ಚರಿತ್ ಬಾಳಪ್ಪ ಪೂಜಾರಿ ಅಲಿಯಾಸ್ ಚರಿತ್ ತಲ್ವಾರ್(ಜನನ:೧೩ ಆಗಸ್ಟ್ ೧೯೮೫) ಇವರು ಭಾರತೀಯ ದೂರದರ್ಶನ ನಟ ಹಾಗೂ ಮಾಡೆಲ್.
ಇವರು ಕಿರುತೆರೆಗೆ ಪಾದಾರ್ಪಿಸಿದ್ದು ಲವ್ ಲವಿಕೆ ಎಂಬ ಧಾರವಾಹಿಯ ಮೂಲಕ. ಇಲ್ಲಿ ಅಭಿಯಿಸಿದ ಇವರು ಲಕ್ಕಿ ಎಂದೇ ಹೆಸರುವಾಸಿಯಾಗಿದ್ದರು. ನಂತರ ಅಮ್ಮ ಎಂಬ ಧಾರವಾಹಿಯಲ್ಲಿ ನವೀನ್ , ಸರ್ಪ ಸಂಬಂಧ ಎಂಬ ಧಾರವಾಹಿಯಲ್ಲಿ ಭರಣ ಮತ್ತು ಮುದ್ದುಲಕ್ಷ್ಮಿ ಎಂಬ ಧಾರವಾಹಿಯಲ್ಲಿ ಡಾ||ಧ್ರುವಂತ್ ಎಂಬ ಪಾತ್ರವನ್ನು ವಹಿಸಿ ನಟಿಸಿದ್ದಾರೆ. ಹೀಗೆ ನಟನಾ ಕ್ಷೇತ್ರದಲ್ಲಿ ಇವರು ಎರಡು ಬಾರಿ ಅತ್ಯುತ್ತಮ ನಟ ಮತ್ತು ತನ್ನ ನಟನೆಗಾಗಿ ಮೋಸ್ಟ್ ಪ್ರಾಮಿಸಿಂಗ್ ಲೀಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಚರಿತ್ ಬಾಳಪ್ಪ ಪೂಜಾರಿ | |
---|---|
Born | ೧೩ ಆಗಸ್ಟ್ ೧೯೮೫ |
Other names | ಚರಿತ್ ಬಾಳಪ್ಪ ತಲ್ವಾರ್ |
Education | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ - ಕೊಡ್ಲಿಪೇಟೆ ಶಾಲೆ ಕೊಡಗು, ಪದವಿ ಪೂರ್ವ ಶಿಕ್ಷಣ ಶನಿವಾರ ಸಂತೆ ಕಾಲೇಜು, ಪದವಿ ಮತ್ತು ಸ್ನಾತ್ತಕೋತ್ತರ ಪದವಿ(ಬಿಬಿಎಂ) ನಿಟ್ಟೆ ಯುನಿವರ್ಸಿಟಿ. |
Occupation(s) | ಮಾಡೆಲ್, ನಟ. |
Years active | ೨೦೧೫ - ಇಂದಿನ ವರೆಗೆ |
Known for | ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಧಾರವಾಹಿಯ ಡಾ |
Spouse | ಮಂಜುಶ್ರೀ ಚರಿತ್ |
Parent(s) | ಬಾಳಪ್ಪ ಪೂಜಾರಿ (ತಂದೆ), ಪ್ರೇಮ ಬಾಳಪ್ಪ (ತಾಯಿ) |
ಇವರು ೧೩ ಆಗಸ್ಟ್ ೧೯೮೫ ರಂದು ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡಜಿಲ್ಲೆಯಲ್ಲಿ ಜನಿಸಿದರು. ಇವರ ತಂದೆ ಬಾಳಪ್ಪ ಪೂಜಾರಿ ಮತ್ತು ತಾಯಿ ಪ್ರೇಮ ಬಾಳಪ್ಪ. ಇವರು ತಮ್ಮ ಪ್ರಿಕೆಜಿ ಶಿಕ್ಷಣವನ್ನು ಬಂಟ್ವಾಳದ ಶಾಲೆಯಲ್ಲಿ ಪಡೆದು, ಕೊಡಗಿನ ಕೊಡ್ಲಿಪೇಟೆ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು , ಶನಿವಾರ ಸಂತೆ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪದವಿ ಮತ್ತು ಎಂ.ಬಿ.ಎ ನಲ್ಲಿ ಸ್ನಾತ್ತಕೋತ್ತರ ಪದವಿ ಶಿಕ್ಷಣವನ್ನು ನಿಟ್ಟೆ ಯುನಿವರ್ಸಿಟಿಯಲ್ಲಿ ಪೂರ್ಣಗೊಳಿಸಿದರು. ಬಂಟ್ವಾಳದಲ್ಲಿ ಹುಟ್ಟಿದರೂ ಇವರು ತಮ್ಮ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಕೊಡಗಿನಲ್ಲಿ ಪಡೆದು ನಂತರದ ಶಿಕ್ಷಣವನ್ನು ಕರಾವಳಿಯಲ್ಲಿ ಪಡೆಯುತ್ತಾರೆ.
ಎಂ.ಬಿ.ಎ ಪದವಿ ಶಿಕ್ಷಣ ಪಡೆದ ನಂತರ ಚರಿತ್ ಇವರು ಮೊದಲಿಗೆ ಹೆಚ್.ಎಸ್.ಬಿ.ಸಿ ಎಂಬ ಮಲ್ಟಿನ್ಯಾಷನಲ್ ಕಂಪನಿ ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಒಂದಷ್ಟು ಕಾಲ ಕೆಲಸ ಮಾಡಿದ ಬಳಿಕ ವಿಮಾನದಲ್ಲಿ ಕ್ಯಾಬಿನ್ ಕ್ರೂ ಆಗಿಯೂ ಕಾರ್ಯನಿರ್ವಹಿಸಿದರು. ಹೀಗೆ ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವಾಗಲೇ ನಟನೆ ಮತ್ತು ಮಾಡೆಲಿಂಗ್ ನತ್ತ ಆಸಕ್ತಿ ಇವರಲ್ಲಿ ಹುಟ್ಟುತ್ತದೆ. ಕೈ ತುಂಬಾ ಸಂಬಳ ಸಿಕ್ಕರೂ ಆ ಉದ್ಯೋಗವನ್ನು ಬಿಟ್ಟು ಇವರು ನಟನೆಯ ಕಡೆಗೆ ಮುಖ ಮಾಡಿದರು.
ನಟನೆ ಮತ್ತು ಮಾಡೆಲಿಂಗ್ ನಲ್ಲಿ ಚಿಕ್ಕದಿನಿಂದಲೇ ಆಸಕ್ತಿಯನ್ನು ಹೊಂದಿದ್ದ ಇವರು ಕೈ ತುಂಬಾ ಸಂಬಳವಿರುವ ಉದ್ಯೋಗವನ್ನ ಬಿಟ್ಟು ೨೦೧೫ ರಲ್ಲಿ ವಿನು ಬಳಂಜ ನಿರ್ದೇಶನದ ಲವ್ ಲವಿಕೆ ಎಂಬ ಕನ್ನಡ ಧಾರವಾಹಿಯಲ್ಲಿ ಮೊದಲ ಬಾರಿಗೆ ನಟಿಸುತ್ತಾರೆ. ಈ ಧಾರವಾಹಿ ಜೀ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗುತ್ತಿತ್ತು. ಇಲ್ಲಿ ಲಕ್ಕಿ ಎಂಬ ಪಾತ್ರದಲ್ಲಿ ನಟಿಸಿದ ನಂತರ ೨೦೧೬ ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಅಮ್ಮ ಎಂಬ ಧಾರವಾಹಿಯಲ್ಲಿ ನವೀನ್ ಎಂಬ ಪಾತ್ರದಲ್ಲಿ , ನಂತರ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿದ್ದಸರ್ಪ ಸಂಬಂಧ ಎಂಬ ಧಾರವಾಹಿಯಲ್ಲಿ ಭರಣ ಎಂಬ ಪಾತ್ರದಲ್ಲಿ ನಟಿಸಿದರು. ತದನಂತರ ೨೦೧೮ ರಿಂದ ೨೦೨೧ರ ತನಕ ಸ್ಟಾರ್ ಸುವರ್ಣ ದಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಎಂಬ ಧಾರವಾಹಿಯಲ್ಲಿ ಡಾ||ಧ್ರುವಂತ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.
ಚರಿತ್ ಇವರು ೨೦೧೭ ರಲ್ಲಿ ನವೆಂಬರ್ ೩೦ ರಂದು ಮಂಜುಶ್ರೀ ಅವರನ್ನು ವಿವಾಹವಾದರು.
ವರ್ಷ | ಧಾರವಾಹಿ | ಪಾತ್ರ | ಉಲ್ಲೇಖ |
---|---|---|---|
೨೦೧೫ | ಲವ್ ಲವಿಕೆ | ಲಕ್ಷ್ಮಣ್/ಲಕ್ಕಿ | |
೨೦೧೬ | ಅಮ್ಮ | ನವೀನ್ | |
೨೦೧೬ | ಸರ್ಪ ಸಂಬಂಧ | ಭರಣ | |
೨೦೧೮ | ಮುದ್ದು ಲಕ್ಷ್ಮಿ | ಡಾ॥ಧ್ರುವಂತ್ | |
೨೦೨೧ | ಮನಸಾರೆ |
This article uses material from the Wikipedia ಕನ್ನಡ article ಚರಿತ್ ಬಾಳಪ್ಪ ಪೂಜಾರಿ (ನಟ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.