ಕೆ. ಎಸ್. ನಿಸಾರ್ ಅಹಮದ್: ಭಾರತೀಯ ಕವಿ

ಪ್ರೊ.ಕೆ.ಎಸ್.ನಿಸಾರ್ ಅಹಮದ್(5 ಫೆಬ್ರುವರಿ 1936 - 3 ಮೇ 2020) ಕನ್ನಡದ ಪ್ರಮುಖ ಕವಿಯಾಗಿದ್ದರು.

ಅವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್. ಅವರು ಬರೆದ 'ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ' ಎಂಬ ಪದ್ಯವು ಬಹಳ ಜನಪ್ರಿಯವಾಗಿ ಅವರು ನಿತ್ಯೋತ್ಸವ ಕವಿಯೆಂದೂ ಕರೆಯಲ್ಪಡುತ್ತಿದ್ದರು.

ಪ್ರೊ. ಕೆ. ಎಸ್. ನಿಸಾರ್ ಅಹಮದ್
ಕೆ. ಎಸ್. ನಿಸಾರ್ ಅಹಮದ್: ಜೀವನ, ಸಾಹಿತ್ಯ, ಕೃತಿಗಳು
ಕಾರ್ಯಕ್ರಮವೊಂದರಲ್ಲಿ ನಿಸಾರ್ ಅಹಮದ್
ಜನನ(೧೯೩೬-೦೨-೦೫)೫ ಫೆಬ್ರವರಿ ೧೯೩೬
ದೇವನಹಳ್ಳಿ, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ
ಮರಣ3 May 2020(2020-05-03) (aged 84)
ಬೆಂಗಳೂರು, yelahanka
ವೃತ್ತಿಸಾಹಿತಿ, ಪ್ರಾಧ್ಯಾಪಕ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಾವ್ಯ ಮತ್ತು ವಿಮರ್ಶೆ
ಸಾಹಿತ್ಯ ಚಳುವಳಿನವ್ಯ ಕಾವ್ಯ
ಪ್ರಮುಖ ಕೆಲಸ(ಗಳು)ಮನಸು ಗಾಂಧಿ ಬಜಾರು(1960)
ನಿತ್ಯೋತ್ಸವ
ಪ್ರಮುಖ ಪ್ರಶಸ್ತಿ(ಗಳು)ಪದ್ಮಶ್ರೀ (೨೦೦೮), ರಾಜ್ಯೋತ್ಸವ (೧೯೮೧)

ಪ್ರಭಾವಗಳು

ಜೀವನ

ನಿಸಾರ್ ಅಹಮದ್ ಬೆಂಗಳೂರ ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂರಚನಶಾಸ್ತ್ರ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತರು

ಸಾಹಿತ್ಯ

ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.

  • ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗೂ ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.
  • ೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ (೨೦೧೮) ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು,ಗೀತೆಗಳು ಸಂಗೀತದೊಂದಿಗೆ ಪ್ರಚಾರಗೊಂಡಿತು.
  • ಕುರಿಗಳು ಸಾರ್‍ ಕುರಿಗಳು, ರಾಜಕೀಯ ವಿಡಂಬನೆ ಕವನ
  • ಭಾರತವು ನಮ್ಮ ದೇಶ (ಸರ್‍ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ)
  • ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.

ಕೃತಿಗಳು

ಕವನ ಸಂಕಲನಗಳು

  • ಮನಸು ಗಾಂಧಿ ಬಜಾರು (೧೯೬೦)
  • ನೆನೆದವರ ಮನದಲ್ಲಿ (೧೯೬೪)
  • ಸುಮುಹೂರ್ತ (೧೯೬೭)
  • ಸಂಜೆ ಐದರ ಮಳೆ (೧೯೭೦)
  • ನಾನೆಂಬ ಪರಕೀಯ (೧೯
  • ನಿತ್ಯೋತ್ಸವ (೧೯೭೬)
  • ಸ್ವಯಂ ಸೇವೆಯ ಗಿಳಿಗಳು (೧೯೭೭)
  • ಅನಾಮಿಕ ಆಂಗ್ಲರು(೧೯೮೨),
  • ಬಹಿರಂತರ (೧೯೯೦)
  • ಸಮಗ್ರ ಕವಿತೆಗಳು (೧೯೯೧)
  • ನವೋಲ್ಲಾಸ (೧೯೯೪)
  • ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮)
  • ಅರವತ್ತೈದರ ಐಸಿರಿ(೨೦೦೧)
  • ಸಮಗ್ರ ಭಾವಗೀತೆಗಳು(೨೦೦೧)
  • ಪ್ರಾತಿನಿಧಿಕ ಕವನಗಳು(೨೦೦೨)
  • ನಿತ್ಯೋತ್ಸವ ಕವಿತೆ

ಗದ್ಯ ಸಾಹಿತ್ಯ

  • ಅಚ್ಚುಮೆಚ್ಚು
  • ಇದು ಬರಿ ಬೆಡಗಲ್ಲೊ ಅಣ್ಣ
  • ಷೇಕ್ಸ್ ಪಿಯರನ ಒಥೆಲ್ಲೊದ ಕನ್ನಡಾನುವಾದ
  • ಅಮ್ಮ ಆಚಾರ ಮತ್ತು ನಾನು' (ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯ ಕನ್ನಡಾನುವಾದ)

ಪ್ರಶಸ್ತಿ ಪುರಸ್ಕಾರಗಳು

ಉಲ್ಲೇಖಗಳು

ಹೊರಸಂಪರ್ಕಕೊಂಡಿಗಳು

Tags:

ಕೆ. ಎಸ್. ನಿಸಾರ್ ಅಹಮದ್ ಜೀವನಕೆ. ಎಸ್. ನಿಸಾರ್ ಅಹಮದ್ ಸಾಹಿತ್ಯಕೆ. ಎಸ್. ನಿಸಾರ್ ಅಹಮದ್ ಕೃತಿಗಳುಕೆ. ಎಸ್. ನಿಸಾರ್ ಅಹಮದ್ ಕವನ ಸಂಕಲನಗಳುಕೆ. ಎಸ್. ನಿಸಾರ್ ಅಹಮದ್ ಪ್ರಶಸ್ತಿ ಪುರಸ್ಕಾರಗಳುಕೆ. ಎಸ್. ನಿಸಾರ್ ಅಹಮದ್ ಉಲ್ಲೇಖಗಳುಕೆ. ಎಸ್. ನಿಸಾರ್ ಅಹಮದ್ ಹೊರಸಂಪರ್ಕಕೊಂಡಿಗಳುಕೆ. ಎಸ್. ನಿಸಾರ್ ಅಹಮದ್ಕನ್ನಡ

🔥 Trending searches on Wiki ಕನ್ನಡ:

ಸಾಮ್ರಾಟ್ ಅಶೋಕಸ್ವಾಮಿ ವಿವೇಕಾನಂದಭಾಮಿನೀ ಷಟ್ಪದಿಪಾಂಡವರುವ್ಯಕ್ತಿತ್ವಮಡಿವಾಳ ಮಾಚಿದೇವಬೆಂಗಳೂರು ನಗರ ಜಿಲ್ಲೆಸಾರ್ವಭೌಮತ್ವಭಾರತೀಯ ರಿಸರ್ವ್ ಬ್ಯಾಂಕ್ಹಣ್ಣುಕರ್ನಾಟಕದ ಜಿಲ್ಲೆಗಳುಸಮಾಸಯೋನಿಹಯಗ್ರೀವಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಬಾದಾಮಿಪುಸ್ತಕಕರಗಶ್ರವಣಬೆಳಗೊಳವಿಜಯದಾಸರುಬಸವೇಶ್ವರಮಧ್ವಾಚಾರ್ಯಅವರ್ಗೀಯ ವ್ಯಂಜನಅಮ್ಮಗಿಡಮೂಲಿಕೆಗಳ ಔಷಧಿಸ್ತ್ರೀಕಾಲಾಯ ತಸ್ಮೈ ನಮಃ (ಚಲನಚಿತ್ರ)ರಸ(ಕಾವ್ಯಮೀಮಾಂಸೆ)ಪೂರ್ಣಚಂದ್ರ ತೇಜಸ್ವಿಶ್ರೀರಂಗಪಟ್ಟಣನಾರಾಯಣಿ ಸೇನಾನರೇಂದ್ರ ಮೋದಿಬೆಂಗಳೂರುಜಶ್ತ್ವ ಸಂಧಿಯೂಟ್ಯೂಬ್‌ಪರೀಕ್ಷೆಗ್ರಂಥಾಲಯಗಳುಅನುಶ್ರೀಜನಪದ ಕ್ರೀಡೆಗಳುಪ್ರಜಾವಾಣಿಕಬ್ಬುಭದ್ರಾವತಿಎಸ್. ಜಾನಕಿಸಂವಹನಕರ್ನಾಟಕದ ತಾಲೂಕುಗಳುಕಥೆತತ್ಪುರುಷ ಸಮಾಸಬ್ರಿಕ್ಸ್ ಸಂಘಟನೆಚಂದ್ರಗುಪ್ತ ಮೌರ್ಯವಸುಧೇಂದ್ರಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಭಾರತದ ಬಂದರುಗಳುರೋಮನ್ ಸಾಮ್ರಾಜ್ಯಕರ್ನಾಟಕ ವಿಧಾನ ಪರಿಷತ್ಬಿ. ಆರ್. ಅಂಬೇಡ್ಕರ್ಚಾಮರಾಜನಗರಕರ್ನಾಟಕದ ಹಬ್ಬಗಳುಕಾರ್ಯಾಂಗಏಳು ಪ್ರಾಣಾಂತಿಕ ಪಾಪಗಳುಮಾದಿಗಭಾರತದ ಮುಖ್ಯ ನ್ಯಾಯಾಧೀಶರುಸಾವಿತ್ರಿಬಾಯಿ ಫುಲೆಕರ್ನಾಟಕ ಸಂಗೀತವಿನಾಯಕ ಕೃಷ್ಣ ಗೋಕಾಕವಿಶ್ವ ಪರಿಸರ ದಿನಧೃತರಾಷ್ಟ್ರಏಡ್ಸ್ ರೋಗಅಸಹಕಾರ ಚಳುವಳಿಭಾರತದ ಆರ್ಥಿಕ ವ್ಯವಸ್ಥೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಅರ್ಥಶಾಸ್ತ್ರಮೂಲಧಾತುಗಳ ಪಟ್ಟಿಧಾನ್ಯತ. ರಾ. ಸುಬ್ಬರಾಯಭಾರತದ ಬ್ಯಾಂಕುಗಳ ಪಟ್ಟಿಅಕ್ಕಮಹಾದೇವಿಕಂಪ್ಯೂಟರ್ವಾಟ್ಸ್ ಆಪ್ ಮೆಸ್ಸೆಂಜರ್🡆 More