌಲತ್ರಮ್, ಕೆ. ಸಂತಾನಂ, ಸತ್ಯ ನಾರಾಯಣ್ ಸಿನ್ಹಾ ಮತ್ತು ಡಾ.ಬಿ.ವಿ.ಕೇಸ್ಕರ್.

1947-1950: ಭಾರತ ಡೊಮಿನಿಯನ್ ರಾಜ್ಯ (ವಿವರ)

  • 1947-1950: ಡೊಮಿನಿಯನ್ ಭಾರತ (ಸಹಯೋಗಿ ರಾಜ್ಯ)
ಭಾರತ ಗಣರಾಜ್ಯದ ಇತಿಹಾಸ 
ಚಕ್ರವರ್ತಿ ರಾಜಗೋಪಾಲಾಚಾರಿ; ಭಾರತದ ಮೊದಲ ಮತ್ತು ಕೊನೆಯ ಗೌರ್ನರ್ ಜನರಲ್ 1944
  • ಲಾರ್ಡ್ ಲೂಯಿಸ್ ಮೌಂಟ್ ಬ್ಯಾಟನ್:(1900–1979): ಇಂಡಿಯಾದ ವೈಸ್ರಾಯ್; 20 ಫೆಬ್ರವರಿ 1947 ರಿಂದ 21, ಜೂನ್ 1948.
  • ಸಿ. ರಾಜಗೋಪಾಲಾಚಾರಿ(1878-1972)::ಭಾರತದ ವೈಸ್ರಾಯ್; 21 ಜೂನ್ 1948 ರಿಂದ 26 ಜನವರಿ 1950.
  • ಜವಾಹರಲಾಲ್ ನೆಹರು(ನವೆಂಬರ್ 14, 1889 - ಮೇ 27, 1964)::ಆಗಸ್ಟ್ 15, 1947 ರಿಂದ ಮೇ 27, 1964 (ಕಾಂಗ್ರೆಸ್ ಪಕ್ಷ)
  • ಸ್ವತಂತ್ರ ಭಾರತದ ಮೊದಲ ವರ್ಷಗಳಲ್ಲಿ ಪ್ರಕ್ಷುಬ್ಧ ಘಟನೆಗಳು ನೆಡೆದವು. ಪಾಕಿಸ್ತಾನದೊಂದಿಗೆ ಜನರ ಬೃಹತ್ ವಿನಿಮಯ ಆಯಿತು, 1947 ರ ಭಾರತ-ಪಾಕಿಸ್ತಾನಿ ಯುದ್ಧ ಸಂಭವಿಸಿತು. ಒಂದು ಏಕೀಕೃತ ರಾಷ್ಟ್ರವನ್ನು ರೂಪಿಸಲು 562 ರಾಜಪ್ರಭುತ್ವದ ರಾಜ್ಯಗಳ ಏಕೀಕರಣ. ಭಾರತದುಡನೆ ರಾಜಕೀಯ ಏಕೀಕರಣವಾಯಿತು. ಇದರ ಸಾಧನೆಯ ಕೀರ್ತಿ ಆಗ ಉಪ ಪ್ರಧಾನಿಯಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಸಲ್ಲುತ್ತದೆ. ಸ್ವಾತಂತ್ರ್ಯಾನಂತರ ಮತ್ತು ಮಹಾತ್ಮಾ ಗಾಂಧಿಜೀಯವರ ಸಾವಿನ ಮೊದಲು ಮಹಾತ್ಮರ ಜೊತೆಗೂಡಿ ಜವಾಹರಲಾಲ್ ನೆಹರು ಮತ್ತು ವಲ್ಲಭಭಾಯ್ ಪಟೇಲ್ ಸ್ವತಂತ್ರ ಭಾರತದ ಸಂವಿಧಾನವು ಜಾತ್ಯತೀತವಾಗಿರುತ್ತದೆ ಎಂದು ನಿರ್ಧರಿಸಿದ್ದರು.

ಭಾರತದ ವಿಭಜನೆ

      "ಮತಾಂತರಹೊಂದಿದ ಒಂದು ಜನಾಂಗವು ತಾನು ತನ್ನ ಮೂಲ ಜನಾಂಗದ ಸಮೂಹದಿಂದ ತಾವೇ ಬೇರೆ ಒಂದು ರಾಷ್ಟ್ರವೆಂದು ಸಾಧಿಸಿಕೊಳ್ಳುತ್ತಿರುವುದಕ್ಕೆ ಸಮಾನವಾದ ಉದಾಹರಣೆಯನ್ನು ಇತಿಹಾಸದಲ್ಲಿ ಬೇರೆಲ್ಲಿಯೂ ನಾನು ಕಾಣಲಾರೆ " - ಮಹಾತ್ಮ ಗಾಂಧಿಯವರು, 1944 ರಲ್ಲಿ ಧರ್ಮದ ಆಧಾರದ ಮೇಲೆ ಭಾರತದ ವಿಭಜನೆಯನ್ನು ವಿರೋಧಿಸಉತ್ತಾ ಈ ಹೇಳಿಕೆಯನ್ನು ನೀಡಿದರು.

ಪಟೇಲರು ಎಐಸಿಸಿಯಲ್ಲಿ ಭಾರತ ವಿಭಜನೆಗೆ ಒಪ್ಪಲು ಮಂಡಿಸಿದ ವಾದದ ಭಾಗ

When Lord Louis Mountbatten formally proposed the plan on 3 June 1947, Patel gave his approval and lobbied Nehru and other Congress leaders to accept the proposal. Knowing Gandhi's deep anguish regarding proposals of partition, Patel engaged him in frank discussion in private meetings over the perceived practical unworkability of any Congress-League coalition, the rising violence and the threat of civil war. At the All India Congress Committee meeting called to vote on the proposal, Patel said:
  • I fully appreciate the fears of our brothers from [the Muslim-majority areas]. Nobody likes the division of India and my heart is heavy. But the choice is between one division and many divisions. We must face facts. We cannot give way to emotionalism and sentimentality. The Working Committee has not acted out of fear. But I am afraid of one thing, that all our toil and hard work of these many years might go waste or prove unfruitful. My nine months in office has completely disillusioned me regarding the supposed merits of the Cabinet Mission Plan. Except for a few honorable exceptions, Muslim officials from the top down to the chaprasis (peons or servants) are working for the League. The communal veto given to the League in the Mission Plan would have blocked India's progress at every stage. Whether we like it or not, de facto Pakistan already exists in the Punjab and Bengal. Under the circumstances I would prefer a de jure Pakistan, which may make the League more responsible. Freedom is coming. We have 75 to 80 percent of India, which we can make strong with our own genius. The League can develop the rest of the country.

--

    ಕನ್ನಡ ಭಾವಾನುವಾದ-:ಲಾರ್ಡ್ ಲೂಯಿ ಮೌಂಟ್ಬ್ಯಾಟನ್ ಔಪಚಾರಿಕವಾಗಿ 3 ಜೂನ್ 1947 ರಂದು ವಿಭಜನೆಯ ಯೋಜನೆಯನ್ನು ಪ್ರಸ್ತಾಪಿಸಿದಾಗ, ಪಟೇಲ್ ಅವರು ತಮ್ಮ ಅನುಮೋದನೆಯನ್ನು ನೀಡಿದರು ಮತ್ತು ಆ ಪ್ರಸ್ತಾಪವನ್ನು ಸ್ವೀಕರಿಸಲು ನೆಹರು ಮತ್ತು ಇತರ ಕಾಂಗ್ರೆಸ್ ಮುಖಂಡರನ್ನು ಒಲಿಸಲು ಲಾಬಿ(ವಾದ) ಮಾಡಿದರು. ವಿಭಜನೆಯ ಪ್ರಸ್ತಾಪಗಳ ಬಗ್ಗೆ ಗಾಂಧಿಯವರ ತೀವ್ರವಾದ ದುಃಖವನ್ನು ತಿಳಿದುಕೊಂಡ ಪಟೇಲ್, ಯಾವುದೇ ಕಾಂಗ್ರೆಸ್ ಮತ್ತು ಲೀಗ್ ಒಕ್ಕೂಟದ ರಚನೆಯ ಪ್ರಾಯೋಗಿಕ ಕಾರ್ಯಸಾಧ್ಯತೆ ಅಸಾಧ್ಯವಾಗಿರುವುದನ್ನು ಅವರಿಗೆ ಮನನ ಮಾಡಿದರು., ಕಾರಣ - ಹೆಚ್ಚುತ್ತಿರುವ ಹಿಂಸಾಚಾರ (ಹಿಂದೂ ಮುಸ್ಲಿಂ ದಂಗೆ) ಮತ್ತು ಜನಾಂಗಗಳ ಮಧ್ಯೆ ಅಂತರ್-ಯುದ್ಧದ ಬೆದರಿಕೆಯ ಬಗ್ಗೆ ಖಾಸಗಿ ಸಭೆಗಳಲ್ಲಿ ಸ್ಪಷ್ಟ್ಟೀಕರಣ ನೀಡುವ ಚರ್ಚೆಯಲ್ಲಿ ತೊಡಗಿದ್ದರು. ವಿಭಜನೆಯ ಪ್ರಸ್ತಾವನೆಯನ್ನು ಎಐಸಿಸಿ ಸದಸ್ಯರು ಒಪ್ಪಿ ಮತ ಚಲಾಯಿಸಲು ಕೇಳಿಕೊಳ್ಳುತ್ತಾ ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಪಟೇಲ್ ಹೀಗೆ ಹೇಳಿದರು:
      ಮುಸ್ಲಿಂ ಬಹುಮತದ ಪ್ರದೇಶಗಳಲ್ಲಿ ನಮ್ಮ ಸಹೋದರರಿಗೆ ಇರುವ ಭಯವನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಯಾರೂ ಭಾರತದ ವಿಭಜನೆಯನ್ನು ಇಷ್ಟಪಡುವುದಿಲ್ಲ. ಮತ್ತು ಇದಕ್ಕಾಗಿ ನನ್ನ ಹೃದಯ ಭಾರವಾಗಿದೆ. ಆದರೆ ನಮ್ಮ ಮುಂದಿರುವ ಆಯ್ಕೆಯು ಭಾರತವನ್ನು ಒಂದು ವಿಭಾಗ ಮಾಡುವುದು ಮತ್ತು ಅನೇಕ ವಿಭಾಗಗಳಳನ್ನಾಗಿ ಮಾಡುವುದು ಇವುಗಳ ನಡುವೆ ಇರುತ್ತದೆ (ನೇರ ಕಾರ್ಯಾಚರಣೆಯ ಭಾರತದಅಂತರ್ ಮುಸ್ಲಿಂ ದಂಗೆಯಿಂದ ಮತ್ತು ಸಂಸ್ಥಾನಗಳು ಸ್ವತಂತ್ರ ಪಡೆದು ಭಾರತ ಛಿದ್ರವಾಗುವುದು). ನಾವು ವಾಸ್ತವಿಕ ಸತ್ಯಗಳನ್ನು ಎದುರಿಸಬೇಕಾಗಿದೆ. ನಾವು ಭಾವುಕತೆ ಮತ್ತು ಭಾವಾತಿರೇಕಕ್ಕೆ ಒಳಗಾಗಿ ನೆಡೆದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ವರ್ಕಿಂಗ್ ಸಮಿತಿಯು ಭಯದಿಂದ ಕಾರ್ಯನಿರ್ವಹಿಸಲಿಲ್ಲ. ಆದರೆ ನಾನು ಒಂದು ವಿಷಯದ ಬಗ್ಗೆ ಹೆದರುತ್ತೇನೆ, (ಈಗ ವಿಭಜನೆಗೆ ಒಪ್ಪದಿದ್ದರೆ) ಈ ಅನೇಕ ವರ್ಷಗಳಲ್ಲಿನ ನಮ್ಮ ಶ್ರಮ ಮತ್ತು ಶ್ರಮದ ಕೆಲಸವು ವ್ಯರ್ಥವಾಗಬಹುದು ಅಥವಾ ನಿಷ್ಫಲವಾಗಬಹುದು. ಕ್ಯಾಬಿನೆಟ್ ಮಿಷನ್ ಪ್ಲ್ಯಾನ್’ನ ಭಾವಿಸಲಾದ ಉಚಿತತೆ -ಅರ್ಹತೆಗಳ ಬಗ್ಗೆ ನನ್ನ ಒಂಭತ್ತು ತಿಂಗಳ ಅಧಿಕಾರಾವಧಿಯಲ್ಲಿ ನನಗೆ ಸಂಪೂರ್ಣವಾಗಿ ಭ್ರಾಂತಿ ನಿರಸನಯಾಯಿತು. ಕೆಲವು ಗೌರವಾನ್ವಿತ ವಿನಾಯಿತಿಗಳನ್ನು ಹೊರತುಪಡಿಸಿ, ಮುಸ್ಲಿಮ್ ಅಧಿಕಾರಿಗಳು ಮೇಲಿನಿಂದ ಚಾಪ್ರಾಸಿಗಳವರೆಗೆ ಮುಸ್ಲಿಂ ಲೀಗಿಗಾಗಿ ಕೆಲಸ ಮಾಡುತ್ತಿದ್ದಾರೆ. ಕ್ಯಾಬಿನೆಟ್‍ ಮಿಷನ್ ಯೋಜನೆಯಲ್ಲಿ ಲೀಗ್’ಗೆ ಕೊಟ್ಟ "ವಿಟೊ" (ಸರ್ಕಾರದ ತೀರ್ಮಾನದ- ಯಾವುದನ್ನಾದರೂ ಮುಸ್ಲಿಂ ಲೀಗ್ ನಿಷೇಧಿಸುವ ಕೋಮು-ಸವಲತ್ತು) ಪ್ರತಿ ಹಂತದಲ್ಲಿ ಭಾರತ ಪ್ರಗತಿಯನ್ನು ನಿರ್ಬಂಧಿಸಿತ್ತದೆ. ನಾವು ಅದನ್ನು ಇಷ್ಟಪಡುತ್ತೇವೆಯೋ ಅಥವಾ ಇಲ್ಲವೋ, ವಾಸ್ತವಿಕವಾಗಿ ಪಾಕಿಸ್ತಾನವು ಈಗಾಗಲೇ ಪಂಜಾಬ್ ಮತ್ತು ಬಂಗಾಳದಲ್ಲಿ ಅಸ್ತಿತ್ವದಲ್ಲಿದೆ. ಈ ಸಂದರ್ಭಗಳಲ್ಲಿ ನಾನು ಪಾಕಿಸ್ತಾನವನ್ನು ರಚಿಸುವ ತೀರ್ಪನ್ನು ಒಪ್ಪಲು ಬಯಸುತ್ತೇನೆ, ಅದು ಲೀಗ್’ಗೆ ಹೆಚ್ಚಿನ ಜವಾಬ್ದಾರಿಯನ್ನು ಹೊರಿಸುತ್ತದೆ. ಸ್ವಾತಂತ್ರ್ಯ ಬರುತ್ತಿದೆ. ನಾವು ನಮ್ಮ ಪ್ರತಿಶತ 75 - 80 ರಷ್ಟು ಭಾರತವನ್ನು ಹೊಂದಿದ್ದೇವೆ, ಅದನ್ನು ನಮ್ಮ ಸ್ವಂತ ಪ್ರತಿಭಾಶಕ್ತಿಯೊಂದಿಗೆ ಬಲಪಡಿಸಬಹುದು. ಲೀಗ್ ತನಗೆ ಬಂದ ದೇಶದ ಉಳಿದ ಭಾಗಗಳನ್ನು ಅಭಿವೃದ್ಧಿಪಡಿಸಬಹುದು.
ಭಾರತ ಗಣರಾಜ್ಯದ ಇತಿಹಾಸ 
img_alt=
ಭಾರತ ಗಣರಾಜ್ಯದ ಇತಿಹಾಸ 
ಜಿನ್ನಾ ಮತ್ತು ಗಾಂಧಿ; ಭಾರತದ ವಿಭಜನೆಗಾಗಿ ಒತ್ತಡ ಹೇರಬಾರದೆಂದು ಜಿನ್ನಾರವರನ್ನು ಗಾಂಧೀಜಿ ಕೋರುತ್ತಿದ್ದಾರೆ; ಆದರೆ ಜಿನ್ನಾರವರ ನಿರಾಕರಣೆ

ನಿರಾಶ್ರಿತರ ಸಮಸ್ಯೆ

  • ಪಶ್ಚಿಮ ಪಂಜಾಬ್, ವಾಯುವ್ಯ ಪ್ರಾಂತ್ಯ (ನಾರ್ತ್-ವೆಸ್ಟ್ ಫ್ರಾಂಟೀಯರ್ ಪ್ರಾಂತ್ಯ), ಬಲೂಚಿಸ್ತಾನ್, ಪೂರ್ವ ಬಂಗಾಳ ಮತ್ತು ಸಿಂಧುಪ್ರಾಂತದಲ್ಲಿ ವಾಸಿಸುತ್ತಿದ್ದ 3.5 ಮಿಲಿಯನ್ (೩೫ ಲಕ್ಷ) ಹಿಂದೂಗಳು ಮತ್ತು ಸಿಖ್ಖರು ಮುಸ್ಲಿಂ ಪಾಕಿಸ್ತಾನದಲ್ಲಿ ಮುಸ್ಲಿಮರ ಪ್ರಾಬಲ್ಯ ಮತ್ತು ನಿಗ್ರಹದ ಭಯದಿಂದಾಗಿ ಭಾರತಕ್ಕೆ ವಲಸೆ ಹೋದರು. ಮತೀಯ ಹಿಂಸಾಚಾರವು ಸುಮಾರು ಒಂದು ಮಿಲಿಯನ್ ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರನ್ನು ಸಾಯಿಸಿತು, ಮತ್ತು ಪಂಜಾಬ್ ಮತ್ತು ಬಂಗಾಳದ ಗಡಿಯುದ್ದಕ್ಕೂ ಮತ್ತು ಕಲ್ಕತ್ತಾ, ದೆಹಲಿ ಮತ್ತು ಲಾಹೋರ್ ನಗರಗಳೆರಡರಲ್ಲೂ ಗಂಭೀರವಾಗಿ ಅಸ್ಥಿರವಾದ ಸ್ಥಿತಿಯುಂಟಾಯಿತು. ಭಾರತದ ಮತ್ತು ಪಾಕಿಸ್ತಾನದ ನಾಯಕರ ಸಹಕಾರ ಪ್ರಯತ್ನಗಳಿಂದಾಗಿ ಸೆಪ್ಟೆಂಬರ್ ಮೊದಲ ಬಾರಿಗೆ ಹಿಂಸಾಚಾರವನ್ನು ನಿಲ್ಲಿಸಲಾಯಿತು ಮತ್ತು ವಿಶೇಷವಾಗಿ ಭಾರತೀಯ ಸ್ವಾತಂತ್ರ್ಯ ಹೋರಾಟದ ನಾಯಕ ಮೋಹನದಾಸ ಗಾಂಧಿಯವರ ಪ್ರಯತ್ನದಿಂದಾಗಿ ಹಿಂಸಾಚಾರ ತಗ್ಗಿತು, ಕಲ್ಕತ್ತಾದಲ್ಲಿ . ನಂತರ ದೆಹಲಿಯಲ್ಲಿ ಜನರನ್ನು ಶಾಂತಗೊಳಿಸುವ ಉದ್ದೇಶದಿಂದ ಆಮರಣಾಂತ ಉಪವಾಸದ ದಂಡನೆಗೆ ತಮ್ಮನ್ನು ಒಡ್ಡಿಕೊಂಡರು ಅವರ ಜೀನಕ್ಕೆ ಬೆದರಿಕೆ ಇದ್ದರೂ ಸಹ ಶಾಂತಿಗೆ ಒತ್ತು ನೀಡಿದರು. ಎರಡೂ ಸರಕಾರಗಳು ಬೃಹತ್ ಪ್ರಮಾಣದ ಪರಿಹಾರ ಶಿಬಿರಗಳನ್ನು ಒಳಬರುವ ಮತ್ತು ಹೊರಹೋಗುವ ನಿರಾಶ್ರಿತರಿಗೆ ಅವಕಾಶಕೊಟ್ಟವು. ಆಗ ಭಾರೀ ಪ್ರಮಾಣದಲ್ಲಿ ಮಾನವೀಯ ನೆರವು ಒದಗಿಸಲು ಭಾರತೀಯ ಸೈನ್ಯವನ್ನು ಸಜ್ಜುಗೊಳಿಸಲಾಯಿತು.

ಗಾಂಧೀಜೀಯವರ ಹತ್ಯೆ

ಭಾರತ ಗಣರಾಜ್ಯದ ಇತಿಹಾಸ 
ದೈಹಿಕವಾಗಿ ದುರ್ಬಲರಾಗಿದ್ದ ಗಾಂಧೀಜಿ ಪ್ರಾರ್ಥನೆಗೆ ಹೋಗುತ್ತಿರುವುದು 1948; ಮಂದಿರಕ್ಕೆ ಪ್ರವೇಶ ಮಾಡುತ್ತಿದ್ದಂತೆ - ಈ ಸಂದರ್ಭದಲ್ಲಿ ಹತ್ಯೆ ಮಾಡಲಾಯಿತು
  • ಮಹಾತ್ಮ ಗಾಂಧಿಯವರ ಹತ್ಯೆಯು ದಿ.30 ಜನವರಿ 1948 ರಂದು ಹಿಂದೂ ರಾಷ್ಟ್ರೀಯತಾವಾದಿ ನಾಥುರಾಮ ವಿನಾಯಕ ಗೋಡ್ಸೆ ಅವರಿಂದ ಮಾಡಲ್ಪಟ್ಟಿತು. ಘೋಡ್ಸೆ ಮತ್ತು ಹೆಗಡೆವಾರರ ಹಿಂದೂ ಸಂಘಟನೆಗೆ ಮತ್ತು ಹಿಂದೂ ರಾಷ್ಟ್ರೀಯತಾವಾದಕ್ಕೆ ವಿರೋಧಿಸಿ (ಹೆದರಿ) ಜಿನ್ನಾರವರು ಮತ್ತು ಮುಸ್ಲಿಂ ನಾಯಕರು ವಿಭಜನೆಗೆ ಒತ್ತಾಯಿಸುತ್ತಿದ್ದರೂ, ಅದು ಗೊತ್ತಿದ್ದೂ ಘೋಡ್ಸೆ ಅವರು ಗಾಂಧೀಜೀಯವರು ವಿಭಜನೆಗೆ ಜವಾಬ್ದಾರರಾಗಿದ್ದರು ಮತ್ತು [ಮಹಾತ್ಮ ಗಾಂಧಿ|ಗಾಂಧಿಜೀಯವರು} ಮುಸ್ಲಿಮರನ್ನು ತೃಪ್ತಿಪಡಿಸುತ್ತಿದ್ದಾರೆಂದು ಆರೋಪಿಸಿ ಅವರನ್ನು ಕೊಲೆ ಮಾಡಿದರು. ಒಂದು ದಶಲಕ್ಷಕ್ಕಿಂತ ಹೆಚ್ಚು ಜನರು ದಹನಕ್ರಿಯೆಗೆ ಹೋಗುವ ಬೀದಿಗಳಲ್ಲಿ ಮೆರವಣಿಗೆಯನ್ನು ಅನುಸರಿಸಲು ದೆಹಲಿಯ ಬೀದಿಗಳಲ್ಲಿ ಜನಪ್ರವಾಹವನ್ನು ಉಂಟುಮಾಡಿದರು ಮತ್ತು ಅವರಿಗೆ ಅಂತಿಮ ಗೌರವವನ್ನು ಸಲ್ಲಿಸಿದರು.

ನಿರಾಶ್ರಿತರ ಸಮಸ್ಯೆ

  • 1949 ರಲ್ಲಿ ಭಾರತ ಪಶ್ಚಿಮ ಬಂಗಾಳಕ್ಕೆ ಮತ್ತು ಇತರ ರಾಜ್ಯಗಳಿಗೆ, ಪೂರ್ವ ಪಾಕಿಸ್ತಾನದ ಮುಸ್ಲಿಮ್ ಅಧಿಕಾರಿಗಳಿಂದ ಕೋಮು ಹಿಂಸಾಚಾರ, ಬೆದರಿಕೆ ಮತ್ತು ದಮನದ ಕಾರಣ ಸುಮಾರು 1 ಮಿಲಿಯನ್ (ಹತ್ತು ಲಕ್ಷ ಜನ) ಹಿಂದೂ ನಿರಾಶ್ರಿತರು ವಲಸೆಬಂದಿರುವುದನ್ನ ದಾಖಲಿಸಿದೆ. ಈ ನಿರಾಶ್ರಿತರ ಅವಸ್ಥೆಯು, ಹಿಂದೂಗಳು ಮತ್ತು ಭಾರತೀಯ ರಾಷ್ಟ್ರೀಯತಾವಾದಿಗಳನ್ನು ಅಸಮಾಧಾನಗೊಳಿಸಿತು. ನಿರಾಶ್ರಿತ ಜನಸಂಖ್ಯೆಯು ಭಾರತೀಯ ರಾಜ್ಯಗಳ ಸಂಪನ್ಮೂಲಗಳನ್ನು ಬರಿದುಮಾಡಿತು. ಅವರು ಆ ನಿರಾಶ್ರಿತರನ್ನು ತಮ್ಮಲ್ಲಿ ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ. ಯುದ್ಧವನ್ನು ತಳ್ಳಿಹಾಕದೆ ಇದ್ದರೂ ಪ್ರಧಾನ ಮಂತ್ರಿ ನೆಹರು ಮತ್ತು ಸರ್ದಾರ್ ಪಟೇಲ್ ಅವರು ಪಾಕಿಸ್ತಾನದ ಮುಖ್ಯಮಂತ್ರಿ ಲಿಯಾಖತ್ ಅಲಿ ಖಾನ್ ಅವರನ್ನು ಕರೆದು ದೆಹಲಿಯಲ್ಲಿ ಮಾತುಕತೆ ನಡೆಸಿದರು. ಅನೇಕ ಭಾರತೀಯರು ಈ ಶಮನ ಕ್ರಿಯೆಯನ್ನು ಮುಸ್ಲಿಮರ ತುಷ್ಠಿ ಎಂದು ಕರೆಯುತ್ತಿದ್ದರೂ, ಎರಡೂ ರಾಷ್ಟ್ರಗಳ ಅಲ್ಪಸಂಖ್ಯಾತರ ರಕ್ಷಣೆಗೆ ಮತ್ತು ಅಲ್ಪಸಂಖ್ಯಾತ ಕಮೀಷನ್‍ಗಳ ರಚನೆಗೆ ವಾಗ್ದಾನ ಮಾಡಿದ ಲಿಯಾಖತ್ ಅಲಿ ಖಾನ್ ಅವರೊಂದಿಗೆ ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧವಾಗಲು ಒಪ್ಪಂದಕ್ಕೆ ಸಹಿ ಹಾಕಿದರು. ಇದಕ್ಕೆ ವಿರುದ್ಧವಾಗಿದ್ದರೂ, ಪಟೇಲ್ ಶಾಂತಿಗಾಗಿ ಈ ಒಪ್ಪಂದವನ್ನು ಬಂಬಲಿಸಲು ನಿರ್ಧರಿಸಿದರು. ಪಶ್ಚಿಮ ಬಂಗಾಳದಿಂದ ಮತ್ತು ಭಾರತದಾದ್ಯಂತ ಬೆಂಬಲವನ್ನು ಪಡೆದುಕೊಳ್ಳುವಲ್ಲಿ ಮತ್ತು ನಿರ್ಣಯದ ನಿಬಂಧನೆಗಳನ್ನು ಜಾರಿಗೊಳಿಸಲು ನಿರ್ಣಾಯಕ ಪಾತ್ರ ವಹಿಸಿದರು. ಖಾನ್ ಮತ್ತು ನೆಹರು ಒಂದು ವ್ಯಾಪಾರ ಒಪ್ಪಂದಕ್ಕೆ ಸಹ ಸಹಿ ಹಾಕಿದರು ಮತ್ತು ಶಾಂತಿಯುತ ವಿಧಾನಗಳ ಮೂಲಕ ದ್ವಿಪಕ್ಷೀಯ ವಿವಾದಗಳನ್ನು ಪರಿಹರಿಸಿಕೊಳ್ಳಲು ಬದ್ಧರಾಗಿದ್ದರು. ನಿಧಾನವಾಗಿ, ನೂರಾರು ಸಾವಿರಾರು ಹಿಂದೂಗಳು ಪೂರ್ವ ಪಾಕಿಸ್ತಾನಕ್ಕೆ ಹಿಂದಿರುಗಿದರು, ಆದರೆ ಕಾಶ್ಮೀರ ವಿವಾದದಿಂದಾಗಿ ಸಂಬಂಧಗಳಲ್ಲಿ ಸುಧಾರಣೆ ಬಹಳ ಕಾಲ ಉಳಿಯಲಿಲ್ಲ.

ರಾಜರ ಅಧೀನದಲ್ಲಿದ್ದ ರಾಜ್ಯಗಳ ಸಂಯೋಜನೆ

ಭಾರತದ ರಾಜಕೀಯ ಏಕೀಕರಣ
ಸರ್ದಾರ್ ವಲ್ಲಭಭಾಯ್ ಪಟೇಲ್ ಗೃಹ ಮತ್ತು ರಾಜ್ಯಗಳ ವ್ಯವಹಾರಗಳ ಸಚಿವ; ಬ್ರಿಟಿಷ್ ಭಾರತೀಯ ಪ್ರಾಂತ್ಯಗಳು ಮತ್ತು ರಾಜ ಸಂಸ್ಥಾನಗಳನ್ನು ಒಂದು ಏಕೀಕೃತ ಭಾರತಕ್ಕೆ ಬೆಸುಗೆ ಹಾಕುವ ಜವಾಬ್ದಾರಿಯನ್ನು ಹೊಂದಿದ್ದರು.
ಜನರಲ್ ಎಲ್ ಎಡ್ರೋಸ್ (ಬಲ) ಹೈದರಾಬಾದ್ರಾಜ್ಯದ ಸೈನ್ಯದ ಶರಣಾಗತಿಯನ್ನು ನಂತರ ಸೇನಾ ದಂಡನಾಯಕರಾದ- ಮೇಜರ್ ಜನರಲ್ ಜಯಂತೋ ನಾಥರಿಗೆ ಒಪ್ಪಸುತ್ತಿದ್ದಾರೆ; (ಸಿಕಂದರಾಬಾದ್‍ನಲ್ಲಿ).
Queen ರಾಣಿ ಕಾಂಚನ ಪ್ರಭಾದೇವಿ - ತ್ರಿಪುರಾ ರಾಜ್ಯ; ಭಾರತ ಒಕ್ಕೂಟದಲ್ಲಿ ಸೇರಲು ಮೊದಲು ಸಹಿಮಾಡಿದವರು:ಅವರು ಭಾರತ ವಿಭಜನೆಯಲ್ಲಿ ತ್ರಿಪುರಾಕ್ಕೆ ಗುಳೆಬಂದ ನಿರಾಶ್ರಿತರ ಪುನರ್ವಸತಿಗೆ ಬಹಳ ಸಹಾಯಮಾಡಿದರು.
ಶೇಕ್ ಮೊಹಮದ್ ಅಬ್ದುಲ್ಲಾ; (ಬಲ), ಕಾಶ್ಮೀರದ ಮಧ್ಯಕಾಲೀನ ಸರ್ಕಾರದ ನೇತ್ರತ್ವ ವಹಿಸಲು ಆಯ್ಕೆಯಾದವರು. ಮಹಾರಾಜ ಹರಿಸಿಂಗ್ ಭಾರತ ಒಕ್ಕೂಟಕ್ಕೆ ಸೇರಲು ಒಪ್ಪಿ "ಒಪ್ಪಂದ ಪತ್ರಕ್ಕೆ" ಸಹಿಮಾಡಿದವರು.
  • 1947ರ ಇಂಡಿಯಾ ಆಕ್ಟ್ ಅಥವಾ ಕಾಯಿದೆರಾಜರೊಡನೆ ಬ್ರಿಟಿಷ್ ಸರ್ಕಾರ ತಾನು ಮಾಡಿಕೊಂಡ ಒಪ್ಪಂದಗಳನ್ನು ರದ್ದುಮಾಡಿತು. ಇದರ ಬಗೆಗೆ, ಜೂನ್ 4, 1947 ರಂದು ಮೌಂಟ್ಬ್ಯಾಟನ್ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿದರು, ಇದರಲ್ಲಿ ಅವರು ರಾಜ ಸಂಸ್ಥಾನಗಳ ಪ್ರಶ್ನೆಗೆ ಉತ್ತರಿಸಿ, ಅವುಗಳು ಒಂದು ಅಥವಾ ಮತ್ತೊಂದು ಹೊಸ ಸ್ವತಂತ್ರವಾದ ರಾಷ್ಟ್ರಕ್ಕೆ ಸೇರಲು ಅಥವಾ ಸ್ವತಂತ್ರವಾಗಿ ಉಳಿಯಲು ಮುಕ್ತವಾಗಿರುತ್ತವೆ ಎಂದರು.
  • ಬ್ರಿಟಿಷ್ ಭಾರತವು 17 ಪ್ರಾಂತ್ಯಗಳು ಮತ್ತು 562 ರಾಜಪ್ರಭುತ್ವದ ರಾಜ್ಯಗಳನ್ನು ಒಳಗೊಂಡಿತ್ತು. ವೈಸ್ ರಾಯರ ನೇರ ಆಡಳಿತದಲ್ಲಿದ್ದ ಪ್ರಾಂತ್ಯಗಳನ್ನು ಭಾರತ ಅಥವಾ ಪಾಕಿಸ್ತಾನಕ್ಕೆ ನೀಡಲಾಯಿತು, ವಿಶೇಷವಾಗಿ ಕೆಲವು ಸಂದರ್ಭಗಳಲ್ಲಿ - ಪಂಜಾಬ್ ಮತ್ತು ಬಂಗಾಳ - ವಿಭಜನೆಯಾದ ನಂತರ. ಬ್ರಿಟಿಷರು ‘1947 ನೇ ಕಾನೂನಿನಲ್ಲಿ’ ರಾಜ ಸಂಸ್ಥಾನಗಳ ರಾಜರುಗಳು ಸ್ವತಂತ್ರವಾಗಿ ಉಳಿಯಲು ಅಥವಾ ಭಾರತ ಪಾಕಿಸ್ತಾನಕ್ಕೆ ಸೇರಲು ಹಕ್ಕನ್ನು ನೀಡಿದರು. ಹೀಗಾಗಿ ಭಾರತದ ನಾಯಕರು ಪ್ರಾಂತ್ಯಗಳು ಮತ್ತು ಸ್ವತಂತ್ರ ಸಾಮ್ರಾಜ್ಯಗಳು ಭಾರತದ ಮುಖ್ಯ ಭೂಭಾಗದಾದ್ಯಂತ ಹರಡಿರುವ ಅನೇಕ ಭಾಗಗಳಾಗಿ ಒಂದು ವಿಭಜಿತವಾದ ರಾಷ್ಟ್ರವನ್ನು ಅಧಿಕಾರಯುತವಾಗಿ ಪಡೆಯುವ ಸಮಸ್ಯೆಯೊಂದಿಗೆ ಸ್ವಾತಂತ್ರ್ಯದ ಕೊಡಿಗೆಯನ್ನು ಎದುರಿಸುತ್ತಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ, ಹೊಸ ಸರ್ಕಾರವು ಕೇಂದ್ರ ಸರ್ಕಾರದ ಪ್ರಾಮುಖ್ಯತೆಯನ್ನು ಹೊಂದಿರುವ ಮತ್ತು ಸಂವಿಧಾನವನ್ನು ರಚಿಸಿದ ನಂತರ ಅದಕ್ಕೆ ಒಳಪಡುವ ನಿಯಮವನ್ನು ಮುಂದಿಟ್ಟುಕೊಂಡು ರಾಜರ ಆಳ್ವಿಕೆಯ ರಾಜ್ಯಗಳೊಡನೆ ರಾಜಕೀಯ ಮಾತುಕತೆಗಳನ್ನು ಬೆಂಬಲಿಸಿತು. (ಮಿಲಿಟರಿ ಕಾರ್ಯಾಚರಣೆಯ ಆಯ್ಕೆಯೂ ಕೆಲವು ಸಂದರ್ಭಗಳಲ್ಲಿ, ಇತ್ತು). ಸರ್ದಾರ್ ಪಟೇಲ್ ಮತ್ತು ಅವರ ಕಾರ್ಯದರ್ಶಿ ವಿ.ಪಿ.ಮೆನನ್ ಭಾರತ ಒಕ್ಕೂಟಕ್ಕೆ ಸೇರಿಕೊಳ್ಳಲು ಭಾರತಕ್ಕೆ ರಾಜಪ್ರಭುತ್ವದ ರಾಜ್ಯಗಳ ಆಡಳಿತಗಾರರಿಗೆ ಮನವರಿಕೆ ಮಾಡಿದರು. ರಾಜ ಸಂಸ್ಥಾನಗಳ ಆಡಳಿತಗಾರರು, ಅದರಲ್ಲೂ ವಿಶೇಷವಾಗಿ ತಮ್ಮ ವೈಯಕ್ತಿಕ ಆಸ್ತಿಗಳು ಮತ್ತು ಬ್ರಿಟಿಷರು ಗೊತ್ತುಪಡಿಸಿದ್ದ ರಾಜಧನ, ಆಡಳಿತದ ಅನೇಕ ಹಕ್ಕುಗಳು ಮತ್ತು ಸವಲತ್ತುಗಳನ್ನು ಮೊದಲಿನಂತೆ ಕೊಡಲು ಒಪ್ಪಿಕೊಳ್ಳುವುದಾಗಿ ಭರವಸೆ ನೀಡಿದರು. ಅವುಗಳಲ್ಲಿ ಕೆಲವು ವಿಲೀನಗೊಂಡ ರಾಜ್ಯಗಳಿಗೆ ರಾಜರನ್ನು ರಾಜಪ್ರಮುಖ (ಗವರ್ನರ್) ಮತ್ತು ಉಪರಾಜಮುಖ್ (ಉಪ ಗವರ್ನರ್). ಆಗಿ ನೇಮಿಸಲಾಯಿತು. ಅನೇಕ ಸಣ್ಣ ರಾಜ ಸಂಸ್ಥಾನಗಳು ಸೌರಾಷ್ಟ್ರ , ಪಿಪಿಎಸ್ಯು, ವಿಂಧ್ಯಪ್ರದೇಶ ಮತ್ತು ಮಧ್ಯ ಭಾರತ ಮುಂತಾದ ಕಾರ್ಯಸಾಧ್ಯವಾದ ಆಡಳಿತಾತ್ಮಕ ರಾಜ್ಯಗಳನ್ನು ವಿಲೀನಗೊಳಿಸಲಾಯಿತು. ತ್ರಿಪುರಾ ಮತ್ತು ಮಣಿಪುರ ಮುಂತಾದ ಕೆಲವು ಸಂಸ್ಥಾನಗಳು 1949 ರಲ್ಲಿ ವಿಲೀನಗೊಂಡವು..

ಇತರ ರಾಜ್ಯಗಳಿಗಿಂತ ಒಗ್ಗೂಡಿಸಲು ಹೆಚ್ಚು ಕಷ್ಟಕರವಾದ ಮೂರು ರಾಜ್ಯಗಳು:

ಭಾರತ ಗಣರಾಜ್ಯದ ಇತಿಹಾಸ 
ಸೌರಾಷ್ಟ್ರದ ಜುನಾಘಡ್ ರಾಜ್ಯದ ಸ್ಥಳ, ಗುಲಾಬಿ ಬಣ್ಣದಲ್ಲಿ ತೋರಿಸಲಾದ ಎಲ್ಲಾ ರಾಜರ ರಾಜ್ಯಗಳ ಸ್ಥಳ.
ಭಾರತ ಗಣರಾಜ್ಯದ ಇತಿಹಾಸ 
ಹೈದರಾಬಾದ್ ರಾಜವಂಶದ ರಾಜ್ಯ 1909::ಹೈದರಾಬಾದ್ (ಕಡು ಹಸಿರು) ಮತ್ತು ಬೇರಾರ್ ಪ್ರಾಂತ್ಯ ಹೈದರಾಬಾದ್ ರಾಜ್ಯದ ಭಾಗವಲ್ಲ ಆದರೆ ನಿಜಾಮ್ನ ಡೊಮಿನಿಯನ್ 1853 ಮತ್ತು 1903 ರ ನಡುವೆ (ತಿಳಿ ಹಸಿರು).
ಭಾರತ ಗಣರಾಜ್ಯದ ಇತಿಹಾಸ 
ಜಮ್ಮು-ಕಾಶ್ಮೀರ ಪ್ರದೇಶಗಳು; ಪಾಕಿಸ್ತಾನಿ ನಿಯಂತ್ರಣದಲ್ಲಿರುವ ಕಾಶ್ಮೀರದ ಪ್ರದೇಶವನ್ನು ಹಸಿರು ಬಣ್ಣದಲ್ಲಿ ತೋರಿಸುತ್ತಿದೆ; ಚೈನಾದ ಆಡಳಿತದಡಿಯಲ್ಲಿರುವ ಅಕ್ಸಾಯ್ ಚಿನ್ ಭಾಗ ಬಿಳಿ ಪಟ್ಟೆಗಲಿವೆ; ಭಾರತದ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳನ್ನು ಗಾಢ ಕಂದು ಬಣ್ಣ ಪ್ರತಿನಿಧಿಸುತ್ತಿದೆ.
    1.ಜುನಾಗಢ್ (ಮುಸ್ಲಿಂ ನವಾಬೊಂದಿಗೆ ಹಿಂದೂ ಬಹುಸಂಖ್ಯಾತ ರಾಜ್ಯ) (Annexation of Junagadh)-ಜುನಾಗಡದಲ್ಲಿ ಡಿಸೆಂಬರ್ 1947 ರ ಜನಾಭಿಪ್ರಾಯ ಸಂಗ್ರಹವು ಭಾರತದೊಂದಿಗೆ ವಿಲೀನಗೊಳ್ಳಲು 99% ಮತಗಳನ್ನು ಕೊಟ್ಟಿತ್ತು, ಪಾಕಿಸ್ತಾನಕ್ಕೆ ವಿವಾದಾಸ್ಪದವಾಗಿ ವಿಲೀನ ಗೊಳ್ಳುವ ಕ್ರಿಯೆಯನ್ನು ಆರಂಭಿಸಿತು, ನವಾಬನ ಈ ಉದ್ದೇಶವು ಜನರ ಇಚ್ಛೆಗೆ ವಿರುದ್ಧವಾಗಿತ್ತು. ಜುನಾಗಡದ ನವಾಬ, ಮುಹಮ್ಮದ್ ಮಹಾಬತ್ ಖಾಂಜಿ III, ಜುನಾಗಡ ಪಾಕಿಸ್ತಾನದ ಭಾಗವಾಗಬೇಕೆಂದು ನಿರ್ಧರಿಸಿದನು, ಇದು ರಾಜ್ಯದ ಅನೇಕ ಜನರ ಅಸಮಾಧಾನಕ್ಕೆ ಕಾರಣವಾಯಿತು, ಅಲ್ಲಿ ಹೆಚ್ಚಿನವರು ಹಿಂದೂಗಳು. 1947 ರ ಸೆಪ್ಟೆಂಬರ್ 15 ರಂದು ಲಾರ್ಡ್ ಮೌಂಟ್ ಬ್ಯಾಟನ್ ಅವರ ವಿರೋಧದ ನಡುವೆ ನವಾಬ್ ಪಾಕಿಸ್ತಾನದ ಡೊಮಿನಿಯನ್ಗೆ ಜುನಾಗಡ ಸಮುದ್ರದ ಮೂಲಕ ಸೇರಿಕೊಂಡಿದೆ ಎಂದು ವಾದಿಸಿದನು. ಸೆಪ್ಟೆಂಬರ್ 16 ರಂದು ಪಾಕಿಸ್ತಾನವು ನವಾಬರ ಪ್ರವೇಶಪತ್ರವನ್ನು ಒಪ್ಪಿಕೊಂಡಾಗ, ಭಾರತ ಸರ್ಕಾರವು ಮುಹಮ್ಮದ್ ಅಲಿ ಜಿನ್ನಾ ಹಿಂದೂಗಳು ಮತ್ತು ಮುಸ್ಲಿಮರು ಒಂದೇ ರಾಷ್ಟ್ರವಾಗಿ ಬದುಕಲು ಸಾಧ್ಯವಿಲ್ಲ ಎಂಬ ವಾದದ ಹೊರತಾಗಿಯೂ ಬಹುಸಂಖ್ಯಾತ ಹಿಂದು ಜುನಾಗಡದ ಪ್ರವೇಶವನ್ನು ಹೇಗೆ ಒಪ್ಪಿಕೊಳ್ಳಬಹುದು ಎಂದು ಪಟೇಲ್ ಜುನಾಗಡದ ಮೂರು ಪ್ರಭುತ್ವಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಆದೇಶಿಸಿದರು. ನವಾಬನ ಆಡಳಿತ ಆರ್ಥಿಕ ಕುಸಿತವನ್ನು ಎದುರಿಸುತ್ತಿದ್ದು ಮತ್ತು ಭಾರತೀಯ ಬಲವನ್ನು ವಿರೋಧಿಸುವ ಶಕ್ತಿ ಇಲ್ಲದೆಹೋದುದರಿಂದ ಜುನಾಗಡದ ರಾಜ್ಯಸರ್ಕಾರದ ನಿಯಂತ್ರಣವನ್ನು ಭಾರತ ಸರ್ಕಾರ ತೆಗೆದುಕೊಂಡಿತು. ಜನಾಭಿಪ್ರಾಯ ಸಂಗ್ರಹವನ್ನು ಡಿಸೆಂಬರ್‌ನಲ್ಲಿ ನಡೆಸಲಾಯಿತು, ಇದರಲ್ಲಿ ಸುಮಾರು 99.95% ಜನರು ಪಾಕಿಸ್ತಾನಕ್ಕಿಂತ ಭಾರತವನ್ನು ಆರಿಸಿಕೊಂಡರು.
    2.ಹೈದರಾಬಾದ್ (ಹೈದರಾಬಾದ್ ಮುಸ್ಲಿಂ ನವಾಬನೊಂದಿಗೆ ಹಿಂದೂ ಬಹುಮತದ ರಾಜ್ಯ) - 1948 ರ ಸೆಪ್ಟೆಂಬರ್ 13 ರಿಂದ 17 ರವರೆಗೆ ನಡೆದ ಮಾತುಕತೆಗಳ ವಿಫಲತೆಯ ನಂತರ ನಿಜಾಮ್ ಸರ್ಕಾರದ ವಿರುದ್ಧ ಆಪರೇಷನ್ ಪೊಲೊ ಎಂಬ ಹೆಸರಿನ ಕಾರ್ಯಾಚರಣೆ ನೆಡೆಸಲು ಪಟೇಲ್ ಭಾರತೀಯ ಸೈನ್ಯಕ್ಕೆ ಆದೇಶ ನೀಡಿದರು. ದಿ. 13 -17 ಸೆಪ್ಟಂಬರ್ 1948ರಲ್ಲಿ ಕಾರ್ಯಾಚರಣೆ ನೆಡೆದು ಮಾರನೇ ವರ್ಷ ಭಾರತದ. ಸರ್ಕಾರಕ್ಕೆ ರಾಜ್ಯವು ವಿಲೀನಗೊಂಡಿತು.
    3.ಉಪಖಂಡದ ಉತ್ತರದ ಉತ್ತರದಲ್ಲಿ ಕಾಶ್ಮೀರ ಪ್ರದೇಶ (ಹಿಂದೂ ರಾಜನೊಂದಿಗೆ ಮುಸ್ಲಿಂ ಬಹುಮತದ ರಾಜ್ಯ) ತ್ವರಿತವಾಗಿ ವಿವಾದದ ಒಂದು ಮೂಲವಾಯಿತು, ಅದು ಮೊದಲ ಇಂಡೋ-ಪಾಕಿಸ್ತಾನಿ ಯುದ್ಧಕ್ಕೆ 1947 ರಿಂದ 1949 ರವರೆಗೆ ನಡೆದು ಕೊನೆಗೊಂಡಿತು. ಅಂತಿಮವಾಗಿ ವಿಶ್ವಸಂಸ್ಥೆ (ಯುನೈಟೆಡ್ ನೇಷನ್ಸ್) ಮೇಲ್ವಿಚಾರಣೆಯಲ್ಲಿ ಕದನ ವಿರಾಮ ಏರ್ಪಟ್ಟಿತು. ಭಾರತ ಅಪೇಕ್ಷಿಸಿದ ಮೂರನೇ ಎರಡರಷ್ಟು ಪ್ರದೇಶದ ನಿಯಂತ್ರಣವನ್ನು ಭಾರತದ ಸ್ವಾಧೀನ ಇದೆ ಎಂದು ವಿಶ್ವಸಂಸ್ಥೆ ಒಪ್ಪಿಕೊಂಡಿತು. ಜವಾಹರಲಾಲ್ ನೆಹರು ಪ್ರಾರಂಭದಲ್ಲಿ ಮೌಂಟ್ ಬ್ಯಾಟನ್ನರ ಪ್ರಸ್ತಾಪಕ್ಕೆ ಒಪ್ಪಿಕೊಂಡರು, ಪಾಕಿಸ್ತಾನವು ಆಕ್ರಮಿತ ಪ್ರದೇಶವನ್ನು ತೆರವುಗೊಳಿಸಿ, ಇಡೀ ಪ್ರದೇಶದಲ್ಲಿ ಶಾಂತಿ ನೆಲಸಿದ ಕೂಡಲೆ ಸಂಪೂರ್ಣ ಜನಾಭಿಪ್ರಾಯವನ್ನು ಪಡೆದು ಅದರಂತೆ ನೆಡೆಯತಕ್ಕದ್ದು; ಅನಂತರ, ಯುಎನ್-ಪ್ರಾಯೋಜಿತ ಕದನ-ವಿರಾಮವನ್ನು ಎರಡೂ ಪಕ್ಷಗಳು 1 ಜನವರಿ 1949 ರಂದು ಒಪ್ಪಿಗೆ ನೀಡಿದವು. ಆದಾಗ್ಯೂ, ರಾಜ್ಯವ್ಯಾಪಿ ಜನಾಭಿಪ್ರಾಯ ಸಂಗ್ರಹವಾಗಲಿಲ್ಲ, 1954 ರಲ್ಲಿ, ಪಾಕಿಸ್ತಾನ ಅಮೇರಿಕದಿಂದ ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳಲು ಪ್ರಾರಂಭಿಸಿದ ನಂತರ, ಮತ್ತು ಪಾಕಿಸ್ತಾನವು ಆಕ್ರಮಿಸಿಕೊಂಡ ಪ್ರದೇಶವನನ್ನು ತೆರವುಗೊಳಿಸಲು ಒಪ್ಪದಿರುವುದರಿಂದಲೂ, ಭಾರತವು ತನ್ನ ಪ್ರದೇಶದಲ್ಲಿ ಚುನಾವಣೆ ನೆಡೆಸಿರುವುದರಿಂದಲೂ ನೆಹರು ತನ್ನ ಜನಾಭಿಪ್ರಾಯದ ವಚನವನ್ನು ಹಿಂತೆಗೆದುಕೊಂಡರು. 1950 ರ ಜನವರಿ 26 ರಂದು ಕಾಶ್ಮೀರದಲ್ಲಿ ಆ ರಾಜ್ಯದ ಸಂವಿಧಾನದೊಂದಿಗೆ ಭಾರತದ ಸಂವಿಧಾನವು ಜಾರಿಗೆ ಬಂದಿತು.

ಭಾರತದ ಸಂವಿಧಾನ

ಮುಖ್ಯ ಲೇಖನ: ಭಾರತದ ಸಂವಿಧಾನ

ಭಾರತ ಗಣರಾಜ್ಯದ ಇತಿಹಾಸ 
ದಿ.25 ನವೆಂಬರ್ 1949 ರಂದು ರಾಜೇಂದ್ರ ಪ್ರಸಾದ್ ಅವರಿಗೆ 'ಭಾರತೀಯ ಸಂವಿಧಾನದ ಅಂತಿಮ ಕರಡ'ನ್ನು ಕೊಟ್ಟು, ಅದನ್ನು ಸಭೆಯಲ್ಲಿ ಮಂಡಿಸುತ್ತಿರುವ, ಕರಡು-ಸಮಿತಿಯ ಅಧ್ಯಕ್ಷ ಡಾ.ಅಂಬೇಡ್ಕರ್. ಆ ಸಂವಿಧಾನದ ಕರಡು ದಿ.26 ರಂದು ಅಂಗೀಕಅರವಾಯಿತು.
  • 1949 ರ ನವೆಂಬರ್ 26 ರಂದು ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಮಿತಿಯೊಂದರಿಂದ ರಚಿಸಲ್ಪಟ್ಟು ಸಂವಿಧಾನ ಸಭೆಯಲ್ಲಿ ಒಪ್ಪಿತವಾದ ಕರಡು ಸಂವಿಧಾನವನ್ನು ಸಂವಿಧಾನ ಸಬೆಯು (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯು) ಆ ಭಾರತದ ಸಂವಿಧಾನವನ್ನು ಅಂಗೀಕರಿಸಿತು. 1950 ರ ಜನವರಿ 26 ರಂದು ಆ ಸಂವಿಧಾನವು ಜಾರಿಗೆ ಬಂದ ನಂತರ ಭಾರತವು ಸಾರ್ವಭೌಮ ಪ್ರಜಾಪ್ರಭುತ್ವವಾದಿ ಗಣರಾಜ್ಯವಾಯಿತು. ಡಾ. ರಾಜೇಂದ್ರ ಪ್ರಸಾದ್ ಮೊದಲ ಭಾರತದ ರಾಷ್ಟ್ರಾಧ್ಯಕ್ಷರಾದರು. ಭಾರತದಲ್ಲಿ. 'ಸಮಾಜವಾದಿ', 'ಜಾತ್ಯತೀತ' ಮತ್ತು 'ಸಮಗ್ರತೆ' ಎಂಬ ಮೂರು ಪದಗಳನ್ನು ನಂತರದಲ್ಲಿ 42 ನೇ ಸಂವಿಧಾನದ ತಿದ್ದುಪಡಿಯನ್ನು 1976 ರಲ್ಲಿ ಸೇರಿಸಲಾಯಿತು.
  • ಭಾರತದ್ದು ಲಿಖಿತ ಹಾಗೂ ಅಧಿನಿಯಮಿತ ಸಂವಿಧಾನ. ನ್ಯಾಯ, ಸ್ವಾತಂತ್ರ್ಯ ಸಮತೆ ಮತ್ತು ಭ್ರಾತೃಭಾವಗಳ ಅತ್ಯುಚ್ಚ ಆದರ್ಶ ಮತ್ತು ಧ್ಯೇಯ ಒಳಗೊಂಡಿರುವ ಭಾರತದ ಸಂವಿಧಾನದ ಪ್ರಸ್ತಾವನೆಯು ಮೂಲದಲ್ಲಿ ಕೆಳಗಿನಂತಿತ್ತು:
      "ಭಾರತದ ಜನಗಳಾದ ನಾವು ಭಾರತವನ್ನು ಒಂದು ಸಂಪೂರ್ಣ ಪ್ರಭುತ್ವ ಸಂಪನ್ನ ಲೋಕತಂತ್ರಾತ್ಮಕ ಗಣರಾಜ್ಯವಾಗಿ ವ್ಯವಸ್ಥೆಗೊಳಿಸುವುದಕ್ಕಾಗಿಯೂ ಭಾರತದ ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ, ನ್ಯಾಯ ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮೋಪಾಸನಾಸ್ವಾತಂತ್ರ್ಯ ಹಾಗೂ ಸ್ಥಾನಮಾನ ಮತ್ತು ಅವಕಾಶಸಮತೆ ದೊರೆಯುಂತೆ ಮಾಡುವುದಕ್ಕಾಗಿಯೂ ವ್ಯಕ್ತಿಗೌರವ ರಾಷ್ಟ್ರದ ಏಕತೆ ಸುನಿಶ್ಚಿತವಾಗಿ ನೆಲೆಗೊಳಿಸುವಂಥ ಬಂಧು ಭಾವನೆ ಇವನ್ನು ಸರ್ವರಲ್ಲಿ ವೃದ್ಧಿಗೊಳಿಸುವುಕ್ಕಾಗಿಯೂ ದೃಢಸಂಕಲ್ಪಮಾಡಿದವರಾಗಿ ನಮ್ಮ ಸಂವಿಧಾನ ಸಭೆಯಲ್ಲಿ ಈ 1949ನೆಯ ಇಸವಿ ನವೆಂಬರ್ ತಿಂಗಳು ಇಪ್ಪತ್ತಾರನೆಯ ತಾರೀಕಾದ ಇಂದಿನ ದಿವಸ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿತಗೊಳಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ."
      "1976ರಲ್ಲಿ ಆದ 42ನೆಯ ತಿದ್ದುಪಡಿಯಿಂದ ಪ್ರಸ್ತಾವನೆಯಲ್ಲಿ 'ಸಂಪೂರ್ಣ ಪ್ರಭುತ್ವಸಂಪನ್ನ ಲೋಕತಂತ್ರಾತ್ಮಕ ಗಣರಾಜ್ಯ ಎಂಬ ವಾಕ್ಯಭಾಗದ ಸ್ಥಾನದಲ್ಲಿ 'ಸಂಪೂರ್ಣ ಪ್ರಭುತ್ವಸಂಪನ್ನ ಸಮಾಜವಾದಿ, ಧರ್ಮಾತೀತ ಲೋಕ ತಂತ್ರಾತ್ಮಕ ಗಣರಾಜ್ಯ ಎಂಬ ವಾಕ್ಯಭಾಗವನ್ನೂ 'ರಾಷ್ಟ್ರದ ಏಕತೆ ಎಂಬ ಪದಗಳ ಸ್ಥಾನದಲ್ಲಿ 'ರಾಷ್ಟ್ರದ ಏಕತೆ ಮತ್ತು ಅಖಂಡತೆ ಎಂಬ ಪದಗಳನ್ನೂ ಸೇರಿಸಲಾಗಿದೆ."
  • (೨೦೧೮) ಸಂವಿಧಾನವು ಪೂರ್ವಭಾವಿಯಾಗಿ ಮತ್ತು 448 ಲೇಖನಗಳನ್ನು ಹೊಂದಿದೆ, ಇವು 25 ಭಾಗಗಳಾಗಿ ವರ್ಗೀಕರಿಸಲ್ಪಟ್ಟಿವೆ. 12 ವೇಳಾಪಟ್ಟಿಗಳೊಂದಿಗೆ ಮತ್ತು ಐದು ಅನುಬಂಧಗಳನ್ನಹೊಂದಿದ್ದು, 101 ಬಾರಿ ತಿದ್ದುಪಡಿ ಮಾಡಲಾಗಿದೆ; ಇತ್ತೀಚಿನ ತಿದ್ದುಪಡಿ ಜುಲೈ 1, 2017 ರಂದು ಪರಿಣಾಮಕಾರಿಯಾಯಿತು.

1947-1948ರ ಭಾರತ-ಪಾಕಿಸ್ತಾನಿ ಯುದ್ಧ

  • ಮೊದಲ ಪ್ರಧಾನಿ;ಜವಾಹರಲಾಲ್ ನೆಹರು;(ನವೆಂಬರ್ 14, 1889 - ಮೇ 27, 1964)::ಆಗಸ್ಟ್ 15, 1947 ರಿಂದ ಮೇ 27, 1964 (ಕಾಂಗ್ರೆಸ್ ಪಕ್ಷ)
  • ಅಧ್ಯಕ್ಷರು:ರಾಜೇಂದ್ರ ಪ್ರಸಾದ್-(1884-1963) ಡಾ. ರಾಜೇಂದ್ರ ಪ್ರಸಾದ್ (ಚುನಾಯಿತ:1952 ರಿಂದ 1957 ಮತ್ತು 1962);ಅಧಿಕಾರ: ದಿ. 26 ಜನವರಿ 1950 ರಿಂದ 12 ಮೇ 1962; 120 ತಿಂಗಳು.(ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಮುಖ್ಯ ಲೇಖನ: 1947 ರ ಭಾರತ-ಪಾಕಿಸ್ತಾನಿ ಯುದ್ಧ

  • 1947-1948ರ ಇಂಡೋ-ಪಾಕಿಸ್ತಾನಿ ಯುದ್ಧವು ಕಾಶ್ಮೀರ ಮತ್ತು ಜಮ್ಮು ರಾಜ್ಯದ ರಾಜಧಾನಿಯಾದ 1947 ರಿಂದ 1948 ರವರೆಗೂ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆಯಿತು. ಇದು ಎರಡು ಹೊಸ ಸ್ವತಂತ್ರ ರಾಷ್ಟ್ರಗಳ ನಡುವೆ ನಡೆದ ನಾಲ್ಕು ಇಂಡೋ-ಪಾಕಿಸ್ತಾನದ ಯುದ್ಧಗಳಲ್ಲಿ ಮೊದಲನೆಯದು.
  • ಆಪರೇಷನ್ ಗುಲ್ಮಾರ್ಗ್(ಪಾಕಿಸ್ತಾನ)
  • ಪೀರ್‍ಪಂಜಾಲ್ ನೈರುತ್ಯಕ್ಕೆ ಜಮ್ಮು ಇದೆ; ಪರ್ವತಗಳ ಮಧ್ಯೆ ಕಣಿವೆ ಇದೆ. ಉತ್ತರದಲ್ಲಿ ಕಾರಕೋರಮ್ ಮತ್ತು ಹಿಮಾಲಯ ಶ್ರೇಣಿಗಳ ಮಧ್ಯೆ ಗಿಲ್ಗಿಟ್, ಹ್ಟ್ನ್ಸಾ, ಬಾಲ್ಟಿಸಾನ್‍ಗಳೂ ಪೂರ್ವಕ್ಕೆ ಲದ್ದಾಕ್ ಇವೆ. ಸರ್ವಋತು ರಸ್ತೆಯೊಂದು ಪಠಾಣಕೋಟದಿಂದ ಶ್ರೀನಗರದವರೆಗೆ ಬನಿಹಾಲ್ ಪಾಸ್ ಕಣಿವೆ ಮೂಲಕ ಇದೆ. ಮನಾಲಿ ಮತ್ತು ಲೇಹ್‍ಗಳ ನಡುವೆ ವ್ಯಾಪಾರ ವಹಿವಾಟು ನಡೆಯುವ ರಸ್ತೆ ಇದು. ಆದರೆ ಇವೆಲ್ಲಾ ಪಾಕಿಸ್ತಾನಕ್ಕೆ ಸೇರಿದೆ. ಈ ಭೌಗೋಳಿಕ ಕಾರಣಗಳನ್ನೊಡ್ಡಿ ಪಾಕಿಸ್ತಾನ "ಆಪರೇಷò ಗುಲ್ಮಾರ್ಗ್" ನಡೆಸಿ ಕಾಶ್ಮೀರವನ್ನು ಕಬಳಿಸಲು ಪ್ರಯತ್ನಿಸಿತು.

ಜಮ್ಮು ಕಾಶ್ಮೀರದ ಮೇಲೆ ಪಾಕಿಸ್ತಾನದ ಆಕ್ರಮಣ

ಭಾರತ ಗಣರಾಜ್ಯದ ಇತಿಹಾಸ 
1947 ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಭಾರತೀಯ ಯೋಧರು.
  • ಕಾಶ್ಮೀರದ ಮಹಾರಾಜಾ ಹರಿಸಿಂಗ್ ವಿರುದ್ಧ ದಂಗೆ ಎಬ್ಬಿಸಿ ಅದನ್ನೇ ನೆಪ ಒಡ್ಡಿ ಬಲಹೀನನಾಗಿದ್ದ ಅವರಿಂದ ಉತ್ತರದ ಪ್ರದೇಶಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದು. ಕಾಶ್ಮೀರ ಕಣಿವೆಯೊಳಕ್ಕೂ ಜಮ್ಮುವಿನೊಳಕ್ಕೂ ನುಗ್ಗಿ ವೇಷ ಮರೆಸಿಕೊಂಡು ಗುಡ್ಡಗಾಡು ಜನರಂತೆ ಓಡಾಡುತ್ತ. ರಜೆಯ ಮೇಲಿದ್ದ ಪಾಕಿಸ್ತಾನಿ ಸೈನಿಕರಿಂದ ತೊಂದರೆಗೊಳಗಾಗಿದ್ದ ಗಡಿಜನರನ್ನು ವಾಯುವ್ಯ ಗಡಿಯ ಗಿರಿಜನರನ್ನು ಕಲೆಹಾಕಿ ಸಣ್ಣ ತುಕಡಿಗಳನ್ನಾಗಿ ಮಾಡುವುದು.ಗುಡ್ಡಗಾಡು ಲಷ್ಕರಿಗಳಿಗೆ ಶಸ್ತ್ರಾಸ್ತ್ರ ಒದಗಿಸುವುದು. ಅವರ ಬಂಧುಗಳನ್ನು ಬಿಡಿಸಿಕೊಳ್ಳಲು ಸಹಾಯ ಮಾಡುವುದು ಇತ್ಯಾದಿ ಉಪಾಯಗಳನ್ನು ಪಾಕಿಸ್ತಾನ ಬಳಸಿತು.(ಭಾರತ ವಿಭಜನೆಯ 'ಕ್ಯಾಬಿನೆಟ್ ಮಿಶನ್ ಪ್ಲಾನ್' ಅನ್ವಯ ಮುಸ್ಲಿಮ ಬಹುಮತವುಳ್ಳ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರಿದ್ದವು. ಅದೇ ರೀತಿ ಮುಸ್ಲಿಂ ಬಹುಮತದ ಕಾಶ್ಮೀರ ರಾಜ್ಯ ತನಗೆ ಸೇರಬೇಕೆಂಬುದು ಪಾಕಿಸ್ತಾನದ ಆಶಯವಾಗಿತ್ತು. ಆದರೆ ವಿಬಜನೆಯ ಯೋಜನೆಯಲ್ಲಿ ಆಯಾ ರಾಜ್ಯದ ರಾಜರಿಗೆ ಭಾರತ ಅಥವಾ ಪಾಕಿಸ್ತಾನದೊಡನೆ ಸೇರಲು ಸ್ವಾತಂತ್ರ್ಯವನ್ನು ನೀಡಲಾಗಿತ್ತು.)
  • 30-07-1947 ಉತ್ತರ ಭಾಗಗಳನ್ನು ಆಕ್ರಮಿಸಿದ ಪಾಕಿಸ್ತಾನ ಅನೌಪಚಾರಿಕವಾಗಿ ತನ್ನ ಬಾವುಟ ಹಾರಿಸಿತು. ಶ್ರೀನಗರದಿಂದ 50 ಕಿ.ಮೀ. ದೂರದಲ್ಲಿದ್ದ ಬಾರಾಮುಲ್ಲಾದಲ್ಲಿ ಮಹಾರಾಜ ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ 80,000 ಯೋಧರು ಒಂದು ವರ್ಷದವರೆಗೆ ಜಮ್ಮುವಿನಲ್ಲಿ ಹೋರಾಡಿ ಮುಖ್ಯ ಪ್ರದೇಶಗಳನ್ನು ಹಿಂದಕ್ಕೆ ತೆಗೆದುಕೊಂಡದು. ಮೇಜರ್ ಸೋಮನಾಥ ಶರ್ಮಾಗೆ ಪರಮವೀರ ಚಕ್ರ, (ಪಿ.ವಿ.ಸಿ.) ಗೌರವಗಳು, ಬ್ರಿಗೇಡಿಯರ್ ಉಸ್ಮಾನ್‍ಗೆ ಮಹಾವೀರ ಚಕ್ರ (ಎಂ.ವಿ.ಸಿ.) ಮರಣಾನಂತರ ದೊರಕಿದವು. 1948 ಫೆಬ್ರುವರಿ ಪಾಕಿಸ್ತಾನ "ಆಪರೇಷನ್ ಸ್ಲೆಡ್ಜ್" ದಾಳಿ ಆರಂಭಿಸಿತು. ಸಿಂಧು ನದಿಯನ್ನು ದಾಟಲಾಗದಿದ್ದರಿಂದ ಮತ್ತು ವಿಪರೀತ ಚಳಿಯ ದೆಸೆಯಿಂದ ಭಾರತ ಇದನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ದಾಳಿಯನ್ನು ಗ್ರೇಟ್ ಹಿಮಾಲಯನ್ ರೇಂಜ್‍ವರೆಗೆ ಮಾತ್ರ ತಡೆಯಲು ಸಾಧ್ಯವಾಯಿತು. ಗುಡ್ಡಗಾಡು ಜನರನ್ನು ಸೈನ್ಯಕ್ಕೆ ಸೇರಿಸಿಕೊಂಡು ಲೇಹ್ ಮಾತ್ರ ಉಳಿಸಿಕೊಳ್ಳಲಾಯಿತು. 1-11-48 ರಂದು ಇಂಡಿಯನ್ ಬ್ರಿಗೇಡ್ ಟ್ರೂಪ್ ಜೋಜಿಲಾ ಮೂಲಕ ಹಿಮಾಲಯ ಶ್ರೇಣಿಯನ್ನು ಭೇದಿಸಿ ಲಡ್ಡಾಕ್‍ನಿಂದ ಆಕ್ರಮಣಕಾರರನ್ನು ಹೊಡೆದೋಡಿಸಿತು. ಸಮುದ್ರಮಟ್ಟದಿಂದ ಸುಮಾರು 3,500 ಮೀಟರ್ ಎತ್ತರದಲ್ಲಿ ಟ್ಯಾಂಕ್‍ಗಳನ್ನು ಬಳಸಲಾಯಿತು. ಕದನ ವಿರಾಮ 1-1-1949ರಂದು ಕದನವಿರಾಮ ಘೋಷಿಸಲಾಯಿತು. ಚಾಂಬ್‍ನಿಂದ ಲಡಾಕ್ ಬಳಿಯ ಎನ್‍ಜೆ9 842 ಬಿಂದುವಿನವರೆಗೆ 700 ಕಿ.ಮೀ. ಉದ್ದದ ಗಡಿಯನ್ನು ಗುರುತಿಸಿ ರಕ್ಷಿಸಿಕೊಂಡು ಬರಲಾಗಿದೆ. "ಪಾಕ್ ಆಕ್ರಮಿತ ಕಾಶ್ಮೀರ" (ಪಿ.ಓ.ಕೆ/ POK) ಪ್ರಶ್ನೆಗೆ ಇನ್ನೂ ತೀರ್ಪು ಕಾಣದೆ ಇನ್ನೂ ಪರಿಹಾರವಾಗಿಲ್ಲ.
  • ವಿಶ್ವಸಂಸ್ಥೆಯ ಪ್ರವೇಶ:
ಭಾರತ ಗಣರಾಜ್ಯದ ಇತಿಹಾಸ 
ಭಾರತ ಸೈನ್ಯ ನಿಯಂತ್ರಣ ರೇಖೆಯವರೆಗೆ ಚಲಿಸಿತು. 27 ನವೆಂಬರ್ 1948 - 31 ಡಿಸೆಂಬರ್ 1948
  • ದೀರ್ಘಕಾಲದ ಮಾತುಕತೆಗಳ ನಂತರ ಕದನ-ವಿರಾಮಕ್ಕೆ ಎರಡೂ ದೇಶಗಳಿಂದ ಒಪ್ಪಿ, ಅದು ಜಾರಿಗೆ ಬಂದಿತು. 1948 ರ ಆಗಸ್ಟ್ 13 ರ ವಿಶ್ವಸಂಸ್ಥೆಯ ತೀರ್ಮಾನರಲ್ಲಿ ಹಾಕಲ್ಪಟ್ಟ ಕದನ ವಿರಾಮದ ನಿಯಮಗಳನ್ನು ಯು.ಎನ್. 5 ಜನವರಿ 1949 ರಂದು ಅಂಗೀಕರಿಸಿತು. ಇದು ಪಾಕಿಸ್ತಾನ ತನ್ನ ಪಡೆಗಳನ್ನು ನಿಯಮಿತ ಮತ್ತು ಅನಿಯಮಿತವಾಗಿ ಕೆಲವು ಭಾಗದಿಂದ ಹಿಂತೆಗೆದುಕೊಳ್ಳುವಂತೆ ಮಾಡಿತು. ಆದರೆ ಭಾರತಕ್ಕೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ರಾಜ್ಯದಲ್ಲಿ ಕನಿಷ್ಠ ಸೈನ್ಯಶಕ್ತಿಗಳನ್ನು ಇರಿಸಿಕೊಳ್ಳುವುದು, ಮೊದಲಾದ ಈ ಷರತ್ತುಗಳ ಅನುಸಾರ ಪ್ರಾಂತ್ಯದ ಭವಿಷ್ಯವನ್ನು ನಿರ್ಧರಿಸಲು ಜನಾಭಿಪ್ರಾಯ ಸಂಗ್ರಹಣೆ ನಡೆಸಲು ಹೇಳಿತು. ಭಾರತೀಯ ನಷ್ಟಗಳು 1,104 ಮಂದಿ ಮತ್ತು 3,154 ಮಂದಿ ಗಾಯಗೊಂಡರು, ಆದರೆ ಪಾಕಿಸ್ತಾನಕ್ಕೆ ಸೈನಿಕರ ನಷ್ಟ 6,000 ಮಂದಿ ಆಗಿತ್ತು ಮತ್ತು 14,000 ಮಂದಿ ಗಾಯಗೊಂಡರು. ಕಾಶ್ಮೀರದಲ್ಲಿ ಮೂರನೇ ಎರಡು ಭಾಗದಷ್ಟರಲ್ಲಿ ಭಾರತವು ನಿಯಂತ್ರಣ ಸಾಧಿಸಿತು, ಆದರೆ ಪಾಕಿಸ್ತಾನವು ಕಾಶ್ಮೀರದ ಮೂರನೇ ಒಂದು ಭಾಗವನ್ನು ಪಡೆಯಿತು. ಕಾಶ್ಮೀರ ಕಣಿವೆ, ಜಮ್ಮು ಮತ್ತು ಲಡಾಖ್ ಸೇರಿದಂತೆ ಕಾಶ್ಮೀರದ ಮೂರರಲ್ಲಿ ಎರಡು ಭಾಗದಷ್ಟು ಪ್ರದೇಶವನ್ನು ಯಶಸ್ವಿಯಾಗಿ ರಕ್ಷಿಸಿಕೊಳ್ಳಲು ಸಾಧ್ಯವಾಗಿದ್ದು ಭಾರತವು ಯುದ್ಧದಲ್ಲಿ ವಿಜಯಶಾಲಿಯಾಯಿತು ಎಂದು ಹೆಚ್ಚಿನ ತಟಸ್ಥ ಮೌಲ್ಯಮಾಪನಗಳು ಒಪ್ಪಿಕೊಂಡಿವೆ.

1950 ಮತ್ತು 1960 ನೆಹರೂ ಯುಗ

ಭಾರತ ಗಣರಾಜ್ಯದ ಇತಿಹಾಸ 
ಜವಾಹರಲಾಲ್ ನೆಹರು, ಭಾರತದ ಪ್ರಧಾನಿ.ಇವರ ಕಾಲದಲ್ಲಿ ಭಾರತವು ಒಂದು ವಸಾಹತು ರಾಜ್ಯದಿಂದ ಒಂದು ಗಣರಾಜ್ಯಕ್ಕೆ ಪರಿವರ್ತನೆ ಆಯಿತು, ಆವರು ಅದನ್ನು, ಬಹು ಪಕ್ಷದ ಪ್ರಜಾತಂತ್ರವನ್ನು (ಮಲ್ಟಿ-ಪಾರ್ಟಿ ಸಿಸ್ಟಮ್) ಪೋಷಣೆ ಮಾಡಿ, ಅದರ ಪೋಷಣೆ ಮಾಡಿದರು. ವಿದೇಶಿ ನೀತಿಯಲ್ಲಿ, ಅವರು ಅಲಿಪ್ತ ನೀತಿ ಚಳವಳಿಯನ್ನ ಅನುಸರಿಸಿ ಅದರಲ್ಲಿ ಪ್ರಮುಖ ಪಾತ್ರ ವಹಿಸಿದರು, ಮತ್ತು ದಕ್ಷಿಣ ಏಷ್ಯಾದಲ್ಲಿನ ಪ್ರಾದೇಶಿಕ ಪ್ರಮುಖ ನೇತಾರರಾಗಿ ಭಾರತವನ್ನು ಯೋಜಿಸಿ ಮುನ್ನಡೆಸಿದರು.
  • ಜವಾಹರಲಾಲ್ ನೆಹರು ಅವರು ಭಾರತದ ಮೊದಲ ಪ್ರಧಾನಿ. ಭಾರತವು ಒಂದು ವಸಾಹತು ಪ್ರದೇಶವಾಗಿದ್ದ ಸ್ಥಿತಿಯಿಂದ ಗಣರಾಜ್ಯವಾಗುವ ವರೆಗೆ ಪರಿವರ್ತಿತವಾದುದಕ್ಕೆ ಸಾಕ್ಷಿಯಾಗಿದ್ದಾರೆ, ಅವರು ಬಹುಮುಖ ವಿಚಾರದ, ಬಹು- ಪಕ್ದದ ವ್ಯವಸ್ಥೆಯನ್ನು (ಮಲ್ಟಿ-ಪಾರ್ಟಿ ಸಿಸ್ಟಮ್) ಪೋಷಿಸಿದರು. ವಿದೇಶಿ ನೀತಿಯಲ್ಲಿ, ಅವರು ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಪ್ರಮುಖವ್ಯಕಿಯಾಗಿ ಭಾರತವನ್ನು ಅಲಿಪ್ತ ಚಳವಳಿಯಲ್ಲಿ (ವಿದೇಶ ನೀತಿಯಲಿ)್ಲ ಉನ್ನತವಾಗಿ ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
  • ಭಾರತವು 1952 ರಲ್ಲಿ ಸಂವಿಧಾನದ ಅಡಿಯಲ್ಲಿ ತನ್ನ ಮೊದಲ ರಾಷ್ಟ್ರೀಯ ಚುನಾವಣೆಯನ್ನು ನಡೆಸಿತು, ಅದರಲ್ಲಿ 60% ನಷ್ಟು ಮತದಾನವನ್ನು ದಾಖಲಿಸಲಾಯಿತು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಅಗಾಧ ಬಹುಮತವನ್ನು ಗಳಿಸಿತು ಮತ್ತು ಜವಾಹರಲಾಲ್ ನೆಹರು ಎರಡನೆಯ ಅವಧಿಗೆ ಪ್ರಧಾನಿಯಾಗಿ ಆಡಲಿತವನ್ನು ಪ್ರಾರಂಭಿಸಿದರು. ಭಾರತದ ಮೊದಲ ಸಂಸತ್ತಿನ ಚುನಾವಣಾ ಕಾಲೇಜು ಮತದಾನದಲ್ಲಿ ಎರಡನೆಯ ಅವಧಿಗೂ ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾಗಿ ಚುನಾಯಿತರಾದರು.

ಕಾಶ್ಮೀರ ನೀತಿ

    ೧೯೪೭ ರಲ್ಲಿ ದೇಶ ತುಂಭಾ ಹೀನ ಸ್ಥತಿಯಲ್ಲಿತ್ತು. ಆಗಷ್ಟೆ ಎರಡನೆ ಮಹಾಯುದ್ಧ ಮುಗಿದು ಜಗತ್ತಿನ ಆರ್ತಿಕ ಸ್ಥಿತಿ ಬಿಕ್ಕಟ್ಟಿನಲ್ಲಿತ್ತು. ಭಾರತಕ್ಕೆ ಪಾಕಿಸ್ತಾನದಿಂದ ೫೦- ೬೦ ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರು ಬರಿಗೈಯಲ್ಲಿ ಬಂದಿದ್ದರು. ಅವರ ಕುಟುಂಬ ಸದಸ್ಯರು ಕಳೆದು ಹರಿದು ಹಂಚಿಹೋಗಿದ್ದರು ಅವರನ್ನು ಒಟ್ಟುಗೂಡಿಸಿ ಸುಸ್ಥಿತಿಗೆ ತರಬೇಕಿತ್ತು. ದೇಶದ ಅಭಿವೃದ್ಧಿಗೆ ಹೇರಳ ಹಣಕಾಸಿನ, ಬಂಡವಾಳದ ಅಗತ್ಯವಿತ್ತು. ದೇಶ ಪದೇ ಪದೇ ಕ್ಷಾಮ ಪ್ರವಾಹಗಳಿಗೆ ಒಳಗಾಗುತ್ತಿತ್ತು. ಪಾಕಿಸ್ತಾನ ಅದೇ ಸಮಯದಲ್ಲಿ ಕಾಶ್ಮೀರದ ಮೇಲೆ ಧಾಳಿಮಾಡಿತು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಭಾರತದ ಸರ್ವತೋಮುಖದ ಅಭಿವೃದ್ಧಿ ಸಾಧಿಸಬೇಕಿತ್ತು. ಪಾಕಿಸ್ತಾನ ಕಾಶ್ಮೀರದಲ್ಲಿ ಧಾಳಿಮಾಡಿದ ನಂತರ ಸತತ ಬರಗಾಲ ಪೀಡಿತವಾಗಿದ್ದ ಭಾರತ ಸತತಯುದ್ಧ ಅಥವಾ ಅಭಿವೃದ್ಧಿ ಈ ಎರಡರಲ್ಲಿ ಒಂದನ್ನು ಆಯ್ದು ಕೊಳ್ಳಬೇಕಿತ್ತು. ಆ ನಂತರ ಬಂದ ಎಲ್ಲಾ ಪ್ರಧಾನಿಗಳೂ ಪಾಕಿಸ್ತಾನದೊಡನೆ ಸ್ನೇಹ ಸಂಬಂದವನ್ನು ಬೆಳೆಸುವ ನೀತಿಯನ್ನೇ ಮೊದಲು ಅನುಸರಿಸಿದರು.
  • 1998 ರ ಕೊನೆಯಲ್ಲಿ ಮತ್ತು 1999 ರ ಆರಂಭದಲ್ಲಿ, ವಾಜಪೇಯಿ ಪಾಕಿಸ್ತಾನದೊಂದಿಗೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ಶಾಂತಿ ಪ್ರಕ್ರಿಯೆಗೆ ಮುಂದಾದರು. ಫೆಬ್ರವರಿ 1999 ರಲ್ಲಿ ದೆಹಲಿ-ಲಾಹೋರ್ ಬಸ್ ಸೇವೆಯ ಐತಿಹಾಸಿಕ ಉದ್ಘಾಟನೆಯೊಂದಿಗೆ, ವಾಜಪೇಯಿ ಕಾಶ್ಮೀರ ವಿವಾದ ಮತ್ತು ಪಾಕಿಸ್ತಾನದೊಂದಿಗಿನ ಇತರ ಸಂಘರ್ಷಗಳನ್ನು ಶಾಶ್ವತವಾಗಿ ಪರಿಹರಿಸುವ ಉದ್ದೇಶದಿಂದ ಹೊಸ ಶಾಂತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಪರಿಣಾಮವಾಗಿ "ಲಾಹೋರ್ ಘೋಷಣೆ" Lahore Declaration ಸಂಭಾಷಣೆಗೆ ಬದ್ಧತೆಯನ್ನು ನೀಡಿತು, ಆದರೆ ಅದೇ ಸಮಯದಲ್ಲಿ ಪಾಕಿಸ್ತಾನದ ಸೇನೆ ಕಾರ್ಗಿಲ್‍ನಲ್ಲಿ ಒಳನುಸುಳುತ್ತಿತ್ತು.
  • ವಾಜಪೇಯಿ ಅವರು 2001, ಜುಲೈ 14-16ರಂದು ಪಾಕಿಸ್ತಾನದೊಂದಿಗೆ ಮಾತುಕತೆ ಪ್ರಾರಂಭಿಸಿದರು ಮತ್ತು ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಆಗ್ರಾಕ್ಕೆ ಜಂಟಿ ಶೃಂಗಸಭೆ,(Agra summit) ಆಗ್ರಾ ಶೃಂಗಸಭೆಗೆ ಆಹ್ವಾನಿಸಿದರು. ಅಧ್ಯಕ್ಷ ಮುಷರಫ್ ಅವರು ಕಾರ್ಗಿಲ್ ಯುದ್ಧದ ಪ್ರಮುಖ ರೂವಾರಿ ಎಂದು ಭಾರತದಲ್ಲಿ ನಂಬಲಾಗಿತ್ತು. ಮಿಲಿಟರಿ ದಂಗೆಯಿಂದ ಪಾಕಿಸ್ತಾನದ ಅಧ್ಯಕ್ಷರಾದ ಅವರನ್ನು ಇತರೆ ದೇಶಗಳಿಗಿಂತ ಮೊದಲೇ ಅಧ್ಯಕ್ಷರನ್ನಾಗಿ ಸ್ವೀಕರಿಸುವ ಮೂಲಕ ಶಾಂತಿ ಒಪ್ಪಂದಕ್ಕೆ ಮುಂದಾದರು ಅದರೆ ಮುಷರಫ್ ಮಾತುಕತೆ ಮುರಿದು ಆಗ್ರಾದಿಂದ ನಿರ್ಗಮಿಸಿದರು.
  • ನೆಹರೂ ಅವರ ಕಾಶ್ಮೀರದ ಸಂಧಾನ ನೀತಿಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಭಾರತೀಯ ಜನತಾ ಪಕ್ಷದ ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಮೊಟ್ಟ ಮೊದಲ ಬಾರಿಗೆ ಪಾಕಿಸ್ತಾನದ ಪ್ರಧಾನಿ ನವಾಜ ಶರೀಫರನ್ನು ಆಹ್ವಾನಿಸಿ ಅವರಿಗೆ ಅಪ್ಪಿಕೊಂಡು ಉಡುಗೊರೆ ನೀಡಿ ಆದರಿಸಿದರು.
  • ಮೋದಿಯವರು ಪಾಕಿಸ್ತಾನಕ್ಕೆ ದಿ.25 ಡಿಸೆಂಬರ್ 2015 ರಂದು (ಅಧಿಕೃತ ಆಹ್ವಾನವಿಲ್ಲದೆ?) ಅಚ್ಚರಿಯ ಭೇಟಿ ನೀಡಿದರು. ಲಾಹೋರ್‌ನಲ್ಲಿ ನೆಡೆದ ನವಾಜ್ ಅವರ ಮೊಮ್ಮಗಳ ವಿವಾಹದಲ್ಲಿ ಭಾಗವಹಿಸಿದರು. ಅವರು ಪ್ರಧಾನಿ ಷರೀಫ್ ಅವರನ್ನು ಅಭಿನಂದಿಸಿದರು ಮತ್ತು ಅವರ ಮೊಮ್ಮಗಳು ಮೆಹ್ರೂನ್ ನಿಸಾ ಅವರ ಮದುವೆಗೆ ಭೇಟಿ ನೀಡಿ ದಂಪತಿಗಳಿಗೆ ಕೆಲವು ಉಡುಗೊರೆಗಳನ್ನು ನೀಡಿದರು.

ನೆಹರು ಆಡಳಿತ (1952-1964): ಅವರ ಅಭಿವೃದ್ಧಿಯ ಯೋಜನೆಗಳು

ಚುನಾವಣೆಯಲ್ಲಿ ದೊಡ್ಡ ಜಯ

  • 1957 ಮತ್ತು 1962 ರಲ್ಲಿ ಪ್ರಧಾನ ಮಂತ್ರಿ ನೆಹರು ಅವರ ಕಾಂಗ್ರೆಸ್ ಚುನಾವಣೆಯಲ್ಲಿ ದೊಡ್ಡ ಜಯಗಳಿಸಿತು. ಸಂಸತ್ತು ವ್ಯಾಪಕವಾದ ಸುಧಾರಣೆಗಳನ್ನು ಜಾರಿಗೊಳಿಸಿತು. ಇದು ಹಿಂದೂ ಸಮಾಜದಲ್ಲಿ ಮಹಿಳೆಯರ ಸಾಮಾಜಿಕ ನ್ಯಾಯಿಕ-ಹಕ್ಕುಗಳ, ಹಕ್ಕುಗಳನ್ನು ಹೆಚ್ಚಿಸಿತು, ಮತ್ತು ಜಾತಿ ತಾರತಮ್ಯದ ಅಸ್ಪೃಶ್ಯತೆ ವಿರುದ್ಧ ಮತ್ತಷ್ಟು ಶಾಸನವಾಯಿತು. ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಲು ಭಾರತ ಮಕ್ಕಳನ್ನು ಸೇರಲು ಬಲವಾದ ಕಡ್ಡಯ ಶಿಕ್ಷಣ ಉಪಕ್ರಮವನ್ನು ನೆಹರು ಪ್ರತಿಪಾದಿಸಿದರು. ಭಾರತೀಯ ತಾತ್ರಿಕ ಶಿಕ್ಷಣ ಸಂಸ್ಥೆಗಳಂತಹ ಸುಧಾರಿತ ಶಿಕ್ಷಣದ ಸಾವಿರಾರು ಶಾಲೆಗಳು, ಕಾಲೇಜುಗಳು ಮತ್ತು ಸಂಸ್ಥೆಗಳನ್ನು ರಾಷ್ಟ್ರದಲ್ಲೆಡೆ ಸ್ಥಾಪಿಸಲಾಯಿತು. ನೆಹರೂ ಭಾರತದ ಆರ್ಥಿಕತೆಗೆ ಸಮಾಜವಾದಿ ಮಾದರಿಯನ್ನು ಪ್ರತಿಪಾದಿಸಿದರು - ಕೇಂದ್ರೀಕೃತ ಮತ್ತು ಸಮಗ್ರ ರಾಷ್ಟ್ರೀಯ ಆರ್ಥಿಕ ಕಾರ್ಯಕ್ರಮಗಳ ಆಧಾರದ ಮೇಲೆ ಸೋವಿಯತ್ ಮಾದರಿಯಿಂದ ಐದು ವರ್ಷದ ಯೋಜನೆಗಳು ರೂಪಿಸಲ್ಪಟ್ಟವು 13]
  • ಭಾರತೀಯ ರೈತರಿಗೆ ತೆರಿಗೆ ಕಡಿತ, ಕನಿಷ್ಟ ವೇತನ ಮತ್ತು ನೀಲಿ-ಕಾಲರ್ ಕಾರ್ಮಿಕರಿಗೆ ಸೌಲಬ್ಯಗಳನ್ನು ಒದಗಿಸಲಾಯಿತು.,
  • ಉಕ್ಕು, ವಾಯುಯಾನ, ಹಡಗು, ವಿದ್ಯುತ್ ಮತ್ತು ಗಣಿಗಾರಿಕೆ ಮುಂತಾದ ಭಾರೀ ಕೈಗಾರಿಕೆಗಳ ರಾಷ್ಟ್ರೀಕರಣ ಮಾಡಿ ಭಾರತದ ಮೂಲ ಕೈಗಾರಿಕೆಗೆ ಪ್ರಾಶಸ್ತಯ ಕೊಡಲಾಯಿತು. ಇವುಗಳಲ್ಲಿ ಕೆಲವು ಇಂದಿಗೂ ಭಾರತದ ಕೈಗಾರಿಕೆ ಮತ್ತು ಭಾರತದ ಆರ್ಥಿಕ ಭದ್ರತೆಗೆ ಮೂಲಾಧಾರವಾಗಿದೆ. ಇವು ಆರ್ಥಿಕ ಬೆಳವಣಿಗೆಯ ನವರತ್ನಗಳೆನ್ನಿಸಿಕೊಂಟಿವೆ..
  • ಗ್ರಾಮದ ಸಾರ್ಜನಿಕ ಭೂಮಿಯನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಗ್ರಾಮಾಬಿವೃದ್ಧಿ, ಗ್ರಾಮ ಕೈಗಾರಿಕೆಗಳಿಗೆ ಪಂಚವಾರ್ಷಿಕಯೋಜನೆಗಳಲ್ಲಿ ಪ್ರಾಮುಖ್ಯತೆ ನೀಡಲಾಯಿತು.
  • ವ್ಯಾಪಕವಾದ ಸಾರ್ವಜನಿಕ ಕಾರ್ಯಗಳು ಮತ್ತು ಕೈಗಾರೀಕರಣದ ಅಭಿಯಾನವನ್ನು ಆರಂಭಿಸಿದರು. ನೀರಾವರಿಗಾಗಿ ನೂರಾರು ಪ್ರಮುಖ ಅಣೆಕಟ್ಟುಗಳು, ನೀರಾವರಿ ಕಾಲುವೆಗಳು, ರಸ್ತೆಗಳು, ನಿರ್ಮಿಸಲ್ಪಟ್ಟವು. ಉಷ್ಣ ಮತ್ತು ಜಲವಿದ್ಯುತ್ ಶಕ್ತಿ ಕೇಂದ್ರಗಳು ಮತ್ತು ಇನ್ನಿತರ ಕಟ್ಟಡಗಳ ನಿರ್ಮಾಣಕ್ಕೆ ನೆಹರೂ ಆರಂಭಿಸಿದ ಪಂಚವಾರ್ಷಿಕ ಯೋಜನೆಗಳು ಕಾರಣವಾದವು.
  • 1962 ರಲ್ಲಿ ಭಾರತದ ಮೊದಲನೇ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಬಾಹ್ಯಾಕಾಶ ಸಂಶೋಧನಾ ರಾಷ್ಟ್ರೀಯ ಸಮಿತಿಯನ್ನು ಭಾರತೀಯ ಸರ್ಕಾರದ ಇಂಡಿಯನ್ ಸ್ಪೇಸ್ ಪ್ರೋಗ್ರಾಂನ್ನು ರೂಪಿಸಲು ಸ್ಥಾಪಿಸಿದರು.(INCOSPAR:The Indian National Committee for Space Research :INCOSPAR), ಅಂತಿಮವಾಗಿ 1969 ರಲ್ಲಿ ಅದು ಇಸ್ರೋ ಆಗಿ ಬೆಳೆಯಿತು: ಅದೇ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (Indian Space Research Organisation);

ಆಧುನಿಕ ಭಾರತದ ಶಿಲ್ಪಿ

  • ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಆಧುನಿಕ ಭಾರತವನ್ನು ಹೀಗೆ ಕಲ್ಪಿಸಿದ್ದಾರೆ: ಇದು ಕೃಷಿಯ ಬೆಳವಣಿಗೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯ ಅಡಿಪಾಯದ ಮೇಲೆ ನಿರ್ಮಿಸಲಾದ ಕೈಗಾರಿಕಾ ಶಕ್ತಿ ಕೇಂದ್ರವಾಗಿದೆ. ಮತ್ತು ಅವರು ಅವಸರದ ವ್ಯಕ್ತಿಯಾಗಿದ್ದರು. ಒಂದು ಸಂದರ್ಭದಲ್ಲಿ, ಆಧುನಿಕ ಭಾರತದ ಈ ನಿರ್ಮಾಪಕ ಹೀಗೆ ಹೇಳಿದರು: “ಆಧುನಿಕ ಆರ್ಥಿಕತೆಯನ್ನು 'ಜೆಟ್ ಪ್ಲೇನ್ ಮತ್ತು ಪರಮಾಣು ಶಕ್ತಿ'ಯಿಂದ ಸಂಕೇತಿಸಲಾಗುತ್ತದೆ. ಪ್ರಪಂಚವು ಇಂದು ಬಹಳ ವೇಗವಾಗಿ ಚಲಿಸುತ್ತಿದೆ, ಮತ್ತು ನೀವು ಈಗ ಸುಧಾರಿತವೆಂದು ಪರಿಗಣಿಸಿದ ತಂತ್ರಗಳು ಸಹ, ನೀವು ಅವುಗಳನ್ನು ಹಿಡಿಯುವ ಮೊದಲು ಹಳೆಯದಾಗಿರುತ್ತದೆ. ನಾನು ಎಲ್ಲಾ ಇತ್ತೀಚಿನ ತಂತ್ರಗಳ ಪರ ಇದ್ದೇನೆ; ಇದರ ಬಗ್ಗೆ ಯಾವುದೇ ತಪ್ಪು ತಿಳುವಳಿಕೆ ಇರಬಾರದು ”(ಜವಾಹರಲಾಲ್ ನೆಹರೂ ಅವರ ಭಾಷಣಗಳು, ಸಂಪುಟ 3, ಮಾರ್ಚ್ 1953-ಆಗಸ್ಟ್ 1957, ಪಬ್ಲಿಕೇಶನ್ಸ್ ವಿಭಾಗ, ಭಾರತ ಸರ್ಕಾರ).
  • ಇಂದು ಭಾರತವು ಹೆಮ್ಮೆಪಡುವ ಎಲ್ಲಾ ಸಂಸ್ಥೆಗಳು ಅವರ ಕಾಲದಲ್ಲಿ ಸ್ಥಾಪಿತವಾದವು - ಕೆಲವನ್ನು ಹೆಸರಿಸಲು; ನಮ್ಮ ಐಐಟಿಗಳು, ಐಐಎಂಗಳು, ಎನ್ಐಡಿ, ಪರಮಾಣು ಶಕ್ತಿ ಆಯೋಗ ಇಸ್ರೋಗೆ ಪೂರ್ವಭಾವಿ, ಬಾಹ್ಯಾಕಾಶ ಸಂಶೋಧನೆಗಾಗಿ ಭಾರತೀಯ ರಾಷ್ಟ್ರೀಯ ಸಮಿತಿ . ದೇಶದ ಮೊದಲ ಪರಮಾಣು ರಿಯಾಕ್ಟರ್ ಅಪ್ಸರಾ, 1956 ರಲ್ಲಿ ನಿರ್ಣಾಯಕವಾಯಿತು ಮತ್ತು ಭಾರತವು 1963 ರ ಕೊನೆಯಲ್ಲಿ ಥುಂಬಾದಿಂದ ತನ್ನ ಮೊದಲ ರಾಕೆಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಭಾರತದಲ್ಲಿ ಇಂದು ಸಮೃದ್ಧ ಆಹಾರದ ಬೆಳೆಗೆ ಕಾರಣವಾದ ನೀರಾವರಿ ವ್ಯವಸ್ತೆಯ ಸಾವಿರಾರು ಚಿಕ್ಕ ಮತ್ತು ದೊಡ್ಡ ಅಣೆಕಟ್ಟುಗಳು, ನೂರಾರು ಜಲವಿದ್ಯುತ್ ಯೋಜನೆಗಳು, ಮೂಲ ಕೈಗಾರಿಕೆಗಳ ಬಿ,ಎಹ್.ಎ.ಎಲ್,; ಎಚ್,ಎ,ಎಲ್; ಮೊದಲಾದವು.
  • ಭಾರತವು ಆಧುನಿಕ ಸಂವಿಧಾನ ಮತ್ತು ಸಾರ್ವತ್ರಿಕ ವಯಸ್ಕ ಮತದಾನದೊಂದಿಗೆ ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯವಾಯಿತು, ಅದರ ಯಶಸ್ಸು ಬಹುತೇಕ ಸಂಪೂರ್ಣವಾಗಿ ಅವರಿಗೆ ಸಲ್ಲುತ್ತದೆ. ರಾಜಪ್ರಭುತ್ವಗಳನ್ನು ಭಾರತೀಯ ಒಕ್ಕೂಟಕ್ಕೆ ಸಂಯೋಜಿಸಲು ಸ್ವಾತಂತ್ರಪೂರ್ವದಿಂದಲೇ ಅವರು ಸರ್ದಾರ್ ಪಟೇಲ್ ಅವರಿಗೆ ಅದ್ಭುತ ಕೆಲಸ ಮಾಡಿದರು. ಅವರು ಬಿಟ್ಟುಹೋದ ಭಾರತ ಹೆಚ್ಚು ಜಾತ್ಯತೀತವಾಗಿತ್ತು.
  • ಅನೇಕ ನಾಯಕರು ಸ್ವತಂತ್ರವಾದ ಅಧೀನರಾಜ್ಯಗಳನ್ನು ಬೆಂಬಲಿಸಿದರೆ, ಅದರ ಬದಲಿಗೆ ನೆಹರು ಸಂಸ್ಥಾನಗಳನ್ನು ಸಂಪೂರ್ಣ ಭಾರತದ ಅಧೀನಕ್ಕೆ ತಂದು ಭಾರತವನ್ನು ಒಕ್ಕೂಟ ರಾಷ್ಟ್ರವಾಗಿಮಾಡಲು ಮತ್ತು ಆ ನಿಯಮದಂತೆ ಸಂವಿಧಾನರಚನೆಗೆ ಒತ್ತಾಸೆ ಮಾಡಿದರು.
  • ಅಂದಿನ ಬಂಡವಾಲದ ಕೊರತೆಯಲ್ಲಿ ಬಂಡವಾಳವು ಅನಗತ್ತು ಸ್ಪರ್ಧೆಯಿಂದ ನಷ್ಟವಾಗಮಾರದೆಂದು ಕಂಟ್ರೋಲ್ಡ್ ಎಕಾನಮಿ- ನಿರ್ಭಂದಿತ ಹಣಕಾಸು ನೀತಿ ಅನುಸರಿಸಿದರು.

ರಾಜ್ಯಗಳ ಮರುಸಂಘಟನೆ

  • ಮುಖ್ಯ ಲೇಖನ:ರಾಜ್ಯಗಳ ಪುನರ್ ವಿಂಗಡಣಾ ಆಯೋಗ
  • ರಾಜ್ಯ ಮರುಸಂಘಟನೆ ಕಾಯಿದೆಗೆ ಮುನ್ನ ದಕ್ಷಿಣ ಭಾರತದ ರಾಜ್ಯಗಳಲ್ಲಿ. 1953 ರಲ್ಲಿ ಆಂಧ್ರ ರಾಜ್ಯ ಬೇಡಿಕೆಗೆ ಕಾರಣವಾದ ಆಂಧ್ರ ರಾಜ್ಯದ ಪೊಟ್ಟಿ ಶ್ರೀರಾಮುಲು ಅವರ ಉಪವಾಸ ಸತ್ಯಾಗ್ರಹದಿಂದ ಆದ ಮರಣದ ನಂತರ, ಅವರ ಸಾವು ಭಾರತೀಯ ಒಕ್ಕೂಟದ ಪ್ರಮುಖ ಆಕಾರವನ್ನು ಬದಲಿಸುವ ಕ್ರಿಯೆಯನ್ನು ಹುಟ್ಟುಹಾಕಿತು. 1956 ರಲ್ಲಿ ರಾಜ್ಯ ಮರುಸಂಘಟನೆ ಕಾಯಿದೆ ಶಿಫಾರಸುಗಳನ್ನು ಜಾರಿಗೊಳಿಸಲು, ನೆಹರು ಅವರು ರಾಜ್ಯ ಪುನರ್-ಸಂಘಟನೆಯ ಆಯೋಗವನ್ನು ನೇಮಿಸಿದರು. ಹಳೆಯ ರಾಜ್ಯಗಳು ವಿಲೀನವಾದವು ಮತ್ತು ಹೊಸ ರಾಜ್ಯಗಳು ಭಾಷಾ ಮತ್ತು ಜನಾಂಗೀಯ ಜನಸಂಖ್ಯಾಶಾಸ್ತ್ರದ ಪ್ರಕಾರ ಹಂಚಲ್ಪಟ್ಟು ರಚಿಸಲ್ಪಟ್ಟವು. ಕೇರಳ ಮತ್ತು ಮದ್ರಾಸ್ ರಾಜ್ಯದ ತೆಲುಗು-ಮಾತನಾಡುವ ಪ್ರದೇಶಗಳು ಪ್ರತ್ಯೇಕವಾಗಿ, ತಮಿಳು-ಮಾತನಾಡುವ ತಮಿಳುನಾಡಿನ ಸೃಷ್ಟಿಗೆ ಕಾರಣವಾಯಿತು. 1 ಮೇ 1960 ರಂದು, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ದ್ವಿಭಾಷಾ ಪ್ರಾಂತ್ಯವಾದ ಬಾಂಬೆ ಪ್ರಾಂತ್ಯದಿಂದ ರಚಿಸಲ್ಪಟ್ಟವು, ಮತ್ತು 1 ನವೆಂಬರ್ 19೬6 ರಂದು, ದೊಡ್ಡ ಪಂಜಾಬ್ ರಾಜ್ಯದ ಸಣ್ಣ, ಪಂಜಾಬಿ-ಮಾತನಾಡುವ ಪಂಜಾಬ್ ಮತ್ತು ಹರಿಯಾನಿ -ಮಾತನಾಡುವ ಹರಿಯಾಣ ರಾಜ್ಯಗಳಾಗಿ ವಿಂಗಡಿಸಲ್ಪಟ್ಟಿತು. ಬೊಬಾಯಿ ಪ್ರಾಂತ್ಯ, ಹೈದರಾಬದು ರಾಜ್ಯ ತಮಿಳನಾಡು ಪ್ರಾಂತ್ಗಳಿಂದ ಕನ್ನಡ ಮಾತನಾಡುವ ಕನ್ನಡ ಭಾಷಾಪ್ರಾಂತ್ಯವಾಗಿ ಹೊಸ ಮೈಸೂರು ರಾಜ್ಯ (ನಂತರ ಕರ್ನಾಟಕ ಪ್ರಾಂತ್ಯ) ರಚಿತವಾಯಿತು.

ವಿದೇಶಾಂಗ ನೀತಿ ಮತ್ತು ಮಿಲಿಟರಿ ಘರ್ಷಣೆಗಳು

ಭಾರತ ಗಣರಾಜ್ಯದ ಇತಿಹಾಸ 
ಸಿನೊ-ಇಂಡಿಯನ್ ಯುದ್ಧ ಪ್ರದೇಶ
ಸಿನೊ-ಇಂಡಿಯನ್ ಯುದ್ಧದಲ್ಲಿ ಭಾರತ ಹಿನ್ನೆಡೆ ಅನುಭವಿಸಿತು.

ಆದರೂ ಚೀನಾ ತನ್ನ ಮೂಲಸ್ಥಾನಕ್ಕೆ ಹಿಂದಿರುಗಿತು.

  • ಉತ್ತರದ ಕೆಂಪು ಬಣ್ಣ -ಕಾಶ್ಮೀರದ ಅಕ್ಸಾಯ್ ಚಿನ್ ಪ್ರದೇಶ ಚೀನೀ

ನಿಯಂತ್ರಣದಲ್ಲಿದೆ;

  • -x-x- ಇಂಟರ್ನ್ಯಾಶನಲ್ ಗಡಿರೇಖೆ - ಚೀನಾದಂತೆ ವಿವಾದಿತ;
  • ಚೀನಾದಿಂದ ಆಕ್ರಮಣ: ಕೆಂಪು ಬಣ್ಣದ ಬಣ್ಣದ ವಿವಾದಿತ ಪ್ರದೇಶ;
  • - * - * - ಅಂತರರಾಷ್ಟ್ರೀಯ ಆಡಳಿತಾತ್ಮಕ ಗಡಿ;
  • --- ರಸ್ತೆ.

ತಟಸ್ಥನೀತಿ ಮತ್ತು ಪಂಚಶೀಲ ತತ್ತ್ವ

  • ಭಾರತ ಸ್ವಾತಂತ್ರ ಗಳಿಸಿದ ಸಮಯದಲ್ಲಿ ಬಂಡವಾಳ ಶಾಹಿ ಅಮೇರಿಕಾ ಮತ್ತು ಕಮ್ಯೂನಿಸ್ಟ್ ಅಥವಾ ಸಮಾಜವಾದಿ ರಷ್ಯಾ ಬದ್ಧ್ಧ ವಿರೋಧಿಗಳಾಗಿದ್ದು, ಅವು ಪ್ರತ್ಯೇಕ ಬೆಂಲಿತ ರಾಜ್ಯಗಳ ಬಣಗಳನ್ನು ಹೊಂದಿದ್ದವು. ಭಾರತ ಆಗ ತೀವ್ರ ಹಿಂದುಳಿದ ರಾಷ್ಟ್ರವಾಗಿದ್ದು ಎರಡೂ ಬಣಗಳ ಸಹಾಯ ಸಹಕಾರ ಅಗತ್ಯನವಾಗಿತ್ತು. ಈ ಎರಡೂ ಬಣಗಳಲ್ಲಿ ಯಾವುದೇ ಒಂದು ಬಣದ ಪರ ವಾಲದೆ ಇರುವುದು ಅಲಿಪ್ತ ನೀತಿಯ ಮಾರ್ಗವಾಗಿತ್ತು. ನೆಹರು ಆ ನೀತಿಯ ಸಹ-ಸಂಸ್ಥಾಪಕರಾಗಿದ್ದರು ಅನೇಕ "ಅಲಿಪ್ತ ರಾಷ್ಟ್ರಗಳು" ಎಂಬ ಹೊಸ ಮೂರನೇ ಬಣಕ್ಕೆ ಸೇರಿದರು.
  • ನೆಹರು ಅವರ ವಿದೇಶ ನೀತಿಯು ಅಲಿಪ್ತ ಚಳುವಳಿಯಿಂದ ಸ್ಪೂರ್ತಿಹೊಂದಿದೆ,. ಭಾರತವು ಅಮೇರಿಕಾ ಸಂಸ್ಥಾನ ಮತ್ತು ಸೋವಿಯತ್ ಒಕ್ಕೂಟದೊಂದಿಗೆ ಸೌಹಾರ್ದ ಸಂಬಂಧವನ್ನು ನಿರ್ವಹಿಸುತ್ತಾ, ಒಂಟಿಯಾಗಿದ್ದ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಜಾಗತಿಕ ಸಮುದಾಯ ರಾಷ್ಟ್ರಗಳಿಗೆ ಸೇರಲು ಪ್ರೋತ್ಸಾಹಿಸಿದರು.
  • 1953 ರಲ್ಲಿ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ವಿ ಕೆ ಮೆನನ್ ಅವರು "ನಾನ್‍-ಅಲೈನ್‍ಮೆಂಟ್" ಎಂಬ ಪದವನ್ನು ರಚಿಸಿ ಉಪಯೋಗಿಸಿದರು. ನಂತರ ಇದನ್ನು 1954 ರಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ಭಾಷಣ ಮಾಡುವಾಗ ಭಾರತೀಯ ಪ್ರಧಾನಿ ಜವಾಹರ್ ಲಾಲ್ ನೆಹರು ಬಳಸಿದರು. ಈ ಭಾಷಣದಲ್ಲಿ, ಚೀನಾ-ಭಾರತೀಯ ಸಂಬಂಧಗಳಿಗೆ ಮಾರ್ಗದರ್ಶಿಯಾಗಿ ಬಳಸಬೇಕಾದ 'ಐದು ಸ್ತಂಭ' ನೀತಿಗಳನ್ನು ನೆಹರೂ ವಿವರಿಸಿದ್ದಾರೆ, ಇದನ್ನು ಮೊದಲು ಚೀನಾದ ಪ್ರಧಾನ ಮಂತ್ರಿ ಚೌ ಎನ್ ಲಾಯ್ ಅವರು 'ಪಂಚಶೀಲ' (ಐದು ನಿರ್ಬಂಧ ನೀತಿಗಳು) ಎಂದು ಕರೆದರು, ಈ ತತ್ವಗಳು ನಂತರ ನಾನ್-ಅಲ್ಐನ್‍ಡ್ -ತಟಸ್ಥ ರಾಷ್ಟ್ರಗಳ ರಚನೆಯ ಆಧಾರವಾಗಿ ಕಾರ್ಯನಿರ್ವಹಿಸಲು ಜೋಡಿಸಿದ ಚಳುವಳಿ ನೀತಿಯಾಯಿತು. ಜವಾಹರ್ ಲಾಲ್ ನೆಹರು ಅವರು ಈ "ತಟಸ್ಥರಾಷ್ಟ್ರಗಳ ಕೂಟದ" ಚಳವಳಿಯ ವಾಸ್ತುಶಿಲ್ಪಿ ಎನಿಸಿದರು.
  • ಐದು ತತ್ವಗಳು ಹೀಗಿವೆ:
  • ೧)ಪರಸ್ಪರರ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಪರಸ್ಪರ ಗೌರವ
  • ೨)ಪರಸ್ಪರ ಅನಾಕ್ರಮಣಶೀಲತೆ
  • ೩)ದೇಶೀಯ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದಿರುವುದು
  • ೪)ಸಮಾನತೆ ಮತ್ತು ಪರಸ್ಪರ ಲಾಭ
  • ೫)ಶಾಂತಿಯುತ ಸಹಬಾಳ್ವೆ
  • 1956 ರಲ್ಲಿ ಸುಯೆಜ್ ಕಾಲುವೆ ಕಂಪೆನಿಯನ್ನು ಈಜಿಪ್ಟ್ ಸರ್ಕಾರವು ರಾಷ್ಟ್ರೀಕರಣಗೊಳಿಸಿ ವಶಪಡಿಸಿಕೊಂಡಾಗ, ಅಂತರರಾಷ್ಟ್ರೀಯ ಸಮ್ಮೇಳನವು ಈಜಿಪ್ಟ್ ವಿರುದ್ಧ ಕ್ರಮ ತೆಗೆದುಕೊಳ್ಳಲು 18-4 ಮತಗಳನ್ನು ನೀಡಿತು. ಇಂಡೋನೇಷ್ಯಾ, ಶ್ರೀಲಂಕಾ ಮತ್ತು ಯುಎಸ್ಎಸ್ಆರ್ ಜೊತೆಗೆ ಭಾರತವು ಈಜಿಪ್ಟಿನ ನಾಲ್ಕು ಬೆಂಬಲಿಗ ದೇಶಗಳಲ್ಲಿ ಒಂದಾಗಿದ್ದಿತು. ಭಾರತವು ಪ್ಯಾಲೆಸ್ತೀನ್ ನ ವಿಭಜನೆಯನ್ನು ಮತ್ತು ಇಸ್ರೇಲ್, ಯುನೈಟೆಡ್ ಕಿಂಗ್ಡಮ್ ಮತ್ತು ಫ್ರಾನ್ಸ್ನಿಂದ 1956 ರಲ್ಲಿ ಇಸ್ರೇಲ್ ಮಾಡಿದ ಸಿನಾಯ್ ಆಕ್ರಮಣವನ್ನು ವಿರೋಧಿಸಿತು, ಆದರೆ ಟಿಬೆಟ್ ಮೇಲೆ ಚೀನಿಯರ ಆಕ್ರಕ್ರಮಣ ಮತು ್ತನಿಯಂತ್ರಣವನ್ನು ವಿರೋಧಿಸಲಿಲ್ಲ. ಸೋವಿಯತ್ ಯೂನಿಯನ್ ನಿಂದ ಹಂಗೇರಿಯಲ್ಲಿ ನೆಡೆದ ಪ್ರಜಾಪ್ರಭುತ್ವ ಚಳವಳಿಯ ನಿಗ್ರಹವನ್ನು ವಿರೋಧಿಸಲಿಲ್ಲ.. ನೆಹರು ಪರಮಾಣು ಮಹತ್ವಾಕಾಂಕ್ಷೆಗಳನ್ನು ಹೊಂದಿರದೇ ಇದ್ದರೂ, ಭಾರತಕ್ಕೆ, ಶಾಂತಿಯುತ ಉದ್ದೇಶಕ್ಕಾಗಿ ಕೆನಡಾ ಮತ್ತು ಫ್ರಾನ್ಸ ದೇಶಗಳು ವಿದ್ಯುತ್ ಉತ್ಪಾದನೆಗಾಗಿ ಪರಮಾಣು ವಿದ್ಯುತ್ ಕೇಂದ್ರಗಳ ಅಭಿವೃದ್ಧಿಯಲ್ಲಿ ಭಾರತಕ್ಕೆ ಸಹಾಯ ಮಾಡಿದವು.
  • ಏಳು ನದಿಗಳ ನೀರನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡ ಭಾರತವು 1960 ರಲ್ಲಿ ಸಿಂಧೂ ನದೀನೀರಿನ ಒಪ್ಪಂದ ಮಾಡಿಕೊಂಡಿತು. 1953 ರಲ್ಲಿ ನೆಹರೂ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು, ಆದರೆ ಪಾಕಿಸ್ತಾನದಲ್ಲಿ ರಾಜಕೀಯ ಪ್ರಕ್ಷುಬ್ಧತೆಯ ಕಾರಣದಿಂದಾಗಿ, ಕಾಶ್ಮೀರ ವಿವಾದದ ಬಗ್ಗೆ ಯಾವುದೇ ಸುಧಾರಣೆಯ ಹೆಜ್ಜೆ ಇಡಲಾಗಲಿಲ್ಲ.
    1. ಭಾರತವು ತನ್ನ ಎದುರಾಳಿ ರಾಷ್ಟ್ರವಾದ ಪಾಕಿಸ್ತಾನದೊಂದಿಗೆ ನಾಲ್ಕು ಯುದ್ಧಗಳು / ಸೇನಾ ಘರ್ಷಣೆಗಳಲ್ಲಿ ಹೋರಾಡಿದೆ, ಈ ಅವಧಿಯಲ್ಲಿ ಎರಡು 1947ರ ಭಾರತ-ಪಾಕಿಸ್ತಾನಿ ಯುದ್ಧ; ಕಾಶ್ಮೀರದ ವಿವಾದಿತ ಭೂಪ್ರದೇಶದ ಮೇಲೆ; ಪಾಕಿಸ್ತಾನವು ಹೋರಾಡಿ ಕಾಶ್ಮೀರದ ಮೂರನೆಯ ಒಂದು ಭಾಗದಷ್ಟು ಪ್ರದೇಶವನ್ನು ವಶಪಡಿಸಿಕೊಂಡಿತು- (ಭಾರತವು ಅದು ತನ್ನ ಪ್ರಾಂತ್ಯವೆಂದು ಹೇಳಿಕೊಂಡಿದೆ); ಮತ್ತು ಭಾರತವು ಮೂರನೆ ಎರಡು ಭಾಗವನ್ನು ಹೊಂದಿದೆ (ಅದನ್ನು ಪಾಕಿಸ್ತಾನವು ತನಗೆ ಸೇರಬೇಕಾದ ಪ್ರಾಂತ್ಯವೆಂದು ಹೇಳಿಕೊಂಡಿದೆ). 1965 ರ ಇಂಡೋ-ಪಾಕಿಸ್ತಾನಿ ಯುದ್ಧದಲ್ಲಿ - ಕಾಶ್ಮೀರದ ನಿಯಂತ್ರಿತ ಗಡಿಯನ್ನು ಪಾಕಿಸ್ತಾನದ ಪಡೆಗಳು ನುಸುಳಲು ಪ್ರಯತ್ನಿಸಿದ ನಂತರ ಭಾರತವು ಎಲ್ಲಾ ರಂಗಗಳಲ್ಲಿಯೂ ಪಾಕಿಸ್ತಾನವನ್ನು ಆಕ್ರಮಿಸಿ ಹಿಮ್ಮಟ್ಟಿಸಿತು.
    ೨. 1962 ರಲ್ಲಿ ಚೀನಾ ಮತ್ತು ಭಾರತವು ಹಿಮಾಲಯದಲ್ಲಿ ಗಡಿಯುದ್ದಕ್ಕೂ ಸಂಕ್ಷಿಪ್ತ ಸಿನೋ-ಇಂಡಿಯನ್ ಯುದ್ಧದಲ್ಲಿ ತೊಡಗಿದವು. ಈ ಯುದ್ಧದಲ್ಲಿ ಭಾರತೀಯರಿಗೆ ಸಂಪೂರ್ಣ ಹಿನ್ನೆಡೆಯಾಯಿತು. ಇದರಿಂದ ಅಮೇರಿಕಾ ಸಂಯುಕ್ತ ಸಂಸ್ಥಾನದೊಂದಿಗೆ ಶಸ್ತ್ರಾಸ್ತ್ರ ನಿರ್ಮಾಣದ ಸಂಬಂಧಗಳಲ್ಲಿ ಸುಧಾರಣೆಗೆ ಕಾರಣವಾಯಿತು ಮತ್ತು ಭಾರತವು ತನ್ನ ಸೈನ್ಯವನ್ನು ಹೆಚ್ಚು ಸನ್ನದ್ಧಗೊಳಿಸಲು ಪ್ರೇರಣೆ ನೀಡಿತು. ಚೀನಾದ ದಕ್ಷಿಣ ಟಿಬೆಟ್ ಗೆ ಸಂಬಂಧಿಸಿದಂತೆ ವಿವಾದಿತ ಭೂಪ್ರದೇಶದಿಂದ ಚೀನಾ ತನ್ನ ಸೈನ್ಯವನ್ನು ಈಶಾನ್ಯ ಗಡಿಪ್ರದೇಶದಿಂದ ಹಿಂತೆಗೆದುಕೊಂಡಿತು. ನೇಫಾದಲ್ಲಿ ಯುದ್ಧದ ಸಮಯದಲ್ಲಿ ಅದು ಗಡಿ ದಾಟಿದೆ. ಆ ಯುದ್ಧಕ್ಕೆ ಸಂಬಂಧವಿಲ್ಲದಿದ್ದರೂ, ಚೀನಾವು ಅಕ್ಸಾಯ್ ಚಿನ್ ಪ್ರದೇಶದ ಮೇಲೆ ತಮ್ಮ (ಚೀನಿಯರ)ಹಕ್ಕು ಸಾಧಿಸುತ್ತಿದೆ. ಆದರೆ ಭಾರತವು ಅವರ ಸಾರ್ವಭೌಮತ್ವವನ್ನು ವಿರೋಧಿಸುತ್ತಿದೆ. (ಇದು ಸಿನೋ-ಇಂಡಿಯನ್ ಪಶ್ಚಿಮ ಭಾಗದ ಗಡಿಯಲ್ಲಿ ಚೀನಾ ನಿಯಂತ್ರಣದಲ್ಲಿರುವ ಪ್ರದೇಶ.)

ಗೋವಾ ವಿಮೋಚನೆ: ಆಪರೇಶನ್ ವಿಜಯ್

ಭಾರತ ಗಣರಾಜ್ಯದ ಇತಿಹಾಸ 
ಗೋವಾ - ಭಾರತದ ಪಶ್ಚಿಮದಲ್ಲ
  • 1950 ರ ಫೆಬ್ರುವರಿ 27 ರಂದು ಭಾರತ ಸರ್ಕಾರವು ಪೋರ್ಚುಗೀಸ್ ವಸಾಹತುಗಳ ಭವಿಷ್ಯದ ಬಗ್ಗೆ ಮಾತುಕತೆಗಳನ್ನು ತೆರೆಯಲು ಪೋರ್ಚುಗೀಸ್ ಸರ್ಕಾರವನ್ನು ಕೇಳಿತು. ಆದರೆ 1961 ರಲ್ಲಿ, ಶಾಂತಿಯುತ ಹಸ್ತಾಂತರಕ್ಕಾಗಿ ನಿರಂತರ ಮನವಿಗಳು ವಿಫಲವಾದ ನಂತರ, ನೆಹರು ಅವರು ಭಾರತದ ಪಶ್ಚಿಮ ಕರಾವಳಿಯಲ್ಲಿ ಗೋವಾದ ಪೋರ್ಚುಗೀಸ್ ವಸಾಹತುವನ್ನು ಬಿಡುಗಡೆ ಗೊಳಿಸಲು ಸೈನಿಕ ಕಾರ್ಯಾಚರಣೆ ನೆಡೆಸಲು ನಿರ್ಧರಿಸಿದರು.
ಭಾರತ ಗಣರಾಜ್ಯದ ಇತಿಹಾಸ 
ಕ್ಯಾನ್ಬೆರಾ ಪಿಆರ್.9 ಕಾರ್ಯಾಚರಣೆಯಲ್ಲಿ; ಭಾರತೀಯ ವಾಯುಪಡೆಯ ಕ್ಯಾನ್ಬೆರಾ ಯುದ್ಧ ವಿಮಾನ 20 ಸಣ್ಣ ಮತ್ತು ಹಗುರವಾದ ಬಾಂಬರ್ಗಳನ್ನು ಬಳಸಿತು.
  • ಭಾರತವು ಗೋವಾವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು 1961 ರ ಡಿಸೆಂಬರ್ನಲ್ಲಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ "ಶಸ್ತ್ರಸಜ್ಜಿತ ಕ್ರಮ" ದಿಂದ ಪ್ರಾರಂಭವಾಯಿತು. ಗೋವಾ, ದಮನ್ ಮತ್ತು ಡಯುವಿನ ಮಾಜಿ ಪೋರ್ಚುಗೀಸ್ ಭಾರತೀಯ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿತು. ಈ ಕ್ರಿಯೆಯನ್ನು "ಗೋವಾದ ವಿಮೋಚನೆ" ಅಥವಾ "ಗೋವಾ ಆಕ್ರಮಣ" ಎಂದು ಉಲ್ಲೇಖಿಸಲಾಗುತ್ತದೆ. 1961 ರಲ್ಲಿ ಪೋರ್ಚುಗೀಸ್ ಆಳ್ವಿಕೆಯ ಅಂತ್ಯದ ನಂತರ, ಗೋವಾವನ್ನು ಕುನ್ಹಿರಾಮನ್ ಪಲಾಟ್ ಕ್ಯಾಂಡೆತ್ನ ನೇತೃತ್ವದ ಮಿಲಿಟರಿ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿ ಇರಿಸಲಾಯಿತು.
  • 8 ಜೂನ್ 1962 ರಂದು ಲೆಫ್ಟಿನೆಂಟ್ ಗವರ್ನರ್ 29 ನಾಮನಿರ್ದೇಶಿತ ಸದಸ್ಯರ ಅನೌಪಚಾರಿಕ ಕನ್ಸಲ್ಟೇಟಿವ್ ಕೌನ್ಸಿಲ್ ಅನ್ನು ಭೂಪ್ರದೇಶದ ಆಡಳಿತದಲ್ಲಿ ನೆರವಾಗಲು ನಾಮಕರಣ ಮಾಡಿದಾಗ ಮಿಲಿಟರಿ ಆಡಳಿತವ ಕೊನೆಗೊಂಡು ನಾಗರಿಕ ಸರ್ಕಾರವು ಬಂದಿತು. 1950 ರ ಫೆಬ್ರುವರಿ 27 ರಂದು ಭಾರತ ಸರ್ಕಾರ ಪೋರ್ಚುಗೀಸ್ ವಸಾಹತುಗಳ ಭವಿಷ್ಯದ ಬಗ್ಗೆ ಮಾತುಕತೆಗಳನ್ನು ತೆರೆಯಲು ಪೋರ್ಚುಗೀಸ್ ಸರ್ಕಾರವನ್ನು ಕೇಳಿತು. "
  • ಭಾರತದ ಉಪಖಂಡದ ಮೇಲಿನ ಪ್ರದೇಶವು ವಸಾಹತು ಪ್ರದೇಶವಲ್ಲ ಆದರೆ ಮೆಟ್ರೋಪಾಲಿಟನ್ ಪೋರ್ಚುಗಲ್ನ ಭಾಗವಾಗಿತ್ತು ಮತ್ತು ಅದರ ವರ್ಗಾವಣೆ ಮಾತುಕತೆಗೆ ಒಳಗಾಗುವುದಿಲ್ಲ ಮತ್ತು ಈ ಪ್ರದೇಶಕ್ಕೆ ಭಾರತಕ್ಕೆ ಯಾವುದೇ ಹಕ್ಕು ಇಲ್ಲ ಎಂದು ಪೋರ್ಚುಗಲ್ ಪ್ರತಿಪಾದಿಸಿತು, ಏಕೆಂದರೆ ಗೋವಾ ಬಂದಾಗ ಭಾರತದ ಗಣರಾಜ್ಯ ಅಸ್ತಿತ್ವದಲ್ಲಿರಲಿಲ್ಲ ಪೋರ್ಚುಗೀಸ್ ಆಡಳಿತದಡಿಯಲ್ಲಿ ಇತ್ತು ಎಂದಿತು. ಹೀಗೆ ಶಾಂತಿಯುತ ಪ್ರಯತ್ನ ಫಲ ಕೊಡದಿದ್ದಾಗ ಮತ್ತು ಶಂತಿಯುತ ಚಳುವಳಿಗಾರರಮಾಲೆ ಗೋವಾ ಪೋರ್ಚುಗಲ್ ಆಡಳಿತ ದೌರ್ಜನ್ಯ ನೆಡಿಸಿದಾಗ ಭಾರತ ಸೈನಿಕ ಕ್ರಮಕ್ಕೆ ಮುಂದಾತಿತು.
    ಕಾರ್ಯಾಚರಣೆ:
  • 11 ಡಿಸೆಂಬರ್ 1961 ರಂದು, 17 ನೇ ಪದಾತಿಸೈನ್ಯದ ವಿಭಾಗ ಮತ್ತು ಸೇನೆಯ ಸೇನಾ ತುಕಡಿಗಳಿಗೆ ಗೋವಾದ ಪಣಜಿ ಮತ್ತು ಮರ್ಮುಗಾವನ್ನು ವಶಪಡಿಸಿಕೊಳ್ಳಲು ಆದೇಶಿಸಲಾಯಿತು. ಗೋವಾದಲ್ಲಿ ನೆಲೆಸಿರುವ ಪ್ರದೇಶಗಳು 1961 ರ ಡಿಸೆಂಬರ್ 17 ರಂದು 09:45 ರಲ್ಲಿ ಆರಂಭವಾದವು, ಭಾರತೀಯ ಪಡೆಗಳು ಒಂದು ಘಟಕವನ್ನು ಆಕ್ರಮಿಸಿ ಆಕ್ರಮಿಸಿಕೊಂಡವು. ಈಶಾನ್ಯದಲ್ಲಿರುವ ಮೌಲಿಂಗ್`ಮ್ ಪಟ್ಟಣ ಸ್ಲಾರ್ಪ್‍ನ ಸಿಬ್ಬಂದಿ ಔಪಚಾರಿಕವಾಗಿ 1985 ರ ಡಿಸೆಂಬರ್ 19 ರಂದು ಉಳಿದ ಪೋರ್ಚುಗೀಸ್ ಪಡೆಗಳೊಂದಿಗೆ ಶರಣಾಯಿತು. ಮರುದಿನ ಬೆಳಿಗ್ಗೆ ಭಾರತೀಯರು ವಿಮಾನ ನಿಲ್ದಾಣವನ್ನು ಆಕ್ರಮಿಸಿದರು, ಅದರಲ್ಲಿ ಪೋರ್ಚುಗೀಸರು ಹೋರಾಟವಿಲ್ಲದೆ ಶರಣಾಯಿತು ಸರಿಸುಮಾರು 600 ಪೋರ್ಚುಗೀಸ್ ಸೈನಿಕರು ಮತ್ತು ಪೊಲೀಸರು 24 ಅಧಿಕಾರಿಗಳು ಸೇರಿದಂತೆ) ಸೆರೆಯಲ್ಲಿದ್ದರು. ಭಾರತೀಯರು 4 ಮೃತರಾದರು ಮತ್ತು 14 ಮಂದಿ ಗಾಯಗೊಂಡರು, ಆದರೆ ಪೋರ್ಚುಗೀಸರು 10 ಮಂದಿ ಸತ್ತರು ಮತ್ತು ಇಬ್ಬರು ಗಾಯಗೊಂಡರು. ಲಿಸ್ಬನ್ನ ಆದೇಶಗಳ ಹೊರತಾಗಿಯೂ, ಗವರ್ನರ್ ಜನರಲ್ ಮ್ಯಾನುಯೆಲ್ ಆಂಟೋನಿಯೊ ವಸ್ಸಲೋ ಇ ಸಿಲ್ವಾ ಭಾರತೀಯ ಪಡೆಗಳ ಸಂಖ್ಯಾತ್ಮಕ ಶ್ರೇಷ್ಠತೆಯನ್ನು ಸಂಗ್ರಹಿಸಿ, ಜೊತೆಗೆ ತನ್ನ ಪಡೆಗಳಿಗೆ ಆಹಾರ ಮತ್ತು ಸಾಮಗ್ರಿ ಸರಬರಾಜು ಸಾಮಗ್ರಿಗಳ ಕೊರತೆಯನ್ನು ಗಮನಿಸಿ ಶರಣಾಗಲು ನಿರ್ಧಾರ ಕೈಗೊಂಡರು.
  • ಅಧಿಕೃತ ಪೋರ್ಚುಗೀಸ್ ಶರಣಾಗತಿಯನ್ನು ಡಿಸೆಂಬರ್ 19 ರಂದು 2030 ಗಂಟೆಗಳಲ್ಲಿ ನಡೆದ ಔಪಚಾರಿಕ ಸಮಾರಂಭದಲ್ಲಿ ನಡೆಸಲಾಯಿತು. ಗವರ್ನರ್ ಜನರಲ್ ಮ್ಯಾನುಯೆಲ್ ಆಂಟೋನಿಯೋ ವಸ್ಸಲೋ ಇ ಸಿಲ್ವಾ ಗೋವಾದಲ್ಲಿ ಪೋರ್ಚುಗೀಸ್ ರೂಲ್ 451 ವರ್ಷಗಳ ಕೊನೆಗೆ ಶರಣಾಗತಿಗೆ ಸಹಿ ಹಾಕಿದರು. ಎಲ್ಲರಲ್ಲಿ, 4668 ಸೈನಿಕರು ಭಾರತೀಯರು ಸೆರೆಯಾಳುಗಳನ್ನು ಸೆರೆಹಿಡಿದಿದ್ದರು-ಇವರಲ್ಲಿ ಮಿಲಿಟರಿ ಮತ್ತು ನಾಗರಿಕ ಸಿಬ್ಬಂದಿ, ಪೋರ್ಚುಗೀಸ್, ಆಫ್ರಿಕನ್ನರು ಮತ್ತು ಗೋವಾನ್ ಸೇರಿದ್ದರು. ಪೋರ್ಚುಗೀಸ್ ಗವರ್ನರ್ ಜನರಲ್, ಗೋವಾ, ದಮನ್ ಮತ್ತು ಡಿಯುಗಳ ಶರಣಾಗತಿಯ ಮೇಲೆ ಫೆಡರಲ್ ಆಡಳಿತದ ಕೇಂದ್ರಾಡಳಿತ ಪ್ರದೇಶವನ್ನು ನೇರವಾಗಿ ಭಾರತದ ರಾಷ್ಟ್ರಪತಿಯಾಗಿ ಘೋಷಿಸಲಾಯಿತು ಮತ್ತು ಮೇಜರ್-ಜನರಲ್ ಕೆ. ಪಿ. ಕ್ಯಾಂಡೆತ್ನನ್ನು ಮಿಲಿಟರಿ ಗವರ್ನರ್ ಆಗಿ ನೇಮಕ ಮಾಡಲಾಯಿತು. ಯುದ್ಧವು ಎರಡು ದಿನಗಳವರೆಗೆ ಕೊನೆಗೊಂಡಿತು ಮತ್ತು 22 ಭಾರತೀಯ ಮತ್ತು 30 ಪೋರ್ಚುಗೀಸರ ಜೀವನವನ್ನು ಕಳೆದುಕೊಂಡಿತು. ವಿವಾದಿತ ಪ್ರಾಂತ್ಯಗಳಲ್ಲಿ 48 ಗಂಟೆಗಳ ಕಾಲ ಕಾಳೆಗ ನೆಡೆಸಿದರು. ಗೋವಾ 1961 ಬಾರನ್ ನೊಂದಿಗೆ 1947 ರ ಸಾಮಾನ್ಯ ಸೇವಾ ಪದಕವನ್ನು ಪಡೆದರು.

ನೆಹರು ನಂತರದ ಭಾರತ ಇಂದಿರಾ ಯುಗ

  • ಪ್ರಧಾನಿ::ಗುಲ್ಜಾರಿಲಾಲ್ ನಂದಾ :(ತತ್ಕಾಲ)(1898-1998, ಜನನ-ಗುಜರಾತ್) ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)ಅಧಿಕಾರ: ದಿ.27 ಮೇ 1964 ರಿಂದ ಜೂನ್ 9 1964; 13 ದಿನಗಳು.
  • ಎರಡನೇ ಪ್ರಧಾನಿ; ಲಾಲ್ ಬಹದ್ದೂರ್ ಶಾಸ್ತ್ರಿ :(1904-1966 -ಅಲಹಾಬಾದ್,ಉತ್ತರ ಪ್ರದೇಶ) ಲಾಲ್ ಬಹದ್ದೂರ್ ಶಾಸ್ತ್ರಿ, ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್; ಅಧಿಕಾರ: ದಿ.9 ಜೂನ್ 1964 ರಿಂದ ದಿ.11 ಜನವರಿ 1966; 1 ವರ್ಷ, 216 ದಿನಗಳು.
  • ಪ್ರಧಾನಿ:ಗುಲ್ಜಾರಿಲಾಲ್ ನಂದಾ;(ತತ್ಕಾಲ); ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಬರ್ಕಾಂತ, ಗುಜರಾತ್ ; ಅಧಿಕಾರ:11 ಜನವರಿ 1966 ರಿಂದ 24 ಜನವರಿ 1966; 13 ದಿನಗಳು
*ಮೂರನೇ ಪ್ರಧಾನಿ;ಇಂದಿರಾ ಗಾಂಧಿ ;(1917-1984) (ಪುನರ್ ಚುನಾಯಿತ)ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಅಧಿಕಾರ:ದಿ.24 ಜನವರಿ 1966 ರಿಂದ 4 ಮಾರ್ಚ್ 1967 ರವರೆಗೆ;
ಎರಡನೇ ಅವಧಿ ಮರು ಆಯ್ಕೆ (ಪುನರ್ ಚುನಾಯಿತ)ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಅಧಿಕಾರ:ದಿ.4 ಮಾರ್ಚ್ 1967 ರಿಂದ 15 ಮಾರ್ಚ್ 1971 ರ ವರೆಗೆ
(ಮೂರನೇ ಅವಧಿಗಳಲ್ಲಿ ಒಟ್ಟು:11 ವರ್ಷ, 59 ದಿನಗಳು) (ಪುನರ್ ಚುನಾಯಿತ)ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) 15 ಮಾರ್ಚ್ 1971 ರಿಂದ 24 ಮಾರ್ಚ್ 1977 ರ ವರೆಗೆ
ನಾಲ್ಕನೇ ಅವಧಿ (4 ವರ್ಷ, 291 ದಿನಗಳು) ಕಾಂಗ್ರೆಸ್:ಒಟ್ಟು ಅಧಿಕಾರದ ಅವಧಿ: 15ವರ್ಷ - 350 ದಿನಗಳು 14 ಜನವರಿ 1980 ರಿಂದ 31 ಅಕ್ಟೋಬರ್1984
ಭಾರತ ಗಣರಾಜ್ಯದ ಇತಿಹಾಸ 
ನೆಹರು ಅವರ ಮಗಳು ಇಂದಿರಾ ಗಾಂಧಿ ಸತತವಾಗಿ ಮೂರು ಬಾರಿ (1966-77) ಮತ್ತು ನಾಲ್ಕನೇ ಅವಧಿಗೆ (1980-84) ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.
  • ಅಧ್ಯಕ್ಷರು : ಡಾ.ಸರ್ವೆಪಲ್ಲಿ ರಾಧಾಕೃಷ್ಣನ್; (1888-1975) ದಿ. 13 ಮೇ 1962 ರಿಂದ ದಿ.13 ಮೇ 1967 ;ಅಧಿಕಾರ 60 ತಿಂಗಳು.
  • ಅಧ್ಯಕ್ಷರು; ಜಾಕಿರ್ ಹುಸೇನ್;(1897-1969); ದಿ.13 ಮೇ 1967 ರಿಂದ 3 ಮೇ 1969 ರವರೆಗೆ 24 ತಿಂಗಳು.
ಭಾರತ ಗಣರಾಜ್ಯದ ಇತಿಹಾಸ 
ಸರ್ವೆಪಲ್ಲಿ ರಾಧಾಕೃಷ್ಣನ್ -1962
  • ಪ್ರಧಾನಿ ಜವಾಹರಲಾಲ್ ನೆಹರೂ ದಿ.27 ಮೇ 1964 ರಂದು ನಿಧನರಾದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 1965 ರಲ್ಲಿ ಭಾರತ - ಪಾಕಿಸ್ತಾನದ ಎರಡನೇ ಕಾಶ್ಮೀರ ಯುದ್ಧದಲ್ಲಿ, ಮತ್ತೆ ಕಾಶ್ಮೀರದ ವಿಚಾರವಾಗಿ ಹೋರಾಡಿದವು, ಆದರೆ ಕಾಶ್ಮೀರದ ಗಡಿಯ ಬಗೆಗೆ ಯಾವುದೇ ನಿರ್ಣಾಯಕ ತೀರ್ಮಾನ ಅಥವಾ ಬದಲಾವಣೆಯಿಲ್ಲದಂತೆ ಮೊದಲಿದ್ದ ಸ್ಥಾನಗಳಿಗೆ ಮರಳುವಂತೆ, ಸೋವಿಯತ್ ಸರಕಾರದ ಮಧ್ಯಸ್ಥಿಕೆಯಡಿಯಲ್ಲಿ “ತಾಶ್ಕೆಂಟ್ ಒಪ್ಪಂದಕ್ಕೆ” ಸಹಿ ಹಾಕಲಾಯಿತು. ಆದರೆ ಸಹಿ ಸಮಾರಂಭದ ನಂತರ ಶಾಸ್ತ್ರಿ ಅವರು ಆ ದಿನ ರಾತ್ರಿ ಹೃದಯ ಆಘಾತದಿಂದ ನಿಧನರಾದರು. ಭಾರತದಲ್ಲಿ ನಾಯಕತ್ವ ಚುನಾವಣೆ ನೆಡೆದು, ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ನೆಹರು ಅವರ ಮಗಳಾದ ಇಂದಿರಾ ಗಾಂಧಿಯವರು, ಮೂರನೇ ಪ್ರಧಾನಮಂತ್ರಿಯಾದರು. ಅವರು ಬಲಪಂಥೀಯ ನಾಯಕ ಮೊರಾರ್ಜಿ ದೇಸಾಯಿಯನ್ನು ನಾಯಕತ್ವ ಆಯ್ಕೆಯಲ್ಲಿ ಸೋಲಿಸಿದರು.
  • ಸರಕುಗಳು, ನಿರುದ್ಯೋಗ, ಆರ್ಥಿಕ ನಿಶ್ಚಲತೆ ಮತ್ತು ಆಹಾರ ಕೊರತೆಯಿಂದ ಬೆಲೆಗಳ ಹೆಚ್ಚಳದ ಬಿಕ್ಕಟ್ಟಿನ ಕಾರಣದಿಂದ 1967 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕುಗ್ಗಿದ ಬಹುಮತವನ್ನು ಪಡೆಯಿತು. ಭಾರತೀಯ ವ್ಯವಹಾರಗಳು ಮತ್ತು ಗ್ರಾಹಕರಲ್ಲಿ ಹೆಚ್ಚಿನ ಸಂಕಷ್ಟವನ್ನು ಸೃಷ್ಟಿಸಿದ ರೂಪಾಯಿ ಅಪಮೌಲ್ಯವನ್ನು ಒಪ್ಪಿಕೊಂಡ ನಂತರ ಇಂದಿರಾ ಗಾಂಧಿಯವರು ಕಠಿಣ ಕ್ರಮಗಳೊಡನೆ ಆಡಳಿತದ ಮೇಲೆ ಗಮನ ಹರಿಸಿದರು. ರಾಜಕೀಯ ವಿವಾದಗಳ ಕಾರಣದಿಂದ ಅಮೇರಿಕ ಸಂಯುಕ್ತ ಸಂಸ್ಥಾನದ ಗೋಧಿ ಆಮದು ಕುಸಿಯಿತು.
  • ನಂತರ ಮೊರಾರ್ಜಿ ದೇಸಾಯಿ ಉಪ ಪ್ರಧಾನಮಂತ್ರಿ ಮತ್ತು ಹಣಕಾಸು ಸಚಿವರಾಗಿ ಇಂದಿರಾ ಗಾಂಧಿ ಸರಕಾರಕ್ಕೆ ಪ್ರವೇಶಿಸಿದರು. ಹಿರಿಯ ಕಾಂಗ್ರೆಸ್ ರಾಜಕಾರಣಿಗಳೊಂದಿಗೆ ಇಂದಿರಾಗಾಂಧಿ ಅವರ ಅಧಿಕಾರವನ್ನು ನಿರ್ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ರಾಜಕೀಯ ಸಲಹೆಗಾರ ಪಿ.ಎನ್. ಹಕ್ಸರ್ ಅವರ ಸಲಹೆಯ ಮೇಲೆ, ಗಾಂಧಿಯವರು ಸಮಾಜವಾದಿ ನೀತಿಗಳ ಕಡೆಗೆ ಒಲಿದ ಒಂದು ಪ್ರಮುಖ ಬದಲಾವಣೆಯಿಂದ ತನ್ನ ಜನಪ್ರಿಯ ಮನವಿಯನ್ನು ಪುನಃ ನವೀಕರಿಸಿದರು. ಅವರು ಹಿಂದೆ ರಾಜರಿಗೆ ಖಾತರಿಯಾಗಿ ಕೊಡುತ್ತಿದ್ದ ಭಾರತೀಯ ರಾಯಧನವನ್ನು (ಪ್ರಿವಿ ಪರ್ಸ್) ಯಶಸ್ವಿಯಾಗಿ ರದ್ದುಮಾಡಿದರು. ಭಾರತದ ದೊಡ್ಡ ಖಾಸಗಿಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿ, ಪಕ್ಷದ ಹಿರಿಯ ಪಟ್ಟಭದರ್ರ ವಿರುದ್ಧದ ಪ್ರಮುಖ ಆಕ್ರಮಣವನ್ನು ಮಾಡಿದರು. ದೇಸಾಯಿ ಮತ್ತು ಭಾರತದ ವ್ಯಾಪಾರ ಸಮುದಾಯದಿಂದ ಪ್ರತಿರೋಧವನ್ನು ಹೊಂದಿದ್ದರೂ, ಈ ನೀತಿಯು ಜನಸಾಮಾನ್ಯರಿಗೆ ಜನಪ್ರಿಯವಾಗಿತ್ತು. ಕಾಂಗ್ರೆಸ್ ನ ರಾಜಕಾರಣಿಗಳು ಗಾಂಧಿಯವರನ್ನು ಕಾಂಗ್ರೆಸ್ ಸದಸ್ಯತ್ವವನ್ನು ಅಮಾನತುಗೊಳಿಸುವ ಮೂಲಕ ಗಾಂಧಿಯನ್ನು ಪಕ್ಷದಿಂದ ಹೊರಹಾಕಲು ಪ್ರಯತ್ನಿಸಿದಾಗ, ಇಂದಿರಾಗಾಂಧಿಯವರು ತಮ್ಮ ಹೊಸದಾಗಿ ರಚಿಸಿದ ಪಕ್ಷ ಕಾಂಗ್ರೆಸ್ (ಆರ್) ಗೆ ಸಂಸತ್ ಸದಸ್ಯರ ದೊಡ್ಡ ವಲಸಿಗರಿಂದ ತಮ್ಮ ಅಧಿಕಾರ ಉಳಿಸಿಕೊಂಡರು. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕೋಟೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1969 ರಲ್ಲಿ ವಿಭಜನೆಯಾಯಿತು. ಗಾಂಧಿಯವರು ಅಲ್ಪ ಬಹುಮತದೊಂದಿಗೆ ಆಡಳಿತ ನಡೆಸುತ್ತಿದ್ದರು.

1970 ರ ದಶಕ

  • ನಾಲ್ಕನೇ ಅಧ್ಯಕ್ಷರು: ವರಾಹಗಿರಿ ವೆಂಕಟ ಗಿರಿ ; 3 ತಿಂಗಳು ನಿಯೋಜಿತ; ನಂತರ ಚುನಾಯಿತ (1894-1980) ದಿ. 3 ಮೇ 1969 ರಿಂದ 20 ಜುಲೈ 1969; 3 ತಿಂಗಳು; ಪನಃ ಚುನಾಯಿತ:ದಿ.24 ಆಗಸ್ಟ್ 1969 24 ಆಗಸ್ಟ್ 1974; 60 ತಿಂಗಳು.
ಭಾರತ ಗಣರಾಜ್ಯದ ಇತಿಹಾಸ 
ಐಎನ್ಎಸ್ ವಿಕ್ರಾಂತ್ ಇಂಡಿಯನ್ ವಿಮಾನವಾಹಕ ನೌಕೆಯಿಂದ 1971 ರ ಇಂಡೋ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಅಲಿಜ್ ಯುದ್ಧ ವಿಮಾನವನ್ನು ಉಪಯೋಗಿಸಲು ಪ್ರಾರಂಭಿಸುತ್ತದೆ.
ಭಾರತ ಗಣರಾಜ್ಯದ ಇತಿಹಾಸ 
ಪರಮಾಣು ಶಸ್ತ್ರವನ್ನು ಪರೀಕ್ಷಿಸಿದ ರಾಜಸ್ತಾನದಲ್ಲಿನ ಪೋಖ್ರಾನ್ ಪ್ರದೇಶ-Pokhran-1
  • 1971 ರಲ್ಲಿ, ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ (ಆರ್) ಸದಸ್ಯರುಗಳು ಬಹಳ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದರು. ಹೊಸ ಸರ್ಕಾರದಿಂದ ಬ್ಯಾಂಕುಗಳ ರಾಷ್ಟ್ರೀಕರಣವನ್ನು ಕೈಗೊಳ್ಳಲಾಯಿತು ಮತ್ತು ಅನೇಕ ಇತರ ಸಮಾಜವಾದಿ ಆರ್ಥಿಕ ಮತ್ತು ಕೈಗಾರಿಕಾ ನೀತಿಗಳನ್ನು ಜಾರಿಗೊಳಿಸಲಾಯಿತು. ಪಾಕಿಸ್ತಾನಕ್ಕೆ ಸೇರಿದ ಪೂರ್ವ ಬಂಗಾಳದಲ್ಲಿ ಅಂತರ್-ಯುದ್ಧವಾಗಿ ಪಾಕಿಸ್ತಾನದ ಸೇನೆಯ ಶೋಷಣೆ- ಹಿಂಸಾಚಾರಕ್ಕೆ ಒಳಗಾಗಿ ಲಕ್ಷಾಂತರ ನಿರಾಶ್ರಿತರು (ಸುಮಾರು 90 ಲಕ್ಷ) ಪೂರ್ವ ಪಾಕಿಸ್ತಾನವಾದ ಬಂಗಾಳದಿಂದ ಓಡಿ ಭಾರತದೊಳಕ್ಕೆ ಬಂದರು. ಪಾಕಿಸ್ತಾನದ-ಬಂಗಾಳದ ಅರ್ಧದಲ್ಲಿ ನಡೆಯುತ್ತಿರುವ ನಾಗರಿಕ ಅಂತರ್-ಯುದ್ಧದ ಸಮಯದಲ್ಲಿ ಪಾಕಿಸ್ತಾನ ಭಾರತದಮೇಲೆ ಪೂರ್ವ-ರಕ್ಷಕ ಧಾಳಿಯನ್ನು ಮಾಡಿದ ನಂತರ ಭಾರತ ಬಾಂಗ್ಲಾದೇಶದ ಸ್ವಾತಂತ್ರ್ಯ ಯುದ್ಧದಲ್ಲಿ ಮಧ್ಯಪ್ರವೇಶಿಸಿತು. ಈ ಸಂಘರ್ಷವು ಪೂರ್ವ ಪಾಕಿಸ್ತಾನದ ಸ್ವಾತಂತ್ರ್ಯಕ್ಕೆ ಕಾರಣವಾಯಿತು, ಇದು ಬಾಂಗ್ಲಾದೇಶವೆಂದು ಹೆಸರಾಯಿತು. ಪಾಕಿಸ್ತಾನದ ಮೇಲಿನ ಈ ವಿಜಯ ಪ್ರಧಾನಿ ಇಂದಿರಾ ಗಾಂಧಿಯವರ ಮಹತ್ತರವಾದ ಜನಪ್ರಿಯತೆಗೆ ಕಾರಣವಾಯಿತು. ಅಮೇರಿಕ ಸಂಯುಕ್ತ ಸಂಸ್ಥಾನದೊಂದಿಗಿನ ಸಂಬಂಧಗಳು ತೀವ್ರವಾಗಿ ಕ್ಷೀಣಿಸಿತು ಮತ್ತು ಸೋವಿಯೆಟ್ ಯೂನಿಯನ್ ಜೊತೆಗಿನ ಸ್ನೇಹಕ್ಕಾಗಿ 20 ವರ್ಷಗಳ ರಕ್ಷಣಾ ಒಪ್ಪಂದಕ್ಕೆ ಭಾರತವು ಸಹಿ ಹಾಕಿತು. ಈ ಅನ್ಯದೇಶ-ಸಂಯೋಜನೆಯಿಂದ ಮೊದಲಬಾರಿಗೆ ಸ್ಪಷ್ಟವಾಗಿ ಭಾರತದ ಅಲಿಪ್ತ ನೀತಿಯು ಮುರಿದುಹೋಯಿತು. 1974 ರಲ್ಲಿ ಪೋಖ್ರಾನ್ ಸಮೀಪದ ರಾಜಸ್ಥಾನದ ಮರುಭೂಮಿಯಲ್ಲಿ ಭಾರತ ತನ್ನ ಮೊದಲ ಪರಮಾಣು ಶಸ್ತ್ರಾಸ್ತ್ರವನ್ನು ಪರೀಕ್ಷಿಸಿತು.
  • ಭಾರತ ಪರಮಾಣು ಕಾರ್ಯಕ್ರಮದ ಮುಖ್ಯ ಪ್ರಯೋಗ ಪ್ರದೇಶ- 'ಪೋಖ್ರಾನ್ ಟೆಸ್ಟ್ ರೇಂಜ್' ರಾಜಸ್ತಾನದ ಪೋಖ್ರಾನ್ ಪುರಸಭೆಯ ವ್ಯಾಪ್ತಿಯಲ್ಲಿದೆ. ಭಾರತೀಯ ಪರಮಾಣು ಪರೀಕ್ಷಾ ತಾಣ ಪೋಖ್ರಾನ್ ಪಟ್ಟಣದ ವಾಯುವ್ಯಕ್ಕೆ 45 ಕಿಮೀ ಮತ್ತು ಖೆತೋಲೈ ಹಳ್ಳಿಗೆ 4 ಕಿ.ಮೀ ಉತ್ತರದಲ್ಲಿದೆ. ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಂದ ಭಾಭಾ ಅಟಾಮಿಕ್ ಸಂಶೋಧನಾ ಕೇಂದ್ರಕ್ಕೆ ನೀಡಲಾದ ಅಧಿಕಾರವನ್ನು ಅನುಸರಿಸಿ, ಮೇ 1974 ರ ಮೊದಲು ಇದನ್ನು ನಿರ್ಮಿಸಿದ, ಭಾರತದ ಮೊದಲ ಪರಮಾಣು ಸಾಧನವನ್ನು ಆಸ್ಫೋಟಿಸಿದರು. ಸರ್ಕಾರವು,ಈ ಸಾಧನದ ಬೆಳವಣಿಗೆಯನ್ನು ಔಪಚಾರಿಕವಾಗಿ "ಶಾಂತಿಗಾಗಿ ಪರಮಾಣು ಸ್ಪೋಟ", ("ಪೀಸ್ಫುಲ್ ನ್ಯೂಕ್ಲಿಯರ್ ಎಕ್ಸ್ಪ್ಲೊಸಿವ್" -ಪಿಎನ್ಇ) ಎಂದು ಕರೆಯಲಾಯಿತು, ಆದರೆ ಬೇರೆಡೆ, ವಿಶೇಷವಾಗಿ ಅದರ ಆಸ್ಫೋಟನದ ನಂತರ, ಇದು ಸಾಮಾನ್ಯವಾಗಿ "ಆಪರೇಷನ್ ಸ್ಮೈಲ್ ಬುದ್ಧ" -ಬುದ್ಧನ ಅರಳಿದ ನಗು" ಎಂದು ಸಾಮಾನ್ಯವಾಗಿ ಕರೆಯಲಾಗಿದೆ. ವಿದೇಶಾಂಗ ಸಚಿವಾಲಯವು "ಪೋಖ್ರಾನ್- I" ಪರೀಕ್ಷೆಯನ್ನು ಗೊತ್ತುಪಡಿಸಿತ್ತು.
  • ಪರೀಕ್ಷೆಯ ನಂತರ, ಭಾರತೀಯ ಸರ್ಕಾರವು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುವ ಉದ್ದೇಶವಿಲ್ಲ ಎಂದು ಘೋಷಿಸಿತು - ಹಾಗೆ ಅದನ್ನು ತಯಾರಿಸುವುದಕ್ಕೆ ಅದು ಸಮರ್ಥ - ಮತ್ತು ಭಾರತವು ಪರಮಾಣು ತಂತ್ರಜ್ಞಾನದಲ್ಲಿ ಸ್ವ-ಅವಲಂಬಿತವಾಗಿದೆ. ಶಾಂತಿಯುತ ಉದ್ದೇಶಗಳಿಗಾಗಿ ಪರಮಾಣು ಶಕ್ತಿಯನ್ನು ಬಳಸಿಕೊಳ್ಳುತ್ತದೆ ಎಂದು ಹೇಳಿತು. ಪರೀಕ್ಷಾ ಶ್ರೇಣಿಸಿದ್ಧತೆಯನ್ನು ಭಾರತೀಯ ಸೇನಾ ಕಾರ್ಪ್ಸ್ ಇಂಜಿನಿಯರ್‍ಗಳು ನಿರ್ಮಿಸಿದ್ದರು ಮತ್ತು ಆ ಪ್ರದೇಶ ಭಾರತೀಯ ಸೇನೆಯ ನಿಯಂತ್ರಣದಲ್ಲಿದೆ.

ಬ್ಯಾಂಕುಗಳ ರಾಷ್ಟ್ರೀಕರಣ ಮತ್ತು ರಾಜಧನ ರದ್ದತಿ

  • ಬಡವರ ಪರವಾದ ನೀತಿಗಳನ್ನು ಅನುಸರಿಸಿ, ಅವರು 1969 ರಲ್ಲಿ 14 ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದರು ಮತ್ತು ಹಿಂದಿನ ರಾಜರ "ಖಾಸಗಿ ಕೊಡಿಗೆ ಹಣದ" ಅನುದಾನವನ್ನು (privy purses) ರದ್ದುಗೊಳಿಸಿದರು. ಈ ಪ್ರಕ್ರಿಯೆಯಲ್ಲಿ, ಅಸ್ತಿತ್ವದಲ್ಲಿದ್ದ ಹಿರಿಯ ಕಾಂಗ್ರಸ್ಸಿನ ನಾಯಕರ ಶ್ರೀಮಂತ ಪರವಾದ ನಿಲುವು, ಮತ್ತು ಅವರ ಅಸಮರ್ಥತೆ, ಅವರ ವೃದ್ಧಾಪ್ಯದ ಕಾರಣದಿಂದಾಗಿ ಆಮೂಲಾಗ್ರ ನಡೆಯನ್ನು ನಿರ್ಲಕ್ಷಿಸಿದರು. ಸ್ವಲ್ಪ ಸಮಯದ ನಂತರ ಪಕ್ಷ ವಿಭಜನೆಯಾಯಿತು, ಮತ್ತು ಶ್ರೀಮತಿ ಗಾಂಧಿ ಅವರು ಪಕ್ಷದ ಪ್ರಬಲ ವಿಭಾಗದ ನಿರ್ವಿವಾದ ನಾಯಕರಾದರು. ಪುನರಾವಲೋಕನದಲ್ಲಿ, ‘ಗರಿಬಿ ಹಟಾವೊ’ ವಾಕ್ಚಾತುರ್ಯ, ಆಡಂಬರವಿಲ್ಲದ ಮತ್ತು ಸರಳವಾದ ನೀತಿಯಾಗಿ ಕಂಡುಬಂದಿತು. ಆದರೆ ಭಾರತೀಯ ರಾಜಕೀಯದಲ್ಲಿ ಮೊದಲ ಬಾರಿಗೆ ಬಡವರ ಕಳವಳಗಳನ್ನು ನೇರವಾಗಿ ಪರಿಹರಿಸಲು ಪ್ರಯತ್ನಿಸಲಾಗಿತ್ತು, ಇದು ಅವರ ಅಧಿಕಾರದ ಬಲವರ್ಧನೆಗೆ ಕಾರಣವಾಯಿತು.

ಭಾರತದಲ್ಲಿ ಸಿಕ್ಕಿಂನ ವಿಲೀನ

ಭಾರತ ಗಣರಾಜ್ಯದ ಇತಿಹಾಸ 
ಸಿಕ್ಕಿಂನಲ್ಲಿರುವ ರುಮ್ಟೆಕ್ ಆಶ್ರಮ.ಸಿಕ್ಕಿಂ ಭಾರತ ಒಕ್ಕೂಟದ 22 ನೇ ರಾಜ್ಯವಾಯಿತು.
  • 1973 ರಲ್ಲಿ ಸಿಕ್ಕಿಂ ಸಾಮ್ರಾಜ್ಯದಲ್ಲಿ ರಾಜ-ವಿರೋಧಿ ಗಲಭೆ ನಡೆಯಿತು. 1975 ರಲ್ಲಿ, ಸಿಕ್ಕಿಂನ ಪ್ರಧಾನಿ ಸಿಕ್ಕಿಂಗೆ ಭಾರತೀಯ ಸಂಸತ್ತಿಗೆ ಭಾರತದ ರಾಜ್ಯವಾಗಿ ಸೇರಲು ಮನವಿ ಸಲ್ಲಿಸಿದರು. ಆ ವರ್ಷದ ಏಪ್ರಿಲ್ ನ ಲ್ಲಿ, ಭಾರತೀಯ ಸೇನೆಯು ಗ್ಯಾಂಗ್ಟಾಕ್ ನಗರವನ್ನು ವಶಪಡಿಸಿಕೊಂಡಿತು ಮತ್ತು ಚೋಗ್ಯಲ್ ನ ಅರಮನೆಯ ಕಾವಲುಗಾರರನ್ನು ನಿಶ್ಶಸ್ತ್ರಗೊಳಿಸಿತು. ಅಲ್ಲಿಂದೀಚೆಗೆ, ಜನಾಭಿಪ್ರಾಯವನ್ನು ಸಂಗ್ರಹಿಸಲಾಯಿತು. ಅದರಲ್ಲಿ ಶೇ. 97.5 ರಷ್ಟು ಮತದಾರರು ಭಾರತದೊಡನೆ ಸೇರಲು ಬೆಂಬಲಿಸುವಲ್ಲಿ ಜನಾಭಿಪ್ರಾಯ ಒದಗಿದ ಪರಿಣಾಮಕಾರಿಯಾಗಿ ಸಿಕ್ಕಿಂ ಭಾರತದೊಂದಿಗೆ ಒಕ್ಕೂಟದಲ್ಲಿ ಸೇರಲು ಅನುಮೋದಿಸಿತು.
  • ಜನಾಭಿಪ್ರಾಯದ ಸಮಯದಲ್ಲಿ ಕೇವಲ 200,000 ಜನರ ದೇಶದಲ್ಲಿ 20,000-40,000 ಸೈನಿಕರನ್ನು ಭಾರತ ಇರಿಸಿತ್ತು ಎಂದು ಹೇಳಲಾಗಿದೆ. [22] 16 ಮೇ 1975 ರಂದು, ಸಿಕ್ಕಿಂ ಭಾರತೀಯ ಒಕ್ಕೂಟದ 22 ನೇ ರಾಜ್ಯವಾಯಿತು ಮತ್ತು ರಾಜಪ್ರಭುತ್ವವನ್ನು ರದ್ದುಗೊಳಿಸಲಾಯಿತು. ಹೊಸ ರಾಜ್ಯದ ಸಂಯೋಜನೆಯನ್ನು ಸಕ್ರಿಯಗೊಳಿಸಲು, ಭಾರತೀಯ ಸಂಸತ್ತು ಭಾರತೀಯ ಸಂವಿಧಾನವನ್ನು ತಿದ್ದುಪಡಿ ಮಾಡಿತು. ಮೊದಲಿಗೆ, 35 ನೇ ತಿದ್ದುಪಡಿಯು ಸಿಕ್ಕಿಂ ಅನ್ನು "ಅಸೋಸಿಯೇಟ್ ಸ್ಟೇಟ್" ಎಂದು ಕರೆಯುವ ಒಂದು ಷರತ್ತುಗಳನ್ನು ಹಾಕಿತು, ಯಾವುದೇ ರಾಜ್ಯದಿಂದ ಬಳಸಲ್ಪಡದ ವಿಶೇಷ ಸ್ಥಾನಮಾನ. ಒಂದು ತಿಂಗಳ ನಂತರ, 36 ನೆಯ ತಿದ್ದುಪಡಿಯು 35 ನೇ ತಿದ್ದುಪಡಿಯನ್ನು ರದ್ದುಗೊಳಿಸಿತು, ಮತ್ತು ಸಿಕ್ಕಿಂಗೆ ಸಂಪೂರ್ಣ ರಾಜ್ಯವನ್ನು ರೂಪಿಸಿತು, ಅದರ ಹೆಸರನ್ನು ಸಂವಿಧಾನದ ಒಂದನೇ ಪಟ್ಟಿಗೆ ಸೇರಿಸಿತು.

ಈಶಾನ್ಯ ರಾಜ್ಯಗಳ ರಚನೆ

  • ಈಶಾನ್ಯ ಭಾರತದಲ್ಲಿನ ಅಸ್ಸಾಮ್ ರಾಜ್ಯ 1970 ರಲ್ಲಿ ಅಸ್ಸಾಂನ ಮೇರೆಯೊಳಗೆ ಹಲವಾರು ರಾಜ್ಯಗಳಾಗಿ ವಿಂಗಡಿಸಲ್ಪಟ್ಟಿತು. 1963 ರಲ್ಲಿ ನಾಗಾ ಹಿಲ್ಸ್ ಜಿಲ್ಲೆಯು ನಾಗಾಲ್ಯಾಂಡ್ ಹೆಸರಿನಲ್ಲಿ ಭಾರತದ 16 ನೇ ರಾಜ್ಯವಾಯಿತು. ತುಯೆನ್ಸಾಂಗ್‍ನ ಒಂದು ಭಾಗವನ್ನು ನಾಗಾಲ್ಯಾಂಡಿಗೆ ಸೇರಿಸಲಾಯಿತು. 1970 ರಲ್ಲಿ, ಖಾಸಿ, ಜಿಯಾಂಟಿಯಾ ಮತ್ತು ಗಾರೊ ಜನರ ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿ, ಖಾಸಿ ಹಿಲ್ಸ್, ಗಳನ್ನು, ಜೈನ್ತಿಯಾ ಹಿಲ್ಸ್, ಮತ್ತು ಗಾರೊ ಹಿಲ್ಸ್ ಗಳನ್ನು ಆಸ್ಸಾಂನೊಳಗೆ ಸ್ವಾಯತ್ತ ರಾಜ್ಯವಾಗಿ ರಚಿಸಿದ ಜಿಲ್ಲೆಗಳು; 1972 ರಲ್ಲಿ ಇದು ಮೇಘಾಲಯ ಹೆಸರಿನಲ್ಲಿ ಪ್ರತ್ಯೇಕ ರಾಜ್ಯವಾಯಿತು. 1972 ರಲ್ಲಿ, ಅರುಣಾಚಲ ಪ್ರದೇಶ (ಈಶಾನ್ಯ ಫ್ರಾಂಟಿಯರ್ ಏಜೆನ್ಸಿ) ಮತ್ತು ಮಿಜೋರಾಮ್ (ದಕ್ಷಿಣದಲ್ಲಿರುವ ಮಿಜೊ ಬೆಟ್ಟಗಳಿಂದ) ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ಸಾಂನಿಂದ ಬೇರ್ಪಟ್ಟವು; 1986 ರಲ್ಲಿ ಎರಡೂ ರಾಜ್ಯಗಳಾಗಿ ಮಾರ್ಪಟ್ಟವು.

ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿ (ಆಪರೇಷನ್ ಫ್ಲಡ್- - ಕ್ಷೀರ ಪ್ರವಾಹ)

ಭಾರತ ಗಣರಾಜ್ಯದ ಇತಿಹಾಸ 
ಪಂಜಾಬಿನಲ್ಲಿ ಕೃಷಿ
ಭಾರತ ಗಣರಾಜ್ಯದ ಇತಿಹಾಸ 
Amul Plant at Anand
  • 1947 ರಲ್ಲಿದ್ದ 35 ಕೋಟಿಯಿಂದ 1970 ರ ದಶಕದ ಆರಂಭದಲ್ಲಿ ಭಾರತದ ಜನಸಂಖ್ಯೆಯು 50 ಕೋಟಿ (500 ದಶಲಕ್ಷ) ಪ್ರಮಾಣವನ್ನು ದಾಟಿತು, ಆದರೂ ಹಸಿರು ಕ್ರಾಂತಿ ಯೋಜನೆಯ(ಗ್ರೀನ್ ರೆವಲ್ಯೂಷನ್) ನೀರಾವರಿ ಅಭಿವೃದ್ಧಿಯಿಂದ ಆಹಾರ ಉತ್ಪಾದನೆ ಹೆಚ್ಚಿದ ಕಾರಣ ಭಾರತ ದೀರ್ಘಕಾಲದಿಂದ ಬಳಲುತ್ತಿದ್ದ ಆಹಾರದ ಬಿಕ್ಕಟ್ಟನ್ನು ಹೆಚ್ಚು ಸುಧಾರಿಸಿದ ಕೃಷಿ ಉತ್ಪಾದನೆಯೊಂದಿಗೆ ಪರಿಹರಿಸಲಾಯಿತು. ಸರ್ಕಾರವು ಆಧುನಿಕ ಕೃಷಿ ಉಪಕರಣಗಳನ್ನು, ಹೊಸ ವಿಧದ ಹೈಬ್ರಿಡ್ -ಜೆನರಿಕ್ ಬೀಜಗಳನ್ನು ಪ್ರಾಯೋಜಿಸಿತು, ಮತ್ತು ರೈತರಿಗೆ ಆರ್ಥಿಕ ಸಹಾಯವನ್ನು ಹೆಚ್ಚಿಸಿತು, ಅದು ಗೋಧಿ, ಅಕ್ಕಿ ಮತ್ತು ಜೋಳ ಮುಂತಾದ ಆಹಾರ ಬೆಳೆಗಳನ್ನು ಹೆಚ್ಚಿಸಿತು. ಹತ್ತಿ, ಚಹಾ, ತಂಬಾಕು ಮತ್ತು ಕಾಫಿಗಳಂತಹ ವಾಣಿಜ್ಯ ಬೆಳೆಗಳ ಹೆಚ್ಚನ ಉತ್ಪಾದನೆಗೆ ಕಾರಣವಾಯಿತು. [27] ] ಭಾರತದ ಗಂಗಾನದೀ ಬಯಲು ಬಯಲು ಮತ್ತು ಪಂಜಾಬ್ ರಾಜ್ಯಗಳಾದ್ಯಂತ ಅಣೆಕಟ್ಟೆ ಕಾಲುವೆ ನೀರಾವರಿ ಹೆಚ್ಚಿದ ಕಾರಣ ಕೃಷಿ ಉತ್ಪಾದನೆ ವಿಸ್ತರಿಸಿ ಹೆಚ್ಚಿತು. ಅದುವರವಿಗೂ ಭಾರತ ಆಹಾರ ಧಾನ್ಯಗಳ ಕೊರತೆಯಿಂದ ಆಹಾರ ಧಾನ್ಯಗಳನ್ನು ಆಮದುಗಳನ್ನು ಕೊನೆಗೊಳಿಸುವುದರ ಮೂಲಕ ತನ್ನದೇ ಆದ ಜನಸಂಖ್ಯೆಯನ್ನು ಆಹಾರಕ್ಕಾಗಿ ಭಾರತವು ಸ್ವಾವಲಂಬಿಯಾಗುವಂತೆ ಮಾಡಿತು.
  • ಇದು ಎರಡು ದಶಕಗಳಷ್ಟು ಕಾಲ ನೆಡೆದ ಕ್ಷೀರ ಕ್ರಾಂತಿ ಕಾರ್ಯಾಚರಣೆ ಅಡಿಯಲ್ಲಿ, ಸರ್ಕಾರವು ಹಾಲು ಉತ್ಪಾದನೆಯನ್ನು ಪ್ರೋತ್ಸಾಹಿಸಿತು, ಹಾಲು ಉತ್ಪಾದನೆ ಸಾಕಷ್ಟು ಹೆಚ್ಚಾಯಿತು, ಮತ್ತು ಭಾರತದಾದ್ಯಂತ ಜಾನುವಾರುಗಳ ಸಾಕಾಣಿಕೆಕೆಯನ್ನು ಸುಧಾರಿಸಿ ಹೆಚ್ಚಿಸಿತು.

1971 ರ ಭಾರತ-ಪಾಕಿಸ್ತಾನ ಯುದ್ಧ

ಭಾರತ ಗಣರಾಜ್ಯದ ಇತಿಹಾಸ 
1971 ರ ಭಾರತ-ಪಾಕಿಸ್ತಾನ ಯುದ್ಧವು ಪಾಕಿಸ್ತಾನದ ಪೂರ್ವದ ಸೈನ್ಯದ ಕಮಾಂಡರ್ ಲೆಫ್ಟಿನೆಂಟ್-ಜನರಲ್ ಎ. ಎ. ಕೆ. ನಿಯಾಜಿ, ದಿ.16 ಡಿಸೆಂಬರ್ 1971 ರಂದು ಭಾರತ ಲೆಫ್ಟಿನೆಂಟ್ ಜನರಲ್ ಜಗ್ಜಿತ್ ಸಿಂಗ್ ಅರೋರಾ ಉಪಸ್ಥಿತಿಯಲ್ಲಿ ಢಾಕಾದಲ್ಲಿ ಶರಣಾಗತಿಯ ಸಾಧನಕ್ಕೆ ಸಹಿ ಹಾಕುವುದರೊಂದಿಗೆ ಅಂತ್ಯಗೊಂಡಿತು. ಭಾರತೀಯ ನೌಕಾಪಡೆ ವೈಸ್ ಅಡ್ಮಿರಲ್ ಕೃಷ್ಣನ್, ಇಂಡಿಯನ್ ಏರ್ ಫೋರ್ಸ್ ಏರ್ ಮಾರ್ಷಲ್ ದಿವಾನ್, ಭಾರತೀಯ ಸೇನಾ ಲೆಫ್ಟಿನೆಂಟ್ ಜನರಲ್ ಜಗತ್ ಸಿಂಗ್, ಮೇಜ್ ಜನರಲ್ ಜೆಎಫ್ಆರ್ ಜಾಕೋಬ್ (ಫ್ಲಾಟ್ ಲೆಫ್ಟಿನೆಂಟ್ ಕೃಷ್ಣಮೂರ್ತಿ ಅವರ ಭುಜದ ಮೇಲೆ ಗೋಚರಿಸುತ್ತಿರುವುದು). ಅಖಿಲ ಭಾರತ ರೇಡಿಯೊದ ಹಿರಿಯ ನ್ಯೂಸ್ ಕಾಸ್ಟರ್ ಸುರಜಿತ್ ಸೆನ್ ಮೈಕ್ರೊಫೋನ್ ಅನ್ನು ಬಲಗಡೆ ಹಿಡಿದಿದ್ದಾರೆ.
  • 3 ನೆಯ ಪ್ರಧಾನಿ :ಇಂದಿರಾ ಗಾಂಧಿ;ದಿ. 24 ಮಾರ್ಚಿ 1977ರ ವರೆಗೆ.
  • 3 ನೆಯ ಅಧ್ಯಕ್ಷರು: ಝಕೀರ್ ಹುಸೇನ್ (ಅಧಿಕಾರದಲ್ಲಿದ್ದಾಗ ಮರಣಹೊಂದಿದರು);(1897-1969); ದಿ.13 ಮೇ 1967 ರಿಂದ 3 ಮೇ 1969; ಅಧಕಾರ- 24 ತಿಂಗಳು.
  • ಅಧ್ಯಕ್ಷರು(ನಿಯೋಜಿತರು):ವರಾಹಗಿರಿ ವೆಂಕಟ ಗಿರಿ;(ಅವಧಿ ಪೂರ್ಣಗೊಳಿಸಿಲ್ಲ)(1894-1980) ದಿ.3 ಮೇ 1969 ರಿಂದ 20 ಜುಲೈ 1969 3 ತಿಂಗಳು.
  • ಅಧ್ಯಕ್ಷರು (ನಿಯೋಜಿತರು):ಮೊಹಮ್ಮದ್ ಹಿದಾತುತುಲ್ಲಾ * (ಗಿರಿಯವರ ಆಯ್ಕೆಯವರೆಗೆ ಅಧ್ಯಕ್ಷ)(1905-1992)ದಿ. 20 ಜುಲೈ 1969 ರಿಂದ 24 ಆಗಸ್ಟ್ 1969.
  • 5 ನೇ ಅಧ್ಯಕ್ಷರು:ಫಕ್ರುದ್ದೀನ್ ಅಲಿ ಅಹ್ಮದ್ (ಅಧಿಕಾರ ಅವಧಿಯಲ್ಲಿ ಮರಣ) (1905-1977) ದಿ. 24 ಆಗಸ್ಟ್ 1974 ರಿಂದ 11 ಫೆಬ್ರುವರಿ 1977ರ ವರೆಗೆ; 36 ತಿಂಗಳು.
  • 1971 ರ ಇಂಡೋ-ಪಾಕಿಸ್ತಾನಿ ಯುದ್ಧವು ಎರಡು ರಾಷ್ಟ್ರಗಳ ನಡುವಿನ ನಾಲ್ಕು ಯುದ್ಧಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಯುದ್ಧದಲ್ಲಿ, ಪೂರ್ವ ಪಾಕಿಸ್ತಾನದಲ್ಲಿ ಸ್ವಯಂ ಆಡಳಿತದ ವಿಷಯದ ಬಗ್ಗೆ ಹೋರಾಡಿದ ಭಾರತ, ಪಾಕಿಸ್ತಾನವನ್ನು ನಿರ್ಣಾಯಕವಾಗಿ ಸೋಲಿಸಿತು, ಇದರಿಂದಾಗಿ ಬಾಂಗ್ಲಾದೇಶ ಸೃಷ್ಟಿಯಾಯಿತು. 1971 ರ ಡಿಸೆಂಬರ್ 3 ರಿಂದ ಪೂರ್ವ ಪಾಕಿಸ್ತಾನದ ವಿಮೋಚನಾ ಯುದ್ಧದ ಸಂದರ್ಭದಲ್ಲಿ ದಿ.3 ಡಿಸೆಂಬರ್ 1971 ರಿಂದ ಡಕಾ (ಢಾಕಾ) ಪತನದವರೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿಗಳು ಮುಖಾಮುಖಿಯಾಗಿ ಭಾರತ-ಮತ್ತು ಪಾಕಿಸ್ತಾನಗಳಿಗೆ ಯುದ್ಧ ನಡೆಯಿತು.. ಯುದ್ಧವು, 11 ಭಾರತೀಯ ವಾಯುಪಡೆಗಳ ಕೇಂದ್ರಗಳ ಮೇಲೆ, ಪಾಕಿಸ್ತಾನದಿಂದ ಪೂರ್ವರಕ್ಷಕ ವೈಮಾನಿಕ ಧಾಳಿಗಳೊಂದಿಗೆ ಪಾಕಿಸ್ತಾನದೊಂದಿಗೆ ಯುದ್ಧದ ಆರಂಭವಾಯಿತು, ಇದು ಪಕ್ಕದ ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯದ ಯುದ್ಧಕ್ಕೆ ಭಾರತೀಯ ಸೈನ್ಯದ ಪ್ರವೇಶಕ್ಕೆ ಕಾರಣವಾಯಿತು. ಈ ಯುದ್ಧವು ಕೇವಲ 13 ದಿನಗಳ ಕಾಲ ನೆಡೆದು, ಇದು ಇತಿಹಾಸದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಜಯಗಳಿಸಿದ ಯುದ್ಧಗಳಲ್ಲಿ ಒಂದಾಗಿದೆ.
  • ಯುದ್ಧದ ಸಮಯದಲ್ಲಿ, ಭಾರತೀಯ ಮತ್ತು ಪಾಕಿಸ್ತಾನದ ಮಿಲಿಟರಿಗಳು ಪೂರ್ವ ಮತ್ತು ಪಶ್ಚಿಮ ರಂಗಗಳಲ್ಲಿ ಏಕಕಾಲದಲ್ಲಿ ಘರ್ಷಣೆ ಮಾಡಿದರು; ಪಾಕಿಸ್ತಾನದ ಮಿಲಿಟರಿ ಪೂರ್ವ ಕಮಾಂಡ್ 16 ಡಿಸೆಂಬರ್ 1971 ರಂದು ಢಾಕಾದಲ್ಲಿ ಶರಣಾಗತಿಯ ಅಧಕೃತ ಪತ್ರಕ್ಕೆ ಸಹಿ ಹಾಕಿದ ನಂತರ ಈ ಯುದ್ಧ ಕೊನೆಗೊಂಡಿತು, ಇದು ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶದ ಹೊಸ ರಾಷ್ಟ್ರವೆಂದು ಗುರುತಿಸಿತು. ಅಧಿಕೃತವಾಗಿ, ಪೂರ್ವ ಪಾಕಿಸ್ತಾನವು 26 ಮಾರ್ಚ್ 1971 ರಂದು ಏಕತೆಯ-ಪಾಕಿಸ್ತಾನದ ದಿಂದ ಅದರ ಪ್ರತ್ಯೇಕತೆಗೆ ಕರೆ ನೀಡಿತ್ತು. ಸರಿಸುಮಾರಾಗಿ 90,000 [28] ರಿಂದ 93,000 ಪಾಕಿಸ್ತಾನಿ ಸೈನಿಕರನ್ನು ಭಾರತೀಯ ಸೈನ್ಯವು ಸೆರೆಯಾಳಾಗಿಸಿತ್ತು, ಇದರಲ್ಲಿ 79,676 ರಿಂದ 81,000 ಪಾಕಿಸ್ತಾನ್ ಸಶಸ್ತ್ರ ಪಡೆಗಳ ಸಮವಸ್ತ್ರದ ಸಿಬ್ಬಂದಿ, ಪಾಕಿಸ್ತಾನಕ್ಕೆ ನಿಷ್ಠರಾಗಿ ಉಳಿದ ಕೆಲವು ಬೆಂಗಾಳಿ ಯೋಧರು ಸೇರಿದಂತೆ. ಉಳಿದ 10,324 ರಿಂದ 12,500 ಕೈದಿಗಳು ಮಿಲಿಟರಿ ಸಿಬ್ಬಂದಿ ಮತ್ತು ಸಹಯೋಗಿ (ರಝಾಕಾರ್ಗಳು) ನಿಷ್ಠ ಸದಸ್ಯರು ಇದ್ದರು. ಸಂಘರ್ಷದ ಪರಿಣಾಮವಾಗಿ, 80 ಲಕ್ಷದಿಂದ ಒಂದು ಕೋಟಿ ಜನರು ಪಡೆಯಲು ಪೂರ್ವ ಪಾಕಿಸ್ತಾನ ದೇಶದಿಂದ ನಿರಾಶ್ರತರು ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿದ್ದರು.

ಭಾರತದ ವಾಯುಬಲದ ಕಾರ್ಯಾಚರಣೆ

  • ಎಪ್ಪತ್ತರ ದಶಕದಲ್ಲಿ ಭಾರತೀಯ ವಾಯುಬಲ ಪಾಕಿಸ್ತಾನದೊಡನೆ ಮೂರನೆಯ ಸುತ್ತು 1971 ರಲ್ಲಿ ಪಾಕಿಸ್ತಾನ ಮೂರನೆಯ ಬಾರಿಗೆ ಭಾರತವನ್ನು ಕೆಣಕಿದಾಗ ಭಾರತೀಯ ವಾಯುಬಲ ಹಿಂದೆಂದಿಗಿಂತಲೂ ಹೆಚ್ಚಿನ ರೀತಿಯಲ್ಲಿ ತನ್ನ ಕೀರ್ತಿಯನ್ನು ಮೆರೆಯಿತು. ಆ ವರ್ಷದ ಡಿಸೆಂಬರ್ 3 ರಂದು ಪಾಕಿಸ್ತಾನ ಭಾರತದ ಅನೇಕ ಪ್ರಮುಖ ವಾಯು ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಅದರ ಮರುದಿನ ಬೆಳಗಿನಿಂದ ಭಾರತೀಯ ವಾಯುಬಲ ಸತತವಾಗಿ ಶತ್ರು ನೆಲೆಗಳ ಮೇಲೆ ಭಾರೀ ಪ್ರಮಾಣದ ದಾಳಿಯನ್ನು ನಡೆಸಿತು. ಪೂರ್ವ ಯುದ್ಧ ರಂಗದಲ್ಲಿ 48 ಗಂಟೆಗಳೊಳಗಾಗಿ ಪಾಕಿಸ್ತಾನದ ವಾಯುಬಲ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು. ತೇಜ್ ಗಾಂವ್ ಮತ್ತು ಢಾಕಾದಲ್ಲಿನ ಎರಡು ವಿಮಾನನೆಲೆಗಳನ್ನು ಧ್ವಂಸಗೊಳಿಸಲಾಯಿತು. ಹಾಗೂ ಅಲ್ಲಿದ್ದ 8 ಸ್ಯಾಬರ್ ವಿಮಾನಗಳು ಬಾಂಬ್ ದಾಳಿಗೆ ಸಿಕ್ಕಿ ನಾಶವಾದವು. ಇಲ್ಲವೇ ಪಾಕಿಸ್ತಾನಿಯರೇ ತೀವ್ರ ಹತಾಶೆಯಿಂದ ಅವುಗಳನ್ನು ನಾಶಗೊಳಿಸಿದರು. ಪಶ್ಚಿಮದ ಯುದ್ಧ ರಂಗದಲ್ಲಿ ರಾಜಾಸ್ಥಾನದ ಲೊಂಗೋವಾಲಾದಲ್ಲಿ ಪಾಕಿಸ್ತಾನದ ಟ್ಯಾಂಕ್‍ಗಳ ಮುನ್ನಡೆಯನ್ನು ಕೆಲವೇ ಹಂಟರ್ ವಿಮಾನಗಳು ಸ್ಥಗಿತಗೊಳಿಸಿದವು. ಜೈಸಲ್ಮೇರ್ ವಿಮಾನ ನೆಲೆಯಿಂದ ಹಾರಿದ ಹಂಟರ್ ವಿಮಾನಗಳ ದಾಳಿಯಿಂದ 37 ಶತ್ರು ಟ್ಯಾಂಕ್‍ಗಳು ಹಾನಿಗೊಂಡವು ಇಲ್ಲವೇ ನಾಶವಾದವು. ಡಿಸೆಂಬರ್ 4 ರಂದು ಭಾರತೀಯ ವಾಯುಬಲದ ಹಂಟರ್‍ವಿಮಾನಗಳು ಕರಾಚಿ ಬಂದರಿನ ತೈಲ ನೆಲೆಗಳ ಮೇಲೆ ಬಾಂಬ್‍ಗಳನ್ನು ಹಾಕಿದವು. ಅದಾದ 4 ದಿನಗಳ ನಂತರ ವಿಂಗ್ ಕಮಾಂಡರ್ ಕೆ.ಕೆ.ಬಧವಾರ್ ಅವರ ನಾಯಕತ್ವದಲ್ಲಿ ಕ್ಯಾನ್‍ಬೆರ್ರಾ ಬಾಂಬರ್‍ವಿಮಾನಗಳು ಅದೇ ತೈಲ ಟ್ಯಾಂಕರ್‍ಗಳ ಮೇಲೆ ಪುನಃ ನಡೆಸಿದ ಬಾಂಬ್ ದಾಳಿಯಿಂದ ಹೊತ್ತಿಕೊಂಡ ಬೆಂಕಿ ಯುದ್ಧ ನಿಲ್ಲುವವರೆಗೂ ಉರಿಯುತ್ತಲೇ ಇತ್ತು. ಹೀಗೆ ಶತ್ರುವಿನ ಅನೇಕ ನೆಲೆಗಳು ಅನಿಲ ಕಾರ್ಯಾಗಾರಗಳು ರೈಲ್ವೆ ಯಾರ್ಡ್‍ಗಳ ಮೇಲೆ ಭಾರತೀಯ ವಾಯುಬಲ ಯಶಸ್ವಿಯಾಗಿ ದಾಳಿ ನಡೆಸಿತು. ಇವೆಲ್ಲವುಗಳಿಗೆ ಕಳಶವಿಟ್ಟಂತೆ ಢಾಕಾದ ಗವರ್ನರ್ ಹೌಸ್ ಮೇಲೆ ವಾಯು ಬಲ ನಡೆಸಿದ ದಾಳಿಯಿಂದ ಬಾಂಗ್ಲಾ ದೇಶದಲ್ಲಿನ ಪಾಕಿಸ್ತಾನಿ ಪಡೆಗಳು ಕ್ಷಿಪ್ರವಾಗಿ ಶರಣಾಗತವಾದವು. ಫ್ಲೈಯಿಂಗ್ ಆಫೀಸರ್ ನಿರ್ಮಲ್‍ಜಿತ್ ಸಿಂಗ್ ಸೆಖೋನ್ ಅವರಿಗೆ ವಾಯುಬಲದ ಪರಮವೀರ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು. ಅವರು ಏಕಾಂಗಿಯಾಗಿ ಶ್ರೀನಗರದ ವಾಯುನೆಲೆಯಿಂದ ನ್ಯಾಬ್ ವಿಮಾನದ ಮೂಲಕ ಪಾಕಿಸ್ತಾನದ ಮೂರು ಸ್ಯೂಬರ್ ಜೆಟ್ ವಿಮಾನಗಳನ್ನು ಹೊಡೆದುರುಳಿಸಿ, ನಾಲ್ಕನೆಯ ವಿಮಾನದ ದಾಳಿಗೆ ಬಲಿಯಾಗಿ ಹುತಾತ್ಮರಾದರು.

ಭಾರತದ ನೌಕಾಬಲದ ಕಾರ್ಯಾಚರಣೆ

ಭಾರತ ಗಣರಾಜ್ಯದ ಇತಿಹಾಸ 
ಪಾಕಿಸ್ತಾನದ ಸಬ್ ಮೆರೀನ್ ಹಡಗು ಪಿಎನ್ಎಸ್ ಗಾಜಿ ಭಾರತದ ಪೂರ್ವ ಕರಾವಳಿಯ ಸಮೀಪವಿರುವ ವಿಶಾಖಪಟ್ಟಣದ ಹತ್ತಿರ ನೀರಿನಲ್ಲಿ (ಜಲಾಂತರ್ಗಾಮಿ) ಮುಳುಗಿತು.
ಭಾರತ ಗಣರಾಜ್ಯದ ಇತಿಹಾಸ 
ಭಾರತೀಯ ವಿಮಾನವಾಹಕ ನೌಕೆ INS ವಿಕ್ರಾಂತ್- ಆಲಿಜ್ ಯುದ್ಧ ವಿಮಾನವನ್ನು ಹಾರಿಸುತ್ತಿರುವುದು
  • 1965 ರ ಯುದ್ಧದಂತಲ್ಲದೆ, ಪಾಕಿಸ್ತಾನದ ನೌಕಾಪಡೆಯ ಮುಖ್ಯ ಸಿಬ್ಬಂದಿಗಳು ಮತ್ತು ನೌಕಾಪಡೆಗಳ ಕಮಾಂಡರ್ಗಳು ತಮ್ಮ ನೌಕಾಪಡೆ ಭಾರತದೊಡನೆ ನೌಕಾದಳದ ಸಂಘರ್ಷಕ್ಕೆ ಸಿದ್ಧವಾಗಿಲ್ಲ ಎಂದು ಚೆನ್ನಾಗಿ ತಿಳಿದಿದ್ದರು. ಭಾರತೀಯ ನೌಕಾಪಡೆಯ ವಿರುದ್ಧ 65 ಪಾಕಿಸ್ತಾನ ನೌಕಾಪಡೆಯು ಆಕ್ರಮಣಕಾರಿ ಯುದ್ಧಕ್ಕೆ ಆಳವಾದ ಸಮುದ್ರ, ಮತ್ತು ಭಾರತೀಯ ನೌಕಾದಳದ ಕಡಲಾಚೆಯ ಗಂಭೀರ ಅತಿಕ್ರಮಣಕ್ಕೆ ವಿರುದ್ಧವಾಗಿ ರಕ್ಷಣೆಗೆ ಮಾಡಿಕೊಳ್ಳುವ ಒಂದು ಸ್ಥಿತಿಯಲ್ಲಿರಲಿಲ್ಲ.
  • ಯುದ್ಧದ ಪಶ್ಚಿಮ ರಂಗದಲ್ಲಿ, ವೈಸ್ ಅಡ್ಮಿರಲ್ ಅಡಿಯಲ್ಲಿ ಭಾರತೀಯ ನೌಕಾಪಡೆಯ ಪಾಶ್ಚಾತ್ಯ ನೌಕಾ ಕಮಾಂಡ್. ಎಸ್ ಎನ್ ಕೊಹ್ಲಿ, 1971 ರ ಡಿಸೆಂಬರ್ 4 ರಂದು 5 ನೇ ರಾತ್ರಿ ರಾತ್ರಿ ಕರಾಚಿ ಬಂದರಿನ ಮೇಲೆ ಟ್ರೇಡೆಂಟ್ ಎಂಬ ಸಂಕೇತನಾಮದ ಹೆಸರಲ್ಲಿ ಆಶ್ಚರ್ಯಕರ ದಾಳಿ ನಡೆಸಿದರು. ಸೋವಿಯೆತ್-ನಿರ್ಮಿತ ಓಸಾ ಕ್ಷಿಪಣಿ ದೋಣಿಗಳನ್ನು ಒಳಗೊಂಡ ನೌಕಾಪಡೆಯ ದಾಳಿಯು ಪಾಕಿಸ್ತಾನದ ನೌಕಾಪಡೆಗಳ ನಾಶಕಗಳನ್ನೂ, ಪಿಎನ್ಎಸ್ ಖೈಬರ್ ಮತ್ತು ಸಿಡಿಗುಂಡು ನಿವಾರಕ ಪಿ.ಎನ್.ಎಸ್. ಮುಹಾಫಿಜ್ ನ್ನು ಹೊಡೆದುರುಳಿಸಿತು ಮತ್ತು ಪಿಎನ್ಎಸ್ ಷಾ ಜಹಾನ್ ತೀವ್ರವಾಗಿ ಹಾನಿಗೊಳಗಾಯಿತು. ಸುಮಾರು 720 ಪಾಕಿಸ್ತಾನಿ ನಾವಿಕರು ಕೊಲ್ಲಲ್ಪಟ್ಟರು ಅಥವಾ ಗಾಯಗೊಂಡಿದ್ದರ ಎಂದು ಪಾಕಿಸ್ತಾನದ ನೌಕಾ ಮೂಲಗಳು ವರದಿ ಮಾಡಿದೆ
  • ಪಾಕಿಸ್ತಾನ ನೌಕಾಪಡೆಯ ಜಲಾಂತರ್ಗಾಮಿಗಳು, ಹಾಂಗೋರ್ ಮಾಂಗ್ರೋ ಮತ್ತು ಶೂಶುಕ್ 9 ಡಿಸೆಂಬರ್ 1971 ರಂದು ಹಾಂಗೋರ್ ವರದಿಯಂತೆ ಐಎನ್ಎಸ್ ಖುಕ್ರಿ ಸಬ್ ಮರೀನ್ ನನ್ನು ಭಾರತದ ಕಡೆ. 194 ಸಾವು ಉಂಟುಮಾಡಿ ಮುಳುಗಿಸಿದ್ದರು ಸಂಕೇತನಾಮ ಪೈಥಾನ್ ಅಡಿಯಲ್ಲಿ ಭಾರತೀಯ ನೌಕಾದಳದ ಓಸಾ ಕ್ಷಿಪಣಿಯ ದೋಣಿಗಳು 8/9 ಡಿಸೆಂಬರ್ 1971 ರ ರಾತ್ರಿ. ಕರಾಚಿಯ ಬಂದರನ್ನು ಸಮೀಪಿಸುತ್ತಿದ್ದವು ಮತ್ತು ಸೋವಿಯೆತ್-ನಿಂದ ಪಡೆದ ಸ್ಟಿಕ್ಸ್ ಕ್ಷಿಪಣಿಗಳ ಸರಣಿಯ ಧಾಳಿಯನ್ನು ಪ್ರಾರಂಭಿಸಿತು, ಇದರಿಂದಾಗಿ ಪಾಕಿಸ್ತಾನದ ಮೀಸಲು ಇಂಧನ ಟ್ಯಾಂಕ್ಗಳ ನಾಶ ಮತ್ತು ಮೂರು ಪಾಕಿಸ್ತಾನಿ ವ್ಯಾಪಾರಿ ಹಡಗುಗಳ ಮುಳುಗುವಿಕೆ ಮತ್ತು ವಿದೇಶಿ ಹಡಗುಗಳುನಾಶವಾದವು.
  • ಪಾಕಿಸ್ತಾನ ಇಂಟರ್ನ್ಯಾಷನಲ್ ನಾಗರಿಕ ವಿಮಾನದ ಪೈಲಟ್ಗಳು, ತತ್ಕಾಲ ಯುದ್ಧದ ಪೈಲಟ್ಗಳಾಗಿ ಕಾರ್ಯನಿರ್ವಹಿಸಿದರು, ಅವರು ತಮ್ಮದೇ ಆದ ಯುದ್ಧನೌಕೆ ಪಿಎನ್ಎಸ್ ಜುಲ್ಫಿಕರ್ ಮತ್ತು ವಾಯುಪಡೆಯ ಧಾಳಿಯಲ್ಲಿ ತಮ್ಮ ಸೈನ್ಯಕ್ಕೇ ಪ್ರಮುಖ ಹಾನಿಗಳನ್ನು ಉಂಟುಮಾಡಿದರು ಮತ್ತು ಹಲವರು ಅಧಿಕಾರಿಗಳನ್ನು ಕೊಂದರು.
  • ವೈಸ್ ಅಡ್ಮಿರಲ್ ನೀಲಕಂಠ ಕೃಷ್ಣನ್ ಅವರ ಅಡಿಯಲ್ಲಿರುವ ಈಸ್ಟರ್ನ್ ಈಸ್ಟರ್ನ್ ನೇವಲ್ ಕಮಾಂಡ್, ಪೂರ್ವ ಪಾಕಿಸ್ತಾನದ ನೌಕಾಪಡೆ ಮತ್ತು ತಮ್ಮ ಬಂದರುಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ನೌಕಾ ದಳದ ಮೂಲಕ ಪಾಕಿಸ್ತಾನದ ನೌಕಾಪಡೆಯನ್ನೂ ಎಂಟು ವಿದೇಶಿ ವ್ಯಾಪಾರಿ ಹಡಗುಗಳನ್ನು ತಡೆಯುವ ಮೂಲಕ ಸಂಪೂರ್ಣವಾಗಿ ಪೂರ್ವ ಪಾಕಿಸ್ತಾನವನ್ನು ಪ್ರತ್ಯೇಕಿಸಿತು. ಪಾಕಿಸ್ತಾನವು ಜಲಾಂತರ್ಗಾಮಿ ಪಿಎನ್ಎಸ್ ಘಾಝಿಯನ್ನು ಕಳುಹಿಸುವ ಮೂಲಕ ಆ ಬೆದರಿಕೆಯನ್ನು ಎದುರಿಸಿತು, ಆದರೆ ಆ ಜಲಾಂತರ್ಗಾಮಿ ವಿಶಾಖಪಟ್ಟಣದ ಕರಾವಳಿಯಲ್ಲಿ ನಿಗೂಢವಾಗಿ ಮುಳುಗಿಹೋಯಿತು.
  • ಪಾಕಿಸ್ತಾನ ನೌಕಾಪಡೆಯ ಮೇಲೆ ದೊಡ್ಡ ಹಾನಿ ಉಂಟಾಯಿತು. ಸುಮಾರು 1900 ಸಿಬ್ಬಂದಿಗಳು ತೀರಿಹೋದರು, 1448 ಸೈನಿಕರನ್ನು ಭಾರತೀಯ ಪಡೆಗಳು ಡಕಾದಲ್ಲಿ ವಶಪಡಿಸಿಕೊಂಡವು. ಪಾಕಿಸ್ತಾನಿ ವಿದ್ವಾಂಸ ತಾರಿಖ್ ಅಲಿ ಪ್ರಕಾರ, ಯುದ್ಧದಲ್ಲಿ ಅರ್ಧದಷ್ಟು ನೌಕಾಪಡೆಯನ್ನು ಪಾಕಿಸ್ತಾನವು ಕಳೆದುಕೊಂಡಿತು.

ಭಾರತದಲ್ಲಿ ತುರ್ತು ಪರಿಸ್ಥಿತಿ

  • ತುರ್ತು ಪರಿಸ್ಥಿತಿ
  • ಚರ್ಚೆಪುಟ
  • ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ಮತ್ತು ಭ್ರಷ್ಟಾಚಾರದ ಆರೋಪಗಳು ಭಾರತದಾದ್ಯಂತ ರಾಜಕೀಯ ಅಶಾಂತಿ ಹೆಚ್ಚಲು ಕಾರಣವಾದವು, ಬಿಹಾರದಲ್ಲಿ ಚಳವಳಿಯು ರಭಸಗೊಂಡಿತು. 1974 ರಲ್ಲಿ, ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರು ಚುನಾವಣಾ ಉದ್ದೇಶಗಳಿಗಾಗಿ ಸರ್ಕಾರಿ ವ್ಯವಸ್ಥೆಗಳನ್ನು ದುರುಪಯೋಗ ಮಾಡಿದ ಅಪರಾಧವನ್ನು ಕಂಡಿತು. ವಿರೋಧ ಪಕ್ಷಗಳು ಇಂದಿರಾರವರ ತಕ್ಷಣದ ರಾಜೀನಾಮೆಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಹರತಾಳ ಮತ್ತು ಪ್ರತಿಭಟನೆಗಳನ್ನು ನಡೆಸಿದವು. ಇಂದಿರಾ ಗಾಂಧಿಯವರ ಸರ್ವಾಧಿಕಾರತ್ವ ಎಂದು ಅವರು ಕರೆಯುವ ವಿರೋಧಕ್ಕೆ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳು ಒಂದಾದವು. ಅದರಿಂದ ಭಾರತದ ಆರ್ಥಿಕತೆ ಮತ್ತು ಆಡಳಿತವನ್ನು ಭಾರತದಾದ್ಯಂತದ ಪ್ರಮುಖ ಮುಷ್ಕರಗಳು ನಿಶ್ಕ್ರಿಯತೆಗೆ ಒಳಪಡಿಸಿತು, ನಾರಾಯಣ್ ಅವರು ಪೊಲೀಸ್ ಮತ್ತು ಸೈನ್ಯವು ಸರ್ಕಾದ ಆಜ್ಞೆಯನ್ನ ಧಿಕ್ಕರಸಬೇಕೆಂದೂ, ಸೈನ್ಯವು ದಂಗೆ ಎದ್ದು ಇಂದಿರಾ ಗಾಂಧಿಯವರನ್ನು ಹೊರಹಾಕಲು ಕರೆ ನೀಡಿದರು. ಇದರಿಂದ 1975 ರಲ್ಲಿ ಗಾಂಧಿಯವರು ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲು ಅಧ್ಯಕ್ಷ ಫಕ್ರುದ್ದೀನ್ ಅಲಿ ಅಹ್ಮದ್ ಅವರಿಗೆ ಸಲಹೆ ನೀಡಿದರು. ಅದು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ಕೇಂದ್ರ ಸರಕಾರವು ಅಧಿಕಾರವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು.
  • ಕಾನೂನು ಮತ್ತು ಸುವ್ಯವಸ್ಥೆಯ ಸ್ಥಗಿತ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನೇ ವಿವರಿಸುತ್ತಾ ತನ್ನ ಪ್ರಾಥಮಿಕ ಕಾರಣಗಳಿಗಾಗಿ ಗಾಂಧಿಯವರು ಅನೇಕ ನಾಗರಿಕ ಸ್ವಾತಂತ್ರ್ಯಗಳನ್ನು (ಹಕ್ಕುಗಳನ್ನು) ರದ್ದುಗೊಳಿಸಿದರು. ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಚುನಾವಣೆಗಳನ್ನು ಮುಂದೂಡಿದರು. ಭಾರತೀಯ ರಾಜ್ಯಗಳಲ್ಲಿ ಕಾಂಗ್ರೆಸ್-ಅಲ್ಲದ ಸರ್ಕಾರಗಳು ವಜಾ ಮಾಡಲ್ಪಟ್ಟವು ಮತ್ತು ಸುಮಾರು 1,000 ಪ್ರತಿಭಟನಾ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ಜೈಲನ್ನು ಮತ್ತು ಕಡ್ಡಾಯ ಜನನ ನಿಯಂತ್ರಣದ ಒಂದು ಕಾರ್ಯಕ್ರಮವನ್ನು ಕೆಲವುಕಡೆ ಜಾರಿಮಾಡಲಾಯಿತು. ಮುಷ್ಕರಗಳು ಮತ್ತು ಸಾರ್ವಜನಿಕ ಪ್ರತಿಭಟನೆಗಳನ್ನು ಎಲ್ಲ ರೂಪಗಳಲ್ಲಿ ಕಾನೂನುಬಾಹಿರಗೊಳಿಸಲಾಯಿತು.
  • ತುರ್ತು ಪರಿಸ್ಥತಿಯ ಪರಿಣಾಮ ಭಾರತದ ಆರ್ಥಿಕತೆಯು ಹಿನ್ನಡೆ, ಮುಷ್ಕರ ಮತ್ತು ರಾಜಕೀಯ ಅಸ್ವಸ್ಥತೆ- ಅಸ್ಥಿರತೆ ಅಂತ್ಯಗೊಂಡಿತು. ಕೃಷಿ ಮತ್ತು ಕೈಗಾರಿಕಾ ಉತ್ಪಾದನೆಯನ್ನು ಹೆಚ್ಚಿಸಿತು, ರಾಷ್ಟ್ರೀಯ ಬೆಳವಣಿಗೆ, ಉತ್ಪಾದಕತೆ ಮತ್ತು ಉದ್ಯೋಗ ಬೆಳವಣಿಗೆಯನ್ನು ಹೆಚ್ಚಿಸಿ 20-ಪಾಯಿಂಟ್ ಕಾರ್ಯಕ್ರಮವನ್ನು ಭಾರತ ಘೋಷಿಸಿತು. ಆದರೆ ಸರ್ಕಾರದ ಹಲವು ಅಂಗಗಳು ಮತ್ತು ಹಲವು ಕಾಂಗ್ರೆಸ್ ರಾಜಕಾರಣಿಗಳು ಭ್ರಷ್ಟಾಚಾರ ಮತ್ತು ನಿರಂಕುಶ ವರ್ತನೆ ಆರೋಪಕ್ಕೆ ಓಳಗಾದರು. ಪೊಲೀಸ್ ಅಧಿಕಾರಿಗಳು ಮುಗ್ಧ ಜನರನ್ನು ಬಂಧಿಸಿ ಚಿತ್ರಹಿಂಸೆ ಮಾಡಿದ ಆರೋಪ ಹೊಂದಿದರು.. ಇಂದಿರಾ ಅವರ ಪುತ್ರ ಮತ್ತು ರಾಜಕೀಯ ಸಲಹೆಗಾರ ಸಂಜಯ್ ಗಾಂಧಿ ಅವರು ಸಾಮೂಹಿಕ ದೌರ್ಜನ್ಯವನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದರು - ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ಪುರುಷರನ್ನು ಬಲವಂತದ ವ್ಯಸೆಕ್ಟಮಿಗಳನ್ನು ಮತ್ತು ಮಹಿಳೆಯರಿಗೆ ವೆಸೆಕ್ಟಮಿಯನ್ನು ನಡೆಸುವುದಕ್ಕೆ ಆರೋಗ್ಯ ಸಚಿವಾಲಯಕ್ಕೆ ಸೂಚಿಸಲು ಸಂಜಯ್ ಕಾರಣ ಎಂದು ಆರೋಪಿಸಲಾಯಿತು ಮತ್ತು ಕೊಳೆಗೇರಿ ನಿರ್ಮೂಲನೆಗಾಗಿ ದೆಹಲಿಯಲ್ಲಿ ತುರ್ಕಮೆನ್ ಗೇಟ್ ಬಳಿ, ಅನೇಕ ಜನರು ಸತ್ತರು ಮತ್ತು ಹಲವು ಜನರನ್ನು ಸ್ಥಳಾಂತರಿಸಿದರು.

ಜನತಾ ಪಕ್ಷದ ಮಧ್ಯಂತರ ಕಾಲ

ಮುಖ್ಯ ಲೇಖನ: ಜನತಾ ಪಾರ್ಟಿ

ಭಾರತ ಗಣರಾಜ್ಯದ ಇತಿಹಾಸ 
ಯು.ಎಸ್. ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಭೇಟಿ ಸಮಯದಲ್ಲಿ "ಹೊಸದಿಲ್ಲಿ" ಘೋಷಣೆಗೆ ಸಹಿ ಹಾಕಿದ ಭಾರತದ ಮೊದಲ ಕಾಂಗ್ರೆಸ್-ಅಲ್ಲದ ಪ್ರಧಾನಿ ಮೊರಾರ್ಜಿ ದೇಸಾಯಿ.
ಭಾರತ ಗಣರಾಜ್ಯದ ಇತಿಹಾಸ 
ನೀಲಂ ಸಂಜೀವ ರೆಡ್ಡಿ
  • ನಾಲ್ಕನೇ ಪ್ರಧಾನಿ: ಮೊರಾರ್ಜಿ ದೇಸಾಯಿ(1896-1995) -ದಿ.24 ಮಾರ್ಚಿ 1977, ರಿಂದ 28 ಜುಲೈ 1979 [ರಾಜಿನಾಮೆ]; ಅಧಿಕಾರ: 2 ವರ್ಷ, 126 ದಿನ.
  • ಅಧ್ಯಕ್ಷರು- (ತತ್ಕಾಲ): ಬಸಪ್ಪ ದಾನಪ್ಪ ಜತ್ತಿ ;(1912-2002) - ದಿ.11 ಫೆಬ್ರವರಿ 1977 ರಿಂದ 25 ಜುಲೈ 1977 ರವರೆಗೆ; 6 ತಿಂಗಳು.
  • 6ನೇ ಅಧ್ಯಕ್ಷರು: ನೀಲಂ ಸಂಜೀವ ರೆಡ್ಡಿ; (1913-1996)ದಿ. 25 ಜುಲೈ 1977 ರಿಂದ 25 ಜುಲೈ 1982 ರ ವರೆಗೆ; 60 ತಿಂಗಳು.
  • ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷವು 1977 ರಲ್ಲಿ ಸಾರ್ವತ್ರಿಕ ಚುನಾವಣೆಗಳಿಗೆ ಕರೆ ನೀಡಿತು, ಜನತಾ ಪಕ್ಷದ ಕೈಯಲ್ಲಿ ಅದು ಒಂದು ಅವಮಾನಕರ ಚುನಾವಣಾ ಸೋಲನ್ನು ಎದುರಿಸಬೇಕಾಯಿತು, ಇದು ಪ್ರತಿಪಕ್ಷಗಳ ಮಿಶ್ರಣವಾಗಿತ್ತು. ಭಾರತದ ಕಾಂಗ್ರೆಸ್ ನ ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾದರು. ದೇಸಾಯಿ ಆಡಳಿತವು ತುರ್ತು-ಅವಧಿಯ ದುರ್ಬಳಕೆಯನ್ನು ತನಿಖೆ ಮಾಡಲು ನ್ಯಾಯಾಧೀಶರನ್ನು ನೇಮಿಸಿತು ಮತ್ತು ಷಾ ಆಯೋಗದ ವರದಿಯ ನಂತರ ಇಂದಿರಾ ಮತ್ತು ಸಂಜಯ್ ಗಾಂಧಿಯನ್ನು ಬಂಧಿಸಲಾಯಿತು.
  • ಪ್ರಧಾನಿ ಜನತಾ ಪಾರ್ಟಿಯ ಮೊರಾರ್ಜಿ ದೇಸಾಯಿ ನೆರೆ ಪಾಕಿಸ್ತಾನದೊಂದಿಗೆ ಸಂಬಂಧಗಳನ್ನು ಸುಧಾರಿಸಲು ದೇಸಾಯಿ ಕೆಲಸ ಮಾಡಿದರು ಮತ್ತು 1962 ರ ಯುದ್ಧದ ನಂತರ ಮೊದಲ ಬಾರಿಗೆ ಚೀನಾದೊಂದಿಗೆ ಸಾಮಾನ್ಯ ಸಂಬಂಧಗಳನ್ನು ಪುನಃ ಸ್ಥಾಪಿಸಿದರು. 1979 ರಲ್ಲಿ, ರಾಜ್ ನಾರಾಯಣ್ ಮತ್ತು ಚರಣ್ ಸಿಂಗ್ ಜನತಾ ಪಾರ್ಟಿಯಿಂದ ಹೊರಬಂದರು, ಬಹುಮತ ಕಳೆದುಕೊಂಡ ದೇಸಾಯಿ ರಾಜೀನಾಮೆ ನೀಡಿ ಅಧಿಕಾರದಿಂದ ಮತ್ತು ರಾಜಕಾರಣದಿಂದ ನಿವೃತ್ತರಾದರು.
  • ಆದರೆ 1979 ರಲ್ಲಿ, ಜನತಾ ಪಕ್ಷದ ಒಕ್ಕೂಟವು ಚಿಧ್ರಗೊಂಡು ಪತನವಾಯಿತು. ನಂತರ ಚರಣ್ ಸಿಂಗ್ ಮಧ್ಯಂತರ ಸರ್ಕಾರವನ್ನು ರಚಿಸಿದರು. ಅದರ ಒಳಜಗಳದ ಕಾರಣ ಜನತಾ ಪಕ್ಷವು ತೀವ್ರವಾಗಿ ಜನಪ್ರಿಯತೆ ಕಳೆದುಕೊಂಡಿತು. ಮತ್ತು ಭಾರತದ ಗಂಭೀರ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಾಯಕತ್ವದ ಕೊರತೆ ಅಸಾಮರ್ಥ್ಯ ಕಂಡುಬಂದಿತು.
  • 1977 ರ ಲೋಕಸಭೆ ಚುನಾವಣೆಯಲ್ಲಿ, ಚುನಾವಣೆಗೆ ಕೆಲ ತಿಂಗಳುಗಳ ಮುಂಚೆ. ಆನತಾ ಪಾಟಿಯ ಹೆಸರಿನ ಅಡಿಯಲ್ಲಿ ಒಟ್ಟು ಗೂಡಿತು. ಹೊಸ ಪಕ್ಷವಾಗಿದ್ದ ಜನತಾ ಪಾರ್ಟಿ ಬ್ಯಾನರ್ ಅಡಿಯಲ್ಲಿ ಗೆಲುವಿಗಾಗಿ ಚೌಧುರಿ ಚರಣ್ ಸಿಂಗ್ ಅವರು 1974 ರಿಂದ ಏಕೈಕ ವಾಗಿ ಹೆಣಗಾಡುತ್ತಿದ್ದರು. ರಾಜ್ ನಾರಾಯಣ್ ಕಾರಣದಿಂದಾಗಿ 1979 ರಲ್ಲಿ ಅವರು ಪ್ರಧಾನಿಯಾದರು. ಸಚಿವರಾಗಿದ್ದ ರಾಜ್ ನಾರಾಯಣ್ ಅವರು ಜನತಾ ಪಾರ್ಟಿ-ಸೆಕ್ಯುಲರ್ ಅಧ್ಯಕ್ಷರಾಗಿದ್ದರು. ಆದರೂ ಅವರು ಚರಣ್ ಸಿಂಗ್ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದರು. ಅವರು 1967 ರಲ್ಲಿ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಲು ಕೂಡಾ ಅವರಿಗೆ ಸಹಾಯ ಮಾಡಿದ್ದರು. ಆದರೆ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷವು ಸರಕಾರಕ್ಕೆ ಕೊಟ್ಟ ತನ್ನ ಬೆಂಬಲವನ್ನು ಹಿಂಪಡೆದಾಗ, ಕೇವಲ 23 ವಾರಗಳ ಬಳಿಕ ಚರಣ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು

1980 - 1984ರ ಪ್ರಮುಖ ಘಟನೆಗಳು

  • ಆಪರೇಷನ್ ಬ್ಲೂ ಸ್ಟಾರ್, ಇಂದಿರಾ ಗಾಂಧಿಯವರ ಹತ್ಯೆ, 1984 ಸಿಖ್ ವಿರೋಧಿ ಗಲಭೆಗಳು, ಭೋಪಾಲ್ ದುರಂತ, ಶ್ರೀಲಂಕಾದ ಅಂತರ್ಯುದ್ಧದಲ್ಲಿ ಭಾರತೀಯ ಹಸ್ತಕ್ಷೇಪ, ಮತ್ತು ಸಿಯಾಚಿನ್ ಸಂಘರ್ಷ.
ಭಾರತ ಗಣರಾಜ್ಯದ ಇತಿಹಾಸ 
ಅಕಲ್ ತಖ್ತ್ ಮತ್ತು ಹರ್ಮಂದಿರ್ ಸಾಹಿಬ್; (ಗೋಲ್ಡನ್ ಟೆಂಪಲ್), ಇದನ್ನು ಆಪರೇಷನ್ ಬ್ಲೂ ಸ್ಟಾರ್ ನಂತರ ಭಾರತೀಯ ಸರ್ಕಾರವು ದುರಸ್ತಿಗೊಳಿಸಿತು.
ಭಾರತ ಗಣರಾಜ್ಯದ ಇತಿಹಾಸ 
ಗ್ಯಾನಿ ಜೈಲ್ ಸಿಂಗ್ 1995 ಭಾರತದ ಸ್ಟಾಂಪ್
  • 3 ನೇ ಪ್ರಧಾನಿ ಇಂದಿರಾ ಗಾಂಧಿ;:14 ಜನವರಿ 1980 ರಿಂದ 31 ಅಕ್ಟೋಬರ್ 1984 ರ ವರೆಗೆ; =4 ವರ್ಷ, 291 ದಿನಗಳು;ಒಟ್ಟು ಅವಧಿ 15-350(ಸ್ವಂತ ಅಂಗ ರಕ್ಷಕನಿಂದ ಹತ್ಯೆ)
  • 7 ನೇ ಅಧ್ಯಕ್ಷರು: ಗ್ಯಾನಿ ಜೈಲ್ ಸಿಂಗ್; (1916-1994)ದಿ. 25 ಜುಲೈ 1982 ರಿಂದ 25 ಜುಲೈ 1987; 60 ತಿಂಗಳು.
  • ಇಂದಿರಾ ಗಾಂಧಿ ಮತ್ತು ಅವರ ಕಾಂಗ್ರೆಸ್ ಪಕ್ಷ- (ವಿಭಜಿತ ಗುಂಪು),- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಥವಾ ಸರಳವಾಗಿ "ಕಾಂಗ್ರೆಸ್" 1980 ರ ಜನವರಿಯ ಸಾರ್ವತ್ರಿಕ ಚುನಾವಣೆಯಲ್ಲೊ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಆದರೆ ಪ್ರಧಾನಿಯಾದ ಇಂದಿರಾಗಾಂಧಿ ಅನೇಕ ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು.
  • ಪಂಜಾಬ್‍ನಲ್ಲಿ ಬಂಡಾಯದ ಬಿಸಿಯು ಭಾರತದ ಭದ್ರತೆಗೆ ಮತ್ತು ಏಕತೆಗೆ ಅಪಾಯ ಉಂಟು ಮಾಡುವ ಮಟ್ಟಕ್ಕೆ ಹೋಯಿತು. ಅಸ್ಸಾಂನಲ್ಲಿ, ಸ್ಥಳೀಯ ಗ್ರಾಮಸ್ಥರು ಮತ್ತು ಬಾಂಗ್ಲಾದೇಶದ ನಿರಾಶ್ರಿತರು, ಹಾಗೂ, ಭಾರತದ ಇತರ ಭಾಗಗಳಿಂದ ಬಂದು ನೆಲೆಸಿರುವವರ ನಡುವೆ ಅನೇಕ ಮತೀಯ ಗಲಭೆ, ಘರ್ಷಣೆಯ ಘಟನೆಗಳು ನಡೆದವು. ಪಂಜಾಬಿನಲ್ಲಿ ಕೆಲವೇ ಸಿಖ್ಖ್ ಉಗ್ರಗಾಮಿಗಳು ಖಲೀಸ್ತಾನ ಬೇಡಿಕೆಗಾಗಿ ಹಿಂಸಾಮಾರ್ಗವನ್ನು ಹಿಡಿದು ಪಂಜಾಬಿನಲ್ಲಿ ಸಿಖ್ಖರಲ್ಲದ ನೂರಾರು ಜನರನ್ನು ಕೊಂದರು. ಆ ಉಗ್ರಗಾಮಿಗಳು ಸಿಖ್ಖರ ಅತ್ಯಂತ ಪವಿತ್ರ ದೇವಾಲಯ ಸ್ವರ್ಣ ಮಂದಿರವನ್ನು ಕೇಂದ್ರ ಮಾಡಿಕೊಂಡು ಅದರಲ್ಲಿ ಅಡಗಿದ್ದರು. ಆ ಭಯೊತ್ಪಾದಕರನ್ನು ಹೊರಹಾಕಲು ‘ಆಪರೇಷನ್ ಬ್ಲೂ ಸ್ಟಾರ್’ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡ ಭಾರತೀಯ ಪಡೆಗಳು ಸ್ವಯಂ-ಚಾಲಿತ ಬಂದೂಕವನ್ನು ಉಪಯೋಗಿಸುವ ಸಂದರ್ಭದಲ್ಲಿ ಸ್ವರ್ಣಮಂದಿರದಲ್ಲಿದ್ದ ಖಲಿಸ್ಥಾನ್‍ವಾದಿ ಸಿಖ್ ಉಗ್ರಗಾಮಿಗಳ ಸಾವುಗಳು ಸಂಭವಿಸಿದವು ಮತ್ತು ದೇವಾಲಯದ ಕಟ್ಟಡಕ್ಕೆ ಹಾನಿಯಾಯಿತು. ಇದರಿಂದ ಅಮೃತಸರದಲ್ಲಿ ಮತ್ತು ಭಾರತದಾದ್ಯಂತದ ಸಿಖ್ ಸಮುದಾಯದಲ್ಲಿ, ಉದ್ವಿಗ್ನತೆ ಉಂಟಾಯಿತು. ಉಗ್ರಗಾಮಿಗಳ ಹಿಂಸಾಕಾರ್ಯಗಳನ್ನು ತಡೆಹಿಡಿಯಲು ಸರ್ಕಾರವು ಹೆಚ್ಚಿನ ಪೊಲೀಸ್ ಕಾರ್ಯಾಚರಣೆಗಳನ್ನು ಕೈಕೊಂಡಿತು, ಆದರೆ ಅದು ನಾಗರಿಕ ಸ್ವಾತಂತ್ರ್ಯದ ಮೇಲೆ ಧಾಳಿ ಎಂಬ ದೂರು ಸಿಕ್ ಸಮುದಾಯದಲ್ಲಿ ಎದ್ದಿತು. ಇದಕ್ಕೆ ಉತ್ತರವಾಗಿ ಸರ್ಕಾರ ಅನೇಕ ಸಮಾಧಾನಕರ ಕಾರಣಗಳನ್ನು ನೀಡಿತು.
  • ಉಲ್ಫಾ ಸಂಘರ್ಷದಿಂದಾಗಿ ಈಶಾನ್ಯ ಭಾರತದಲ್ಲಿ ಆಡಳಿತ ಸ್ಥಗಿತವಾಯಿತು. ಅಸ್ಸಾಂನ ಯುನೈಟೆಡ್ ಲಿಬರೇಶನ್ ಫ್ರಂಟ್ (ULFA), ಈಶಾನ್ಯ ಭಾರತದಲ್ಲಿ ಅಸ್ಸಾಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತ್ಯೇಕತಾವಾದಿ ಸ್ಥಳೀಯ ಅಸ್ಸಾಮಿ ಜನರ ದಳ. ಅಸ್ಸಾಮ್ ಸಂಘರ್ಷದಲ್ಲಿ ಸಶಸ್ತ್ರ ಹೋರಾಟದೊಂದಿಗೆ ಸಾರ್ವಭೌಮ ಅಸ್ಸಾಂ ಸ್ಥಾಪಿಸಲು ಇದು ಪ್ರಯತ್ನಿಸುತ್ತದೆ. ಭಾರತ ಸರ್ಕಾರ 1990 ರಲ್ಲಿ ಸಂಸ್ಥೆಯನ್ನು ಭಯೋತ್ಪಾದಕ ಸಂಸ್ಥೆಯೆಂದು ನಿಷೇಧಿಸಿತು
  • ಈ ಎಲ್ಲಾ ಘಟನೆಗಳ ಮಧ್ಯೆ ಅಕ್ಟೋಬರ್ 31, 1984 ರಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಸಿಖ್ ಅಂಗರಕ್ಷಕರು ಅವರನ್ನು ಹತ್ಯೆಗೈದರು. ಅದಕ್ಕೆ ಪ್ರತಿಕ್ರಿಯೆಯಾಗಿ ಜನರು ಉದ್ರೇಕಗೊಂಡು ದೆಹಲಿಯಲ್ಲಿ ‘1984 ರ ಸಿಖ್ಖ್ ವಿರೋಧಿ ದಂಗೆಗಳು’ ನೆಡೆದವು. ಪಂಜಾಬ್ ಕೆಲವು ಪ್ರದೇಶಗಳಲ್ಲಿ ದಂಗೆಗಳು ಸ್ಫೋಟಗೊಂಡವು. ಸಾವಿರಾರು ಸಿಖ್ಖರು ಸಾವಿಗೀಡಾಗಿದರು. ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರು ಸಿಖ್ಖರ ವಿರುದ್ಧ ಹಿಂಸಾಚಾರವನ್ನು ಹುಟ್ಟುಹಾಕುವಲ್ಲಿ ತೊಡಗಿದ್ದಾರೆ ಎಂಬ ದೂರನ್ನೂ, ದಂಗೆಯ ಕಾರಣಗಳನ್ನು ಕಂಡುಹಿಡಿಯಲು ಮತ್ತು ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಸರ್ಕಾರ ತನಿಖೆಯ ವಿಫಲ ಪ್ರಯತ್ನ ಮಾಡಿತು. ಆದರೆ ದೆಹಲಿಯ ಸಿಖ್ಖರ ಮೇಲೆ ದಾಳಿ ನಡೆಸಲು ಕಾಂಗ್ರೆಸ್ ಮುಖಂಡರು ಕಾರಣವೆಂದು ಕೆಲವು ಜನರು ದೂರಿದರು.
  • ಇದನ್ನು ವಿಚಾರಿಸಲು ಮಿಶ್ರಾ ಕಮಿಷನ್‍ಅನ್ನು ಮೇ 1985 ರಲ್ಲಿ ನೇಮಿಸಲಾಯಿತು; ನ್ಯಾಯಮೂರ್ತಿ ರಂಗನಾಥ ಮಿಶ್ರಾ ಅವರು ಭಾರತದ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಧೀಶರಾಗಿದ್ದರು. ಮಿಸ್ರಾ ಆಗಸ್ಟ್ 1986 ರಲ್ಲಿ ತನ್ನ ವರದಿಯನ್ನು ಸಲ್ಲಿಸಿದರು ಮತ್ತು ಫೆಬ್ರವರಿ 1987 ರಲ್ಲಿ ಈ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಯಿತು. ತನ್ನ ವರದಿಯಲ್ಲಿ, ಅವರು ಯಾವುದೇ ವ್ಯಕ್ತಿಯನ್ನು ಗುರುತಿಸಲು ನಿಯಮಗಳು ಸೂಚಿಸಿಲ್ಲ ಎಂದು ಹೇಳಿದರು. ಅವರು ಅದಕ್ಕಾಗಿ ಮೂರು ಸಮಿತಿಗಳ ರಚನೆಗೆ ಶಿಫಾರಸ್ಸು ಮಾಡಿದರು. ನಂತರ ಕಪೂರ್ ಮಿತ್ತಲ್ ಸಮಿತಿ ಫೆಬ್ರವರಿ 1987 ರಲ್ಲಿ ನೇಮಕಗೊಂಡಿತು; ಪ್ರಕರಣಗಳನ್ನು ನೋಂದಾಯಿಸಲು ಮಿರ್ರಾ ಆಯೋಗದಿಂದ ದಿ ಜೈನ್ ಬ್ಯಾನರ್ಜಿ ಕಮಿಟಿಯನ್ನು ಶಿಫಾರಸು ಮಾಡಲಾಯಿತು. ಈ ಸಮಿತಿಯು ಮಾಜಿ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಎಮ್. ಎಲ್. ಜೈನ್ ಮತ್ತು ನಿವೃತ್ತ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಎ. ಕೆ. ಬ್ಯಾನರ್ಜಿ ಅವರನ್ನೊಳಗೊಂಡಿತ್ತು. ನಂತರ ಅನೇಕ ಸಮಿತಿಗಳಾದವು ಅದರೆ ಯಾವುದೇ ಸಮಿತಿಯು ನಿರ್ದಿಷ್ಠ ದೋಷಾರೋಪಣೆ ಮಾಡಲಾಗಲಿಲ್ಲ.

ದಕ್ಷಿಣ ಗಂಗೊತ್ರಿ

  • ಇಂದಿರಾ ಅವರ ಪ್ರೋತ್ಸಾಹದಲ್ಲಿ, 1981 ರಲ್ಲಿ, ಅಂಟಾರ್ಕಟಿಕ್ ಒಡಂಬಡಿಕೆಯ ಪರಿಸರ ಪ್ರೋಟೋಕಾಲ್ (1959)ರ ಅಡಿಯಲ್ಲಿ ದಕ್ಷಿಣದ ಸಾಗರ ದಂಡಯಾತ್ರೆಯ ಆರಂಭವನ್ನು ಮಾಡಿ, ಅಂಟಾರ್ಟಿಕಾದಲ್ಲಿ ಮೊದಲ ಬಾರಿಗೆ ಭಾರತೀಯ ಧ್ವಜವು ಹೊರಹೊಮ್ಮಿತು. ಮೊದಲ ಶಾಶ್ವತ ವಸಾಹತುವನ್ನು 1983 ರಲ್ಲಿ ನಿರ್ಮಿಸಲಾಯಿತು ಮತ್ತು ದಕ್ಷಿಣ ಗಂಗೋತ್ರಿ ಎಂದು ಹೆಸರಿಸಲಾಯಿತು.

ರಾಜೀವ್ ಗಾಂಧಿ ಆಡಳಿತ

ಭಾರತ ಗಣರಾಜ್ಯದ ಇತಿಹಾಸ 
ರಾಜೀವ ಗಾಂದಿ ೧೯೮೮
ಭಾರತ ಗಣರಾಜ್ಯದ ಇತಿಹಾಸ 
ಆರ್ ವೆಂಕಟರಾಮನ್
ಭಾರತ ಗಣರಾಜ್ಯದ ಇತಿಹಾಸ 
ಇನ್ಸಾಟ್(INSAT) ವ್ಯವಸ್ಥೆಯು ಏಷ್ಯಾ ಪೆಸಿಫಿಕ್ ವಲಯದಲ್ಲಿನ ಅತಿ ದೊಡ್ಡ ದೇಶೀಯ ಸಂವಹನ ವ್ಯವಸ್ಥೆಯಾಗಿದೆ. ಇದು ದೂರಸಂಪರ್ಕ, ಪ್ರಸಾರ, ಹವಾಮಾನಶಾಸ್ತ್ರ ಮತ್ತು ಭಾರತದಲ್ಲಿ ಹುಡುಕುವಿಕೆ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನೆಡೆಪಡಿಸಲು ಇಸ್ರೊ(ISRO) ನಿಂದ ಪ್ರಾರಂಭಿಸಲ್ಪಟ್ಟ ವಿವಿಧೋದ್ದೇಶ ಜಿಯೋ-ಸ್ಟೇಷನರಿ ಉಪಗ್ರಹಗಳ ಸರಣಿಯಾಗಿದೆ.
  • 6 ನೇ ಪ್ರಧಾನಿ: ರಾಜೀವ್ ಗಾಂಧಿ (1944-1991) ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ); ಅಧಿಕಾರ:ದಿ.31 ಅಕ್ಟೋಬರ್ 1984 ರಿಂದ 31 ಡಿಸೆಂಬರ್ 1984ರ ವರೆಗೆ; 5 ವರ್ಷ, 32 ದಿನಗಳು
  • 8 ನೇ ಅಧ್ಯಕ್ಷರು: ರಾಮಸ್ವಾಮಿ ವೆಂಕಟರಾಮನ್ (1910-2009) ದಿ.25 ಜುಲೈ 1987 ರಿಂದ 25 ಜುಲೈ 1992 ರ ವರೆಗೆ; 60 ತಿಂಗಳು.
  • ಇಂದಿರಾ ಗಾಂಧಿ ಅವರ ಹಿರಿಯ ಪುತ್ರ ರಾಜೀವ್ ಗಾಂಧಿ ಅವರು ವರ ನಂತರದ ಪ್ರಧಾನ ಮಂತ್ರಿಯಾಗಿದರು. ಆ ನಂತರ ರಾಜೀವ್ 1982 ರಲ್ಲಿ ಪಾರ್ಲಿಮೆಂಟಿಗೆ ಚುನಾಯಿತರಾದರು. ಅವರು 40 ನೇ ವಯಸ್ಸಿನಲ್ಲಿಯೇ ಅತ್ಯಂತ ಕಿರಿಯ ರಾಷ್ಟ್ರೀಯ ರಾಜಕೀಯ ನಾಯಕ ಮತ್ತು ಪ್ರಧಾನಿಯಾಗಿದ್ದರು. ವೃತ್ತಿಜೀವನದ ರಾಜಕಾರಣಿಗಳ ಅಸಮರ್ಥತೆ ಮತ್ತು ಭ್ರಷ್ಟಾಚಾರದಿಂದ ದಣಿದ ನಾಗರಿಕರ ದೃಷ್ಟಿಯಲ್ಲಿ, ಅವರ ಯೌವನ ಮತ್ತು ಅನನುಭವವು ಒಂದು ಅನುಕೂಲ ಗುಣವೆಂದು ಭಾವಿಸಲಾಯಿತು. ಅವರ ಹೊಸ ನೀತಿಗಳು ಮತ್ತು ದೇಶದ ದೀರ್ಘಾವಧಿಯ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಪ್ರಾರಂಭವನ್ನು ಹುಡುಕಲು ಸಹಕಾರಿ ಆಯಿತು. ಅವರ ಅಧಿಕಾರ ಸ್ವೀಕಾರ ನಂತರ ಪಾರ್ಲಿಮೆಂಟ್ ವಿಸರ್ಜನೆಯಾಯಿತು. ರಾಜೀವ್ ನಾಯಕತ್ವದಲ್ಲಿ ಕಾಂಗ್ರೆಸ್ 545 ರಲ್ಲಿ 415 ಸ್ಥಾನ ಗಳಿಸಿತು. ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲಿಯೇ ಅತಿ ಹೆಚ್ಚು ಸೀಟುಗಳಲ್ಲಿ ಜಯಗಳಿಸಿ ರಾಜೀವ್ ಕಾಂಗ್ರೆಸ್ಸನ್ನು ಅತಿದೊಡ್ಡ ಬಹುಮತಕ್ಕೆ ಕರೆದೊಯ್ದ ನಾಯಕನೆನ್ನಿಸಿದರು. ಅದು ಅವರಿಗೆ ಅವರ ತಾಯಿಯ ಹತ್ಯೆಯ ಬಗೆಗೆ ಜನತೆಯು ಕೊಟ್ಟ ಸಹಾನುಭೂತಿಯ ಮತವಾಗಿತ್ತು.
  • ರಾಜೀವ್ ಗಾಂಧಿ ಸುಧಾರಣೆಗಳ ಸರಣಿಯನ್ನು ಪ್ರಾರಂಭಿಸಿದರು :
ಭಾರತ ಗಣರಾಜ್ಯದ ಇತಿಹಾಸ 
ಇನ್ಸಾಟ್-೪ಎ ಉಪಗ್ರಹ-
  • ಪರವಾನಗಿ ರಾಜ್ ಸಡಿಲಗೊಂಡಿತು. ವಿದೇಶಿ ಕರೆನ್ಸಿ, ಪ್ರಯಾಣ, ವಿದೇಶಿ ಹೂಡಿಕೆ ಮತ್ತು ಆಮದುಗಳ ಮೇಲಿನ ಸರಕಾರದ ನಿರ್ಬಂಧಗಳು ಗಣನೀಯವಾಗಿ ಕಡಿಮೆಯಾಯಿತು. ಈ ಕ್ರಮಗಳು ಸರ್ಕಾರಿ ಅಧಿಕಾರಿಶಾಹಿಗಳ ಮಧ್ಯಪ್ರವೇಶವಿಲ್ಲದೆಯೇ ಸಂಪನ್ಮೂಲಗಳನ್ನು ಬಳಸಲು ಮತ್ತು ವಾಣಿಜ್ಯ ಸರಕುಗಳನ್ನು ಉತ್ಪಾದಿಸಲು ಖಾಸಗಿ ವ್ಯವಹಾರಗಳಿಗೆ ಅವಕಾಶ ಮಾಡಿಕೊಟ್ಟಿತು. ವಿದೇಶಿ ಹೂಡಿಕೆಯ ಒಳಹರಿವು ಭಾರತದ ರಾಷ್ಟ್ರೀಯ ನಿಕ್ಷೇಪಗಳನ್ನು ಹೆಚ್ಚಿಸಿತು. ಪ್ರಧಾನ ಮಂತ್ರಿಯಂತೆ, ರಾಜೀವ್ ತನ್ನ ತಾಯಿಯ ದೃಷ್ಟಿಕೋನದಿಂದ ಅಮೇರಿಕ ಸಂಯುಕ್ತ ಸಂಸ್ಥಾನದೊಂದಿಗೆ ಸಂಬಂಧವನ್ನು ಸುಧಾರಿಸಲು ಮುಂದುವರಿದರು. ಅದು ಆರ್ಥಿಕ ನೆರವು ಮತ್ತು ವೈಜ್ಞಾನಿಕ ಸಹಕಾರವನ್ನು ಹೆಚ್ಚಿಸಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಬಗೆಗೆ ರಾಜೀವ್ ರ ಪ್ರೋತ್ಸಾಹವು, ದೂರಸಂಪರ್ಕ ಉದ್ಯಮ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಕಾರ್ಯಕ್ರಮದ ಪ್ರಮುಖ ವಿಸ್ತರಣೆಗೆ ಕಾರಣವಾಯಿತು. 1988 ರಷ್ಯಾದ ರಾಕೆಟ್‘ಮೂಲಕ ಭಾರತದ ದೂರ ಸಂವೇದಿ ಐಆರ್‘ಎಸ್‘ (IRS)ಉಪಗ್ರಹ ಉಡಾವಣೆ. ಸಾಫ್ಟ್ವೇರ್ ಉದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಜನ್ಮ ನೀಡಿತು. [34]
  • ಭೋಪಾಲ್ ದುರಂತ:
  • ಡಿಸೆಂಬರ್ 1984 ರಲ್ಲಿ, ಮಧ್ಯ ಭಾರತೀಯ ನಗರ ಭೋಪಾಲದಲ್ಲಿ ಯೂನಿಯನ್ ಕಾರ್ಬೈಡ್ ಕೀಟನಾಶಕ ಘಟಕದಲ್ಲಿ ಅನಿಲ ಸೋರಿಕೆಯಾಯಿತು. ಸಾವಿರಾರು ಜನರು ತಕ್ಷಣವೇ ಕೊಲ್ಲಲ್ಪಟ್ಟರು, ಆದರೆ ತರುವಾಯ ಹೆಚ್ಚಿನ ಸಂಖ್ಯೆಯಲ್ಲಿ ನಿಧನರಾದರು ಅಥವಾ ನಿಷ್ಕ್ರಿಯಗೊಂಡರು. ಭೋಪಾಲ್ ದುರಂತದ ಅಪಘಾತಕ್ಕೆ ಈಡಾದವರಿಗೆ ಪರಿಹಾರಕ್ಕೆ ಅಮೆರಿಕದ ಅಮೆರಿಕದ ವಾರೆನ್ ಆಂಡರ್ಸನ್‍ರನ್ನು ಹಸ್ತಾಂತರಿಸಬೇಕೆಂದು ಅಮೇರಿಕಕ್ಕೆ ಒತ್ತಾಯಿಸಿದರು. ಅಮೇರಿಕ ನಿರಾಕರಿಸಿತು. ನಂತರ ಭಾರತೀಯ ಸರ್ವೋಚ್ಚ ನ್ಯಾಯಾಲಯ ನವೆಂಬರ್ 1988 ರಲ್ಲಿ ಒಂದು ಒಪ್ಪಂದಕ್ಕೆ ಬರಲು ಎರಡೂ ಕಡೆಗಳಿಗೆ ಹೇಳಿದರು. ಅಂತಿಮವಾಗಿ, ಫೆಬ್ರವರಿ 1989 ರಲ್ಲಿ ನ್ಯಾಯಾಲಯದ ಹೊರಗಿನ ಒಪ್ಪಂದದಲ್ಲಿ ಭೋಪಾಲ್ ದುರಂತದಲ್ಲಿ ಉಂಟಾಗಿರುವ ಹಾನಿಗಳಿಗೆ ಯುಎಸ್ $470 ಮಿಲಿಯನ್ (ಡಾಲರ್= ಸುಮಾರು 9400 ಕೋಟಿ ರೂಪಾಯಿ) ಪಾವತಿಸಲು ಯೂನಿಯನ್ ಕಾರ್ಬೈಡ್ ಒಪ್ಪಿಗೆ ನೀಡಿತು. ಮೊತ್ತವನ್ನು ತಕ್ಷಣ ಬ್ಯಾಂಕಿಗೆ ಪಾವತಿಸಲಾಯಿತು.
  • 1990 ರ ಸುಮಾರಿಗೆ, ನಂತರದ ಪ್ರಧಾನಿ ವಿ.ಪಿ.ಸಿಂಗ್ ಅದಕ್ಕೆ ತಕರಾರು ಹಾಕಿದರು. ಭಾರತದ ಸುಪ್ರೀಂ ಕೋರ್ಟ್ ವಪ್ಪಂದದ ವಿರುದ್ಧ ಮನವಿಗಳನ್ನು ಕೇಳಿತು. 1991 ರ ಅಕ್ಟೋಬರ್ನಲ್ಲಿ ಸುಪ್ರೀಂ ಕೋರ್ಟ್ ಮೂಲ ತೀರ್ಮಾನ 470 ಮಿಲಿಯನ್ನು ಡಾಲರ್ ಪರಿಹಾರ ಎತ್ತಿಹಿಡಿಯಿತು, ಮೂಲ ತೀರ್ಮಾನವನ್ನು ಪ್ರಶ್ನಿಸಿದ ಯಾವುದೇ ಉನ್ನತ ಮನವಿಯನ್ನು ನಿರಾಕರಿಸಿತು. ಆದರೆ ಆ ಒಪ್ಪಂದದ ಹಣವನ್ನು ವಿ.ಪಿ.ಸಿಂಗ್ ಪಡೆಯದೆ ಬಿಟ್ಟರು ಮತ್ತು ತಕರಾರು ಮುಂದುವರಿಸಿದರು; ಯೂನಿಯನ್ ಕಾರ್ಬೈಡ್ ತಾನು ಕಟ್ಟಿದ ಹಣವನ್ನು ವಾಪಾಸು ಪಡೆಯಿತು. ದೀರ್ಘ ಕಾಲ ಲಕ್ಷಾಂತರ ಜನ ನೊಂದವರಿಗೆ ಪರಿಹಾರವಿಲ್ಲದೆ ಕೊನೆಗೆ ಭಾರತ ಸರ್ಕಾರವೇ ತನ್ನ ಸರ್ಕಾರಿ ಖಜಾನೆಯಿಂದ ಚಿಕ್ಕಮೊತ್ತದ ಪರಿಹಾರಗಳನ್ನು ನೊಂದವರಿಗೆ ನೀಡಿತು.

ಶ್ರಿಲಂಕಾ ಎಲ್‍ಟಿಟಿಇ ಸಮಸ್ಯೆ

ಭಾರತ ಗಣರಾಜ್ಯದ ಇತಿಹಾಸ 
ಬೊಫೊರ್ಸ್ ಫಿರಂಗಿ (Haubits 77 -"Field Howitzer 77" or FH-77)ಕಾರ್ಗಿಲ ಯುದ್ಧದಲ್ಲಿ ಭಾರತದ ಜಯಕ್ಕೆ ಮುಖ್ಯವಾದುದು.
  • 1987 ರಲ್ಲಿ ಭಾರತ ಮತ್ತು ಶ್ರೀಲಂಕಾ ಸರಕಾರ ನಡುವೆ ಒಂದು ಒಪ್ಪಂದ ಆಯಿತು. ಆ ಒಪ್ಪಂದದಂತೆ ಎಲ್‍ಟಿಟಿಇ ನೇತೃತ್ವದಲ್ಲಿ ಶ್ರೀಲಂಕಾದಲ್ಲಿ ನೆಡೆಯುತ್ತಿದ್ದ ಜನಾಂಗೀಯ ಸಂಘರ್ಷದಲ್ಲಿ, ಶಾಂತಿಪಾಲನಾ ಕಾರ್ಯಾಚರಣೆಗಾಗಿ ಪಡೆಗಳನ್ನು ನಿಯೋಜಿಸಲು ಭಾರತ ಒಪ್ಪಿಕೊಂಡಿತು. ರಾಜೀವ್ ಈ ಒಪ್ಪಂದವನ್ನು ಜಾರಿಗೊಳಿಸಲು ಮತ್ತು ತಮಿಳು ದಂಗೆಕೋರರನ್ನು ನಿಶ್ಯಸ್ತ್ರಗೊಳಿಸಲು ಭಾರತೀಯ ಸೇನಾಪಡೆಗಳನ್ನು ಕಳುಹಿಸಿದರು. ನಂತರ ಭಾರತೀಯ ಶಾಂತಿಪಾಲನಾ ಪಡೆ, ತಮಿಳು ಬಂಡುಕೋರ ಪಡೆಯ ಹಿಂಸಾಚಾರಕ್ಕೆ ಸಿಲುಕಿಕೊಂಡಿತು. - ಅಂತಿಮವಾಗಿ ತಮಿಳರ ಬಂಡುಕೋರರ ವಿರುದ್ಧ ಹೋರಾಡುವ ಪರಿಸ್ಥಿತಿ ಉಂಟಾಯಿತು. ಕೊನೆಗೆ ಲಂಕಾದ ರಾಷ್ಟ್ರೀಯತಾವಾದಿಗಳೂ ಸಹ ಭಾರತ ಪಡೆಯ ವಿರುದ್ಧ ನಿಂತವು. [35] ವಿ.ಪಿ. ಸಿಂಗ್ 1990 ರಲ್ಲಿ ಭಾರತೀಯ ಶಾಂತಿಪಾಲನಾ ಪಡೆಯನ್ನು (ಐಪಿಕೆಎಫ್) ಹಿಂತೆಗೆದುಕೊಂಡರು, ಆದರೆ ಸಾವಿರಾರು ಭಾರತೀಯ ಸೈನಿಕರು ಮೃತಪಟ್ಟರು. ಸೋಷಿಯಲಿಸ್ಟ್ ನೀತಿಗಳಿಂದ ರಾಜೀವ್ ಹೊರಹೋದಾಗ ಜನಸಾಮಾನ್ಯರಿಗೆ ಅದು ಚೆನ್ನಾಗಿ ಲಾಬದಾಯಕವೆನಿಸಿಕೊಳ್ಳಲಿಲ್ಲ, ಅವರು ಹೊಸ ನೀತಿಯ ನಾವೀನ್ಯತೆಗಳಿಂದ ಲಾಭಪಡೆಯಲಾಗಲಿಲ್ಲ. ನಿರುದ್ಯೋಗವು ಗಂಭೀರ ಸಮಸ್ಯೆಯಾಗಿತ್ತು, ಮತ್ತು ಭಾರತದ ಬೆಳೆಯುತ್ತಿರುವ ಜನಸಂಖ್ಯೆಯು ಸಂಪನ್ಮೂಲಗಳ ಕೊರತೆಯುಂಟುಮಾಡಿತು. ನಿರಂತರವಾಗಿ ಅಗತ್ಯಗಳನ್ನು ಹೆಚ್ಚಿಸಿತು. ಹೆಚ್ಚುತ್ತಿರುವ ಅಗತ್ಯಗಳಿಗೆ ಸಂಪನ್ಮೂಲಗಳ ಕೊರತೆಯಾಯಿತು.

ಬೊಫೋರ್ಸ್ ಹಗರಣ

  • ಒಪ್ಪಂದ-:ಮಾರ್ಚ್ 24, 1986 ರಂದು ನವ ದೆಹಲಿ ಮತ್ತು ಸ್ವೀಡಿಶ್ ಮೆಟಲ್‍ಸ್, ಮತ್ತು ಶಸ್ತ್ರಾಸ್ತ್ರಗಳ (ಎಬಿ ಬೋಫೋರ್ಸ್) ಕಂಪನಿಯ ನಡುವಿನ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಎಬಿ ಬೋಫೋರ್ಸ್ ಕಂಪನಿಯು 410 - 155 ಎಂಎಂ ಹೊವಿಟ್ಜರ್ ಫಿರಂಗಿಗಳನ್ನು ಭಾರತೀಯ ಸೇನೆಗೆ ಸರಬರಾಜು ಮಾಡುವುದು; ವಿಶೇಷ-ಅವಕಾಶವಾಗಿ - 1000 ಹೆಚ್ಚು ಫಿರಂಗಿಗಳನ್ನು (ಗನ್) ಗಳನ್ನು ಭಾರತದಲ್ಲಿ ಉತ್ಪಾದಿಸುವ ಒಂದು ಆಯ್ಕೆಯನ್ನು ಕೂಡಾ ಒಪ್ಪಂದದಲ್ಲಿ ಸೇರಿಸಲಾಯಿತು. ಒಂದು ಉದಾರ-ಉದಾರೀಕರಣದ ನೀತಿಯಲ್ಲಿ ಭಾರತಕ್ಕಾಗಿ ಈ ಮೊತ್ತ 285 ಮಿಲಿಯನ್ ಡಾಲರ್ (ಸುಮಾರು ರೂ 1500 ಕೋಟಿ ರೂಪಾಯಿ; ಒಂದು ಫಿರಂಗಿಗೆ ಸುಮಾರು ರೂ.3.7 ಕೋಟಿ),ಆಗಿತ್ತು. ಏಪ್ರಿಲ್ 16, 1987 ರಂದು ಮೊದಲಬಾರಿಗೆ ಹಠಾತ್‍ ಆಗಿ ಸ್ವೀಡನ್ನ ರೇಡಿಯೊ ಪ್ರಸಾರವು ಎಬಿ ಬೋಫೋರ್ಸ್ ಕಂ.ಯಿಂದ ಪ್ರಮುಖ ಭಾರತೀಯ ನೀತಿ ನಿರ್ಮಾಪಕರು ಮತ್ತು ಉನ್ನತ ರಕ್ಷಣಾ ಅಧಿಕಾರಿಗಳು ಒಪ್ಪಂದವನ್ನು ಕುದುರಿಸಿರುವುದಕ್ಕಾಗಿ ಹಣ ಪಡೆದಿರುವರು ಎಂದು ಹೇಳಿದಾಗ ಇದು ಹಗರಣವಾಗಿ ಬೆಳೆಯಿತು. ಈ ಬೆಳವಣಿಗೆಯಿಂದ ೪೦೦ ಫಿರಂಗಿಗಳನ್ನು ಭಾರತ ಪಡೆದ ನಂತರ ಭಾರತ ಒಪ್ಪಂದವನ್ನು ಮುಂದುವರಿಸದೆ ರದ್ದುಗೊಳಿಸಿತು
  • ಬೊಫೋರ್ಸ್ ಹಗರಣ ಆಪಾದನೆಗಳು ಬಂದಾಗ ರಾಜೀವ್ ಗಾಂಧಿಯವರಿಗಿದ್ದ ಪ್ರಾಮಾಣಿಕ ರಾಜಕಾರಣಿ ಎಂಬ ಬಿರುದು ಛಿದ್ರವಾಯಿತು, (ಅವರಿಗೆಮಾಧ್ಯಮಗಳು "ಶ್ರೀ ಕ್ಲೀನ್" ಎಂದು ಅಡ್ಡಹೆಸರಿಟ್ಟಿದ್ದರು) ಹಿರಿಯ ಸ್ವೀಡಿಷ್ ಗನ್ ಉತ್ಪಾದಕರಿಂದ ರಕ್ಷಣಾ ಒಪ್ಪಂದಗಳ ಮೇಲೆ ಲಂಚವನ್ನು ತೆಗೆದುಕೊಂಡಿದ್ದಾರೆ ಎಂಬ ಆಪಾದನೆ ಮಾಡಲಾಯಿತು. ನಂತರ ಸುಪ್ರೀಮ್ ಕೋರ್ಟಿನಿಂದ ವಿಚಾರಣೆ ನೆಡಸಿ ಅದರಲ್ಲಿ ಸತ್ಯವಿಲ್ಲವೆಂದು ತೀರ್ಮಾನವಾಯಿತು. ಆದರೂ ಹಿರಿಯ ಸ್ವೀಡಿಷ್ ಗನ್ ಉತ್ಪಾದಕರಿಂದ ರಕ್ಷಣಾ ಒಪ್ಪಂದಗಳ ಮೇಲೆ ಲಂಚವನ್ನು ತೆಗೆದುಕೊಂಡಿದ್ದಾರೆ ಎಂಬ ಆಪಾದನೆ ಮಾಡಲಾಯಿತು. ಈ ಬಗೆಗೆ ತನಿಖೆಗೆ ನೇತೃತ್ವ ವಹಿಸಿದ್ದ ಸ್ವೀಡಿಶ್ ಪೋಲಿಸ್‍ನ ಹಿಂದಿನ ಮುಖ್ಯಸ್ಥ ಸ್ಟೇನ್ ಲಿಂಡ್ಸ್ಟ್ರೋಮ್ ಪ್ರಕಾರ, ರಾಜೀವ್ ಗಾಂಧಿ ಪಾವತಿಗಳನ್ನು ಸ್ವೀಕರಿಸಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದರು. ನಂತರ ದೆಹಲಿ ಹೈ ಕೋರ್ಟು ವಿಚಾರಣೆ ನೆಡಸಿ ರಾಜಿವಗಾಂಧಿ ಮೇಲಿನ ಬೋಫೋರ್ಸ್ ವ್ಯವಹಾರದ ಆಪಾದನೆಯಲ್ಲಿ ಸತ್ಯವಿಲ್ಲವೆಂದು ತೀರ್ಮಾನ ನೀಡಿತು.(High Court judge JD Kapoor said there was no evidence of involvement in the deal by Gandhi or the late former defense secretary SK Bhatnagar)

ಜನತಾದಳ

  • 7 ನೆಯ ಪ್ರಧಾನಿ; ವಿಶ್ವನಾಥ್ ಪ್ರತಾಪ್ ಸಿಂಗ್;(1931-2008)(ಪಕ್ಷ: ಜನತಾ ದಳ-ನ್ಯಾಷನಲ್ ಫ್ರಂಟ್) ಫತೇಪುರ್ದಿ;ಅಧಿಕಾರ:2 ಡಿಸೆಂಬರ್ 1989 ರಿಂದ ನವೆಂಬರ್ 10 1990ರಬರೆಗೆ; 343 ದಿನಗಳು'
  • 8 ನೆಯ ಪ್ರಧಾನಿ; ಚಂದ್ರಶೇಖರ್ ;(1927-2007); ಬಾಲಿಯಾ; ಪಕ್ಷ ಸಮಾಜವಾದಿ (ಜನತಾ ಪಕ್ಷ) ಬಾಲಿಯಾ,;ಅಧಿಕಾರ: 10 ನವೆಂಬರ್ 1990 ರಿಂದ ಜೂನ್ 21, 1991 ರವರೆಗೆ.223 ದಿನಗಳು.
  • 8 ನೇ ಅಧ್ಯಕ್ಷರು: ರಾಮಸ್ವಾಮಿ ವೆಂಕಟರಾಮನ್ (1910-2009) ದಿ.25 ಜುಲೈ 1987 ರಿಂದ 25 ಜುಲೈ 1992 ರ ವರೆಗೆ; 60 ತಿಂಗಳು.
ಭಾರತ ಗಣರಾಜ್ಯದ ಇತಿಹಾಸ 
ವಿ.ಪಿ.ಸಿಂಗ್-
ಭಾರತ ಗಣರಾಜ್ಯದ ಇತಿಹಾಸ 
ಚಂದ್ರಶೇಖರ್ ಸಿಂಗ್ 2010 ರ ಅಂಚೆಚೀಟಿ
  • 1989 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳು ನೆಡೆದು ರಾಜೀವ್ ಅವರ ಕಾಂಗ್ರೆಸ್ ಕೇವಲ 197 ಸ್ಥಾನ ಪಡೆದು ಅಧಿಕಾರದಿಂದ ದೂರ ಉಳಿಯಿತು.
  • ಅದರ ಬದಲು ರಾಜೀವ್ ಗಾಂಧಿಯವರ ಮಂತ್ರಿಮಂಡಲದಲ್ಲಿ ಹಣಕಾಸು ಸಚಿವರಾಗಿ ಮತ್ತು ರಕ್ಷಣಾ ಸಚಿವರಾಗಿದ್ದ ವಿ.ಪಿ.ಸಿಂಗ್‍ ನಂತರ ರಾಜಿನಾಮೆ ಕೊಟ್ಟು ಜನತಾ ದಳ ಸೇರಿದ್ದರು. ಕಾಂಗ್ರೆಸ್ ನಾಯಕತ್ವವನ್ನು ಬೋಫೋರ್ಸ್ ಹಗರಣಕ್ಕಾಗಿ ದೂರಿದ್ದರು. ಅದಕ್ಕಾಗಿ ಅವರನ್ನು ಪಕ್ಷದಿಂದ ಹೊರ ಹಾಕಿದ ಬಳಿಕ ಜನಪ್ರಿಯತೆ ಗಳಿಸಿ ವಿ.ಪಿ.ಸಿಂಗ್ ಜನತಾದಳದ ನೇತ್ರತ್ವ ವಹಿಸಿದರು. ಜನತಾದಳವು 147 ಸ್ಥಾನ ಪಡೆದಿದ್ದರೂ ಒಕ್ಕೂಟ ರಚಿಸಿದರು. ಭಾರತೀಯ ಜನತಾ ಪಕ್ಷ ಮತ್ತು ಎಡ ಪಕ್ಷಗಳ ಹೊರಬೆಂಬಲದಿಂದ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರು. ನಂತರ ಬೋಫೋರ್ಸ್ ಹಗರಣದ ಬಗೆಗೆ ಸಿಂಗ್ ಉದಾಸೀನ ತಾಳಿದರು, ಸುಧಾರಣೆ ಮತ್ತು ಸ್ವಚ್ಛ ಸರ್ಕಾರಕ್ಕೆ ಜನಪ್ರಿಯ ಹೋರಾಟಗಾರನಾಗಿ ಮಾರ್ಪಟ್ಟ ಸಿಂಗ್, ಜನತಾ ದಳದ ಸಮ್ಮಿಶ್ರಣವನ್ನು ಬಹುಮತಕ್ಕೆ ಕರೆದೊಯ್ದ. ಪ್ರಧಾನ ಮಂತ್ರಿಯಾಗಿದ್ದ ಸಿಂಗ್, ಹಿಂದಿನ ಗಾಯಗಳನ್ನು ಗುಣಪಡಿಸಲು ಸ್ವರ್ಣ ಮಂದಿರ ದೇವಾಲಯಕ್ಕೆ ಪ್ರಮುಖ ಭೇಟಿ ನೀಡಿದರು. ಕೆಳ-ಜಾತಿ ಹಿಂದೂಗಳಿಗೆ ಮೀಸಲಾತಿ ಕೋಟಾವನ್ನು ಹೆಚ್ಚಿಸಲು ಅವರು ವಿವಾದಾತ್ಮಕ ಮಂಡಲ್ ಕಮೀಷನ್ ವರದಿಯನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದರು. ಬಿಜೆಪಿ ಈ ಅನುಷ್ಠಾನಗಳನ್ನು ಪ್ರತಿಭಟಿಸಿತು ಮತ್ತು ಅದರ ಬೆಂಬಲವನ್ನು ಹಿಂತೆಗೆದುಕೊಂಡಿತು, ನಂತರ ಅವರು ರಾಜೀನಾಮೆ ನೀಡಿದರು.
  • ರಾಜೀವ್ ಅವರ ಕಾಂಗ್ರೆಸ್ ಬೆಂಬಲದೊಂದಿಗೆ ಜನತಾ ದಳ (ಸೋಶಿಯಲಿಸ್ಟ್) ಅನ್ನು ರೂಪಿಸಲು ಬಿ.ಎಸ್.ಚಂದ್ರಶೇಖರ್ ಜನತಾಪಕ್ಷದಿಂದ ಬೇರೆಯಾದರು. ಕಾಂಗ್ರಸ್ ಪಕ್ಷದ ಬೆಂಬಲದಿಂದ ಚಂದ್ರಶೇಖರ್ ಪ್ರಧಾನಿಯಾದರು. ಅವರ ಈ ಹೊಸ ಸರಕಾರವು ಕೆಲವೇ ತಿಂಗಳುಗಳಲ್ಲಿ, ಕಾಂಗ್ರೆಸ್ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಾಗ ಕುಸಿಯಿತು. ಕಾಂಗ್ರೆಸ್ (ಐ) ಪಕ್ಷವು ತನ್ನ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಮಾರ್ಚ್ 6, 1991 ರಂದು ಅವರು ರಾಜೀನಾಮೆ ನೀಡಿದರು. ಆದರೆ ಮೇ ಮತ್ತು ಜೂನ್ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವವರೆಗೆ ಅವರು ಉಸ್ತುವಾರಿ ಪ್ರಧಾನಿಸ್ಥಾನದಲ್ಲಿದ್ದರು;

1990 ರ ದಶಕ

ಕಾಶ್ಮೀರಿ ಹಿಂದೂಗಳ ಉಚ್ಚಾಟನೆ
Part of ಜಮ್ಮು ಮತ್ತು ಕಾಶ್ಮೀರದ ಬಂಡಾಯ
ಭಾರತ ಗಣರಾಜ್ಯದ ಇತಿಹಾಸ 
Kashmir Valley in color green
ದಿನಾಂಕ1989 ಮತ್ತು ನಂತರ
ಸ್ಥಳಕಾಶ್ಮೀರ ಕಣಿವೆ (ಹಸಿರು ಬಣ್ಣದಲ್ಲಿ)
ಗುರಿಗಳುಇಸ್ಲಾಮೀಕರಣ, ಜನಾಂಗೀಯ ಉಚ್ಛಾಟನೆ, ಬೇಡಿಕೆ-ಗುರಿ:ಭಾರತದಿಂದ ಸ್ವತಂತ್ರ; ಅಥವಾ ಪಾಕಿಸ್ತಾನದೊಡನೆ ಒಕ್ಕೂಟ, ಶರಿಯಾ ಕಾನೂನು.
ವಿಧಾನಗಳುಅತ್ಯಾಚಾರ, ಗುರುತಿಸಿ ಕೊಲೆ, ಕೊಲೆ, ಬೆದರಿಕೆ, ಅಪಹರಣ
ಫಲಿತಾಂಶಸಾಮೂಹಿಕ ದೇಶತ್ಯಾಗ ೨ಲಕ್ಷದಿಂದ ೫ ಲಕ್ಷ ಜನ
Casualties
ಸಾವು(ಗಳು)200-1,341:ಸಾವು
  • ಜಮ್ಮು ಮತ್ತು ಕಾಶ್ಮೀರದ ಬಂಡಾಯ, ಕಾಶ್ಮೀರಿ ಹಿಂದುಗಳ ವಲಸೆ
  • ವಿಶೇಷ ಲೇಖನ: ಕಾಶ್ಮೀರಿ ಹಿಂದೂಗಳ ಜನಾಂಗೀಯ ಉಚ್ಛಾಟನೆ
  • ಆಗಿನ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ (ಮಾಜಿ ಮುಖ್ಯಮಂತ್ರಿ ಶೇಖ್ ಅಬ್ದುಲ್ಲಾ ಅವರ ಪುತ್ರ) 1987 ರ ಚುನಾವಣೆಯಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿಕೂಟವನ್ನು ಘೋಷಿಸಿದರು. ಆದರೆ, ಸೋತವರು, ಚುನಾವಣೆಯಲ್ಲಿ ಅವರಿಗೆ ಅನುಕೂಲವಾಗುವಂತೆ ತಿರುಚಲಾಗಿದೆ ಎಂಬ ಅಪವಾದ ಮಾಡಲಾಗಿತ್ತು. ಅದೇ ನೆವದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಸ್ಲಿಮರ ಸಶಸ್ತ್ರ ಬಂಡಾಯದ ಬೆಳವಣಿಗೆಗೆ ಕಾರಣವಾಯಿತು, ಭಾಗಶಃ, ಚುನಾವಣೆಯಲ್ಲಿ ಅನ್ಯಾಯವಾಗಿ ಸೋತವರು ಈ ಗಲಭೆಗೆ ಕಾರಣರಾಗಿದ್ದರು. ಪಾಕಿಸ್ತಾನವು ಈ ಗುಂಪುಗಳಿಗೆ ವ್ಯವಸ್ಥಿತ ಬೆಂಬಲ, ಶಸ್ತ್ರಾಸ್ತ್ರ, ನೇಮಕಾತಿ ಮತ್ತು ತರಬೇತಿಯೊಂದಿಗೆ ಪೂರೈಸಿತ್ತು. ಭಾರತದ ಗೃಹ ವ್ಯವಹಾರಗಳ ಮುಫ್ತಿ ಮಹಮ್ಮದ್ ಸಯೀದ್ ಕೇಂದ್ರ ಗೃಹ ಸಚಿವ ತನ್ನ ರಾಜಕೀಯ ಎದುರಾಳಿಯಾದ, ಜಮ್ಮು ಮತ್ತು ಕಾಶ್ಮೀರ ಫಾರೂಕ್ ಅಬ್ದುಲ್ಲಾ - ಆಗಿನ ಮುಖ್ಯಮಂತ್ರಿಯ ಪ್ರತಿಷ್ಠೆ ಹಾಳುಮಾಡುವ ಸಲುವಾಗಿ ಪ್ರಧಾನಿ ವಿ.ಪಿ.ಸಿಂಗ್‍ಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಾಜ್ಯಪಾಲರಾಗಿ ಜಗಮೋಹನ್‍ರನ್ನು ನೇಮಕ ಮಾಡಲು ಒತ್ತಾಯ ಮಾಡಿದರು. ಹಾಗೆ ಜಗಮೋಹನ್‍ರನ್ನು ನೇಮಕ ಮಾಡಿದಾಗ ಅಬ್ದುಲ್ಲಾ ಅದೇ ದಿನ ರಾಜೀನಾಮೆ ನೀಡಿದರು. ಇದು ಆಡಳಿತದ ಅಸ್ತವ್ಯಸ್ತತೆಗೆ ಕಾರಣವಾಯಿತು. ಪ್ರಧಾನಿ ವಿ.ಪಿ. ಸಿಂಗ್‍ ಅಲ್ಲಿಯ ಪರಿಸ್ಥಿತಿ ಸುಧಾರಣೆಗೆ ಏನೂ ಕ್ರಮಕೈಗಳ್ಳಲಿಲ್ಲ. ಹೀಗೆ ವಿ,ಪಿ.ಸಿಂಗ್ ಮತ್ತು ಸಯೀದ್ ಸುಮಾರು ಎಂಟು ಲಕ್ಷ ಕಾಶ್ಮೀರ ಹಿಂದೂಗಳ ಉಚ್ಛಾಟನೆಗೆ ಕಾರಣರಾದರು.ಮುಫ್ತಿ ಮಹಮ್ಮದ್ ಸಯೀದ್ ಕೇಂದ್ರ ಗೃಹ ಸಚಿವರು ಉಗ್ರಗಾಮಿಗಳ ಬಗೆಗೆ ಮೃಧುಧೋರಣೆ ಹೊಂದಿದ್ದರು.
ಭಾರತ ಗಣರಾಜ್ಯದ ಇತಿಹಾಸ 
(1890)ಕಾಶ್ಮೀರಿ ಪಂಡಿತರು ಅರ್ಚಕರು- ಶಾಸ್ತ್ರ ಗ್ರಂಥಗಳನ್ನು ಬರೆಯುತ್ತಿರುವುದು.
  • 1989 ರ ಸೆಪ್ಟೆಂಬರ್ 14 ರಂದು, ವಕೀಲ ಮತ್ತು ಬಿಜೆಪಿ ಸದಸ್ಯರಾಗಿದ್ದ ಪಂಡಿತ್ ಟಿಕಾಲಾಲ್ ತಪ್ಲೂ ಅವರು ಶ್ರೀನಗರದಲ್ಲಿನ ತಮ್ಮ ಮನೆಯಲ್ಲಿ ಜೆಕೆಎಲ್ಎಫ್‍ನಿಂದ ಕೊಲೆಯಾದರು. ಟ್ಯಾಪ್ಲೂನ ಮರಣದ ನಂತರ, ಮಕ್ಬುಲ್ ಭಟ್‍ನನ್ನು ಮರಣದಂಡನೆ ಶಿಕ್ಷೆಗೆ ಒಳಪಡಿಸಿದ ಶ್ರೀನಗರ ಹೈಕೋರ್ಟಿನ ನ್ಯಾಯಾಧೀಶ ನೀಲಕಂ ಗಂಜುಗೆ ಗುಂಡು ಹಾರಿಸಿದರು.
  • ಡಿಸೆಂಬರ್ 1989 ರಲ್ಲಿ, ಜೆಕೆಎಲ್ಎಫ್ ಸದಸ್ಯರು ಐದು ಉಗ್ರಗಾಮಿಗಳನ್ನು ಬಿಡುಗಡೆ ಮಾಡುವಂತೆ ಆಗಿನ ವಿ.ಪಿ.ಸಿಂಗ್ ಮಂತ್ರಿಮಂಡಲದ ಕೇಂದ್ರ ಗೃಹಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಮಗಳು ಡಾ. ರುಬಿಯಾ ಸಯೀದ್‍ಳನ್ನು ಅಪಹರಿಸಿದರು, ನಂತರ ಐದು ಉಗ್ರಗಾಮಿಗಳನ್ನು ಬಿಡುಗಡೆ ಮಾಡಿ ಅವಳನ್ನು ಬಿಡುಗಡೆಗೊಳಿಸಲಾಯಿತು.
  • ಜನವರಿ 04, 1990 ರಂದು, ಶ್ರೀನಗರ ಮೂಲದ ವೃತ್ತಪತ್ರಿಕೆ ಅಫ್ತಾಬ್ ಒಂದು ಸಂದೇಶವನ್ನು ಬಿಡುಗಡೆ ಮಾಡಿದರು, ಎಲ್ಲ ಹಿಂದುಗಳಿಗೆ ತಕ್ಷಣವೇ ಕಾಶ್ಮೀರವನ್ನು ತೊರೆಯುವಂತೆ ಬೆದರಿಕೆ ಹಾಕಿದರು, ಇದನ್ನು ಉಗ್ರಗಾಮಿ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ನೀಡಿತು. ಏಪ್ರಿಲ್ 14, 1990 ರಂದು ಅಲ್-ಸಫಾ ಹೆಸರಿನ ಮತ್ತೊಂದು ಶ್ರೀನಗರ ಮೂಲದ ಸುದ್ದಿಪತ್ರಿಕೆ ಅದೇ ಎಚ್ಚರಿಕೆಯನ್ನು ಪುನಃ ಪ್ರಕಟಿಸಿತು.
  • ಕಾಶ್ಮೀರದ ಇಸ್ಲಾಮಿ ಉಗ್ರಗಾಮಿಗಳು ಹಿಂದೂಗಳಾಗಿದ್ದ ಸ್ಥಳೀಯ ಕಾಶ್ಮೀರಿ ನೂರಾರು ಪಂಡಿತರನ್ನು ಹಿಂಸಿಸಿ ಕೊಂದರು ಮತ್ತು ಕಾಶ್ಮೀರವನ್ನು ದೊಡ್ಡ ಸಂಖ್ಯೆಯಲ್ಲಿ ತೊರೆಯಲು ಒತ್ತಾಯಿಸಿದರು. ಸುಮಾರು ನಾಲ್ಕರಿಂದ ಐದು ಲಕ್ಷ ಅಥವಾ ಅದಕ್ಕೂ ಹೆಚ್ಚು 90% ಕಾಶ್ಮೀರಿ ಪಂಡಿತರು 1990 ರ ದಶಕದಲ್ಲಿ ಕಾಶ್ಮೀರವನ್ನು ತೊರೆದರು, ಇದರಿಂದಾಗಿ ಕಾಶ್ಮೀರಿ ಹಿಂದೂಗಳ ಜನಾಂಗೀಯ ಉಚಗ್ಛಾಟನೆಯಿಂದ ಇಸ್ಲಾಮೀಕರಣಕ್ಕೆ ಕಾರಣವಾಯಿತು. ಬಿಜೆಪಿ ಸೇರಿದ ಜನತಾಪಕ್ಷದ ಒಕ್ಕೂಟದ ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್‍ ಮತ್ತು ಗೃಹ ಮಂತ್ರಿ ಮುಫ್ತಿ ಮೊಹಮದ್ ಅವರನ್ನು ಕಾಶ್ಮೀರದ ರಾಜ್ಯಪಾಲ ಜಗಮೊಹನ್ ಶಾಂತಿಪಾಲನೆಗಾಗಿ ಹೆಚ್ಚಿನ ಅಧಿಕಾರ ಕೇಳಿದರೂ ಕೊಡದೆ ನಿಶ್ಕ್ರಿಯತೆ ವಹಿಸಿದರು. ಸುಮಾರು 3.5 ಲಕ್ಷ (8 ಲಕ್ಷ ಎಂದು ಕೆಲವರು ಹೇಳುವರು.)ಕಾಶ್ಮೀರಿ ಹಿಂದುಗಳನ್ನು ಬರಿಕೈಯಲ್ಲಿ ತಮ್ಮ ಪ್ರದೇಶ ತೊರೆದು ಪಕ್ಕದ ರಾಜ್ಯಗಳಿಗೆ ವಲಸೆಹೋಗುವಂತೆ ಮಾಡಲಾಯಿತು.

ರಾಜೀವ ಗಾಂಧಿ ಹತ್ಯೆ

  • ವಿಶೇಷ ಲೇಖನ :ರಾಜೀವ ಗಾಂಧಿ ಹತ್ಯೆ- ಹಂತ ಹಂತ ವಿವರ
ಭಾರತ ಗಣರಾಜ್ಯದ ಇತಿಹಾಸ 
ರಾಜೀವಗಾಂಧಿಯ ಹತ್ಯೆಯಾದ ಶ್ರೀಪೆರಂಬದುರಿನಲ್ಲಿ ಅವರ ಸ್ಮಾರಕ.
  • ಪ್ರಧಾನಿಯಾಗಿದ್ದ ಚಂದ್ರಶೇಖರ್ ಬಹುಮತ ಕಳೆದುಕೊಂಡು ರಾಜಿನಾಮೆಯ ನಂತರ 1991 ರ ಮೇ 20ರಿಂದ ಲೋಕಸಬೆಗೆ ಚುನಾವಣೆಗಳು ನೆಡೆದವು. ರಾಜೀವ ಗಾಂಧಿಯವರು ದಕ್ಷಿಣ ರಾಜ್ಯಗಳಲ್ಲಿ ಪ್ರಚಾರ ಮಾಡಲು ತಮಿಳು ನಾಡಿಗೆ ಬಂದರು. 1991 ರ ಮೇ 21 ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಕಾಂಗ್ರೆಸ್ (ಇಂದಿರಾ) ಪರವಾಗಿ ತಮಿಳುನಾಡಿನಲ್ಲಿ ಪ್ರಚಾರ ನಡೆಸುತ್ತಿದ್ದಾಗ, ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಮ್ (ಎ.ಎಲ್.ಟಿ.ಇ.)ಸದಸ್ಯೆ ಮಹಿಳಾ ಆತ್ಮಹತ್ಯೆ ಉಗ್ರಗಾಮಿಯ ರಾಜೀವರಿಗೆ ಹಾರ ಹಾಕುವ ಸಮಯದಲ್ಲಿ ಸೊಂಟದಲ್ಲಿದ್ದ ಬಾಂಬ್‍ನ್ನು ಸಿಡಿಸಿದಳು. ಆ ಧಾಳಿಯಲ್ಲಿ ರಾಜೀವ್ ಮತ್ತು ಇತರ ಅನೇಕರು ಹತ್ಯೆಯಾದರು.
  • ಹತ್ಯೆಯ ವಿವರ:
ಭಾರತ ಗಣರಾಜ್ಯದ ಇತಿಹಾಸ 
Location Tamil Eelam territorial claim; ಎಲ್ಟಿಟಿಇ ತಮಿಳ್ ಈಳಮ್ ಎಂದು ಘೋಷಿಸಿದ, ಶ್ರೀಲಂಕಾದ ಪ್ರದೇಶವು(ಹಸಿರು ಬಣ್ಣ)
  • 1991ರ ಚುನಾವಣೆಯಲ್ಲಿ ರಾಜೀವ್ ಅವರ ಬಿಡುವಿಲ್ಲದ ವೇಳಾಪಟ್ಟಿಯೊಂದಿಗೆ ಪ್ರಚಾರಕ್ಕೆ ಹೋಗುತ್ತಿದ್ದಾಗ ತಮಿಳುನಾಡಿನಲ್ಲಿ ಪ್ರಚಾರ ಪೂರ್ಣಗೊಂಡಿತು. ಆನಂತರ ರಾಜೀವ್ ಇದ್ದ ಸ್ಥಳಕ್ಕೆ ಬಂದ ಮರುಗತಮ್ ಚಂದ್ರಶೇಖರ್(ಕಾಂಗ್ರೆಸ್ ನಾಯಕಿ, ಆ ಕ್ಷೇತ್ರದ ಅಭ್ಯರ್ಥಿ) ಚುನಾವಣೆ ಪ್ರಚಾರಕ್ಕೆ ಪೆರುಂಬುದೂರ್ ಗೆ ಬರಲು ಒತ್ತಾಯಿಸಿದರು. ಅವರು ಎಲ್ಟಿಟಿಇ ಮೊದಲನೆಯ ಹಿಟ್ ಪಟ್ಟಿಯಲ್ಲಿದ್ದ ಕಾರಣ, ಈ ಆಲೋಚನೆಯನ್ನು ಪ್ರತಿಯೊಬ್ಬರೂ ವಿರೋಧಿಸಿದರು. ಇದನ್ನು ಜಯಲಲಿತಾ ಅವರೂ ವಿರೋದಿಸಿದರು. ಆದರೂ 1991, ಮೇ 21, ಚುನಾವಣೆ ಪ್ರಚಾರ ಪ್ರವಾಸ ಪ್ರಾರಂಭವಾಯಿತು. ಪೆರುಂಬುದುರ್ ಶಾಲೆಯ ಮೈದಾನದಲ್ಲಿ ಮರಗತಮ್ ಅವರು ಸಭೆಗೆ ಪೊಲೀಸ್ ನಿಂದ ಅನುಮತಿ ಪಡೆದರು. ಆದರೆ ಇದ್ದಕ್ಕಿದ್ದಂತೆ ಈ ಸಭೆ ಶ್ರೀ ಪೆರುಂಬುದುರ್ ಟೆಂಪಲ್ ಗ್ರೌಂಡ್ ಗೆ ಬದಲಾಯಿತು, ಮರಗತಮ್ ಅವರು ಆಕ್ಷೇತ್ರದ ಅಬ್ಯರ್ಥಿಯಾಗಿದ್ದರೂ ರಾಜೀವ್ ಜೊತೆಗೆ ಆ ವೇದಿಕೆಯ ಹತ್ತಿರ ಬರಲಿಲ್ಲ. ಸಭೆಯ ಸ್ಥಳ ಏಕಾಏಕಿ ಬದಲಾದ ಕಾರಣ ಪೊಲೀಸರು ಉತ್ತಮ ಭದ್ರತೆಯನ್ನು ನೀಡಲು ಸಾಧ್ಯವಾಗಲಿಲ್ಲ ಮತ್ತು ಆ ಸ್ಥಳಕ್ಕೆ ಸ್ಥಳಾಂತರ ಮಾಡಲು ಅವರು ಅನುಮತಿಯನ್ನೂ ಪಡೆದಿರಲಿಲ್ಲ. ಇದು ರಾಜೀವ ಗಾಂದಿಯ ಕೊಲೆಗೆ ಸಹಾಯವಾಯಿತು ಎಂದು ಭಾವಿಸಿದರು. ಇದು ಹತ್ಯೆಗೆ ಕಾರಣವಾದ ದೊಡ್ಡ ತಪ್ಪು ಮತ್ತು ತನಿಖೆಯ ಸಮಯದಲ್ಲಿ ಎಸ್ಐಟಿ (ಸ್ಪೆಶಲ್ ಇನ್ವೆಸ್ಟಿಗೇಷನ್ ಟೀಮ್) ಎಲ್ಲರೂ ಮರಗತಮ್ ಅವರ ಮೇಲೆ ಸಂಶಯಿಸಲು ಅವಕಾಶ ನೀಡಿತು. ಧನು ಎಂದು ಸಹ ಕರೆಯಲ್ಪಡುವ ತೆನ್ಮೋಜಿ ರಾಜರತ್ನಂ ಆಮೇಲೆ ರಾಜೀವ್ ಗಾಂಧಿಯವರನ್ನು ಆರ್ಡಿಎಕ್ಸ್ ಬಾಂಬು ಬಳಸಿ ಅಂತಿಮವಾಗಿ ಕೊಂದವರು ಎಂದು ಅವರು ತೀರ್ಮಾನಿಸಿದರು ಶಿವರನ್. ಧನು ರಾಜೀವ್ ರನ್ನು ಹತೆ ಮಾಡಲು ಸಹಾಯ ಮಾಡಿದ ಬಗ್ಗೆ ಹಲವು ಸಾಕ್ಷ್ಯಗಳನ್ನು ಉಳಿಸಿದ್ದಾರೆ.
  • ರಾಜೀವ್ ವಿರೋಧ ಪಕ್ಷದ ನಾಯಕ ಆಗಿದ್ದಾಗ 1989 ರ ಡಿಸೆಂಬರ್ 4 ರಂದು ಎಸ್ಪಿಜಿ (ಕವರ್) ರಕ್ಷಣೆಯನ್ನು ರಾಜಿವ್‍ಗೆ ಕೆಲವು ಹೊಸ ಬೆದರಿಕೆ ಕಾರಣ ಬದಲಾವಣೆಯನ್ನು ಮಾಡದೆಯೇ ಮುಂದುವರಿಸಬೇಕು ಎಂದು ರಕ್ಷಣಾ ವ್ಯವಸ್ಥೆಯ ಸಮಿತಿಯು ನಿರ್ಧರಿಸಿತು, (ವರ್ಮಾ ಹೇಳಿಕೆ). ಆದರೂ ವಿ.ಪಿ. ಸಿಂಗ್ ಸರ್ಕಾರ ರಾಜೀವ್ ರ ಎಸ್ಪಿಜಿ ಕವರನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತು, ಅಂತಹ ಯಾವುದೇ ಕಾರಣವಿಲ್ಲದೆ, ನಂತರದ ದಿನಗಳಲ್ಲಿ ರಕ್ಷಣೆಯನ್ನು ನಿರಂಕುಶವಾಗಿ ಹಿಂಪಡೆಯಲಾಯಿತು. ಮರಗತಮ್ ಚಂದ್ರಶೇಖರ ಅವರು ಸ್ಥಳೀಯ ಸಂಸದರಾಗಿದ್ದರು. ರಾಜೀವರ ತಾಯಿಯ ಆತ್ಮೀಯ ಸ್ನೇಹಿತನಾಗಿದ್ದ ಮರಗಥಮ್ ಅವರು ಶ್ರೀಪೆರುಂಬುದೂರಿನಲ್ಲಿ ಯಾಕೆ ಪ್ರಚಾರ ಅಭಿಯಾನಕ್ಕೆ ಒತ್ತಾಯಿಸಿದರು ಎಂಬುದಕ್ಕೆ ಸ್ಪಷ್ಟವಾದ ಕಾರಣವಿಲ್ಲದಿರುವುದು ಒಂದು ಅಂಶವಾಗಿದೆ. ದೊಡ್ಡ ತಪ್ಪುಗಳು: ವಿ.ಪಿ. ಸಿಂಗ್ ಮತ್ತು ಚಂದ್ರಶೇಖರ್ ಇಬ್ಬರು ಪ್ರಧಾನ ಮಂತ್ರಿಗಳದು. ಇಬ್ಬರೂ ತಮ್ಮ ಪ್ರತಿಸ್ಪರ್ಧಿಗೆ ಮಾಜಿ ಪ್ರಧಾನಿಯಾಗಿದ್ದರೂ, ಸರಿಹೊಂದುವ ಭದ್ರತೆಯನ್ನು ಕೊಡಲು ಒಪ್ಪಿಕೊಳ್ಳಲಿಲ್ಲ. ರಾಜೀವ್‍ರ ಏಕೈಕ ಅಂಗರಕ್ಷಕ ಅವರೊಡನೆ ಮತ್ತೊಂದು ಕಾರಿನಲ್ಲಿ ಬರಂಬೂರಿಗೆ ಪ್ರಯಾಣಿಸುತ್ತಿದ್ದ.
  • 1991 ರ ಮೇ 21 ರ ರಾತ್ರಿ ರಾತ್ರಿ ತಮಿಳುನಾಡಿನ ಶ್ರೀಪೆರುಂಬುದೂರ್ನಲ್ಲಿ ಮಹಿಳಾ ಆತ್ಮಹತ್ಯಾ ಬಾಂಬಿನಿಂದ ರಾಜೀವ ಗಾಂಧಿಯನ್ನು ಹತ್ಯೆ ಮಾಡಲಾಯಿತು. ಧನು ಸ್ವತಃ ಸೇರಿದಂತೆ ಹದಿನಾಲ್ಕು ಜನ ಇತರರು ಸಹ ಸ್ಫೋಟದಲ್ಲಿ ಕೊಲ್ಲಲ್ಪಟ್ಟರು. ಗಾಂಧಿಯವರ ಹತ್ಯೆ ಜಾಗತಿಕವಾಗಿ ಆತ್ಮಹತ್ಯೆ ಬಾಂಬ್ ದಾಳಿಯ ಮೊದಲ ಪ್ರಕರಣವಾಗಿದೆ, ಇದು ಉನ್ನತ ಮಟ್ಟದ ನಾಯಕನ ಜೀವನವನ್ನು ಆತ್ಮಹತ್ಯೆ ಬಾಂಬ್ ದಾಳಿಯ ಮೂಲಕ ಕಳೆದ ಪ್ರಮುಖ ಪ್ರಕರಣ.
  • 21 ಮೇ 1991 ರಂದು ನಳಿನಿಯು ತನ್ನ ಮನೆಯಲ್ಲಿ ತನಿಮೊಜಿ ಅಥವಾ ಧನುವಿಗೆ ಡೆನಿಮ್ ಜಾಕೆಟ್ ಮೇಲೆ ಬಾಂಬ್ ಧರಿಸಲು ಸಹಾಯ ಮಾಡಉತ್ತಾಳೆ. ಸಲ್ವಾರ್-ಕಮೀಜ್ ಅಡಿಯಲ್ಲಿ ಬಾಂಬು ಪತ್ತೆಹಚ್ಚಲಾಗುವುದಿಲ್ಲ ಎಂದು ತಿಳಿಯುತ್ತದೆ. ದಿ.21 ರ, 1991ರಂದು ಧುನು ರಾಜೀವ್ ಗೆ ಹತ್ತಿರವಾಗದಂತೆ ತಡೆಗಟ್ಟಲು ಸಬ್ ಇನ್ಸ್ಪೆಕ್ಟರ್ ಅನುಸುಯಾ ಪ್ರಯತ್ನಿಸುತ್ತಾರೆ. ಆದರೆ ರಾಜೀವ್ "ಪ್ರತಿಯೊಬ್ಬರಿಗೂ ಒಂದು ಅವಕಾಶ ಸಿಗಲಿ" ಎಂದು ಹೇಳಿ ರಾಜೀವ್ ಸ್ವತಃ ಅನುಸೂಯಾರನ್ನು ತಡೆಯುತ್ತಾರೆ. ಮಹಿಳಾ ಸಬ್ ಇನಸ್ಪೆಕ್ಟರ್ ಬೇಸರದಿಂದ ದೂರ ಹೊರಟು ಹೋಗಿ ಬದುಕುತ್ತಾಳೆ. ಮೇ 21, 1991ರಂದು ಧುನು ರಾಜೀವ್‍ಗೆ ಹಾರವನ್ನು ಹಾಕಿ ನಂತರ ಅವನ ಪಾದಗಳನ್ನು ಸ್ಪರ್ಶಿಸಲು ಕೆಳಗೆ ಬಾಗುತ್ತಾಳೆ. ಆಕೆಯನ್ನು ರಾಜೀವ್ ಎಬ್ಬಿಸುವ ಸಮಯದಲ್ಲಿ, ಅವಳು ಬಾಂಬ್ ಅನ್ನು ಪ್ರಚೋದಿಸುತ್ತಾಳೆ. ಆ ಬಾಂಬ್ ಧಾಳಿಯಲ್ಲಿ ರಾಜೀವ್ ಸ್ವತಃ ಧನು ಮತ್ತು ಇತರ ಅನೇಕರು ಹತ್ಯೆಯಾದರು.

ಹಿನ್ನಲೆ ಮತ್ತು ಕಾರಣ

  • ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಲಮ್ (ತಮಿಳು ಟೈಗರ್ಸ್ ಎಂದೂ ಕರೆಯಲ್ಪಡುವ ಎಲ್ಟಿಟಿಇ),
  • ಶ್ರೀಲಂಕಾ ಅಂತರ್ಯುದ್ಧದಲ್ಲಿ ಭಾರತದ ಮಧ್ಯಸ್ಥಿಕೆ ವಹಿಸಿ ಶಾಂತಿಪಾಲನೆಯ ಪಾತ್ರವನ್ನು ನಿರ್ವಹಿಸಲು ಉದ್ದೇಶಿಸಿ ಭಾರತೀಯ ಶಾಂತಿಪಾಲನಾ ಪಡೆಯನ್ನು ನಿಯೋಜಿಸಿತ್ತು. ಎಲ್ಟಿಟಿಇಯು ಭಾರತದ ಸಂಧಾನವನ್ನು ವಿರೋಧಿಸಿ ಭಾರತೀಯ ಪಡೆಯನ್ನೇ ಆಕ್ರಮಣ ಮಾಡಿತು. ಹಾಗಾಗಿ ಭಾರತೀಯ ಶಾಂತಿಪಾಲನಾ ಪಡೆ ಯುದ್ಧದ ಸರಣಿಗಳಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಲಮ್ (ಎಲ್ಟಿಟಿಇಯು) ಅನ್ನು ಎದುರಿಸಿ ಹೋರಾಡಬೇಕಾಯಿತು. ಎರಡು ವರ್ಷಗಳ ಕಾಲ ಹೋರಾಟ ನೆಡೆದು ಐಪಿಕೆಎಫ್ 1989 ರಲ್ಲಿ ಭಾರತ ಸೈನ್ಯವನ್ನು ಹಿಂಪಡೆಯಲು ಪ್ರಾರಂಭಿಸಿತು, ಮತ್ತು 1990 ರಲ್ಲಿ ವಾಪಸಾತಿ ಪೂರ್ಣಗೊಂಡಿತು.
  • ಭಾರತೀಯ ವಿದೇಶಾಂಗ ನೀತಿಯ ವಿದ್ವಾಂಸರಾದ ರೆಜಾಲ್ ಕರೀಮ್ ಲಸ್ಕರ್ ಪ್ರಕಾರ, ಶ್ರೀಲಂಕಾದ ನಾಗರಿಕ ಯುದ್ಧದಲ್ಲಿ ಭಾರತೀಯ ಹಸ್ತಕ್ಷೇಪ ಅನಿವಾರ್ಯವಾಯಿತು. ಏಕೆಂದರೆ ಶ್ರೀಲಂಕಾದ ಸ್ವರಾಜ್ಯ ಸ್ಥಾಪನಾ ಯುದ್ಧವು "ಭಾರತದ ಏಕತೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಪ್ರಾದೇಶಿಕ ಸಮಗ್ರತೆಗೆ" ಬೆದರಿಕೆ ಉಂಟು ಮಾಡಿತ್ತು. ಲಸ್ಕಾರ್ ಪ್ರಕಾರ, ಈ ಬೆದರಿಕೆ ಎರಡು ಬಗೆಗಳು: ಒಂದು ಕಡೆ ಬಾಹ್ಯ ಶಕ್ತಿಗಳು ಅಮೇರಿಕಾ ಅಥವಾ ಪಾಕಿಸ್ತಾನ ಶ್ರೀಲಂಕಾದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಲು ಈ ಪರಿಸ್ಥಿತಿಯ ಪ್ರಯೋಜನವನ್ನು ಪಡೆಯಬಹುದು (ಅಮೇರಿಕಾ ಈ ಬಗ್ಗೆ ಸೂಚನೆ ನೀಡಿತ್ತು). ಇದು ಭಾರತಕ್ಕೆ ಬೆದರಿಕೆಯನ್ನುಂಟು ಮಾಡುತ್ತದೆ; ಮತ್ತು ಮತ್ತೊಂದು ಎಲ್ಟಿಟಿಇ ಉಗ್ರಗಾಮಿ ಸೈನ್ಯದ "ಸಾರ್ವಭೌಮ ತಮಿಳು ನಾಡಿ"ನ ಈಳಂನ ಕನಸುಗಳು: ಇದು ಭಾರತವೂ ಸೇರಿ ಎಲ್ಲಾ ತಮಿಳು ಭಾಷಿಕ ಪ್ರದೇಶಗಳನ್ನು ಸೇರಿದ ಸ್ವತಂತ್ರ ತಮಿಳು ರಾಜ್ಯ ಸ್ಥಾಪನೆ ಉದ್ದೇಶ ಹೊಂದಿತ್ತು. (ಶ್ರೀಲಂಕಾದ ಮತ್ತು ಭಾರತ ಈ ಎರಡು ಪ್ರದೇಶಗಳ 'ತಮಿಳು ಈಲಂ') ಇದು ಭಾರತದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯನ್ನು ತಂದವು.  :
  • ಭಾರತ ಮತ್ತು ಶ್ರೀಲಂಕಾ ಮಾತುಕತೆ ನಡೆಯಿತು, ಮತ್ತು ಇಂಡೋ-ಶ್ರೀಲಂಕಾ ಶಾಂತಿ ಒಪ್ಪಂದವನ್ನು ಜುಲೈ 29, 1987 ರಂದು ಭಾರತೀಯ ಪ್ರಧಾನಿ ರಾಜೀವ್ ಗಾಂಧಿ ಮತ್ತು ಶ್ರೀಲಂಕಾದ ಅಧ್ಯಕ್ಷ ಜಯವರ್ದನೆ ಅವರು ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದದ ಪ್ರಕಾರ, ಶ್ರೀಲಂಕಾದ ಸರ್ಕಾರವು ತಮಿಳು ಬೇಡಿಕೆಗಳಿಗೆ ಹಲವಾರು ರಿಯಾಯಿತಿಗಳನ್ನು ನೀಡಿತು, ಪ್ರಾಂತ್ಯಗಳಿಗೆ ಅಧಿಕಾರದ ವಿತರಣೆ ಮಾಡಲು ಒಪ್ಪಿದರು. ಅನೇಕ ಉಗ್ರಗಾಮಿ ಗುಂಪುಗಳಲ್ಲಿ ಹೆಚ್ಚಿನ ತಮಿಳು ಉಗ್ರಗಾಮಿ ಗುಂಪುಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಪಡೆಯಲು ಒಪ್ಪಿಕೊಂಡರೂ, ಎಲ್ಟಿಟಿಇ (ಪ್ರಭಾಕರನ್) ತನ್ನ ಹೋರಾಟಗಾರರನ್ನು ನಿಲ್ಲಿಸಲು ಮತ್ತು ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ನಿರಾಕರಿಸಿತು. ಒಪ್ಪಂದದ ಯಶಸ್ಸನ್ನು ಖಚಿತಪಡಿಸಲು ಐಪಿಕೆಎಫ್ (ಭಾರತದ ಸೈನ್ಯ) ನಂತರ ಎಲ್ಟಿಟಿಇಯನ್ನು ಒತ್ತಾಯದಿಂದ ನಿಶಸ್ತ್ರಗೊಳಿಸಲು ಪ್ರಯತ್ನಿಸಿತು. ಮತ್ತು ಅವರೊಂದಿಗೆ ಸಂಪೂರ್ಣ ಪ್ರಮಾಣದ ಸಂಘರ್ಷದ ನಂತರ ಅವರ ಶಸ್ತ್ರಾಸ್ತ್ರಗಳನ್ನು ಒತ್ತಾಯವಾಗಿ ಕೆಳಗಿಳಿಸುವಂತೆ ಮಾಡಿದಾಗ ಯುದ್ಧ ಕೊನೆಗೊಂಡಿತು. ಈ ಸಂಘರ್ಷ ಮೂರು ವರ್ಷಗಳ ಕಾಲ ನಡೆಯಿತು. ಐಪಿಕೆಎಫ್ (ಭಾರತಸೈನ್ಯ) ಶೀಘ್ರದಲ್ಲೇ ಇತರ ತಮಿಳರಿಂದ ತೀವ್ರ ವಿರೋಧವನ್ನು ಎದುರಿಸಿತು. ಶ್ರೀಲಂಕಾದಲ್ಲಿ ಮುಂದುವರಿದ ಭಾರತೀಯ ಉಪಸ್ಥಿತಿಯು ಸಿಂಹಳದ ರಾಷ್ಟ್ರೀಯತಾವಾದಿ ಭಾವನೆಯ ಅನೇಕ ಸಿಂಹಳೀಯರೂ ವಿರೋಧಿಸಲು ಕಾರಣವಾಯಿತು
  • ನವೆಂಬರ್ 1990: ಜಾಫ್ನಾದಲ್ಲಿ, ಎಲ್ಟಿಟಿಇ ಮುಖಂಡ ಪ್ರಭಾಕರನ್ ನಾಲ್ಕು ವಿಶ್ವಾಸಾರ್ಹ ಉಗ್ರಗಾಮಿ ಲೆಫ್ಟಿನೆಂಟ್’ಗಳನ್ನು ಕರೆಸಿದನು. ಮತ್ತು ರಾಜೀವ್ ಗಾಂಧಿಯವರು ಪುನಃ ಪ್ರಧಾನಿ ಆಗಿ ಹಿಂದಿರುಗುವ ಸಾಧ್ಯತೆ ಇರುವುದರಿಂದ, ಅವರನ್ನು ಕೂಡಲೆ ತೊಡೆದುಹಾಕಬೇಕು ಎನ್ನುತ್ತಾನೆ. ನಂತರ ರಾಜೀವರ ಹತ್ಯೆಯ ಯೊಜನೆಗಳು ಸಿದ್ಧವಾಗುತ್ತವೆ.

ನರಸಿಂಹ ರಾವ್ ಪ್ರಧಾನಿ

  • 9 ನೇ ಪ್ರಧಾನಿ: ಪಿ.ವಿ.ನರಸಿಂಹರಾವ್;ನಂದಿಲ್,(1921-2004); ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ);ದಿ.21 ಜೂನ್ 1991 ರಿಂದ ಮೇ 16, 1996 ರವರೆಗೆ 4 ವರ್ಷ, 330 ದಿನಗಳು.
  • 9 ನೇ ಅಧ್ಯಕ್ಷರು:ಶಂಕರ್ ದಯಾಳ್ ಶರ್ಮಾ ;(1918-1999)ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ); 1992 25 ಜುಲೈ ರಿಂದ 1992 25 ಜುಲೈ 1997 ವರೆಗೆ; 60 ತಿಂಗಳು.
  • ನಂತರದಲ್ಲಿ 1991ರ ಮೇ 20, ಜೂನ್‌ 12 ಮತ್ತು ಜೂನ್‌ 15ರಂದು ಮೂರು ಹಂತಗಳಲ್ಲಿ ಚುನಾವಣೆಗಳು ನಡೆದವು. ಇದು ಕಾಂಗ್ರೆಸ್‌, ಬಿಜೆಪಿ ಮತ್ತು ರಾಷ್ಟ್ರೀಯರಂಗ-ಜನತಾದಳ (S)-ಎಡರಂಗ ಒಕ್ಕೂಟದ ನಡುವಿನ ಒಂದು ತ್ರಿಕೋನೀಯ ಹೋರಾಟವಾಗಿತ್ತು.
  • 1991 ಚುನಾವಣೆಯ ಫಲಿತಾಂಶದಲ್ಲಿ, ಕಾಂಗ್ರೆಸ್ (ಇಂದಿರಾ) 232 ಸಂಸದೀಯ ಸ್ಥಾನಗಳನ್ನು ಗೆದ್ದು, ಒಕ್ಕೂಟವನ್ನು ರಚಿಸಿ, ಪಿ.ವಿ.ನರಸಿಂಹರಾವ್ ಸಂಪೂರ್ಣ ಐದು ವರ್ಷಗಳ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.
ಭಾರತ ಗಣರಾಜ್ಯದ ಇತಿಹಾಸ 
img_alt=
  • ಈ ಕಾಂಗ್ರೆಸ್ ನೇತೃತ್ವದ ಸರಕಾರವು ಕ್ರಮೇಣ ಆರ್ಥಿಕ ಉದಾರೀಕರಣ ಮತ್ತು ಸುಧಾರಣೆಯ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಇದು ಭಾರತೀಯ ಆರ್ಥಿಕತೆಯನ್ನು ಜಾಗತಿಕ ವ್ಯಾಪಾರ ಮತ್ತು ಹೂಡಿಕೆಗೆ ಹೊರ ರಾಷ್ಟ್ರಗಳಿಗೆ ಮುಕ್ತವಾಗಿ ತೆರೆಯಿತು. ದೇಶದಲ್ಲಿ ಜಾತಿ, ಮತ, ಮತ್ತು ಜನಾಂಗೀಯತೆಯ ಸಾಂಪ್ರದಾಯಿಕ ಆಧಾರಿತ ಸಂಘಟನೆಗಳಿಂದ ಪ್ರಾದೇಶಿಕವಾಗಿ ಸಣ್ಣ,ರಾಜಕೀಯ ಪಕ್ಷಗಳಿಗೆ ಹೆಚ್ಚಿನ ರೀತಿಯಲ್ಲಿ ದಾರಿ ಮಾಡಿಕೊಟ್ಟ ಕಾರಣ, ಭಾರತದ ಸ್ವದೇಶಿ ರಾಜಕೀಯವು ಹೊಸ ಆಕಾರವನ್ನು ತೆಗೆದುಕೊಂಡಿತು.
  • ರಾಮ ರಥಯಾತ್ರೆ ಮತ್ತು ಬಾಬರಿ ಮಸೀದಿ ಧ್ವಂಸ:
  • 1992 ರಲ್ಲಿ ಅಯೋಧ್ಯೆಯಲ್ಲಿ ನಡೆದ ರಾಮ ಜನ್ಮಭೂಮಿ ವಿವಾದದ ಸಂದರ್ಭದಲ್ಲಿ ಹಿಂದೂ ಉಗ್ರವಾದಿಗಳು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಬಳಿಕ, ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಹಿಂಸಾಚಾರವು (ಬಾಂಬೆ ಗಲಭೆಗಳನ್ನು ನೋಡಿ) ಹರಡಿ, 10,000 ಕ್ಕಿಂತ ಹೆಚ್ಚು ಜನರ ಸಾವಿಗೆ ಕಾರನವಾಯಿತು. 1996 ರ ವಸಂತ ಋತುವಿನಲ್ಲಿ ನೇತೃತ್ವದ ರಾವ್-ಸರ್ಕಾರ ಹಲವಾರು ಪ್ರಮುಖ ರಾಜಕೀಯ ಭ್ರಷ್ಟಾಚಾರ ಹಗರಣಗಳ ಪರಿಣಾಮವನ್ನು ಅನುಭವಿಸಿತು, ಇವುಗಳ ಪರಿಣಾಮ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಅತ್ಯಂತ ಕೆಟ್ಟ ಫಲಿತಾಂಶಕ್ಕೆ ಕಾರಣವಾಯಿತು,
  • ಎಲ್.ಕೆ. ಅದ್ವಾನಿಯವರ ನೇತ್ರತ್ವದಲ್ಲಿ ನೆಡೆದ ರಾಮಜನ್ಮಭೂಮಿ ರಥಯಾತ್ರೆಯು ಭಾರತಿಯ ಜನತಾ ಪಕ್ಷಕ್ಕೆ ಹಿಂದೂಗಳ ಬೆಂಬಲವನ್ನು ಹೆಚ್ಚುಮಾಡಿನಂತರದ ಲೋಕಸಭಾ ಚುನಾವಣೆಯಲ್ಲಿ ಲಾಭ ಕೊಟ್ಟಿತು. ಹಿಂದೂ ರಾಷ್ಟ್ರೀಯವಾದಿ ಭಾರತೀಯ ಜನತಾ ಪಕ್ಷವು ಅತಿದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿತು. ಅಯೋದ್ಯೆಯಲ್ಲಿ ಮಸೀದಿಯ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲು, ವಿಎಚ್ ಪಿ, ಬಿಜೆಪಿ ಮತ್ತು ಅವರ ಅಂಗಸಂಸ್ಥೆಗಳು ಮಸೀದಿಯ ಹೊರಗೆ ಒಂದು ಸಭೆಯನ್ನು ಆಯೋಜಿಸಿದವು. ಡಿಸೆಂಬರ್ 6, 1992 ರಂದು 150,000 ವಿಶ್ವಹಿಂದೂ ಪರಿಷತ್ತು ಮತ್ತು ಬಿಜೆಪಿ ಸ್ವಯಂಸೇವಕರನ್ನು ಸೇರಿಸಿದ್ದವು. ಆಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಉಮಾ ಭಾರ್ತಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಈ ಸಭೆಯಲ್ಲಿ ಮಾತನಾಡಿದರು. ಈ ಮಸೀದಿಯ ಮೇಲೆ ನಿಷೇಧಿಸಿದ ಗುಂಪು, ಕೆಲವೇ ಗಂಟೆಗಳಲ್ಲಿ ಅದನ್ನು ಹತ್ತಿತು. ಹಿಂದೂ ಜನಸಮೂಹಗಳು ಅಯೋಧ್ಯೆಯಲ್ಲಿ ಬಾಬರಿ ಮತ್ತು ಹಲವಾರು ಇತರ ಮಸೀದಿಗಳನ್ನು ಕೆಡವಲಾಯಿತು. ದೇಶಾದ್ಯಂತ ಭಾರೀ ಹಿಂದೂ-ಮುಸ್ಲಿಂ ಹಿಂಸಾಚಾರವನ್ನು ಉಂಟುಮಾಡಿತು ಇದರಲ್ಲಿ 2000 ಕ್ಕಿಂತಲೂ ಹೆಚ್ಚಿನ ಜನ ಮುಸ್ಲಿಮರು ಸತ್ತರು.
  • ಮೇ-ಜೂನ್ 1991 ರ ಸಂಸತ್ತಿನ ಚುನಾವಣೆಯಲ್ಲಿ ಈ ಬಿಜೆಪಿ ಕಾರ್ಯತಂತ್ರವು ಹೆಚ್ಚಿನ ಲಾಭಾಂಶವನ್ನು ನೀಡಿತು. 1989 ರ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ, ರಾಷ್ಟ್ರವ್ಯಾಪಿ ರಾಷ್ಟ್ರವ್ಯಾಪಿ ಅದರ ಶೇಕಡಾವಾರು ಮತಗಳು ದ್ವಿಗುಣಗೊಂಡವು ಮತ್ತು ಈಶಾನ್ಯದಲ್ಲಿ ದಕ್ಷಿಣ ಮತ್ತು ಆಸ್ಸಾಂನಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಲಾಭ ಗಳಿಸಿತು. ಇದು 1991 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Iಓಅ) ನಂತರ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ನಂತರ ಮುಂದಿನ ಚುನಾವಣೆಯಲ್ಲಿ ಲೋಕಸಭೆಯಲ್ಲಿ ಮೊದಲ ಸ್ಥಾನಕ್ಕೇರಿತು

ಆರ್ಥಿಕ ಸುಧಾರಣೆಗಳು

  • ಆರ್ಥಿಕ ಸುಧಾರಣೆ:
ಮನಮೋಹನ ಸಿಂಗ್ (ಅರ್ಥ ಮಂತ್ರಿ)
ಭಾರತದಲ್ಲಿ ಆರ್ಥಿಕ ಉದಾರೀಕರಣವು 1991 ರಲ್ಲಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಮತ್ತು ಅವರ ಸಂಪುಟದ ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ರಿಂದ ಪ್ರಾರಂಭಿಸಲ್ಪಟ್ಟಿತು. ರಾವ್ ಅವರನ್ನು ಸಂಸತ್ತಿನ ಮೂಲಕ ಕಠಿಣ ಆರ್ಥಿಕ ಮತ್ತು ರಾಜಕೀಯ ಸುಧಾರಣೆಯನ್ನು ಮಾಡಿದ ಸಾಮರ್ಥ್ಯಕ್ಕಾಗಿ 'ಚಾಣಕ್ಯ' ಎಂದು ಅನೇಕವೇಳೆ ಕರೆಯಲ್ಪಟ್ಟಿದ್ದರು. ಅವರದು ಅಲ್ಪಸಂಖ್ಯಾತ ಸರಕಾರವಾಗಿತ್ತು.
  • ಪ್ರಧಾನಿ ಪಿ.ವಿ.ನರಸಿಂಹರಾವ್ ಹೊಸ ಆರ್ಥಿಕ ನೀತಿಗೆ ಬುನಾದಿ ಹಾಕಿದರು. ಅವರ ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ ಅವರು ಪ್ರಾರಂಭಿಸಿದ ನೀತಿಯಡಿಯಲ್ಲಿ ಭಾರತದ ಆರ್ಥಿಕತೆಯು ತ್ವರಿತವಾಗಿ ವಿಸ್ತರಿಸಿತು. ಆರ್ಥಿಕ ಸುಧಾರಣೆಗಳು ವಿದೇಶೀ ವಿನಿಮಯದ ಪಾವತಿ ಬಿಕ್ಕಟ್ಟಿನ ಸಮತೋಲನ ಸಾಧಿಸಲು ನೆಡೆದ ಪ್ರತಿಕ್ರಿಯೆಯಾಗಿವೆ.
  • ರಾವ್ ಆಡಳಿತವು ದೊಡ್ಡ, ಅಸಮರ್ಥ ಮತ್ತು ನಷ್ಟವನ್ನುಂಟುಮಾಡುವ ಸರ್ಕಾರಿ ನಿಗಮಗಳ ಖಾಸಗೀಕರಣವನ್ನು ಆರಂಭಿಸಿತು. ಈ ಸರ್ಕಾರ ಸುಧಾರಣೆಗಳನ್ನು ಪ್ರೋತ್ಸಾಹಿಸುವ ಒಂದು ಪ್ರಗತಿಪರ ಬಜೆಟ್ ಅನ್ನು ಮಂಡಿಸಿ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿತು. ಆದರೆ 1997 ರ ಆರ್ಥಿಕ ಏಷಿಯಾದ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆ ಆರ್ಥಿಕ ಸ್ಥಗಿತವನ್ನು ಉಂಟುಮಾಡಿತು.
  • ನಂತರ ಬಂದ ವಾಜಪೇಯಿ ಆಡಳಿತವು ಅದೇ ನಿತಿಯನ್ನು ಮುಂದುವರೆಸಿತು. ಸರ್ಕಾರಿ ಒಡೆತನದ ಕಂಪನಿಗಳ, ಸಂಸ್ಥೆಗಳ ಖಾಸಗೀಕರಣ, ತೆರಿಗೆಗಳನ್ನು ಕಡಿತಗೊಳಿಸುವುದು, ಕೊರತೆ ಮತ್ತು ಸಾಲಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಒಂದು ಹಣಕಾಸಿನ ನೀತಿ, ಮತ್ತು ಸಾರ್ವಜನಿಕ ಕಾರ್ಯಗಳಿಗಾಗಿ ಹೆಚ್ಚಿನ ಉಪಕ್ರಮಗಳನ್ನು ಮುಂದುವರಿಸಿತು.
  • ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್ ಮುಂತಾದ ನಗರಗಳು ಆರ್ಥಿಕ ಚಟುವಟುಕೆಯಲ್ಲಿ ಪ್ರಾಮುಖ್ಯತೆ ಹೊಂದಿದವು ಮತ್ತು ಆರ್ಥಿಕ ಪ್ರಮುಖ ಕೇಂದ್ರ ವೆನಿಸಿದವು , ಕೈಗಾರಿಕೆಗಳ ಕೇಂದ್ರಗಳು ಹೆಚ್ಚುತ್ತಿರುವುದು , ವಿದೇಶಿ ಹೂಡಿಕೆ ಮತ್ತು ಸಂಸ್ಥೆಗಳಿಗೆ ವಿಶೇಷ ಸ್ಥಳಗಳು, ತೆರಿಗೆ ರಿಯಾಯತಿ, ದೇಶದ ಅನೇಕ ಭಾಗಗಳಲ್ಲಿ ಕೈಗಾರಿಕೆಗಳಬೆಳವಣಿಗೆ, ಹಣವನ್ನು ಪಾವತಿಸಬೇಕೆಂದು ಪ್ರೋತ್ಸಾಹಿಸಲು ತೆರಿಗೆ ಸೌಕರ್ಯಗಳು, ಉತ್ತಮ ಸಂವಹನ ಮೂಲಸೌಕರ್ಯ, ಕಡಿಮೆ ನಿಯಂತ್ರಣ - ವಿಶೇಷ ಆರ್ಥಿಕ ವಲಯಗಳನ್ನು ರೂಪಿಸುವ ತಂತ್ರಗಳು ಇವು ದೇಶದ Áರದಥಿಕ ಬೆವಣಿಗೆಗೆ .ಕಾರಣವಾದವು.
  • ಉದ್ಯಮದ ವೈಜ್ಞಾನಿಕ ವಲಯಗಳಲ್ಲಿನ ವಿದ್ಯಾವಂತ ಮತ್ತು ನುರಿತ ಹೆಚ್ಚುತ್ತಿರುವ ವೃತ್ತಿಪರ ಪೀಳಿಗೆಯು ಭಾರತೀಯ ಆರ್ಥಿಕತೆಯನ್ನು ಉತ್ತೇಜಿಸಲು ಪ್ರಾರಂಭಿಸಿತು, ಏಕೆಂದರೆ ಮಾಹಿತಿ ತಂತ್ರಜ್ಞಾನ ಉದ್ಯಮವು ಕಂಪ್ಯೂಟರ್ಗಳ ಪ್ರಸರಣದೊಂದಿಗೆ ಭಾರತದಾದ್ಯಂತ ಹಿಡಿತ ಹೊಂದಿತ್ತು. ಹೊಸ ತಂತ್ರಜ್ಞಾನಗಳು ಉದ್ಯಮದ ಬಹುತೇಕ ಪ್ರಕಾರದ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸಿದವು, ಇದು ಕೌಶಲ್ಯದ ಕಾರ್ಮಿಕರ ಲಭ್ಯತೆಯಿಂದ ಲಾಭದಾಯಕವಾಯಿತು. ಭಾರತದ ಕಾರ್ಮಿಕ ಮಾರುಕಟ್ಟೆಗಳಿಗೆ ವಿದೇಶಿ ಹೂಡಿಕೆ ಮತ್ತು ಹೊರಗುತ್ತಿಗೆ ಉದ್ಯೋಗ ಭಾರತದ ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಿತು.. ದೊಡ್ಡದಾದ ಮಧ್ಯಮ ವರ್ಗವು ಭಾರತದಾದ್ಯಂತ ಉದ್ಭವಿಸಿತು, ಇದು ಬೇಡಿಕೆಯನ್ನು ಹೆಚ್ಚಿಸಿತು, ಮತ್ತು ಇದರಿಂದಾಗಿ ವ್ಯಾಪಕ ಶ್ರೇಣಿಯ ಗ್ರಾಹಕ ಸರಕುಗಳ ಉತ್ಪಾದನೆಯಾಯಿತು. ನಿರುದ್ಯೋಗವು ಸ್ಥಿರವಾಗಿ ಇಳಿಮುಖವಾಯಿತು, ಮತ್ತು ಬಡತನವು ಸುಮಾರು 22% ನಷ್ಟಕ್ಕೆ ಇಳಿಯಿತು.. ಒಟ್ಟು ದೇಶೀಯ ಉತ್ಪನ್ನ ಬೆಳವಣಿಗೆಯು 7% ನಷ್ಟು ಹೆಚ್ಚಾಗಿತ್ತು. ಗಂಭೀರವಾದ ಸವಾಲುಗಳು ಇದ್ದಾಗಲೇ, ಭಾರತವು ಆರ್ಥಿಕ ವಿಸ್ತರಣೆಯ ಅವಧಿಯನ್ನು ಅನುಭವಿಸಿತು ಮತ್ತು ಅದು ವಿಶ್ವ ಆರ್ಥಿಕತೆಯ ಮುಂಚೂಣಿಗೆ ಬಂದಿದೆ. ರಾಜಕೀಯ ಮತ್ತು ರಾಜತಾಂತ್ರಿಕ ವಿಷಯಗಳಲ್ಲಿ ಅದರ ಪ್ರಭಾವವನ್ನು ಹೆಚ್ಚುತ್ತಿದೆ. (ಚಿತ್ರ>)

ಒಕ್ಕೂಟಗಳ ಯುಗ

ಭಾರತ ಗಣರಾಜ್ಯದ ಇತಿಹಾಸ 
ಅಟಲ್ ಬಿಹಾರಿ ವಾಜಪೇಯಿ; 2002-06-12
ಭಾರತ ಗಣರಾಜ್ಯದ ಇತಿಹಾಸ 
ದೇವೆಗೌಡ-
ಭಾರತ ಗಣರಾಜ್ಯದ ಇತಿಹಾಸ 
ಇಂದ್ರಕುಮಾರ್ ಗುಜ್ರಾಲ್-
ಭಾರತ ಗಣರಾಜ್ಯದ ಇತಿಹಾಸ 
ಕೆ ಆರ್ ನಾರಾಯಣನ್-
  • 9ನೇ ಅಧ್ಯಕ್ಷರು:ಶಂಕರ್ ದಯಾಳ್ ಶರ್ಮಾ; (ಹಿಂದಿನಂತೆ)1992, 25 ಜುಲೈ ರಿಂದ 25 ಜುಲೈ 1997 ವರೆಗೆ; 60 ತಿಂಗಳು.
  • 10 ನೇ ಅಧ್ಯಕ್ಷರು::ಕೊಹೆರಿಲ್ ರಾಮನ್ ನಾರಾಯಣನ್ (1921-2005)(ಸ್ವತಂತ್ರಅಭ್ಯರ್ಥಿ);ದಿ.25, ಜುಲೈ 1997 ರಿಂದ 25 ಜುಲೈ 2002 ರ ವರೆಗೆ 60 ತಿಂಗಳು.
  • ಅಲ್ಪಾಯು ಸರ್ಕಾರಗಳು:
  • 1996 ರ ರಾಷ್ಟ್ರೀಯ ಸಾರ್ವತ್ರಿಕ ಚುನಾವಣೆಗಳಲ್ಲಿ ಲೋಕಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತು ಆದರೂ ಸಂಸತ್ತಿನ ಲೋಕಸಬೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸುವಷ್ಟು ಶಕ್ತಿಯಿಲ್ಲದೆ ಹೋಯಿತು.. ದೊಡ್ಡ ಪಕ್ಷವಾದ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಒಕ್ಕೂಟ ರಚಿಸಿಕೊಂಡು ಪ್ರಧಾನಮಂತ್ರಿಯಾದರು. ಅವರ ನೇತೃತ್ವದಲ್ಲಿ, ಬಿಜೆಪಿ ಒಕ್ಕೂಟ ಕೇವಲ 13 ದಿನಗಳ ಅಧಿಕಾರದಲ್ಲಿತ್ತು. ಮತ್ತೊಂದು ಸುತ್ತಿನ ಚುನಾವಣೆಯನ್ನು ತಪ್ಪಿಸಲು ಬಯಸುವ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ, ಜನತಾ ದಳ ನೇತೃತ್ವದಲ್ಲಿ 14 ಪಕ್ಷಗಳ “ಯುನೈಟೆಡ್ ಫ್ರಂಟ್” ಎಂದು ಕರೆಯಲ್ಪಡುವ ಒಕ್ಕೂಟವು ಸರ್ಕಾರವನ್ನು ರೂಪಿಸಲು ಹೊರಹೊಮ್ಮಿತು. ಕಾಂಗ್ರಸ್ ಪಕ್ಷ ಹೊರಗಿನಿಂದ ಬೆಂಬಲ ಮೀಡಿತು. ಕರ್ನಾಟಕ ಎಚ್.ಡಿ.ದೇವೇಗೌಡ ಮಾಜಿ ಮುಖ್ಯಮಂತ್ರಿ ಅಡಿಯಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರ ಅಧಕಾರಕ್ಕೆ ಬಂತು. ದೇವೇಗೌಡರು ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪ್ರಧಾನಿಯಾಗಿದ್ದರು. ಕಾಂಗ್ರೆಸ್ ಪಕ್ಷವು ಮಾರ್ಚ್ 1997 ರಲ್ಲಿ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ನಂತರ ಇಂದರ್ ಕುಮಾರ್ ಗುಜ್ರಾಲ್ ಅವರನ್ನು ದೇವೆ ಗೌಡ ಬದಲಾಗಿ 16-ಪಕ್ಷಗಳ ಯುನೈಟೆಡ್ ಫ್ರಂಟ್ ಸಮ್ಮಿಶ್ರ ಪ್ರಧಾನಿಗಾಗಿ ಆಯ್ಕೆ ಮಾಡಿಕೊಂಡರು.
  • ನವೆಂಬರ್ 1997 ರಲ್ಲಿ, ಕಾಂಗ್ರೆಸ್ ಪಕ್ಷ ಮತ್ತೆ ಯುನೈಟೆಡ್ ಫ್ರಂಟ್`ಗೆ ಬೆಂಬಲವನ್ನು ಹಿಂತೆಗೆದುಕೊಂಡಿತು. ಫೆಬ್ರವರಿ 1998 ರಲ್ಲಿ ನಡೆದ ಹೊಸ ಚುನಾವಣೆಗಳು ಬಿಜೆಪಿಗೆ ಸಂಸತ್ತಿನಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ನೀಡಿತು (182), ಆದರೆ ಇದು ಪೂರ್ಣ ಬಹುಮತಕ್ಕೆ ಕಡಿಮೆ ಇತ್ತು.. ಭಿಜೆಪಿ ಮತ್ತೆ ಒಕ್ಕೂಟ ರಚಿಸಿಕೊಂಡು ಸರ್ಕಾರ ರಚನೆಗೆ ಮುಂದಾಯಿತು. ಮಾರ್ಚ್ 20, 1998 ರಂದು, ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವನ್ನು ಅಧ್ಯಕ್ಷರು ಉದ್ಘಾಟಿಸಿದರು. ವಾಜಪೇಯಿ ಮತ್ತೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ದಿ.11 ಮತ್ತು 13 ಮೇ 1998 ರಂದು, ಈ ಸರ್ಕಾರ ಐದು ಭೂಗತ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ನಡೆಸಿತು, ಇದು ಒಟ್ಟಾರೆಯಾಗಿ ಪೋಖ್ರಾನ್-2 ಎಂದು ಕರೆಯಲ್ಪಟ್ಟಿತು - ಇದು ಅದೇ ವರ್ಷ ಪಾಕಿಸ್ತಾನ ತನ್ನ ಸ್ವಂತ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ನಡೆಸಿತು ಪರೀಕ್ಷೆಗಳನ್ನು ನಡೆಸಲು ಕಾರಣವಾಯಿತು. ಭಾರತದ ಪರಮಾಣು ಪರೀಕ್ಷೆಗಳು ಯುನೈಟೆಡ್ ಸ್ಟೇಟ್ಸ್ ನ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಜಪಾನ್ ಭಾರತದ ಮೇಲೆ 1994 ರ ಪರಮಾಣು ಪ್ರಸರಣ ನಿರೋಧಕ ಕಾಯಿದೆಗೆ ಅನುಗುಣವಾಗಿ ಆರ್ಥಿಕ ನಿರ್ಬಂಧಗಳನ್ನು ವಿಧಿಸಲು ಪ್ರೇರೇಪಿಸಿತು ಮತ್ತು ಅಂತರರಾಷ್ಟ್ರೀಯ ಖಂಡನೆಗೆ ವ್ಯಾಪಕವಾಗಿ ಕಾರಣವಾಯಿತು.
  • 1999 ರ ಆರಂಭದ ತಿಂಗಳುಗಳಲ್ಲಿ, ಪ್ರಧಾನಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಐತಿಹಾಸಿಕ ಬಸ್ ಪ್ರವಾಸವನ್ನು ಮಾಡಿದರು ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಶರೀಫ್ ಅವರನ್ನು ಭೇಟಿಯಾದರು ಮತ್ತು ದ್ವಿಪಕ್ಷೀಯ 'ಲಾಹೋರ್ ಶಾಂತಿ ಘೋಷಣೆ ಒಪ್ಪಂದಕ್ಕೆ ಸಹಿ ಹಾಕಿದರು.
  • ಏಪ್ರಿಲ್ 1999 ರಲ್ಲಿ, ಚುನಾವಣೆ ನೆಡೆಯಿತು. ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಸಮ್ಮಿಶ್ರ ಒಕ್ಕೂಟವು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಿತು
  • 1999 ರ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಭಾರತೀಯ ಜನತಾ ಪಕ್ಷ ದ (ಬಿಜೆಪಿ) ಒಕ್ಕೂಟ ಸರ್ಕಾರದ ಪಾಲುದಾರ -ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ನಾಯಕಿ ಜೆ. ಜಯಲಲಿತಾ ಕೆಲವು ಡಿಎಮ್`ಕೆ ಸರ್ಕಾರವನ್ನು ವಜಾಮಾಡಬೇಕೆಂಬ ಬೇಡಿಕೆ ಇಟ್ಟರು. ಆದರೆ ಅದನ್ನು ವಾಜಪೇಯಿ ಒಪ್ಪದೆ ಇದ್ದುದರಿಂದ (ಎಐಎಡಿಎಂಕೆ).ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ಇದರಿಂದ ಲೋಕಸಭೆಯಲ್ಲಿ (ಭಾರತದ ಕೆಳಮನೆ) ವಿಶ್ವಾಸ ಮತವನ್ನು ಗೆಲ್ಲಲಾರದೆ ಒಂದು ಮತದಿಂದ ಸೊತಿತು. ಸೋನಿಯಾರವರೂ ಕಾಂಗ್ರಸ್ ಪಕ್ಷದಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲವೆಂದರು. ಇದು ಅವಧಿಪೂರ್ವ ಲೋಕಸಭೆ ಚುನಾವಣೆಗೆ ಕಾರಣವಾಯಿತು.

ಸೆಪ್ಟೆಂಬರ್ 1999 ರ ಚುನಾವಣೆ:ವಾಜಪೇಯಿ ಸರ್ಕಾರ

ಭಾರತ ಗಣರಾಜ್ಯದ ಇತಿಹಾಸ 
ಪರಮಾಣು ಸಾಮರ್ಥ್ಯದ ಅಗ್ನಿ-II ಬ್ಯಾಲಿಸ್ಟಿಕ್ ಕ್ಷಿಪಣಿ. ಮೇ 1998 ರಿಂದ, ಭಾರತವು ಪೂರ್ಣ ಪ್ರಮಾಣದ ಪರಮಾಣು ರಾಷ್ಟ್ರವೆಂದು ಘೋಷಿಸಲ್ಪಟ್ಟಿತು.
  • ಐದು ವರ್ಷದ ವಾಜಪೇಯಿ ಸರ್ಕಾರ:
  • ಕಾರ್ಗಿಲ್ ಯುದ್ಧದ ಕೆಲವೇ ತಿಂಗಳ ನಂತರ, ಭಾರತದಲ್ಲಿ 5 ಸೆಪ್ಟೆಂಬರ್ 1999 ರಿಂದ 3 ಅಕ್ಟೋಬರ್ 1999 ರವರೆಗೆ ಸಾರ್ವತ್ರಿಕ ಚುನಾವಣೆ ನಡೆಯಿತು. 13 ನೇ ಲೋಕಸಭಾ ಚುನಾವಣೆಯು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಮೊದಲ ಬಾರಿಗೆ ಕಾಂಗ್ರೆಸೇತರ ಪಕ್ಷಗಳ ಒಕ್ಕ್ಕೂಟವು ಬಹುಮತವನ್ನು ಪಡೆಯುವಲ್ಲಿ ಮತ್ತು ಸರ್ಕಾರವನ್ನು ರೂಪಿಸಲು ಯಶಸ್ವಿಯಾಯಿತು ಅದು ಐದು ವರ್ಷಗಳ ಪೂರ್ಣಾವಧಿಯನ್ನು ಪೂರೈಸಿತು. ಅಕ್ಟೋಬರ್‌ 6 ರಂದು ಪ್ರಾರಂಭವಾದ ಫಲಿತಾಂಶವು ಓಆಂಗೆ 298 ಸ್ಥಾನಗಳನ್ನು, ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳಿಗೆ 136 ಸ್ಥಾನಗಳನ್ನು ನೀಡಿತು. ಅಕ್ಟೋಬರ್‌ 13ರಂದು ಎ.ಬಿ.ವಾಜಪೇಯಿಯವರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
  • ಸಾರ್ವತ್ರಿಕ ಚುನಾವಣೆಗಳು ಹಿಂದೆ 1996 ಮತ್ತು 1998ರಲ್ಲಿ ನಡೆಸಲ್ಪಟ್ಟಿದ್ದರಿಂದಾಗಿ, 1999ರ ಚುನಾವಣೆಗಳು 40 ತಿಂಗಳುಗಳ ಅವಧಿಯಲ್ಲಿ ನಡೆದ ಮೂರನೇ ಚುನಾವಣೆಗಳು ಎನಿಸಿಕೊಂಡವು. ಚುನಾವಣಾ ಅಕ್ರಮ ಮತ್ತು ಹಿಂಸಾಚಾರವನ್ನು ನಿರೋಧಿಸುವ ಸಲುವಾಗಿ ದೇಶದ 31 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಉದ್ದಗಲಕ್ಕೂ ಭದ್ರತಾ ಪಡೆಗಳನ್ನು ನಿಯೋಜಿಸುವುದಕ್ಕಾಗಿ ಅವಕಾಶ ನೀಡಲು, ಚುನಾವಣಾ ದಿನಾಂಕಗಳನ್ನು ಐದು ವಾರಗಳ ಅವಧಿಗೆ ಹಂಚಿಕೆ ಮಾಡಲಾಗಿತ್ತು. ಲೋಕಸಭೆಯ 543 ಸ್ಥಾನಗಳಿಗಾಗಿ ಒಟ್ಟಾರೆಯಾಗಿ 45 ಪಕ್ಷಗಳು (ಆರು ರಾಷ್ಟ್ರೀಯ ಪಕ್ಷಗಳು, ಉಳಿದವು ಪ್ರಾದೇಶಿಕ ಪಕ್ಷಗಳು) ಸ್ಪರ್ಧಿಸಿದವು. ಮೊದಲ ಬಾರಿಗೆ ಕಾಂಗ್ರಸ್ಸೇತರ ಸರ್ಕಾರ ಐದು ವರ್ಷಗಳ ಪೂರ್ಣಾವಧಿಯನ್ನು ಪೂರೈಸಿತು.
  • ಈ ಅವಧಿಯಲ್ಲಿ ಈ ಬಹುಮತ ಪಡೆದ ಗುಂಪು ಭಾರತಿಯ ಜನತಾ ಪಕ್ಷ ನೇತೃತ್ವದ ಬಲಪಂಥೀಯ ಗುಂಪುಯಾಗಿದ್ದು, ಅದು 270/269 ಸ್ಥಾನಗಳನ್ನು ಗೆದ್ದುಕೊಂಡಿತು. ಮುಂದಿನ 14 ನೇ ಲೋಕಸಭೆಯ ರಚನೆಯ ವರೆಗೆ; ಎಂದರೆ ಮೇ 2004 ರ ಮುಂದಿನ ಸಾರ್ವತ್ರಿಕ ಚುನಾವಣೆಗಳವರೆಗೆ ಭಾರತೀಯ ಜನತಾಪಕ್ಷದ ಒಕ್ಕೂಟ ನ್ಯಾಶನಲ್ ಡೆಮೊಕ್ರಟಿಕ್ ಅಲಿಯನ್ಸ್ (ಎನ್ಡಿಎ)ಒಕ್ಕೂಟದಲ್ಲಿ ತನ್ನ ಅವಧಿಯನ್ನು ಪೂರ್ಣಗೊಳಿಸಿತು. ಫಲಿತಾಂಶಗಳು ಬಿಜೆಪಿ ಮತ್ತು ಎನ್ಡಿಎ ಪರವಾಗಿ ನಿರ್ಣಾಯಕವಾಗಿತ್ತು, ಔಪಚಾರಿಕ/ ವಾಸ್ತವವಾಗಿ ಎನ್ಡಿಎ 269 ಸ್ಥಾನಗಳನ್ನು ಪಡೆದುಕೊಂಡಿತು ಮತ್ತು ತೆಲುಗು ದೇಶಂ ಪಕ್ಷವು 29 ಸ್ಥಾನಗಳನ್ನು ತೆಗೆದುಕೊಂಡಿತು, ಅದು ಒಕ್ಕೂಟಕ್ಕೆ ಸೇರಿರದಿದ್ದರೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿತು (298)

ಕಾರ್ಗಿಲ್ ಯುದ್ಧ

ಭಾರತ ಗಣರಾಜ್ಯದ ಇತಿಹಾಸ 
ಕಾರ್ಗಿಲ್ ಪ್ರದೇಶದ ನಕ್ಷೆ
  • 1999 ರ ಮೇ ಮತ್ತು ಜೂನ್ ತಿಂಗಳಲ್ಲಿ ಕಾಶ್ಮೀರದ ಕಾರ್ಗಿಲ್ ಯುದ್ಧಕ್ಕೆ ಕಾರಣವಾದ ಪಾಕಿಸ್ತಾನದ ಕಡೆಯಿಂದ ಭಯೋತ್ಪಾದಕ ಒಳನುಸುಳುವಿಕೆಯ ವಿಸ್ತಾರವಾದ ಕಾರ್ಯಾಚರಣೆಯನ್ನು ಭಾರತ ನೆಡೆಸಬೇಕಾಯಿತು. ಪ್ರಧಾನಮಂತ್ರಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಭೇಟಿ ಗಡಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ಅವರು ಭೆಟಿ ನೀಡಿದಾಗ 'ದೆಹಲಿ-ಲಾಹೋರ್ ಬಸ್ ಸೇವೆ ಬಸ್' ಸಂಪರ್ಕವನ್ನು ಉದ್ಘಾಟಿಸಿದರು. ಆದರೆ ಮೂರು ತಿಂಗಳ ಹಿಂದೆಯೇ ಪ್ರಾರಂಭವಾದ ಶಾಂತಿ ಪ್ರಕ್ರಿಯೆ ಭರವಸೆಯಯನ್ನು ಪಾಕಿಸ್ತಾನದ ನಾಯಕರು ಮುರಿದಿದ್ದರು. ಅದೇ ಸಮಯದಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಕಾರ್ಗಿಲ್ ಪ್ರದೇಶದಲ್ಲಿ ಸುಮಾರ 30 ಕಿ.ಮೀ.ನಷ್ಟು ಒಳನುಗ್ಗಿದ್ದರು. ಇದು ಉನ್ನತ ಪ್ರದೇಶದ - ಎತ್ತರ ಸ್ಥಳದ ಯುದ್ಧದಲ್ಲಿ ಭಾರತ ತೊಡಗಿಕೊಂಡಿತು. ಮರುನಿರ್ಮಾಣಗೊಂಡ ಪ್ರಮುಖ ಗಡಿ ಬಂಕರುಗಳನ್ನು ಭಾರತೀಯ ಪಡೆಗಳು ವಶಪಡಿಸಿಕೊಂಡವು. ಕಾರ್ಗಿಲ್ ಸಂಘರ್ಷದ ಯಶಸ್ವಿ ವಿಜಯದ ನಂತರ ಗಳಿಸಿದ ಹೆಚ್ಚಿನ ಜನಪ್ರಿಯತೆಯು ಹೆಚ್ಚಿಸುವ ಮೂಲಕ, ಬಿಜೆಪಿ ನೇತೃತ್ವದ ಹೊಸ ಒಕ್ಕೂಟ - ಅಕ್ಟೋಬರ್ 1999 ರಲ್ಲಿ ವಾಜಪೇಯಿಯನ್ನು ಪ್ರಧಾನಿಯಾಗಿ ಸರ್ಕಾರ ರಚಿಸುವ ಬಹುಮತವನ್ನು ಗಳಿಸಿತು.
ಭಾರತ ಗಣರಾಜ್ಯದ ಇತಿಹಾಸ 
೧೮ ಸಾವಿರ ಅಡಿ ಎತ್ತರದಲ್ಲಿರುವ ಕಾರ್ಗಿಲ್ ಪಟ್ಟಣ
  • ಸಂಕ್ಷಿಪ್ತ ವಿವರ:
ಭಾರತ ಗಣರಾಜ್ಯದ ಇತಿಹಾಸ 
27-29 ಕಿ.ಮೀ.ದೂರ ಗುಂಡು ಎಸೆಯುವ ಹಾಬಿಟ್ಸ್ FH77 ಹೌಲಿಟ್ಜರ್ ಫಿರಂಗಿಗಳು. ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕ ಪಾತ್ರವಹಿಸಿದವು.
ಭಾರತ ಗಣರಾಜ್ಯದ ಇತಿಹಾಸ 
(IAF -MiG-21)ಕಾರ್ಗಿಲ್ ಯುದ್ಧದಲ್ಲಿ ಐಎಎಫ್' ಮಿಗ್ -21 ಫೈಟರ್‍ಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು.
  • ಕಾರ್ಗಿಲ್ ಜಿಲ್ಲೆಯಲ್ಲಿ ಮೇ ಮತ್ತು ಜುಲೈ 1999 ರ ನಡುವೆ ನಿಯಂತ್ರಣ ರೇಖೆ (ಲೈನ್ ಲೈನ್ ಆಫ್ ಕಂಟ್ರೋಲ್ -ಎಲ್ಒಸಿ) ಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಈ ಸಂಘರ್ಷವನ್ನು ಭಾರತದಲ್ಲಿ “ಆಪರೇಷನ್ ವಿಜಯ್- ಕಾರ್ಗಿಲ್” ಎಂದು ಕರೆಯುತ್ತಾರೆ, ಇದು ಕಾರ್ಗಿಲ್ ವಲಯವನ್ನು ತೆರವುಗೊಳಿಸಲು ಭಾರತೀಯ ಕಾರ್ಯಾಚರಣೆಯ ನೆಡೆಸಿದ ಹೆಸರಾಗಿತ್ತು. ಭಾರತೀಯ ಭಾಗದಲ್ಲಿ, ಎಲ್ಒಸಿ ದಾಟಿ, ಕಾಶ್ಮೀರಿ ಉಗ್ರಗಾಮಿಗಳಂತೆ ವೇಷಭೂಷಣ ಮಾಡಿಕೊಂಡಿರುವ ಪಾಕಿಸ್ತಾನದ ಸೈನಿಕರ ಒಳನುಸುಳುವಿಕೆಯು ಘರ್ಷಣೆಗೆ ಕಾರಣವಾಗಿತ್ತು, ಈ ನಿಯಂತ್ರಣ ರೇಖೆ ಎರಡು ರಾಜ್ಯಗಳ ನಡುವಿನ ವಾಸ್ತವ ಗಡಿಯಾಗಿ ಕಾರ್ಯನಿರ್ವಹಿಸುತ್ತದೆ. ಯುದ್ಧದ ಆರಂಭಿಕ ಹಂತಗಳಲ್ಲಿ ಪಾಕಿಸ್ತಾನವು ಈ ಹೋರಾಟವನ್ನು ಸ್ವತಂತ್ರ ಕಾಶ್ಮೀರಿ ದಂಗೆಕೋರು ಮಾಡಿದರೆಂದು ದೂಷಿಸಿತು, ಆದರೆ ಸಾವುನೋವುಗಳ ನಂತರ ಸಿಕ್ಕಿದ ದಾಖಲೆಗಳು ಮತ್ತು ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಶರೀಫರ ಹೇಳಿಕೆ ಮತ್ತು ಸೇನಾ ಸಿಬ್ಬಂದಿ ಮುಖ್ಯಸ್ಥರ ನಂತರದ ಹೇಳಿಕೆಗಳು ಪಾಕಿಸ್ತಾನಿ ಅರೆಸೈನಿಕ ಪಡೆಗಳು ಜನರಲ್ ಅಶ್ರಫ್ ರಶೀದ್ ಅವರ ನೇತೃತ್ವದಲ್ಲಿ. ಗಡಿ ಅತಿಕ್ರಮಣ ಮಾಡಿದ್ದು ಸಾಬೀತಾಯಿತು. ವಾಜಪೇಯಿಯವರು ಲಾಹೊರಿನಲ್ಲಿ ಪಾಕಿಸ್ತಾನದ ಪ್ರಧಾನಿ ಶರೀಫರೊಡನೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವಾಗಲೇ ಈ ಕಡೆ ಗಡಿ ಅತಿಕ್ರಮಣ ಆರಂಭವಾಗಿತ್ತು.
  • ಪಾಕಿಸ್ತಾನದ ಅಲ್ಲಿಯ ಹತೋಟಿ ಮತ್ತು ಧಾಳಿ ಕಾಶ್ಮೀರದಿಂದ ಮುಂದೆ (ಪರ್ಯಾಯವಾದ ರಸ್ತೆಯು ಹಿಮಾಚಲ ಪ್ರದೇಶದ ಮೂಲಕ ಅಸ್ತಿತ್ವದಲ್ಲಿದ್ದರೂ) ಲೆಹ್ ಮಾರ್ಗವನ್ನು ಕತ್ತರಿಸಿಬಿಡುವ ಅಪಾಯಕ್ಕೆ ಪಾಕಿಸ್ತಾನದ ದಾಳಿ/ ಹತೋಟಿಯಿಂದ ದಾರಿ ಮಾಡಿಕೊಟ್ಟಿತ್ತು.
  • ಶ್ರೀನಗರವನ್ನು ಲೆಹ್‍ಗೆ ಸಂಪರ್ಕಿಸುವ ಭಾರತೀಯ ರಾಷ್ಟ್ರೀಯ ಹೆದ್ದಾರಿ (NH 1D) ಕಾರ್ಗಿಲ್ ಮೂಲಕ ದೂರವನ್ನು ಕಡಿತಗೊಳಿಸುತ್ತದೆ. ಈ ಪ್ರದೇಶ 16,000 ಅಡಿ ಎತ್ತರವಿದೆ, ಕೆಲವು 5,485 ಮೀಟರ್ (18,000 ಅಡಿ) ಎತ್ತರವಿದೆ. ಉಷ್ಣಾಂಶವು ಚಳಿಗಾಲದಲ್ಲಿ ಚಳಿ ಗಾಳಿಯಿಂದ -48 ರಿಂದ (-54 ಸೆಂ.ನಷ್ಟು ಕಡಿಮೆಯಾಗುತ್ತದೆ. ಪರ್ವತದ ಮೇಲ್ಭಾಗದ ಸಮೀಪ ತಾಪಮಾನವು ಆ ಸಮಯದಲ್ಲಿ -15 ಸೆಂ.ನಿಂದ -11 ಸೆಂ. ಗೂ ಕಡಿಮೆಯಾಗಿತ್ತು, ಕಾರ್ಯಾಚರಣೆಯು ಪೂರ್ಣವಾಗಿ ನಡೆಯುತ್ತಿದ್ದಂತೆ ಸುಮಾರು 250 ಫಿರಂಗಿದಳದ ಬಂದೂಕುಗಳನ್ನು ‘ಇನ್ ಲೈನ್-ಆಫ್-ಸೈಟ್’ ನಲ್ಲಿ ಇರುವ ಪೋಸ್ಟ್`ಗಳಲ್ಲಿನ ಒಳನುಸುಳುವಿಕೆಯನ್ನು ತೆರವುಗೊಳಿಸಲು ಉಪಯೋಗಿಸಲಾಯಿತು. ಬೊಫೋರ್ಸ್ ಎಫ್ಎಚ್ -7 ಬಿ ಕ್ಷೇತ್ರದ ಹಾವಿಟ್ಜರ್ ಪ್ರಮುಖ ಪಾತ್ರ ವಹಿಸಿತು. ಭಾರತೀಯ ಫಿರಂಗಿದಾರರು ಭೂಪ್ರದೇಶದ ಗರಿಷ್ಠ ಬಳಕೆ ಮಾಡಿದರು. ಕಾರ್ಗಿಲ್-ಡ್ರಾಸ್ ವಲಯದ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಒಟ್ಟು ಭಾರತೀಯ ಸೈನಿಕರು 30,000 ದ ಹತ್ತಿರದಲ್ಲಿದ್ದರು. ಸಂಘರ್ಷದ ಬ್ಯಾಕ್ಅಪ್ ಒದಗಿಸುವ ಸೇರಿದಂತೆ ಒಳನುಸುಳುವಿಕೆ ಸಂಘರ್ಷದ ಧಾಳಿಕೋರರ ಸಂಖ್ಯೆಯನ್ನು ರ ಎತ್ತರದಲ್ಲಿ ಸರಿಸುಮಾರಾಗಿ 5,000 ಕ್ಕೆ ಅಂದಾಜಿಸಲಾಗಿತ್ತು.
  • ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಗುರಿಯನ್ನು ದ್ವಿಪಕ್ಷೀಯ ಮಾತುಕತೆಗಳನ್ನು ಉತ್ತೇಜಿಸಲು ಭಾರತದ ಪ್ರಧಾನಿ ಲಾಹೋರ್ ಗೆ ಪ್ರಯಾಣಿಸಿದ್ದರು. ಆದರೆ ಪಾಕಿಸ್ತಾನದ ಪಡೆಗಳು "ಪಾಕಿಸ್ತಾನ ನಿಯಂತ್ರಣ ರೇಖೆಯನ್ನು ದಾಟುವ ಮೂಲಕ" [ದ್ವಿಪಕ್ಷೀಯ] ಮಾತುಕತೆಗಳನ್ನು ಧ್ವಂಸಗೊಳಿಸಿದರು ". ಇನ್ನೊಂದೆಡೆ, ನಿಯಂತ್ರಣ ರೇಖೆ ದಾಟದೆ ಇಡೀ ಯುದ್ಧದಲ್ಲಿ ಸಂಘರ್ಷವನ್ನು ಹೆಚ್ಚಿಸದಂತೆ ಭಾರತೀಯ ಸಂಯಮವನ್ನು ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಶ್ಲಾಘಿಸಿದರು. ಇಡೀ ಯುದ್ಧದಲ್ಲಿ ಭಾರತ ನಿಯಂತ್ರಣ ರೇಖೆಯ ಗಡಿಯ ಒಂದು ಇಂಚನ್ನೂ ದಾಟಲಿಲ್ಲ.

ಕಾಲ ಸೂಚಿ: 1999

  • ಕಾರ್ಗಿಲ್` ನಲ್ಲಿ 3 ಮೇ ಪಾಕಿಸ್ತಾನಿ ನುಸುಳುವಿಕೆ ಸ್ಥಳೀಯ ಕುರುಬರಿಂದ ವರದಿಯಾಯಿತು.
  • 5 ಮೇ ಭಾರತೀಯ ಸೇನಾ ಗಸ್ತು ದಳ ಕಳುಹಿಸಲಾಗಿದೆ; ಐದು ಭಾರತೀಯ ಸೈನಿಕರನ್ನು ಸೆರೆಹಿಡಿದು ಚಿತ್ರಹಿಂಸೆಯಿಂದ ಸಾಯಿಸಿದರು.
  • ಯುದ್ಧ-
  • 11 ಜುಲೈ ಪಾಕಿಸ್ತಾನ ತನ್ನ ಪಡೆಯನ್ನುಹಿಂತೆಗೆದುಕೊಳ್ಳುವಿಕೆಯನ್ನು ಪ್ರಾರಂಭಿಸುತ್ತದೆ; ಬಟಾಲಿಕ್ ನಲ್ಲಿ ಭಾರತವು ಪ್ರಮುಖ ಶಿಖರಗಳನ್ನು ಹಿಡಿಯುತ್ತದೆ
  • 14 ಜುಲೈ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆಪರೇಷನ್ ವಿಜಯವು ಯಶಸ್ವಿಯಾಗಿದೆ ಘೋಷಿಸುತ್ತಾರೆ. ಸರ್ಕಾರ ಪಾಕಿಸ್ತಾನದೊಂದಿಗೆ ಮಾತುಕತೆಗೆ ಷರತ್ತನ್ನು ನಿಗದಿಪಡಿಸುತ್ತದೆ.
  • 26 ಜುಲೈ ಕಾರ್ಗಿಲ್ ಸಂಘರ್ಷ ಅಧಿಕೃತವಾಗಿ ಕೊನೆಗೊಳ್ಳುತ್ತದೆ. ಭಾರತೀಯ ಸೇನೆಯು ಪಾಕಿಸ್ತಾನಿ ಒಳನುಗ್ಗುದವರನ್ನು ಸಂಪೂರ್ಣ ಹೊರಹಾಕಿರವುದಾಗಿ ಪ್ರಕಟಿಸಿತು.
  • ನಂತರದಲ್ಲಿ ಭಾರತೀಯ ವಾಯುಪಡೆಯಿಂದ ಬೆಂಬಲಿತವಾದ ಭಾರತೀಯ ಸೇನೆಯು ಪಾಕಿಸ್ತಾನದ ಪಡೆಗಳು ಮತ್ತು ಉಗ್ರಗಾಮಿಗಳಿಂದ ತುಂಬಿದ ಎಲ್‍ಒಸಿ ಯ ಭಾರತೀಯ ಭಾಗದಲ್ಲಿ ಬಹಳಷ್ಟು ಸ್ಥಾನಗಳನ್ನು ಹಿಂದೆ ಪಡೆದುಕೊಂಡಿತು. ಅಂತರರಾಷ್ಟ್ರೀಯ ರಾಜತಾಂತ್ರಿಕ ವಿರೋಧ ಎದುರಿಸುತ್ತಿದ್ದ ಪಾಕಿಸ್ತಾನದ ಪಡೆಗಳು ಎಲ್ ಒ.ಸಿ.ಯ. ಉಳಿದಿರುವ ಭಾರತೀಯ ಸ್ಥಾನಗಳಿಂದ ಹಿಂದೆ ಸರಿದವು.(ಎಲ್‍ಒಸಿ - ಲೈನ್‍ ಆಫ್ ಕಂಟ್ರೋಲ್)

ಸಾವು ನೋವುಗಳು

  • ಉಭಯ ಕಡೆಗಳಲ್ಲೂ ಭಾರೀ ಸಾವುನೋವುಗಳಾಯಿತು. ಸಾವುನೋವಿನ ವರದಿಯಲ್ಲಿ ಪಾಕಿಸ್ತಾನ ಎರಡು ರೀತಿಯ ಅಂಕಿಅಂಶಗಳನ್ನು ನೀಡಿತು. 357 ಸೈನಿಕರು ಸತ್ತಿರುವ ಅಂಕಿಅಂಶವನ್ನು ಕೆಲವು ಪಾಕಿಸ್ತಾನಿ ಅಧಿಕಾರಿಗಳು ಪ್ರಶ್ನಿಸಿ, ಸಂಘರ್ಷದಲ್ಲಿ 4,000 ಪಾಕಿಸ್ತಾನಿ ಸೈನಿಕರು ಹತರಾಗಿದ್ದಾರೆಂದು ವಾದಿಸಿದರು. 665ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಗಾಯಗೊಂಡಿದ್ದು, 8 ಮಂದಿ ಸೆರೆಸಿಕ್ಕಿದ್ದಾರೆಂದು ಕೂಡ ಪಾಕಿಸ್ತಾನ ದೃಢಪಡಿಸಿತು. ಭಾರತದ ಪ್ರಕಾರ, 527 ಸೈನಿಕರು ಹತರಾಗಿದ್ದು, 1,363 ಸೈನಿಕರಿಗೆ ಗಾಯ ಮತ್ತು ಒಬ್ಬರು ಸೆರೆಸಿಕ್ಕಿದ್ದು ಭಾರತಕ್ಕಾದ ನಷ್ಟಗಳಾಗಿವೆ.

ಭಾರತದ ಏರ್ ಲೈನ್ನ್ಸ್‍ವಿಮಾನ ಐಎನ್‍ಡಿ -814 ಅಪಹರಣ

  • ಡಿಸೆಂಬರ್ 24, 1999:
  • ವಿವರವಾದ ವರದಿ:From the archives: Terror on Indian Airlines Flight 814
  • Indian Airlines Flight 814
  • ಐಎನ್ -814, ಡಿಸೆಂಬರ್ 24, 1999 ರಂದು ಕಟ್ಮಂಡುವಿನಿಂದ ದೆಹಲಿಗೆ ಹಿಂದಿರುಗಿ ಬರುತ್ತಿತು.್ತ ಅದು ಹೊರಟ ಅರ್ಧ ಗಂಟೆಯ ನಂತರ ಭಾರತದ ಗಡಿಯೋಳಕ್ಕೆ ಬರುತ್ತಿದ್ದಂತೆ, ಪ್ರಯಾಣಿಕರು ಮತ್ತು ಸಿಬ್ಬಂದಿಯೊಂದಿಗೆ ಭಾರತ ಕಾಲಮಾನ 17:30 ಕ್ಕೆ ಭಾರತೀಯ ವಾಯುಪ್ರದೇಶಕ್ಕೆ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ವಿಮಾನವನ್ನು ಐದು (ಪಾಕಿಸ್ತಾನಿ) ಬಂದೂಕು ಧಾರಿ ಅಪಹರಣಕಾರರು ವಶಪಡಿಸಿಕೊಂಡರು. ವಿಮಾನವನ್ನು ಹರ್ಕಾತ್-ಉಲ್-ಮುಜಾಹಿದೀನ್ ಪಾಕಿಸ್ತಾನದ ‘ಐಎಸ್ಐ’ಯಿಂದ ಸಕ್ರಿಯ ಬೆಂಬಲ ಮತ್ತು ಸಹಾಯದಿಂದ ಅಪಹರಣ ಮಾಡಿದರು.
ಭಾರತ ಗಣರಾಜ್ಯದ ಇತಿಹಾಸ 
ಇಂಡಿಯನ್ ಏರ್‍ಲೈನ್ಸ್‍ನ ಒಂದು ವಿಮಾನ
  • ಅಪಹರಣಕಾರರು ವಿಮಾನವನ್ನು ಹಲವಾರು ಸ್ಥಳಗಳಿಗೆ ಹಾರಿಸಬೇಕೆಂದು ಆದೇಶಿಸಿದರು. ಅಮೃತಸರ, ಲಾಹೋರ್ ಮತ್ತು ದುಬೈಗೆ ಮುಟ್ಟಿದ ನಂತರ, ಅಪಹರಣಕಾರರು ಅಂತಿಮವಾಗಿ ವಿಮಾನವನ್ನು ತಾಲಿಬಾನ್ ನಿಯಂತ್ರಿಸುತ್ತಿದ್ದ ಅಫ್ಘಾನಿಸ್ತಾನದ ಕಾನ್ಹಾಹಾರ್’ನಲ್ಲಿ ಇಳಿಸಲು ಒತ್ತಾಯಿಸಿದರು. ಅಪಹರಣಕಾರರು ದುಬೈಯಲ್ಲಿ 176 ಪ್ರಯಾಣಿಕರಲ್ಲಿ 27 ಜನರನ್ನು ಬಿಡುಗಡೆ ಮಾಡಿದರು. ಆದರೆ ಒಬ್ಬನನ್ನು ಮಾರಣಾಂತಿಕವಾಗಿ ಇರಿದು, ಅನೇಕರನ್ನು ಗಾಯಗೊಳಿಸಿದರು.
  • ವಿಮಾನವು ಬಂದಿಳಿದ ಆ ಸಮಯದಲ್ಲಿ, ಕಾಂದಹಾರ್ ಸೇರಿದಂತೆ ಅಫ್ಘಾನಿಸ್ತಾನದ ಬಹುಭಾಗವು ತಾಲಿಬಾನ್ ನಿಯಂತ್ರಣದಲ್ಲಿತ್ತು. ಆರಂಭದಲ್ಲಿ ತಾಲಿಬಾನ್ ಭಾರತದ ಬದಿಯಲ್ಲಿದೆ ಎಂದು ಭಾವಿಸಲಾಗಿತ್ತು. ಆದರೆ ನಂತರ ಅವರು ಪಾಕಿಸ್ತಾನದ ಐಎಸ್ಐ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಸೂಚಿಸಲಾಯಿತು. ತಾಲಿಬಾನ್ ಕಾದಾಳಿಗಳು ಯಾವುದೇ ಭಾರತೀಯ ಮಿಲಿಟರಿ ಹಸ್ತಕ್ಷೇಪವನ್ನು ತಡೆಯಲು ವಿಮಾನದ ಸುತ್ತಲೂ,ಸುತ್ತುವರಿದಿದ್ದರು. ಅಪಹರಣದ ಉದ್ದೇಶವು ಭಾರತದ ಜೈಲಿನಲ್ಲಿ ಇದ್ದ ಇಸ್ಲಾಮಿಕ್ ಭಯೋತ್ಪಾದಕ ಕಟ್ಟಾಳುಗಳನ್ನು ಬಿಡುಗಡೆ ಮಾಡಿಸುವುದು. "ಒತ್ತೆಯಾಳು ಬಿಕ್ಕಟ್ಟು ಏಳು ದಿನಗಳವರೆಗೆ ನೆಡೆದು ಕೊನೆಗೊಂಡಿತು.
  • ಎಂಟು ದಿನಗಳ ಕಾಲ ನಡೆದ ಸಂಧಾನದ ನಂತರ ಯಾವುದೇ ಬೇರೆ ಆಯ್ಕೆಯಿಲ್ಲದಿದ್ದ, ಭಾರತೀಯ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರು ತಮ್ಮ ಸರ್ಕಾರವು ಬಂಧಿಸಿದ್ದ, ಅಪಹರಣಕಾರರು ಕೇಳಿಕೊಂಡಿದ್ದ ಮೂರು ಕೈದಿಗಳನ್ನು ಕರೆದೊಯ್ಯುವ ಉದ್ದೇಶದಿಂದ ಅಫ್ಘಾನಿಸ್ತಾನದ ದೇಶಕ್ಕೆ ಹಾರಿಹೋಗಬೇಕಾಯಿತು. ಸಿಂಗ್ ಅವರು ಅಫ್ಘಾನಿಸ್ತಾನದಲ್ಲಿ, ತಾಲಿಬಾನ್ ಉಪಸ್ಥಿತಿಯಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ಉಗ್ರಗಾಮಿಗಳಾದ ಮುಷ್ತಾಕ್ ಅಹ್ಮದ್ ಜರ್ಗರ್, ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಮಸೂದ್ ಅಝರ್ ಅವರನ್ನು ಹಸ್ತಾಂತರಿಸಬೇಕಾಯಿತು. ಮೂರು ಉಗ್ರಗಾಮಿಗಳು ಕಂದಾಹಾರ್ನಲ್ಲಿ ಬಂದಿಳಿದ ನಂತರ, ವಿಮಾನದಲ್ಲಿದ್ದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು.
  • ತಾಲಿಬಾನ್ ನವರು ಐದು ಅಪಹರಣಕಾರರ ಸುರಕ್ಷಿತ ತೆಯನ್ನು ಖಾತ್ರಿಪಡಿಸಿಕೊಂಡು, ಒತ್ತೆಯಾಳುಗಳನ್ನು ಬಿಟ್ಟುಹೋದರು ಮತ್ತು ಅಪಹರಣಕಾರರು ಅಫ್ಘಾನಿಸ್ತಾನವನ್ನು ತೊರೆದರು ಎಂದು ವರದಿಯಾಯಿತು. ನಂತರದಲ್ಲಿ ಮೂರು ಉಗ್ರಗಾಮಿಗಳು 9/11 ದಾಳಿಯನ್ನು ಯೋಜಿಸಿ ಮತ್ತು ಮ ಡೇನಿಯಲ್ ಪರ್ಲ್ ಮತ್ತು 2006 ರ ಮುಂಬಯಿಯ ಅಪಹರಣ ಮತ್ತು ಹತ್ಯೆ ಭಯೋತ್ಪಾದಕ ದಾಳಿಗಳನ್ನು ಯೋಜಿಸಿದರು.
  • 31 ಡಿಸೆಂಬರ್ 1999 ರಂದು, ಇಂಡಿಯನ್ ಏರ್ಲೈನ್ಸ್ ಫ್ಲೈಟ್ 814 ರ ಮುಕ್ತ ಒತ್ತೆಯಾಳುಗಳನ್ನು ವಿಶೇಷ ವಿಮಾನದಿಂದ ಹಿಂದಕ್ಕೆ ಹಾರಿಸಲಾಯಿತು. ಸ್ವತಂತ್ರವಾದ ಒತ್ತೆಯಾಳುಗಳು ತಮ್ಮ ಪ್ರದೇಶಕ್ಕೆ ಹಿಂತಿರುಗಿದರು.

ಒರಿಸ್ಸಾದ ಉಗ್ರ ಚಂಡ ಮಾರುತ - ಪ್ರವಾಹ

ಭಾರತ ಗಣರಾಜ್ಯದ ಇತಿಹಾಸ 
ಒರಿಸ್ಸಾದ ಮೇಲೆ ಬೀಸಿದ ಉಗ್ರ ಚಂಡ ಮಾರುತ:Cyclone 05B (25 ಅಕ್ಟೋಬರ್ 1999)
  • ಸಹಸ್ರಮಾನದ ಅಂತ್ಯವು ವಿನಾಶಕಾರಿ ಭಾರತದ ಚಂಡಮಾರುತವು 25 ಅಕ್ಟೋಬರ್ 1999 ರಂದು ಆರಂಭಯಿತು ಮತ್ತು 4 ನವೆಂಬರ್ 1999 ರ ವರೆಗೆ ಒರಿಸ್ಸಾ ಮೇಲೆ ಹಾವಳಿಮಾಡಿ ಕನಿಷ್ಠ 10,000 ಜನರನ್ನು ಕೊಂದಿತು. ಒಡಿಶಾ ರಾಜ್ಯ ಸೈಕ್ಲೋನ್ BOB 03 ಕ್ಕೆ ಸಂಬಂಧಿಸಿದಂತೆ ಅತ್ಯಂತ ದುರಂತದ ಹಾನಿ ಉಂಟುಮಾಡಿತು, ಇದು 20 ನೆಯ ಶತಮಾನದ ರಾಜ್ಯದ ತೀವ್ರವಾದ ಚಂಡಮಾರುತ ಎಂದು ಪರಿಗಣಿಸಲ್ಪಟ್ಟಿದೆ. 11 ದಿನಗಳ ಹಿಂದೆ ಕೇವಲ ಹತ್ತಿರದ ಪ್ರದೇಶಗಳನ್ನು ಹೊಡೆದ ತೀವ್ರ ಚಂಡಮಾರುತದ ಹಿಂದಿನ ಪರಿಣಾಮದಿಂದಾಗಿ ಈ ಹಾನಿ ಹೆಚ್ಚಿದೆ. ಬಹಳ ಹಾನಿಗೊಳಗಾದ ಪ್ರದೇಶಗಳು- ಬಾಲಸೋರ್, ಭದ್ರಾಕ್, ಕಟಕ್, ದೆಂಕನಾಲ್, ಜಗತ್ಸಿಂಗ್ಪುರ್, ಜಜ್ಪುರ್, ಕಯೊಂಝಾರ್, ಕೇಂದ್ರಾಡ, ಖುರ್ದಾ, ಪುರಿ, ಮಯೂರ್ಭಂಜ್, ಮತ್ತು ನಾಗರ್ನ. ಅಗತ್ಯ ಸೇವೆಗಳ ಸಂಪೂರ್ಣ ಸ್ಥಗಿತ ವರದಿ ಮಾಡುವ ಹನ್ನೆರಡು ಒಡಿಶಾನ್ ಜಿಲ್ಲೆಗಳು ತೀವ್ರ ಹಾನಿಯಾಯಿತು. ಇವುಗಳಲ್ಲಿ, ಜಗತ್ಸಿಂಗ್‍ಪುರದಲ್ಲಿ ಎರಸ್ಮಾ ಮತ್ತು ಕುಜಾಂಗ್‍ನಲ್ಲಿ ಅಗತ್ಯ ಸೇವೆಗಳ ಸಂಪೂರ್ಣ ಸ್ಥಗಿತವಾಗಿ ಕೆಟ್ಟ ಪರಿಣಾಮ ಬೀರಿವೆ. ಒಟ್ಟಾರೆಯಾಗಿ, 12.9 ದಶಲಕ್ಷ ಜನರು ಚಂಡಮಾರುತದಿಂದ ಪ್ರಭಾವಿತರಾಗಿದ್ದರು; ಚಂಡಮಾರುತದ ಸತ್ತವರ ಅಂದಾಜುಗಳು ಗಣನೀಯವಾಗಿ ಬದಲಾಗುತ್ತವೆ, ಆದರೆ ಭಾರತೀಯ ಹವಾಮಾನ ಇಲಾಖೆಯು ಪ್ರಕಾರ ಸುಮಾರು 9,887 ಜನರನ್ನು ಸತ್ತಿದ್ದು, ಹೆಚ್ಚುವರಿ 40 ಜನರು ಕಾಣೆಯಾದರು ಮತ್ತು 2,507 ಮಂದಿ ಗಾಯಗೊಂಡಿದ್ದಾರೆ.

2000 - 2004 ರ ವಾಜಪೇಯಿ ಕಾಲ

ಭಾರತ ಗಣರಾಜ್ಯದ ಇತಿಹಾಸ 
ರಷ್ಯಾ ದೇಶದ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಅವರೊಂದಿಗೆ ವಾಜಪೇಯಿ.
  • ಅಟಲ್ ಬಿಹಾರಿ ವಾಜಪೇಯಿ ಸಂಸತ್ತಿನ ಅವಧಿ ಪೂರ್ಣಗೊಳಿಸಿದ ಮೊದಲ ಕಾಂಗ್ರೆಸೇತರ ಪ್ರಧಾನ ಮಂತ್ರಿಯಾದರು. ಅವರ ಅಧಿಕಾರಾವಧಿಯು ಮೂಲಭೂತ ಸೌಕರ್ಯ ಬೆಳವಣಿಗೆ, ಅಮೇರಿಕ (ಯುನೈಟೆಡ್ ಸ್ಟೇಟ್ಸ್) ದೊಂದಿಗೆ ಹೆಚ್ಚಿನ ಸಂಬಂಧ ; ಆರ್ಥಿಕ ಸುಧಾರಣೆಗಳು, ಪರಮಾಣು ಪರೀಕ್ಷೆಗಳು, ಹಲವಾರು ವಿದೇಶಿ ನೀತಿ ಮತ್ತು ಕಾರ್ಗಿಲ್ ಮಿಲಿಟರಿ ವಿಜಯಗಳೊಂದಿಗೆ ಸುಧಾರಿತ ರಾಜತಾಂತ್ರಿಕ ಸಂಬಂಧವನ್ನು ಹೆಚ್ಚಿಸಲು ಪ್ರಯತ್ನಿಸಿತು.
  • 2000 ದ ಮೇ ತಿಂಗಳಲ್ಲಿ ಭಾರತದ ಜನಸಂಖ್ಯೆಯು 100 ಕೋಟಿ (೧ ಬಿಲಿಯನ್) ಮೀರಿತು. 2000 ದ ಮಾರ್ಚಿ 21 ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಎರಡು ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸಲು ಭಾರತಕ್ಕೆ ಭೇಟಿ ನೀಡಿದರು. ಜನವರಿಯಲ್ಲಿ, ಜನವರಿ 26, 2001 (ಶುಕ್ರವಾರ) ಗುಜರಾತ್‍ನಲ್ಲಿ ಬೃಹತ್ ಭೂಕಂಪವು ಗುಜರಾತ್ ರಾಜ್ಯವನ್ನು ನಡುಗಿಸಿ ಕನಿಷ್ಠ 30,000 ಜನರನ್ನು ಕೊಂದಿತು. (69,000 ಕ್ಕಿಂತ ಹೆಚ್ಚುಜನ?January 2001) ಪ್ರಧಾನ ಮಂತ್ರಿ ವಾಜಪೇಯಿ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಪಾಕಿಸ್ತಾನ ಮತ್ತು ಭಾರತ ನಡುವಿನ ಮೊದಲ ಶೃಂಗಸಭೆಯಲ್ಲಿ 2001 ರ ಮಧ್ಯದಲ್ಲಿ ಭೇಟಿಯಾದರು. ಆದರೆ ಕಾಶ್ಮೀರದ ಪ್ರದೇಶದ ಒಡೆತನದ ಮೇಲೆ ಭಿನ್ನಾಭಿಪ್ರಾಯಗಳ ಕಾರಣದಿಂದ ಈ ಸಭೆಯು ವಿಫಲವಾಯಿತು ಅಥವಾ ಜಂಟಿ ಹೇಳಿಕೆ ನೀಡದೆ ವಿಫಲವಾಯಿತು.
  • ಛತ್ತೀಸ್ಗಢ, ಜಾರ್ಖಂಡ್ ಮತ್ತು ಉತ್ತರಾಖಂಡ್ (ಮೂಲತಃ ಉತ್ತರಾಂಚಲ್) ಎಂಬ ಮೂರು ಹೊಸ ರಾಜ್ಯಗಳು ನವೆಂಬರ್ 2000 ರಲ್ಲಿ ರಚನೆಯಾದವು. 'ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್' (ಬಿಜೆಪಿ ಒಕ್ಕೂಟ) ಸರ್ಕಾರದ ವಿಶ್ವಾಸಾರ್ಹತೆಯು ಹಲವಾರು ರಾಜಕೀಯ ಹಗರಣಗಳು (ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್ ರುಷುವತ್ತುಗಳನ್ನು ತೆಗೆದುಕೊಂಡ ಆರೋಪಗಳು - ತೆಹಲ್ಕಾವರದಿ) ಹಾಗೂ ಕಾರ್ಗಿಲ್ ಆಕ್ರಮಣಗಳಿಗೆ ಕಾರಣವಾದ ಗುಪ್ತದಳ ವೈಫಲ್ಯ, ಮನ್ನೆಚ್ಚರಿಕೆಯ ವೈಫಲ್ಯಗಳ ವರದಿಗಳು ಎನ್‍.ಡಿ.ಎ.ಸರ್ಕಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.
    ಆಗ್ರಾ ಶೃಂಗಸಭೆ:
  • ಆಗ್ರಾ ಶೃಂಗಸಭೆಯು ಭಾರತ ಮತ್ತು ಪಾಕಿಸ್ತಾನ ನಡುವಿನ ಐತಿಹಾಸಿಕ ಎರಡು-ದಿನದ ಶೃಂಗಸಭೆ ಸಭೆಯಾಗಿತ್ತು. ಆಗ್ರಾದಲ್ಲಿ ವಾಜಪೇಯಿ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ರನ್ನು ಎರಡು ನೆರೆಹೊರೆಯವರ ನಡುವಿನ ಮೊದಲ ಶೃಂಗಸಭೆ. ಇದು 14-16 ಜುಲೈ 2001 ರಿಂದ ಕೊನೆಗೊಂಡಿತು. ಭಾರತ ಮತ್ತು ಪಾಕಿಸ್ತಾನದ ನಡುವಿನ ದೀರ್ಘಕಾಲೀನ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಇದು ಆಯೋಜಿಸಲ್ಪಟ್ಟಿತು. ಪ್ರಧಾನಿ ಶರೀಷರನ್ನು ಪದಚ್ಯತಗೊಳಿಸಿ ತಾತ್ಕಾಇಕ ಅಧ್ಯಕ್ಷರಾಗಿದ್ದ ಮುಷರಪ್‍ರನ್ನು ಯಾವ ದೇಶವೂ ಮಾನ್ಯತೆ ಕೊಟ್ಟಿರಲಿಲ್ಲ. ಈ ಸಭೆಯಲ್ಲಿ, ಪರಮಾಣು ಶಸ್ತ್ರಾಸ್ತ್ರಗಳನ್ನು ತೀವ್ರವಾಗಿ ಕಡಿಮೆಗೊಳಿಸಲು ಮತ್ತು ಕಾಶ್ಮೀರ ವಿವಾದ ಮತ್ತು ಇತರ ಗಡಿ ಭಯೋತ್ಪಾದನೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಪ್ರಸ್ತಾವನೆಯನ್ನು ಮಾಡಲಾಗಿತ್ತು. ಆದಾಗ್ಯೂ, ಮಾತುಕತೆಗಳು ಮುರಿದುಬಿತ್ತು ಮತ್ತು ಪ್ರಕ್ರಿಯೆಯು ಕುಸಿಯಿತು. ಚರ್ಚಾವಿಷಯದಲ್ಲಿ ಸಾಕಷ್ಟು ಪೂರ್ವಸಿದ್ಧತೆ ಇರಲಿಲ್ಲ. ಯಾವಯ ಹೀಗಾಗಿ ಆಗ್ರಾ ಒಪ್ಪಂದವು ಸಹಿ ಮಾಡಲು ಆಗಲಿಲ್ಲ.
  • ಅಮೇರಿಕಾದ 2001 ಡಿ 11 ಸೆಪ್ಟೆಂಬರ್ ನಲ್ಲಿ ವಿಶ್ವ ವ್ಯಾಪಾರ ಕೇಂದ್ರ ಸಂಕೀರ್ಣದಲ್ಲಿರುವ ಕಟ್ಟಡಗಳ ಮೇಲಿನ ಭಯೋತ್ಪಾದಕ ,ದಾಳಿಯ ನಂತರ, ಅಮೇರಿಕಾ ಯುನೈಟೆಡ್ ಸ್ಟೇಟ್ಸ್ 1998 ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಹಾಕಿದ್ದ ನಿರ್ಬಂಧಗಳನ್ನು ಹಿಂತೆಗೆದುಕೊಂಡಿತು. ಈ ಕ್ರಮವನ್ನು ಭಯೋತ್ಪಾದನೆಯ ಮೇಲೆ ಯುದ್ಧಕ್ಕಾಗಿ ತಮಗೆ ಬೆಂಬಲ ನೀಡಿದ್ದಕ್ಕೆ ಪ್ರತಿಫಲವೆಂದು ಹೇಳಲಾಯಿತು. ಭಾರತ ಮತ್ತು ಪಾಕಿಸ್ತಾನದ ನಡುವೆ ಸನ್ನಿಹಿತವಾದ ಯುದ್ಧದ ಉದ್ವಿಗ್ನತೆಯು ಹೆಚ್ಚಿತು. ಮತ್ತೊಮ್ಮೆ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನದ ಮಿಲಿಟರಿ ಬೀಡುಗಳ ಮೇಲೆ ಭಾರತೀಯ ಭಾರಿ ಗುಂಡಿನ ಧಾಳಿಯ ಮೂಲಕ ಹೆಚ್ಚಳವಾಯಿತು ನಂತರದಲ್ಲಿ ನಡೆದ ಭಾರತೀಯ ಸಂಸತ್ತಿನ ದಾಳಿಯ ಮತ್ತು 2001-02 ಭಾರತ-ಪಾಕಿಸ್ತಾನದ ಸಂಬಂಧದ ಬಿರುಕುಗಳು ಹೆಚ್ಚಿದವು.

ಭಾರತದ ಸಂಸತ್ತು ಮೇಲೆ ಭಯೋತ್ಪಾದಕರ ದಾಳಿ

  • ದಿ.13 ಡಿಸೆಂಬರ್ 2001 ರಂದು, ಐದು ಭಯೋತ್ಪಾದಕರು ಸಂಸತ್ ಭವನವನ್ನು 'ಗೃಹ ಸಚಿವಾಲಯ ಮತ್ತು ಪಾರ್ಲಿಮೆಂಟಿನ ನಕಲಿ ಫಲಕವನ್ನು' ಹಾಕಿಕೊಂಡ ಕಾರಿನಲ್ಲಿ ಸಂಸತ್ ಭವನದ ಆವರಣದ ಒಳಗೆ ಸಚಿವರು ಹೋಗುವ ವಿಶೇಷ ಪ್ರವೇಶ ದ್ವಾರದ ಮೂಲಕ ನುಸುಳಿದರು. ಈ ಘಟನೆಗೆ 40 ನಿಮಿಷಗಳ ಮುಂಚೆ ರಾಜ್ಯಸಭೆ ಮತ್ತು ಲೋಕಸಭೆ ಮುಂದೂಡಲ್ಪಟ್ಟಿತ್ತು., ಗೃಹ ಸಚಿವ ಎಲ್.ಕೆ.ಆಡ್ವಾಣಿ ಮತ್ತು ರಕ್ಷಣಾ ಸಚಿವ ಹರಿನ್ ಪಾಠಕ್ ಅವರಂಥ ಹಲವು ಸಂಸತ್ ಸದಸ್ಯರು ಮತ್ತು ಸರ್ಕಾರಿ ಅಧಿಕಾರಿಗಳು ಈ ದಾಳಿಯ ಸಮಯದಲ್ಲಿ ಕಟ್ಟಡ ಒಳಗಡೆ ಇನ್ನೂ ಅಲ್ಲಿಯೇ ಇದ್ದರು. ಪ್ರಮುಖ ರಾಜಕಾರಣಿಗಳು ಸೇರಿದಂತೆ 100 ಕ್ಕಿಂತ ಹೆಚ್ಚು ಜನರು ಆ ಸಮಯದಲ್ಲಿ ಸಂಸತ್ತಿನ ಕಟ್ಟಡದಲ್ಲಿದ್ದರು. ಬಂದೂಕುಗಾರರು ಅವರು ಓಡಿಸುತ್ತಿದ್ದ ಕಾರಿನ ಮೇಲೆ ಸಚಿವರ ನಕಲಿ ಗುರುತಿನ ಸ್ಟಿಕರ್ ಅನ್ನು ಬಳಸಿದ್ದರು. ಹೀಗೆ ಸಂಸತ್ತಿನ ಸಂಕೀರ್ಣದ ಸುತ್ತ ನಿಯೋಜಿಸಲ್ಪಟ್ಟ ಭದ್ರತೆಯನ್ನು ಉಲ್ಲಂಘಿಸಿ ಭೇದಿಸಿದರು. ಭಯೋತ್ಪಾದಕರು ಏಕೆ47 ರೈಫಲ್ಸ್, ಗ್ರೆನೇಡ್ ಲಾಂಚರ್, ಪಿಸ್ತೂಲ್ ಮತ್ತು ಗ್ರೆನೇಡ್ಗಳನ್ನು ಹೊಂದಿದ್ದರು.
  • ಬಂದೂಕುಗಾರರು ತಮ್ಮ ವಾಹನವನ್ನು ಭಾರತೀಯ ಉಪಾಧ್ಯಕ್ಷ ಕೃಷ್ಣ ಕಾಂತ್ (ಆ ಸಮಯದಲ್ಲಿ ಕಟ್ಟಡದಲ್ಲಿದ್ದವರು)ಅವರ ಕಾರಿನ ಎದುರು ಓಡಿಸುವಾಗ ರಕ್ಷಕರ ಕಾರಿಗೆ ಡಿಕ್ಕಿಯಾಯಿತು, ಭಯೋತ್ಪಾದಕರು ಹೊರಬಂದು ಗುಂಡಿನ ಧಾಳಿ ಪ್ರಾರಂಭಿಸಿದರು. ಉಪಾಧ್ಯಕ್ಷರ ಗಾರ್ಡ್ ಮತ್ತು ಭದ್ರತಾ ಸಿಬ್ಬಂದಿಗಳು ಪ್ರತಿಧಾಳಿ ಮಾಡಿದರು. ನಂತರ ಪ್ರಾಕಾರದ ದ್ವಾರಗಳನ್ನು ಮುಚ್ಚಲು ಆರಂಭಿಸಿದರು. 2001 ರ ನವೆಂಬರ್ನಲ್ಲಿ ಶ್ರೀನಗರದ ಕಾಶ್ಮೀರ ವಿಧಾನಸಭೆಯಲ್ಲಿ ಇದೇ ತರಹದ ದಾಳಿ ನಡೆಸಿತ್ತು. ಅಲ್ಲಿ 38 ಜನರು ಕೊಲ್ಲಲ್ಪಟ್ಟಿದ್ದರು. ಧಾಳಿಕೋರರು ಪಾಕಿಸ್ತಾನದಿಂದ ಸೂಚನೆಗಳನ್ನು ಪಡೆದುಕೊಂಡಿದ್ದಾರೆ ಮತ್ತು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಸಂಸ್ಥೆಯ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
    ಬಲಿಯಾದವರು:
  • ಕೇಂದ್ರ ರಿಸರ್ವ್ ಪೋಲಿಸ್ನ ಕಾನ್ಸ್ಟೇಬಲ್ ಕಮಲೇಶ್ ಕುಮಾರಿ ಅವರು ಭಯೋತ್ಪಾದಕರನ್ನು ಪತ್ತೆ ಹಚ್ಚಿದವರಲ್ಲಿ ಮೊದಲಿಗರಾಗಿದ್ದರು ಅವರು ಗಾರ್ಡುಗಳಿಗೆ ಎಚ್ಚರಿಕೆಯ ಕೂಗನ್ನು ಕೂಗಿದಾಗ ಅವರನ್ನು ಗುಂಡು ಹಾರಿಸಿ ಕೊಂದರು. ಅವರು ಸ್ಥಳದಲ್ಲೇ ನಿಧನರಾದರು. ಒಬ್ಬ ಗುಂಡು ಹಾರಿಸುವ ಧಾಳಿಕೋರನ ಆತ್ಮಹತ್ಯೆ ಉಡುಪು ಅವನು ಸತ್ತಾಗ ಸ್ಫೋಟಿಸಿತು; ಇತರ ನಾಲ್ವರು ಬಂದೂಕು ಧಾರರು ಕೂಡ ಕೊಲ್ಲಲ್ಪಟ್ಟರು. ಐದು ಪೊಲೀಸ್ ಅಧಿಕಾರಿಗಳು, ಪಾರ್ಲಿಮೆಂಟ್ ಭದ್ರತಾ ಸಿಬ್ಬಂದಿ ಮತ್ತು ಒಬ್ಬ ತೋಟಗಾರರನು ಕೊಲ್ಲಲ್ಪಟ್ಟರು. 18 ಮಂದಿ ಗಾಯಗೊಂಡರು. ಮಂತ್ರಿಗಳು ಮತ್ತು ಸಂಸದರು ಹಾನಿಗೊಳಗಾಗದೆ ತಪ್ಪಿಸಿಕೊಂಡರು. ದಾಳಿಯಲ್ಲಿ ಒಟ್ಟು 14 ಸಾವುಗಳು ಮತ್ತು ಕನಿಷ್ಠ 22 ಮಂದಿ ಗಾಯಗೊಂಡಿದ್ದರು.
  • ಸಂಚುಕೋರರು
  • ಐದು ಭಯೋತ್ಪಾದಕರು ಈ ದಾಳಿಯನ್ನು ನಡೆಸಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಹಝಾ, ಹೈದರ್ ಅಲಿಯಾಸ್ ತುಫೈಲ್, ರಾಣಾ, ರಣವಿಜಯ್ ಮತ್ತು ಮೊಹಮ್ಮದ್ ಅವರು ಲಷ್ಕರ್-ಇ-ತೊಯ್ಬಾ ಸದಸ್ಯರಾಗಿದ್ದರು. ದಾಳಿಯಲ್ಲಿ ಲಷ್ಕರ್-ಇ-ತೊಯ್ಬಾ ಮತ್ತು ಜೈಶ್-ಇ-ಮೊಹಮ್ಮದ್ ಪಾಲ್ಗೊಂಡಿದ್ದಾಗಿ ಭಾರತೀಯ ಸರ್ಕಾರವು ಆರಂಭದಲ್ಲಿ ಆರೋಪಿಸಿತು. ಆದಾಗ್ಯೂ, ಈ ಘಟನೆಯಲ್ಲಿ ಯಾವುದೇ ಒಳಗೊಳ್ಳುವಿಕೆಯನ್ನು ಲಾಶ್-ಇ-ತೊಯ್ಬಾ ನಿರಾಕರಿಸಿತು. ನವೆಂಬರ್ 2002 ರಲ್ಲಿ, ನಾಲ್ಕು ಜೆಎಂ ಸದಸ್ಯರನ್ನು ಭಾರತೀಯ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದರು. ಈ ನಾಲ್ವರು ನಾಲ್ವರು ಅಫೀಸನ್ / ನವಜೋತ್ ಸಂಧು, ಶೌಕತ್ ಹುಸೈನ್ ಅವರ ಪತ್ನಿ (ಆರೋಪಿಯ ಪೈಕಿ ಒಬ್ಬರು) ಪಿತೂರಿಯ ಜ್ಞಾನವನ್ನು ಮರೆಮಾಚುವ ಸಣ್ಣ ಆರೋಪವನ್ನು ತಪ್ಪಿತಸ್ಥರೆಂದು ಕಂಡುಬಂದರೂ, ಈ ಘಟನೆಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುವ ಅಪರಾಧವೆಂದು ಕಂಡುಬಂತು. ಆರೋಪಿ, ಅಫ್ಜಲ್ ಗುರುವಿಗೆ ಈ ಘಟನೆಗೆ ಮರಣದಂಡನೆ ವಿಧಿಸಲಾಯಿತು.

ಗಡಿಯಲ್ಲಿ ಮಿಲಿಟರಿ ಜಮಾವಣೆ

  • ಮಿಲಿಟರಿ ಮುಖಾಮುಖಿ:-
  • 2001-2002ರ ಭಾರತ-ಪಾಕಿಸ್ತಾನದ ಬಿಕ್ಕಟ್ಟು ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಮುಖಾಮುಖಿಗೆ ಕಾರಣವಾಯಿತು. 2001 ರ ಡಿಸೆಂಬರ್ 13 ರಂದು ಭಾರತೀಯ ಸಂಸತ್ತಿನ ಮೇಲೆ. ಮತ್ತು ಕಾಶ್ಮೀರದ ಶಾಸನಸಭೆಯ ಮೇಲೆ ದಿ.1 ಅಕ್ಟೋಬರ್ 2001 ರಂದು ಭಯೋತ್ಪಾದಕ ದಾಳಿಯನ್ನು ಪ್ರತಿಭಟಿಸಲು ಭಾರತವು ಗಡಿಯಲ್ಲಿ ಮಿಲಿಟರಿ ನಿಯೋಜನೆಯನ್ನು ಆರಂಭಿಸಿತು. ಲಷ್ಕರ್-ಇ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ವಿರುದ್ಧ ಹೋರಾಡಿದ ಎರಡು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಭಾರತದ ಆಡಳಿತದ ಕಾಶ್ಮೀರದಲ್ಲಿ ಈ ದಾಳಿಯನ್ನು ನಡೆಸಿದವು ಎಂದು ಭಾರತ ಹೇಳಿದೆ, ಪಾಕಿಸ್ತಾನದ ಐಎಸ್ಐ - ಪಾಕಿಸ್ತಾನ ನಿರಾಕರಿಸಿದೆ.
  • ಡಿಸೆಂಬರ್ ಕೊನೆಯಲ್ಲಿ, ಎರಡೂ ದೇಶಗಳು ಪರಸ್ಪರರ ಗಡಿಪ್ರದೇಶದ ಹತ್ತಿರಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸ್ಥಳಾಂತರಿಸಿದವು, ಮತ್ತು ಕಾಶ್ಮೀರದಲ್ಲಿ ಮಾರ್ಟರ್ ಮತ್ತು ಫಿರಂಗಿ ಹಾರಿಸಿದ ವರದಿಯಾಯಿತು. 2002 ರ ಜನವರಿಯ ವೇಳೆಗೆ ಪಾಕಿಸ್ತಾನದ ಗಡಿಯಲ್ಲಿ ಕಾಶ್ಮೀರದ ನಿಯಂತ್ರಣ ರೇಖೆಯುದ್ದಕ್ಕೂ 500,000 ಸೈನಿಕರನ್ನು ಜಮಾಯಿಸಿತು. ಮತ್ತು ಮೂರು ಶಸ್ತ್ರಸಜ್ಜಿತ ವಿಭಾಗಗಳನ್ನು ಭಾರತ ಒಟ್ಟುಗೂಡಿಸಿತು. ಇದೇ ರೀತಿ ಪಾಕಿಸ್ತಾನವು 300,000 ಸೈನಿಕರನ್ನು ಸಜ್ಜುಗೊಳಿಸಿತು.
  • ಯುದ್ಧ ನಿರಾಕರಣೆ ಮತ್ತು ರಾಜತಾಂತ್ರಿಕ ಕ್ರಮ:
  • ಭಾರತದ ಗಡಿಯಲ್ಲಿ ಸೈನ್ಯ ಜಮಾವಣೆ ಮತ್ತು ಪ್ರಕ್ಷುಬ್ಧ ಪರಿಸ್ಥಿತಿಯು ಎರಡು ಅಣು ಅಸ್ತ್ರ ಸಜ್ಜತ ದೇಶಗಳು ಉದ್ವಿಗ್ನಗೊಂಡಿದ್ದು ಅಣುಯುದ್ಧವಾಗುವುದೇ ಎಂಬ ಅನುಮಾನಕ್ಕೆ ಎಡೆಕೊಟ್ಟಿತು. ಭಾರತದ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ 2002 ಜೂನ್ 5 ರಂದು ಭಾರತ ಅಣು ಶಸ್ತ್ರಾಸ್ತ್ರಗಳನ್ನು ಮೊದಲ ಬಾರಿಗೆ ಬಳಸುವುದಿಲ್ಲ ಎಂದು ಹೇಳಿದರು, ಮತ್ತು ಜೂನ್ 5 ರಂದು ಮುಷರಫ್ ಅವರು ಮೊದಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ಪಾಕಿಸ್ತಾನದ ಹಕ್ಕನ್ನು ತ್ಯಜಿಸುವುದಿಲ್ಲ ಎಂದು ಹೇಳಿದರು.
  • ಭಾರತವು ಭಾರತದ ಉನ್ನತ ಕಮಿಷನರ್ ಮತ್ತು ಪಾಕಿಸ್ತಾನದ ನಾಗರಿಕ ವಿಮಾನಗಳನ್ನು ನಿಷೇಧಿಸಿ ತನ್ನ ರಾಜತಾಂತ್ರಿಕ ಆಕ್ರಮಣವನ್ನು ಆರಂಭಿಸಿತು. ಭಯೋತ್ಪಾದನೆಯನ್ನು ಪಾಕಿಸ್ತಾನದಿಂದ ಹೊರಹಾಕುವ ಬಗ್ಗೆ ಭರವಸೆಯಿಡುವ ಬಗೆಗೆ 12 ಜನವರಿ ರಂದು ಮುಷರಫ್ ಭಾಷಣ ಮಾಡಿದ ನಂತರ ಉದ್ವಿಗ್ನತೆಗಳು ಭಾಗಶಃ ಕುಗ್ಗಿತು. ಮುಷರಫ್ ಅವರ ವಾಗ್ದಾನಗಳ ಗಂಭೀರತೆಯ ಬಗ್ಗೆ ಸಂದೇಹವಾದರೂ, ಭಾರತೀಯ ಪ್ರಧಾನಿ ಜನವರಿ 14 ರಂದು ಯೋಜಿಸಲಾದ ಮಿಲಿಟರಿ ದಾಳಿಯನ್ನು ಕೈಗೊಳ್ಳಬಾರದೆಂದು ನಿರ್ಧರಿಸಿದರು.

ಗೋಧ್ರಾ ರೈಲು ಅಗ್ನಿದುರಂತ - 2002 ರ ಗುಜರಾತ್ ಗಲಭೆಗಳು

ಭಾರತ ಗಣರಾಜ್ಯದ ಇತಿಹಾಸ 
ಗೋದ್ರಾ ರೈಲು ನಿಲ್ದಾಣ
  • ಗೋಧ್ರಾ ರೈಲು ಅಗ್ನಿ ದುರಂತ 27 ಫೆಬ್ರವರಿ 2002 ರ ಬೆಳಿಗ್ಗೆ ಸಂಭವಿಸಿದ ಒಂದು ಘಟನೆಯಾಗಿದೆ., ಭಾರತದ ರಾಜ್ಯವಾದ ಗೋಧ್ರಾ ರೈಲು ನಿಲ್ದಾಣದ ಸಮೀಪವಿರುವ ಸಬರ್ಮತಿ ಎಕ್ಸ್ಪ್ರೆಸ್ ರೈಲಿನೊಳಗೆ 59 ಜನರು ಸಾವನ್ನಪ್ಪಿದರು. ವಿವಾದಿತ ಬಾಬರಿ ಮಸೀದಿ ಸೈಟ್ ನಲ್ಲಿ ನಡೆದ ಧಾರ್ಮಿಕ ಸಮಾರಂಭದ ನಂತರ ಅಯೋಧ್ಯಾ ನಗರದಿಂದ ಹಿಂದಿರುಗಿದ ಹಿಂದೂ ಯಾತ್ರಾರ್ಥಿಗಳು ಬಲಿಯಾದವರು. ಪ್ರಕರಣದ ವಿವರಗಳನ್ನು ಕಳೆದ 6 ವರ್ಷಗಳ ಕಾಲ ರೈಲು ಸುಡುವಿಕೆಯ ತನಿಖೆ ನಡೆಸಲು ಗುಜರಾತ್ ಸರ್ಕಾರವು ನೇಮಿಸಿದ ಆಯೋಗವು 1,000 ರಿಂದ 2,000 ಜನರ ಗುಂಪೊಂದು ಬೆಂಕಿ ಹಚ್ಚಿದೆ ಎಂದು ತೀರ್ಮಾನಿಸಿತು. ಕೇಂದ್ರೀಯ ಸರ್ಕಾರದಿಂದ ನೇಮಕಗೊಂಡ ಕಮೀಶನ್, (ಅನಂತರ ಅಸಂವಿಧಾನಿಕ ನೇಮಕ ಎದಿಂದ್ದಆಯೋಗವು) ಬೆಂಕಿ ಆಕಸ್ಮಿಕ ಅಪಘಾತ ಎಂದು ತಿಳಿಸಿತು. ಘಟನೆಗಾಗಿ ನ್ಯಾಯಾಲಯವು 31 ಮುಸ್ಲಿಮರನ್ನು ಪಿತೂರಿ ಅಪರಾಧಕ್ಕಾಗಿ ಶಿಕ್ಷೆ ಮಾಡಿತು. ಈ ಅಪರಾಧವನ್ನು ಗುಜರಾತ್ ಹೈಕೋರ್ಟ್ ನಂತರ ಎತ್ತಿಹಿಡಿಯಿತು. ಆದರೂ ಬೆಂಕಿಯ ನಿಜವಾದ ಕಾರಣಗಳು ಇನ್ನೂ ನಿಸ್ಸಂಶಯವಾಗಿ ಸಾಬೀತಾಗಿಲ್ಲ. 2002 ರಲ್ಲಿ, ಆದ ಗುಜರಾತಿನ ಈ ಗೋಧ್ರಾದಲ್ಲಿ ರೈಲಿನ ದುರಂತದಲ್ಲಿ ಅಯೋಧ್ಯಾದಿಂದ ಮರಳುತ್ತಿದ್ದ 59 ಮಂದಿ ಹಿಂದೂ ಯಾತ್ರಿಗಳು. ಮರಣ ಹೊಂದಿದ್ದಲ್ಲದೆ, ಇದು 2002 ರ ಗುಜರಾತ್ ಹಿಂಸಾಚಾರವನ್ನು ಹುಟ್ಟುಹಾಕಿತು, ಈ ಹಿಂಸಾಚಾರವು 790 ಮುಸ್ಲಿಮರು ಮತ್ತು 254 ಹಿಂದೂಗಳ ಸಾವಿಗೆ ಕಾರಣವಾಯಿತು ಮತ್ತು 223 ಜನರು ಕಾಣೆಯಾದರು ಎಂದು ವರದಿಯಾಗಿದೆ.

J

ಆಡಳಿತದ ಪರಿಣಾಮಗಳು

ಭಾರತ ಗಣರಾಜ್ಯದ ಇತಿಹಾಸ 
ಸುವರ್ಣ ಚತುಷ್ಪದ ಹೆದ್ದಾರಿ ವಿಭಾಗ. ಈ ಯೋಜನೆಯನ್ನು 2001 ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಪ್ರಾರಂಭಿಸಿತು.- Nh76
  • ಛತ್ತೀಸ್‌ಘಡ್, ಝಾರ್ಕಂಡ್ ಮತ್ತು ಉತ್ತರಾಖಂಡ (ಮೂಲತಃ ಉತ್ತರಾಂಚಲ್) ಎಂಬ ಮೂರು ಹೊಸ ರಾಜ್ಯಗಳು ನವೆಂಬರ್ 2000 ರಲ್ಲಿ ರಚನೆಯಾದವು.
  • 2003 ರ ಉದ್ದಕ್ಕೂ, ಭಾರತದ ಆರ್ಥಿಕ ಪ್ರಗತಿ, ರಾಜಕೀಯ ಸ್ಥಿರತೆ ಕೊಟ್ಟರೂ ಸರ್ಕಾರದ ಜನಪ್ರಿಯತೆ ಹೆಚ್ಚದಿರುವುದು ೨೦೦೪ರ ಚುನಾವಣೆಯಲ್ಲಿ ಕಂಡುಬಮತು. ಪಾಕಿಸ್ತಾನದೊಂದಿಗೆ ಪುನರುಜ್ಜೀವಿತ ಶಾಂತಿ ಉಪಕ್ರಮಗಳು ಫಲನೀಡಲಿಲ್ಲ.. ನೇರವಾದ ಏರ್ ಲಿಂಕ್ ಗಳನ್ನು ಪುನರಾರಂಭ ಮತ್ತು ಓವರ್ಫ್ ಪ್ಲೈಟ್ಸ್ಗಳನ್ನು ಅನುಮತಿಸಲು ಒಪ್ಪಿಕೊಂಡವು ಮತ್ತು ಭಾರತೀಯ ಸರ್ಕಾರ ಮತ್ತು ಮಧ್ಯಮ ಕಾಶ್ಮೀರ ಪ್ರತ್ಯೇಕತಾವಾದಿಗಳ ನಡುವೆ ಒಂದು ಸಭೆ ನಡೆಯಿತು.
  • ಸುವರ್ಣ ಚತುಷ್ಪದ ಹೆದ್ದಾರಿ (ಗೋಲ್ಡನ್ ಕ್ವಾಡ್ರಿಲ್ಯಾಟರಲ್ )ಯೋಜನೆಯು ಭಾರತದ ಮೂಲೆಗಳನ್ನು ಆಧುನಿಕ ಹೆದ್ದಾರಿಗಳ ಜಾಲದೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಸುವರ್ಣ ಚತುಷ್ಪದ ಹೆದ್ದಾರಿ ವಿಭಾಗದ ಯೋಜನೆಯನ್ನು 2001 ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಪ್ರಾರಂಭಿಸಿತು. ಹದ್ದಾರಿಯ ಮುಖ್ಯ ಭಾರತೀಯ ಇಂಜಿನಿಯರ್ (ಐಇಎಸ್) ಅಧಿಕಾರಿ, ಸತ್ಯೇಂದ್ರ ದುಬೆ ಈ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಪ್ರಾಜೆಕ್ಟ್ ನಿರ್ದೇಶಕರಾಗಿದ್ದರು. ಸುವರ್ಣ ಚತುಷ್ಪದ ಹೆದ್ದಾರಿ ನಿರ್ಮಾಣ ಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ದೂರಿದ ನಂತರ ಅವರು ಬಿಹಾರದ ಗಯಾದಲ್ಲಿ ಕೊಲೆಯಾದರು. ಇದು ಮಾದ್ಯಮದಲ್ಲಿ ದೊಡ್ಡ ಸುದ್ದಿಯಾಯಿತು. ಇದು ಸರ್ಕಾರದ ಬಗೆಗೆ ಅಸಮಾಧಾನ ತಂದಿತು.

ಕಾಂಗ್ರೆಸ್ ಆಡಳಿತದ ಪನರ್‍ಸ್ಥಾಪನೆ

ಭಾರತ ಗಣರಾಜ್ಯದ ಇತಿಹಾಸ 
ಎ.ಪಿ.ಜೆ.ಅಬ್ದುಲ್ ಕಲಾಂ - 2008 ರಲ್ಲಿ
  • 2004 - 2014:
ಭಾರತ ಗಣರಾಜ್ಯದ ಇತಿಹಾಸ 
ಮನಮೋಹನ ಸಿಂಗ್ 2009
ಭಾರತ ಗಣರಾಜ್ಯದ ಇತಿಹಾಸ 
ಪ್ರತಿಭಾ ಪಾಟೀಲ್- (2012-02-27)
ಭಾರತ ಗಣರಾಜ್ಯದ ಇತಿಹಾಸ 
2010
ಭಾರತ ಗಣರಾಜ್ಯದ ಇತಿಹಾಸ 
ಯುನೈಟೆಡ್ ಸ್ಟೇಟ್ಸ್ನ U.S. ಪ್ರೆಸಿಡೆಂಟ್ ಜಾರ್ಜ್ ಡಬ್ಲ್ಯೂ.ಬುಷ್ ಮತ್ತು ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ ಮಾರ್ಚ್ 2, 2006 ರಂದು, ಭಾರತ- ಸಂಯುಕ್ತ ಸಂಸ್ಥಾನದ ನಾಗರಿಕ ಪರಮಾಣು ಒಪ್ಪಂದ; ಭೇಟಿ ನೀಡುವ ಮೂಲಕ ಹೊಸ ದೆಹಲಿಯಲ್ಲಿ ಹಸ್ತಲಾಘವ ಮಾಡಿಕೊಂಡರು.
  • 13 ನೇ ಪ್ರಧಾನ ಮಂತ್ರಿ:: ಮನಮೋಹನ್ ಸಿಂಗ್::(ಜನನ 1932) ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್;(ಯುಪಿಎ) ದಿ.22 ಮೇ 2004 ರಿಂದ ಮೇ 22, 2009;+ 26 ಮೇ 2014 ರ ವರೆಗೆ; 10 ವರ್ಷಗಳು, 4 ದಿನಗಳು.
  • 11 ನೇ ಅಧ್ಯಕ್ಷರು::ಎ.ಪಿ.ಜೆ.ಅಬ್ದುಲ್ ಕಲಾಂ:(1931-2015); ದಿ.25 ಜುಲೈ2002 ರಿಂದ 2002 25 ಜುಲೈ 2007 ರ ವರೆಗೆ 60 ತಿಂಗಳು.
  • 12 ನೇ ಅಧ್ಯಕ್ಷರು:: ಪ್ರತಿಭಾ ಪಾಟೀಲ್ ;(1934-) (ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್). ದಿ.25 ಜುಲೈ 2007 ರಿಂದ 25 ಜುಲೈ 2012 ರ ವರೆಗೆ 60 ತಿಂಗಳು.
  • 13 ನೇ ಅಧ್ಯಕ್ಷರು::ಪ್ರಣಬ್ ಮುಖರ್ಜಿ;(1935-) (ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ದಿ.25 ಜುಲೈ 2012 ರಿಂದ 25 ಜುಲೈ 2017 ರ ವರೆಗೆ, 60 ತಿಂಗಳು.
  • ಜನವರಿ 2004 ರಲ್ಲಿ ಪ್ರಧಾನ ಮಂತ್ರಿ ವಾಜಪೇಯಿ ಯವರು ಅವಧಿಗೆ ಕೆಲವು ದಿನ ಮೊದಲೇ ಲೋಕಸಭೆಯನ್ನು ವಿಸರ್ಜಿಸಿ ಸಾರ್ವತ್ರಿಕ ಚುನಾವಣೆಗಳನ್ನು ಶಿಫಾರಸು ಮಾಡಿದರು. ಲೋಕಸಭೆಯ ಚುನಾವಣೆಗಳು ಭಾರತದಲ್ಲಿ ಏಪ್ರಿಲ್ 20 ಮತ್ತು 10 ಮೇ 2004 ರ ನಡುವೆ ನಾಲ್ಕು ಹಂತಗಳಲ್ಲಿ ನಡೆಯಿತು. 14 ನೇ ಲೋಕಸಭೆಯ 543 ಸದಸ್ಯರನ್ನು ಆಯ್ಕೆ ಮಾಡಲು 670 ಮಿಲಿಯನ್ ಜನರಿಗೆ ಮತದಾನ ಮಾಡುವ ಅರ್ಹತೆ ಇತ್ತು. ಲೋಕಸಭೆ ಭಾರತದ ಸಂಸತ್ತಿನ ನೇರವಾಗಿ ಚುನಾಯಿತ ಸದಸ್ಯರ ಕೆಳಮನೆಯಾಗಿದ್ದು, 543 ರಲ್ಲಿ 335 ಕ್ಕೂ ಹೆಚ್ಚು ಸದಸ್ಯರನ್ನು ಕಾಂಗ್ರೆಸ್ ಪಕ್ಷದ ಮಿತ್ರರ ಸಹಾಯದಿಂದ ಒಟ್ಟುಗೂಡಿಸಲು ಸಾಧ್ಯವಾಯಿತು. ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಕೇರಳ ಕಾಂಗ್ರೆಸ್ (ಕೆಸಿ)ಹೊರಗಿನಿಂದ ಬೆಂಬಲಿಸಿದರು.
  • 2004 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಮೈತ್ರಿ ಅಚ್ಚರಿ ಗೆಲುವು ಸಾಧಿಸಿತು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪತ್ನಿಯಾಗಿದ್ದ (ವಿಧವೆ) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿಯಾಗಲು ಇಷ್ಟಪಡದೆ, ಆರ್ಥಶಾಸ್ತ್ರ ತಜ್ಜ ಮನಮೋಹನ್ ಸಿಂಗ್ಜ್‍ವರನ್ನು ಪ್ರಧಾನ ಮಂತ್ರಿಯಾಗಲು ಶಿಫಾರಸು ಮಾಡಿದರು. ಕಾಂಗ್ರೆಸ್ ಸಮಾಜವಾದಿ ಮತ್ತು ಪ್ರಾದೇಶಿಕ ಪಕ್ಷಗಳೊಂದಿಗೆ ಯುನೈಟೆಡ್ ಪ್ರಗತಿಶೀಲ ಒಕ್ಕೂಟ (ಯುಪಿಎ- United Progressive Alliance) ಎಂಬ ಒಕ್ಕೂಟವನ್ನು ರೂಪಿಸಿತು ಮತ್ತು ಭಾರತದ ಕಮ್ಯುನಿಸ್ಟ್ ಪಕ್ಷಗಳ ಹೊರಗಿನ ಬೆಂಬಲವನ್ನು ಪಡೆದುಕೊಂಡಿತು. ಭಾರತದ ಅತ್ಯಂತ ಶಕ್ತಿಶಾಲಿ ಕಛೇರಿಯನ್ನು ಹಿಡಿದಿಡಲು ಮನಮೋಹನ್ ಸಿಂಗ್ ಮೊದಲ ಸಿಖ್ ಮತ್ತು ಹಿಂದುವಲ್ಲದವರು ಪ್ರಧಾನಿಯಾದರು. ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಮಾಜವಾದಿ ಪಕ್ಷ (ಎಸ್ಪಿ), ಕೇರಳ ಕಾಂಗ್ರೆಸ್ (ಕೆಸಿ) ಮತ್ತು ಕಮ್ಯೂನಿಸ್ಟ್ ಪಕ್ಷಗಳು ಹೊರಗಿನಿಂದ ಬೆಂಬಲನೀಡಿದರು. ಸಮಾಜವಾದಿಗಳು ಮತ್ತು ಕಮ್ಯೂನಿಸ್ಟ್ ಪಕ್ಷಗಳು ಸ್ವಲ್ಪ ಸಮಯದವರೆಗೆ ಖಾಸಗೀಕರಣವನ್ನು ತಡೆಗಟ್ಟಿದರೂ, ಸಿಂಗ್ ಆರ್ಥಿಕ ಉದಾರೀಕರಣವನ್ನು ಮುಂದುವರಿಸಿದರು. [50] [51]
  • ಕಾಶ್ಮೀರ ಸಮಸ್ಯೆ:2004 ರ ಅಂತ್ಯದ ವೇಳೆಗೆ ಕಾಶ್ಮೀರದಿಂದ ಭಾರತ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲು ಆರಂಭಿಸಿತು. ಆ ನಂತರದ ವರ್ಷದ ಮಧ್ಯಭಾಗದಲ್ಲಿ, ಶ್ರೀನಗರ-ಮುಜಫರಾಬಾದ್ ಬಸ್ ಸೇವೆಯನ್ನು ಉದ್ಘಾಟಿಸಲಾಯಿತು, 60 ವರ್ಷಗಳ ನಂತರ ಭಾರತೀಯ-ಆಡಳಿತ ಮತ್ತು ಪಾಕಿಸ್ತಾನ ಆಡಳಿತದ ಕಾಶ್ಮೀರ ಪ್ರದೇಶದ ಜನರ ನಡುವೆ ಸಂಪರ್ಕ ನಡೆಸಲು ಪ್ರಾರಂಭಿಸಲಾಯಿತು. ಆದಾಗ್ಯೂ, ಮೇ 2006 ರಲ್ಲಿ, ಇಸ್ಲಾಮಿಕ್ ಉಗ್ರಗಾಮಿ ಉಗ್ರರು 35 ಹಿಂದೂಗಳನ್ನು ಭಾರತೀಯ ಆಡಳಿತದ ಕಾಶ್ಮೀರದಲ್ಲಿ ಹಲವಾರು ತಿಂಗಳುಗಳವರೆಗೆ ಕ್ರೂರ ದಾಳಿಗಳಲ್ಲಿ ಕೊಂದುಹಾಕಿದರು.
  • ಪ್ರಾಕೃತಿಕ ವಿಕೋಪ:2004 ರ ಹಿಂದೂ ಮಹಾಸಾಗರದ ಒಳಗಿನ ಭೂಕಂಪನ ಮತ್ತು ಸುನಾಮಿ ಭಾರತೀಯ ಕಡಲ ತೀರಗಳು ಮತ್ತು ದ್ವೀಪಗಳನ್ನು ಧ್ವಂಸಮಾಡಿತು, ಸುಮಾರು 18,000 ಜನರನ್ನು ಸಾಯಿಸಿ 650,000 ಜನರನ್ನು ಸ್ಥಳಾಂತರಿಸಲಾಯಿತು. ಇಂಡೋನೇಷಿಯಾದ ಕರಾವಳಿ ತೀರದ ಪ್ರಬಲ ಭೂ/ಸಮುದ್ರತಳದ ಭೂಕಂಪನದಿಂದ ಸುನಾಮಿ ಉಂಟಾಯಿತು. ನಂತರ ಮುಂಬೈನ ಅತಿವೃಷ್ಠಿ ಪ್ರವಾಹಗಳು 1,000 ಕ್ಕಿಂತಲೂ ಹೆಚ್ಚು ಜನರನ್ನು ಸಾವಿಗೀಡುಮಾಡಿತು, ಮತ್ತು ಕಾಶ್ಮೀರ ಭೂಕಂಪನದಲ್ಲಿ 79,000 ಜನರು ಸಾವಿಗೀಡಾದರು.. ಇಂತಹ ನೈಸರ್ಗಿಕ ವಿಪತ್ತುಗಳು ಉಪಖಂಡವನ್ನು ಆ ಮುಂದಿನ ವರ್ಷದಲ್ಲಿ ಹೊಡೆದವು.
    ಗ್ರಾಮೀಣ ಅಭಿವೃದ್ಧಿ ಸುಧಾರಣೆಗಳು:-
  • 2006 ರಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ ಸರ್ಕಾರವು ಭಾರತದ ಅತಿದೊಡ್ಡ ಗ್ರಾಮೀಣ ಉದ್ಯೋಗ ಯೋಜನೆಗಳನ್ನು ಪ್ರಾರಂಭಿಸಿತು. 60 ದಶಲಕ್ಷ ಕುಟುಂಬಗಳನ್ನು ಬಡತನದಿಂದ ಪಾರುಮಾಡುವ ಗುರಿ ಹೊಂದಿತ್ತು.

ಪರಮಾಣು ಸಹಕಾರ ಒಪ್ಪಂದ

  • ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್ ಅವರು ಮಾರ್ಚ್ 2006 ರಲ್ಲಿ ಭೇಟಿ ಮಾಡಿದರು. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಭಾರತವು ಒಂದು ಪ್ರಮುಖ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದವು. ಪರಮಾಣು ಒಪ್ಪಂದದ ಪ್ರಕಾರ, ಸಂಯುಕ್ತ ಸಂಸ್ಥಾನವು ನಾಗರಿಕ ಪರಮಾಣು ತಂತ್ರಜ್ಞಾನವನ್ನು ಭಾರತಕ್ಕೆ ಕೊಡುವುದು, ಆ ಪರಮಾಣು ಕಾರ್ಯಕ್ರಮದ ಹೆಚ್ಚಿನ ಪರಿಶೀಲನೆಗೆ ಅಮೆರಿಕಕ್ಕೆ ಅವಕಾಶವಿರುವುದು. ನಂತರ ಅಮೆರಿಕ ಸಂಯುಕ್ತ ಸಂಸ್ಥಾನವು 30 ವರ್ಷಗಳಲ್ಲಿ ಕಾಲ ಮೊದಲ ಬಾರಿಗೆ ತಮ್ಮ ಪರಮಾಣು ರಿಯಾಕ್ಟರುಗಳನ್ನು ಮತ್ತು ಇಂಧನವನ್ನು ಭಾರತವು ಖರೀದಿಸಲು, ಅದರ ವಿವಾದಾತ್ಮಕ ಕಾನೂನು ಅನುಮೋದಿಸಿತು.
  • ಜುಲೈ 2008 ರಲ್ಲಿ, ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್‍ನ ಎಡಪಂಥೀಯ ಪಕ್ಷಗಳು ಪರಮಾಣು ಒಪ್ಪಂದದ ಬಗ್ಗೆ ವಿರೋಧಿಸಿ, ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡವು. ನಂತರ ಸಂಸತ್ತಿನಲ್ಲಿ ಬಹುಮತ ಸಾಬೀತು ಮತಯಾಚನೆಯಲ್ಲಿ ವಿಶ್ವಾಸಮತವನ್ನು ಕಾಂಗ್ರೆಸ್ ಒಕ್ಕೂಟ ಉಳಿಸಿಕೊಂಡಿತು. ವಿಶ್ವಾಸ ಮತದಾನದ ನಂತರ, ಹಲವಾರು ಎಡಪಂಥೀಯ ಮತ್ತು ಪ್ರಾದೇಶಿಕ ಪಕ್ಷಗಳು ಸರ್ಕಾರವನ್ನು ವಿರೋಧಿಸಲು ಹೊಸ ಒಕ್ಕೂಟವನ್ನು ರೂಪಿಸಿಕೊಂಡವು, ಯುಪಿಎ ಭ್ರಷ್ಟಾಚಾರದಿಂದ ದೋಷಪೂರಿತವಾಗಿದೆ ಎಂದು ಹೇಳಿತು. ಮೂರು ತಿಂಗಳೊಳಗೆ, ಯು.ಎಸ್. / ಅಮೇರಿಕದ ಕಾಂಗ್ರೆಸ್ ಈ ಒಪ್ಪಂದದ ಅನುಮೋದನೆಯನ್ನು ಮಾಡಿದ ನಂತರ, ಜಾರ್ಜ್ ಡಬ್ಲ್ಯು.ಬುಷ್ ಭಾರತದ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದರು, ಇದು ದೆಹಲಿಯೊಂದಿಗೆ ಅಮೆರಿಕನ್ ಪರಮಾಣು ವ್ಯಾಪಾರಕ್ಕೆ ಮೂರು ದಶಕಗಳ ನಿಷೇಧವನ್ನು ಅಮೇರಿಕ ಕೊನೆಗೊಳಿಸಿತು.

ಭಾರತದ ಮೊದಲ ಮಹಿಳಾ ರಾಷ್ಟ್ರಾಧ್ಯಕ್ಷರು

  • ಪ್ರತಿಭಾ ಪಾಟೀಲ್ (ಪ್ರತಿಭಾ ದೇವಿಸಿಂಗ್ ಪಾಟೀಲ್ )ಅವರು 2007 ರಲ್ಲಿ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದಾಗ ಭಾರತ ತನ್ನ ಮೊದಲ ಮಹಿಳಾ ರಾಷ್ಟ್ರಪತಿಯನ್ನು ಪಡೆದುಕೊಂಡಿತು. ನೆಹರು-ಗಾಂಧಿ ಕುಟುಂಬದೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದ ಪ್ರತಿಭಾ ಪಾಟೀಲ್ ಅವರು ಹೆಚ್ಚಿನ ಪ್ರಭಾವಶಾಲಿಯಲ್ಲದ ರಾಜಕಾರಿಣಿ. ಅವರು ರಾಜಸ್ಥಾನ ರಾಜ್ಯದ –ರಾಜ್ಯಪಾಲರಾಗಿದ್ದರು. ಸೋನಿಯಾ ಗಾಂಧಿಯವರ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗಿ ಹೊರಹೊಮ್ಮಿದರು.

2007 ರ ಸಂಜೋತಾ ಎಕ್ಸ್‍ಪ್ರೆಸ್ ಬಾಂಬ್ ದಾಳಿ

  • "2007 ರ ಸಂಜೋತಾ ಎಕ್ಸ್ಪ್ರೆಸ್ ಬಾಂಬ್ ದಾಳಿ"ಯು ಫೆಬ್ರವರಿ 18, 2007 ರಂದು ಸಂಜೋತಾ ಎಕ್ಸ್ಪ್ರೆಸ್ನಲ್ಲಿ, ದೆಹಲಿ, ಭಾರತ ಮತ್ತು ಪಾಕಿಸ್ತಾನದ ಲಾಹೋರ್‍ಅನ್ನು ಸಂಪರ್ಕಿಸುವ 'ವಾರಕ್ಕೆ ಎರಡು ದಿನ ರೈಲು ಸೇವೆ'ಯಲ್ಲಿ, ಮಧ್ಯರಾತ್ರಿ ಸಂಭವಿಸಿದ ಒಂದು ಭಯೋತ್ಪಾದಕ ದಾಳಿಯಾಗಿದೆ. ಎರಡು ರೈಲುಬೊಗಿಗಳಲ್ಲಿ ಬಾಂಬ್ಗಳನ್ನು ಇಡಲಾಗಿತ್ತು, ಎರಡೂ ಬೋಗಿಗಳು ಪ್ರಯಾಣಿಕರಿಂದ ತುಂಬಿದ್ದವು, ಭಾರತೀಯ ರೈಲು ಪಾಣಿಪತ್ ಬಳಿ 'ದಿವಾನಾ'ವನ್ನು ದಾಟಿದ ನಂತರವೇ ಬಾಂಬುಗಳನ್ನು ಸಿಡಿಸಲಾಯಿತು. ದಿವಾನಾ ದೆಹಲಿಯಿಂದ 80 ಕಿಲೋಮೀಟರ್ (50 ಮೈಲಿ) ಉತ್ತರದಲ್ಲಿದೆ. ನಂತರದ ಬೆಂಕಿಯಲ್ಲಿ ಅರವತ್ತೊಂಭತ್ತು ಜನರು ಸಾವನ್ನಪ್ಪಿದರು ಮತ್ತು ಇನ್ನೂ ಹೆಚ್ಚಿನ ಮಂದಿ ಗಾಯಗೊಂಡರು. ಸಾವುಕಂಡ 68 ರಲ್ಲಿ, ಬಹುತೇಕ ಜನರು ಪಾಕಿಸ್ತಾನಿ ನಾಗರಿಕರು. ಬಲಿಯಾದವರಲ್ಲಿ ಕೆಲವು ಭಾರತೀಯ ನಾಗರಿಕರೂ ಇದ್ದರು, ಮತ್ತು ಮೂರು ರೈಲ್ವೆ ಪೋಲೀಸರು ಸೇರಿದ್ದರು. ಈ ಧಾಳಿ ಮಾಜಿ ಭಾರತೀಯ ಸೇನಾಧಿಕಾರಿ ನೇತೃತ್ವದ ನೆರಳಿನಲ್ಲಿ ಹಿಂದೂ ಮೂಲಭೂತವಾದಿ ಗುಂಪು "ಅಭಿನವ್ ಭಾರತ"ಕ್ಕೆ ಸಂಬಂಧಿಸಿದೆ ಎಂದು ಊಹಿಸಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಹೊಸ ಆರೋಪಗಳನ್ನು ಸಲ್ಲಿಸಲಿದೆ. ಕಮಲ ಚೌಹಾಣ್ ಮತ್ತು ಅಮಿತ್ ಚೌಹಾಣ್ ಇಬ್ಬರು ಬಾಂಬರ್ಗಳು ಎಂದು ಲೋಕೇಶ್ ಶರ್ಮಾ ಮತ್ತು ರಾಜೇಂದ್ರ ಪೆಹಲ್ವಾನ್ ಅವರೊಂದಿಗೆ ಈ ನಾಲ್ಕು ಪೆಟ್ರೋಲ್ ಬಾಂಬುಗಳನ್ನು ರೈಲಿನಲ್ಲಿ ಹಾಕಲಾಗಿದೆ ಎಂದು ಹೇಳಿದ್ದಾರೆ.

ಚಂದ್ರಯಾನ:

ಭಾರತ ಗಣರಾಜ್ಯದ ಇತಿಹಾಸ 
ಚಂದ್ರನ ಸಂಶೋಧನೆಯ ಉಪಕರಣ(CY1 2007)
  • ಅಕ್ಟೋಬರ್ 2008 ರಲ್ಲಿ ಚಂದ್ರಯಾನ -1 ಎಂಬ ಮಾನವರಹಿತ ಚಂದ್ರನ ಸಂಶೋಧನೆಯನ್ನು ಮಾಡಲು ಚಂದ್ರನಿಗೆ ಭಾರತವು ಯಶಸ್ವಿಯಾಗಿ ಕಾರ್ಯಕ್ರಮವನ್ನು ಆರಂಭಿಸಿತು. ಹಿಂದಿನ ವರ್ಷದಲ್ಲಿ, ಭಾರತ ತನ್ನ ಮೊದಲ ವಾಣಿಜ್ಯ ಬಾಹ್ಯಾಕಾಶ ರಾಕೆಟ್ ಅನ್ನು ಇಟಲಿಯ ಉಪಗ್ರಹವನ್ನು ಹೊತ್ತೊಯ್ದಿತ್ತು. ವಿಜ್ಞಾನಿಗಳು ಇದನ್ನು ಅಕ್ಟೋಬರ್‌ 2008ರಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಿದರು. ಇದು ಆಗಸ್ಟ್‌ 2009ರ ತನಕ ಕಾರ್ಯನಿರ್ವಹಿಸಿತ್ತು. ಈ ಯಾತ್ರೆಯಲ್ಲಿ ಚಂದ್ರನ ಉಪಗ್ರಹ ಮತ್ತು ಒಂದು ಇಂಪ್ಯಾಕ್ಟರ್ ಸಹ ಸೇರಿದ್ದವು. PSLVಯ ನವೀಕೃತ ಆವೃತ್ತಿಯಾದ PSLV C11 ಮೂಲಕ ಗಗನನೌಕೆಯನ್ನು 22 ಅಕ್ಟೋಬರ್‌ 2008ರಂದು 06:22 IST ಸಮಯದಲ್ಲಿ ಚೆನ್ನೈನಿಂದ 80 ಕಿಮೀ ಉತ್ತರದಲ್ಲಿರುವ, ಆಂಧ್ರ ಪ್ರದೇಶದನೆಲ್ಲೂರು ಜಿಲ್ಲೆಯ ಶ್ರೀಹರಿಕೋಟಾ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಈ ಗಗನನೌಕೆಯನ್ನು ಉಡಾಯಿಸಲಾಯಿತು. ಚಂದ್ರನ ನೆಲವನ್ನು ಶೋಧಿಸಲು ಭಾರತವು ತನ್ನದೇ ಆದ ತಂತ್ರಜ್ಞಾನ ಸಂಶೋಧಿಸಿ ಅಭಿವೃದ್ಧಿಗೊಳಿಸಿದ್ದರಿಂದ ಚಂದ್ರಯಾನ ಯೋಜನೆಯಿಂದ ಭಾರತದ ಬಾಹ್ಯಾಕಾಶ ಯೋಜನೆಗೆ ಮಹತ್ವದ ಉತ್ತೇಜನ ಲಭಿಸಿತು. 8 ನವೆಂಬರ್‌ 2008ರಂದು ಚಂದ್ರಯಾನಕ್ಕೆ ತೆರಳಿದ ವಾಹನವನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಅಳವಡಿಸಲಾಯಿತು[೪೯]

2008 ರ ಮುಂಬಯಿ ದಾಳಿ

ಭಾರತ ಗಣರಾಜ್ಯದ ಇತಿಹಾಸ 
ತಾಜ್ ಮಹಲ್ ಹೋಟೆಲ್ ರಾತ್ರಿ ಬೆಳಕಿನಲ್ಲಿ
ಭಾರತ ಗಣರಾಜ್ಯದ ಇತಿಹಾಸ 
ತಾಜ್ ಮಹಲ್ ಹೋಟೆಲ್ - ಹಾನಿಗೆ ಓಳಗಾದಾಗ,
ಭಾರತ ಗಣರಾಜ್ಯದ ಇತಿಹಾಸ 
ಮುಂಬಯಿಯ ಮ್ಯಾಪು- ಧಾಳಿನೆಡೆದ ಪ್ರದೇಶ
ಮುಂಬೈ ಭಯೋತ್ಪಾದನೆಗೆ ಪ್ರತಿಭಟನೆ
  • 2008 ರ ಮುಂಬೈ ದಾಳಿಗಳು (26/11 ಎಂದು ಕೂಡ ಉಲ್ಲೇಖಿಸಲ್ಪಟ್ಟಿವೆ. ನವೆಂಬರ್ 2008 ರಲ್ಲಿ ನಡೆದ ಭಯೋತ್ಪಾದಕ ದಾಳಿಗಳನ್ನು ನೆಡೆಸಿದ ಗುಂಪು. ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಇ-ತೊಯ್ಬಾದ 10 ಸದಸ್ಯರು. ಮುಂಬೈಯಲ್ಲಿ ನಾಲ್ಕು ದಿನಗಳ ಕಾಲ 12 ಸಂಘಟಿತ ಶೂಟಿಂಗ್ ಮತ್ತು ಬಾಂಬ್ ದಾಳಿಯ ಸರಣಿಗಳನ್ನು ನಡೆಸಿದರು. ವ್ಯಾಪಕವಾಗಿ ಹರಡಿದ ಜಾಗತಿಕ ಖಂಡನೆಗೆ ಒಳಗಾದ ಈ ದಾಳಿಯು ಬುಧವಾರ, 2008 ನವೆಂಬರ್ 26 ರಂದು ಆರಂಭವಾಯಿತು ಮತ್ತು ಶನಿವಾರ, 29 ನವೆಂಬರ್ 2008 ರ ವರೆಗೂ ಮುಂದುವರೆಯಿತು. 164 ಜನರು ಮೃತಪಟ್ಟರು ಮತ್ತು 308 ಜನರು ಗಾಯಗೊಂಡರು
  • ಧಾಳಿಯ ಪ್ರದೇಶಗಳು:ಛತ್ರಪತಿ ಶಿವಾಜಿ ಟರ್ಮಿನಸ್, ಒಬೆರಾಯ್ ಟ್ರೈಡೆಂಟ್, ತಾಜ್ ಪ್ಯಾಲೇಸ್ & ಟವರ್, ಲಿಯೋಪೋಲ್ಡ್ ಕೆಫೆ, ಕ್ಯಾಮಾ ಆಸ್ಪತ್ರೆ, ನಾರಿಮನ್ ಹೌಸ್ ಯಹೂದಿ ಸಮುದಾಯ ಕೇಂದ್ರ,ದಲ್ಲಿ ಮತ್ತು ದಕ್ಷಿಣ ಮುಂಬಯಿಯಲ್ಲಿ ಒಟ್ಟು ಎಂಟು ದಾಳಿಗಳು ಸಂಭವಿಸಿವೆ. ಮೆಟ್ರೊ ಸಿನೆಮಾ, ಮತ್ತು ಟೈಮ್ಸ್ ಆಫ್ ಇಂಡಿಯಾ ಕಟ್ಟಡ ಹಿಂದೆ ಒಂದು ಲೇನ್ ಇದೆ.- ಅಲ್ಲಿ ಮತ್ತು ಸೇಂಟ್ ಕ್ಸೇವಿಯರ್ ಕಾಲೇಜ್, ಮುಂಬೈ ಬಂದರು ಪ್ರದೇಶದ ಮಜಗಾವ್ನಲ್ಲಿ ಮತ್ತು ವಿಲೇ ಪಾರ್ಲೆನಲ್ಲಿ ಟ್ಯಾಕ್ಸಿಯಲ್ಲಿ ಸ್ಫೋಟ ಸಂಭವಿಸಿತು. ನವೆಂಬರ್ 28 ರ ಮುಂಜಾನೆ, ತಾಜ್ ಹೋಟೆಲ್ ಹೊರತುಪಡಿಸಿ ಎಲ್ಲಾ ಸೈಟ್ ಗಳನ್ನು ಮುಂಬಯಿ ಪೋಲಿಸ್ ಡಿಪಾರ್ಟ್ಮೆಂಟ್ ಮತ್ತು ಭದ್ರತಾ ಪಡೆಗಳಿಂದ ವಶ ಪಡಿಸಿಕೊಂಡವು. ನವೆಂಬರ್ 29 ರಂದು, ಭಾರತದ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯು (ಎನ್ಎಸ್ಜಿ) ಉಳಿದ ಆಕ್ರಮಣಕಾರರನ್ನು ಹೊರಹಾಕಲು 'ಆಪರೇಷನ್ ಬ್‍ಲ್ಯಾ ಕ್ ಸುಂಟರಗಾಳಿ' ಯನ್ನು ನಡೆಸಿತು; ತಾಜ್ ಹೋಟೆಲ್ನಲ್ಲಿ ಕೊನೆಯಲ್ಲಿ ಉಳಿದ ದಾಳಿಕೋರರ ಸಾವಿನ ನಂತರ ಅದು ಕೊನೆಗೊಂಡಿತು ಮತ್ತು ದಾಳಿಯನ್ನು ಕೊನೆಗೊಳಿಸಿತು.
  • ಸೆರೆಸಿಕ್ಕಿದ ಅಜ್ಮಲ್ ಕಸಾಬ್ ಈ ದಾಳಿಕೋರರು ಲಷ್ಕರ್-ಎ-ತೊಯ್ಬಾ, ಸದಸ್ಯರು ಎಂದು ಬಹಿರಂಗಪಡಿಸಿದರು. ಆಕ್ರಮಣಕಾರರು ಪಾಕಿಸ್ತಾನದಿಂದ ಬಂದಿದ್ದಾರೆ ಮತ್ತು ಅವರ ನಿಯಂತ್ರಕರು ಪಾಕಿಸ್ತಾನದಲ್ಲಿದ್ದಾರೆ ಎಂದು ಭಾರತ ಸರ್ಕಾರ ಹೇಳಿತು. 7 ಜನವರಿ 2009 ರಂದು ದಾಳಿಯ ಏಕೈಕ ಬದುಕುಳಿದ ಅಪರಾಧಿ ಪಾಕಿಸ್ತಾನದ ಪ್ರಜೆಯು ಮತ್ತು ಪಾಕಿಸ್ತಾನದ ನಾಗರೀಕರಾಗಿದ್ದ ಎಂದು ಪಾಕಿಸ್ತಾನ ದೃಢಪಡಿಸಿತು. 9 ಏಪ್ರಿಲ್ 2015 ರಂದು, ದಾಳಿಯ ಪ್ರಮುಖ ನಾಯಕನಾಗಿದ್ದ. ಜಾಕಿರ್ ರೆಹಮಾನ್ ಲಖ್ವಿ ಪಾಕಿಸ್ತಾನದ ₨ 200,000 (US $ 1,900) ನ ಖಾತರಿಯ ಬಾಂಡ್ಗಳ ಆಧಾರದಮೇಲೆ ಜಾಮೀನು ಪಡೆದು ಬಿಡುಗಡೆ ಮಾಡಿತು.

ನಿರಪರಾಧಿತ್ವ


  • ಜುಲೈ 2009 ರಲ್ಲಿ, ದೆಹಲಿ ಹೈಕೋರ್ಟ್ ಒಪ್ಪಿಗೆ ಸಲಿಂಗಕಾಮ ಲೈಂಗಿಕತೆಯನ್ನು ಅಪರಾಧವಲ್ಲ ಎಂದು ನಿರ್ಣಯಿಸಿತು, ಇದು ಬ್ರಿಟಿಷ್ ರಾಜ್-ಯುಗದ ಕಾನೂನು, ಭಾರತೀಯ ದಂಡ ಸಂಹಿತೆಯ ವಿಭಾಗ 377 ರನ್ನು ಅಸಂವಿಧಾನಿಕ ಎಂದು ಘೋಷಿಸಿತು.

2009 ರ ಚುನಾವಣೆ - ಮತ್ತೆ ಯುಪಿಯೆ ಆಡಳಿತ

ಭಾರತ ಗಣರಾಜ್ಯದ ಇತಿಹಾಸ 
ಮನಮೋಹನ ಸಿಂಗ್- ಪ್ರಧಾನಿ: ಯುಪಿಯೆ
ಭಾರತ ಗಣರಾಜ್ಯದ ಇತಿಹಾಸ 
ಎಲ್.ಕೆ.ಅದ್ವಾನಿ: ಬಿಜೆಪಿ; ವಿರೋಧಪಕ್ಷದ ನಾಯಕ
ಭಾರತ ಗಣರಾಜ್ಯದ ಇತಿಹಾಸ 
ಪ್ರಕಾಶ್ ಕಾರಟ್ - ಸಿ.ಪಿ.ಐ.(ಎಮ್); ಮೂರನೇ ಬಣ
ಭಾರತ ಗಣರಾಜ್ಯದ ಇತಿಹಾಸ 
ಅಮರಸಿಂಗ್ ಸಮಾಜವಾದಿ ಪಕ್ಷ.ನಾಲ್ಕನೇ ಬಣ
  • 2009 ರಲ್ಲಿ ನಡೆದ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಗಮನಾರ್ಹವಾಗಿ ಕಾಂಗ್ರೆಸ್ ಒಕ್ಕೂಟ (ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್) 262 ಸ್ಥಾನಗಳನ್ನು ಗೆದ್ದುಕೊಂಡಿತು.ಅದರಲ್ಲಿ ಕಾಂಗ್ರೆಸ್ ಒಂದೇ 206 ಸ್ಥಾನಗಳನ್ನು ಗೆದ್ದಿತು. ಬಿಜೆಪಿ ಒಕ್ಕೂಟ (ನ್ಯಾಶನಲ್ ಡೆಮೋಕ್ರಾಟಿಕ್ ಅಲಿಯನ್ಸ್) 159 ಸ್ಥಾನಗಳನ್ನು ಮಾತ್ರಾ ಗೆದ್ದಿತು. ಉಳಿದ ಸ್ಥಾನಗಳು ಮೂರನೆಯ ಬಣ ಮತ್ತು ಇತರರಿಗೆ ಸೇರಿದವು. ಕಾಂಗ್ರೆಸ್ ಸರ್ಕಾರ ರಚಿಸಿದರೂ ಸರ್ಕಾರವಾಗಿ ಕೆಲವು ಪಕ್ಷಗಳ ಹೊರಗಿನ ಬೆಂಬಲದಿಂದ ಆಡಳಿತ ನೆಡೆಸುವಂತಾಯಿತು. 543 ಸದಸ್ಯರಲ್ಲಿ 322 ಸದಸ್ಯರ ಬೆಂಬಲದಿಂದ ಯುಪಿಎ ಒಂದು ಅನುಕೂಲಕರ ಬಹುಮತವನ್ನು ಒಟ್ಟುಗೂಡಿಸಲು ಸಾಧ್ಯವಾಯಿತು.
  • ಒಂದನೇ ಬಣ::-ಭಾರತೀಯ ರಾಷ್ಟ್ರೀಯ ಕಾಂಗ್ರೆಸ್-206;ಅಖಿಲ ಭಾರತ ತೃಣಮೂಲ ಕಾಂಗ್ರೆಸ್-19;ದ್ರಾವಿಡ ಮುನ್ನೇತ್ರ ಕಳಗಂ-18;ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ-9;ರಾಷ್ಟ್ರೀಯ ಸಮ್ಮೇಳನ-3;ಜಾರ್ಖಂಡ್ ಮುಕ್ತಿ ಮೋರ್ಚಾ-2;ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್-2;ವಿತುತಲೈ ಚಿರುತಿಗಲ್ ಕಚಿ-1;ಕೇರಳ ಕಾಂಗ್ರೆಸ್ (ಮಣಿ)-1;ಅಖಿಲ ಭಾರತ ಮಜ್ಲಿಸ್-ಇ-ಇಥೇಹಾದುಲ್ ಮುಸಲ್ಮೀನ್-1.(ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್) + ಹೊರಗಿನಿಂದ ಬೆಂಬಲ:ಬಹುಜನ ಸಮಾಜ ಪಕ್ಷ-21;ಜನತಾ ದಳ (ಸೆಕ್ಯುಲರ್)-3;ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್-1;ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್-1;ಸ್ವಾಭಿಮಾನಿ ಪಕ್ಷ-1;ಬಹುಜನ್ ವಿಕಾಸ್ ಅಗಾಡಿ-1;ಸಿಕ್ಕಿಂ ಡೆಮೋಕ್ರಟಿಕ್ ಫ್ರಂಟ್-1;
  • ಎರಡನೇ ಬಣ::-ಭಾರತೀಯ ಜನತಾ ಪಕ್ಷ-116;ಜನತಾ ದಳ (ಯುನೈಟೆಡ್)-20;ಶಿವಸೇನೆ-11;ರಾಷ್ಟ್ರೀಯ ಲೋಕ ದಳ-5;;ಶಿರೋಮಣಿ ಅಕಾಲಿ ದಳ-4;ತೆಲಂಗಾಣ ರಾಷ್ಟ್ರ ಸಮಿತಿ-2;ಅಸ್ಸಾಂ ಗನಾ ಪರಿಷತ್-1.(ನ್ಯಾಶನಲ್ ಡೆಮೋಕ್ರಾಟಿಕ್ ಅಲಿಯನ್ಸ್)
  • ಮೂರನೇ ಬಣ::-ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)-16;ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ -4;ಕ್ರಾಂತಿಕಾರಿ ಸಮಾಜವಾದಿ ಪಕ್ಷ-2;ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್-2;ಬಹುಜನ ಸಮಾಜ ಪಕ್ಷ-21;ಬಿಜು ಜನತಾ ದಳ-14; ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ-9;ತೆಲುಗು ದೇಶಂ ಪಕ್ಷ-6;ಜನತಾ ದಳ (ಸೆಕ್ಯುಲರ್)3;ಮರೂಲಾರಚಿ ದ್ರಾವಿಡ ಮುನ್ನೇತ್ರ ಕಳಗಂ-1;ಹರಿಯಾಣ ಜನಿತ್ ಕಾಂಗ್ರೆಸ್-1. (ಎಡ ಪಕ್ಷಗಳು)
  • ನಾಲ್ಕನೇ ಬಣ::-ಸಮಾಜವಾದಿ ಪಕ್ಷ-23;ರಾಷ್ಟ್ರೀಯ ಜನತಾ ದಳ-;4;ಲೋಕ ಜನಶಕ್ತಿ ಪಾರ್ಟಿ-೦
  • ಇತರೆ :ಅಸ್ಸಾಂ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್-1;ಜಾರ್ಖಂಡ್ ವಿಕಾಸ್ ಮೋರ್ಚಾ (ಪ್ರಜಾತಂತ್ರಿಕ್)-1;ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್-1;ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್-1;ಸ್ವಾಭಿಮಾನಿ ಪಕ್ಷ-1;ಬಹುಜನ್ ವಿಕಾಸ್ ಅಗಾಡಿ-1;ಸಿಕ್ಕಿಂ ಡೆಮೋಕ್ರಟಿಕ್ ಫ್ರಂಟ್-1;ಸ್ವತಂತ್ರರು-9;

ಆಡಳಿತ

  • ಕಾಗ್ರೆಸ್ ನೇತ್ರತ್ವದ ನೇತೃತ್ವದ ಸರ್ಕಾರ ಭ್ರಷ್ಟಾಚಾರದ ಅನೇಕ ಆರೋಪಗಳನ್ನು ಎದುರಿಸಿತು. ಆದರೆ ಅವು ಯಾವುವೂ ನ್ಯಾಯಾಲಯದಲ್ಲಿ ೨೦೧೪ ರ ವರೆಗೂ ರುಜುವಾತು ಆಗದಿದ್ದರೂ ಜನಪ್ರಿಯತೆ ಕುಸಿಯಿತು. ಈ ಎರಡನೇ ಅವಧಿಯಲ್ಲಿ ಹಣದುಬ್ಬರವು ಸಾರ್ವಕಾಲಿಕ ಎತ್ತರಕ್ಕೆ ಏರಿತು, ಮತ್ತು ಆಹಾರ ಪದಾರ್ಥಗಳ ಹೆಚ್ಚುತ್ತಿರುವ ಬೆಲೆಗಳು ವ್ಯಾಪಕವಾದ ಆಂದೋಲನಕ್ಕೆ ಕಾರಣವಾದವು. ಆಧಾರವಿಲ್ಲದ ಭ್ರಷ್ಟಾಚಾರದ ಅನೇಕ ಆರೋಪಗಳಿಂದ ಜನಪ್ರಿತೆ ಕುಸಿಯಿತು. ಪ್ರಧಾನಿಯಾಗಿ ಮುಂದುವರಿದ ಮನಮೋಹನ ಸಿಂಗ್ ಉತ್ತಮ ಆರ್ಥಿಕ ತಜ್ಞರಾದರೂ ಗ್ರಾಮೋದ್ಯೊಗ- ನರೇಗಾ ಯೋಜನೆ; ಬಡತನ ನಿವಾರಣೆ, ನಿರುದ್ಯೊಗ ನಿವಾರಣೆ ಮೊದಲಾದ ಯೋಜನೆಗಳನ್ನು ಸಮರ್ಥವಾಗಿ ತಂದರು ವಾಗ್ಮಿಯೂ ಮಾತುಗಾರರೂ ಅಲ್ಲದ ಸಭ್ಯರಾದ ಸಿಂಗ್ ವಿರೋಧಿಗಳಿಂದ 'ಮೌನಿ' ಪ್ರಧಾನಿ ಎಂಬ ಟೀಕೆಗೆ ಒಳಗಾದರು.
  • ಭಾರತವು 21 ನೇ ಶತಮಾನದ ಆದಿಯಲ್ಲಿ ನಕ್ಸಲೀಯ-ಮಾವೊವಾದಿ ಬಂಡುಕೋರರನ್ನು ಎದುರಿಸುತ್ತಿದೆ. ಇದು ಮತ್ತು ಇತರ ಭಯೋತ್ಪಾದಕ ಉದ್ವಿಗ್ನತೆಗಳು- ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತು ಹೊರಗೆ ಇರುವ ಇಸ್ಲಾಮಿ ಭಯೋತ್ಪಾದಕ ಪ್ರಚಾರಗಳು ಮತ್ತು ಭಾರತದ ಈಶಾನ್ಯದಲ್ಲಿ ಭಯೋತ್ಪಾದನೆ ಇವು ಭಾರತವು ಎದರಿಸಿತ್ತಿರುವ "ಅತಿದೊಡ್ಡ ಆಂತರಿಕ ಭದ್ರತಾ ಸವಾಲು", ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿದರು. ಮುಂಬೈ, ನವದೆಹಲಿ, ಜೈಪುರ, ಬೆಂಗಳೂರು, ಮತ್ತು ಹೈದರಾಬಾದ್ ಮುಂತಾದ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಫೋಟಗಳೊಂದಿಗೆ ಭಯೋತ್ಪಾದನೆ ಭಾರತದಲ್ಲಿ ಹೆಚ್ಚಾಗಿದೆ. ಹೊಸ ಸಹಸ್ರಮಾನದಲ್ಲಿ, ಭಾರತವು ಅನೇಕ ದೇಶಗಳೊಂದಿಗೆ ಮತ್ತು ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಯೂನಿಯನ್, ಇಸ್ರೇಲ್ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಸೇರಿದಂತೆ ವಿದೇಶಿ ಸಂಘಟನೆಗಳೊಂದಿಗಿನ ಸಂಬಂಧಗಳು ಸುಧಾರಿಸಿದವು. ಭಾರತದ ಆರ್ಥಿಕತೆ ಬಹಳ ವೇಗವಾಗಿ ಬೆಳೆಯುತ್ತಿದೆ. ಭಾರತವನ್ನು ಇದೀಗ ಜಗತ್ತಿನ ಸಂಭಾವ್ಯ ಶಕ್ತಿಶಾಲಿಯಾಗಿ ದೇಶವನ್ನಾಗಿ ನೋಡಲಾಗುತ್ತಿದೆ. ಎಂದು ಬಿಬಿಸಿ ವರದಿ ಮಾಡಿತು.[೬೫]
  • ಅರುಣಾಚಲ ಪ್ರದೇಶ
ಭಾರತ ಗಣರಾಜ್ಯದ ಇತಿಹಾಸ 
ಅರುಣಾಚಲ ಪ್ರದೇಶದ ತವಾಂಗ್‍ನ ದೊಡ್ಡ ಮಠ,
  • ಅರುಣಾಚಲ ಪ್ರದೇಶದ ತವಾಂಗ್ ಮಠ, ಟಿಬೆಟ್ಟಿನ ಲಾಸಾದಲ್ಲಿರುವ ಪೊಟಾಲಾ ಅರಮನೆಯ ನಂತರ ಭಾರತದ ಅತಿದೊಡ್ಡ ಮಠವಾಗಿದೆ ಮತ್ತು ವಿಶ್ವದ ಎರಡನೆಯ ಅತಿ ದೊಡ್ಡ ಮಠವಾಗಿದೆ. ಟಿಬೆಟಿಯನ್ ಬೌದ್ಧಧರ್ಮದ ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ಇದೂ ಒಂದಾಗಿದೆ, ಇದು ಚೀನಾದ ಮಾವೋನ ಸಾಂಸ್ಕೃತಿಕ ಕ್ರಾಂತಿಯಿಂದ ಯಾವುದೇ ಹಾನಿಯಾಗದಂತೆ ರಕ್ಷಿಸಲ್ಪಟ್ಟಿದೆ. [೫೮]
  • ದಿ.8 ನವೆಂಬರ್ 2009 ರಂದು, ಅರುಣಾಚಲಪ್ರದೇಶದ ಸಂಪೂರ್ಣ ಸ್ವಾಮ್ಯವನ್ನು ತಾನು ಹೊಂದಿರುವುದಾಗಿ ಹೇಳುವ ಚೀನಾದ ಪ್ರಬಲ ಪ್ರತಿಭಟನೆಗಳನ್ನು ಅಲಕ್ಷಿಸಿ 14 ನೆಯ ದಲೈ ಲಾಮಾ ಅರುಣಾಚಲ ಪ್ರದೇಶದ ತವಾಂಗ್ ಮಠವನ್ನು ಭೇಟಿ ಮಾಡಿದರು, ಇದು ಆ ಪ್ರದೇಶದ ಜನರಿಗೆ ಒಂದು ಸ್ಮಾರಕವಾದ ಘಟನೆಯಾಗಿತ್ತು, ಮತ್ತು ಆ ಆಶ್ರಮದ ಮಠದ ಮುಖ್ಯಗುರು ವೈಭವ ಮತ್ತು ಅಬ್ಬರದಿಂದ ಮತ್ತು ಹೆಚ್ಚು ಉತ್ಸಾಹಭರಿತ ಆಕರ್ಷಣೆಯಿಂದ ಇವರನ್ನು ಸ್ವಾಗತಿಸಿದರು. []

2010 ರ ದಶಕ

ಭಾರತ ಗಣರಾಜ್ಯದ ಇತಿಹಾಸ 
ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ (ದೆಹಲಿ) 2010 ರ ಕಾಮನ್ವೆಲ್ತ್ ಗೇಮ್ಸ್ ಉದ್ಘಾಟನಾ ಸಮಾರಂಭ.
  • 2010 ರ ಕಾಮನ್ವೆಲ್ತ್ ಕ್ರೀಡಾಕೂಟವು ಅಧಿಕೃತವಾಗಿ XIX( ಕಾಮನ್ವೆಲ್ತ್ ಗೇಮ್ಸ್ ಎಂದು ಕರೆಯಲ್ಪಡುತ್ತದೆ. ಸಾಮಾನ್ಯವಾಗಿ ‘ದೆಹಲಿ 2010‘ ಎಂದು ಕರೆಯಲ್ಪಡುತ್ತದೆ, ಇದು ಭಾರತದ ದೆಹಲಿಯಲ್ಲಿ ದಿ.3 ರಿಂದ 14 ಅಕ್ಟೋಬರ್ 2010 ರವರೆಗೆ ನಡೆದ ಅಂತರಾಷ್ಟ್ರೀಯ ಬಹು ದೊಡ್ಡ ಕ್ರೀಡಾಕೂಟವಾಗಿತ್ತು. 71 ಕಾಮನ್ವೆಲ್ತ್ ರಾಷ್ಟ್ರಗಳ ಒಟ್ಟು 6081 ಕ್ರೀಡಾಪಟುಗಳು ಮತ್ತು 21 ಕ್ರೀಡಾಕೂಟ ಮತ್ತು 272 ಘಟನೆಗಳಲ್ಲಿ ಸ್ಪರ್ಧೆಗೆ ವ್ಯವಸ್ಥೆಯಾಗಿತ್ತು., ಇದು ಇಲ್ಲಿಯವರೆಗಿನ ಅತ್ಯಂತ ದೊಡ್ಡ ಕಾಮನ್ವೆಲ್ತ್ ಕ್ರೀಡಾಕೂಟವಾಗಿದೆ. ಇದು ದೆಹಲಿಯಲ್ಲಿ ಮತ್ತು ಭಾರತದಲ್ಲಿ ನಡೆದ ಅತಿದೊಡ್ಡ ಅಂತರರಾಷ್ಟ್ರೀಯ ಬಹು-ಕ್ರೀಡಾಕೂಟವಾಗಿದೆ, 1951 ಮತ್ತು 1982 ರಲ್ಲಿ ನೆಡೆದ ಏಷಿಯನ್ ಗೇಮ್ಸ್ ಗಳನ್ನು ಮೀರಿಸಿತು. ಆರಂಭದ ಮತ್ತು ಮುಕ್ತಾಯದ ಸಮಾರಂಭಗಳು ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಿತು.
  • ಇದೇ ಮೊದಲ ಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟವು ಭಾರತದಲ್ಲಿ ನಡೆಯಿತು ಮತ್ತು ಎರಡನೇ ಬಾರಿಗೆ 1998 ರಲ್ಲಿ ಮಲೇಶಿಯಾದ ಕೌಲಾಲಂಪುರ್ ನಂತರ ಏಷ್ಯಾದಲ್ಲಿ ನಡೆದವು. ಒಂದು ಕಾಮನ್ವೆಲ್ತ್ ಗಣರಾಜ್ಯವು ಮೊದಲ ಬಾರಿಗೆ ಆಟಗಳನ್ನು ಆಯೋಜಿಸಿತು.
  • ಇದು ಅಂತರ ರಾಷ್ಟ್ರಿಯ ಮಟ್ಟದ ವ್ಯವಸ್ಥೆಗಳನ್ನುಳ್ಳ 70,000 ದಿಂದ 80,000 ಕೋಟಿ ರೂಪಾಯಿಯ ಅಧಿಕ ವೆಚ್ಚದ ಕ್ರೀಡಾಕೂಟ. ದಿ.14 ನವೆಂಬರ್‍ 2003 ರಲ್ಲಿ ವಾಜಪೇಯಿ ಯವರ ಎನ್.ಡಿ.ಎ. ಸರ್ಕಾರವು ಒಲಂಪಿಕ್ ಸಭೆಯಲ್ಲಿ ಮತದಾನದ ಎರಡನೆಯ ಸುತ್ತಿನಲ್ಲಿ ತನ್ನ ಬಿಡ್‍ನಲ್ಲಿ ತಾನು ಭಾರತದಲ್ಲಿ ಕ್ರೀಡಾಕೂಟ ನೆಡಸುವುದಾಗಿ ಮೇಲಾಟದಲ್ಲಿ ಗೆದ್ದು ಒಪ್ಪಿತು. ಇದರಲ್ಲಿ ಭಾಗವಹಿಸುವ ಪ್ರತಿ ದೇಶಕ್ಕೆ ವಿಮಾನದ ಟಿಕೆಟ್‍ಗಳು, ಊಟ, ವಸತಿ ಮತ್ತು ಸಾರಿಗೆಯೊಂದಿಗೆ ಅಮೆರಿಕಾದ $100,000 (ಡಾಲರ್)ನ್ನು ಭಾಗವಹಿಸುವ ದೇಶಕ್ಕೆ ಕೊಡುವ ಭರವಸೆಯ ಷರತ್ತನ್ನು ನ್ನು ಹೊಂದಿತ್ತು.(ಪ್ರತಿ ದೇಶಕ್ಕೆ 6 ಕೋಟಿ ರೂ ಒಟ್ಟು ಸುಮಾರು 40,000 ಕೋಟಿಗಳನ್ನು ಭಾಗವಹಿಸುವ ದೇಶಗಳಿಗೆ ಕೊಡಬೇಕಾಗುವುದು. ಊಟ ವಸತಿ ಪ್ರಯಾಣ ವೆಚ್ಚ ಬೇರೆ.) ಆದರೆ ಭಾರತದ ಜಿಪುಣ ಮತ್ತು ಅಸೂಯೆಯ ರಾಜಕಾರಣಿಗಳು ನಂತರ ವ್ಯವಸ್ಥಾಪಕರ ಮೇಲೆ ವೆಚ್ಚ ಅತಿಯಾಯಿತೆಂದು ಅಪವಾದ ಹೇರಲು ಆರಂಭಿಸಿದರು. ಅದರ ಯಾವುದೋ ಹಣಕಾಸು ಉಪಸಮಿತಿ ೧೦೦- ೨೦೦ ಕೋಟಿ ರೂ.ಗಳ ಅಧಿಕ ಬೆಲೆಗೆ ಕ್ರೀಡಾ ಸಾಮಗ್ರಿ ಕೊಂಡುದನ್ನು ವಿರೋಧಪಕ್ಷಗಳು ೮೦,೦೦೦ ಕೋಟಿ ಹಗರಣ ಎಂದು ಪ್ರಚಾರ ಮಾಡಿದವು. ಸಿದ್ಧತೆಯನ್ನು ತಡವಾಗಿ ಆರಂಭ ಮಾಡಿ ಸಲಕಾಲದಲ್ಲಿ ಮುಗಿಸಲು ಹಗಲು ರಾತ್ರಿ ಕೆಲಸಮಾಡಿಸಿದ್ದಕ್ಕಾಗಿ ಮಾನವಹಕ್ಕು ಆಯೋಗಕ್ಕೆ 'ಕೆಲಸಗಾರರ ಶೋಷಣೆ' ಎಂದು ದೂರು ಕೊಟ್ಟರು, ಸಕಾಲದಲ್ಲಿ ಆರಂಭೊತ್ಸವ ಮಾಡಿ ವಿದೇಶಗಳಿಂದ ಹೊಗಳಿಕೆ ಗಳಿಸಿದರೂ ವಿರೋಧಿಗಳ ಗುಂಪು ಕಲ್ಮಾಡಿಯವರು ಸ್ವಾಗತಿಸುವಾಗ ಅವಮಾನಿಸಿ ಕೂಗಿದವು. ಎಲ್ಲದಕ್ಕೂ ಜವಾಬ್ದಾರರೆಂದು ಕೊನೆಗೆ ಅವರನ್ನು ಬಂದಿಸಿದಾಗ ಅವರು ಜಾಮೀನಿನ ಮೇಲೆ ಬಿಡುಗಡೆ ಪಡೆದರು. ಇದು ಭಾರತದ ಅಂತರ ರಾಷ್ಟ್ರಿಯ ಕ್ರೀಡಾ ಸಂಘಟನೆಯ ಸ್ಥಿತಿ.
ಭಾರತ ಗಣರಾಜ್ಯದ ಇತಿಹಾಸ 
OC-ಕಾಮನ್‍ವೆಲ್ತ್ ಮುಖ್ಯ ಕಟ್ಟಡ
ಭಾರತ ಗಣರಾಜ್ಯದ ಇತಿಹಾಸ 
ಜವಾಹರಲಾಲ್ ನೆಹರು ಕ್ರೀಡಾಂಗಣ, ನವ ದೆಹಲಿ ಕ್ರೀಡಾಕೂಟದ ಮುಖ್ಯ ಸ್ಥಳ,
  • 2003 ರಲ್ಲಿ ಎನ್‍ಡಿಎ ಸರ್ಕಾರ ನೆಡೆಸಲು ಒಪ್ಪಿದ್ದ ಈ ಕ್ರೀಡಾ ಕೂಟಕ್ಕೆ ಭಾರತದ ಸರ್ಕಾರದ ಮಾಜಿ ಕಾರ್ಯದರ್ಶಿ ಜರ್ನೈಲ್ ಸಿಂಗ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡರು ಮತ್ತು ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರು ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡರು. ಅವರು 2006 ರಿಂದ ಆಗಬೇಕಾದ ಪೂರ್ವ ಸಿದ್ಧತೆ ಇಲ್ಲದೆ ಎರಡೇ ವರ್ಷದಲ್ಲಿ ಅಂತರ ರಾಷ್ಟ್ರೀಯಮಟ್ಟದ ಸಿದ್ಧತೆಗಳನ್ನು ಯಶಸ್ವಿಯಾಗಿ ಅವಸರದಲ್ಲಿ ಮಾಡಿದರು. ಆ ಸಮಯದಲ್ಲಿ ಕೆಲವು ಸಮಿತಿಗಳ ಮೇಲೆ ಹಣದ ದುರುಪಯೋಗದ ದೂರುಗಳು ಇದ್ದರೂ ಕಲ್ಮಾಡಿಯವರು ಸಕಾಲದಲ್ಲಿ ಕಾರ್ಯಕ್ರಮ ನೆಡೆಸುವುದಾಗಿ ಭರವಸೆ ಇತ್ತರು. ಮ.ಶಂ.ಐಯರ್ ಕ್ರೀಡಾ ಮಂತ್ರಿಗಳೇ ಇಷ್ಟು ದೊಡ್ಡಮೊತ್ತದ ಕ್ರೀಡಾಕೂಟ ಭಾರತಕ್ಕೆ ಅಗತ್ಯವೇ ಎಂದು ನಿರುತ್ಸಾಹ ತೊರಿದರು.

ಕ್ರೀಡಾ ಫಲಿತಾಂಶ

  • ಅಂತಿಮ ಪದಕ ಪಟ್ಟಿಯಲ್ಲಿ ಆಸ್ಟ್ರೇಲಿಯಾವು 78 ಚಿನ್ನದ ಪದಕಗಳನ್ನು ಮತ್ತು 177 ಅತ್ಯಧಿಕ ಪದಕಗಳನ್ನು ಹೊಂದಿತು. ಆತಿಥ್ಯಮಾಡಿದ ರಾಷ್ಟ್ರ ಭಾರತವು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ಸಾಧಿಸಿದೆ, 38 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಒಟ್ಟಾರೆ ಎರಡನೆಯ ಸ್ಥಾನ ಗಳಿಸಿದೆ. 37 ಚಿನ್ನದ ಪದಕಗಳೊಂದಿಗೆ ಇಂಗ್ಲೆಂಡ್ ಮೂರನೇ ಸ್ಥಾನ ಗಳಿಸಿತು
  • 2003 ರಲ್ಲಿ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಅಂದಾಜಿಸಿದ ಆರಂಭಿಕ ಒಟ್ಟು ಬಜೆಟ್ ಗೇಮ್ಸ್ ಅನ್ನು ಹೋಸ್ಟಿಂಗ್ ಮಾಡಲು 16.2 ಶತಕೋಟಿ ರೂ. ಆಗಿತ್ತು. ಆದಾಗ್ಯೂ, 2010 ರಲ್ಲಿ ಅಧಿಕೃತ ಒಟ್ಟು ಬಜೆಟ್ ಅಂದಾಜು ರೂ. 115 ಶತಕೋಟಿಗೆ , ನಂತರ 117 ಗೆ ಏರಿಕೆಯಾಯಿತು, ಇದು ಕ್ರೀಡಾ-ಸಂಬಂಧಿತ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ಹೊರತುಪಡಿಸಿತ್ತು. [23] ಬಿಸಿನೆಸ್ ಟುಡೇ ನಿಯತಕಾಲಿಕವು ಗೇಮ್ಸ್ ವೆಚ್ಚ ಎಲ್ಲಾ ಸೇರಿ ರೂ. 700 ಶತಕೋಟಿ ಎಂದು ಅಂದಾಜಿಸಿದೆ.
  • ಕ್ರೀಡಾಕೂಟ ಮುಕ್ತಾಯದ ನಂತರ ದಿನಗಳಲ್ಲಿ, ಸಂಘಟನಾ ಸಮಿತಿಯ ವಿರುದ್ಧ ಭ್ರಷ್ಟಾಚಾರ ಮತ್ತು ತಪ್ಪು ನಿರ್ವಹಣೆಯ ಆರೋಪಗಳನ್ನು ತನಿಖೆ ಮಾಡಲು ವಿಶೇಷ ಸಮಿತಿಯ ರಚನೆಯನ್ನು ಭಾರತೀಯ ಸರ್ಕಾರ ಘೋಷಿಸಿತು; ಆಗಸ್ಟ್‍ನಲ್ಲಿ ಮಧ್ಯಪ್ರದೇಶದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಭರವಸೆ ನೀಡಿದ್ದರು. ಭ್ರಷ್ಟ ಘಟನೆಯ ವರದಿಗಳು ಬಂದವು. ಅಧಿಕಾರಿಗಳಿಗೆ ಕ್ರೀಡಾಕೂಟದ ನಂತರ "ತೀವ್ರ ಮತ್ತು ತಕ್ಕ" ಶಿಕ್ಷೆಯನ್ನು ನೀಡಲಾಗುವುದು ಎಂದರು. 2010 ರ ಕಾಮನ್ವೆಲ್ತ್ ಕ್ರೀಡಾಕೂಟಗಳ ಅಂತರ ರಾಷ್ಟ್ರಿಯ ಮಟ್ಟದ ಕ್ರೀಡಾಕೂಟಗಳಿಗೆ ದೊಡ್ಡ ಪ್ರಮಾಣದ ಹಣ ವೆಚ್ಚವಾಗುತ್ತದೆ. ಕ್ರೀಡಾಕೂಟ ಅತ್ಯುತ್ತಮವಾಗಿ ನೆಡೆದು ಮುಕ್ತಾಯವಾದರೂ ಇದರ ಬಗೆಗಿನ ದೂರುಗಳು ಮತ್ತು ವಿವಾದಗಳು 2010 ರಲ್ಲಿ ದೇಶವನ್ನು ಕಾಡಿದವು. ಸುಮಾರು 70,000 - 80,000 ಸಾವಿರ ಕೋಟಿ ರೂ.ಗಳ ವೆಚ್ಚದ ಈ ಅಂತರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸುಮಾರು 90 ರಿಂದ 100 ಕೋಟಿ ರೂ,ಗಳ ದುಬಾರಿ ಖರೀದಿಯು ಕೆಲವು ಕಮಿಟಿಯಿಂದ ನೆಡೆದಿದೆ ಎಂದು ತನಿಖೆಯಲ್ಲಿ ಕಂಡು ಬಂದು ಎಲ್ಲದಕ್ಕೂ ಮಖ್ಯಸ್ಥ ಮತ್ತು ಕ್ರೀಡಾಕೂಟದ ವ್ಯವಸ್ಥಾಪಕ ಸಮಿತಿ ಛೇರ್‍ಮನ್ ಮತ್ತು ಜವಾಬ್ದಾರಾದ ಸುರೇಶ ಕಲ್ಮಾಡಿವರ ಮೇಲೆ ಎಫ್.ಐ.ಆರ್ ದಾಖಲಿಸಿ ಬಂಧಿಸಲಾಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆ ಹೊಂದಿದರು. ರಾಜಕೀಯ ವಿರೋಧಿಗಳು ಮತ್ತು ಕೆಲವು ಮಾದ್ಯಮದವರು, ಇದು ಕ್ರೀಡಾಕೂಟಕ್ಕೆ ವೆಚ್ಚವಾದ ಎಲ್ಲಾ 80,000 ಕೋಟಿ ರೂಪಾಯಿನ ಅವ್ಯವಹಾರವೆಂದು 2014 ರ ವರೆಗೂ ಪ್ರಚಾರಮಾಡಿದರು. ಕೆಲವು ರಾಜಕೀಯ ಪ್ರೇರಿತವೆಂಬ ಅನುಮಾನವೂ ಇದ್ದವು. ಸರ್ಕಾರದಲ್ಲಿ ಸರಿಯಾದ ಸಮರ್ಥಕರಿಲ್ಲದೆ ಜನಪ್ರಿಯತೆ ಕುಗ್ಗಿತು. ಆದರೆ ಆಸ್ಟ್ರೇಲಿಯಾದ ಕ್ರೀಡಾಮಂತ್ರಿ ಕ್ರೀಡಾಕೂಟದ ಯಶಸ್ಸನ್ನು ಹೊಗಳಿ ಭಾರತ ಒಲಂಪಿಕ್ ಕ್ರೀಡಾಕೂಟ ನೆಡಸಲಿ ಎಂದರು.

2 ಜಿ ಸ್ಪೆಕ್‍ಟ್ರಮ್

  • 2 ಜಿ (ಅಥವಾ 2-ಜಿ) ಎನ್ನುವುದು ಎರಡನೆಯ ಪೀಳಿಗೆಯ ತಂತಿರಹಿತ ಅಥವಾ ನಿಃಸ್ತಂತು ದೂರವಾಣಿ ತಂತ್ರಜ್ಞಾನವಾಗಿದೆ. ಎರಡನೆಯ ಪೀಳಿಗೆಯ 2ಜಿ ಸೆಲ್ಯುಲಾರ್ ಟೆಲಿಕಾಮ್ ನೆಟ್‌ವರ್ಕ್‌ಗಳನ್ನು ವಾಣಿಜ್ಯಿಕವಾಗಿ 1991 ರಲ್ಲಿ ರೇಡಿಯೋಲಿಂಜ,(ಇದೀಗಎಲಿಸಾ ಓಯ್ಜ್ರ ಭಾಗವಾಗಿದೆ) ರಿಂದ ಫಿನ್‌ಲ್ಯಾಂಡ್‌ನಲ್ಲಿ ಜಿಎಸ್ಎಮ್ ಮಾನದಂಡದಲ್ಲಿ ಪ್ರಾರಂಭಿಸಲಾಯಿತು. ಹಿಂದಿನವುಗಳಿಗೆ ಹೋಲಿಸಿದರೆ 2 ಜಿ ನೆಟ್‌ವರ್ಕ್‌ಗಳ ಪ್ರಮುಖ ಲಾಭಗಳೆಂದರೆ ಪೋನ್ ಸಂಭಾಷಣೆಗಳು ಡಿಜಿಟಲ್ ಆಗಿ ಎನ್‌ಕ್ರಿಪ್ಟ್ ಆಗಿರುತ್ತವೆ. ಅದರಿಂದ ವಿದ್ಯತ್ ತರಂಗಗಳಿಗಿಂತ ವೇಗ ಮತ್ತು ಹೆಚ್ಚು ಸ್ಪಷ್ಟತೆ ಇರುವುದು. 2ಜಿ ವ್ಯವಸ್ಥೆಗಳು ತರಂಗಾಂತರಗಳಲ್ಲಿ ಗಮನಾರ್ಹವಾಗಿ ಹೆಚ್ಚು ಪರಿಣಾಮಕಾರಿಯಾಗಿದ್ದು, ಅತ್ಯುತ್ತಮವಾದ ಮೊಬೈಲ್ ಫೋನ್ ಸೂಕ್ಷ್ಮಗ್ರಹಣ ಶಕ್ತಿಯನ್ನು ಹೊಂದಿರುತ್ತವೆ; ಮತ್ತು 2ಜಿ ಯು ಮೊಬೈಲ್‌ಗಾಗಿ ಡೇಟಾ ಸೇವೆಗಳನ್ನು ಎಸ್ಎಮ್ಎಸ್ ಪಠ್ಯ ಸಂದೇಶಗಳೊಂದಿಗೆ ಪರಿಚಯಿಸಿತು. 2.5ಜಿ, 2.75ಜಿ, 3 ಜಿ, ಮತ್ತು 4 ಜಿ ಗಳಂತಹ ಆಧುನಿಕ ತಂತ್ರಜ್ಞಾನಗಳು; 2 ಜಿ ಹಳೆಯದಾಗಿ ಅದರ ಸ್ಥಾನವನ್ನು 3 ಜಿ, ಮತ್ತು 4 ಜಿ ಆಕ್ರಮಿಸಿಕೊಂಡಿದೆ; ಆದರೆ, ವಿಶ್ವದ ಹಲವು ಭಾಗಗಳಲ್ಲಿ 2 ಜಿ ನೆಟ್‌ವರ್ಕ್‌ಗಳನ್ನು ಇನ್ನೂ ಸಹ ಬಳಸಲಾಗುತ್ತಿದೆ. ಭಾರತದಲ್ಲಿ ೨೦೦೧ರ ನಂತರ ಭಾರತೀಯ ಜನತಾ ಪಕ್ಷದ ಆಡಳಿದಲ್ಲಿ ಇದು ೨ ಜಿ ಬಳಕೆಗೆ ಬಂತು.
  • 2-ಜಿ ತರಂಗದ ಮಾರಾಟ
ಭಾರತ ಗಣರಾಜ್ಯದ ಇತಿಹಾಸ 
ಎ.ರಾಜಾ ದೂರಸಂಪರ್ಕ ಮತ್ತು ಐಟಿ ಸಚಿವರು; ಕಾಂಗ್ರೆಸ್ ಒಕ್ಕೂಟದಲ್ಲಿ (ಯುಪಿಎ) ಸೇರಿದ ಡಿ.ಎಮ.ಕೆ. ಪಕ್ಷದವರು ಮತ್ತು ಕರುಣಾನಿಧಿಗೆ ಆಪ್ತರು.
ಭಾರತ ಗಣರಾಜ್ಯದ ಇತಿಹಾಸ 
ವಿನೋದ ರಾಯ್:ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್‍ ಆಗಿದ್ದವರು.
  • ಭಾರತವನ್ನು 22 ದೂರಸಂಪರ್ಕ ವಲಯಗಳಾಗಿ ವಿಂಗಡಿಸಲಾಗಿದೆ, 281 ವಲಯಗಳ ಪರವಾನಗಿಗಳು. 2008 ರಲ್ಲಿ, 122 ಹೊಸ ಎರಡನೇ-ಪೀಳಿಗೆಯ 2 ಜಿ ಯೂನಿಫೈಡ್ ಅಕ್ಸೆಸ್ ಸರ್ವೀಸ್ (ಯುಎಎಸ್) ಪರವಾನಗಿಗಳನ್ನು ಟೆಲಿಕಾಂ ಕಂಪೆನಿಗಳಿಗೆ ಅರುಣ್ ಶೌರಿ, ೨೦೦೩ರಲ್ಲಿ ಬಿಜೆಪಿ ಆಡಳಿತವಿದ್ದ ಸಮಯದಲ್ಲಿ ದೂರ ಸಂಪರ್ಕ ಸಚಿವರಾಗಿದ್ದಾಗ, ವಾಜಪೇಯಿ ಸರ್ಕಾರ ಜನರಿಗೆ ಮೊಬೈಲ್ ಸಂಪರ್ಕ ಸುಲಭ ಬೆಲೆಯಲ್ಲಿ ಸಿಗುವಂತೆ, ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ನಿಯಮ ಮತ್ತು ಬೆಲೆ ನಿರ್ಧರಿಸಿದ್ದರು. 2007 ರಲ್ಲಿ ಸಂಪರ್ಕ ಮತ್ತು ಐಟಿ(IT) ಸಚಿವ ಎ.ರಾಜಾ ಅವರು ಅದೇ ಬೆಲೆಗೆ ಅದೇ ನಿಯಮದಂತೆ ನೀಡಲು ನಿರ್ಧರಿಸಿದರು. ಎ.ರಾಜಾ ಕಾಂಗ್ರೆಸ್ ಒಕ್ಕೂಟದಲ್ಲಿ (ಯುಪಿಎ) ಸೇರಿದ ಡಿ.ಎಮ.ಕೆ. ಪಕ್ಷದವರು ಮತ್ತು ಕರುಣಾನಿಧಿಗೆ ಆಪ್ತರು. 2007 ರ ಸೆಪ್ಟೆಂಬರ್ 25 ರಂದು DOT (ಡೈರೆಕ್ಟರ್ ಟೆಲಿಸಂಪರ್ಕ)ತನ್ನ ವೆಬ್‍ ಸೈಟಿನಲ್ಲಿ ಅರ್ಜಿದಾರರಿಗೆ ದಿ.1 ಅಕ್ಟೋಬರ್ 2007 ಮ.3:30 ರಿಂದ 4:30 ರವರೆಗೆ ೨.ಜಿ ಪರವಾನಗಿ (ಲೈಸನ್ಸ್)ಗಳನ್ನು ಅದೇ ನಿಯಮದಲ್ಲಿ ನೀಡಲಾಗುವುದು ಎಂದು ಘೋಷಿಸಿದರು. ಪ್ರಧಾನಮಂತ್ರಿ ಮನಮೋಹನ್ ಸಿಂಗ್ 2 ಜಿ ಸ್ಪೆಕ್ಟ್ರಂಅನ್ನು ಪಾರದರ್ಶಕವಾಗಿ ಹಂಚಲು ಮತ್ತು 2007 ರ ನವೆಂಬರ್‍ನಲ್ಲಿ ಪರವಾನಗಿ ಶುಲ್ಕವನ್ನು ಪರಿಷ್ಕರಿಸಲು ರಾಜಾಗೆ ಸಲಹೆ ನೀಡಿದರು, ಎ.ರಾಜ ಅವರು ಪ್ರಧಾನಿ ಸಿಂಗ್‍ ಅವರ ಶಿಫಾರಸುಗಳನ್ನು ತಿರಸ್ಕರಿಸಿದರು.ದಿ.
  • ದಿ.25, ಸೆಪ್ಟಂಬರ್ 2007 ರಂದು ಮೊದಲು ಬಂದವರಿಗೆ ಮೊದಲ ಆದ್ಯತೆ ಸರ್ವಿಸ್ ಆಧಾರದ ಮೇಲೆ ಅಕ್ಟೋಬರ್ ದಿ. 1, 2007 ರ ವರೆಗೆ ಬಂದ ಅರ್ಇಗಳಿಗೆ ಪರವಾನಗಿ ನೀಡುವುದಾಗಿ ಡಿಒಟಿ ನಿರ್ಧರಿಸಿತು. ಅಕ್ಟೋಬರ್ 1, 2007 ರಂದು ಡಿಒಟಿ 46 ಸಂಸ್ಥೆಗಳಿಂದ 575 ಅರ್ಜಿಗಳನ್ನು ಪಡೆಯಿತು. ಆದರೆ ನಂತರ ಜನವರಿ 10, 2008 ರಂದು, ಐದು ದಿನ ಹಿಂದಿನ 2007, 25 ಸೆಪ್ಟಂಬರ್‌ನ (ಕಡಿತಗೊಂಡ ದಿನಾಂಕವನ್ನು) ನಿರ್ಧರಿಸಿ, ಆ ದಿನ 3:30 ಮತ್ತು 4:30 ರ ನಡುವೆ ಬಂದು ಅರ್ಜಿ ಸಲ್ಲಿಸಿದ್ದವರಿಗೆ ಪರವಾನಗಿ ನೀಡಲಾಗುವುದು ಎಂದು ಡಿಒಟಿ ಹೇಳಿತು. ಜನವರಿ 10, 2008 ರಂದು, ಕಂಪನಿಯ ಉದ್ದೇಶಗಳು ಮತ್ತು ಹಣ ಪಾವತಿ ಪತ್ರಗಳನ್ನು ಪೂರೈಸಲು ತಿಳಿಸಿ, ಅದಕ್ಕೆ ಕಂಪೆನಿಗಳಿಗೆ ಕೆಲವೇ ಗಂಟೆಗಳ ಅವಕಾಶ ನೀಡಲಾಯಿತು; ನಿಗಮವು ಅನರ್ಹವಾಗಿದ್ದರೂ, ಸ್ವಾನ್ ಟೆಲಿಕಾಂ ರೂ.15.37 ಬಿಲಿಯನ್‍ಗೆ ಪರವಾನಗಿ ನೀಡಲಾಯಿತು. ಆ ಕಂಪನಿ ಅದನ್ನು ಯುಎಇ ಮೂಲದ ಎಟಿಸಾಲಾಟ್‍ಗೆ ಶೇಕಡಾ 45 ಪಾಲನ್ನು ರೂ.42 ಬಿಲಿಯನ್‍ಗೆ ಮಾರಾಟ ಮಾಡಿತು. ಯುನಿಟೆಕ್ ವೈರ್ಲೆಸ್ (ಯೂನಿಟೆಕ್ ಗ್ರೂಪ್ನ ಒಂದು ಅಂಗಸಂಸ್ಥೆ) ನಾರ್ವೆಯ ಮೂಲ ಟೆಲಿನಾರ್ ರೂ.16.61 ಪಡೆದು ಅದನ್ನು ಶೇ.60 ಪಾಲನ್ನು ರೂ.62 ಬಿಲಿಯನ್‍ಗೆ ಮಾರಾಟ ಮಾಡಿತು.(ತಮಗೆ ಬೇಕಾದವರಿಗೆ ಕೊಡಲು ಆ ಕಂಪನಿಗಳ ಕಾರ್ಯನಿರ್ವಾಹಕರಿಗೆ ರಾಜಾ ಸೂಚನೆ ಮೊದಲೇ ಕೊಟ್ಟಿದ್ದರು ಎಂದು ಸಂಶಯ ಪಡುತ್ತಾರೆ; ಮತ್ತು ಅವರಿಂದ ರಹಸ್ಯವಾಗಿ ೩೦೦೦ ಕೋಟಿ ಲಾಭ ಪಡೆದಿರಬಹುದೆಂದು ಊಹೆ ಸಿಬಿಯ ಊಹಿಸಿದೆ).
  • 2010ರಲ್ಲಿ 3G ಮತ್ತು ಬಿಡಬ್ಲ್ಯೂಎ ಸ್ಪೆಕ್ಟ್ರಮ್-ಹರಾಜು ಬೆಲೆಗಳ ಆಧಾರದ ಮೇಲೆ ಸಂಗ್ರಹಿಸಿದ ಮತ್ತು ಸಂಗ್ರಹಿಸಬೇಕಾದ ಮೊತ್ತದ ನಡುವಿನ ವ್ಯತ್ಯಾಸವನ್ನು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಊಹಾತ್ಮಕವಾಗಿ ರೂ 1.76 ಟ್ರಿಲಿಯನ್ ಎಂದು 2010 3G ಮತ್ತು BWA ಸ್ಪೆಕ್ಟ್ರಮ್-ಹರಾಜು ಬೆಲೆಗಳ ಆಧಾರದ ಮೇಲೆ ಅಂದಾಜಿಸಿದರು. 3G ಸ್ಪೆಕ್ಟ್ರಮ್ 2 ಜಿ ಗಿಂತ ವೇಗದ್ದು ಮತ್ತು ಹೆಚ್ಚು ಬೆಲೆಯದು. (2 ಜಿಯ ಕಡಿಮೆ ಬೆಲೆಯಲ್ಲಿ ಹೆಚ್ಚುವರಿ ಸ್ಪೆಕ್ಟ್ರಮ್ ಹಂಚಿಕೆಗೆ ಸಂಬಂಧಿಸಿದಂತೆ ಖಜಾನೆಯ ಒಟ್ಟು ನಷ್ಟ: ರೂ. 36,993 ಕೋಟಿ. 3 ಜಿ ಹರಾಜಿನ ಆಧಾರದ ಮೇಲೆ ಖಜಾನೆಯ ಒಟ್ಟು ನಷ್ಟ ರೂ. 1,76,645 ಕೋಟಿ.(ಡಿಸೆಂಬರ್ 25, 2010;ರಲ್ಲಿ ಖಜಾನೆಗೆ 30,984 ಕೋಟಿ ರೂ. ನಷ್ಟ ಉಂಟಾಗಿದೆಯೆಂದು ಸಿಬಿಐ ಆರೋಪಪಟ್ಟಿ ಹೇಳಿದೆ) )
  • ಆರೋಪಕ್ಕೆ ಪ್ರತಿವಾದ:
  • ಸರಕಾರವು ,ಏಪ್ರಿಲ್ 12, 2012- ತನ್ನ ವಾದವನ್ನು ಮಂಡಿಸಿ ಸರ್ಕಾರದ ಆಡಳಿತ ನೀತಿಯು ಸಂಸತ್ತು ಮತ್ತು ಮಂತ್ರಿಮಂಡಳಗಳಿಗೆ ಸೇರಿದ್ದು. ಈ ವಿಷಯಗಳಲ್ಲಿ ನ್ಯಾಯಾಂಗದ ಹಸ್ತಕ್ಷೇಪವು ಆಗುತ್ತಿದೆ ಇದು ಸೇರಿದಂತೆ ಎಂಟು ಪ್ರಶ್ನೆಗಳೊಂದಿಗೆ ಅಧ್ಯಕ್ಷೀಯ ಉಲ್ಲೇಖವನ್ನು ಸರಕಾರವು ಕೋರ್ಟಿನ ಮಂದಿಟ್ಟಿತು ಮತ್ತು ಹರಾಜು ಎನ್ನುವುದು ಹಂಚಿಕೆಯಲ್ಲಿ ಒಂದು ವಿಧಾನವಾಗಿದೆ, ಅದೇ ಏಕೈಕ ವಿಧಾನವಲ್ಲ ಎಂದಿತು. ಬೇರೆ ವಿಧಾನಗಳನ್ನು ಅನುಸರಿಸಲು ಸರ್ಕಾರಕ್ಕೆ ಹಕ್ಕಿದೆ ಎಂದಿತು
  • ಎ.ರಾಜಾ ಅವರು ಸರ್ಕಾರಕ್ಕೆ ಹಣಗಳಿಸುವುದೇ ಮುಖ್ಯ ನೀತಿಯಲ್ಲ. ಜನರಿಗೆ ಸುಲಭ ಬೆಲೆಗೆ ಕರೆ ಸಿಗುವಂತಾಗಲು ಕಡಿಮೆ ಬೆಲೆಗೆ ೨ ಜಿ ಸ್ಪೆಕ್ಟ್ರಂನ್ನು ಹಿಂದಿನ ಸರ್ಕಾರವೇ ಮಾರುವ ನೀತಿ ಅನುಸರಿಸಿದೆ. ಅದು ಸರ್ಕಾರದ ಹಕ್ಕು ಅದರಲ್ಲಿ ಕೋರ್ಟು ಪ್ರವೇಶಿಸುವಮತಿಲ್ಲ ಎಂದು ವಾದಿಸಿದರು.
  • ನಂತರ ಟೆಲಿಕಾಂ ಖಾತೆಯನ್ನು ಹೊಂದಿದ ಕಪಿಲ್ ಸಿಬಿಲ್ "ನಾವು ಸಿಎಜಿ ನಡೆಸಿದ ಲೆಕ್ಕ ತಪಾಸಣೆ ಬಹಳ ಗಂಭೀರವಾದ ದೋಷಗಳನ್ನು ತುಂಬಿದೆ ಎಂದು ನಂಬುತ್ತೇವೆ. ಇದರಿಂದಾಗಿ ಜನರಲ್ಲಿ ಸರ್ಕಾರದ ವಿರುದ್ಧ ವಿಪರೀತ ವಿರೋಧದ ಸಂವೇದನಾಶೀಲತೆ ಉಂಟಾಯಿತು. ಭಾರತದ ಜನರಿಗೆ ಸಂಪೂರ್ಣ ಸುಳ್ಳುತನವನ್ನು ಹರಡಲು ಅವಕಾಶ ಮಾಡಿಕೊಟ್ಟಿದೆ. ಇದು ವಸ್ತುಸ್ಥತಿ" ಎಂದು ಹೇಳಿದರು.
  • ಹರಾಜಿನಿಂದ ರೂ.1,76,೦೦೦ ಕೋಟಿ ಆದಾಯ ಬರುವುದೆಂದು ಹೇಳಲು ಆಧಾರವಿಲ್ಲ- ಸಿ.ಬಿ.ಐ:
  • ಆದರೆ ಆಡಿಟರ್ ಶ್ರೀ ವಿನೋದ ರಾಯ್ ಯಾವ ಸಕಾರಣವೂ ಆಧಾರವೂ ಇಲ್ಲದೆ ಉನ್ನತ ದರ್ಜೆಯ 3ಜಿ ದರವನ್ನು ಪರಿಗಣಿಸಿ ಕಡಿಮೆ ದರ್ಜೆಯ 2ಜಿ ಹರಾಜು ಹಾಕಿದ್ದರೆ ರೂ.1,76,೦೦೦ ಕೋಟಿ ಆದಾಯ ಬರುತ್ತಿತ್ತು ಎಂದು ಅಂದಾಜು ವರದಿ ಕೊಟ್ಟರು. ಆದರೆ ಅದನ್ನು ನಂತರದ ಸಿಬಿಐ ತನಿಖಾ ತಂಡದವರು ಊಹಾತ್ಮಕವೆಂದು ನಿರಾಕರಿಸಿ ಮತ್ತು ನಷ್ಟವನ್ನು ಊಹಿಸಿ ಲೆಕ್ಕಹಾಕುವುದು ಅಸಾದ್ಯವೆಂದೂ ಆದರೂ ಸಿಬಿಐ ಸರಿಹೊಂದುವ ಒಟ್ಟು ಆದಾಯದ ಆಧಾರದ ಮೇಲೆ ನಷ್ಟವನ್ನು ಲೆಕ್ಕ ಹಾಕಿ, ಅದರ ಮೊತ್ತ ಸುಮಾರು 30,000 ಕೋಟಿಗೆ ಎಂದಿತು. ಜಾಯಿಂಟ್ ಪಾರ್ಲಿಯಮೆಂಟ್ ಕಮಿಟಿಯ ಎದುರಲ್ಲಿ ಆಡಿಟರ್ ವಿನೋದ ರಾಯ್ ತಮ್ಮ ನಷ್ಟದ ಅಂದಾಜು ಅಂಕೆಯನ್ನು ಸಮರ್ಥಿಸಿಕೊಳ್ಳಲು ವಿಫಲರಾದರು.ಆದರೆ ಇದರ ಲಾಭವನ್ನು ವಿರೋಧ ಪಕ್ಷವು ಪಡೆಯಿತು. ಹರಾಜಿನಿಂದ ರೂ.1,76,೦೦೦ ಕೋಟಿ ಆದಾಯ ಬರುವುದೆಂದು ಊಹೆಯ ನಷ್ಟವನ್ನು ವಿರೋಧ ಪಕ್ಷಗಳು ರೂ.1,76,೦೦೦ ಕೋಟಿ ಲಂಚ, ದುರುಪಯೋಗ ಎಂದು ಪ್ರಚಾರ ಮಾಡಿ ಚುನಾವಣೆಯಲ್ಲಿ ಲಾಭ ಗಳಿಸಿದರು.

ನ್ಯಾಯಾಲಯ-ವಿಚಾರಣೆ-ತೀರ್ಪು -ಆಧಾರವಿಲ್ಲವೆಂದು ಎಲ್ಲರ ಖುಲಾಸೆ

  • 2010 ನವೆಂಬರ್ 15ರಂದು ದೂರಸಂಪರ್ಕ ಸಚಿವನ ಸ್ಥಾನಕ್ಕೆ ಎ.ರಾಜಾ ರಾಜೀನಾಮೆ ನೀಡಿದರು. ಮಾರ್ಚ್ 14ರಂದು ಹಗರಣದ ವಿಚಾರಣೆಗೆಂದೇ ದೆಹಲಿ ಹೈಕೋರ್ಟ್‌ ವಿಶೇಷ ನ್ಯಾಯಾಲಯವನ್ನು ರಚಿಸಿತು. ಫೆಬ್ರವರಿ 17-18, 2011ರಲ್ಲಿ ನ್ಯಾಯಾಂಗ ಬಂಧನದಲ್ಲಿ ರಾಜಾರನ್ನು ತಿಹಾರ್ ಜೈಲಿಗೆ ಕಳುಹಿಸಲಾಯಿತು.
  • ಕೇಂದ್ರ ಜಾಗೃತ ಆಯೋಗದ ನಿರ್ದೇಶನದಂತೆ (ಸಿವಿಸಿ) ಏಪ್ರಿಲ್ 2, 2011ರಂದು ಸಿಬಿಐ ಸುಪ್ರೀಮ್ ಕೋರ್ಟ್ ಅಧಿನದಲ್ಲಿ ತನಿಖೆ ನೆಡಸಿ, ತನ್ನ ಮೊದಲ ಚಾರ್ಜ್ ಶೀಟ್ ಅನ್ನು ದಾಖಲಿಸಿತು. ಅವರ ಹೆಸರುಗಳು ರಾಜಾ, ಚಾಂಡೋಲಿಯಾ ಮತ್ತು ಬೆಹೂರ. ರಿಲಯನ್ಸ್ ಎಡಿಎಗ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಗೌತಮ್ ದೋಷಿ, ಹಿರಿಯ ಉಪಾಧ್ಯಕ್ಷ ಹರಿ ನಾಯರ್, ಗ್ರೂಪ್ ಅಧ್ಯಕ್ಷ ಸುರೇಂದ್ರ ಪಿಪರಾ, ಸ್ವಾನ್ ಟೆಲಿಕಾಂ ಪ್ರವರ್ತಕರು ಶಾಹಿದ್ ಉಸ್ಮಾನ್ ಬಲ್ವಾ ಮತ್ತು ವಿನೋದ್ ಗೋಯೆಂಕಾ ಮತ್ತು ಯುನೈಟ್ಕ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ ಆರೋಪಿಸಿದ್ದಾರೆ. ಮೂರು ಕಂಪೆನಿಗಳು - ರಿಲಯನ್ಸ್ ಟೆಲಿಕಾಂ ಲಿಮಿಟೆಡ್, ಸ್ವಾನ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ ಮತ್ತು ಯೂನಿಟೆಕ್ ವೈರ್ಲೆಸ್ (ತಮಿಳುನಾಡು) ಪ್ರೈವೇಟ್ ಲಿಮಿಟೆಡ್‍ನ್ನು - ಸಹ ಚಾರ್ಜ್ ಮಾಡಿದೆ. ಏಪ್ರಿಲ್ 25, 2011: ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿಯವರ ಮಗಳು ಮತ್ತು ಸಂಸದೆ ಕನಿಮೊಜಿ, ಮತ್ತು 4 ಇತರರನ್ನು ಹೆಸರಿಸಿ, ಸಿಬಿಐ ಎರಡನೇ ಚಾರ್ಜ್ ಶೀಟ್ ದಾಖಲಿಸಿತು.) ಡಿಎಂಕೆ ಕನಿಮೋಜಿ ಈ ಪ್ರಕ್ರಿಯೆಯ ಹಿಂದಿನ "ಸಕ್ರಿಯ ಮಿದುಳು" ಎಂದು ಆರೋಪಿಸಿ, 'ಡಿಬಿ ರಿಯಾಲ್ಟಿ' 'ಸಹಕಾರ ಶಾಹಿದ್ ಬಲ್ವಾ' ಕಲೈಂಜಾರ್ ಟಿವಿಗೆ ರೂ.2 ಬಿಲಿಯನ್ ರವಾನೆ ಮಾಡಲು ರಾಜಾ ಜೊತೆ ಸಂಚು ಹೂಡಿದರು ಎಂದು ಹೇಳಿತು.
  • 2011 ನವೆಂಬರ್ 11ರಿಂದ ವಿಚಾರಣೆ ಆರಂಭ; ಡಿಸೆಂಬರ್ 1ರಂದು ನಾಯರ್, ದೋಶಿ, ಪಿಪಾರ, ಸಂಜಯ್, ಗೋಯೆಂಕಾ, ಕನಿಮೊಳಿ, ಶರದ್ ಕುಮಾರ್, ಕರೀಂ ಮೊರಾನಿ, ಆಸಿಫ್ ಬಲ್ವಾ, ರಾಜೀವ್ ಅಗರ್ವಾಲ್, ಶಹೀದ್ ಬಲ್ವಾ ಮತ್ತು ಚಾಂಡೋಲಿಯಾಗೆ ಜಾಮೀನು ನೀಡಲಾಯಿತು; ಡಿಸೆಂಬರ್ 12ರಂದು ಸಿಬಿಐ ಮೂರನೇ ಆರೋಪಪಟ್ಟಿ ಸಲ್ಲಿಸಿತು. 2012 ಫೆಬ್ರುವರಿ 2 ರಂದು ರಾಜಾ ಸಚಿವರಾಗಿದ್ದಾಗ ನೀಡಿದ್ದ 122 ಪರವಾನಗಿಗಳನ್ನು ಸುಪ್ರೀಂ ಕೋರ್ಟ್'ರದ್ದುಪಡಿಸಿತು. ಪರವಾನಗಿಗಳನ್ನು ಹರಾಜು ಹಾಕುವಂತೆ ಸೂಚನೆ ಕೊಟ್ಟಿತು. ಕಂಪನಿಗಳು ನಷ್ಟ ಅನುಭವಿಸಿದವು; ಜನರು ಉದ್ಯೋಗ ಕಳೆದುಕೊಂಡು ತೊಂದರೆ ಅನುಭವಿಸಿದರು.
  • 2017 ಡಿಸೆಂಬರ್ 21 ರಂದು ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಿ ನ್ಯಾಯಾಲಯ ತೀರ್ಪು ನೀಡಿತು. ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಸ್ಸಾರ್‌ ಸಮೂಹದ ಪ್ರವರ್ತಕರಾದ ರವಿಕಾಂತ ರುಯಿಯ, ಅಂಶುಮಾನ್‌ ರುಯಿಯ ಮತ್ತು ಇತರ ಆರು ಆರೋಪಿಗಳನ್ನೂ ಖುಲಾಸೆ ಮಾಡಲಾಗಿದೆ. ‘ಆರೋಪಿಗಳ ವಿರುದ್ಧ ಅತ್ಯಂತ ಎಚ್ಚರಿಕೆಯಿಂದ ಸಲ್ಲಿಸಲಾದ ಆರೋಪಪಟ್ಟಿಯ ಯಾವುದೇ ಆರೋಪವನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್‌ ದಯನೀಯವಾಗಿ ವಿಫಲವಾಗಿದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಹಾಗಾಗಿ ಆರೋಪಿಗಳು ಖುಲಾಸೆಗೊಳ್ಳಲು ಅರ್ಹರು ಮತ್ತು ಹಾಗಾಗಿ ಅವರನ್ನು ಖುಲಾಸೆ ಮಾಡಲಾಗಿದೆ’ ಎಂದು ಶೈನಿ ಹೇಳಿದರು.
  • ಪಕ್ಷಗಳ ಆರೋಪ:
  • ಯುಪಿಎ ಮಾಜಿ ಸಿಎಜಿ ವಿನೋದ್‌ ರಾಯ್‌ ವಿರುದ್ಧ ಹರಿಹಾಯ್ದಿದೆ. ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದಿದೆ. ಯುಪಿಎ ಸರ್ಕಾರಕ್ಕೆ ಅಪಮಾನ ಮಾಡಲು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಒಳ ಸಂಚು ನಡೆಸಿದ್ದಾರೆ ಎಂಬ ಗಂಭೀರ ಆರೋಪವನ್ನೂ ಅದು ಮಾಡಿದೆ. ಪ್ರಧಾನಿ ಹಾಗೂ ಬಿಜೆಪಿ ದೇಶದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿತು. ವದಂತಿಗಳು ಮತ್ತು ಊಹಾಪೋಹಗಳು ಸೃಷ್ಟಿಸಿದ ಸಾರ್ವಜನಿಕ ಗ್ರಹಿಕೆಯನ್ನೇ ಎಲ್ಲರೂ ನಂಬಿದರು. ಆದರೆ, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಾರ್ವಜನಿಕಗ ಗ್ರಹಿಕೆಗೆ ಮಾನ್ಯತೆ ಇಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಲಯ ಹೇಳಿತು.

ಕಲ್ಲಿದ್ದಲು ವಿವಾದ

  • ಜುಲೈ 1992 ರಲ್ಲಿ ಕಲ್ಲಿದ್ದಲು ಸಚಿವಾಲಯವು ಗಣಿಗಾರಿಕೆಗೆ ಸಂಬಂಧಿಸಿದಂತೆ ಸ್ಕ್ರೀನಿಂಗ್ ಪ್ರಸ್ತಾಪಗಳಿಗೆ ಒಂದು ಸ್ಕ್ರೀನಿಂಗ್ ಸಮಿತಿಯನ್ನು ನೇಮಿಸಿ ಖಾಸಗಿ ವಿದ್ಯುತ್ ಉತ್ಪಾದನಾ ಕಂಪೆನಿಗಳಿಂದ ಪಡೆದುಕೊಂಡ ಬೇಡಿಕೆಗಳಿಗೆ ಮಂಜೂರು ಮಾಡಲು ನಿಯಮಗಳ ಸೂಚನೆಗಳನ್ನು ನೀಡಿತು. " ಕಮಿಟಿಯಲ್ಲಿ , ರೈಲ್ವೆ ಸಚಿವಾಲಯದ, ಮತ್ತು ಸಂಬಂಧಿತ ರಾಜ್ಯ ಸರ್ಕಾರದಿಂದ ಸಮಿತಿಯು ಸರ್ಕಾರಿ ಅಧಿಕಾರಿಗಳನ್ನು ನೇಮಿಸಿತು. "ಸರ್ಕಾರಿ ಅಧೀನದ ಸಿಐಎಲ್ ಮತ್ತು ಎಸ್ಎಸ್ಸಿಎಲ್‍ನ ಉತ್ಪಾದನಾ ಯೋಜನೆಗೆ ಸೇರಿರದ ಹಲವಾರು ಕಲ್ಲಿದ್ದಲು ಬ್ಲಾಕ್‍ಗಳನ್ನು (ಗಣಿ ಪ್ರದೇಶ) ಸಿಐಎಲ್ / ಎಸ್ಎಸ್ಸಿಎಲ್ನೊಂದಿಗೆ ಸಮಾಲೋಚಿಸಿ ಗುರುತಿಸಲಾಯಿತು ಮತ್ತು 143 ಕಲ್ಲಿದ್ದಲು ಬ್ಲಾಕ್‍ಗಳ ವಿವರಗಳನ್ನು ತಯಾರಿಸಲಾಯಿತು ಮತ್ತು ಸಾರ್ವಜನಿಕ ಮಾಹಿತಿಗಾಗಿ ಸದರಿ ಸಚಿವಾಲಯದ ವೆಬ್ಸೈಟ್‍ನಲ್ಲಿ ಇರಿಸಲಾಯಿತು. ಯೋಜನೆಯ ಅಡಿಯಲ್ಲಿ, ಸಂಬಂಧಿತ ಕಂಪೆನಿಗಳಿಗೆ ದೊಡ್ಡ ಪ್ರಮಾಣದಲ್ಲಿ ಕಲ್ಲಿದ್ದಲು ಹಂಚಿಕೆಯಾಗಿದ್ದು, ಅನೇಕ ವರ್ಷಗಳ ಪೂರೈಕೆಗೆ ಯೋಗ್ಯವಾದ ಶುಲ್ಕವನ್ನು ನಿಗದಿಪಡಿಸಲಾಯಿತು. ಕಲ್ಲದ್ದಲು ಗಣಿಪ್ರದಶ ಮಂಜೂರಾತಿ ಪದ್ದತಿಯು ಅನೇಕ ವರ್ಷಗಳಿಂದ ನೆಡೆದು ಬಂದಿದ್ದು ಪ್ರಧಾನಿ ಸಿಂಗ್ ಅದನ್ನು ಸುಧಾರಿಸಿ ಗಣಿ ಮಂಜೂರಾತಿಗೆ ಸ್ಕೀನಿಂಗ್ -ಪರಶಿಲನಾ ಸಮಿತಿ ರಚಿಸಿದ್ದರು. ಗಣಿಮಂಜೂರು ಮಾಡವುದು ಸರ್ಕಾರದ ಆಡಳಿತ ನೀತಿಯ ಹಕ್ಕು.
  • ಆದರೆ ವಿಶೇಷ ವಿಭಾಗದ, ಗ್ರಾಹಕರ ನಿಯಂತ್ರಕರು ಮತ್ತು ಆಡಿಟರ್ ಜನರಲ್ (ಸಿಎಜಿ)ಮಾರ್ಚಿ 22, 2012 ಅವರು ಪತ್ರಿಕೆ ಹೇಳಿಕೆ ನೀಡಿ, ಸರ್ಕಾರವು ಕಲ್ಲಿದ್ದಲು ಬ್ಲಾಕ್ಗಳನ್ನು ಹರಾಜು ಮಾಡದೆ ಇರುವುದರಿಂದ 10.7 ಲಕ್ಷ ಕೋಟಿ ರೂ.ನಷ್ಟವಾಗಿದೆ ಎಂದು ಊಹೆಯ ಮೇಲೆ ಆಧಾರವಿಲ್ಲದೆ ಹೇಳಿತು. ಇದನ್ನು ಸರ್ಕಾರ "ಮಿತಿಮೀರಿದ ತಪ್ಪು ದಾವೆ" ಎಂದು ಹೇಳಿಕೆ ನೀಡಿತು. 'ಇದು ಖಜಾನೆಗೆ ಯಾವುದೇ ನಷ್ಟ ವಾಗಿರುವುದನ್ನು ತಳ್ಳಿಹಾಕಿದೆ', ಎಂದು ಸರ್ಕಾರ ಹೇಳಿತು.
  • ಈ ಕಲ್ಲಿದ್ದಲು ಬ್ಲಾಕ್ ಮಂಜೂರಾತಿ "ಹಗರಣ" ಎನ್ನಿಸಿಕೊಂಡು, ಸಂಸತ್ತಿನ ಎರಡೂ ಸದನಗಳಲ್ಲಿ ಚಂಡಮಾರುತವನ್ನು ಉಂಟುಮಾಡಿತು. ಲೋಕಸಭೆ ಮತ್ತು ರಾಜ್ಯಸಭೆಯ ಮುಂದೂಡಿಕೆಗೆ ಕಾರನವಾಯಿತು. ಪಾರದರ್ಶಕವಾದ ವಿಚಾರಣೆ ನಡೆಸಲಾಗುವುದೆಂದು ಹೇಳಿದಾಗಲೂ ಪ್ರತಿಭಟನೆಯು ಉಂಟಾಯಾಯಿತು.
  • ನಂತರ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‍ಗೆ ಸಿಎಜಿ- ಆಡಿಟರ್ ಪತ್ರವೊಂದರಲ್ಲಿ ದೈನಂದಿನ ದಿನಗಳಲ್ಲಿ ಹೊರಬಂದ ಮಾಹಿತಿಯು (ಸರಿಯಿಲ್ಲ) ಬಹಳ ಪೂರ್ವಭಾವಿ ಹಂತದಲ್ಲಿ ಚರ್ಚೆಯಲ್ಲಿದೆ ಎಂದು ಒಪ್ಪಿಕೊಂಡು ಹೇಳಿಕೆ ನೀಡಿದರು. ಅವರು ಅದು ಮುಂಚಿನ ಅಂದಾಜು, ಅಂತಿಮ ಡ್ರಾಫ್ಟ್ ಅಲ್ಲ ಮತ್ತು ಆದ್ದರಿಂದ, ಅವು ಹೆಚ್ಚಿನ ತಪ್ಪು ತಿಳುವಳಿಕೆಗೆ ದಾರಿಮಾಡಿದೆ' ಎಂದರು. ನಂತರ ಸಿಎಜಿ (ಆಡಿಟರ್) ಸ್ಥಿರ ಬೆಲೆಯ ಆಧಾರದ ಮೇಲೆ ಮತ್ತು ೫೦ ವರ್ಷದಿಂದ ಮತ್ತ ವಾಜಪೇಯಿ ಕಾಲದಲ್ಲೂ ನೆಡೆದು ಬಂದ ಮಂಜೂರಾತಿ ಪದ್ಧತಿಯನ್ನು ನಿರಾಕರಿಸಿ, 1992 ರಿಂದ ಮಾರ್ಚ್ 31, 2011 ರವರೆಗೆ ಹಂಚಿಕೆ ವರ್ಷದಲ್ಲಿ ನಡೆಯುತ್ತಿರುವ ಬೆಲೆಗಳ ಆಧಾರದ ಮೇಲೆ ಹರಾಜು ಹಾಕದೆ ಇರುವುದರಿಂದ 3.37 ಲಕ್ಷ ಕೋಟಿ ಪಿಎಸ್ಯುಗಳಿಗೆ ಮತ್ತು 2.94 ಲಕ್ಷ ಕೋಟಿ ರೂ.ನಷ್ಟವಾಗುವುದು (ಹರಾಜು ಹಾಕಿದ್ದರೆ 2.94 ಲಕ್ಷ ಕೋಟಿ ರೂ.ಹೆಚ್ಚು ಬರುತ್ತಿತ್ತು ಎಂದು) ಎಂದು ಊಹಾತ್ಮಕ ನಷ್ಟ ತೋರಿಸಿದರು. ಈ ಉಹಾತ್ಮಕ ಹರಾಜು ಬೆಲೆ 3.37 ಲಕ್ಷ ಕೋಟಿ ರೂ. ನಂತರ ಸರ್ಕಾರದ ದುರುಪಯೋಗ ಎಂದು ವಿರೋಧ ಪಕ್ಷದವರು ಪ್ರಚಾರ ಮಾಡಲು ಅನುಕೂಲವಾಯಿತು.
  • ಬಹಳ ಹಿಂದಿನಿಂದ ಬಂದ ಪದ್ದತಿಯನ್ನೇ ಅನುಸರಿಸಿ, ಅದನ್ನು ಸುಧಾರಿಸಿ ಕಲ್ಲಿದ್ದಲು ಗುತ್ತಿಗೆ ನೀಡಿದ್ದರೂ, ಹರಾಜು ಹಾಕದೆ ಇರುವುದರಿಂದ 3.37 ಲಕ್ಷ ಕೋಟಿ ಸರ್ಕಾರಕ್ಕೆ ನಷ್ಟವೆಂದು ಆಡಿಟರ್ ಹೀಗೆ ಅಂದಾಜಿನ ಮೇಲೆ ಊಹಾತ್ಮಕವಾಗಿ ವರದಿ ಕೊಟ್ಟುದರಿಂದ ಸರ್ಕಾರ ಬ್ರಷ್ಟಾಚಾರದಲ್ಲಿ ತೊಡಗಿದೆ ಎಂದು ವಿರೋಧ ಪಕ್ಷಗಳು ಪ್ರಚಾರ ಮಾಡಿದವು. ಇದು ಮುಂದಿನ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಅನನುಕೂಲವಾಗಿ ಪರಿಣಮಿಸಿತು. ಕಲ್ಲಿದ್ದಲು ಭೂಮಿಯನ್ನು ಹರಾಜು ಹಾಕುವ ಪದ್ದತಿ ಮೊದಲಿಂದಲೂ ಇರಲಿಲ್ಲ.ಸರ್ಕಾರ ಅದರ ಲಭ್ಯತೆಯ ಆಧಾರದ ಮೇಲೆ ಮಂಜೂರು ಮಾಡುತ್ತಿತ್ತು.
  • 2 ಜಿ ಸ್ಪೆಕ್ಟ್ರಂ ಮತ್ತು ಕಲ್ಲಿದ್ದಲು ಗಣಿಗಾರಿಕೆ ಪ್ರಕರಣ,, ಆದರ್ಶ್ ಹೌಸಿಂಗ್ ಸೊಸೈಟಿ ಹಗರಣ ಮತ್ತು ಕಾಮನ್ವೆಲ್ತ್ ಗೇಮ್ಸ್‍ನಲ್ಲಿ ಅಪವಾದ ಸೇರಿದಂತೆ ಹಲವು ಹಗರಣಗಳು 2014 ರ ಲೋಕಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಭಾರಿ ಸೋಲಿಗೆ ಕಾರಣವಾಯಿತು. ಚುನಾವಣೆ. ವಿನೋದರಾಯ್ ಹೇಳಿದ ಹರಾಜು ಹಾಕಿದರೆ ಊಹೆಯ ಕಾಲ್ಪನಿಕ ನಷ್ಟವನ್ನು 176,000 ಮತ್ತು ಕಲ್ಲಿದ್ದಲಿನ ಹರಾಜು ಹಾಕಿದ್ದರೆ ಬರಬಹುದಾದ ರೂ.3,20,000 ಕೋಟಿಯ ಕಾಲ್ಪನಿಕ ನಷ್ಟವನ್ನು ದುರುಪಯೋಗ ಪಡಿಸಿದ್ದಾರೆಂದು ವಿರೋಧ ಪಕ್ಷಗಳು ಪ್ರಚಾರ ಮಾಡಿದವು. ಇದು ಯುಪಿಎ ಸರಕಾರದ ಭಾರಿ ಸೋಲಿಗೂ ಬಿಜೆಪಿಯ ಭಾರಿ ಗೆಲುವಿಗೂ ಕಾರಣವಾಯಿತು. ಇದಕ್ಕಾಗಿ ನಂತರ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಆಡಿಟರ್ ವಿನೋದ ರಾಯ್‍ಗೆ ಪದ್ಮಶ್ರೀ ಪ್ರಶಸ್ತಿ ಪದಕ ಕೊಟ್ಟು ಸನ್ಮಾನಿಸಿತು.
  • ಕಾಮನ್ವೆಲ್ತ್ ಗೇಮ್ಸ್‍ನಲ್ಲಿ ಅದರ ಸಮಿತಿಯಿಂದ ಆದ ರೂ.100 - 200 ಕೋಟಿ ದುಬಾರಿ ಖರೀದಿಯನ್ನು ಕ್ರೀಡಾ ವ್ಯವಸ್ಥೆಯ ಎಲ್ಲಾ ವೆಚ್ಚವನ್ನೂ ಸೇರಿಸಿ 70-80 ಸಾವಿರ ಕೋಟಿಯ ಹಗರಣ ಎಂದು ಪ್ರಚಾರಮಾಡಿದವು. ಭ್ರಷ್ಟಾಚಾರದ ಆರೋಪಗಳ ತೀವ್ರತೆ ಕಾಂಗ್ರೆಸ್ ಮತ್ತು ಪಕ್ಷಗಳ ನಡುವಿನ ನಂಬಿಕೆಯ ನಷ್ಟಕ್ಕೆ ಕಾರಣವಾಯಿತು.

ಬೆಳವಣಿಗೆ ಮತ್ತು ವಿವಾದಗಳು

  • ೨೦೧೦ ರಲ್ಲಿ ಆದರ್ಶ್ ಹೌಸಿಂಗ್ ಸೊಸೈಟಿ ಹಗರಣ. 2011 ರ ಮಧ್ಯಭಾಗದಲ್ಲಿ, ಅಣ್ಣಾ ಹಜಾರೆ, ಒಬ್ಬ ಪ್ರಮುಖ ಸಾಮಾಜಿಕ ಕಾರ್ಯಕರ್ತ, ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸಿ, ಭ್ರಷ್ಟಾಚಾರ ನಿಗ್ರಹಿಸಲು "ಲೋಕಪಾಲ್" ತನಿಖಾ ಸಂಸ್ಥೆಯ ಶಾಸನವನ್ನು ರಚಿಸಬೇಕೆಂದು ದೆಹಲಿಯಲ್ಲಿ 12 ದಿನಗಳ ಉಪವಾಸ ಸತ್ಯಾಗ್ರಹ ಇವು ಸರ್ಕಾರದ ಜನಪ್ರಿಯತೆ ಕುಗ್ಗಿಸಿದವು.[೬೫]
  • ಏಪ್ರಿಲ್ 2013 ರಲ್ಲಿ, ಕಲ್ಕತ್ತಾದ ಶಾರದಾ ಗ್ರೂಪಿನ ಹಣಕಾಸಿನ ಹಗರಣವನ್ನು ಪತ್ತೆಹಚ್ಚಲಾಯಿತು, ಪೂರ್ವ ಭಾರತದಲ್ಲಿನ ಸುಮಾರು 200 ಖಾಸಗಿ ಕಂಪೆನಿಗಳ ಒಕ್ಕೂಟವಾದ ಶಾರದಾ ಗ್ರೂಪ್ ನಡೆಸುತ್ತಿದ್ದ ಪೋಂಜಿ ಯೋಜನೆಯ ದಿವಾಳಿಯ ಕಾರಣದಿಂದಾಗಿ, 17 ಲಕ್ಷಕ್ಕಿಂತ ಹೆಚ್ಚಿನ ಠೇವಣಿದಾರ ರೂ.200-300 ಶತಕೋಟಿ ನಷ್ಟವಾಯಿತು. ಠೇವಣಿದಾರರಿಗೆ ತಲಾ ಕೇವಲ Rs.10,000 ಹಿಂತಿರುಗೆಸಬಹುದೆಂದು ಊಹಿಸಲಾಯಿತು.
  • ಡಿಸೆಂಬರ್ 2013 ರಲ್ಲಿ ಭಾರತದ ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್ ಐಪಿಸಿ ಸೆಕ್ಷನ್ 377 ರ ತೀರ್ಪನ್ನು ತಳ್ಳಿಹಾಕಿತು, ಸಲಿಂಗಕಾಮಿ ಲೈಂಗಿಕತೆಯನ್ನು ಮತ್ತೊಮ್ಮೆ ದೇಶದಲ್ಲಿ ವಯಸ್ಕರ ನಡುವೆ ಅಪರಾಧ ಎಂದು ಈ ತೀರ್ಪು ಮಾಡಿದೆ. ಸಂಸತ್ತು ಮಾತ್ರ ಆ ಕಾನೂನನ್ನು ಬದಲಾಯಿಸುವ ಅಧಿಕಾರವನ್ನು ಹೊಂದಿದೆ, ಎಂದು ಸುಪ್ರೀಂ ಕೋರ್ಟ್ ತೀರ್ಮಾನಿಸಿತು

ಸಕಾರಾತ್ಮಕ ಬೆಳವಣಿಗೆ

  • ಇವೆಲ್ಲವುಗಳ ಹೊರತಾಗಿಯೂ, ಸಮಗ್ರ ದೇಶೀಯ ಉತ್ಪನ್ನದಲ್ಲಿ ಹೆಚ್ಚಿನ ಬೆಳವಣಿಗೆ ದರವನ್ನು ಹೊಂದಿ ಭಾರತವು ಹೆಚ್ಚಿನ ಭರವಸೆಯನ್ನು ತೋರಿಸಿದೆ. 2011 ರ ಜನವರಿಯಲ್ಲಿ, ಭಾರತವು 2011-12 ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ (ಸೆಕ್ಯುರಿಟಿ ಕೌನ್ಸಿಲ್) ಅಶಾಶ್ವತ ಸ್ಥಾನವನ್ನು ಪಡೆದುಕೊಂಡಿದೆ. 2004 ರಲ್ಲಿ, ಬ್ರೆಜಿಲ್, ಜರ್ಮನಿ ಮತ್ತು ಜಪಾನ್ಗಳೊಂದಿಗೆ ಯುಎನ್ ಸೆಕ್ಯುರಿಟಿ ಕೌನ್ಸಿಲ್ನಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತವು ಅರ್ಜಿಯನ್ನು ಹಾಕಿ ಒತ್ತಾಯವನ್ನು ಪ್ರಾರಂಭಿಸಿತು. ಮಾರ್ಚ್‍ನಲ್ಲಿ ಭಾರತ ಚೀನಾವನ್ನು ಪ್ರಪಂಚದ ಅತಿದೊಡ್ಡ ಆಮದುದಾರನನ್ನಾಗಿ ಮಾಡಿತು. 2011-12ರಲ್ಲಿ ತೆಲಂಗಾಣ ಚಳುವಳಿಯು ಉತ್ತುಂಗಕ್ಕೇರಿತು. ಈ ಚಳುವಳಿಯಿಂದ ಭಾರತದ 29 ನೆಯ ರಾಜ್ಯ, ತೆಲಂಗಾಣವು ಜೂನ್ 2014 ರಲ್ಲಿ ಉದಯಿಸಿತು.[೬೫]
  • 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ (ನಿರ್ಭಯಾ) ಮತ್ತು ನಂತರದ ಸಮಾಜದ ನಾಗರಿಕ ಪ್ರತಿಭಟನೆ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಬದಲಾವಣೆಗಳನ್ನು ಉಂಟುಮಾಡಿತು. ನಿರ್ಭಯಾ ಪ್ರಕರಣರಲ್ಲಿ ಸರ್ಕಾರದ ಪಾತ್ರವಿಲ್ಲದಿದ್ದರೂ ಸರ್ಕಾರಕ್ಕೆ ಕೆಟ್ಟ ಹೆರನ್ನೂ ತಂದಿತು.[೬೫]

ಆಧಾರ್- ವಿಶಿಷ್ಟ ಗುರುತಿನ ಚೀಟಿಯ ಯೋಜನೆ

  • ಆಧಾರ್ ಎಂಬುದು 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದ್ದು, ಇದು ಭಾರತದ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಡೇಟಾವನ್ನು ಆಧರಿಸಿ ಭಾರತದ ನಿವಾಸಿಗಳಿಂದ ಪಡೆಯುವುದು. ಆಧಾರ್ (ಉದ್ದೇಶಿತ ವಿತರಣಾ ವಿತರಣೆಯನ್ನು ಅನುಸರಿಸಿ) ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರ ವ್ಯಾಪ್ತಿಯಲ್ಲಿ, ಜನವರಿ 2009 ರಲ್ಲಿ ಭಾರತ ಸರ್ಕಾರವು ಸ್ಥಾಪಿಸಿದ ಕಾನೂನುಬದ್ಧ ಅಧಿಕಾರದಿಂದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ- The Unique Identification Authority of India (UIDAI), a statutory authority ) ಈ ಡೇಟಾವನ್ನು ಸಂಗ್ರಹಿಸುತ್ತದೆ. ಹಣಕಾಸು ಮತ್ತು ಇತರ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳು ಇವುಗಳನ್ನು ಪಡೆಯಲು ಉಪಯೋಗಿಸುವ ಗುರುತಿನ ಚೀಟಿ.(ಆಕ್ಟ್, 2016. Aadhaar - Targeted Delivery of Financial and other Subsidies, benefits and services) Act, 2016)
  • ಯೋಜನಾ ಆಯೋಗವು ಅಧಿಸೂಚನೆಯನ್ನು ನೀಡಿದ ನಂತರ ಯುಐಡಿಎಐ 28 ಜನವರಿ 2009 ರಂದು ಸ್ಥಾಪಿಸಲ್ಪಟ್ಟಿತು. ಜೂನ್ 23 ರಂದು ಇನ್ಫೋಸಿಸ್‍ನ ಸಹ ಸಂಸ್ಥಾಪಕರಾದ ನಂದನ್ ನಿಲೇಕಣಿ ಅವರು ಯೋಜನೆಯನ್ನು ಮುನ್ನಡೆಸಲು ಯುಪಿಎ ಸರ್ಕಾರವು ನೇಮಕ ಮಾಡಿತು. ಅವರಿಗೆ ಯುಐಡಿಎಐನ ಹೊಸದಾಗಿ ನೇಮಕಗೊಂಡ ಸ್ಥಾನ ನೀಡಲಾಯಿತು, ಇದು ಕ್ಯಾಬಿನೆಟ್ ಸಚಿವರ ಸ್ಥಾನಕ್ಕೆ ಸಮಾನವಾಗಿತ್ತು. ಏಪ್ರಿಲ್ 2010 ರಲ್ಲಿ ಲೋಗೋ ಮತ್ತು ಬ್ರ್ಯಾಂಡ್ ಹೆಸರು ಆಧಾರ್ ಅನ್ನು ನೀಲೇಕನಿ ಪ್ರಾರಂಭಿಸಿದರು. ಮೇ 2010 ರಲ್ಲಿ ಯುಐಡಿಎಐ ನಡೆಸಿದ ದತ್ತಾಂಶವನ್ನು ರಕ್ಷಿಸಲು ಕಾನೂನು ಬೆಂಬಲ ನೀಡುವುದಾಗಿ ನಿಲೇಕಣಿ ಹೇಳಿದರು.
  • ಜುಲೈ 2010 ರಲ್ಲಿ ಯುಐಡಿಎಐ ದಾಖಲಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಿಬ್ಬಂದಿಗೆ ತರಬೇತಿ ನೀಡಲು ಅರ್ಹತೆ ಪಡೆದ 15 ಸಂಸ್ಥೆಗಳ ಪಟ್ಟಿಯನ್ನು ಪ್ರಕಟಿಸಿತು. ಇದು ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಯೋಗ್ಯವಾದ 220 ಸಂಸ್ಥೆಗಳ ಪಟ್ಟಿಯನ್ನು ಪ್ರಕಟಿಸಿತು. ಇದಕ್ಕಿಂತ ಮುಂಚೆ, ಯೋಜನೆಯು ಕೇವಲ 20 ರಾಜ್ಯಗಳು ಮತ್ತು ಭಾರತದ ಎಲ್ಐಸಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಹ ನೋಂದಾಯಿತ ಸಂಸ್ಥೆಯಾಗಿತ್ತು. ಈ ಘೋಷಣೆಯು ಹಲವಾರು ಖಾಸಗಿ ಸಂಸ್ಥೆಗಳಿಗೆ ಉದ್ಯೋಗ ಅವಕಾಶ ನೀಡಿತು. ಎರಡು ವರ್ಷಗಳಲ್ಲಿ ಶೇ.40 ರಷ್ಟು ಜನಸಂಖ್ಯೆ, 31,019 ಸಿಬ್ಬಂದಿ ಮತ್ತು 155 ತರಬೇತಿ ಕೇಂದ್ರಗಳನ್ನು ಮಾಡಿ, ಗುರಿಯನ್ನು ಸಾಧಿಸುವುದೆಂದು ಅಂದಾಜಿಸಲಾಗಿತ್ತು. 4,431 ನೋಂದಣಿ ಕೇಂದ್ರಗಳು ಮತ್ತು 22,157 ದಾಖಲಾತಿ ಕೇಂದ್ರಗಳನ್ನು ಸ್ಥಾಪಿಸಿತ್ತು ಎಂದು ಅಂದಾಜಿಸಲಾಗಿದೆ.
  • 26 ನವೆಂಬರ್ 2012 ರಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಆಧಾರ್-ಸಂಯೋಜಿತ ನೇರ ಲಾಭ ವರ್ಗಾವಣೆ ಯೋಜನೆಯನ್ನು ಪ್ರಾರಂಭಿಸಿದರು. ಈ ಹಣವನ್ನು ವ್ಯವಸ್ಥೆಯಲ್ಲಿ ಸೋರಿಕೆಗಳನ್ನು ತೊಡೆದುಹಾಕುವ ಉದ್ದೇಶದಿಂದ ಹಣವನ್ನು ನೇರವಾಗಿ ಸ್ವೀಕರಿಸುವವರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ. 1 ಜನವರಿ 2013 ರಂದು 51 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಪರಿಚಯಿಸಲಾಯಿತು. ಮತ್ತು ನಂತರ ಭಾರತದ ಎಲ್ಲಾ ಭಾಗಗಳಿಗೆ ನಿಧಾನವಾಗಿ ವಿಸ್ತರಿಸಲಾಯಿತು.

ಪ್ರಕೃತಿ ವಿಕೋಪ

  • ಆಗಸ್ಟ್ 2010 ರಲ್ಲಿ, ಉತ್ತರ ಭಾರತದ ಲಡಾಖ್ ಪ್ರದೇಶದಲ್ಲಿ ಮೇಘ-ಸ್ಫೋಟಗಳು ಮತ್ತು ನಂತರದ ಪ್ರವಾಹದ ಪರಿಣಾಮವಾಗಿ ಸುಮಾರು 255 ಜನರ ಸಾವಿಗೆ ಕಾರಣವಾಯಿತು, 9,000 ಜನರು ನೇರವಾಗಿ ಹಾನಿಗೊಲಗಾದರು. ಜೂನ್ 2013 ರಲ್ಲಿ, ಉತ್ತರಾಖಂಡ್ ಮತ್ತು ಇತರ ಉತ್ತರ ಭಾರತದ ರಾಜ್ಯಗಳ ಬಹು-ದಿನದ ಮೋಡದ ಬಿರುಗಾಳಿಯು ವಿನಾಶಕಾರಿ ಪ್ರವಾಹಗಳನ್ನೂ ಮತ್ತು ಭೂಕುಸಿತಗಳನ್ನು ಉಂಟುಮಾಡಿತು, 5,700 ಕ್ಕಿಂತ ಹೆಚ್ಚು ಜನರು "ಸತ್ತರು ಎಂದು ಭಾವಿಸಲಾಗಿದೆ." ಸೆಪ್ಟೆಂಬರ್ 2014 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ರಾಜ್ಯಗಳಲ್ಲಿ ಭಾರೀ ಪ್ರಮಾಣದ ಮಳೆಯ ಕಾರಣದಿಂದಾಗಿ ಮಳೆಯು ಸುಮಾರು 277 ಜನರ ಸಾವಿಗೆ ಕಾರಣವಾಯಿತು ಮತ್ತು ಆಸ್ತಿಗೆ ವ್ಯಾಪಕ ಹಾನಿಯಾಯಿತು. ಇದರಿಂದ ಪಕ್ಕದ ಪಾಕಿಸ್ತಾನಿ ಪ್ರದೇಶಗಳಲ್ಲಿ, ನಿರ್ದಿಷ್ಟವಾಗಿ ಪಾಕಿಸ್ತಾನದ ಪಂಜಾಬ್ನಲ್ಲಿ ಮತ್ತಷ್ಟು 280 ಜನರು ಸಾವನ್ನಪ್ಪಿದರು.
  • ಆಗಸ್ಟ್ - ಸೆಪ್ಟೆಂಬರ್ 2013 ರಲ್ಲಿ, ಉತ್ತರಪ್ರದೇಶದ ಮುಜಫರ್ ನಗರದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಘರ್ಷಣೆಗಳು ಕನಿಷ್ಠ 62 ಸಾವುಗಳು, [73] ಗಾಯಗೊಂಡವು 93, ಮತ್ತು 50,000 ಕ್ಕಿಂತಲೂ ಹೆಚ್ಚು ಸ್ಥಳಾಂತರಗೊಂಡವು."

ಮಂಗಳ ಯಾನ

ಭಾರತ ಗಣರಾಜ್ಯದ ಇತಿಹಾಸ 
ಮಾರ್ಸ್ ಆರ್ಬಿಟರ್ ಮಿಷನ್-
  • ನವೆಂಬರ್ 2013 ರಲ್ಲಿ, ಮಂಗಳ ಗ್ರಹಕ್ಕೆ ಮಂಗಳಯಾನ ಎಂಬ ಹೆಸರಿನಿಂದ ಕರೆಯಲ್ಪಡುವ ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ಭಾರತವು ತನ್ನ ಮೊದಲ ಅಂತರಿಕ್ಷ ತಂತ್ರಜ್ಞಾನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ಅದು ಯಶಸ್ವಿಯಾಯಿತು, ಆದ್ದರಿಂದ ಇಸ್ರೊ 24 ಸೆಪ್ಟೆಂಬರ್ 2014 ರಂದು, ಸೋವಿಯತ್ ಬಾಹ್ಯಾಕಾಶ ಕಾರ್ಯಕ್ರಮದ ನಂತರ ಮಂಗಳ ಗ್ರಹವನ್ನು ತಲುಪಿದ ನಾಲ್ಕನೇ ಬಾಹ್ಯಾಕಾಶ ಸಂಸ್ಥೆಯಾಯಿತು. ಸೋವಿಯತ್ ದೇಶ, ನಾಸಾ, ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಇವು ಮೊದಲ ಮೂರು ಸ್ತಾನಗಳನ್ನು ಹೊಂದಿದೆ. ಭಾರತ ತನ್ನ ಮೊದಲ ಪ್ರಯತ್ನದಲ್ಲಿ ಮಾರ್ಸ್ ತಲುಪಿದ ಮೊದಲ ದೇಶವಾಗಿದೆ. ಇಸ್ರೊ (ISRO) ಮೊದಲ ಬಾಹ್ಯಾಕಾಶ ಸಂಸ್ಥೆಯಾಗಿದೆ.

2014 -ಮತ್ತೆ ಭಾರತೀಯ ಜನತಾ ಪಕ್ಷದ ಸರ್ಕಾರ

೨೦೧೪ರ ಚುನಾವಣೆ

ಭಾರತ ಗಣರಾಜ್ಯದ ಇತಿಹಾಸ 
ನರೇಂದ್ರ ಮೋದಿ ಪ್ರಧಾನ ಮಂತ್ರಿ 2015
ಭಾರತ ಗಣರಾಜ್ಯದ ಇತಿಹಾಸ 
ರಾಮನಾಥ ಕೋವಿಂದ್: ರಾಷ್ಟ್ರಾಧ್ಕ್ಷರು
  • ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ
  • ಹಿಂದು ರಾಷ್ಟ್ರೀಯತೆಯನ್ನು ಎತ್ತಿಹಿಡಿಯುವ ನೀತಿಯನ್ನು ಮುಂದಿಟ್ಟುಕೊಂಡ ಹಿಂದುತ್ವ ಚಳುವಳಿಯು 1920 ರ ದಶಕದಲ್ಲಿ ಹುಟ್ಟಿಕೊಂಡಿತು. ಅದು ಭಾರತದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದು ಉಳಿದಿದೆ. 1980 ರಲ್ಲಿ ಸ್ಥಾಪನೆಯಾದಂದಿನಿಂದ, ಧಾರ್ಮಿಕ ಹಕ್ಕಿನ ಪ್ರತಿಪಾದನೆ ಮತ್ತು ಧಾರ್ಮಿಕ ಬೆಂಬಲದಿಂದ ಪ್ರಮುಖ ಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ) ಚುನಾವಣೆಯಲ್ಲಿ ಗೆದ್ದಿತು. 2004 ರಲ್ಲಿ ನಡೆದ ಚುನಾವಣೆಯಲ್ಲಿ ಪಡೆದ ಸೋಲಿನ ನಂತರ ಕಾಂಗ್ರೆಸ್ ಪಕ್ಷದ ಸಮ್ಮಿಶ್ರ ಸರಕಾರದ ವಿರುದ್ಧದ ಪ್ರಮುಖ ಪಕ್ಷಗಳಲ್ಲಿ ಒಂದಾಗಿತ್ತು. ಅದು ಒಂದು ಪೂರ್ಣ ಬಹುಮತವನ್ನು ಗಳಿಸಿತು. ರಾಷ್ಟ್ರೀಯ ಡೆಮಾಕ್ರಟಿಕ್ ಅಲಯನ್ಸ್ ಒಟ್ಟಾಗಿ 336 ಸೀಟುಗಳನ್ನು ಪಡೆದುಕೊಂಡು ಗೆಲುವು ಸಾಧಿಸಿತು. ಬಿಜೆಪಿ 31.0% ಮತಗಳನ್ನು ಪಡೆದುಕೊಂಡಿತು. ಸ್ವಾತಂತ್ರ್ಯದ ನಂತರ ಭಾರತದಲ್ಲಿ ಬಹುಮತದ ಸರ್ಕಾರ ರಚಿಸುವ ಪಕ್ಷಕ್ಕೆ ಇದು ಅತಿ ಕಡಿಮೆ ಪ್ರಮಾಣದ ಮತಗಳಿಕೆ. ಎಂದರೆ ಇಷ್ಟು ಕಡಿಮೆ ಪ್ರಮಾಣ (ಶೇ.೩೧) ಮತಗಳಿಸಿ ಪೂರ್ಣ ಬಹುಮತ ಪಡೆದಿರುವುದು ಇದೇ ಮೊದಲು.
ಭಾರತ ಗಣರಾಜ್ಯದ ಇತಿಹಾಸ 
ನರೇಂದ್ರ ಮೋದಿ ವಿದೇಶ ಪ್ರವಾಸ
  • ಹಿಂದೆ ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕರಾಗಿದ್ದ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ 27 ಮೇ 2014 ರಂದು ಅಧಿಕಾರ ಸ್ವೀಕರಿಸಿದರು ಮತ್ತು ಸರ್ಕಾರವನ್ನು ರಚಿಸಿದರು. ಮೋದಿ ಸರಕಾರದ ವ್ಯಾಪಕ ಜನಬೆಂಬಲ ಮತ್ತು ಜನಪ್ರಿಯತೆ ಕಾರಣ ಬಿಜೆಪಿಯು ಭಾರತದಲ್ಲಿ ಹಲವಾರು ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಜಯಗಳಿಸಲು ನೆರವಾಯಿತು. ಮೋದಿ ಸರ್ಕಾರವು ಉತ್ಪಾದನೆ ಮತ್ತು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಅನೇಕ ಉಪಕ್ರಮಗಳು ಮತ್ತು ಕಾರ್ಯಾಚರಣೆಗಳನ್ನು ಜಾರಿಗೊಳಿಸಿತು - ಗಮನಾರ್ಹವಾಗಿ - ಭಾರತದಲ್ಲಿ, ಡಿಜಿಟಲ್ ಇಂಡಿಯಾ ಮತ್ತು ಸ್ವಚ್ ಭಾರತ್ ಅಭಿಯಾನ.

2018 ರಲ್ಲಿ ಲೋಕಸಭೆ

  • ೨೦೧೮(2018): ಲೋಕಸಭಾ ಉಪಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆದ ಬಿಜೆಪಿ, 539 ಸದಸ್ಯರ ಸದನದಲ್ಲಿ 272 ಸ್ಥಾನ ಹೊಂದಿದೆ. ಲೋಕಸಭೆಯು 543 ಚುನಾಯಿತ ಸದಸ್ಯರನ್ನು ಹೊಂದಿದೆ ಆದರೆ ಅದರ ನಾಲ್ಕು ಸ್ಥಾನಗಳನ್ನು ಪ್ರತಿನಿಧಿಸಲಾಗಿಲ್ಲ. ಕರ್ನಾಟಕದ ಮೂವರು ಸಂಸದರು ರಾಜೀನಾಮೆ ನೀಡಿರುವ ಸಂದರ್ಭದಲ್ಲಿ, ಕಾಶ್ಮೀರದ ಅನಂತನಾಗ್ ಕ್ಷೇತ್ರವು ಕಳೆದ ವರ್ಷ ಮೇ ಯಲ್ಲಿ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟ ನಂತರ ಖಾಲಿಯಾಗಿತ್ತು. ಇದು ಬಿಜೆಪಿ ಬಲ ಲೋಕಸಬೆಯಲ್ಲಿ ಅಂಕವನ್ನು 270 ಕ್ಕೆ ತರುತ್ತದೆ. ಆದಾಗ್ಯೂ, ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಬಿಜೆಪಿಆದಾಗ್ಯೂ, ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಬಿಜೆಪಿಗೆ 274 ಸ್ಥಾನಗಳಿವೆ, ಏಕೆಂದರೆ ನಾಮನಿರ್ದೇಶಿತ ಸದಸ್ಯರು ಅದರಲ್ಲಿ ಸೇರಿದ್ದಾರೆ. ಅವರನ್ನು ಎಣಿಸಿ, ಬಿಜೆಪಿ 541 ಸದಸ್ಯರ ಸದನದಲ್ಲಿ 271 ಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿದೆ.(ಮೇ 31, 2018 ರ ಸ್ಥಿತಿ),

ವಿದೇಶ ಪ್ರವಾಸ

ಭಾರತ ಗಣರಾಜ್ಯದ ಇತಿಹಾಸ 
ಮುಫ್ತಿ ಮೆಹಬೂಬಾ - ಕಾಶ್ನೀರ ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೆ
  • ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಾಲ್ಕು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿ ಐದನೇ ವರ್ಷದಲ್ಲಿದೆ. ಈ ನಾಲ್ಕು ವರ್ಷಗಳಲ್ಲಿ, ಮೋದಿ ವಿದೇಶಾಂಗ ನೀತಿಯ ಬಗ್ಗೆ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರದ ನೇತೃತ್ವ ವಹಿಸಿದ್ದರು. ಆಗಸ್ಟ್ 2018 ರ ವೇಳೆಗೆ, ಪಾಕಿಸ್ತಾನ, ಭೂತಾನ್, ಅಮೆರಿಕಾ ಸಂಯುಕ್ತ ಸಂಸ್ಥಾನದ ಇಸ್ರೇಲ್ ಮತ್ತು ನೇಪಾಳ ಮೊದಲಾದ 61 ದೇಶಗಳಿಗೆ ಪ್ರಧಾನಿ ಹಲವು ಭೇಟಿಯ ಮೂಲಕ ಭಾರತದ ವಿದೇಶಾಂಗ ನೀತಿಯಮತೆ ಸೌಹಾರ್ ಸಂಬಂಧ ಬೆಳೆಸಲು ಪ್ರಯತ್ನಿಸಿದರು. ಪ್ರಯಾಣದ ವೆಚ್ಚಗಳು ಪ್ರತಿ ಪ್ರಯಾಣಕ್ಕೆ ರೂ.2.5 ಕೋಟಿ ರೂ.ಗಳಿಂದ 22.5 ಕೋಟಿ ರೂ,ಗಳ ಖರ್ಚು ವೆಚ್ಚಗಳನ್ನು ಭಾರತ ಭರಿಸಿದೆ.

ಜಮ್ಮು ಕಾಶ್ಮೀರ

  • ಜಮ್ಮು ಮತ್ತು ಕಾಶ್ಮೀರ ಸರ್ಕಾರ ೨೦೧೪-೧೬
  • 2014 ಡಿಸೆಂಬರ್ ನಲ್ಲಿ ನೆಡೆದ ಸ್ಥಳೀಯ ಚುನಾವಣೆಗಳ ನಂತರ ವಿವಾದಿತ ಕಾಶ್ಮೀರ ಪ್ರದೇಶದ ಪ್ರಮುಖ ರಾಜಕೀಯ ಆಡಳಿತ ಭಾಗಿದಾರನಾಗಿ ಬಿಜೆಪಿ ಮೊದಲ ಬಾರಿಗೆ ಹೊರಹೊಮ್ಮಿತು. ರಾಜ್ಯ ವಿಧಾನಸಭೆಯಲ್ಲಿ ತನ್ನ ಸ್ಥಾನವನ್ನು ದ್ವಿಗುಣಗೊಳಿಸಿಕೊಂಡಿತು. ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷ ಮತ್ತು ಭಾರತೀಯ ಜನತಾಪಕ್ಷ ಒಟ್ಟಾಗಿ ಸರ್ಕಾರ ರಚಿಸಿದವು. ದಿ. 01/03/2015 ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ(ಪಿಡಿಪಿ) ಮುಖ್ಯಸ್ಥ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿಯೂ ಬಿಜೆಪಿಯ ನಿರ್ಮಲ್ ಸಿಂಗ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಸಂಮಿಸ್ರ ಸರ್ಕಾರ ರಚಿಸಿದರು. ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಜನವರಿ 7, 2016 ನಿಧನರಾದರು. ನಂತರ ಅದೇ ಒಕ್ಕೂಟದಲ್ಲಿ ಮೆಹಬೂಬಾ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡರು. ಅವರು 2018 ಜೂನ್ 20 ರಂದುಬಿಜೆಪಿ ಮೈತ್ರಿಯಿಂದ ಹೊರಗೆ ಬಂದು ಮೆಹಬೂಬಾ ರಾಜಿನಾಮೆ ನೀಡಿದರು.

೨೦೧೫

ಭಾರತ ಗಣರಾಜ್ಯದ ಇತಿಹಾಸ 
ಅಎವಿಂದ ಕೇಜ್ರಿವಾಲ್(potrait)
  • ದೆಹಲಿ ಅಸೆಂಬ್ಲಿ ಚುನಾವಣೆ
  • ದೆಹಲಿ ವಿಧಾನಸಭೆ ಚುನಾವಣೆ 2015ರ ಫೆಬ್ರವರಿ 7 ರಂದು (ಶನಿವಾರ) ನಡೆದು ಭ್ರಷ್ಟಾಚಾರ-ವಿರೋಧಿ ಎಂದು ಹೇಳಿಕೊಂಡ ಆಮ್ ಆದ್ಮಿ ಪಾರ್ಟಿ (ಎಎಪಿ) ದೆಹಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆಶ್ಚರ್ಯಕರ ಗೆಲುವು ಸಾಧಿಸಿತು. ಇದು 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಮೊದಲ ಹಿನ್ನಡೆಯಾಗಿದೆ. ಆಮ್ ಆದ್ಮಿ ಪಾರ್ಟಿಯು 70 ಕ್ಷೇತ್ರಗಳಲ್ಲಿ 67 (54.3%)ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿತು.ಬಿಜೆಪಿ 3ಸ್ತಾನ ಮಾತ್ರಾ ಗೆದ್ದಿತು. ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ರವರು ದೆಹಲಿಯ ಮುಖ್ಯಮಂತ್ರಿಗಳಾಗದರು.

ಯೋಜನಾ ಆಯೋಗ ರದ್ದು

  • ವಿಶೇಷ ಲೇಖನ:ನೀತಿ ಆಯೋಗ
  • ಪ್ರಧಾನಿ ನರೇಂದ್ರ ಮೋದಿ ಯೋಜನಾ ಆಯೋಗವನ್ನು "ನಿಯಂತ್ರಣ ಆಯೋಗ" ವನ್ನಾಗಿ ಬದಲಾಯಿಸಲುನಿರ್ಧರಿಸಿದರು. ಅದರ ಬದಲಿಗೆ 2014 ರ ಆಗಸ್ಟ್ 13 ರಂದು, ಭಾರತದ ರಾಷ್ಟ್ರೀಯ ಸಲಹಾ ಮಂಡಳಿ (ಎನ್ಎಸಿ) ಗಿಂತ ದುರ್ಬಲಗೊಳಿಸಿದ ಆವೃತ್ತಿಯಾಗಿ ಬದಲಿಸಲು ಕೇಂದ್ರ ಮಂತ್ರಿಮಂಡಲ ಯೋಜನಾ ಆಯೋಗವನ್ನು ರದ್ದುಗೊಳಿಸಿತು. ಜನವರಿ 1, 2015 ರಂದು ಯೋಜನಾ ಆಯೋಗವನ್ನು ಹೊಸದಾಗಿ ರಚನೆಯಾದ ಎನ್ಐಟಿಐ ಆಯೋಗ (NITI Aayog (National Institution for Transforming India). ನ್ಯಾಷನಲ್ ಇನ್ಸ್ಟಿಟ್ಯೂಷನ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ) ರಚಿಸಲು ಕ್ಯಾಬಿನೆಟ್ ನಿರ್ಣಯ ಮಾಡಿ ನೀತಿ ಆಯೋಗವನ್ನು ಜಾರಿಗೆ ತರಲಾಯಿತು. ಇದರಿಂದ ೬೪ ವರ್ಷಗಳಿಂದ ಇದ್ದ ಪಂಚವಾರ್ಷಿಕ ಯೋಜನೆಯ ಅಭಿವೃದ್ಧಿ ಕ್ರಮವನ್ನು ಕೈಬಿಟ್ಟು ವಾರ್ಷಿಕ ಬಜೆಟ್ಟಿನಲ್ಲಿ ಯೋಜನೆಗಳನ್ನು ವರ್ಷಕ್ಕೆ ಸೀಮಿತ ಮಾಡಲಾಯಿತು. ಹಾಗಾಗಿ ಅಭಿವೃದ್ಧಿ ಯೊಜನೆಗಳಿಗಿಂತ ಜನಪ್ರಿಯ ಯೋಜನೆಗಳಿಗೆ ಪ್ರಾಮುಖ್ತೆ ದೊರೆಯಿತು. ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿದ್ದ "ಅಭಿವೃದ್ಧಿ" ಮತ್ತು "ಉದ್ಯೋಗ ಸೃಷ್ಠಿಯ ಗುರಿ" ಹಿಂದೆ ಬಿತ್ತು.

ಬಾಂಗ್ಲಾ ಭೇಟಿ

ಭಾರತ ಗಣರಾಜ್ಯದ ಇತಿಹಾಸ 
ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಧಾನಿ ಶೇಖ್ ಹಸೀನಾ ಭೇಟಿ
  • 2015 ಜೂನ್ - ಭಾರತ ಮತ್ತು ಬಾಂಗ್ಲಾದೇಶಗಳು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದವು, ಗಡಿ ಪ್ರದೇಶಗಳಲ್ಲಿ ವಾಸಿಸುವ 50,000 ಕ್ಕಿಂತ ಹೆಚ್ಚಿನ ಜನರು ಅವರು ಯಾವ ದೇಶಗಳಲ್ಲಿ ವಾಸಿಸಲು ಅಪೇಕ್ಷಿಸುತ್ತಾರೆ ಎಂಬುದನ್ನು ಆಯ್ಕೆ ಮಾಡಲು ಅವಕಾಶಕಲ್ಪಿಸಲಾಯಿತು.
  • 2015 ಸೆಪ್ಟಂಬರ್ - ಭಾರತ ತನ್ನ ಮೊದಲ ಬಾಹ್ಯಾಕಾಶ ಪ್ರಯೋಗಾಲಯ ಆಸ್ಟ್ರೋಸಾಟ್‍ನ್ನು ಅದರ ದೊಡ್ಡ ಯೋಜನೆಯ ಅಡಿಯಲ್ಲಿ 2014 ರಲ್ಲಿ ಮಾರ್ಸ್ ಆರ್ಬಿಟರ್ ಮಿಷನ್ ಪ್ರಾರಂಭಿಸಿತು.[೬೫]

2016 -ರಾಫೇಲ್ ಫೈಟರ್ ವ್ಯವಹಾರ

  • ಇಂಗ್ಲಿಷ್ ಲೇಖನ:
    ಭಾರತ ಗಣರಾಜ್ಯದ ಇತಿಹಾಸ 
    ಡಸ್ಸಾಲ್ಟ್ ರಾಫೆಲ್ ಬಿ
  • ಲೇಖನ:ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ:
  • 2016 ರ ಸೆಪ್ಟೆಂಬರ್‍ನಲ್ಲಿ ವಿವಾದಾತ್ಮಕ 36 ರಾಫೇಲ್ ಫೈಟರ್ ಜೆಟ್ಗಳನ್ನು ಖರೀದಿಸಲು ಭಾರತವು ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದವನ್ನು ಫ್ರಾನ್ಸ್‍ನೊಂದಿಗೆ ಮಾಡಿಕೊಂಡಿತು. ಈ ಜೆಟ್ಟ್‍ಗಳಿಗೆ ಹಿಂದಿನ ಯು.ಪಿ.ಯೆ.ಯ ಆಡಳಿತ ಸಮಯದಲ್ಲಿ ಮಾಡಿಕೊಂಡಿದ್ದ ರೂ.428.57 ಕೋಟಿಯ ಬೆಲೆಯ ಒಪ್ಪಂದವನ್ನು ಮೋದಿಯವರು ರದ್ದು ಮಾಡಿ, ಅದೇ ಜೆಟ್ಟಿಗೆ ಈಗಿನ ಬೆಲೆ ತಲಾ ರೂ.1611.11 ಕೋಟಿಗೆ ನಾಲ್ಕರಷ್ಟು ದುಬಾರಿ ಒಪ್ಪಂದ ಮಾಡಿಕೊಂಡಿರುವುದ ಅವರದೇ ಪಕ್ದದವರು ಮತ್ತು ವಿರೋಧಪಕ್ಷದವರು ವಿರೋಧಿಸಿದರು. ಅದು ಮೊದಲಿನ ಒಪ್ಪಂದಕ್ಕಿಂತ ಒಂದು ಜೆಟ್ಟಿಗೆ ರೂ.1182.54 ಕೋಟಿಯಂತೆ ಒಟ್ಟು ರೂ.'Rs.42,571.44' ಕೋಟಿ ಹೆಚ್ಚು ಪಾವತಿ ಮಾಢಿರುವುದು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಕರ್ನಾಟಕದಲ್ಲಿರುವ, ಯುದ್ಧ ವಿಮಾನಗಳನ್ನು ತಯಾರಿಸಿ ಅನುಭವವಿರುವ ಎಚ್.ಎ.ಎಲ್‍ನಲ್ಲಿ ಬಿಡಿಭಾಗ ತಯಾರಿಕೆ ಮತ್ತು ಹೆಚ್ಚಿನ ವಿಮಾನಗಳನ್ನು ತಯಾರಿಸಬೇಕೆಂಬ ಷರತ್ತಿನೊಂದಿಗೆ ಹಿಂದೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಅದರ ಬದಲಿಗೆ ವಿಮಾನ ತಯಾರಿಕೆ ಅನುಭವವಿಲ್ಲದ ಆಂಬಾನಿಯ ರಿಲೆಯನ್ಸ್‍ ಕಂಪನಿಯನ್ನು ಹೊಸ ಒಪ್ಪಂದದಲ್ಲಿ ಪಾಲುದಾರಿಕೆಗೆ ಸೇರಿಸಿದೆ ಎಂಬ ದೂರು ಇದೆ.
  • ಸುಪ್ರೀಮ್ ಕೋರ್ಟಿನಲ್ಲಿ ಈ ಹಗರಣದ ಮರು ಪರಿಶೀಲನೆ ಅರ್ಜಿ ಸಲ್ಲಿಸಿದಾಗ ಭಾರತದ ಅಟಾರ್ನಿಯವರು, 'ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳವಾಗಿವೆ' ಎಂದು ಕೇಂದ್ರ ಸರ್ಕಾರವ ಪರವಾಗಿ ಸುಪ್ರೀಂ ಕೋರ್ಟ್‌ಗೆ ಹೇಳಿದರು. ಹೀಗೆ ಕಳವಾದ ದಾಖಲೆಗಳ ಆಧಾರದಲ್ಲಿ ವರದಿಗಳನ್ನು ಪ್ರಕಟಿಸುತ್ತಿರುವ ‘ದ ಹಿಂದೂ’ ಪತ್ರಿಕೆಯ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿಯೂ ಸರ್ಕಾರ ಹೇಳಿದೆ. ಆದರೆ 'ದರ' ರಹಸ್ಯಕಾಯಿದೆಯ ಅಡಿಯಲ್ಲಿ ಬರದಿರುವುದರಿಂದ ದೂರು ದಾಖಲಿಸಲಿಲ್ಲ.
  • ರಕ್ಷಣಾ ಸಚಿವಾಲಯದ ದಾಖಲೆ ಕಳವಾಗಿರುವುದು ಅತ್ಯಂತ ಗಂಭೀರ ವಿಷಯವಾಗಿದ್ದರೂ ‘ಕಳವು’ ಕುರಿತು ಪೊಲೀಸ್‌ ಇಲಾಖೆಗೆ ರಕ್ಷಣಾ ಸಚಿವಾಲಯ ಔಪಚಾರಿಕ ದೂರು ಅಥವಾ ಎಫ್‌ಐಆರ್ ಸಲ್ಲಿಸಿಲ್ಲ. ಇದು ರಾಷ್ಟ್ರೀಯ ಭದ್ರತೆಯ ಒಂದು ಪ್ರಮುಖ ಉಲ್ಲಂಘನೆ ಮತ್ತು ಪೊಲೀಸರು ಮತ್ತು ದೇಶದ ಜನರಿಂದ ಈ ಅಪರಾಧವನ್ನು ಸರ್ಕಾರ ಮರೆಮಾಚುತ್ತಿದೆ ಎಂದು ವೆಬ್ ತಾಣ ಹೇಳಿದೆ.

ನ್ಯಾಯಾಲಯಕ್ಕೆ ತಪ್ಪು ಮಾಹಿತಿ

  • ರಫೇಲ್‌ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ಕೇಂದ್ರ ಸರ್ಕಾರ ‌ನ್ಯಾಯಾಲಯವನ್ನು ತಪ್ಪು ದಾರಿಗೆಳೆದಿದೆ’ ಎಂದು ಕೇಂದ್ರದ ಮಾಜಿ ಸಚಿವರಾದ ಅರುಣ್‌ ಶೌರಿ, ಯಶವಂತ್‌ ಸಿನ್ಹಾ ಮತ್ತು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ‘ಕೇಂದ್ರ ಸರ್ಕಾರ ಸತ್ಯವನ್ನು ಮರೆಮಾಚಿದೆ. ವಿಚಾರಣೆ ಸಂದರ್ಭದಲ್ಲಿ ನಿಖರ ಮಾಹಿತಿಗಳನ್ನು ನ್ಯಾಯಾಲಯಕ್ಕೆ ನೀಡದೆ ಮುಚ್ಚಿಡಲಾಗಿದೆ’ ಎಂದು ಪ್ರತಿಪಾದಿಸಿದ್ದಾರೆ.

ಆರ್ಥಿಕ ಸುಧಾರಣೆಗಳಿಗೆ ವಿರೋಧ:

  • Indian general strike of 2016
  • ಸೆಪ್ಟೆಂಬರ್ 2016ರಲ್ಲಿ ಹೆಚ್ಚಿನ ವೇತನ ಬೇಡಿಕೆ ಮತ್ತು ಸರ್ಕಾರದ ಆರ್ಥಿಕ ಸುಧಾರಣೆಗಳ ವಿರುದ್ಧ ಪ್ರತಿಭಟಿಸಲು 24 ಗಂಟೆಗಳ ಮುಷ್ಕರದಲ್ಲಿ ಹತ್ತಾರು ಮಿಲಿಯನ್ ಕಾರ್ಮಿಕರು ಪಾಲ್ಗೊಂಡರು.

ರಫೇಲ್ ಜೆಟ್ವ್ಯವಾರದಲ್ಲಿ ಮಧ್ಯವರ್ತಿಗೆ ಹಣ

  • ಸರ್ಕಾರಗಳ ನಡುವಣ ಈ ಒಪ್ಪಂದದಲ್ಲಿ ಮಧ್ಯವರ್ತಿ ಸಂಸ್ಥೆ ಹೆಗೆ ಎಂದು ಪ್ರಾನ್ಸಿನ ತನಿಖಾಸಂಸ್ಥೆ ಮೀಡಿಯಾಪಾರ್ಟ್‌ ಪ್ರಶ್ನಿಸಿದೆ. ‘ಭಾರತ ಸರ್ಕಾರವು ಹಲವು ಹಂತದ ಪರೀಕ್ಷೆಗಳು, ಪ್ರಾತ್ಯಕ್ಷಿಕೆ ಮತ್ತು ಮುಚ್ಚಿದ ಲಕೋಟೆಯ ಟೆಂಡರ್‌ನ ನಂತರ ರಫೇಲ್‌ ಯುದ್ಧವಿಮಾನ ಖರೀದಿಗೆ ಸಮ್ಮತಿ ಸೂಚಿಸಿತ್ತು. ಈ ಎಲ್ಲಾ ಪ್ರಕ್ರಿಯೆಗಳು ಭಾರತದ ರಕ್ಷಣಾ ಸಚಿವಾಲಯದ ಮಟ್ಟದಲ್ಲಿಯೇ ನಡೆದಿತ್ತು. ಬೇರೆ ಯಾವುದೇ ಖಾಸಗಿ ಸಂಸ್ಥೆ ಇದರಲ್ಲಿ ಭಾಗಿಯಾಗಿಯೇ ಇರಲಿಲ್ಲ. ಯಾವ ಮಧ್ಯವರ್ತಿಯೂ ಇರಲಿಲ್ಲ. ಹೀಗಿದ್ದೂ ಮಧ್ಯವರ್ತಿಗೆ ಲಂಚ ನೀಡಿದ್ದು ಏಕೆ’ ಎಂದು ಮೀಡಿಯಾಪಾರ್ಟ್ ಪ್ರಶ್ನಿಸಿದೆ.
‘ಒಪ್ಪಂದದಲ್ಲಿ ಇಲ್ಲದ ಕಂಪನಿಗೆ ಹಣ’
  • ‘ಭಾರತದ ಡಿಫ್‌ಸಿಸ್ ಸೊಲ್ಯೂಷನ್ಸ್ ಎಂಬ ಕಂಪನಿಗೆ, ರಫೇಲ್ ಒಪ್ಪಂದದಲ್ಲಿ ಡಾಸೊ ಕಂಪನಿಯು 11 ಲಕ್ಷ ಯೂರೊ ಪಾವತಿ ಮಾಡಿದೆ. 2017ರಲ್ಲಿ ಎರಡು ಕಂತುಗಳಲ್ಲಿ ಈ ಹಣವನ್ನು ಪಾವತಿ ಮಾಡಲಾಗಿದೆ. ಒಪ್ಪಂದದಲ್ಲಿ ಎಲ್ಲಿಯೂ ಈ ಕಂಪನಿಯ ಉಲ್ಲೇಖವಿಲ್ಲ. ಒಪ್ಪಂದದ ಸಾಗರೋತ್ತರ ಹೂಡಿಕೆಯಲ್ಲಿಯೂ ಈ ಕಂಪನಿಯ ಉಲ್ಲೇಖ ಇಲ್ಲ. ಹೀಗಿದ್ದೂ ಈ ಕಂಪನಿಗೆ ಭಾರಿ ಪ್ರಮಾಣದ ಹಣವನ್ನು ಪಾವತಿ ಮಾಡಲಾಗಿದೆ’ ಎಂದು ಎಎಫ್‌ಎ ತನ್ನ ವರದಿಯಲ್ಲಿ ವಿವರಿಸಿದೆ. ಭಾರತದ ಡಿಫ್‌ಸಿಸ್ ಸೊಲ್ಯೂಷನ್ಸ್ ಎಂಬ ಕಂಪನಿಗೆ, ರಫೇಲ್ ಒಪ್ಪಂದದಲ್ಲಿ ಡಾಸೊ ಕಂಪನಿಯು 11 ಲಕ್ಷ ಯೂರೊ ಪಾವತಿ ಮಾಡಿದೆ. 2017ರಲ್ಲಿ ಎರಡು ಕಂತುಗಳಲ್ಲಿ ಈ ಹಣವನ್ನು ಪಾವತಿ ಮಾಡಲಾಗಿದೆ. ಒಪ್ಪಂದದಲ್ಲಿ ಎಲ್ಲಿಯೂ ಈ ಕಂಪನಿಯ ಉಲ್ಲೇಖವಿಲ್ಲ. ಒಪ್ಪಂದದ ಸಾಗರೋತ್ತರ ಹೂಡಿಕೆಯಲ್ಲಿಯೂ ಈ ಕಂಪನಿಯ ಉಲ್ಲೇಖ ಇಲ್ಲ. ಹೀಗಿದ್ದೂ ಈ ಕಂಪನಿಗೆ ಭಾರಿ ಪ್ರಮಾಣದ ಹಣವನ್ನು ಪಾವತಿ ಮಾಡಲಾಗಿದೆ’ ಎಂದು ಎಎಫ್‌ಎ ತನ್ನ ವರದಿಯಲ್ಲಿ ವಿವರಿಸಿದೆ.

೧೦೦೦ ಮತ್ತು ೫೦೦ ರೂಪಾಯಿ ನೋಟುಗಳ ಅಮಾನ್ಯೀಕರಣ

ಭಾರತ ಗಣರಾಜ್ಯದ ಇತಿಹಾಸ 
ಒಂದು ಎಸ್.ಬಿ.ಐ.ಬ್ರ್ಯಾಚ್ ರಾತ್ರಿಯಲ್ಲಿಯೂ ತೆರೆದಿದ್ದು, ಮತ್ತು ಎಟಿಎಮ್ ನಲ್ಲಿ ಕೂಡಾ ಜನರ ಸರತಿ ಸಾಲು ರಾತ್ರಿಯಲ್ಲೂ ನಿಂತಿರುವುದು.
  • ವಿವರ:ಭಾರತೀಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ಚಲಾವಣೆ ರದ್ದತಿ
  • 2016 ನವೆಂಬರ್‍ನಲ್ಲಿ ಆಶ್ಚರ್ಯಕರ ಪ್ರಕಟಣೆಯಲ್ಲಿ, ಸರ್ಕಾರವು ಹಳೆಯ ನೋಟುಗಳನ್ನು ಹೊಸದಕ್ಕೆ ವಿನಿಮಯ ಮಾಡಲು ಜನರು ಪ್ರಯಾಸ ಪಡುವ ಹಾಗೆ ಮತ್ತು ದೇಶಾದ್ಯಂತ ಬ್ಯಾಂಕ್‍ಗಳಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳನ್ನು ಉಂಟುಮಾಡುವ ಹಾಗೆ, ಚಲಾವಣೆಯಲ್ಲಿರುವ ಹೆಚ್ಚಿನ ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಮಾಡಿತು (ಹಿಂಪಡೆಯಿತು).
  • "ಅಕ್ರಮ ಅಥವಾ ಕಪ್ಪು ಹಣವನ್ನು ನಾಶಪಡಿಸಲು 2016 ರ ನವೆಂಬರ್‍ನಲ್ಲಿ ಜಾರಿಗೆ ತಂದ ನೋಟುಗಳ ಅಮಾನ್ಯೀಕರಣ (ಡಿಮಾನೈಟೈಸೇಷನ್) ಕಳಪೆಯಾಗಿ ಅವ್ಯವಸ್ಥಿತವಾಗಿ ಮತ್ತು ಅನವಶ್ಯಕವಾಗಿ ಜಾರಿ ಮಾಡಲಾಯಿತು. ನಂತರದ ವರ್ಷ, ದೇಶದ ಕೇಂದ್ರೀಯ ಬ್ಯಾಂಕ್ (ರಿಸರ್ವ್ ಬ್ಯಾಂಕ್) ಇದನ್ನು ಬಹಿರಂಗಪಡಿಸಿತು. ರದ್ದಗೊಳಿಸಿದ ಎಲ್ಲಾ ಕರೆನ್ಸಿಗಳನ್ನೂ ಈ ವ್ಯವಸ್ಥೆಯಲ್ಲಿ ಹಿಂದಕ್ಕೆ ಪಡೆದಿದೆ. ಕರೆನ್ಸಿ ಮೌಲ್ಯ 15.28 ಟ್ರಿಲಿಯನ್ ರೂಪಾಯಿ ಬ್ಯಾಂಕುಗಳಲ್ಲಿ ಠೇವಣಿಯಾಗಿದೆ, ಇದರರ್ಥ ಯಾವುದೇ ಗಮನಾರ್ಹವಾದ ಕಪ್ಪು ಹಣ ಇರಲಿಲ್ಲ, ಅಥವಾ ಸಂಗ್ರಹಣೆದಾರರು ತಮ್ಮ ದುರದೃಷ್ಟದ ಕಪ್ಪುಹಣವನ್ನು ಬದಲಾಯಿಸುವುದಕ್ಕೆ ಒಂದು ಮಾರ್ಗವನ್ನು ಕಂಡುಕೊಂಡಿದ್ದರು.
  • "ಬಡವರ ಪ್ರಯೋಜನಕ್ಕಾಗಿ ಮೋದಿಯವರು ನೋಟು ರದ್ದೀಕರಣ ಕಲ್ಪನೆಯನ್ನು ಪ್ರಯೋಗಮಾಡಿದರು (ಸರ್ಕಾರಕ್ಕೆ ಲಾಭ ವಾಗುವುದೆಂದು ಈ ಯೊಜನೆಯನ್ನ ಮಾರಾಟ ಮಾಡಿದರು). ಆದರೆ ಇದು ಬೃಹತ್ ನೀತಿ ವಿಫಲತೆಯಾಗಿ ಮಾರ್ಪಟ್ಟಿದೆ ಮತ್ತು ಕೃಷಿ ವರ್ಗವು ಇನ್ನೂ ಅದರಿಂದ ಚೇತರಿಸಿಕೊಳ್ಳುತ್ತಿದೆ." ಎಂದು ವಿಶ್ಲೇಷಕ ಎಂ ಕೆ ವೇಣು ಡಿ.ಡಬ್ಲ್ಯೂಗೆ ತಿಳಿಸಿದರು. "ಈ ಕ್ರಮವು ದೇಶದ ಅನೌಪಚಾರಿಕ ಆರ್ಥಿಕತೆಯನ್ನು ನಿಲುಗಡೆಗೆ ತಂದಿತು ಮತ್ತು ಬೆಳವಣಿಗೆಯನ್ನು ಕುಸಿಯುವಂತೆ ಮಾಡಿದೆ. ಸಣ್ಣ ಗುತ್ತಿಗೆದಾರರು ನಗದು ಕೊರತೆಯಿಂದ ಉದ್ಯಮ ನಿಲ್ಲಿಸಿದರು. ಕೂಲಿಕಾರರು ನಿರುದ್ಯೋಗದಿಂದ ಬಳಲಿದರು" ಎಂದು ವೇಣು ತಮ್ಮ ಆರ್ಥಿಕ ವಿಮರ್ಶೆಯಲ್ಲಿ ಹೇಳಿಸದ್ದಾರೆ. ಭಾರತದಲ್ಲಿ, ಮೇಕ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಸ್ಮಾರ್ಟ್ ಸಿಟೀಸ್‍ ನಂತಹ ಇತರ ದೊಡ್ಡ ಆರ್ಥಿಕ ಯೋಜನೆಗಳು ಇನ್ನೂ ಭರವಸೆಯ ನೀತಿಯೆಂದು- ಬೆಂಬಲವನ್ನು ಸ್ವೀಕರಿಸಲು ಯೊಗ್ಯವಾಲಿಲ್ಲ, ಎಂದು ವಿಶ್ಲೇಷಕರು ಹೇಳುತ್ತಾರೆ.
  • ರಿಸರ್ವ್ ಬ್ಯಾಂಕಿನ ಅಂತಿಮ ವರದಿಯಂತೆ - ನೋಟುರದ್ದಿನ ವಿಫಲತೆ
  • ಕೇಂದ್ರ ಸರ್ಕಾರವು 2016ರಲ್ಲಿ ರದ್ದು ಮಾಡಿದ ರೂ.500 ಮತ್ತು ರೂ.1,000 ಮುಖಬೆಲೆಯ ನೋಟುಗಳ ಪೈಕಿ ಶೇ 99.3ರಷ್ಟು ಬ್ಯಾಂಕುಗಳಿಗೆ ವಾಪಸಾಗಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ದಿ.೨೯-೮-೨೦೧೮ರಂದು ಹೇಳಿಕೆ ನೀಡಿತು.
  • ಹೊಸ ನೋಟುಗಳ ಮುದ್ರಣಕ್ಕೆ 12877 ರೂ. ವೆಚ್ಚವಾಗಿದೆ. ಬ್ಯಾಂಕುಗಳಿಗೆ ಹಂಚುವ ವೆಚ್ಚ ಬೇರೆ ಎಂದು ರಿಜರ್ವ್‍ಬ್ಯಾಕ್ ಹೇಳಿದೆ.
  • ಕಪ್ಪುಹಣ ಮತ್ತು ಭ್ರಷ್ಟಾಚಾರಗಳನ್ನು ತಡೆಯುವ ಉದ್ದೇಶದಿಂದ ನೋಟು ರದ್ದತಿಯ ನಿರ್ಧಾರವನ್ನು ಮೋದಿಯವರು ಕೈಗೊಂಡಿದ್ದಾಗಿ ಹೇಳಿದ್ದರು. ಆದರೆ, ಸ್ವಲ್ಪ ಪ್ರಮಾಣದ ನೋಟುಗಳು ಮಾತ್ರ ಬ್ಯಾಂಕುಗಳಿಗೆ ಹಿಂತಿರುಗಿಲ್ಲೆಂದು ಕಂಡುಬಂದಿದೆ. ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ ರೂ.13 ಸಾವಿರ ಕೋಟಿ ಮಾತ್ರ ಬ್ಯಾಂಕಿಗೆ ಬಂದಿಲ್ಲ. ಆದರೆ, ಇದಕ್ಕೆ ದೇಶ ಭಾರಿ ಬೆಲೆ ತೆರಬೇಕಾಯಿತು. ಜನರು ಉದ್ಯೋಗ ಕಳೆದುಕೊಂಡರು, ಉದ್ಯಮಗಳು ಮುಚ್ಚಿದವು ಮತ್ತು ಒಟ್ಟು ದೇಶಿ ಉತ್ಪನ್ನ ಇಳಿಕೆಯಾಯಿತು ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ‘ನೋಟು ರದ್ದತಿಯಿಂದಾಗಿ ಭಾರತದ ಜಿಡಿಪಿ ಶೇ 1.5ರಷ್ಟು ಕುಸಿತ ಕಂಡಿತು. ಇದರ ಮೌಲ್ಯವೇ ರೂ.2.25 ಲಕ್ಷ ಕೋಟಿ. ಸಾಲುಗಳಲ್ಲಿ ನಿಂತು ಬಳಲಿ ಸುಮಾರು ನೂರು (೧೦೫?) ಜನರು ಪ್ರಾಣ ಕಳೆದುಕೊಂಡರು. 15 ಕೋಟಿಯಷ್ಟು ದಿನಗೂಲಿ ನೌಕರರಿಗೆ ಹಲವು ವಾರ ಕೆಲಸವೇ ಇರಲಿಲ್ಲ. ಸಣ್ಣ ಮತ್ತು ಮಧ್ಯಮ ಗಾತ್ರದ ಸಾವಿರಾರು ಘಟಕಗಳು ಬಾಗಿಲು ಮುಚ್ಚಿದವು. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರು’ ಎಂದು ಹಿಂದಿನ ಹಣಕಾಸು ಮಂತ್ರಿ ಚಿದಂಬರಂ ಅವರು ಹೇಳಿದ್ದಾರೆ.
  • ಬ್ಯಾಂಕಿಗೆ ಹಿಂದಕ್ಕೆ ಬಾರದೇ ಇರುವ ರೂ.13 ಸಾವಿರ ಕೋಟಿಯಲ್ಲಿ ಬಹಳಷ್ಟು ನೋಟುಗಳು ನೇಪಾಳ ಮತ್ತು ಭೂತಾನ್‌ಗಳಲ್ಲಿ ಇರಬಹುದು. ಸ್ವಲ್ಪ ಪ್ರಮಾಣದ ನೋಟುಗಳು ಹಾಳಾಗಿ ಹೋಗಿರಬಹುದು, ಎಂದು ಹಿಂದಿನ ಹಣಕಾಸು ಸಚಿವ ಚಿದಂಬರಂ ಅವರು ಅಂದಾಜಿಸಿದ್ದಾರೆ. ನೇಪಾಳ ಮತ್ತು ಭೂತಾನ್‌ಗಳಲ್ಲಿ ಭಾರತದ ನೋಟುಗಳ ಚಲಾವಣೆ ಇತ್ತು ಆದರೆ ಅವರಿಗೆ ಬದಲಾಯಿಸಲು ಅವಕಾಶ ಮತ್ತು ಅನುಮತಿ ಕೊಡಲಿಲ್ಲ.

ಇತರ ನಕಾರಾತ್ಮಕ ಅಂಶಗಳು

  • ಮೇಲೆ ಹೇಳಿದ ನೋಟು ರದ್ದತಿ, ಮಕ್ಕಳ ರಕ್ಷಣೆ,ಗೋರಕ್ಷಣೆಯ ನೆವದಲ್ಲಿ ಜನರು ಗುಂಪುಗೂಡಿ ಸಾಯಹೊಡೆದ ಪ್ರಕರಣಗಳು, ಈ ನಾಲ್ಕು ವರ್ಷಗಲಲ್ಲಿ ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ಕುಸಿದಿರುವುದು, ರಫೇಲ್‌ ದುಬಾರಿ ಖರೀದಿ, ಎಚ್.ಎ.ಎಲ್, ಕೈಬಿಟ್ಟ ವಿಚಾರ, ಕೃಷಿ ಕ್ಷೇತ್ರದಲ್ಲಿನ ಕಳಪೆ ಸಾಧನೆ ಮತ್ತು ಬಿಕ್ಕಟ್ಟು, ಪ್ರತಿ ಭಾರತೀಯನಿಗೆ ರೂ.15 ಲಕ್ಷವನ್ನು ವಿದೇಶದಲ್ಲಿದ ಕಪ್ಪುಹಣ ವಸೂಲುಮಾಡಿ ತಂದುಕೊಡಲಾಗುವುದು ಎಂಬ ಭರವಸೆ ಪೊಳ್ಳಾಗಿದ್ದು, ಸತತ ಹಣದುಬ್ಬರ, ಹೊರ ಜಗತ್ತಿನಲ್ಲಿ ಇಳಿದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯಲ್ಲಿ ಹೆಚ್ಚಳ, ಲೈಂಗಿಕ ಕಿರುಕುಳ ನೀಡಿದ ಆರೋಪ ಕೆಲವು ಸಚಿವರ ವಿರುದ್ಧ ಕೇಳಿಬಂದಿದ್ದು, ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಸುಳ್ಳಾಗಿ ಸಂಘಟಿತ ವಲಯದಲ್ಲಿ ಉದ್ಯೋಗ ಕಡಿಮೆ ಆಗಿರುವುದು. ಗಂಗಾ ಶುದ್ದೀಕರಣದ ಭರವಸೆ ಮರೆತು ಅದಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದ ಸ್ವಾಮಿ ಜ್ನಾನಸ್ವರೂಪ ಸಾನಂದರು ತಮ್ಮ ಪತ್ರಕ್ಕ ಪ್ರಧಾನಿಯಿಂದ ಉತ್ತರ ಸಿಗದೆ ಮರಣಹೊಂದಿದುದು. ಮೋದಿಯವರು ೨೦೧೪ ರಲ್ಲಿ ಬನಾರಸಿನಲ್ಲಿ ಕೊಟ್ಟ ಭರವಸೆಗಳಾದ:-‘ಗಂಗೆ ಯಮುನೆ ನನ್ನ ತಾಯಂದಿರು. ಈ ಎರಡೂ ನದಿಗಳ ಜಲವನ್ನು ಸ್ವಚ್ಛಗೊಳಿಸಲು ಜನಾಂದೋಲನ ನಡೆಸುವೆ ವಿಶ್ವದ ಪ್ರಸಿದ್ಧ ಪರಿಸರವಾದಿಗಳನ್ನು ಕರೆಯಿಸುವೆ’ ಎಂದಿದ್ದರು. ಮತ್ತೆ 2014ರ ಲೋಕಸಭಾ ಚುನಾವಣೆ ಗೆದ್ದ ನಂತರ ತಾವು ತಾಯಿ ಗಂಗಾ ತಮ್ಮನ್ನು ಬನಾರಸಿಗೆ ಕರೆಯಿಸಿಕೊಂಡಿದ್ದಾಳೆ ಎಂದು ಹೇಳಿದ್ದರು, ಆದರೆ ಈ ಭರವಸೆಗಳು ಹಾಗೆಯೇ ಉಳಿದವು. ಇತ್ಯಾದಿ'

ಮುಂದುವರೆದಿದೆ

ಹೊರಸಂಪರ್ಕ

ನೋಡಿ

ಹೆಚ್ಚಿನ ಓದಿಗೆ - ಹೊರ ಸಂಪರ್ಕ

ಉಲ್ಲೇಖ

[Voter ID Status]

Tags:

ಭಾರತ ಗಣರಾಜ್ಯದ ಇತಿಹಾಸ ಪೀಠಿಕೆ - ಹಿನ್ನಲೆಭಾರತ ಗಣರಾಜ್ಯದ ಇತಿಹಾಸ 1947-1950: ಭಾರತ ಡೊಮಿನಿಯನ್ ರಾಜ್ಯ (ವಿವರ)ಭಾರತ ಗಣರಾಜ್ಯದ ಇತಿಹಾಸ 1950 ಮತ್ತು 1960 ನೆಹರೂ ಯುಗಭಾರತ ಗಣರಾಜ್ಯದ ಇತಿಹಾಸ ನೆಹರು ಆಡಳಿತ (1952-1964): ಅವರ ಅಭಿವೃದ್ಧಿಯ ಯೋಜನೆಗಳುಭಾರತ ಗಣರಾಜ್ಯದ ಇತಿಹಾಸ ನೆಹರು ನಂತರದ ಭಾರತ ಇಂದಿರಾ ಯುಗಭಾರತ ಗಣರಾಜ್ಯದ ಇತಿಹಾಸ ಈಶಾನ್ಯ ರಾಜ್ಯಗಳ ರಚನೆಭಾರತ ಗಣರಾಜ್ಯದ ಇತಿಹಾಸ ಜನತಾ ಪಕ್ಷದ ಮಧ್ಯಂತರ ಕಾಲಭಾರತ ಗಣರಾಜ್ಯದ ಇತಿಹಾಸ 1980 - 1984ರ ಪ್ರಮುಖ ಘಟನೆಗಳುಭಾರತ ಗಣರಾಜ್ಯದ ಇತಿಹಾಸ ರಾಜೀವ್ ಗಾಂಧಿ ಆಡಳಿತಭಾರತ ಗಣರಾಜ್ಯದ ಇತಿಹಾಸ ಜನತಾದಳಭಾರತ ಗಣರಾಜ್ಯದ ಇತಿಹಾಸ 1990 ರ ದಶಕಭಾರತ ಗಣರಾಜ್ಯದ ಇತಿಹಾಸ ನರಸಿಂಹ ರಾವ್ ಪ್ರಧಾನಿಭಾರತ ಗಣರಾಜ್ಯದ ಇತಿಹಾಸ ಒಕ್ಕೂಟಗಳ ಯುಗಭಾರತ ಗಣರಾಜ್ಯದ ಇತಿಹಾಸ ಸೆಪ್ಟೆಂಬರ್ 1999 ರ ಚುನಾವಣೆ:ವಾಜಪೇಯಿ ಸರ್ಕಾರಭಾರತ ಗಣರಾಜ್ಯದ ಇತಿಹಾಸ 2000 - 2004 ರ ವಾಜಪೇಯಿ ಕಾಲಭಾರತ ಗಣರಾಜ್ಯದ ಇತಿಹಾಸ ಕಾಂಗ್ರೆಸ್ ಆಡಳಿತದ ಪನರ್‍ಸ್ಥಾಪನೆಭಾರತ ಗಣರಾಜ್ಯದ ಇತಿಹಾಸ 2009 ರ ಚುನಾವಣೆ - ಮತ್ತೆ ಯುಪಿಯೆ ಆಡಳಿತಭಾರತ ಗಣರಾಜ್ಯದ ಇತಿಹಾಸ 2014 -ಮತ್ತೆ ಭಾರತೀಯ ಜನತಾ ಪಕ್ಷದ ಸರ್ಕಾರಭಾರತ ಗಣರಾಜ್ಯದ ಇತಿಹಾಸ ಮುಂದುವರೆದಿದೆಭಾರತ ಗಣರಾಜ್ಯದ ಇತಿಹಾಸ ಹೊರಸಂಪರ್ಕಭಾರತ ಗಣರಾಜ್ಯದ ಇತಿಹಾಸ ನೋಡಿಭಾರತ ಗಣರಾಜ್ಯದ ಇತಿಹಾಸ ಹೆಚ್ಚಿನ ಓದಿಗೆ - ಹೊರ ಸಂಪರ್ಕಭಾರತ ಗಣರಾಜ್ಯದ ಇತಿಹಾಸ ಉಲ್ಲೇಖಭಾರತ ಗಣರಾಜ್ಯದ ಇತಿಹಾಸಭಾರತ ಗಣರಾಜ್ಯದ ಇತಿಹಾಸ - ಭಾಗ ೨

🔥 Trending searches on Wiki ಕನ್ನಡ:

ಮಾರ್ತಾಂಡ ವರ್ಮವಿಕ್ರಮಾದಿತ್ಯ ೬ಖೊಖೊಕನ್ನಡದಲ್ಲಿ ಕಾದಂಬರಿ ಸಾಹಿತ್ಯಜವಹರ್ ನವೋದಯ ವಿದ್ಯಾಲಯಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಪಂಜೆ ಮಂಗೇಶರಾಯ್ವಾಟ್ಸ್ ಆಪ್ ಮೆಸ್ಸೆಂಜರ್ಭಾರತದ ಬುಡಕಟ್ಟು ಜನಾಂಗಗಳುತುಂಬೆಗಿಡಕುರಿಭಾರತೀಯ ಧರ್ಮಗಳುಹೊಯ್ಸಳ ವಾಸ್ತುಶಿಲ್ಪಹುಲಿಅಕ್ಷಾಂಶ ಮತ್ತು ರೇಖಾಂಶಭಾಸಭಾರತದ ರಾಷ್ಟ್ರೀಯ ಚಿಹ್ನೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಸುಮಲತಾಕಾಂತಾರ (ಚಲನಚಿತ್ರ)21ನೇ ಶತಮಾನದ ಕೌಶಲ್ಯಗಳುಶಿಶುನಾಳ ಶರೀಫರುಸೆಲರಿಯುಗಾದಿಮೊಜಿಲ್ಲಾ ಫೈರ್‌ಫಾಕ್ಸ್ಇಂದಿರಾ ಗಾಂಧಿವಲ್ಲಭ್‌ಭಾಯಿ ಪಟೇಲ್ಭಾರತದಲ್ಲಿನ ಜಾತಿ ಪದ್ದತಿಒಕ್ಕಲಿಗಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಶಕ್ತಿರಾಷ್ಟ್ರಕವಿಚದುರಂಗದ ನಿಯಮಗಳುಗಿರೀಶ್ ಕಾರ್ನಾಡ್ತೆಂಗಿನಕಾಯಿ ಮರತಾಳೀಕೋಟೆಯ ಯುದ್ಧಬೇವುಕನ್ನಡ ಪತ್ರಿಕೆಗಳುಕಳಿಂಗ ಯುದ್ಧಹರಿಶ್ಚಂದ್ರಸಂಸ್ಕೃತಿಸಂವಹನಭಾರತದ ರಾಷ್ಟ್ರಗೀತೆಪ್ರಬಂಧಅಶೋಕನ ಶಾಸನಗಳುಕರ್ನಾಟಕ ಹೈ ಕೋರ್ಟ್ಸ್ಫಟಿಕ ಶಿಲೆಇಸ್ಲಾಂ ಧರ್ಮಅರವಿಂದ್ ಕೇಜ್ರಿವಾಲ್ಭಾರತೀಯ ಅಂಚೆ ಸೇವೆಬಾಲ್ಯ ವಿವಾಹಶಿವಕುಮಾರ ಸ್ವಾಮಿಶಾಸನಗಳುಕರ್ನಾಟಕ ವಿಧಾನ ಪರಿಷತ್ಎರಡನೇ ಮಹಾಯುದ್ಧಸೀತಾ ರಾಮಮಲ್ಲಿಕಾರ್ಜುನ ಜ್ಯೋತಿರ್ಲಿಂಗವೈದೇಹಿಮುದ್ದಣಕರ್ಮಧಾರಯ ಸಮಾಸಕೇಂದ್ರಾಡಳಿತ ಪ್ರದೇಶಗಳುವಿಜಯದಾಸರುಕರ್ನಾಟಕದಲ್ಲಿ ಪಂಚಾಯತ್ ರಾಜ್ಸೀತೆಕಾನ್ಸ್ಟಾಂಟಿನೋಪಲ್ಭಾರತದ ವಿಜ್ಞಾನಿಗಳುಬಾದಾಮಿ ಶಾಸನಶ್ರೀಶೈಲಆಂಗ್‌ಕರ್ ವಾಟ್ಬೆಳಗಾವಿಗೋಲ ಗುಮ್ಮಟಭಗವದ್ಗೀತೆವಚನಕಾರರ ಅಂಕಿತ ನಾಮಗಳುವ್ಯವಸಾಯಚೋಮನ ದುಡಿಕೊಡಗಿನ ಗೌರಮ್ಮಬಿ.ಎಫ್. ಸ್ಕಿನ್ನರ್ಆಸ್ಟ್ರೇಲಿಯ🡆 More