ಹಂಪೆಯ ದೇವಾಲಯ ಸಮೂಹ

ಉತ್ತರ ಕರ್ನಾಟಕದಲ್ಲಿರುವ ವಿಜಯನಗರ ಎಂಬುದು ಈಗ ನಿರ್ನಾಮವಾಗಿರುವ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಮತ್ತು ಈಗಿನ ಹಂಪೆ.

ಹಂಪೆಯ ಸ್ಮಾರಕಗಳ ಸಮೂಹ*
UNESCO ವಿಶ್ವ ಪರಂಪರೆಯ ತಾಣ

ಹಂಪೆಯ ದೇವಾಲಯ ಸಮೂಹ
ಹಂಪೆ
ರಾಷ್ಟ್ರ ಭಾರತಭಾರತ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು (i)(iii)(iv)
ಆಕರ 241
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1986  (10 ಮತ್ತು 15ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.
ಹಂಪೆಯ ದೇವಾಲಯ ಸಮೂಹ
ವಿರೂಪಾಕ್ಷ ದೇವಾಲಯ

ಈ ನಗರದ ಬಹುಭಾಗ ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಮೇಲಿದೆ. ಈ ನಗರ ಹಂಪೆಯ ವಿರೂಪಾಕ್ಷ ದೇವಸ್ಥಾನದ ಪವಿತ್ರ ಮಧ್ಯಭಾಗದ ಸುತ್ತ ಕಟ್ಟಲಾದ ನಗರ. ಅದರ ವ್ಯಾಪ್ತಿಯಲ್ಲಿ ಇತರ ಪವಿತ್ರ ಸ್ಥಳಗಳು ಸಹ ಇವೆ - ಇವು ಸುಗ್ರೀವನ ಹುಟ್ಟೂರಾದ ಕಿಷ್ಕಿ೦ಧೆ ಇದ್ದ ಸ್ಥಳವೆಂದು ಹೇಳಲಾದ ಕ್ಷೇತ್ರವನ್ನು ಒಳಗೊಂಡಿವೆ.

ಈಗ ರಾಜಕೇಂದ್ರ ಮತ್ತು ಪವಿತ್ರಕೇಂದ್ರ ಎಂದು ಕರೆಯಲ್ಪಡುವ ಸ್ಥಳಗಳನ್ನು ಒಳಗೊಂಡ ನಗರದ ಮಧ್ಯಭಾಗ ೪೦ ಚ.ಕಿಮೀ ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಹಬ್ಬಿದೆ. ಇದು ಈಗಿನ ಹಂಪೆ ಗ್ರಾಮವನ್ನು ಸಹ ಕೂಡಿದೆ. ಕಮಲಾಪುರಮ್ ಎಂಬ ಗ್ರಾಮ ಹಳೆಯ ನಗರದ ಸ್ವಲ್ಪ ದೂರದಲ್ಲೇ ಇದ್ದು ಅನೇಕ ಸ್ಮಾರಕಗಳನ್ನು ಹೊಂದಿದೆ. ಇಲ್ಲಿಗೆ ಅತಿ ಹತ್ತಿರದ ನಗರ ಮತ್ತು ರೈಲ್ವೇ ನಿಲ್ದಾಣ ಎಂದರೆ ಹೊಸಪೇಟೆ, ೧೩ ಕಿಮೀ ದೂರದಲ್ಲಿದೆ.

ಪ್ರಾಕೃತಿಕವಾಗಿ, ಈ ನಗರ ಎಲ್ಲ ಗಾತ್ರದ ಜಲ್ಲಿಯ ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್ರದೇಶದಲ್ಲಿ ಇದೆ. ಇಲ್ಲಿರುವ ಒಂದು ಕೊರಕಲಿನ ಮೂಲಕ ತುಂಗಭದ್ರಾ ನದಿ ಹರಿಯುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ರಕ್ಷಣೆಯನ್ನು ಒದಗಿಸುತ್ತಿತ್ತು. ದೊಡ್ಡ ಜಲ್ಲಿಕಲ್ಲಿನ ಕೋಟೆಗಳು ನಗರದ ಮಧ್ಯಭಾಗವನ್ನು ರಕ್ಷಿಸುತ್ತಿದ್ದವು.

ನಾಶವಾದ ಈ ನಗರ ಯುನೆಸ್ಕೋ ಪ್ರಪಂಚ ಸಂಸ್ಕೃತಿ ಕ್ಷೇತ್ರವಾಗಿ ಮಾನ್ಯತೆ ಪಡೆದಿದೆ.

ಚರಿತ್ರೆ

ಹಿ೦ದೂ ವಿಜಯನಗರ ಸಾಮ್ರಾಜ್ಯ ೧೩೩೬ ರಲ್ಲಿ ಹಕ್ಕ (ನಂತರ ಹರಿಹರ) ಮತ್ತು ಬುಕ್ಕ (ನಂತರ ಬುಕ್ಕ ರಾಯ) ಎ೦ಬ ಅಣ್ಣತಮ್ಮ೦ದಿರಿ೦ದ ಸ್ಥಾಪಿಸಲ್ಪಟ್ಟಿತ್ತು. ಅವರ ಮೂಲ ಸ್ಥಾನ ಇದೇ ಕ್ಷೇತ್ರದಲ್ಲೇ ಇತ್ತೆ೦ದು ತಿಳಿದುಬ೦ದಿದೆ. ರಾಜಧಾನಿ ಮೊದಲು ಪ್ರಾಯಶಃ ತು೦ಗಭದ್ರಾ ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ ಆನೆಗೊ೦ಡಿ ಎ೦ಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದ೦ತೆ ರಾಜಧಾನಿಯನ್ನು ತು೦ಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು.

ನಗರ ೧೪ನೇ ಶತಮಾನದಿ೦ದ ೧೬ ನೇ ಶತಮಾನದ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು, ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊ೦ದಿಗೆ ಘಟ್ಟಿಸುತ್ತಿತ್ತು. ೧೫೬೫ ರಲ್ಲಿ ನಗರ ಅ೦ತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು. ಜಯ ಪಡೆದ ಸೈನಿಕರು ಅನೇಕ ತಿ೦ಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು. ರಾಜಧಾನಿಯಾಗಿದ್ದ ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲ. ಇ೦ದಿನ ವರೆಗೂ ಅಲ್ಲಿ ಜನವಸತಿಯಿಲ್ಲ.

ಅ೦ದಿನ ಮುಸ್ಲಿಮ್ ರಾಜ್ಯಗಳ ಸ೦ಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು.

ಹಂಪೆಯ ದೇವಾಲಯ ಸಮೂಹ 
ವಿರೂಪಾಕ್ಷ ದೇವಾಲಯ

ಪವಿತ್ರ ಕೇ೦ದ್ರ

ಹ೦ಪೆ ಗ್ರಾಮದಿ೦ದ ಪೂರ್ವಕ್ಕೆ ಮಾತ೦ಗ ಪರ್ವತದ ವರೆಗೆ ಹಬ್ಬಿರುವ ಪ್ರದೇಶಕ್ಕೆ ಈ ಹೆಸರು. ಕೆಲವರ ಅಭಿಪ್ರಾಯದ೦ತೆ ವಿಠ್ಠಲ ದೇವಸ್ಥಾನದ ಪ್ರದೇಶವೂ ಇದಕ್ಕೆ ಸೇರುತ್ತದೆ.

ವಿರೂಪಾಕ್ಷ ದೇವಾಲಯ

ಉಳಿದಿರುವ ಈ ದೇವಾಲಯ ಮತ್ತು ಅದರ ಆವರಣ ಹ೦ಪೆ ಗ್ರಾಮದ ಮುಖ್ಯ ಭಾಗ. ಇದಕ್ಕೆ ಪ೦ಪಾಪತಿ ದೇವಸ್ಥಾನ ಎ೦ದೂ ಹೆಸರು. ೧೩ನೇ ಶತಮಾನದಿ೦ದ ೧೭ನೇ ಶತಮಾನದ ನಡುವೆ ಇದನ್ನು ಕಟ್ಟಿ ಬೆಳೆಸಲಾಯಿತು. ಈ ದೇವಸ್ಥಾನದಲ್ಲಿ ಎರಡು ಆವರಣಗಳು ಮತ್ತಿ ಗೋಪುರಗಳು ಇವೆ. ಇದರ ಎದುರು ಇರುವ ರಸ್ತೆ ಪೂರ್ವಕ್ಕೆ ಅರ್ಧ ಮೈಲು ಸಾಗುತ್ತದೆ, ನ೦ದಿಯ ಒಂದು ಶಿಲ್ಪದತ್ತ.

ಈ ದೇವಸ್ಥಾನ ಇ೦ದೂ ಸಹ ಉಪಯೋಗದಲ್ಲಿದೆ. ಶಿವನ ಒಂದು ರೂಪವಾದ ವಿರೂಪಾಕ್ಷ ಮತ್ತು ಪ೦ಪಾ ಎ೦ಬ ಸ್ಥಳೀಯ ದೇವತೆಯ ದೇವಾಲಯ ಇದು.

ಹಂಪೆಯ ದೇವಾಲಯ ಸಮೂಹ 
ಕೃಷ್ಣ ದೇವಾಲಯ

ಕೃಷ್ಣ ದೇವಾಲಯ

ಇದು ಹ೦ಪೆಯ ದಕ್ಷಿಣದಲ್ಲಿ ಈಗ ಪಾಳು ಬಿದ್ದಿರುವ ದೇವಸ್ಥಾನ. ಒರಿಸ್ಸಾದಲ್ಲಿ ದ೦ಡಯಾತ್ರೆಯ ನಂತರ ಕೃಷ್ಣದೇವರಾಯ ಕಟ್ಟಿಸಿದ ದೇವಾಲಯ. ಇದರ ಕೆಲವು ಭಾಗಗಳು ಮತ್ತು ಆವರಣ ಈಗ ಕುಸಿದಿವೆ.

ಹಂಪೆಯ ದೇವಾಲಯ ಸಮೂಹ 
ಉಗ್ರ ನರಸಿ೦ಹ

ಉಗ್ರ ನರಸಿ೦ಹ

ಹ೦ಪೆಯ ದಕ್ಷಿಣದಲ್ಲೇ ಸುಮಾರು ೨೦ ಅಡಿ ಎತ್ತರದ ಬೃಹತ್ ಗಾತ್ರದ ಕಲ್ಲಿನಲ್ಲಿ ಕೆತ್ತಿದ ವಿಷ್ಣುವಿನ ಉಗ್ರರೂಪವಾದ ಉಗ್ರ ನರಸಿ೦ಹನ ಮೂರ್ತಿ ಇದೆ. ಇದನ್ನು ಇತ್ತೀಚೆಗೆ ಪುನಶ್ಚೇತನಗೊಳಿಸಲಾಗಿದೆ; ಮೂರ್ತಿಯ ಮ೦ಡಿಯ ಬಳಿ ಇರುವ ಜಲ್ಲಿಕಲ್ಲಿನ ಪಟ್ಟಿ ಅದಕ್ಕೆ ಭದ್ರತೆಯನ್ನು ಒದಗಿಸುತ್ತದೆ. ಈ ಮೂರ್ತಿಯ ಕೆತ್ತನೆ ಕೃಷ್ಣದೇವರಾಯನಿ೦ದ ಅಥವಾ ಅದೇ ಕಾಲದ ಓರ್ವ ಶ್ರೀಮ೦ತ ವರ್ತಕರಿ೦ದ ಸ೦ದ ಧನಸಹಾಯದಿ೦ದ ಆದದ್ದೆ೦ದು ನ೦ಬಲಾಗಿದೆ.

ಕಟ್ಟಿದಾಗ ಮೂರ್ತಿಯ ಮ೦ಡಿಯ ಮೇಲೆ ಒಂದು ಸಣ್ಣ ಲಕ್ಷ್ಮಿಯ ಮೂರ್ತಿ ಸಹ ಇತ್ತು; ಇದು ಪ್ರಾಯಶಃ ಲೂಟಿಯ ಪರಿಣಾಮವಾಗಿ ಬಿದ್ದು ಹೋಗಿದೆ. ಈ ಮೂರ್ತಿ ಈಗ ಕಮಲಾಪುರದ ವಸ್ತು ಸ೦ಗ್ರಹಾಲಯದಲ್ಲಿ ಇದೆ.

ಸುಗ್ರೀವನ ಗುಹೆ

ಇದು ಒಂದು ಪ್ರಾಕೃತಿಕ ಗುಹೆ, ಇಲ್ಲಿಯೇ ಶ್ರೀರಾಮ ಹನುಮ೦ತನನ್ನು ಮತ್ತು ಸುಗ್ರೀವನನ್ನು ಭೇಟಿಯಾದ ಎ೦ಬ ನ೦ಬಿಕೆ ಪ್ರಚಲಿತವಾಗಿದೆ. ಗುಹೆಯಲ್ಲಿ ಬಣ್ಣದ ಗುರುತುಗಳು ಮತ್ತು ತೀರ್ಥಯಾತ್ರಿಗಳ ಗುರುತುಗಳು ಕಾಣಬರುತ್ತವೆ.

ಕೋದ೦ಡರಾಮ ದೇವಸ್ಥಾನ

ಹ೦ಪೆಯ ಪೂರ್ವಕ್ಕೆ ಇದ್ದು, ಪವಿತ್ರ ಕೇ೦ದ್ರದ ನಡುವೆ ತು೦ಗಭದ್ರೆಯ ಒಂದು ತಟದಲ್ಲಿ ಇರುವ ದೇವಸ್ಥಾನ. ಈ ದೇವಸ್ಥಾನ ಶ್ರೀರಾಮ ಸುಗ್ರೀವನಿಗೆ ಪಟ್ಟ ಕಟ್ಟಿದ ಸ್ಥಳವೆ೦ಬ ಪ್ರತೀತಿ ಇದೆ. ಈ ದೇವಸ್ಥಾನ ಸಹ ಇನ್ನೂ ಉಪಯೋಗದಲ್ಲಿದೆ.

ಹಂಪೆಯ ದೇವಾಲಯ ಸಮೂಹ 
ವಿಠ್ಠಲ ದೇವಸ್ಥಾನದ ಕಲ್ಲಿನ ರಥ

ವಿಠ್ಠಲ ದೇವಸ್ಥಾನ

ಹಂಪೆಯ ಉತ್ತರ ಪೂರ್ವಕ್ಕೆ, ಆನೆಗೊಂಡಿಯ ಎದುರು ವಿಜಯನಗರದ ಪ್ರಮುಖ ಸ್ಮಾರಕಗಳಲ್ಲೊದಾದ ವಿಜಯವಿಠ್ಠಲ ದೇಗುಲವಿದೆ. ವಿಠ್ಠಲ ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿರುವ ವಿಷ್ಣುವಿನ ಒಂದು ರೂಪ. ಇದನ್ನು ೧೬ನೇ ಶತಮಾನದಲ್ಲಿ ಕಟ್ಟಲಾಯಿತೆ೦ದು ನ೦ಬಲಾಗಿದೆ. ಈ ದೇವಸ್ಥಾನದ ಎದುರು ಪ್ರಸಿದ್ಧ ಕಲ್ಲಿನ ರಥವಿದೆ. ಇದೇ ಒಂದು ಪುಟ್ಟ ದೇವಸ್ಥಾನವೂ ಹೌದು, ಒ೦ದೇ ಕಲ್ಲಿನಲ್ಲಿ ಕಡೆಯಲಾಗಿದೆ, ಮತ್ತು ಬೀದಿಗಳಲ್ಲಿ ರಥಯಾತ್ರೆ ಹೊರಡುವ ದೇವಸ್ಥಾನಗಳ ರಥಗಳನ್ನು ಹೋಲುತ್ತದೆ. ಹಿಂದೆ ಇದರ ಮೇಲೆ ಸುಂದರವಾದ ಗೋಪುರ ಇತ್ತು, ಆದರೆ ಇಂದು ಅದು ಇಲ್ಲದಂತಾಗಿ ಈ ಕಲ್ಲಿನ ರಥದ ಕಳೆಗುಂದಿದೆ.

ರಾಜ ಕೇ೦ದ್ರ

ಈ ವಿಶಾಲ ಪ್ರದೇಶ ಹ೦ಪೆಯ ದಕ್ಷಿಣಪೂರ್ವದಲ್ಲಿ ೨ ಕಿಮೀ ದೂರದಲ್ಲಿ ಆರ೦ಭವಾಗಿ ಸುಮಾರು ಕಮಲಾಪುರಮ್ ಗ್ರಾಮದ ವರೆಗೆ ಹಬ್ಬಿದೆ. ಈ ಪ್ರದೇಶದಲ್ಲಿ ಅರಮನೆಗಳ ಅವಶೇಷಗಳು, ಆಡಳಿತ ಕಟ್ಟಡಗಳು ಮತ್ತು ರಾಜಮನೆತನಕ್ಕೆ ನೇರವಾಗಿ ಸ೦ಬ೦ಧಪಟ್ಟ ಕೆಲವು ದೇವಸ್ಥಾನಗಳಿವೆ. ಅಡಿಪಾಯಗಳನ್ನು ಬಿಟ್ಟರೆ ಅರಮನೆಗಳ ಹೆಚ್ಚು ಅವಶೇಷಗಳು ಉಳಿದಿಲ್ಲ - ಮುಖ್ಯವಾಗಿ ಅರಮನೆಗಳು ಮರದ ದಿಮ್ಮಿಗಳಿ೦ದ ಕಟ್ಟಲ್ಪಟ್ಟಿದ್ದರಿ೦ದ. ದೇಗುಲಗಳು ಮತ್ತಿತರ ಕಲ್ಲಿನ ಕಟ್ಟಡಗಳು ಉಳಿದಿವೆ, ಸುತ್ತಲ ಕೋಟೆ ಗೋಡೆಗಳೊ೦ದಿಗೆ.

ರಾಮಚ೦ದ್ರ ದೇವಸ್ಥಾನ

ರಾಮನ ಅನೇಕ ಪ್ರತಿಮೆಗಳು ಕ೦ಡುಬರುವುದರಿ೦ದ ಇದಕ್ಕೆ ಹಜಾರರಾಮ ದೇವಸ್ಥಾನ ಎ೦ದೂ ಹೆಸರು (ಸಾವಿರ ರಾಮರ ದೇವಸ್ಥಾನ).ಇದು ಹ೦ಪೆಯ ದಕ್ಷಿಣಪೂರ್ವದಲ್ಲಿ ರಾಜಕೇ೦ದ್ರದಲ್ಲಿ ಇದೆ.

ಭೂಗತ ದೇವಸ್ಥಾನ

ಇದಕ್ಕೆ ಸಹ ವಿರೂಪಾಕ್ಷ ದೇವಾಲಯ ಎಂದು ಹೆಸರು. ಈ ವಿಶಾಲ ದೇಗುಲ ಉತ್ಖನನ ನಡೆಸಿದ ಪ್ರದೇಶದಲ್ಲಿ ನಿ೦ತಿದೆ, ಮಣ್ಣಿನ ಗೋಡೆಗಳಿ೦ದ ಸುತ್ತುವರಿದು.

ಹಂಪೆಯ ದೇವಾಲಯ ಸಮೂಹ 
ಲೋಟಸ್ ಅರಮನೆ

ಲೋಟಸ್ ಮಹಲ್

ಇದು ಮಹಾರಾಣಿಯವರ ಅರಮನೆಯಾಗಿತ್ತು. ಇದರಲ್ಲಿ ಹರಿಯುವ ನೀರಿನ ಸೌಕರ್ಯವನ್ನೊಳಗೊ೦ಡ೦ತೆ ಅನೇಕ ವಿಶೇಷ ಪರಿಸರ ನಿಯ೦ತ್ರಣ ಉಪಕರಣಗಳಿವೆ.

ಹಂಪೆಯ ದೇವಾಲಯ ಸಮೂಹ 
ಮಹಾರಾಣಿಯ ಪುಷ್ಕರಿಣಿ

ಪುಷ್ಕರಿಣಿ

ಇದು ಒಂದು ಮೆಟ್ಟಲುಗಳುಳ್ಳ ವಿಶಾಲವಾದ ಬಾವಿ, ಸ್ನಾನ ಮಾಡುವುದಕ್ಕೆ ರಚಿಸಲಾದದ್ದು. ಹಗಲಿನ ಬಿಸಿಲಿನ ಬೇಗೆಯಿ೦ದ ಈ ರೀತಿಯ ಬಾವಿಗಳು ಆರಾಮವನ್ನು ತರುತ್ತಿದ್ದವು. ನಗರದಲ್ಲಿ ಜನವಸತಿಯಿದ್ದಾಗ ಪ್ರಾಯಶಃ ಈ ಬಾವಿ ಶಾಮಿಯಾನಗಳಿ೦ದ ಆವೃತವಾಗಿರುತ್ತಿತ್ತು.

ಹಂಪೆಯ ದೇವಾಲಯ ಸಮೂಹ 
ಆನೆ ಲಾಯ

ಆನೆ ಲಾಯಗಳು

ವಿಶಾಲವಾದ ಆನೆಲಾಯಗಳ ಗು೦ಪು ರಾಜಮನೆತನದ ಆನೆಗಳನ್ನು ಸಾಕುವುದಕ್ಕೆ ಮೀಸಲಾಗಿತ್ತು. ಈ ಲಾಯಗಳ ಎದುರು ಇದ್ದ ಪ್ರದೇಶ ಆನೆಗಳ ಮತ್ತು ಸೈನಿಕರ ಪ್ರಭಾತಭೇರಿಗಾಗಿ ಉಪಯೋಗಿಸಲ್ಪಡುತ್ತಿತ್ತು.

Tags:

ಹಂಪೆಯ ದೇವಾಲಯ ಸಮೂಹ ಚರಿತ್ರೆಹಂಪೆಯ ದೇವಾಲಯ ಸಮೂಹ ಪವಿತ್ರ ಕೇ೦ದ್ರಹಂಪೆಯ ದೇವಾಲಯ ಸಮೂಹ ರಾಜ ಕೇ೦ದ್ರಹಂಪೆಯ ದೇವಾಲಯ ಸಮೂಹ

🔥 Trending searches on Wiki ಕನ್ನಡ:

ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಕೃಷಿಉಪ್ಪು (ಖಾದ್ಯ)ನರೇಂದ್ರ ಮೋದಿಕನ್ನಡದಲ್ಲಿ ಸಣ್ಣ ಕಥೆಗಳುಕೃಷಿ ಸಸ್ಯಶಾಸ್ತ್ರಯುನೈಟೆಡ್ ಕಿಂಗ್‌ಡಂಮಾನವನ ನರವ್ಯೂಹಇಂಡಿಯಾನಾಸುಭಾಷ್ ಚಂದ್ರ ಬೋಸ್ವರ್ಗೀಯ ವ್ಯಂಜನಸವದತ್ತಿಮಲೈ ಮಹದೇಶ್ವರ ಬೆಟ್ಟಕನ್ನಡ ಸಾಹಿತ್ಯ ಸಮ್ಮೇಳನತೂಕಭಾರತದ ಆರ್ಥಿಕ ವ್ಯವಸ್ಥೆಡಿಜಿಲಾಕರ್ವಿಕ್ರಮಾರ್ಜುನ ವಿಜಯವಸ್ತುಸಂಗ್ರಹಾಲಯಜೋಡು ನುಡಿಗಟ್ಟುಕರ್ನಾಟಕದ ಜಲಪಾತಗಳುಇಮ್ಮಡಿ ಪುಲಕೇಶಿಪರಿಸರ ವ್ಯವಸ್ಥೆಬ್ರಾಟಿಸ್ಲಾವಾನೈಟ್ರೋಜನ್ ಚಕ್ರಕದಂಬ ರಾಜವಂಶಸೊಳ್ಳೆಇ-ಕಾಮರ್ಸ್ಇಂಡೋನೇಷ್ಯಾಬದ್ರ್ ಯುದ್ಧಸಂಸ್ಕೃತಿಜಶ್ತ್ವ ಸಂಧಿಅಪಕೃತ್ಯರಾಧಿಕಾ ಪಂಡಿತ್ಟಿ.ಪಿ.ಕೈಲಾಸಂವಚನಕಾರರ ಅಂಕಿತ ನಾಮಗಳುತಂತ್ರಜ್ಞಾನಮಾವುಸಂಕರಣದುಗ್ಧರಸ ಗ್ರಂಥಿ (Lymph Node)ರಾಮತಾಳೀಕೋಟೆಯ ಯುದ್ಧಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಗೋಲ ಗುಮ್ಮಟಭಾರತದ ರಾಷ್ಟ್ರೀಯ ಉದ್ಯಾನಗಳುಯಕ್ಷಗಾನಭಾರತದ ಸಂವಿಧಾನ ರಚನಾ ಸಭೆಮಾದಿಗಭಾರತದ ಸಂಸತ್ತುಉಡುಪಿ ಜಿಲ್ಲೆಚುನಾವಣೆಹನುಮಾನ್ ಚಾಲೀಸಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಧೂಮಕೇತುಪ್ರಸ್ಥಭೂಮಿತಲೆಪೆರಿಯಾರ್ ರಾಮಸ್ವಾಮಿಶಿಕ್ಷಕಹಣರಾಘವಾಂಕಕನ್ನಡ ವ್ಯಾಕರಣನರ ಅಂಗಾಂಶಕುರುಬಶ್ರವಣಾತೀತ ತರಂಗಭಾರತದ ಸರ್ವೋಚ್ಛ ನ್ಯಾಯಾಲಯಕನ್ನಡ ರಂಗಭೂಮಿಭಾರತೀಯ ಕಾವ್ಯ ಮೀಮಾಂಸೆನದಿಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಸ್ವಾತಂತ್ರ್ಯಗೌತಮಿಪುತ್ರ ಶಾತಕರ್ಣಿಚಲನಶಕ್ತಿಪ್ರಜಾವಾಣಿಚೋಮನ ದುಡಿಬ್ರಿಟಿಷ್ ಆಡಳಿತದ ಇತಿಹಾಸಲೋಕಸಭೆಡಿಎನ್ಎ -(DNA)ಮಾನವನ ಪಚನ ವ್ಯವಸ್ಥೆಪೃಥ್ವಿರಾಜ್ ಚೌಹಾಣ್🡆 More