ಕುಬೇರ

ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಹಣದ ದೇವತೆ.

ಅಷ್ಟದಿಕ್ಪಾಲಕರಲ್ಲೊಬ್ಬ. ಉತ್ತರ ದಿಕ್ಕಿನ ಅಧಿಪತಿ. ಇವರ ಮುಖ್ಯನಗರ ಅಲಕಾಪುರಿ. ಕುಬೇರ ಮಿಶ್ರವಶುವಿನ ಮಗ. ಮಿಶ್ರವಸು ಬ್ರಹ್ಮಪುತ್ರನಾಗಿದ್ದ ಪುಲಸ್ತ್ಯನ ಮಗ. ಕೃತಯುಗದಲ್ಲಿ ಬ್ರಹ್ಮಪುತ್ರ ಮತ್ತು ಬ್ರಹ್ಮರ್ಷಿಯಾದ ಪುಲಸ್ತ್ಯ ಇದ್ದನು. ಇವನು ಮೇರು ಪರ್ವತ ಪ್ರಾಂತ್ಯದಲ್ಲಿನ ತೃಣಬಿಂದುವಿನ ಆಶ್ರಮದಲ್ಲಿದ್ದು, ವೇದಾಧ್ಯಯನ ಮಾಡುತ್ತಿದ್ದನು.

ಕುಬೇರ
Lord of Wealth and the North-direction
ಕುಬೇರ
Kubera at the San Antonio Museum of Art
ದೇವನಾಗರಿकुबेर
ಸಂಸ್ಕೃತ ಲಿಪ್ಯಂತರಣಕುಬೇರ
ಸಂಲಗ್ನತೆDeva, Lokapala, Guardians of the directions (Dikpala)
ನೆಲೆಅಲಕಾಪುರಿ
ಮಂತ್ರOṃ Shaṃ Kuberāya Namaḥ
ಆಯುಧಗಧೆ (Mace)
ಸಂಗಾತಿRiddhi or Bhadra/Kauberi/Charvi
ವಾಹನMan/elephant
ಕುಬೇರ
ಕುಬೇರ

ಪುರಾಣದಲ್ಲಿ

ಆಶ್ರಮದ ಪ್ರದೇಶ ಬಹಳ ಸುಂದರ, ರಮಣೀಯವಾಗಿದ್ದುದರಿಂದ, ವಿಹಾರಕ್ಕೆ ಆ ಪ್ರದೇಶಕ್ಕೆ ದೇವಕನ್ಯೆಯರು, ಋಷಿ ಕನ್ಯೆಯರು, ರಾಜರ್ಷಿಕನ್ಯೆಯರು, ಎಲ್ಲರೂ ಬರುತ್ತಿದ್ದರು. ಇವರಿಂದ ತನಗೆ ತಪೋಭಂಗವಾಗುವುರಿಂದ, ಅಲ್ಲಿಗೇ ಯಾರು ಬರಬಾರದೆಂದು ಹೇಳಿದರು. ಬಂದು ಋಷಿಕನ್ಯೆಯರೇನಾದರೂ ನೋಡಿದರೆ ಅವರು ಗರ್ಭಿಣಿಯಾಗುತ್ತಾರೆಂದು ಶಾಪ ಕೊಟ್ಟನು. ಈ ವಿಷಯ ಗೊತ್ತಿಲ್ಲದೇ ತೃಣಬಿಂದುವಿನ ಮಗಳು ಒಂದುದಿನ ಆಶ್ರಮಕ್ಕೆ ಬಂದು ಪುಲಸ್ತ್ಯನನ್ನ ನೋಡಿದುದರಿಂದ ಬಸುರಿ ಆಗುತ್ತಾಳೆ. ಇದನ್ನು ತಿಳಿದುಕೊಂಡ ತೃಣಬಿಂದು, ಮಗಳ ಜೊತೆ ಋಷಿ ಹತ್ತಿರ ಹೋಗಿ ನಡೆದುದನ್ನೆಲ್ಲಾ ತಿಳಿಸಿ, ತನ್ನ ಮಗಳನ್ನು ಮದುವೆ ಮಾಡಿಕೊಳ್ಳಬೇಕೆಂದು ಬೇಡಿಕೊಳ್ತಾನೆ. ಋಷಿ ಅದಕ್ಕೆ ಒಪ್ಪುತ್ತಾನೆ. ಇವರಿಗೆ ಮಿಶ್ರವಸು ಹುಟ್ಟುತ್ತಾನೆ. , ಮಿಶ್ರವಸುವೆಂಬ ಬ್ರಹ್ಮನಿಂದ ಇಲಬಿಲೆ/ಇಲಾಬಿದ(llAVIDA)ಳ ಮಗ ಕುಬೇರ ಎಂದು ಹೇಳಲಾಗುತ್ತದೆ. ಸೋಮನೆಂಬುದು ಇವನ ಹೆಸರು. ಈ ಕಾರಣದಿಂದ ಉತ್ತರ ದಿಕ್ಕಿಗೆ ಸೌಮ್ಯೆಯೆಂದು ಹೆಸರು. ಇವನು ನರವಾಹನ, ನವನಿಧಿಗಳು ಇವನ ವಶವರ್ತಿಗಳು. ಇವನ ಹೆಂಡತಿ ವೃದ್ದಿ/ಭದ್ರೆ. ಅಗಸ್ತ್ಯ ಋಷಿಯ ಮೂಲಕ ಇವನಿಗೆ ಮನುಷ್ಯನಿಂದ ಕಷ್ಟವೂ, ಮಾನಭಂಗ ಲಭಿಸುವಂತೆ ಶಾಪ ಪ್ರಾಪ್ತಿ. ಇವನ ಮಲತಾಯಿ ಮಕ್ಕಳಾದ ರಾವಣ, ಕುಂಭಕರ್ಣರು ಇವನನ್ನು ಸೋಲಿಸಿ ಲಂಕಾಧಿಪತ್ಯವನ್ನೂ, ಪುಷ್ಪಕವಿಮಾನವನ್ನೂ ಕಸಿದುಕೊಂಡ ಬಳಿಕ, ಕುಬೇರ ಶಿವನ ಅನುಮತಿಯಂತೆ ಕೈಲಾಸ ಪರ್ವತದಲ್ಲಿ 'ಅಲಕಾನಗರಿ' ನಿರ್ಮಿಸಿಕೊಂಡು, ಯಕ್ಷರಿಗೆ ಅಧಿಪತಿಯಾದನು. ಇವನ ಮಂತ್ರಿ ಪ್ರಹಾಸ, ಮಣಿಭದ್ರ, ಮಣಿಮಂತ, ಮಣಿಕಂಧರ, ಮಣಿಭೂಷ ಮುಂತಾದವರು. ಇವನು ಅತುಲೈಶ್ವರ್ಯ ಸಂಪನ್ನನಾಗಿದ್ದಾನೆ. ಕುಬೇರನ ವಾಹನ ಮುಂಗುಸಿ.

ಮಹಾಭಾರತದಲ್ಲಿ

ಕುಬೇರ 
Kubera, 1st century CE, Mathura Museum.

ಮಹಾಭಾರತದ ಪ್ರಕಾರ ಕುಬೇರ ಪುಲಸ್ತ್ಯ ಮಹರ್ಷಿ ಮತ್ತು ಗೋ ಎಂಬುವವರ ಮಗ. ಅರ್ಜುನ ಇಂದ್ರಕೀಲ ಪರ್ವತದಲ್ಲಿ ತಪಸ್ಸು ಮಾಡುತ್ತಿದ್ದಾಗ ಅಲ್ಲಿಗೆ ಬಂದು ಅನೇಕ ದಿವ್ಯಾಸ್ತ್ರಗಳನ್ನು ಅವನಿಗೆ ಕೊಟ್ಟು ಹೋದ. ಭೀಮ ಸೌಗಂಧಿಕಾಪಹರಣಾರ್ಥವಾಗಿ ಹೋದಾಗ ಅವನಿಗೂ ಕುಬೇರನ ಅನುಚರರಿಗೂ ಯುದ್ಧವಾಗಿ ಕುಬೇರನ ಅನುಚರರೆಲ್ಲರೂ ಮಡಿದರು. ಈ ಸಮಾಚಾರ ತಿಳಿದ ಕುಬೇರ ಭೀಮನಲ್ಲಿಗೆ ಬಂದು ಸೌಗಂಧಿಕಪುಷ್ಪವನ್ನು ಕೊಂಡೊಯ್ಯಲು ಅನುಮತಿ ನೀಡಿದ. ಸಮುದ್ರಮಥನ ಕಾಲದಲ್ಲಿ ಬಂದ ರಂಭೆ ಇವನ ಹೆಂಡತಿ.

ಕುಬೇರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಅಲಕಾಪುರಿಅಷ್ಟದಿಕ್ಪಾಲಕಉತ್ತರಕೃತಯುಗದಿಕ್ಕುದೇವತೆಪುರಾಣಪುಲಸ್ತ್ಯಯಕ್ಷಹಣಹಿಂದೂ

🔥 Trending searches on Wiki ಕನ್ನಡ:

ಯುಗಾದಿಕೊಪ್ಪಳಭತ್ತಗುಪ್ತ ಸಾಮ್ರಾಜ್ಯಇಂಡೋನೇಷ್ಯಾಅರಿಸ್ಟಾಟಲ್‌ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುನಾಯಕ (ಜಾತಿ) ವಾಲ್ಮೀಕಿರಾಧೆಮಲೇರಿಯಾಮಂಜುಳರವೀಂದ್ರನಾಥ ಠಾಗೋರ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುವಚನಕಾರರ ಅಂಕಿತ ನಾಮಗಳುದೇವತಾರ್ಚನ ವಿಧಿರಾಜ್‌ಕುಮಾರ್ಕೃಷ್ಣತತ್ತ್ವಶಾಸ್ತ್ರರಾಮಉತ್ತರ ಕರ್ನಾಟಕಸುದೀಪ್ಮಾದಕ ವ್ಯಸನಮಂಟೇಸ್ವಾಮಿಗುರು (ಗ್ರಹ)ಮಹಾತ್ಮ ಗಾಂಧಿಮೈಸೂರು ಸಂಸ್ಥಾನಮಾವುಭಾಷಾ ವಿಜ್ಞಾನಬಾಹುಬಲಿಅಯೋಧ್ಯೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪನವರತ್ನಗಳುಧರ್ಮಕರ್ನಾಟಕದ ತಾಲೂಕುಗಳುಶ್ರೀಧರ ಸ್ವಾಮಿಗಳುಖೊಖೊರಸ(ಕಾವ್ಯಮೀಮಾಂಸೆ)ಆಗಮ ಸಂಧಿಉಡಸಂಖ್ಯಾಶಾಸ್ತ್ರಭಾರತದ ಉಪ ರಾಷ್ಟ್ರಪತಿಸೀಮೆ ಹುಣಸೆಎಸ್.ಎಲ್. ಭೈರಪ್ಪಮಾನವ ಅಸ್ಥಿಪಂಜರಹೈದರಾಲಿಕಾಮಸೂತ್ರಕಿತ್ತೂರು ಚೆನ್ನಮ್ಮಮಂಡಲ ಹಾವುಶಿಕ್ಷಣಕರ್ನಾಟಕದ ಮಹಾನಗರಪಾಲಿಕೆಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಚೆನ್ನಕೇಶವ ದೇವಾಲಯ, ಬೇಲೂರುಪ್ರಾಥಮಿಕ ಶಾಲೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಸಂಗ್ಯಾ ಬಾಳ್ಯಚನ್ನಬಸವೇಶ್ವರಶ್ರವಣಬೆಳಗೊಳಭಾರತದಲ್ಲಿನ ಜಾತಿ ಪದ್ದತಿಕರ್ನಾಟಕದ ಮುಖ್ಯಮಂತ್ರಿಗಳುಪಿತ್ತಕೋಶಭಾರತದಲ್ಲಿ ಮೀಸಲಾತಿಆರತಿದಿಯಾ (ಚಲನಚಿತ್ರ)ಗೀತಾ (ನಟಿ)ಬಾಬು ಜಗಜೀವನ ರಾಮ್ಕನ್ನಡ ರಾಜ್ಯೋತ್ಸವಮುರುಡೇಶ್ವರಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಸರ್ಪ ಸುತ್ತುಜಾತ್ರೆವಸ್ತುಸಂಗ್ರಹಾಲಯಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿನಾಡ ಗೀತೆತಾಳೀಕೋಟೆಯ ಯುದ್ಧರಂಗಭೂಮಿಸಂಶೋಧನೆವ್ಯಾಪಾರಕನ್ನಡದಲ್ಲಿ ಸಣ್ಣ ಕಥೆಗಳು🡆 More