ಅಯೋಧ್ಯೆ: ಉತ್ತರ ಪ್ರದೇಶದ ನಗರ, ಭಾರತ

ಅಯೋಧ್ಯೆ ಭಾರತದ ಪ್ರಾಚೀನ ನಗರಗಳಲ್ಲೊಂದು.

ಇದು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿದೆ. ಅಯೋಧ್ಯೆಯು ಸರಯೂ ನದಿಯ ತೀರದಲ್ಲಿದ್ದು, ಭಾರತದ ರಾಜಧಾನಿ ದೆಹಲಿಯಿಂದ ೫೫೫ ಕಿಲೋಮೀಟರ್ ದೂರದಲ್ಲಿದೆ. ಅಯೋಧ್ಯೆಯು ಭಾರತೀಯರ ಆರು ಪವಿತ್ರ ಸ್ಥಳಗಳಲ್ಲಿ ಒಂದೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ರಾಮಾಯಣದ ನಾಯಕನಾದ ಶ್ರೀರಾಮ ಅಯೋಧ್ಯೆಯಲ್ಲಿ ಜನ್ಮ ತಾಳಿದ್ದರಿಂದ ಈ ಸ್ಥಳವನ್ನು ರಾಮ ಜನ್ಮಭೂಮಿ ಎಂದು ಕರೆಯಲಾಗುತ್ತದೆ.

ಅಯೋಧ್ಯೆ
ಅಯೋಧ್ಯೆ
city
Population
 (2001)
 • Total೪೯,೬೫೦

ಚರಿತ್ರೆ

ಇದು ರಾಮಾಯಣ ಕಾಲದಲ್ಲಿ ಕೋಸಲ ದೇಶದ ರಾಜಧಾನಿಯಾಗಿತ್ತು ಎಂದು ಪ್ರತೀತಿ. ಆಗ ಇದರ ವಿಸ್ತೀರ್ಣ ಸುಮಾರು ೧೨ ಯೋಜನ ಎಂದರೆ ಸುಮಾರು ೮೦ ರಿಂದ ೧೦೦ ಮೈಲಿಗಳ ಸುತ್ತಳತೆ ಇತ್ತು ಎಂದು ರಾಮಾಯಣದಲ್ಲಿ ಉಲ್ಲೇಖವಿದೆ.ಈಗ ಇದರ ಯಾವುದೇ ಕುರುಹುಗಳಿಲ್ಲವಾದರೂ ಈಗಿನ ಪಟ್ಟಣದ ಸುತ್ತಲೂ ಇರುವ ಎತ್ತರದ ದಿಬ್ಬ ಪ್ರದೇಶದ ಅಂದಾಜಿನಲ್ಲಿ ಈ ನಗರವನ್ನು ಗುರುತಿಸಿದ್ದಾರೆ.ಈ ನಗರವನ್ನು ಸೂರ್ಯವಂಶದ ರಾಜರು ಹಲವಾರು ಶತಮಾನ ಆಳಿದರು. ಅವರ ಸಂತತಿ ಮುಂದೆ ಚೆಲ್ಲಾಪಿಲ್ಲಿಯಾಗಿ ಹಲವಾರು ಪ್ರದೇಶಗಳಲ್ಲಿ ಹರಡಿಕೊಂಡ ನಂತರೆ ಈ ನಗರದ ಪ್ರಾಮುಖ್ಯತೆ ಮಸುಕಾಯಿತು.ಮುಂದೆ ಬೌದ್ಧರ ಕಾಲದಲ್ಲಿ ಕೋಸಲ ದೇಶದ ರಾಜಧಾನಿಯಾಗಿ ಸಾಕೇತ ಪ್ರಸಿದ್ಧಿಯಾಯಿತು. ಇದು ಅಯೋಧ್ಯೆಯ ಒಂದು ಭಾಗವಾಗಿರುವ ಸಾಧ್ಯತೆ ಇದೆ ಎಂದು ಇತಿಹಾಸ ತಜ್ಜ಼ರ ಅಭಿಪ್ರಾಯ.ಮುಂದೆ ದೆಹಲಿಯ ಸುಲ್ತಾನ ರ ಕಾಲದಲ್ಲಿ ಇದು ಅವಧ್ ಪ್ರದೇಶದ ಆಡಳಿತ ಕೇಂದ್ರವಾಗಿದ್ದು, ೧೮ನೆಯ ಶತಮಾನದಲ್ಲಿ ಅವಧ್ ನ ನವಾಬರ ರಾಜಧಾನಿಯಾಗಿತ್ತು.೧೭೬೫ರಲ್ಲಿ ಶುಜಾ-ಉದ್-ದೌಲನು ಫೈಜಾಬಾದನ್ನು ತನ್ನ ಆಡಳಿತ ಕೇಂದ್ರವನ್ನ್ನಾಗಿಸಿಕೊಂಡ ನಂತರ ಅಯೋಧ್ಯೆಯು ತನ್ನ ಎಲ್ಲಾ ಪ್ರಾಮುಖ್ಯತೆಯನ್ನು ಕಳಕೊಂಡು ಕೇವಲ ಧಾರ್ಮಿಕ ಕ್ಷೇತ್ರವಾಗಿ ಉಳಿಯಿತು. ಅಯೋಧ್ಯಾ ನಗರದ ಇತಿಹಾಸ:

ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯನ್ನು (Ayodhya) ವಿಶ್ವ ದರ್ಜೆಯ ನಗರವನ್ನಾಗಿ ಮಾಡುವುದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕನಸಾಗಿದೆ. ಆ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ರಾಮ ಮಂದಿರದಿಂದಾಗಿ ಅತ್ಯುನ್ನತ ಪ್ರವಾಸಿ ತಾಣವಾಗಲಿರುವ ಅಯೋಧ್ಯೆಗೆ ಹಲವು ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳಿಗೆ ರಾಮಾಯಣದ ಪಾತ್ರಗಳ ಹೆಸರನ್ನು ಇಡುವುದಕ್ಕೆ ನಿರ್ಧರಿಸಲಾಗಿದೆ.

ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |

Tags:

ಉತ್ತರ ಪ್ರದೇಶದೆಹಲಿಭಾರತಭೂಮಿರಾಮರಾಮಾಯಣಸರಯೂ

🔥 Trending searches on Wiki ಕನ್ನಡ:

ನೀರಿನ ಸಂರಕ್ಷಣೆಅರಣ್ಯನಾಶಈಸೂರುಶಿವಮೊಗ್ಗಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಚಂದ್ರಶೇಖರ ವೆಂಕಟರಾಮನ್ಏಡ್ಸ್ ರೋಗಭಾರತದ ರಾಷ್ಟ್ರಪತಿಹೊಯ್ಸಳೇಶ್ವರ ದೇವಸ್ಥಾನಪೂರ್ಣಚಂದ್ರ ತೇಜಸ್ವಿಕದಂಬ ರಾಜವಂಶತ್ರಿಪದಿಸತ್ಯ (ಕನ್ನಡ ಧಾರಾವಾಹಿ)ಕರ್ನಾಟಕ ಸಂಗೀತಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುದಲಿತಅದ್ವೈತಚೆನ್ನಕೇಶವ ದೇವಾಲಯ, ಬೇಲೂರುನಾಮಪದಆಹಾರವಿಚ್ಛೇದನಸಾಮಾಜಿಕ ತಾಣಐಸಿಐಸಿಐ ಬ್ಯಾಂಕ್ಯಜಮಾನ (ಚಲನಚಿತ್ರ)ಕರ್ನಾಟಕದ ಶಾಸನಗಳುಪಶ್ಚಿಮ ಘಟ್ಟಗಳುಕರ್ಣಬಾಲ್ಯಭಾರತೀಯ ಮೂಲಭೂತ ಹಕ್ಕುಗಳುಶಾಂತಲಾ ದೇವಿಕನ್ನಡ ಸಾಹಿತ್ಯಕುಟುಂಬಸಾಕ್ಷಾತ್ಕಾರಕವಿಗಳ ಕಾವ್ಯನಾಮಗೂಗಲ್ಸ್ಯಾಮ್ ಪಿತ್ರೋಡಾಸಂವತ್ಸರಗಳುಕರ್ನಾಟಕದ ಹಬ್ಬಗಳುಚರಕಕನ್ನಡ ಅಕ್ಷರಮಾಲೆದೇವನೂರು ಮಹಾದೇವದ್ವಿರುಕ್ತಿಕಾಟೇರಹೈದರಾಬಾದ್‌, ತೆಲಂಗಾಣವಿನಾಯಕ ಕೃಷ್ಣ ಗೋಕಾಕನುಡಿಗಟ್ಟುಲೋಪಸಂಧಿವಿಜಯಪುರತಿರುಪತಿತಾಳೆಮರಮಹಾಕವಿ ರನ್ನನ ಗದಾಯುದ್ಧಭಾರತೀಯ ಜನತಾ ಪಕ್ಷರಾಶಿನವಿಲಗೋಣುಕಬ್ಬುಸಂಪತ್ತಿನ ಸೋರಿಕೆಯ ಸಿದ್ಧಾಂತಕರ್ನಾಟಕದ ಮಹಾನಗರಪಾಲಿಕೆಗಳುಮಾನವನ ಪಚನ ವ್ಯವಸ್ಥೆತ್ರಿವೇಣಿಹನುಮಂತನಗರೀಕರಣಬಾಲ ಗಂಗಾಧರ ತಿಲಕಅಶ್ವಮೇಧದ್ವಾರಕೀಶ್ಜನಪದ ಕಲೆಗಳುಸ್ವಾಮಿ ವಿವೇಕಾನಂದಗ್ರಾಮಗಳುಭಾರತದಲ್ಲಿ ಬ್ರಿಟಿಷ್ ಆಳ್ವಿಕೆಇಂಗ್ಲೆಂಡ್ ಕ್ರಿಕೆಟ್ ತಂಡಶಿವಭಾರತದ ಚುನಾವಣಾ ಆಯೋಗಟೊಮೇಟೊಭಾರತಜಾತಿ🡆 More