ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನು ಜಾರಿಗೆ ತಂದಿದ್ದರು.
ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು. ಇದರಿಂದಾಗಿ ಭಾರತೀಯರು ಅಸಮಾಧಾನಗೊಂಡರು. ಇವರ ಆಡಳಿತದ ಬಗ್ಗೆಯೂ ಜನರಲ್ಲಿ ಅಸಮಾಧಾನವಿತ್ತು. ಅಸಮಾಧಾನವು 1857ರಲ್ಲಿ ಮಹಾಪ್ರತಿಭಟನೆಯ ರೂಪದಲ್ಲಿ ಸ್ಫೋಟಿಸಿತ್ತು. ಇದನ್ನು ಭಾರತೀಯ ಇತಿಹಾಸಕಾರರು 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ಕರೆದರೆ, ಇಂಗ್ಲಿಷ್ ಇತಿಹಾಸಕಾರರು ಇದೊಂದು 'ಸಿಪಾಯಿ ದಂಗೆ' ಮಾತ್ರ ಎಂದಿದ್ದಾರೆ.
ವಿವಿಧ ವಿದ್ವಾಂಸರ ಪ್ರಕಾರ ಇದೊಂದು ಸಂಪೂರ್ಣ ಸಿಪಾಯಿ ದಂಗೆ ಹೊರತು ಮತ್ತೇನೂ ಅಲ್ಲ ಸ್ವಲ್ಪಮಟ್ಟಿನ ಜನತೆಯ ಹೋರಾಟವಾಗಿತ್ತು ಎಂದು ಆಂಗ್ಲ ವಿದ್ವಾಂಸರಾದ ವಿ.ಎ.ಸ್ಮಿತ್ ಹೇಳಿದ್ದಾರೆ. ಭಾರತೀಯ ಇತಿಹಾಸಕಾರ ಹಾಗು ವಿದ್ವಾಂಸ ವಿ. ಡಿ. ಸಾರ್ವಕರ್ ತಮ್ಮ 1857 'ಭಾರತ ಸ್ವಾತಂತ್ರ್ಯ ಸಂಗ್ರಾಮ' ಎಂಬ ಕೃತಿಯಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಉಲ್ಲೇಖಿಸಿದ್ದಾರೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಸೈನಿಕ ಮತ್ತು ಸಂಗ್ರಾಮದ ಹಿನ್ನೆಲೆಯಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟದ ಚರ್ಚೆಗಳು ಮುಂದಿನಂತೆ ಇವೆ.
ಬ್ರಿಟಿಷರು ಜಾರಿಗೆ ತಂದಿದ್ದ 'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎಂಬ ನೀತಿಯನ್ನು ಇಂಗ್ಲಿಷರ ಕಾಲದಲ್ಲಿ ಲಾರ್ಡ್ ಡಾಲ್ ಹೌಸಿಯು ಜಾರಿಗೆ ತಂದಿದ್ದನು. ಈ ನೀತಿಯಿಂದಾಗಿ ಹಲವು ದೇಶಿ ಸಂಸ್ಥಾನಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಯಿತು. ಈ ನೀತಿಯಿಂದಾಗಿ ಸತಾರ, ಜೈಪುರ, ರವಾನಿ, ಉದಯಪುರ ಇತ್ಯಾದಿ ದೇಶೀಯ ಸಂಸ್ಥಾನಗಳು ಬ್ರಿಟಿಷರ ವಶವಾದವು. ರಾಜನು ತನಗೆ ಮಕ್ಕಳಿಲ್ಲದಿದ್ದರೆ ರಾಜ್ಯವನ್ನು ದತ್ತು ಪಡೆದ ಮಕ್ಕಳಿಗೆ ನೀಡುತ್ತಿದ್ದ. ಆದರೆ 'ದತ್ತುಮಕ್ಕಳಿಗೆ ಹಕ್ಕಿಲ್ಲ' ನೀತಿಯ ಪ್ರಕಾರ ಇದು ಕಾನೂನು ವಿರೋಧಿ ಆಗುತ್ತಿತ್ತು. ಈ ನೀತಿಯ ಪ್ರಕಾರ ಡಾಲ್ಹೌಸಿಯು ತಂಜಾವೂರು ಮತ್ತು ಕರ್ನಾಟಕ ನವಾಬರಿಗಿದ್ದ ರಾಜ ಪದವಿಗಳನ್ನು ರದ್ದುಪಡಿಸಿದನು, ಪರಿಣಾಮವಾಗಿ ಇವರನ್ನು ಅವಲಂಬಿಸಿದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು. ಇದು ಬ್ರಿಟಿಷರ ವಿರುದ್ಧದ 1857ರ ಪ್ರತಿಭಟನೆಗೆ ಪ್ರೇರಕವಾಯಿತು.
ಬ್ರಿಟಿಷ್ ಮತ್ತು ಭಾರತೀಯ ಸೈನಿಕರ ನಡುವೆ ಸ್ಥಾನಮಾನ ಮತ್ತು ವೇತನಗಳಲ್ಲಿ ತಾರತಮ್ಯ, ಭಾರತೀಯರಿಗೆ ಸೈನ್ಯದಲ್ಲಿ ಉನ್ನತ ಹುದ್ದೆಗಳ ನಿರಾಕರಣೆ, ಈ ದಂಗೆಗೆ ತಕ್ಷಣದ ಕಾರಣವೆಂದರೆ ವಾಸ ಎನ್ಫೀಲ್ಡ್ ಬಂದೂಕುಗಳ ತೋಪುಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದು ಈ ಬಂದೂಕಿನ ಮುಟ್ಟಲು ಹಿಂದೂಗಳು ಮತ್ತು ಮುಸ್ಲಿಮರು ನಿರಾಕರಿಸಿದರು. ಇದರಿಂದ ಸಿಟ್ಟಿಗೆದ್ದ ಮಂಗಲ್ ಪಾಂಡೆ ಎಂಬ ಸೈನಿಕನು ಬ್ರಿಟಿಷ್ ಅಧಿಕಾರಿಯನ್ನು ಕೊಂದನು. ಆದ್ದರಿಂದ ಸಿಪಾಯಿಗಳನ್ನು ಬ್ರಿಟಿಷರು ಕಾರಾಗೃಹಕ್ಕೆ ತಳ್ಳಿದರು. ಸಿಪಾಯಿಗಳು ಕಾರಾಗೃಹ ಒಡೆದು ದೆಹಲಿಯತ್ತ ಸಾಗಿ ಕೆಂಪುಕೋಟೆಯಲ್ಲಿ ಎರಡನೇ ಬಹದ್ದೂರ್ ಷಾ ನನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು.
ಧಾರ್ಮಿಕ ಭಾವನೆಯನ್ನು ಕೆರಳಿಸುವಂತಹ ಸುದ್ದಿ ಉದ್ರೇಕಗೊಳಿಸಿತು ಮಾರ್ಚ್ 29 18 57 ರಲ್ಲಿ ಬ್ರಾಹ್ಮಣ ಸೈನಿಕ ಮಂಗಲಪಾಂಡೆ ಸೈನಿಕನು ಬಹಿರಂಗವಾಗಿ ದಂಗೆಯೆದ್ದು ,ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ಹಾಕಿದನು. ಜೊತೆಗಾರ ಸೈನಿಕರನ್ನೆಲ್ಲಾ ಸೇರಿಸಿ ನನ್ನ ಜೊತೆಗೂಡಿ, ನಮ್ಮ ಧರ್ಮ ಮತ್ತು ಜಾತಿ ರಕ್ಷಣೆಗೆ ಹೋರಾಡಲು ಕರೆ ನೀಡಿದರು. ಈ ಕ್ರಾಂತಿಯ ಮೊದಲು ಉಗಮವಾಗಿದ್ದು ಮೀರತ್ ನಲ್ಲಿ, ಮೀರತ್ ತಿನ ಒಂದು ತುಕಡಿ ಯು ಬಂದೂಕು ಮುಟ್ಟಲು ನಿರಾಕರಿಸಿದರು. ಇದರಿಂದ ಕೆರಳಿದ ಬ್ರಿಟಿಷರು 10 ವರ್ಷ ಕಠಿಣ ಶಿಕ್ಷೆ ವಿಧಿಸಿತು. ಸಾರ್ವಜನಿಕವಾಗಿ ಚಿತ್ರ ಹಿಂಸೆ ನೀಡಿ ಅವರಿಂದ ಸಮವಸ್ತ್ರ ಕಸಿದುಕೊಳ್ಳಲಾಯಿತು ಇದನ್ನು ನೋಡಿದ ಇತರ ಸೈನಿಕರು ಉದ್ರೇಕಗೊಂಡು ಸೈನಿಕರನ್ನು ಬಂಧಿಸಿಟ್ಟಿದ್ದ ಜೈಲಿಗೆ ನುಗ್ಗಿ ಅಲ್ಲಿದ್ದ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ಹಾಕಿ ತಮ್ಮ ಸೈನಿಕರನ್ನು ಬಂಧಮುಕ್ತಗೊಳಿಸಿದರು. ನಂತರ ಈ ಸೈನಿಕರು ದೆಹಲಿಯತ್ತ ತೆರಳಿ ಮೊಘಲ್ ದೊರೆ ಬಹುಶಃ ನಾನು ರಾಜನಾಗಿ ಮಾಡಿದರು. ಇದನ್ನು ತಿಳಿದ ಬ್ರಿಟಿಷರ ಕೆಂಪು ಕೋಟೆಯ ಮೇಲೆ ಬಾರಿ ದಾಳಿ ಮಾಡಿ ಬಹುದೂರ್ ಷಾ ಮೊಗಲ್ ದೊರೆಯ ಇಬ್ಬರು ಮಕ್ಕಳನ್ನು ಲೆಫ್ಟಿನೆಂಟ್ ಹಸ್ಸನ್ ಕೊಂದು ಹಾಕಿದ ಬಹುದುರ್ ಶಾನು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದ ಇದೇ ರೀತಿ ಕಾನ್ ಪುರ್ ಲಕ್ನೋ ಜಾನ್ಸಿ ಗ್ವಾಲಿಯರ್ ಇತರೆ ಸ್ಥಳಗಳಲ್ಲಿ ಬಿಟಿಷರ ವಿರುದ್ಧ ಹೋರಾಟಗಳು ಸ್ಪೋಟಗೊಂಡ ಭಾರತದ ಬಹುತೇಕ ಸ್ಥಳಗಳಲ್ಲಿ ಆರಂಭವಾಯಿತು
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಭಾರತದ ಉಪಖಂಡದ ಮೇಲೆ ಬ್ರಿಟಿಷ್ ಆಕ್ರಮಣದ ವಿರುದ್ಧ ನಡೆದ ಶಸ್ತ್ರಸಜ್ಜಿತ ಬಂಡಾಯ. ಇದನ್ನು ವಿವಿಧ ರೀತಿಯಾಗಿ ಸಿಪಾಯಿ ದಂಗೆ ಮತ್ತು '1857 ರ ಭಾರತೀಯ ದಂಗೆ ಎಂದು ಬ್ರಿಟೀಷರು ಕರೆಯುತ್ತಾರೆ. ಈ ಸಂಗ್ರಾಮ ದ ಪರಿಣಾಮವಾಗಿ ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಆಳ್ವಿಕೆ ಕೊನೆಗೊಂಡು ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆ ಆರಂಭವಾಯಿತು.
ಈ ಬಂಡಾಯ ಆರಂಭವಾಗಲು ಹಲವಾರು ಕಾರಣಗಳನ್ನು ಹುಡುಕಬಹುದು.
೨೬ ಫೆಬ್ರವರಿ ೧೮೫೭ರಂದು ೧೯ನೇ ಬಂಗಾಳ ಸ್ಥಳೀಯ ಕಾಲಾಳು ಸೈನಿಕರು ಹೊಸ ಕಾಡತೂಸುಗಳ ಬಗ್ಗೆ ತಿಳಿದು ಅವುಗಳನ್ನು ಉಪಯೋಗಿಸಲು ನಿರಾಕರಿಸಿದರು. ಸೈನ್ಯದ ಕರ್ನಲ್ ಇದನ್ನು ತಿಳಿದು ಆವೇಶಗೊಂಡರೂ, ಕೊನೆಗೆ ಸೈನಿಕರ ಒತ್ತಾಯಕ್ಕೆ ಮಣಿದು ಮರು ದಿನದ ತಾಲೀಮನ್ನು ರದ್ದು ಮಾಡಬೇಕಾಯಿತು.
ಬ್ರಿಟಿಷರ ದತ್ತುಸ್ವೀಕಾರ ಕಾಯಿದೆ, ಸಹಾಯಕ ಸೈನ್ಯಪದ್ಧತಿ ಮತ್ತು ಅವರ ಒಡೆದು ಆಳುವ ಕುಟಿಲನೀತಿಯಿಂದ ಭಾರತದ ಎಲ್ಲ ರಾಜ್ಯಗಳನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡಿದ್ದು. ಅದರಲ್ಲಿ ಕೆಲವೊಂದು ರಾಜ್ಯಗಳು ಅವರ ಹಿಡಿತಕ್ಕೆ ಸಿಕ್ಕಿರಲಿಲ್ಲ. ಬ್ರಿಟಿಷರ ರಾಜ್ಯದಾಹ ಮತ್ತು ಆಕ್ರಮಣನೀತಿಯೇ ಈ ಹೋರಾಟಗಳಿಗೆ ಮೂಲ. ದೇಶೀಯ ರಾಜರು ತಮ್ಮ ರಾಜ್ಯ ಮತ್ತು ಹಕ್ಕುಗಳನ್ನು ಕಾಯ್ದುಕೊಳ್ಳಬೇಕಾಗಿ ಬಂದಾಗ ಬ್ರಿಟಿಷರ ವಿರುದ್ಧ ಹೋರಾಡಬೇಕಾಯಿತು. ಅವರಲ್ಲಿ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನರನ್ನು ಪ್ರಥಮವಾಗಿ ಗಮನಿಸಬೇಕು. ದಿನ ದಿನಕ್ಕೆ ಬೆಳೆಯುತ್ತಿದ್ದ ಬ್ರಿಟಿಷರ ಬಲವನ್ನು ಗಮನಿಸಿದ ಹೈದರ್ ಮರಾಠರ ಮತ್ತು ಹೈದರಾಬಾದಿನ ನಿಜಾಮನ ಸಹಕಾರದೊಂದಿಗೆ ಕೆಲವು ಸಾರಿ ಹೋರಾಡಿದ. ಆದರೆ ಮರಾಠರೂ ನಿಜಾಮನೂ ಬ್ರಿಟಿಷರ ಕಡೆಯೇ ಸೇರಿಹೋದದ್ದು ಸ್ವಾತಂತ್ರ್ಯ ಸಂಗ್ರಾಮದ ದಿಕ್ಕನ್ನೇ ಬದಲಿಸಿತೆನ್ನಬಹುದು. ಹೈದರನ ಅಕಾಲಮರಣ ಬ್ರಿಟಿಷರಿಗೆ ಅನುಕೂಲ ಪರಿಸ್ಥಿತಿಯಾಯಿತು. ಟಿಪ್ಪುಸುಲ್ತಾನ್ ತಂದೆಯಂತೆಯೇ ಹೋರಾಟವನ್ನು ಮುಂದುವರಿಸಿದ. ಆದರೆ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಆತ ಮರಣವನ್ನಪ್ಪಿದ (1799). ಅವನ ಸಾವಿನೊಂದಿಗೆ ಅಂದಿನ ಮೈಸೂರು ರಾಜ್ಯ ಹರಿದು ಹಂಚಿಹೋಯಿತು.
ಕರ್ನಾಟಕದಲ್ಲಿ ಸಶಸ್ತ್ರ ಬಂಡಾಯದ ಹೋರಾಟವನ್ನು ಕಾಣುತ್ತೇವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಗೆ ಸೇರಿದ ಶೂರ ಧೋಂಡಿಯ ವಾಘ 1780ರಲ್ಲಿ ಹೈದರನ ಸೈನ್ಯ ಸೇರಿ ತರಬೇತಿ ಪಡೆದು ಓಡಿಹೋಗಿದ್ದವನು ಟಿಪ್ಪುವಿನ ಆಹ್ವಾನಕ್ಕೆ ಕಿವಿಗೊಟ್ಟು ಮತ್ತೆ ಶ್ರೀರಂಗಪಟ್ಟಣಕ್ಕೆ ಬಂದಾಗ ಬಲಾತ್ಕಾರದಿಂದ ಮುಸಲ್ಮಾನನಾದ. 1799ರಲ್ಲಿ ಶ್ರೀರಂಗಪಟ್ಟಣದ ಪತನದ ಕಾಲದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಬಿದನೂರು, ಶಿಕಾರಿಪುರ ಪ್ರದೇಶಗಳ ಜನರನ್ನು ಸಂಘಟಿಸಿದ. ಐಗೂರಿನ ಕೃಷ್ಣಪ್ಪನಾಯಕ, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಹೆಗ್ಗಡೆ, ಬಳ್ಳಾರಿಯ ರಾಯದುರ್ಗದ ಪಾಳೆಯಗಾರ ಮತ್ತು ಆನೆಗೊಂದಿಯ ಪಾಳೆಯಗಾರರ ನೆರವಿನಿಂದ ಬ್ರಿಟಿಷರ ಎದುರಾಗಿ ಬಂಡಾಯ ಹೂಡಿದ. ಲೋಂಡಾದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಲು ಬಂದ ಮರಾಠ ಸೇನಾನಿ ಗೋಖಲೆಯನ್ನು ಕೊಂದ. ಬ್ರಿಟಿಷ್ ವಿರೋಧಿಗಳನ್ನೆಲ್ಲ ಸಂಘಟಿಸಲು ಪ್ರಯತ್ನಿಸಿದ. ಇವನ ಚಟುವಟಿಕೆಯನ್ನು ಬ್ರಿಟಿಷರು ಸಹಿಸಲಾರದೆ ಹೋದರು. ಆರ್ಥರ್ ವೆಲ್ಲೆಸ್ಲಿ ಧೋಂಡಿಯನನ್ನು ಹಿಡಿಯಲು ಟೋರಿನ್, ಸ್ಟೀವನ್ಸನ್ ಮತ್ತು ಪೇಟ್ಕರ್ ಎಂಬ ಮೂರು ಮಂದಿ ಸೇನಾಪತಿಗಳನ್ನು ಕಳುಹಿಸಿದ. ಧೋಂಡಿಯ ತಂಗಿದ್ದನೆಂಬ ಕೋಟೆ, ಸ್ಥಳಗಳನ್ನೆಲ್ಲ ಶೋಧಿಸುತ್ತ ಅವನ ಕಡೆಯವರನ್ನೆಲ್ಲ ಕೊಲ್ಲುತ್ತ ಬ್ರಿಟಿಷ್ ಸೇನೆ ದಾಂದಲೆ ನಡೆಸಿತು. ಕೊನೆಗೆ ಒಬ್ಬ ಸೈನಿಕ ಮತ್ತು ಧೋಂಡಿಯನ ಕೈಲಿ ಅನ್ನ ತಿಂದ ಸಲಬತ್ ಎಂಬ ದ್ರೋಹಿಗಳು ಕೊಟ್ಟ ಸುಳುವಿನ ಮೇಲೆ ಬ್ರಿಟಿಷ್ ಸೇನೆ ಧೋಂಡಿಯನ ಬೆನ್ನುಹತ್ತಿತು. 1800 ಸೆಪ್ಟೆಂಬರ್ನಲ್ಲಿ ರಾಯಚೂರು ಜಿಲ್ಲೆಯ ಕೋಣಗಲ್ಲಿನಲ್ಲಿ ಧೋಂಡಿಯ ವಾಘ ಮರಾಠರ, ನಿಜಾಮನ ಮತ್ತು ಆಂಗ್ಲರ ಮೂರು ಸೇನೆಗಳನ್ನು ಎದುರಿಸಿ ಹೋರಾಡುತ್ತ ಮಡಿದ. ಐಗೂರು ಕೃಷ್ಣಪ್ಪನಾಯಕ 1802 ಫೆಬ್ರವರಿಯವರೆಗೂ ಹೋರಾಡುತ್ತ ಕೊನೆಗೆ ಸುಬ್ರಹ್ಮಣ್ಯ ಘಟ್ಟದಲ್ಲಿ ಮಡಿದ. ಕೊಪ್ಪಳದ ಕೋಟೆಯನ್ನು ಗೆದ್ದುಕೊಂಡು ಬಂಡಾಯ ಹೂಡಿದ (1819) ವೀರಪ್ಪನನ್ನೂ ಬ್ರಿಟಿಷ್ ಸೇನೆ ಕೊಂದಿತು. 1820-21ರಲ್ಲಿ ಬಿದರೆ ಜಿಲ್ಲೆಯ ಸುಳಿಯಳ್ಳಿ ದೇಶಮುಖ್, ತಿರುಮಲರಾವ್ ಮತ್ತು ಮೇಘಶ್ಯಾಮ್ ದೇಶಮುಖರು ಬಂಡಾಯದ ಮುಂದಾಳಾಗಿದ್ದರು. 1824ರಲ್ಲಿ ಬಿಜಾಪುರ ಜಿಲ್ಲೆಯ ಸಿಂದಗಿಯ ಬಂಡಾಯವನ್ನು ಇಂಗ್ಲಿಷ್ ಸೇನೆ ಕ್ರೌರ್ಯದಿಂದ ಹತ್ತಿಕ್ಕಿತು. ಸಿಂದಗಿಯ ಬಂಡಾಯಗಾರರಾಗಿದ್ದ ದಿವಾಕರ ದೀಕ್ಷಿತ, ರಾವ್ಜಿ ರಾಸ್ತಿಯ, ಬಾಳಪ್ಪ ದೇಶಪಾಂಡೆ, ಅಲೂಪ ಪಿಂಡಾರಿ, ಶೆಟ್ಟಿಯಪ್ಪ ಮತ್ತು ಶೀನಪ್ಪ ಇವರನ್ನು ಹಿಡಿದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಬ್ರಿಟಿಷ್ ಸರ್ಕಾರ ಘೋಷಿಸಿತ್ತು. ದೇಶದ್ರೋಹಿ ಅಣ್ಣಪ್ಪ ಪಟಕಿ ಎಂಬಾತ ಮೋಸ ಬಗೆದ. ಸಿಂದಗಿ ಬ್ರಿಟಿಷರ ವಶವಾಯಿತು, ಬಂಡಾಯಗಾರರೆಲ್ಲ ಸೆರೆಯಾದರು.
This article uses material from the Wikipedia ಕನ್ನಡ article ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.