ಸಿಮುಖನ ಬಗ್ಗೆ ವಿವರಣೆ
ಕರ್ನಾಟಕವನ್ನು ಆಳಿದ ಮೊದಲ ಹಿರಿಯ ಐತಿಹಾಸಿಕ ಸಾಮ್ರಾಜ್ಯದ ಸಂಸ್ಥಾಪಕರು. ಆರಂಭದಲ್ಲಿ ಅವರು ಮೌರ್ಯರ ಸಾಮಂತರಾಗಿದ್ದರು, ಮೌರ್ಯರ ಪತನದ ನಂತರ ಸ್ವತಂತ್ರ ರಾಗಿ ಶಾತವಾಹನ ವಂಶವನ್ನು ಸ್ಥಾಪಿಸಿದರು. ಪೈಥಾನ್ ಅವರ ರಾಜಧಾನಿಯಾಗಿತ್ತು. ಅವರು ಸುಮಾ ರು ೪೬೦ ವರ್ಷಗಳ ಕಾಲ ಕರ್ನಾಟಕವನ್ನಾಳಿದರು. ಅವರ ಸಾಮ್ರಾಜ್ಯವು ದಕ್ಷಿಣ ಭಾರತವಲ್ಲದೆ ಉತ್ತರ ಭಾರತಕ್ಕೂ ವ್ಯಾಪಿಸಿತ್ತು. ಕರ್ನಾಟಕದ ಬಹು ಭಾಗಗಳನ್ನು ಅವರು ಆಳಿದರು. ಶಾತಕರ್ಣಿ,ಗೌತಮಿಪುತ್ರ, ಪುಲಮಾಯಿ,ಯಜ್ಞಶ್ರೀಗಳು ಈ ವಂಶದ ಮುಖ್ಯ ದೊರೆ ಗಳು. ಅವರು ವೈದಿಕ ಧರ್ಮದ ಪೋಷಕರು. ದಕ್ಷ ಆಡಳಿತಗಾರರು. ಕಲೆ, ಸಾಹಿತ್ಯ, ಧರ್ಮಗಳ ಪೋಷಕರಾಗಿ ಉತ್ತರ ಮತ್ತು ದಕ್ಷಿಣ ಭಾರತಗಳ ನಡುವೆ ಮೊದಲಿಗೆ ಸಾಂಸ್ಕೃತಿಕ ಐಕ್ಯತೆಯನ್ನು ತಂದು ಬೃಹತ್ ಭಾರತಕ್ಕೆ ತಳಹದಿ ಹಾಕಿದರು. ಅವರ ಆಶ್ರಯದಲ್ಲಿ ಬೌದ್ಧ ಧರ್ಮ ಮತ್ತು ಪ್ರಾಕೃತ ಭಾಷೆಗಳು ವಿಪುಲವಾಗಿ ಬೆಳೆದವು. ಇವೆಲ್ಲವುಗಳ ಸಂಗಮ ಎಂಬಂತೆ ಕ್ರಿ.ಶ. ೨೭೮ರಲ್ಲಿ ಶಾಲಿವಾಹನ ಶಕೆಯನ್ನು ಆರಂಭಿಸಿದರು.ಶಾತವಾಹನರು ಮಧ್ಯ ಏಷ್ಯಾದಿಂದ ಆಕ್ರಮಣಗಳಿಗೆ ತಡೆದು ಕೊಂಡು ಎಂದು ಸೋಲದೆ, ದೊಡ್ಡ ಮತ್ತು ಪ್ರಬಲ ಸಾಮ್ರಾಜ್ಯದ ಆಳ್ವಿಕೆಮಾಡಿದರು.ಅವರು ವಿಷ್ಣುವಿನ ಆರಾಧಕರು ಮತ್ತು ಶಿವನ ಆದರೆ ಗೌರಿ, ಇಂದ್ರ, ಸೂರ್ಯ ಮತ್ತು ಚಂದ್ರ, ಇತರ ಅವತಾರಗಳು ಅವರ ದೇವಸ್ಥಾನಗಲಳಲ್ಲಿ ಕಾಣಬರುವವವು. ಶಾತವಾಹನರು ವಿಶ್ವದಲ್ಲಿ ವೈದಿಕ ಸಂಸ್ಕೃತಿ, ಭಾಷೆ ಮತ್ತು ಧರ್ಮ ವ್ಯಾಪಿಸುವಂತೆ ಮಾಡಿದ್ದಾರೆ.ಅವರ ನಾಣ್ಯಗಳಲ್ಲಿ ಹಡಗುಗಳ ಚಿತ್ರಗಳನ್ನು ನೋಡಿ ವಿದೇಶಿ ವ್ಯಾಪರದಲ್ಲಿ ಕೂಡ ಅವರು ಮುಂದಿದ್ದರು ಎಂಬುದ್ದನ್ನು ತಿಳಿಯಬಹುದು.
ಇವರ ಮೂಲದ ಬಗ್ಗೆ ವಿದ್ವಾಂಸರಲ್ಲಿ ಎರಡು ಅಭಿಪ್ರಾಯಗಳಿವೆ-
ಆರಂಭಿಕ ಶಾತವಾಹನರು ಆಳ್ವಿಕೆ ಆಂಧ್ರ ಮತ್ತು ಪ್ರಸ್ತುತ ತೆಲಂಗಾಣ ಪ್ರದೇಶಗಳಲ್ಲಿ. ಪುರಾಣಗಳಲ್ಲಿ ೩೦ ಆಂಧ್ರ ಆಡಳಿತಗಾರರು ಪಟ್ಟಿ. ಅನೇಕ ಹಾಗೂ ತಮ್ಮ ನಾಣ್ಯಗಳು ಮತ್ತು ಬರಹಗಳಿಂದ ತಿಳಿಯಬಹುದು.
ಸಿಮುಖ ಈ ವಂಶದ ಸ್ಥಾಪಕ,ಪೈಥಾನ್ ಇವನ ರಾಜಧಾನಿ, ಕ್ರಿ.ಪೂ.೨೩೫ರಲ್ಲಿ ಇವನು ಮೌರ್ಯರ ದೊರೆ ಸುಶೀಮನನ್ನು ಕೊಂದು ಸ್ವತಂತ್ರನಾದನು. ನಾನಾಘಾಟ್ ಶಾಸನ ಇವನನ್ನು ರಾಜಸಿಮುಖ ಶಾತವಾಹನ ಎಂದು ವರ್ಣಿಸಿದೆ. ಇವನು ೨೩ವರ್ಷಗಳ ಕಾಲ ರಾಜ್ಯಾವಳಿದನು. ನಂತರ ಅವನ ತಮ್ಮ ಕೃಷ್ಣನು ೧೦ ವರ್ಷ ರಾಜ್ಯಾವಾಳಿದನು. ಈತ ನಾಸಿಕ್ ನವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿದನು. ಈತ ನಾಸಿಕ್ ನಲ್ಲಿ ಬೌದ್ಧ ದೇವಾಲಯವನ್ನು ನಿರ್ಮಿಸಿದನು. ಶ್ರೀಕಾಕುಲಂ ಸಿಮುಖನ ರಾಜಧಾನಿಯಾಗಿತ್ತು. ಅವರು ಮಧ್ಯಪ್ರದೇಶದ ಮೇಲೆ ಶಾತವಾಹನರ ನಿಯಮ ವಿಸ್ತರಿಸಲಾಯಿತು.
ಇವನು ಕ್ರಿ.ಪೂ.೧೯೪ರಲ್ಲಿ ಅಧಿಕಾರಕ್ಕೆ ಬಂದನು. ಇವನು ಆರಂಭ ಶಾತವಾಹನರಲ್ಲಿ ಅತಿ ಪ್ರಬಲ ದೊರೆ. ಇವನು ಅನುಪ,ಮಾಳ್ವ,ವಿದರ್ಭಗಳನ್ನು ಗೆದ್ದು ವಿಂದ್ಯಪರ್ವತದಿಂದ ಕೊಂಕಣದವರೆಗೆ ಅಗಲಿಸಿದನು.ಆತ ಅಶ್ವಮೇದ ಮತ್ತು ರಾಜಾಸೂಯಯಾಗಗಳನ್ನು ಆಚರಿಸಿದನು. ಅಪ್ರತ್ರಿಹಿತ ಇವನ ಬಿರುದು. ಇವನು ಆದಮೇಲೆ ೨ನೇ ಶಾತಕರ್ಣಿ ಸುಮಾರು ೫೬ ವರ್ಷ ನಾಡನ್ನಾಳಿದನು. ಇವನು ತೆಲಂಗಾಣ, ಪಶ್ಚಿಮದ ಮಹಾ. ಹಥಿಗುಂಪ ಕಲ್ಬರಹದಲ್ಲಿ ಈ ಬಗೆಯಾಗಿ ಉಲ್ಲೇಖಿಸುತ್ತಾನೆ ಮಾಡಿದ ಕಳಿಂಗದ ದೊರೆ ಖಾರವೆಲನೊಡನೆ ಕಾಳಗ ಮಾಡಿ ಕಳಿಂಗವನ್ನು ತನ್ನದಾಗಿಸಿಕೊಂಡನಂತೆ.
ಹಾಲ ೧ನೇ ಶಾತಕರ್ಣಿಯ ನಂತರದ ದೊರೆ. ಈತನು ತನ್ನ ಪೂರ್ವಜರು ಕೊಟ್ಟ ರಾಜ್ಯವನ್ನು ಹಾಗೆ ತನ್ನ ನಂತರದ ಅರಸುಗಳಿಗೆ ಕೊಟ್ಟು ಒಳ್ಳೆಯ ರಾಜ ಎನಿಸಿಕೊಂಡಿದ್ದಾನೆ.ಪ್ರಾಕೃತ ಭಾಷೆಯಲ್ಲಿ ಗಾಥಾಸಪ್ತಸತಿ ಕೃತಿ ಬರೆದನು. ಹಾಲನು ಶ್ರೀಲಂಕಾದ ಮೇಲೆ ದಾಳಿ ಮಾಡಿದನು. ಅಲ್ಲಿರುವ ಲೀಲಾವತಿಯನ್ನು ವಶಪಡಿಸಿಕೊಳ್ಳುವುದಕ್ಕಾಗಿ.
ಕರ್ನಾಟಕಕ್ಕೆ ಶಾತವಾಹನರ ಕೊಡುಗೆಗಳು ಬಹಳ ಅಪಾರವಾದದ್ದು.ಅದರಲ್ಲು ಸಾಂಸ್ಕೃತಿಕ ಕೊಡುಗೆಗಳು ಗಣನೀಯವಾದುದ್ದೆ.ಅಂತಹ ಅಪೂರ್ವ ಸಾಧನೆ ಹಾಗು ಸಾಧಕರ ಕಿರು ಪರಿಚಯ ಇಲ್ಲಿದೆ.
ಶಾತವಾಹನ ಸಮಾಜವು ವೃತ್ತಿಮೇಲೆ ಆಧರಿಸಿ ಅನೇಕ ಜಾತಿ ಹಾಗು ಉಪಜಾತಿಗಳಾಗಿ ವಿಂಗಡಿಸಲಾಗಿತ್ತು. ಸಮಾಜದಲ್ಲಿ ಅವಿಭಕ್ತ ಕುಟುಂಬ ಮತ್ತು ಅಂತರ ಜಾತಿ ವಿವಾಹ ಪದ್ಧತಿಗಳು ರೂಢಿಯಲ್ಲಿದ್ದವು. ಇಲ್ಲಿಗೆ ಬಂದ ವಿದೇಶಿ ಗಳಾದ ಯವನ, ಶಕ, ಗ್ರೀಕರು ಹಿಂದೂ ಸ್ತ್ರೀಯರನ್ನು ವಿವಾಹವಾಗಿ ಹಿಂದೂಸಂಸ್ಕೃತಿಯಪೊಷಕರಾಗಿ ಭಾರತೀಕರಣ ಸಾಧಿಸಿದುದು ಅವರ ಸಮಾಜದ ವಿಶಿಷ್ಟ ಲಕ್ಷಣ.ಶಾತವಾಹನರ ಸಮಾಜವನ್ನು (೧)ಮಹಾರತಿ (೨)ಮಹಾಭೋಜಕ (೩)ಸೇನಾಪತಿ ಮತ್ತು (೪)ಸಾಮಾನ್ಯ ವರ್ಗಗಳೆಂಬ ನಾಲ್ಕು ಭಾಗಗಳಾಗಿ ವಿಂಗಡಣೆಯಾಗಿತ್ತು.ರಾಜರು ಅಶ್ವಮೇದ ಮತ್ತು ರಾಜಾಸೂಯಯಾಗಗಳನ್ನು ಆಚರಿಸುತ್ತಿದ್ದರು.
ಕೃಷಿ ಶಾತವಾಹನರ ಮುಖ್ಯ ಕಸುಬಾಗಿತ್ತು. ಭೂಕಂದಾಯವು ರಾಜ್ಯದ ಮುಖ್ಯ ಆದಾಯದ ಮೂಲವಾಗಿತ್ತು. ಅವರು ರೋಮ್ ನೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರೆಂದು ಚಂದ್ರವಳ್ಳಿಯಲ್ಲಿ ದೊರೆತ ರೂಮಿನ ನಾಣ್ಯಗಳು ಹೇಳುತ್ತವೆ. ಅಲ್ಲಿಗೆ ವಜ್ರ, ಮುತ್ತು, ಬೆಳ್ಳಿ, ಆಭರಣಗಳು, ಮೆಣಸು ಶ್ರೀಗಂಧ, ಏಲಕ್ಕಿ, ಸಾಂಬಾರ್ ಪದಾರ್ಥಗಳು ರಫ್ತಾಗುತ್ತಿದ್ದು ಮತ್ತು ಇಲ್ಲಿಗೆ ಮದ್ಯ, ತಾಮ್ರ, ಸೀಸೆ,ಗಾಜು ಮುಂತಾದವುಗಳು ಆಮದಾಗುತ್ತಿದ್ದವು. ಇದರಿಂದ ವಿದೇಶಿಗಳಿಂದ ಇಲ್ಲಿಗೆ ಅಪಾರ ಸಂಪತ್ತು ಹರಿದು ಬಂದಿತ್ತು.
ಶಾತವಾಹನರು ದಿನಾರ, ಸುವರ್ಣ ಎಂಬ ಚಿನ್ನದ, ಕುಷಣ ಎಂಬ ಬೆಳ್ಳಿ ಮತ್ತು ಇತರೆ ಕರ್ಷಪಣ, ದ್ರಮ್ಮ, ಪಣ, ಗದ್ಯಣ ಎಂಬ ನಾಣ್ಯಗಳನ್ನು ಚಲಾವಣೆಗೆ ತಂದರು. ಅವು ಹಡಗು, ರಾಜರ ಚಿತ್ರಗಳನ್ನೊಳಗೊಂಡಿವೆ.
ಪ್ರಾಕೃತ ಮತ್ತು ಸಂಸ್ಕೃತಗಳು ಶಾತವಾಹನರ ಪೋಷಣೆಯಲ್ಲಿದ್ದವು. ಪ್ರಾಕೃತ ಅವರ ರಾಜ್ಯ ಭಾಷೆಯಗಿತ್ತು. ಅವರ ಶಾಸನಗಳು ಪ್ರಾಕೃತದಲ್ಲಿವೆ. ಅಂದು ರಚನೆಯಾದ ಮುಖ್ಯ ಕೃತಿಗಳೆಂದರೆ ಕುಂದಾಚಾರ್ಯನ ಪ್ರಬೃತ್ತಸಾರ, ರಾಯನಸಾರ, ಸಮಯಸಾರ, ಪ್ರವಚನಸಾರ ಮತ್ತು ದ್ವಾದಶಾಮಪ್ರೇಕ್ಷ ಎಂಬ ಕೃತಿಗಳನ್ನು ಪ್ರಾಕೃತದಲ್ಲಿ ರಚಿಸಿದರು. ಹಲವು ಶಾಸನಗಳು ಸಹ ರಚನೆಯಾಗಿವೆ.
ಶಾಸನಗಳು ಅತಿಯಾಗಿ ಬಳಕೆಯಲ್ಲಿರುವುದು, ಹಥಿಗುಂಪ ಶಾಸನದಲ್ಲಿ ಈ ರೀತಿಯಾಗಿ ಉಲ್ಲೇಖಿಸುತ್ತಾನೆ- ಮಾಡಿದ ಕಳಿಂಗದ ರಾಜ ಖಾರವೆಲನೊಡನೆ. ಯುದ್ಸ್ಧ ಮಾಡಿ ಕಳಿಂಗವನ್ನು ವಶಪಡಿಸಿಕೊಂಡನಂತೆ. ವಶಿಷ್ಟಪುತ್ರ ಶಾತಕರ್ಣಿಯ ಈ ಸೋಲನ್ನು ಜುನಗಢ್ ಕಲ್ಲಿನ ಶಾಸನ ತಿಳಿಸುತ್ತದೆ. ಸಿಮುಖ ನಾಸಿಕ್ ನಲ್ಲಿ ಬೌದ್ಧ ದೇವಾಲಯವನ್ನು ನಿರ್ಮಿಸಿದನು. ಸಂಚಿ ಮತ್ತು ಅಮರವಾತಿ ಕಲೆ ಪ್ರಮುಖವಾಗಿ ಬೆಳೆದು ಬಂದಿತ್ತು ಈ ಕಳೆಯು ಕೆಂಪು ಶಿಲೆಯಿಂದ ಕೂಡಿತ್ತು.ಕಾರ್ಲೆಯಲ್ಲಿನ ಚೈತ್ಯಾಲಯ, ಹನುಮಕೊಂಡ ಜಗ್ಗಯ್ಯನ ಪೇಟೆ ಇವರ. ಕಾಲೆ ಮತ್ತು ವಾಸ್ತುಶಿಲ್ಪ ಉದಾಹರಣೆಗಳು. ಸಂಚಿ ಸ್ತೂಪ ಅವರ ಕೊಡುಗೆ.
ಗೌತಮಿಪುತ್ರ ಶಾತಕರ್ಣಿಯ ತಮ್ಮನಾದ ವಶಿಷ್ಟಪುತ್ರ ಶಾತಕರ್ಣಿ ಸತ್ರಪ್ಸ್ ರಾಜವಂಶದ ದೊರೆಯಾದ ೧ನೇ ರುದ್ರದಮನ್ ನ ಮಗಳನ್ನು ಮದುವೆಯಾದ. ಮುಂದೆ ಕ್ರಿ.ಶ.೧೫೦ ರಲ್ಲಿ ೧ನೇ ರುದ್ರದಮನ್ ಶಾತವಾಹನರ ಮೇಲೆ ಕಾಳಗ ಸಾರಿ ಎರಡು ಸಲ ಗೆದ್ದ. ೧ನೇ ರುದ್ರದಮನ್ ನ ನಂಟಿನಿಂದ ವಶಿಷ್ಟಪುತ್ರ ಶಾತಕರ್ಣಿ ಸತ್ತ. ವಶಿಷ್ಟಪುತ್ರ ಶಾತಕರ್ಣಿಯ ಈ ಸೋಲನ್ನು ಜುನಗಢ್ ಕಲ್ಲಿನ ಬರಹ ತಿಳಿಸುತ್ತದೆ.
ಯಜ್ಞ ಶಾತಕರ್ಣಿ ಸಾಲಿನ ನಾಲ್ಕು ಅಥವಾ ಐದು ರಾಜರುಗಳ ಅವನಿಗೆ ಉತ್ತರಾಧಿಕಾರಿಯಾದರು ಮತ್ತು ಕ್ರಿ.ಪೂ.200 ತನಕ ಆಡಳಿತವನ್ನು ಮುಂದುವರೆಸಿದರು. ಆದರೆ ರಾಜವಂಶದ ಶೀಘ್ರದಲ್ಲೇ ಅವನತಿಗೆ ತಲುಪಿತು,ಕಾರಣ ಬಹುಶಃ ಕೇಂದ್ರ ಶಕ್ತಿಯಲ್ಲಿ ಇಳಿತವಾಗಿ ಅವರ ಊಳಿಗ ಮಾನ್ಯರ ಶಕ್ತಿ ಏರಿಕೆಯಾದ್ದರಿಂದ ಇವರು ಮರೆಯಾದರು. ಹಲವಾರು ರಾಜವಂಶಗಳ ತಮ್ಮತಮ್ಮಲ್ಲೇ ಶಾತವಾಹನರ ರಾಜ್ಯಾವನ್ನು ವಿಭಾಗಿಸಿಕೊಂಡರು, ಅವುಗಳನ್ನು ಪೈಕಿ
==೬.ನಾಣ್ಯ ಯುಗ==*ಶಾತವಾಹನರು ತಮ್ಮ ರಾಜರು ಭಾವಚಿತ್ರಗಳನ್ನು ತಮ್ಮ ನಾಣ್ಯಗಳಲ್ಲಿ ಬಿಡುಗಡೆಗೊಳಿಸಿದ ಮೊದಲ ಸ್ಥಳೀಯ ಭಾರತೀಯ ಆಡಳಿತಗಾರರು ಇವರೆ. ಶಾತವಾಹನರ ನಾಣ್ಯಗಲೂ ಅನೇಕ ವೈಶಿಷ್ಟ್ಯಗಳನ್ನು ಹೊಂದಿದ್ದವು. ಅವರ ಕಾಲಗಣನೆ, ಭಾಷೆ ಹೀಗೆ ಅನನ್ಯ ಸೂಚನೆಗಳನ್ನು ನೀಡುತ್ತಿತ್ತು.ಅವರು ಮುಖ್ಯವಾಗಿ ದಾರಿ ಮತ್ತು ತಾಮ್ರದ ನಾಣ್ಯಗಳನ್ನು ಬಿಡುಗಡೆ ಮಾಡಿದ್ದರೆ ತಮ್ಮ ಭಾವಚಿತ್ರ ಶೈಲಿಯ ಬೆಳ್ಳಿ ನಾಣ್ಯಗಳನ್ನು ಬಿಡುಗಡೆ ಮಾಡಿದ್ದಾರೆ .
This article uses material from the Wikipedia ಕನ್ನಡ article ಶಾತವಾಹನರು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.