ವ್ಯವಸಾಯ

ವ್ಯವಸಾಯವು ಮಾನವನ ಪುರಾತನ ವೃತ್ತಿಗಳಲ್ಲೊಂದಾಗಿದೆ.

ಭೂಮಿಯನ್ನು ಉಳುಮೆಮಾಡಿ, ಸಸ್ಯಗಳನ್ನು ಪೋಷಿಸಿ ಅದರಿಂದ ಮಾನವ ಮತ್ತು ಪ್ರಾಣಿಗಳಿಗೆ ಉಪಯೋಗಗಳನ್ನು ಪಡೆಯುವುದೇ 'ವ್ಯವಸಾಯ'ವಾಗಿದೆ. ವ್ಯಾವಸಾಯವು ಪಶುಪಾಲನೆ, ಕೋಳಿಸಾಕಣೆ, ರೇಷ್ಮೆ ಕೃಷಿ ಮತ್ತು ಜೀನುಸಾಕಣೆಗಳನ್ನು ಒಳಗೊಂಡಿದೆ. ಇದು ಮಾನವನಿಗೆ ಅಗತ್ಯವಾದ ಆಹಾರ ಧಾನ್ಯಗಳನ್ನು ಪೂರೈಸುವುದಲ್ಲದೆ ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಸುವುದು. "ಭಾರತದ ಆಹಾರದ ವ್ಯವಸ್ಥೆಯಲ್ಲಿ ವ್ಯಾವಸಾಯವು ಪ್ರಮುಖ ಪಾತ್ರ ವಹಿಸಿದೆ."

ವ್ಯವಸಾಯ
ಭಾರತೀಯ ಕೃಷಿಯು ಸಾಂಪ್ರದಾಯಿಕ ಮತ್ತು ಆಧುನಿಕ ಕೃಷಿ ತಂತ್ರಗಳ ಮಿಶ್ರಣವನ್ನು ಒಳಗೊಂಡಿದೆ. ಭಾರತದ ಕೆಲವು ಭಾಗಗಳಲ್ಲಿ, ಉಳುಮೆ ಮಾಡಲು ಜಾನುವಾರುಗಳನ್ನು ಬಳಕೆಯ ಸಾಂಪ್ರದಾಯ ಬಳಕೆಯಲ್ಲಿದೆ. ಸಾಂಪ್ರದಾಯಿಕ ಸಾಕಣೆ ಕೇಂದ್ರಗಳು ತಲಾ ಉತ್ಪಾದಕತೆ ಮತ್ತು ರೈತ ಆದಾಯವನ್ನು ಕಡಿಮೆ ಹೊಂದಿವೆ.

ವ್ಯವಸಾಯದ ವಿಧಾನಗಳು

ವ್ಯವಸಾಯ 
ಪಂಜಾಬ್ ರಾಜ್ಯವು ಭಾರತದ ಹಸಿರು ಕ್ರಾಂತಿಯನ್ನು ಮುನ್ನಡೆಸಿತು ಮತ್ತು ದೇಶದ ಬ್ರೆಡ್ ಬುಟ್ಟಿ ಎಂಬ ಹೆಗ್ಗಳಿಕೆಯನ್ನು ಗಳಿಸಿತು.
  • ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಬಗೆಯ ಬೇಸಾಯ ಪದ್ಧತಿಗಳು ರೂಢಿಯಲ್ಲಿವೆ. ವ್ಯವಸಾಯದ ಮುಖ್ಯ ಲಕ್ಷಣಗಳಾದ ಭೂಬಳಕೆ, ಬೆಳೆಸುವ ಬೆಳೆಗಳು, ತಳಿ, ಇಳುವರಿ, ಬಳಸುವ ಕೃಷಿ ಉಪಕರಣಗಳು ಮತ್ತು ಗೊಬ್ಬರಗಳ ಬಳಕೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದುತ್ತದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಭೂಸ್ವರೂಪ, ವಾಯುಗುಣ, ಮಳೆ ಹಂಚಿಕೆ, ಮಣ್ಣಿನ ವಿಧಗಳು ಮಾರುಕಟ್ಟೆ ತಾಂತ್ರಿಕತೆ, ಬಂಡವಾಳ ಹೂಡಿಕೆ, ಕಾರ್ಮಿಕರ ಲಭ್ಯತೆ ಮುಂತಾದವು.

ಭಾರತದಲ್ಲಿ ರೂಢಿಯಲ್ಲಿರುವ ಪ್ರಮುಖ ವ್ಯವಸಾಯದ ವಿಧಾನಗಳು

  • ೧. ಪ್ರಾಚೀನಕಾಲದ ಜೀವನಾಧಾರ ಬೇಸಾಯ
  • ೨. ವಾಣಿಜ್ಯ ಬೇಸಾಯ
  • ೩. ಮಿಶ್ರ ಬೇಸಾಯ
  • ೪. ತೋಟಗಾರಿಕೆ

ಜೀವನಾಧಾರ ಬೇಸಾಯ:

  • ಜನರು ತಮ್ಮ ಗೃಹ ಬಳಕೆಗಾಗಿ ಮಾತ್ರ ಕೃಷಿ ಉತ್ಪನ್ನಗಳನ್ನು ಉತ್ಪಾದಿಸುವುದಕ್ಕೆ 'ಜೀವನಾಧಾರ ಬೇಸಾಯ' ಎನ್ನುತ್ತಾರೆ. ಈ ಬೇಸಾಯ ಪದ್ಧತಿಯು ಈಶಾನ್ಯ ಭಾರತ, ಒರ್ರಿಸ್ಸಾ ಮತ್ತು ಮಧ್ಯಪ್ರದೇಶದ ಬೆಟ್ಟಗಳಲ್ಲಿ ರೂಢಿಯಲ್ಲಿದೆ. ಈ ಪದ್ಧತಿಯ ಲಕ್ಷಣಗಳೆಂದರೆ ಚಿಕ್ಕ ಪ್ರಮಾಣದ ಭೂ ಹಿಡುವಳಿ, ಪುರಾತನ ಹಾಗೂ ಸರಳ ಕೃಷಿ ಉಪಕರಣಗಳ ಬಳಕೆ, ಅವೈಜ್ಞಾನಿಕ ಕೃಷಿ ವಿಧಾನ ಮುಂತಾದವು. ಇದರಲ್ಲಿ ಎರಡು ವಿಧಗಳಿವೆ
ವ್ಯವಸಾಯ 
ಸ್ಲ್ಯಾಷ್ ಮತ್ತು ಬರ್ನ್-ಬಲವಾಗಿ ಅಗಿ ಮತ್ತು ಸುಡು; ವರ್ಗಾವಣೆ ಕೃಷಿ, ಥೈಲ್ಯಾಂಡ್

ವರ್ಗಾವಣೆ ಬೇಸಾಯ:

  • ವರ್ಗಾವಣೆ ಬೇಸಾಯ ಪದ್ಧತಿ ಎಂದರೆ ಅರಣ್ಯದ ಕೆಲವು ಭಾಗಗಳಲ್ಲಿ ಮರಗಳನ್ನು ಕಡಿದು, ಅಲ್ಲಿ ವಿಸ್ತರಿಸಿ ಬೇಸಾಯ ಮಾಡುವುದು. ಹಲವು ವರ್ಷಗಳ ಬೇಸಾಯದ ನಂತರ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ, ಬೇಸಾಯಗಾರರು ಇತರ ಪ್ರದೇಶಗಳಿಗೆ ವಲಸೆ ಹೋಗುವರು. ಈ ಬೇಸಾಯದಿಂದ ಮಣ್ಣಿನ ಸವಕಳಿ ಉಂಟಾಗಿ ಕಡಿಮೆ ಇಳುವರಿ ಕೊಡುತ್ತದೆ. ಈ ಬಗೆಯ ಬೇಸಾಯವನ್ನು ಕರ್ನಾಟಕದಲ್ಲಿ 'ಕುಮರಿ', ಅಸ್ಸಾಂನಲ್ಲಿ 'ಜೂಮ್', ಕೇರಳದಲ್ಲಿ 'ಪೊನಂ' ಮತ್ತು ಆಂಧ್ರಪ್ರದೇಶದಲ್ಲಿ 'ಪೋಡು' ಎಂದು ಕರೆಯುತ್ತಾರೆ.

ಸ್ಥಿರ ಬೇಸಾಯ

ವ್ಯವಸಾಯ 
ಪಂಜಾಬ್ ರಾಜ್ಯವು ಭಾರತದ ಹಸಿರು ಕ್ರಾಂತಿಯನ್ನು ಮುನ್ನಡೆಸಿತು ಮತ್ತು ದೇಶದ ಧಾನ್ಯದ ಬುಟ್ಟಿ ಎಂಬ ಹೆಗ್ಗಳಿಕೆಯನ್ನು ಗಳಿಸಿತು
  • ಸ್ಥಿರ ಬೇಸಾಯ ಪದ್ಧತಿಯಲ್ಲಿ ಜನರು ಅನುಕೂಲಕರವಾದ ಪ್ರದೇಶಗಳಲ್ಲಿ ಸ್ಥಿರವಾಗಿ ನೆಲೆಸಿ ವ್ಯವಸಾಯವನ್ನು ಮಾಡುತ್ತಾರೆ. ಆದರೆ ವ್ಯವಸಾಯದ ವಿಧಾನ, ಬಳಸುವ ಬೀಜ ಇವು ಸಾಂಪ್ರದಾಯಿಕವಾಗಿರುತ್ತವೆ. ಕೃಷಿ ಉತ್ಪಾದನೆಯನ್ನು ರೈತರು ತಮ್ಮ ಮನೆಯ ಉಪಯೋಗಕ್ಕಾಗಿ ಬಳಸಿಕೊಂಡು ಉಳಿದ ಹೆಚ್ಚಿನ ಉತ್ಪಾದನೆಯನ್ನು ತಮಗೆ ಬೇಕಾದ ಇತರ ವಸ್ತುಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದರು. ಈಗ ಮಾರಾಟ ಮಾಡುತ್ತಾರೆ.

ವಾಣಿಜ್ಯ ಬೇಸಾಯ

ವ್ಯವಸಾಯ 
ಸೂರ್ಯಕಾಂತಿ ಫಾರ್ಮ್, ಭಾರತದಲ್ಲಿ ಕೃಷಿ, ಜನವರಿ 2013
  • ವ್ಯಾಪಾರದ ಉದ್ದೇಶದಿಂದ ಬೆಳೆಗಳ ಉತ್ಪಾದನೆ ಹಾಗು ಪ್ರಾಣಿಗಳ ಸಾಕಣೆಯನ್ನು ವಾಣಿಜ್ಯ ಬೇಸಾಯವೆಂದು ಕರೆಯುವರು.ಈ ಪದ್ಧತಿಯಲ್ಲಿ ವಿಸ್ತಾರವಾಗಿರುವ ಕೃಷಿ ಭೂಮಿಯು ಒಂದೇ ಬೆಳೆಯ ಉತ್ಪಾದನೆಗೆ ಬಳಕೆಯಾಗುವುದು.ಈ ಬೆಲೆಯ ಉತ್ಪಾದನೆಗೆ ಭೂಸ್ವರೂಪ, ಮಣ್ಣು, ನೀರು, ವಾಯುಗುಣಗಳು ಹೆಚ್ಚು ಸೂಕ್ತವಾಗಿರುತ್ತವೆ. ಯಂತ್ರೋಪಕರಣ, ರಸಗೊಬ್ಬರ, ಸುಧಾರಿತ ಬೀಜ, ಕೀಟ ನಶಕಗಳನ್ನು ಯಥೇಚ್ಛವಾಗಿ ಬಳಸುವರು. ಹತ್ತಿ, ಎಣ್ಣೆ ಕಾಳುಗಳು, ತಂಬಾಕು, ಮೆಣಸಿನಕಾಯಿ ಮತ್ತು ಕಬ್ಬು ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ.

ಮಿಶ್ರ ಬೇಸಾಯ

ವ್ಯವಸಾಯ 
ಪೊಂಡಾದಲ್ಲಿ ಅಡಿಕೆಮರ ಮತ್ತು ತಾಳೆ (ಪಾಮ್)
ವ್ಯವಸಾಯ 
ತೆಂಗಿನಕಾಯಿ ಮತ್ತು ಟಾಗೆಟ್ಸ್ ಎರೆಕ್ಟಾ, ಮೆಕ್ಸಿಕನ್ ಮಾರಿಗೋಲ್ಡ್
ವ್ಯವಸಾಯ 
ಲಂಡನ್ ನಲ್ಲಿ ದೇಶೀಯ ಕಿಚನ್ ಗಾರ್ಡನ್ ವೆಜಿಟಬಲ್ ಗಾರ್ಡನ್
  • ಕೃಷಿ ಬೆಳೆಗಳ ಬೇಸಾಯದ ಜೊತೆಗೆ ಪಶುಪಾಲನೆ, ಹೈನುಗಾರಿಕೆ, ಕೋಳಿ ಸಾಕಣೆ, ಜೇನು ಸಾಕಣೆ, ರೇಷ್ಮೆ ಕೃಷಿ ಮುಂತಾದವು ಮಿಶ್ರ ಬೇಸಾಯ ಪದ್ಧತಿಗಳಾಗಿವೆ. ಭಾರತದ ಅನೇಕ ಕಡೆಗಳಲ್ಲಿ ಈ ಬೇಸಾಯ ಪದ್ಧತಿ ರೂಢಿಯಲ್ಲಿದೆ.ಈ ಪದ್ಧತಿಯ ಪ್ರಮುಖ ಗುಣಲಕ್ಷಣಗಳೆಂದರೆ ೧. ಈ ವ್ಯವಸಾಯದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುವುದು ೨. ವೈಜ್ಞಾನಿಕ ಕೃಷಿ ವಿಧಾನಗಳನ್ನು ಅನುಸರಿಸಲಾಗುವುದು. ೩. ಇದಕ್ಕೆ ಸಾಕಷ್ಟು ಬಂಡವಾಳ ಅಗತ್ಯ.

ತೋಟಗಾರಿಕೆ ಬೇಸಾಯ:

  • ಭಾರತದ ಮುಖ್ಯ ಬೇಸಾಯ ಪದ್ಧತಿಗಳಲ್ಲಿ ತೋಟಗಾರಿಕೆ ಬೇಸಾಯವು ಒಂದಾಗಿದೆ. ಕಾಫಿ, ಚಹಾ, ರಬ್ಬರ್ ಹಾಗೂ ಸಾಂಬಾರ್ ಪದಾರ್ಥಗಳು, ತೆಂಗು, ಅಡಿಕೆ, ವೀಳ್ಯದೆಲೆ ಮುಂತಾದವು ತೋಟಗಾರಿಕೆ ಬೆಳೆಗಲ್ಲಿ ಮುಖ್ಯವಾದುವು. ಒಂದೇ ಬೆಳೆಯನ್ನು ವಿಸ್ತಾರವಾದ ತೋಟದಲ್ಲಿ ಬೆಳೆಯಲಾಗುವುದು. ಭಾರತದಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಈ ಬೇಸಾಯ ಪದ್ಧತಿಯು ರೂಢಿಯಲ್ಲಿದೆ. ಇದರಿಂದ ವಿದೇಶಿ ವಿನಿಮಯದ ಗಳಿಕೆಯೂ ಆಗುತ್ತದೆ.
ವ್ಯವಸಾಯ 
ಕೃಷಿ ಬೆಳೆಗಳ ಬೇಸಾಯದ ಜೊತೆಗೆ ಪಶುಪಾಲನೆ, ಹೈನುಗಾರಿಕೆ, ಕೋಳಿ ಸಾಕಣೆಯು ಸಹ ಉದ್ಯಮವಾಗಿದೆ

ಭಾರತದಲ್ಲಿ ವ್ಯವಸಾಯದ ಅಭಿವೃದ್ಧಿ

  • ಕೃಷಿ ವಿಜ್ಞಾನದಲ್ಲಿ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಕೃಷಿಗೆ ನೀಡಿದ ಅತ್ಯುತ್ತಮ ಕೊಡುಗೆ ಮತ್ತು ಭಾರತವನ್ನು ಆಹಾರ ಸಾರ್ವಭೌಮ ರಾಷ್ಟ್ರವನ್ನಾಗಿ ಮಾಡಿದ್ದಕ್ಕಾಗಿ 2013 ರಲ್ಲಿ ಎನ್‌ಡಿಟಿವಿ ಅವರಿಗೆ 'ಭಾರತದ 25 ಜೀವಂತ ದಂತಕಥೆ'( 25 living legend of India) ಎಂದು ಪ್ರಶಸ್ತಿ ನೀಡಿತು.
  • ಭಾರತೀಯ ನೀರಾವರಿ ಮೂಲಸೌಕರ್ಯವು ನದಿಗಳಿಂದ ಬರುವ ಪ್ರಮುಖ ಮತ್ತು ಸಣ್ಣ ಕಾಲುವೆಗಳ ಜಾಲ, ಅಂತರ್ಜಲ ಬಾವಿ ಆಧಾರಿತ ವ್ಯವಸ್ಥೆಗಳು, ಟ್ಯಾಂಕ್‌ಗಳು ಮತ್ತು ಕೃಷಿ ಚಟುವಟಿಕೆಗಳಿಗಾಗಿ ಇತರ ಮಳೆನೀರು ಕೊಯ್ಲು ಯೋಜನೆಗಳನ್ನು ಒಳಗೊಂಡಿದೆ. ಇವುಗಳಲ್ಲಿ, ಅಂತರ್ಜಲ ವ್ಯವಸ್ಥೆಯು ದೊಡ್ಡದಾಗಿದೆ. ಭಾರತದಲ್ಲಿ 160 ದಶಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ, ಸುಮಾರು 39 ದಶಲಕ್ಷ ಹೆಕ್ಟೇರ್ ಅನ್ನು ಅಂತರ್ಜಲ ಬಾವಿಗಳಿಂದ ಮತ್ತು ಹೆಚ್ಚುವರಿಯಾಗಿ 22 ದಶಲಕ್ಷ ಹೆಕ್ಟೇರ್‍ಗಳನ್ನು ನೀರಾವರಿ ಕಾಲುವೆಗಳಿಂದ ನೀರಾವರಿ ಮಾಡಬಹುದು. 2010 ರಲ್ಲಿ, ಭಾರತದಲ್ಲಿ ಕೇವಲ 35% ಕೃಷಿ ಭೂಮಿಯನ್ನು ಮಾತ್ರ ವಿಶ್ವಾಸಾರ್ಹವಾಗಿ ನೀರಾವರಿ ಮಾಡಲಾಯಿತು. ಭಾರತದಲ್ಲಿ ಸುಮಾರು 2/3 ನೇ ಕೃಷಿ ಭೂಮಿಯು ಮಳೆಗಾಲವನ್ನು ಅವಲಂಬಿಸಿದೆ. ಕಳೆದ 50 ವರ್ಷಗಳಲ್ಲಿ ನೀರಾವರಿ ಮೂಲಸೌಕರ್ಯದಲ್ಲಿನ ಸುಧಾರಣೆಗಳು ಭಾರತಕ್ಕೆ ಆಹಾರ ಸುರಕ್ಷತೆಯನ್ನು ಸುಧಾರಿಸಲು, ಮಾನ್ಸೂನ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಗ್ರಾಮೀಣ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡಿದೆ. ನೀರಾವರಿ ಯೋಜನೆಗಳಿಗೆ ಬಳಸುವ ಅಣೆಕಟ್ಟುಗಳು ಬೆಳೆಯುತ್ತಿರುವ ಗ್ರಾಮೀಣ ಜನಸಂಖ್ಯೆಗೆ ಕುಡಿಯುವ ನೀರನ್ನು ಒದಗಿಸಲು, ಪ್ರವಾಹವನ್ನು ನಿಯಂತ್ರಿಸಲು ಮತ್ತು ಕೃಷಿಗೆ ಬರ-ಸಂಬಂಧಿತ ಹಾನಿಯನ್ನು ತಡೆಯಲು ಸಹಾಯ ಮಾಡಿದೆ. ಆದಾಗ್ಯೂ, ಉಚಿತ ವಿದ್ಯುತ್ ಮತ್ತು ಕಬ್ಬು ಮತ್ತು ಭತ್ತದಂತಹ ನೀರಿನ ತೀವ್ರ ಬೆಳೆಗಳಿಗೆ ಆಕರ್ಷಕ ಕನಿಷ್ಠ ಬೆಂಬಲ ಬೆಲೆ ನೀಡಿಕೆ, ಅಂತರ್ಜಲ ಗಣಿಗಾರಿಕೆಯನ್ನು ಪ್ರೋತ್ಸಾಹಿಸಿದೆ, ಇದು ಅಂತರ್ಜಲ ಕ್ಷೀಣತೆ ಮತ್ತು ನೀರಿನ ಗುಣಮಟ್ಟಕ್ಕೆ ಕಾರಣವಾಗುತ್ತದೆ. ಭಾರತದಲ್ಲಿ ಕೃಷಿಗೆ ಲಭ್ಯವಿರುವ 60% ಕ್ಕಿಂತ ಹೆಚ್ಚು ನೀರನ್ನು ಅಕ್ಕಿ ಮತ್ತು ಸಕ್ಕರೆಯ ಉತ್ಪಾದನೆ ಕೃಷಿಗಳು ಸೇವಿಸುವುದು, ಎಂದು 2019 ರಲ್ಲಿ ಸುದ್ದಿ ವರದಿಯೊಂದು ಹೇಳಿದೆ, ಎರಡು ಬೆಳೆಗಳು 24% ಕೃಷಿ ಪ್ರದೇಶವನ್ನು ಆಕ್ರಮಿಸಿಕೊಂಡಿವೆ.

ಉತ್ಪಾದನೆ

  • 2011 ರ ಹೊತ್ತಿಗೆ, ಭಾರತವು ದೊಡ್ಡ ಮತ್ತು ವೈವಿಧ್ಯಮಯ ಕೃಷಿ ಕ್ಷೇತ್ರವನ್ನು ಹೊಂದಿದ್ದು, ಅದರ ಪಾಲು ಸರಾಸರಿ ಜಿಡಿಪಿಯಲ್ಲಿ ಸುಮಾರು 16% ಮತ್ತು ರಫ್ತು ಗಳಿಕೆಯ 10% ನಷ್ಟಿದೆ. ಭಾರತದ ಕೃಷಿಯೋಗ್ಯ ಭೂಪ್ರದೇಶ 159.7 ಮಿಲಿಯನ್ ಹೆಕ್ಟೇರ್ (394.6 ಮಿಲಿಯನ್ ಎಕರೆ) ಯುನೈಟೆಡ್ ಸ್ಟೇಟ್ಸ್ ನಂತರ ವಿಶ್ವದ ಎರಡನೇ ಅತಿದೊಡ್ಡ ಪ್ರದೇಶವಾಗಿದೆ. ಇದರ ಒಟ್ಟು ನೀರಾವರಿ ಬೆಳೆ ಪ್ರದೇಶ 82.6 ದಶಲಕ್ಷ ಹೆಕ್ಟೇರ್ (215.6 ದಶಲಕ್ಷ ಎಕರೆ) ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಗೋಧಿ, ಅಕ್ಕಿ, ಬೇಳೆಕಾಳುಗಳು, ಹತ್ತಿ, ಕಡಲೆಕಾಯಿ, ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಅನೇಕ ಬೆಳೆಗಳ ಜಾಗತಿಕ ಉತ್ಪಾದಕರಲ್ಲಿ ಭಾರತ ಅಗ್ರ ಮೂರು ಸ್ಥಾನದಲ್ಲಿದೆ. ವಿಶ್ವಾದ್ಯಂತ, 2011 ರ ಹೊತ್ತಿಗೆ, ಭಾರತವು ಎಮ್ಮೆ ಮತ್ತು ದನಗಳ ಅತಿದೊಡ್ಡ ಹಿಂಡುಗಳನ್ನು ಹೊಂದಿತ್ತು, ಅತಿದೊಡ್ಡ ಹಾಲು ಉತ್ಪಾದಕವಾಗಿದೆ ಮತ್ತು ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಕೋಳಿ ಉದ್ಯಮಗಳಲ್ಲಿ ಒಂದಾಗಿದೆ. "FAO-STAT: ಉತ್ಪಾದನೆ-ಬೆಳೆಗಳು, 2010 ಡೇಟಾ". ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ. 2011. 14 ಜನವರಿ 2013 ರಂದು ಮೂಲದಿಂದ ಸಂಗ್ರಹಿಸಲಾಗಿದೆ-

ನೋಡಿ

ಉಲ್ಲೇಖ

Tags:

ವ್ಯವಸಾಯ ದ ವಿಧಾನಗಳುವ್ಯವಸಾಯ ನೋಡಿವ್ಯವಸಾಯ ಉಲ್ಲೇಖವ್ಯವಸಾಯಕೈಗಾರಿಕೆಗಳುಭೂಮಿಮಾನವ

🔥 Trending searches on Wiki ಕನ್ನಡ:

ಲಕ್ಷ್ಮಿಕರ್ನಾಟಕದ ಆರ್ಥಿಕ ಪ್ರಗತಿದಯಾನಂದ ಸರಸ್ವತಿಹರಿಹರ (ಕವಿ)ಬಾಲ್ಯ ವಿವಾಹಅರವಿಂದ ಘೋಷ್ಕೆ. ಅಣ್ಣಾಮಲೈಭಾರತದ ಮುಖ್ಯ ನ್ಯಾಯಾಧೀಶರುಭೂಕಂಪಸುದೀಪ್ಕರ್ನಾಟಕದ ಅಣೆಕಟ್ಟುಗಳುನಾಮಪದಗುರುರಾಜ ಕರಜಗಿಮೈಗ್ರೇನ್‌ (ಅರೆತಲೆ ನೋವು)ವಿದುರಾಶ್ವತ್ಥಅಷ್ಟ ಮಠಗಳುಮಸೂದೆಪ್ರಬಂಧಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆತತ್ತ್ವಶಾಸ್ತ್ರಬಿಳಿಗಿರಿರಂಗನ ಬೆಟ್ಟಮೂಕಜ್ಜಿಯ ಕನಸುಗಳು (ಕಾದಂಬರಿ)ದ.ರಾ.ಬೇಂದ್ರೆವಾಣಿಜ್ಯ ಪತ್ರಹನುಮಂತಸುಧಾ ಚಂದ್ರನ್ಚಂದ್ರಬಾಹುಬಲಿಎಸ್. ಜಾನಕಿಜಾಗತಿಕ ತಾಪಮಾನ ಏರಿಕೆಪ್ರಜಾವಾಣಿರೇಡಿಯೋಬೆಸಗರಹಳ್ಳಿ ರಾಮಣ್ಣಕ್ರಿಕೆಟ್ಪಂಚ ವಾರ್ಷಿಕ ಯೋಜನೆಗಳುಜಗತ್ತಿನ ಅತಿ ಎತ್ತರದ ಪರ್ವತಗಳುನೀರುಗೋಲ ಗುಮ್ಮಟಜಾಗತಿಕ ತಾಪಮಾನಸಾಗುವಾನಿಬಸವಲಿಂಗ ಪಟ್ಟದೇವರುಕನ್ನಡ ರಂಗಭೂಮಿಜೋಡು ನುಡಿಗಟ್ಟುಭಾರತೀಯ ಸ್ಟೇಟ್ ಬ್ಯಾಂಕ್ಜೈನ ಧರ್ಮಕರ್ನಾಟಕ ಸಂಗೀತತೆಲುಗುಆವರ್ತ ಕೋಷ್ಟಕಏಷ್ಯಾಗಾಂಧಿ ಜಯಂತಿಶಾಂತಲಾ ದೇವಿಆಟಿಸಂವಿಜಯಾ ದಬ್ಬೆವಿರಾಟ್ ಕೊಹ್ಲಿಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಚುನಾವಣೆರಾಷ್ಟ್ರಕೂಟಮೈಸೂರು ಅರಮನೆಕನ್ನಡ ಸಾಹಿತ್ಯಕ್ಯಾನ್ಸರ್ಪಂಚಾಂಗಪೂರ್ಣಚಂದ್ರ ತೇಜಸ್ವಿಕಿತ್ತೂರು ಚೆನ್ನಮ್ಮಕಾಲಾಯ ತಸ್ಮೈ ನಮಃ (ಚಲನಚಿತ್ರ)ಅಕ್ರಿಲಿಕ್ಪುಟ್ಟರಾಜ ಗವಾಯಿಕೈಗಾರಿಕೆಗಳುಉತ್ಪಲ ಮಾಲಾ ವೃತ್ತಹಸಿರುಕರ್ಬೂಜನೇಮಿಚಂದ್ರ (ಲೇಖಕಿ)ಗಾದೆಮಂಜಮ್ಮ ಜೋಗತಿತಿಂಥಿಣಿ ಮೌನೇಶ್ವರಗೋಪಾಲಕೃಷ್ಣ ಅಡಿಗ🡆 More