ಆರ್ಥಿಕತೆಯ ಎಲ್ಲ ವಲಯಗಳನ್ನು ಮೂರು ಭಾಗಗಳಾಗಿ ವರ್ಗೀಕರಿಸಿದಾಗ ಕೈಗಾರಿಕೆಗಳು 'ದ್ವಿತೀಯ' ವಲಯ (Secondary Sector) ಎನ್ನಿಸಿಕೊಂಡಿದೆ.
ಕೈಗಾರಿಕೆಗಳು ಒಂದು ದೇಶದ ಮೂಳೆಗಳಿದ್ದಂತೆ. ಮಾನವ ದೇಹಕ್ಕೆ ಪೂರ್ಣ ಚೈತನ್ಯವನ್ನು ಒದಗಿಸಲು ಮೂಳೆಗಳು ಹೇಗೆ ಅವಶ್ಯಕವೋ ಹಾಗೆಯೇ ಆರ್ಥಿಕತೆಗೆ ಚೇತನ ನೀಡಿ ದೀರ್ಘಕಾಲೀನ ಅಭಿವೃದ್ಢಿ ಸಾಧನೆಗೆ ನೆರವಾಗಲು ಕೈಗಾರಿಕೆಗಳು ಅತ್ಯಂತ ಆವಶ್ಯಕ. ಕೈಗಾರಿಕಾಭಿವೃದ್ಧಿ ಸಾಧಿಸಿದ ರಾಷ್ಟ್ರಗಳನ್ನು ಅಭಿವೃದ್ಢ ರಾಷ್ಟ್ರಗಳೆಂದೂ ಕೈಗಾರಿಕೆಯಲ್ಲಿ ಹಿಂದುಳಿದ, ಕೃಷಿಯನ್ನೇ ಪ್ರಧಾನ ಕಸುಬಾಗಿ ಹೊಂದಿರುವ ರಾಷ್ಟ್ರಗಳನ್ನು ಅನಾಭಿವೃದ್ಢ ರಾಷ್ಟ್ರಳೆಂದೂ ಕರೆಯುವುದು ಆರ್ಥಿಕ ಸಾಹಿತ್ಯದಲ್ಲಿ ರೂಢಿಯಾಗಿ ಬೆಳೆದುಬಂದಿದೆ. ಈ ತರ್ಕಕ್ಕೆ ಸುಲಭವಾದ ನೆಲೆಯೂ ಇದೆ. ಭೂಮಿಯ ಫಲವತ್ತತೆ ಮತ್ತು ಕೃಷಿಯ ಉತ್ಪಾದಕತೆಗೆ ಮಿತಿ ಇರುವಿಕೆ ಮತ್ತು ಪ್ರಾಥಮಿಕ ಉತ್ಪನ್ನಗಳ ಬೆಲೆ ಕಡಿಮೆ ಇರುವಿಕೆಯೇ ಇದಕ್ಕೆ ಕಾರಣ. ಆರ್ಥಿಕಾಭಿವೃದ್ಢಿಗೆ ಕೈಗಾರಿಕೆ ಬೆಳವಣಿಗೆ ಅತ್ಯವಶ್ಯಕ.
ಈ ಕೆಳಗಿನ ಅಂಶಗಳನ್ನು ಗಮನಿಸಿದಾಗ ಆರ್ಥಿಕಾಭಿವೃದ್ಢಿಯಲ್ಲಿ ಕೈಗಾರಿಕೀಕರಣದ ಮಹತ್ವ ತಿಳಿಯುತ್ತದೆ.
ಕೃಷಿ ಪ್ರಧಾನವಾಗಿದ್ದ ದೇಶಗಳು ಕೈಗಾರಿಕೀಕೃತ ದೇಶಗಳಾಗಿ ರೂಪಾಂತರಗೊಳ್ಳುವುದು ಆರ್ಥಿಕ ವಿಕಾಸದ ಒಂದು ಚಾರಿತ್ರಿಕ ಬೆಳವಣಿಗೆ. ಅಭಿವೃದ್ದಿ ಹೊಂದಿದ ಎಲ್ಲ ದೇಶಗಳು ಇಂದು ಕೈಗಾರಿಕೀಕರಣ ಸಾಧಿಸಿದ ದೇಶಗಳಾಗಿವೆ. ಭಾರತವೂ ಸಹ ಮೂಲಾಧಾರವಾದ ಮತ್ತು ಬೃಹತ್ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸಿ ಬೆಳೆಸಲು ನಿರಂತರವಾಗಿ ಕಾರ್ಯ ಮಗ್ನವಾಗಿದೆ. ಪಂಚವಾರ್ಷಿಕ ಯೋಜನೆಗಳಲ್ಲಿ, ಅದರಲ್ಲೂ ಎರಡನೇ ಯೋಜನೆ ಮತ್ತು ನಂತರದ ಯೋಜನೆಗಳ ಅವಧಿಯಲ್ಲಿ ಕೈಗಾರಿಕೀಕರಣಕ್ಕೆ ಭಧ್ರ ಬುನಾದಿ ಹಾಕಲು ಎಲ್ಲ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಸಾರ್ವಜನಿಕ ವಲಯವು ರಭಸವಾಗಿ ವಿಸ್ತಾರಗೊಂಡಿರುವುದು ಸ್ವಾತಂತ್ರೋತ್ತರ ಅವಧಿಯ ಕೈಗಾರಿಗಾ ಬೆಳವಣಿಗೆಯ ಪ್ರಮುಖ ಲಕ್ಷಣವಾಗಿದೆ. ೧೯೫೧ ರಲ್ಲಿ ಕೇವಲ ೫ ವಿಭಾಗೇತರ ಸಾರ್ವಜನಿಕ ಉದ್ಯಮಗಳಿದ್ದವು. ಅವುಗಳಲ್ಲಿ ತೊಡಗಿಸಿದ ಬಂಡವಾಳದ ಹೂಡಿಕೆ ರೂ.೨೯ ಕೋಟಿಯಾಗಿತ್ತು. ೧೯೯೪ ರ ಮಾರ್ಚ್ ೩೧ ರಲ್ಲಿ ಅವುಗಳ ಸಂಖ್ಯೆ ೨೪೬ಗೆ ಬೆಳೆಯಿತು ಮತ್ತು ಅವುಗಳಲ್ಲಿ ತೊಡಗಿಸಿದ ಬಂಡವಾಳದ ಹೂಡಿಕೆ ರೂ.೧೬೪೩೩೨ ಕೋಟಿಗೆ ಏರಿತ್ತು. ಈ ಉದ್ಯಮಗಳು ಉಕ್ಕು, ಕಲ್ಲಿದ್ದಲು, ರಾಸಾಯನಿಕಗಳು, ರೈಲಿನ ಎಂಜಿನ್, ರೈಲು ಬೋಗಿ, ಹಡಗುಗಳು, ವೈಮಾನಿಕ ಸಾಮಗ್ರಿಗಳು, ತಾಂತ್ರಿಕ ವಸ್ತುಗಳೂ ಸೇರಿದಂತೆ ವೈವಿಧ್ಯಮಯ ಸರಕುಗಳನ್ನು ಉತ್ಪಾದನೆ ಮಾಡುತ್ತಿವೆ.
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಭಾರತದ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಇದೊಂದು ಮೂಲ ಹಾಗೂ ಬೃಹತ್ ಕೈಗಾರಿಕೆಯಾಗಿದೆ. ಇಂದು ಈ ಕೈಗಾರಿಕೆಯು ನಮ್ಮ ಕೈಗಾರಿಕ ರೂಪಿಸುವುದಕ್ಕೆ ಮತ್ತು ಇಡೀ ಆರ್ಥಿಕ ವ್ಯವಸ್ಥೆಗೆ ಪೋಷಕ ಕಾರ್ಯವನ್ನು ನಿರ್ವಹಿಸುತ್ತಿದೆ. ಈಗ ದೇಶದಲ್ಲಿ ೭ ದೊಡ್ಡ ಉಕ್ಕಿನ ಕಾರ್ಖಾನೆಗಳಿದ್ದು ೨೦೦ ಲಕ್ಷ ಟನ್ನುಗಳ ಉತ್ಪಾದನ ಸಾಮರ್ಥ್ಯ ಹೊಂದಿವೆ. ಈಗ ೧೫ ವರ್ಷಗಳಲ್ಲಿ ಉಕ್ಕಿನ ಕೈಗಾರಿಕೆ ವ್ಯಾಪಕವಾಗಿ ಬೆಳೆದಿದೆ. ಇತ್ತೀಚಿನವರೆಗು ಭಾರತದ ಆರ್ಥಿಕತೆಯಲ್ಲಿ ಹತ್ತಿ ಕೈಗಾರಿಕೆಯು ಪಡೆದಿದ್ದ ಹೆಮ್ಮೆಯು ಸ್ಥಾನವನ್ನು ಈಗ ಈ ಕೈಗಾರಿಕೆ ಪಡೆದು ಕೊಂಡಿದೆ. ಆಧುನಿಕ ಪದ್ಧತಿಯಲ್ಲಿ ಉಕ್ಕಿನ ಉತ್ಪಾದನೆಗೆ ಈಗ ಸುಮಾರು ಒಂದೂವರೆ ಶತಮಾನಗಳ ಹಿಂದೆಯೇ ಪ್ರಯತ್ನ ನಡೆದಿತ್ತು. ೧೮೩೦ ರಲ್ಲಿ ತಮಿಳುನಾಡಿನ ದಕ್ಷಿಣ ಆರ್ಕಾಟ್ನಲ್ಲಿ ಮತ್ತು ೧೮೭೪ ರಲ್ಲಿ ಬಿಹಾರದ ಝಾರಿಯಾದಲ್ಲಿ ಈ ಪ್ರಯತ್ನಗಳು ನಡೆದ್ದಿದವು. ಆದರೆ ಅವು ಅಷ್ಟೊಂದು ಯಶಸ್ವಿಯಾಗಲಿಲ್ಲ.
ಹತ್ತಿ ಬಟ್ಟೆಯ ಕೈಗಾರಿಕೆಯು ಭಾರತದಲ್ಲಿ ಅತಿ ದೊಡ್ಡದಾದ ಮತ್ತು ಪ್ರಾಚೀನವಾದ ಕೈಗಾರಿಕೆ. ಈ ಕೈಗಾರಿಕೆಗೆ ೧೫೦ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ೧೮೧೮ ರಲ್ಲಿ ಕಲ್ಕತ್ತಾದಲ್ಲಿ ಹತ್ತಿ ಜವಳಿ ಕಾರ್ಖಾನೆಯೊಂದು ಸ್ಥಾಪನೆಯಾಗಿ ಅಂದಿನಿಂದ ಈ ಕೈಗರಿಕೆ ಪ್ರಾರಂಭಗೊಂಡಿತು. ಹತ್ತಿ ಜವಳಿ ಕೈಗಾರಿಕೆಯೂ ೧೯೨೦ ರ ವರೆಗೂ ಮುಂಬಯಿಯಲ್ಲಿಯೇ ಕೇಂದ್ರಿಕೃತವಾಗಿತ್ತು. ನಂತರ ಉತ್ತರಪ್ರದೇಶ, ಗುಜರಾತ್, ಬಂಗಾಲ, ಮಹರಾಷ್ಟ್ರ, ತಮಿಳುನಾಡು, ಹರ್ಯಾಣಾ, ಕರ್ನಾಟಕ ರಾಜ್ಯಗಳ ಅನೇಕ ಭಾಗಗಳಲ್ಲಿ ಹತ್ತಿ ಜವಳಿ ಕಾರ್ಖಾನೆಗಳು ವ್ಯಾಪಕವಾಗಿ ಸ್ಥಾಪಿಸಲ್ಪಟ್ಟವು. ಆದರೆ ಮುಂಬಯಿಯು ಹತ್ತಿ ಜವಳಿ ಕೈಗಾರಿಕೆಯ ಒಂದು ದೊಡ್ಡ ಕೇಂದ್ರವಾಗಿ ಉಳಿಯಿತು. ದೇಶದ ರಾಜಧಾನಿಯಾದ ದೆಹಲಿಯಲ್ಲಿ ಸಹ ಹತ್ತಿ ಜವಳಿ ಕೈಗಾರಿಕೆ ಕೇಂದ್ರವಾಗಿದೆ.
ಸಕ್ಕರೆ ಕೈಗಾರಿಕೆಯು ಒಂದು ವ್ಯವಸ್ತಿತ ಮತ್ತು ಅತ್ಯುತ್ತಮ ಕೃಷಿ ಆಧಾರಿತ ಕೈಗಾರಿಕೆಯಾಗಿದೆ. ಭಾರತದ ಆರ್ಥಿಕ ವ್ಯವಸ್ತೆ ಮತ್ತು ಕೈಗಾರಿಕ ಸ್ವರೂಪದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಈ ಕೈಗಾರಿಕೆಯು ಸುಮಾರು ೧೩೫೦ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯನ್ನು ಪಡೆದಿದೆ. ಇದು ಸುಮಾರು ೩.೨೫ ಲಕ್ಷ ಕೆಲಸಗಾರರಿಗೆ ನೇರವಾಗಿ ಉದ್ಯೋಗವನ್ನು ಒದಗಿಸಿದೆ, ಅಲ್ಲದೆ ಸುಮಾರು ೨.೫ ಕೋಟಿ ಕಬ್ಬು ಬೆಳೆಗಾರರು ಇದರಿಂದ ಪರೋಕ್ಷ ಉದ್ಯೋಗ ಕಂಡುಕೊಂಡಿದ್ದಾರೆ.
ಕೈಗಾರಿಕೋದ್ಯಮದ ಬಗೆಗೆ ಸರ್ಕಾರವು ತಳೆದಿರುವ ಸಮಗ್ರ ಧೋರಣೆ, ಉದ್ಯಮಗಳ ಸ್ಥಾಪನೆ, ಅವುಗಳ ಕಾರ್ಯಾಚರಣೆ ಮತ್ತು ಆಡಳಿತ ನಿರ್ವಹಣೆಯ ವಿಷಯಗಳಲ್ಲಿ ಅನುಸರಿಸುವ ಸರ್ಕಾರದ ಅಧಿಕೃತ ನೀತಿಯನ್ನು 'ಕೈಗಾರಿಕಾ ನೀತಿ'(Industrial policy) ಎಂದು ಕರೆಯಲಾಗುತ್ತದೆ. ಕೈಗಾರಿಕಾ ಪ್ರಗತಿಯ ಬಗೆಗೆ ಸರ್ಕಾರದ ತಾತ್ವಿಕ ಧೋರಣೆ ಮತ್ತು ಆ ಕುರಿತ ತತ್ವ ಮತ್ತು ನೀತಿಯ ಅನುಷ್ಹಾನ ಇತ್ಯದಿ ಕೈಗಾರಿಕಾ ನೀತಿಯ ಭಾಗಗಳಾಗಿರುತ್ತದೆ. ಸರ್ಕಾರವು ಎಂತಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು, ಅವುಗಳ ಕಾರ್ಯಾಚರಣೆ ಮತ್ತು ಆಡಳಿತದಲ್ಲಿ ಹಸ್ತಕ್ಷೇಪವಿರಬೇಕೇ ಅಥವಾ ಬೇಡವೇ, ಹಾಗೂ ಯಾವ ಸಂಗತಿಗಳ ಆಧಾರದ ಮೇಲೆ ದೊಡ್ಡ ಪ್ರಮಾಣದ, ಸಣ್ಣ ಪ್ರಮಾಣದ ಮತ್ತು ಗುಡಿ ಕೈಗಾರಿಕೆಗಳನ್ನು ವಿಭಗಿಸಬೇಕು, ಯಾವ ವಿಧದ ಕೈಗಾರಿಕೆಗಳು ಸಾರ್ವಜನಿಕ, ಖಾಸಗಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸ್ಥಾಪಿಸಲ್ಪಡಬೇಕು ಮೊದಲಾದ ಅಂಶಗಳು ಕೈಗಾರಿಕ ನೀತಿಯಲ್ಲಿ ಉಲ್ಲೇಖವಾಗಿರುತ್ತವೆ. ಒಟ್ಟಿನಲ್ಲಿ ಸರ್ಕಾರದ ಕೈಗಾರಿಕಾ ನೀತಿಯು ಉದ್ಯಮ ನಿಯಂತ್ರಣ ಮತ್ತು ಕೈಗಾರಿಕಾ ರೂಪಿಕೆಯಲ್ಲಿ ಸರ್ಕಾರ ಅನುಸರಿಸುವ ನೀತಿ ನಿಯಮ ಹಾಗೂ ವಿಧಾನಗಳು. ಹಣ ಸಂಬಂಧಿ ನೀತಿ, ಕೋಶೀಯ ನೀತಿ, ಕಾರ್ಮಿಕ ನೀತಿ, ವಿದೇಶೀ ನೆರವಿನ ಬಗೆಗೆ ಸರ್ಕಾರದ ನಿಲುವು ಮುಂತಾದ ವಿಷಯಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.
ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಕೈಗಾರಿಕಾ ನೀತಿಯ ಆವಶ್ಯಕತೆ ತುಂಬ ಮುಖ್ಯವಾದದ್ದು.
ಇತರೆ ಉತ್ಪಾದನ ವ್ಯವಸ್ತೆಗಳಿಗೆ ಆವಶ್ಯಕವಿರುವಂತೆ ಕೈಗಾರಿಕೆಗಳಿಗೂ ಹಣಕಾಸಿನ ಅಗತ್ಯವಿದೆ. ಸಣ್ಣ ಪ್ರಮಾಣದ, ಮಧ್ಯಮ ಪ್ರಮಾಣದ ಮತ್ತು ಬೃಹತ್ ಪ್ರಮಾಣದ ಉದ್ಯಮಗಳೆಲ್ಲವೂ ತಮ್ಮ ಉತ್ಪಾದನ ಕಾರ್ಯವನ್ನು ಸಾಗಿಸಿಕೊಂಡು ಹೋಗಲು, ಹಣಕಾಸನ್ನು ಕೋರುತ್ತವೆ. ಅಂತೆಯೇ ಯಂತ್ರಗಳ ರಿಪೇರಿ, ಸಣ್ಣ ಯಂತ್ರಗಳ ಮತ್ತು ಬಿಡಿ ಭಾಗಗಳ ಕೊಳ್ಳುವಿಕೆಗೆ ಮಧ್ಯಮಾವಧಿಯ ಹಣಕಾಸು ಬೇಕಿರುತ್ತದೆ.
This article uses material from the Wikipedia ಕನ್ನಡ article ಕೈಗಾರಿಕೆಗಳು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.