ಮಾನವ ಹಕ್ಕುಗಳು ಭಾರತದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು (ವಸ್ತುಸ್ಥಿತಿ) ಬಹಳ ಸಂಕೀರ್ಣ ರಚನೆಯಾಗಿದೆ.
ಕಾರಣವೆಂದರೆ ದೇಶದ ವಿಶಾಲವಾದ ಭೂ ಭಾಗ ಮತ್ತು ಅತ್ಯದ್ಭುತ ವೈವಿಧ್ಯತೆಯ ಪರಿಣಾಮವಾಗಿ, ಇದರ ಸ್ಥಾನವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ನೀತಿ ಮತ್ತು ಈ ದೇಶದ ಸಾರ್ವಭೌಮತ್ವ, ಸಾಮಾಜಿಕ ಸಮಾನತೆ, ಪ್ರಜಾತಂತ್ರ ಗಣರಾಜ್ಯ ರಾಷ್ಟ್ರವಾಗಿದ್ದು, ಮತ್ತು ಇತಿಹಾಸವನ್ನು ದಾಖಲಿಸಿದ್ದ ಹಳೆಯ ವಸಾಹತುಶಾಹಿ ಪ್ರಾಂತ್ಯಗಳಂತಿದೆ. ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳ ನೀಡಿಕೆಯ ಜೊತೆ, ಧಾರ್ಮಿಕ ಸ್ವಾತಂತ್ರ್ಯವನ್ನೂ ಒದಗಿಸಿಕೊಟ್ಟಿದೆ. ವಾಕ್ಯಾಂಗದ ಉಪ ನಿಯಮಗಳು ಮಾತನಾಡುವ (ಹಕ್ಕು)ಸ್ವಾತಂತ್ರ್ಯತೆಯನ್ನು ಒದಗಿಸಿದೆ. ಕಾರ್ಯಾಂಗ ಮತ್ತು ನ್ಯಾಯಾಂಗ ಬೇರೆ ಬೇರೆಯಾಗಿದ್ದು, ದೇಶದ ಒಳಗೆ ಮತ್ತು ಹೊರಗೆ ಎಲ್ಲಾ ರೀತಿಯ ಚಲನೆಯ ಸ್ವಾತಂತ್ರ್ಯವನ್ನೂ ನೀಡಲಾಗಿದೆ.
ಮತ್ತೆ ಮತ್ತೆ ಹೇಳುವಂತೆ, ಅದರಲ್ಲಿಯೂ ಭಾರತೀಯ ಮಾನವ ಹಕ್ಕುಗಳ ತಂಡವು ಮತ್ತು ಕ್ರಿಯಾಶೀಲರು ಹೇಳುವಂತೆ, ದಲಿತ ಸಂಘದ ಸದಸ್ಯರು ಅಥವಾ ಅಸ್ಪೃಶ್ಯರು ಬಹಳ ಕಷ್ಟ ಅನುಭವಿಸಿದ್ದು, ಈಗಲೂ ಅನುಭವಿಸುತ್ತಿದ್ದು, ಗಣನೀಯ ತಾರತಮ್ಯದ ವಿವೇಚನೆಯಿಂದ ಇನ್ನೂ ತೊಳಲಾಡುತ್ತಿದ್ದಾರೆ. ಭಾರತದಲ್ಲಿ ಮಾನವ ಹಕ್ಕುಗಳು ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಈ ದೇಶವು ಸಾಮಾನ್ಯವಾಗಿ ಮಾನವ ಹಕ್ಕುಗಳಿಗೆ ಸಂಬಂಧಪಟ್ಟಂತೆ ಗಮನಕೊಡುವಂತಹದ್ದಲ್ಲ,ಬೇರೆ ದೇಶಗಳಲ್ಲಿರುವಂತೆ ದಕ್ಷಿಣ ಏಷ್ಯ ದಲ್ಲಿ . ಈ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡು, ವಿಶ್ವ ೨೦೦೬ರ ಸ್ವಾತಂತ್ರ್ಯ ವರದಿಯ ಅನ್ವಯ, ಸ್ವಾತಂತ್ರ್ಯದ ಮನೆಯು, ಭಾರತಕ್ಕೆ ರಾಜಕೀಯ ಹಕ್ಕಿಗೆ ೨ನೇ ಸ್ಥಾನವನ್ನು ಹಾಗೂ ನಾಗರೀಕ ಸ್ವಾತಂತ್ರಕ್ಕೆ ೩ನೇ ಸ್ಥಾನವನ್ನು ಕೊಟ್ಟು , ಸ್ವಾತಂತ್ರತೆಯಲ್ಲಿ ಅತ್ಯಂತ ಉನ್ನತ ದರ್ಜೆಯ ಸ್ಥಾನವನ್ನು ಪಡೆಯಿತು.
ಪೊಲೀಸರ ನಡತೆ ಮತ್ತು ನೀಡುವ ಹಿಂಸೆಗಳ ಬಗ್ಗೆ ರಾಜ್ಯ ಸರ್ಕಾರದ ತಡೆಗಳಿದ್ದರೂ, ಪೋಲೀಸರ ಅಧೀನದಲ್ಲಿ ಪೊಲೀಸರು ನೀಡುವ ಹಿಂಸೆ/ದೌರ್ಜನ್ಯಅಧಿಕವಾಗಿದ್ದು, ಇದು ಬಂಧನದಲ್ಲಿದ್ದಾಗ ಆಗುವ ಸಾವಿಗೆ ಬಹು ಮುಖ್ಯ ಕಾರಣವಾಗಿರುತ್ತದೆ. ಪೊಲೀಸರು ಶ್ರೀಮಂತ ಹಾಗು ಪ್ರಾಭಾವೀ ಅಪರಾಧಿಗಳನ್ನು ರಕ್ಷಿಸಲು,ಹಲವಾರು ಬಾರಿ ಮುಗ್ದ ಜನರಿಂದ 'ತಪ್ಪೊಪ್ಪಿಗೆ' ಸಿಗುವವರೆಗೂ ಅವರನ್ನು ಪೊಲೀಸರು ಹಿಂಸಿಸುತ್ತಾರೆ ಕಾಮನ್ ವೆಲ್ತ್^^ನ ಮಾನವ ಹಕ್ಕುಗಳ ಭಾರತೀಯ ಶಾಖೆಯ ವಿಷಯ ನಿರ್ವಹಣೆಗಾರರಾದ ಜಿ.ಪಿ. ಜೋಶಿರನ್ವಯ, ನವದೆಹಲಿಯಲ್ಲಿ ಹೇಳಿಕೆಯನ್ನು ನೀಡಿ ಪೋಲೀಸರ ಹಿಂಸಾಚಾರಕ್ಕೆ ಹೊಣೆರಹಿತ ಪೋಲಿಸ್ ಅಧಿಕಾರಿಗಳೇ ಕಾರಣ ಎಂದು ಹೇಳುತ್ತಾರೆ.
೨೦೦೬ರಲ್ಲಿ, ಭಾರತದ ಸರ್ವ ಶ್ರೇಷ್ಠ ನ್ಯಾಯಾಲಯವು ಪ್ರಕಾಶ್ ಸಿಂಗ್ ಮತ್ತು ಭಾರತ ಒಕ್ಕೊಟದ ವಿರುದ್ಧ ನಡೆದ ಪ್ರಕರಣದ ತೀರ್ಪಿನಲ್ಲಿ ,ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಆದೇಶ ನೀಡಿ, ಪೊಲೀಸರ ಸುಧಾರಣೆ ಜಾರಿಗೆ ತರಲು ೭ ಅಂಶಗಳ ಕಾರ್ಯಕ್ರಮವನ್ನು ಹೇಳಿತು. ಈ ಅಂಶಗಳ ಮುಖ್ಯ ಉದ್ದೇಶಗಳು ಎರಡು ರೀತಿಯಾಗಿದ್ದು, ನೇಮಕಾತಿಯಲ್ಲಿ ಸಮಯ ಮತ್ತು ಹೊಸ ಹರಿವಿಗೆ ಅವಕಾಶ/ ಪೋಲೀಸರ ವರ್ಗಾವಣೆ ಹಾಗು ಪೋಲೀಸರ ಮೇಲೆ ಹೆಚ್ಚಿನ ನಿಗಾ ಇಡಲು ಆದೇಶಿಸಿತು.
ಯುನೈಟೆಡ್ ಸಂಯುಕ್ತ ರಾಷ್ಟ್ರ ಹಾಗು ಹಲವಾರು ಅಂತರ ರಾಷ್ಟ್ರೀಯ ಸಂಸ್ಥೆಗಳು, ಕಾಶ್ಮೀರದಲ್ಲಿನ ಮಾನವ ಹಕ್ಕುಗಳಿಗಾದ ಹಿಂಸೆಗಳ ಬಗ್ಗೆ ಕಾಶ್ಮೀರದಲ್ಲಿನ ಭಾರತೀಯ ಆಡಳಿತಕ್ಕೆ ವರದಿ ಮಾಡಿದೆ. 'ಓ ಹೆಚ್ ಸಿ ಹೆಚ್ ಆರ್' ನ ಇತ್ತೀಚಿನ ಪತ್ರಿಕಾ ವರದಿಗಾರರ ಪ್ರಕಾರ " ಮಾನವ ಹಕ್ಕುಗಳ ಕಮಿಷನರ್, ಇತ್ತೀಚಿಗೆ ನಡೆದ ಭಾರತದ ಆಡಳಿತದಲ್ಲಿನ ಕಾಶ್ಮೀರದ ಹಿಂಸಾಚಾರದ ಬಗ್ಗೆ, ಆಕ್ಷೇಪ ವ್ಯಕ್ತಪಡಿಸಿದ್ದು, ಅಲ್ಲಿ ಸಂಭವಿಸಿದ ನಾಗರೀಕರ ಸಾವುಗಳು, ಸ್ವಾತಂತ್ರ್ಯದ ಹರಣ ಮತ್ತು ಮಾತಿನ ಸ್ವಾತಂತ್ರ್ಯಕ್ಕೆ ಆದ ತೊಂದರೆಗಳ ಬಗ್ಗೆ ಹೇಳಿದ್ದಾರೆ .".
೧೯೯೬ ರ ಮಾನವ ಹಕ್ಕುಗಳ ವಾಚ್ ವರದಿಯನ್ನು ಗಮನಿಸಿರುವ ಪ್ರಕಾರ ಭಾರತೀಯ ಸೇನೆ ಮತ್ತು ಭಾರತ ಸರ್ಕಾರ " ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಹಿಂಸೆಯನ್ನು ಪ್ರಚೋಧಿಸಿದೆ ." ಇಂತಹ ಒಂದು ಹಿಂಸೆಯ ಪ್ರಕರಣವಾಗಿ ೬ ಜನವರಿ ೧೯೯೩ ರಂದು ಸೋಪೋರ್ ನಗರದಲ್ಲಿ ಘಟನೆಯು ನಡೆದಿದೆ. ಟೈಮ್ ಪತ್ರಿಕೆಯು ಘಟನೆಯನ್ನು ಈ ರೀತಿಯಾಗಿ ವಿವರಿಸಿದೆ: "ಸೈನಿಕನೊಬ್ಬನನ್ನು ಕೊಂದ ಪ್ರಯುಕ್ತ, ಅರೆ ಸೈನ್ಯ ಪಡೆಯು ಸೋಪೋರನ ಮಾರುಕಟ್ಟೆಯ ಮೇಲೆ ಧಾಳಿ ನಡೆಸಿ, ಕಟ್ಟಡಗಳಿಗೆ ಬೆಂಕಿ ಹಚ್ಚಿ ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದೆ.
ಭಾರತ ಸರ್ಕಾರವು ಈ ಘಟನೆಯನ್ನು 'ದುರಾದೃಷ್ಟಕರ' ಎಂದು ಹೇಳಿ ಮದ್ದು ಗುಂಡುಗಳ ಉಗ್ರಾಣದ ಮೇಲೆ ಪ್ರಹಾರವಾಗಿದೆ ಎಂದು ಹೇಳಿ, ಇದು ಹಲವಾರು ಜನರ ಸಾವಿಗೆ ಕಾರಣವಾಗಿದೆ" ಎಂದು ಹೇಳಿದೆ." ಇದರ ಜೊತೆಗೆ, ಪೊಲೀಸರಿಂದ ಅಥವಾ ಕಾಶ್ಮೀರ ಸೈನಿಕರಿಂದ ಹಲವು ಕಣ್ಮರೆಗಳು ಆಗುತ್ತಿವೆ ಎಂಬುದಾಗಿ ಹಲವಾರು ಮಾನವ ಹಕ್ಕು ಸಂಸ್ಥೆಗಳು ಆಕ್ಷೇಪಿಸಿವೆ.
ಹಲವು ಮಾನವ ಹಕ್ಕು ಸಂಸ್ಥೆ ಗಳಾದಅಮ್ನೆಸ್ಟಿ ಅಂತರ ರಾಷ್ಟ್ರೀಯ ಮತ್ತು ಹ್ಯುಮನ್ ರೈಟ್ಸ್ ವಾಚ್ (HRW)ಸಂಸ್ಥೆಗಳು, ಭಾರತದಿಂದ ನಡೆಯುತ್ತಿರುವ ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ದಮನವನ್ನು "ನ್ಯಾಯಾಂಗ -ನೇಣು ", "ಕಳೆದುಹೋಗುವಿಕೆ ", ಮತ್ತು ಹಿಂಸೆ ಎಂದು ಖಂಡಿಸಿದ್ದು;
"ಶಕ್ತಿಯುತ ಸೈನ್ಯದ ವಿಶೇಷ ಶಕ್ತಿಯ ಕಾಯ್ದೆ ",ಯು "ಮಾನವ ಹಕ್ಕುಗಳ ಗಮನಕ್ಕೆ ಅವಕಾಶ ನೀಡಿ ಹಿಂಸೆಗೆ ಪ್ರಚೋದನೆ ನೀಡುವಂತದ್ದಾಗಿದೆ. ಸೈನ್ಯ ಬಲದ ವಿಶೇಷ ಅಧಿಕಾರದ ಕಾಯಿದೆ (AFSPA)ನೀಡಿರುವ ಶಕ್ತಿಯ ಪ್ರಕಾರ, ಸೈನ್ಯಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಿದ್ದು, ಅಂದರೆ ಬಂಧಿಸಲು ಅಧಿಕಾರ, ಗೋಲೀಬಾರ್ ಮಾಡಿ ಸಾಯಿಸಾಲು ಅಧಿಕಾರವನ್ನು ಹಾಗು ಆಕ್ರಮಿಸಿ, ಆಸ್ತಿಯನ್ನು ನಾಶ ಮಾಡಲು ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ. ಭಾರತೀಯ ಅಧಿಕಾರಿಗಳು ಹೇಳುವಂತೆ, ಸೈನ್ಯಕ್ಕೆ ಆ ರೀತಿಯ ಅಧಿಕಾರದ ಅವಶ್ಯಕತೆ ಇದ್ದು, ಇದರಿಂದಾಗಿ ಉಗ್ರಗಾಮಿಗಳನ್ನು ತಡೆಯುವ ಹಾಗು ಅದರಿಂದ ದೇಶದ ರಕ್ಷಣೆಗೆ ಇದು ಅಗತ್ಯ ಎಂದು ಹೇಳಿದೆ. ಅಂತಹ ಪರಿಸ್ಥಿತಿಗಳನ್ನು ವಿಶೇಷ ಅಗತ್ಯದ ಕ್ರಮ " ಎಂದು ಬಣ್ಣಿಸಿದೆ.
ಸಾರ್ವಜನಿಕ ರಕ್ಷಣಾ ಕಾಯಿದೆಯನ್ನು ಹಿಂದಕ್ಕೆ ಪಡೆಯಲು ಮಾನವ ಹಕ್ಕುಗಳ ಸಂಸ್ಥೆಯು ಭಾರತಕ್ಕೆ ತಿಳಿಸಿದೆ. ಸಾರ್ವರ್ತ್ರಿಕ ರಕ್ಷಣಾ ಕಾಯಿದೆಯು , " ಯಾವುದೇ ಒಬ್ಬ ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಆದೇಶವಿಲ್ಲದೆ, ಆಡಳಿತದ ದೃಷ್ಟಿಯಿಂದ ಎರಡು ವರ್ಷಗಳ ಕಾಲ ಬಂಧನದಲ್ಲಿ ಇಡಬಹುದಾಗಿದೆ. ". ನಿರ್ವಸತಿಗರ ರಾಷ್ಟ್ರೀಯ ಉನ್ನತ ಸಂಸ್ಥೆಯ ೨೦೦೮ರ ವರದಿಯನ್ವಯದ ಸಮರ್ಥನೆಯಂತೆ ಕಾಶ್ಮೀರದಲ್ಲಿನ ಭಾರತೀಯ ಆಡಳಿತ , 'ಭಾಗಶಃ ಸ್ವತಂತ್ರ' ವಾಗಿದ್ದು, (ಆದರೆ ಪಾಕಿಸ್ತಾನ ಆಡಳಿತದಲ್ಲಿನ ಕಾಶ್ಮೀರ 'ಸ್ವಾತಂತ್ರವಲ್ಲದ್ದು' ಆಗಿದೆ ಎಂದು ಸಮರ್ಥಿಸಿದೆ ).
ವರದಿಗಾರರು ನೀಡಿರುವ ಒಂದು ಅಂದಾಜಿನ ಪ್ರಕಾರ, ಗಡಿಗಳಿಲ್ಲದ ವರದಿಗಾರರು , ಪ್ರಪಂಚದಾದ್ಯಂತದ ಪತ್ರಿಕಾ ಸ್ವಾತಂತ್ರ್ಯದ ಪರಿಕ್ರಮಣಿಕೆಯಲ್ಲಿ ಭಾರತವು ೧೦೫ನೇ ಶ್ರೇಣಿ ಹೊಂದಿದ್ದು, (ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತದ ಪರಿಕ್ರಮಣಿಕೆ ೨೯.೩೩ , ೨೦೦೯ ರಲ್ಲಿದ್ದಂತೆ ). ಭಾರತದ ಸಂವಿಧಾನದಲ್ಲಿ "ಪತ್ರಿಕೆ " ಎಂಬ ಶಬ್ದವನ್ನು ಬಳಸದೆ , "ಮಾತಿನ ಹಕ್ಕು ಮತ್ತು ಹೇಳಿಕೆಯ ಸ್ವಾತಂತ್ರ್ಯವನ್ನು " ಕಾಯ್ದುಕೊಂಡಿದೆ. (ಸಂಹಿತೆ ೧೯(೧) ಅ (a)). ಆದಾಗ್ಯೂ ಈ ಹಕ್ಕು ಉಪನಿಯಮದ(೨)ಅಡಿಯಲ್ಲಿ ಷರತ್ತಿಗೆ ಒಳಪಟ್ಟಿದ್ದು, ಈ ಹಕ್ಕನ್ನು ಮಿತಿಗೊಳಿಸಲು ಸಾಧ್ಯವಿದ್ದು, ಈ ಕಾರಣದಿಂದ ಭಾರತದ ಏಕತೆಯ ಸಾರ್ವಭೌಮತೆಗೆ ಧಕ್ಕೆ ಬಂದಾಗ, ರಾಜ್ಯಗಳ ರಕ್ಷಣೆ ಬಂದಾಗ, ಅಂತರ ರಾಷ್ಟ್ರೀಯ ಸ್ನೇಹ ಸಂಬಂಧಕ್ಕೆ ಕುಂದು ಉಂಟಾದಾಗ, ಸಾರ್ವಜನಿಕ ಆದೇಶವಾದಾಗ, ಗಂಭೀರತೆಯನ್ನು ಕಾಯ್ದುಕೊಳ್ಳುವಾಗ, ಗುಣಗಳನ್ನು ಕಾಯ್ದುಕೊಳ್ಳಬೇಕಾದಾಗ, ನ್ಯಾಯಾಲಯಕ್ಕೆ ಕುಂದುಂಟಾದಾಗ, ಹಕ್ಕು ಚ್ಯುತಿಯಾದಾಗ ಅಥವಾ ಅಪರಾಧಗಳಿಗೆ ಪ್ರೇರಣೆಯಾದಾಗ ", ಕಾನೂನುಗಳಾದಂತ ಅಧಿಕಾರ ಗೋಪ್ಯತೆ ಕಾಯ್ದೆ ಮತ್ತು ಭಯೋತ್ಪಾದನೆ ತಡೆ ಕಾಯ್ದೆ ಗಳು ಇವೆ. (ಪೋಟ ) ಪತ್ರಿಕಾ ಸ್ವಾತಂತ್ರ್ಯವನ್ನು ಮಿತಿಗೊಳಿಸಿದೆ. ಪೋಟ ಕಾಯ್ದೆಯಡಿ, ಒಬ್ಬ ವ್ಯಕ್ತಿಯನ್ನು ಭಯೋತ್ಪಾದನೆಯ ತಡೆಯ ಕಾರಣದಿಂದ,ವಿಚಾರಣೆಯಿಲ್ಲದೆ ೬ ತಿಂಗಳ ಕಾಲ ಬಂಧನದಲ್ಲಿಡಬಹುದಾಗಿದೆ. ೨೦೦೪ರಲ್ಲಿ ಪೋಟ ಕಾಯಿದೆಯನ್ನು ಹಿಂದಕ್ಕೆ ಪಡೆಯಲಾಗಿದ್ದು, ಅದರ ಬದಲಾಗಿ UAPA ಗೆ ತಿದ್ದುಪಡಿ ತರಲಾಗಿದೆ. ಆಡಳಿತ ಗೋಪ್ಯತೆಯ ಕಾಯ್ದೆ ೧೯೨೩ ಈಗಲೂ ಜಾರಿಯಲ್ಲಿದೆ.
ಸ್ವಾತಂತ್ರ್ಯ ಬಂದ ಅರ್ಧ ಶತಮಾನದಲ್ಲಿ, ರಾಜ್ಯದಿಂದ ಮಾಧ್ಯಮದವರ ಮೇಲಿನ ಹಿಡಿತ, ಪತ್ರಿಕಾ ಸ್ವಾತಂತ್ರ್ಯಕ್ಕೆ ಬಹು ದೊಡ್ಡ ನಿರ್ಬಂಧವಾಗಿತ್ತು. ೧೯೭೫ರಲ್ಲಿ ಇಂದಿರಾ ಗಾಂಧಿಯವರು ನೀಡಿದ ಹೆಸರಾಂತ ಹೇಳಿಕೆಯನ್ವಯ ಅಖಿಲ ಭಾರತ ರೇಡಿಯೋ/ಆಕಾಶವಾಣಿ " ಸರ್ಕಾರದ ಒಂದು ಅಂಗವಾಗಿದ್ದು, ಇದು ಸರ್ಕಾರೀ ಅಂಗವಾಗಿಯೇ ಉಳಿಯಲಿದೆ." ೧೯೯೦ರಲ್ಲಿ ಪ್ರಾರಂಭವಾದ ಉದಾರ ನೀತಿಯಿಂದ,ಮಾಧ್ಯಮದ ಮೇಲಿನ ಖಾಸಗೀ ಹಿಡಿತ ಹೊರಹೊಮ್ಮಿತು. ಇದರಿಂದಾಗಿ ಸ್ವಾತಂತ್ರ್ಯ ಹೆಚ್ಚಾಗಿ,ಸರ್ಕಾರದಲ್ಲಿ ಹೆಚ್ಚಿನ ಪರಿಶೀಲನೆಗೆ ಒಳಗಾಯಿತು. ಸಂಸ್ಥೆಗಳಾದ ತೆಹೆಲ್ಕ ಮತ್ತು ಎನ್ ಡಿ ಟಿ ವಿ, ಮುಖ್ಯವಾಗಿ ಪ್ರಭಾವ ಬೀರಿದವು. ಉದಾಹರಣೆಗೆ, ಹರಿಯಾಣದ ಶಕ್ತಿಯುತ ಮಂತ್ರಿ ವಿನೋದ್ ಶರ್ಮ ರಾಜೀನಾಮೆಯನ್ನು ನೀಡುವಂತಾಯಿತು. ಜೊತೆಗೆ , ಪ್ರಸಾರ ಭಾರತಿ ಕಾಯ್ದೆಯನ್ನು ಇತ್ತೀಚಿನ ವರ್ಷದಲ್ಲಿ ಜಾರಿ ಮಾಡಿದ್ದು,ಇದರಿಂದಾಗಿ ಸರ್ಕಾರಕ್ಕೆ ಇದ್ದ ಪತ್ರಿಕೆಯ ಮೇಲಿನ ನಿರ್ಬಂಧ ಕಡಿಮೆ ಆಗಲಾರಂಭಿಸಿತು.
ಭಾರತದ ಸಂವಿಧಾನದಲ್ಲಿನ ೧೫೦ ವರ್ಷ ಹಳೆಯ ಭಾರತೀಯ ದಂದನಾರ್ಹ ನಿಯಮ (IPC)ವನ್ನು, ಈ ಹಿಂದೆ ಇದ್ದ ಬ್ರಿಟಿಷರು ಜಾರಿಗೆ ತಂದ ನಿಯಮದ ಅನ್ವಯ ಸಲಿಂಗ ಕಾಮವನ್ನು ಅಪರಾಧ ಎಂದು ಪರಿಗಣಿಸಲಾಗಿದ್ದು, ೨ನೇ ಜೂನ್, ೨೦೦೯, ರಂದು ದೆಹಲಿಯ ಉಚ್ಚ ನ್ಯಾಯಾಲಯ ಹೊರಡಿಸಿದ ಆದೇಶದ ಅನುಸಾರ ಅದು ಶಿಕ್ಷಾರ್ಹ ಅಪರಾಧವಲ್ಲವೆಂದು ಪರಿಗಣಿಸಲಾಯಿತು.
ಆದರೂ , ಈ ಕಾಯ್ದೆ ಬಹಳ ಅಪರೂಪವಾಗಿ ಜಾರಿಯಲ್ಲಿರುತ್ತದೆ. ಈ ಆದೇಶದ ಅನ್ವಯ,ದೆಹಲಿ ಹೈಕೋರ್ಟ್ ನೀಡಿದ ತೀರ್ಪಿನ ಅನ್ವಯ ಜಾರಿಯಲ್ಲಿದ್ದ, ಭಾರತದ ಸಂವಿಧಾನದ ಹಳೆಯ ನಿಯಮ ಮನುಷ್ಯರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವುದೇ ಆಗಿತ್ತು. ಅಂತಹ ಅಪರಾಧದಿಂದ ಸಂಹಿತೆ (ಆರ್ಟಿಕಲ್)೨೧, ೧೪, ಮತ್ತು ೧೫ ರ ಸಂವಿಧಾನದಡಿಯಲ್ಲಿ ಅದು ಹಿಂಸಾತ್ಮಕವಾಗುತ್ತದೆ.
ಭಾರತದಲ್ಲಿ ಮಾನವರ ಲೈಂಗಿಕ ವ್ಯಾಪಾರವು $೮ ಮಿಲಿಯನ್ ನ್ಯಾಯಬಾಹಿರ ವ್ಯಾಪಾರವಾಗಿದೆ. ಪ್ರತೀ ವರ್ಷ ನೇಪಾಳದಿಂದ ಸುಮಾರು ೧೦,೦೦೦ ಮಹಿಳಾ ಲೈಂಗಿಕ ಕಾರ್ಯಕರ್ತರನ್ನು ಲೈಂಗಿಕ ವ್ಯಾಪಾರಕ್ಕಾಗಿ, ಭಾರತಕ್ಕೆ ಕರೆತಂದು ಶೋಷಣೆ ಮಾಡಲಾಗುತ್ತಿದೆ.
ಬಾಂಗ್ಲಾದೇಶದಿಂದ ಪ್ರತೀ ವರ್ಷ ೨೦,೦೦೦-೨೫,೦೦೦ ಮಹಿಳೆ ಮತ್ತು ಮಕ್ಕಳನ್ನು ಕರೆತಂದು ಈ ಹೇಯ ಕಾರ್ಯದಲ್ಲಿ ತೊಡಗಿಸಲಾಗುತ್ತಿದೆ. ಬಾಬುಭಾಯಿ ಖಿಮಾಭಾಯಿ ಕತಾರ ಎಂಬ ಲೋಕಸಭೆ ಸದಸ್ಯನನ್ನು, ಕೆನಡಾಗೆ ಮಗುವನ್ನು ಕಳ್ಳಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಬಂಧಿಸಲಾಯಿತು.
ಧಾರ್ಮಿಕ ಗುಂಪುಗಳ ನಡುವಿನ ಕೋಮು ಗಲಭೆ ( ಹೆಚ್ಚಾಗಿ ಹಿಂದೂಗಳುಮತ್ತು ಮುಸ್ಲಿಮರುಗಳ ಮಧ್ಯೆ ) ಬ್ರಿಟಿಷರ ಆಡಳಿತದ ಕಾಲದಿಂದ, ಸ್ವಾತಂತ್ರ್ಯದ ದಿನದವರೆಗೂ ನಡೆಯುತ್ತಲೇ ಬಂದಿವೆ. ಕೋಮು ಹಿಂಸಾ ಚಾರದ ಹಳೆಯ ಘಟನೆಯೆಂದರೆ,ಭಾರತದಲ್ಲಿ ಮೊಪ್ಲಃ ವಿಪ್ಲವ , ಕೇರಳದಲ್ಲಿ ಮುಸ್ಲಿಂ ಸೈನಿಕರು ಹಿಂದೂಗಳನ್ನು ಸಾಯಿಸಿದ ಘಟನೆಯೇ ಆಗಿದೆ. ಭಾರತದ ವಿಭಜನೆ ಆದ ಸಂದರ್ಭದಲ್ಲಿ , ಹಿಂದೂಗಳು /ಸಿಖ್ಖರು ಮತ್ತು ಮುಸ್ಲಿಮರ ನಡುವೆ, ಬಹು ದೊಡ್ಡ ಪ್ರಮಾಣದ ಚಳುವಳಿಗಳಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಕೊಲೆ/ಸಾವುಗಳಾಗಿ ಗುಂಪು ಘರ್ಷಣೆಗಳು ತಲೆದೋರಿದವು./ಹಿಂಸಾಚಾರ ನಡೆಯಿತು.
೧೯೮೪ ರ ಸಿಖ್ಖೆತರ ಗಲಭೆಯಲ್ಲಿ ೪ ದಿನಗಳ ಕಾಲ ಸಿಖ್ಖರನ್ನು ಹಿಂಸಿಸಿ, ಸಾಯಿಸಿದ್ದು, ಸಮಾಜವಾದಿ ಕಾಂಗ್ರೆಸ್^^ವಾದಿ ಎಂದು ಕರೆಸಿಕೊಂಡ ಕಾಂಗ್ರೆಸ್ ಪಕ್ಷದಿಂದ ಭಾರತದಲ್ಲಿ ಆಯಿತು ; ಕೆಲವೊಂದು ಅಂದಾಜಿನ ಪ್ರಕಾರ ೨,೦೦೦ ಜನರನ್ನು ಸಾಯಿಸಲಾಯಿತು.
ಬೇರೆ ಘಟನೆಗಳೆಂದರೆ, ೧೯೯೨ರ ಬಾಂಬೆ ಗಲಭೆ ಮತ್ತು 2002ರ ಗುಜರಾತ್ ಹಿಂಸಾಚಾರ —ಇದರಲ್ಲಿ ಸುಮಾರು ೧,೦೦೦ ಕ್ಕೂ ಹೆಚ್ಚು ಮುಸ್ಲಿಮರನ್ನು ಕೊಲ್ಲಲಾಗಿದ್ದು,(ಅಧಾರವಿಲ್ಲದ್ದು )ಇದಕ್ಕೆ ಹಿನ್ನಲೆಯಾದದ್ದು ಇಸ್ಲಾಂ ಸೈನಿಕರು/ಉಗ್ರರು, ಹಿಂದೂ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ರೈಲಿಗೆ ಮುತ್ತಿಗೆ ಹಾಕಿ ಗೋಧ್ರ ರೈಲಿಗೆ ಬೆಂಕಿ ಹಚ್ಚಿದ್ದು ಕಾರಣವಾಗಿತ್ತು. ಇದರಲ್ಲಿ ೫೮ ಹಿಂದುಗಳು ಕೊಲ್ಲಲ್ಪಟ್ಟರು ..
ಈ ಪಿಡುಗು ಕಡಿಮೆ ಸಂಖ್ಯೆಯಲ್ಲಿ ನಗರ ಮತ್ತು ಹಳ್ಳಿಗಳನ್ನು ವ್ಯಾಪಿಸಿತು; ಉತ್ತರ ಪ್ರದೇಶದ 'ಮಾವು'ವಿನಲ್ಲಿ, ಹಿಂದೂ -ಮುಸ್ಲಿಮರ ಗಲಭೆಯಿಂದಾಗಿ, ೫ ಜನ ಸಾವಿಗೀಡಾದರು. ಹಿಂದೂ ಧರ್ಮದವರ ಒಂದು ಹಬ್ಬದ ಸಂದರ್ಭದಲ್ಲಿ ಇದು ಹತ್ತಿಕೊಂಡಿತು. ಇದೆ ರೀತಿಯ ಬೇರೆ ಬೇರೆ ಕೋಮು ಗಲಭೆಗಳೆಂದರೆ, 2002ರ ಮರಾದ್ ಮಾರಣಹೋಮ , ಇದನ್ನು ಇಸ್ಲಾಂಮೀಯರ ಸೈನಿಕ ತಂಡ ರಾಷ್ಟ್ರೀಯ ಅಭಿವೃದ್ಧಿ ಫ್ರಂಟ್ ನಡೆಸಿತು,ಜೊತೆಗೆ ತಮಿಳುನಾಡಿನಲ್ಲಿ ಇಸ್ಲಾಮಿಗಳಿಂದ ಕೋಮು ಗಲಭೆ, ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಜಗ್ಹಂರವರಿಂದ, ಹಿಂದೂಗಳ ವಿರುದ್ಧ ನಡೆಯಿತು.
ಮಾನವ ಹಕ್ಕುಗಳ ಕಾವಲು ಪಡೆಯ ವರದಿಯ ಪ್ರಕಾರ "ದಲಿತರು ಮತ್ತು ಸ್ಥಳೀಯ ಜನರು (ಪರಿಶಿಷ್ಟ ಜನಾಂಗ ಅಥವಾ ಆದಿವಾಸಿಗಳು ) ತಾರತಮ್ಯವನ್ನು , ಬಹಿಷ್ಕಾರ ಮತ್ತು ಕೋಮು ಹಿಂಸಾಚಾರವನ್ನು , ಎದುರಿಸಬೇಕಾಗಿತ್ತು. ಭಾರತ ಸರ್ಕಾರವು ಕಾಯಿದೆ ಮತ್ತು ನೀತಿಗಳನ್ನು ಅಳವಡಿಸಿಕೊಂಡಿದ್ದು, ರಕ್ಷಣೆಗೆ ಒತ್ತನ್ನು ನೀಡಿದೆ. ಆದರೂ ಅದನ್ನು ವಿಧೇಯದಿಂದ ಪಾಲಿಸದೆ ಸ್ಥಳೀಯ ಅಧಿಕಾರ ತಪ್ಪೆಸಗುತ್ತಿದೆ."
ಅಮ್ನೆಸ್ಟಿ ಅಂತರರಾಷ್ಟ್ರೀಯದವರ ಹೇಳಿಕೆಯಂತೆ "ಭಾರತ ಸರ್ಕಾರವು ಜವಾಬ್ದಾರಿಯಿಂದ,ವಿವೇಚನೆಯಿಂದ ಜಾತಿ ಮತ್ತು ಪತನದ ವಿರುದ್ಧ ನ್ಯಾಯಾಂಗದ ಬಳಕೆ ಮತ್ತು ಸದ್ಭಳಕೆಯ ಪ್ರಯೋಗ ಮಾಡಬೇಕು.
ಭಾರತದ ಅಪ್ರಕಟಿತ ಬುಡಕಟ್ಟು ಮತ್ತು ಹಲವು ಸಂಚಾರಿ ಜನಾಂಗ ಒಟ್ಟಾಗಿ ಸೇರಿ, ೬೦ ಮಿಲಿಯನ್ ಜನಸಂಖ್ಯೆಯನ್ನು ಹೊಂದಿದ್ದು, ಸತತವಾಗಿ ಸಾಮಾಜಿಕ ಕಳಂಕ ಮತ್ತು ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿದ್ದು, ೧೮೭೧ರ ಅಪರಾಧಿ ಬುಡಕಟ್ಟು ಕಾಯ್ದೆ ಜಾರಿಯಲ್ಲಿದ್ದಾಗಲೂ ಮುಂದುವರೆದಿದೆ. ಅದನ್ನು ಭಾರತ ಸರ್ಕಾರವು ೧೯೫೨ ರಲ್ಲಿ ಹಿಂದಕ್ಕೆ ಪಡೆದು, ಅದರ ಬದಲಿಗೆ ಹಬಿಚುಯಲ್ ಆಫ್ಫೆನ್ದೆರ್ಸ್ ಕಾಯ್ದೆ(HOA)(೧೯೫೨)ಯನ್ನು ಜಾರಿಗೊಳಿಸಿತು. ಪರಿಣಾಮವಾಗಿ ಹಳೆಯ ಪಟ್ಟಿಯ ಒಳಗಿನಿಂದ, ಹೊಸ ಪಟ್ಟಿಯ ಉದಯವಾಗಿದ್ದು, ಅದು ಅಪರಾಧೀ ಬುಡಕಟ್ಟೇ ಆಗಿತ್ತು.
ಈ ಬುಡಕಟ್ಟುಗಳು ಇಂದಿಗೂ ಸಹ 'ಸಾಮಾಜಿಕೇತರ ಚಟುವಟಿಕೆ ಕಾಯ್ದೆಯ ತಡೆಗಟ್ಟುವಿಕೆ'(PASA) ಪರಿಣಾಮವನ್ನು,ಎದುರಿಸಬೇಕಾಗುತ್ತಿದೆ. ಇದರಿಂದಾಗಿ ಅವರು ಪ್ರತಿದಿನದ ಅಸ್ಥಿತ್ವಕ್ಕೆ ಹೋರಾಡಬೇಕಾಗಿದ್ದು,ಬಹಳಷ್ಟು ಜನರು ಬಡತನದ ರೇಖೆಗಿಂತ ಕೆಳಮಟ್ಟದಲ್ಲಿ ಜೀವಿಸುತ್ತಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಕಮಿಷನ್ ಮತ್ತು ಯುನೈಟೆಡ್ ನೇಷನ್ನಿನ ಆಂಟಿ -ಡಿಸ್ಕ್ರಿಮಿನೇಷನ್ ಬಾಡಿ ಎಲಿಮಿನೇಶನ್ ಆಫ್ ರೇಷಿಯಲ್ ಡಿಸ್ಕ್ರಿಮಿನೇಷನ್ CERD)ಸಂಸ್ಥೆಗಳು ಭಾರತ ಸರ್ಕಾರಕ್ಕೆ, ಈ ಕಾನೂನುಗಳನ್ನು ಹಿಂದಕ್ಕೆ ಪಡೆಯಲು ಕೇಳಿದ್ದು,ಅಪರಾಧೀ ಬುಡಕಟ್ಟು ಇಂದಿಗೂ ಸಾಮಾಜಿಕ ಬಹಿಷ್ಕಾರವನ್ನು ಅನುಭವಿಸುತ್ತಿದ್ದು, ಹಲವರು ತಮ್ಮ ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಅಥವಾ ಇತರ ಹಿಂದುಳಿದ ವರ್ಗದವರು ಮೀಸಲಾತಿಯನ್ನು ಪಡೆಯಲು ನಿರಾಕರಿಸಿದ್ದು, ಇದರಿಂದಾಗಿ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಪ್ರಭಾವ ಬೀರುತ್ತಿದೆ..
ಗಲಭೆಗಳಂತಹ ಬಿಹಾರೇತರ ಭಾವನಾತ್ಮಕ ವಿಷಯಗಳು ಕೆಲವು ವೇಳೆ ಹಿಂಸಾಚಾರವನ್ನು ವರ್ಧಿಸಿವೆ. ಅಪರಾಧಗಳ ಪತ್ತೆ ಪ್ರಕರಣದಲ್ಲಿ, ಭಾರತೀಯ ನ್ಯಾಯಾಲಯಗಳು,'ನಾರ್ಕೋ ಅನಾಲಿಸಿಸ್'ಗೆ (ಮಂಪರು ಹತೋಟಿ ಪರೀಕ್ಷೆ )ಈಗ ಸಾಮಾನ್ಯವಾಗಿ ಅವಕಾಶವನ್ನು ಮಾಡಿಕೊಟ್ಟಿವೆ. ಕೊನ್ಸ್ತಿತುತಿಒನ್ ಹೀಗಿದ್ದರೂ ಭಾರತದ ಸಂವಿಧಾನದ ಪ್ರಕಾರ, "ತಮ್ಮ ಮೇಲೆ ತಾವೇ ಸಾಕ್ಷಿದಾರರು ಆಗಲು ಸಾಧ್ಯವಿಲ್ಲ." ನ್ಯಾಯಾಲಯವು ಇತ್ತೀಚಿಗೆ ನೀಡಿದ ಹೇಳಿಕೆಯನ್ವಯ ಈ ರೀತಿಯ ಅಭ್ಯಾಸಕ್ಕೆ ನ್ಯಾಯಾಲಯದ ಅನುಮತಿ ಸಹ ಬೇಕಾಗಿರುವುದಿಲ್ಲ .
ಅಪರಾಧ ತಡೆ ಪತ್ತೆ ಪ್ರಕರಣದಲ್ಲಿ [original research?]ಹಳೆಯ ಪದ್ಧತಿಗಳನ್ನು ಬದಲಾಯಿಸಿ,(ಕೌಶಲದ ಕೊರತೆ)ಹೊಸ ವೈಜ್ಞಾನಿಕ ಆವಿಷ್ಕಾರ 'ನಾರ್ಕೋ ಅನಾಲಿಸಿಸ್'ಅನ್ನು ಈಗ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. 'ನಾರ್ಕೋ ಅನಾಲಿಸಿಸ್' ಕೂಡ ವೈದ್ಯಕೀಯ ನೀತಿಶಾಸ್ತ್ರಕ್ಕೆ ವಿರುದ್ಧವಾಗಿದ್ದು, ಸರಿಯಾದುದಲ್ಲ ಎಂಬ ಸಂಶಯ ವ್ಯಕ್ತಪಡಿಸಿದೆ.[who?]
ಈ ದೇಶದ ಸೆರೆಮನೆಯಲ್ಲಿ ಬಂಧಿಸಲ್ಪಟ್ಟಿರುವ ಬಹಳಷ್ಟು ಖೈದಿಗಳಿಗೆ ಅಗತ್ಯವಾದ ಸಾಕ್ಷ್ಯಾಧಾರವೇ ಇರುವುದಿಲ್ಲ. ಬೇರೆ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿದ್ದಂತೆ, ಭಾರತ ದೇಶದಲ್ಲಿ, ಆರೋಪಿಯನ್ನು ಬಂಧಿಸಿದ ನಂತರ ತಪಾಸಣೆ ಆರಂಭವಾಗುತ್ತದೆ. ಭಾರತದ ನ್ಯಾಯಾಂಗ ಪದ್ಧತಿಯಲ್ಲಿ ಅಧಿಕಾರಿಗಳ ಹಾಗು ಸಿಬ್ಬಂದಿ ವರ್ಗದವರ ಕೊರತೆಯಿಂದಾಗಿ, ಮುಗ್ಧ ನಾಗರೀಕರು, ಹಲವಾರು ವರ್ಷಗಳಿಂದ ಜೈಲಿನಲ್ಲಿ ಕಳೆಯುವಂತಾಗಿದೆ. ಉದಾಹರಣೆಗೆ ಬಾಂಬೆ ಹೈಕೋರ್ಟ್ ಸೆಪ್ಟೆಂಬರ್ ೨೦೦೯ರಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ೧ ಲಕ್ಷ ರೂಪಾಯಿಗಳ ಪರಿಹಾರವನ್ನು ೪೦-ವರ್ಷ -ವಯಸ್ಸಿನ ಮನುಷ್ಯನಿಗೆ ೧೦ ವರ್ಷಗಳಿಂದ, ತಾನು ಮಾಡದಿರುವ ತಪ್ಪಿಗೆ ಜೈಲುವಾಸ ಆಗಿದ್ದರಿಂದ, ಪರಿಹಾರವನ್ನು ನೀಡಲು ಆದೇಶಿಸಿತು.
This article uses material from the Wikipedia ಕನ್ನಡ article ಭಾರತದ ಮಾನವ ಹಕ್ಕುಗಳು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.