ಪು. ತಿ. ನರಸಿಂಹಾಚಾರ್: ಕನ್ನಡದ ನವೋದಯ ಕವಿ

ಪು.ತಿ.

ನರಸಿಂಹಾಚಾರ್ : - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ,ಗೀತನಾಟಕಕಾರರು, ಜಿಜ್ಞಾಸೆಯ ಕವಿ .ಪು.ತಿ.ನರಸಿಂಹಾಚಾರ್ ಅವರದು ಕನ್ನಡ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. ಜೀವನ ಹಾಗೂ ಸಾಹಿತ್ಯದಲ್ಲಿ ತುಂಬೊಲವನ್ನು ಹರಿಸಿದ, ಬದುಕು ಭಗವಂತನ ಕೃಪೆಯಿಂದ ಆದುದು ಎಂದು ಭಾವಿಸಿದ ಕವಿ. ನವೋದಯ ಸಾಹಿತ್ಯದ ಮೊದಲ ತಲೆಮಾರು ಕಂಡ ಹಲವು ಹಿರಿಯ ಕವಿಗಳ ಸಾಲಿಗೆ ಸೇರಿದ ಹಿರಿದಾದ ಚೇತನ. ಬಿ.ಎಂ.ಶ್ರೀ, ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿಯಂತಹ ಹಿರಿಯ ಕವಿಗಳ ಗುಂಪಿನಲ್ಲಿ ಇದ್ದವರು.

ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್
ಪು. ತಿ. ನರಸಿಂಹಾಚಾರ್: ಜೀವನ, ಕೃತಿಗಳು, ಪ್ರಶಸ್ತಿ ಮತ್ತು ಪುರಸ್ಕಾರಗಳು
ಜನನ೧೯೦೫ನೇ ಮಾರ್ಚ್ ೧೭
ಮರಣ23 October 1998(1998-10-23) (aged 93)
ಬೆಂಗಳೂರು, ಕರ್ನಾಟಕ
ಕಾವ್ಯನಾಮಪು. ತಿ. ನ.
ವೃತ್ತಿಬರಹಗಾರ, ಕವಿ
ರಾಷ್ಟ್ರೀಯತೆಭಾರತ
ಪ್ರಕಾರ/ಶೈಲಿಫಿಕ್ಷನ್
ಸಾಹಿತ್ಯ ಚಳುವಳಿಕನ್ನಡ: ನವೋದಯ ಸಾಹಿತ್ಯ.
ಪು. ತಿ. ನರಸಿಂಹಾಚಾರ್: ಜೀವನ, ಕೃತಿಗಳು, ಪ್ರಶಸ್ತಿ ಮತ್ತು ಪುರಸ್ಕಾರಗಳು
ಪುತಿನ ಮನೆ
ಪು. ತಿ. ನರಸಿಂಹಾಚಾರ್: ಜೀವನ, ಕೃತಿಗಳು, ಪ್ರಶಸ್ತಿ ಮತ್ತು ಪುರಸ್ಕಾರಗಳು
ಪುತಿನ ಮನೆ

ಜೀವನ

  • ಪು.ತಿ.ನ. ಎಂಬುದು ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಎಂಬ ಹೆಸರಿನ ಸಂಕ್ಷಿಪ್ತ ರೂಪ [ಹೆಸರು]. ಇವರ ತಂದೆ ವೃತ್ತಿಯಿಂದ ವೈದಿಕರಾಗಿದ್ದವರು. ಮೇಲುಕೋಟೆಯಲ್ಲಿ ೧೯೦೫ ಮಾರ್ಚ್ ೧೭ರಂದು ಜನಿಸಿದ ಇವರ ಮೇಲೆ ಅಲ್ಲಿನ ಆಧ್ಯಾತ್ಮಿಕ ಪರಿಸರ ವೈಯಕ್ತಿಕವಾಗಿ ಹಾಗೂ ಸಾಹಿತ್ಯ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಪ್ರಕೃತಿ ಮತ್ತು ಪ್ರಕೃತಿಯಲ್ಲಿ ದೈವತ್ವದ ಹುಡುಕಾಟ ಅವರ ಕಾವ್ಯದ ಮೂಲಭೂತ ಅಂಶವಾಗಿದೆ.
  • ಪು.ತಿ.ನ. ಅವರ ಬಾಲ್ಯ ಅರಳಿದ್ದು ತಂದೆಯ ಊರಾದ ಮೇಲುಕೋಟೆ ಹಾಗೂ ತಾಯಿಯ ಊರಾದ ಗೊರೂರು ನಡುವೆ. ಮುಂದೆ ವಯಸ್ಕರಾದಾಗ ಹೆಂಡತಿಯ ಊರಾದ ಹೆಮ್ಮಿಗೆ, ಓದಿನ ಊರಾದ ಮೈಸೂರು, ವೃತ್ತಿನಗರವಾದ ಬೆಂಗಳೂರು, ಮಲ್ಲೇಶ್ವರಗಳ ನಡುವೆ ಅವರ ಮನಸ್ಸು ಸುಳಿದಾಡಿದೆ. ತಂದೆಯವರು ವೃತ್ತಿಯಿಂದ ವೈದಿಕರಾದರೂ ಜೀವನ ನಿರ್ವಹಣೆ ದುರ್ಬರವೆನಿಸಿದ ಕಾರಣ ಹಾಗೂ ಪು.ತಿ.ನ. ಅವರ ಪ್ರಕೃತಿಗೆ ಒಗ್ಗದಿದ್ದ ಕಾರಣದಿಂದ ಮೈಸೂರನ್ನು ಸೇರಿ ವಿದ್ಯಾಭ್ಯಾಸಕ್ಕೆ ತೊಡಗಿದರು.
  • ಮೂಲತಃ ಗ್ರಾಮ್ಯ ತಮಿಳನ್ನು ಆಡುತ್ತಿದ್ದು ಮೈಸೂರಲ್ಲಿ ಆಂಗ್ಲಭಾಷೆ ಮತ್ತು ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದರು. ಅಲ್ಲಿ ಗುರು ಹಿರಿಯಣ್ಣ, ಆತ್ಮೀಯ ಮಿತ್ರರಾದ ಶಿವರಾಮ ಶಾಸ್ತ್ರಿ ಹಾಗೂ ತೀ.ನಂ. ಶ್ರೀಕಂಠಯ್ಯನವರ ಸಂಪರ್ಕ ಒದಗಿ ಬಂತು. ಆನಂತರ ಬೆಂಗಳೂರಿನಲ್ಲಿ ಸೈನ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಫಿರಂಗಿಯವರ (ಇಂಗ್ಲೀಷರ) ನೇರ ಕೈಕೆಳಗೆ ಕೆಲಸ ಮಾಡುವ ಸಂದರ್ಭ ಒದಗಿತು. ಸೈನ್ಯದ ಮುಖಂಡರು ಚೆನ್ನಾಗಿ ನಡೆಸಿಕೊಂಡ ಕಾರಣ ಪು.ತಿ.ನ.ರವರ ರೀತಿನೀತಿಗಳು ಬದಲಾಗದೆ ನೆಮ್ಮದಿಯಾಗಿ ಕೃತಿರಚನೆ ಮಾಡಲು ಸಾಧ್ಯವಾಯಿತು.

ಕೃತಿಗಳು

ಪು.ತಿ.ನ. ಅವರು ಒಟ್ಟು 13 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವುಗಳು ಕ್ರಮವಾಗಿ -

ಕವನ ಸಂಕಲನಗಳು

  1. ಹಣತೆ,
  2. ಮಾಂದಳಿರು,
  3. ಅಹಲ್ಯೆ,
  4. ಶಬರಿ,
  5. ವಿಕಟಕವಿವಿಜಯ,
  6. ಹಂಸದಮಯ೦ತಿ,
  7. ಗೋಕುಲ ,
  8. ಶಾರದ ಯಾಮಿನಿ,
  9. ಗಣೇಶ ದರ್ಶನ,
  10. ರಸ ಸರಸ್ವತಿ,
  11. ಮಲೆ ದೇಗುಲ,
  12. ಹೃದಯ ವಿಹಾರಿ,
  13. ಇರುಳು ಮೆರುಗು,
  14. ಹಳೆಯ ಬೇರು ಹೊಸ ಚಿಗುರು,
  15. ಎಂಬತ್ತರ ನಲುಗು.
  16. ರಥಸಪ್ತಮಿ.
  17. ನಿರೀಕ್ಷೆ.
  18. ಹಣತೆಯ ಹಾಡು.

`ಹಣತೆ'ಯಿಂದ ಆರಂಭವಾದ ಅವರ ಕಾವ್ಯ ಜೀವನ `ಹಣತೆಯ ಹಾಡು' ಕವನ ಸಂಕಲನದೊಂದಿಗೇ ಕೊನೆಗೊಂಡಿದ್ದು ವಿಪರ್ಯಾಸದ ಸಂಗತಿಯಾಗಿದೆ.

ಮಹಾಕಾವ್ಯ

  1. ಶ್ರೀಹರಿ ಚರಿತೆ

ನಾಟಕ

  1. ಜಾಹ್ನವಿಗೆ ಜೋಡಿ ದೀವಿಗೆ ಮತ್ತು ಇತರ ನಾಟಕಗಳು

ಗೀತನಾಟಕಗಳು

ಪು.ತಿ.ನ. ಅವರು ಕವಿ ಮಾತ್ರವಲ್ಲದೆ ಉತ್ತಮ ಗೀತನಾಟಕಕಾರರೂ ಆಗಿದ್ದಾರೆ. ಅವರ ಒಂಬತ್ತು ಗೀತನಾಟಕಗಳಲ್ಲಿ ಗೀತರೂಪಕಗಳೂ ಸೇರಿವೆ. ಅವುಗಳು ಕ್ರಮವಾಗಿ -

  1. ಗೋಕುಲ ನಿರ್ಗಮನ,
  2. ಕವಿ
  3. ಅಹಲ್ಯೆ,
  4. ಸತ್ಯಾಯನ ಹರಿಶ್ಚಂದ್ರ,
  5. ವಿಕಟಕವಿ ವಿಜಯ,
  6. ಶಬರಿ,
  7. ಹಂಸದಮಯಂತಿ,
  8. ಹರಿಣಾಭಿಸರಣ,
  9. ದೀಪಲಕ್ಷ್ಮಿ .
  10. ಕುಚೇಲ ಕೃಷ್ಣ
  11. ದೋಣಿಯ ಬಿನದ
  12. ಶ್ರೀ ರಮಣ ಪ್ರಭ
  13. ಶ್ರೀರಾಮ ಪಟ್ಟಾಭಿಷೇಕ
  • ಈ ನಾಟಕಗಳಲ್ಲಿ ಗೋಕುಲ ನಿರ್ಗಮನ, ಅಹಲ್ಯೆ, ಬಿ.ವಿ. ಕಾರಂತರ ಪ್ರಯತ್ನದಿಂದ ರಂಗಪ್ರಯೋಗ ಕಂಡಿವೆ. ಉದ್ಯಾವರ ಮಾಧವ ಆಚಾರ್ಯ ಅವರು ತಮ್ಮ ಸಮೂಹ ಕಲಾವಿದರು-ಉಡುಪಿ ಎಂಬ ತಂಡದ ಮೂಲಕ ಅಹಲ್ಯೆ, ಸತ್ಯಾಯನ ಹರಿಶ್ಚಂದ್ರ, ಹರಿಣಾಭಿಸರಣ, ಕುಚೇಲ ಕೃಷ್ಣ ಗೀತರೂಪಕಗಳನ್ನು ಹಾಗೂ ಶ್ರೀ ಹರಿಚರಿತೆ ಮಹಾಕಾವ್ಯದ ಆಯ್ದ ಭಾಗಗಳನ್ನು ಸಂಕಲಿಸಿ ವಿವಿಧ ಸಂದರ್ಭಗಳಲ್ಲಿ ರಂಗ ಪ್ರಯೋಗವಾಗಿಸಿದ್ದಾರೆ. ಗೋಕುಲ ನಿರ್ಗಮನ ಅವರ ಹೆಸರಾಂತ ನಾಟಕವಾಗಿದ್ದು ಪ್ರಣಯಿಯೂ, ಸಂಗೀತಗಾರನೂ ಆಗಿರುವ ಕೃಷ್ಣ ಮುಂದೆ ಕೊಳಲನ್ನು ಬಿಸುಟು ಬೇರೆಯದೇ ಹಾದಿ ಹಿಡಿಯುವ ಸೂಚನೆ ಸಿಗುತ್ತದೆ. ಮುಂದೆ ಮಹಾಭಾರತ, ಮಧುರೆ, ದ್ವಾರಕೆಯಲ್ಲೆಲ್ಲೂ ಕೃಷ್ಣ ಕೊಳಲನ್ನು ಹಿಡಿಯುವುದಿಲ್ಲ.
  • ಶ್ರೀಹರಿಚರಿತೆ ಆಧುನಿಕ ಯುಗದಲ್ಲಿ ಕೃಷ್ಣನ ಕಲ್ಪನೆಯನ್ನು ಸಾಕ್ಷಾತ್ಕರಿಸುವ ಪ್ರಯತ್ನವಾಗಿದೆ. ಇಂತಹ ಪೌರಾಣಿಕ ಸಂಗೀತಮಯ ನಾಟಕಗಳ ರಚನೆಗೆ ಪ್ರೇರಣೆ ಸಿಕ್ಕಿದ್ದು ಹರಿಕಥೆಗಳು, ಅರಮನೆ ನಾಟಕ ಕಂಪೆನಿಗಳಲ್ಲಿದ್ದ ಒಳ್ಳೆಯ ಸಂಗೀತಗಾರರು ಮತ್ತು ಅವರ ಪಾತ್ರ ನಿರ್ವಹಣೆ, ಮಾರ್ಷ್ ಶಿವಿಲಿಯರ್‌ನ `Spring time in Paris' ಎಂಬ ಆಧುನಿಕ ಅಪೆರಾ, ತಮಿಳಿನಲ್ಲಿ `ವಲ್ಲಿ ಪರಿಣಯ' ಎನ್ನುವ ಹಾಡುಗಳಿಂದಲೇ ನಿರ್ವಹಿಸಲ್ಪಟ್ಟ ನಾಟಕ ಹಾಗೂ ಕಂಪೆನಿ ನಾಟಕಗಳಿಂದ.
  • ಅವರೊಬ್ಬ ಗೀತರೂಪಕ ನಾಟಕಕಾರರಾಗುವುದಕ್ಕೆ ಕಾರಣ ಕಾವ್ಯ ಮತ್ತು ಸಂಗೀತ ಮೇಳೈಸಿಕೊಂಡ ಕನ್ನಡದ ಏಕೈಕ ರಚನಕಾರರಾಗಿದ್ದುದು. ಸಂಗೀತಕ್ಕೆ ಪು.ತಿ.ನ.ರವರು ಹಲವು ಹೊಸ ರಾಗಗಳನ್ನು ಕಂಡುಹಿಡಿಯುವುದರ ಮೂಲಕ ಕೊಡುಗೆ ಸಲ್ಲಿಸಿದ್ದಾರೆ ಎಂದು ಡಾ| ದೊರೆಸ್ವಾಮಿ ಅಯ್ಯಂಗಾರರು ಮೆಚ್ಚಿಗೆ ಮಾತನ್ನಾಡಿದ್ದಾರೆ. ಅವುಗಳಲ್ಲಿ ಮುಖ್ಯವಾದವು ವಾಸಂತಿ, ಸಂಜೀವಿನಿ, ಹರಿಣಿ, ಋತುವಿಲಾಸ, ಗಾಂಧಾರದೋಲ, ಋಷಭ ವಿಲಾಸ ಮತ್ತು ಇನ್ನೂ ನಾಮಕರಣವಾಗದ ಹಲವಾರು ರಾಗಗಳು ಸಾಕಷ್ಟಿವೆ. ಪು.ತಿ.ನ.ರವರು ಒಳ್ಳೆಯ ಗದ್ಯ ಬರಹಗಾರರೂ ಆಗಿದ್ದರು ಎಂಬುದಕ್ಕೆ ಅವರ ಐದು ಪ್ರಬಂಧ ಸಂಕಲನಗಳು ಸಾಕ್ಷಿಯಾಗಿವೆ.

ಸಣ್ಣಕತೆ

  1. ಧ್ವಜರಕ್ಷಣೆ ಮತ್ತು ಇತರ ಕಥೆಗಳು
  2. ರಥಸಪ್ತಮಿ ಮತ್ತು ಇತರ ಕಥೆಗಳು

ಗದ್ಯಚಿತ್ರಗಳು

  1. ರಾಮಾಚಾರಿಯ ನೆನಪು,
  2. ಈಚಲು ಮರದ ಕೆಳಗೆ,
  3. ಗೋಕುಲಾಷ್ಟಮಿ,
  4. ಭೀತಿ ಮೀಮಾಂಸೆ,
  5. ಧೇನುಕೋಪಾಖ್ಯಾನ,
  6. ಮಸಾಲೆದೋಸೆ,
  7. ಯದುಗಿರಿಯ ಗೆಳೆಯರು

ಪ್ರಬಂಧಗಳು ಅವರ ಹಾಸ್ಯ ಪ್ರಸನ್ನತೆ, ಮಾತುಗಾರಿಕೆಯಿಂದ ಕೂಡಿವೆ.

ಅನುವಾದಗಳು

  1. ಬದಲಿಸಿದ ತಲೆಗಳು,
  2. ಮಹಾಪ್ರಸ್ಥಾನ,
  3. ಕನ್ನಡ ಭಗವದ್ಗೀತೆ,
  4. ಗಯಟೆಯ ಫೌಸ್ಟ್ ಭಾಗ-೧
  5. ನಮ್ಮಾಳ್ವರ್
  6. ಸಿರಿಬಾಯಿನುಡಿ
  7. ಸಮಕಾಲೀನ ಭಾರತೀಯ ಸಾಹಿತ್ಯ

ಕಾವ್ಯಮೀಮಾಂಸೆ/ವಿಮರ್ಶೆ

  1. ಕಾವ್ಯ ಕುತೂಹಲ
  2. ರಸಪ್ರಜ್ಞೆ (೧೯೮೦)
  3. ದೀಪರೇಖೆ

ಆಯ್ದ ಸಂಗ್ರಹ

  1. ಅತಿಥಿ
  2. ನವಿಲುಗರಿ
  3. ಋತುಗೀತ
  4. ಲಹರಿ
  5. ಆಯ್ದ ಪ್ರಬಂಧಗಳು

ಸಂಪಾದನೆ

  • ಸುವರ್ಣ ಸಂಪುಟ (೧೯೮೦-ಇತರರೊಡನೆ)

ಪ್ರಶಸ್ತಿ ಮತ್ತು ಪುರಸ್ಕಾರಗಳು

ಕವಿತೆಯ ಹಾಗೆ ಸರಳ, ಪ್ರಾಮಾಣಿಕ ಮನಸ್ಥಿತಿಯುಳ್ಳ ಹಿರಿಯ ಕವಿ ಪು.ತಿ.ನ.ರವರಿಗೆ ಸಂದ ಪ್ರಶಸ್ತಿಗಳು ಹಲವಾರು.

  1. ಇವರ "ಹಂಸ ದಮಯಂತಿ ಮತ್ತು ಇತರ ರೂಪಕಗಳು" ಎಂಬ ಕೃತಿಗೆ ೧೯೬೬ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
  2. ಹಾಗೆಯೇ ಇವರ "ಗೋಕುಲ ನಿರ್ಗಮನ" ಎಂಬ ಸಂಗೀತ ಪ್ರಧಾನ ನಾಟಕ ಕನ್ನಡದ ಮೇರು ಕೃತಿಗಳ ಸಾಲಿಗೆ ಸೇರುತ್ತದೆ. ಈ ಕಾವ್ಯಮಯ ನಾಟಕದಲ್ಲಿ, ಕೃಷ್ಣನಿಗೆ ಕಂಸನಿಂದ ಆಹ್ವಾನ ಬಂದು ಗೋಕುಲದಿಂದ ದ್ವಾರಕೆಗೆ ಹೋಗಬೇಕಾಗಿ ಬಂದಾಗ, ಗೋಕುಲದ ಜನರ ಅನುರಾಗ, ರಾಧೆಯ ವ್ಯಾಕುಲತೆ ಮುಂತಾದವುಗಳನ್ನು ದಿವ್ಯವಾಗಿ ನಿರೂಪಿಸಿದ್ದಾರೆ.
  3. ಪದ್ಮಶ್ರೀ,
  4. ಪಂಪಪ್ರಶಸ್ತಿ,
  5. ನಾಡೋಜ ಪ್ರಶಸ್ತಿ,
  6. ಮೈಸೂರು ವಿಶ್ವವಿದ್ಯಾಲಯದ ಡಿ.ಲಿಟ್,
  7. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ,
  8. ರಾಜ್ಯೋತ್ಸವ ಪ್ರಶಸ್ತಿ,
  9. ಜೊತೆಗೆ ಚಿಕ್ಕಮಗಳೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಅವರಿಗೆ ದೊರೆಯದಿದ್ದ ಪ್ರಶಸ್ತಿ ಎಂದರೆ "ಭಾರತೀಯ ಜ್ಞಾನಪೀಠ ಪ್ರಶಸ್ತಿ" ಮಾತ್ರ! ಇದಕ್ಕಿಂತ ಮಿಗಿಲಾಗಿ ಒಳ್ಳೆಯ ಹಿರಿಯ ಸ್ನೇಹಿತರೂ, ಅಭಿಮಾನಿ ಕಿರಿಯ ಸ್ನೇಹಿತರನ್ನೂ ಹಾಗೂ ಸಹೃದಯಿಗಳ ಮೆಚ್ಚಿಗೆಯನ್ನು ಪಡೆದವರಾಗಿದ್ದಾರೆ. ಅವರು ಗತಿಸಿದಾಗ ಅವರಿಗೆ ತೊಂಬತ್ಮೂರರ ವಯಸ್ಸು.

ಕವಿ ಪುತಿನ ಅವರ ಶತಮಾನದ ಮನೆ

  • ಪುತಿನ ಮನೆ ಸ್ಮಾರಕವಾಗಿದ್ದು ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಅಂದರೆ, ಪುತಿನ ಬದುಕಿದ್ದ ಕಾಲದಲ್ಲೇ. ಕವಿಯ ಆಶಯವೂ ಅದೇ ಆಗಿತ್ತು; 'ನಾನು ಬದುಕಿರುವಾಗಲೇ ಬಾಳಿ, ಬದುಕಿದ ನನ್ನ ಮನೆ ಸ್ಮಾರಕವಾಗಬೇಕು. ನಾನು ಬರೆದ ಸಾಹಿತ್ಯ ನಿಂತ ನೀರಾ ಗದೆ, ನನ್ನ ಸಾವಿನಾಚೆಯೂ ಮುಂದಿನ ಪೀಳಿಗೆಯನ್ನು ತಲುಪುವಂತಾಗಬೇಕು'. 1996ರಲ್ಲಿ ಈ ಮನೆ ಸ್ಮಾರಕವಾಗಿ, ಸರ್ಕಾರದ ತೆಕ್ಕೆ ಸೇರಿತು.
  • 1998ರಲ್ಲಿ ಕವಿ ವಿಧಿವಶರಾದ ನಂತರ ಟ್ರಸ್ಟ್‌ನವರು ಕವಿಯ ಬಯಕೆಯಂತೆ ಮನೆಯ ಮೂಲ ರೂಪವನ್ನು ಬದಲಿಸದೇ 2000ನೇ ಇಸ್ವಿಯಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಗುತ್ತಿಗೆ ನೀಡಿ (10 ಲಕ್ಷ ರು.), ಹೊಸ ರೂಪ ಕೊಡಲು ಮುಂದಾದರು. ಶತಮಾನದ ಅಂಚಿನಲ್ಲಿದ್ದ ಮನೆಯ ಹಳೇ ಕಂಬಗಳು, ಮಹಡಿಯ ಮೆಟ್ಟಿಲುಗಳು, ಹೆಂಚುಗಳನ್ನು ಬಳಸಿಕೊಂಡೇ ಮೂಲ ಮನೆಯ ಅಂದ, ಚಂದಕ್ಕೆ ಯಾವುದೇ ಧಕ್ಕೆ ಬಾರದಂತೆ ಕವಿ ಮನೆಯನ್ನು ಸುಂದರ ಸ್ಮಾರಕವಾಗಿಸಲಾಯಿತು.
  • ಈ ಮನೆಯಲ್ಲಿ ಕವಿ ಪುತಿನ ಅವರ ಊರುಗೋಲು, ಬರೆಯಲು ಬಳಸುತ್ತಿದ್ದ ಮಣೆ, ಟೋಪಿ ಸೇರಿದಂತೆ ಮಹಡಿಯಲ್ಲಿ ಕುಳಿತು ಬರೆಯುತ್ತಿದ್ದ ಜಾಗವನ್ನೂ ಸಂರಕ್ಷಿಸಲಾಗಿದೆ. ಅಲ್ಲದೆ, ಕವಿಯ 'ಮನೆ ದೇಗುಲ', 'ರಥ ಸಪ್ತಮಿ', 'ಹರಿ ಚರಿತೆ', 'ಮಾಂದಳಿರು', 'ಜಾನ್ಹವಿಗೆ ಜೋಡಿ ದೀವಿಗೆ', 'ಗೋಕುಲ ನಿರ್ಗಮನ' ಸೇರಿದಂತೆ ಅನೇಕ ಕೃತಿಗಳ ಪ್ರಥಮ ಮುದ್ರಣವೂ ಇಲ್ಲಿ ನೋಡಲು ಸಿಗುತ್ತದೆ.

ಹೊರಗಿನ ಕೊಂಡಿಗಳು

  1. [http://kanaja.in/೫೬-ಪು-ತಿ-ನ-ಅವರ-ಕಾವ್ಯಮೀಮಾಂಸ/[ಶಾಶ್ವತವಾಗಿ ಮಡಿದ ಕೊಂಡಿ] ಜಿ ಎಸ್ ಶಿವರುದ್ರಪ್ಪ ಅವರ ಪು.ತಿ.ನ. ಕಾವ್ಯಮೀಮಾಂಸೆ
  2. ಜಿ ಎಸ್ ಶಿವರುದ್ರಪ್ಪ ಅವರ ಪು.ತಿ.ನ. ವಿಶಿಷ್ಟತೆ[ಶಾಶ್ವತವಾಗಿ ಮಡಿದ ಕೊಂಡಿ]

Tags:

ಪು. ತಿ. ನರಸಿಂಹಾಚಾರ್ ಜೀವನಪು. ತಿ. ನರಸಿಂಹಾಚಾರ್ ಕೃತಿಗಳುಪು. ತಿ. ನರಸಿಂಹಾಚಾರ್ ಪ್ರಶಸ್ತಿ ಮತ್ತು ಪುರಸ್ಕಾರಗಳುಪು. ತಿ. ನರಸಿಂಹಾಚಾರ್ ಕವಿ ಪುತಿನ ಅವರ ಶತಮಾನದ ಮನೆಪು. ತಿ. ನರಸಿಂಹಾಚಾರ್ ಹೊರಗಿನ ಕೊಂಡಿಗಳುಪು. ತಿ. ನರಸಿಂಹಾಚಾರ್ಕನ್ನಡಕುವೆಂಪುಕೆ.ಎಸ್. ನರಸಿಂಹಸ್ವಾಮಿಬಿ.ಎಂ.ಶ್ರೀಬೇಂದ್ರೆವರ್ಗ:ಸಾಹಿತ್ಯ

🔥 Trending searches on Wiki ಕನ್ನಡ:

ಮಾಹಿತಿ ತಂತ್ರಜ್ಞಾನಆನೆಮಾಸಹುಲಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಭಾರತದಲ್ಲಿನ ಜಾತಿ ಪದ್ದತಿಬೆಸಗರಹಳ್ಳಿ ರಾಮಣ್ಣಕಲಿಯುಗಲಕ್ಷ್ಮೀಶನೇಮಿಚಂದ್ರ (ಲೇಖಕಿ)ನಾರಾಯಣಿ ಸೇನಾಮುತ್ತುಗಳುಜ್ಯೋತಿಬಾ ಫುಲೆಲೆಕ್ಕ ಪರಿಶೋಧನೆಭಾರತ ಬಿಟ್ಟು ತೊಲಗಿ ಚಳುವಳಿಆಯುರ್ವೇದಹರ್ಡೇಕರ ಮಂಜಪ್ಪನಾಡ ಗೀತೆದ್ವಂದ್ವ ಸಮಾಸಭಾರತೀಯ ಭೂಸೇನೆಭಾರತದ ಪಂಚಾಯತ್ ರಾಜ್ ವ್ಯವಸ್ಥೆಶೂದ್ರ ತಪಸ್ವಿಪರಶುರಾಮಸಹಕಾರಿ ಸಂಘಗಳುಆದಿಪುರಾಣಜೋಳಭಾರತೀಯ ಭಾಷೆಗಳುಎಕರೆಸಾಲುಮರದ ತಿಮ್ಮಕ್ಕಮಣ್ಣುಬಿ. ಎಂ. ಶ್ರೀಕಂಠಯ್ಯಚಿಲ್ಲರೆ ವ್ಯಾಪಾರಹೊಯ್ಸಳಇಸ್ಲಾಂ ಧರ್ಮಫೇಸ್‌ಬುಕ್‌ವಡ್ಡಾರಾಧನೆಜಶ್ತ್ವ ಸಂಧಿಮಂಡಲ ಹಾವುದೇವನೂರು ಮಹಾದೇವಸಂಚಿ ಹೊನ್ನಮ್ಮಮೈಸೂರು ಅರಮನೆಕೇಸರಿಭಾರತದ ಮುಖ್ಯ ನ್ಯಾಯಾಧೀಶರುವಿಕಿಪೀಡಿಯಕೊ. ಚನ್ನಬಸಪ್ಪಶೃಂಗೇರಿಚನ್ನಬಸವೇಶ್ವರರಕ್ತಪಿಶಾಚಿರೇಣುಕಬಿಳಿಗಿರಿರಂಗನ ಬೆಟ್ಟಸೌರಮಂಡಲಧೃತರಾಷ್ಟ್ರಬೇಬಿ ಶಾಮಿಲಿಪ್ರಹ್ಲಾದ ಜೋಶಿಜೋಡು ನುಡಿಗಟ್ಟುಕರ್ನಾಟಕ ವಿಧಾನ ಸಭೆಬ್ಯಾಂಕ್ಪೆಟ್ರೋಮ್ಯಾಕ್ಸ್ (ಚಲನಚಿತ್ರ)ರಾಷ್ಟ್ರೀಯ ಸೇವಾ ಯೋಜನೆಭಾರತದ ಸಂವಿಧಾನಚಿಕ್ಕಮಗಳೂರುಹೊಯ್ಸಳ ವಿಷ್ಣುವರ್ಧನಮಾದರ ಚೆನ್ನಯ್ಯತಮ್ಮಟ ಕಲ್ಲು ಶಾಸನರೋಮನ್ ಸಾಮ್ರಾಜ್ಯಹನುಮ ಜಯಂತಿಅಮೃತಬಳ್ಳಿದಯಾನಂದ ಸರಸ್ವತಿಕರ್ನಾಟಕದ ಜಾನಪದ ಕಲೆಗಳುಶಬ್ದಕನಕದಾಸರುಬೀಚಿಸರ್ಕಾರೇತರ ಸಂಸ್ಥೆ🡆 More