ಶ್ಯಾಮಲಾ ಮಾಧವ, ಒಬ್ಬ ಭಾಷಾಂತರಕಾರರು.
‘ಗಾನ್ ವಿತ್ ದ ವಿಂಡ್’ (Gone with the wind), ಮತ್ತು ‘ಫ್ರಾಂಕಿನ್ ಸ್ಟೈನ್’ (Frankenstein), ಗಳಂತಹ ಸುಪ್ರಸಿದ್ಧ ವಿಶ್ವದ ಅತ್ಯಂತ ಹೆಚ್ಚುಮಾರಾಟಗಳಿಸಿ ಹಾಲಿವುಡ್ ಚಲನಚಿತ್ರಕ್ಕೆ ಅಳವಡಿಸಲಾದ ಇಂಗ್ಲಿಷ್ ಕಾದಂಬರಿಗಳನ್ನು, ಸಶಕ್ತವಾಗಿ ಕನ್ನಡಭಾಷೆಗೆ ಅನುವಾದಿಸಿದ್ದಾರೆ. ಇವರ ಚೊಚ್ಚಲ ಕೃತಿ, 'ಆ ಲೋಕ'.
ಶ್ಯಾಮಲಾ ಮಾಧವ | |
---|---|
Born | ೧೯೪೯,ಜೂನ್, ೨೯ ಕೊಡಿಯಾಲಗುತ್ತು, ಮಂಗಳೂರು |
Occupation(s) | ಲೇಖಕಿ, ಪ್ರಮುಖವಾಗಿ ಅನುವಾದಕಿ, ಅಂಕಣಕಾರ್ತಿ |
ಶ್ಯಾಮಲಾ, 'ನಾರಾಯಣ.ಯು', ಮತ್ತು 'ವಸಂತಿ' ದಂಪತಿಗಳ ಪ್ರೇಮದ ಮಗಳಾಗಿ, ೧೯೪೯ ರ ಜೂನ್, ೨೯ ರಂದು,ಮಂಗಳೂರಿನ ಹತ್ತಿರದ ಕೊಡಿಯಾಲಗುತ್ತು ಪ್ರದೇಶದ ಮನೆಯಲ್ಲಿ ಜನಿಸಿದರು. ತಂದೆಯವರು, ಸೋಮೇಶ್ವರ ಉಚ್ಚಿಲದ 'ಶಾಲಾ ಕರೆಸ್ಪಾಂಡೆಂಟ್' ಆಗಿ ಶೈಕ್ಷಣಿಕ ಕ್ಷೇತ್ರ ಮತ್ತು ಸಹಕಾರಿ ಕ್ಷೇತ್ರದಲ್ಲಿ ದುಡಿದರು. ಮಿತಮಾತಿನ, ಸತ್ಯನಿಷ್ಠರಾದ, ಸುವಿಚಾರ-ಸದಾಚಾರಗಳ ತಾಯಿ, ನಗರದ 'ಬೆಸೆಂಟ್ ಶಾಲೆ'ಯಲ್ಲಿ ಪಿ.ಟಿ.ಹಾಗೂ ಗೈಡಿಂಗ್ ಶಿಕ್ಷಕಿಯಾಗಿ ಶಿಸ್ತು, ಸೇವೆ,ಮತ್ತು ದಕ್ಷತೆಗೆ ಹೆಸರಾದವರು. ಶ್ಯಾಮಲಾ,'ಬೆಸೆಂಟ್ ರಾಷ್ಟ್ರೀಯ ಪಾಠಶಾಲೆ'ಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸದ ನಂತರ, ನಗರದ 'ಸೇಂಟ್ ಆಗ್ನಿಸ್ ಪ್ರೌಢಶಾಲೆ'ಯಲ್ಲಿ ಹಾಗೂ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿ, ವಿಜ್ಞಾದದ ಪದವಿಯನ್ನು ಗಳಿಸಿದರು. ಬಾಲ್ಯದಲ್ಲೇ ಮನೆಯ ಪರಿಸರದಲ್ಲಿ ದೊರೆತ ಕನ್ನಡ ಇಂಗ್ಲೀಷ್ ಭಾಷಾ ಸಾಹಿತ್ಯ ಪ್ರೀತಿ, ಶ್ಯಾಮಲಾರ ಮುಂದಿನ ಜೀವನದುದ್ದಕ್ಕೂ ಜೊತೆಯಲ್ಲಿ ಬಂತು. ಶ್ಯಾಮಲಾರ ಅಣ್ಣ, ಮೋಹನ್ ಎನ್ ಜಿ. ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ಸ್ ಕಮಿಷನರ್ . ಪಿಲಿಕುಳದಲ್ಲಿ ಸಕ್ರಿಯ ಸದಸ್ಯ. ಗಾಂಧಿ ಪ್ರತಿಷ್ಥಾನ , ರೆಡ್ ಕ್ರಾಸ್ ಸಂಸ್ಥೆಗಳಲ್ಲಿ , ಸ್ವಾಮಿ ದಯಾನಂದ ಸರಸ್ವತಿ ಆಶ್ರಮದಲ್ಲಿ ವ್ಯಸ್ತ . ಎಮಿನೆಂಟ್ ಅಲೋಶಿಯನ್ ಅವಾರ್ಡ್ ಸಮ್ಮಾನಿತ. ಸಮಾಜ ಸೇವಾಸಕ್ತ.
ಮನೆಯ ಪರಿಸರದಲ್ಲಿ ತಂದೆಯವರು ತಮ್ಮ ಪುಸ್ತಕ ಸಂಗ್ರಹಾಲಯದಲ್ಲಿ ಸಂಗ್ರಹಿಸಿಟ್ಟ ಪುಸ್ತಕಗಳಿಂದ ಶ್ಯಾಮಲರಿಗೆ ಓದುವ ಹವ್ಯಾಸ, ರಕ್ತಗತವಾಗಿ ಬಂಡ ಕಾಣಿಕೆಯಾಗಿತ್ತು. ಶಿವರಾಮ ಕಾರಂತ, ನಿರಂಜನ, ಬಸವರಾಜ ಕತ್ತೀಮನಿ, ಅ.ನ್.ಕೃ ,ತ.ರಾ.ಸು , ವ್ಯಾಸರಾಯ ಬಲ್ಲಾಳರ ಕ್ರಿತಿಗಳು ಬಾಲ್ಯದಲ್ಲೇ ಮನೆಯಲ್ಲೇ ಪ್ರಾಪ್ತವಾಯ್ತು. ರಾಜನ್ ಅಯ್ಯರ್ರ ನೃತ್ಯ ಕಲಾ ಶಿಕ್ಷಣ, ಶ್ರೀನಿವಾಸ ಉಡುಪರ ಸಂಗೀತ, ಪಿ.ಕೆ. ನಾರಾಯಣನ್ ರ, ಕನ್ನಡ ಸಾಹಿತ್ಯ ಪುಸ್ತಕ ಛಂದಸ್ಸು, ಶಾಲಾ ಲೈಬ್ರೆರಿ, ಲೈಟ್ ಹೌಸ್ ಹಿಲ್ ಲೈಬ್ರೆರಿ, ಕಾರ್ನಾಡ ಸದಾಶಿವರಾವ್ ಲೈಬ್ರೆರಿ, ಗಳ ಭೇಟಿ, ಪ್ರತಿದಿನವೂ ನಡೆಯುತ್ತಿತ್ತು. ಸಾಹಿತಿಗಳಾದ ಕಾರಂತ, ನಿರಂಜನ, ಅನಕೃ ತರಾಸು, ಕಟ್ಟಿಮನಿ, ಕೊರಟೆ, ಪುರಾಣಿಕ, ಪುರುಷೋತ್ತಮಾನ ಸಾಹಸ, ಸಚಿತ್ರ ರಾಮಾಯಣ, ಮಹಾಭಾರತ, ಚಂದಮಾಮ ಪುಸ್ತಕಗಳು ಅವರ ಸಾಹಿತ್ಯ ಅಭಿವ್ಯಕ್ತಿಗೆ ಸಾಧನಗಳಾದವು. ಮೊದಲು ಮುದಕೊಟ್ಟಿದ್ದು, ಚಿಕ್ಕ ಅನುವಾದಗಳು :
'ಶ್ಯಾಮಲಾರವರು', ಮುಂಬಯಿನ ರೆಮಾಂಡ್ಸ್ ಕಂಪೆನಿಯ (Raymonds Co Ltd) ಸೋದರ ಸಂಸ್ಥೆ, 'ಅತುಲ್ ಸ್ಪಿನರ್ಸ್ ಕಂಪೆನಿ'(Atul Spinners Ltd;)' ಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ, 'ಮಾಧವ್ ಉಚ್ಚಿಲ್' ರನ್ನು ವಿವಾಹವಾಗಿ, ಮುಂಬಯಿನಗರಕ್ಕೆ ಬಂದು, ವಾಸ್ತವ್ಯಹೂಡಿದರು. ಆಗ ಶ್ಯಾಮಲಾ ೧೫ ವರ್ಷದ ಹರೆಯದ ತರುಣಿ. ಮಾಧವ್, ಕಾರ್ಯ ನಿಷ್ಥೆಗೆ ಹೆಸರಾದವರು. ತಮ್ಮಿಬ್ಬರ ಮದುವೆಗೆಂದು ಒಂದು ವಾರ ರಜೆ ಪಡೆದದ್ದನ್ನು ಬಿಟ್ಟರೆ, ಮತ್ತೆಂದೂ ಒಂದು ದಿನವೂ ವಾರದ ರಜಾ ದಿನವೂ ಇಲ್ಲದೆ 'ಕಾಯಕವೇ ಕೈಲಾಸ' ಎನ್ನುವ ಅನ್ವರ್ಥನಾಮಿಗಳು. ಯಾವಾಗಲು ಚಟುವಟಿಕೆಯಿಂದ ಕಾರ್ಯಾಸಕ್ತರಾಗಿರುವ ವ್ಯಕ್ತಿ. ಮಾಧವ್, ಅವರ ಬಾಸ್ 'ಕೈಥಾನ್' ರಿಂದ ಸಮ್ಮಾನಿತರಾದರು. ಮಾಧವರು, ಪತ್ನಿಯ ಅದಮ್ಯ ಸಾಹಿತ್ಯಾಸಕ್ತಿಯನ್ನು ಮನಗಂಡು ತಕ್ಷಣವೇ, ಮೈಸೂರ್ ಅಸೋಸಿಯೇಷನ್, ಮುಂಬಯಿ, ಕರ್ನಾಟಕ ಸಂಘ, ಮುಂಬಯಿ, ಮತ್ತು ಮುಂಬಯಿ ಕನ್ನಡ ಸಂಘ, ಮುಂಬಯಿ ಸಂಘಗಳಲ್ಲಿ ಸದಸ್ಯತ್ವವನ್ನು ಕೊಡಿಸಿದರು. ಈ ಸಂಸ್ಥೆಗಳಲ್ಲಿದ್ದ ಅಪರೂಪದ ಪುಸ್ತಕಗಳು ಮತ್ತು ಆಕರ ಗ್ರಂಥಗಳು,ಶ್ಯಾಮಲರ ಸಂಶೋಧನೆಯಲ್ಲಿ ಬಹಳ ಸಹಾಯಕವಾಯಿತು. ಈ ದಂಪತಿಗಳಿಗೆ ೩ ಜನ ಗಂಡು ಮಕ್ಕಳು : ೧. ತುಷಾರ್,೨. ಪ್ರಜ್ವಲ್, ಮತ್ತು ೩. ಹರ್ಷವರ್ಧನ್,ಎಂದು. ೧೯೭೧ ರಲ್ಲಿ, ಮುಂಬಯಿಗೆ ಬಂದಮೇಲೂ ಅಜ್ಜಿಯವರ ಬಗ್ಗೆ ಇದ್ದ ಅಪಾರ ಒಲವಿನಿಂದ ಅವರ ಸ್ಮೃತಿಗಳನ್ನು 'ಅಮೃತವರ್ಷಿಣಿ' ಪತ್ರಿಕೆಯಲ್ಲಿ ಪ್ರಕಟಿಸಿದರು. ಕನ್ನಡದಲ್ಲಿ ಕಥೆಗಳು, ಫೀಚರ್ಸ್, ಪರ್ಯಟನ ಕಥನಗಳು, ಮುಂಬಯಿನ ಮತ್ತು ಒಳನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕ್ರಮವಾಗಿ ಪ್ರಕಟಗೊಳ್ಳಲಾರಂಬಿಸಿದವು. ತಂದೆಯವರ ಬಳಿಕ ಶ್ಯಾಮಲರ ಸಾಹಿತ್ಯಿಕ ಕಾರ್ಯಗಳಲ್ಲಿ ಪ್ರೋತ್ಸಾಹದ ನೆರವು ದೊರೆತದ್ದು : ನಿರಂಜನ, ಯಶವಂತ ಚಿತ್ತಾಲ, ಕೆ.ಟಿ.ಗಟ್ಟಿ, ರಹಮತ್ ತರೀಕೆರೆ, ಭುವನೇಶ್ವರಿ ಹೆಗಡೆ, ಮತ್ತು ಯುವ ಸಾಹಿತಿ, ನೇಮಿಚಂದ್ರ (ಲೇಖಕಿ), ಮೊದಲಾದವರಿಂದ.
ಅರುಂಧತಿ ರಾಯ್ ವಿರಚಿತ , ಬುಕರ್ ಪ್ರಶಸ್ತಿ ವಿಜೇತ 'ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಕೃತಿಯ ಕನ್ನಡಾನುವಾದ ಪ್ರಕಟನೆಗೆ ಕಾದಿದೆ.
ಸೃಜನ ಬಳಗದ ಅಧ್ಯಕ್ಷೆ, ೨ ವರ್ಷ,ಕಮ್ಮಟಗಳನ್ನು ಪುಸ್ತಕ ಬಿಡುಗಡೆಕಾರ್ಯಕ್ರಮಗಳನ್ನು ಬೆಂಗಳೂರಿನ ಅವೆನ್ಯೂ ಅಕಾಡೇಮಿಯ ವತಿಯಿಂದ ಜೊತೆ ಆಯೋಜಿಸಿದ್ದರು. ೧೯೯೪ ರಲ್ಲಿ, 'ರಫಿಯ ಮಂಝುರುಲ್ ಅಮೀನ್', ವಿರಚಿತ ಭಾಗಿರಥಿ ಪ್ರಕಾಶನ. ಶ್ಯಾಮಲಾ, 'ಮ್ಯಾಂಗಲೂರಿಯನ್ ಡಾಟ್.ಕಾಂ ಪತ್ರಿಕೆ'ಯ ಓದುಗರು.
ಮೈಸೂರ್ ಅಸೋಸಿಯೇಷನ್ ಮುಂಬಯಿನ ಸಭಾಗೃಹದಲ್ಲಿ ಸೃಜನಾ ಕನ್ನಡ ಲೇಖಕಿಯರ ಬಳಗದವರು ೧೬, ಡಿಸೆಂಬರ್,೨೦೧೬ ರಂದು, ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ಯಾಮಲಾ ಮಾಧವರ ಪುಸ್ತಕ ಬಿಡುಗಡೆಯಾಯಿತು. ,
'ಸೌಂಡ್ ಅಂಡ್ ಪಿಚ್ಚರ್ ಆರ್ಕೈವ್'(SPARROW)ನಲ್ಲಿ, ಮಹಿಳೆಯರ ಜೀವನದ ಬಗ್ಗೆ ನಡೆಸಿದ ಸಂಶೋಧನಾ ಕಾರ್ಯಗಳ ಅನುವಾದವನ್ನು ಮಾಡುವ ಕಾರ್ಯದಲ್ಲಿ ಸಕ್ರಿಯರಾಗಿದ್ದರು. ಮುಂಬಯಿವಾಣಿ, ನಿತ್ಯವಾಣಿ ದಿನಪತ್ರಿಕೆ ವಿಶೇಷ ಸಂಚಿಕೆಗಳಲ್ಲಿ ಸಂಪಾದಕ ಮಂಡಳಿಯಲ್ಲಿ ಅನುವಾದ ಕಾರ್ಯವನ್ನು ನಿರ್ವಹಿಸಿದರು. ಮುಂಬಯಿನ ಕನ್ನಡ ಕಥೆ, 'ಪುಕಾರ್', ಸಂಶೋಧನ ಪತ್ರಿಕೆಯನ್ನು ಪ್ರಸ್ತುತಪಡಿಸಿದರು.
ಆಕಾಶವಾಣಿಯ, 'ಮಾತಿನತೋರಣ ಮಾಲೆ'ಯಲ್ಲಿ 'ವಾರದ ಅತಿಥಿ'ಯಾಗಿ ಶ್ಯಾಮಲಾ ಮಾಧವರ ಸಂದರ್ಶನ ನಡೆಯಿತು.
This article uses material from the Wikipedia ಕನ್ನಡ article ಶ್ಯಾಮಲಾ ಮಾಧವ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.