ವಾತಾ೯ ಭಾರತಿ ಮಂಗಳೂರು ಮತ್ತು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿರುವ ಕನ್ನಡ ದಿನಪತ್ರಿಕೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
೨೦೦೩ರಲ್ಲಿ ವಾತಾ೯ ಭಾರತಿಯನ್ನು ಎ.ಎಸ್. ಪುತ್ತಿಗೆಯವರು ಮಂಗಳೂರಿನಿಂದ ಪ್ರಾರಂಭಿಸಿದರು.
ವರ್ಗ | ದೈನಿಕ |
---|---|
ವಿನ್ಯಾಸ | ಕಾಗದ |
ಮಾಲೀಕ | ದ ಕಮ್ಯುನಿಟಿ ಮೀಡಿಯಾ ಟ್ರಸ್ಟ್ |
ಸ್ಥಾಪಕ | ಅಬ್ದುಸ್ಸಲಾಮ್ ಪುತ್ತಿಗೆ |
ಪ್ರಕಾಶಕ | ಅಬ್ದುಸ್ಸಲಾಮ್ ಪುತ್ತಿಗೆ |
ಸಂಪಾದಕ | ಅಬ್ದುಸ್ಸಲಾಮ್ ಪುತ್ತಿಗೆ |
ಸುದ್ದಿ ಸಂಪಾದಕ | ಬಿ ಎಮ್ ಬಶೀರ್ |
ಸ್ಥಾಪನೆ | ೨೯ನೇ ಆಗಷ್ಟ್ ೨೦೦೩ |
ಭಾಷೆ | ಕನ್ನಡ |
ಕೇಂದ್ರ ಕಾರ್ಯಾಲಯ | ಮಂಗಳೂರು, ಕರ್ನಾಟಕ, ಭಾರತ. |
ಅಧಿಕೃತ ತಾಣ | varthabharati |
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಉದುಪಿ, ಉತ್ತರ ಕನ್ನಡ ಮಾತ್ರವಲ್ಲದೆ ನೆರೆಯ ಕಾಸರಗೋಡು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲೂ ಪತ್ರಿಕೆ ಓದುಗರನ್ನು ಪಡೆಯಿತು. ಪತ್ರಿಕೆ ಆರಂಭವಾದ ಮೂರನೇ ವರ್ಷಕ್ಕೆ ಬೆಂಗಳೂರು ಆವೃತ್ತಿಯನ್ನು ಆರಂಭಿಸಲಾಯಿತು. ವಾರ್ತಾಭಾರತಿಯ ಪ್ರಸಾರ ರಾಜ್ಯಾದ್ಯಂತ ವ್ಯಾಪಿಸಿದೆ. ಕರ್ನಾಟಕದ ಹೊರಗೂ ಸಹ ವಾರ್ತಾಭಾರತಿಗೆ ಓದುಗರಿದ್ದಾರೆ.
ಆಗಸ್ಟ್ ೨೯, ೨೦೦೩ರಂದು ಮಂಗಳೂರನ್ನು ಕೇಂದ್ರವಾಗಿಟ್ಟು ಮಾರುಕಟ್ಟೆಗೆ ಬಂತು. ಅಬ್ಧುಸ್ಸಲಾಮ್ ಪುತ್ತಿಗೆ (ಎ.ಎಸ್. ಪುತ್ತಿಗೆ) ಯವರ ಪ್ರಧಾನ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಈ ದೈನಿಕವನ್ನು ಮಾಧ್ಯಮ ಕಮ್ಯುನಿಕೇಶನ್ಸ್ ಲಿ. ಮುದ್ರಿಸುತ್ತಿದೆ. ಎಸ್.ಎಂ. ಸಯ್ಯದ್ ಖಲೀಲ್ ಮಾಧ್ಯಮ ಕಮ್ಯುನಿಕೇಶನ್ಸ್ ಲಿ. ನ ಅಧ್ಯಕ್ಷರಾಗಿದ್ದು, ಅಬ್ದುಸ್ಸಲಾಮ್ ಪುತ್ತಿಗೆಯವರು ದೈನಿಕದ ಆಡಳಿತ ನಿರ್ದೇಶಕರೂ ಆಗಿದ್ದಾರೆ.
ವಾರ್ತಾಭಾರತಿಯಲ್ಲಿ ನಿಯಮಿತವಾಗಿ ಪ್ರಕತವಾಗುವ ಅಂಕಣಗಳು - ರಾಜಕೀಯ, ಪರಿಸರ, ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿ, ಆರೋಗ್ಯ, ಇತ್ಯಾದಿಗಳ ಕುರಿತು ನಾಡಿನ ಖ್ಯಾತ ಲೇಖಕರು, ಚಿಂತಕರು ಪ್ರತಿವಾರ ಪತ್ರಿಕೆಯಲ್ಲಿ ಬರೆಯುತ್ತಾರೆ. ವಾರ್ತಾಭಾರತಿಯಲ್ಲಿ ಪ್ರಕಟವಾಗುವ ಸ್ಥಿರ ಅಂಕಣಗಳು ಮತ್ತು ಅಂಕಣಕಾರರ ಹೆಸರುಗಳು ಹೀಗಿವೆ:
ದಿನ | ಅಂಕಣದ ಹೆಸರು | ಅಂಕಣಕಾರರು |
ಸೋಮವಾರ | ಪ್ರಚಲಿತ | ಸನತ್ ಕುಮಾರ್ (ಪತ್ರಕರ್ತ) |
ಗುರುವಾರ | ನಿಜಾರ್ಥ | ಶಿವಸುಂದರ್ (ಲೇಖಕ, ಮಾನವ ಹಕ್ಕುಗಳ ಹೋರಾಟಗಾರ) |
ಶುಕ್ರವಾರ | ಆಶಯ | ಡಾ. ಬಿ. ಭಾಸ್ಕರ್ ರಾವ್ (ಶಿಕ್ಷಣ ತಜ್ನ) |
ರವಿವಾರ | ಅಂತರಗಂಗೆ | ಡಾ. ಸಿ. ಎಸ್. ದ್ವಾರಕನಾಥ್ (ನ್ಯಾಯವಾದಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ) |
ರವಿವಾರ | ನಗೆಮೊಗೆ | ಭುವನೇಶ್ವರಿ ಹೆಗಡೆ(ಹಾಸ್ಯ ಲೇಖಕಿ) |
ಸೋಮವಾರ | ದಾರಿದೀಪ | ಕೆ. ಟಿ. ಗಟ್ಟಿ (ಕಾದಂಬರಿಗಾರ) |
ಮಾಸಿಕ ಗಲ್ಫ್ ಭಾರತಿ | ಮರಳ ಹೆಜ್ಜೆಗಳು | ಇರ್ಶಾದ್ ಮೊಡಬಿದ್ರೆ (ಲೇಖಕ, ಅನಿವಾಸಿ ಭಾರತೀಯ) |
ನಿತ್ಯದ ೧೨ ಪುಟಗಳೊಂದಿಗೆ ಪ್ರತಿ ರವಿವಾರ ಸುಗ್ಗಿ ಹೆಸರಿನ ನಾಲ್ಕು ಹೆಚ್ಚುವರಿ ಪುಟಗಳನ್ನು ಪುರವಣಿ ರೂಪದಲ್ಲಿ ವಾರ್ತಾಭಾರತಿ ಪ್ರಕಟಿಸುತ್ತಿದೆ. ನುಡಿಚಿತ್ರ, ಲೇಖನ, ಕಥೆ, ಕವನ, ವಿಮರ್ಶೆ, ಪುಸ್ತಕ ಪರಿಚಯ ಇತ್ಯಾದಿಗಳನ್ನು ಈ ಪುರವಣಿ ಹೊಂದಿದೆ. ಖುಷಿ ಖುಷಿ ಎಂಬ ವಿಭಾಗ ಮಕ್ಕಳಿಗಾಗಿ ಮೀಸಲು. ನೀತಿಕಥೆಗಳು, ಮಕ್ಕಳು ರಚಿಸಿದ ಚಿತ್ರಗಳು, ಮಕ್ಕಳ ಪದ್ಯಗಳು ಇತ್ಯಾದಿ ವಿಷಯಗಳು ಇದರಲ್ಲಿದೆ. ಚಿತ್ರಭಾರತಿ ವಿಭಾಗದಲ್ಲಿ ಪ್ರಚಲಿತ ಚಿತ್ರರಂಗದ ಬೆಳವಣಿಗೆಗಳು ಹಾಗೂ ಚಿತ್ರ ವಿಮರ್ಶೆಗಳಿರುತ್ತವೆ.
ವಾರ್ತಾಭಾರತಿ ದೈನಿಕದಲ್ಲಿ ಪ್ರತಿ ವಾರ ಪ್ರಕಟವಾಗುತ್ತಿದ್ದ ಪರಿಸರ ಕಾಳಜಿ ಅಂಕಣ ಭೂಮಿಗೀತೆ. ಲೇಖಕ ಹಾಗೂ ಪರಿಸರ ಚಳವಳಿಯ ಸಕ್ರಿಯ ಕಾರ್ಯಕರ್ತ ಡಾ. ಟಿ. ಎಸ್. ವಿವೇಕಾನಂದ ಈ ಅಂಕಣವನ್ನು ವಾರ್ತಾಭಾರತಿಗಾಗಿ ಬರೆದಿದ್ದರು. ನಂತರ ಈ ಬರಹಗಳು ಭೂಮಿಗೀತೆ ಹೆಸರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ೨೦೦೬ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇದಕ್ಕೆ ದೊರಕಿದೆ.[ಸೂಕ್ತ ಉಲ್ಲೇಖನ ಬೇಕು]
ವಾರ್ತಾಭಾರತಿಯ ಸಂಪಾದಕರು ಎ.ಎಸ್. ಪುತ್ತಿಗೆಯವರು.
ವಾರ್ತಾಭಾರತಿ.ನೆಟ್ ಅಥವಾ ವಾರ್ತಾಭಾರತಿ.ಇನ್ ವಾರ್ತಾಭಾರತಿ ದಿನಪತ್ರಿಕೆಯ ಅಂತರಜಾಲ ತಾಣ. ಅಂತರಜಾಲದ ಹೊಸ ತಂತ್ರಜ್ಞಾನ ಬಳಸಿ ಕನ್ನಡದಲ್ಲಿ ವಾರ್ತಾಭಾರತಿಯ ಅಂತರಜಾಲ ಆವೃತ್ತಿಯನ್ನು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
This article uses material from the Wikipedia ಕನ್ನಡ article ವಾರ್ತಾ ಭಾರತಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.