ದಿ ಹಿಂದೂ: ಭಾರತದ ಇಂಗ್ಲೀಷ್ ಭಾಷಾ ದಿನಪತ್ರಿಕೆ

ದಿ ಹಿಂದೂ ಒಂದು, ಇಂಗ್ಲೀಷ್-ಭಾಷೆಯ ಭಾರತೀಯ ದೈನಿಕ ವೃತ್ತಪತ್ರಿಕೆಯಾಗಿದ್ದು, ಇದನ್ನು 1878 ರಿಂದ ಪ್ರಕಟಿಸಲಾಗುತ್ತಿದೆ.

ದಿ ಹಿಂದೂ 1.46 ಮಿಲಿಯನ್ ಪ್ರಸಾರ ಸಂಖ್ಯೆಯೊಂದಿಗೆ, ಭಾರತದಲ್ಲಿ ಟೈಮ್ಸ್ ಆಫ್ ಇಂಡಿಯಾ ದ ನಂತರ ಅತ್ಯಂತ ಹೆಚ್ಚು ಮಾರಾಟವಾಗುವ ಎರಡನೆಯ ದಿನಪತ್ರಿಕೆಯಾಗಿದೆ. ಅಲ್ಲದೇ ಪ್ರಸಾರದಲ್ಲಿ ದಿ ಎಕನಾಮಿಕ್ ಟೈಮ್ಸ್ ಗಿಂತ ಸ್ವಲ್ಪ ಮುಂದಿದೆ. ಇತ್ತೀಚಿನ 2010 ರ ಇಂಡಿಯನ್ ರೀಡರ್ಷಿಪ್ ಸರ್ವೇ(ಭಾರತೀಯ ಓದುಗರ ಸಮೀಕ್ಷೆ)(IRS)ಯ ಪ್ರಕಾರ, ದಿ ಹಿಂದೂ ಭಾರತದಲ್ಲಿ(21.59 ಲಕ್ಷ ಓದುಗರೊಂದಿಗೆ ಟೈಮ್ಸ್ ಆಫ್ ಇಂಡಿಯಾ ಮತ್ತು ಹಿಂದುಸ್ಥಾನ್ ಟೈಮ್ಸ್ ನ ನಂತರದ ಸ್ಥಾನದಲ್ಲಿದೆ) ಅತ್ಯಂತ ವ್ಯಾಪಕವಾಗಿ ಓದುವ ಮೂರನೆಯ ಇಂಗ್ಲೀಷ್ ದಿನಪತ್ರಿಕೆಯಾಗಿದೆ. ಇದು ದಕ್ಷಿಣ ಭಾರತದ ಮೂಲದಲ್ಲಿ ಅದರಲ್ಲೂ ವಿಶೇಷವಾಗಿ ತಮಿಳು ನಾಡಿನಲ್ಲಿ ಅತ್ಯಂತ ಹೆಚ್ಚು ಪ್ರಸಾರ ಸಂಖ್ಯೆಹೊಂದಿದೆ. ಆಗ 1878 ರಲ್ಲಿ ಇದನ್ನು ಆರಂಭಿಸಿದಾಗ ಚೆನ್ನೈ(ಹಿಂದೆ ಮದ್ರಾಸ್ ಎಂದು ಕರೆಯಲಾಗುತ್ತಿತ್ತು)ನಲ್ಲಿರುವ ಕೇಂದ್ರಕಾರ್ಯಾಲಯದಲ್ಲಿ, ದಿ ಹಿಂದೂ ವನ್ನು ಸಾಪ್ತಾಹಿಕವಾಗಿ ಪ್ರಕಟಿಸಲಾಗುತ್ತಿತ್ತು. ಅಲ್ಲದೇ 1889 ರಲ್ಲಿ ಪ್ರತಿದಿನ ಇದನ್ನು ಪ್ರಕಟಿಸಲು ಪ್ರಾರಂಭಿಸಲಾಯಿತು.

The Hindu
The Hindu
The March 16, 2005 front page of The Hindu
ವಿಧDaily newspaper
ಸ್ವರೂಪBroadsheet
ಯಜಮಾನKasturi & Sons Ltd.
ಪ್ರಕಾಶಕThe Hindu Group
ಮುಖ್ಯ ಸಂಪಾದಕN. Ram
ಸ್ಥಾಪನೆ20 September 1878
Political alignmentLeft-wing
ಭಾಷೆEnglish
ಪ್ರಧಾನ ಕಚೇರಿ859-860 Anna Salai Rd, Chennai, ತಮಿಳುನಾಡು 600002
Circulation1,466,304 daily
ISSN0971-751X
OCLC number13119119
ಅಧಿಕೃತ ಜಾಲತಾಣTheHindu.com

ದಿ ಹಿಂದೂ , 1995ರಲ್ಲಿ ಆನ್ ಲೈನ್ ಆವೃತ್ತಿಯ ಅವಕಾಶವನ್ನು ನೀಡಿದ ಭಾರತದ ಮೊದಲ ವೃತ್ತಪತ್ರಿಕೆಯಾಯಿತು.

ಒಟ್ಟು 14 ಸ್ಥಳಗಳಿಂದ ದಿ ಹಿಂದೂ ಪತ್ರಿಕೆಯನ್ನು ಪ್ರಕಟಿಸಲಾಗುತ್ತದೆ—ಬೆಂಗಳೂರು,ಚೆನ್ನೈ, ಕೊಯಂಬತ್ತೂರ್, ದೆಹಲಿ, ಹುಬ್ಬಳ್ಳಿ, ಹೈದ್ರಾಬಾದ್, ಕೊಚ್ಚಿ, ಕೋಲ್ಕತ್ತಾ, ಮಧುರೈ, ಮಂಗಳೂರು, ತಿರುವನಂತಪುರಮ್, ತಿರುಚಿರಾಪಳ್ಳಿ, ವಿಜಯವಾಡ ಮತ್ತು ವಿಶಾಖಪಟ್ಟಣಂ.

ಇತಿಹಾಸ

ದಿ ಹಿಂದೂ ಪತ್ರಿಕೆಯ ಮೊದಲ ಸಂಚಿಕೆಯನ್ನು 1878 ರ ಸೆಪ್ಟೆಂಬರ್ 20 ರಂದು ಪ್ರಕಟಿಸಲಾಯಿತು.ಜಿ. ಸುಬ್ರಮಣ್ಯ ಅಯ್ಯರ್ ನೇತೃತ್ವದ ಆರು ಜನ ಯುವಕರ ತಂಡ ಇದನ್ನು ಪ್ರಕಟಿಸಿತ್ತು. ಇವರು ತಲಸ್ಪರ್ಶಿಯಾದ ಸಾಮಾಜಿಕ ತತ್ವಗಳ ಸುಧಾರಣಾವಾದಿಯಾಗಿದ್ದರು.ಅವರು ತಂಜಾವೂರಿನ ಸಮೀಪದ ತಿರುವಯ್ಯಾರ್ ನಲ್ಲಿ ಶಾಲಾ ಶಿಕ್ಷರಾಗಿದ್ದರು. ಅಯ್ಯರ್ ಅವರ 23 ನೇ ವಯಸ್ಸಿನಲ್ಲಿ,ಪಚೈಯಪ್ಪ ಕಾಲೇಜಿನಲ್ಲಿ ಖಾಸಗಿ ಶಿಕ್ಷಕರಾಗಿದ್ದರು. ಅದಲ್ಲದೇ ಅವರ ಸ್ನೇಹಿತರಾಗಿದ್ದ 21 ವರ್ಷದ ಎಮ್. ವೀರರಾಘವಚಾರಿಯರ್ ರೊಂದಿಗೆ ಹಾಗು ನಾಲ್ಕು ಜನ ಕಾನೂನು ವಿದ್ಯಾರ್ಥಿಗಳಾದ ಟಿ.ಟಿ. ರಂಗಚಾರಿಯರ್, ಪಿ.ವಿ. ರಂಗಚಾರಿಯರ್, ಡಿ. ಕೇಶವ ರಾವ್ ಪಂತುಲು ಮತ್ತು ಎನ್. ಸುಬ್ಬರಾವ್ ಪಂತುಲು ರೊಂದಿಗೆ ಟ್ರಿಪ್ಲಿಕೇನ್ ಸಾಹಿತ್ಯ ಸಮಾಜದ ಸದಸ್ಯರಾಗಿದ್ದರು. ಬ್ರಿಟಿಷ್ ರ ನಿಯಂತ್ರಣದಲ್ಲಿದ್ದ ಇಂಗ್ಲೀಷ್ ಭಾಷೆಯ ಸ್ಥಳೀಯ ವೃತ್ತ ಪತ್ರಿಕೆಗಳು, 1878 ರಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯದ ಪೀಠಕ್ಕೆ ಮೊದಲ ಭಾರತೀಯ ಟಿ.ಮುತ್ತುಸ್ವಾಮಿ ಅಯ್ಯರ್ ಅವರ ನೇಮಕವನ್ನು ಖಂಡಿಸಿ ಪ್ರತಿಭಟನೆ ನಡೆಸಿದವು. "ಟ್ರಿಪ್ಲಿಕೇನ್ ನ ಆರು ಜನ", ಇಂಗ್ಲೀಷ ಭಾಷೆಯ ವೃತ್ತ ಪತ್ರಿಕೆಗಳ ಪ್ರಾಬಲ್ಯವನ್ನು ಮಟ್ಟಹಾಕುವ,ಸಲುವಾಗಿ ದಿ ಹಿಂದೂ ವನ್ನು ಸಾಲದ ನೆರವಿನಿಂದ, ಒಂದು ಬ್ರಿಟಿಷ್ ರೂಪಾಯಿ ಮತ್ತು 12 ಆಣೆಯಲ್ಲಿ ಆರಂಭಿಸಿದರು. ಆಗ ಅಯ್ಯರ್ ಅವರು ಸಂಪಾದಕರಾದರು ಹಾಗು ವೀರರಾಘವಚಾರಿಯರ್ ವ್ಯವಸ್ಥಾಪಕ ನಿರ್ದೇಶಕರಾದರು. ಅದರ ಮೊದಲ ಸಂಪಾದಕೀಯವು "[ದಿ] ಮುದ್ರಣವು ಕೇವಲ ಸಾರ್ವಜನಿಕರ ಅಭಿಪ್ರಾಯವಲ್ಲದೇ, ಇದನ್ನು ಮಾರ್ಪಡಿಸುತ್ತದಲ್ಲದೇ ಅದಕ್ಕೆ ತಕ್ಕ ಆಕಾರ ನೀಡುತ್ತದೆ" ಎಂದು ಘೋಷಿಸಿತು".

ಪಂತಲು ಅವರು ದಿ ಹಿಂದೂ ಪತ್ರಿಕೆಗೆ ಬರೆಯುವುದನ್ನು ಮುಂದುವರೆಸಿದರೆ, ಇನ್ನುಳಿದ ಮೂವರು ವಿದ್ಯಾರ್ಥಿಗಳು ಆ ಕೂಡಲೇ ಪತ್ರಿಕೆಯನ್ನು ತೊರೆದು ಕಾನೂನಿನಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದರು. ವೃತ್ತಪತ್ರಿಕೆಯ ಸಂಸ್ಥಾಪಕರು ಬ್ರಿಟಿಷ್ ಆಳ್ವಿಕೆಯ ಬಗ್ಗೆ ತಟಸ್ಥ ನೀತಿ ತೋರಿದ್ದರು.ಆಗಿನ 1894 ರ ಸಂಪಾದಕೀಯದಲ್ಲಿರುವಂತೆ ಸಾಂದರ್ಭಿಕವಾಗಿ ಬ್ರಿಟಿಷ್ ಆಳ್ವಿಕೆಯು ಭಾರತದ ಜನರಿಗೆ ಲಾಭದಾಯಕವಾಗಿದೆ ಎಂದು ಉಲ್ಲೇಖಿತವಾಗಿತ್ತು. "ಅದೇನೇ ಆದರೂ, ನಿರಂಕುಶಾಧಿಕಾರದ ಖಂಡನೆ, ಮತ್ತು ಅಧಿಕಾರದ ದುರುಪಯೋಗವನ್ನು ಟೀಕಿಸುವ ಮೂಲಕ, ಆಂಗ್ಲೋ- ಭಾರತೀಯ ವೃತ್ತ ಪತ್ರಿಕೆಗೆ ಅದೊಂದು ಸವಾಲೆಸೆಯಲಾಗಿತ್ತೆಂದು ಮನಗಾಣಿಸಲಾಯಿತು; ಅಧಿಕಾರಶಾಹಿಗಳ ಪೀಡಕ ಪ್ರವೃತ್ತಿ ಕೂಡಾ ಖಂಡನಾ ಯೋಗ್ಯ" ಎಂದು ಇತಿಹಾಸಗಾರ ಎಸ್. ಮುತ್ತಯ್ಯ ಬರೆದಿದ್ದಾರೆ.

ಆರಂಭದಲ್ಲಿ ಬ್ಲ್ಯಾಕ್ ಟೌನ್ ನ ಮಿಂಟ್ ಸ್ಟ್ರೀಟ್(ಬೀದಿ) ನಲ್ಲಿರುವ ಶ್ರೀನಿಧಿ ಮುದ್ರಣಾಲಯದಲ್ಲಿ ವಾರಕ್ಕೆ 80 ಪ್ರತಿಗಳನ್ನು ಮುದ್ರಿಸುವುದರೊಂದಿಗೆ, ದಿ ಹಿಂದೂ ವನ್ನು ಪ್ರತಿ ಬುಧವಾರ ಸಂಜೆ ಎಂಟು ಪುಟಗಳ ಪತ್ರಿಕೆಯ ರೂಪದಲ್ಲಿ ಪ್ರಕಟಿಸಲಾಗುತ್ತಿತ್ತು.ಆಗ ಅದು ಇಂದಿನ ಪುಟದ ಗಾತ್ರದ ನಾಲ್ಕನೆಯ ಒಂದು ಭಾಗದಷ್ಟಿರುತ್ತಿತ್ತು. ಅಲ್ಲದೇ ಇದನ್ನು ನಾಲ್ಕು ಆಣೆಗೆ ಮಾರಲಾಗುತ್ತಿತ್ತು(1/4 ರೂಪಾಯಿ). ಒಂದು ತಿಂಗಳ ಬಳಿಕ, ಶ್ರೀನಿಧಿ ಮುದ್ರಣಾಲಯದಿಂದ ಬ್ಲ್ಯಾಕ್ ಟೌನ್ ನಲ್ಲೇ ಇದ್ದ ಸ್ಕಾಟಿಷ್ ಮುದ್ರಣಾಲಯಕ್ಕೆ ವೃತ್ತಪತ್ರಿಕೆಯ ಮುದ್ರಣ ಕಾರ್ಯವನ್ನು ಬದಲಾಯಿಸಲಾಯಿತು. ಈ ವೃತ್ತ ಪತ್ರಿಕೆಯ ಅತ್ಯಂತ ಆರಂಭಿಕವೆನ್ನಲಾದ ಮೊದಲ ಪ್ರತಿ 1881 ರ ಜೂನ್ 21ರದ್ದು ಲಭ್ಯವಿದೆ. ಇದನ್ನು ವಾರಕ್ಕೆ ಮೂರು ಬಾರಿ ಪ್ರಕಟಿಸುವ ಉದ್ದೇಶದಿಂದಾಗಿ ಮೈಲಾಪೊರೆಯಲ್ಲಿರುವ ರಗೂನಾದ ರಾವ್ ಅವರ "ದಿ ಹಿಂದೂ ಮುದ್ರಣಾಲಯ"ಕ್ಕೆ 1881 ರಲ್ಲಿ ಸ್ಥಳಾಂತರಿಸಲಾಯಿತು. ಎಂಪ್ರೆಸ್ ಆಫ್ ಇಂಡಿಯಾ ಪ್ರೆಸ್ ಗೆ ಇದನ್ನು ತರುವವರೆಗೂ ಈ ಮೊದಲ ಸ್ಥಳಾಂತರ ಲಾಭಕಾರಿಯಾಗಿರಲಿಲ್ಲ. ನಂತರ ಇಲ್ಲಿ 1883ರ ಅಕ್ಟೋಬರ್ 1 ರಿಂದ ಮುದ್ರಣವನ್ನು ಆರಂಭಿಸುವ ಮೂಲಕ ಪತ್ರಿಕೆಯನ್ನು ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಜೆಯ ಪತ್ರಿಕೆಯಾಗಿ ಪ್ರಕಟಿಸಲು ಪ್ರಾರಂಭಿಸಲಾಯಿತು; ಇದು ಮೊದಲಿದ್ದ ಗಾತ್ರವನ್ನೇ ಮುಂದುವರೆಸಿತು.

ಇದಕ್ಕೆ ಸಂಬಂಧಿಸಿದ ಕಛೇರಿಗಳನ್ನು 1883 ರ ಡಿಸೆಂಬರ್ 3 ರಂದು 100 ಮೌಂಟ್ ರಸ್ತೆಯಲ್ಲಿರುವ ಬಾಡಿಗೆ ಕಟ್ಟಡಕ್ಕೆ ವರ್ಗಾಯಿಸಲಾಯಿತು. ವೃತ್ತಪತ್ರಿಕೆಯು ಅದರದೇ ಸ್ವಂತ ಮುದ್ರಣಾಲಯದಲ್ಲಿ ಪ್ರಕಾಶನ ಆರಂಭಿಸಿತು. ಮುದ್ರಣಾಲಯಕ್ಕೆ "ದಿ ನ್ಯಾಷನಲ್ ಪ್ರೆಸ್" ಎಂಬ ಹೆಸರಿಡಲಾಯಿತು. ಸಾರ್ವಜನಿಕರ ಚಂದಾ ತಕ್ಷಣವೇ ಸಿಗದಿದ್ದ ಕಾರಣ ಮುದ್ರಣಾಲಯವನ್ನು ಸಾಲ ಮೂಲದ ಬಂಡವಾಳದಲ್ಲಿ ಆರಂಭಿಸಲಾಯಿತು. ವಿಜಿಯನಗರಮ್ ನ ಮಹಾರಾಜ ಪುಸಪತಿ ಆನಂದ ಗಜಪತಿ ರಾಜು ದಿ ನ್ಯಾಷನಲ್ ಪ್ರೆಸ್ ಗೆ, ಕಟ್ಟಡ ಮತ್ತು ಅದರ ಅಗತ್ಯ ವಿಸ್ತರಣೆ ಎರಡಕ್ಕೂ ಸಾಲ ನೀಡಿದ ನಂತರ 1892 ರಲ್ಲಿ ಕಟ್ಟಡವು ದಿ ಹಿಂದೂಗೆ ಸ್ವಂತವಾಯಿತು.

ಇದರ ಸಮರ್ಥನೀಯ ಸಂಪಾದಕೀಯ ಟಿಪ್ಪಣಿಗಳು ದಿ ಹಿಂದೂ ಗೆ ಮೌಂಟ್ ರಸ್ತೆಯ ಮಹಾವಿಷ್ಣು ಎಂದು ಕರೆಸಿಕೊಳ್ಳುವಂತಾಯಿತು. ದಿ ಹಿಂದೂ ಪತ್ರಿಕೆಯ ನೆಲೆಯಾಗಿದ್ದ ಹೊಸ ವಿಳಾಸ ಮೌಂಟ್ ರಸ್ತೆಯಿಂದ ನಾಲ್ಕು ಪುಟ ಗಾತ್ರದ ಪತ್ರಿಕೆಯನ್ನು "1939 ರ ವರೆಗೂ ಪ್ರಕಟಿಸಲಾಯಿತು". ಇದು ಸಂಪೂರ್ಣ ಜಾಹೀರಾತುಗಳಿಂದ ತುಂಬಿದ್ದ ಮುಖ ಪುಟವನ್ನೊಳಗೊಂಡಿತ್ತು— ಈ ತೆರನಾದ ಪ್ರವೃತ್ತಿಯು 1958 ರ ಕೊನೆಯಲ್ಲಿ ಜಾರಿಗೆ ಬಂದಿತ್ತು. ಇದರ ಮಾದರಿಯಾಗಿದ್ದ ಪೂರ್ವ-ಥಾಂಸನ್ ಟೈಮ್ಸ್ ಅನ್ನು ಇದು ಅನುಸರಿಸಲು ಆರಂಭಿಸಿದಾಗಿನಿಂದ ಜಾಹೀರಾತುಗಳನ್ನು ಮುಖಮುಟದಲ್ಲಿ ಮುದ್ರಿಸುತ್ತಿತ್ತು—ಅಲ್ಲದೇ ಜಾಹೀರಾತುದಾರರ ಸೇವೆಗಾಗಿ ಮೂರು ಹಿಂದಿನ ಪುಟಗಳನ್ನು ಕೂಡ ಒಳಗೊಂಡಿತ್ತು. ಇದರ ಮಧ್ಯೆ ಸುದ್ದಿಗಿಂತ ಹೆಚ್ಚು ಅಭಿಪ್ರಾಯಗಳಿರುತ್ತಿದ್ದವು." ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ವಾರ್ಷಿಕ ಅಧಿವೇಶನವನ್ನು 1887 ರ ನಂತರ ಮದ್ರಾಸ್ ನಲ್ಲಿ ಏರ್ಪಡಿಸಿದಾಗ, ಪತ್ರಿಕೆಯಲ್ಲಿ ರಾಷ್ಟ್ರೀಯ ಸುದ್ದಿಯ ವರದಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚತೊಡಗಿತು. ಅಲ್ಲದೇ ಪತ್ರಿಕೆಯನ್ನು 1889 ರ ಏಪ್ರಿಲ್ 1 ರಿಂದ ಪ್ರತಿದಿನ ಸಂಜೆಯ ಪತ್ರಿಕೆಯಾಗಿ ಹೊರಹೊಮ್ಮುವಂತೆ ಮಾಡಲಾಯಿತು.

ವೀರರಾಘವಚಾರಿಯರ್ ಮತ್ತು ಸುಬ್ರಮಣ್ಯ ಅಯ್ಯರ್ ರವರ ನಡುವಿನ ಪಾಲುದಾರಿಕೆಯು 1898 ರ ಅಕ್ಟೋಬರ್ ನಲ್ಲಿ ಕೊನೆಗೊಂಡಿತು. ಅಯ್ಯರ್ ಪತ್ರಿಕೆಯನ್ನು ತೊರೆದರು. ವೀರರಾಘವಚಾರಿಯರ್ ಪತ್ರಿಕೆಯ ಏಕಮಾತ್ರ ಮಾಲೀಕರಾದರು; ಹಾಗು ಸಿ. ಕರುಣಾಕರ ಮೆನನ್ ರವರನ್ನು ಸಂಪಾದಕರನ್ನಾಗಿ ನೇಮಿಸಲಾಯಿತು. ದಿ ಹಿಂದೂ  '​ ಪತ್ರಿಕೆಯ ಸಾಹಸ ಕಾರ್ಯವು 1900ರ ಹೊತ್ತಿಗೆ ಪತನವಾಗಲು ಪ್ರಾರಂಭಿಸಿತು. ಅಲ್ಲದೇ ಇದರ ಮಾರಾಟದ ಸಂಖ್ಯೆಯಲ್ಲಿಯೂ ಕುಸಿತ ಕಾಣಿಸಿತು. ಇದರ ಮಾರಾಟ 800 ಪ್ರತಿಗಳಿಗೆ ಇಳಿದಾಗ ಏಕಮಾತ್ರ ಮಾಲೀಕರಾಗಿದ್ದ ವೀರರಾಘವಚಾರಿಯರ್ ಇದನ್ನು ಮಾರಲು ನಿರ್ಧರಿಸಿದರು. ಆಗ 1895 ರಿಂದ ದಿ ಹಿಂದೂ  '​ ಪತ್ರಿಕೆಯ ಕಾನೂನು ಸಲಹಾಗಾರರಾಗಿದ್ದ ಎಸ್. ಕಸ್ತೂರಿ ರಂಗ ಅಯ್ಯಂಗಾರ್ ರವರು ಇದನ್ನು ಕೊಂಡುಕೊಂಡರು. ಇವರು ರಾಜಕೀಯವಾಗಿ ಮಹಾತ್ವಾಕಾಂಕ್ಷೆಯುಳ್ಳ ವಕೀಲರಾಗಿದ್ದರು. ಕುಂಬಕೋಣಂ ಹಳ್ಳಿಯಿಂದ ಕೊಯಂಬತ್ತೂರ್ ಗೆ ಅನಂತರ ಅಲ್ಲಿಂದ ಮದ್ರಾಸ್ ಗೆ ಕಾನೂನು ವೃತ್ತಿಗಾಗಿ ಅವರು ಬಂದಿದ್ದರು. ಕಸ್ತೂರಿ ರಂಗ ಅಯ್ಯಂಗಾರ್ ರವರ ಪೂರ್ವಿಕರು ವಿಜಯನಗರದ ಮತ್ತು ಮಹಾರತ್ತ ತಂಜೋರ್ ನ ಆಸ್ಥಾನಗಳಲ್ಲಿ ಸೇವೆಸಲ್ಲಿಸಿದ್ದರು. ಇವರು ವೃತ್ತಿಯನ್ನಾಗಿಸಿಕೊಂಡಿದ್ದ ಕಾನೂನು ಅಭ್ಯಾಸದಲ್ಲಿ ಮಧ್ಯಮ ತರಗತಿಯ ಯಶಸ್ಸು ಕಂಡಿದ್ದ ಕಾರಣ ಅದರಲ್ಲಿ ಅವರ ಆಸಕ್ತಿ ಕಡಿಮೆಯಾಗಿತ್ತು. ಆದರೆ ಪತ್ರಿಕೋದ್ಯಮಕ್ಕಾಗಿ, ಅವರ ಆದ್ಯತೆ ಕನಿಷ್ಟ ಮಟ್ಟದ್ದಾಗಿತ್ತು.ಆದರೆ `ಎಗ್ ಮೋರ್ ಗ್ರೂಪ್' ಸಮೂಹ ಸಂಘಟನೆಯ ಸಂಪರ್ಕದಿಂದಾಗಿ ಕೊಯಂಬತ್ತೂರ್ ನಲ್ಲಿದ್ದಾಗ ರಾಜಕೀಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಈ ಸಂಘಟನೆಯನ್ನು ಸಿ. ಶಂಕರನ್ ನಾಯರ್ ಮತ್ತು ಡಾಕ್ಟರ್ ಟಿ.ಎಮ್. ನಾಯರ್ ನಿರ್ವಹಿಸುತ್ತಿದ್ದರು.

ಇದರ ಮಾಲೀಕತ್ವವು 1980 ರ ಉತ್ತರಾರ್ಧದಲ್ಲಿ ಕುಟುಂಬದ ಯುವ ಸದಸ್ಯರ ಕೈಗೆ ಹೋದಾಗ, ರಾಜಕೀಯತ್ತ ವಾಲುವ ಅವರ ಪ್ರವೃತ್ತಿಯಲ್ಲಿ ಬದಲಾವಣೆಯನ್ನು[ಸೂಕ್ತ ಉಲ್ಲೇಖನ ಬೇಕು] ಗಮನಿಸಲಾಯಿತು. Worldpress.org ದಿ ಹಿಂದೂ ವನ್ನು ಎಡ ಪಕ್ಷೀಯ ಸ್ವತಂತ್ರ ವೃತ್ತಪತ್ರಿಕೆ ಎಂದು ಪಟ್ಟಿಮಾಡಿದೆ. ಜಂಟಿ ನಿರ್ವಾಹಕ ನಿರ್ದೇಶಕ ಎನ್. ಮುರಳಿ 2003 ರ ಜುಲೈ ನಲ್ಲಿ ಕೆಳಕಂಡಂತೆ ಹೇಳಿದ್ದಾರೆ:" ನಮ್ಮ ಕೆಲವು ವರದಿಗಳು ಪಕ್ಷಪಾತವಾಗಿವೆ ಮತ್ತು ವಸ್ತು ನಿಷ್ಠವಾಗಿಲ್ಲದೇ ಕೆಲವು ಉದ್ದೇಶಿತ ಕೊರತೆ ಅನುಭವಿಸುತ್ತಿವೆ ಎಂದು ನಮ್ಮ ಓದುಗರು ದೂರು ನೀಡುತ್ತಿರುವುದು ನಿಜವಾಗಿದೆ. ಆದರೆ ಇದು ಓದುಗನ ನಂಬಿಕೆಯ ಮೇಲು ಅವಂಬಿಸಿರುತ್ತದೆ"." ಸುದ್ದಿಯ ವರದಿಯಲ್ಲಿ ಮತ್ತು ಅಭಿಪ್ರಾಯದ ತುಣುಕುಗಳಲ್ಲಿ ವಸ್ತುನಿಷ್ಠತೆಯನ್ನು ಎತ್ತಿಹಿಡಿಯಲು, ಮತ್ತು ಗುಣಮಟ್ಟ ಹೆಚ್ಚಿಸಲು ಪತ್ರಿಕೆಯ ರಚನೆ ಮತ್ತು ಇದರ ಕಾರ್ಯರೀತಿಯನ್ನು ಸುಧಾರಿಸುವ "ಆದೇಶದೊಂದಿಗೆ 2003 ರ ಜೂನ್ 27 ರಂದು ಎನ್.ರಾಮ್ ರವರನ್ನು ಪತ್ರಿಕೆಯ ಪ್ರಧಾನ ಸಂಪಾದಕರನ್ನಾಗಿ ನೇಮಿಸಲಾಯಿತು. ಅಲ್ಲದೇ ಸಂಪಾದಕೀಯ ಚೌಕಟ್ಟು ಮತ್ತು ಸ್ಪರ್ಧಾತ್ಮಕ ವಾತಾವರಣದೊಂದಿಗೆ ಕ್ಷೇತ್ರದಲ್ಲಿ ಕಾರ್ಯಗಳನ್ನು ಪುನರ್ವಿನ್ಯಾಸ ಗೊಳಿಸಲು" ಅಧಿಕಾರ ನೀಡಲಾಯಿತು. ಓದುಗರ ಪತ್ರದ 2003 ರ ಸೆಪ್ಟೆಂಬರ್ 3 ಮತ್ತು 23 ರ ಅಂಕಣವು, ಸಂಪಾದಕೀಯವು ಪಕ್ಷಪಾತವಾಗಿದೆ ಎಂದು ಹೇಳುವ ಮೂಲಕ ಓದುಗರಿಂದ ಈ ರೀತಿಯ ಪ್ರತಿಕ್ರಿಯೆ ಪಡೆಯಿತು. ಅದಾದ ನಂತರದ 2003 ರಲ್ಲಿ ಸಂಪಾದಕೀಯವು, ಪತ್ರಿಕೆಯು ಸುದ್ದಿ ವರದಿಯ' ವೈರಸ್ ನ ರೂಪದಲ್ಲಿ 'ಸಂಪಾದಕೀಯದಿಂದ ಹಾಳಾಗಿರುವುದನ್ನು ಗಮನಿಸಿತು. ಅಲ್ಲದೇ ಪತ್ರಿಕಾ ಪ್ರವೃತ್ತಿಯನ್ನು ಹುರಿದುಂಬಿಸಲು,ನಿರ್ಧಾರದ ಪ್ರಬಲ ನೀತಿಗಳನ್ನು ವೃತ್ತಿಪರವಾಗಿ ಪುನಃ ಸ್ಥಾಪಿಸಲು, ಅದರ ವರದಿಯಲ್ಲಿ ವಸ್ತುನಿಷ್ಠತೆ ಮತ್ತು ವಾಸ್ತವತವಾದವನ್ನು ಬಲಪಡಿಸಲು ಸ್ಥಿರ ಸಂಕಲ್ಪವನ್ನು ವ್ಯಕ್ತಪಡಿಸಿತು.

ಭೋಫೋರ್ಸ್ ಶಸ್ತ್ರಾಸ್ತ್ರ ಒಪ್ಪಂದ ಹಗರಣದ ವರದಿ, ಎಲ್ಲಿಯೂ ಪ್ರಕಟವಾಗದ ದಾಖಲೆಗಳ ಸರಣಿಯನ್ನು 1987-88ದಿ ಹಿಂದೂನಲ್ಲಿ ಪ್ರಕಟಿಸಿತು. ಇದು ಈ ವಿಷಯದ ಮೇಲೆ ರಾಷ್ಟ್ರೀಯವಾಗಿ ರಾಜಕೀಯ ಸಂವಾದಕ್ಕೆ ಕಾರಣವಾಯಿತು.ಸ್ವಿಡೀಷ್ ರೇಡಿಯೋ 1987 ರ ಏಪ್ರಿಲ್ ನಲ್ಲಿ, 155 mm ತುಪಾಕಿಗಳ ಮಾರಾಟಕ್ಕಾಗಿ ಸ್ವೀಡಿಷ್ ಶಸ್ತ್ರಾಸ್ತ್ರ ಉತ್ಪಾದನಾ ಕಂಪನಿಯು, ಭಾರತದ ಸರ್ಕಾರದೊಂದಿಗೆ ಬೃಹತ್ ಮಟ್ಟದ ಗುತ್ತಿಗೆ ಪಡೆಯಲು ಭಾರತೀಯ ಅಗ್ರ ರಾಜಕೀಯ ನಾಯಕರಿಗೆ, ಅಧಿಕಾರಿಗಳಿಗೆ ಮತ್ತು ಸೈನ್ಯಾಧಿಕಾರಿಗಳಿಗೆ ಲಂಚ ನೀಡಿರುವುದಾಗಿ ಆರೋಪಿಸಿತು. ಇದಾದ ಆರು ತಿಂಗಳ ಕಾಲಾವಧಿಯಲ್ಲಿಯೇ ವೃತ್ತ ಪತ್ರಿಕೆಯು ಸ್ವಿಸ್ ಬ್ಯಾಂಕ್ ನ ಖಾತೆಗೆ ಜಮಾ ಮಾಡಲಾಗಿದ್ದ $50 ಮಿಲಿಯನ್ ಡಾಲರ್ ರಹಸ್ಯವನ್ನುಇದು ಭೇದಿಸಿತ್ತು. ಈ ಹಣ, ಹಣದ ಹಿಂದಿನ ಒಪ್ಪಂದ, ಪಾವತಿಗೆ ಸಂಬಂಧಿಸಿದ ಸಂಪರ್ಕ ಹಾಗು ಬಿಕ್ಕಟ್ಟಿನ ಪ್ರತಿಕ್ರಿಯೆ ಮತ್ತು ಇತರ ವಿಷಯಗಳನ್ನೊಳಗೊಂಡ ಮೂಲ ದಾಖಲೆಯ ಅನೇಕ ಪ್ರತಿಗಳನ್ನು ಪ್ರಕಟಿಸಿತ್ತು. ಇದರ ತನಿಖೆಯನ್ನು ದಿ ಹಿಂದೂ ಪತ್ರಿಕೆಯ ಅರೆಕಾಲಿಕ ವರದಿಗಾರ್ತಿ, ಚಿತ್ರಾ ಸುಬ್ರಮಣ್ಯಂ ನಡೆಸಿದ್ದರು. ಇವರು ಜಿನೀವಾ ದಿಂದ ವರದಿ ಮಾಡುತ್ತಿದ್ದು,ಚೆನ್ನೈ ನಲ್ಲಿ ರಾಮ್ ಇದಕ್ಕೆ ಬೆಂಬಲ ನೀಡುತ್ತಿದ್ದರು. ಈ ಹಗರಣವು, ಕೇಂದ್ರದಲ್ಲಿ ಆಡಳಿತದಲ್ಲಿದ್ದ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಮತ್ತು ಅದರ ನಾಯಕ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರಿಗೆ ಕಿರಿಕಿರಿಯನ್ನುಂಟು ಮಾಡಿತು. ಪತ್ರಿಕೆಯ ಸಂಪಾದಕೀಯವು, ಪ್ರಧಾನ ಮಂತ್ರಿಯು ಇಂತಹ ವಂಚನೆ ಮತ್ತು ರಹಸ್ಯ ಬಚ್ಚಿಟ್ಟದ್ದನ್ನು ಪ್ರಸ್ತಾಪಿಸಿ ತಪ್ಪಿತಸ್ಥರೆಂದು ಆರೋಪಿಸಿತು.

ರಾಮ್ ಅವರ ಕಿರಿಯ ಸಹೋದರ, ಉಪ ಸಂಪಾದಕ ಎನ್. ರವಿಯನ್ನು 1991ರಲ್ಲಿ ಜಿ. ಕಸ್ತೂರಿಯವರ ಬದಲಿಗೆ ಸಂಪಾದಕರನ್ನಾಗಿ ನೇಮಿಸಿದರು. ಕಸ್ತೂರಿ ಶ್ರೀನಿವಾಸನ್ ರ ಮೊಮ್ಮಗಳು ನಿರ್ಮಲ ಲಕ್ಷ್ಮಣ್ , ದಿ ಹಿಂದೂ ಪತ್ರಿಕೆಯ ಜಂಟಿ ಸಂಪಾದಕರಾದರು. ಅಲ್ಲದೇ ಅವರ ಸಹೋದರಿ ಮಾಲಿನಿ ಪಾರ್ಥಸಾರಥಿ, ನಿರ್ವಾಹಕ ಸಂಪಾದಕಿಯಾದರು.

ಆಗ 2003ರಲ್ಲಿ, ಚೈನ್ನೈ ರಾಜಧಾನಿಯಾಗಿರುವ ತಮಿಳು ನಾಡು ರಾಜ್ಯದ ಜಯಲಲಿತ ಸರ್ಕಾರವು, ರಾಜ್ಯ ಶಾಸಕಾಂಗದ "ಹಕ್ಕಿಗೆ ಭಂಗತಂದಿರುವುದಕ್ಕಾಗಿ" ಪತ್ರಿಕೆಯ ವಿರುದ್ಧ ಮೊಕದ್ದಮೆ ಹೂಡಿತು. ಇಂತಹ ಪ್ರವೃತ್ತಿಯಿಂದಾಗಿ ಸರ್ಕಾರವು ಪತ್ರಿಕೆಯ ಸ್ವಾತಂತ್ರ್ಯದ ಮೇಲೆ ಅತಿಕ್ರಮಣ ಮಾಡುತ್ತಿದೆ ಎಂದು ವ್ಯಾಪಕವಾಗಿ ಖಂಡಿಸಲಾಯಿತು. ಆದರೂ, ದಿ ಹಿಂದೂ ಪತ್ರಿಕೆ, ರಾಷ್ಟ್ರದುದ್ದಕ್ಕೂ ಪತ್ರಿಕೋದ್ಯಮ ಸಮೂಹದಿಂದ ಬೆಂಬಲ ಪಡೆವುದರೊಂದಿಗೆ ರಾಜಕೀಯ ಮತ್ತು ಕಾನೂನಿಗೆ ಮಾನ್ಯತೆ ತರುವ ಮೂಲಕ ಅಗ್ನಿಪರೀಕ್ಷೆಯಿಂದ ಪಾರಾಯಿತು.

ದಿ ಹಿಂದೂ ಪತ್ರಿಕೆಯ ಯುವ ಸಂಪಾದಕರ ಬಳಗ ಕೂಡ, ಇಂದು ವಾಣಿಜ್ಯಕವಾಗಿ ಯಶಸ್ವಿಯಾಗಲು ಬಹುಮಟ್ಟಿನ ಕೊಡುಗೆ ನೀಡಿದೆ. ಸುದ್ದಿ ಸಂಗ್ರಹ, ಮುದ್ರಣ ಮತ್ತು ವಿತರಣೆಗಾಗಿ ಅವರು ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರು. ವೃತ್ತ ಪತ್ರಿಕೆಯ ದೃಷ್ಟಿಕೋನದ ಮೇಲೆ ಪ್ರಧಾನ ಸಂಪಾದಕ ರಾಮ್ ಕೆಳಕಂಡಂತೆ ಬರೆದಿದ್ದಾರೆ: "ದಿ ಹಿಂದೂ ವಿನ್ಯಾಸ ರಚನೆ ಮತ್ತು ವಿನ್ಯಾಸದಲ್ಲಿ ಅನೇಕ ವಿಕಸನೀಯ ಬದಲಾವಣೆಗಳನ್ನು ಕಂಡಿದೆ. ಉದಾಹರಣೆಗೆ ಜಾಹೀರಾತು ರಾಜ್ಯಕ್ಕಾಗಿ ಬಳಸುತ್ತಿದ್ದ ಮುಖ ಪುಟದಲ್ಲಿ ಸುದ್ದಿಯನ್ನು ಹಾಕಲಾಯಿತು; ಮಾಡ್ಯೂಲ್ ವಿನ್ಯಾಸ ಮತ್ತು ಜೋಡಣೆಯನ್ನು ಅಳವಡಿಸಿಕೊಂಡಿದೆ; ದೊಡ್ಡ ಛಾಯಾಚಿತ್ರಗಳನ್ನು ಬಳಸುತ್ತಿದೆ; ವರ್ಣವನ್ನು ಪರಿಚಯಿಸಿದೆ; ಸಂಪಾದಕೀಯ ಪುಟವನ್ನು ಸಂಪೂರ್ಣವಾಗಿ 'ವೀಕ್ಷಣ'ಪುಟವಾಗಿಸಲು ಸಂಪಾದಕೀಯ ಪುಟದ ಸ್ವರೂಪ ಬದಲಾಯಿಸಿಲಾಗಿದೆ; ಒಂದು ಪುಟದಿಂದ ಮತ್ತೊಂದು ಪುಟಕ್ಕೆ ಸುದ್ದಿಯ ಕಥೆಗಳನ್ನು ಕೊಂಡೊಯ್ಯುವುದಿಲ್ಲ; ಹಾಗು ಚೌಕಟ್ಟು, ಫಲಕಗಳು, ಮುಖ್ಯಾಂಶಗಳು ಮತ್ತು ಸಾರಾಂಶಗಳನ್ನು ಪರಿಚಯಿಸಿದೆ." ವಿನ್ಯಾಸರಚನೆಯ ಪ್ರಧಾನ ಬದಲಾವಣೆಗಳು ಪ್ರಾರಂಭದಲ್ಲಿ <ದಿನಾಂಕವಿಲ್ಲದೇ< (ಎಡ್ವಿನ್ ಟೇಲರ್ ಪುನರ್ವಿನ್ಯಾಸಗೊಳಿಸಿದರು)ಕಂಡುಬರುತ್ತಿದ್ದವು. ಅನಂತರ 2005 ರ ಏಪ್ರಿಲ್ 14 ರಿಂದ ಕಂಡು ಬರುತ್ತದೆ.(ಮರಿಯೋ ಗಾರ್ಸಿಯ ಮತ್ತು ಜಾನ್ ಕ್ನಿ ಪುನರ್ವಿನ್ಯಾಸಗೊಳಿಸಿದರು). ಗಾರ್ಸಿಯ ರವರ ಪುನರ್ವಿನ್ಯಾಸವು, "ದೀರ್ಘ ವಸ್ತುವಿಷಯವನ್ನು ಒಳಗೊಂಡಂತೆ(ಸರಿಯಾದ ಮತ್ತು ಅಗತ್ಯವಿರುವ) ಪಠ್ಯಕ್ಕೆ, ಪೂರ್ವ ಪದವನ್ನು ನೀಡುವುದರ ಮೇಲೆ ಗಮನಹರಿಸಿತು. ಆದರೆ ಛಾಯಾಚಿತ್ರ, ಇತರ ರೇಖಾಚಿತ್ರಗಳನ್ನು ವೈಟ್ ಸ್ಪೇಸ್ ಅನ್ನು ಒದಗಿಸುವುದು ಕೂಡ ಪುಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ; ಓದುಗರಿಗೆ ಹೆಚ್ಚು ಸ್ಫುಟವಾದ ಮುದ್ರಣ, ದಕ್ಷ ಸೂಚಿ ಅಥವಾ 'ಸಂಚಾರ' ವ್ಯವಸ್ಥೆ, ಕಥಾನಕಗಳ ಸ್ಪಷ್ಟ ವ್ಯವಸ್ಥೆ, ಹೊಸದಾದ ಮತ್ತು ಉತ್ತಮ ಬಣ್ಣದ ವರ್ಣಫಲಕವನ್ನು ಒದಗಿಸುಸುವುದರ ಕಡೆಗೆ ಗಮನ ಹರಿಸಲಾಗಿದೆ; ಅಲ್ಲದೇ ಜಾಹೀರಾತು ದಾರನಿಗೆ ಉತ್ತಮ ಮೌಲ್ಯವನ್ನು ಮತ್ತು ಹೊಸ ಅವಕಾಶವನ್ನು ನೀಡುವುದರ ಕಡೆಗೆ ಗಮನ ಹರಿಸಿದೆ."

ದಿ ಹಿಂದೂ ಪತ್ರಿಕೆಯು ಕುಟುಂಬದ ನಿರ್ವಹಣೆಗೆ ಒಳಪಟ್ಟಿದೆ. ಈ ಪತ್ರಿಕೆಯನ್ನು 1965 ರಿಂದ 1991 ರ ವರೆಗೆ ಜಿ. ಕಸ್ತೂರಿಯವರು,1991 ರಿಂದ 2003 ರವರೆಗೆ ಎನ್ . ರವಿಯವರು ಹಾಗು ಅವರ ಸಹೋದರ 2003 ರ ಜೂನ್ 27 ರಿಂದ ಮುನ್ನಡೆಸಿಕೊಂಡು ಬಂದಿದ್ದಾರೆ. ನಿರ್ಮಲ ಲಕ್ಷ್ಮಣ್, ಮಾಲಿನಿ ಪಾರ್ಥಸಾರಥಿ, ನಳಿನಿ ಕೃಷ್ಣನ್, ಎನ್ ಮುರಳಿ, ಕೆ ಬಾಲಾಜಿ, ಕೆ ವೇಣುಗೋಪಾಲ ಮತ್ತು ರಮೇಶ್ ರಂಗರಾಜನ್ ರನ್ನು ಒಳಗೊಂಡಂತೆ ಈ ಕುಟುಂಬದ ಇತರ ಸದಸ್ಯರು ದಿ ಹಿಂದೂ ಪತ್ರಿಕೆಯ ಮತ್ತು ಇದರ ಮೂಲ ಕಂಪನಿ ಕಸ್ತೂರಿ ಅಂಡ್ ಸನ್ಸ್ ನ ನಿರ್ದೇಶಕರಾಗಿದ್ದಾರೆ. ಹಿಂದೂಗೆ 2006 ರ ಏಪ್ರಿಲ್ ನಿಂದ ನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷರಾಗಿದ್ದ ಎಸ್ ರಂಗರಾಜನ್ 2007 ರ ಫೆಬ್ರವರಿ 8 ರಂದು ಮರಣ ಹೊಂದಿದರು. ಈ ವ್ಯವಹಾರದಲ್ಲಿ ಪಾಲ್ಗೊಂಡ ಕುಟುಂಬದ ಯುವ ಜನಾಂಗದಲ್ಲೆ ಮೊದಲ ಸದಸ್ಯರಾದ ಅನಂತ ಕೃಷ್ಣ ರವರು 2007 ರ ವರೆಗೆ ಚೆನ್ನೈ ಮತ್ತು ಮುಂಬೈನಲ್ಲಿ ವಿಶೇಷ ಸುದ್ದಿಗಾರರಾಗಿ ಕಾರ್ಯನಿರ್ವಹಿಸಿದರು.

ನಿರ್ದೇಶಕರ ಭಾಗಶಃ ಪಟ್ಟಿ

  • ಜಿ. ಸುಬ್ರಮಣ್ಯ ಅಯ್ಯರ್ (1878–1898)
  • ಎಮ್.ವೀರರಾಘವಚಾರಿಯರ್(1898–1904)
  • ಕಸ್ತೂರಿ ರಂಗ ಅಯ್ಯಂಗಾರ್ (1904–1923)
  • ಎಸ್. ರಂಗಸ್ವಾಮಿ (1923–1926)
  • ಕೆ. ಶ್ರೀನಿವಾಸನ್ (1926–1959)
  • ಎನ್. ರಾಮ್ (1977–2011)
  • ಕೆ.ಬಾಲಾಜಿ (2011-2013)
  • ಎನ್.ರಾಮ್ (2013-)

ನಿರ್ದೇಶಕರ ಮಂಡಳಿ

ದಿ ಹಿಂದೂ ತಂಡವನ್ನು ಕಸ್ತೂರಿ ರಂಗ ಅಯ್ಯಂಗಾರ್ ರವರ ಅನುಯಾಯಿಗಳು ನಿರ್ವಹಿಸಿದರು. ಇತ್ತೀಚಿನ 2010 ರ ಹೊತ್ತಿಗೆ ಕಸ್ತೂರಿ ಅಂಡ್ ಸನ್ಸ್ ಮಂಡಳಿಯಲ್ಲಿ 12 ಜನ ನಿರ್ದೇಶಕರಿದ್ದರು-ಎನ್. ರಾಮ್, ಎನ್. ರವಿ ಮತ್ತು ಎನ್. ಮುರಳಿ (ಜಿ. ನರಸಿಂಹನ್ ರವರ ಪುತ್ರರು); ಮಾಲಿನಿ ಪಾರ್ಥಸಾರಥಿ, ನಿರ್ಮಲ ಲಕ್ಷ್ಮಣ್ ಮತ್ತು ನಳಿನಿ ಕೃಷ್ಣನ್(ಎಸ್. ಪಾರ್ಥಸಾರಥಿಯ ಪುತ್ರಿಯರು); ರಮೇಶ್ ರಂಗರಾಜನ್, ವಿಜಯ್ ಅರುಣ್ ಮತ್ತು ಅಕಿಲಾ ಅಯ್ಯಂಗಾರ್ (ಎಸ್. ರಂಗರಾಜನ್ ರವರ ಮಕ್ಕಳು; ಕೆ. ಬಾಲಾಜಿ, ಕೆ. ವೇಣುಗೋಪಾಲ್ ಮತ್ತು ಲಕ್ಷ್ಮಿ ಶ್ರೀಕಾಂತ್(ಜಿ. ಕಸ್ತೂರಿಯವರ ಮಕ್ಕಳು).

ವಿಮರ್ಶೆಗಳು

ಲಂಡನ್ ನ ದಿ ಟೈಮ್ಸ್ ,ದಿ ಹಿಂದೂ 1965 ರಲ್ಲಿದ್ದ ವಿಶ್ವದ ಅತ್ಯುತ್ತಮ ಹತ್ತು ವೃತ್ತ ಪತ್ರಿಕೆಗಳಲ್ಲಿ ಒಂದಾಗಿದೆ ಎಂದು ದಾಖಲಿಸಿದೆ. ಇದರ ಪ್ರತಿಯೊಂದು ಆಯ್ಕೆಗಳನ್ನು ಪ್ರತ್ಯೇಕ ಲೇಖನಗಳಲ್ಲಿ ಚರ್ಚಿಸುತ್ತ, ದಿ ಟೈಮ್ಸ್ ಕೆಳಕಂಡಂತೆ ಬರೆದಿದೆ:

The Hindu takes the general seriousness to lengths of severity... The Hindu which is published in Madras, is the only newspaper which in spite of being published only in a provincial capital is regularly and attentively read in Delhi. It is read not only as a distant and authoritative voice on national affairs but as an expression of the most liberal—and least provincial—southern attitudes... Its Delhi Bureau gives it outstanding political and economic dispatches and it carries regular and frequent reports from all state capitals, so giving more news from states, other than its own, than most newspapers in India... It might fairly be described as a national voice with a southern accent. The Hindu can claim to be the most respected paper in India.

ಆಗ 1968 ರಲ್ಲಿ, ಅಮೇರಿಕದ ವೃತ್ತ ಪತ್ರಿಕೆಗಳ ಪ್ರಕಾಶಕರ ಸಂಘವು, ದಿ ಹಿಂದೂ ಪತ್ರಿಕೆಗೆ ವಿಶ್ವದ ಮಾಧ್ಯಮ ಕ್ಷೇತ್ರದಲ್ಲಿ ಅದರ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಿತು. ಉದ್ಧರಣ ಅಭಿಪ್ರಾಯದಿಂದ ಇದನ್ನು ತೆಗೆದುಕೊಳ್ಳಲಾಗಿದೆ:

Throughout nearly a century of its publication The Hindu has exerted wide influence not only in Madras but throughout India. Conservative in both tone and appearance, it has wide appeal to the English-speaking segment of the population and wide readership among government officials and business leaders... The Hindu has provided its readers a broad and balanced news coverage, enterprising reporting and a sober and thoughtful comment... [It] has provided its country a model of journalistic excellence... [It] has fought for a greater measure of humanity for India and its people... [and] has not confined itself to a narrow chauvinism. Its Correspondents stationed in the major capitals of the world furnish The Hindu with world-wide news coverage... For its championing of reason over emotion, for its dedication to principle even in the face of criticism and popular disapproval, for its confidence in the future, it has earned the respect of its community, its country, and the world.

ಸಾಧನೆಗಳು

ಭಾರತದಲ್ಲಿ ದಿ ಹಿಂದೂ ಪತ್ರಿಕೆಯು ಅನೇಕ ವಿಷಯಗಳಲ್ಲಿ ಮೊದಲಿಗನಾಗಿದೆ, ಇದು ಕೆಳಕಂಡವುಗಳನ್ನು ಒಳಗೊಂಡಿದೆ.

  • 1940: ವರ್ಣ ಪುಟ ಪರಿಚಯಿಸುವುದರಲ್ಲಿ ಮೊದಲನೆಯದು
  • 1963: ವಿತರಣೆಗಾಗಿ ನೌಕಾಪಡೆಯ ವೈಮಾನಿಕ ಸೇವೆಯನ್ನು ಬಳಸಿದವುಗಳಲ್ಲಿ ಮೊದಲನೆಯದು
  • 1969: ಪುಟ ರವಾನೆಯ ಯಥಾಪ್ರತಿ ವ್ಯವಸ್ಥೆಯನ್ನು ಅಳವಡಿಸಿಕೊಂಡವುಗಳಲ್ಲಿ ಮೊದಲನೆಯದು.
  • 1980: ಕಂಪ್ಯೂಟರ್ ಸಹಾಯದ ಫೋಟೋ ಸಂಯೋಜನೆಯನ್ನು ಬಳಸಿದವುಗಳಲ್ಲಿ ಮೊದಲನೆಯದು.
  • 1986: ಯಥಾ ಪ್ರತಿ ವರ್ಗಾವಣೆಗೆ ಮೊದಲ ಬಾರಿಗೆ ಉಪಗ್ರಹವನ್ನು ಬಳಸಿತು.
  • 1994: ಪುಟ ವಿನ್ಯಾಸದಲ್ಲಿ ಮತ್ತು ದೂರದಿಂದ ಚಿತ್ರವನ್ನು ನಿರ್ಮಿಸುವಲ್ಲಿ ಸಂಪೂರ್ಣವಾಗಿ ಕಂಪ್ಯೂಟರೀಕರಿಸಲಾದ ಪಠ್ಯವನ್ನು ಮತ್ತು ರೇಖಾಚಿತ್ರವನ್ನು ಅಳವಡಿಸಿಕೊಂಡವುಗಳಲ್ಲಿ ಇದು ಮೊದಲನೆಯದು.
  • 1995: ಅಂತರ್ಜಾಲದಲ್ಲಿ ಬಂದ ಮೊದಲ ವೃತ್ತ ಪತ್ರಿಕೆಯಾಗಿದೆ.
  • 1999: ಭಾರತ ರಾಷ್ಟ್ರೀಯ ವೃತ್ತ ಪತ್ರಿಕೆಯಾಯಿತು

ಪೂರಕಗಳು ಮತ್ತು ಗುಣಲಕ್ಷಣಗಳು

  • ಸೋಮವಾರ: ಮೆಟ್ರೋ ಪ್ಲಸ್, ಬಿಸ್ ನೆಸ್ ರಿವ್ಯೂ, ಎಜುಕೇಷನ್ ಪ್ಲಸ್
  • ಮಂಗಳವಾರ: ಮೆಟ್ರೋ ಪ್ಲಸ್, ಯಂಗ್ ವಲ್ಡ್, ಬುಕ್ ರಿವ್ಯೂ
  • ಬುಧುವಾರ: ಮೆಟ್ರೋ ಪ್ಲಸ್, ಉದ್ಯೋಗ ಅವಕಾಶಗಳು
  • ಗುರುವಾರ: ಮೆಟ್ರೋ ಪ್ಲಸ್, ವಿಜ್ಞಾನ,ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಕೃಷಿ , NXg
  • ಶುಕ್ರವಾರ: ಫ್ರೈಡೆ ಫೀಚರ್ಸ್, ಸಿನಿಮಾ ಪ್ಲಸ್
  • ಸಟರ್ಡೇ: ಮೆಟ್ರೋ ಪ್ಲಸ್, ಪ್ರಾಪರ್ಟಿ ಪ್ಲಸ್,
  • ಭಾನುವಾರ: ವಾರದ ನಿಯತಕಾಲಿಕೆ,ಮೆಟ್ರೋ ಪ್ಲಸ್ ವೀಕೆಂಡ್, ಡೌನ್ ಟೌನ್, ರಿಟೈಲ್ ಪ್ಲಸ್, ಕ್ಲಾಸಿಫೈಡ್ಸ್, ತೆರೆದ ಪುಟ, ಸಾಹಿತ್ಯಿಕ ವಿಮರ್ಶೆ, ಎವ್ವೆರಿ ಫಸ್ಟ್ ಸನ್ ಡೇ.
  • ಡ್ಯೇಲಿ ಫೀಚರ್ಸ್: ದಿಸ್ ಡೇ ದ್ಯಾಟ್ ಏಜ್, ಧರ್ಮ, ದಿ ಹಿಂದೂ ಕ್ರಾಸ್ ವರ್ಡ್, ಸುಡೋಕೊ

ಆನ್ ಲೈನ್ ಉಪಸ್ಥಿತಿ

ದಿ ಹಿಂದೂ , 1995 ರಲ್ಲಿ ವೆಬ್ ಸೈಟ್ ಅನ್ನು ಆರಂಭಿಸಿದ ಭಾರತದ ಮೊದಲ ವೃತ್ತ ಪತ್ರಿಕೆಯಾಗಿದೆ.

ಹೀಗೆ 130 ವರ್ಷಗಳ ವೃತ್ತ ಪತ್ರಿಕೆಯು 2009 ರ ಆಗಸ್ಟ್ 15 ರಂದು, beta.thehindu.com. Archived 2009-10-20 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ ಅದರ ಪುನರ್ವಿನ್ಯಾಸಗೊಳಿಸಲಾದ ವೈಬ್ ಸೈಟ್ ನ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಿತು. ಅದರ ವೆಬ್ ಸೈಟ್ ಅನ್ನು ಆರಂಭಿಸಿದಾಗಿನಿಂದ ಇದೇ ಮೊದಲ ಬಾರಿಗೆ ಪುನರ್ವಿನ್ಯಾಸಗೊಳಿಸಿತ್ತು. ಇತ್ತೀಚಿಗೆ 2010 ರ ಜೂನ್ 24 ರಂದು ವೈಬ್ ಸೈಟ್ ನ ಬೀಟಾ ಆವೃತ್ತಿಯು www.hindu.com Archived 2009-01-06 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ ನೇರವಾಗಿ ದೊರೆಯಿತು.

ಹೊಸ ವೆಬ್ ಸೈಟ್, ಸಮಕಾಲೀನ ವೆಬ್ ವಿನ್ಯಾಸದ ತತ್ವ , ಸಾಧನ ಮತ್ತು ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳುವಾಗ ಸ್ವತಂತ್ರ ,ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯ ಮೂಲ ಮೌಲ್ಯಗಳನ್ನು ಉಳಿಸಿಕೊಂಡಿತು.

USA ಯ ಫ್ಲೋರಿಡಾದ ಟ್ಯಾಂಪಾದಲ್ಲಿರುವ ಗಾರ್ಸಿಯ ಮೀಡಿಯಾದ, ಮರಿಯೋ ಗಾರ್ಸಿಯ Jr ರವರು ಈ ವಿನ್ಯಾಸವನ್ನು ರಚಿಸಿದ್ದರು. ಡೆನ್ಮಾರ್ಕ್ ನ CCI ಯುರೋಪ್ A/S ಯಿಂದ ವರ್ಕ್ ಫ್ಲೋ ಸಲ್ಯೂಷನ್ ಅನ್ನು ತೆಗೆದುಕೊಳ್ಳಲಾಯಿತು. ನಾರ್ವೆಯ ಎಸೆನಿಕ್A/S ನಿಂದ ವೆಬ್ ಪ್ರಕಟಣಾ ವ್ಯವಸ್ಥೆಯನ್ನು ತೆಗೆದುಕೊಂಡಿತು. ಕಾರ್ಯಗತಗೊಳಿಸುವಿಕೆಯನ್ನು ಆಂತರಿಕವಾಗಿ ಮಾಡಲಾಯಿತು.

ವಿವಾದ

ದಿ ಹಿಂದೂ ಪತ್ರಿಕೆಯನ್ನು ಅದರ ಬರಹದಲ್ಲಿ ತಮಿಳು ಜನರ ವಿರುದ್ಧವಾಗಿ ಬರೆಯುತ್ತಿದೆ ಎಂದು ಶ್ರೀಲಂಕಾದ ತಮಿಳರ ಹಕ್ಕಿಗಾಗಿ ಅನೇಕ ವಕೀಲರು ಆರೋಪಿಸಿದ್ದಾರೆ. ಶ್ರೀಲಂಕಾ ರಾಜಕೀಯದ ಪ್ರಮುಖ ಟೀಕಾಕಾರ ಡೇವಿಡ್ ಜಯರಾಜ್, ಶ್ರೀಲಂಕದ ತಮಿಳರ ವಿರುದ್ಧ IPKF ನ ಘೋರ ಕೃತ್ಯವನ್ನು ಹೊರಹಾಕಿದ್ದಕ್ಕಾಗಿ ತನ್ನನ್ನು ದಿ ಹಿಂದೂ ಪತ್ರಿಕೆಯಿಂದ ತೆಗೆದುಹಾಕಲಾಯಿದೆಂದು ಆರೋಪಿಸಿದ್ದಾರೆ. ಎನ್.ರಾಮ್ ರವರಿಗೆ "ಶ್ರೀಲಂಕಾರತ್ನ" ವನ್ನು ನೀಡಿ ಗೌರವಿಸಲಾಯಿತು, ಇದು ವಿದೇಶಿಗರಿಗೆ ಕೊಡುವಂತಹ ಅತ್ಯುತ್ತಮ ನಾಗರಿಕ ಪ್ರಶಸ್ತಿಯಾಗಿದ್ದು, 2005 ರ ನವೆಂಬರ್ ನಲ್ಲಿ ನೀಡಲಾಯಿತು.

ದಿ ಹಿಂದೂ ಪತ್ರಿಕೆಯ ನಾಯಕರಾದ ಎನ್. ರಾಮ್ ರವರು ಪ್ರಕಟಿಸಿದ ಅಭಿಪ್ರಾಯದ ತುಣುಕುಗಳಲ್ಲಿ, ಟಿಬೆಟ್ ನ ಮೇಲೆ ಚೀನಾದ ಒತ್ತಾಯದ ಆಡಳಿತ ಮತ್ತು ಗ್ರಹಿಕೆಯ ಇತರ ಸಣ್ಣ ವಿಷಯಗಳನ್ನು ಹೊಗಳಿ ಬರೆಯಲಾಗಿತ್ತು. ಈ ಕುರಿತು ಅನೇಕ ಟೀಕಾಕಾರರು ಪತ್ರಿಕೆಯ ಬರಹದಲ್ಲಿ ಚೀನೀ ಒಲವಿದೆ ಎಂದು ಆರೋಪಿಸಿದ್ದಾರೆ. ದಕ್ಷಿಣ ಏಷ್ಯಾದ ವಿಶ್ಲೇಷಣ ತಂಡದ ನಿರ್ದೇಶಕರಾದ ಬಿ. ರಾಮನ್ ಕೆಳಕಂಡಂತೆ ಬರೆದಿದ್ದಾರೆ: "ಚೀನಾದ ಮೇಲೆ ಅದರ ಕರುಣೆ ಹಾಗು ಇತ್ತೀಚಿನ ವರ್ಷಗಳಲ್ಲಿ ಚೀನಾದ ನಕಾರಾತ್ಮ ಗುಣಗಳ ಮೇಲೆ ಯಾವುದೇ ವರದಿ ಅಥವಾ ಲೇಖನವನ್ನು ಬರೆಯದಂತೆ ಅಂಕಣಗಳನ್ನು ತೆಗೆದಿರಿಸಿರುವ ಅದರ ನೀತಿಯು ಎಲ್ಲರಿಗೂ ತಿಳಿದಿದೆ" ಎಂದು ಆರೋಪಿಸಿದ್ದಾರೆ. ಅಲ್ಲದೇ " ಚೀನಾದ ಕ್ಸಿನ್ ಹುವಾ ವಾರ್ತಾ ಪ್ರತಿನಿಧಿಯ ಮಾರಾಟದಲ್ಲಿ ಪತ್ರಿಕೆಯ ಅಂಕಣಗಳನ್ನು ಪ್ರಕಟಿಸುವ ಇದರ ನೀತಿ" ಚೀನಾ ಸರ್ಕಾರದ ಪರವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.

ಭಾರತೀಯ ಮಾಧ್ಯಮದ ಕಾವಲು ಕಾಯುವ ತಂಡ ದಿ ಹೂಟ್, "ದಿ ಹಿಂದೂ ಪತ್ರಿಕೆಯ ಸುದ್ದಿ ಅಂಕಣಗಳಲ್ಲಿ ಹೆಚ್ಚಾಗಿ ಸಂಪಾದಕೀಯಗೊಳಿಸಲಾಗಿರುತ್ತದೆ" ಎಂದು ಆರೋಪಿಸಿದೆ.

ಇವನ್ನೂ ಗಮನಿಸಿ

  • ಹಿಂದೂ ಬಿಸ್ ನೆಸ್ ಲೈನ್

ಉಲ್ಲೇಖಗಳು

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ದಿ ಹಿಂದೂ ಇತಿಹಾಸದಿ ಹಿಂದೂ ನಿರ್ದೇಶಕರ ಭಾಗಶಃ ಪಟ್ಟಿದಿ ಹಿಂದೂ ವಿಮರ್ಶೆಗಳುದಿ ಹಿಂದೂ ಸಾಧನೆಗಳುದಿ ಹಿಂದೂ ಪೂರಕಗಳು ಮತ್ತು ಗುಣಲಕ್ಷಣಗಳುದಿ ಹಿಂದೂ ಆನ್ ಲೈನ್ ಉಪಸ್ಥಿತಿದಿ ಹಿಂದೂ ವಿವಾದದಿ ಹಿಂದೂ ಇವನ್ನೂ ಗಮನಿಸಿದಿ ಹಿಂದೂ ಉಲ್ಲೇಖಗಳುದಿ ಹಿಂದೂ ಉಲ್ಲೇಖಗಳುದಿ ಹಿಂದೂ ಬಾಹ್ಯ ಕೊಂಡಿಗಳುದಿ ಹಿಂದೂಆಂಗ್ಲಚೆನ್ನೈತಮಿಳುನಾಡುಭಾರತ

🔥 Trending searches on Wiki ಕನ್ನಡ:

ಮುದ್ದಣಕಂಪ್ಯೂಟರ್ಜ್ಯೋತಿಬಾ ಫುಲೆಗದ್ದಕಟ್ಟುಇನ್ಸ್ಟಾಗ್ರಾಮ್ಜಗನ್ಮೋಹನ್ ಅರಮನೆಆದಿವಾಸಿಗಳುದ್ರಾವಿಡ ಭಾಷೆಗಳುಭಾರತದ ರಾಷ್ಟ್ರೀಯ ಉದ್ಯಾನಗಳುಶ್ರೀ ಸಿದ್ಧಲಿಂಗೇಶ್ವರಆವಕಾಡೊಕನ್ನಡ ಕಾಗುಣಿತಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸಮುದ್ರಸರ್ಕಾರೇತರ ಸಂಸ್ಥೆಬ್ರಹ್ಮಚರ್ಯಪುನೀತ್ ರಾಜ್‍ಕುಮಾರ್ಕುರುಬತುಮಕೂರುಸಂಯುಕ್ತ ರಾಷ್ಟ್ರ ಸಂಸ್ಥೆಪುಸ್ತಕಹುಲಿಅಡೋಲ್ಫ್ ಹಿಟ್ಲರ್ಅಳಿಲುಸಮರ ಕಲೆಗಳುಪ್ರಕಾಶ್ ರೈಚದುರಂಗ (ಆಟ)ಒಗಟುಗಾಂಧಿ ಜಯಂತಿಮಣ್ಣುಭಾರತದ ವಿಜ್ಞಾನಿಗಳುಕಾಂಕ್ರೀಟ್ಪರಿಸರ ವ್ಯವಸ್ಥೆಪ್ರಾಥಮಿಕ ಶಿಕ್ಷಣಸಹಕಾರಿ ಸಂಘಗಳುನರೇಂದ್ರ ಮೋದಿಶಕುನಿಭಾರತದ ಮಾನವ ಹಕ್ಕುಗಳುಅದ್ವೈತಕರ್ನಾಟಕ ಸರ್ಕಾರಚೆನ್ನಕೇಶವ ದೇವಾಲಯ, ಬೇಲೂರುನದಿರಾಜಕೀಯ ವಿಜ್ಞಾನಪೆಟ್ರೋಮ್ಯಾಕ್ಸ್ (ಚಲನಚಿತ್ರ)ವಸ್ತುಸಂಗ್ರಹಾಲಯಅಲಂಕಾರಮಹಾವೀರಗ್ರಾಮ ಪಂಚಾಯತಿವೈದಿಕ ಯುಗಅಮೇರಿಕ ಸಂಯುಕ್ತ ಸಂಸ್ಥಾನಜೇನು ಹುಳುಅಜವಾನಭಾರತೀಯ ಸ್ಟೇಟ್ ಬ್ಯಾಂಕ್ದ್ವಿರುಕ್ತಿವಿನಾಯಕ ಕೃಷ್ಣ ಗೋಕಾಕಕುಟುಂಬಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕರ್ಣಾಟ ಭಾರತ ಕಥಾಮಂಜರಿಜಪಾನ್ಮನಮೋಹನ್ ಸಿಂಗ್ಸರ್ವಜ್ಞ೧೮೬೨ಗಾಳಿ/ವಾಯುಟೊಮೇಟೊಮುಟ್ಟುಆಟಗಾರ (ಚಲನಚಿತ್ರ)ಧೃತರಾಷ್ಟ್ರವಿವಾಹಎಳ್ಳೆಣ್ಣೆಎಕರೆಬಾದಾಮಿಶಿವಪ್ಪ ನಾಯಕಸಾಲುಮರದ ತಿಮ್ಮಕ್ಕದಯಾನಂದ ಸರಸ್ವತಿಮಾಸ್ತಿ ವೆಂಕಟೇಶ ಅಯ್ಯಂಗಾರ್🡆 More