ಶ್ಯಾಮಲಾ ಮಾಧವ

ಶ್ಯಾಮಲಾ ಮಾಧವ, ಒಬ್ಬ ಭಾಷಾಂತರಕಾರರು.

‘ಗಾನ್ ವಿತ್ ದ ವಿಂಡ್’ (Gone with the wind), ಮತ್ತು ‘ಫ್ರಾಂಕಿನ್ ಸ್ಟೈನ್’ (Frankenstein), ಗಳಂತಹ ಸುಪ್ರಸಿದ್ಧ ವಿಶ್ವದ ಅತ್ಯಂತ ಹೆಚ್ಚುಮಾರಾಟಗಳಿಸಿ ಹಾಲಿವುಡ್ ಚಲನಚಿತ್ರಕ್ಕೆ ಅಳವಡಿಸಲಾದ ಇಂಗ್ಲಿಷ್ ಕಾದಂಬರಿಗಳನ್ನು, ಸಶಕ್ತವಾಗಿ ಕನ್ನಡಭಾಷೆಗೆ ಅನುವಾದಿಸಿದ್ದಾರೆ. ಇವರ ಚೊಚ್ಚಲ ಕೃತಿ, 'ಆ ಲೋಕ'.

ಶ್ಯಾಮಲಾ ಮಾಧವ
Born೧೯೪೯,ಜೂನ್, ೨೯
ಕೊಡಿಯಾಲಗುತ್ತು, ಮಂಗಳೂರು
Occupation(s)ಲೇಖಕಿ, ಪ್ರಮುಖವಾಗಿ ಅನುವಾದಕಿ, ಅಂಕಣಕಾರ್ತಿ

ಜೀವನ

ಶ್ಯಾಮಲಾ, 'ನಾರಾಯಣ.ಯು', ಮತ್ತು 'ವಸಂತಿ' ದಂಪತಿಗಳ ಪ್ರೇಮದ ಮಗಳಾಗಿ, ೧೯೪೯ ರ ಜೂನ್, ೨೯ ರಂದು,ಮಂಗಳೂರಿನ ಹತ್ತಿರದ ಕೊಡಿಯಾಲಗುತ್ತು ಪ್ರದೇಶದ ಮನೆಯಲ್ಲಿ ಜನಿಸಿದರು. ತಂದೆಯವರು, ಸೋಮೇಶ್ವರ ಉಚ್ಚಿಲದ 'ಶಾಲಾ ಕರೆಸ್ಪಾಂಡೆಂಟ್' ಆಗಿ ಶೈಕ್ಷಣಿಕ ಕ್ಷೇತ್ರ ಮತ್ತು ಸಹಕಾರಿ ಕ್ಷೇತ್ರದಲ್ಲಿ ದುಡಿದರು. ಮಿತಮಾತಿನ, ಸತ್ಯನಿಷ್ಠರಾದ, ಸುವಿಚಾರ-ಸದಾಚಾರಗಳ ತಾಯಿ, ನಗರದ 'ಬೆಸೆಂಟ್ ಶಾಲೆ'ಯಲ್ಲಿ ಪಿ.ಟಿ.ಹಾಗೂ ಗೈಡಿಂಗ್ ಶಿಕ್ಷಕಿಯಾಗಿ ಶಿಸ್ತು, ಸೇವೆ,ಮತ್ತು ದಕ್ಷತೆಗೆ ಹೆಸರಾದವರು. ಶ್ಯಾಮಲಾ,'ಬೆಸೆಂಟ್ ರಾಷ್ಟ್ರೀಯ ಪಾಠಶಾಲೆ'ಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸದ ನಂತರ, ನಗರದ 'ಸೇಂಟ್ ಆಗ್ನಿಸ್ ಪ್ರೌಢಶಾಲೆ'ಯಲ್ಲಿ ಹಾಗೂ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿ, ವಿಜ್ಞಾದದ ಪದವಿಯನ್ನು ಗಳಿಸಿದರು. ಬಾಲ್ಯದಲ್ಲೇ ಮನೆಯ ಪರಿಸರದಲ್ಲಿ ದೊರೆತ ಕನ್ನಡ ಇಂಗ್ಲೀಷ್ ಭಾಷಾ ಸಾಹಿತ್ಯ ಪ್ರೀತಿ, ಶ್ಯಾಮಲಾರ ಮುಂದಿನ ಜೀವನದುದ್ದಕ್ಕೂ ಜೊತೆಯಲ್ಲಿ ಬಂತು. ಶ್ಯಾಮಲಾರ ಅಣ್ಣ, ಮೋಹನ್ ಎನ್ ಜಿ. ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ಸ್ ಕಮಿಷನರ್ . ಪಿಲಿಕುಳದಲ್ಲಿ ಸಕ್ರಿಯ ಸದಸ್ಯ. ಗಾಂಧಿ ಪ್ರತಿಷ್ಥಾನ , ರೆಡ್ ಕ್ರಾಸ್ ಸಂಸ್ಥೆಗಳಲ್ಲಿ , ಸ್ವಾಮಿ ದಯಾನಂದ ಸರಸ್ವತಿ ಆಶ್ರಮದಲ್ಲಿ ವ್ಯಸ್ತ . ಎಮಿನೆಂಟ್ ಅಲೋಶಿಯನ್ ಅವಾರ್ಡ್ ಸಮ್ಮಾನಿತ. ಸಮಾಜ ಸೇವಾಸಕ್ತ.

ಮನೆಯ ಸಾಹಿತ್ಯಿಕ ಪರಿಸರ

ಮನೆಯ ಪರಿಸರದಲ್ಲಿ ತಂದೆಯವರು ತಮ್ಮ ಪುಸ್ತಕ ಸಂಗ್ರಹಾಲಯದಲ್ಲಿ ಸಂಗ್ರಹಿಸಿಟ್ಟ ಪುಸ್ತಕಗಳಿಂದ ಶ್ಯಾಮಲರಿಗೆ ಓದುವ ಹವ್ಯಾಸ, ರಕ್ತಗತವಾಗಿ ಬಂಡ ಕಾಣಿಕೆಯಾಗಿತ್ತು. ಶಿವರಾಮ ಕಾರಂತ, ನಿರಂಜನ, ಬಸವರಾಜ ಕತ್ತೀಮನಿ, ಅ.ನ್.ಕೃ ,ತ.ರಾ.ಸು , ವ್ಯಾಸರಾಯ ಬಲ್ಲಾಳರ ಕ್ರಿತಿಗಳು ಬಾಲ್ಯದಲ್ಲೇ ಮನೆಯಲ್ಲೇ ಪ್ರಾಪ್ತವಾಯ್ತು. ರಾಜನ್ ಅಯ್ಯರ್ರ ನೃತ್ಯ ಕಲಾ ಶಿಕ್ಷಣ, ಶ್ರೀನಿವಾಸ ಉಡುಪರ ಸಂಗೀತ, ಪಿ.ಕೆ. ನಾರಾಯಣನ್ ರ, ಕನ್ನಡ ಸಾಹಿತ್ಯ ಪುಸ್ತಕ ಛಂದಸ್ಸು, ಶಾಲಾ ಲೈಬ್ರೆರಿ, ಲೈಟ್ ಹೌಸ್ ಹಿಲ್ ಲೈಬ್ರೆರಿ, ಕಾರ್ನಾಡ ಸದಾಶಿವರಾವ್ ಲೈಬ್ರೆರಿ, ಗಳ ಭೇಟಿ, ಪ್ರತಿದಿನವೂ ನಡೆಯುತ್ತಿತ್ತು. ಸಾಹಿತಿಗಳಾದ ಕಾರಂತ, ನಿರಂಜನ, ಅನಕೃ ತರಾಸು, ಕಟ್ಟಿಮನಿ, ಕೊರಟೆ, ಪುರಾಣಿಕ, ಪುರುಷೋತ್ತಮಾನ ಸಾಹಸ, ಸಚಿತ್ರ ರಾಮಾಯಣ, ಮಹಾಭಾರತ, ಚಂದಮಾಮ ಪುಸ್ತಕಗಳು ಅವರ ಸಾಹಿತ್ಯ ಅಭಿವ್ಯಕ್ತಿಗೆ ಸಾಧನಗಳಾದವು. ಮೊದಲು ಮುದಕೊಟ್ಟಿದ್ದು, ಚಿಕ್ಕ ಅನುವಾದಗಳು :

  1. ಮುರುಕು ಬಂದೂಕು,
  2. ಮಾರ್ಟಿನ್ ನ ಸಾಹಸ ಕಥೆಗಳು,

ದೊಡ್ಡ ಅನುವಾದಗಳು

  1. ಅಲಿ ಒಶೈ, 'ಅಲೆಯೋಸಗೆ' ಪಾರ್ಟಿಷನ್ ಸಂಬಂಧಿಸಿದ ತಮಿಳು ಕೃತಿಯ ಅನುವಾದ.
  2. ಟ್ಯಾಗೋರ್ ಮತ್ತು ಶರತ್ ಚಂದ್ರ ಚಟರ್ಜಿಯವರ ಅನುವಾದಗಳು.
  3. ಕಮಲ ನೆಹರುರವರ 'ವಿತ್ ನೋ ರಿಗ್ರೆಟ್ಸ್', ನ ಕನ್ನಡ ಅನುವಾದ, 'ನೆನಪು ಕಹಿಯಲ್ಲ', ಎಂಬ ಸಿದ್ಧವ್ವನಹಳ್ಳಿ ಕೃಷ್ಣಶರ್ಮರ ಕನ್ನಡ ಅನುವಾದ, ಕೆ.ಎಮ್.ಮುನ್ಷಿಯವರ 'ಕೃಷ್ಣಾವತಾರ'ದ ಕನ್ನಡಾನುವಾದ ಅವರಿಗೆ ಪ್ರಿಯವಾಯಿತು.

ಮುಂಬಯಿಗೆಪಾದಾರ್ಪಣೆ

'ಶ್ಯಾಮಲಾರವರು', ಮುಂಬಯಿನ ರೆಮಾಂಡ್ಸ್ ಕಂಪೆನಿಯ (Raymonds Co Ltd) ಸೋದರ ಸಂಸ್ಥೆ, 'ಅತುಲ್ ಸ್ಪಿನರ್ಸ್ ಕಂಪೆನಿ'(Atul Spinners Ltd;)' ಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ, 'ಮಾಧವ್ ಉಚ್ಚಿಲ್' ರನ್ನು ವಿವಾಹವಾಗಿ, ಮುಂಬಯಿನಗರಕ್ಕೆ ಬಂದು, ವಾಸ್ತವ್ಯಹೂಡಿದರು. ಆಗ ಶ್ಯಾಮಲಾ ೧೫ ವರ್ಷದ ಹರೆಯದ ತರುಣಿ. ಮಾಧವ್, ಕಾರ್ಯ ನಿಷ್ಥೆಗೆ ಹೆಸರಾದವರು. ತಮ್ಮಿಬ್ಬರ ಮದುವೆಗೆಂದು ಒಂದು ವಾರ ರಜೆ ಪಡೆದದ್ದನ್ನು ಬಿಟ್ಟರೆ, ಮತ್ತೆಂದೂ ಒಂದು ದಿನವೂ ವಾರದ ರಜಾ ದಿನವೂ ಇಲ್ಲದೆ 'ಕಾಯಕವೇ ಕೈಲಾಸ' ಎನ್ನುವ ಅನ್ವರ್ಥನಾಮಿಗಳು. ಯಾವಾಗಲು ಚಟುವಟಿಕೆಯಿಂದ ಕಾರ್ಯಾಸಕ್ತರಾಗಿರುವ ವ್ಯಕ್ತಿ. ಮಾಧವ್, ಅವರ ಬಾಸ್ 'ಕೈಥಾನ್' ರಿಂದ ಸಮ್ಮಾನಿತರಾದರು. ಮಾಧವರು, ಪತ್ನಿಯ ಅದಮ್ಯ ಸಾಹಿತ್ಯಾಸಕ್ತಿಯನ್ನು ಮನಗಂಡು ತಕ್ಷಣವೇ, ಮೈಸೂರ್ ಅಸೋಸಿಯೇಷನ್, ಮುಂಬಯಿ, ಕರ್ನಾಟಕ ಸಂಘ, ಮುಂಬಯಿ, ಮತ್ತು ಮುಂಬಯಿ ಕನ್ನಡ ಸಂಘ, ಮುಂಬಯಿ ಸಂಘಗಳಲ್ಲಿ ಸದಸ್ಯತ್ವವನ್ನು ಕೊಡಿಸಿದರು. ಈ ಸಂಸ್ಥೆಗಳಲ್ಲಿದ್ದ ಅಪರೂಪದ ಪುಸ್ತಕಗಳು ಮತ್ತು ಆಕರ ಗ್ರಂಥಗಳು,ಶ್ಯಾಮಲರ ಸಂಶೋಧನೆಯಲ್ಲಿ ಬಹಳ ಸಹಾಯಕವಾಯಿತು. ಈ ದಂಪತಿಗಳಿಗೆ ೩ ಜನ ಗಂಡು ಮಕ್ಕಳು : ೧. ತುಷಾರ್,೨. ಪ್ರಜ್ವಲ್, ಮತ್ತು ೩. ಹರ್ಷವರ್ಧನ್,ಎಂದು. ೧೯೭೧ ರಲ್ಲಿ, ಮುಂಬಯಿಗೆ ಬಂದಮೇಲೂ ಅಜ್ಜಿಯವರ ಬಗ್ಗೆ ಇದ್ದ ಅಪಾರ ಒಲವಿನಿಂದ ಅವರ ಸ್ಮೃತಿಗಳನ್ನು 'ಅಮೃತವರ್ಷಿಣಿ' ಪತ್ರಿಕೆಯಲ್ಲಿ ಪ್ರಕಟಿಸಿದರು. ಕನ್ನಡದಲ್ಲಿ ಕಥೆಗಳು, ಫೀಚರ್ಸ್, ಪರ್ಯಟನ ಕಥನಗಳು, ಮುಂಬಯಿನ ಮತ್ತು ಒಳನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕ್ರಮವಾಗಿ ಪ್ರಕಟಗೊಳ್ಳಲಾರಂಬಿಸಿದವು. ತಂದೆಯವರ ಬಳಿಕ ಶ್ಯಾಮಲರ ಸಾಹಿತ್ಯಿಕ ಕಾರ್ಯಗಳಲ್ಲಿ ಪ್ರೋತ್ಸಾಹದ ನೆರವು ದೊರೆತದ್ದು : ನಿರಂಜನ, ಯಶವಂತ ಚಿತ್ತಾಲ, ಕೆ.ಟಿ.ಗಟ್ಟಿ, ರಹಮತ್ ತರೀಕೆರೆ, ಭುವನೇಶ್ವರಿ ಹೆಗಡೆ, ಮತ್ತು ಯುವ ಸಾಹಿತಿ, ನೇಮಿಚಂದ್ರ (ಲೇಖಕಿ), ಮೊದಲಾದವರಿಂದ.

ಪ್ರಕಟಿತ ಅನುವಾದಿತ ಕೃತಿಗಳು

  • ದೂರದರ್ಶನದಲ್ಲಿ ಧಾರಾವಾಹಿಯಾಗಿ ಮನಸೆಳೆದ 'ಫರ್ಮಾನ್' ಪ್ರಸಾರಮುಗಿದಾಗ ಮೂಲಕೃತಿ 'ಆಲಂಪನಾ' ಪುಸ್ತಕವನ್ನಾರಿಸಿ ಪಡೆದರು. ಆ ಉತ್ಕೃಷ್ಟ ಉರ್ದೂ ಕೃತಿಯ ಸಾಹಿತ್ಯಕೃತಿಯ ಹಿಂದಿ ಭಾಷಾನುವಾದ ಸೊಗಸು ಶ್ರೇಷ್ಠತೆಗೆ ಮಾರುಹೋಗಿ ಕನ್ನಡಕ್ಕೆ ಅನುವಾದಿಸಿ ಕೃತಿ, 'ಆಲಂಪನಾ' ಭಾಗೀರಥಿ ಪ್ರಕಾಶನದಿಂದ ೧೯೯೪ ರಲ್ಲಿ ಪ್ರಕಟಿತಗೊಂಡಿತು.
  • ಆಲಂಪನಾ ಕೃತಿಯ ಯಶಸ್ಸಿನ ಬೆನ್ನಲ್ಲೇ ಅತ್ಯಂತ ಪ್ರಿಯವಾಗಿ ಹೃದಯದಲ್ಲಿ ಅಚೊತ್ತಿಕೊಂಡ ಆಂಗ್ಲ ಸಾಹಿತ್ಯ ಕೃತಿ ಅಮೆರಿಕನ್ ಸಾಹಿತಿ ಮಾರ್ಗರೆಟ್ ಮಿಚೆಲ್ ಳ, 'ಗಾನ್ ವಿತ್ ದ ವಿಂಡ್', ವಿಶ್ವಸಾಹಿತ್ಯ ಕೃತಿಯ ಕನ್ನಡಾನುವಾದಕ್ಕೆ ತೊಡಗಿ ವರ್ಷದಲ್ಲೇ ಪೂರೈಸಿದ ಕನ್ನಡಾನುವಾದವು ಸುದೀರ್ಘವೆಂಬ ಕಾರಣದಿಂದ ಒಳಗುಳಿದು ೧೦ ವರ್ಷಗಳ ಬಳಿಕ ೨೦೦೪ ರಲ್ಲಿ ಅಂಕಿತಪ್ರಕಾಶನಾಲಯದಿಂದ ಬೆಳಕುಕಂಡಿತು.
  • ೨೦೦೪ ರಲ್ಲಿ ಅನುವಾದಿತ ನಿವೃತ್ತ ಪೋಲಿಸ್ ಅಧಿಕಾರಿ 'ರಾಮಣ್ಣ ರೈ' ರವರ ಮೈ ಡೇಸ್ ಇನ್ ಪೊಲಿಸ್, ಕೃತಿಯ ಅನುವಾದ. 'ಪೋಲಿಸ್ ಡೈರಿ' ೨೦೦೫ ರಲ್ಲಿ ಸುಧಾವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿತವಾಗುತ್ತಾ ಜನಪ್ರಿಯವಾಗಿತ್ತು.
  • ಮತ್ತೊಬ್ಬ ಆಂಗ್ಲ ಲೇಖಕಿ ಮೇರಿ ಶೆಲ್ಲಿಯ ವಿಶ್ವಸಾಹಿತ್ಯ ಕೃತಿ 'ಫ್ರಾಂಕೆನ್ಸ್ಟೈನ್' ಕಾದಂಬರಿ ಕನ್ನಡ ಅನುವಾದ ವರ್ಷ ೨೦೦೭ ರಲ್ಲಿ ಅಂಕಿತ ಪ್ರಕಾಶನದಿಂದ ಬೆಳಕುಕಂಡು ವಿದ್ವತ್ ವಲಯದಲ್ಲಿ ಮನ್ನಣೆ ಪಡೆದಿದೆ.
  • ಕಲ್ಕತ್ತಾದ ಕೃತಿ ಪ್ರಕಾಶನಕ್ಕಾಗಿ ಅನುವಾದಿತ ತುಳಸಿ ವೇಣುಗೋಪಾಲರ 'ಹೊಂಚು' ಕಥೆಯ ಇಂಗ್ಲೀಷ್ ಅನುವಾದ ’ಕಥಾ’ಸಂಚಯದಲ್ಲಿ ೨೦೧೧ ರಲ್ಲಿ ಪ್ರಕಟಿತವಾಯಿತು.
  • ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಮರಾಠಿಯಿಂದ ಅನುವಾದಿಸಿಕೊಟ್ಟ ಅಂಬೇಡ್ಕರ್ ಬರಹಗಳು, ಮತ್ತು ಭಾಷಾ ಪ್ರಾಧಿಕಾರದಿಂದ ಪ್ರಕಾಶಿತಗೊಂಡಿವೆ.
  • ಎಂ.ಆರ್.ಫೌಂಡೇಶನ್ ಅನುವಾದಿಸಿಕೊಟ್ಟ ಎಂ.ಆರ್.ಪೈ ಆನ್ ಅನ್ ಕಾಮನ್ ಕಾಮನ್ ಮ್ಯಾನ್ ಕೃತಿ ಅನುವಾದ ಅಸಮಾನ್ಯ ಶ್ರೀ ಸಾಮಾನ್ಯ ಎಂ.ಆರ್.ಪೈ ಕೃತಿ ೨೦೧೩ ರಲ್ಲಿ ಐ.ಬಿ.ಎಚ್. ಪ್ರಕಾಶನ ಸಂಸ್ಥೆಯಿಂದ ಬೆಳಕುಕಂಡಿತು.
  • 'ಸ್ಪಾರೊ ಸಂಸ್ಥೆ'ಗಾಗಿ 'ಸ್ಪೀಚ್ ಅಂಡ್ ಪಿಕ್ಚರ್ ಆರ್ಚೀವ್ಸ್ ಆನ್ ರಿಸರ್ಚ್ ಆನ್ ವಿಮೆನ್,’ ಮಾಡಿಕೊಟ್ಟ ಬಿ.ಟಿ.ಲಲಿತ ನಾಯಕರ ಎರಡು ಸಣ್ಣ ಕಥೆಗಳ ಇಂಗ್ಲೀಷ್ ಅನುವಾದ ಸಂಸ್ಥೆಯ ಆರ್ಕೈವ್ಸ್ ಸೇರಿದೆ.
  • ಕಾಂತಾವರ ಕನ್ನಡ ಸಂಘ, 'ನಾಳೆಗೆ ನಮಸ್ಕಾರ ಮಾಲಿಕೆ'ಗೆ ರಾಮಚಂದ್ರ ಉಚ್ಚಿಲರಬಗ್ಗೆ ಪುಸ್ತಕ ರಚಿಸಿದ್ದಾರೆ.

ಅರುಂಧತಿ ರಾಯ್ ವಿರಚಿತ , ಬುಕರ್ ಪ್ರಶಸ್ತಿ ವಿಜೇತ 'ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಕೃತಿಯ ಕನ್ನಡಾನುವಾದ ಪ್ರಕಟನೆಗೆ ಕಾದಿದೆ.

ಬರವಣಿಗೆಯ ಹಾದಿಯಲ್ಲಿ

  • ಆಂಗ್ಲ ಲೇಖಕಿ ಎಮ್.ಎಮ್.ಕೆ.ವಿರಚಿತ ಬೃಹತ್ಕೃತಿ ಫಾರ್ ಪೆವಿಲಿಯನ್ಸ್, ಅನುವಾದ ಕಾರ್ಯಸಾಗಿದೆ. ಅಂಕಿತ ಪುಸ್ತಕದಿಂದ ಬೆಳಗು ಕಂಡು ವಿದ್ವತ್ ವಲಯದಲ್ಲಿ ಮನ್ನಣೆ ಪಡೆಯಿತು.
  • ಕುವೆಂಪು ಭಾರತಿ ಪ್ರಾಧಿಕಾರಕ್ಕಾಗಿ ಅನುವಾದಿಸಿದ ಆಂಗ್ಲ ಲೇಖಕ, 'ವಿಲ್ ಡ್ಯುರಾಂಟ್' ನ 'ಸ್ಟೋರಿ ಆಫ್ ಸಿವಿಲಿಸೇಷನ್', ಕೃತಿಯ ಅನುವಾದದ ಭಾಗಗಳನ್ನೊಳಗೊಂಡ ಸಂಪೂರ್ಣ ಬೃಹತ್ ಕೃತಿ,ಪ್ರಾಧಿಕಾರದಿಂದ ೨೦೧೧-೧೨ ರಲ್ಲಿ ಪ್ರಕಟವಾಗಿತ್ತು.

ಸೃಜನ ಬಳಗದಲ್ಲಿ

ಸೃಜನ ಬಳಗದ ಅಧ್ಯಕ್ಷೆ, ೨ ವರ್ಷ,ಕಮ್ಮಟಗಳನ್ನು ಪುಸ್ತಕ ಬಿಡುಗಡೆಕಾರ್ಯಕ್ರಮಗಳನ್ನು ಬೆಂಗಳೂರಿನ ಅವೆನ್ಯೂ ಅಕಾಡೇಮಿಯ ವತಿಯಿಂದ ಜೊತೆ ಆಯೋಜಿಸಿದ್ದರು. ೧೯೯೪ ರಲ್ಲಿ, 'ರಫಿಯ ಮಂಝುರುಲ್ ಅಮೀನ್', ವಿರಚಿತ ಭಾಗಿರಥಿ ಪ್ರಕಾಶನ. ಶ್ಯಾಮಲಾ, 'ಮ್ಯಾಂಗಲೂರಿಯನ್ ಡಾಟ್.ಕಾಂ ಪತ್ರಿಕೆ'ಯ ಓದುಗರು.

ಹೊಸ ಪುಸ್ತಕದ ಬಿಡುಗಡೆ

ಮೈಸೂರ್ ಅಸೋಸಿಯೇಷನ್ ಮುಂಬಯಿನ ಸಭಾಗೃಹದಲ್ಲಿ ಸೃಜನಾ ಕನ್ನಡ ಲೇಖಕಿಯರ ಬಳಗದವರು ೧೬, ಡಿಸೆಂಬರ್,೨೦೧೬ ರಂದು, ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ಯಾಮಲಾ ಮಾಧವರ ಪುಸ್ತಕ ಬಿಡುಗಡೆಯಾಯಿತು. ,

ಸೌಂಡ್ ಅಂಡ್ ಪಿಚ್ಚರ್ ಆರ್ಕೈವ್ ನಲ್ಲಿ (SPARROW)

'ಸೌಂಡ್ ಅಂಡ್ ಪಿಚ್ಚರ್ ಆರ್ಕೈವ್'(SPARROW)ನಲ್ಲಿ, ಮಹಿಳೆಯರ ಜೀವನದ ಬಗ್ಗೆ ನಡೆಸಿದ ಸಂಶೋಧನಾ ಕಾರ್ಯಗಳ ಅನುವಾದವನ್ನು ಮಾಡುವ ಕಾರ್ಯದಲ್ಲಿ ಸಕ್ರಿಯರಾಗಿದ್ದರು. ಮುಂಬಯಿವಾಣಿ, ನಿತ್ಯವಾಣಿ ದಿನಪತ್ರಿಕೆ ವಿಶೇಷ ಸಂಚಿಕೆಗಳಲ್ಲಿ ಸಂಪಾದಕ ಮಂಡಳಿಯಲ್ಲಿ ಅನುವಾದ ಕಾರ್ಯವನ್ನು ನಿರ್ವಹಿಸಿದರು. ಮುಂಬಯಿನ ಕನ್ನಡ ಕಥೆ, 'ಪುಕಾರ್', ಸಂಶೋಧನ ಪತ್ರಿಕೆಯನ್ನು ಪ್ರಸ್ತುತಪಡಿಸಿದರು.

ಮಂಗಳೂರು ಆಕಾಶವಾಣಿಯ ಸಂದರ್ಶನದಲ್ಲಿ

ಆಕಾಶವಾಣಿಯ, 'ಮಾತಿನತೋರಣ ಮಾಲೆ'ಯಲ್ಲಿ 'ವಾರದ ಅತಿಥಿ'ಯಾಗಿ ಶ್ಯಾಮಲಾ ಮಾಧವರ ಸಂದರ್ಶನ ನಡೆಯಿತು.

ಪ್ರಶಸ್ತಿಗಳು

  • ಪ್ರಖ್ಯಾತ ಹಾಲಿವುಡ್ ಚಲನಚಿತ್ರ ಕ್ಕೆ ಪ್ರೇರಣೆಯಾದ 'ಗಾನ್ ವಿತ್ ದ ವಿಂಡ್', ಅನುವಾದಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಅತ್ಯುತ್ತಮ ಅನುವಾದವೆಂದು ೨೦೦೫ ರ ಎಚ್.ವಿ.ಸಾವಿತ್ರಮ್ಮ ದತ್ತಿ ನಿಧಿ ಪ್ರಶಸ್ತಿ,
  • 'ಗಾನ್ ವಿತ್ ದ ವಿಂಡ್' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ೨೦೦೪ ರ ಅತ್ಯುತ್ತಮ ಅನುವಾದ ಪುಸ್ತಕ ಬಹುಮಾನ,
  • ಅನುವಾದಕೃತಿ ಆಲಂಪನ ಕೇಂದ್ರ ಸಾಹಿತ್ಯ ಅಕಾಡೆಮಿ ಅತ್ಯುತ್ತಮ ಅನುವಾದಿತ ಕೃತಿಗೆ ಕೊನೆಯ ಸುತ್ತಿನ ಸ್ಪರ್ಧೆಗಾಗಿ ಸತತ ೨ ವರ್ಷ ಆಹ್ವಾನಿತವಾಗಿತ್ತು.
  • ಅನುವಾದಿತ ಕೃತಿ,'ಫ್ರಾಂಕೆನ್ ಸ್ಟೈನ್’ ಅನುವಾದ ಸಾಹಿತ್ಯ ಅಕಾಡೆಮಿಯಿಂದ ಅತ್ಯುತ್ತಮ ಅನುವಾದಕೃತಿಗಾಗಿ ಕೊನೆಯ ಸುತ್ತಿನ ಪ್ರಶಸ್ತಿಗಾಗಿ ಬಹುಮಾನ
  • ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ೨೦೧೦ ರಲ್ಲಿ ಗೌರವ ಪುರಸ್ಕಾರ,
  • ಹುಟ್ಟೂರು ಸಾಂಸ್ಕೃತಿಕ ವೇದಿಕೆಯಿಂದ೨೦೧೦ ರಲ್ಲಿ ಗೌರವ ಪುರಸ್ಕಾರ
  • ಆಲಂಪನಾ ಪ್ರಕಟವಾದ ಬೆನ್ನಲ್ಲೇ ವೈ.ಎಂ.ಬಿ.ಎ,ಸಂಸ್ಥೆಯಿಂದ ಗೌರವ ಪುರಸ್ಕಾರ,
  • ಕಲ್ಕತ್ತಾದ ಕೃತಿ ಪ್ರಕಾಶನಕ್ಕಾಗಿ ಅನುವಾದಿತ ತುಳಸಿ ವೇಣುಗೋಪಾಲರ 'ಹೊಂಚು' ಕಥೆಯ ಇಂಗ್ಲೀಷ್ ಅನುವಾದ ’ಕಥಾ’ಸಂಚಯದಲ್ಲಿ ೨೦೧೧ ರಲ್ಲಿ ಪ್ರಕಟಿತ,
  • ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಮರಾಠಿಯಿಂದ ಅನುವಾದಿಸಿಕೊಟ್ಟ ಅಂಬೇಡ್ಕರ್ ಬರಹಗಳು, ಭಾಷಾ ಪ್ರಾಧಿಕಾರದಿಂದ ಪ್ರಕಾಶಿತ,
  • ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ಪ್ರಶಸ್ತಿ ಪ್ರದಾನ, ಮೈಸೂರಿನಲ್ಲಿ (೨೦೧೫)
  • ಮುಂಬಯಿನ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ಶ್ಯಾಮಲಾ ಮಾಧವರ ಅನುವಾದ ಕೃತಿಯನ್ನು ಸುಪ್ರೀಮ್ ಕೋರ್ಟ್ ನ ಮಾಜಿ ನಿವೃತ್ತ ನ್ಯಾಯಾಧೀಶ, ಬಿ.ಎನ್.ಶ್ರೀಕೃಷ್ಣರವರು ಬಿಡುಗಡೆಮಾಡಿದರು.
  • ಅವಧಿ ಸಂಸ್ಥೆ ಆಯೋಜಿಸಿದ್ದ, ಶ್ಯಾಮಲಾ ಮಾಧವರ ಕೃತಿ,'ನಾಳೆ ಇನ್ನೂ ಕಾದಿದೆ', ಬಿಡುಗಡೆಯ ಕಾರ್ಯಕ್ರಮದಲ್ಲಿ ಡಾ.ಬಿ.ಎ.ವಿವೇಕ್ ರೈ, ಜಯಲಕ್ಷ್ಮಿ ಪಾಟೀಲ್, ಮತ್ತು ಎನ್.ದಾಮೋದರ್ ಶೆಟ್ಟಿಯವರು ಕೃತಿಯ ಬಗ್ಗೆ ಮಾತಾಡಿದರು. ೨೮, ಮಾರ್ಚ್, ೨೦೨೧, ಡೈಲಿಹಂಟ್] [೧]

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಶ್ಯಾಮಲಾ ಮಾಧವ ಜೀವನಶ್ಯಾಮಲಾ ಮಾಧವ ಮನೆಯ ಸಾಹಿತ್ಯಿಕ ಪರಿಸರಶ್ಯಾಮಲಾ ಮಾಧವ ದೊಡ್ಡ ಅನುವಾದಗಳುಶ್ಯಾಮಲಾ ಮಾಧವ ಮುಂಬಯಿಗೆಪಾದಾರ್ಪಣೆಶ್ಯಾಮಲಾ ಮಾಧವ ಪ್ರಕಟಿತ ಅನುವಾದಿತ ಕೃತಿಗಳುಶ್ಯಾಮಲಾ ಮಾಧವ ಬರವಣಿಗೆಯ ಹಾದಿಯಲ್ಲಿಶ್ಯಾಮಲಾ ಮಾಧವ ಸೃಜನ ಬಳಗದಲ್ಲಿಶ್ಯಾಮಲಾ ಮಾಧವ ಹೊಸ ಪುಸ್ತಕದ ಬಿಡುಗಡೆಶ್ಯಾಮಲಾ ಮಾಧವ ಮಂಗಳೂರು ಆಕಾಶವಾಣಿಯ ಸಂದರ್ಶನದಲ್ಲಿಶ್ಯಾಮಲಾ ಮಾಧವ ಪ್ರಶಸ್ತಿಗಳುಶ್ಯಾಮಲಾ ಮಾಧವ ಉಲ್ಲೇಖಗಳುಶ್ಯಾಮಲಾ ಮಾಧವ ಬಾಹ್ಯ ಸಂಪರ್ಕಗಳುಶ್ಯಾಮಲಾ ಮಾಧವ

🔥 Trending searches on Wiki ಕನ್ನಡ:

ಕದಂಬ ರಾಜವಂಶಇಂದಿರಾ ಗಾಂಧಿಬಸವೇಶ್ವರಕಾಳ್ಗಿಚ್ಚುಯು.ಆರ್.ಅನಂತಮೂರ್ತಿಹಸಿರು ಕ್ರಾಂತಿದೇವತಾರ್ಚನ ವಿಧಿವೇದಬಿ. ಆರ್. ಅಂಬೇಡ್ಕರ್ಚಾಣಕ್ಯಕರ್ನಾಟಕದ ಮುಖ್ಯಮಂತ್ರಿಗಳುನಾಮಪದಚಿತ್ರದುರ್ಗಮಹಾಭಾರತವ್ಯವಹಾರವಿಕ್ರಮಾದಿತ್ಯಕ್ರಿಯಾಪದಮರುಭೂಮಿಜೈಮಿನಿ ಭಾರತತಾಳೀಕೋಟೆಯ ಯುದ್ಧಭಾರತದ ಚುನಾವಣಾ ಆಯೋಗಕನ್ನಡದಲ್ಲಿ ಶಾಸ್ತ್ರ ಸಾಹಿತ್ಯಭಾರತೀಯ ರಿಸರ್ವ್ ಬ್ಯಾಂಕ್ಕೆ.ವಿ.ಸುಬ್ಬಣ್ಣಕರಗಭಾರತದಲ್ಲಿ ಪರಮಾಣು ವಿದ್ಯುತ್ಕನ್ನಡ ವಿಶ್ವವಿದ್ಯಾಲಯಮಕರ ಸಂಕ್ರಾಂತಿಮಾರ್ಟಿನ್ ಲೂಥರ್ ಕಿಂಗ್ಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಭಾಮಿನೀ ಷಟ್ಪದಿಅಲ್ಲಮ ಪ್ರಭುಉತ್ತರ ಕನ್ನಡಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಗಂಗಾಮೂರನೇ ಮೈಸೂರು ಯುದ್ಧದ್ವಿಗು ಸಮಾಸಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕೂಡಲ ಸಂಗಮಮಣ್ಣಿನ ಸಂರಕ್ಷಣೆಜಯಂತ ಕಾಯ್ಕಿಣಿಸೋಮೇಶ್ವರ ಶತಕಮುಖ್ಯ ಪುಟಮೈಸೂರು ದಸರಾಕೆ ವಿ ನಾರಾಯಣಮೌರ್ಯ ಸಾಮ್ರಾಜ್ಯತಲಕಾಡುಸಮಾಜಶಾಸ್ತ್ರಕನ್ನಡ ಅಕ್ಷರಮಾಲೆಬಾರ್ಬಿಹಳೇಬೀಡುನಮ್ಮ ಮೆಟ್ರೊವೆಂಕಟೇಶ್ವರ ದೇವಸ್ಥಾನಕ್ರೈಸ್ತ ಧರ್ಮಹದಿಬದೆಯ ಧರ್ಮವಚನಕಾರರ ಅಂಕಿತ ನಾಮಗಳುಭಾರತದಲ್ಲಿನ ಜಾತಿ ಪದ್ದತಿಜೀವನಫ್ರಾನ್ಸ್ಚದುರಂಗದ ನಿಯಮಗಳುವಾಲ್ಮೀಕಿಹಣಕಾಸುಮಲ್ಲಿಗೆಛಂದಸ್ಸುಭಾರತದ ಪ್ರಧಾನ ಮಂತ್ರಿಸುದೀಪ್ಬಿ. ಎಂ. ಶ್ರೀಕಂಠಯ್ಯಕನ್ನಡದಲ್ಲಿ ವಚನ ಸಾಹಿತ್ಯವಾಣಿಜ್ಯ ಪತ್ರದೇವರ/ಜೇಡರ ದಾಸಿಮಯ್ಯಆಂಗ್‌ಕರ್ ವಾಟ್ಹೊಯ್ಸಳ ವಿಷ್ಣುವರ್ಧನಬುಡಕಟ್ಟುಭಾರತದ ಸಂವಿಧಾನ ರಚನಾ ಸಭೆಮಫ್ತಿ (ಚಲನಚಿತ್ರ)ವ್ಯಾಸರಾಯರುಚೀನಾದ ಇತಿಹಾಸಸಂಭೋಗ🡆 More