ಬಾಲ್ಯ

ಬಾಲ್ಯವು ಹುಟ್ಟಿನಿಂದ ಹಿಡಿದು ಹದಿಹರೆಯದವರೆಗಿನ ವಯೋವಧಿ.

ಪಿಯಾಜಿಯೆ ಅವರ ಅರಿವು ಸಂಬಂಧಿ ಬೆಳವಣಿಗೆಯ ಸಿದ್ಧಾಂತದ ಪ್ರಕಾರ, ಬಾಲ್ಯವು ಎರಡು ಹಂತಗಳನ್ನು ಹೊಂದಿರುತ್ತದೆ: ಪೂರ್ವಕಾರ್ಯಕಾರಿ ಹಂತ ಮತ್ತು ವಾಸ್ತವಿಕ ಕಾರ್ಯಕಾರಿ ಹಂತ. ಬೆಳವಣಿಗೆ ಮನಃಶಾಸ್ತ್ರದಲ್ಲಿ, ಬಾಲ್ಯವನ್ನು ದಟ್ಟಡಿತನ (ನಡೆಯಲು ಕಲಿಯುವ ಹಂತ), ಮುಂಚಿನ ಬಾಲ್ಯ (ಆಟದ ವಯಸ್ಸು), ಮಧ್ಯ ಬಾಲ್ಯ (ಶಾಲೆಯ ವಯಸ್ಸು) ಮತ್ತು ಹದಿಹರೆಯದ (ಪ್ರೌಢಾವಸ್ಥೆಯಿಂದ ಪ್ರೌಢಾವಸ್ಥೆ ನಂತರದ ಹಂತ) ಬೆಳವಣಿಗೆಯ ಹಂತಗಳಲ್ಲಿ ವಿಭಜಿಸಲಾಗುತ್ತದೆ. ಬಾಲ್ಯದ ವಿವಿಧ ಅಂಶಗಳು ಒಬ್ಬ ವ್ಯಕ್ತಿಯ ಮನೋಭಾವ ರಚನೆ ಮೇಲೆ ಪ್ರಭಾವ ಬೀರಬಹುದು. ಬಾಲ್ಯದ ಪರಿಕಲ್ಪನೆಯು ೧೭ನೇ ಮತ್ತು ೧೮ನೇ ಶತಮಾನಗಳ ಅವಧಿಯಲ್ಲಿ ಉದಯಿಸಿತು, ವಿಶೇಷವಾಗಿ ತತ್ವಶಾಸ್ತ್ರಜ್ಞ ಜಾನ್ ಲಾಕ್‍ರ ಶೈಕ್ಷಣಿಕ ಸಿದ್ಧಾಂತಗಳು ಮತ್ತು ಮಕ್ಕಳಿಗಾಗಿ ಹಾಗೂ ಮಕ್ಕಳ ಬಗ್ಗೆಯಿರುವ ಪುಸ್ತಕಗಳ ಬೆಳವಣಿಗೆಯ ಮೂಲಕ. ಈ ಘಟ್ಟಕ್ಕಿಂತ ಮುಂಚೆ, ಮಕ್ಕಳನ್ನು ಹಲವುವೇಳೆ ವಯಸ್ಕರ ಅಪೂರ್ಣ ಸ್ವರೂಪಗಳೆಂದು ನೋಡಲಾಗುತ್ತಿತ್ತು.

ಬಾಲ್ಯ
ಕಾರಂಜಿಯಲ್ಲಿ ಆಟವಾಡುತ್ತಿರುವ ಮಕ್ಕಳು

ಮರಣ, ವಿಪರೀತ ಅಪೌಷ್ಟಿಕತೆ, ವಿಪರೀತ ಹಿಂಸೆ, ಸಂಘರ್ಷದಿಂದ ಉಂಟಾಗುವ ಸ್ಥಳಾಂತರ, ಮಕ್ಕಳು ಶಾಲೆಯಿಂದ ಹೊರಗಿರುವುದು, ಬಾಲ ಕಾರ್ಮಿಕತೆ, ಮಕ್ಕಳಿಗೆ ಮಕ್ಕಳಿರುವುದು ಮತ್ತು ಬಾಲ್ಯ ವಿವಾಹಗಳು ಬಾಲ್ಯವನ್ನು ಅಂತ್ಯಗೊಳಿಸುವ ಎಂಟು ಜೀವನ ಘಟನೆಗಳೆಂಡು ವಿವರಿಸಲಾಗಿದೆ.

ಜೀವನಶೈಲಿಗಳು ಬದಲಾದಂತೆ ಮತ್ತು ವಯಸ್ಕರ ನಿರೀಕ್ಷೆಗಳು ಮಾರ್ಪಾಡುಗೊಂಡಂತೆ ಬಾಲ್ಯದ ಪರಿಕಲ್ಪನೆಯು ವಿಕಸನಗೊಂಡಂತೆ ಮತ್ತು ಬದಲಾದಂತೆ ಕಾಣುತ್ತದೆ. ಮಕ್ಕಳಿಗೆ ಯಾವುದೇ ಚಿಂತೆಗಳಿರಬಾರದು ಮತ್ತು ಅವರು ಕೆಲಸ ಮಾಡುವ ಅಗತ್ಯವಿರಬಾರದು ಎಂದು ಕೆಲವರು ನಂಬುತ್ತಾರೆ; ಜೀವನವು ಸಂತೋಷದಾಯಕ ಮತ್ತು ಕಷ್ಟರಹಿತವಾಗಿರಬೇಕು. ಸಾಮಾನ್ಯವಾಗಿ ಬಾಲ್ಯವು ಸಂತೋಷ, ಆಶ್ಚರ್ಯ, ತಲ್ಲಣ ಮತ್ತು ಚೇತರಿಸಿಕೊಳ್ಳುವಿಕೆಯ ಮಿಶ್ರಣವಾಗಿರುತ್ತದೆ. ಅದು ಸಾಮಾನ್ಯವಾಗಿ ಹೆತ್ತವರನ್ನು ಹೊರತುಪಡಿಸಿ, ಆಡುವ, ಕಲಿಯುವ, ಜನರೊಂದಿಗೆ ಬೆರೆಯುವ, ಅನ್ವೇಷಿಸುವ, ಮತ್ತು ಸಾಕಷ್ಟು ವಯಸ್ಕರ ಮಧ್ಯಸ್ಥಿಕೆ ಇಲ್ಲದ ಪ್ರಪಂಚದಲ್ಲಿ ಚಿಂತಿಸುವ ಕಾಲವಾಗಿರುತ್ತದೆ. ಅದು ವಯಸ್ಕ ಜವಾಬ್ದಾರಿಗಳನ್ನು ನಿಭಾಯಿಸುವ ಅಗತ್ಯವಿಲ್ಲದೇ ಜವಾಬ್ದಾರಿಗಳ ಬಗ್ಗೆ ಕಲಿಯುವ ಕಾಲವಾಗಿರುತ್ತದೆ.

ಮಕ್ಕಳ ಆರೋಗ್ಯದಲ್ಲಿ ಮಕ್ಕಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮಗಳು ಸೇರಿವೆ. ಮಕ್ಕಳ ಆರೋಗ್ಯವನ್ನು ಕಾಪಾಡುವುದು ಎಂದರೆ ಅವರಿಗೆ ಆರೋಗ್ಯಕರ ಆಹಾರಗಳನ್ನು ನೀಡುವುದು, ಅವರಿಗೆ ಸಾಕಷ್ಟು ನಿದ್ದೆ ಮತ್ತು ವ್ಯಾಯಾಮ ಸಿಗುತ್ತದೆಂದು ಖಚಿತಪಡಿಸಿಕೊಳ್ಳುವುದು, ಮತ್ತು ಅವರ ಸುರಕ್ಷತೆಯನ್ನು ಕಾಪಾಡುವುದು. ವಿಶ್ವದ ಕೆಲವು ಭಾಗಗಳಲ್ಲಿ ಹಲವುವೇಳೆ ಮಕ್ಕಳು ಅಪೌಷ್ಟಿಕತೆಯಿಂದ ಬಾಧಿತವಾಗಿರುತ್ತಾರೆ. ಇದು ಹಲವುವೇಳೆ ಅತಿಸಾರ, ನ್ಯುಮೋನಿಯಾ ಮತ್ತು ಮಲೇರಿಯಾದಂತಹ ಇತರ ಸ್ಥಿತಿಗಳಿಗೆ ಸಂಬಂಧಿಸಿರುತ್ತದೆ.

ಉಲ್ಲೇಖಗಳು

Tags:

ಜಾನ್ ಲಾಕ್ತಾರುಣ್ಯ

🔥 Trending searches on Wiki ಕನ್ನಡ:

ಗೋಪಾಲಕೃಷ್ಣ ಅಡಿಗಹರಿದಾಸಹೊನಗೊನ್ನೆ ಸೊಪ್ಪುಅಲಂಕಾರಸಕಲೇಶಪುರಎತ್ತಿನಹೊಳೆಯ ತಿರುವು ಯೋಜನೆಚನ್ನವೀರ ಕಣವಿರೋಸ್‌ಮರಿಕಾವೇರಿ ನದಿಉಪನಿಷತ್ಚಾಣಕ್ಯಭಗತ್ ಸಿಂಗ್ಆತ್ಮಚರಿತ್ರೆಆಂಧ್ರ ಪ್ರದೇಶತಾಪಮಾನಭತ್ತಬಾಲ್ಯ ವಿವಾಹಕರ್ನಾಟಕ ರತ್ನತಾಳಗುಂದ ಶಾಸನವಿಕ್ರಮಾರ್ಜುನ ವಿಜಯಹೆಚ್.ಡಿ.ದೇವೇಗೌಡವೇದನಾಗಮಂಡಲ (ಚಲನಚಿತ್ರ)ಕರ್ನಾಟಕದ ಜಾನಪದ ಕಲೆಗಳುವಾಲಿಬಾಲ್ಮೈಸೂರು ಅರಮನೆಪ್ರಕಾಶ್ ರೈಆಟಿಸಂಮೂಲವ್ಯಾಧಿಶ್ರೀ. ನಾರಾಯಣ ಗುರುವಿಮರ್ಶೆಸೇನಾ ದಿನ (ಭಾರತ)ಬೆಳಗಾವಿಚಂದ್ರಶೇಖರ ವೆಂಕಟರಾಮನ್ಹೊನೊಲುಲುಕರ್ನಾಟಕದ ಜಿಲ್ಲೆಗಳುಶ್ರೀಕೃಷ್ಣದೇವರಾಯಗುಪ್ತ ಸಾಮ್ರಾಜ್ಯಸಂಯುಕ್ತ ರಾಷ್ಟ್ರ ಸಂಸ್ಥೆತೆಂಗಿನಕಾಯಿ ಮರಡಾ ಬ್ರೋಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕರ್ನಾಟಕದ ಮಹಾನಗರಪಾಲಿಕೆಗಳುಸೀತೆಗುಣ ಸಂಧಿಅಕ್ಷಾಂಶ ಮತ್ತು ರೇಖಾಂಶದಿಯಾ (ಚಲನಚಿತ್ರ)ಬ್ಯಾಸ್ಕೆಟ್‌ಬಾಲ್‌ಕ್ಯಾರಿಕೇಚರುಗಳು, ಕಾರ್ಟೂನುಗಳುಭಾರತೀಯ ನೌಕಾಪಡೆಮಯೂರ (ಚಲನಚಿತ್ರ)ಅಪಕೃತ್ಯತ್ಯಾಜ್ಯ ನಿರ್ವಹಣೆಹಿಂದೂ ಮಾಸಗಳುಜಾಹೀರಾತುಮಹೇಶ್ವರ (ಚಲನಚಿತ್ರ)ಶ್ರೀಲಂಕಾಡಿ.ಆರ್. ನಾಗರಾಜ್ಜಾಗತೀಕರಣಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಅಲೆಕ್ಸಾಂಡರ್ಸುಮಲತಾಶ್ರೀಬಾಲಕಾರ್ಮಿಕಪರೀಕ್ಷೆಅನುಷ್ಕಾ ಶೆಟ್ಟಿರಾವಣಪ್ರಬಂಧ ರಚನೆದೇವನೂರು ಮಹಾದೇವವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಬರಗೂರು ರಾಮಚಂದ್ರಪ್ಪಚಂಡಮಾರುತಮೂಲಭೂತ ಕರ್ತವ್ಯಗಳುಕ್ರಿಸ್ ಇವಾನ್ಸ್ (ನಟ)ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕಿತ್ತೂರು ಚೆನ್ನಮ್ಮಭಾರತದ ಪ್ರಧಾನ ಮಂತ್ರಿ🡆 More