ಸಿ. ಎನ್. ಆರ್. ರಾವ್: ಭಾರತದ ವಿಜ್ಞಾನಿ

ಸಿ.ಎನ್.ಆರ್.ರಾವ್ ಎಂದೇ ಪ್ರಸಿದ್ದರಾಗಿರುವ, 'ಚಿಂತಾಮಣಿ ನಾಗೇಶ್ ರಾಮಚಂದ್ರರಾವ್ (ಜೂನ್ ೩೦, ೧೯೩೪) ವಿಶ್ವವಿಖ‍‍್ಯಾತ ಭಾರತೀಯ ವಿಜ್ಞಾನಿಗಳಲ್ಲೊಬ್ಬರಾಗಿದ್ದಾರೆ.

ಪ್ರಸಕ್ತ ಬೆಂಗಳೂರಿನಲ್ಲಿರುವ ಜವಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ರಾವ್ ಅವರಿಗೆ ೨೦೧೩ರ ವರ್ಷದಲ್ಲಿ ಭಾರತದ ಅತ್ಯುನ್ನತ ಗೌರವವಾದ 'ಭಾರತ ರತ್ನ' ಪ್ರಶಸ್ತಿ ಸಂದಿದೆ.

ಸಿ. ಎನ್. ಆರ್. ರಾವ್
ಸಿ. ಎನ್. ಆರ್. ರಾವ್: ಜೀವನ, ಸಂಶೋಧನೆ, ಪ್ರಶಸ್ತಿಗಳು ಹಾಗೂ ಗೌರವಗಳು
ಚಿಂತಾಮಣಿ ನಾಗೇಶ ರಾಮಚಂದ್ರ ರಾವ್
ಜನನಜೂನ್ ೩೦, ೧೯೩೪
ಬೆಂಗಳೂರು, ಮೈಸೂರು ಸಂಸ್ಥಾನ, ಬ್ರಿಟಿಷ್ ಭಾರತ
ವಾಸಸ್ಥಳಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರರಸಾಯನಶಾಸ್ತ್ರ
ಸಂಸ್ಥೆಗಳುಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ
ಐಐಟಿ ಕಾನ್ಪುರ್
ಭಾರತೀಯ ವಿಜ್ಞಾನ ಸಂಸ್ಥೆ
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ
ಕೇಂಬ್ರಿಡ್ಜ್‌‌‌‌‌‌‌‌‌‌‌ ವಿಶ್ವವಿದ್ಯಾನಿಲಯ
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ
ಜವಹರಲಾಲ್ ನೆಹರೂ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರ
ಅಭ್ಯಸಿಸಿದ ವಿದ್ಯಾಪೀಠಬನಾರಸ್ ಹಿಂದೂ ವಿಶ್ವವಿದ್ಯಾನಿಲಯ
ಪುರ್ಡ್ಯೂ ವಿಶ್ವವಿದ್ಯಾನಿಲಯ
ಪ್ರಸಿದ್ಧಿಗೆ ಕಾರಣಸಾಲಿಡ್ - ಸ್ಟೇಟ್ ಕೆಮಿಸ್ಟ್ರಿ
ಮೆಟೀರಿಯಲ್ ಸೈನ್ಸ್
ಗಮನಾರ್ಹ ಪ್ರಶಸ್ತಿಗಳುಹ್ಯೂಗ್ಸ್ ಮೆಡಲ್ (೨000)
ಇಂಡಿಯಾ ಸೈನ್ಸ್ ಅವಾರ್ಡ್ (೨೦೦೪)
ರಾಯಲ್ ಸೊಸೈಟಿ ಎಫ್ ಆರ್ ಎಸ್ (೧೯೮೪)
ಅಬ್ದುಸ್ ಸಲಾಮ್ ಮೆಡಲ್ (೨೦೦೮)
ದಾನ ಡೇವಿಡ್ ಪ್ರೈಜ್ (೨೦೦೫)
ಲೀಜಿಯನ್ ಹಾನರ್ (೨೦೦೫)
ಪದ್ಮಶ್ರೀ(೧೯೭೪)
ಪದ್ಮ ವಿಭೂಷಣ(೧೯೮೫)
ಭಾರತ ರತ್ನ (೨೦೧೩)

ಜೀವನ

ಜನನ

ಹನುಮಂತ ನಾಗೇಶ್‌ ರಾವ್‌ ಮತ್ತು ನಾಗಮ್ಮ ದಂಪತಿಯ ಮಗನಾದ ಪ್ರೊ. ಚಿಂತಾಮಣಿ ನಾಗೇಶ ರಾಮಚಂದ್ರರಾವ್‌ ಅವರು, ೧೯೩೪ರ ಜೂನ್‌ ೩೦ರಂದು ಬೆಂಗಳೂರಿನಲ್ಲಿ ಜನಿಸಿದರು.

ಶಿಕ್ಷಣ

೧೯೫೧ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿಎಸ್‌ಸಿ ಪದವಿ ಪಡೆದರು. "ನನ್ನ ಮೇಲೆ ಬಹುವಾಗಿ ಪ್ರಭಾವ ಬೀರಿದವರು ಮಹಾನ್‌ ವಿಜ್ಞಾನಿ ಸರ್‌ ಸಿ ವಿ ರಾಮನ್‌ ಅವರು. ನನಗಾಗ ೧೧ ವರ್ಷ. ಬೆಂಗಳೂರಿನಲ್ಲಿ ಕಲಿಯುತ್ತಿದ್ದೆ. ಆಗ ಅವರ ಪ್ರಭಾವಕ್ಕೆ ಒಳಗಾದೆ. ವಿಜ್ಞಾನ ಕಲಿಯಬೇಕು ಎಂಬ ಕನಸು ಮೂಡಿದ್ದು ಅದೇ ಹೊತ್ತಿನಲ್ಲಿ." ಎನ್ನುತ್ತಾರೆ ಪ್ರೊ. ರಾವ್. ಸ್ನಾತಕೋತ್ತರ ಪದವಿಯನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ೧೯೫೩ರಲ್ಲಿ ಪಡೆದರು. ೧೯೫೮ರಲ್ಲಿ 'ಪರ್ಡ್ಯೂ ವಿಶ್ವವಿದ್ಯಾಲಯ'ದಲ್ಲಿ ಪಿ.ಎಚ್‌.ಡಿ. ಪಡೆದರು.

ವೃತ್ತಿಜೀವನ

ಅವರು ೧೯೫೯ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿ ನಂತರ ೧೯೬೩ರಲ್ಲಿ ಕಾನ್ಪುರದ ಐಐಟಿಗೆ ಸೇರಿದರು. ರಾವ್ ಪ್ರಸ್ತುತ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್‌ಡ್ ರಿಸರ್ಚ್‌ನಲ್ಲಿ ಪ್ರೊಫೆಸರ್ ಹಾಗೂ ಗೌರವಾಧ್ಯಕ್ಷರಾಗಿದ್ದಾರೆ. ಇವರು 'ರಸಾಯನ ಶಾಸ್ತ್ರದ ಸಾಲಿಡ್ ಸ್ಟೇಟ್ ಮತ್ತು ಮೇಟಿರಿಯಲ್ ವಿಭಾಗ'ದ ಸಂಶೋಧನೆಗೆ ವಿಶ್ವದಾದ್ಯಂತ ಹೆಸರುಗಳಿಸಿದ್ದಾರೆ. ಪ್ರಧಾನಮಂತ್ರಿಯವರ ವೈಜ್ಞಾನಿಕ ಸಲಾಹ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ವೈವಾಹಿಕ ಜೀವನ

ಪ್ರೊ.ಸಿ.ಎನ್‌.ಆರ್‌ ರಾವ್‌ ಅವರದು ‘ವಿಜ್ಞಾನ ಕುಟುಂಬ’. ಅವರ ಪತ್ನಿ ಇಂದುಮತಿ ರಾವ್‌ ಈ ಹಿಂದೆ ನಗರದ ಎಂ.ಇ.ಎಸ್‌ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದರು. ಪ್ರಸ್ತುತ ಅವರು ಜವಾಹರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಮಕ್ಕಳಿಗೆ ವಿಜ್ಞಾನ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ರ, ಸಂಜಯ್‌ ರಾವ್‌ ಕೂಡ ಜವಾಹರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪುತ್ರಿ, ಸುಚಿತ್ರಾ ರಾವ್‌ ಅವರ ಪತಿ, ಕೆ.ಎನ್‌. ಗಣೇಶ್‌ ಪುಣೆಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರು.

ಸಂಶೋಧನೆ

ಹಲವಾರು ದ್ವಿಮಿತೀಯ ಕೃತಕ ರಾಸಾಯನಿಕ ವಸ್ತುಗಳನ್ನು ಸಂಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ರಾವ್ ಅತಿವಾಹಕತೆ (ಸೂಪರ್ ಕಂಡಕ್ಟಿವಿಟಿ) ಹಾಗು ನ್ಯಾನೋವಿಜ್ನಾನ ಕ್ಷೇತ್ರದಲ್ಲಿ ಅಪಾರ ಸಂಶೋಧನೆ ನಡೆಸಿದ್ದಾರೆ. ೪೨ಕ್ಕೂ ಹೆಚ್ಚು ವೈಜ್ನಾನಿಕ ಪುಸ್ತಕಗಳು ಹಾಗು ೧೫೦೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಾವ್ ಬರೆದಿದ್ದಾರೆ. ಇವರ ಜೊತೆ ಕೆಲಸ ಮಾಡಿದ ೧೪೦ಕ್ಕೂ ಹೆಚ್ಚು ಜನ ಪಿ.ಹೆಚ್.ಡಿ. ಪದವಿ ಗಳಿಸಿದ್ದಾರೆ. ಇವರ ಲೇಖನಗಳನ್ನು ಇದುವರೆಗೂ ೪೦ ಸಾವಿರಕ್ಕೂ ಹೆಚ್ಚುಬಾರಿ ಪ್ರಸ್ತಾಪಿಸಲಾಗಿದೆ. ಇವರ ಸಂಶೋಧನಾ ಫಲಿತಾಂಶವನ್ನು ಆಧರಿಸಿ, ಅನೇಕ ರಾಷ್ಟ್ರಗಳು ಹಲವು ಕೈಗಾರಿಕಾ ಉತ್ಪನ್ನಗಳನ್ನು ಪಡೆಯುತ್ತಿವೆ. ರಾವ್ ಅವರು ತಮ್ಮ ಸಂಶೋಧನೆಗೆ ಸ್ವಾಮ್ಯ ಹಕ್ಕುಗಳನ್ನು (ಪೇಟೆಂಟ್)(Open source)ಪಡೆಯದೆ ಮುಕ್ತವಾಗಿಟ್ಟಿದ್ದಾರೆ.

ಪ್ರಶಸ್ತಿಗಳು ಹಾಗೂ ಗೌರವಗಳು

ಇವರು ಹಲವು ಪ್ರಶಸ್ತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ.

ಪುಸ್ತಕಗಳು:

ಅವರು ಅಮೇರಿಕಾಗೆ ಸ್ಥಳಾಂತರಗೊಂಡ ನಂತರ ಪ್ರಕಟಿಸಿದ್ದ ಪುಸ್ತಕಗಳು ಜೆ ಕ್ಲೆಫ್ಫೆ ಜೊತೆ- ವ್ಯತ್ಯಾಸದ ಭಾಗಗಳು ಮತ್ತು ಅದರ ಅನ್ವಯಗಳ ಅಂದಾಜು (೧೯೮೮), ಅಂಕಿಅಂಶ ಮತ್ತು ಸತ್ಯ (೧೯೮೯), ಡಿ ಎನ್ ಶಾನಭಾಗ್ ಜೊತೆ- ಅನ್ವಯಗಳೊಂದಿಗೆ ಸಂಭವನೀಯ ಮಾದರಿಗಳು, ಚೊಕೆಟ್-ಡಿನೈ ರೀತಿಯ ಕ್ರಿಯಾತ್ಮಕ ಸಮೀಕರಣಗಳು ಮತ್ತು ಅದರ ಅನ್ವಯಗಳು (೧೯೯೪), ಎಚ್ ಟೊಟೆಂಬರ್ಗ್ ಜೊತೆ- ಲೀನಿಯರ್ ಮಾದರಿಗಳು, ಕನಿಷ್ಠ ಚೌಕಗಳು ಮತ್ತು ಪರ್ಯಾಯ (೧೯೯೫) ಮತ್ತು ಎಂ ಬಿ ರಾವ್ ಜೊತೆ- ಸಂಖ್ಯಾಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಮ್ಯಾಟ್ರಿಕ್ಸ್ ಬೀಜಗಣಿತದ ಅನ್ವಯಗಳು (೧೯೯೮).

ಪ್ರಾರಂಭಿಸಿದ ಸಂಸ್ಥೆಗಳು:

ಸಿಆರ್ ರಾವ್ ಸಂಖ್ಯಾಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ ಆಧುನಿಕನ ಸಂಸ್ಥೆಯು (ಎಐಎಮ್‍ಎ‍ಸ್‍ಸಿಎ‍ಸ್ ಎಂದು ಸಹ ಕರೆಯಲಾಗುತ್ತದೆ) ಗಣಿತ, ಕಂಪ್ಯೂಟರ್ ವಿಜ್ಞಾನ ಮತ್ತು ಗಣಿತ ಅಂಕಿಯ ಸಂಶೋಧನೆ ಮಾಡುವ ಒಂದು ಪ್ರಮುಖ ಸಂಸ್ಥೆಯಾಗಿ ೨೦೦೭ ರಲ್ಲಿ ಸ್ಥಾಪಿಸಲಾಯಿತು. ಅವರ ಸಲಹೆಯಿಂದ ಕಟ್ಟಲಾಗಿದ್ದರಿಂದ ಸಿಆರ್ ರಾವ್‍ರವರ ಹೆಸರಿಡಲಾಯಿತು. ಇದು ರಾಜ್ಯ ಸರ್ಕಾರ ಮತ್ತು ವೈಯಕ್ತಿಕ ದಾನಿಗಳಿಂದ ಒಂದು ಕೋಟಿ ರೂಪಾಯಿಗಳ ಅನುದಾನವನ್ನು ಪಡೆದಿದೆ.

ಹೆಚ್ಚಿನ ವಿವರಕ್ಕೆ

ಉಲ್ಲೇಖಗಳು

ಹೊರಗಿನ ಕೊಂಡಿಗಳು

ಇವನ್ನೂ ನೋಡಿ

Tags:

ಸಿ. ಎನ್. ಆರ್. ರಾವ್ ಜೀವನಸಿ. ಎನ್. ಆರ್. ರಾವ್ ಸಂಶೋಧನೆಸಿ. ಎನ್. ಆರ್. ರಾವ್ ಪ್ರಶಸ್ತಿಗಳು ಹಾಗೂ ಗೌರವಗಳುಸಿ. ಎನ್. ಆರ್. ರಾವ್ ಪುಸ್ತಕಗಳು:ಸಿ. ಎನ್. ಆರ್. ರಾವ್ ಪ್ರಾರಂಭಿಸಿದ ಸಂಸ್ಥೆಗಳು:ಸಿ. ಎನ್. ಆರ್. ರಾವ್ ಹೆಚ್ಚಿನ ವಿವರಕ್ಕೆಸಿ. ಎನ್. ಆರ್. ರಾವ್ ಉಲ್ಲೇಖಗಳುಸಿ. ಎನ್. ಆರ್. ರಾವ್ ಹೊರಗಿನ ಕೊಂಡಿಗಳುಸಿ. ಎನ್. ಆರ್. ರಾವ್ ಇವನ್ನೂ ನೋಡಿಸಿ. ಎನ್. ಆರ್. ರಾವ್ಜೂನ್ ೩೦ಬೆಂಗಳೂರುಭಾರತಭಾರತ ರತ್ನ೧೯೩೪

🔥 Trending searches on Wiki ಕನ್ನಡ:

ವೆಂಕಟೇಶ್ವರಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಪ್ರಜಾವಾಣಿಕೆರೆಗೆ ಹಾರ ಕಥನಗೀತೆಅಲ್ಲಮ ಪ್ರಭುಬುಡಕಟ್ಟುಜಿಪುಣಕೋಲಾರಕನ್ನಡ ಸಾಹಿತ್ಯ ಪರಿಷತ್ತುಮುತ್ತುಗಳುಓಂ (ಚಲನಚಿತ್ರ)ಜೋಡು ನುಡಿಗಟ್ಟುಸಮುಚ್ಚಯ ಪದಗಳುಬಾದಾಮಿ ಗುಹಾಲಯಗಳುಕಂಪ್ಯೂಟರ್ತ. ರಾ. ಸುಬ್ಬರಾಯಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಭಾರತ ಸರ್ಕಾರಸಂಸ್ಕೃತಿಕ್ರಿಯಾಪದಶ್ರೀವಿಜಯಅಡಿಕೆಕರ್ಬೂಜಕಾಂತಾರ (ಚಲನಚಿತ್ರ)ಪ್ರಜಾಪ್ರಭುತ್ವಮೈಗ್ರೇನ್‌ (ಅರೆತಲೆ ನೋವು)ನಾಗಚಂದ್ರಕನ್ನಡ ಕಾಗುಣಿತಗ್ರಾಮ ಪಂಚಾಯತಿಅಶೋಕನ ಶಾಸನಗಳುಸ್ತ್ರೀಅವರ್ಗೀಯ ವ್ಯಂಜನರಾಷ್ಟ್ರೀಯ ಶಿಕ್ಷಣ ನೀತಿಶ್ರೀ ರಾಮ ನವಮಿಉಪನಯನಕರ್ನಾಟಕದ ಅಣೆಕಟ್ಟುಗಳುಹಣ್ಣುಸೂರ್ಯವಂಶ (ಚಲನಚಿತ್ರ)ಚೋಳ ವಂಶದಶಾವತಾರವ್ಯಕ್ತಿತ್ವಚಾಲುಕ್ಯಸಿಂಧನೂರುಭಾರತದಲ್ಲಿನ ಜಾತಿ ಪದ್ದತಿಮಹಾಕವಿ ರನ್ನನ ಗದಾಯುದ್ಧತೆಲುಗುಕ್ಯಾರಿಕೇಚರುಗಳು, ಕಾರ್ಟೂನುಗಳುಭಾರತದಲ್ಲಿ ತುರ್ತು ಪರಿಸ್ಥಿತಿಚನ್ನಬಸವೇಶ್ವರಗ್ರಾಮ ದೇವತೆಬಾದಾಮಿಮಲೆನಾಡುಭಾರತೀಯ ಕಾವ್ಯ ಮೀಮಾಂಸೆದ.ರಾ.ಬೇಂದ್ರೆಯೋಗತಾಟಕಿಕನ್ನಡ ಅಭಿವೃದ್ಧಿ ಪ್ರಾಧಿಕಾರನುಗ್ಗೆಕಾಯಿಕನ್ನಡದಲ್ಲಿ ಗದ್ಯ ಸಾಹಿತ್ಯಹಣಕಾಸುಜಾಗತಿಕ ತಾಪಮಾನಆವಕಾಡೊಗೌತಮ ಬುದ್ಧಗಾದೆ ಮಾತುಏಡ್ಸ್ ರೋಗಕಾವ್ಯಮೀಮಾಂಸೆಶಿಲ್ಪಾ ಶೆಟ್ಟಿಗಿಡಮೂಲಿಕೆಗಳ ಔಷಧಿಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಬಹಮನಿ ಸುಲ್ತಾನರುಸುಮಲತಾಬೀಚಿಕರ್ನಾಟಕದ ಆರ್ಥಿಕ ಪ್ರಗತಿಉದಯವಾಣಿಅರ್ಥಶಾಸ್ತ್ರಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುರನ್ನ🡆 More