ಕೊಡಗು

ಕೊಡಗು ಜಿಲ್ಲೆ (ಕೊಡಗನ್ನು ಕೊಡವ ನಾಡ್ ಎಂದು ಕರೆಯಲಾಗುತ್ತದೆ), ಕರ್ನಾಟಕ ರಾಜ್ಯ ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಶಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಪರಿಸರದಲ್ಲಿದೆ.

ಅದರ ಬಗ್ಗೆ ಹಲವಾರು ಕನ್ನಡ ಕವಿಗಳು ವರ್ಣಿಸಿದ್ದಾರೆ.

ಕೊಡಗು ಜಿಲ್ಲೆ
ಜಿಲ್ಲೆ
ಕೊಡಗು
Nickname(s): 
ಕೊಡವ ನಾಡ್
Location of the district in Karnataka
Location of the district in Karnataka
CountryIndia
StateKarnataka
Regionಕೊಡವನಾಡ್
DivisionMysore Division
HeadquartersMadikeri
TalukasMadikeri, Somwarpet, Virajpet,Ponnampet, Kushalnagar
ಸರ್ಕಾರ
 • Deputy CommissionerDr. Sateesha B.C, IAS
Area
 • Total೪,೧೦೨ km (೧,೫೮೪ sq mi)
Population
 (2011)
 • Total೫,೫೪,೯೮೨
 • ಸಾಂದ್ರತೆ೧೪೦/km (೩೫೦/sq mi)
Demonym(s)ಕೊಡವರು
Languages
 • OfficialKannada, Kodava Thakk, Yerava, Are Bhashe
ಸಮಯ ವಲಯಯುಟಿಸಿ+5:30 (IST)
PIN
571201(ಮಡಿಕೇರಿ)
Telephone code+ 91 (0) 8272
ವಾಹನ ನೋಂದಣಿKA-12
Literacy82.52%
Lok Sabha constituencyMysore Lok Sabha constituency
ClimateTropical Wet (Köppen)
Precipitation2,725.5 millimetres (107.30 in)
Avg. summer temperature28.6 °C (83.5 °F)
Avg. winter temperature14.2 °C (57.6 °F)
ಜಾಲತಾಣkodagu.nic.in
ಕೊಡಗು
ಕೊಡವರ ಉಡುಪಿನಲ್ಲಿರುವ ಕೊಡವರು
ಕೊಡಗು
ಕೊಡವ ತಿರ್ರಲೆ or ತ್ರಿಮೂರ್ತಿಗಳು(ಮಲೆಯಾಳಂನಲ್ಲಿ ತೆಯ್ಯಂ) ಕನ್ನಡದಲ್ಲಿ ಕೋಲ ಎಂದು ಕರೆಯಲಾಗುವ ಮತ್ತು ತುಳುವಿನಲ್ಲಿ ನೇಮ ಎನ್ನಲಾಗುವ ಕಾಯ‍ಕ್ರಮಕ್ಕೆ ಸದೃಶವಾದುದು

ಕೊಡಗು
ತಲಕಾವೇರಿ, ಕಾವೇರಿ ನದಿಯ ಉಗಮಸ್ಥಳ
ಕೊಡಗು
ಭಾಗಮಂಡಲದಲ್ಲಿ (ಕೊಡಗು) ಕಾವೇರಿ
ಕೊಡಗು
ಕುಶಾಲನಗರದಲ್ಲಿ ಕಾವೇರಿ
ಕೊಡಗು
Gambooge or Kachampulior"Kachulli" (Coorg vinegar)
ಕೊಡಗು
ಕುಶಾಲನಗರದಲ್ಲಿ ಕಾವೇರಿ
ಕೊಡಗು
ಟಿಬೆಟ್ಟಿನ ಸ್ವರ್ಣ ದೇಗುಲ (ಕುಶಾಲನಗರದಲ್ಲಿ ಬೈಲಕುಪ್ಪೆಯಬಳಿ)
ಕೊಡಗು
ಕೊಡಗಿನಲ್ಲಿ ಕಾಫೀ ಪ್ಲ್ಯಾಂಟೇಶನ್

ಹೆಸರಿನ ನಿಷ್ಪತ್ತಿ

ಕೊಡಗಿಗೆ ಕೂರ್ಗ್ (Coorg) ಎಂಬ ಆಂಗ್ಲೀಯ[ಇಂಗ್ಲಿಶ್] ಬಳಕೆಯೂ ಇದೆ. ಭಾರತದ 'ಸ್ಕಾಟ್ ಲ್ಯಾಂಡ್' ಎಂಬ ಹೆಸರೂ ಇದಕ್ಕಿದೆ.https://tripedia.info/attraction/coorg-karnataka-india/ 'ಕೊಡಗು' - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಬಹುದೆಂದು ಭಾವಿಸಲಾಗಿದೆ.

ಇಲ್ಲಿಯ ಜನ

ಕೊಡವರು ಮುಖ್ಯ (ಮೂಲ) ಜನರು. ಕೊಡವ ತಕ್ಕ್ ಹಾಗೂ ಅರೆಭಾಷೆ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆಗಳು, ದಿನನಿತ್ಯದ ವ್ಯವಹಾರದಲ್ಲಿ ಹೆಚ್ಚಿನ ಜನರು ಕೊಡವ ತಕ್ಕ್ ಅನ್ನು ಬಳಸುತ್ತಾರೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು.https://www.yatra.com/india-tourism/coorg/language ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿ ಇದೆ,ಹಾಗೂ ಅರೆಬಾಷೆಗೆ ಇಲ್ಲ. ಕೊಡವ ಭಾಷೆಯನ್ನು ಸುಮಾರು ೩೦೦,೦೦೦ ಜನರು ಮಾತನಾಡಲು ಬಳಸುತ್ತಾರೆ ಹಾಗೂ ಅರೆಬಾಷೆಯನ್ನು ೨,೦೦೦೦೦ ಜನ ಬಳಸುತ್ತಾರೆ. ಯೆರವರು (ಅಥವಾ ರಾವುಲರು), ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಅಡಿಯರು ಎಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.

ಜನಸಂಖ್ಯೆ

೨೦೧೧ರ ಜನಗಣತಿಯ ಪ್ರಕಾರ ಕೊಡಗಿನ ಜನಸಂಖ್ಯೆ ೫,೫೪,೭೬೨.http://www.census2011.co.in/census/district/259-kodagu.html ಇವರಲ್ಲಿ ೨,೭೪,೭೨೫ ಪುರುಷರು ಮತ್ತು ೨,೮೦,೦೩೭ ಸ್ತ್ರೀಯರು. ಅಂದರೆ ಪ್ರತಿ ೧೦೦೦ ಪುರುಷರಿಗೆ ೧೦೧೯ ಸ್ತ್ರೀಯರಿದ್ದಾರೆ. ಕೊಡಗಿನ ಒಟ್ಟು ವಿಸ್ತೀರ್ಣವನ್ನು ೪,೧೦೨ ಚದರ ಕಿಲೊಮೀಟರನ್ನು ಪರಿಗಣಿಸಿದಾಗ ಇಲ್ಲಿನ ಜನಸಾಂದ್ರತೆ ಪ್ರತಿ ಚದರ ಕಿಲೊಮೀಟರಿಗೆ ೧೩೫ ಮಂದಿ. ಕೊಡಗಿನ ಒಟ್ಟು ಜನಸಂಖ್ಯೆಯಲ್ಲಿ ೪,೧೪,೩೦೫ ಮಂದಿ ( ಅಂದರೆ ೮೨.೫೨% ) ಅಕ್ಷರಸ್ಥರು. ಇವರಲ್ಲಿ ೨,೧೬,೪೧೩ ಮಂದಿ ಪುರುಷರು (೮೭.೨೪%) ಮತ್ತು ೧,೯೭,೮೯೨ ಸ್ತ್ರೀಯರು (೭೭.೯೧%). ಈ ಕೆಳಗಿನ ಕೋಷ್ಠಕದಲ್ಲಿ ಕೊಡಗಿನ ಕುರಿತ ಅಂಕಿ-ಅಂಶಗಳನ್ನು ೨೦೦೧ರ ಜನಗಣತಿಯೊಡನೆ ಹೋಲಿಸಿ ಕೊಡಲಾಗಿದೆ:

ವಿವರ ೨೦೧೧ ೨೦೦೧
ಒಟ್ಟು ಜನಸಂಖ್ಯೆ ೫,೫೪,೭೬೨ ೫,೪೮,೫೬೧
ಪುರುಷರು ೨,೭೪,೭೨೫ ೨,೭೪,೮೩೧
ಸ್ತ್ರೀಯರು ೨,೮೦,೦೩೭ ೨,೭೩,೭೩೦
ಜನಸಂಖ್ಯೆಯ ಹೆಚ್ಚುವರಿ ೧.೧೩% ೧೨.೩೧%
ಕೊಡಗಿನ ವಿಸ್ತೀರ್ಣ ೪,೧೦೨ ಚ ಕಿಮೀ ೪,೧೦೨ ಚ ಕಿಮೀ
ಜನಸಾಂದ್ರತೆ ೧೩೫ ಮಂದಿ/ಚ ಕಿಮೀ ೧೩೪ ಮಂದಿ/ಚ ಕಿಮೀ
ಕರ್ನಾಟಕದ ಜನಸಂಖ್ಯೆಯ ಅನುಪಾತ ೦.೯೧% ೧.೦೪%
೧೦೦೦ ಪುರುಷರಿಗೆ ಸ್ತ್ರೀಯರ ಸಂಖ್ಯೆ ೧೦೧೯ ೯೯೬
ಒಟ್ಟು ಅಕ್ಷರಸ್ಥರು ೪,೧೪,೩೦೫ ೩,೭೩,೫೪೧
ಅಕ್ಷರಸ್ಥ ಪುರುಷರು ೨,೧೬,೪೧೩ ೨,೦೦,೫೮೮
ಅಕ್ಷರಸ್ಥ ಸ್ತ್ರೀಯರು ೧,೯೭,೮೯೨ ೧,೭೨,೯೫೩
ಸರಾಸರಿ ಒಟ್ಟು ಅಕ್ಷರಸ್ಥರು ೮೨.೫೨% ೭೭.೯೯%
ಪುರುಷರ ಪ್ರಮಾಣ ೮೭.೨೪% ೮೩.೭೦%
ಸ್ತ್ರೀಯರ ಪ್ರಮಾಣ ೭೭.೯೧% ೭೨.೨೬%

ಭೂಗೋಳ

ಕೊಡಗು ತನ್ನ ಪಶ್ಚಿಮ ಸರಹದ್ದಿನಲ್ಲಿ ದಕ್ಷಿಣ ಕನ್ನಡದ ಜಿಲ್ಲೆಯನ್ನೂ, ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕಣ್ಣೂರು ಜಿಲ್ಲೆಗಳನ್ನೂ ಹೊಂದಿದೆ. ಈ ಜಿಲ್ಲೆಯ ರಾಜಧಾನಿ ಮಡಿಕೇರಿ (ಮರ್ಕೆರಾ ಎಂದೂ ಆಂಗ್ಲದಲ್ಲಿ ಕರೆಯಲಾಗುತ್ತದೆ). ಕೊಡಗು ಮೊದಲು ಬ್ರಿಟಿಷರ ಕಾಲದಲ್ಲಿ ಸ್ವತಂತ್ರ ರಾಜ್ಯವಾಗಿತ್ತು. ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯವಿಂಗಡನೆಯಾದಾಗ ಮೈಸೂರು ರಾಜ್ಯಕ್ಕೆ ಜಿಲ್ಲೆಯಾಗಿ ಸೇರಲ್ಪಟ್ಟಿತು.

ತಾಲೂಕುಗಳು

ಕೊಡಗಿನಲ್ಲಿ ಐದುತಾಲೂಕುಗಳಿವೆ. ಕೊಡಗಿನ ೩ ತಾಲುಕಿನಲ್ಲು ಪ್ರವಾಸಿ ಕೆಂದ್ರಗಳಿವೆ.

  1. ಮಡಿಕೇರಿ
  2. ವಿರಾಜಪೇಟೆ
  3. ಸೋಮವಾರಪೇಟೆ
  4. ಕುಶಾಲನಗರ
  5. ಪೊನ್ನಂಪೇಟೆ

ಮಡಿಕೇರಿ ತಾಲುಕಿನ ಪ್ರೇಕ್ಷಣೀಯ ಸ್ಥಳಗಳು

ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಖ್ಯವಾಗಿ ಮಡಿಕೇರಿ ತಾಲೂಕಿನಲ್ಲಿ

  1. ಅಬ್ಬಿ ಜಲಪಾತ,
  2. ಓಂಕಾರೇಶ್ವರ ದೇವಸ್ಥಾನ,
  3. ಗದ್ದಿಗೆ,
  4. ಅರಮನೆ,
  5. ರಾಜಸೀಟ್,
  6. ತಲಕಾವೇರಿ, ಇತ್ಯಾದಿಗಳಾದರೆ,
  7. ಎಮ್ಮೆಮಾಡ್ (ಸೂಫೀ ಶ ಹೀ ದ್)

ವಿರಾಜಪೇಟೆ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು

ವಿರಾಜಪೇಟೆ ತಾಲೂಕಿನಲ್ಲಿ-

  1. ನಾಗರಹೊಳೆ ,
  2. ಇರ್ಪು,
  3. ಕುಂದ,
  4. ಟೀ ಏಸ್ಟೇಟ್,
  5. ಸೈಂಟ್ ಏನ್ಸ್ ಚರ್ಚ್,
  6. ಇಗ್ಗುತ್ತಪ್ಪ ದೇವಸ್ಥಾನ,
  7. ನಾಲ್ಕುನಾಡು ಅರಮನೆ, ಮುಂತಾದವು ಇವೆ.

ಕುಶಾಲನಗರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು

ಕುಶಾಲನಗರ ತಾಲೂಕಿನಲ್ಲಿ-

  1. ಕಾವೇರಿ ನಿಸರ್ಗಧಾಮ,
  2. [[ಟಿಬೆಟ್ಟಿನ ಸ್ವರ್ಣದೇಗುಲ]ಪಿರಿಯಾಪಟ್ಟಣ{ತಾ}]],
  3. ವೀರಭೂಮಿ,
  4. ದುಬಾರೆ ಅರಣ್ಯ,
  5. ಹಾರಂಗಿ ಜಲಾಶಯ,
  6. ಚಿಕ್ಲಿ ಹೊಳೆ ಮೊದಲಾದವಿವೆ.

ಸೋಮವಾರಪೇಟೆ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು

ಸೋಮವಾರಪೇಟೆ ತಾಲೂಕಿನಲ್ಲಿ-

  1. ಹೊನ್ನಮ್ಮನ ಕೆರೆ,
  2. ಮಲ್ಲಳ್ಳಿ ಜಲಪಾತ,
  3. ಪುಷ್ಪಗಿರಿ ಅಭಯಾರಣ್ಯ ಮೊದಲಾದವಿವೆ.

ಬೆಳೆಗಳು

ಈ ಜಿಲ್ಲೆಯಲ್ಲಿ ಕಾಫಿ ಬಹಳವಾಗಿ ಬೆಳೆಯಲಾಗುತ್ತದೆಯಲ್ಲದೆ ಕರಿಮೆಣಸು,ಏಲಕ್ಕಿ,ಕಿತ್ತಳೆ,ಮತ್ತು ಭತ್ತ ಪ್ರಮುಖ ಬೇಸಾಯ.ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಭಾರತದಲ್ಲೆ ಹೆಸರಾಗಿತ್ತು.ಅದರೆ ಇಂದು ಅದು ಕೊಡಗಿನಲ್ಲಿಯೆ ಅಪರೂಪವಾಗಿದೆ.ಮೊದಲು ಕೊಡಗಿನಿಂದ ಕರ್ನಾಟಕ ರಾಜ್ಯಕ್ಕೆ ೧/೩ ಪಾಲು ಆದಾಯ ತೆರಿಗೆಯಾಗಿ ಹೋಗುತ್ತಿತ್ತು.

ಇತಿಹಾಸ

ಕನ್ನಡ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ ಹಾಗು ಆಡಳಿತ ಭಾಷೆ. ಇದಲ್ಲದೆ ಅರೆಭಾಷೆ, ಕೊಡವ ತಕ್ಕ್, ಮಲಯಾಳಂ,ತಮಿಳು, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ 1370 AD ಯಿಂದ ದಾಖಲಿತ ಲಿಪಿಯನ್ನು ಹೊಂದಿದೆ, ಇದನ್ನು ಸುಮಾರು 1,50,000 ಜನರು ಮಾತನಾಡುತ್ತಾರೆ ಮತ್ತು 4,00,000 ಜನರು ವ್ಯವಹಾರ ಭಾಷೆಯಾಗಿ ಬಳಸುತ್ತಾರೆ, ಕೊಡಗಿನ 18 ಬುಡಕಟ್ಟು ಸಮುದಾಯಗಳು ಕೊಡವ ತಕ್ಕ್ ಮಾತನಾಡುತ್ತಾರೆ. ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.

ಹೊರಗಿನ ಸಂಪರ್ಕಗಳು

  • ಕೊಡವ
  • ['ಕೊಡಗು-ಕೊಡವರ ಸಿರಿನಾಡು ಕಾವೇರಿಯ ತವರು'-ಯಶೋದಾ ಮುತ್ತಣ್ಣ, ತರಂಗ,೨೯ ಸೆಪ್ಟೆಂಬರ್,೨೦೧೬,ಪು.೧೪-೩೦ & ೫೧-೫೩,ಮಂಜು ಮುಸುಕಿದ ಕೊಡವ ನಾಡು-ಚಿತ್ರ.ಅನಿಲ್.ಎಚ್.ಟಿ.]

ಉಲ್ಲೇಖಗಳು

Tags:

ಕೊಡಗು ಹೆಸರಿನ ನಿಷ್ಪತ್ತಿಕೊಡಗು ಇಲ್ಲಿಯ ಜನಕೊಡಗು ಜನಸಂಖ್ಯೆಕೊಡಗು ಭೂಗೋಳಕೊಡಗು ತಾಲೂಕುಗಳುಕೊಡಗು ಬೆಳೆಗಳುಕೊಡಗು ಇತಿಹಾಸಕೊಡಗು ಹೊರಗಿನ ಸಂಪರ್ಕಗಳುಕೊಡಗು ಉಲ್ಲೇಖಗಳುಕೊಡಗುಕರ್ನಾಟಕರಾಜ್ಯ

🔥 Trending searches on Wiki ಕನ್ನಡ:

ಭಾರತದ ಜನಸಂಖ್ಯೆಯ ಬೆಳವಣಿಗೆಶೂದ್ರ ತಪಸ್ವಿದಾದಾ ಭಾಯಿ ನವರೋಜಿಮಾರ್ತಾಂಡ ವರ್ಮಬೃಂದಾವನ (ಕನ್ನಡ ಧಾರಾವಾಹಿ)ಭಾರತ ರತ್ನಅಸಹಕಾರ ಚಳುವಳಿಮನುಸ್ಮೃತಿಬೇಸಿಗೆಮಲ್ಲಿಗೆಋಗ್ವೇದಚಂದ್ರಯಾನ-೨ಯಣ್ ಸಂಧಿಕಾವೇರಿ ನದಿಟೊಮೇಟೊಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಸಾಮಾಜಿಕ ಸಮಸ್ಯೆಗಳುಮಾಟ - ಮಂತ್ರಚಂದ್ರಯಾನ-೧ತತ್ಪುರುಷ ಸಮಾಸರೇಡಿಯೋಕಾನೂನುಭಂಗ ಚಳವಳಿಮಾರ್ಕ್ಸ್‌ವಾದಕನ್ನಡ ಸಾಹಿತ್ಯ ಪರಿಷತ್ತುಗಣಿತಅಭಯಾರಣ್ಯಗಳುದುರ್ಗಸಿಂಹದರ್ಶನ್ ತೂಗುದೀಪ್ನಾಮಪದತೆರಿಗೆಭಾರತ ಬಿಟ್ಟು ತೊಲಗಿ ಚಳುವಳಿನೀನಾದೆ ನಾ (ಕನ್ನಡ ಧಾರಾವಾಹಿ)ಊಳಿಗಮಾನ ಪದ್ಧತಿಚಂದ್ರಯಾನ-೩ಗುರುತ್ವ2017ರ ಕನ್ನಡ ಚಿತ್ರಗಳ ಪಟ್ಟಿದೆಹಲಿ ಸುಲ್ತಾನರುದಾಸವಾಳವಡ್ಡಾರಾಧನೆಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಕೃಷಿಒಲಂಪಿಕ್ ಕ್ರೀಡಾಕೂಟಪಂಚ ವಾರ್ಷಿಕ ಯೋಜನೆಗಳುಜೀತ ಪದ್ಧತಿಭಾರತದ ಬುಡಕಟ್ಟು ಜನಾಂಗಗಳುಭಾರತದ ರಾಷ್ಟ್ರಗೀತೆಗುಬ್ಬಚ್ಚಿಭಾರತದ ರಾಷ್ಟ್ರಪತಿಗಳ ಪಟ್ಟಿಜೀವಕೋಶನಿರಂಜನಕಲ್ಯಾಣಿಸೀತೆಶಂಖಐಹೊಳೆನಂಜುಂಡೇಶ್ವರ ದೇವಸ್ಥಾನ, ನಂಜನಗೂಡುವಿನಾಯಕ ಕೃಷ್ಣ ಗೋಕಾಕಚಾಲುಕ್ಯಗುಪ್ತ ಸಾಮ್ರಾಜ್ಯಶ್ರವಣಬೆಳಗೊಳಚದುರಂಗ (ಆಟ)ಕರ್ನಾಟಕದ ಇತಿಹಾಸಋತುಸೌರಮಂಡಲಜಾತಿತ. ರಾ. ಸುಬ್ಬರಾಯಗುಲಾಬಿಬಾಬರ್ಆಗಮ ಸಂಧಿದಿಯಾ (ಚಲನಚಿತ್ರ)ಮೋಕ್ಷಗುಂಡಂ ವಿಶ್ವೇಶ್ವರಯ್ಯಕನ್ನಡ ಗುಣಿತಾಕ್ಷರಗಳುವಿಶ್ವ ರಂಗಭೂಮಿ ದಿನಭಾರತೀಯ ರಿಸರ್ವ್ ಬ್ಯಾಂಕ್೨೦೧೬ ಬೇಸಿಗೆ ಒಲಿಂಪಿಕ್ಸ್ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ🡆 More