ಆಧುನಿಕ ವಿಜ್ಞಾನ

ವಿಜ್ಞಾನದ ಇತಿಹಾಸ ಎಂದರೆ ನೈಸರ್ಗಿಕ ವಿಶ್ವವನ್ನು ಮನುಷ್ಯರು ಅರ್ಥಮಾಡಿಕೊಳ್ಳುವಿಕೆಯ ಐತಿಹಾಸಿಕ ಬೆಳವಣಿಗೆಯ ಅಧ್ಯಯನ ಎನ್ನಬಹುದು.

20ನೇ ಶತಮಾನದ ಕೊನೆಯವರೆಗೆ ವಿಜ್ಞಾನದ ಇತಿಹಾಸ, ವಿಶೇಷವಾಗಿ ಭೌತಿಕ ಮತ್ತು ಜೀವಶಾಸ್ತ್ರೀಯ ವಿಜ್ಞಾನಗಳು ತಪ್ಪು ಸಿದ್ಧಾಂತಗಳ ಮೇಲೆ ನೈಜ ಸಿದ್ಧಾಂತಗಳ ವಿಜಯವನ್ನು ಸಾರುವ ನಿರೂಪಣೆಗಳ ಹಾಗೆ ಕಾಣಲಾಗುತ್ತಿತ್ತು. ವಿಜ್ಞಾನವು ನಾಗರಿಕತೆಯ ಪ್ರಗತಿಯ ಒಂದು ಬಹುಮುಖ್ಯ ಆಯಾಮವೆಂದೇ ಚಿತ್ರಿತವಾಗಿದೆ. ಇತ್ತೀಚಿನ ದಶಕಗಳಲ್ಲಿ, ಆಧುನಿಕೋತ್ತರ ದೃಷ್ಟಿಕೋನಗಳು, ಮುಖ್ಯವಾಗಿ ಥಾಮಸ್‌ ಕ್ಹುನ್‌ ಅವರ ದಿ ಸ್ಟ್ರಕ್ಚರ್ ಆಫ್ ಸೈಂಟಿಫಿಕ್ ರೆವಲ್ಯೂಶನ್ಸ್ (1962)ನಿಂದ ಪ್ರಭಾವಿತಗೊಂಡಿದೆ. ಇತಿಹಾಸವನ್ನು ಶುದ್ಧ ವಿಜ್ಞಾನದ ಹೊರಗೆ ಬೌದ್ಧಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ವಸ್ತುಗಳನ್ನು ಒಳಗೊಳ್ಳುವ ವಿಶಾಲ ಮಾತೃಕೆಯಲ್ಲಿ ಬೌದ್ಧಿಕ ಪಾರಮ್ಯಕ್ಕಾಗಿ ಹೋರಾಡುವ ಸ್ಪರ್ಧಾತ್ಮಕ ಮಾದರಿಗಳು ಅಥವಾ ಪರಿಕಲ್ಪನಾತ್ಮಕ ವ್ಯವಸ್ಥೆಗಳು ಎಂಬಂತೆ ನೋಡಲಾಗುತ್ತಿದೆ. ವಿಜ್ಞಾನದ ಹೊರಗಿನ ಪಾಶ್ಚಿಮಾತ್ಯ ಯುರೋಪ್‌ನ ಸಂದರ್ಭಕ್ಕೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ. ವಿಜ್ಞಾನ ವು ನೈಸರ್ಗಿಕ ವಿಶ್ವದ ಕುರಿತು ಪ್ರಯೋಗವಾದಿ, ಸೈದ್ಧಾಂತಿಕ, ಮತ್ತು ಪ್ರಾಯೋಗಿಕ ಜ್ಞಾನದ ಒಂದು ವ್ಯವಸ್ಥೆಯಾಗಿದೆ. ಇದನ್ನು ಸಂಶೋಧಕರು ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಹುಟ್ಟುಹಾಕುತ್ತಾರೆ. ಈ ವಿಧಾನಗಳು ವೀಕ್ಷಣೆ, ವಿವರಣೆ ಮತ್ತು ನೈಜ ಜಗತ್ತಿನ ಪ್ರತ್ಯಕ್ಷ ವಿಚಾರಗಳನ್ನು ಪ್ರಯೋಗಗಳ ಮೂಲಕ ಊಹೆ ಮಾಡುವುದಕ್ಕೆ ಒತ್ತುನೀಡುತ್ತದೆ. ವಿಜ್ಞಾನವು ವಸ್ತುನಿಷ್ಠ ಜ್ಞಾನವೂ ಆಗಿದೆ ಮತ್ತು ಮನುಷ್ಯರಚಿತ ಜ್ಞಾನವೂ ಆಗಿದೆ, ವಿಜ್ಞಾನದ ಈ ದ್ವಂದ್ವ ಸ್ಥಿತಿಯಲ್ಲಿ, ವಿಜ್ಞಾನದ ಉತ್ತಮ ಚರಿತ್ರೆ ರಚನೆಯು ಬೌದ್ಧಿಕ ಇತಿಹಾಸ ಮತ್ತು ಸಾಮಾಜಿಕ ಇತಿಹಾಸ, ಈ ಎರಡೂ ಐತಿಹಾಸಿಕ ವಿಧಾನಗಳ ಮೇಲೆ ರೂಪಿತವಾಗುತ್ತದೆ. ಆಧುನಿಕ ವಿಜ್ಞಾನದ ನಿಖರವಾದ ಮೂಲಗಳನ್ನು ಗುರುತಿಸುವುದು ಶಾಸ್ತ್ರೀಯಗ್ರಂಥ ಜಗತ್ತಿನಲ್ಲಿ ಉಳಿದುಕೊಂಡಿರುವ ಅನೇಕ ಮುಖ್ಯವಾದ ಗ್ರಂಥಗಳ ಮೂಲಕ ಸಾಧ್ಯವಿದೆ. ಆದರೆ ಸೈಂಟಿಸ್ಟ್ (ವಿಜ್ಞಾನಿ) ಎಂಬ ಪದವು ಇತ್ತೀಚೆಗೆ ವ್ಯುತ್ಪನ್ನಗೊಂಡಿದೆ. ಇದನ್ನು ಮೊದಲು ವಿಲಿಯಂ ವ್ಹೆವೆಲ್ 19ನೇ ಶತಮಾನದಲ್ಲಿ ಮೊದಲು ಬಳಸಿದನು. ಅದಕ್ಕಿಂತ ಮೊದಲು, ನಿಸರ್ಗವನ್ನು ಪರಿಶೀಲಿಸುವ ಜನರು ತಮ್ಮನ್ನು ತಾವು ನೈಸರ್ಗಿಕ ತತ್ವಶಾಸ್ತ್ರಜ್ಞರು ಎಂದು ಕರೆದುಕೊಂಡಿದ್ದರು. ನೈಸರ್ಗಿಕ ವಿಶ್ವದ ಪ್ರಯೋಗವಾದಿ ಶೋಧಗಳನ್ನು ಶಾಸ್ತ್ರೀಯ ಪ್ರಾಚೀನ ಕಾಲ (ಕ್ಲಾಸಿಕಲ್ ಆಂಟಿಕ್ವಿಟಿ)ದಿಂದಲೂ ವಿವರಿಸಲಾಗಿದೆ. (ಉದಾಹರಣೆಗೆ, ಥೇಲ್ಸ್‌, ಅರಿಸ್ಟಾಟಲ್ ಮತ್ತು ಇನ್ನಿತರರಿಂದ). ಅಲ್ಲದೇ ವೈಜ್ಞಾನಿಕ ವಿಧಾನಗಳನ್ನು ಮಧ್ಯಕಾಲೀನ ಯುಗದಿಂದ ಅಳವಡಿಸಿಕೊಳ್ಳಲಾಗಿದೆ. (ಉದಾಹರಣೆಗೆ ಇಬ್ನ್‌ ಅಲ್‌ ಹೇಥಮ್, ಅಬು ರೇಹಾನ್ ಅಲ್‌-ಬಿರೂನಿ ಮತ್ತು ರೋಜರ್ ಬೇಕನ್ ನ). ಆಧುನಿಕ ವಿಜ್ಞಾನದ ಆರಂಭವನ್ನು ಸಾಮಾನ್ಯವಾಗಿ ಆರಂಭಿಕ ಆಧುನಿಕ ಕಾಲಘಟ್ಟದಿಂದ ಎನ್ನಲಾಗುತ್ತದೆ. ಆಗ ವೈಜ್ಞಾನಿಕ ಕ್ರಾಂತಿಯು 16ನೇ ಮತ್ತು 17ನೇ ಶತಮಾನದ ಯೂರೋಪ್‌ನಲ್ಲಿ ಜರುಗಿತು. ವೈಜ್ಞಾನಿಕ ವಿಧಾನಗಳನ್ನು ಆಧುನಿಕ ವಿಜ್ಞಾನಕ್ಕೆ ತುಂಬಾ ಮೂಲಭೂತವಾದದ್ದು ಎಂದು ಪರಿಗಣಿಸಲಾಗುತ್ತದೆ. ಎಷ್ಟರಮಟ್ಟಿಗೆ ಎಂದರೆ ಕೆಲವು, ವಿಶೇಷವಾಗಿ, ವಿಜ್ಞಾನದ ತತ್ವಶಾಸ್ತ್ರಜ್ಞರು ಮತ್ತು ವೃತ್ತಿನಿರತ ವಿಜ್ಞಾನಿಗಳು —ನಿಸರ್ಗದ ಕುರಿತ ಹಿಂದಿನ ಪರಿಶೋಧನೆಗಳನ್ನು ವೈಜ್ಞಾನಿಕ-ಪೂರ್ವ ಎಂದೇ ಪರಿಗಣಿಸುತ್ತಾರೆ. ಸಾಂಪ್ರದಾಯಿಕವಾಗಿ, ವಿಜ್ಞಾನದ ಇತಿಹಾಸಕಾರರು ವಿಜ್ಞಾನವನ್ನು ಆ ಹಿಂದಿನ ಪರಿಶೋಧನೆಗಳನ್ನು ಒಳಗೊಳ್ಳುವ ಹಾಗೆ ವಿಸ್ತೃತವಾಗಿ ವ್ಯಾಖ್ಯಾನಿಸುತ್ತಾರೆ.

ಪ್ರಾಚೀನ ಸಂಸ್ಕೃತಿಗಳು

ಪೂರ್ವೇತಿಹಾಸದ ಕಾಲದಲ್ಲಿ, ಬೋಧನೆಗಳು ಮತ್ತು ಜ್ಞಾನವು ತಲೆಮಾರಿನಿಂದ ತಲೆಮಾರಿಗೆ ಮೌಖಿಕ ಪರಂಪರೆಯ ಮೂಲಕ ಸಾಗಿಬಂದಿತ್ತು. ಉದಾಹರಣೆಗೆ, ದಕ್ಷಿಣ ಮೆಕ್ಸಿಕೋದಲ್ಲಿ ಸುಮಾರು 9,000 ವರ್ಷಗಳಷ್ಟು ಹಿಂದೆ ಜೋಳವನ್ನು ಕೃಷಿಯಾಗಿ ಬೆಳೆಯತೊಡಗಿದರು. ಅಂದರೆ ಲಿಖಿತ ವ್ಯವಸ್ಥೆಗಳು ಅಭಿವೃದ್ಧಿಗೊಳ್ಳುವ ಬಹಳ ಮೊದಲು. ಹಾಗೆಯೇ ಅಕ್ಷರಸ್ಥರಾಗುವ ಮೊದಲಿನ ಕಾಲದಲ್ಲಿಯೂ ಖಗೋಳ ಜ್ಞಾನದ ಅಭಿವೃದ್ಧಿಯಾಗಿದ್ದಿತು ಎಂದು ಪುರಾತತ್ವಶಾಸ್ತ್ರದ ಪುರಾವೆಗಳು ಸೂಚಿಸುತ್ತವೆ.

ಬರವಣಿಗೆಯು ಅಭಿವೃದ್ಧಿಗೊಂಡಿದ್ದು ಹೆಚ್ಚು ಯಥಾರ್ಥತೆಯಿಂದ ಜ್ಞಾನವನ್ನು ಸಂಗ್ರಹಿಸಲು ಮತ್ತು ತಲೆಮಾರುಗಳ ಮೂಲಕ ಸಂವಹನ ಮಾಡಲು ಸಾಧ್ಯಗೊಳಿಸಿತು. ಆಹಾರದ ಹೆಚ್ಚಳಕ್ಕೆ ಕಾರಣವಾದ ಕೃಷಿಯ ಅಭಿವೃದ್ಧಿಯೂ ಸೇರಿ, ಆರಂಭಿಕ ನಾಗರಿಕತೆಗಳಿಗೆ ಅಭಿವೃದ್ಧಿಹೊಂದಲು ಸಾಧ್ಯವಾಯಿತು. ಏಕೆಂದರೆ ಆಗ ಅವರಿಗೆ ಬದುಕಿ ಉಳಿಯುವುದನ್ನು ಹೊರತುಪಡಿಸಿಯೂ ಬೇರೆ ಕೆಲಸಗಳಿಗೆ ಹೆಚ್ಚಿನ ಸಮಯ ಮೀಸಲಿಡಲು ಸಾಧ್ಯವಾಯಿತು.

ಅನೇಕ ಪ್ರಾಚೀನ ನಾಗರಿಕತೆಗಳು ಕೇವಲ ಸರಳವಾದ ವೀಕ್ಷಣೆಯ ಮೂಲಕವೇ ವ್ಯವಸ್ಥಿತ ರೂಪದಲ್ಲಿ ಖಗೋಳ ಮಾಹಿತಿಯನ್ನು ಸಂಗ್ರಹಿಸಿವೆ. ಅವರಿಗೆ ಗ್ರಹಗಳ ಮತ್ತು ನಕ್ಷತ್ರಗಳ ಯಾವುದೇ ಭೌತಿಕ ರಚನೆಯ ನಿಜವಾದ ಜ್ಞಾನವಿಲ್ಲದಿದ್ದರೂ, ಅನೇಕ ಸೈದ್ಧಾಂತಿಕ ವಿವರಣೆಗಳನ್ನು ಮುಂದಿಟ್ಟಿದ್ದಾರೆ. ಕೆಲವು ಪ್ರದೇಶಗಳಲ್ಲಿ ಮನುಷ್ಯ ಶರೀರಶಾಸ್ತ್ರದ ಕುರಿತು ಮೂಲ ವಾಸ್ತವಾಂಶಗಳು ಗೊತ್ತಿದ್ದವು. ಜೊತೆಗೆ ಅಲ್ಕೆಮಿ (ರಸವಿದ್ಯೆ)ಯು ಹಲವಾರು ನಾಗರಿಕತೆಗಳಲ್ಲಿ ವಾಡಿಕೆಯಲ್ಲಿತ್ತು.<ಉಲ್ಲೇಖ>ನೋಡಿ, ಉದಾಹರಣೆಗೆ ಜೋಸೆಫ್ ನೀಧಾಮ್ (1974, 1976, 1980, 1983) ಮತ್ತು ಸಹಲೇಖಕರ, ಸೈನ್ಸ್‌ ಆಂಡ್ ಸಿವಿಲೈಸೇಶನ್ ಇನ್‌ ಚೈನಾ ಕೃತಿ, V , ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್, ವಿಶೇಷವಾಗಿ:

  • ಜೋಸೆಫ್ ನೀಧಾಮ್ ಮತ್ತು ಲು ಗ್ವಿ-ಜೆನ್ (1974), V.2 ಸ್ಪಾಗಿರಿಕಲ್ ಆಂಡ್‌ ಇನ್‌ವೆನ್ಷನ್ : ಮೆಜಿಸ್ಟ್ರೀಸ್ ಆಫ್‌ ಗೋಲ್ಡ್ ಆಂಡ್ ಇಮ್ಮಾರ್ಟಲಿಟಿ
  • ಜೋಸೆಫ್ ನೀಧಾಮ್, ಹೊ ಪಿಂಗ್-ಯು (ಹೊ ಪೆಂಗ್-ಯೋಕ್‌), ಮತ್ತು ಲು ಗ್ವಿ-ಜೆನ್ (1976), V.3 ಸ್ಪಾಗಿರಿಕಲ್ ಡಿಸ್ಕವರಿ ಆಂಡ್ ಇನ್‌ವೆನ್ಷನ್: ಹಿಸ್ಟಾರಿಕಲ್ ಸರ್ವೇ ಫ್ರಮ್ ಸಿನಾಬಾರ್ ಟು ಸಿಂಥೆಟಿಕ್ ಇನ್ಸುಲಿನ್
  • ಜೋಸೆಫ್ ನೀಧಾಮ್, ಲು ಗ್ವಿ-ಜೆನ್ , ಮತ್ತು ನಾಥನ್ ಸಿವಿನ್ (1980), V.4 ಸ್ಪಾಗಿರಿಕಲ್ ಡಿಸ್ಕವರಿ ಆಂಡ್ ಇನ್‌ವೆನ್ಷನ್:ಅಪರೇಟಸ್ ಆಂಡ್ ಥಿಯರಿ
  • ಜೋಸೆಫ್ ನೀಧಾಮ್ ಮತ್ತು ಲು ಗ್ವಿ-ಜೆನ್ (1983), V.5 ಸ್ಪಾಗಿರಿಕಲ್ ಡಿಸ್ಕವರಿ ಆಂಡ್ ಇನ್‌ವೆನ್ಷನ್:ಫಿಸಿಯಾಲಾಜಿಕಲ್ ಅಲ್ಕೆಮಿ ಮೈಕ್ರೋಬಯಾಟಿಕ್ ಸಸ್ಯಗಳು ಮತ್ತು ಪ್ರಾಣಿಗಳ ಗಮನಾರ್ಹ ವೀಕ್ಷಣೆಯನ್ನು ಮಾಡಲಾಗಿದೆ.

ಪ್ರಾಚೀನ ಸಮೀಪಪ್ರಾಚ್ಯದಲ್ಲಿ ವಿಜ್ಞಾನ

ಆಧುನಿಕ ವಿಜ್ಞಾನ 
ಮೆಸೊಪೊಟಮಿಯನ್‌ ಜೇಡಿಮಣ್ಣಿನ ಫಲಕ, ಕ್ರಿ.ಪೂ. 492 ಖಗೋಳಶಾಸ್ತ್ರೀಯ ಮಾಹಿತಿಯನ್ನು ದಾಖಲಿಸಲು ಬರವಣಿಗೆಯು ಆಸ್ಪದ ಕಲ್ಪಿಸಿತು.

ಸುಮಾರು ಕ್ರಿ.ಪೂ. 3,500ರಲ್ಲಿ ಸುಮೆರ್ (ಈಗಿನ ಇರಾಕ್)ನಲ್ಲಿ ತಮ್ಮ ಆರಂಭದಿಂದ ಹಿಡಿದು, ಮೆಸೊಪೊಟಮಿಯದ ಜನರು ಅತ್ಯಂತ ವಿಶದವಾದ ಸಂಖ್ಯಾತ್ಮಕ ದತ್ತಾಂಶದ ಮೂಲಕ ವಿಶ್ವದ ಕೆಲವು ವೀಕ್ಷಣೆಗಳನ್ನು ದಾಖಲಿಸಲು ಪ್ರಯತ್ನ ಆರಂಭಿಸಿದರು. ಆದರೆ ಅವರು ವೈಜ್ಞಾನಿಕ ನಿಯಮಗಳ ಬದಲಿಗೆ ಬೇರೆ ಉದ್ದೇಶಗಳಿಗೆ ವೀಕ್ಷಣೆಗಳು ಮತ್ತು ಅಳತೆಗಳನ್ನು ತೆಗೆದುಕೊಂಡಿರುವಂತೆ ಕಾಣುತ್ತದೆ. ಪೈಥಾಗೋರಸ್‌ ನಿಯಮದ ಬಲವಾದ ನಿದರ್ಶನವನ್ನು ಕ್ರಿ.ಪೂ.18ನೇ ಶತಮಾನದಷ್ಟು ಮೊದಲೇ ದಾಖಲಿಸಲಾಗಿತ್ತು: ಮೆಸೊಪೊಟಮಿಯನ್‌ ಕ್ಯುನಿಫಾರ್ಮ್‌ ಟ್ಯಾಬ್ಲೆಟ್ ಪ್ಲಿಂಪ್ಟನ್ 322 ಪೈಥಾಗೋರಸ್‌ನ ತ್ರಿಸಂಖ್ಯೆಗಳನ್ನು (3,4,5) (5,12,13). ..., ದಾಖಲಿಸಿದ್ದು ಕ್ರಿ.ಪೂ. 1900ರಷ್ಟು ಹಿಂದೆ, ಪ್ರಾಯಶಃ ಪೈಥಾಗೋರಸ್‌ಗಿಂತ ಒಂದು ಸಹಸ್ರಮಾನದಷ್ಟು ಹಿಂದೆ.[೨] ಆದರೆ ಪೈಥಾಗೋರಸ್‌ನ ಸಿದ್ಧಾಂತದ ಒಂದು ಅಮೂರ್ತ ಸೂತ್ರೀಕರಣ ಇರಲಿಲ್ಲ. ಬ್ಯಾಬಿಲೋನಿಯಾದ ಖಗೋಳವಿಜ್ಞಾನದಲ್ಲಿ, ನಕ್ಷತ್ರಗಳು, ಗ್ರಹಗಳು ಮತ್ತು ಚಂದ್ರನ ಚಲನೆಗಳನ್ನು ಗಹನವಾಗಿ ಗಮನಿಸಿ, ಗೀರುವ ಸಾಧನಗಳಿಂದ ಮಾಡಿದ ಸಾವಿರಾರು ಜೇಡಿಮಣ್ಣಿನ ಫಲಕಗಳು ಕಂಡುಬರುತ್ತವೆ. ಇಂದಿಗೂ ಮೆಸೊಪೊಟಮಿಯನ್‌ ವಿಜ್ಞಾನಿಗಳು ಗುರುತಿಸಿದ ಖಗೋಳಶಾಸ್ತ್ರೀಯ ಕಾಲಗಳನ್ನು ಪಾಶ್ಚಾತ್ಯ ಕ್ಯಾಲೆಂಡರ್‌ಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಅವೆಂದರೆ: ಸೌರಮಾನ ವರ್ಷ, ಚಾಂದ್ರಮಾನ ತಿಂಗಳು ಮತ್ತು ಏಳು-ದಿನಗಳ ವಾರ. ಈ ದತ್ತಾಂಶಗಳನ್ನು ಬಳಸಿಕೊಂಡು ಅವರು ಬೀಜಗಣಿತದ ವಿಧಾನಗಳನ್ನು ವರ್ಷದ ಅವಧಿಯಲ್ಲಿ ಹಗಲುಬೆಳಕಿನ ಬದಲಾಗುವ ಉದ್ದವನ್ನು ಲೆಕ್ಕ ಹಾಕಲು ಬಳಸಿದರು. ಜೊತೆಗೆ ಚಂದ್ರ ಮತ್ತು ಗ್ರಹಗಳ ಕಾಣಿಸಿಕೊಳ್ಳುವಿಕೆ ಮತ್ತು ಮರೆಯಾಗುವಿಕೆ, ಸೂರ್ಯ ಮತ್ತು ಚಂದ್ರನ ಗ್ರಹಣಗಳನ್ನು ಅಂದಾಜು ಮಾಡಲೂ ಇದನ್ನು ಬಳಸಿದ್ದರು. ಚಾಲ್ಡಿಯನ್ ಖಗೋಳವಿಜ್ಞಾನಿ ಮತ್ತು ಗಣಿತಜ್ಞನಾದ ಕಿಡಿನ್ನುರಂತಹ ಕೆಲವೇ ಖಗೋಳವಿಜ್ಞಾನಿಗಳ ಹೆಸರುಗಳು ಈಗ ತಿಳಿದಿವೆ. ಇಂದಿನ ಕ್ಯಾಲೆಂಡರ್‌ಗಳಲ್ಲಿ ಸೌರಮಾನ ವರ್ಷದ ಕಿಡಿನ್ನುನ ಮೌಲ್ಯವು ಬಳಕೆಯಲ್ಲಿದೆ. ಬ್ಯಾಬಿಲೋನಿಯನ್ನರ ಖಗೋಳವಿಜ್ಞಾನವು "ಖಗೋಳವಿಜ್ಞಾನದ ಪ್ರತ್ಯಕ್ಷ ವಿಚಾರಗಳ ಪರಿಷ್ಕೃತ ಗಣಿತಶಾಸ್ತ್ರೀಯ ವಿವರಣೆಗಳನ್ನು ನೀಡುವ ಪ್ರಪ್ರಥಮ ಮತ್ತು ಅತ್ಯಂತ ಯಶಸ್ವೀ ಪ್ರಯತ್ನವಾಗಿತ್ತು". ಇತಿಹಾಸಕಾರ ಎ. ಆಬೋ ಪ್ರಕಾರ "ವೈಜ್ಞಾನಿಕ ಖಗೋಳವಿಜ್ಞಾನದ ಎಲ್ಲ ನಂತರದ ಮಾದರಿಗಳು, ಹೆಲೆನಿಸ್ಟಿಕ್(ಸೂರ್ಯಕೇಂದ್ರಿತ) ವಿಶ್ವದಲ್ಲಿ, ಭಾರತದಲ್ಲಿ, ಇಸ್ಲಾಂನಲ್ಲಿ ಮತ್ತು ಪಶ್ಚಿಮದಲ್ಲಿ, - ನಿಖರ ವಿಜ್ಞಾನದಲ್ಲಿ ನಡೆದ ಎಲ್ಲ ಪ್ರಯತ್ನಗಳೂ ಅಲ್ಲದಿದ್ದರೂ, - ನಿರ್ಣಯಾತ್ಮಕ ಮತ್ತು ಮೂಲಭೂತ ವಿಧಾನಗಳಲ್ಲಿ ಬ್ಯಾಬಿಲೋನಿಯನ್ನರ ಖಗೋಳವಿಜ್ಞಾನವನ್ನು ಆಧರಿಸಿದ್ದವು". ಪ್ರಾಚೀನ ಈಜಿಪ್ತ್‌ ನಲ್ಲಿ ನಡೆದ ಮಹತ್ವದ ಪ್ರಗತಿಯು ಖಗೋಳವಿಜ್ಞಾನ, ಗಣಿತ ಮತ್ತು ವೈದ್ಯಕೀಯವನ್ನು ಒಳಗೊಂಡಿದೆ. ಅವರ ಜ್ಯಾಮಿತಿಯು ನಿಶ್ಚಿತವಾಗಿಯೂ ಪ್ರತಿವರ್ಷ ನೈಲ್ ನದಿಯ ಪ್ರವಾಹಕ್ಕೆ ತುತ್ತಾಗುತ್ತಿದ್ದ ಕೃಷಿಭೂಮಿಯ ಎಲ್ಲೆಗಳು ಮತ್ತು ಮಾಲೀಕತ್ವವನ್ನು ಉಳಿಸಿಕೊಳ್ಳಲು ಸರ್ವೇ ಮಾಡುವುದರ ಮುಂದುವರಿದ ಬೆಳವಣಿಗೆಯೇ ಆಗಿತ್ತು. 3,4,5 ಲಂಬಕೋನ ತ್ರಿಕೋನ ಮತ್ತು ಹೆಬ್ಬೆರಳಿನ ಕೆಲವು ನಿಯಮಗಳು ಸರಳರೇಖಾಕೃತಿಯ ರಚನೆಗಳನ್ನು ಪ್ರತಿನಿಧಿಸಲು ಬಳಕೆಯಾಗಿವೆ. ಜೊತೆಗೆ ಈಜಿಪ್ತ್‌ನ ಮರದ ಕಂಬ ಮತ್ತು ಲಿಂಟಲ್(ಉತ್ತರಂಗ) ವಾಸ್ತುಶಿಲ್ಪವನ್ನೂ ಪ್ರತಿನಿಧಿಸುತ್ತದೆ. ಹೆಚ್ಚಿನ ಮೆಡಿಟರೇನಿಯನ್ ಪ್ರದೇಶದ ಅಲ್ಕೆಮಿ ಸಂಶೋಧನೆಗೆ ಈಜಿಪ್ತ್‌ ಕೇಂದ್ರವೂ ಆಗಿದ್ದಿತು. ಎಡ್ವಿನ್ ಸ್ಮಿತ್ ಪ್ಯಾಪಿರಸ್ ಈಗಲೂ ಇರುವ ಒಂದು ಮೊಟ್ಟಮೊದಲ ವೈದ್ಯಕೀಯ ದಾಖಲೆಯಾಗಿದೆ. ಅದು ಪ್ರಾಯಶಃ ಮಿದುಳನ್ನು ವಿವರಿಸಲು ಮತ್ತು ವಿಶ್ಲೇಷಿಸಲು ಪ್ರಯತ್ನಿಸಿದ ತೀರಾ ಮೊದಲ ಪ್ರಯತ್ನ: ಅದನ್ನು ಆಧುನಿಕ ನರವಿಜ್ಞಾನದ ತುಂಬ ಆರಂಭಿಕ ಹಂತವೆಂದು ನೋಡಬಹುದು. ಈಜಿಪ್ತ್‌ನ ವೈದ್ಯಕೀಯವು ಕೆಲವು ಪರಿಣಾಮಕಾರಿ ಪದ್ಧತಿಗಳನ್ನು ಹೊಂದಿದ್ದರೂ, ಅದು ಕೆಲವು ಪರಿಣಾಮಕಾರಿಯಲ್ಲದ ಮತ್ತು ಕೆಲವೊಮ್ಮೆ ಹಾನಿಕರವೂ ಆದ ಪದ್ಧತಿಗಳನ್ನು ಒಳಗೊಂಡಿತ್ತು. ವೈದ್ಯಕೀಯ ಇತಿಹಾಸಕಾರರು, ಉದಾಹರಣೆಗೆ ಪ್ರಾಚೀನ ಈಜಿಪ್ತ್‌ನ ಔಷಧಿವಿಜ್ಞಾನವು ಬಹುವಾಗಿ ಪರಿಣಾಮಕಾರಿಯಲ್ಲವಾಗಿತ್ತು ಎಂದು ನಂಬುತ್ತಾರೆ. ಆದಾಗ್ಯೂ, ಅದು ಕೆಳಗಿನ ಅಂಶಗಳನ್ನು ಅಳವಡಿಸಿಕೊಂಡಿತ್ತು: ಕಾಯಿಲೆಯ ಚಿಕಿತ್ಸೆಗೆ ರೋಗನಿದಾನ, ಚಿಕಿತ್ಸೆ ಮತ್ತು ಪೂರ್ವಸೂಚನೆ,[೩] ಇದು ವಿಜ್ಞಾನದ ಮೂಲಪ್ರಯೋಗವಾದಿ ವಿಧಾನಕ್ಕೆ ಬಲವಾದ ಸಾದೃಶ್ಯವಾಗಿದೆ ಮತ್ತು ಜಿ. ಎಫ್‌. ಆರ್‌. ಲಾಯ್ಡ್‌ ಪ್ರಕಾರ ಈ ವಿಧಾನದ ಅಭಿವೃದ್ಧಿಯಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದೆ. ಎಬೆರ್ಸ್ ಪ್ಯಾಪಿರಸ್ (ಸುಮಾರು 1550 ಕ್ರಿ.ಶ.) ಪಾರಂಪರಿಕ ಪ್ರಾಯೋಗಿಕ ವಿಧಾನದ ಪುರಾವೆಗಳನ್ನು ಒಳಗೊಂಡಿದೆ.

ಗ್ರೀಕ್‌ ಜಗತ್ತಿನಲ್ಲಿ ವಿಜ್ಞಾನ

ಆಧುನಿಕ ವಿಜ್ಞಾನ 
ರಾಫೇಲ್‌ನಲ್ಲಿರುವ ಅಥೆನ್ಸ್‌ ವಿದ್ಯಾಕೇಂದ್ರ.

ಕ್ಲಾಸಿಕಲ್ ಆಂಟಿಕ್ವಿಟಿ ಕಾಲದಲ್ಲಿ, ವಿಶ್ವದ ಕುರಿತ ಪರಿಶೀಲನೆಯನ್ನು ಒಂದು ವಿಶ್ವಾಸಾರ್ಹ ಕ್ಯಾಲೆಂಡರ್‌ ರೂಪಿಸುವುದು ಅಥವಾ ವಿವಿಧ ಕಾಯಿಲೆಗಳನ್ನು ಗುಣಪಡಿಸುವುದನ್ನು ಗೊತ್ತುಮಾಡಿಕೊಳ್ಳುವುದು, ಇಂತಹ ವಾಸ್ತವಿಕ ಉದ್ದೇಶಗಳ ಶೋಧನೆಯನ್ನು ಗುರಿಯಾಗಿಸಿಕೊಂಡು ನಡೆಸಿದ್ದರು. ಆ ಅಮೂರ್ತ ಶೋಧಗಳನ್ನು ನೈಸರ್ಗಿಕ ತತ್ವಶಾಸ್ತ್ರ ಎಂದು ಕರೆಯುತ್ತಿದ್ದರು. ಮೊದಲ ವಿಜ್ಞಾನಿಗಳು ಎಂದು ಪರಿಗಣಿಸಲಾದ ಪ್ರಾಚೀನ ಜನರು ತಮ್ಮನ್ನು ತಾವು ನೈಸರ್ಗಿಕ ತತ್ವಶಾಸ್ತ್ರಜ್ಞರು ಎಂದು ಯೋಚಿಸಿದ್ದರು. ಅಂದರೆ ಅವರು ಒಂದು ಕುಶಲ ವೃತ್ತಿಯ ಪರಿಣತಿದಾರರು (ಉದಾಹರಣೆಗೆ ವೈದ್ಯರು) ಅಥವಾ ಧಾರ್ಮಿಕ ಪರಂಪರೆಯ ಅನುಯಾಯಿಗಳು (ದೇವಾಲಯದಲ್ಲಿರುತ್ತಿದ್ದ ಚಿಕಿತ್ಸಕರು) ಆಗಿದ್ದರು. ಸಾಕ್ರೆಟಿಸ್‌-ಪೂರ್ವದವರು ಎಂದು ಕರೆಯಲಾಗುವ ಪುರಾತನ ಗ್ರೀಕ್ ತತ್ವಶಾಸ್ತ್ರಜ್ಞರು, ತಮ್ಮಹತ್ತಿರದ ಪುರಾಣಗಳಲ್ಲಿರುವ ಕಂಡುಬರುವ "ನಾವು ಬದುಕುತ್ತಿರುವ ಬ್ರಹ್ಮಾಂಡವು ಹೇಗೆ ವ್ಯವಸ್ಥಿತಗೊಂಡಿದೆ?" ಎಂಬ ಪ್ರಶ್ನೆಗೆ ಪೈಪೋಟಿಯ ಉತ್ತರಗಳನ್ನು ನೀಡಿದ್ದಾರೆ. ಸಾಕ್ರೆಟಿಸ್‌-ಪೂರ್ವದ ತತ್ವಜ್ಞಾನಿ ಥೇಲ್ಸ್‌ನನ್ನು (ಕ್ರಿ.ಪೂ. 7ನೇ ಮತ್ತು 6ನೇ ಶತಮಾನ), "ವಿಜ್ಞಾನದ ಪಿತಾಮಹ" ಎಂದು ಕರೆಯಲಾಗಿದ್ದು, ಆತ ಮಿಂಚು ಮತ್ತು ಭೂಕಂಪದಂತಹ ನೈಸರ್ಗಿಕ ವಿದ್ಯಮಾನಗಳಿಗೆ ಅತೀಂದ್ರಿಯವಲ್ಲದ ವಿವರಣೆಗಳನ್ನು ಪ್ರತಿಪಾದಿಸಿದವರಲ್ಲಿ ಮೊದಲಿಗನಾಗಿದ್ದಾನೆ. ಆತನ ವಿದ್ಯಾರ್ಥಿ ಸಮೋಸ್‌‌ನ ಪೈಥಾಗೋರಸ್ ಪೈಥಾಗೋರಿಯನ್ ಸಿದ್ಧಾಂತವನ್ನು ಹುಟ್ಟುಹಾಕಿದನು. ಅವನು ಗಣಿತವನ್ನು ಸ್ವಂತಕ್ಕಾಗಿ ಪರಿಶೋಧಿಸಿದನು ಮತ್ತು ಭೂಮಿ ಗೋಳಾಕಾರದಲ್ಲಿದೆ ಎಂದು ಪ್ರತಿಪಾದಿಸಿದವರಲ್ಲಿ ಆತ ಮೊದಲಿಗನು. ಲ್ಯುಸಿಪ್ಪಸ್ (ಕ್ರಿ.ಪೂ. 5ನೇ ಶತಮಾನ) ಎಲ್ಲ ಭೌತವಸ್ತುಗಳೂ ಅವಿಭಾಜ್ಯ, ನಾಶವಾಗಲಾರದ ಅಣುಗಳು ಎಂದು ಕರೆಯಲಾಗುವ ಘಟಕಗಳಿಂದ ರೂಪಿತವಾಗಿವೆ ಎಂಬ ಅಣುಸಿದ್ಧಾಂತವನ್ನು ಪರಿಚಯಿಸಿದನು. ಆತನ ಶಿಷ್ಯ ಡೆಮೊಕ್ರಿಟಸ್‌ ಇದನ್ನು ಬಹಳಷ್ಟು ವಿಸ್ತೃತಗೊಳಿಸಿದನು. ತರುವಾಯ, ಪ್ಲೇಟೋ ಮತ್ತು ಅರಿಸ್ಟಾಟಲ್‌ ನೈಸರ್ಗಿಕ ತತ್ವಶಾಸ್ತ್ರದ ವ್ಯವಸ್ಥಿತ ಚರ್ಚೆಗಳನ್ನು ಪ್ರಪ್ರಥಮವಾಗಿ ಪ್ರತಿಪಾದಿಸಿದವರು. ಇದು ನಂತರದ ನಿಸರ್ಗದ ಶೋಧಗಳನ್ನು ರೂಪುಗೊಳಿಸಿತು. ಅವರು ಡಿಡಕ್ಟಿವ್ ರೀಸನಿಂಗ್ ತತ್ವವನ್ನು ಅಭಿವೃದ್ಧಿಗೊಳಿಸಿದ್ದಕ್ಕೆ ವಿಶೇಷ ಮಹತ್ವವಿದೆ ಮತ್ತು ನಂತರದ ವೈಜ್ಞಾನಿಕ ಪರಿಶೀಲನೆಗಳಿಗೆ ಅದು ಉಪಯುಕ್ತವಾಗಿದ್ದಿತ. ಪ್ಲೇಟೋ ಪ್ಲೇಟೋನಿಕ್ ಅಕಾಡೆಮಿಯನ್ನು ಕ್ರಿ.ಪೂ. 387ರಲ್ಲಿ ಸ್ಥಾಪಿಸಿದನು. ಆತನ ಧ್ಯೇಯವು "ಜ್ಯಾಮಿತಿಯಲ್ಲಿ ನಿಷ್ಣಾತರಲ್ಲದ ಯಾರೂ ಇಲ್ಲಿ ಪ್ರವೇಶಿಸುವುದು ಬೇಡ" ಎಂದಾಗಿತ್ತು ಮತ್ತು ಅಲ್ಲಿ ಅನೇಕ ಗಮನಾರ್ಹ ತತ್ವಶಾಸ್ತ್ರಜ್ಞರು ರೂಪುಗೊಂಡರು. ಪ್ಲೇಟೋನ ವಿದ್ಯಾರ್ಥಿ ಅರಿಸ್ಟಾಟಲ್‌ ಪ್ರಾಯೋಗಿಕ ವಿಧಾನವನ್ನು ಪರಿಚಯಿಸಿದನು. ಜೊತೆಗೆ ವೀಕ್ಷಣೆ ಮತ್ತು ನಿದರ್ಶನಗಳನ್ನು ನೀಡುವ ಮೂಲಕ ಸಾರ್ವತ್ರಿಕ ಸತ್ಯಗಳಿಗೆ ತಲುಪಬಹುದು ಎಂಬ ಅಭಿಪ್ರಾಯವನ್ನು ಮೂಡಿಸಿದನು. ಈ ಮೂಲಕ ಆತ ವೈಜ್ಞಾನಿಕ ವಿಧಾನದ ಅಡಿಪಾಯವನ್ನು ಹಾಕಿದನು. ಅರಿಸ್ಟಾಟಲ್‌ ಲಕ್ಷಣದಲ್ಲಿ ಪ್ರಯೋಗವಾದಿಯಾಗಿದ್ದ ಅನೇಕ ಜೀವಶಾಸ್ತ್ರೀಯ ಬರಹಗಳನ್ನು ಬರೆದಿದ್ದಾನೆ, ಅವು ಜೀವನದ ವೈವಿಧ್ಯತೆ ಮತ್ತು ಜೀವಶಾಸ್ತ್ರೀಯ ಕಾರ್ಯಕಾರಣ ಸಂಬಂಧದ ಮೇಲೆ ಕೇಂದ್ರೀಕೃತವಾಗಿವೆ. ಆತ ನಿಸರ್ಗದ ಕುರಿತು ಅಸಂಖ್ಯಾತ ವೀಕ್ಷಣೆಗಳನ್ನು ಮಾಡಿದ್ದಾನೆ. ವಿಶೇಷವಾಗಿ ತನ್ನ ಸುತ್ತಲಿನ ಸಸ್ಯಗಳು ಮತ್ತು ಪ್ರಾಣಿಗಳ ಪ್ರವೃತ್ತಿಗಳು ಹಾಗೂ ಗುಣಲಕ್ಷಣಗಳ ಕುರಿತು ವೀಕ್ಷಣೆಗಳನ್ನು ಮಾಡಿ, ಸುಮಾರು 540ಕ್ಕೂ ಹೆಚ್ಚು ಪ್ರಾಣಿಗಳ ಪ್ರಭೇದಗಳನ್ನು ವರ್ಗೀಕರಿಸಿದ್ದಾನೆ ಮತ್ತು ಕನಿಷ್ಠ 50 ಪ್ರಾಣಿಗಳ ಅಂಗಛೇದನ ಮಾಡಿದ್ದಾನೆ. ಅರಿಸ್ಟಾಟಲ್‌ನ ಬರಹಗಳನ್ನು ವೈಜ್ಞಾನಿಕ ಕ್ರಾಂತಿಯಲ್ಲಿ ತಳ್ಳಿಹಾಕಿದ್ದರೂ, ಅವು ನಂತರದಲ್ಲಿ ಇಸ್ಲಾಮಿಕ್ ಮತ್ತು ಐರೋಪ್ಯ ವಿದ್ವಾಂಸರನ್ನು ಗಾಢವಾಗಿ ಪ್ರಭಾವಿಸಿತ್ತು.

ಆಧುನಿಕ ವಿಜ್ಞಾನ 
π (ಪೈ) ಬೆಲೆಯನ್ನು ಅಂದಾಜು ಮಾಡಲು ಆರ್ಕಿಮಿಡೀಸ್‌ನು ಎಕ್ಸಾಶನ್ ವಿಧಾನವನ್ನು ಬಳಸಿದನು.

ಈ ಕಾಲಘಟ್ಟದ ಮಹತ್ವದ ಪರಂಪರೆಯು, ವಿಶೇಷವಾಗಿ ಅಂಗರಚನಾಶಾಸ್ತ್ರ, ಪ್ರಾಣಿವಿಜ್ಞಾನ, ಸಸ್ಯವಿಜ್ಞಾನ, ಖನಿಜವಿಜ್ಞಾನ , ಭೂವಿಜ್ಞಾನ, ಗಣಿತ ಮತ್ತು ಖಗೋಳವಿಜ್ಞಾನದ ವಾಸ್ತವವಾದ ಜ್ಞಾನದಲ್ಲಿ ಗಮನಾರ್ಹ ಪ್ರಗತಿಯನ್ನು ಒಳಗೊಂಡಿತ್ತು. ಜೊತೆಗೆ ಕೆಲವು ವೈಜ್ಞಾನಿಕ ಸಮಸ್ಯೆಗಳ ಮಹತ್ವದ ಕುರಿತು ಅರಿವು, ವಿಶೇಷವಾಗಿ ಬದಲಾವಣೆ ಮತ್ತು ಅದರ ಕಾರಣಗಳ ಸಮಸ್ಯೆಗಳಿಗೆ ಸಂಬಂಧಿಸಿದವು; ಮತ್ತು ನೈಸರ್ಗಿಕ ಪ್ರತ್ಯಕ್ಷ ವಿಚಾರಕ್ಕೆ ಗಣಿತವನ್ನು ಅನ್ವಯಿಸುವ ವಿಧಾನಾತ್ಮಕತೆಯ ಮಹತ್ವವನ್ನು ಗುರುತಿಸಿದ್ದು ಮತ್ತು ಪ್ರಯೋಗವಾದಿ ಸಂಶೋಧನೆಯನ್ನು ಕೈಗೆತ್ತಿಕೊಂಡಿದ್ದು ಕೂಡ ಮಹತ್ವದ ಪ್ರಗತಿಯಾಗಿತ್ತು. ಹೆಲೆನಿಸ್ಟಿಕ್ ಕಾಲದ ವಿದ್ವಾಂಸರು ಹಿಂದಿನ ಗ್ರೀಕ್ ಚಿಂತನೆಯಲ್ಲಿ ಅಭಿವೃದ್ಧಿಪಡಿಸಲಾದ ತತ್ವಗಳನ್ನು ಹೆಚ್ಚಾಗಿ ಅಳವಡಿಸಿಕೊಂಡರು: ತಮ್ಮ ವೈಜ್ಞಾನಿಕ ಶೋಧಗಳಲ್ಲಿ ಗಣಿತ ಮತ್ತು ವಿಸ್ತೃತ ಪ್ರಯೋಗವಾದಿ ಸಂಶೋಧನೆಯನ್ನು ಅನ್ವಯಿಸಿಕೊಂಡರು. ಪ್ರಾಚೀನ ಗ್ರೀಕರಿಂದ ಮತ್ತು ಹೆಲೆನಿಸ್ಟಿಕ್ ತತ್ವಶಾಸ್ತ್ರಜ್ಞರಿಂದ /1}, ಮಧ್ಯಯುಗೀನ ಮುಸ್ಲಿಂ ತತ್ವಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳವರೆಗೆ, ಯೂರೋಪ್‌ನ ನವೋದಯ(ರಿನೇಸಾನ್ಸ್) ಮತ್ತು ಜ್ಞಾನೋದಯದವರೆಗೆ, ಆಧುನಿಕ ದಿನಗಳ ಮತಾತೀತ ವಿಜ್ಞಾನದವರೆಗೆ ಒಂದು ಅವಿಚ್ಛಿನ್ನ ಪ್ರಭಾವದ ಗೆರೆಗಳು ಹರಿದಿರುವುದನ್ನು ಕಾಣಬಹುದಾಗಿದೆ. ಪ್ರಾಚೀನ ಗ್ರೀಕರೊಂದಿಗೆ ತರ್ಕವಾಗಲೀ ಅಥವಾ ಶೋಧವಾಗಲೀ ಆರಂಭಗೊಳ್ಳಲಿಲ್ಲ, ಆದರೆ ಸಾಕ್ರೆಟೀಸ್‌ನ ವಿಧಾನವು ಸ್ವರೂಪಗಳ ಕಲ್ಪನೆಯೊಂದಿಗೆ, ಜ್ಯಾಮಿತಿಯಲ್ಲಿ, ತರ್ಕ, ಮತ್ತು ನೈಸರ್ಗಿಕ ವಿಜ್ಞಾನಗಳಲ್ಲಿ ಅಗಾಧ ಪ್ರಗತಿಯನ್ನು ಸಾಧಿಸಿತ್ತು. ಸ್ವಾನ್‌ಸೀ ವಿಶ್ವವಿದ್ಯಾಲಯದಲ್ಲಿ ಮಹಾಕಾವ್ಯಗಳ ನಿವೃತ್ತ ಪ್ರಾಧ್ಯಾಪಕರಾದ ಬೆಂಜಮಿನ್ ಫ್ಯಾರಿಂಗ್ಟನ್‌ ಹೀಗೆ ಹೇಳುತ್ತಾರೆ:

    "ಆರ್ಕಿಮಿಡೀಸ್‌‌‌ಗಿಂತ ಸಾವಿರಾರು ವರ್ಷ ಮೊದಲು ತೂಕ ಮಾಡುತ್ತಿದ್ದ ಮನುಷ್ಯರು ಸಮತೋಲನದ ನಿಯಮಗಳನ್ನು ಕಂಡುಕೊಂಡಿದ್ದರು; ಅವರು ಅದರಲ್ಲಿ ಒಳಗೊಂಡಿದ್ದ ತತ್ವದ ಪ್ರಾಯೋಗಿಕ ಮತ್ತು ಅಂತಸ್ಫೂರ್ತಿಯ ಜ್ಞಾನವನ್ನು ಹೊಂದಿದ್ದರು. ಆರ್ಕಿಮಿಡೀಸ್‌‌‌ ಏನು ಮಾಡಿದ ಎಂದರೆ ಈ ಪ್ರಾಯೋಗಿಕ ಜ್ಞಾನದ ಸೈದ್ಧಾಂತಿಕ ಫಲಿತಾಂಶಗಳನ್ನು ರೂಪಿಸಿದ ಮತ್ತು ಅದರಿಂದ ದೊರೆತ ಜ್ಞಾನವನ್ನು ತಾರ್ಕಿಕವಾದ ಸುಸಂಗತ ವ್ಯವಸ್ಥೆಯ ಭಾಗವಾಗಿ ಪ್ರಸ್ತುತಪಡಿಸಿದ."

ಮತ್ತು ಪುನಾ ಹೀಗೆ ಹೇಳಿದ್ದಾರೆ:

    "ಆಧುನಿಕ ವಿಜ್ಞಾನದ ಹೊಸಿಲಿನಲ್ಲಿ ನಮ್ಮನ್ನು ನಾವು ಅಚ್ಚರಿಯಿಂದ ಕಾಣುತ್ತೇವೆ. ಆಧುನಿಕತೆಯ ಗಾಳಿಯು ಯಾವುದೋ ಕೈಚಳಕದಿಂದ ಬೀಸಿದ್ದು ಎಂಬಂತೆ ಯೋಚಿಸಲಾಗದು. ಅದರಿಂದ ತುಂಬ ದೂರವಿದೆ. ಈ ಬರವಣಿಗೆಗಳ ಶಬ್ದಸಂಪತ್ತು ಮತ್ತು ಅವುಗಳ ಶೈಲಿಯು ನಮ್ಮದೇ ಶಬ್ದಸಂಪತ್ತು ಮತ್ತು ಶೈಲಿಯು ಎಲ್ಲಿಂದ ವ್ಯುತ್ಪನ್ನಗೊಂಡಿದೆಯೋ ಅದೇ ಮೂಲದಿಂದ ಬಂದಿವೆ".
ಆಧುನಿಕ ವಿಜ್ಞಾನ 
ಆಂಟಿಕಿತೆರ ಕಾರ್ಯವಿಧಾನದ ರೇಖಾಚಿತ್ರ (ಕ್ರಿ.ಪೂ.150-100 ).
ಆಧುನಿಕ ವಿಜ್ಞಾನ 
ವಜ್ರದ ಅಷ್ಟಮುಖೀಯ ಆಕಾರ.

ಖಗೋಳವಿಜ್ಞಾನಿ ಸಮೋಸ್‌ನ ಅರಿಸ್ಟಾರ್ಕಸ್‌ ಸೌರವ್ಯವಸ್ಥೆಯ ಸೂರ್ಯಕೇಂದ್ರಿತ ಮಾದರಿಯನ್ನು ಪ್ರಸ್ತಾಪಿಸಿದವರಲ್ಲಿ ಮೊದಲಿಗನು. ಭೂವಿಜ್ಞಾನಿ ಇರಟೊಸ್ತೆನಿಸ್ ಭೂಮಿಯ ಪರಧಿಯನ್ನು ನಿಖರವಾಗಿ ಲೆಕ್ಕಹಾಕಿದ್ದನು. ಹಿಪ್ಪರ್ಕಸ್‌ (ಸುಮಾರು ಕ್ರಿ.ಪೂ. 190 – ಸುಮಾರು 120) ಮೊದಲ ವ್ಯವಸ್ಥಿತ ನಕ್ಷತ್ರಗಳ ಪಟ್ಟಿ (ಸ್ಟಾರ್‌ ಕೆಟಲಾಗ್ ಅನ್ನು ರಚಿಸಿದನು. ಸೂರ್ಯಕೇಂದ್ರಿತ ಖಗೋಳವಿಜ್ಞಾನ ಮತ್ತು ಇಂಜಿನಿಯರಿಂಗ್‌ನಲ್ಲಿರುವ ಸಾಧನೆಯ ಮಟ್ಟವನ್ನು ಆಂಟಿಕಿಥೆರಿಯ ಮೆಕಾನಿಸಂ (150-100 ಕ್ರಿ.ಪೂ.) ಸಾಕಷ್ಟು ಪ್ರಭಾವಿಯಾಗಿ ತೋರಿಸುತ್ತದೆ. ಅದು ಗ್ರಹಗಳ ಸ್ಥಾನವನ್ನು ಲೆಕ್ಕಹಾಕಲು ಬಳಸುವ ಒಂದು ಅನಲಾಗ್ ಕಂಪ್ಯೂಟರ್ ಆಗಿತ್ತು. ಇಷ್ಟು ಸಂಕೀರ್ಣತೆಯ ತಂತ್ರಜ್ಞಾನದ ಪರಿಕರಗಳು 14ನೇ ಶತಮಾನದವರೆಗೆ ಮತ್ತೆ ಕಾಣಿಸಿಕೊಳ್ಳಲಿಲ್ಲ, 14ನೇ ಶತಮಾನದಲ್ಲಿ ಯೂರೋಪ್‌ನಲ್ಲಿ ಯಾಂತ್ರಿಕ ಖಗೋಳಶಾಸ್ತ್ರೀಯ ಗಡಿಯಾರವನ್ನು ರೂಪಿಸಲಾಯಿತು. ವೈದ್ಯಕೀಯದಲ್ಲಿ, ಹಿಪ್ಪೋಕ್ರೇಟಸ್‌‌ (ಸುಮಾರು. ಕ್ರಿಸ್ತಪೂರ್ವ 460– ಸುಮಾರು ಕ್ರಿ.ಪೂ.370 ) ಮತ್ತು ಆತನ ಅನುಯಾಯಿಗಳು ಅನೇಕ ರೋಗಗಳು ಮತ್ತು ವೈದ್ಯಕೀಯ ಸ್ಥಿತಿಗತಿಗಳನ್ನು ವಿವರಸಿದವರಲ್ಲಿ ಮೊದಲಿಗರು. ಅವರು ವೈದ್ಯರಿಗೆ ಹಿಪ್ಪೋಕ್ರಾಟಿಕ್ ಪ್ರಮಾಣ ವನ್ನು ರೂಪಿಸಿದರು, ಅದು ಇನ್ನೂ ಪ್ರಸ್ತುತವಿದೆ ಮತ್ತು ಇಂದಿಗೂ ಬಳಕೆಯಲ್ಲಿದೆ. ಹೆರೊಫಿಲೊಸ್ (ಕ್ರಿ.ಪೂ.335 - 280 ) ಮನುಷ್ಯರ ದೇಹದ ಅಂಗಛೇದನವನ್ನು ಆಧರಿಸಿ ತನ್ನ ನಿರ್ಣಯಗಳನ್ನು ಹೇಳಿದವರಲ್ಲಿ ಮತ್ತು ನರಮಂಡಲ ವ್ಯವಸ್ಥೆಯನ್ನು ವಿವರಿಸಿದವರಲ್ಲಿ ಮೊದಲಿಗನು. ಗ್ಯಾಲೆನ್ (ಕ್ರಿ.ಶ.129 – ಸುಮಾರು 200) ಮಿದುಳು ಮತ್ತು ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನೂ ಸೇರಿದಂತೆ ಅನೇಕ ಅತಿಸಾಹಸದ ಶಸ್ತ್ರಚಿಕಿತ್ಸೆಗಳನ್ನು ನಡೆಸಿದನು. ಸುಮಾರು ಎರಡು ಸಹಸ್ರಮಾನ ವರ್ಷಗಳವರೆಗೆ ಅವುಗಳನ್ನು ಮಾಡಲು ಮತ್ತಾರೂ ಮತ್ತೆ ಪ್ರಯತ್ನಿಸಲಿಲ್ಲ.

ಆಧುನಿಕ ವಿಜ್ಞಾನ 
ಯೂಕ್ಲಿಡ್‌ನ ಎಲೆಮೆಂಟ್ಸ್‌ನ ಅತ್ಯಂತ ಹಳೆಯ ಅಳಿದುಳಿದ ತುಣಕುಗಳಲ್ಲಿ ಒಂದು, ಆಕ್ಸಿರ್ಹೈನ್‌ಕಸ್‌ನಲ್ಲಿ ದೊರೆತಿದೆ ಮತ್ತು ಕಾಲಮಾನ ಸುಮಾರು ಕ್ರಿ.ಶ. 100 ಎನ್ನಲಾಗಿದೆ.<ಉಲ್ಲೇಖ>[33]

ಗಣಿತಜ್ಞ ಯೂಕ್ಲಿಡ್‌‌ನು ಗಣಿತಶಾಸ್ತ್ರೀಯ ಕಠಿಣನಿಯಮಗಳಿಗೆ ಅಡಿಪಾಯವನ್ನು ಹಾಕಿದನು. ಆತನು ವ್ಯಾಖ್ಯಾನಗಳು, ಆಧಾರಸೂತ್ರಗಳು, ಪ್ರಮೇಯಗಳು ಮತ್ತು ಪುರಾವೆಗಳ ಪರಿಕಲ್ಪನೆಗಳನ್ನು ಪರಿಚಯಿಸಿದನು, ಅವುಗಳು ಇಂದಿಗೂ ಆತನ ಎಲಿಮೆಂಟ್ಸ್‌ ಕೃತಿಯಲ್ಲಿ ಬಳಕೆಯಲ್ಲಿದ್ದು, ಅದು ಈವರೆಗೆ ಬರೆಯಲಾದ ಪಠ್ಯಪುಸ್ತಕಗಳಲ್ಲಿಯೇ ಅತ್ಯಂತ ಪ್ರಭಾವೀ ಎಂದು ಪರಿಗಣಿತವಾಗಿದೆ. ಆರ್ಕಿಮಿಡೀಸ್‌‌‌ನು ಸಾರ್ವಕಾಲಿಕ ಶ್ರೇಷ್ಠ ಗಣಿತಜ್ಞನೆಂದು ಪರಿಗಣಿತನಾಗಿದ್ದಾನೆ. ಪ್ಯಾರಬೋಲದ ಕಂಸದ ಅಡಿಯಲ್ಲಿ ವಿಸ್ತೀರ್ಣವನ್ನು ಕಂಡುಹಿಡಿಯಲು ಅನಂತ ಸರಣಿಗಳ ಸಂಕಲನ(ಸಮ್ಮೇಶನ್ ಆಫ್‌ ದಿ ಇನ್‌ಫೈನಿಟ್‌ ಸೀರೀಸ್‌)ದೊಂದಿಗೆ ಎಕ್ಸಾಶನ್ ವಿಧಾನವನ್ನು ಕಂಡುಹಿಡಿದ ಗೌರವ ಆತನದು. ಜೊತೆಗೆ ಪೈ ಮೌಲ್ಯದ ಸಾಕಷ್ಟು ನಿಖರವಾದ ಹತ್ತಿರದ ಬೆಲೆಯನ್ನು ಆತ ಕಂಡುಹಿಡಿದಿದ್ದಾನೆ. ಆತ ಭೌತವಿಜ್ಞಾನದಲ್ಲಿಯೂ ಸಾಕಷ್ಟು ಹೆಸರಾಗಿದ್ದಾನೆ, ಆತ ಜಲ ಸಮ-ಸ್ಥಿತಿಶಾಸ್ತ್ರ (ಹೈಡ್ರೋಸ್ಟ್ಯಾಟಿಕ್ಸ್‌‌‌), ಸಮ-ಸ್ಥಿತಿಶಾಸ್ತ್ರಕ್ಕೆ ಅಡಿಪಾಯವನ್ನು ನೀಡಿದ್ದಾನೆ ಮತ್ತು ಸನ್ನೆ(ಲೀವರ್‌)ಯ ತತ್ವದ ವಿವರಣೆಯನ್ನು ನೀಡಿದ್ದಾನೆ. ಥಿಯೋಫ್ರೇಸ್ಟಸ್‌ ಸಸ್ಯಗಳು ಮತ್ತು ಪ್ರಾಣಿಗಳ ಕೆಲವು ಬಹಳ ಮೊದಲಿನ ವಿವರಣೆಗಳನ್ನು ಬರೆದಿದ್ದಾನೆ. ಆತ ಮೊಟ್ಟಮೊದಲಿಗೆ ಜೀವಿವರ್ಗೀಕರಣಶಾಸ್ತ್ರವನ್ನು ರೂಪಿಸಿದನು ಮತ್ತು ಖನಿಜಗಳನ್ನು ಅವುಗಳ ಗಡಸುತನದಂತಹ ಗುಣಗಳ ಅರ್ಥದಲ್ಲಿ ಪರಿಶೀಲಿಸಿದ್ದನು. ಪ್ಲಿನಿ ದಿ ಎಲ್ಡರ್‌‌ ಕ್ರಿ.ಶ. 77ರಲ್ಲಿ ನೈಸರ್ಗಿಕ ವಿಶ್ವದ ಅತ್ಯಂತ ದೊಡ್ಡ ವಿಶ್ವಕೋಶವನ್ನು ರಚಿಸಿದ್ದನು ಮತ್ತು ಆತನು ಥಿಯೋಫ್ರೇಸ್ಟಸ್‌ನ ಯೋಗ್ಯ ಉತ್ತರಾಧಿಕಾರಿ ಎಂದು ಪರಿಗಣಿಸಬಹುದು. ಉದಾಹರಣೆಗೆ, ಆತುನ ವಜ್ರದ ಅಷ್ಟಮುಖೀಯ ಆಕೃತಿಯನ್ನು ನಿಖರವಾಗಿ ವಿವರಿಸಿದ್ದನು. ಆತನು ವಜ್ರ ತುಂಬ ಗಡುಸಾಗಿರುವುದರಿಂದ ಅದರ ದೂಳನ್ನು ನಕಾಸೆಗಾರ(ಕೆತ್ತನೆಗಾರ)ರು ಕತ್ತರಿಸಲು ಮತ್ತು ಬೇರೆ ಹರಳು(ರತ್ನಮಣಿ)ಗಳನ್ನು ಪಾಲಿಶ್ ಮಾಡಲು ಬಳಸುತ್ತಾರೆ ಎಂದು ಉಲ್ಲೇಖೀಸಿದ್ದಾನೆ. ಹರಳಿನ ಆಕಾರದ ಮಹತ್ವವನ್ನು ಆತನು ಗುರುತಿಸಿದ್ದು, ಅದು ಆಧುನಿಕ ಹರಳುವಿಜ್ಞಾನ(ಕ್ರಿಸ್ಟಲೋಗ್ರಾಫಿ)ಗೆ ಪೂರ್ವಗಾಮಿಯಾಗಿದೆ. ಜೊತೆಗೆ ಆತ ಹಲವಾರು ಖನಿಜಗಳನ್ನು ಉಲ್ಲೇಖಿಸಿದ್ದು, ಅವು ಖನಿಜವಿಜ್ಞಾನಕ್ಕೆ ಪೂರ್ವಸೂಚನೆಯಾಗಿತ್ತು. ಬೇರೆ ಖನಿಜಗಳು ವಿಶಿಷ್ಟ ಹರಳು ಆಕಾರವನ್ನು ಹೊಂದಿದೆ ಎಂದು ಗುರುತಿಸಿದ್ದನು. ಆದರೆ ಒಂದು ಉದಾಹರಣೆಯಲ್ಲಿ ಆತ ಹರಳು ಪ್ರವೃತ್ತಿಯನ್ನು ಶಿಲಾಸಂಬಂಧಿ ಕೆಲಸದೊಂದಿಗೆ ಗೊಂದಲಮಾಡಿಕೊಂಡಿದ್ದ. ಪಳೆಯುಳಿಕೆ ರಾಳ(ಆಂಬರ್‌)ವು ಪೈನ್‌ ಮರಗಳಿಂದ ಉಂಟಾದ ಪಳೆಯುಳಿಕೆಯಾದ ರೆಸಿನ್ ಎಂದು ಆತನೇ ಮೊದಲು ಗುರುತಿಸಿದ್ದು. ಏಕೆಂದರೆ ಆತನು ಅವುಗಳ ಒಳಗೆ ಕೀಟಗಳು ಸಿಕ್ಕಿಕೊಡಿರುವ ಮಾದರಿಗಳನ್ನು ನೋಡಿದ್ದನು.

ಭಾರತದಲ್ಲಿ ವಿಜ್ಞಾನ

ಆಧುನಿಕ ವಿಜ್ಞಾನ 
ಲೋಹಶಾಸ್ತ್ರದಲ್ಲಿ ಪ್ರಾಚೀನ ಭಾರತವು ಮೊದಲೇ ಮುಂಚೂಣಿಯಲ್ಲಿತ್ತು, ದೆಹಲಿಯಲ್ಲಿರುವ ಮೆತುಕಬ್ಬಿಣದ ಸ್ತೂಪ ಇದನ್ನು ರುಜುವಾತುಪಡಿಸುತ್ತದೆ.

ಗಣಿತ: ಭಾರತೀಯ ಉಪಖಂಡದಲ್ಲಿ ಪ್ರಾಚೀನ ಗಣಿತದ ಜ್ಞಾನವು ಸಿಂಧೂ ನದಿ ನಾಗರಿಕತೆಯಲ್ಲಿ ಕಾಣಿಸಿಕೊಳ್ಳುತ್ತದೆ. (ಸುಮಾರು ಕ್ರಿ.ಪೂ.4ನೇ ಸಹಸ್ರಮಾನ ~ಸುಮಾರು. ಕ್ರಿ.ಪೂ.3ನೇ ಸಹಸ್ರಮಾನ). ಈ ನಾಗರಿಕತೆಯ ಜನರು ಇಟ್ಟಿಗೆಗಳನ್ನು ಮಾಡಿದ್ದು, ಅವು 4:2:1 ಅನುಪಾತದಲ್ಲಿರುತ್ತಿದ್ದವು ಮತ್ತು ಈ ಅನುಪಾತವು ಇಟ್ಟಿಗೆ ರಚನೆಯ ಸ್ಥಿರತೆಗೆ ಬಹಳ ಅನುಕೂಲಕರ ಎಂದು ಪರಿಗಣಿತವಾಗಿದೆ. ಅವರು ಉದ್ದದ ಅಳತೆಯನ್ನು ಅತ್ಯಂತ ನಿಖರಮಟ್ಟದವರೆಗೆ ಪ್ರಮಾಣೀಕರಣ ಮಾಡಲೂ ಪ್ರಯತ್ನಿಸಿದ್ದರು. ಅವರು ಒಂದು ರೂಲರ್‌ಅನ್ನು ವಿನ್ಯಾಸಮಾಡಿದ್ದರು, ಅದನ್ನು ಮೊಹೆಂಜೊ-ದಾರೋ ರೂಲರ್ ಎನ್ನಲಾಗುತ್ತದೆ. ಅದರ ಉದ್ದವನ್ನು(ಅಂದಾಜು 1.32 ಇಂಚುಗಳು ಅಥವಾ 3.4 ಸೆಂಟಿಮೀಟರ್‌ಗಳು) ಹತ್ತು ಸಮಭಾಗಗಳನ್ನಾಗಿ ವಿಭಜಿಸಲಾಗಿತ್ತು. ಪ್ರಾಚೀನ ಮೊಹೆಂಜೊ-ದಾರೋದಲ್ಲಿ ತಯಾರಿಸಲಾದ ಇಟ್ಟಿಗೆಗಳು ಹೆಚ್ಚಾಗಿ ಈ ಉದ್ದದ ಏಕಮಾನದ ಪೂರ್ಣಾಂಕ ಅಪವರ್ತ್ಯಗಳಾಗಿರುತ್ತಿದ್ದವು. ಭಾರತೀಯ ಖಗೋಳವಿಜ್ಞಾನಿ ಮತ್ತು ಗಣಿತಜ್ಞ ಆರ್ಯಭಟ (ಕ್ರಿ.ಶ. 476-550), ತನ್ನ ಆರ್ಯಭಟೀಯ (499) ಗ್ರಂಥದಲ್ಲಿ ಅನೇಕ ತ್ರಿಕೋನಮಿತಿಯ ಫಲನ (ಟ್ರಿಗ್ನಾಮೆಟ್ರಿಕ್ ಫಂಕ್ಷನ್‌)ಗಳನ್ನು(ಸೈನ್‌, ವರ್ಸೈನ್‌, ಕೊಸೈನ್ ಮತ್ತು ಇನ್‌ವರ್ಸ್‌ ಸೈನ್‌ಗಳನ್ನೂ ಒಳಗೊಂಡು), ತ್ರಿಕೋನಮಿತೀಯ(ಟ್ರಿಗ್ನಾಮೆಟ್ರಿಕ್) ಕೋಷ್ಠಕಗಳನ್ನು ಮತ್ತು ತಂತ್ರಗಳನ್ನು ಪರಿಚಯಿಸಿದ್ದಾನೆ. ಜೊತೆಗೆ ಬೀಜಗಣಿತದ ದಶಕರೀತಿಯ ಅಂಕನ(ಅಲ್ಗಾರಿತಮ್)ವನ್ನೂ ಮೊದಲು ಪರಿಚಯಿಸಿದ್ದಾನೆ. ಕ್ರಿ.ಶ. 628ರಲ್ಲಿ, ಬ್ರಹ್ಮಗುಪ್ತನು ಗುರುತ್ವವು ಒಂದು ಆಕರ್ಷಣೆಯ ಬಲ ಎಂದು ಸೂಚಿಸಿದ್ದಾನೆ. ಆತನು ಸೊನ್ನೆಯ ಬಳಕೆಯನ್ನು ಸ್ಥಾನಸೂಚಕ(ಪ್ಲೇಸ್‌ಹೋಲ್ಡರ್)ವಾಗಿ ಮತ್ತು ದಶಾಂಶ ಅಂಕೆಯಾಗಿ ಹಿಂದೂ-ಅರಾಬಿಕ್ ವ್ಯವಸ್ಥೆಯೊಂದಿಗೆ ಬಹಳ ಸ್ಪಷ್ಟವಾಗಿ ವಿವರಿಸಿದ್ದಾನೆ. ಅದನ್ನು ವಿಶ್ವಾದ್ಯಂತ ಈಗ ಸಾರ್ವತ್ರಿಕವಾಗಿ ಬಳಸಲಾಗುತ್ತಿದೆ. ಈ ಇಬ್ಬರು ಖಗೋಳವಿಜ್ಞಾನಿಗಳ ಗ್ರಂಥಗಳ ಅರಾಬಿಕ್ ಅನುವಾದಗಳು ತಕ್ಷಣವೇ ಇಸ್ಲಾಮಿಕ್ ವಿಶ್ವದಲ್ಲಿ ಲಭ್ಯವಿದ್ದವು, ಹೀಗಾಗಿ 9ನೇ ಶತಮಾನದ ಹೊತ್ತಿಗೆ ಇಸ್ಲಾಮಿಕ್ ವಿಶ್ವಕ್ಕೆ ಅರಾಬಿಕ್ ಸಂಖ್ಯೆಗಳು ಎಂದು ಪರಿಚಿತವಾದವು. 14ರಿಂದ-16ನೇ ಶತಮಾನದಲ್ಲಿ, ಕೇರಳದ ಖಗೋಳವಿಜ್ಞಾನ ಮತ್ತು ಗಣಿತ ವಿದ್ಯಾಲಯಗಳು ಮಹತ್ವದ ಪ್ರಗತಿ ಸಾಧಿಸಿದ್ದವು. ತ್ರಿಕೋನಮಿತೀಯ ಮತ್ತು ವಿಶ್ಲೇಷಣೆ ಕ್ಷೇತ್ರಗಳನ್ನು ಒಳಗೊಂಡು ಖಗೋಳವಿಜ್ಞಾನದಲ್ಲಿ ಮತ್ತು ವಿಶೇಷವಾಗಿ ಗಣಿತದಲ್ಲಿ ತುಂಬ ಪ್ರಗತಿ ಸಾಧಿಸಿದ್ದವು. ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸಂಗಮಗ್ರಾಮದ ಮಾಧವ ಅವರನ್ನು "ಗಣಿಶಾಸ್ತ್ರೀಯ ವಿಶ್ಲೇಷಣೆಯ ಸ್ಥಾಪಕ" ಎಂದೇ ಪರಿಗಣಿಸಲಾಗುತ್ತದೆ. ಖಗೋಳವಿಜ್ಞಾನ: ಭಾರತದ ಧಾರ್ಮಿಕ ಗ್ರಂಥವಾಗಿರುವ ವೇದಗಳಲ್ಲಿ ಖಗೋಳವಿಜ್ಞಾನದ ಪರಿಕಲ್ಪನೆಗಳ ಮೊದಲ ಗ್ರಂಥೀಯ ಉಲ್ಲೇಖಗಳು ಬರುತ್ತವೆ. ಶರ್ಮಾ ಅವರ ಪ್ರಕಾರ (2008): "ಋಗ್ವೇದದಲ್ಲಿ ಅಸ್ತಿತ್ವರಾಹಿತ್ಯದಿಂದ ವಿಶ್ವದ ಹುಟ್ಟು, ಬ್ರಹ್ಮಾಂಡದ ವಿನ್ಯಾಸ ಮತ್ತು ಗೋಳಾಕೃತಿಯ ಸ್ವಾವಂಲಬಿತ ಭೂಮಿ ಕುರಿತು ಬುದ್ಧಿವಂತಿಕೆಯ ಊಹೆಗಳನ್ನು ಕಾಣಬಹುದು. ಜೊತೆಗೆ 360 ದಿನಗಳ ಒಂದು ವರ್ಷವನ್ನು 30 ದಿನಗಳ 12 ಸಮಾನ ಭಾಗಗಳನ್ನಾಗಿ ವಿಭಜಿಸಿ, ನಿಯಮಿತವಾದ ಅಧಿಕಮಾಸವನ್ನೂ ಸೇರಿಸಿದ ವಿಧಾನವನ್ನೂ ಕಾಣಬಹುದು." ಸಿದ್ಧಾಂತ ಶಿರೋಮಣಿ ಯ ಮೊದಲ 12 ಅದ್ಯಾಯಗಳನ್ನು 12ನೇ ಶತಮಾನದಲ್ಲಿ ಭಾಸ್ಕರನು ಬರೆದಿರುವನು. ಇದರಲ್ಲಿ ಈ ಕೆಳಗಿನ ವಿಷಯಗಳಿವೆ: ಗ್ರಹಗಳ ಸರಾಸರಿ ರೇಖಾಂಶಗಳು; ಗ್ರಹಗಳ ನೈಜ ರೇಖಾಂಶಗಳು; ಒಂದುದಿನದ ಆವರ್ತನೆಯ ಮೂರು ಸಮಸ್ಯೆಗಳು; ಸೂರ್ಯನು ಚಂದ್ರನೊಡನೆ ಹೊಂದುವ ಯೋಗ; ಚಂದ್ರ ಗ್ರಹಣ; ಸೂರ್ಯ ಗ್ರಹಣ; ಗ್ರಹಗಳ ಅಕ್ಷಾಂಶಗಳು; ಸೂರ್ಯಾಸ್ತ ಮತ್ತು ಸೂರ್ಯೋದಯ; ಅಮವಾಸ್ಯೆಯಿಂದ ಹುಣ್ಣಿಮೆಯವರೆಗೆ ವೃದ್ಧಿಸುವ ಚಂದ್ರ; ಗ್ರಹಗಳ ಪರಸ್ಪರ ಸಂಗಮ; ನಿರ್ದಿಷ್ಟ ನಕ್ಷತ್ರದೊಂದಿಗೆ ಗ್ರಹವೊಂದರ ಸಂಗಮ ಮತ್ತು ಸೂರ್ಯ ಮತ್ತು ಚಂದ್ರನ ಪಥಗಳು. ಎರಡನೇ ಭಾಗದ 13 ಅಧ್ಯಾಯಗಳು ಗೋಳದ ಲಕ್ಷಣಗಳನ್ನು ಮತ್ತು ಅದನ್ನು ಆಧರಿಸಿ ಮಹತ್ವದ ಖಗೋಳವಿಜ್ಞಾನದ ಹಾಗೂ ತ್ರಿಕೋನಮಿತೀಯ ಲೆಕ್ಕಾಚಾರಗಳನ್ನು ಒಳಗೊಂಡಿದೆ. ಭಾಷಾಶಾಸ್ತ್ರ: ಕಬ್ಬಿಣ ಯುಗದ ಭಾರತದಲ್ಲಿ ಕೆಲವು ಪುರಾತನ ಭಾಷಾಶಾಸ್ತ್ರೀಯ ಚಟುವಟಿಕೆಗಳು (ಕ್ರಿ.ಪೂ. 1ನೇ ಸಹಸ್ರಮಾನ)ವೇದ ಗ್ರಂಥಗಳ ಸರಿಯಾದ ಉಚ್ಚಾರಣೆ ಮತ್ತು ವ್ಯಾಖ್ಯಾನದ ಉದ್ದೇಶಕ್ಕಾಗಿ ಸಂಸ್ಕೃತದ ವ್ಯಾಖ್ಯಾನದೊಂದಿಗೆ ಆರಂಭಗೊಂಡಿದ್ದು ಕಂಡುಬರುತ್ತವೆ. ಸಂಸ್ಕೃತದ ಅತ್ಯಂತ ಮಹತ್ವದ ವ್ಯಾಕರಣತಜ್ಞ ಎಂದರೆ ಪಾಣಿನಿPāṇini (ಸುಮಾರು. ಕ್ರಿ.ಪೂ. 520 – 460). ಆತ ರಚಿಸಿದ ಸುಮಾರು 4000 ವ್ಯಾಕರಣ ಸೂತ್ರಗಳು ಒಟ್ಟುಸೇರಿ ಸಂಸ್ಕೃತದ ಒಂದು ಸಂಕೀರ್ಣ ಉತ್ಪಾದಕ ವ್ಯಾಕರಣ ಆಗಿದೆ. ಆತನ ವಿಶ್ಲೇಷಣಾತ್ಮಕ ದೃಷ್ಟಿಕೋನದಲ್ಲಿ ಧ್ವನಿಮಾ, ಆಕೃತಿಮೆ ಅಥವಾ ರೂಪಿಮೆ(ಮಾರ್ಫೀಮ್‌) ಮತ್ತು ಧಾತು ಅಥವಾ ಪ್ರಕೃತಿ, ಇವುಗಳ ಪರಿಕಲ್ಪನೆಗಳು ಅಂತರ್ಗತವಾಗಿವೆ. ವೈದ್ಯಕೀಯ: ಇಂದಿನ ಪಾಕಿಸ್ತಾನದಲ್ಲಿ ಕಂಡುಬಂದಿರುವ ನಿಯೋಲಿಥಿಕ್ ಕಾಲದ ಗೋರಿಗಳ ಶೋಧಗಳು ಪುರಾತನ ಕೃಷಿ ಸಂಸ್ಕೃತಿಯೊಂದಿಗೆ ಆದಿ-ದಂತವೈದ್ಯಕೀಯದ ಪುರಾವೆಗಳನ್ನು ಸೂಚಿಸುತ್ತವೆ. ಆಯುರ್ವೇದವು ಪ್ರಾಚೀನ ಭಾರತದಲ್ಲಿ ಕ್ರಿ.ಪೂ. 2500ಕ್ಕಿಂತ ಮೊದಲೇ ಹುಟ್ಟಿದ ಪಾರಂಪರಿಕ ವೈದ್ಯಕೀಯ ಪದ್ಧತಿಯಾಗಿದೆ. ಈಗ ವಿಶ್ವದ ಬೇರೆ ಬೇರೆ ಭಾಗಗಳಲ್ಲಿಯೂ ಪರ್ಯಾಯ ವೈದ್ಯಕೀಯದ ರೂಪವಾಗಿ ಪ್ರಚಲಿತದಲ್ಲಿದೆ. ಆರ್ಯುವೇದದ ಅತ್ಯಂತ ಪ್ರಸಿದ್ಧ ಗ್ರಂಥ ಎಂದರೆ ಸುಶ್ರುತನ ಸುಶ್ರುತಸಂಹಿತಾ, ಇದು ರಿನೋಪ್ಲಾಸ್ಟಿ(ಮೂಗಿನ ರೂಪಲೋಪ ಸರಿಪಡಿಸುವ ಶಸ್ತ್ರಚಿಕಿತ್ಸೆ), ಹರಿದ ಕಿವಿ ಹಾಲೆಗಳನ್ನು ಸರಿಪಡಿಸುವುದು, ಮೂಲಾಧಾರದ (ಪೆರಿನೀಯಲ್) ಅಶ್ಮರೀಛೇದನ(ಲಿತಾಟಮಿ), ಕಣ್ಣಿನ ಪೊರೆ(ಕ್ಯಾಟರಾಕ್ಟ್) ಶಸ್ತ್ರಚಿಕಿತ್ಸೆ, ಇನ್ನಿತರ ರೋಗಗ್ರಸ್ತ ಅಂಗಗಳ ಛೇದನ ಮತ್ತು ಬೇರೆಬೇರೆ ಶಸ್ತ್ರಚಿಕಿತ್ಸೆಗಳೂ ಸೇರಿದಂತೆ ವಿವಿಧ ರೀತಿಯ ಶಸ್ತ್ರಚಿಕಿತ್ಸೆಗಳ ವಿಧಾನವನ್ನು ವಿವರಿಸಿದೆ. ಲೋಹಶಾಸ್ತ್ರ: ವೂಟ್ಜ್‌(ಉಕ್ಕು), ಕ್ರುಸಿಬಲ್ ಮತ್ತು ಸ್ಟೈನ್‌ಲೆಸ್‌ ಉಕ್ಕುಗಳನ್ನು ಭಾರತದಲ್ಲಿ ಆವಿಷ್ಕಾರ ಮಾಡಲಾಯಿತು. ಅವುಗಳನ್ನು ವ್ಯಾಪಕವಾಗಿ ರಫ್ತು ಮಾಡಲಾಗುತ್ತಿದ್ದು ಮತ್ತು ಕ್ರಿ.ಶ. 1000ದ ವೇಳೆಗೆ "ಡಮಸ್ಕಸ್‌ ಸ್ಟೀಲ್‌ " ತಯಾರಿಕೆಗೆ ಕಾರಣವಾಯಿತು.

"ಹಿಂದೂಗಳು ಕಬ್ಬಿಣದ ತಯಾರಿಕೆಯಲ್ಲಿ ಮತ್ತು ಬೇರೆ ಘಟಕಾಂಶಗಳ ತಯಾರಿಯಲ್ಲಿಯೂ ಉತ್ಕೃಷ್ಟತೆ ಸಾಧಿಸಿದ್ದಾರೆ. ಈ ಘಟಕಾಂಶಗಳನ್ನು ಕಬ್ಬಿಣದ ಜೊತೆ ಶಾಖದಿಂದ ಕರಗಿಸಿ, ಆ ರೀತಿಯ ಮೃದು ಕಬ್ಬಿಣವನ್ನು ತಯಾರಿಸುತ್ತಾರೆ, ಅದನ್ನು ಭಾರತೀಯ ಸ್ಟೀಲ್‌ ಎನ್ನಲಾಗುತ್ತದೆ(ಹಿಂದಿಯಾಹ್). ವಿಶ್ವದ ಅತ್ಯಂತ ಪ್ರಸಿದ್ಧ ಬಾಗುಕತ್ತಿಗಳನ್ನು ತಯಾರಿಸುವ ಕಾರ್ಯಾಗಾರಗಳನ್ನೂ ಅವರು ಹೊಂದಿದ್ದಾರೆ". 12ನೇ ಶತಮಾನದ ಅರಬ್‌ ಇದ್ರಿಜಿಯನ್ನು ಉಲ್ಲೇಖಿಸಿರುವ ಹೆನ್ರಿ ಯೂಲ್‌.

ಚೀನಾದಲ್ಲಿ ವಿಜ್ಞಾನ

ಆಧುನಿಕ ವಿಜ್ಞಾನ 
ಜಪಾನಿನ ಮೇಲೆ 1281ರಲ್ಲಿ ಮಂಗೋಲರ ಆಕ್ರಮಣದಲ್ಲಿ ಚೀನೀ ಗನ್‌ಪೌಡರ್‌ಅನ್ನು ಬಳಸಲಾಯಿತು
ಆಧುನಿಕ ವಿಜ್ಞಾನ 
ಸ್ಯು ಸಾಂಗ್‌ನ ಕ್ಸಿನ್ ಯಿ ಕ್ಸಿಯಾಂಗ್ ಫಾ ಯೋದಲ್ಲಿರುವ ನಕ್ಷತ್ರ ನಕಾಶೆ, ಇದನ್ನು 1092ರಲ್ಲಿ ಪ್ರಕಟಿಸಲಾಗಿದೆ, ಇದು ಮರ್ಕೇಟರ್‌ ಪ್ರೊಜೆಕ್ಷನ್‌ಗೆ ಹೋಲಿಕೆ ಇರುವ ಒಂದು ಉರುಳೆಯಾಕಾರದ ಪ್ರೊಜೆಕ್ಷನ್‌ಅನ್ನು ಮತ್ತು ಧ್ರುವ ತಾರೆಯ ತಿದ್ದುಪಡಿ ಮಾಡಿದ ಸ್ಥಾನವನ್ನು ಚಿತ್ರಿಸುತ್ತದೆ. ಶೆನ್ ಕ್ಯೊನ ಖಗೋಳಶಾಸ್ತ್ರೀಯ ವೀಕ್ಷಣೆಗಳಿಗೆ ಕೃತಜ್ಞರಾಗಿರಬೇಕಿದೆ. <ಉಲ್ಲೇಖ>ನೀಧಾಮ್, ಜೋಸೆಫ್ (1986). ಸೈನ್ಸ್‌ ಆಂಡ್ ಸಿವಿಲೈಸೇಶನ್ಸ್ ಇನ್‌ ಚೀನಾ: ಸಂಪುಟ 3, ಮ್ಯಾತ್ಸ್‌ ಆಂಡ್ ದಿ ಸೈನ್ಸ್‌ ಆಫ್‌ ದಿ ಹೆವೆನ್ಸ್ ಆಂಡ್ ದಿ ಅರ್ಥ್‌ . ತೈಪೇ: ಕೇವ್ಸ್‌ ಬುಕ್ ಲಿ. ಪುಟ. 208. ಸ್ಯು ಸಾಂಗ್‌ ಅವರ ಸೆಲೆಸ್ಟಿಯಲ್ ಅಟ್ಲಾಸ್ ಆಫ್ 5 ಸ್ಟಾರ್ಸ್, ನಕಾಶೆಯು ಮುದ್ರಿತ ರೂಪದಲ್ಲಿ ತುಂಬ ಹಳೆಯದು.<ಉಲ್ಲೇಖ ಹೆಸರು ="ಸಿವಿನ್ III 32">ಸಿವಿನ್, ನಥಾನ್ (1995). ಸೈನ್ಸ್‌ ಇನ್ ಏನ್ಷೆಂಟ್ ಚೀನಾ. ಬ್ರೂಕ್‌ಫೀಲ್ಡ್‌ ವೆರ್ಮೌಂಟ್: ವರಿಯಮ್‌, ಅಶ್ಗೇಟ್‌ ಪಬ್ಲಿಶಿಂಗ್‌. III, ಪುಟ 32.

ಚೀನಾ ದೇಶವು ತಂತ್ರಜ್ಞಾನದ ಕೊಡುಗೆಯ ಸುದೀರ್ಘವಾದ ಮತ್ತು ಶ್ರೀಮಂತ ಇತಿಹಾಸವನ್ನು ಹೊಂದಿದೆ. ಪ್ರಾಚೀನ ಚೀನಾದ ನಾಲ್ಕು ಮಹಾನ್ ಆವಿಷ್ಕಾರಗಳುಎಂದರೆ (Chinese: 四大發明; ಪಿನ್ಯಿನ್: ಸೀ ಡಾ ಫಾ ಮೀಂಗ್ ) ದಿಕ್ಸೂಚಿ(ಕಂಪಾಸ್), ಗನ್‌ಪೌಡರ್, ಕಾಗದ ತಯಾರಿಕೆ ಮತ್ತು ಮುದ್ರಣ. ಈ ನಾಲ್ಕು ಶೋಧಗಳು ಚೀನೀ ನಾಗರಿಕತೆಯ ಮೇಲೆ ಪ್ರಭಾವ ಬೀರಿದವು ಮತ್ತು ಅತ್ಯಂತ ವ್ಯಾಪಕವಾದ ಜಾಗತಿಕ ಪರಿಣಾಮವನ್ನು ಹೊಂದಿದ್ದಿತು. ಇಂಗ್ಲಿಶ್ ತತ್ವಜ್ಞಾನಿ ಫ್ರಾನ್ಸಿಸ್ ಬೇಕನ್ , ತನ್ನ ನೊವುಮ್ ಆರ್ಗ್ಯಾನಮ್‌ ಬರಹದಲ್ಲಿ ಹೀಗೆ ಹೇಳಿದ್ದಾನೆ:

ಮುದ್ರಣ, ಗನ್‌ಪೌಡರ್ ಮತ್ತು ದಿಕ್ಸೂಚಿ: ಈ ಮೂರು ವಿಶ್ವಾದ್ಯಂತ ಸಂಗತಿಗಳ ಆಯಾಮ ಮತ್ತು ಸ್ಥಿತಿಯನ್ನೇ ಬದಲಿಸಿದವು; ಮೊದಲಿಗೆ ಸಾಹಿತ್ಯದಲ್ಲಿ, ಎರಡನೆಯದು ಯುದ್ಧರಂಗದಲ್ಲಿ ಮತ್ತು ಮೂರನೆಯದು ನೌಕಾಯಾನದಲ್ಲಿ; ಆ ಕಾರಣದಿಂದ ಅಸಂಖ್ಯಾತ ಬದಲಾವಣೆಗಳು ಆದವು. ಎಷ್ಟರಮಟ್ಟಿಗೆ ಎಂದರೆ ಯಾವುದೇ ಸಾಮ್ರಾಜ್ಯ, ಯಾವುದೇ ಮತ, ಯಾವುದೇ ನಕ್ಷತ್ರ ಮನುಷ್ಯರ ವ್ಯವಹಾರದಲ್ಲಿ ಈ ಯಾಂತ್ರಿಕ ಶೋಧಗಳು ಉಂಟುಮಾಡಿದಷ್ಟು ಅಗಾಧ ಶಕ್ತಿ ಮತ್ತು ಪ್ರಭಾವವನ್ನು ಉಂಟುಮಾಡಿರಲಿಲ್ಲ."

ವಿವಿಧ ಕಾಲಘಟ್ಟದಲ್ಲಿ ಚೀನೀ ವಿಜ್ಞಾನ ಕ್ಷೇತ್ರಕ್ಕೆ ಹಲವಾರು ಗಮನಾರ್ಹ ವ್ಯಕ್ತಿಗಳು ಕೊಡುಗೆ ಸಲ್ಲಿಸಿದ್ದಾರೆ. ಅವರಲ್ಲಿ ಅತ್ಯಂತ ಪ್ರಸಿದ್ಧ ವ್ಯಕ್ತಿ ಎಂದರೆ ಶೆನ್‌ ಕ್ಯೊ (1031–1095), ಬಹುಶ್ರುತ ವಿಜ್ಞಾನಿ ಮತ್ತು ರಾಜತಾಂತ್ರಿಕ, ಆತ ಮೊದಲಬಾರಿಗೆ ಕಾಂತೀಯ-ಕಡ್ಡಿಯ ದಿಕ್ಸೂಚಿಯನ್ನು ನೌಕಾಯಾನಕ್ಕೆ ಬಳಸುವುದನ್ನು ವಿವರಿಸಿದನು. ಆತ ನಿಜವಾದ ಉತ್ತರ ದಿಕ್ಕಿನ ಪರಿಕಲ್ಪನೆಯನ್ನು ಕಂಡುಹಿಡಿದನು. ಜೊತೆಗೆ ಖಗೋಳವಿಜ್ಞಾನದ ನೋಮನ್ ಅಥವಾ ನೆರಳು ಗಡಿಯಾರದ ವಿನ್ಯಾಸವನ್ನು, ಆರ್ಮಿಲರಿ ಸ್ಪಿಯರ್ (ಆಕಾಶಕಾಯಗಳ ವೀಕ್ಷಣೆಗೆ ಮಾಡಿದ ಬಳೆಗಳಿಂದ ಕೂಡಿದ ವಲಯ), ಸೈಟ್‌ ಟ್ಯೂಬ್‌, ಮತ್ತು ನೀರುಗಡಿಯಾರ (ಕ್ಲೆಪ್ಸಿಡ್ರ)ದ ವಿನ್ಯಾಸಗಳನ್ನು ಮತ್ತಷ್ಟು ಉತ್ತಮಪಡಿಸಿದನು, ಅಲ್ಲದೇ ದೋಣಿಗಳನ್ನು ದುರಸ್ತಿ ಮಾಡಲು ಒಣಗಿದ(ಡ್ರೈ)ಡಾಕ್‌ಗಳ ಬಳಕೆಯನ್ನು ವಿವರಿಸಿದನು. ಪ್ರವಾಹ ಆವರಿಸಿ ಹೂಳು ತುಂಬಿಕೊಳ್ಳುವ ನೈಸರ್ಗಿಕ ಪ್ರಕ್ರಿಯೆಯನ್ನು ವೀಕ್ಷಿಸಿ ಮತ್ತು ತೈಹಾಂಗ್ ಪರ್ವತಗಳಲ್ಲಿ (ಪೆಸಿಫಿಕ್ ಸಾಗರದಿಂದ ನೂರಾರು ಮೈಲುಗಳ ದೂರದಲ್ಲಿ)ಸಮುದ್ರದ ಪಳೆಯುಳಿಕೆಗಳ ಶೋಧವನ್ನು ಗಮನಿಸಿದ ನಂತರ, ಭೂಮಿ ರಚನೆಯಾಗುವ ಸಿದ್ಧಾಂತವನ್ನು ಅಥವಾ ಭೂರಚನಾಶಾಸ್ತ್ರವನ್ನು ಶೆನ್‌ ಕ್ಯೊ ರೂಪಿಸಿದನು. ಅವನು ಯಾನ್‌'ನ್ ಶಾಂಕ್ಸಿ ಪ್ರಾಂತ್ಯದಲ್ಲಿ ಭೂಮಿಯ ಆಳದಲ್ಲಿ ಕಲ್ಲಾಗಿಹೋದ ಬಿದಿರು ಇರುವುದನ್ನು ಗಮನಿಸಿದ ನಂತರ ಭೂಪ್ರದೇಶಗಳಲ್ಲಿ ಕ್ರಮೇಣ ಹವಾಮಾನ ಬದಲಾವಣೆಯಾಗಿದೆ ಎಂಬ ಸಿದ್ಧಾಂತವನ್ನೂ ಪ್ರಸ್ತುತಪಡಿಸಿದನು. ಶೆನ್‌ ಕ್ಯೊನ ಬರಹಗಳಿಲ್ಲದಿದ್ದರೆ ಯು ಹೋನ ವಾಸ್ತುಶಿಲ್ಪದ ಕೆಲಸಗಳು ಮತ್ತು ಬಿ ಶೆಂಗ್‌ನ (990-1051) ಚಲಿಸುವ ರೀತಿಯ ಮುದ್ರಣದ ಶೋಧದ ಕುರಿತು ಗೊತ್ತಾಗುತ್ತಲೇ ಇರಲಿಲ್ಲ. ಶೆನ್‌ನ ಸಮಕಾಲೀನ ಸು ಸಾಂಗ್ (1020–1101) ಕೂಡ ಒಬ್ಬ ಪ್ರಕಾಂಡ ಬಹುಶ್ರುತ ವಿದ್ವಾಂಸನಾಗಿದ್ದ, ಆತ ಖಗೋಳವಿಜ್ಞಾನಿಯೂ ಆಗಿದ್ದು, ನಕ್ಷತ್ರಗಳ ನಕಾಶೆಯ ಒಂದು ಆಕಾಶಕಾಯಗಳ ಅಟ್ಲಾಸ್ ರೂಪಿಸಿದ್ದನು. ಜೊತೆಗೆ ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ಖನಿಜವಿಜ್ಞಾನ ಮತ್ತು ಲೋಹಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳ ಒಂದು ಔಷಧೀಯ ಗ್ರಂಥವನ್ನು ಬರೆದಿದ್ದಾನೆ. ಅಲ್ಲದೇ ಒಂದು ದೊಡ್ಡ ಖಗೋಳಶಾಸ್ತ್ರೀಯ ಗಡಿಯಾರಗೋಪುರ(ಕ್ಲಾಕ್‌ಟವರ್) ವನ್ನು ಕೈಫೆಂಗ್‌ ನಗರದಲ್ಲಿ 1088ರಲ್ಲಿ ರಚಿಸಿದನು. ಆರ್ಮಿಲರಿ ಸ್ಪಿಯರ್ (ಆಕಾಶಕಾಯಗಳ ವೀಕ್ಷಣೆಗೆ ಮಾಡಿದ ಬಳೆಗಳಿಂದ ಕೂಡಿದ ವಲಯ) ಅನ್ನು ಕಾರ್ಯಾಚರಣೆ ಮಾಡಲು, ಆತನ ಗಡಿಯಾರಗೋಪುರವು ಒಂದು ತಪ್ಪಿಸಿಕೊಳ್ಳುವ ಮಾರ್ಗ(ಎಸ್‌ಕೇಪ್‌ಮೆಂಟ್‌) ಕಾರ್ಯವಿಧಾನವನ್ನು ಅಳವಡಿಸಿಕೊಂಡಿತ್ತು ಮತ್ತು ವಿಶ್ವದ ಅತ್ಯಂತ ಹಳೆಯ ಕೊನೆಯಿಲ್ಲದೇ ಶಕ್ತಿ ವರ್ಗಾಯಿಸುವ ಒಂದು ಚೈನ್‌ ಡ್ರೈವ್‌ ಅನ್ನೂ ಅದು ಹೊಂದಿತ್ತು. 16 ಮತ್ತು 17ನೇ ಶತಮಾನಗಳ ಜೆಸ್ಯುಟ್ ಚೀನಾ ಮಿಶನ್‌ಗಳು "ಈ ಪ್ರಾಚೀನ ಸಂಸ್ಕೃತಿಯ ವೈಜ್ಞಾನಿಕ ಸಾಧನೆಗಳನ್ನು ಗ್ರಹಿಸಲು ಕಲಿತರು ಮತ್ತು ಅವುಗಳು ಯೂರೋಪ್‌ಗೆ ಗೊತ್ತಾಗುವಂತೆ ಮಾಡಿದರು. ಅವರ ಪತ್ರವ್ಯವಹಾರಗಳ ಮೂಲಕ ಐರೋಪ್ಯ ವಿಜ್ಞಾನಿಗಳು ಮೊದಲು ಚೀನೀ ವಿಜ್ಞಾನ ಮತ್ತು ಸಂಸ್ಕೃತಿಯನ್ನು ಕಲಿತರು." ಚೀನೀ ತಂತ್ರಜ್ಞಾನ ಮತ್ತು ವಿಜ್ಞಾನದ ಇತಿಹಾಸದ ಕುರಿತು ಪಾಶ್ಚಾತ್ಯ ತಜ್ಞರ ಚಿಂತನೆಗಳನ್ನು ಜೋಸೆಫ್ ನೀಧಾಮ್ ಮತ್ತು ನೀಧಾಮ್ ಸಂಶೋಧನಾ ಸಂಸ್ಥೆಯ ಕಾರ್ಯಗಳು ಕ್ರೋಡೀಕರಿಸಿವೆ. ಬ್ರಿಟಿಶ್‌‌ ವಿದ್ವಾಂಸ ನೀಧಾಮ್ ಪ್ರಕಾರ, ಚೀನಾದ ತಂತ್ರಜ್ಞಾನದ ಸಾಧನೆಗಳಲ್ಲಿ ಅತ್ಯಂತ ಮಹತ್ವದ ಶೋಧಗಳು ಎಂದರೆ ಭೂಕಂಪಶಾಸ್ತ್ರೀಯ ಶೋಧಕಗಳು (2ನೇ ಶತಮಾನದಲ್ಲಿ ಜಾಂಗ್ ಹೆಂಗ್ ), ನೀರಿನ ಶಕ್ತಿಯ ಆಕಾಶಕಾಯಗಳ ಗ್ಲೋಬ್‌ (ಜಾಂಗ್ ಹೆಂಗ್), ಕಡ್ಡಿಪೆಟ್ಟಿಗೆಗಳು, ದಶಾಂಶ ಪದ್ಧತಿಯ ಸ್ವತಂತ್ರ ಶೋಧ, ಡ್ರೈ ಡಾಕ್‌ಗಳು , ಸ್ಲೈಡಿಂಗ್ಕ್ಯಾಲಿಪರ್ಸ್, ಎರಡುಬಗೆಯ ಕಾರ್ಯದ ಪಿಸ್ಟನ್ ಪಂಪ್, ಬೀಡು ಕಬ್ಬಿಣ, ಬ್ಲಾಸ್ಟ್ ಫರ್ನೇಸ್‌, ಕಬ್ಬಿಣದ ನೇಗಿಲು, ಬಹು-ಕೊಳವೆಯ ಸೀಡ್‌ ಡ್ರಿಲ್, ಚಕ್ರದ ಕೈಬಂಡಿ, ತೂಗು ಸೇತುವೆ, ಜೊಳ್ಳು ತೂರುವ ಅಥವಾ ಕೇರುವ(ವಿನೋವಿಂಗ್) ಯಂತ್ರ, ತಿರುಗುವ ಪಂಕ, ಪ್ಯಾರಾಷೂಟ್‌, ನೈಸರ್ಗಿಕ ಅನಿಲವನ್ನು ಇಂಧನವಾಗಿ ಬಳಸುವುದು, ರೈಸ್ಡ್‌-ರಿಲೀಫ್‌ ಮ್ಯಾಪ್‌ , ಪ್ರೊಪೆಲ್ಲರ್, ಸಿಡಿಬಿಲ್ಲು(ಕ್ರಾಸ್‌ಬೊ), ಮತ್ತು ಘನ ಇಂಧನದ ರಾಕೆಟ್‌, ಬಹುಹಂತಗಳ ರಾಕೆಟ್, ಕುದುರೆ ಕೊರಳಪಟ್ಟಿ; ಇಷ್ಟಲ್ಲದೇ ತರ್ಕಶಾಸ್ತ್ರ, ಖಗೋಳವಿಜ್ಞಾನ, ವೈದ್ಯಕೀಯ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆಗಳೂ ಇವೆ. ಆದರೆ ಚೀನೀಯರ ಈ ಸಾಧನೆಗಳು ನಾವಿಂದು ಯಾವುದನ್ನು "ಆಧುನಿಕ ವಿಜ್ಞಾನ" ಎಂದು ಕರೆಯುತ್ತೇವೆಯೋ ಹಾಗೆ ಅಭಿವೃದ್ಧಿಯಾಗದಂತೆ ಸಾಂಸ್ಕೃತಿಕ ಅಂಶಗಳು ತಡೆದಿದ್ದವು. ನೀಧಾಮ್ ಪ್ರಕಾರ, ಚೀನೀ ಬುದ್ಧಿಜೀವಿಗಳ ಧಾರ್ಮಿಕ ಮತ್ತು ತತ್ವಶಾಸ್ತ್ರೀಯ ಚೌಕಟ್ಟು, ಅವರಿಗೆ ನಿಸರ್ಗದ ನಿಯಮಗಳ ವಿಚಾರಗಳನ್ನು ಸ್ವೀಕರಿಸಲು ಸಾಧ್ಯವಾಗದಂತೆ ಮಾಡಿತ್ತು:

It was not that there was no order in nature for the Chinese, but rather that it was not an order ordained by a rational personal being, and hence there was no conviction that rational personal beings would be able to spell out in their lesser earthly languages the divine code of laws which he had decreed aforetime. The Taoists, indeed, would have scorned such an idea as being too naïve for the subtlety and complexity of the universe as they intuited it.

ಮಧ್ಯಯುಗೀನ ಕಾಲದಲ್ಲಿ ವಿಜ್ಞಾನ

ರೋಮನ್‌ ಸಾಮ್ರಾಜ್ಯದ ವಿಭಜನೆಯೊಂದಿಗೆ, ಪಶ್ಚಿಮದ ರೋಮನ್ ಸಾಮ್ರಾಜ್ಯವು ಬಹುತೇಕವಾಗಿ ತನ್ನ ಹಿಂದಿನದರೊಂದಿಗೆ ಸಂಪರ್ಕವನ್ನು ಕಡಿದುಕೊಂಡಿತು. ಅಲೆಕ್ಸಾಂಡ್ರಿಯಾ ಗ್ರಂಥಾಲಯವು ರೋಮನ್‌ ಆಳ್ವಿಕೆಯಲ್ಲಿ ಬಿದ್ದಾಗಿನಿಂದ ಪತನಗೊಳ್ಳುತ್ತ, ಕ್ರಿ.ಶ. 642ರಲ್ಲಿ ಅರಬ್ಬರ ಈಜಿಪ್ತ್‌ ವಿಜಯದ ನಂತರ ಪೂರ್ಣ ನಾಶವಾಯಿತು. ಬೈಜಾಂಟಿನ್ ಸಾಮ್ರಾಜ್ಯವು ಕಾನ್‌ಸ್ಟಾಂಟಿನೋಪಲ್‌‌ನಂತಹ ಇನ್ನೂ ಕೆಲವು ಕಲಿಕಾ ಕೇಂದ್ರಗಳನ್ನು ಹೊಂದಿತ್ತು; ಪಾಶ್ಚಾತ್ಯ ಯೂರೋಪ್‌ನ ಜ್ಞಾನವು ಕ್ರೈಸ್ತಮಂದಿರಗಳಲ್ಲಿ ಕೇಂದ್ರೀಕೃತವಾಗಿತ್ತು. ಮಧ್ಯಯುಗೀನ ವಿಶ್ವವಿದ್ಯಾಲಯಗಳು 12 ಮತ್ತು 13ನೇ ಶತಮಾನದಲ್ಲಿ ಅಭಿವೃದ್ಧಿಯಾಗುವವರೆಗೂ ಪರಿಸ್ಥಿತಿ ಹೀಗೆಯೇ ಇದ್ದಿತು. ಕ್ರೈಸ್ತಮಠಗಳ ಅಧ್ಯಯನಕೇಂದ್ರಗಳ ಪಠ್ಯಕ್ರಮವು ಲಭ್ಯವಿದ್ದ ಕೆಲವೇ ಪ್ರಾಚೀನ ಪಠ್ಯಗಳು ಮತ್ತು ವೈದ್ಯಕೀಯ ಮತ್ತು ಸಮಯಪಾಲನೆಯಂತಹ ಕೆಲವು ಪ್ರಾಯೋಗಿಕ ವಿಷಯಗಳ ಕುರಿತ ಹೊಸ ಕೃತಿಗಳ ಅದ್ಯಯನವನ್ನು ಒಳಗೊಂಡಿತ್ತು. ಇದೇವೇಳೆಗೆ, ಮಧ್ಯಪ್ರಾಚ್ಯದಲ್ಲಿ, ಗ್ರೀಕ್‌‌ ತತ್ವಶಾಸ್ತ್ರವು ಹೊಸದಾಗಿ ಸ್ಥಾಪಿತಗೊಂಡ ಅರಬ್ ಸಾಮ್ರಾಜ್ಯದಲ್ಲಿ ಸ್ವಲ್ಪ ಮಟ್ಟಿನ ಬೆಂಬಲ ಗಳಿಸಿಕೊಳ್ಳಲು ಸಾಧ್ಯವಾಯಿತು. 7 ಮತ್ತು 8ನೇ ಶತಮಾನದಲ್ಲಿ, ಇಸ್ಲಾಂನ ಹರಡುವಿಕೆಯೊಂದಿಗೆ, ಇಸ್ಲಾಮಿಕ್ ಚಿನ್ನದ ಕಾಲ ಎಂದು ಕರೆಯಲಾಗುವಮುಸ್ಲಿಂ ವಿದ್ವತ್ತಿನ ಕಾಲ ಆರಂಭಗೊಂಡು, 16ನೇ ಶತಮಾನದವರೆಗೂ ಮುಂದುವರೆಯಿತು. ಈ ವಿದ್ವತ್ತಿಗೆ ಬಹಳಷ್ಟು ಅಂಶಗಳು ಸಹಕಾರಿಯಾಗಿದ್ದವು. ಏಕೈಕ ಭಾಷೆ ಅರಾಬಿಕ್‌ನ ಬಳಕೆಯು ಅನುವಾದಕರ ಅಗತ್ಯವಿಲ್ಲದೇ ಸಂವಹನಕ್ಕೆ ಅವಕಾಶ ಕಲ್ಪಿಸಿತು. ಬೈಜಾಂಟಿನ್ ಸಾಮ್ರಾಜ್ಯದಿಂದ ಗ್ರೀಕ್‌‌ ಮತ್ತು ಲ್ಯಾಟಿನ್‌ ಗ್ರಂಥಗಳನ್ನು ಪಡೆದುಕೊಂಡಿದ್ದು, ಜೊತೆಗೆ ಭಾರತೀಯ ಮೂಲಗಳಿಂದ ಲಭ್ಯವಾದ ಕಲಿಕೆಯು ಮುಸ್ಲಿಂ ವಿದ್ವಾಂಸರಿಗೆ ಅಗತ್ಯವಾಗಿದ್ದ ಜ್ಞಾನದ ತಳಹದಿಯನ್ನು ನೀಡಿತು ಮತ್ತು ಅದರಿಂದ ಅವರು ತಮ್ಮ ವಿದ್ವತ್ತನ್ನು ಬೆಳೆಸಿಕೊಂಡರು.

ಇಸ್ಲಾಮಿಕ್ ವಿಶ್ವದಲ್ಲಿ ವಿಜ್ಞಾನ

ಆಧುನಿಕ ವಿಜ್ಞಾನ 
15ನೇ-ಶತಮಾನದ ಅವಿಸೆನ್ನನ ದಿ ಕ್ಯಾನನ್‌ ಮೆಸಿಡಿನ್‌ ಕೃತಿಯ ಹಸ್ತಪ್ರತಿ.

ಮುಸ್ಲಿಂ ವಿಜ್ಞಾನಿಗಳು ಗ್ರೀಕರಿಗಿಂತ ಹೆಚ್ಚು ಪ್ರಯೋಗಗಳ ಮೇಲೆ ಒತ್ತು ನೀಡಿದರು. ಇದು ಒಂದು ಪುರಾತನ ವೈಜ್ಞಾನಿಕ ವಿಧಾನವು ಮುಸ್ಲಿಂ ವಿಶ್ವದಲ್ಲಿ ಬೆಳವಣಿಗೆಯಾಗಲು ಕಾರಣವಾಯಿತು ಮತ್ತು ಕಾರ್ಯವಿಧಾನದಲ್ಲಿ ಮಹತ್ವದ ಪ್ರಗತಿಯನ್ನು ಅಲ್ಲಿ ಸಾಧಿಸಲಾಯಿತು. ಇಬ್ನ್‌ ಅಲ್‌-ಹೇಥಮ್‌ನ (ಅಲ್ಹಾಜೆನ್)ಪ್ರಯೋಗಗಳಿಂದ ಸುಮಾರು ಕ್ರಿ.ಶ. 1000ದಿಂದ ಆರಂಭಗೊಂಡಿತು. ಆತ ದೃಗ್ವಿಜ್ಞಾನದ ಪುಸ್ತಕ ದಲ್ಲಿ ದೃಗ್ವಿಜ್ಞಾನದ ಕುರಿತು ಬರೆದಿದ್ದಾನೆ. ವೈಜ್ಞಾನಿಕ ವಿಧಾನದ ಬಹುಮುಖ್ಯ ಅಭಿವೃದ್ಧಿ ಎಂದರೆ ಪೈಪೋಟಿಯ ವೈಜ್ಞಾನಿಕ ಸಿದ್ಧಾಂತಗಳನ್ನು ಒಂದು ಸಾಮಾನ್ಯವಾದ ಪ್ರಯೋಗವಾದಿ ವ್ಯವಸ್ಥೆಯಲ್ಲಿ ಪ್ರತ್ಯೇಕಗೊಳಿಸಲು ಪ್ರಯೋಗಗಳನ್ನು ಬಳಸಿಕೊಂಡಿದ್ದು, ಅದು ಮುಸ್ಲಿಂ ವಿಜ್ಞಾನಿಗಳಲ್ಲಿ ಆರಂಭಗೊಂಡಿತು. ಇಬ್ನ್‌ ಅಲ್‌-ಹೇತಮ್‌ನನ್ನು ದೃಗ್ವಿಜ್ಞಾನದ ಪಿತಾಮಹ ಎಂದು ಕರೆಯಲಾಗುತ್ತದೆ. ವಿಶೇಷವಾಗಿ ಆತನ ಬೆಳಕಿನ ಒಳತೂರುವ ಸಿದ್ಧಾಂತಕ್ಕೆ ಪ್ರಯೋಗವಾದಿ ಪುರಾವೆ ನೀಡಿದ್ದಕ್ಕಾಗಿ ಹೀಗೆ ಪರಿಗಣಿಸಲಾಗುತ್ತದೆ. ಕೆಲವರು ಇಬ್ನ್‌ ಅಲ್‌-ಹೇತಮ್‌‌ನನ್ನು ಆಧುನಿಕ ವೈಜ್ಞಾನಿಕ ವಿಧಾನದ ಅಭಿವೃದ್ಧಿಗಾಗಿ "ಮೊದಲ ವಿಜ್ಞಾನಿ" ಎಂದು ಕರೆದಿದ್ದಾರೆ. ರೊಸನ್ನ ಗೊರಿನಿ ಹೀಗೆ ಬರೆದಿದ್ದಾರೆ:

"According to the majority of the historians al-Haytham was the pioneer of the modern scientific method. With his book he changed the meaning of the term optics and established experiments as the norm of proof in the field. His investigations are based not on abstract theories, but on experimental evidences and his experiments were systematic and repeatable."

ಗಣಿತದಲ್ಲಿ, ಪರ್ಷಿಯನ್ ಗಣಿತಜ್ಞ ಮೊಹಮ್ಮದ್ ಇಬ್ನ್‌ ಮುಸಾ ಅಲ್‌-ಕ್ವರಿಜ್ಮಿ ಅರಬ್ಬಿ ಅಂಕಗಣಿತ ಪದ್ಧತಿ(ಅಲ್ಗಾರಿತಮ್) ಯ ಪರಿಕಲ್ಪನೆಗೆ ತನ್ನ ಹೆಸರನ್ನು ನೀಡಿದ್ದಾನೆ. ಅಲ್‌ಜೀಬ್ರಾ(ಬೀಜಗಣಿತ) ಎಂಬ ಪದವು ಅಲ್‌-ಜಬರ್‌ ಪದದಿಂದ ವ್ಯುತ್ಪನ್ನಗೊಂಡಿದ್ದು, ಅದು ಆತನ ಪ್ರಕಟಣೆಗಳಲ್ಲಿ ಒಂದರ ಶೀರ್ಷಿಕೆಯ ಆರಂಭದ ಪದವಾಗಿದೆ. ಅರಾಬಿಕ್ ಸಂಖ್ಯೆಗಳು ಎಂದು ಕರೆಯಲಾಗುವ ಸಂಖ್ಯೆಗಳು ಮೂಲತಃ ಭಾರತದಿಂದ ಬಂದಿದ್ದು, ಆದರೆ ಮುಸ್ಲಿಂ ಗಣಿತಜ್ಞರು ಸಂಖ್ಯಾ ಪದ್ಧತಿಗೆ ಅನೇಕ ಪರಿಷ್ಕರಣೆಗಳನ್ನು ಮಾಡಿದರು. ಉದಾಹರಣೆಗೆ ಅಂಕನಪದ್ಧತಿಯಲ್ಲಿ ದಶಾಂಶ ಬಿಂದು(ಡೆಸಿಮಲ್ ಪಾಯಿಂಟ್)ವನ್ನು ಪರಿಚಯಿಸಿದರು. ಸೇಬಿಯನ್‌ ಗಣಿತಜ್ಞ ಅಲ್‌-ಬಟ್ಟನಿ (850-929)ಯು ಖಗೋಳವಿಜ್ಞಾನ ಮತ್ತು ಗಣಿತಕ್ಕೆ ಕೊಡುಗೆ ನೀಡಿದ್ದಾನೆ. ಹಾಗೆಯೇ ಪರ್ಷಿಯನ್‌‌ ವಿದ್ವಾಂಸ ಅಲ್‌-ರಾಜಿಯು ರಸಾಯನಶಾಸ್ತ್ರ ಮತ್ತು ವೈದ್ಯಕೀಯಕ್ಕೆ ಕೊಡುಗೆ ನೀಡಿದ್ದಾನೆ. ಖಗೋಳವಿಜ್ಞಾನದಲ್ಲಿ, ಅಲ್‌-ಬಟ್ಟನಿಯು ಟಾಲೆಮಿಯ ಹಿ ಮೆಗಲೇ ಸಿಂಟ್ಯಾಕ್ಸಿಸ್‌ (ಮಹಾಗ್ರಂಥ )ನ ಅನುವಾದಗಳಲ್ಲಿ ಸಂರಕ್ಷಿಸಿಡಲಾಗಿದ್ದ ಹಿಪ್ಪಾರ್ಕಸ್‌‌‌ ನ ಅಳತೆಗಳನ್ನು ಉತ್ತಮಪಡಿಸಿದನು,ಲ್ಯಾಟಿನ್‌ನಲ್ಲಿ ಇದು ಅಲ್ಮಾಗೆಸ್ಟ್ ಎಂದು ಕರೆಯಲಾಗಿದೆ. ಆತನು ಭೂಮಿಯ ಅಕ್ಷಾಂಶದ ಅಕ್ಷಭ್ರಮಣದ ಅಳತೆಯ ನಿಖರತೆಯನ್ನೂ ಉತ್ತಮಪಡಿಸಿದನು. ಭೂಕೇಂದ್ರಿತ ಮಾದರಿಗೆ ಅಲ್‌-ಬಟ್ಟನಿ, ಇಬ್ನ್‌ ಅಲ್‌-ಹೇತಮ್‌, ಅವೆರ್ರೊಸ್ ಮತ್ತು ಮರಘ ಖಗೋಳವಿಜ್ಞಾನಿಗಳಾದ ನಾಸಿರ್‌ ಅಲ್‌-ದಿನ್‌ ಅಲ್‌-ತುಲ್ಸಿ, ಮೋಯ್ಯೆದುದ್ದೀನ್ ಉರ್ದಿ ಮತ್ತು ಇಬ್ನ್‌ ಅಲ್‌-ಶಾತಿರ್ ಮಾಡಿದ ತಿದ್ದುಪಡಿಗಳು ಕೋಪರ್ನಿಯನ್ ಸೂರ್ಯಕೇಂದ್ರಿತ ಮಾದರಿಯಂತೆಯೇ ಇತ್ತು. ಸೂರ್ಯಕೇಂದ್ರಿತ ಸಿದ್ಧಾಂತಗಳನ್ನು ಹಲವಾರು ಬೇರೆ ಮುಸ್ಲಿಂ ಖಗೋಳವಿಜ್ಞಾನಿಗಳೂ ಚರ್ಚಿಸಿದ್ದಾರೆ. ಅವರೆಂದರೆ ಜಾಫರ್‌ ಇಬ್ನ್‌ ಮೊಹಮ್ಮದ್‌ ಅಬು ಅಲ್‌-ಬಾಲ್ಕಿ, ಅಬು-ರೇಹನ್ ಬಿರುನಿ , ಅಬು ಸಯಿದ್ ಅಲ್‌-ಸಿಜ್ಜಿ, ಕುತ್ಬ್‌‌ ಅಲ್‌-ದಿನ್‌ ಅಲ್‌-ಶಿರಾಜಿ, ಮತ್ತು ನಜ್ಮ್‌ ಅಲ್‌-ದೀನ್‌ ಅಲ್‌-ಕಾಜ್ವಾನಿ ಅಲ್‌-ಕಾತಿಬೀ. ಮುಸ್ಲಿಂ ರಸಾಯನ ವಿಜ್ಞಾನಿಗಳು ಮತ್ತು ರಸವಿಜ್ಞಾನಿಗಳು ಆಧುನಿಕ ರಸಾಯನಶಾಸ್ತ್ರದ ಅಡಿಪಾಯ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ವಿಲ್‌ ಡ್ಯುರಾಂಟ್ ಮತ್ತು ಫೀಲ್ಡಿಂಗ್ ಎಚ್‌ ಗ್ಯಾರಿಸನ್‌ ಇನ್ನಿತರ ವಿದ್ವಾಂಸರು ಮುಸ್ಲಿಂ ರಸಾಯನ ವಿಜ್ಞಾನಿಗಳನ್ನು ರಸಾಯನಶಾಸ್ತ್ರದ ಸ್ಥಾಪಕರು ಎಂದು ಪರಿಗಣಿಸಿದ್ದಾರೆ. ವಿಶೇಷವಾಗಿ, ಜಾಬಿರ್ ಇಬ್ನ್‌ ಹಯ್ಯಾನ್ "ಅನೇಕರಿಂದ ರಸಾಯನಶಾಸ್ತ್ರದ ಪಿತಾಮಹ ಎಂದು ಪರಿಗಣಿತನಾಗಿದ್ದಾನೆ". ಅರಾಬಿಕ್ ವಿಜ್ಞಾನಿಗಳ ಕೃತಿಗಳು ರೋಜರ್‌ ಬೇಕನ್‌‌ನನ್ನು ಪ್ರಭಾವಿಸಿತ್ತು (ಆತ ಪ್ರಯೋಗವಾದಿ ವಿಧಾನವನ್ನು ಯೂರೋಪ್‌ಗೆ ಪರಿಚಯಿಸಿದವನು, ಅರಾಬಿಕ್ ಬರಹಗಾರರನ್ನು ಓದಿಕೊಂಡು ಅವರಿಂದ ಗಾಢವಾಗಿ ಪ್ರಭಾವಿತನಾಗಿದ್ದನು), ಮತ್ತು ನಂತರ ಐಸಾಕ್ ನ್ಯೂಟನ್‌ ಕೂಡ ಪ್ರಭಾವಿತರಾಗಿದ್ದರು. ಇಬ್ನ್‌ ಸಿನಾ(ಅವಿಸೆನ್ನ) ಇಸ್ಲಾಂನಲ್ಲಿ ಅತ್ಯಂತ ಪ್ರಭಾವೀ ವಿಜ್ಞಾನಿ ಮತ್ತು ತತ್ವಜ್ಞಾನಿ ಎಂದು ಪರಿಗಣಿತನಾಗಿದ್ದಾನೆ. ಆತ ಪ್ರಯೋಗಿಕ ವೈದ್ಯಕೀಯ ವಿಜ್ಞಾನದಲ್ಲಿ ಅಗ್ರಗಣ್ಯನಾಗಿದ್ದನು ಮತ್ತು ಕ್ಲಿನಿಕಲ್ ಪರೀಕ್ಷಣೆಗಳನ್ನು ನಡೆಸಿದ ಮೊದಲ ವೈದ್ಯನಾದ್ದನು. ಆತನ ಅತ್ಯಂತ ಮಹತ್ವದ ಎರಡು ವೈದ್ಯಕೀಯ ಕೃತಿಗಳೆಂದರೆ ಕಿತಾಬ್ ಅಲ್‌-ಶಿಫಾ (ಚಿಕಿತ್ಸೆಯ ಪುಸ್ತಕ) ಮತ್ತು ದಿ ಕ್ಯಾನನ್ ಆಫ್‌ ಮೆಡಿಸಿನ್ , ಎರಡನ್ನೂ ಮುಸ್ಲಿಂ ವಿಶ್ವ ಮತ್ತು ಯೂರೋಪ್‌ನಲ್ಲಿ 17ನೇ ಶತಮಾನದಲ್ಲಿ ಗುಣಮಟ್ಟದ ವೈದ್ಯಕೀಯ ಗ್ರಂಥಗಳ ಹಾಗೆ ಬಳಸಲಾಗುತ್ತಿತ್ತು. ಆತನ ಅನೇಕ ಕೊಡುಗೆಗಳಲ್ಲಿ ಸಾಂಕ್ರಾಮಿಕ ರೋಗಗಳ ಸೋಂಕುಹರಡುವ ಲಕ್ಷಣಗಳನ್ನು ಪತ್ತೆ ಮಾಡಿದ್ದು, ಮತ್ತು ಕ್ಲಿನಿಕಲ್ ಔಷಧಶಾಸ್ತ್ರವನ್ನು ಪರಿಚಯಿಸಿದ್ದು. ಇಸ್ಲಾಮಿಕ್ ವಿಶ್ವದ ಇನ್ನಿತರ ಪ್ರಸಿದ್ಧ ವಿಜ್ಞಾನಿಗಳೆಂದರೆ ಅಲ್‌-ಫರಬಿ (ಬಹುಶ್ರುತ ವಿದ್ವಾಂಸ), ಅಬು ಅಲ್-ಕಾಸಿಮ್ (ಶಸ್ತ್ರಚಿಕಿತ್ಸೆಯ ಅಗ್ರಗಣ್ಯ), ಅಬು ರೇಹಾನ್‌ನಗರಬ್‌ ಅಲ್‌-ಬಿರೂನಿ (ಭಾರತಾಧ್ಯಯನದಲ್ಲಿ, ಭೂಗಣಿತ ಮತ್ತು ಮಾನವಶಾಸ್ತ್ರದಲ್ಲಿ ಅಗ್ರಗಣ್ಯ), ನಾಸಿರ್‌ ಅಲ್‌-ದಿನ್ ಅಲ್‌ ತುಲ್ಸಿ (ಬಹುಶ್ರುತ ವಿದ್ವಾಂಸ), ಮತ್ತು ಇಬ್ನ್‌ (ಜನಸಂಖ್ಯಾಶಾಸ್ತ್ರ, ಸಾಂಸ್ಕೃತಿಕ ಇತಿಹಾಸ, ಇತಿಹಾಸವಿಜ್ಞಾನ, ಇತಿಹಾಸದ ತತ್ವಶಾಸ್ತ್ರ ಮತ್ತು ಸಮಾಜಶಾಸ್ತ್ರದಂತಹ ಸಾಮಾಜಿಕ ವಿಜ್ಞಾನದ ಅಗ್ರಗಾಮಿ) ಇನ್ನಿತರರು ಪ್ರಮುಖರಾಗಿದ್ದರು. ಇಸ್ಲಾಮಿಕ್ ವಿಜ್ಞಾನವು 12ನೇ ಅಥವಾ 13ನೇ ಶತಮಾನದಿಂದ ಅವನತಿಗೊಳ್ಳಲು ಪ್ರಾರಂಭವಾಯಿತು. ಅದೇ ಸಮಯದಲ್ಲಿ ಯೂರೋಪ್‌ನಲ್ಲಿ ನವೋದಯ(ರಿನೇಸಾನ್ಸ್‌) ಆರಂಭಗೊಂಡಿತು. ಅವನತಿಗೆ ಭಾಗಶಃ ಕಾರಣವೆಂದರೆ 11ರಿಂದ- 13ನೇ ಶತಮಾನದಲ್ಲಿ ಮಂಗೋಲ್‌ ವಿಜಯಗಳ ಪರಿಣಾಮವಾಗಿ ಅನೇಕ ಗ್ರಂಥಾಲಯಗಳು, ವೀಕ್ಷಣಾಲಯಗಳು, ಆಸ್ಪತ್ರೆಗಳು ಮತ್ತು ವಿಶ್ವವಿದ್ಯಾಲಯಗಳು ನಾಶವಾದವು. ಇಸ್ಲಾಮಿಕ್ ಚಿನ್ನದ ಕಾಲದ ಅಂತ್ಯವನ್ನು ಅಬ್ಬಸಿಡ್‌ ಕ್ಯಾಲಿಫೇಟ್‌‌ನ ರಾಜಧಾನಿಯಾಗಿದ್ದ ಬಾಗ್ದಾದ್‌ನ ಬೌದ್ಧಿಕ ಕೇಂದ್ರವನ್ನು 1258ರಲ್ಲಿ ನಾಶ ಮಾಡುವುದರೊಂದಿಗೆ ಗುರುತಿಸಲಾಗುತ್ತದೆ.

ಮಧ್ಯಯುಗೀನ ಯೂರೋಪ್‌ನಲ್ಲಿ ವಿಜ್ಞಾನ

ಆಧುನಿಕ ವಿಜ್ಞಾನ 
ಮಧ್ಯಯುಗೀನ ವಿಶ್ವವಿದ್ಯಾಲಯಗಳ ನಕಾಶೆ

ಯೂರೋಪ್‌ನ ಬೌದ್ಧಿಕ ಪುನರುಜ್ಜೀವನವು 12ನೇ ಶತಮಾನದಲ್ಲಿ ಮಧ್ಯಯುಗೀನ ವಿಶ್ವವಿದ್ಯಾಲಯಗಳ ಸ್ಥಾಪನೆಯೊಂದಿಗೆ ಆರಂಭವಾಯಿತು. ಸ್ಪೈನ್ ಮತ್ತು ಸಿಲಿಸಿ ದೇಶಗಳಿಗೆ ಇಸ್ಲಾಮಿಕ್ ವಿಶ್ವದೊಂದಿಗೆ ಇದ್ದ ಸಂಪರ್ಕ, ಮತ್ತು ಪುನರ್‌ವಿಜಯ(ರಿಕಾಂಕ್ವಿಸ್ಟ್‌) ಮತ್ತು ಆಕ್ರಮಣಗಳು, ಐರೋಪ್ಯರಿಗೆ ವೈಜ್ಞಾನಿಕ ಗ್ರೀಕ್‌‌ ಮತ್ತು ಅರಾಬಿಕ್ ಗ್ರಂಥಗಳು ಲಭ್ಯವಾಗಲು ಸಾಧ್ಯಗೊಳಿಸಿತು. ಇವುಗಳಲ್ಲಿ ಅರಿಸ್ಟಾಟಲ್‌, ಟಾಲೆಮಿ, ಜಾಬಿರ್ ಇಬ್ನ್‌ ಹಯ್ಯಾನ್, ಅಲ್‌-ಕ್ವರಿಜ್ಮಿ, ಅಲ್ಹಜೆನ್, ಅವಿಸೆನ್ನ, ಮತ್ತು ಅವೆರ್ರೊಸ್ ಅವರ ಗ್ರಂಥಗಳು ಸೇರಿದ್ದವು. ಐರೋಪ್ಯ ವಿದ್ವಾಂಸರು ರೇಮಂಡ್ ಟೊಲೆಡೋನ ಅನುವಾದದ ಕಾರ್ಯಕ್ರಮಗಳ ಲಭ್ಯತೆ ಹೊಂದಿದ್ದರು. ಆತ 12ನೇ ಶತಮಾನದಲ್ಲಿ ಟೊಲೆಡೋ ಅನುವಾದಕರ ಕೇಂದ್ರ(ಟೊಲೆಡೋ ಸ್ಕೂಲ್ ಆಫ್‌ ಟ್ರಾನ್ಸ್‌ಲೇಟರ್‌ಸ್)ವನ್ನು ಆರಂಭಿಸಿ, ಅರಾಬಿಕ್‌ನಿಂದ ಲ್ಯಾಟಿನ್‌ಗೆ ಅನುವಾದಿಸುತ್ತಿದ್ದ. ನಂತರ ಮೈಕೇಲ್ ಸ್ಕಾಟ್ಸ್‌ರಂತಹ ಅನುವಾದಕರು ಈ ಗ್ರಂಥಗಳನ್ನು ನೇರವಾಗಿ ಓದಬೇಕೆಂದು ಅರಾಬಿಕ್‌ ಕಲಿತರು. ಐರೋಪ್ಯ ವಿಶ್ವವಿದ್ಯಾಲಯಗಳು ಈ ಗ್ರಂಥಗಳ ಅನುವಾದ ಮತ್ತು ಹರಡುವಿಕೆಗೆ ಭೌತಿಕವಾಗಿ ಸಹಾಯ ಮಾಡಿದವು ಮತ್ತು ವೈಜ್ಞಾನಿಕ ಸಮುದಾಯಕ್ಕೆ ಅಗತ್ಯವಾಗಿದ್ದ ಹೊಸ ಮೂಲಸೌಕರ್ಯವನ್ನು ಆರಂಭಿಸಿದರು. ಹಾಗೆನೋಡಿದರೆ, ಐರೋಪ್ಯ ವಿಶ್ವವಿದ್ಯಾಲಯಗಳು ನೈಸರ್ಗಿಕ ವಿಶ್ವ ಮತ್ತು ನಿಸರ್ಗದ ಅಧ್ಯಯನದ ಅದ್ಯಯನಗಳ ಅನೇಕ ಕೃತಿಗಳನ್ನು ತನ್ನ ಪಠ್ಯಕ್ರಮದ ಕೇಂದ್ರದಲ್ಲಿಟ್ಟಿತ್ತು, ಹೀಗಾಗಿ "ಮಧ್ಯಯುಗೀನ ವಿಶ್ವವಿದ್ಯಾಲಯಗಳು ಆಧುನಿಕ ಪ್ರತಿರೂಪಗಳು ಮತ್ತು ಹಿಂದಿನವರರು ನೀಡಿದ್ದಕ್ಕಿಂತ ಹೆಚ್ಚು ಒತ್ತನ್ನು ವಿಜ್ಞಾನಕ್ಕೆ ನೀಡಿದ್ದವು." ಇದರೊಂದಿಗೆ, ಐರೋಪ್ಯರು ಪ್ಯಾಕ್ಸ್‌ ಮಂಗೋಲಿಕಾ(ಮಂಗೋಲದ ಶಾಂತಿ)ದಿಂದಾಗಿ ಮತ್ತಷ್ಟು ಪೂರ್ವಕ್ಕೆ ಮುನ್ನುಗ್ಗಲಾರಂಭಿಸಿದರು (ಅತ್ಯಂತ ಗಮನಾರ್ಹವೆಂದರೆ, ಪ್ರಾಯಶಃ ಮಾರ್ಕೋ ಪೋಲೋ). ಇದು ಭಾರತೀಯ ವಿಜ್ಞಾನ ಮತ್ತು ಚೀನಾದ ವಿಜ್ಞಾನದ ಪ್ರಭಾವ ಐರೋಪ್ಯ ಪರಂಪರೆಯ ಮೇಲೆ ಅಧಿಕಗೊಳ್ಳಲು ಕಾರಣವಾಯಿತು. ತಂತ್ರಜ್ಞಾನದ ಪ್ರಗತಿಯನ್ನೂ ಸಾಧಿಸಲಾಯಿತು. ಉದಾಹರಣೆಗೆ ಐಲ್ಮರ್ ಆಫ್‌ ಮಲ್ಮೆಸ್‌ಬರಿಯ ಆರಂಭಿಕ ಹಾರಾಟಗಳು (ಆತ ಗಣಿತವನ್ನು 11ನೇ ಶತಮಾನದ ಇಂಗ್ಲೆಂಡ್‌ನಲ್ಲಿ ಅಧ್ಯಯನ ಮಾಡಿದ್ದನು), ಮತ್ತು ಲಾಸ್ಕಿಲ್‌‌ನಲ್ಲಿದ್ದ ಸಿಸ್ಟೆರಿಯನ್ ಪಂಥದ ಬ್ಲಾಸ್ಟ್‌ ಫರ್ನೇಸ್‌ (ಒತ್ತುಗಾಳಿ ಕುಲುಮೆ)ಯಂತಹ ಲೋಹವಿಜ್ಞಾನದ ಸಾಧನೆಗಳು.

ಆಧುನಿಕ ವಿಜ್ಞಾನ 
ರೋಜರ್‌ ಬೇಕಾನ್‌ನ ಪ್ರತಿಮೆ, ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮ್ಯೂಸಿಯಂ

13ನೇ ಶತಮಾನದ ಆರಂಭದಲ್ಲಿ ಬೌದ್ಧಿಕವಾಗಿ ಮುಖ್ಯರಾಗಿದ್ದ ಪ್ರಾಚೀನ ಲೇಖಕರ ಸಾಕಷ್ಟು ನಿಖರವಾದ ಲ್ಯಾಟಿನ್ ಅನುವಾದಗಳು ಲಭ್ಯವಿದ್ದವು. ಇದು ವಿಶ್ವವಿದ್ಯಾಲಯಗಳು ಮತ್ತು ಕ್ರೈಸ್ತಮಂದಿರಗಳ ಮೂಲಕ ಉತ್ತಮರೀತಿಯಲ್ಲಿ ವೈಜ್ಞಾನಿಕ ವಿಚಾರಗಳ ವಿನಿಮಯವಾಗಲು ಆಸ್ಪದಕಲ್ಪಿಸಿತು. ಆಗ ಈ ಗ್ರಂಥಗಳಲ್ಲಿದ್ದ ನೈಸರ್ಗಿಕ ತತ್ವಶಾಸ್ತ್ರವು ರಾಬರ್ಟ್‌ ಗ್ರಾಸ್‌ಟೆಸ್ಟ್‌, ರೋಜರ್‌ ಬೇಕನ್, ಅಲ್ಬೆರ್ಟಸ್ ಮ್ಯಾಗ್ನಸ್ ಮತ್ತು ಡನ್ಸ್‌ ಸ್ಕಾಟಸ್ ರಂತಹ ಗಮನಾರ್ಹ ತಾರ್ಕಿಕ ಪಂಡಿತರಿಂದ ವಿಸ್ತೃತಗೊಳ್ಳಲು ಆರಂಭಿಸಿತು. ಆಧುನಿಕ ವೈಜ್ಞಾನಿಕ ವಿಧಾನದ ಹಿಂದಿನವರು, ಇಸ್ಲಾಮಿಕ್ ವಿಶ್ವದ ಕೊಡುಗೆಗಳಿಂದ ಪ್ರಭಾವಿತರಾಗಿದ್ದವರು, ಗ್ರಾಸ್‌ಟೆಸ್ಟ್‌ ನಿಸರ್ಗವನ್ನು ಅರ್ಥಮಾಡಿಕೊಳ್ಳುವ ವಿಧಾನವನ್ನಾಗಿ ಗಣಿತಕ್ಕೆ ಒತ್ತು ನೀಡಿದ್ದನ್ನು ಈಗಾಗಲೇ ಕಾಣಬಹುದಿತ್ತು. ಜೊತೆಗೆ ಬೇಕನ್ ಪ್ರಶಂಸೆ ಮಾಡಿದ್ದ ಪ್ರಯೋಗವಾದಿ ದೃಷ್ಟಿಕೋನದಲ್ಲಿ, ವಿಶೇಷವಾಗಿ ಅವನ ಓಪಸ್ ಮಾಜಸ್‌ ದಲ್ಲಿಯೂ ಕಾಣಬಹುದಿತ್ತು. ಪಿಯರೆ ಡ್ಯುಹೆಮ್‌ನ 'ಕ್ಯಾಥೋಲಿಕ್ ಚರ್ಚ್‌ಗಳ ಪ್ರಚೋದನಾತ್ಮಕ ಸಿದ್ಧಾಂತ 1277ರ ನಿಂದನೆಯು ಮಧ್ಯಯುಗೀನ ವಿಜ್ಞಾನದ ಅಧ್ಯಯನವನ್ನು ಒಂದು ಗಂಭೀರ ಶಿಸ್ತಿನ ಹಾಗೆ ಮಾಡಲು ಕಾರಣವಾಯಿತು,"ಆದರೆ ಆಧುನಿಕ ವಿಜ್ಞಾನವು 1277ರಲ್ಲಿ ಆರಂಭವಾಯಿತು ಎಂಬ ಆತನ ದೃಷ್ಟಿಕೋನವನ್ನು ಈ ಕ್ಷೇತ್ರದ ಯಾರೂ ಅನುಮೋದಿಸುವುದಿಲ್ಲ" ಎಂದೂ ಹೇಳಲಾಗಿದೆ. 14ನೇ ಶತಮಾನದ ಮೊದಲ ಅರ್ಧಭಾಗವು ಅನೇಕ ಪ್ರಮುಖ ವೈಜ್ಞಾನಿಕ ಕೆಲಸಗಳು ನಡೆದಿದ್ದಕ್ಕೆ ಸಾಕ್ಷಿಯಾಯಿತು. ಅವು ಬಹುತೇಕವಾಗಿ ಅರಿಸ್ಟಾಟಲ್‌ನ ವೈಜ್ಞಾನಿಕ ಬರಹಗಳ ಮೇಲೆ ತಾರ್ಕಿಕ ಪಂಡಿತರ ವ್ಯಾಖ್ಯಾನಗಳ ಚೌಕಟ್ಟಿನೊಳಗೇ ಇದ್ದವು. ಒಕ್ಕಾಮ್‌ನ ವಿಲಿಯಂ ಮಿತವ್ಯಯ/ಎಚ್ಚರಿಕೆ(ಪಾರಿಸ್‌ಮನಿ)ಯ ತತ್ವವನ್ನು ಪರಿಚಯಿಸಿದನು: ನೈಸರ್ಗಿಕ ತತ್ವಶಾಸ್ತ್ರಜ್ಞರು ಅನಗತ್ಯ ಮೂಲಗುಣಗಳನ್ನು ಪ್ರತಿಪಾದಿಸಬಾರದು, ಚಲನೆ ಎನ್ನುವುದು ಒಂದು ಭಿನ್ನ ವಿಚಾರವಲ್ಲ, ಅದು ಚಲಿಸುವ ವಸ್ತು ಅಷ್ಟೆ ಮತ್ತು ಒಂದು ಮಧ್ಯವರ್ತಿ ಕಣ್ಣಿಗೆ ವಸ್ತುವಿನ ಪ್ರತಿಬಿಂಬವನ್ನು ವರ್ಗಾಯಿಸಲು "ಸಂವೇದನಾಶೀಲ ಜೀವಿಗಳ" ಅಗತ್ಯವಿಲ್ಲ. ಜೀನ್ ಬರಿಡನ್ ಮತ್ತು ನಿಕೋಲ್ ಒರೆಸ್ಮೆ ಅವರಂತಹ ವಿದ್ವಾಂಸರು ಅರಿಸ್ಟಾಟಲ್‌ನ ಮೆಕ್ಯಾನಿಕ್ಸ್‌ನ ವಿಚಾರಗಳನ್ನು ಮರುವ್ಯಾಖ್ಯಾನ ಮಾಡಲಾರಂಭಿಸಿದರು. ವಿಶೇಷವಾಗಿ, ಬರಿಡನ್ ಪ್ರೊಜೆಕ್ಟೈಲ್‌‌ಗಳ(ಗುಂಡು/ಕ್ಷಿಪಣಿ ಯಾವುದಾದರೂ ಚಿಮ್ಮುವ ವಸ್ತು)ಚಲನೆಯ ಕಾರಣ ರಭಸ/ಚಾಲಕಶಕ್ತಿ ಎಂಬ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದನು ಅದು ಜಡತ್ವದ ಆಧುನಿಕ ಪರಿಕಲ್ಪನೆಯತ್ತ ಮೊದಲ ಹೆಜ್ಜೆಯಾಯಿತು. ಆಕ್ಸ್‌ಫರ್ಡ್‌ ಲೆಕ್ಕಿಗರು(ಕ್ಯಾಲಕ್ಯುಲೇಟರ್ಸ್‌) ಚಲನೆಯ ಗತಿವಿಜ್ಞಾನವನ್ನು ಗಣಿತಶಾಸ್ತ್ರೀಯವಾಗಿ ವಿಶ್ಲೇಷಿಸಲು ಆರಂಭಿಸಿದ್ದರು, ಅವರು ಚಲನೆಯ ಕಾರಣಗಳನ್ನು ಪರಿಗಣಿಸದೆಯೇ ಈ ವಿಶ್ಲೇಷಣೆ ಮಾಡುತ್ತಿದ್ದರು. 1348ರಲ್ಲಿ, ಬ್ಲ್ಯಾಕ್ ಡೆತ್ (ಬಬೋನಿಕ್ ಪ್ಲೇಗ್‌ ಪಿಡುಗು) ಮತ್ತು ಇನ್ನಿತರ ಪ್ರಕೋಪಗಳಿಂದಾಗಿ ಹಿಂದಿನ ಕಾಲಘಟ್ಟದ ಅಗಾಧ ತತ್ವಶಾಸ್ತ್ರೀಯ ಮತ್ತು ವೈಜ್ಞಾನಿಕ ಅಭಿವೃದ್ಧಿಗೆ ಹಠಾತ್ ಅಂತ್ಯ ಬಂದೊದಗಿತು. ಆದಾಗ್ಯೂ, ಪ್ರಾಚೀನ ಗ್ರಂಥಗಳ ಮರುಶೋಧವು 1453ರಲ್ಲಿ ಕಾನ್‌ಸ್ಟಾಂಟಿನೋಪಲ್‌ ಪತನದ ನಂತರ ಉತ್ತಮಗೊಂಡಿತು. ಆಗ ಅನೇಕ ಬೈಜಾಂಟಿನ್ ವಿದ್ವಾಂಸರು ಪಶ್ಚಿಮದಲ್ಲಿ ಆಶ್ರಯ ಪಡೆದರು. ಅದೇವೇಳೆಗೆ ಮುದ್ರಣದ ಪರಿಚಯವು ಐರೋಪ್ಯ ಸಮಾಜವನ್ನು ಅಗಾಧವಾಗಿ ಪ್ರಭಾವಿಸಿದ್ದಿತು. ಮುದ್ರಿತ ಪದಗಳ ಹರಡುವಿಕೆಯು ಕಲಿಕೆಯನ್ನು ಜನಲಭ್ಯವಾಗಿಸಿತು(ಪ್ರಜಾಪ್ರಭುತ್ವೀಕರಿಸಿತು) ಮತ್ತು ಹೊಸ ವಿಚಾರಗಳು ತ್ವರಿತಗತಿಯಲ್ಲಿ ಪ್ರಸರಿಸಲು ಸಾಧ್ಯಗೊಳಿಸಿತು. ಈ ಹಂತದಲ್ಲಿ ಹೊಸ ವಿಚಾರಗಳು ಐರೋಪ್ಯ ವಿಜ್ಞಾನದ ಅಭಿವೃದ್ಧಿಯನ್ನು ಪ್ರಭಾವಿಸಲು ಸಹಾಯ ಮಾಡಿತು: ಜೊತೆಗೇ ಬೀಜಗಣಿತದ ಪರಿಚಯವೂ ಪ್ರಭಾವಿಸಿತು. ಈ ಅಭಿವೃದ್ಧಿಗಳು ವೈಜ್ಞಾನಿಕ ಕ್ರಾಂತಿಗೆ ಮಾರ್ಗ ಮಾಡಿಕೊಟ್ಟಿತು. ಇದನ್ನು, ಬ್ಲಾಕ್ ಡೆತ್ ಆರಂಭದಲ್ಲಿ ಸ್ಥಗಿತಗೊಂಡಿದ್ದ ವೈಜ್ಞಾನಿಕ ಬದಲಾವಣೆ ಪ್ರಕ್ರಿಯೆಯನ್ನು ಮರುಗಳಿಕೆ ಮಾಡಿದ್ದು ಎಂದೂ ಅರ್ಥೈಸಬಹುದು.

ಯೂರೋಪ್‌ನಲ್ಲಿ ವಿಜ್ಞಾನದ ಪ್ರಭಾವ

ಆಧುನಿಕ ವಿಜ್ಞಾನ 
ಐಸಾಕ್‌ ನ್ಯೂಟನ್‌ ಭೌತವಿಜ್ಞಾನದಲ್ಲಿ ಶಾಸ್ತ್ರೀಯ ಯಂತ್ರಶಾಸ್ತ್ರ (ಕ್ಲಾಸಿಕಲ್ ಮೆಕಾನಿಕ್ಸ್‌)ವನ್ನು ಆರಂಭಿಸಿದನು.
ಆಧುನಿಕ ವಿಜ್ಞಾನ 
ವೆಸಲಿಯಸ್‌ ಮಾನವ ಅಂಗರಚನಾಶಾಸ್ತ್ರದ ಅಧ್ಯಯನದಲ್ಲಿ ಆಸಕ್ತಿಯನ್ನು ಪ್ರೇರೇಪಿಸಿದನು.

ಯೂರೋಪ್‌ನಲ್ಲಿ 12ನೇ ಶತಮಾನದ ಅತಿಸೂಕ್ಷ್ಮ ತರ್ಕದೊಂದಿಗೆ ಆರಂಭಗೊಂಡಿದ್ದ ಕಲಿಕೆಯ ನವೀಕರಣವು, ಬ್ಲ್ಯಾಕ್ ಡೆತ್ ಸಮಯದಲ್ಲಿ ಅಂತ್ಯ ಕಂಡಿತ್ತು. ನಂತರದ ಇಟಿಲಿಯ ನವೋದಯ(ರಿನೇಸಾನ್ಸ್)ವನ್ನು ಕೆಲವೊಮ್ಮೆ ವೈಜ್ಞಾನಿಕ ಚಟುವಟಿಕೆಗಳಲ್ಲಿ ಒಂದು ಜೋಗುಳ(ವಿರಾಮ) ಎಂದೂ ನೋಡಲಾಗುತ್ತದೆ. ಇನ್ನೊಂದೆಡೆ ಉತ್ತರದ ನವೋದಯ(ರಿನೇಸಾನ್ಸ್) ವು ಅಧ್ಯಯನದ ಲಕ್ಷ್ಯವು ಅರಿಸ್ಟಾಟಲ್‌ನ , ನೈಸರ್ಗಿಕ ತತ್ವಶಾಸ್ತ್ರದಿಂದ ರಸಾಯನಶಾಸ್ತ್ರಕ್ಕೆ ಮತ್ತು ಜೀವಶಾಸ್ತ್ರೀಯ ವಿಜ್ಞಾನಗಳಿಗೆ (ಸಸ್ಯವಿಜ್ಞಾನ, ಅಂಗರಚನಾಶಾಸ್ತ್ರ, ಮತ್ತು ವೈದ್ಯಕೀಯ) ಒಂದು ನಿರ್ಣಾಯಕ ಪಲ್ಲಟವಾಗಿದ್ದನ್ನು ತೋರಿಸುತ್ತದೆ. ಹೀಗೆ ಯೂರೋಪ್‌ನಲ್ಲಿ ಆಧುನಿಕ ವಿಜ್ಞಾನವು ಅತ್ಯುನ್ನತ ಉತ್ಥಾನದ ಅವಧಿಯನ್ನು ತಲುಪಿತು: ಪ್ರೊಟಸ್ಟಂಟ್ ಸುಧಾರಣೆ ಮತ್ತು ಕ್ಯಾಥೋಲಿಕ್ ಪ್ರತಿ-ಸುಧಾರಣೆ; ಕ್ರಿಸ್ಟೋಫರ್ ಕೋಲಂಬಸ್‌ ಅಮೆರಿಕವನ್ನು ಶೋಧ ಮಾಡಿದ್ದು; ಕಾನ್‌ಸ್ಟಾಂಟಿನೋಪಲ್‌ ಪತನ ಇತ್ಯಾದಿ; ಆದರೆ ಇದೇ ವೇಳೆ ತಾರ್ಕಿಕಪಂಡಿತರ ಅವಧಿಯಲ್ಲಿ ಅರಿಸ್ಟಾಟಲ್‌ನನ್ನು ಮರುಶೋಧ ಮಾಡಿದ್ದು ಅಗಾಧ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳ ಮುನ್ಸೂಚನೆಯಂತೆ ಇತ್ತು. ಹೀಗೆ ವೈಜ್ಞಾನಿಕ ಗ್ರಂಥಗಳನ್ನು ಪ್ರಶ್ನಿಸುವುದನ್ನು ಸಾಧ್ಯಗೊಳಿಸುವ ಒಂದು ಸೂಕ್ತ ವಾತಾವರಣ ನಿರ್ಮಾಣಗೊಂಡಿತು. ಇದನ್ನು ಮಾರ್ಟಿನ್‌ ಲೂಥರ್ ಮತ್ತು ಜಾನ್‌ ಕೆಲ್ವಿನ್ ಧಾರ್ಮಿಕ ಗ್ರಂಥಗಳನ್ನು ಪ್ರಶ್ನಿಸಿದ್ದಕ್ಕೆ ಹೋಲಿಸಬಹುದು. ಟಾಲೆಮಿ(ಖಗೋಳವಿಜ್ಞಾನ) ಮತ್ತು ಗ್ಯಾಲೆನ್ (ವೈದ್ಯಕೀಯ) ಅವರ ಕೃತಿಗಳು ದೈನಂದಿನದ ವೀಕ್ಷಣೆಗಳಿಗೆ ಸದಾ ಹೊಂದಾಣಿಕೆಯಾಗುವುದಿಲ್ಲ ಎಂದು ಕಂಡುಕೊಳ್ಳಲಾಯಿತು. ಮನುಷ್ಯರ ಹೆಣದ ಕುರಿತ ವೆಸಲಿಯಸ್‌ ಕೆಲಸಗಳು ಗೆಲೆನಿಕ್‌ನ ಅಂಗರಚನಾಶಾಸ್ತ್ರದ ದೃಷ್ಟಿಕೋನದೊಂದಿಗೆ ಸಮಸ್ಯೆ ಹೊಂದಿರುವಂತೆ ಕಂಡುಬಂದವು. ಹಿಂದೆ ಎತ್ತಿಹಿಡಿದಿದ್ದ ಸತ್ಯಗಳನ್ನು ಪ್ರಶ್ನಿಸುವ ಮತ್ತು ಹೊಸ ಉತ್ತರಗಳಿಗೆ ಹುಡುಕುವ ಇಚ್ಛೆಯು ಪ್ರಮುಖ ವೈಜ್ಞಾನಿಕ ಪ್ರಗತಿಗಳ ಒಂದು ಅವಧಿಗೆ ಕಾರಣವಾಯಿತು, ಅದನ್ನು ಈಗ ವೈಜ್ಞಾನಿಕ ಕ್ರಾಂತಿ ಎನ್ನಲಾಗುತ್ತದೆ. ಸಾಂಪ್ರದಾಯಿಕವಾಗಿ ಅನೇಕ ಇತಿಹಾಸಕಾರರು ಹೇಳುವಂತೆ ವೈಜ್ಞಾನಿಕ ಕ್ರಾಂತಿಯು 1543ರಲ್ಲಿ ಆಂಡ್ರಿಯಾಸ್ ವೆಸಿಯಸ್ನಿಂದ ಡೆ ಹ್ಯುಮನಿ ಕಾರ್ಪೊರಿಸ್ ಫ್ಯಾಬ್ರಿಕಾ (ಮನುಷ್ಯನ ದೇಹದ ಕೆಲಸಗಳ ಕುರಿತು ) ಕೃತಿ ಮತ್ತು ಖಗೋಳವಿಜ್ಞಾನಿ ನಿಕೋಲಸ್‌ ಕೋಪರ್ನಿಕಸ್‌ನ ಡೆ ರೆವಲ್ಯುಶನಿಬಸ್ ಕೃತಿಗಳು ಮೊದಲು ಮುದ್ರಿತವಾದಾಗ ಆರಂಭಗೊಂಡಿತು. ಕೋಪರ್ನಿಕಸ್‌ ಕೃತಿಯ ಸಿದ್ಧಾಂತವು ಸೂರ್ಯನ ಸುತ್ತ ಭೂಮಿ ತಿರುಗುತ್ತದೆ ಎಂಬುದಾಗಿತ್ತು. ಈ ಕಾಲಘಟ್ಟವು 1687 ರಲ್ಲಿ ಪ್ರಕಟವಾದ ಐಸಾಕ್‌ ನ್ಯೂಟನ್‌ಫೀಲಸಾಸಫಿಯ ನ್ಯಾಚುರಲಿಸ್ ಪ್ರಿನ್ಸಿಪಿಯ ಮೆಥಮ್ಯಾಟಿಕ ಕೃತಿಯೊಂದಿಗೆ ಪರಾಕಾಷ್ಠೆಯನ್ನು ತಲುಪಿತು. ಈ ಕೃತಿಯು ಯೂರೋಪ್‌ನಾದ್ಯಂತ ವೈಜ್ಞಾನಿಕ ಪ್ರಕಟಣೆಗಳ ಊಹಿಸಲೂ ಆಗದ ಬೆಳವಣಿಗೆಯ ಪ್ರತೀಕದಂತೆ ಇತ್ತು. ಈ ಕಾಲದಲ್ಲಿ ಇನ್ನಿತರ ಮಹತ್ವದ ವೈಜ್ಞಾನಿಕ ಪ್ರಗತಿಗಳನ್ನು ಮಾಡಿದವರು ಎಂದರೆ: ಗೆಲಿಲಿಯೋ ಗೆಲಿಲೈ, ಎಡ್ಮಂಡ್ ಹ್ಯಾಲಿ, ರಾಬರ್ಟ್‌ ಹುಕ್ , ಕ್ರಿಸ್ಟಿಯಾನ್ ಹ್ಯುಗೆನ್ಸ್, ಟೈಕೋ ಬ್ರಹೆ, ಜೊಹನ್ನೆಸ್ ಕೋಪ್ಲರ್, ಗಾಟ್‌ಫ್ರೈಡ್ ಲೈಬ್ನಿಜ್, ಮತ್ತು ಬ್ಲೇಸೆ ಪ್ಯಾಸ್ಕಲ್. ತತ್ವಶಾಸ್ತ್ರದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದವರು: ಫ್ರಾನ್ಸಿಸ್ ಬೇಕನ್, ಸರ್ ಥಾಮಸ್ ಬ್ರೌನ್, ರೆನೆ ಡೆಸ್ಕರ್ಟೆಸ್ ಮತ್ತು ಥಾಮಸ್ ಹೋಬ್ಸ್. ಸಾಂಪ್ರದಾಯಿಕ ಪರಿಗಣನೆಗಳ ಬದಲಿಗೆ ಪ್ರಯೋಗಗಳು ಮತ್ತು ತರ್ಕಕ್ಕೆ ಒತ್ತು ನೀಡಿದ ಆಧುನಿಕ ಚಿಂತನಾ ವಿಧಾನದಿಂದಾಗಿ ವೈಜ್ಞಾನಿಕ ವಿಧಾನವನ್ನೂ ಉತ್ತಮವಾಗಿ ಅಭಿವೃದ್ಧಿಪಡಿಸಲಾಯಿತು.

ಜ್ಞಾನೋದಯದ ಯುಗ

ಜ್ಞಾನೋದಯದ ಯುಗವು ಏನಿದ್ದರೂ ಐರೋಪ್ಯ ವ್ಯವಹಾರವಾಗಿತ್ತು. 17ನೇ ಶತಮಾನವು "ತರ್ಕದ ಯುಗ"ವಾಗಿದ್ದು, ಆಧುನಿಕ ವಿಜ್ಞಾನದ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಗಳಿಗೆ ಮಾರ್ಗಗಳನ್ನು ತೆರೆಯಿತು. ಅದು 18ನೇ ಶತಮಾನದ "ಜ್ಞಾನೋದಯದ ಯುಗ"ದಲ್ಲಿ ನಡೆಯಿತು. ನ್ಯೂಟನ್, ಡೆಸ್ಕಟ್ರೇಸ್, ಪ್ಯಾಸ್ಕಲ್ ಮತ್ತು ಲೈಬ್ನಿಜ್ ಅವರ ಕೃತಿಗಳನ್ನು ನೇರವಾಗಿ ಆಧರಿಸಿ, ಈಗ, ಆಧುನಿಕ ಗಣಿತ, ಭೌತವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ವಿಧಾನಗಳು ಸ್ಪಷ್ಟವಾಗಿ ಗೋಚರಿಸಿದವು. ಬೆಂಜಮಿನ್ ಫ್ರಾಂಕ್ಲಿನ್ (1706–1790), ಲಿಯೋನಾರ್ಡ್‌ ಯೂಲರ್ (1707–1783), ಜಾರ್ಜ್ಸ್-ಲೂಯಿಸ್ ಲೆಕ್ಲೆರ್ಕ್‌ (1707–1788) ಮತ್ತು ಜೀನ್ ಲೆ ರಾಂಡ್ ಡಿ'ಅಲೆಂಬರ್ಟ್‌ (1717–1783) ತಲೆಮಾರಿನ ವೇಳೆಗೆ ಮಾರ್ಗವು ಇನ್ನಷ್ಟು ಸ್ಪಷ್ಟವಾಗಿದ್ದಿತು. ಅದು ಮುಂದುವರೆದು ಡೆನಿಸ್ ಡಿಡ್‌ರಾಟ್‌ನ ವಿಶ್ವಕೋಶ (ಎನ್‌ಸೈಕ್ಲೋಪಿಡಿಯ) ವು 1751ರಿಂದ 1772ರ ಅವಧಿಯಲ್ಲಿ ಪ್ರಕಟಗೊಳ್ಳುವುದರೊಂದಿಗೆ ಪ್ರತಿನಿಧಿತವಾಯಿತು. ಈ ಪ್ರಕ್ರಿಯೆಯ ಪರಿಣಾಮವು ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸೀಮಿತವಾಗಿರಲಿಲ್ಲ. ಆದರೆ ಅದು ತತ್ವಶಾಸ್ತ್ರ (ಇಮ್ಯಾನ್ಯುಯೆಲ್ ಕೆಂಟ್, ಡೇವಿಡ್ ಹ್ಯೂಮ್), ಧರ್ಮ (ಗಮನಾರ್ಹವಾಗಿ ಧನಾತ್ಮಕ ನಿರೀಶ್ವರವಾದ(ನಾಸ್ತಿಕತೆ) ಕಾಣಿಸಿಕೊಳ್ಳುವುದರೊಂದಿಗೆ ಮತ್ತು ಧರ್ಮದ ಮೇಲೆ ವಿಜ್ಞಾನದ ಗಣನೀಯ ಪ್ರಭಾವ ಅಧಿಕಗೊಂಡಿದ್ದು), ಸಮಾಜ ಮತ್ತು ಸಾಮಾನ್ಯವಾಗಿ ರಾಜಕೀಯ(ಆಡಮ್ ಸ್ಮಿತ್, ವಾಲ್ಟೈರ್)ವನ್ನೂ ಪ್ರಭಾವಿಸಿತ್ತು. 1789ರ ಫ್ರೆಂಚ್ ಕ್ರಾಂತಿಯು ರಕ್ತಮಯ ಸನ್ನಿವೇಶವನ್ನು ಸೃಷ್ಟಿಸಿ, ರಾಜಕೀಯ ಆಧುನಿಕತೆಯ ಆರಂಭವನ್ನು ಸೂಚಿಸಿತು.[ಸೂಕ್ತ ಉಲ್ಲೇಖನ ಬೇಕು] ಆರಂಭಿಕ ಆಧುನಿಕ ಕಾಲಘಟ್ಟವನ್ನು ಐರೋಪ್ಯ ನವೋದಯದ ವಿಕಸಿತ ಕಾಲ ಎಂದು ನೋಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ವೈಜ್ಞಾನಿಕ ಕ್ರಾಂತಿ ಎಂದು ಕರೆಯಲಾಗುತ್ತಿದ್ದು, ಆಧುನಿಕ ವಿಜ್ಞಾನದ ಅಡಿಪಾಯ ಎಂದು ನೋಡಲಾಗುತ್ತದೆ.

ವಿಜ್ಞಾನದಲ್ಲಿ ಭಾವಪ್ರಧಾನತೆ

19ನೇ ಶತಮಾನದ ಭಾವಪ್ರಧಾನ ಆಂದೋಲನವು ಜ್ಞಾನೋದಯದ ಶಾಸ್ತ್ರೀಯ ದೃಷ್ಟಿಕೋನಗಳಲ್ಲಿ ಅನಿರೀಕ್ಷಿತವಾಗಿದ್ದ ಹೊಸ ಅನ್ವೇಷಣೆಗಳನ್ನು ತೆರೆದು ವಿಜ್ಞಾನವನ್ನು ಮರುಆಕಾರಗೊಳಿಸಿತು. ಪ್ರಮುಖ ಶೋಧಗಳು ಜೀವಶಾಸ್ತ್ರದಲ್ಲಿ ಆದವು. ವಿಶೇಷವಾಗಿ ಡಾರ್ವಿನ್ನನ ವಿಕಾಸವಾದದಲ್ಲಿ, ಮತ್ತು ಭೌತವಿಜ್ಞಾನದಲ್ಲಿ (ವಿದ್ಯುತ್‌ಕಾಂತೀಯತೆ/ಎಲೆಕ್ಟ್ರೋಮ್ಯಾಗ್ನೆಟಿಸಮ್‌), ಗಣಿತ (ನಾನ್‌-ಯೂಕ್ಲಿಡಿಯನ್ ಜ್ಯಾಮಿತಿ, ಗ್ರೂಪ್‌ ಥಿಯರಿ) ಮತ್ತು ರಸಾಯನಶಾಸ್ತ್ರ (ಸಾವಯವ ರಸಾಯನಶಾಸ್ತ್ರ)ದಲ್ಲಿ ಮಹತ್ವದ ಸಾಧನೆಗಳು ಆದವು. ಭಾವಪ್ರಧಾನತೆಯು ಕ್ರಮೇಣ ಪತನಗೊಂಡಿತು, ಏಕೆಂದರೆ ಇನ್ನೊಂದು ಹೊಸ ಆಂದೋಲನ ಪ್ರತ್ಯಕ್ಷ ಪ್ರಮಾಣವಾದವು ಆರಂಭಗೊಂಡಿತು. ಅದು 1840ರ ನಂತರ ಬುದ್ಧಿಜೀವಿಗಳ ವಿಚಾರವನ್ನು ಪ್ರಭಾವಿಸಿತು ಮತ್ತು 1880ರ ವರೆಗೂ ಈ ವಾದವು ಇದ್ದಿತು.

ಆಧುನಿಕ ವಿಜ್ಞಾನ

ಆಧುನಿಕ ವಿಜ್ಞಾನ 
ಆಲ್ಭರ್ಟ್‌ ಐನ್‌ಸ್ಟೈನ್‌

ವೈಜ್ಞಾನಿಕ ಕ್ರಾಂತಿಯು ವಿಜ್ಞಾನವು ಜ್ಞಾನದ ಬೆಳವಣಿಗೆಯ ಒಂದು ಮೂಲವೆಂದು ನಿರೂಪಿಸಿತು. 19ನೇ ಶತಮಾನದಲ್ಲಿ, ವಿಜ್ಞಾನದ ಆಚರಣೆಯು ವೃತ್ತಿಪರಗೊಂಡಿತು ಮತ್ತು ವಿಧಾನಗಳಲ್ಲಿ ಸಾಂಸ್ಥೀಕರಣಗೊಂಡಿತು, ಅದು 20ನೇ ಶತಮಾನದಲ್ಲಿಯೂ ಮುಂದುವರೆಯಿತು. ವೈಜ್ಞಾನಿಕ ಜ್ಞಾನದ ಪಾತ್ರವು ಸಮಾಜದಲ್ಲಿ ವೃದ್ಧಿಸಿತು, ಅದು ರಾಷ್ಟ್ರ-ಪ್ರಭುತ್ವಗಳ ಕಾರ್ಯನಿರ್ವಹಣೆಯ ಅನೇಕ ಅಂಶಗಳಲ್ಲಿ ಒಂದಾಗಿ ಸೇರಿಕೊಂಡಿತು. ವಿಜ್ಞಾನದ ಇತಿಹಾಸವನ್ನು ತಂತ್ರಜ್ಞಾನ ಮತ್ತು ಜ್ಞಾನದ ಪ್ರಗತಿಯಲ್ಲಾದ ಸರಣಿಯಿಂದ ಗುರುತಿಸಲಾಗುತ್ತದೆ ಮತ್ತು ಇವೆರಡೂ ಸದಾ ಒಂದಕ್ಕೊಂದು ಪೂರಕವಾಗಿವೆ. ತಂತ್ರಜ್ಞಾನದ ಆವಿಷ್ಕಾರಗಳು ಹೊಸ ಶೋಧಗಳನ್ನು ಮಾಡಲು ಕಾರಣವಾಯಿತು ಮತ್ತು ಬೇರೆ ಶೋಧಗಳಿಂದ ಬೆಂಬಲ ಪಡೆದು, ಅವು ದೀರ್ಘಕಾಲದಿಂದ ಇದ್ದ ವಿಜ್ಞಾನದ ಸಮಸ್ಯೆಗಳಿಗೆ ಹೊಸ ಸಾಧ್ಯತೆಗಳನ್ನು ಮತ್ತು ದೃಷ್ಟಿಕೋನಗಳನ್ನು ಪ್ರೇರೇಪಿಸಿತು.

ನೈಸರ್ಗಿಕ ವಿಜ್ಞಾನಗಳು

ಭೌತಶಾಸ್ತ್ರ

ಆಧುನಿಕ ವಿಜ್ಞಾನ 
ಜೇಮ್ಸ್‌ ಮ್ಯಾಕ್ಸ್‌ವೆಲ್‌

ವೈಜ್ಞಾನಿಕ ಕ್ರಾಂತಿಯು ಪ್ರಾಚೀನ ಚಿಂತನೆ ಮತ್ತು ಶಾಸ್ತ್ರೀಯ ಭೌತವಿಜ್ಞಾನದ ಮಧ್ಯೆ ಒಂದು ಅನುಕೂಲಕರ ಗಡಿಯಂತಿದೆ. ನಿಕೋಲಸ್‌ ಕೋಪರ್ನಿಕಸ್‌ನು ಸಮೋಸ್‌ನ ಅರಿಸ್ಟಾರ್ಕಸ್‌‌ ವಿವರಿಸಿದ ಸೌರ ವ್ಯವಸ್ಥೆಯ ಸೂರ್ಯಕೇಂದ್ರಿತ ಮಾದರಿಯನ್ನು ಪುನರುಜ್ಜೀವನಗೊಳಿಸಿದನು. ಇದನ್ನು 17ನೇ ಶತಮಾನದ ಆರಂಭದಲ್ಲಿ ಕೆಪ್ಲರ್‌ ನೀಡಿದ್ದ ಗ್ರಹಗಳ ಚಲನೆಯ ಮೊಟ್ಟಮೊದಲ ಮಾದರಿಯು ಅನುಸರಿಸಿತು. ಆತನ ಮಾದರಿಯು ಗ್ರಹಗಳು ಅಂಡಾಕಾರದ(ಎಲೆಪ್ಟಿಕಲ್) ಪಥಗಳನ್ನು ಅನುಸರಿಸುತ್ತವೆ ಮತ್ತು ಸೂರ್ಯನು ಎಲಿಪ್ಸ್‌ನ ಒಂದು ಫೋಕಸ್‌ ಎಂದು ವಿವರಿಸಿತ್ತು. ಗೆಲಿಲಿಯೋ ("ಆಧುನಿಕ ಭೌತವಿಜ್ಞಾನದ ಪಿತಾಮಹ ") ಕೂಡ ಭೌತಿಕ ಸಿದ್ಧಾಂತಗಳನ್ನು ಮೌಲ್ಯೀಕರಿಸಲು ಪ್ರಯೋಗಗಳ ಬಳಕೆಯನ್ನು ಮಾಡಿದ್ದನು, ಪ್ರಯೋಗವು ವೈಜ್ಞಾನಿಕ ವಿಧಾನದ ಒಂದು ಮುಖ್ಯ ಅಂಶವಾಗಿದ್ದಿತು. 1687ರಲ್ಲಿ, ಐಸಾಕ್‌ ನ್ಯೂಟನ್‌‌ನು ಪ್ರಿನ್ಸಿಪಿಯ ಮ್ಯಾಥಮ್ಯಾಟಿಕಾ ಪ್ರಕಟಿಸಿನು. ಅದರಲ್ಲಿ ಎರಡು ಸಮಗ್ರ ಮತ್ತು ಯಶಸ್ವೀ ಭೌತಶಾಸ್ತ್ರೀಯ ಸಿದ್ಧಾಂತಗಳನ್ನು ವಿವರಿಸಿದ್ದಾನೆ: ನ್ಯೂಟನ್ನನ ಚಲನೆಯ ನಿಯಮಗಳು, ಅದು ಶಾಸ್ತ್ರೀಯ ಯಂತ್ರವಿಜ್ಞಾನಕ್ಕೆ ದಾರಿಯಾಯಿತು; ಮತ್ತು ನ್ಯೂಟನ್ನನ ಗುರುತ್ವಾಕರ್ಷಣೆಯ ನಿಯಮ, ಇದು ಗುರುತ್ವಾಕರ್ಷಣೆಯ ಮೂಲಭೂತ ಬಲವನ್ನು ವಿವರಿಸುತ್ತದೆ. ಎಲೆಕ್ಟ್ರಿಸಿಟಿ ಮತ್ತು ಕಾಂತೀಯತೆಗಳ ಲಕ್ಷಣಗಳನ್ನು ಫ್ಯಾರಡೇ , ಓಮ್‌ ಮತ್ತು ಇನ್ನಿತರರು 19ನೇ ಶತಮಾನದ ಆರಂಭದಲ್ಲಿ ಮಾಡಿದರು ಈ ಅಧ್ಯಯನಗಳು ಎರಡು ವಿದ್ಯಮಾನಗಳನ್ನು ಒಂದು ಸಿದ್ಧಾಂತವಾಗಿ ಒಗ್ಗೂಡಿಸಲು ಸಾಧ್ಯಮಾಡಿತು, ಅದೆಂದರೆ ಮ್ಯಾಕ್ಸ್‌ವೆಲ್‌ನ ವಿದ್ಯುತ್‌ಕಾಂತೀಯತೆ(ಎಲೆಕ್ಟ್ರೋಮ್ಯಾಗ್ನೆಟಿಸಮ್‌), ಸಿದ್ಧಾಂತ (ಇದನ್ನು ಮ್ಯಾಕ್ಸ್‌ವೆಲ್‌ನ ಸಮೀಕರಣಗಳು ಎಂದು ಕರೆಯಲಾಗುತ್ತದೆ).

ಆಧುನಿಕ ವಿಜ್ಞಾನ 
ವಿಸ್ತಾರಗೊಳ್ಳುತ್ತಿರುವ ವಿಶ್ವದ ಚಿತ್ರ

20ನೇ ಶತಮಾನದ ಆರಂಭವು ಭೌತವಿಜ್ಞಾನದಲ್ಲಿ ಒಂದು ಕ್ರಾಂತಿಯನ್ನೇ ಆರಂಭಿಸಿತು. ದೀರ್ಘಕಾಲದಿಂದ ಎತ್ತಿಹಿಡಿದಿದ್ದ ನ್ಯೂಟನ್ನನ ಸಿದ್ಧಾಂತಗಳು ಎಲ್ಲ ಸನ್ನಿವೇಶಗಳಲ್ಲಿಯೂ ಅಷ್ಟು ಸರಿಯಲ್ಲ ಎಂಬುದನ್ನು ತೋರಿಸಲಾಯಿತು. 1900ರ ಆರಂಭದಲ್ಲಿ, ಮ್ಯಾಕ್ಸ್‌ ಪ್ಲಾಂಕ್, ಆಲ್ಬರ್ಟ್ ಐನ್‌ಸ್ಟೈನ್, ನೀಲ್ಸ್‌ ಬೋರ್‌ ಮತ್ತು ಇತರರು ಅಸಂಗತ(ಸಾಮಾನ್ಯ ನಿಯಮಕ್ಕೆ ವಿರುದ್ಧವಾದ) ವಿವಿಧ ಪ್ರಾಯೋಗಿಕ ಫಲಿತಾಂಶಗಳನ್ನು ವಿವರಿಸಲು ವಿಚ್ಛಿನ್ನ ಶಕ್ತಿ ಹಂತಗಳ ಪರಿಕಲ್ಪನೆಯನ್ನು ಪರಿಚಯಿಸಿ, ಕ್ವಾಂಟಮ್‌ ಸಿದ್ಧಾಂತವನ್ನು ಮುಂದಿಟ್ಟರು. ಕ್ವಾಂಟಮ್ ಮೆಕಾನಿಕ್ಸ್ ಸಣ್ಣ ಮಟ್ಟದಲ್ಲಿ ಚಲನೆಯ ನಿಯಮಗಳು ಪಾಲನೆಯಾಗುವುದಿಲ್ಲ ಎಂಬುದನ್ನು ತೋರಿಸಿದ್ದು ಮಾತ್ರವಲ್ಲ, ಇನ್ನೂ ಹೆಚ್ಚು ಗೊಂದಲಕಾರಿ ಎಂದರೆ ಐನ್‌ಸ್ಟೈನ್‌ 1915ರಲ್ಲಿ ಸಾಮಾನ್ಯ ಸಾಪೇಕ್ಷತೆ ಸಿದ್ಧಾಂತದಲ್ಲಿ ತೋರಿಸಿದ್ದ, ನ್ಯೂಟನಿಯನ್ ಮೆಕಾನಿಕ್ಸ್ ಮತ್ತು ವಿಶಿಷ್ಟ ಸಾಪೇಕ್ಷತೆಯು ಅವಲಂಬಿತವಾಗಿದ್ದ ದೇಶಕಾಲದ ನಿಗದಿತ ಹಿನ್ನೆಲೆಯು ಅಸ್ತಿತ್ವದಲ್ಲಿಯೇ ಇಲ್ಲ ಎಂದು ಸಾಧಿಸಿತು. 1925ರಲ್ಲಿ, ವೆರ್ನರ್‌ ಹೈಸೆನ್‌ಬರ್ಗ್‌ ಮತ್ತು ಇರ್ವಿನ್‌ ಸ್ಕ್ರೋಡಿಂಜರ್ ಕ್ವಾಂಟಮ್ ಮೆಕಾನಿಕ್ಸ್‌ ಅನ್ನು ಸೂತ್ರೀಕರಿಸಿದರು. ಇದು ನಂತರದ ಕ್ವಾಂಟಮ್‌ ಸಿದ್ಧಾಂತಗಳನ್ನು ವಿವರಿಸಿತು. ಎಡ್ವಿನ್ ಹಬಲ್‌‌ 1929ರಲ್ಲಿ ಗ್ಯಾಲಕ್ಷಿಗಳು ಎಷ್ಟು ವೇಗದಲ್ಲಿ ಹಿಂದೆ ಸರಿಯುತ್ತವೆಯೋ ಅದು ಧನಾತ್ಮಕವಾಗಿ ಅವುಗಳ ದೂರಕ್ಕೆ ಸಹಸಂಬಂಧ ಹೊಂದಿರುತ್ತದೆ ಎಂದು ಗಮನಿಸಿದ್ದು ಬ್ರಹ್ಮಾಂಡವು ವಿಸ್ತಾರವಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕಾರಣವಾಯಿತು. ಜೊತೆಗೆ ಬಿಗ್‌ ಬ್ಯಾಂಗ್‌ ಸಿದ್ಧಾಂತವನ್ನು ಜಾರ್ಜ್‌ಸ್ ಲೆಮಿಟ್ರಿ ರೂಪಿಸಲು ಇದರಿಂದ ಸಾಧ್ಯವಾಯಿತು.

ಆಧುನಿಕ ವಿಜ್ಞಾನ 
ಭೌತವಿಜ್ಞಾನದಲ್ಲಿ "ಮಹಾವಿಜ್ಞಾನ (ಬಿಗ್‌ ಸೈನ್ಸ್‌)"ನ ಆಗಮನವನ್ನು ಸಾರಿದ ಅಣುಬಾಂಬ್.

ಎರಡನೇ ವಿಶ್ವಸಮರದ ಸಮಯದಲ್ಲಿ ಇನ್ನಷ್ಟು ಅಭಿವೃದ್ಧಿಗಳು ನಡೆದವು. ಅದು ರೇಡಾರ್‌ನ ಪ್ರಯೋಗಿಕ ಉಪಯೋಗ ಮತ್ತು ಅಣು ಬಾಂಬ್‌ನ ಅಭಿವೃದ್ಧಿ ಹಾಗೂ ಉಪಯೋಗಕ್ಕೆ ಕಾರಣವಾಯಿತು. 1930ರಲ್ಲಿಯೇ ಎರ್ನೆಸ್ಟ್‌ ಒ. ಲಾರೆನ್ಸ್‌ ಸೈಕ್ಲೋಟ್ರಾನ್‌ ಆವಿಷ್ಕಾರ ಮಾಡುವುದರೊಂದಿಗೆ ಈ ಪ್ರಕ್ರಿಯೆ ಆರಂಭಗೊಂಡರೂ, ಯುದ್ಧಾನಂತರದ ಅವಧಿಯಲ್ಲಿ ಭೌತವಿಜ್ಞಾನವು "ಮಹಾ ವಿಜ್ಞಾನ" ಎಂದು ಇತಿಹಾಸಕಾರರು ಕರೆಯುವ ಒಂದು ಹಂತಕ್ಕೆ ತಲುಪಿತು. ಭೌತವಿಜ್ಞಾನಿಗಳು ತಮ್ಮ ಸಿದ್ಧಾಂತಗಳನ್ನು ಪರೀಕ್ಷಿಸಲು ಬೃಹತ್ ಯಂತ್ರಗಳು, ಆಯವ್ಯಯ ಮತ್ತು ಪ್ರಯೋಗಾಲಯಗಳು ಬೇಕಾದವು ಮತ್ತು ಇದು ಹೊಸ ವಲಯಕ್ಕೇ ಕಾಲಿಟ್ಟಿತು. ಸರ್ಕಾರಗಳು ಭೌತವಿಜ್ಞಾನದ ಮುಖ್ಯ ಪೋಷಕರಾದವು, "ಮೂಲ" ಸಂಶೋಧನೆಗೆ ಬೆಂಬಲ ಒದಗಿಸುವುದು ಸೇನೆ ಮತ್ತು ಕೈಗಾರಿಕಾ ಉಪಯೋಗಗಳಿಗೆ ಉಪಯುಕ್ತವಾಗಬಲ್ಲ ತಂತ್ರಜ್ಞಾನಕ್ಕೆ ದಾರಿಯಾಗುತ್ತದೆ ಎಂದು ಸರ್ಕಾರಗಳು ಕಂಡುಕೊಂಡವು. ಪ್ರಸ್ತುತ, ಸಾಮಾನ್ಯ ಸಾಪೇಕ್ಷತೆ ಮತ್ತು ಕ್ವಾಂಟಮ್‌ ಮೆಕಾನಿಕ್ಸ್‌ ಪರಸ್ಪರ ಸಾಮರಸ್ಯದಲ್ಲಿಲ್ಲ ಮತ್ತು ಎರಡನ್ನೂ ಒಗ್ಗೂಡಿಸುವ ಪ್ರಯತ್ನಗಳು ನಡೆದಿವೆ.

ರಸಾಯನಶಾಸ್ತ್ರ

ಆಧುನಿಕ ರಸಾಯನಶಾಸ್ತ್ರದ ಇತಿಹಾಸವನ್ನು ರಾಬರ್ಟ್‌ ಬಾಯ್ಲ್‌ 1661ರಲ್ಲಿ ತನ್ನ ದಿ ಸ್ಕೆಪ್ಟಿಕಲ್ ಕೆಮಿಸ್ಟ್ ಕೃತಿಯಲ್ಲಿ ರಸವಿದ್ಯೆಯಿಂದ ರಸಾಯನಶಾಸ್ತ್ರವನ್ನು ಪ್ರತ್ಯೇಕಿಸಿದಾಗಿನಿಂದ ಆರಂಭಗೊಂಡಿತು ಎಂದು ತೆಗೆದುಕೊಳ್ಳಬಹುದು (ರಸವಿದ್ಯೆಯ ಪರಂಪರೆಯು ಇದಾದ ನಂತರವೂ ಕೆಲಕಾಲ ಮುಂದುವರೆದಿತ್ತು). ಜೊತೆಗೆ ಇದೇ ಸಮಯದಲ್ಲಿ ವೈದ್ಯಕೀಯ ರಸಾಯನ ವಿಜ್ಞಾನಿಗಳಾದ ವಿಲಿಯಂ ಕುಲೆನ್, ಜೋಸೆಫ್ ಬ್ಲಾಕ್, ಟೋರ್ಬರ್ನ್‌ ಬರ್ಗ್‌ಮನ್ ಮತ್ತು ಪಿಯರೆ ಮಕ್ವೆರ್‌ ಗ್ರಾವಿಮೆಟ್ರಿಕ್ ಪ್ರಯೋಗಗಳನ್ನು ಕೈಗೊಂಡಿದ್ದರು. ಆಂಟೋನಿ ಲವೊಸಿಯರ್‌ (ಆಧುನಿಕ ರಸಾಯನಶಾಸ್ತ್ರದ ಪಿತಾಮಹ ) ಆಮ್ಲಜನಕವನ್ನು ಗುರುತಿಸಿದ್ದು ಮತ್ತು ಫ್ಲೊಜಿಸ್ಟನ್ ಸಿದ್ಧಾಂತವನ್ನು ನಿರಾಕರಿಸಿ, ಕನ್ಸರ್ವೇಶನ್ ಆಫ್‌ ಮಾಸ್‌ ನಿಯಮವನ್ನು ರೂಪಿಸಿದ್ದು ಇನ್ನೊಂದು ಬಹುಮುಖ್ಯ ಹೆಜ್ಜೆ ಇಟ್ಟಂತೆ ಆಯಿತು. ಎಲ್ಲ ಭೌತವಸ್ತುಗಳೂ ಅಣುಗಳಿಂದ ರಚಿತವಾಗಿವೆ ಎಂಬ ಸಿದ್ಧಾಂತವನ್ನು ಜಾನ್‌ ಡಾಲ್ಟನ್‌ 1803ರಲ್ಲಿ ಪ್ರತಿಪಾದಿಸಿದನು. ಅಣುಗಳು ಎಂದರೆ ಭೌತವಸ್ತುವಿನ ಅತ್ಯಂತ ಚಿಕ್ಕ ಘಟಕಾಂಶವಾಗಿದ್ದು, ಆ ಭೌತವಸ್ತುವಿನ ಮೂಲ ರಾಸಾಯನಿಕ ಮತ್ತು ಭೌತ ಗುಣಗಳನ್ನು ಕಳೆದುಕೊಳ್ಳದೇ ಅದನ್ನು ಪುನಾ ಚೂರು ಮಾಡಲು ಸಾಧ್ಯವಿಲ್ಲ ಎಂದು ಆತ ಪ್ರತಿಪಾದಿಸಿದ್ದ. ಆದರೆ ಈ ಪ್ರಶ್ನೆಯು ರುಜುವಾತುಗೊಳ್ಳಲು ಇನ್ನೂ ನೂರು ವರ್ಷ ಬೇಕಾಯಿತು. ಡಾಲ್ಟನ್‌ ತೂಕ ಸಂಬಂಧಗಳ ನಿಯಮವನ್ನೂ ಸೂತ್ರೀಕರಿಸಿದನು. 1869ರಲ್ಲಿ, ದಿಮಿತ್ರಿ ಮೆಂಡಲೀಫ್ನು ಡಾಲ್ಟನ್ನನ ಶೋಧಗಳನ್ನು ಆಧರಿಸಿ, ಮೂಲವಸ್ತುಗಳ ತನ್ನ ಪೀರಿಯಾಡಿಕ್ ಟೇಬಲ್‌ ಅನ್ನು ರಚಿಸಿದನು. ಫ್ರೆಡ್ರಿಕ್ ವೋಲರ್‌ ಎಂಬ ವಿಜ್ಞಾನಿಯು ಯೂರಿಯಾದ ಸಂಶ್ಲೇಷಣೆ ಮಾಡಿದ್ದು ಒಂದು ಹೊಸ ಸಂಶೋಧನಾ ಕ್ಷೇತ್ರವನ್ನೇ ತೆರೆಯಿತು. ಅದೇ ಸಾವಯವ ರಸಾಯನಶಾಸ್ತ್ರ, ಮತ್ತು 19ನೇ ಶತಮಾನದ ಅಂತ್ಯದ ವೇಳೆಗೆ ವಿಜ್ಞಾನಿಗಳು ನೂರಾರು ಸಾವಯವ ಸಂಯುಕ್ತಗಳನ್ನು ಸಂಶ್ಲೇಷಣೆ ಮಾಡಲು ಶಕ್ಯರಾದರು. l9ನೇ ಶತಮಾನದ ಕೊನೆಯ ಭಾಗದಲ್ಲಿ ವೇಲ್‌ಗಳ ಬೇಟೆ(ವೇಲಿಂಗ್‌)ಯಿಂದ ದೊರೆಯುತ್ತಿದ್ದ ತೈಲಪೂರೈಕೆ ಬಳಸಿ ಬರಿದಾದ ನಂತರ ಭೂಮಿಯ ಪೆಟ್ರೋಕೆಮಿಕಲ್‌ಗಳ ಅತಿಬಳಕೆ ಆರಂಭವಾಯಿತು. 20ನೇ ಶತಮಾನದ ಹೊತ್ತಿಗೆ, ಸಂಸ್ಕರಿತ ವಸ್ತುಗಳ ವ್ಯವಸ್ಥಿತ ಉತ್ಪಾದನೆಯು ಉತ್ಪನ್ನಗಳ ಸಿದ್ಧ ಪೂರೈಕೆಯನ್ನು ನೀಡತೊಡಗಿತು, ಇದು ಶಕ್ತಿಯನ್ನು ಒದಗಿಸುವುದು ಮಾತ್ರವಲ್ಲದೇ, ಬಟ್ಟೆ, ವೈದ್ಯಕೀಯ ಮತ್ತು ಪ್ರತಿದಿನ ಬಳಸಬಹುದಾದ ಸಂಪನ್ಮೂಲಗಳ ಸಂಸ್ಕರಿತ ವಸ್ತುಗಳನ್ಣೂ ಒದಗಿಸಿತು. ಸಜೀವಿಗಳ ಮೇಲೆ ಸಾವಯವ ರಸಾಯನಶಾಸ್ತ್ರದ ತಂತ್ರಗಳನ್ನು ಬಳಸುವುದು ಶಾರೀರಿಕ ರಸಾಯನಶಾಸ್ತ್ರ ಅಧ್ಯಯನಕ್ಕೆ ಕಾರಣವಾಯಿತು. ಇದು ಜೀವರಸಾಯನಶಾಸ್ತ್ರಕ್ಕೆ ಪೂರ್ವಭಾವಿಯಾಗಿತ್ತು. 20ನೇ ಶತಮಾನವು ಭೌತವಿಜ್ಞಾನ ಮತ್ತು ರಸಾಯನಶಾಸ್ತ್ರದ ಒಂದುಗೂಡುವಿಕೆಗೂ ಸಾಕ್ಷಿಯಾಯಿತು. ಇದು ಅಣುವಿನ ಎಲೆಕ್ಟ್ರಾನಿಕ್ ರಚನೆಯ ಫಲಿತಾಂಶವಾಗಿ ರಾಸಾಯನಿಕ ಗುಣಗಳನ್ನು ವಿವರಿಸಲು ಸಾಧ್ಯಮಾಡಿತು. ಲೀನಸ್‌ ಪೌಲಿಂಗ್ನ ದಿ ನೇಚರ್ ಆಫ್‌ ಕೆಮಿಕಲ್ ಬಾಂಡ್(ರಾಸಾಯನಿಕ ಬಂಧದ ಲಕ್ಷಣ) ಕುರಿತ ಕೃತಿಯನ್ನು ಕ್ವಾಂಟಮ್‌ ಮೆಕಾನಿಕ್ಸ್‌ನಲ್ಲಿ ಅತ್ಯಂತ ಸಂಕೀರ್ಣ ಕಣಗಳ ಬಾಂಡ್‌ ಆಂಗಲ್‌(ಬಂಧ ಕೋನ)ಗಳನ್ನು ವಿವರಿಸಲು ಬಳಸಲಾಯಿತು. ಪೌಲಿಂಗ್‌ನ ಕೃತಿಗಳು ಜೀವದ ರಹಸ್ಯ(ದಿ ಸೀಕ್ರೆಟ್ ಆಫ್‌ ಲೈಫ್‌) ವಾದ (ಫ್ರಾನ್ಸಿಸ್‌ ಕ್ರಿಕ್‌ನ ಮಾತುಗಳಲ್ಲಿ, 1953) ಡಿಎನ್‌ಎದ ಭೌತಿಕ ಮಾದರಿಯನ್ನು ರೂಪಿಸುವಲ್ಲಿ ಸಹಾಯಕವಾದವು. ಅದೇ ವರ್ಷ ಮಿಲ್ಲರ್-ಯುರೆ ಪ್ರಯೋಗವು ಆದಿಕಾಲದ ಪ್ರಕ್ರಿಯೆಗಳ ಅನುಕರಣೆಯನ್ನು ನಿರೂಪಿಸಿದವು. ಈ ಪ್ರಯೋಗದಲ್ಲಿ ಪ್ರೋಟೀನ್‌ಗಳ ಮೂಲ ಘಟಕಾಂಶಗಳು, ಸರಳ ಅಮೈನೋ ಆಮ್ಲಗಳು ತೀರಾ ಸರಳ ಕಣಗಳಿಂದ ತಾವಾಗಿಯೇ ರಚನೆಗೊಂಡಿದ್ದವು.

ಭೂವಿಜ್ಞಾನ

ಆಧುನಿಕ ವಿಜ್ಞಾನ 
ಜಾಂಗ್ ಹೆಂಗ್‌ನ ನೀರಿನಿಂದ ನಡೆಯುವ ಸೆಸ್ಮೋಮೀಟರ್‌ಅನ್ನು ಪುನಾನಿರ್ಮಿಸಿದ್ದು, ಚೀನಾ, 132

ಭೂವಿಜ್ಞಾನವು ಒಂದು ಸುಸಂಜಕ ವಿಜ್ಞಾನವಾಗಿ ರೂಪುಗೊಳ್ಳುವ ಮೊದಲು ಬಂಡೆಗಳು, ಖನಿಜಗಳು ಮತ್ತು ಭೂಪ್ರದೇಶಗಳ ಕುರಿತ ವಿಷಯಗಳೊಂದಿಗೆ ಬಹುಕಾಲ ಪ್ರತ್ಯೇಕವಾಗಿ, ಪರಸ್ಪರ ಸಂಬಂಧವಿಲ್ಲದಂತೆ ಇತ್ತು. ಬಂಡೆಗಳ ಕುರಿತ ಥಿಯೋಫ್ರೇಟಸ್‌ನ ಕೃತಿ ಪೆರಿ ಲಿಥಾನ್ ಒಂದು ಸಹಸ್ರವರ್ಷದವರೆಗೆ ಅಧಿಕೃತ ಪುಸ್ತಕವಾಗಿಯೇ ಉಳಿದಿತ್ತು; ಅದರಲ್ಲಿ ಪಳೆಯುಳಿಕೆಗಳನ್ನು ಕುರಿತು ನೀಡಿದ ವಿವರಣೆಗಳು ವೈಜ್ಞಾನಿಕ ಕ್ರಾಂತಿಯಾಗುವವರೆಗೂ ಬುಡಮೇಲಾಗದೇ ಉಳಿದಿತ್ತು. ಚೀನೀ ಬಹುಶ್ರುತ ವಿದ್ವಾಂಸ ಶೆನ್ ಕ್ಯೊ (1031–1095) ಭೂ ಪ್ರದೇಶ ರಚನೆಯ ಪ್ರಕ್ರಿಯೆಯ ಸಿದ್ಧಾಂತವನ್ನು ಸೂತ್ರೀಕರಿಸಿದವರಲ್ಲಿ ಮೊದಲಿಗನು. ಸಮುದ್ರದಿಂದ ನೂರಾರು ಮೈಲುಗಳ ದೂರದಲ್ಲಿದ್ದ ಭೌಗೋಳಿಕ ಶಿಲಾಸ್ತರದಲ್ಲಿದ್ದ ಪಳೆಯುಳಿಕೆಗಳನ್ನು ಗಮನಿಸಿದ ಆತ ಪರ್ವತಗಳ ಸವಕಳಿಯಿಂದ ಮತ್ತು ಹೂಳು ಸಂಗ್ರಹಗೊಂಡಿದ್ದರಿಂದ ಭೂಮಿಯು ರೂಪುಗೊಂಡಿದೆ ಎಂದು ಪ್ರತಿಪಾದಿಸಿದನು.

ಆಧುನಿಕ ವಿಜ್ಞಾನ 
ಪ್ಲೇಟ್‌ ಟೆಕ್ಟೋನಿಕ್ಸ್‌ - ರಿಲೀಫ್‌ ಗ್ಲೋಬ್‌ನಲ್ಲಿ ಸಮುದ್ರ ತೀರ ವಿಸ್ತರಿಸುತ್ತಿರುವುದು ಮತ್ತು ಖಂಡಾಂತರ ದಿಕ್ಷ್ಯುತಿಯನ್ನು ಚಿತ್ರಿಸಿರುವುದು

ವೈಜ್ಞಾನಿಕ ಕ್ರಾಂತಿಯ ಸಮಯದಲ್ಲಿ ಭೂವಿಜ್ಞಾನವನ್ನು ವ್ಯವಸ್ಥಿತವಾಗಿ ಮರುರಚನೆ ಮಾಡಲಿಲ್ಲ. ಆದರೆ ಪ್ರತ್ಯೇಕ ಸಿದ್ಧಾಂತವಾದಿಗಳು ಮಹತ್ವದ ಕೊಡುಗೆ ನೀಡಿದರು. ಉದಾಹರಣೆಗೆ ರಾಬರ್ಟ್‌ ಹುಕ್ ಭೂಕಂಪಗಳ ಸಿದ್ಧಾಂತವನ್ನು ರೂಪಿಸಿದನು. ನಿಕೋಲಾಸ್ ಸ್ಟೆನೋ ಸೂಪರ್‌ಪೊಸಿಶನ್‌(ಒಂದನ್ನು ಇನ್ನೊಂದರ ಮೇಲಿಡುವುದು) ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದನು ಮತ್ತು ಪಳೆಯುಳಿಕೆಗಳು ಒಮ್ಮೆ ಬದುಕಿದ್ದ ಜೀವಿಗಳ ಅವಶೇಷಗಳು ಎಂದು ವಾದಿಸಿದನು. ಥಾಮಸ್‌ ಬರ್ನೆಟ್‌ನ ಭೂಮಿಯ ಪವಿತ್ರ ಸಿದ್ಧಾಂತ(ಸೇಕ್ರೆಡ್‌ ಥಿಯರಿ ಆಫ್‌ ಅರ್ಥ್‌) 1681ರಲ್ಲಿ ಪ್ರತಿಪಾದಿಸಿದಾಗ ಆರಂಭಗೊಂಡು, ನೈಸರ್ಗಿಕ ತತ್ವಶಾಸ್ತ್ರಜ್ಞರು ಭೂಮಿಯು ಕಾಲಾಂತರದಲ್ಲಿ ಬದಲಾಗಿದೆ ಎಂಬ ವಿಚಾರವನ್ನು ಅನ್ವೇಷಿಸತೊಡಗಿದರು. ಬರ್ನೆಟ್ ಮತ್ತು ಆತನ ಸಮಕಾಲೀನರು ಭೂಮಿಯ ಗತಕಾಲವನ್ನು ಬೈಬಲ್‌ನಲ್ಲಿ ವಿವರಿಸಿದ ಘಟನೆಗಳ ಅರ್ಥದಲ್ಲಿ ವ್ಯಾಖ್ಯಾನಿಸಿದರು. ಆದರೆ ಅವರ ಕೃತಿಗಳು ಭೂಮಿಯ ಇತಿಹಾಸದ ಕುರಿತು ಮತಾತೀತ ವ್ಯಾಖ್ಯಾನಗಳಿಗೆ ಬೌದ್ಧಿಕ ತಳಹದಿಗಳಾದವು. ಆಧುನಿಕ ಭೂವಿಜ್ಞಾನವು, ಆಧುನಿಕ ರಸಾಯನಶಾಸ್ತ್ರದಂತೆಯೇ , 18ನೇ ಮತ್ತು 19ನೇ ಶತಮಾನದ ಆರಂಭದಲ್ಲಿ ಕ್ರಮೇಣ ವಿಕಾಸಗೊಂಡಿತು. ಬೆನೊಯಿಟ್ ಮೈಲೆಟ್ ಮತ್ತು ಕೊಮ್ಟೆ ಡೆ ಬಫೋನ್ ಭೂಮಿಯು ಬೈಬಲ್‌ನ ವಿದ್ವಾಂಸರು ಯೋಚಿಸಿರುವಂತೆ 6,000 ವರ್ಷಗಳಲ್ಲ, ಅದಕ್ಕಿಂತಲೂ ಬಹಳ ಹಳೆಯದು ಎಂದು ಪ್ರತಿಪಾದಿಸಿದರು. ಜೀನ್-ಎಟೀನ್ ಗುಟ್ಟರ್ಡ್ ಮತ್ತು ನಿಕೋಲಸ್‌ ಡೆಸ್ಮರೆಸ್ಟ್ ಮಧ್ಯ ಫ್ರಾನ್ಸ್‌ನಲ್ಲಿ ಪಾದಯಾತ್ರೆ ಮಾಡಿ, ತಮ್ಮ ವೀಕ್ಷಣೆಗಳನ್ನು ಮೊಟ್ಟ ಮೊದಲ ಭೂವೈಜ್ಞಾನಿಕ ನಕಾಶೆಗಳ ಮೇಲೆ ದಾಖಲಿಸಿದರು. ಅಬ್ರಾಹಂ ವೆರ್ನರ್ ಬಂಡೆಗಳು ಮತ್ತು ಖನಿಜಗಳ ಒಂದು ವ್ಯವಸ್ಥಿತ ವರ್ಗೀಕರಣವನ್ನು ಮಾಡಿದನು - ಅದು ಭೂವಿಜ್ಞಾನದಲ್ಲಿ, ಜೀವಶಾಸ್ತ್ರದಲ್ಲಿ ಲಿನ್ನೆಯಸ್ ಮಾಡಿದ್ದ ಸಾಧನೆಗೆ ಸಮನಾಗಿತ್ತು. ವೆರ್ನರ್ ಭೂಮಿಯ ಇತಿಹಾಸದ ಒಂದು ಸಾಮಾನ್ಯೀಕೃತ ವ್ಯಾಖ್ಯಾನವನ್ನು ಪ್ರಸ್ತಾಪಿಸಿದನು. ಅದೇ ರೀತಿ ಅವನ ಸಮಕಾಲೀನ ಸ್ಕಾಟಿಶ್‌ ಬಹುಶ್ರುತ ವಿದ್ವಾಂಸ ಜೇಮ್ಸ್‌ ಹಟನ್ನೂ ಪ್ರಸ್ತಾಪಿಸಿದ್ದನು. ಜಾರ್ಜಸ್ ಕ್ಯುವಿಯರ್ ಮತ್ತು ಅಲೆಕ್ಸಾಂಡರ್ ಬ್ರಾಂಗ್ನಿಯರ್ಟ್‌, ಸ್ಟೆನೋ ಮಾಡಿದ ಕೆಲಸವನ್ನು ವಿಸ್ತರಿಸಿ, ಬಂಡೆಗಳ ಪದರಗಳಿಗೆ ಎಷ್ಟು ವರ್ಷಗಳಾಗಿವೆ ಎಂಬುದನ್ನು ಅವುಗಳಲ್ಲಿರುವ ಪಳೆಯುಳಿಕೆಗಳಿಂದ ಕಂಡುಹಿಡಿಯಬಹುದು ಎಂದು ಪ್ರತಿಪಾದಿಸಿನು: ಈ ತತ್ವವನ್ನು ಮೊದಲು ಪ್ಯಾರಿಸ್‌ ಬೇಸಿನ್‌ನ ಭೂವಿಜ್ಞಾನಕ್ಕೆ ಮೊದಲು ಅನ್ವಯಿಸಲಾಯಿತು. ಪಳೆಯುಳಿಕೆ ಸೂಚಿಯು ಭೂವೈಜ್ಞಾನಿಕ ನಕಾಶೆಗಳನ್ನು ರಚಿಸಲು ಶಕ್ತಿಶಾಲಿ ಸಾಧನವಾಯಿತು. ಏಕೆಂದರೆ ಅದು ಭೂವಿಜ್ಞಾನಿಗಳಿಗೆ ಒಂದು ಪ್ರದೇಶದಲ್ಲಿರುವ ಬಂಡೆಗಳನ್ನು ಬೇರೆ ದೂರದ ಪ್ರದೇಶದಲ್ಲಿರುವ ಅದೇ ಕಾಲದ ಬಂಡೆಗಳೊಂದಿಗೆ ಹೋಲಿಸಲು ಸಾಧ್ಯಗೊಳಿಸಿತು. 19ನೇ ಶತಮಾನದ ಮೊದಲ ಅರ್ಧಭಾಗದಲ್ಲಿ, ಚಾರ್ಲ್ಸ್ ಲೈಲ್ , ಆಡಂ ಸೆಡ್‌ವಿಕ್, ಮತ್ತು ರೋಡ್ರಿಕ್ ಮರ್ಚಿಸನ್‌‌ರಂತಹ ಭೂವಿಜ್ಞಾನಿಗಳು ಯೂರೋಪ್‌ ಮತ್ತು ಉತ್ತರ ಅಮೆರಿಕದ ಪೂರ್ವದ ಭಾಗದ ಬಂಡೆಗಳಿಗೆ ಹೊಸ ತಂತ್ರಗಳನ್ನು ಅನ್ವಯಿಸಿದರು ಮತ್ತು ನಂತರದ ದಶಕಗಳಲ್ಲಿ ಸರ್ಕಾರಿ ಅನುದಾನದಿಂದ ನಕಾಶೆ ಮಾಡುವ ಯೋಜನೆಗಳನ್ನು ಕೈಗೊಂಡರು. 19ನೇ ಶತಮಾನದ ಮಧ್ಯಭಾಗದುದ್ದಕ್ಕೂ, ಭೂವಿಜ್ಞಾನದ ಲಕ್ಷ್ಯವು ವಿವರಣೆ ಮತ್ತು ವರ್ಗೀಕರಣದಿಂದ ಭೂಮಿಯ ಮೇಲ್ಮೈ ಹೇಗೆ ಬದಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದತ್ತ ಹೊರಳಿತು. ಈ ಕಾಲದಲ್ಲಿ ಪರ್ವತ ರೂಪುಗೊಳ್ಳುವ ಕುರಿತು ಮೊದಲ ಸಮಗ್ರ ಸಿದ್ಧಾಂತಗಳು ಪ್ರಸ್ತಾಪಗೊಂಡವು, ಹಾಗೆಯೇ ಭೂಕಂಪ ಮತ್ತು ಜ್ವಾಲಾಮುಖಿಗಳ ಕುರಿತು ಮೊದಲ ಆಧುನಿಕ ಸಿದ್ಧಾಂತಗಳು ಪ್ರಸ್ತಾಪವಾದವು. ಲೂಯಿಸ್ ಅಗಾಸ್ಸಿಜ್ ಮತ್ತು ಇತರರು ಹಿಮ ಯುಗ(ಐಸ್‌ ಏಜ್) ಆವರಿಸಿದ್ದ ಖಂಡಗಳ ವಾಸ್ತವವನ್ನು ನಿರೂಪಿಸಿದರು. ಜೊತೆಗೆ "ಭೂವಿಜ್ಞಾನದ ವಿದ್ಯಮಾನಗಳನ್ನು ಪ್ರವಾಹಗಳಿಂದ ಉಂಟಾಗಿದ್ದು ಎಂದು ಪರಿಗಣಿಸುವ ಭೂವಿಜ್ಞಾನಿಗಳಾದ (ಫ್ಲುವಿಅಲಿಸ್ಟ್ಸ್‌‌)" ಆಂಡ್ರ್ಯೂ ಕ್ರಾಂಬೀ ರಾಮ್ಸೆ ಅಂತವರು ನದಿಗಳು ಲಕ್ಷಾಂತರ ವರ್ಷಗಳು ಹರಿಯುತ್ತ, ನಂತರ ನದೀಕಣಿವೆಗಳು ರೂಪುಗೊಂಡಿವೆ ಎಂದು ಪ್ರತಿಪಾದಿಸಿದರು. ವಿಕಿರಣ(ರೇಡಿಯೋಆಕ್ಟಿವಿಟಿ)ಯ ಶೋಧದ ನಂತರ ರೇಡಿಯೋಮೆಟ್ರಿಕ್ ಡೇಟಿಂಗ್(ವಿಕಿರಣ ಬಳಸಿ ಆಯುಷ್ಯ ಕಂಡುಹಿಡಿಯುವ ವಿಧಾನ) ವಿಧಾನಗಳನ್ನು 20ನೇ ಶತಮಾನದ ಆರಂಭದಲ್ಲಿ ಅಭಿವೃದ್ಧಿಗೊಳಿಸಲಾಯಿತು. ಅಲ್‌ಫ್ರೆಡ್ ವೆಗ್ನರ್‌ನ "ಖಂಡಾಂತರ ದಿಕ್ಚ್ಯುತಿ" (ಕಾಂಟಿನೆಂಟಲ್‌ ಡ್ರಿಫ್ಟ್‌) ಸಿದ್ಧಾಂತವನ್ನು 1910ರಲ್ಲಿ ಪ್ರಸ್ತಾಪಿಸಿದಾಗ ಅದನ್ನು ಮೊದಲು ವ್ಯಾಪಕವಾಗಿ ನಿರಾಕರಿಸಲಾಯಿತು. ಆದರೆ 1950 ಮತ್ತು 1960ರ ಸುಮಾರಿಗೆ ಸಂಗ್ರಹಿಸಿದ ಹೊಸ ದತ್ತಾಂಶಗಳು ಭೂಪದರಗಳ ರಾಚನಿಕ ಬದಲಾವಣೆಗಳ/ವಿರೂಪಗಳ(ಪ್ಲೇಟ್‌ ಟೆಕ್ಟೋನಿಕ್ಸ್‌) ಸಿದ್ಧಾಂತವನ್ನು ಮುಂದಿಟ್ಟವು ಮತ್ತು ಇದು ಖಂಡಾಂತರ ದಿಕ್ಚ್ಯುತಿಗೆ ಒಂದು ಸಂಭಾವ್ಯ ಕಾರ್ಯವಿಧಾನವನ್ನು ಒದಗಿಸಿತು. ಪ್ಲೇಟ್‌ ಟೆಕ್ಟೋನಿಕ್ಸ್‌ ಪರಸ್ಪರ ಸಂಬಂಧವಿಲ್ಲದಂತೆ ತೋರುವ ಅನೇಕ ಭೂವೈಜ್ಞಾನಿಕ ವಿದ್ಯಮಾನಗಳಿಗೆ ಒಂದು ವ್ಯಾಪಕವಾದ ಏಕೀಕೃತ ವಿವರಣೆಯನ್ನು ನೀಡಿತು. 1970ರಿಂದ ಭೂವಿಜ್ಞಾನದಲ್ಲಿ ಇದು ಒಂದು ಏಕೀಕೃತ ತತ್ವವಾಗಿದೆ. ಭೂವಿಜ್ಞಾನಿಗಳು ಪ್ಲೇಟ್‌ ಟೆಕ್ಟೋನಿಕ್ಸ್‌ ಅನ್ನು ಬಂಡೆಗಲ್ಲುಗಳ ಅಧ್ಯಯನದಿಂದ ಭೂಮಿಯನ್ನು ಒಂದು ಗ್ರಹವಾಗಿ ಅಧ್ಯಯನ ಮಾಡುವ ನಿಟ್ಟಿನಲ್ಲಿ ವಿಸ್ತೃತಗೊಳಿಸಿದ್ದಾರೆ. ಈ ರೂಪಾಂತರದ ಇನ್ನಿತರ ಅಂಶಗಳು ಇವುಗಳನ್ನು ಒಳಗೊಂಡಿವೆ: ಭೂಮಿಯ ಒಳಭಾಗದ ಭೂಭೌತಿಕ ಅಧ್ಯಯನ, ಪವನಶಾಸ್ತ್ರ (ಮೀಟರಾಲಜಿ) ಮತ್ತು ಸಮುದ್ರಶಾಸ್ತ್ರ (ಓಶನೋಗ್ರಫಿ)ಗಳನ್ನು "ಭೂಮಿ ವಿಜ್ಞಾನ"ಗಳಲ್ಲಿ ಒಂದು ಎಂದು ಪರಿಗಣಿಸಿ ಭೂವಿಜ್ಞಾನವನ್ನು ವರ್ಗೀಕರಿಸಿರುವುದು ಮತ್ತು ಸೌರಮಂಡಲದ ಬೇರೆ ಬಂಡೆಗಲ್ಲುಗಳ ಗ್ರಹಗಳೊಂದಿಗೆ ಭೂಮಿಯ ಹೋಲಿಕೆಗಳು.

ಖಗೋಳಶಾಸ್ತ್ರ

ಸಾಮೋಸ್‌ನ ಅರಿಸ್ಟಾರ್ಕಸ್‌‌ನು ಸೂರ್ಯ ಮತ್ತು ಚಂದ್ರರ ಗಾತ್ರವನ್ನು ಹಾಗೂ ದೂರವನ್ನು ಹೇಗೆ ಕಂಡುಹಿಡಿಯುವುದು ಎಂಬ ಕುರಿತು ಒಂದು ಕೃತಿಯನ್ನು ಪ್ರಕಟಿಸಿದ್ದಾನೆ. ಜೊತೆಗೆ ಎರಟೊಸ್ತನೀಸ್‌ ಭೂಮಿಯ ಗಾತವನ್ನು ಕಂಡುಹಿಡಿಯಲು ಈ ಕೃತಿಯನ್ನು ಬಳಸಿಕೊಂಡಿದ್ದಾನೆ. ನಂತರ ಹಿಪ್ಪಾರ್ಕಸ್ ಭೂಮಿಯ ಅಕ್ಷಭ್ರಮಣವನ್ನು ಕಂಡುಹಿಡಿದನು. 19ನೇ ಶತಮಾನದಲ್ಲಿ ಖಗೋಳವಿಜ್ಞಾನದಲ್ಲಿ ಮತ್ತು ದೃಗ್ವಿಜ್ಞಾನ ಪದ್ಧತಿಯಲ್ಲಿ ಆದ ಪ್ರಗತಿಗಳು 1801ರಲ್ಲಿ ಮೊಟ್ಟಮೊದಲು ಒಂದು ಕ್ಷುದ್ರಗ್ರಹ(ಆಸ್ಟರಾಯ್ಡ್)(1 ಸೆರೆಸ್)ವನ್ನು ವೀಕ್ಷಿಸಲು ಸಾಧ್ಯಗೊಳಿಸಿತು ಮತ್ತು 1846ರಲ್ಲಿ ನೆಫ್ಚೂನ್‌ ಗ್ರಹವನ್ನು ಕಂಡುಹಿಡಿಯಲು ಸಾಧ್ಯಮಾಡಿತು. ಜಾರ್ಜ್‌ ಗ್ಯಾಮೊವ್, ರಾಲ್ಫ್‌ ಆಲ್ಫರ್, ಮತ್ತು ರಾಬರ್ಟ್‌ ಹೆರ್ಮನ್ ವಿಶ್ವದ ಉಷ್ಣತೆಯ ಹಿನ್ನೆಲೆಯಲ್ಲಿ ಬಿಗ್‌ ಬ್ಯಾಂಗ್‌ಗೆ ಏನಾದರೂ ಸಾಕ್ಷ್ಯವಿರಬೇಕೆಂದು ಲೆಕ್ಕಹಾಕಿದರು. 1964ರಲ್ಲಿ, ಅರ್ನೊ ಪೆನ್ಜಿಯಸ್ ಮತ್ತು ರಾಬರ್ಟ್‌ ವಿಲ್ಸನ್ ತಮ್ಮ ಬೆಲ್‌ ಲ್ಯಾಬ್ಸ್‌ ರೇಡಿಯೋ ಟೆಲಿಸ್ಕೋಪ್‌ನಲ್ಲಿ 3 ಕೆಲ್ವಿನ್ ಬ್ಯಾಕ್‌ಗ್ರೌಂಡ್ ಹಿಸ್‌(ಹಿನ್ನೆಲೆಯ ಅಡಚಣೆ) ಅನ್ನು ಕೇಳಿದರು. ಇದು ಅವರಿಗೆ ಮೇಲಿನ ಸಿದ್ಧಾಂತಕ್ಕೆ ಸಾಕ್ಷ್ಯವಾಗಿತ್ತು ಮತ್ತು ವಿಶ್ವದ ವಯಸ್ಸು ಕಂಡುಹಿಡಿಯಲು ಸಹಾಯಕವಾದ ಅನೇಕ ಫಲಿತಾಂಶಗಳಿಗೆ ಆಧಾರವಾಯಿತು. ಸೂಪರ್‌ನೋವ ಎಸ್‌ಎನ್‌ 1987ಎ ಅನ್ನು ಭೂಮಿಯ ಖಗೋಳವಿಜ್ಞಾನಿಗಳು ದೃಶ್ಯೀಯವಾಗಿ ಮತ್ತು ಮತ್ತು ನ್ಯುಟ್ರಿನೋ ಖಗೋಳವಿಜ್ಞಾನದ ವಿಜಯವಾಗಿಯೂ ನೋಡಿದರು. ಕಮಿಯೊಕಂಡೆಯಲ್ಲಿರುವ ಸೌರ ನ್ಯುಟ್ರಿನೋ ಶೋಧಕಗಳು ಇದನ್ನು ಪತ್ತೆಮಾಡಿದವು. ಆದರೆ ಸೋಲಾರ್‌ ನ್ಯುಟ್ರಿನೋ ಹರಿವು ಸೈದ್ಧಾಂತಿಕವಾಗಿ ನಿರೀಕ್ಷಿಸಲಾದ ಪ್ರಮಾಣದ ಒಂದು ಭಾಗ ಮಾತ್ರವಾಗಿತ್ತು. ಈ ವ್ಯತ್ಯಾಸವು ಕಣ (ಪಾರ್ಟಿಕಲ್) ಭೌತವಿಜ್ಞಾನದ ಕೆಲವು ಪ್ರಮಾಣಕ ಮಾದರಿ(ಸ್ಟಾಂಡರ್ಡ್‌ ಮಾಡೆಲ್)ಗಳ ಮೌಲ್ಯಗಳನ್ನು ಬದಲಾಯಿಸಲು ಒತ್ತಾಯಿಸಿತು.

ಜೀವಶಾಸ್ತ್ರ, ವೈದ್ಯಕೀಯ ಮತ್ತು ತಳಿವಿಜ್ಞಾನ

ಆಧುನಿಕ ವಿಜ್ಞಾನ 
ಸೆಮಿ-ಕನ್ಸ್‌ರ್ವೇಟಿವ್ ಡಿಎನ್‌ಎದ ಮರುಪ್ರತಿ

1847ರಲ್ಲಿ, ಹಂಗೇರಿಯಾದ ವೈದ್ಯ ಇಗ್ನಾಕ್ ಫ್ಯುಲೋಪ್ ಸೆಮ್ಮೆಲ್‌ವಿಸ್ ವೈದ್ಯರು ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ಮೊದಲು ತಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಎಂಬುದನ್ನು ಸರಳವಾಗಿ ನಿರೂಪಿಸಿ, ಪ್ರಸೂತಿ ಸಮಯದ ಜ್ವರವನ್ನು ನಾಟಕೀಯ ರೀತಿಯಲ್ಲಿ ಕಡಿಮೆ ಮಾಡಿದನು. ಈ ಶೋಧವು ರೋಗಗಳಿಗೆ ಸೂಕ್ಷ್ಮರೋಗಾಣು ಕಾರಣ ಎಂಬ ಸಿದ್ಧಾಂತಪೂರ್ವಭಾವಿಯಾಯಿತು. ಆದರೆ, ಸೆಮ್ಮೆಲ್‌ವಿಸ್‌ನ ಶೋಧವನ್ನು ಆತನ ಸಮಕಾಲೀನರು ಗ್ರಹಿಸಲಿಲ್ಲ. ನಂತರ ಬ್ರಿಟಿಶ್‌‌ ಶಸ್ತ್ರಚಿಕಿತ್ಸಕ ಜೋಸೆಫ್ ಲಿಸ್ಟರ್‌, ಆಂಟಿಸೆಪ್ಸಿಸ್‌ (ಕೀವುನಾಶಕ) ತತ್ವಗಳನ್ನು ರುಜುವಾತು ಪಡಿಸಿದ ನಂತರವೇ ಸೆಮ್ಮೆಲ್‌ವಿಸ್‌ನ ಶೋಧ ಬಳಕೆಗೆ ಬಂದಿತು. ಲಿಸ್ಟರ್‌ನ ಕಾರ್ಯವು ಫ್ರೆಂಚ್‌ ಜೀವಶಾಸ್ತ್ರಜ್ಞ ಲೂಯಿಸ್ ಪ್ಯಾಶ್ಚರ್‌ನ ಪ್ರಮುಖ ಶೋಧಗಳನ್ನು ಆಧರಿಸಿತ್ತು. ಪ್ಯಾಶ್ಚರ್‌ ರೋಗಗಳಿಗೆ ಮತ್ತು ಸೂಕ್ಷ್ಮಾಣುಗಳಿಗೆ (ಮೈಕ್ರೋಆರ್ಗಾನಿಸಮ್ಸ್‌) ಸಂಬಂಧವಿದೆಯೆಂದು ರುಜುವಾತುಪಡಿಸಿದ್ದು ವೈದ್ಯಕೀಯದಲ್ಲಿ ಕ್ರಾಂತಿಯೆಬ್ಬಿಸಿತು. ಆತ ನಿರೋಧಕ(ತಡೆಗಟ್ಟುವ) ವೈದ್ಯಕೀಯದಲ್ಲಿ ಅತ್ಯಂತ ಮಹತ್ವದ ವಿಧಾನಗಳಲ್ಲಿ ಒಂದನ್ನು ಕಂಡುಹಿಡಿದ. ಅದೆಂದರೆ ಆತ 1880ರಲ್ಲಿ ರೇಬಿಸ್‌(ಹುಚ್ಚುನಾಯಿ ಕಡಿತ) ವಿರುದ್ಧ ಲಸಿಕೆ(ವ್ಯಾಕ್ಸೀನ್‌)ಯನ್ನು ಕಂಡುಹಿಡಿದಿದ್ದು. ಪ್ಯಾಶ್ಚರ್‌ನು ಹಾಲು ಮತ್ತು ಇನ್ನಿತರ ಆಹಾರಗಳ ಮೂಲಕ ರೋಗಗಳು ಹರಡದಂತೆ ತಡೆಯಲು ಪ್ಯಾಶ್ಚರೀಕರಣ(ಪ್ಯಾಶ್ಚರೈಸೇಶನ್‌) ಎಂಬ ಪ್ರಕ್ರಿಯೆಯನ್ನು ಕಂಡುಹಿಡಿದನು. ಎಲ್ಲ ವಿಜ್ಞಾನಗಳಲ್ಲಿ ಪ್ರಾಯಶಃ ಅತ್ಯಂತ ಪ್ರಧಾನವಾದ, ವಿವಾದಾತ್ಮಕವಾದ ಮತ್ತು ಒಪ್ಪಲು ಅಸಾಧ್ಯವಾದ ಸಿದ್ಧಾಂತವೆಂದರೆ ಬ್ರಿಟಿಶ್‌‌ ನಿಸರ್ಗವಾದಿ [[ಚಾರ್ಲ್ಸ್ ಡಾರ್ವಿನ್|ಚಾರ್ಲ್ಸ್ ಡಾರ್ವಿನ್ 1859ರಲ್ಲಿ ತನ್ನ ಆನ್‌ ದಿ ಒರಿಜಿನ್ ಆಫ್‌ ಸ್ಪೀಶೀಸ್ ಕೃತಿಯಲ್ಲಿ ಪ್ರತಿಪಾದಿಸಿದ ]]ನೈಸರ್ಗಿಕ ಆಯ್ಕೆಯ ಮೂಲಕ ವಿಕಾಸವಾಯಿತು ಎಂಬ ಸಿದ್ಧಾಂತ. ಡಾರ್ವಿನ್‌ ಮನುಷ್ಯರನ್ನೂ ಒಳಗೊಂಡು, ಎಲ್ಲ ಸಜೀವಿಗಳ ಲಕ್ಷಣಗಳು ಸುದೀರ್ಘ ಕಾಲದ ಅವಧಿಯಲ್ಲಿ ನೈಸರ್ಗಿಕ ಪ್ರಕ್ರಿಯೆಗಳಿಂದ ಆಕಾರಗೊಂಡಿವೆ ಎಂದು ಪ್ರತಿಪಾದಿಸಿದನು. ಶುದ್ಧ ವಿಜ್ಞಾನದ ಹೊರಗಿನ ಕ್ಷೇತ್ರಗಳಲ್ಲಿ ವಿಕಾಸದ ಪರಿಣಾಮ ಎಂದರೆ ಸಮಾಜದ ಭಿನ್ನ ರಂಗಗಳಿಂದ ವಿರೋಧ ಮತ್ತು ಬೆಂಬಲ ಎರಡೂ ವ್ಯಕ್ತವಾಯಿತು. ಜೊತೆಗೆ "ವಿಶ್ವದಲ್ಲಿ ಮನುಷ್ಯನ ಸ್ಥಾನ"ದ ಜನಪ್ರಿಯ ಅರ್ಥೈಸಿಕೊಳ್ಳುವಿಕೆಯನ್ನೂ ಇದು ಪ್ರಭಾವಿಸಿತು. ಆದಾಗ್ಯೂ, ಡಾರ್ವಿನ್ನನ ವಿಕಾಸವಾದ ಮಾದರಿಗಳು ತಳಿವಿಜ್ಞಾನದ ಅಧ್ಯಯನವನ್ನು ನೇರವಾಗಿ ಪರಿಣಾಮಿಸಲಿಲ್ಲ. ಮೊರವಿಯದ ಸನ್ಯಾಸಿ ಗ್ರಿಗೊರ್‌ ಮೆಂಡಲ್‌ 1866ರಲ್ಲಿ ಆನುವಂಶೀಯತೆಯ ನಿಯಮಗಳನ್ನು ಅಭಿವೃದ್ಧಿಪಡಿಸಿದ್ದನ್ನು 1900ರಲ್ಲಿ ಪುನಾಶೋಧಿಸಿದ ನಂತರ, 20ನೇ ಶತಮಾನದ ಆರಂಭದಲ್ಲಿ, ಆನುವಂಶೀಯತೆಯ ಅಧ್ಯಯನವು ಒಂದು ಪ್ರಮುಖ ಶೋಧವಾಯಿತು, ಮೆಂಡಲ್‌ನ ನಿಯಮಗಳು ತಳಿವಿಜ್ಞಾನದ ಅಧ್ಯಯನಕ್ಕೆ ಆರಂಭವನ್ನು ಒದಗಿಸಿದವು, ಅದು ವೈಜ್ಞಾನಿಕ ಮತ್ತು ಕೈಗರಿಕಾ ಸಂಶೋಧನೆ, ಎಡರಲ್ಲಿಯೂ ಸಂಶೋಧನೆಯ ಪ್ರಮುಖ ಕ್ಷೇತ್ರವಾಯಿತು. 1953ರ ಸುಮಾರಿಗೆ, ಜೇಮ್ಸ್‌ ಡಿ ವ್ಯಾಟ್ಸನ್, ಫ್ರಾನ್ಸಿಸ್ ಕ್ರಿಕ್ ಮತ್ತು ಮಾರಿಸ್ ವಿಲ್ಕಿನ್ಸ್ ಡಿಎನ್‌ಎದ ಮೂಲ ರಚನೆಯನ್ನು ಸ್ಪಷ್ಟವಾಗಿ ತೋರಿಸಿದರು. ಡಿಎನ್‌ಎ ಒಂದು ತಳಿವಿಜ್ಞಾನದ ಅಂಶವಾಗಿದ್ದು, ಎಲ್ಲ ರೂಪದಲ್ಲಿ ಜೀವವು ಅಭಿವ್ಯಕ್ತಗೊಳ್ಳಲು ಕಾರಣವಾಗಿದೆ. 20ನೇ ಶತಮಾನದ ಕೊನೆಯಲ್ಲಿ, ತಳಿವಿಜ್ಞಾನದ ಎಂಜಿನಿಯರಿಂಗ್ ಮೊಟ್ಟಮೊದಲ ಬಾರಿಗೆ ವಾಸ್ತವಿಕವಾಯಿತು ಮತ್ತು 1990ರಲ್ಲಿ ಇಡೀ ಮಾನವ ಜೀನೋಮ್‌(ಮಾನವ ಜೀನೋಮ್ ಯೋಜನೆ) ನಕಾಶೆ ಮಾಡಲು ಬೃಹತ್‌ ಅಂತಾರಾಷ್ಟ್ರೀಯ ಪ್ರಯತ್ನ ಆರಂಭವಾಯಿತು. ಇದಕ್ಕೆ ಅಗಾಧವಾದ ವೈದ್ಯಕೀಯ ಲಾಭಗಳಿವೆ ಎನ್ನಲಾಗಿದೆ.

ಪರಿಸರವಿಜ್ಞಾನ

ಆಧುನಿಕ ವಿಜ್ಞಾನ 
ಚಂದ್ರನ ಮೇಲೆ ಭೂಮಿ ಕಂಡಂತೆ, ಅಪೋಲೋ 8, ನಾಸಾ. ಈ ಚಿತ್ರವು ಭೂಮಿಯ ಸೀಮಿತತೆಯ ಕುರಿತು ಮತ್ತು ಅದರ ನೈಸರ್ಗಿಕ ಸಂಪನ್ಮೂಲಗಳ ಮಿತಿಗಳ ಕುರಿತು ಅರಿವು ಹುಟ್ಟುಹಾಕಲು ಸಹಾಯಕವಾಯಿತು.

ಪರಿಸರವಿಜ್ಞಾನ ಅದ್ಯಯನದ ಮೂಲವು ಸಾಮಾನ್ಯವಾಗಿ ಡಾರ್ವಿನ್ ವಿಕಾಸವಾದ ಮತ್ತು ಹಂಬೊಲ್ಡ್‌ಟಿಯನ್ ಜೀವಭೂವಿಜ್ಞಾನ ದಲ್ಲಿ 19ನೇ ಶತಮಾನದ ಕೊನೆಯಭಾಗ ಮತ್ತು 20ನೇ ಶತಮಾನದ ಆರಂಭದಲ್ಲಿ ನಡೆದ ಬೆಳವಣಿಗೆಗಳಲ್ಲಿ ಇದೆ ಎನ್ನಬಹುದು. ಪರಿಸರವಿಜ್ಞಾನದಲ್ಲಿ ಆದ ಬೆಳವಣಿಗೆಗಳಿಗೆ ಅಷ್ಟೇ ಮಹತ್ವವೆನ್ನಿಸಿದ ಕೆಲವು ಅಧ್ಯಯನಗಳು ಎಂದರೆ, ಸೂಕ್ಷಾಣುಜೀವಶಾಸ್ತ್ರ(ಮೈಕ್ರೋಬಯಾಲಜಿ) ಮತ್ತು ಮಣ್ಣುವಿಜ್ಞಾನ(ಸಾಯಿಲ್ ಸೈನ್ಸ್)—ವಿಶೇಷವಾಗಿ ಲೂಯಿಸ್ ಪ್ಯಾಶ್ಚರ್ ಮತ್ತು ಫ್ರೆಡ್‌ಲ್ಯಾಂಡ್ ಕೋನ್ ಅವರ ಅಧ್ಯಯನದಲ್ಲಿ ಪ್ರಮುಖವಾಗಿದ್ದ ಜೀವ ಚಕ್ರ ಪರಿಕಲ್ಪನೆ. ಎಕಾಲಜಿ(ಪರಿಸರವಿಜ್ಞಾನ) ಪದವನ್ನು ಮೊದಲು ಹುಟ್ಟುಹಾಕಿದ್ದು ಅರ್ನೆಸ್ಟ್ ಹೇಕಲ್. ಸಾಮಾನ್ಯವಾಗಿ ನಿಸರ್ಗದ ಕುರಿತು ಈತನ ಸಮಗ್ರ ದೃಷ್ಟಿಕೋನವು (ಮತ್ತು ನಿರ್ದಿಷ್ಟವಾಗಿ ಡಾರ್ವಿನ್‌ ಸಿದ್ಧಾಂತದ ಕುರಿತು) ಪರಿಸರದ ಚಿಂತನೆಯನ್ನು ಹರಡುವಲ್ಲಿ ಬಹಳ ಮುಖ್ಯವಾಗಿವೆ. 1930ರಲ್ಲಿ, ಆರ್ಥರ್‌ ಟ್ಯಾನ್ಸ್‌ಲೆ ಮತ್ತು ಇತರರು ಪರಿಸರ ವ್ಯವಸ್ಥೆ ಪರಿಸರವಿಜ್ಞಾನ ಕ್ಷೇತ್ರವನ್ನು ಅಭಿವೃದ್ಧಿಪಡಿಸತೊಡಗಿದರು. ಇದು ಪ್ರಾಯೋಗಿಕ ಮಣ್ಣು ವಿಜ್ಞಾನವನ್ನು ಶಕ್ತಿಯ ಶರೀರ ವಿಜ್ಞಾನದ ಪರಿಕಲ್ಪನೆಗಳು ಮತ್ತು ಕ್ಷೇತ್ರ ಜೀವಶಾಸ್ತ್ರದ ತಂತ್ರಗಳೊಂದಿಗೆ ಸೇರಿಸಿ, ಈ ಹೊಸ ಅದ್ಯಯನವನ್ನು ಆರಂಭಿಸಿದ್ದರು. 20ನೇ ಶತಮಾನದಲ್ಲಿ ಪರಿಸರವಿಜ್ಞಾನದ ಇತಿಹಾಸವು ಪರಿಸರವಾದಿತ್ವದೊಂದಿಗೆ ಗಾಢವಾದ ಸಂಬಂಧ ಹೊಂದಿತ್ತು; 1960ರಲ್ಲಿ ಗೈಯಾ ಸಿದ್ಧಾಂತ ಮತ್ತು ತೀರಾ ಇತ್ತೀಚೆಗೆ ಆಳವಾದ ಪರಿಸರವಿಜ್ಞಾನ(ಡೀಪ್‌ ಎಕಾಲಜಿ)ದ ವೈಜ್ಞಾನಿಕ-ಧಾರ್ಮಿಕ ಆಂದೋಲನವು ಈ ಎರಡನ್ನೂ ತುಂಬ ಹತ್ತಿರ ಬೆಸೆಯಿತು.

ಸಾಮಾಜಿಕ ವಿಜ್ಞಾನ

ಭೌತಿಕ ವಿಜ್ಞಾನಗಳಲ್ಲಿ ವೈಜ್ಞಾನಿಕ ವಿಧಾನಗಳ ಯಶಸ್ವೀ ಬಳಕೆಯು ಮನುಷ್ಯ ಪ್ರಯತ್ನದ ಅನೇಕ ಕ್ಷೇತ್ರಗಳನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅದೇ ವಿಧಾನವನ್ನು ಅಳವಡಿಸಬಹುದು ಎಂಬ ವಿಚಾರಕ್ಕೆ ಕರೆದೊಯ್ದಿತು. ಈ ಪ್ರಯತ್ನದಲ್ಲಿಯೇ ಸಾಮಾಜಿಕ ವಿಜ್ಞಾನವನ್ನು ಅಭಿವೃದ್ಧಿಪಡಿಸಲಾಯಿತು.

ಪ್ರಾಚೀನ ಭಾರತದಲ್ಲಿ ರಾಜಕೀಯ ವಿಜ್ಞಾನ

ಪ್ರಾಚೀನ ಭಾರತದ ರಾಜಕೀಯ ವಿಜ್ಞಾನ ಕುರಿತು ಅತ್ಯಂತ ತೀವ್ರವಾಗಿ ಅಧ್ಯಯನ ಮಾಡಲಾದ ಸಾಹಿತ್ಯಗಳಲ್ಲಿ ಒಂದು ಎಂದರೆ ರಾಜತಾಂತ್ರಿಕತೆ, ಆರ್ಥಿಕತೆ ನೀತಿ ಮತ್ತು ಸೇನಾ ರಕ್ಷಣಾನೀತಿ ಕುರಿತು ಇರುವ ಪ್ರಾಚೀನ ಭಾರತೀಯ ಗ್ರಂಥ. ಇದನ್ನು ಬರೆದಿರುವುದು ಕೌಟಿಲ್ಯ ಮತ್ತು ವಿಷ್ಣುಗುಪ್ತViṣhṇugupta, ಇವರಿಬ್ಬರನ್ನೂ ಸಾಮಾನ್ಯವಾಗಿ ಚಾಣಕ್ಯ ಎಂದು ಗುರುತಿಸಲಾಗುತ್ತದೆChāṇakya (ಸುಮಾರು ಕ್ರಿ.ಪೂ.350–-283). ಈ ಗ್ರಂಥದಲ್ಲಿ, ಜನರು, ರಾಜ, ಪ್ರಭುತ್ವ, ಸರ್ಕಾರಿ ಮೇಲಾಧಿಕಾರಿಗಳು, ದೇಶಗಳು, ಶತ್ರುಗಳು, ಆಕ್ರಮಣಕಾರಿಗಳು ಮತ್ತು ಸಂಸ್ಥೆಗಳ ವರ್ತನೆಗಳು ಮತ್ತು ಪರಸ್ಪರ ಸಂಬಂಧಗಳನ್ನು ವಿಶ್ಲೇಷಿಸಿ, ದಾಖಲಿಸಲಾಗಿದೆ. ರೋಜರ್‌ ಬೋಶ್‌ ಅರ್ಥಶಾಸ್ತ್ರ ವನ್ನು "ರಾಜಕೀಯ ವ್ಯಾವಹಾರಿಕತೆಯ ಒಂದು ಕೃತಿ, ರಾಜಕೀಯ ಜಗತ್ತು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸುವ ಒಂದು ಕೃತಿಯೇ ಹೊರತು ಅದು ಹೇಗೆ ಕೆಲಸ ಮಾಡಬೇಕು ಎಂದು ಹೇಳುವ ಕೃತಿಯಲ್ಲ, ಒಬ್ಬ ರಾಜ ರಾಜ್ಯವನ್ನು ಉಳಿಸಿಕೊಳ್ಳುವುದನ್ನು ಮುಂದುವರೆಸಿಕೊಂಡು ಹೋಗಲು ಮತ್ತು ಸಾಮಾನ್ಯರ ಒಳಿತಿಗಾಗಿ ಏನೆಲ್ಲ ಲೆಕ್ಕಾಚಾರಗಳನ್ನು ಮಾಡಬೇಕು ಮತ್ತು ಕೆಲವೊಮ್ಮೆ ಹೇಗೆ ಕ್ರೂರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ವಿಶದವಾಗಿ ವಿವರಿಸುವ ಕೃತಿ" ಎಂದು ವಿವರಿಸಿದ್ದಾರೆ.

ಪಾಶ್ಚಾತ್ಯ ಮತ್ತು ಇಸ್ಲಾಮಿಕ್ ಸಂಸ್ಕೃತಿಗಳಲ್ಲಿ ರಾಜಕೀಯ ವಿಜ್ಞಾನ

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ರಾಜಕೀಯದ ಅಧ್ಯಯನವು ಮೊದಲು ಪ್ರಾಚೀನ ಗ್ರೀಸ್‌ನಲ್ಲಿ ಕಂಡುಬರುತ್ತದೆ. ಸಾಮಾಜಿಕ ವಿಜ್ಞಾನಗಳ ಅರ್ಥದಲ್ಲಿ ನೋಡಿದರೆ ರಾಜಕೀಯ ವಿಜ್ಞಾನದ ಆಗಮನವು ಬಹಳ ತಡವಾಗಿದ್ದಿತು ಎನ್ನಬಹುದು.[ಸೂಕ್ತ ಉಲ್ಲೇಖನ ಬೇಕು]. ಆದರೆ ಈ ಅಧ್ಯಯನಕ್ಕೆ ಪೂರ್ವಭಾವಿಯಾಗಿ ಸ್ಪಷ್ಟವಾದ ಹಿಂದಿನ ಅಧ್ಯಯನಗಳಿದ್ದವು, ಅವೆಂದರೆ ನೈತಿಕ ತತ್ವಶಾಸ್ತ್ರ, ರಾಜಕೀಯ ತತ್ವಶಾಸ್ತ್ರ, ರಾಜಕೀಯ ಆರ್ಥಿಕತೆ, ಇತಿಹಾಸ ಮತ್ತು ಆದರ್ಶ ಸ್ವರೂಪದ ಸರ್ಕಾರದ ಲಕ್ಷಣಗಳು ಮತ್ತು ಕಾರ್ಯನಿರ್ವಹಣೆಗಳನ್ನು ತರ್ಕಿಸುವ ಪ್ರಮಾಣಕ ನಿರ್ಣಯಗಳೊಂದಿಗೆ ಸಂಬಂಧಿಸಿದ ಇನ್ನಿತರ ಕ್ಷೇತ್ರಗಳು. ಪ್ರತಿ ಐತಿಹಾಸಿಕ ಕಾಲಘಟ್ಟದಲ್ಲಿಯೂ ಮತ್ತು ಸುಮಾರು ಪ್ರತಿ ಭೌಗೋಳಿಕ ಪ್ರದೇಶದಲ್ಲಿಯೂ, ಒಂದಿಷ್ಟು ಜನರು ರಾಜಕೀಯವನ್ನು ಅಧ್ಯಯನ ಮಾಡುವುದನ್ನು ಮತ್ತು ರಾಜಕೀಯ ಅರ್ಥೈಸಿಕೊಳ್ಳುವಿಕೆ ಅಧಿಕಗೊಳ್ಳುವುದನ್ನು ನಾವು ನೋಡುತ್ತೇವೆ. ರಾಜಕೀಯದ ಬೇರುಗಳು ಪೂರ್ವೇತಿಹಾಸದಲ್ಲಿ ಇರಬಹುದು. ಆದರೂ ಐರೋಪ್ಯ ರಾಜಕೀಯದ ಹಿಂದಿನ ಅಧ್ಯಯನಗಳ ಬೇರುಗಳು ಪ್ಲೇಟೋ ಮತ್ತು ಅರಿಸ್ಟಾಟಲ್‌ಗಿಂತಲೂ ಪೂರ್ವದಲ್ಲಿತ್ತು, ವಿಶೇಷವಾಗಿ ಹೋಮರ್‌, ಹೆಸಿಯಡ್, ಥಸಿಡೈಡ್ಸ್, ಕ್ಸೆನೋಫಾನ್, ಮತ್ತು ಯುರಿಪಿಡೀಸ್ ಅವರ ಕೃತಿಗಳಲ್ಲಿ ಈ ಬೇರುಗಳನ್ನು ಗುರುತಿಸಬಹುದು. ನಂತರದಲ್ಲಿ, ಪ್ಲೇಟೋ ರಾಜಕೀಯ ವ್ಯವಸ್ಥೆಗಳನ್ನು ವಿಶ್ಲೇಷಿಸಿದನು. ಸಾಹಿತ್ಯಕ- ಮತ್ತು ಇತಿಹಾಸ-ದ ಒಲವು ಹೊಂದಿದ ಅಧ್ಯಯನದ ವಿಶ್ಲೇಷಣೆಯಿಂದ ಸಾರಾಂಶವನ್ನು ಪಡೆದು, ಅದನ್ನು ಒಂದು ದೃಷ್ಟಿಕೋನಕ್ಕೆ ಅನ್ವಯಿಸಿದರು, ಅದನ್ನು ನಾವು ತತ್ವಶಾಸ್ತ್ರಕ್ಕೆ ಸಮೀಪವಾದ ದೃಷ್ಟಿಕೋನದಂತೆ ಅರ್ಥಮಾಡಿಕೊಳ್ಳಬಹುದು. ಹಾಗೆಯೇ, ಅರಿಸ್ಟಾಟಲ್‌ ಪ್ಲೇಟೋನ ವಿಶ್ಲೇಷಣೆಯಿಂದ ತನ್ನ ದೃಷ್ಟಿಕೋನವನ್ನು ಬೆಳೆಸಿದನು, ಆತ ಐತಿಹಾಸಿಕ ಪ್ರಯೋಗವಾದಿ ಪುರಾವೆಗಳನ್ನೂ ತನ್ನ ವಿಶ್ಲೇಷಣೆಯಲ್ಲಿ ಒಳಗೊಂಡಿದ್ದನು. ರೋಮ್‌ ಆಳ್ವಿಕೆಯಲ್ಲಿ, ಪ್ರಸಿದ್ಧ ಇತಿಹಾಸಕಾರರಾದ ಪಾಲಿಬಿಯಸ್, ಲಿವಿ ಮತ್ತು ಪ್ಲುಟಾರ್ಕ್‌ ರೋಮನ್‌ ಗಣತಂತ್ರದ ಮತ್ತು ಸಂಸ್ಥೆಗಳ ಉನ್ನತಿಯನ್ನು ಹಾಗೂ ಬೇರೆ ದೇಶಗಳ ಇತಿಹಾಸವನ್ನು ದಾಖಲಿಸಿದ್ದರು. ರಾಜತಾಂತ್ರಿಕರಾದ ಜ್ಯುಲಿಯೆಸ್ ಸೀಸರ್‌, ಸಿಸೆರೋ ಮತ್ತು ಇತರರು ನಮಗೆ ಗಣತಂತ್ರ, ರೋಮ್‌ ಸಾಮ್ರಾಜ್ಯ ಮತ್ತು ಯುದ್ಧಗಳ ರಾಜಕೀಯದ ಉದಾಹರಣೆಗಳನ್ನು ಒದಗಿಸಿದ್ದಾರೆ. ಈ ಅವಧಿಯಲ್ಲಿ ರಾಜಕೀಯದ ಅಧ್ಯಯನವು ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು, ಆಡಳಿತದ ವಿಧಾನಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸರ್ಕಾರಗಳ ಕಾರ್ಯನಿರ್ವಹಣೆಯನ್ನು ವಿವರಿಸುವುದರತ್ತ ಒಲವು ಹೊಂದಿತ್ತು. ರೋಮನ್ ಸಾಮ್ರಾಜ್ಯದ ಪತನದೊಂದಿಗೆ, ರಾಜಕೀಯ ಅಧ್ಯಯನಗಳಿಗೆ ಹೆಚ್ಚು ಚದುರಿದ ಕ್ಷೇತ್ರಗಳು ಹುಟ್ಟಿಕೊಂಡವು. ಏಕದೈವವಾದ ವಿಚಾರದ ಹುಟ್ಟು ಮತ್ತು, ವಿಶೇಷವಾಗಿ ಪಾಶ್ಚಾತ್ಯ ಪರಂಪರೆಗೆ ಕ್ರೈಸ್ತಮತವು, ರಾಜಕೀಯ ಮತ್ತು ರಾಜಕೀಯ ಕ್ರಿಯೆಗಳಿಗೆ ಒಂದು ಹೊಸ ಸ್ಥಳಾವಕಾಶವನ್ನು ಒದಗಿಸಿತು[ಸೂಕ್ತ ಉಲ್ಲೇಖನ ಬೇಕು]. ಮಧ್ಯಯುಗೀನ ಕಾಲದಲ್ಲಿ, ರಾಜಕೀಯದ ಅಧ್ಯಯನವು ಚರ್ಚ್‌ಗಳು ಮತ್ತು ನ್ಯಾಯಾಲಯಗಳಲ್ಲಿ ವ್ಯಾಪಕವಾಗಿದ್ದಿತು. ಅಗಸ್ಟಿನ್‌ ಆಫ್‌ ಹಿಪ್ಪೊನ ಕೃತಿ ದಿ ಸಿಟಿ ಆಫ್‌ ಗಾಡ್ ಪ್ರಸಕ್ತ ತತ್ವಶಾಸ್ತ್ರಗಳು ಮತ್ತು ರಾಜಕೀಯ ಪರಂಪರೆಗಳನ್ನು ಕ್ರೈಸ್ತಮತದೊಂದಿಗೆ ವಿಶ್ಲೇಷಿಸಿತು. ಜೊತೆಗೆ ಯಾವುದು ಧಾರ್ಮಿಕ ಮತ್ತು ಯಾವುದು ರಾಜಕೀಯ ಎಂಬುದರ ನಡುವಣ ಎಲ್ಲೆಗಳನ್ನು ಮರುವ್ಯಾಖ್ಯಾನಿಸಿತು. ಚರ್ಚ್‌ ಮತ್ತು ಪ್ರಭುತ್ವದ ಸುತ್ತಲೂ ಇದ್ದ ಹೆಚ್ಚಿನ ರಾಜಕೀಯ ಪ್ರಶ್ನೆಗಳನ್ನು ಈ ಕಾಲದಲ್ಲಿ ಸ್ಪಷ್ಟೀಕರಿಸಿ, ವಿರೋಧಿಸಲಾಯಿತು. ಮಧ್ಯ ಪ್ರಾಚ್ಯದಲ್ಲಿ ಮತ್ತು ನಂತರದಲ್ಲಿ ಇನ್ನಿತರ ಇಸ್ಲಾಮಿಕ್ ಪ್ರದೇಶಗಳಲ್ಲಿ, ರುಬಾಯತ್‌ ಆಫ್‌ ಉಮರ್‌ ಖಯ್ಯಾಮ್ ಮತ್ತು ಫಿರ್ದೋಸಿಯ ಎಪಿಕ್ ಆಪ್‌ ಕಿಂಗ್ಸ್‌ (ಮಹಾಕಾವ್ಯಗಳ ರಾಜರು) ಕೃತಿಗಳು ರಾಜಕೀಯ ವಿಶ್ಲೇಷಣೆಗಳ ಪುರಾವೆಯನ್ನು ಒದಗಿಸಿದವು. ಅವಿಸೆನ್ನ ಮತ್ತು ನಂತರ ಮೈಮೊನಿಡೆಸ್ ಮತ್ತು ಅವೆರ್ರೊಸ್ ಅವರಂತಹ ಇಸ್ಲಾಮಿಕ್ ಅರಿಸ್ಟಾಟಲ್‌ ಅನುಯಾಯಿಗಳು ಅರಿಸ್ಟಾಟಲ್‌ನ ಕೃತಿಗಳಿಗೆ ವ್ಯಾಖ್ಯಾನವನ್ನು ಬರೆಯುತ್ತ, ಅರಿಸ್ಟಾಟಲ್‌ನ ವಿಶ್ಲೇಷಣೆ ಮತ್ತು ಪ್ರಾಯೋಗಿಕ ವಿಧಾನದ ಪರಂಪರೆಯನ್ನು ಮುಂದುವರೆಸಿದರು. ಇಟಲಿಯ ನವೋದಯ(ಇಟಾಲಿಯನ್ ರಿನೇಸಾನ್ಸ್)ದ ಅವಧಿಯಲ್ಲಿ, ನಿಕೊಲೊ ಮಚಿಯವೆಲ್ಲಿಯು ರಾಜಕೀಯ ಸಂಸ್ಥೆಗಳು ಮತ್ತು ವ್ಯಕ್ತಿಗಳ ನೇರ ಪ್ರಯೋಗವಾದಿ ವೀಕ್ಷಣೆಯ ಕುರಿತ ಆಧುನಿಕ ರಾಜಕೀಯ ವಿಜ್ಞಾನಕ್ಕೆ ಒತ್ತು ನೀಡಬೇಕೆಂಬುದನ್ನು ನಿರೂಪಿಸಿದನು. ನಂತರ, ಜ್ಞಾನೋದಯದ ಅವಧಿಯಲ್ಲಿ ವೈಜ್ಞಾನಿಕ ಪಲ್ಲಟವು ಪ್ರಮಾಣಕ ನಿರ್ಣಯಗಳ ಆಚೆಗೂ ರಾಜಕೀಯದ ಅಧ್ಯಯನವನ್ನು ಇನ್ನಷ್ಟು ಬೆಳೆಸಿತು [ಸೂಕ್ತ ಉಲ್ಲೇಖನ ಬೇಕು]. ವಿಶೇಷವಾಗಿ, ಪ್ರಭುತ್ವದ ವಿಷಯಗಳ ಅಧ್ಯಯನಕ್ಕಾಗಿ, ಸಂಖ್ಯಾಶಾಸ್ತ್ರ ಅಧ್ಯಯನವನ್ನು ಮತಗಣನೆ ಮತ್ತು ಮತದಾನಕ್ಕೆ ಅನ್ವಯಿಸಲಾಯಿತು.

ಆಧುನಿಕ ರಾಜಕೀಯ ವಿಜ್ಞಾನ

20ನೇ ಶತಮಾನದಲ್ಲಿ, ಸಿದ್ಧಾಂತಗಳು, ವರ್ತನ-ವಾದ ಮತ್ತು ಅಂತಾರಾಷ್ಟ್ರೀಯ 'ರಾಜಕೀಯ-ವಿಜ್ಞಾನ'ದ ಬಹುಮುಖಿ ಆಯಾಮಕ್ಕೆ ಕಾರಣವಾಯಿತು, ಜೊತೆಗೆ ಉಪ-ಅಧ್ಯಯನಗಳಾದ ತಾರ್ಕಿಕ ಆಯ್ಕೆ ಸಿದ್ಧಾಂತ, ಮತದಾನ ಸಿದ್ಧಾಂತ, ಗೇಮ್‌ ಸಿದ್ಧಾಂತ (ಇದನ್ನು ಅರ್ಥಶಾಸ್ತ್ರದಲ್ಲಿಯೂ ಬಳಸುತ್ತಾರೆ), ಮತದಾನಶಾಸ್ತ್ರ, ರಾಜಕೀಯ ಭೂವಿಜ್ಞಾನ /ಭೂರಾಜಕೀಯ, ರಾಜಕೀಯ ಮನಶ್ಯಾಸ್ತ್ರ/ರಾಜಕೀಯ ಸಮಾಜ ಶಾಸ್ತ್ರ, ರಾಜಕೀಯ ಅರ್ಥಶಾಸ್ತ್ರ, ನೀತಿ ವಿಶ್ಲೇಷಣೆ, ಸಾರ್ವಜನಿಕ ಆಡಳಿತ, ತುಲನಾತ್ಮಕ ರಾಜಕೀಯ ವಿಶ್ಲೇಷಣೆ ಮತ್ತು ಶಾಂತಿ ಅಧ್ಯಯನಗಳು/ಬಿಕ್ಕಟ್ಟು ವಿಶ್ಲೇಷಣೆ ಇತ್ಯಾದಿಗಳನ್ನು ಒಳಗೊಳ್ಳತೊಡಗಿತು. 21ನೇ ಶತಮಾನದ ಆರಂಭದಲ್ಲಿ, ರಾಜಕೀಯ ವಿಜ್ಞಾನಿಗಳು ಹೆಚ್ಚೆಚ್ಚು ಅನುಮಾತ್ಮಕ ಮಾದರಿರೂಪಣೆ ಮತ್ತು ವ್ಯವಸ್ಥಿತ ಪ್ರಯೋಗವಾದಿ ಪರಿಶೀಲನೆ ತಂತ್ರಗಳನ್ನು (ಪರಿಮಾಣಾತ್ಮಕ ವಿಧಾನಗಳು) ಅಳವಡಿಸಿಕೊಳ್ಳತೊಡಗಿದರು, ಇದು ರಾಜಕೀಯ ವಿಜ್ಞಾನವನ್ನು ವೈಜ್ಞಾನಿಕ ಮುಖ್ಯವಾಹಿನಿಗೆ ಹೆಚ್ಚು ಹತ್ತಿರವಾಗಿಸತೊಡಗಿತು[ಸೂಕ್ತ ಉಲ್ಲೇಖನ ಬೇಕು].

ಭಾಷಾಶಾಸ್ತ್ರಗಳು

ಐತಿಹಾಸಿಕ ಭಾಷಾಶಾಸ್ತ್ರಗಳು 18ನೇ ಶತಮಾನದ ಕೊನೆಯಲ್ಲಿ ಸ್ವತಂತ್ರ ಅದ್ಯಯನದ ಕ್ಷೇತ್ರವಾಗಿ ಹೊರಹೊಮ್ಮಿತು. ಸರ್‌ ವಿಲಿಯಂ ಜೋನ್ಸ್ ಸಂಸ್ಕೃತ, ಪರ್ಷಿಯನ್‌‌, ಗ್ರೀಕ್‌‌, ಲ್ಯಾಟಿನ್, ಗೊತಿಕ್ ಮತ್ತು ಸೆಲ್ಟಿಕ್ ಭಾಷೆಗಳು ಒಂದೇ ಸಾಮಾನ್ಯ ನೆಲೆಯನ್ನು ಹಂಚಿಕೊಂಡಿವೆ ಎಂಬ ವಿಚಾರವನ್ನು ಮುಂದಿಟ್ಟನು. ಜೋನ್ಸ್‌ನ ನಂತರ, 19ನೇ ಶತಮಾನ ಮತ್ತು 20ನೇ ಶತಮಾನದ ಉದ್ದಕ್ಕೂ ವಿಶ್ವದ ಎಲ್ಲ ಭಾಷೆಗಳ ಪೂರ್ಣಪಟ್ಟಿ ಮಾಡಲು ಪ್ರಯತ್ನ ನಡೆದೇ ಇತ್ತು. ಫರ್ಡಿನಾಂಡ್ ಡೆ ಸಾಸ್ಸುರೆಯ ಕೋರ್ಸ್‌ ಡೆ ಲಿಂಗ್ವಿಸ್ಟಿಕ್ ಜೆನೆರಲೆ ಕೃತಿ ಪ್ರಕಟಗೊಂಡಿದ್ದು ವಿವರಣಾತ್ಮಕ ಭಾಷಾಶಾಸ್ತ್ರಗಳ ಅಭಿವೃದ್ಧಿಯನ್ನು ಉಂಟುಮಾಡಿತು. ವಿವರಣಾತ್ಮಕ ಭಾಷಾಶಾಸ್ತ್ರಗಳು, ಮತ್ತು ಅದಕ್ಕೆ ಸಂಬಂಧಿತ ರಾಚನಿಕ ಭಾಷಾವಿಜ್ಞಾನದ ಆಂದೋಲನಗಳು ಭಾಷೆಗಳ ನಡುವಣ ವ್ಯತ್ಯಾಸವನ್ನು ಮಾತ್ರ ವಿವರಿಸುವ ಬದಲಿಗೆ ಕಾಲಾಂತರದಲ್ಲಿ ಹೇಗೆ ಭಾಷೆಗಳು ಬದಲಾದವು ಎಂಬುದರತ್ತ ಭಾಷಾಶಾಸ್ತ್ರಗಳು ಗಮನ ಕೇಂದ್ರೀಕರಿಸುವಂತೆ ಮಾಡಿದವು. ನೋಮ್‌ ಚೋಮ್‌ಸ್ಕಿ 1950ರಲ್ಲಿ ಉತ್ಪಾದಕರ ಭಾಷಾಶಾಸ್ತ್ರಗಳು ಎಂಬ ಮತ್ತೊಂದು ಅಧ್ಯಯನವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಭಾಷಾಶಾಸ್ತ್ರವನ್ನು ಇನ್ನಷ್ಟು ವೈವಿಧ್ಯಗೊಳಿಸಿದರು. ಅವರ ಪ್ರಯತ್ನವು ಮೌಲಿಕ ವಾಕ್ಯ ರಚನೆಯ ಸೂತ್ರಗಳ ವಿವರಣೆ ಮತ್ತು ಊಹೆಗೆ ಆಸ್ಪದ ಕೊಡುವ ಭಾಷೆಯ ಗಣಿತಶಾಸ್ತ್ರೀಯ ಮಾದರಿಯನ್ನು ಆಧರಿಸಿತ್ತು. ಭಾಷಾಶಾಸ್ತ್ರಗಳು ಮತ್ತು ಬೇರೆ ಅದ್ಯಯನಶಿಸ್ತುಗಳ ನಡುವಣ ಸಹಭಾಗಿತ್ವದಿಂದ ಸಾಮಾಜಿಕ ಭಾಷಾಶಾಸ್ತ್ರಗಳು, ಜ್ಞಾನಗ್ರಹಣ ಭಾಷಾಶಾಸ್ತ್ರಗಳು, ಮತ್ತು ಎಣಿಕೆಯ ಭಾಷಾಶಾಸ್ತ್ರಗಳು ಇತ್ಯಾದಿ ಹೆಚ್ಚುವರಿ ವಿಶೇಷತಜ್ಞತೆಗಳು ಅಭಿವೃದ್ಧಿಗೊಂಡವು.

ಅರ್ಥಶಾಸ್ತ್ರ

ಆಧುನಿಕ ವಿಜ್ಞಾನ 
ಪೂರೈಕೆ ಮತ್ತು ಬೇಡಿಕೆ ಮಾದರಿ

ಶಾಸ್ತ್ರೀಯ ಅರ್ಥಶಾಸ್ತ್ರಕ್ಕೆ ಆಧಾರವು 1776ರಲ್ಲಿ ಪ್ರಕಟವಾದ ಆಡಂ ಸ್ಮಿತ್‌ನ ಆನ್ ಇನ್‌ಕ್ವೈರಿ ಇಂಟು ದಿ ನೇಚರ್ ಆಂಡ್ ಕಾಸಸ್‌ ಆಫ್‌ ದಿ ವೆಲ್ತ್ ಆಫ್‌ ನೇಶನ್ಸ್ ಆಗಿತ್ತು. ಸ್ಮಿತ್ ವಾಣಿಜ್ಯ ಸಿದ್ಧಾಂತವನ್ನು ಟೀಕಿಸುತ್ತ, ಶ್ರಮದ ವಿಭಜನೆಯೊಂದಿಗೆ ಮುಕ್ತ ವ್ಯಾಪಾರವನ್ನು ಸಮರ್ಥಿಸಿದ್ದಾನೆ. ಆರ್ಥಿಕ ವ್ಯವಸ್ಥೆಗಳನ್ನು ನಿಯಂತ್ರಿಸುವ "ಕಾಣದ ಕೈ"ಗಳು ಸ್ವಹಿತಾಸಕ್ತಿಯಿಂದ ಕಾರ್ಯನಿರ್ವಹಿಸುವ ವ್ಯಕ್ತಿಗಳಿಂದ ಕೂಡಿದೆ ಎಂದು ಆತ ಪ್ರತಿಪಾದಿಸಿದನು. ಕಾರ್ಲ್‌ ಮಾರ್ಕ್ಸ್ ಒಂದು ಪರ್ಯಾಯ ಆರ್ಥಿಕ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದನು ಮತ್ತು ಅದನ್ನು ಮಾರ್ಕ್ಸಿಯನ್ ಅರ್ಥಶಾಸ್ತ್ರ ಎಂದು ಕರೆಯಲಾಗುತ್ತದೆ. ಮಾರ್ಕ್ಸಿಯನ್ ಅರ್ಥಶಾಸ್ತ್ರವು ಮೌಲ್ಯದ ಕಾರ್ಮಿಕ ಸಿದ್ಧಾಂತವನ್ನು ಆಧರಿಸಿದೆ ಮತ್ತು ಸರಕಿನ ಮೌಲ್ಯವು ಅದನ್ನು ಉತ್ಪಾದಿಸಲು ಅಗತ್ಯವಾದ ಕೆಲಸದ ಪ್ರಮಾಣವನ್ನು ಆಧರಿಸಿರಬೇಕು ಎಂದು ಭಾವಿಸುತ್ತದೆ. ಈ ವಿಚಾರದಡಿಯಲ್ಲಿ, ಬಂಡವಾಳಶಾಹಿಯು ಉದ್ಯೋಗಿಗಳನ್ನು ಆಧರಿಸಿದ್ದು, ಲಾಭವನ್ನು ಮಾಡಿಕೊಳ್ಳಲಿಕ್ಕಾಗಿ ಕಾರ್ಮಿಕರಿಗೆ ಅವರ ಕೆಲಸದ ಪೂರ್ಣ ಮೌಲ್ಯವನ್ನು ನೀಡುವುದಿಲ್ಲ. ಆಸ್ಟ್ರಿಯನ್ ಸ್ಕೂಲ್ ಮಾರ್ಕ್ಸಿಯನ್ ಅರ್ಥಶಾಸ್ತ್ರಕ್ಕೆ ಪ್ರತಿಕ್ರಿಯಿಸುತ್ತ, ವಾಣಿಜ್ಯೋದ್ಯಮವು ಆರ್ಥಿಕ ಅಭಿವೃದ್ಧಿಯ ಒಂದು ಪ್ರೇರಕ ಶಕ್ತಿಯಾಗಿ ನೋಡಿತು. ಇದು ಮೌಲ್ಯದ ಕಾರ್ಮಿಕ ಸಿದ್ಧಾಂತವನ್ನು ಪೂರೈಕೆ ಮತ್ತು ಬೇಡಿಕೆಯ ಒಂದು ವ್ಯವಸ್ಥೆಯಿಂದ ಬದಲಿಸಿತು.

1920ರಲ್ಲಿ, ಜಾನ್‌ ಮ್ಯನಾರ್ಡ್‌ ಕೇನ್ಸ್‌ ಸೂಕ್ಷ್ಮಅರ್ಥಶಾಸ್ತ್ರ ಮತ್ತು ಸ್ಥೂಲಅರ್ಥಶಾಸ್ತ್ರದ ಮಧ್ಯೆ ಒಂದು ವಿಭಜನೆಯನ್ನು ಹುಟ್ಟುಹಾಕಿದನು. ಕೇನೆಸಿಯನ್ ಅರ್ಥಶಾಸ್ತ್ರದಲ್ಲಿ ಸ್ಥೂಲಆರ್ಥಿಕತೆ ಪ್ರವೃತ್ತಿಗಳು ವ್ಯಕ್ತಿಗಳು ಮಾಡಿದ ಆರ್ಥಿಕ ಆಯ್ಕೆಗಳಿಂದ ತುಂಬಲು ಸಾಧ್ಯವಿತ್ತು. ಸರ್ಕಾರಗಳು ಆರ್ಥಿಕ ವಿಸ್ತರಣೆಯನ್ನು ಉತ್ತೇಜಿಸುವ ವಿಧಾನವಾಗಿ ಸರಕುಗಳಿಗೆ ಒಟ್ಟು ಬೇಡಿಕೆಯನ್ನು ಪ್ರೋತ್ಸಾಹಿಸಬೇಕು. ವಿಶ್ವಸಮರ IIರ ನಂತರ, ಮಿಲ್ಟನ್ ಫ್ರೈಡ್‌ಮನ್ ವಿತ್ತನಿಯಂತ್ರಣವಾದದ ಪರಿಕಲ್ಪನೆಯನ್ನು ಹುಟ್ಟುಹಾಕಿದನು. ವಿತ್ತನಿಯಂತ್ರಣವಾದವು ಹಣದ ಪೂರೈಕೆ ಮತ್ತು ಬೇಡಿಕೆಯನ್ನು ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಒಂದು ವಿಧಾನವಾಗಿ ಬಳಸುವುದರತ್ತ ಗಮನಕೇಂದ್ರೀಕರಿಸುತ್ತದೆ. 1970ರ ಸುಮಾರಿಗೆ, ವಿತ್ತನಿಯಂತ್ರಣವಾದವು ಪೂರೈಕೆ ಕಡೆ ವಾಲಿದ ಅರ್ಥಶಾಸ್ತ್ರವನ್ನು ಅಳವಡಿಸಿಕೊಂಡಿತು, ಅದು ಆರ್ಥಿಕ ವಿಸ್ತರಣೆಗೆ ಹಣದ ಮೊತ್ತ ಲಭ್ಯವಾಗುವುದನ್ನು ಹೆಚ್ಚಿಸಲು ತೆರಿಗೆಗಳನ್ನು ಕಡಿಮೆ ಮಾಡುವುದನ್ನು ಸಮರ್ಥಿಸಿತು.

ಬೇರೆ ಆಧುನಿಕ ಆರ್ಥಿಕ ಚಿಂತನೆಯ ಸಿದ್ಧಾಂತಗಳು ಎಂದರೆ ನವ ಶಾಸ್ತ್ರೀಯ ಅರ್ಥಶಾಸ್ತ್ರ ಮತ್ತು ನವ ಕೇನೇಸಿಯನ್‌ ಅರ್ಥಶಾಸ್ತ್ರ. ನವ ಶಾಸ್ತ್ರೀಯ ಅರ್ಥಶಾಸ್ತ್ರವು 1970ರಲ್ಲಿ ಅಭಿವೃದ್ಧಿಗೊಂಡಿತು, ಇದು ಘನವಾದ ಸೂಕ್ಷ್ಮಅರ್ಥಶಾಸ್ತ್ರಕ್ಕೆ ಸ್ಥೂಲಆರ್ಥಿಕ ಬೆಳವಣಿಗೆಯ ತಳಪಾಯವಾಗಿ ಒತ್ತುನೀಡಿತ್ತು. ನವ ಕೇನೇಸಿಯನ್‌ ಅರ್ಥಶಾಸ್ತ್ರವನ್ನು ಭಾಗಶಃ ನವ ಶಾಸ್ತ್ರೀಯ ಅರ್ಥಶಾಸ್ತ್ರಕ್ಕೆ ಪ್ರತಿಕ್ರಿಯೆಯಾಗಿ ಹುಟ್ಟುಹಾಕಲಾಯಿತು ಮತ್ತು ಇದು ಮಾರುಕಟ್ಟೆಯಲ್ಲಿರುವ ಅಧಕ್ಷತೆಗಳು ಹೇಗೆ ಕೇಂದ್ರೀಯ ಬ್ಯಾಂಕ್ ಅಥವಾ ಸರ್ಕಾರವೊಂದರ ನಿಯಂತ್ರದ ಅಗತ್ಯವನ್ನು ಹುಟ್ಟುಹಾಕುತ್ತದೆ ಎಂಬುದರೊಂದಿಗೆ ವ್ಯವಹರಿಸುತ್ತದೆ.

ಮನೋವಿಜ್ಞಾನ

19ನೇ ಶತಮಾನದ ಅಂತ್ಯವು ಮನೋವಿಜ್ಞಾನವು ಒಂದು ವೈಜ್ಞಾನಿಕ ಉದ್ಯಮವಾಗಿ ಆರಂಭಗೊಂಡಿದ್ದನ್ನು ಗುರುತಿಸುತ್ತದೆ. 1879ನ್ನು ಸಾಮಾನ್ಯವಾಗಿ ಮನೋವಿಜ್ಞಾನವು ಒಂದು ಸ್ವತಂತ್ರ ಅಧ್ಯಯನದ ಕ್ಷೇತ್ರವಾಗಿ ಆರಂಭಗೊಂಡ ವರ್ಷ ಎಂದು ನೋಡಲಾಗುತ್ತದೆ. ಆ ವರ್ಷ ವಿಲ್ಹೆಮ್‌ ವುಂಟ್ ಸಂಪೂರ್ಣವಾಗಿ ಮನೋವಿಜ್ಞಾನದ ಸಂಶೋಧನೆಗೇ ಮೀಸಲಾದ ಮೊದಲ ಪ್ರಯೋಗಾಲಯವನ್ನು (ಲೈಪ್ಜಿಗ್‌ನಲ್ಲಿ) ಸ್ಥಾಪಿಸಿದನು. ಈ ಕ್ಷೇತ್ರಕ್ಕೆ ಆರಂಭಿಕ ಕೊಡುಗೆ ನೀಡುದ ಪ್ರಮುಖರಲ್ಲಿ ಕೆಲವರೆಂದರೆ : ಹರ್ಮನ್ ಎಬ್ಬಿಂಗಾಸ್‌ (ಸ್ಮರಣೆಯ ಅಧ್ಯಯನದಲ್ಲಿ ಅಗ್ರಗಣ್ಯ), ಇವಾನ್ ಪಾವ್‌ಲೊವ್ ( ಕ್ಲಾಸಿಕಲ್ ಕಂಡಿಶನಿಂಗ್‌ ಪರಿಕಲ್ಪನೆಯನ್ನು ಕಂಡುಹಿಡಿದವನು), ವಿಲಿಯಂ ಜೇಮ್ಸ್‌, ಮತ್ತು ಸಿಗ್ಮಂಡ್ ಫ್ರಾಯ್ಡ್‌. ಫ್ರಾಯ್ಡ್‌ನ ಪ್ರಭಾವವು ತುಂಬಾ ಅಗಾಧವಾಗಿತ್ತು, ವೈಜ್ಞಾನಿಕ ಮನೋವಿಜ್ಞಾನದಲ್ಲಿ ಒಂದು ಶಕ್ತಿ ಎನ್ನುವುದಕ್ಕಿಂತ ಸಾಂಸ್ಕೃತಿಕ ಐಕಾನ್‌ ಆಗಿ ಹೆಚ್ಚಿನ ಪ್ರಭಾವ ಬೀರಿದ್ದಾನೆ. 20ನೇ ಶತಮಾನವು ಫ್ರಾಯ್ಡ್‌ನ ಸಿದ್ಧಾಂತಗಳನ್ನು ತುಂಬಾ ಅವೈಜ್ಞಾನಿಕವೆಂದು ತಿರಸ್ಕರಿಸಿತು ಮತ್ತು ಎಡ್ಮಂಡ್ ತಿಚ್ನನರ್‌‌ನ ಮನಸ್ಸಿನ ಪ್ರತಿಯೊಂದು ಅಂಶವೂ ಪ್ರತ್ಯೇಕವಾಗಿ ವರ್ತಿಸುತ್ತದೆ ಎಂಬ ದೃಷ್ಟಿಕೋನಕ್ಕೆ ವಿರುದ್ಧವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಇದು ಜಾನ್‌ ಬಿ ವ್ಯಾಟ್ಸನ್‌ ವರ್ತನಾವಾದವನ್ನು ಸೂತ್ರೀಕರಿಸಲು ದಾರಿಯಾಯಿತು, ಇದನ್ನು ನಂತರ ಬಿ.ಎಫ್‌. ಸ್ಕಿನರ್‌ ಜನಪ್ರಿಯಗೊಳಿಸಿದನು. ವರ್ತನಾವಾದವು ಪ್ರಕಟ ವರ್ತನೆಗೆ ಜ್ಞಾನಮೀಮಾಂಸೆಯಿಂದ ಸೀಮಿತವಾದ ಮನೋವಿಜ್ಞಾನದ ಅಧ್ಯಯನವನ್ನು ಪ್ರಸ್ತಾಪಿಸಿತು, ಏಕೆಂದರೆ ಅದನ್ನು ವಿಶ್ವಾಸಾರ್ಹವಾಗಿ ಅಳೆಯಬಹುದು ಎಂದು. "ಮನಸ್ಸು" ಎಂಬುದರ ಕುರಿತ ವೈಜ್ಞಾನಿಕ ಜ್ಞಾನವು ತೀರಾ ಆಧ್ಯಾತ್ಮಿಕ ಎಂದು ಪರಿಗಣಿಸಿತು, ಏಕೆಂದರೆ ಅದನ್ನು ಸಾಧಿಸುವುದು ಅಸಾಧ್ಯವಿತ್ತು. 20ನೇ ಶತಮಾನದ ಕೊನೆಯ ದಶಕಗಳು ಮಾನವ ಮನೋವಿಜ್ಞಾನವನ್ನು ಅಧ್ಯಯನ ಮಾಡಲು ಒಂದು ಹೊಸ ಅಂತರ್‌ಶಿಸ್ತೀಯ ದೃಷ್ಟಿಕೋನವು ಉದ್ಭವಿಸುವುದನ್ನು ಕಂಡಿತು, ಅದನ್ನು ಸಂಗ್ರಹವಾಗಿ ಜ್ಞಾನಗ್ರಹಣ ವಿಜ್ಞಾನ ಎಂದು ಕರೆಯಲಾಗಿದೆ. ಜ್ಞಾನಗ್ರಹಣ ವಿಜ್ಞಾನವು ಮನಸ್ಸನ್ನು ಒಂದು ಶೋಧದ ವಸ್ತುವಾಗಿ ಪರಿಗಣಿಸುತ್ತದೆ ಮತ್ತು ಇದಕ್ಕಾಗಿ ಮನೋವಿಜ್ಞಾನ, ಭಾಷಾಶಾಸ್ತ್ರಗಳು, ಗಣಕ ವಿಜ್ಞಾನ, ತತ್ವಶಾಸ್ತ್ರ, ಮತ್ತು ನರಜೀವಶಾಸ್ತ್ರ ಈ ಸಾಧನಗಳನ್ನು ಬಳಸಿಕೊಳ್ಳುತ್ತದೆ. ಮಿದುಳಿನ ಚಟುವಟಿಕೆಗಳನ್ನು ದೃಶ್ಯೀಕರಿಸುವ ಪಿಇಟಿ ಸ್ಕ್ಯಾನ್ಗಳು ಮತ್ತು ಸಿಎಟಿ ಸ್ಕ್ಯಾನ್ಗಳು ಇನ್ನಿತರ ಹೊಸ ವಿಧಾನಗಳು ತಮ್ಮ ಪ್ರಭಾವವನ್ನು ಬೀರತೊಡಗಿದವು. ಇದರಿಂದ ಕೆಲವು ಸಂಶೋಧಕರು ಜ್ಞಾನಗ್ರಹಣದ ಬದಲಿಗೆ ಮಿದುಳನ್ನು ಪರೀಕ್ಷಿಸುವ ಮೂಲಕ ಮನಸ್ಸನ್ನು ಪರಿಶೋಧಿಸತೊಡಗಿದರು. ಶೋಧದ ಈ ಹೊಸ ಸ್ವರೂಪಗಳು ಮಾನವ ಮನಸ್ಸಿನ ವ್ಯಾಪಕ ಅರ್ಥೈಸಿಕೊಳ್ಳುವಿಕೆ ಸಾಧ್ಯವೆಂದು ಭಾವಿಸುತ್ತವೆ ಮತ್ತು ಅಂತಹ ಅರ್ಥೈಸಿಕೊಳ್ಳುವಿಕೆಯುನ್ನು ಕೃತಕ ಬುದ್ಧಿಮತ್ತೆಯಂತಹ ಇತರೆ ಸಂಶೋಧನಾ ಕ್ಷೇತ್ರಗಳಿಗೆ ಅನ್ವಯಿಸಬಹುದು ಎಂದೂ ಭಾವಿಸುತ್ತವೆ.

ಸಮಾಜಶಾಸ್ತ್ರ

ಇಬ್ನ್‌ ಖಾಲ್ದುನ್ನನ್ನು ಆರಂಭಿಕ ವೈಜ್ಞಾನಿಕ ವ್ಯವಸ್ಥಿತ ಸಮಾಜವಿಜ್ಞಾನಿ ಎಂದು ಪರಿಗಣಿಸಲಾಗುತ್ತದೆ. ಆಧುನಿಕ ಸಮಾಜವಿಜ್ಞಾನವು, 19ನೇ ಶತಮಾನದ ಆರಂಭದಲ್ಲಿ ವಿಶ್ವದ ಆಧುನೀಕರಣಕ್ಕೆ ಒಂದು ತಜ್ಞ ಪ್ರತಿಕ್ರಿಯೆಯಾಗಿ ಹೊರಹೊಮ್ಮಿತು. ಅನೇಕ ಆರಂಭಿಕ ಸಮಾಜವಿಜ್ಞಾನಿಗಳ ಕೆಲವರ ಪ್ರಕಾರ (ಉದಾ; ಎಮಿಲಿ ಡಕ್‌ಹೈಮ್ ), ಸಮಾಜವಿಜ್ಞಾನದ ಗುರಿಯು ರಚನಾವಾದದಲ್ಲಿದ್ದು, ಸಾಮಾಜಿಕ ಗುಂಪುಗಳ ಪರಸ್ಪರ ಆಕರ್ಷಕಶಕ್ತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಾಮಾಜಿಕ ವಿಯೋಜನೆಗೆ "ಪ್ರತಿವಿಷ"ವನ್ನು ಅಭಿವೃದ್ಧಿಪಡಿಸುವುದಾಗಿತ್ತು. ಮ್ಯಾಕ್ಸ್‌ ವೆಬರ್‌ನು ತರ್ಕಬದ್ಧವಾಗಿರುವಿಕೆಯ ಪರಿಕಲ್ಪನೆ ಮೂಲಕ ಸಮಾಜದ ಆಧುನೀಕರಣದ ಕುರಿತು ಆತಂಕ ಹೊಂದಿದ್ದನು, ಇದು ವ್ಯಕ್ತಿಗಳನ್ನು ಒಂದು "ಕಬ್ಬಿಣದ ಪಂಜರ"ದಲ್ಲಿ ಬಂಧಿಸುತ್ತದೆ ಎಂದು ಆತ ನಂಬಿದ್ದನು. ಜಾರ್ಜ್‌ ಸಿಮ್ಮೆಲ್ ಮತ್ತು ಡಬ್ಲ್ಯು.ಇ.ಬಿ. ಡು ಬೊಯಿಸ್‌‌ರನ್ನು ಒಳಗೊಂಡಂತೆ ಕೆಲವು ಸಮಾಜವಿಜ್ಞಾನಿಗಳು ಸೂಕ್ಷ್ಮಸಮಾಜಶಾಸ್ತ್ರೀಯ ಗುಣಾತ್ಮಕ ವಿಶ್ಲೇಷಣೆಯನ್ನು ಹೆಚ್ಚು ಬಳಸಿಕೊಂಡರು. ಈ ಸೂಕ್ಷ್ಮಹಂತದ ದೃಷ್ಟಿಕೋನವು ಅಮೆರಿಕನ್ ಸಮಾಜವಿಜ್ಞಾನದಲ್ಲಿ ಮಹತ್ವದ ಪಾತ್ರ ವಹಿಸಿತು. ಇದರೊಂದಿಗೆ ಜಾರ್ಜ್ ಹರ್ಬರ್ಟ್‌ ಮೀಡ್ ಮತ್ತು ಆತನ ವಿದ್ಯಾರ್ಥಿ ಹರ್ಬರ್ಟ್‌ ಬ್ಲುಮರ್ ಅವರ ಸಿದ್ಧಾಂತಗಳೂ ಸೇರಿ ಸಮಾಜವಿಜ್ಞಾನದಲ್ಲಿ ಸಾಂಕೇತಿಕ ಪಾರಸ್ಪರಿಕ ಕ್ರಿಯಾವಾದ ದೃಷ್ಟಿಕೋನ ಹುಟ್ಟುಹಾಕಲು ಕಾರಣವಾಯಿತು. ಅಮೆರಿಕನ್ ಸಮಾಜವಿಜ್ಞಾನವು 1940 ಮತ್ತು 1950ರ ಸುಮಾರಿಗೆ ಟಾಲ್ಕಾಟ್‌ ಪ್ಯಾರ್ಸನ್ಸ್‌ನಿಂದ ಅತ್ಯಧಿಕವಾಗಿ ಪ್ರಭಾವಿತಗೊಂಡಿತ್ತು, ಆತ ರಾಚನಿಕ ಒಗ್ಗೂಡುವಿಕೆಯನ್ನು ಪ್ರಚೋದಿಸಿದ ಸಮಾಜದ ಅಂಶಗಳು "ಕಾರ್ಯಾತ್ಮಕ" ಎಂದು ಪ್ರತಿಪಾದಿಸಿನು. ರಾಚನಿಕ ಕಾರ್ಯಾತ್ಮಕವಾದ ದೃಷ್ಟಿಕೋನವು 1960ರಲ್ಲಿ ತೀವ್ರ ಪ್ರಶ್ನೆಗೊಳಗಾಯಿತು. ಸಮಾಜವಿಜ್ಞಾನಿಗಳು ಈ ದೃಷ್ಟಿಕೋನವು ಪ್ರಸಕ್ತ ಯಥಾಸ್ಥಿತಿವಾದದಲ್ಲಿರುವ ಅಸಮಾನತೆಗಳಿಗೆ ಈ ದೃಷ್ಟಿಕೋನವು ಕೇವಲ ಒಂದು ಸಮರ್ಥನೆಯಾಗಿದೆ ಎಂದು ನೋಡಲಾರಂಭಿಸಿ, ಪ್ರಶ್ನಿಸಲಾರಂಭಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಬಿಕ್ಕಟ್ಟು ಸಿದ್ಧಾಂತವನ್ನು ಅಭಿವೃದ್ಧಿಗೊಳಿಸಲಾಯಿತು, ಅದು ಭಾಗಶಃ ಕಾರ್ಲ್‌ ಮಾರ್ಕ್ಸ್‌‌ನ ತತ್ವಗಳನ್ನು ಆಧರಿಸಿತ್ತು. ಬಿಕ್ಕಟ್ಟು ಸಿದ್ಧಾಂತಗಳು ಸಮಾಜವನ್ನು ವಿವಿಧ ಗುಂಪುಗಳು ಸಂಪನ್ಮೂಲಗಳ ಮೇಲೆ ನಿಯಂತ್ರಣಕ್ಕಾಗಿ ಸ್ಪರ್ಧಿಸುವ ಒಂದು ಕ್ಷೇತ್ರದ ಹಾಗೆ ನೋಡಿದವು. ಸಾಂಕೇತಿಕ ಪರಸ್ಪರ ಪ್ರತಿಕ್ರಿಯಾವಾದ ಕೂಡ ಸಮಾಜವಿಜ್ಞಾನದ ಚಿಂತನೆಯ ಕೇಂದ್ರವೆಂದು ಪರಿಗಣಿಸಲಾಯಿತು. ಇರ್ವಿಂಗ್ ಗಾಫ್‌ಮ್ಯಾನ್‌ ಸಾಮಾಜಿಕ ಪರಸ್ಪರ ಪ್ರತಿಕ್ರಿಯೆಗಳನ್ನು ಒಂದು ವೇದಿಕೆ ಕಾರ್ಯಕ್ರಮದ ಹಾಗೆ ನೋಡಿದನು, ಇಲ್ಲಿ ವ್ಯಕ್ತಿಗಳು “ಹಿನ್ನೆಲೆ”ಯನ್ನು ಸಿದ್ಧಗೊಳಿಸುತ್ತ, ತಮ್ಮ ಪ್ರೇಕ್ಷಕರನ್ನು ಅಭಿವ್ಯಕ್ತಿ ನಿರ್ವಹಣೆಯ ಮೂಲಕ ನಿಯಂತ್ರಿಸಲು ಪ್ರಯತ್ನಿಸುತ್ತಿರುತ್ತಾರೆ. ಈ ಸಿದ್ಧಾಂತಗಳು ಸಾಮಾಜವಿಜ್ಞಾನದ ಚಿಂತನೆಯಲ್ಲಿ ಮುಂಚೂಣಿಯಲ್ಲಿರುವಾಗಲೇ, ಬೇರೆ ಕೆಲವು ದೃಷ್ಟಿಕೋನಗಳೂ ಇವೆ; ಅವೆಂದರೆ ಸ್ತ್ರೀವಾದಿ ಚಿಂತನೆ, ರಾಚನಿಕವಾದೋತ್ತರ, ತಾರ್ಕಿಕ ಆಯ್ಕೆ ಸಿದ್ಧಾಂತ ಮತ್ತು ಆಧುನಿಕೋತ್ತರ ಸಿದ್ಧಾಂತ.

ಮಾನವಶಾಸ್ತ್ರ

ಮಾನವಶಾಸ್ತ್ರವನ್ನು ಜ್ಞಾನೋದಯದ ಯುಗದ ಒಂದು ಸಹಜಫಲಿತಾಂಶ ಎಂದು ಅರ್ಥಮಾಡಿಕೊಳ್ಳಬಹುದು. ಈ ಅವಧಿಯಲ್ಲಿ ಐರೋಪ್ಯರು ಮಾನವ ವರ್ತನೆಯನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಲು ಪ್ರಯತ್ನಿಸಿದರು. ನ್ಯಾಯಶಾಸ್ತ್ರ, ಇತಿಹಾಸ, ತತ್ವಶಾಸ್ತ್ರ ಮತ್ತು ಸಮಾಜವಿಜ್ಞಾನದ ಪರಂಪರೆಗಳು ಈ ಅವಧಿಯಲ್ಲಿ ಅಭಿವೃದ್ಧಿಗೊಂಡವು ಮತ್ತು ಮಾನವಶಾಸ್ತ್ರವನ್ನು ಸಾಮಾಜಿಕ ವಿಜ್ಞಾನಗಳ ಅಭಿವೃದ್ಧಿಯ ಒಂದು ಭಾಗ ಎಂಬಂತೆ ನೋಡಲಾಯಿತು. ಇದೇ ವೇಳೆಯಲ್ಲಿ, ಜ್ಞಾನೋದಯಕ್ಕೆ ಭಾವಪ್ರಧಾನ ಪ್ರತಿಕ್ರಿಯೆಯು ಜೊಹಾನ್‌ ಗೊಟ್ರಿಫ್ರೈಡ್ ಹರ್ಡರ್ ಮತ್ತು ನಂತರ ವಿಲ್‌ಹೆಮ್ ಡಿಲ್ತೆ ಅವರಂತಹ ಚಿಂತಕರನ್ನು ಹುಟ್ಟುಹಾಕಿತು. ಇವರ ಕೃತಿಗಳು ಈ ಅಧ್ಯಯನಶಿಸ್ತಿಗೆ ಕೇಂದ್ರವಾಗಿದ್ದ ಸಂಸ್ಕೃತಿ ಪರಿಕಲ್ಪನೆಗೆ ಆಧಾರವಾಯಿತು. ಪಾರಂಪರಿಕವಾಗಿ, ಈ ವಿಷಯದ ಬಹಳಷ್ಟು ಇತಿಹಾಸವು ಯೂರೋಪ್‌ ಮತ್ತು ಇನ್ನುಳಿದ ಜಗತ್ತಿನ ನಡುವಣ ವಸಾಹತುಶಾಹಿ ಮುಖಾಮುಖಿಯನ್ನು ಆಧರಿಸಿದ್ದವು. 18ನೇ ಮತ್ತು 19ನೇ ಶತಮಾನದ ಬಹುತೇಕ ಮಾನವಶಾಸ್ತ್ರವನ್ನು ಈಗ ವೈಜ್ಞಾನಿಕ ಜನಾಂಗೀಯತೆ ಎಂಬ ವರ್ಗಕ್ಕೆ ಸೇರಿಸಲಾಗಿದೆ. 19ನೇ ಶತಮಾನದ ಕೊನೆಯ ಭಾಗದಲ್ಲಿ, "ಮನುಷ್ಯರ ಅಧ್ಯಯನ"ದ ಕುರಿತು "ಮಾನವಶಾಸ್ತ್ರೀಯ" ಪ್ರೇರಿಸುವಿಕೆ (ಮಾನವರ ಮಾಪನ ತಂತ್ರಗಳನ್ನು ಆಧರಿಸಿ) ಮತ್ತು "ಜನಾಂಗಶಾಸ್ತ್ರೀಯ" ಪ್ರೇರಿಸುವಿಕೆ (ಸಂಸ್ಕೃತಿಗಳು ಮತ್ತು ಪರಂಪರೆಗಳನ್ನು ಗಮನಿಸುವುದು), ಈ ಎರಡರ ಮಧ್ಯೆ ಹೋರಾಟವೇ ನಡೆಯಿತು. ಈ ಭಿನ್ನತೆಗಳು ನಂತರ ಭೌತಿಕ ಮಾನವಶಾಸ್ತ್ರ ಮತ್ತು ಸಾಂಸ್ಕೃತಿಕ ಮಾನವಶಾಸ್ತ್ರದ ಮಧ್ಯೆ ವಿಭಜನೆಯ ಭಾಗವಾಯಿತು, ಸಾಂಸ್ಕೃತಿಕ ಮಾನವಶಾಸ್ತ್ರವು ಫ್ರಾನ್ಜ್‌ ಬೊಅಸ್ರಂತಹ ವಿದ್ಯಾರ್ಥಿಗಳಿಂದ ಅಭಿವೃದ್ಧಿಗೊಂಡಿತು. 20ನೇ ಶತಮಾನದ ಮಧ್ಯಭಾಗದಲ್ಲಿ, ಹಿಂದಿನ ಮಾನವಶಾಸ್ತ್ರೀಯ ಮತ್ತು ಜನಾಂಗಶಾಸ್ತ್ರೀಯ ವಿಧಾನಗಳನ್ನು ಸಂಶೋಧನಾ ನೈತಿಕತೆಯತ್ತ ಒಂದು ಕಣ್ಣಿಟ್ಟು ಮರುಮೌಲ್ಯಮಾಪನ ಮಾಡಲಾಯಿತು. ಇದೇ ವೇಳೆ ಶೋಧದ ವ್ಯಾಪ್ತಿಯನ್ನು "ಆದಿಮ ಸಂಸ್ಕೃತಿಗಳ" ಪಾರಂಪರಿಕ ಅಧ್ಯಯನದ ಆಚೆಗೂ ವಿಸ್ತರಿಸಲಾಯಿತು. (ವೈಜ್ಞಾನಿಕ ಆಚರಣೆಗಳು ಹೆಚ್ಚಾಗಿ ಮಾನವಶಾಸ್ತ್ರೀಯ ಅಧ್ಯಯನದ ಒಂದು ಕ್ಷೇತ್ರವಾಗಿದ್ದಿತು). ಒಂದು ವೈಜ್ಞಾನಿಕ ಅಧ್ಯಯನ ಶಿಸ್ತಾಗಿರುವ ಪ್ರಾಚೀನಮಾನವಶಾಸ್ತ್ರದ ವಿಕಾಸವು, ವಿಧಾನಶಾಸ್ತ್ರಗಳು, ಪ್ರಾಗ್ಜೀವವಿಜ್ಞಾನ, ಭೌತಿಕ ಮಾನವಶಾಸ್ತ್ರ ಮತ್ತು ನಡತೆಶಾಸ್ತ್ರ ಇನ್ನಿತರ ಅಧ್ಯಯನದಿಂದ ರೂಪುಗೊಂಡಿದೆ. ಜೊತೆಗೆ ಇದರ ವ್ಯಾಪ್ತಿ ಮತ್ತು ಗತಿಶೀಲತೆಯು 20ನೇ ಶತಮಾನದ ಮಧ್ಯಭಾಗದಿಂದ ಅಧಿಕಗೊಂಡಿದೆ. ಈ ಅಧ್ಯಯನಗಳು ಮನುಷ್ಯರ ಮೂಲಗಳು, ವಿಕಾಸ, ತಳಿವಿಜ್ಞಾನದ ಮತ್ತು ಸಾಂಸ್ಕೃತಿಕ ಪರಂಪರೆ ಮತ್ತು ಸಮಕಾಲೀನ ಮನುಷ್ಯರ ಪ್ರಕಾರಗಳ ಕುರಿತ ಪರಿಕಲ್ಪನೆ ಇನ್ನಿತರ ವಿಚಾರಗಳ ಇನ್ನಷ್ಟು ಒಳನೋಟಗಳನ್ನು ಒದಗಿಸುವುದನ್ನು ಮುಂದುವರೆಸಿದೆ.

ವಿಕಾಸಗೊಳ್ಳುತ್ತಿರುವ ಅಧ್ಯಯನ ಶಿಸ್ತುಗಳು

20ನೇ ಶತಮಾನದಲ್ಲಿ, ಹಲವಾರು ಅಂತರಶಿಸ್ತೀಯ ವೈಜ್ಞಾನಿಕ ಕ್ಷೇತ್ರಗಳು ವಿಕಾಸಗೊಂಡವು. ಇಲ್ಲಿ ಮೂರು ಉದಾಹರಣೆಗಳನ್ನು ನೀಡಲಾಗಿದೆ: ಸಂವಹನ ಅದ್ಯಯನವು ಪ್ರಾಣಿಗಳ ಅದ್ಯಯನ, ಮಾಹಿತಿ ಸಿದ್ಧಾಂತ, ಮಾರುಕಟ್ಟೆ, ಸಾರ್ವಜನಿಕ ಸಂಬಂಧಗಳು, ದೂರಸಂಪರ್ಕಗಳು ಮತ್ತು ಇನ್ನಿತರ ಬಗೆಯ ಸಂವಹನವನ್ನು ಒಂದುಗೂಡಿಸಿದ ಅಧ್ಯಯನವಾಗಿದೆ. ಗಣಕ ವಿಜ್ಞಾನ(ಕಂಪ್ಯೂಟರ್ ಸೈನ್ಸ್‌) ಒಂದು ಸೈದ್ಧಾಂತಿಕ ಭಾಷಾಶಾಸ್ತ್ರಗಳು, ವಿಚ್ಛಿನ್ನ ಗಣಿತ, ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಇವುಗಳ ಆಧಾರದ ಮೇಲೆ ರೂಪುಗೊಂಡಿದ್ದು, ಎಣಿಕೆಮಾಡುವ (ಕಾಂಪ್ಯುಟೇಶನ್‌) ಲಕ್ಷಣಗಳನ್ನು ಮತ್ತು ಮಿತಿಗಳನ್ನು ಅಧ್ಯಯನ ಮಾಡುತ್ತದೆ. ಇದರ ಕೆಲವು ಉಪಕ್ಷೇತ್ರಗಳು ಕೆಳಗಿನ ಕ್ಷೇತ್ರಗಳನ್ನು ಒಳಗೊಂಡಿವೆ: ಕಾಂಪ್ಯುಟಬಿಲಿಟಿ, ಕಾಂಪ್ಯುಟೇಶನಲ್ ಸಂಕೀರ್ಣತೆ , ಡಾಟಾಬೇಸ್ ವಿನ್ಯಾಸ, ಕಂಪ್ಯೂಟರ್ ನೆಟ್‌ವರ್ಕಿಂಗ್, ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟರ್ ಹಾರ್ಡ್‌ವೇರ್‌ನ ವಿನ್ಯಾಸ. ಸಾಮಾನ್ಯ ವೈಜ್ಞಾನಿಕ ಅಭಿವೃದ್ಧಿಗೆ ಕಂಪ್ಯೂಟಿಂಗ್ ಕ್ಷೇತ್ರದಲ್ಲಾದ ಪ್ರಗತಿಯು ಅಪಾರ ಕೊಡುಗೆ ನೀಡಿದ ಒಂದು ಕ್ಷೇತ್ರ ಎಂದರೆ ಬೃಹತ್ ಪ್ರಮಾಣದಲ್ಲಿ ವೈಜ್ಞಾನಿಕ ದತ್ತಾಂಶಗಳನ್ನು ಸಂಗ್ರಹ ಮಾಡುವಿಕೆಗೆ ಅನುಕೂಲ ಕಲ್ಪಿಸಿದ್ದು. ಸಮಕಾಲೀನ ಕಂಪ್ಯೂಟರ್ ವಿಜ್ಞಾನವು ಪ್ರಾತಿನಿಧಿಕವಾಗಿ ಸಾಫ್ಟ್‌ವೇರ್‌ ಇಂಜಿನಿಯರಿಂಗ್ ಮೇಲೆ ಒತ್ತು ನೀಡುವುದಕ್ಕೆ ಪ್ರತಿಯಾಗಿ ಗಣಿತಶಾಸ್ತ್ರೀಯ 'ಸಿದ್ಧಾಂತ'ಗಳ ಮೇಲೆ ಒತ್ತು ನೀಡುವ ಮೂಲಕ ಅದರಿಂದ ಪ್ರತ್ಯೇಕಿಸಿಕೊಂಡಿದೆ. ಭೌತದ್ರವ್ಯದ ವಿಜ್ಞಾನವು ಲೋಹಶಾಸ್ತ್ರ, ಖನಿಜವಿಜ್ಞಾನ , ಮತ್ತು ಹರಳುಶಾಸ್ತ್ರ (ಕ್ರಿಸ್ಟಲೋಗ್ರಫಿ)ದಲ್ಲಿ ಬೇರುಗಳನ್ನು ಹೊಂದಿದೆ. ಅದು ರಸಾಯನಶಾಸ್ತ್ರ , ಭೌತವಿಜ್ಞಾನ, ಮತ್ತು ಇನ್ನಿತರ ಹಲವಾರು ಇಂಜಿನಿಯರಿಂಗ್ ಅಧ್ಯಯನ ಶಿಸ್ತುಗಳನ್ನು ಒಂದುಗೂಡಿಸುತ್ತದೆ. ಈ ಕ್ಷೇತ್ರವು ಲೋಹಗಳು, ಸಿರಾಮಿಕ್‌ಗಳು, ಪ್ಲಾಸ್ಟಿಕ್‌ಗಳು, ಅರೆವಾಹಕ(ಸೆಮಿಕಂಡಕ್ಟರ್‌)ಗಳು ಮತ್ತು ಸಂಯುಕ್ತ ಭೌತವಸ್ತುಗಳನ್ನು ಅಧ್ಯಯನ ಮಾಡುತ್ತದೆ.

ಶೈಕ್ಷಣಿಕ ಅಧ್ಯಯನ

ಒಂದು ಶೈಕ್ಷಣಿನ ಕ್ಷೇತ್ರವಾಗಿ, ವಿಜ್ಞಾನದ ಇತಿಹಾಸ ವು ವಿಲಿಯಂ ವ್ಹೆವೆಲ್‌‌ನ 's ಹಿಸ್ಟರಿ ಆಫ್‌ ದಿ ಇಂಡಕ್ಟಿವ್ ಸೈನ್ಸ್‌ಸ್‌ ನ ಪ್ರಕಟಣೆಯೊಂದಿಗೆ ಆರಂಭಗೊಂಡಿತು. (ಅದು ಮೊದಲು 1837ರಲ್ಲಿ ಪ್ರಕಟವಾಯಿತು). ವಿಜ್ಞಾನದ ಇತಿಹಾಸವನ್ನು ಒಂದು ಸ್ವತಂತ್ರ ಅಧ್ಯಯನ ಶಿಸ್ತಾಗಿ ಹೆಚ್ಚು ಔಪಚಾರಿಕ ಅಧ್ಯಯನವು ಜಾರ್ಜ್‌ ಸಾರ್ಟನ್‌‌ನ ಕೃತಿಗಳಾದ ಇಂಟ್ರೊಡಕ್ಷನ್ ಟು ದಿ ಹಿಸ್ಟರಿ ಆಫ್‌ ಸೈನ್ಸ್‌ಸ್‌ (1927) ಮತ್ತು ಐಸಿಸ್ ಜರ್ನಲ್‌ನ (ಇದನ್ನು 1912ರಲ್ಲಿ ಸ್ಥಾಪಿಸಲಾಯಿತು) ಪ್ರಕಟಣೆಗಳೊಂದಿಗೆ ಆರಂಭವಾಯಿತು. ಸಾರ್ಟನ್‌ನು ಆರಂಭಿಕ 20ನೇ ಶತಮಾನದ ವಿಜ್ಞಾನದ ಇತಿಹಾಸದ ದೃಷ್ಟಿಕೋನಗಳನ್ನು ಮಹಾಪುರುಷರ ಮತ್ತು ಶ್ರೇಷ್ಠ ವಿಚಾರಗಳ ಇತಿಹಾಸ ಎಂದು ನಿದರ್ಶನಗಳನ್ನು ನೀಡಿ ಪ್ರತಿಪಾದಿಸಿದನು. ಆತ ತನ್ನ ಸಮಕಾಲೀನರೊಂದಿಗೆ ಇತಿಹಾಸ ಎಂದರೆ ಪ್ರಗತಿಯ ಪಥದಲ್ಲಿ ಆದ ಸಾಧನೆಗಳು ಮತ್ತು ವಿಳಂಬಗಳ ಒಂದು ದಾಖಲೆ ಎಂಬ ವಿಗ್‌ ಪಕ್ಷದ ಚಿಂತನೆಗಳನ್ನು ಹಂಚಿಕೊಂಡಿದ್ದನು. ಈ ಕಾಲಘಟ್ಟದಲ್ಲಿ ವಿಜ್ಞಾನದ ಇತಿಹಾಸವು ಅಮೆರಿಕದ ಇತಿಹಾಸವನ್ನು ಒಂದು ಉಪಕ್ಷೇತ್ರ ಎಂದು ಗುರುತಿಸಲಿಲ್ಲ. ಅಲ್ಲದೇ ಹೆಚ್ಚಿನ ಕಾರ್ಯಗಳನ್ನು ವೃತ್ತಿಪರ ಇತಿಹಾಸಕಾರರ ಬದಲಿಗೆ ಆಸಕ್ತ ವಿಜ್ಞಾನಿಗಳು ಮತ್ತು ವೈದ್ಯರು ನಡೆಸಿದ್ದರು. ಹಾರ್ವರ್ಡ್‌ನಲ್ಲಿ ಐ. ಬರ್ನಾರ್ಡ್‌ ಕೊಹೆನ್‌ ಕಾರ್ಯಗಳೊಂದಿಗೆ, ವಿಜ್ಞಾನದ ಇತಿಹಾಸವು 1945ರ ನಂತರ ಇತಿಹಾಸದ ಒಂದು ಉಪಅಧ್ಯಯನ ಶಿಸ್ತು ಆಯಿತು. ಗಣಿತದ ಇತಿಹಾಸ, ತಂತ್ರಜ್ಞಾನದ ಇತಿಹಾಸ , ಮತ್ತು ತತ್ವಶಾಸ್ತ್ರದ ಇತಿಹಾಸಗಳು ಸಂಶೋಧನೆಯ ವಿಶಿಷ್ಟ ಕ್ಷೇತ್ರಗಳಾಗಿದ್ದವು ಮತ್ತು ಬೇರೆ ಲೇಖನಗಳಲ್ಲಿಯೂ ಈ ವಿಷಯಗಳನ್ನು ಒಳಗೊಳ್ಳಲಾಗಿತ್ತು. ಗಣಿತವು ನೈಸರ್ಗಿಕ ವಿಜ್ಞಾನಕ್ಕೆ ಹತ್ತಿರದ ಸಂಬಂಧ ಹೊಂದಿದ್ದರೂ, ಅದರಿಂದ ಭಿನ್ನವಾಗಿತ್ತು (ಕೊನೇ ಪಕ್ಷ ಆಧುನಿಕ ಪರಿಕಲ್ಪನೆಯಲ್ಲಾದರೂ). ಹಾಗೆಯೇ ತಂತ್ರಜ್ಞಾನವು ಪ್ರಯೋಗವಾದಿ ಸತ್ಯದ ಹುಡುಕಾಟಕ್ಕೆ ತುಂಬಾ ಹತ್ತಿರದಲ್ಲಿದ್ದರೂ, ಸ್ಪಷ್ಟವಾಗಿ ಪ್ರತ್ಯೇಕಗೊಂಡಿತ್ತು. ವಿಜ್ಞಾನದ ಇತಿಹಾಸವು ಅಂತಾರಾಷ್ಟ್ರೀಯ ತಜ್ಞರ ಸಮುದಾಯವನ್ನು ಒಳಗೊಂಡ ಒಂದು ಶೈಕ್ಷಣಿಕ ಅಧ್ಯಯನ ಶಿಸ್ತು ಆಗಿದೆ. ಈ ಕ್ಷೇತ್ರದ ಪ್ರಮುಖ ವೃತ್ತಿಪರ ಸಂಸ್ಥೆಗಳು ಎಂದರೆ ಹಿಸ್ಟರಿ ಆಫ್‌ ಸೈನ್ಸ್ ಸೊಸೈಟಿ, ಬ್ರಿಟಿಶ್‌‌ ಸೊಸೈಟಿ ಫಾರ್ ಹಿಸ್ಟರಿ ಆಫ್‌ ಸೈನ್ಸ್ ಮತ್ತು ಯುರೋಪಿಯನ್‌ ಸೊಸೈಟಿ ಫಾರ್ ಹಿಸ್ಟರಿ ಆಫ್‌ ಸೈನ್ಸ್.

ವಿಜ್ಞಾನದ ಇತಿಹಾಸದ ಸಿದ್ಧಾಂತಗಳು ಮತ್ತು ಸಮಾಜವಿಜ್ಞಾನ

ವಿಜ್ಞಾನದ ಇತಿಹಾಸದ ಬಹುತೇಕ ಅದ್ಯಯನವು ವಿಜ್ಞಾನ ಏನು ಆಗಿದೆ , ಅದು ಹೇಗೆ ಕಾರ್ಯನಿರ್ವಹಿಸುತ್ತದೆ , ಮತ್ತು ಅದು ವಿಶಾಲ-ವ್ಯಾಪ್ತಿಯ ವಿನ್ಯಾಸಗಳನ್ನು ಮತ್ತು ಪ್ರವೃತ್ತಿಗಳನ್ನು ಪ್ರದರ್ಶಿಸುತ್ತದೆಯೇ ಎಂಬ ಕುರಿತ ಪ್ರಶ್ನೆಗಳಿಗೆ ಉತ್ತರನೀಡುವುದಕ್ಕೇ ಸಮರ್ಪಿತವಾಗಿದೆ. ವಿಜ್ಞಾನದ ಸಮಾಜವಿಜ್ಞಾನವು ನಿರ್ದಿಷ್ಟವಾಗಿ ವಿಜ್ಞಾನಿಗಳು ಕೆಲಸ ಮಾಡುವ ವಿಧಾನಗಳ ಮೇಲೆ ಗಮನ ಕೇಂದ್ರೀಕರಿಸಿದ್ದು, ಅವರು ಹೇಗೆ ವೈಜ್ಞಾನಿಕ ಜ್ಞಾನವನ್ನು 'ಹುಟ್ಟುಹಾಕಿ', 'ನಿರ್ಮಿಸುತ್ತಾರೆ' ಎಂಬ ವಿಧಾನಗಳನ್ನು ಹತ್ತಿರದಿಂದ ಪರಿಶೀಲಿಸುತ್ತದೆ. 1960ರಿಂದ, ವಿಜ್ಞಾನ ಅಧ್ಯಯನಗಳಲ್ಲಿ (ಸಮಾಜವಿಜ್ಞಾನ ಮತ್ತು ವಿಜ್ಞಾನದ ಇತಿಹಾಸದ ಅಧ್ಯಯನಗಳು) ಒಂದು ಸಾಮಾನ್ಯ ಪ್ರವೃತ್ತಿ ಎಂದರೆ ವೈಜ್ಞಾನಿಕ ಜ್ಞಾನದ 'ಮಾನವ ಘಟಕ'ಕ್ಕೆ ಹೆಚ್ಚು ಒತ್ತುನೀಡುತ್ತಿರುವುದು ಮತ್ತು ವೈಜ್ಞಾನಿಕ ದತ್ತಾಂಶಗಳು ಸ್ವಯಂ-ವೇದ್ಯ ಮೌಲ್ಯ-ಮುಕ್ತ ಮತ್ತು ಸಂದರ್ಭ-ಮುಕ್ತ ಎಂಬ ದೃಷ್ಟಿಕೋನಕ್ಕೆ ಒತ್ತುನೀಡುವುದನ್ನು ಕಡಿಮೆ ಮಾಡಿರುವುದು. ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನಗಳು, ಹೆಚ್ಚಿನ ವೇಳೆ ವಿಜ್ಞಾನದ ಐತಿಹಾಸಿಕ ಅಧ್ಯಯನವನ್ನು ತಿಳಿಸುತ್ತ, ಒಂದಕ್ಕೊಂದು ಆವರಿಸುವ, ವಿಜ್ಞಾನದ ಸಮಕಾಲೀನ ಮತ್ತು ಐತಿಹಾಸಿಕ ಸಾಮಾಜಿಕ ಸಂದರ್ಭದ ಮೇಲೆ ಗಮನಕೇಂದ್ರೀಕರಿಸುವ ಒಂದು ಅಧ್ಯಯನ ಕ್ಷೇತ್ರವಾಗಿದೆ. ವಿಜ್ಞಾನದ ತತ್ವಶಾಸ್ತ್ರದಲ್ಲಿ ಕಾಳಜಿಯ ಮತ್ತು ವಿವಾದದ ಒಂದು ಪ್ರಮುಖ ವಿಷಯ ಎಂದರೆ ವಿಜ್ಞಾನದಲ್ಲಿ ಬದಲಾವಣೆಯ ಸಿದ್ಧಾಂತ ದ ಲಕ್ಷಣಗಳು. ಕಾರ್ಲ್‌ ಪಾಪ್ಪರ್ ವೈಜ್ಞಾನಿಕ ಜ್ಞಾನವು ಪ್ರಗತಿಪರ ಮತ್ತು ಸಂಚಯಿತ ಎಂದು ಪ್ರತಿಪಾದಿಸಿದನು; ಥಾಮಸ್‌ ಕುನ್‌ನು ವೈಜ್ಞಾನಿಕ ಜ್ಞಾನವು "ಚಿಂತನಾಸ್ಥಾನ ಪಲ್ಲಟ"ದೊಂದಿಗೆ ಸಾಗುತ್ತದೆ ಮತ್ತು ಅದು ಪ್ರಗತಿಪರವಾಗಿರಲೇಬೇಕು ಎಂದೇನಲ್ಲ ಎಂದು ವಾದಿಸಿದನು; ಮತ್ತು ಪಾಲ್ ಫೆಯರಬೆಂಡ್‌‌ನು, ವೈಜ್ಞಾನಿಕ ಜ್ಞಾನವು ಸಂಚಯಿತವೂ ಅಲ್ಲ ಅಥವಾ ಪ್ರಗತಿಪರವೂ ಅಲ್ಲ, ಜೊತೆಗೆ ವಿಜ್ಞಾನ ಮತ್ತು ಯಾವುದೇ ರೀತಿಯ ಶೋಧದ ಮಧ್ಯೆ ವಿಧಾನಗಳ ಅರ್ಥದಲ್ಲಿ ಯಾವುದೇ ಎಲ್ಲೆ ಗುರುತು ಇಲ್ಲ ಎಂದು ಪ್ರತಿಪಾದಿಸಿನು. ಕುನ್‌ ಬರೆದಿರುವ ದಿ ಸ್ಟ್ರಕ್ಚರ್ ಆಫ್‌ ಸೈಂಟಿಫಿಕ್ ರೆವಲ್ಯೂಶನ್ಸ್‌ ಕೃತಿಯು 1970ರಲ್ಲಿ ಪ್ರಕಟವಾದಾಗಿನಿಂದ, ವಿಜ್ಞಾನದ ಇತಿಹಾಸಕಾರರು, ಸಮಾಜವಿಜ್ಞಾನಿಗಳು ಮತ್ತು ತತ್ವಶಾಸ್ತ್ರಜ್ಞರು ವಿಜ್ಞಾನದ ಅರ್ಥ ಮತ್ತು ಧ್ಯೆಯಗಳ ಕುರಿತು ಸಾಕಷ್ಟು ಚರ್ಚೆ ಮಾಡಿದ್ದಾರೆ.

ಇವನ್ನೂ ಗಮನಿಸಿ

ಟೆಂಪ್ಲೇಟು:Portal box

ಟಿಪ್ಪಣಿಗಳು

ಹೆಚ್ಚಿನ ಓದಿಗಾಗಿ

  • ಅಗಾಸ್ಸಿ ಜೋಸೆಫ್ (2007) ಸೈನ್ಸ್‌ ಆಂಡ್ ಇಟ್ಸ್ ಹಿಸ್ಟರಿ: ಎ ರಿಅಸೆಸ್‌ಮೆಂಟ್ ಆಫ್ ದಿ ಹಿಸ್ಟರೋಗ್ರಾಫಿ ಆಫ್ ಸೈನ್ಸ್ (ವಿಜ್ಞಾನದ ತತ್ವಶಾಸ್ತ್ರದಲ್ಲಿ ಬೋಸ್ಟನ್ ಅಧ್ಯಯನಗಳು, 253) ಸ್ಪ್ರಿಂಗರ್. ಐಎಸ್‌ಬಿಎನ್‌ 1-4020-5631-1, 2008.
  • Boorstin, Daniel (1983). The Discoverers : A History of Man's Search to Know His World and Himself. New York: Random House. ISBN 0394402294. OCLC 9645583.
  • ಬೌಲರ್, ಪೀಟರ್ ಜೆ. ದಿ ನಾರ್ಟನ್ ಹಿಸ್ಟರಿ ಆಫ್ ಎನ್‌ವಿರಾನ್‌ಮೆಂಟಲ್ ಸೈನ್ಸ್‌‌ಸ್ (1993)
  • ಬ್ರೋಕ್, ಡಬ್ಲ್ಯು. ಎಚ್‌. ' ದಿ ನಾರ್ಟನ್ ಹಿಸ್ಟರಿ ಆಫ್ ಕೆಮಿಸ್ಟ್ರಿ (1993)
  • ಬ್ರೋನ್ಸ್ಕಿ, ಜೆ. ದಿ ಕಾಮನ್ ಸೆನ್ಸ್ ಆಫ್ ಸೈನ್ಸ್‌ (ಹೈನ್‌ಮ್ಯಾನ್ ಎಜುಕೇಶನಲ್ ಬುಕ್ಸ್ ಲಿ., ಲಂಡನ್, 1951. ಐಎಸ್‌ಬಿಎನ್ 84-297-1380-8. (ಇದು ಇಂಗ್ಲೆಂಡ್‌ನಲ್ಲಿ ವಿಜ್ಞಾನದ ಇತಿಹಾಸದ ವಿವರಣೆಯನ್ನೂ ಒಳಗೊಂಡಿದೆ.)
  • ಬೈರ್ಸ್, ನಿನಾ ಮತ್ತು ಗ್ಯಾರಿ ವಿಲಿಯಂಸ್, ಸಂ. (2006) ಔಟ್ ಆಫ್ ದಿ ಶ್ಯಾಡೋಸ್: ಕಾಂಟ್ರಿಬ್ಯುಶನ್ಸ್ ಆಫ್‌ 20ಯತ್ ಸೆಂಚುರಿ ವುಮನ್ ಟು ಫಿಸಿಕ್ಸ್ , ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್ ಐಎಸ್‌ಬಿಎನ್‌ 0-5218-2197-1
  • Heilbron, John L., ed. (2003). The Oxford Companion to the History of Modern Science. New York: Oxford University Press. ISBN 0-19-511229-6. ; CS1 maint: multiple names: authors list (link)
  • ಹೆರ್ಜೆನ್‌ಬರ್ಗ್‌, ಕರೋಲಿನ್‌ ಎಲ್‌. 1986. ವುಮನ್ ಸೈಂಟಿಸ್ಟ್‌ ಫ್ರಮ್ ಆಂಟಿಕ್ವಿಟಿ ಟು ದಿ ಪ್ರೆಸೆಂಟ್ ಲೊಕಸ್ಟ್ ಹಿಲ್ ಪ್ರೆಸ್ ಐಎಸ್‌ಬಿಎನ್‌ 0-933951-01-9
  • ಕುನ್‌, ಥಾಮಸ್ ಎಸ್‌. (1996). ದಿ ಸ್ಟ್ರಕ್ಚರ್ ಆಫ್ ಸೈಂಟಿಫಿಕ್ ರೆವಲ್ಯೂಶನ್ಸ್ 3ನೇ ಆವೃತ್ತಿ). ಚಿಕಾಗೋ ವಿಶ್ವವಿದ್ಯಾಲಯ ಮುದ್ರಣಾಲಯ. ಐಎಸ್ ಬಿಎನ್ 0-226-45807-5
  • ಕುಮಾರ್, ದೀಪಕ್ (2006). ಸೈನ್ಸ್ ಆಂಡ್ ದಿ ರಾಜ್: ಎ ಸ್ಟಡಿ ಆಫ್ ಬ್ರಿಟಿಶ್ ಇಂಡಿಯಾ , 2ನೇ ಆವೃತ್ತಿ. ಆಕ್ಸ್‌ಫರ್ಡ್‌‌ ಯುನಿವರ್ಸಿಟಿ ಪ್ರೆಸ್ ಐಎಸ್‌ಬಿಎನ್‌ 0-19-568003-0
  • ಲಕಟೊಸ್, ಇಮ್ರೆ ಹಿಸ್ಟರಿ ಆಫ್ ಸೈನ್ಸ್‌ ಆಂಡ್ ಇಟ್ಸ್ ರಾಶನಲ್ ರಿಕನ್‌ಸ್ಟ್ರಕ್ಷನ್ಸ್ ದಿ ಮೆಥಡಾಲಜಿ ಆಫ್ ಸೈಂಟಿಫಿಕ್ ರಿಸರ್ಚ್‌ ಪ್ರೋಗ್ರಾಮ್ಸ್‌: ಫಿಲಾಸಾಫಿಕಲ್‌ ಪೇಪರ್ಸ್ ವಾಲ್ಯೂಮ್ 1 ರಲ್ಲಿ ಪ್ರಕಟಗೊಂಡಿದೆ. (ಕೇಂಬ್ರಿಜ್‌: ಕೇಂಬ್ರಿಜ್‌ ವಿಶ್ವವಿದ್ಯಾಲಯ ಮುದ್ರಣಾಲಯ, 1983).
  • ಲೆವರ್ಜ್‌, ಟ್ರೆವರ್‌ ಹಾರ್ವೆ. ಟ್ರಾನ್ಸ್‌ಫಾರ್ಮಿಂಗ್ ಮ್ಯಾಟರ್: ಎ ಹಿಸ್ಟರಿ ಆಫ್‌ ಕೆಮಿಸ್ಟ್ರಿ ಫ್ರಮ್ ಆಲ್ಕೆಮಿ ಟು ದಿ ಬಕ್ಕಿಬಾಲ್ (2001)
  • ಲಿಂಡ್‌ಬರ್ಗ್‌, ಡೇವಿಡ್ ಸಿ. ಸಂ. ಕೇಂಬ್ರಿಜ್ ಹಿಸ್ಟರಿ ಆಫ್ ಸೈನ್ಸ್: ದಿ ಮಿಡಲ್ ಏಜ್ಸ್ (2010)
  • ಮಾರ್ಗೊಲಿಸ್, ಹೊವರ್ಡ್‌ (2002). ಇಟ್ ಸ್ಟಾರ್ಟೆಡ್ ವಿತ್ ಕೊಪರ್ನಿಕಸ್ . ನ್ಯೂಯಾರ್ಕ್‌:ಮೆಕ್‌ಗ್ರಾ-ಹಿಲ್‌. ಐಎಸ್‌ಬಿಎನ್‌ 0-07-138507-X
  • ಮೇರ್, ಡಿಎರ್ನೆಸ್ಟ್. ದಿ ಗ್ರೋತ್ ಆಫ್ ಬಯಾಲಾಜಿಕಲ್ ಥಾಟ್: ಡೈವರ್ಸಿಟಿ, ಇವಲ್ಯೂಶನ್ ಆಂಡ್ ಇನ್‌ಹೆರಿಸನ್ಸ್ (1985)
  • ನೀಧಾಮ್, ಜೋಸೆಫ್ . ಸೈನ್ಸ್ ಆಂಡ್ ಸಿವಿಲೈಸೇಶನ್ ಇನ್ ಚೀನಾ . ಅನೇಕ ಸಂಪುಟಗಳು (1954–2004).
    • Needham, Joseph; Wang, Ling (王玲) (1954). "Science and Civilisation in China". 1 Introductory Orientations. Cambridge University Press. ;
    • Needham, Joseph; Robinson, Kenneth G.; Huang, Jen-Yü (2004). "Science and Civilisation in China". 7, part II General Conclusions and Reflections. Cambridge University Press. ;
  • ನಾರ್ತ್, ಜಾನ್. ದಿ ನೋರ್ಟನ್ ಹಿಸ್ಟರಿ ಆಫ್ ಆಸ್ಟ್ರಾನಮಿ ಆಂಡ್ ಕಾಸ್ಮಾಲಜಿ (1995)
  • ನೀ, ಮೇರಿ ಜೋ, ಸಂ. ದಿ ಕೇಂಬ್ರಿಜ್ ಹಿಸ್ಟರಿ ಆಫ್ ಸೈನ್ಸ್‌, ಸಂಪುಟ 5: ದಿ ಮಾಡರ್ನ್‌ ಫಿಸಿಕಲ್ ಆಂಡ್ ಮ್ಯಾಥಮ್ಯಾಟಿಕಲ್ ಸೈನ್ಸ್‌ಸ್ (2002)
  • ಪಾರ್ಕ್‌, ಕ್ಯಾಥರಿನ್ ಆಂಡ್ ಲೊರೈನ್ ಡೋಸ್ತನ್, ಸಂ. ದಿ ಕೇಂಬ್ರಿಜ್ ಹಿಸ್ಟರಿ ಆಫ್ ಸೈನ್ಸ್‌‌, ಸಂಪುಟ ಸಂಪುಟ 3: ಅರ್ಲಿ ಮಾಡರ್ನ್‌ ಸೈನ್ಸ್ (2006)
  • ಪೋರ್ಟರ್‌, ರಾಯ್‌, ಸಂ. ದಿ ಕೇಂಬ್ರಿಜ್ ಹಿಸ್ಟರಿ ಆಫ್ ಸೈನ್ಸ್‌‌, ಸಂಪುಟ 4: ದಿ ಎಐಟೀನ್ತ್ ಸೆಂಚುರಿ (2003)
  • ರೊಸ್ಸೆಯು ಜಾರ್ಜ್‌ ಮತ್ತು ರೋಯ್ ಪೋರ್ಟರ್, ಸಂ., ದಿ ಫರ್ಮಂಟ್ ಆಫ್ ನಾಲೆಜ್‌: ಸ್ಟಡೀಸ್ ಇನ್ ದಿ ಹಿಸ್ಟರಿಯೊಗ್ರಫಿ ಆಫ್ ಸೈನ್ಸ್ ಅಧ್ಯಯನ (ಕೇಂಬ್ರಿಜ್: ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್, 1980). ಐಎಸ್‌ಬಿಎನ್ 0-521-22599-X

ಸಾಕ್ಷ್ಯಚಿತ್ರಗಳು

  • ಬಿಬಿಸಿThe Story of Science: Power, Proof and Passion The Story of Science: Power, Proof and Passion .

ಬಾಹ್ಯ ಕೊಂಡಿಗಳು

Tags:

ಆಧುನಿಕ ವಿಜ್ಞಾನ ಪ್ರಾಚೀನ ಸಂಸ್ಕೃತಿಗಳುಆಧುನಿಕ ವಿಜ್ಞಾನ ಮಧ್ಯಯುಗೀನ ಕಾಲದಲ್ಲಿ ವಿಜ್ಞಾನಆಧುನಿಕ ವಿಜ್ಞಾನ ಯೂರೋಪ್‌ನಲ್ಲಿ ವಿಜ್ಞಾನದ ಪ್ರಭಾವಆಧುನಿಕ ವಿಜ್ಞಾನ ಆಧುನಿಕ ವಿಜ್ಞಾನ ಶೈಕ್ಷಣಿಕ ಅಧ್ಯಯನಆಧುನಿಕ ವಿಜ್ಞಾನ ಇವನ್ನೂ ಗಮನಿಸಿಆಧುನಿಕ ವಿಜ್ಞಾನ ಟಿಪ್ಪಣಿಗಳುಆಧುನಿಕ ವಿಜ್ಞಾನ ಹೆಚ್ಚಿನ ಓದಿಗಾಗಿಆಧುನಿಕ ವಿಜ್ಞಾನ ಬಾಹ್ಯ ಕೊಂಡಿಗಳುಆಧುನಿಕ ವಿಜ್ಞಾನಅರಿಸ್ಟಾಟಲ್‌ನಿಸರ್ಗವಿಜ್ಞಾನ

🔥 Trending searches on Wiki ಕನ್ನಡ:

ವಚನಕಾರರ ಅಂಕಿತ ನಾಮಗಳುದಸರಾವೈದಿಕ ಯುಗಜಾಲತಾಣಕೊಡಗಿನ ಗೌರಮ್ಮಯೋಗ ಮತ್ತು ಅಧ್ಯಾತ್ಮಗಣೇಶ್ (ನಟ)ಮಾನವ ಸಂಪನ್ಮೂಲ ನಿರ್ವಹಣೆಮಡಿವಾಳ ಮಾಚಿದೇವರನ್ನಭಾಷಾಂತರಸೂರ್ಯದೇವತಾರ್ಚನ ವಿಧಿಗಾಳಿ/ವಾಯುಭಾರತದ ಇತಿಹಾಸವಾಲ್ಮೀಕಿಪತ್ರಕುಮಾರವ್ಯಾಸಶ್ರೀಧರ ಸ್ವಾಮಿಗಳುಚೋಮನ ದುಡಿ (ಸಿನೆಮಾ)ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಮಂಡಲ ಹಾವುಅಕ್ಕಮಹಾದೇವಿಭಾರತದ ಬುಡಕಟ್ಟು ಜನಾಂಗಗಳುಭಾರತದ ರಾಷ್ಟ್ರಪತಿರೇಡಿಯೋಭಾರತದ ಸ್ವಾತಂತ್ರ್ಯ ದಿನಾಚರಣೆಯೋಗಬ್ಯಾಂಕ್ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುತೆಂಗಿನಕಾಯಿ ಮರಮತದಾನಕರ್ನಾಟಕದ ಕಲೆ ಮತ್ತು ಸಂಸ್ಕೃತಿಜೋಡು ನುಡಿಗಟ್ಟುಕಮಲದಿಕ್ಸೂಚಿತ್ರಿಪದಿಅಶ್ವತ್ಥಾಮದಲಿತಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಮುರುಡೇಶ್ವರಕಾವೇರಿ ನದಿವೃದ್ಧಿ ಸಂಧಿಮೋಕ್ಷಗುಂಡಂ ವಿಶ್ವೇಶ್ವರಯ್ಯಅಯೋಧ್ಯೆಭೋವಿದಿವ್ಯಾಂಕಾ ತ್ರಿಪಾಠಿಚೋಮನ ದುಡಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಮುಹಮ್ಮದ್ಆಡು ಸೋಗೆಆರ್ಯಭಟ (ಗಣಿತಜ್ಞ)ಕೇಂದ್ರಾಡಳಿತ ಪ್ರದೇಶಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಶ್ರೀಕರ್ನಾಟಕದ ಹಬ್ಬಗಳುಕನ್ನಡ ಸಾಹಿತ್ಯ ಪರಿಷತ್ತುಎಸ್.ನಿಜಲಿಂಗಪ್ಪವಾದಿರಾಜರುಸಿಂಧನೂರುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕೊಬ್ಬಿನ ಆಮ್ಲತಾಪಮಾನರಾಮ ಮಂದಿರ, ಅಯೋಧ್ಯೆರಾಷ್ಟ್ರೀಯತೆಮೂಳೆಮಾನವನ ವಿಕಾಸಯೋನಿಪ್ಯಾರಾಸಿಟಮಾಲ್ಕರ್ಮಧಾರಯ ಸಮಾಸಭಾರತೀಯ ಸಂಸ್ಕೃತಿಸರ್ಪ ಸುತ್ತುಹುಲಿಸರ್ವೆಪಲ್ಲಿ ರಾಧಾಕೃಷ್ಣನ್ಆಮ್ಲ ಮಳೆಭಾರತದ ಆರ್ಥಿಕ ವ್ಯವಸ್ಥೆಚಂದ್ರಗುಪ್ತ ಮೌರ್ಯಪ್ರಾಥಮಿಕ ಶಿಕ್ಷಣಜಂತುಹುಳು🡆 More