ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ (ಬಿಎಚ್‌ಯು), ಹಿಂದಿ: काशी हिन्दु विश्वविद्यालय, ಒಂದು ಕೇಂದ್ರೀಯ ವಿಶ್ವವಿದ್ಯಾನಿಲಯ, ಇದು ಭಾರತದ ವಾರಣಾಸಿಯಲ್ಲಿದೆ, ತನ್ನ ಕ್ಯಾಂಪಸ್‌ನಲ್ಲಿ ಸುಮಾರು ೧೨,೦೦೦ ವಿದ್ಯಾರ್ಥಿಗಳನ್ನು ಹೊಂದುವುದರೊಂದಿಗೆ ಏಷಿಯಾದಲ್ಲಿಯೇ ಅತಿ ದೊಡ್ಡ ವಸತಿ ವಿಶ್ವವಿದ್ಯಾನಿಲಯವಾಗಿದೆ.

ಬಿಎಚ್‌ಯು ೧೯೧೬ರಲ್ಲಿ ಪಂಡಿತ್ ಮದನ್ ಮೋಹನ್ ಮಾಲವೀಯ ಯಾರಿಂದ ಮತ್ತು ಪಾರ್ಲಿಮೆಂಟರಿ ಶಾಸನದ, 'ಬಿ.ಎಚ್.ಎಸ್. ಆ‍ಯ್‌‍ಕ್ಟ್ ೧೯೧೫'ರ ಅಡಿಯಲ್ಲಿ ಸ್ಥಾಪಿತವಾಯಿತು .

Banaras Hindu University
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ
ಪ್ರಕಾರPublic
ಸ್ಥಾಪನೆ1916
ಕುಲಪತಿಗಳುಗಿರಿಧರ್ ಮಾಳವಿಯಾ
ಉಪ-ಕುಲಪತಿಗಳುರಾಕೇಶ್ ಭಟಣಗರ್
ಸ್ಥಳವಾರಣಾಸಿ, ಉತ್ತರ ಪ್ರದೇಶ, ಭಾರತ
ಆವರಣಸಾರ್ವಜನಿಕ
ಮಾನ್ಯತೆಗಳುವಿಶ್ವವಿದ್ಯಾಲಯ ಧನಸಹಾಯ ಆಯೋಗ
ಜಾಲತಾಣwww.bhu.ac.in

ಕಾಶಿ ನರೇಶನಿಂದ ದಾನವಾಗಿ ಪಡೆಯಲ್ಪಟ್ಟ ಸುಮಾರು ೧೩೫೦ ಎಕರೆ (೫.೫ km²) ಪ್ರದೇಶದಲ್ಲಿ ಕ್ಯಾಂಪಸ್ ಅನ್ನು ನಿರ್ಮಿಸಲಾಗಿದೆ.ಜೊತೆಯಲ್ಲಿ, ಮಿರ್ಜಾಪುರ್ ನಗರದ ಹತ್ತಿರದ ಬರ್ಕಾಚಾದಲ್ಲಿ ೨೭೬೦ ಎಕ್ರೆಗಳಷ್ಟು ದೊಡ್ಡ ಜಾಗದಲ್ಲಿ ರಾಜೀವ್ ಗಾಂಧಿ ದಕ್ಷಿಣ ಕ್ಯಾಂಪಸ್ ಹೊಂದಿದೆ, ಇದು ಮುಖ್ಯ ಕ್ಯಾಂಪಸ್‌ನಿಂದ ಸುಮಾರು ೮೦ ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ. ಇದು ೧೪೦ ಬೋಧಕ ವಿಭಾಗಗಳನ್ನು ಹಾಗೂ ೫೫ಕ್ಕೂ ಹೆಚ್ಚು ಯುವಕ ಹಾಗೂ ಯುವತಿಯರಿಗಾಗಿ ಹಾಸ್ಟೆಲ್‌ಗಳನ್ನು ಹೊಂದಿದೆ. ದೇಶ ವಿದೇಶಗಳ ಎಲ್ಲ ವಿದ್ಯಾರ್ಥಿಗಳನ್ನು ಸೇರಿ ವಿಶ್ವವಿದ್ಯಾನಿಲಯದ ಒಟ್ಟು ದಾಖಲಾತಿಯ ಸಂಖ್ಯೆ ಸುಮಾರು ೧೫೦೦೦ಕ್ಕಿಂತಲೂ ಹೆಚ್ಚಾಗಿದೆ. ಇಂಜಿನಿಯರಿಂಗ್ (ಐಟಿ-ಬಿಎಚ್‌ಯು), ವಿಜ್ಞಾನ, ಭಾಷಾಧ್ಯಯನ, ಪತ್ರಿಕೋದ್ಯಮ & ಸಮೂಹ ಸಂವಹನ, ಕಾನೂನೂ ಮತ್ತು ವೈದ್ಯಕೀಯ (ಐಎಮ್‌ಎಸ್-ಬಿಎಚ್‌ಯು), ವ್ಯವಸ್ಥಾಪನೆ ಅಧ್ಯಯನದ ಬೋಧಕವರ್ಗ, ಇವುಗಳು ಭಾರತದಲ್ಲೇ ಅತ್ಯುತ್ತಮ ಶ್ರೇಣಿಯಲ್ಲಿವೆ.,, ಇದರಲ್ಲಿ ಐಟಿ-ಬಿಎಚ್‍ಯು ಭಾರತದಲ್ಲಿ ೧೬ನೆಯ ಉತ್ತಮ ಐಐಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.. ಇವೆಲ್ಲವುಗಳ ಜೊತೆಯಲ್ಲಿ ಈ ವಿಶ್ವವಿದ್ಯಾನಿಲಯದ ಫ್ರೆಂಚ್ ಅಧ್ಯಯನ ವಿಭಾಗವು ಚಿರಪರಿಚಿತವಾಗಿದೆ, ಮತ್ತು ಭಾರತದುದ್ದಕ್ಕೂ ವಿದ್ಯಾರ್ಥಿಗಳನ್ನು ಅದರ ಡಿಪ್ಲೊಮಾ ಕೋರ್ಸುಗಳಿಂದ ಆಕರ್ಷಿಸುತ್ತಿದೆ. ಭಾರತದಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ನಂತರ ಬಿಎಚ್‌ಯು ಎರಡನೇ ಸ್ಥಾನಗಳಿಸಿದೆ.. ೨ನೆಯ ಜೂನ್ ೨೦೧೦ ರಂದು ಪ್ರಕಟವಾದ ಇಂಡಿಯಾ ಟುಡೇ ಮ್ಯಾಗಜೀನ್‌ನ ಪ್ರಕಾರ ಎಲ್ಲಾ ಮಾನದಂಡಗಳಿಂದ ದೇಶದ ಮೊದಲ ವಿಶ್ವವಿದ್ಯಾನಿಲಯವಾಗಿದೆ.

ಸಂಸ್ಥೆ

ದೊಡ್ಡ ವಿಶ್ವವಿದ್ಯಾನಿಲಯವಾಗಿ ಮತ್ತು ಅಭಿವೃದ್ಧಿಯ ವಿವಿಧ ಹಂತಗಳಡಿಯಲ್ಲಿ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯವು ಶೈಕ್ಷಣಿಕವಾಗಿ ಎರಡು ಮುಖ್ಯ ಉಪವಿಭಾಗಗಳನ್ನು ಹೊಂದಿದೆ, ಅವೆಂದರೆ (i) ಶೈಕ್ಷಣಿಕ ಸಂಸ್ಥೆ ಮತ್ತು (ii) ಬೋಧಕವರ್ಗ [೩] Archived 2009-04-17 ವೇಬ್ಯಾಕ್ ಮೆಷಿನ್ ನಲ್ಲಿ.. ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥನನ್ನು ಸಂಸ್ಥೆಯ ನಿರ್ದೇಶಕನೆನ್ನಲಾಗುತ್ತದೆ, ಅಲ್ಲದೆ ಬೋಧಕವರ್ಗದ ಮುಖ್ಯಸ್ಥನನ್ನು ಡೀನ್ ಎನ್ನಲಾಗುತ್ತದೆ. ವಿಶ್ವವಿದ್ಯಾನಿಲಯವು ಒಟ್ಟು ೪ ಸಂಸ್ಥೆಗಳ ನ್ನು ಹೊಂದಿದೆ, ಅವೆಂದರೆ.

  • ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಸೈನ್ಸಸ್ (ಐಎ‌ಎಸ್),
  • ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಐಎಮ್‌ಎಸ್-ಬಿಎಚ್‌ಯು)
  • ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಟಿ-ಬಿಎಚ್‌ಯು)
  • ಇನ್‌ಸ್ಟಿಟ್ಯೂಟ್ ಆಫ್ ಎನ್ವಿರಾನ್ಮೆಂಟ್ ಅಂಡ್ ಸಸ್ಟೇನಬಲ್ ಡೆವಲಪ್ಮೆಂಟ್
    ೧೫ ಬೋಧಕವರ್ಗಗಳು[೪] ಅವೆಂದರೆ
  • ಕಲಾ ವಿಭಾಗದ ಬೋಧಕವರ್ಗ
  • ವಾಣಿಜ್ಯ ವಿಭಾಗದ ಬೋಧಕವರ್ಗ
  • ಶಿಕ್ಷಣ ವಿಭಾಗದ ಬೋಧಕವರ್ಗ
  • ಕಾನೂನು ವಿಭಾಗದ ಬೋಧಕವರ್ಗ
  • ವ್ಯವಸ್ಥಾಪನೆ ಅಧ್ಯಯನದ ಬೋಧಕವರ್ಗ
  • ಅಭಿನಯ ಕಲಾ ವಿಭಾಗದ ಬೋಧಕವರ್ಗ
  • ವಿಜ್ಞಾನ ವಿಭಾಗದ ಬೋಧಕವರ್ಗ
  • ಇಂಜಿನಿಯರಿಂಗ್ ವಿಭಾಗದ ಬೋಧಕವರ್ಗ
  • ಕೃಷಿ ವಿಭಾಗದ ಬೋಧಕವರ್ಗ
  • ಔಷಧ ವಿಭಾಗದ ಬೋಧಕವರ್ಗ
  • ಆಯುರ್ವೇದ ವಿಭಾಗದ ಬೋಧಕವರ್ಗ
  • ದಂತ ವಿಜ್ಞಾನ ವಿಭಾಗದ ಬೋಧಕವರ್ಗ
  • ಸಮಾಜ ವಿಜ್ಞಾನ ವಿಭಾಗದ ಬೋಧಕವರ್ಗ
  • ಸಂಸ್ಕೃತ ವಿದ್ಯಾ ಧರ್ಮ ವಿಜ್ಞಾನ ಸಂಕಯ
  • ದೃಶ್ಯ ಕಲೆ ವಿಭಾಗದ

ಮಹಿಳಾ ಕಾಲೇಜು (ಮಹಿಳಾ ಮಹಾವಿದ್ಯಾಲಯ) ಮತ್ತು ಅದರ ೪ ಕಾಲೇಜುಗಳು

  • ಡಿ.ಎ.ವಿ. ಕಾಲೇಜು
  • ಆರ್ಯ ಮಹಿಳಾ ಕಾಲೇಜು
  • ಬಸಂತ ಕಾನ್ಯ ಮಹಾವಿದ್ಯಾಲಯ
  • ವಸಂತ ಕಾಲೇಜು, ರಾಜ್‌ಘಾಟ್
    ೪ ಆಧುನಿಕ ಸಂಶೋಧನಾ ಕೇಂದ್ರಗಳು ಮತ್ತು ೪ ಅಂತರ ಶಿಕ್ಷಣ ಶಾಖೀಯ ಶಾಲೆಗಳು
  • ಡಿಬಿಟಿ-ಬಿಎಚ್‌ಯು ಇಂಟರ್‌‌ಡಿಸಿಪ್ಲಿನರಿ ಸ್ಕೂಲ್ ಆಫ್ ಲೈಫ್ ಸೈನ್ಸಸ್ ಅಡ್ವಾನ್ಸ್ ರೀಸರ್ಚ್ ಅಂಡ್ ಎಜುಕೇಶನ್ (ಡಿಬಿಟಿ-ಬಿಎಚ್‌ಯು-ಐಎಸ್‌ಎಲ್‌ಎಆರ್‌ಇ)[೫],
  • ಡಿಎಸ್‌ಟಿ ಸೆಂಟರ್ ಫಾರ್ ಇಂಟರ್‌ಡಿಸಿಪ್ಲಿನರಿ ಮ್ಯಾಥಮ್ಯಾಟಿಕಲ್ ಸೈನ್ಸಸ್,
  • ಡಿಬಿಟಿ ಸೆಂಟರ್ ಆಫ್ ಜೆನೆಟಿಕ್ ಡಿಸಾರ್ಡರ್ಸ್,
  • ಡಿಬಿಟಿ ಸೆಂಟರ್ ಫಾರ್ ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿ
  • ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಸೈನ್ಸ್ ಅಂಡ್ ಟೆಕ್ನಾಲಜಿ
  • ನ್ಯಾನೊಸೈನ್ಸ್ ಅಂಡ್ ಟೆಕ್ನಾಲಜಿ ಸೆಂಟರ್
  • ಹೈಡ್ರೋಜನ್ ಎನರ್ಜಿ ಸೆಂಟರ್
  • ಯುಜಿಸಿ ಅಡ್ವಾನ್ಸ್ಡ್ ಇಮ್ಯುನೊ‌ಡಯಗ್ನೋಸ್ಟಿಕ್ ಟ್ರೈನಿಂಗ್ ಅಂಡ್ ರೀಸರ್ಚ್ ಸೆಂಟರ್
  • ಸೆಂಟರ್ ಫಾರ್ ಎಕ್ಸ್‌ಪೆರಿಮೆಂಟಲ್ ಮೆಡಿಸಿನ್ ಅಂಡ್ ಸರ್ಜರಿ
  • ಸೆಂಟರ್ ಫಾರ್ ವುಮೆನ್ಸ್ ಸ್ಟಡೀಸ್ ಅಂಡ್ ಡೆವೆಲಪ್‌ಮೆಂಟ್ (ಸಿಡಬ್ಲುಎಸ್‌ಡಿ)
  • ಸೆಂಟರ್ ಫಾರ್ ದಿ ಸ್ಟಡಿ ಆಫ್ ನೇಪಾಲ್ (ಸಿಎನ್‌ಎಸ್)
  • ಮಾಲ್ವಿಯಾ ಸೆಂಟರ್ ಫಾರ್ ಪೀಸ್ ರೀಸರ್ಚ್ (ಎಮ್‌ಸಿ‌ಪಿಆರ್)
  • ಸೆಂಟರ್ ಫಾರ್ ರೂರಲ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್
  • ಸೆಂಟರ್ ಫಾರ್ ಸ್ಟಡಿ ಆಫ್ ಸೋಶಿಯಲ್ ಎಕ್ಸ್‌ಕ್ಲೂಶನ್ ಅಂಡ್ ಇನ್‌ಕ್ಲೂಸಿವ್ ಪಾಲಿಸಿ (ಸಿಎಸ್‌ಎಸ್‌ಇಐಪಿ)

ಡಿಬಿಟಿ, ಡಿಎಸ್‌ಟಿ,ಐಸಿಎ‌ಆರ್ ಮತ್ತು ಇಸ್ರೋದಿಂದ ಹಣಕಾಸು ನೆರವು ಪಡೆದ ವಿಶೇಷ ಕೇಂದ್ರಗಳಲ್ಲದೆ, ವಿಜ್ಞಾನ, ಇಂಜಿನಿರಿಯಂಗ್, ತಂತ್ರಜ್ಞಾನ ಮತ್ತು ಸಮಾಜ ವಿಜ್ಞಾನದ ಹಲವು ವಿಭಾಗಗಳು ಡಿಎಸ್‌ಟಿ-ಎಫ್‌ಐಎಸ್‌ಟಿ ದಿಂದ ( ಒಟ್ಟು ೨೨ ವಿಭಾಗಗಳು/ಶಾಲೆಗಳು), ಮತ್ತು ಯುಜಿಸಿ ಸಿಎ‌ಎಸ್/ಎಸ್‌ಎ‌ಪಿ/ಡಿಆರ್‌ಎಸ್ (೧೪ ಡಿಪಾರ್ಟ್ಮೆಂಟ್ಸ್/ಶಾಲೆಗಳು) ನೆರವು ಪಡೆಯುತ್ತವೆ.[೬]

ಪ್ರವೇಶಾತಿ

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯವು ಸಾಮಾನ್ಯವಾಗಿ ಪದವಿಪೂರ್ವ (ಯುಇಟಿ) ಹಾಗೂ ಪದವಿನಂತರದ (ಪಿಇಟಿ) ತನ್ನ ವಿವಿಧ ಕೋರ್ಸುಗಳಿಗೆ ಮೇ-ಜೂನ್‌ ತಿಂಗಳಿನಲ್ಲಿ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ. ಲಭ್ಯವಿರುವ ಸ್ಥಾನಗಳನ್ನು ಭರ್ತಿಮಾಡಿಕೊಳ್ಳಲು ಅರ್ಹತೆಯ ಆಧಾರದ ಮೇಲೆ ಹಾಗೂ ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ಬಿ.ಟೆಕ್./ಬಿ.ಫಾರ್ಮ., ಎಮ್.ಟೆಕ್./ಎಮ್.ಫಾರ್ಮ.ಗಳ ಪ್ರವೇಶಾತಿಗೆ ಕ್ರಮವಾಗಿ ಜೆಇಇ ಮತ್ತು ಜಿಎ‌ಟಿಇ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಐಐಎಮ್-ಕ್ಯಾಟ್ ಅಂಕಗಳ ಆಧಾರದ ಮೇಲೆ ಎಮ್‌ಬಿಎ ಮತ್ತು ಎಮ್‌ಐಬಿಎ ಪ್ರವೇಶಾತಿ ನಡೆಯುತ್ತದೆ. ಪಿಎಚ್‌ಡಿ ಪ್ರವೇಶಾತಿಯು ವಿದ್ಯಾರ್ಥಿಗಳ ಎನ್‌ಇಟಿಯಲ್ಲಿನ ಅರ್ಹತೆಯನ್ನು ಸಿಆರ್‌ಇಟಿ (ಕಾಮನ್ ರೀಸರ್ಚ್ ಎಂಟ್ರೆನ್ಸ್ ಟೆಸ್ಟ್) ಪರೀಕ್ಷೆಯ ಮೂಲಕ ನಿರ್ಧರಿಸಿ ನೀಡಲಾಗುತ್ತದೆ. ಐ‌ಎಮ್‌ಎಸ್ ಪ್ರವೇಶಾತಿಯನ್ನು ಪಿಎಮ್‌ಟಿ ಪರೀಕ್ಷೆಯ ಮೂಲಕ ನಡೆಸಲಾಗುತ್ತದೆ. ಭಾರತೀಯ ವಿದ್ಯಾರ್ಥಿಗಳ ಜೊತೆಯಲ್ಲಿ, ಬಿಎಚ್‌ಯು ಹಲವಾರು ವಿದೇಶಿ ವಿದ್ಯಾರ್ಥಿಗಳನ್ನು ಸಹ ಆಕರ್ಷಿಸುತ್ತದೆ. ವಿದೇಶಿ ವಿದ್ಯಾರ್ಥಿಗಳನ್ನು ಆಯಾಯಾ ದೇಶದ ಭಾರತೀಯ ನಿಯೋಗದಲ್ಲಿ ಅಥವಾ ಭಾರತದಲ್ಲಿರುವ ಅವರ ದೇಶದ ನಿಯೋಗದಲ್ಲಿ ಸಲ್ಲಿಸಿದ ಅರ್ಜಿಗಳ ಆಧಾರದ ಮೇಲೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತದೆ. ಮಿನಿಸ್ಟ್ರಿ ಆಫ್ ಹ್ಯೂಮನ್ ರೀಸೋರ್ಸ್ ಡೆವೆಲಪ್ಮೆಂಟ್ ಇಂಡಿಯಾ ಅಥವಾ ಮಿನಿಸ್ಟ್ರಿ ಆಫ್ ಎಕ್ಸ್‌ಟರ್ನಲ್ ರೀಸೋರ್ಸ್ ಡೆವಲಪ್ಮೆಂಟ್ ಇಂಡಿಯಾದ ವಿವಿಧ ವಿದ್ಯಾರ್ಥಿವೇತನದ ಯೋಜನೆಯಡಿ ಆಯ್ಕೆಯಾದ ವಿದೇಶಿ ವಿದ್ಯಾರ್ಥಿಗಳು ಆಯಾ ಆಯೋಗಗಳ ಶಿಫಾರಸಿನ ಆಧಾರದ ಮೇರೆಗೆ ಪ್ರವೇಶಾತಿ ಪಡೆಯುತ್ತಾರೆ. ಶಿಕ್ಷಣಕ್ಕಾಗಿ ಅವರೇ ಹಣ ವಿನಿಯೋಗಿಸುವುದಾದಲ್ಲಿ ಅವರ ಅರ್ಜಿಗಳನ್ನು ಮಿನಿಸ್ಟ್ರಿ ಆಫ್ ಎಕ್ಸ್‌ಟರ್ನಲ್ ಅಫೇರ್ಸ್ ಅವರಿಂದ ಸ್ಪಷ್ಟಪಡಿಸಲ್ಪಟ್ಟ ನಂತರ ಮಿನಿಸ್ಟ್ರಿ ಆಫ್ ಹ್ಯೂಮನ್ ರೀಸೋರ್ಸ್ ಡೆವೆಲಪ್ಮೆಂಟ್‌ನಿಂದ 'ನೊ ಅಬ್ಜೆಕ್ಷನ್' ಪ್ರಮಾಣಪತ್ರವನ್ನು ಸ್ವೀಕರಿಸಿ ನಂತರ ಪ್ರವೇಶಾತಿ ನೀಡುತ್ತಾರೆ [೭].

ಧ್ಯೇಯಗಳು

(i) ಹಿಂದೂ ಶಾಸ್ತ್ರಗಳು ಹಾಗೂ ಸಂಸ್ಕೃತ ಸಾಹಿತ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಹಿಂದೂ ಧರ್ಮವನ್ನು ಜನಪ್ರಿಯಗೊಳಿಸಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತದ ಪುರಾತನ ನಾಗರೀಕತೆಯನ್ನು ಕೂಡಾ ತಿಳಿಸಿಕೊಡುವಲ್ಲಿ ಕೆಲಸ ಮಾಡುತ್ತಿದೆ;

(ii) ಕಲೆ ಮತ್ತು ವಿಜ್ಞಾನದ ಎಲ್ಲಾ ವಿಭಾಗಗಳಲ್ಲಿನ ಕಲಿಕೆ ಹಾಗೂ ಸಂಶೋಧನೆಯನ್ನು ಉತ್ತೇಜಿಸುತ್ತದೆ.

(iii) ದೇಶದ ಸಂಪನ್ಮೂಲಗಳನ್ನಾಧರಿಸಿ ವೈಜ್ಞಾನಿಕ, ತಂತ್ರಜ್ಞಾನ ಮತ್ತು ವೃತ್ತಿಪರ ಜ್ಞಾನವನ್ನು ಪ್ರಸಾರಮಾಡಲು ಮತ್ತು ಅವಶ್ಯಕವಿರುವ ಪ್ರಾಯೋಗಿಕ ತರಬೇತಿಗಳನ್ನು ನೀಡಲಾಗುತ್ತದೆ; ಮತ್ತು

(iv) ಧರ್ಮ ಮತ್ತು ನೀತಿಶಾಸ್ತ್ರಗಳಾನ್ನು ಶಿಕ್ಷಣದ ಒಂದು ಭಾಗವಾಗಿ ಯುವಜನರಿಗೆ ಕಲಿಸುವ ನಿಟ್ಟಿನಲ್ಲಿ ಸಹ ವಿಶ್ವವಿದ್ಯಾನಿಲಯ ಕಾರ್ಯ ನಿರ್ವಹಿಸುತ್ತದೆ.

ಇತಿಹಾಸ

ಬಿಎಚ್‌ಯುದ ಸ್ಥಾಪನೆ

ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಮುಖ್ಯವಾಗಿ ಕಾರಣರಾದವರು ಪಂಡಿತ್ ಮದನ್ ಮೋಹನ್ ಮಾಲ್ವಿಯಾ. ೧೮೬೧ರಲ್ಲಿ ಅಲಹಬಾದ್‌ನ ಪ್ರಯಾಗ್‌ನಲ್ಲಿ ಒಂದು ಕಡು ಸಂಪ್ರದಾಯವಾದಿ ಹಿಂದೂ ಕುಟುಂಬದಲ್ಲಿ ಜನಿಸಿದರು, ಮದನ್ ಮೋಹನ್ ಮಾಲವಿಯಾ ಅವರನ್ನು ಭಾರತದ ಗೌರವಾನ್ವಿತ ಪುತ್ರ ಎಂದೇ ಗುರುತಿಸಲಾಗುತ್ತದೆ.

ಅವರ ಬಹು ನೋಟದ ವ್ಯಕ್ತಿತ್ವವು ಅವರನ್ನು ಏಕಕಾಲದಲ್ಲಿ, ಒಬ್ಬ ಪ್ರಖ್ಯಾತ ದೆಶಭಕ್ತ, ಒಬ್ಬ ದೂರದೃಷ್ಟಿಯ ಶಿಕ್ಷಣ ತಜ್ಞ, ಸಾಮಾಜಿಕ ಸುಧಾರಣೆಗಾರ, ಒಬ್ಬ ಉತ್ಸಾಹಿತ ಪತ್ರಕರ್ತ, ಅಸಂತುಷ್ಟ ಆದರೆ ಪ್ರಯೋಜನೀಯ ವಕೀಲ, ಸಫಲ ಸಂಸತ್ತಿನ ಸದಸ್ಯ ಮತ್ತು ಪ್ರಮುಖ ರಾಜಕಾರ್ಯ ನಿಪುಣನನ್ನಾಗಿ ಮಾಡಿದೆ. ಮಾಲವಿಯಾಜಿರ ಬಹುತೇಕ ಸಾಧನೆಗಳಲ್ಲಿ, ಅತ್ಯಂತ ಸ್ಮರಣೀಯವಾದುದೆಂದರೆ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಅಥವಾ ಕಾಶಿ ಹಿಂದೂ ವಿಶ್ವವಿದ್ಯಾನಿಲಯ. ಅವರ ಜೀವಮಾನದ ಸಮಯದಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯವನ್ನು ಭಾರದಾದ್ಯಂತ ಮತ್ತು ಪ್ರಪಂಚದಾದ್ಯಂತ ಜ್ಞಾನ ಅಂಗೀಕರಣೆಯ ರಾಜದಾನಿ ಎಂದು ಗುರುತಿಸಲಾಯಿತು.

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ 
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಮುಖ್ಯದ್ವಾರದ ಎದುರು ಇರುವ ಪಂಡಿತ್ ಮದನ್ ಮೋಹನ್ ಮಾಲವಿಯಾ ಪ್ರತಿಮೆ

ಪಂಡಿತ್ ಮದನ್ ಮೋಹನ್ ಮಾಲವಿಯ ಈ ಶಿಕ್ಷಣಸಂಸ್ಥೆಯೊಂದಿಗೆ ಭಾರತೀಯ ಶೈಕ್ಷಣಿಕ ಕ್ಷೇತ್ರದಲ್ಲಿ ಇತಿಹಾಸವನ್ನು ರಚಿಸಿದರು - ಈ ಮಾದರಿಯದರಲ್ಲಿ ಇದು ದೇಶದಲ್ಲೇ ಮೊದಲನೆಯದು. ಅವರು ಬನಾರಸ್‌ನ್ನೇ ಇದರ ಸ್ಥಾನವನ್ನಾಗಿ ಆರಿಸಿಕೊಳ್ಳಲು ಕಾರಣ ಶತಮಾನಗಳ ಕಾಲದ ಹಳೆಯ ಸಾಂಪ್ರದಾಯಿಕ ಪಾಂಡಿತ್ಯ, ವಿಜ್ಞಾನ ಮತ್ತು ಅಧ್ಯಾತ್ಮಿಕಗಳು ಸಹಜವಾಗಿಯೆ ಆ ಸ್ಥಳದಲ್ಲಿರುವುದು. ಪ್ರಾಚೀನ ಕಲಿಕೆಯ ಕೇಂದ್ರಗಳಾದ - ತಕ್ಷಶಿಲ ಮತ್ತು ನಲಂದ ಮತ್ತು ಇತರ ಪ್ರತಿಷ್ಟಿತ ಶಿಕ್ಷಣಸಂಸ್ಥೆಗಳಿಂದ, ಪಶ್ಚಿಮದ ಆಧುನಿಕ ವಿಶ್ವವಿದ್ಯಾನಿಲಯಗಳ ಉತ್ತಮ ಸಾಂಪ್ರದಾಯದೊಂದಿಗೆ, ಉತ್ತಮ ಭಾರತೀಯ ಶಿಕ್ಷಣವನ್ನು ಸಂಯೋಜಿಸುವುದು ಅವರ ಧ್ಯೇಯವಾಗಿತ್ತು.

ಭಾರತದಲ್ಲಿ ರಾಷ್ಟ್ರೀಯ ಚೈತನ್ಯವನ್ನು ಪ್ರೇರೇಪಿಸಲು ಮತ್ತು ಶಿಕ್ಷಣದ ಶಕ್ತಿಯಿಂದ ಮತ್ತು ಪ್ರಾಮಾಣಿಕತೆಯಿಂದ ಸ್ವಾತಂತ್ರ್ಯವನ್ನು ಜಯಿಸಲು, ಅನಿಬೆಸೆಂಟ್, ಮಹಾತ್ಮ ಗಾಂಧಿ, ಶ್ಯಾಮ್ ಚರಣ್ ಡೇರಂತಹ ಪ್ರಸಿದ್ಧ ಆಶಯವಾದಿಗಳು ಮತ್ತು ಉತ್ತಮ ವ್ಯಕ್ತಿತ್ವ ಉಳ್ಳವರು ಮತ್ತು ಅನೇಕ ಇತರರು ಅವರ ಜ್ಞಾನದ ಅನ್ವೇಷಣೆಯಲ್ಲಿ ಅವರೊಂದಿಗೆ ಕೈಜೋಡಿಸಿದರು. ೧೯೪೬ರಲ್ಲಿ ಮಾಲವಿಯ ಮರಣಹೊಂದಿದರು. ಆದರೆ ಅವರ ಚೈತನ್ಯವು ಇಂದಿಗೂ ಜೀವಂತವಾಗಿದೆ ಮತ್ತು ಅವರು ತೋರಿದ ದಾರಿಧೀಪವನ್ನು ಮುಂದುವರೆಸಿಕೊಂಡು ಹೋಗಲು ಅನೇಕರಿದ್ದಾರೆ, ಹಾಗು ಅವರ ಜವಾಬ್ದಾರಿಗಳನ್ನು ನೆರವೇರಿಸಿಕೊಂಡು ಹೋಗಲು ತಮ್ಮ ಹೆಗಲುಕೊಡಲು ಅನೇಕರು ತಯಾರಾಗಿ ನಿಂತಿದ್ದಾರೆ. ಹಿಂದೂ ವಿಸ್ವವಿದ್ಯಾನಿಲಯದ ಕಲ್ಪನೆಯನ್ನು ೧೯೦೪ರಲ್ಲಿ ವಾರಣಾಸಿಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಪಂಡಿತ್ ಮದನ್ ಮೋಹನ್ ಮಾಲವಿಯ ಅವರ ವಕೀಲತ್ವದ ಅಭ್ಯಾಸವನ್ನು ವಕೀಲರ ಸಂಘದಲ್ಲಿ ಬಿಟ್ಟುಬಿಟ್ಟರು ಮತ್ತು ಅವರ ಜೀವನ ಧ್ಯೇಯವನ್ನು ಜನವರಿ, ೧೯೧೧ರಲ್ಲಿ ಆರಂಭಿಸಿದರು. ಸುಮಾರು ಅದೇ ಸಮಯದಲ್ಲಿ, ಅನಿಬೆಸೆಂಟ್ ವಾರಣಾಸಿಯಲ್ಲಿ "ದಿ ಯುನಿವರ್ಸಿಟಿ ಆಫ್ ಇಂಡಿಯ" ಎಂಬ ಹೆಸರಿನ ಮತ್ತೊಂದು ವಿಶ್ವವಿದ್ಯಾನಿಲಯವನ್ನು ಸಂಸ್ಥಾಪಿಸುವ ಇನ್ನೊಂದು ಪ್ರಸ್ತಾಪನೆಯನ್ನು ಸಹ ಮಾಡಿದ್ದರು. ೧೯೦೭ರಲ್ಲಿ, ಆಕೆಯು ವಿಶ್ವವಿದ್ಯಾನಿಲಯದ ಸಂಸ್ಥಾಪನೆಗೆ ಶಾಸನಾಧಿಕಾರದ ಅಂಗೀಕಾರಕ್ಕೆ ನಿವೇದನ ಪತ್ರವನ್ನು ವಿಜ್ಞಾಪಿಸಿದರು. ಏಪ್ರಿಲ್ ೧೯೧೧ರಲ್ಲಿ, ಅನಿಬೆಸೆಂಟ್ ಮತ್ತು ಪಂಡಿತ್ ಮದನ್ ಮೋಹನ್ ಮಾಲವಿಯ ಬೆಟ್ಟಿಯಾದರು ಮತ್ತು ಅವರು ತಮ್ಮ ಶಕ್ತಿಯನ್ನು ಸಂಯೋಜಿಸಿ, ಒಟ್ಟಾಗಿ ವಾರಣಾಸಿಯಲ್ಲಿನ ಎಲ್ಲರಿಗೂ ಸಮನಾದ ಹಿಂದೂ ವಿಶ್ವವಿದ್ಯಾನಿಲಯಕ್ಕಾಗಿ ಕಾರ್ಯನಿರ್ವಹಿಸುವುದಾಗಿ ತೀರ್ಮಾನಿಸಿದರು. "ಹಿಂದೂ ವಿಶ್ವವಿದ್ಯಾನಿಲಯದ ಸಂಸ್ಥೆ" ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಲಾಯಿತು ಮತ್ತು ದರ್ಬಾಂಗದ ಮಹಾರಾಜ ಸರ್ ರಾಮೇಶ್ವರ್ ಸಿಂಗ್‌ ಬಹದೂರ್‌ರನ್ನು ಇದರ ಅಧ್ಯಕ್ಷರಾಗಿ ಮತ್ತು ಅಲಹಾಬಾದ್‌ನ ಉಶ್ಚ ನ್ಯಾಯಾಲಯದ ನ್ಯಾಯಮೂರ್ತಿ, ಸರ್ ಸುಂದರ್ ಲಾಲ್‌ರನ್ನು ಇದರ ಕಾರ್ಯದರ್ಶಿಯನ್ನಾಗಿ ನೇಮಿಸುವುದರೊಂದಿಗೆ, ಡಿಸೆಂಬರ್, ೧೯೧೧ರಲ್ಲಿ ದಾಖಲಿಸಲಾಯಿತು. ೧ ಜನವರಿ ೧೯೧೨ರಂದು, ಅಲಹಾಬಾದ್‌‍ನಲ್ಲಿ ಇದರ ಕಛೇರಿಯನ್ನು ಆರಂಭಿಸಲಾಯಿತು. ಬಳಿಕ ಭಾರತದ ಬ್ರಿಟಿಷ್ ಸರಕಾರವು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮೊದಲು ಕಡ್ಡಾಯವಾಗಿ ಐವತ್ತು ಲಕ್ಷದ ಮೊತ್ತವನ್ನು ಸಂಗ್ರಹಿಸುವಂತೆ ಆಜ್ಞಾಪಿಸಿತು. ೧೯೧೫ನೆಯ ವರ್ಷದ ಆರಂಭದಿಂದಲೇ, ಈ ಗುರಿಯನ್ನು ಪಂಡಿತ್ ಮದನ್ ಮೋಹನ್ ಮಾಲ್ವಿಯರ ಮಹತ್ವದ ಸಮರ್ಪಣೆ ಮತ್ತು ಪ್ರಯತ್ನಗಳಿಂದ ಸಾಧಿಸಲಾಯಿತು. ಅಂದಿನ ಭಾರತೀಯ ವಿಶ್ವವಿದ್ಯಾನಿಲಯಗಳ ನಿಯಮಗಳ ಪ್ರಕಾರ ಭಾರತೀಯ ಸರಕಾರದಿಂದ ಮೊದಲೇ ವಿದಿಸಿದ ಮತೊಂದು ಷರತ್ತೆಂದರೆ, ಸೆಂಟ್ರಲ್ ಹಿಂದೂ ಕಾಲೇಜ್ ವಿಶ್ವವಿದ್ಯಾನಿಲಯಗಳ ಅಂಗವಾಗಿರಬೇಕು. ಅನಿಬೆಸೆಂಟ್, ಡಾ. ಭಗವಾನ್ ದಾಸ್ ಮತ್ತು ಸೆಂಟ್ರಲ್ ಹಿಂದೂ ಕಾಲೇಜಿನ ಅವರ ಸಂಗಡಿಗ ಧರ್ಮದರ್ಶಿಗಳು, ಸಂಸ್ಥೆಯನ್ನು ಪ್ರಸ್ತಾಪಿಸಿದ ವಿಶ್ವವಿದ್ಯಾನಿಲಯದ ಕೇಂದ್ರಿಕೆಯನ್ನಾಗಿ ಮಾಡಲು ಹಸ್ತಾಂತರಿಸುವುದಕ್ಕೆ ಸಮ್ಮತಿಸಿದರು. ಸೆಂಟ್ರಲ್ ಹಿಂದೂ ಕಾಲೇಜ್‌ನ ಅಧಿಕಾರವನ್ನು ೨೭ ನವೆಂಬರ್ ೧೯೧೫ರಂದು ಹಿಂದೂ ವಿಶ್ವವಿದ್ಯಾನಿಲಯದ ಸಂಸ್ಥೆಗೆ ಹಸ್ತಾಂತರಿಸಲಾಯಿತು.

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಿಧೇಯಕವನ್ನು ಮಾರ್ಚ್, ೧೯೧೫ರಲ್ಲಿ, ಸಾಮ್ರಾಜ್ಯದ ವಿಧಾನಪರಿಷತ್ತಿನಲ್ಲಿ ಸರ್ ಹಾರ್‌ಕೋರ್ಟ್ ಬಟ್ಲರ್‌ರವರಿಂದ ಪರಿಚಯಿಸಲಾಯಿತು. ವಿಧೇಯಕವು ಸಮಿತಿಯ ಆಯ್ಕೆಯನ್ನು ಪ್ರಸ್ತಾಪಿಸುತ್ತಿತ್ತು ಮತ್ತು ಇದನ್ನು ಸಾಮ್ರಾಜ್ಯದ ವಿಧಾನಪರಿಷತ್ತಿನ ಮೊದಲಿನ ಅಂತಿಮ ಪರಿಶೀಲನೆಗಾಗಿ ಆಯ್ದ ಸಮಿತಿಯ ವರದಿಯೊಂದಿಗೆ ಜೊತೆಗೂಡಿಸಲಾಗಿತ್ತು. ೧ ಅಕ್ಟೋಬರ್ ೧೯೧೫ರಂದು ಪರಿಷತ್ತು ಬಿಲ್ಲನ್ನು ಅಂಗೀಕರಿಸಿತು ಮತ್ತು ಅದೇದಿನ ಇದು ಪ್ರಧಾನ-ರಾಜ್ಯಪಾಲರ ಮತ್ತು ಭಾರತದ ವೈಸ್ರಾಯಿರ ಸಮ್ಮತಿಯನ್ನು ಪಡೆಯಿತು, ಇದರಿಂದ ಇದನ್ನು ಕಾಯಿದೆಯಾಗಿ ಮಾಡಲಾಯಿತು. ೪ ಪೆಬ್ರವರಿ ೧೯೧೬ರಂದು ಅಂದಿನ ಪ್ರಧಾನ-ರಾಜ್ಯಪಾಲ ಲಾರ್ಡ್ ಹಾರ್ಡಿಂಗೆ ಮತ್ತು ವೈಸ್ರಾಯ್‌ರವರು ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಅಡಿಗಲ್ಲನ್ನು ಇಟ್ಟರು. ವಿಧ್ವವಿದ್ಯಾನಿಲಯದ ವಿಸ್ತರಿಸಿದ ಉಪನ್ಯಾಸಗಳು ಎಂದು ಗುರುತಿಸಿಕೊಂಡ ಬಹು ಸಂಖ್ಯೆಯ ಉಪನ್ಯಾಸಗಳನ್ನು ೫ನೆಯ, ೬ನೆಯ, ೭ನೆಯ ಮತ್ತು ೮ನೇ ಪೆಬ್ರವರಿ ೧೯೧೬ರಂದು, ವಿಶೇಷ ಪ್ರವೀಣರಾದ ಸರ್ ಜೆ.ಸಿ. ಬೋಸ್, ಡಾ. ಪಿಸಿ. ರಾಯ್, ಡಾ. ಹಲೋರ್ಡ್ ಮನ್, ಉಪನ್ಯಾಸಕರು. ಸ್ಯಾಮ್ ಹಿಗ್ಗಿನ್‌ಬೊಟ್ಟೊಮ್, ಶ್ರೀಮತಿ. ಅನಿಬೆಸೆಂಟ್, ಫ್ರೊಫೆಸರ್. ಸಿ. ವಿ. ರಾಮನ್ ಮತ್ತು ಇತರರಿಂದ ಮಾಡಲಾಯಿತು. ದಕ್ಷಿಣ ಆಫ್ರಿಕಾದಿಂದ ಆಗತಾನೆ ಭಾರತಕ್ಕೆ ಮರಳಿದ ಮಹಾತ್ಮ ಗಾಂಧಿಯವರು ವಿಶ್ವವಿದ್ಯಾನಿಲಯದ ಅಡಿಗಲ್ಲು ಹಾಕುವ ಸಮಾರಂಭದಲ್ಲಿ ಭಾಗವಹಿಸಲು ಬನಾರಸ್‌ಗೆ ಬಂದು ಪೆಬ್ರವರಿ ೬ರಂದು ಭಾರತದಲ್ಲಿ ತಮ್ಮ ಮೊದಲ ಸಾರ್ವಜನಿಕ ಭಾಷಣವನ್ನು ಮಾಡಿದರು. ಮುಕ್ತಾಯದ ಸಮಾರಂಭಗಳು ೮ ಪೆಬ್ರವರಿ ೧೯೧೬ರಂದು, ವಸಂತ ಪಂಚಮಿಯ ದಿನದಂದು ನಡೆದವು. ೨೫ ಮಾರ್ಚ್ ೧೯೧೬ರಂದು ಗಜೆಟ್ಟು (ಸರಕಾರದಿಂದ ಪ್ರಕಟಿಸುವ ಪತ್ರಿಕೆ)ಯಲ್ಲಿ ಪ್ರಕಟಿಸಿದ ಪ್ರಕಟಣೆಯಿಂದ, ೧ ಏಪ್ರಿಲ್ ೧೯೧೬ರಿಂದ ೧೯೧೫ರ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಕಾಯಿದೆಯನ್ನು ಕಡ್ಡಾಯಗೊಳಿಸಲಾಯಿತು. ಡಾ. ಸರ್ ಸುಂದರ್ ಲಾಲ್‌ರನ್ನು ವಿಶ್ವವಿದ್ಯಾನಿಲಯದ ಮೊದಲ ಉಪ-ಕುಲಪತಿಯನ್ನಾಗಿ ನೇಮಿಸಲಾಯಿತು.

ವಾರಣಾಸಿಯ, ಕಮಾಚ್ಚದಲ್ಲಿ ಸೆಂಟ್ರಲ್ ಹಿಂದೂ ಕಾಲೇಜ್‌ ಅನ್ನು ಮೊದಲ ಸಹ ಕಾಲೇಜಾಗಿ ಹೊಂದುವುದರೊಂದಿಗೆ, ವಿಶ್ವವಿದ್ಯಾನಿಲಯವು ೧ ಅಕ್ಟೋಬರ್ ೧೯೧೭ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಜುಲೈ, ೧೯೧೮ರಲ್ಲಿ ಓರಿಯಂಟಲ್ ಲರ್ನಿಂಗ್ ಆಂಡ್ ಟೆಕ್ನಾಲಜಿ ಕಾಲೇಜನ್ನು ಮತ್ತು ಆಗಸ್ಟ್ ೧೯೧೮ರಲ್ಲಿ ಬೋಧಕರ ತರಬೇತಿ ಕಾಲೇಜ್‌ನ್ನು ಪ್ರಾಂರಂಭಿಸಲಾಯಿತು. ವಿಶ್ವವಿದ್ಯಾನಿಲಯದ ಮೊದಲ ಪರೀಕ್ಷೆಗಳು ೧೯೧೮ರಲ್ಲಿ ನಡೆದವು ಮತ್ತು ಮೊದಲ ಪದವಿ ಪ್ರಧಾನ ಸಮಾರಂಭವು ೧೭ ಜನವರಿ ೧೯೧೯ರಲ್ಲಿ ನಡೆಯಿತು. ನಿರ್ದೇಶಕರಾಗಿರಲು ಮತ್ತು ಪದವಿ ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ಭಾಷಣಮಾಡಲು ಆಗಮಿಸಿದ, ವಿಶ್ವವಿದ್ಯಾನಿಲಯದ ಕುಲಪತಿ, ಮೈಸೂರಿನ ಮಹಾರಾಜ ಕೃಷ್ಣ ರಾಜ ಒಡೆಯರ್ IV ಇಂಜಿನಿಯರಿಂಗ್ ಕಾಲೇಜಿನ ಕಾರ್ಯಾಗಾರ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ಸಹ ನಡೆಸಿದರು. ಇದರಿಂದ ಇಂಜಿನಿಯರಿಂಗ್ ಕಾಲೇಜು, ವಿಶ್ವವಿದ್ಯಾನಿಲಯದ ಆವರಣದಲ್ಲಿ ಆರಂಭಗೊಂಡ ಮೊದಲ ಕಾಲೇಜ್ ಆಗಿದೆ. ೧೧ ಪೆಬ್ರವರಿ ೧೯೧೯ರಂದು ಕಲಾ ಕೋರ್ಸ್‌ ಅನ್ನು ಪ್ರಾರಂಭಿಸಲಾಯಿತು.

ಈ ಶಿಕ್ಷಣ ಸಂಸ್ಥೆಯ ಮೇಲೆ ದಿವಂಗತ ಕಾಶಿ ನರೇಶ್ ಮತ್ತು ಮಹಾರಾಜ ಡಾ. ವಿಭೂತಿ ನಾರಾಯನ್ ಸಿಂಗ್ ಮಹತ್ತರವಾದ ಪ್ರಭಾವ ಬೀರಿದರು.

"ಹಿಂದೂ" ವಿಶ್ವವಿದ್ಯಾನಿಲಯ

ವಿಶ್ವವಿದ್ಯಾನಿಲಯದ ಹೆಸರು "ಹಿಂದೂ" ಅನ್ನುವ ಪದವನ್ನು ಒಳಗೊಂಡಿದ್ದರೂ, ವಿಶ್ವವಿದ್ಯಾನಿಲಯವು ವಿದ್ಯಾರ್ಧಿಗಳನ್ನು ಮತ್ತು ಬೋಧಕವರ್ಗದವರನ್ನು ಸೇರಿ ಯಾವಾಗಲೂ ವಿವಿಧ ಧರ್ಮದ ಸದಸ್ಯರನ್ನು ಒಳಗೊಳ್ಳುವಿಕೆಯನ್ನು ಸಮ್ಮತಿಸುತ್ತಿತ್ತು. ಇದರ ವೆಭ್‌ಸೈಟ್‌ನಲ್ಲಿನ ಮಹಾಮಾನ ಪಂಡಿತ್ ಮದನ್ ಮೋಹನ್ ಮಲ್ವಿಯರ ಪದಗಳ ಸಂದೇಶವು ಈ ರೀತಿ ಇದೆ:

"ಭಾರತವು ಕೇವಲ ಹಿಂದುಗಳ ದೇಶವಲ್ಲ. ಇದು ಮುಸಲ್ಮಾನರ, ಕ್ರಿಶ್ಚಿಯನ್ನರ ಮತ್ತು ಪರ್ಸೀಗಳ ದೇಶವು ಕೂಡ. ದೇಶವು ಸಾಮರ್ಥ್ಯವನ್ನು ಗಳಿಸುವುದು ಮತ್ತು ಸ್ವತಃ ಅಭಿವೃದ್ಧಿಹೊಂದುವುದು, ಭಾರತದಲ್ಲಿನ ವಿವಿಧ ಧರ್ಮದ ಜನರು ಪರಸ್ಪರ ಸದ್ಭಾವನೆ ಮತ್ತು ಅನ್ತೋನ್ಯತೆಯಿಂದ ಬಾಳಿದಾಗ ಮಾತ್ರ. ನನ್ನ ಮನಃಪೂರ್ವಕ ಹಾರೈಕೆ ಮತ್ತು ಪ್ರಾರ್ಥನೆ ಏನೆಂದರೆ ಮುಂದೆ ಬರಲಿರುವ ಜೀವನ ಮತ್ತು ಬೆಳಕಿನ ಈ ಕೇಂದ್ರವು, ತಯಾರಿಸಿದ ಧೀಮಂತ ವಿದ್ಯಾರ್ಧಿಗಳು ಪ್ರಪಂಚದ ಇತರ ಭಾಗಗಳಲ್ಲಿನ ತಮ್ಮ ಸಹ ಉತ್ತಮ ವಿದ್ಯಾರ್ಧಿಗಳಿಗೆ ಸಮನಾಗಿರುವುದರೊಂದಿಗೆ, ಆದರ್ಶ ಜೀವನವನ್ನು ನಡೆಸುತ್ತಾ, ತಮ್ಮ ದೇಶವನ್ನು ಪ್ರೀತಿಸುವುದರೊಂದಿಗೆ, ಸರ್ವಶ್ರೇಷ್ಟ ಪ್ರಭುಗಳಿಗೆ ಪ್ರಾಮಾಣೀಕರಾಗಿರುವರು ".

ಉಪಕುಲಪತಿಗಳು

  • ೧. ಡಾ ಸರ್ ಸುಂದರ್ ಲಾಲ್ (೧ ಏಪ್ರಿಲ್ ೧೯೧೬- )
  • ಮದನ್ ಮೋಹನ್ ಮಾಲ್ವಿಯಾ
  • ಡಾ ಸರ್ವೇಪಲ್ಲಿ ರಾಧಾಕೃಷ್ಣನ್ (೧೯೩೯- ಜನವರಿ ೧೯೪೮)
  • ೨೪. ಪ್ರೊಫೆಸರ್ ಡಿ ಪಿ ಸಿಂಗ್

ಕೇಂದ್ರ ಗ್ರಂಥಾಲಯ

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಗ್ರಂಥಾಲಯ ವ್ಯವಸ್ಥೆಯನ್ನು ೧೯೧೭ರಲ್ಲಿ ಪ್ರಾಧ್ಯಾಪಕರಾದ ಪಿ.ಕೆ. ತೆಲಂಗ್‌ರವರು ತಮ್ಮ ತಂದೆ ನ್ಯಾಯಾದಿಪತಿ ಕಾಶಿನಾತ್ ತ್ರಿಂಬಕ್ ತೆಲಂಗ್‌‌ರ ಜ್ಞಾಪಕಾರ್ಥ ನೀಡಿದ ದೇಣಿಗೆಯ ಸಂಗ್ರಹದಲ್ಲಿ ಸ್ಥಾಪಿಸಲಾಯಿತು. ಸಂಗ್ರಹವನ್ನು ಕಮಚ್ಹದ, ಸೆಂಟ್ರಲ್ ಹಿಂದೂ ಕಾಲೇಜಿನ ತೆಲಂಗ್ ಹಾಲ್‌ನಲ್ಲಿ ಇಲಾಯಿತು. ೧೯೨೧ರಲ್ಲಿ ಗ್ರಂಥಾಲಯವನ್ನು ಅರ್ಟ್ಸ್ ಕಾಲೇಜಿನ ಸೆಂಟ್ರಲ್ ಹಾಲಿಗೆ (ಈಗಿನ ಅರ್ಟ್ಸ್‌ನ ಬೋಧಕವರ್ಗ) ವರ್ಗಾಯಿಸಲಾಯಿತು ಮತ್ತು ನಂತರ ೧೯೪೧ರಲ್ಲಿ ಅದರ ಈಗಿನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಗ್ರಂಥಾಲಯವನ್ನು, ವಿಶ್ವವಿದ್ಯಾನಿಲಯದ ಸಂಸ್ಥಾಪಕರಾದ ಮದನ್ ಮೋಹನ್ ಮಾಲವಿಯರ ಸಲಹೆಯ ಮೇರೆಗೆ, ಮಹಾರಾಜ ಸಯಜಿರಾವ್ ಗಾಯಕ್ವಾಡ್ IIIರ ದೇಣಿಗೆಯಿಂದ, ಲಂಡನ್‌ನಲ್ಲಿನ ಬ್ರಿಟಿಷ್ ವಸ್ತುಸಂಗ್ರಹಾಲಯದ ಗ್ರಂಥಾಲಯದ ಮಾದರಿಯಲ್ಲಿ ಸ್ಥಾಪಿಸಲಾಯಿತು.

ಗ್ರಂಥಾಲಯವು ೧೯೩೧ರಲ್ಲಿ, ವಿವಿಧ ಮೂಲಗಳಿಂದ ಬಂದ ದೇಣಿಗೆಯಿಂದ ಸರಿಸುಮಾರು ೬೦,೦೦೦ ಪುಸ್ತಕ ಸಮೂಹದ ಸಂಗ್ರಹವನ್ನು ಹೊಂದಿತ್ತು. ವೈಯಕ್ತಿಕ ಮತ್ತು ಕೌಟುಂಬಿಕ ದೇಣಿಗೆಯ ಸಂಗ್ರಹದ ಒಲವು ನಲವತ್ತರ ಕಾಲದವರೆಗೂ ಮುಂದುವರೆಯಿತು ಇದಕ್ಕೆ ಕಾರಣ ೧೮ನೆಯ ಶತಮಾನದ ಕಾಲದ ಅಪರೂಪದ ಪುಸ್ತಕಗಳು ಮತ್ತು ದಿನ ಪತ್ರಿಕೆಗಳ ಏಕೈಕ ಪ್ರತಿಗಳನಷ್ಟೇ ಹೊಂದಿರುವುದು.

ಪ್ರಸ್ತುತ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಗ್ರಂಥಾಲಯ ವ್ಯವಸ್ಥೆಯು ಅಗ್ರ ಸ್ಥಾನದಲ್ಲಿ ಕೇಂದ್ರ ಗ್ರಂಥಾಲಯವನ್ನು ಮತ್ತು ೩ ಇನ್‌ಸ್ಟಿಟ್ಯೂಟ್ ಗ್ರಂಥಾಲಯಗಳನ್ನು, ೮ ಬೋಧಕವರ್ಗ ಗ್ರಂಥಾಲಯಗಳನ್ನು, ೨೫ ಇಲಾಖೆಯ ಗ್ರಂಥಾಲಯಗಳನ್ನು ಒಳಗೊಂಡಿದ್ದು, ವಿದ್ಯಾರ್ಧಿಗಳಗೆ, ಬೋಧಕವರ್ಗ ಸದಸ್ಯರಿಗೆ, ಸಂಶೋಧಕರಿಗೆ, ವಿಶ್ವವಿದ್ಯಾನಿಲಯದ ಇಲಾಖೆಯು ಒಳಗೊಂಡ ೧೨೬ ವಿಷಯಗಳ ಹದಿನಾಲ್ಕು ಬೋಧಕ ತಾಂತ್ರಿಕ ಸಿಬ್ಬಂದಿಗೆ ಸೇವೆಯನ್ನು ಒದಗಿಸಲು ಇದು ಒಟ್ಟು ಸುಮಾರು ೧೩ ಲಕ್ಷ ಪುಸ್ತಕ ಸಮೂಹದ ಸಂಗ್ರಹವನ್ನು ಹೊಂದಿದೆ.

ಪ್ರಸಿದ್ಧ ಬೋಧಕರು ಹಾಗೂ ಪದವೀಧರರು

  • ಡಾ.ಶಿವಮೂರ್ತಿ ಸ್ವಾಮಿಗಳು ಸಿರಿಗೆರೆ ಮಠದ ಮಠಾಧಿಪತಿಗಳು.ಇವರು "ಸೂತಸಂಹಿತೆ"ಯ ಮೇಲೆ ಪೌಢ ಪ್ರಬಂಧ ಬರೆದು ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
  • ಕೊಯೆರಾಡ್ ಎಸ್ಟ್ ಬೆಲ್ಜಿಯನ್ ಸ್ಕಾಲರ್
  • ಡಾ. ಹರಿವಂಶ್ ರಾಯ್ ಬಚ್ಚನ್
  • ಶಾಂತಿ ಸ್ವರೂಪ್ ಭಟ್ನಾಗರ್, ಸಿಎಸ್‌ಐಆರ್‌ನ ಮೊದಲ ಡೈರೆಕ್ಟರ್ ಜನರಲ್
  • ಎ. ಡಿ. ಬೊಹ್ರಾ, ಇಂಜಿನಿಯರ್
  • ಆಚಾರ್ಯ ಸೀತಾ ರಾಮ್ ಚತುರ್ವೇದಿ, ಹಿಂದಿ ಮತ್ತು ಸಂಸ್ಕೃತ ಪಂಡಿತ ಮತ್ತು ನಾಟಕಕಾರ.
  • ಅಹಮದ್ ಹಸನ್ ದಾನಿ, ಪಾಕೀಸ್ತಾನ ಪ್ರಾಕ್ತನಶಾಸ್ತ್ರಜ್ಞ ಮತ್ತು ಇತಿಹಾಸಕಾರ
  • ಮಾಧವ್ ಸದಾಶಿವ್ ಗೊಲ್ವಾಲ್ಕರ್,ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೆಯ "ಸರ್ಸಾಂಘ್‌ಚಲಕ್" (ಉಚ್ಚ ಮುಖ್ಯಸ್ಥ)
  • ಚಂದ್ರಧರ ಶರ್ಮಾ ಗುಲೇರಿ
  • ಕೋಟಾ ಹರಿನಾರಾಯಣ
  • ಭೂಪೆನ್ ಹಝಾರಿಕಾ, ಸಂಗೀತಕಾರ ಮತ್ತು ಸಂಗೀತ ರಚನೆಕಾರ
  • ಲಾಲ್ಮಣಿ ಮಿಶ್ರಾ, ಸಂಗೀತಕಾರ
  • ಅಶೋಕ ಮಿತ್ರಾ, ಪಶ್ಚಿಮ ಬಂಗಾಳದ ಮಾಜಿ ಹಣಕಾಸು ಮಂತ್ರಿ, ಮತ್ತು ರಾಜ್ಯಸಭೆಯ ಮಾಜಿ ಸದಸ್ಯ
  • ಎ.ಕೆ. ನರೇನ್, ಇತಿಹಾಸಕಾರ ಮತ್ತು ಪ್ರಾಕ್ತನಶಾಸ್ತ್ರಜ್ಞ
  • ಜಯಂತ್ ವಿಶ್ಣು ನರ್ಲೀಕರ್, ಖಗೋಳಶಾಸ್ತ್ರಜ್ಞ
  • ರಾಬರ್ಟ್ ಎಮ್. ಪಿರ್ಸಿಗ್, ಅಮೇರಿಕನ್ ತತ್ವಶಾಸ್ತ್ರಜ್ಞ
  • ಶ್ಯಾಮ್ ಸುಂದರ್ ಸುರೋಲಿಯಾ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರ
  • ಎನ್. ರಾಜಂ, ಹಿಂದುಸ್ಥಾನಿ ಕ್ಲಾಸಿಕಲ್ ಸಂಗೀತ, ವಯೋಲಿನ್ ವಾದಕ
  • ಸಿ. ಎಮ್. ಆರ್. ರಾವ್, ವಿಜ್ಞಾನಿ
  • ನರ್ಲಾ ಟಾಟಾ ರಾವ್
  • ಬೀರಬಲ್ ಸಾಹ್ನಿ, ಸಸ್ಯಶಾಸ್ತ್ರಜ್ಞ
  • ಪಂಡಿತ್ ಯದುನಂದರ್ (ಜದುನಂದನ್) ಶರ್ಮಾ
  • ಪ್ರಕಾಶ್ ವರ್ ಶಾಸ್ತ್ರಿ, ಪಾರ್ಲಿಮೆಂಟ್ ಸದಸ್ಯ ಮತ್ತು ಆರ್ಯ ಸಮಾಜ ಚಳುವಳಿಯ ವಕೀಲ
  • ಆಚಾರ್ಯ ರಾಮ್ ಚಂದ್ರ ಶುಕ್ಲಾ, ಹಿಂದಿ ಲೇಖಕ ಮತ್ತು ಇತಿಹಾಸಕಾರ
  • ಸಾಕೇತ್ ಕುಷ್ವಹ, ಉಪಕುಲಪತಿ
  • ರಾಮ ಚಂದ್ರ ಶುಕ್ಲಾ, ವರ್ಣಚಿತ್ರಕಾರ
  • ದಿವ್ಯಾ ಸಿಂಗ್,(ಭಾರತೀಯ ಮಹಿಳಾ ಬಾಸ್ಕೆಟ್‌ಬಾಲ್ ತಂಡದ ನಾಯಕಿ)
  • ನಾಗೇಂದ್ರ ಕುಮಾರ್ ಸಿಂಗ್, ಪ್ರಸಿದ್ಧ ವಿಜ್ಞಾನಿ (ಡಾ ಬಿ.ಪಿ.ಪಾಲ್ ಚೇರ್ ಐಸಿಎಆರ್)
  • ಮಾಣಿಕ್ ಸೊರ್ಸರ್, ಕಲಾವಿದ, ಇಂಜಿನಿಯರ್, ಮತ್ತು ನಿರ್ವಾಹಕ
  • ಪಂಡಿತ್ ಓಂಕಾರನಾಥ ಠಾಕೂರ್, ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ

ಮಾನ್ಯತೆ ಹೊಂದಿದ ಶಾಲೆಗಳು ಮತ್ತು ಕಾಲೇಜುಗಳು

  • ಡಿ ಎ ವಿ ಪೋಸ್ಟ್ ಗ್ರಾಜುಯೇಟ್ ಕಾಲೇಜ್, ದಾರಾನಗರ್ ವಾರಣಾಸಿ
  • ಆರ್ಯ ಮಹಿಳಾ ಮಹಾವಿದ್ಯಾಲಯ, ವಾರಣಾಸಿ
  • ವಸಂತ ಕಾಲೇಜ್ ಫಾರ್ ವುಮೆನ್, ರಾಜ್‌ಘಾಟ್, ವಾರಣಾಸಿ
  • ವಸಂತ ಮಹಿಳಾ ವಿದ್ಯಾಲಯ, ವಾರಣಾಸಿ
  • ಮಹಿಳಾ ಮಹಾವಿದ್ಯಾಲಯ, ಬಿಎಚ್‌ಯು ಕ್ಯಾಂಪಸ್
  • ರಣ್ವೀರ್ ಸಂಸ್ಕೃತ ವಿದ್ಯಾಲಯ, ಕಮ್ಮಚ
  • ಸೆಂಟ್ರಲ್ ಹಿಂದೂ ಬಾಯ್ಸ್ ಅಂಡ್ ಗರ್ಲ್ಸ್ ಸ್ಕೂಲ್, ಕಮ್ಮಚ

ಇವನ್ನೂ ಗಮನಿಸಿ

  • ಭಾರತದಲ್ಲಿನ ವಿಶ್ವವಿದ್ಯಾಲಯಗಳ ಪಟ್ಟಿ
  • ಭಾರತದಲ್ಲಿನ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು
  • ಭಾರತದಲ್ಲಿನ ಶಿಕ್ಷಣ
  • ದೂರ ಶಿಕ್ಷಣ ಪರಿಷತ್ತು
  • ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಭಾರತ)
  • ಭಾರ್ತೇಂದು ನಾಟ್ಯ ಅಕಾಡೆಮಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

ಪುಸ್ತಕಗಳು

  1. ^ ಲೀ ರೆನಾಲ್ಡ್, ಎ ಹಿಂದೂ ಎಜುಕೇಶನ್: ಬನಾರಸ್ ಹಿಂದು ವಿಶ್ವವಿದ್ಯಾನಿಲಯದ ಮೊದಲ ವರ್ಷಗಳು (ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್).

25°15′52″N 82°59′42″E / 25.264413°N 82.995014°E / 25.264413; 82.995014

Tags:

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಸಂಸ್ಥೆಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಧ್ಯೇಯಗಳುಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಇತಿಹಾಸಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಉಪಕುಲಪತಿಗಳುಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಕೇಂದ್ರ ಗ್ರಂಥಾಲಯಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಪ್ರಸಿದ್ಧ ಬೋಧಕರು ಹಾಗೂ ಪದವೀಧರರುಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಇವನ್ನೂ ಗಮನಿಸಿಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಉಲ್ಲೇಖಗಳುಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಬಾಹ್ಯ ಕೊಂಡಿಗಳುಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಪುಸ್ತಕಗಳುಬನಾರಸ್ ಹಿಂದೂ ವಿಶ್ವವಿದ್ಯಾನಿಲಯಕೇಂದ್ರೀಯ ವಿಶ್ವವಿದ್ಯಾಲಯಪಂಡಿತ್ ಮದನ್ ಮೋಹನ್ ಮಾಲವೀಯಭಾರತವಾರಾಣಸಿಹಿಂದಿ

🔥 Trending searches on Wiki ಕನ್ನಡ:

ಡಿಎನ್ಎ -(DNA)ಉಪನಯನಅಂಬಿಗರ ಚೌಡಯ್ಯಎ.ಪಿ.ಜೆ.ಅಬ್ದುಲ್ ಕಲಾಂಫೇಸ್‌ಬುಕ್‌ಏಕೀಕರಣಸಚಿನ್ ತೆಂಡೂಲ್ಕರ್ಮೂಲಧಾತುಗಳ ಪಟ್ಟಿಕುಕ್ಕೆ ಸುಬ್ರಹ್ಮಣ್ಯ ದೇವಾಲಯನೈಸರ್ಗಿಕ ವಿಕೋಪಪರಿಸರ ರಕ್ಷಣೆಭಾರತದ ತ್ರಿವರ್ಣ ಧ್ವಜಚಾಮುಂಡರಾಯಯುವರತ್ನ (ಚಲನಚಿತ್ರ)ರಾಧಿಕಾ ಪಂಡಿತ್ಧೀರೂಭಾಯಿ ಅಂಬಾನಿಕಾಳಿದಾಸತತ್ಸಮ-ತದ್ಭವಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುರವಿಚಂದ್ರನ್ನೆಟ್‍ಫ್ಲಿಕ್ಸ್ಭಗವದ್ಗೀತೆಆಗಮ ಸಂಧಿಜೈನ ಧರ್ಮಗ್ರಂಥ ಸಂಪಾದನೆದರ್ಶನ್ ತೂಗುದೀಪ್ಅಸಹಕಾರ ಚಳುವಳಿಬಂಡೀಪುರ ರಾಷ್ಟ್ರೀಯ ಉದ್ಯಾನವನವಿಶ್ವ ರಂಗಭೂಮಿ ದಿನಕರ್ನಾಟಕದ ಜಲಪಾತಗಳುವಿಜಯನಗರ ಸಾಮ್ರಾಜ್ಯಕಂಪ್ಯೂಟರ್ಭಾರತದಲ್ಲಿನ ಶಿಕ್ಷಣಭಾರತದ ಇತಿಹಾಸಲೆಕ್ಕ ಪರಿಶೋಧನೆಕನ್ನಡದಲ್ಲಿ ಮಹಿಳಾ ಸಾಹಿತ್ಯಅವರ್ಗೀಯ ವ್ಯಂಜನಕರ್ಮಧಾರಯ ಸಮಾಸಗುಡುಗುಮಧುಮೇಹಶಕ್ತಿಕ್ರಿಕೆಟ್ಸರೀಸೃಪಮೂಲವ್ಯಾಧಿತಂತ್ರಜ್ಞಾನದ ಉಪಯೋಗಗಳುನಿರ್ವಹಣೆ ಪರಿಚಯದಖ್ಖನ್ ಪೀಠಭೂಮಿಭಾರತದ ಆರ್ಥಿಕ ವ್ಯವಸ್ಥೆಕಿತ್ತೂರು ಚೆನ್ನಮ್ಮಹವಾಮಾನಹುಲಿರೋಮನ್ ಸಾಮ್ರಾಜ್ಯಭಗತ್ ಸಿಂಗ್ಸಸ್ಯರಾವಣತೇಜಸ್ವಿನಿ ಗೌಡಹಿಂದುಸ್ತಾನಿ ಶಾಸ್ತ್ರೀಯ ಸಂಗೀತಬ್ಯಾಡ್ಮಿಂಟನ್‌ಭಾರತಕುಟುಂಬರತ್ನತ್ರಯರುಭಾರತದಲ್ಲಿ ತುರ್ತು ಪರಿಸ್ಥಿತಿಭಾರತದಲ್ಲಿನ ಜಾತಿ ಪದ್ದತಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭಾರತದ ರಾಷ್ಟ್ರೀಯ ಚಿಹ್ನೆಗಿರೀಶ್ ಕಾರ್ನಾಡ್ಉಪ್ಪು (ಖಾದ್ಯ)ವ್ಯವಸಾಯತಂಬಾಕು ಸೇವನೆ(ಧೂಮಪಾನ)ಅರ್ಥಶಾಸ್ತ್ರವಿದ್ಯುತ್ ಪ್ರವಾಹಅರಿಸ್ಟಾಟಲ್‌ಭಾರತೀಯ ರಿಸರ್ವ್ ಬ್ಯಾಂಕ್ಶಿರಾಪ್ರೇಮಾಕಳಿಂಗ ಯುದ್ದ ಕ್ರಿ.ಪೂ.261ಕನ್ನಡ ಅಕ್ಷರಮಾಲೆರಾಘವಾಂಕ🡆 More