ನುಗ್ಗೆಕಾಯಿ

ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು ಉತ್ತಮ ಔಷಧೀಯ ಗುಣಗಳ್ಳುಳ್ಳ ಕಾಯಿಪಲ್ಲೆ.

ಇದು ಆರೋಗ್ಯವರ್ಧಕ ತರಕಾರಿ. ಎಳೆ ನುಗ್ಗೆಕಾಯಿಗಳನ್ನು ತುಂಡು ತುಂಡು ಮಾಡಿ ತೊಗರಿ ಬೇಳೆಯೊಂದಿಗೆ ಬೇಯಿಸಿ ರುಚಿಕರವಾದ ಹುಳಿ ಅಥವಾ ಸಾರು ತಯಾರಿಸಬಹುದು. ನಿಂಬೆಕಾಯಿ ಉಪ್ಪಿನಕಾಯಿಗೆ ನುಗ್ಗೆಕಾಯಿ ತುಂಡು ಮಾಡಿ ಸೇರಿಸಬಹುದು. ಪಕ್ವವಾದ ನಂತರ ಈ ನುಗ್ಗೆಕಾಯಿ ತಿನ್ನಲು ರುಚಿ. ನುಗ್ಗೆಕಾಯಿಯನ್ನು ಯಾವ ರೀತಿಯಲ್ಲಿ ಸೇವಿಸಿದರೂ ಸರಿಯೇ ಅದು ದೇಹಾರೋಗ್ಯವನ್ನು ಉತ್ತಮಪಡಿಸುತ್ತದೆ.ನುಗ್ಗೆಕಾಯಿಯಿಂದ ಸಾರು, ಪಲ್ಯಗಳನ್ನು ಮಾಡಬಹುದು

ನುಗ್ಗೆಕಾಯಿ
ನುಗ್ಗೆಸೊಪ್ಪು
ನುಗ್ಗೆಕಾಯಿ
ನುಗ್ಗೆಕಾಯಿ
ನುಗ್ಗೆಕಾಯಿ
ಒಣಗಿದ ನುಗ್ಗೆಕಾಯಿ

ಅಡಿಗೆ ಮಾಡುವ ವಿಧಾನ

ಎರಡು ಬಟ್ಟಲು ಕುದಿಯುವ ನೀರಿಗೆ ಒಂದು ಹಿಡಿ ನುಗ್ಗೆಸೊಪ್ಪು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಐದು ನಿಮಿಷ ಬೇಯಿಸಿ, ಬಳಿಕ ಆ ಪಾತ್ರೆಯನ್ನು ತಣ್ಣೀರಿನಲ್ಲಿಟ್ಟು, ಸೊಪ್ಪಿನ ರಸವನ್ನು ತಂಪು ಮಾಡಿ, ಬಸಿಯಬೇಕು. ಆ ರಸಕ್ಕೆ ಸ್ವಲ್ಪ ಅಡಿಗೆ ಉಪ್ಪು, ಕಾಳು ಮೆಣಸಿನ ಪುಡಿ ಮತ್ತು ನಿಂಬೆ ರಸ ಸೇರಿಸಬೇಕು. ಹೀಗೆ ತಯಾರಿಸಿದ ಒಂದು ಬಟ್ಟಲು ರಸ ಪ್ರತಿದಿನ ಬೆಳಿಗ್ಗೆ ಸೇವಿಸುತ್ತಿದ್ದರೆ ದೈಹಿಕ ಶಕ್ತಿ ನಾಶ, ಸಂಭೋಗ ಸಾಮಥ್ರ್ಯದ ಅಭಾವ, ನರ ದೌರ್ಬಲ್ಯ, ಉಬ್ಬಸ, ನೆಗಡಿ, ಪುಪ್ಪುಸ ನಳಿಕಾದಾಹ, ಕ್ಷಯ, ಅಪೌಷ್ಟಿಕತೆ, ಅರಕ್ತತೆ ಇತ್ಯಾದಿ ವ್ಯಾಧಿಗಳಲ್ಲಿ ಗಮನಾರ್ಹ ಪರಿಹಾರ ಲಭಿಸುತ್ತದೆ.

ಸೊಪ್ಪಿನ ಬಳಕೆ

  • ಸೊಪ್ಪು ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂಗ ರಕ್ತಶುದ್ದಿಯಾಗಿ, ಆರೋಗ್ಯ ವೃದ್ದಿಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸುತ್ತದೆ.
  • ನುಗ್ಗೆಸೊಪ್ಪಿನ ಸಾರು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಾತೆಯರಿಗೆ ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರ. ಈ ಸಾರನ್ನು ಅಬಾಲವೃದ್ದಿಯಾದಿಯಾಗಿ ಬಳಸಬಹುದು.
  • ಬೇಯಿಸಿ ಬಸಿದ ನುಗ್ಗೆಸೊಪ್ಪಿನ ರಸಕ್ಕೆ ನಿಂಬೆ ರಸ ಹಿಂಡಿ ಸೇವಿಸಬೇಕು. ಒಂದು ವಾರ ಕಾಲ ಪ್ರತಿದಿನ ಬೆಳಿಗ್ಗೆ ಒಂದು ಬಟ್ಟಲು ರಸ ಸೇವಿಸುತ್ತಿದ್ದರೆ. ತಲೆ ಸುತ್ತುವಿಕೆ ನಿವಾರಣೆಯಾಗುತ್ತದೆ.
  • ಒಂದೇ ಪಾಶ್ರ್ವದಲ್ಲಿ ತಲೆ ನೋಯುತ್ತಿದ್ದರೆ, ನಾಲ್ಕೈದು ತೊಟ್ಟು ನುಗ್ಗೆ ಸೊಪ್ಪಿನ ರಸವನ್ನು ಎಡ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಬಲ ಕಿವಿಗೂ, ಬಲ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಎಡಕಿವಿಗೂ ಬಿಡುವುದರಿಂದ ಗುಣಮುಖ ಕಂಡುಬರುತ್ತದೆ. ಈ ಕ್ರಮವನ್ನು ದಿನಕ್ಕೆ ಒಂದಾವರ್ತಿಯಂತೆ ಮೂರು ದಿನಗಳವರೆಗೆ ಮಾಡುವುದು ಅಗತ್ಯ.
  • ಎಕ್ಕ ಮತ್ತು ನುಗ್ಗೆಯ ಎಲೆಗಳನ್ನು ನುಣ್ಣಗೆ ಅರೆದು ಮೂಲವ್ಯಾಧಿಯಲ್ಲಿ ಕಾಣಿಸಿಕೊಳ್ಳುವ ಮೊಳಕೆಗಳಿಗೆ ಹಚ್ಚಿದರೆ ಅದು ನಾಶವಾಗುತ್ತದೆ.
  • ಪೆಟ್ಟು ಬಿದ್ದು ಊದಿಕೊಂದಿರುವಾಗ ಹುರಿದ ನುಗ್ಗೆ ಸೊಪ್ಪನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಊದಿಕೊಂಡಿರುವ ಭಾಗಕ್ಕೆ ಬಿಸಿಬಿಸಿಯಾಗಿ ಶಾಖ ಕೊಟ್ಟರೆ, ಊತ ಕಡಿಮೆಯಾಗುತ್ತದೆ ಮತ್ತು ನೋವು ಇಳಿಮುಖವಾಗುತ್ತದೆ.
  • ನುಗ್ಗೆಸೊಪ್ಪಿನ ರಸದಲ್ಲಿ ಒಂದೆರಡು ಮೆಣಸುಕಾಳು ಅರೆದು ಕಪಾಲಗಲ ಮೇಲೆ ಹಚ್ಚಿದರೆ ತಲೆನೋವು ನಿವಾರಣೆಯಾಗುತ್ತದೆ.
  • ನುಗ್ಗೆಸೊಪ್ಪಿನೊಂದಿಗೆ ಹೂವನ್ನು ಬಳಸಬಹುದು. ಹೂವನ್ನು ಹಾಲಿನಲ್ಲಿ ಚೆನ್ನಾಗಿ ಬೇಯಿಸಿ ಅದಕ್ಕಿ ಜೇನುತುಪ್ಪ ಸೇರಿಸಿ, ಸೇವಿಸುವುದರಿಂದ ಲೈಂಗಿಕ ಕ್ರಿಯಾಶಕ್ತಿ ಹೆಚ್ಚಾಗುತ್ತದೆ.
  • ನುಗ್ಗೆಕಾಯಿ ಊಟ ಮಾಡುವುದರಿಂದ ಸಂಧಿವಾತ, ನಿರ್ವೀರ್ಯತೆ, ನರಗಳ ದೌರ್ಬಲ್ಯ ಮಲಬದ್ದತೆ ಇತ್ಯಾದಿ ರೋಗಗಳು ಗುಣವಾಗುತ್ತವೆ.
  • ಜಂತು ಹುಳುಗಳಿಂದ ಉಂಟಾಗುವ ಹಾನಿಯನ್ನು ನಿವಾರಿಸಲು ನುಗ್ಗೆ ಕಾಯಿಯನ್ನು ಆಗಾಗ್ಗೆ ಊಟದಲ್ಲಿ ಉಪಯೋಗಿಸುವುದು ಲೇಸು.

ನುಗ್ಗೆ ಸೊಪ್ಪು-ಆಹಾರಾಂಶ

  • ಕಿತ್ತಳೆ ಹಣ್ಣಿಗಿಂತ 7 ಪಟ್ಟು ಹೆಚ್ಚು ವಿಟಮಿನ್ ಸಿ
  • ಹಾಲಿಗಿಂತ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ
  • ಬಾಳೆಹಣ್ಣಿಗಿಂತ 3 ಪಟ್ಟು ಹೆಚ್ಚು ಪೊಟಾಷಿಯಂ
  • ಕ್ಯಾರೆಟ್‌ಗಿಂತ 4 ಪಟ್ಟು ಹೆಚ್ಚು ವಿಟಮಿನ್‌ ಎ
  • ಪಾಲಾಕ್‌ಗಿಂತ 3 ಪಟ್ಟು ಹೆಚ್ಚು ವಿಟಮಿನ್‌ ಇ
  • ಬಾದಾಮಿಗಿಂತ 3 ಪಟ್ಟು ಹೆಚ್ಚು ವಿಟಮಿನ್‌ ಇ
  • ಮೊಟ್ಟೆಯ ಬಿಳಿಯ ಭಾಗಕ್ಕಿಂತ 2 ಪಟ್ಟು ಹೆಚ್ಚು ಪ್ರೊಟೀನ್‌[೧]

ಆಹಾರಾಂಶ

100 ಗ್ರಾಂ ನುಗ್ಗೆಯಲ್ಲಿ
ಪ್ರೊಟೀನ್ 9.4gm
ವಿಟಮಿನ್ ಎ 151 %
ವಿಟಮಿನ್ ಸಿ 86 %
ಕ್ಯಾಲ್ಸಿಯಮ್ 18 %
ಕಬ್ಬಿಣ 22 %

[೧]

ಅತಿಯಾದರೆ ಅಪಾಯ

  • ನುಗ್ಗೆಸೊಪ್ಪಿನಲ್ಲಿ ಅಧಿಕ ಔಷಧೀಯ ಗುಣವಿದೆ ಎಂದು ಅದನ್ನು ಮಿತಿಮೀರಿ ಸೇವಿಸದಂತೆ ವೈದ್ಯರು ಎಚ್ಚರಿಸುತ್ತಾರೆ. ಇದು ಅತಿಯಾದ ವಿರೇಚಕ ಗುಣ ಹೊಂದಿರುವ ಕಾರಣ, ಹೊಟ್ಟೆನೋವು, ಬೇಧಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
  • ನುಗ್ಗೆಕಾಯಿಯನ್ನು ನೇರವಾಗಿ ತೆಗೆದುಕೊಳ್ಳುವುದು ಕೂಡ ಅಪಾಯಕರ. ಇದು ಎದೆಯುರಿಗೆ ಕಾಣವಾಗಬಲ್ಲುದು.
  • ಸಾವಯವದಲ್ಲಿ ಬೆಳೆದ ನುಗ್ಗೆಯಿಂದ ಯಾವುದೇ ಹಾನಿಯಿಲ್ಲ. ಒಂದು ವೇಳೆ ರಾಸಾಯನಿಕ ಸಿಂಪರಣೆ ಮಾಡಿ ಬೆಳೆದ ಗಿಡಗಳ ಬೇರನ್ನು ಸೇವಿಸಿದರೆ ಗರ್ಭಸ್ರಾವ ಆಗುವ ಸಾಧ್ಯತೆ ಇದೆ.

ನುಗ್ಗೆ ರಫ್ತಿನಲ್ಲಿ ವಿಶ್ವದಲ್ಲಿ ಭಾರತಕ್ಕೆ ನಂ.1 ನೇ ಸ್ಥಾನ

  • ನುಗ್ಗೇ ಪದಾರಥ ರಫ್ತು:
  • ಭಾರತ : 80%
  • ಏಷಿಯಾ ಪೆಸಿಫಿಕ್ : 9%
  • ಆಫ್ರಿಕಾ :8%
  • ಅಮೇರಿಕ :3%


ಉಲ್ಲೇಖಗಳು

ಉಲ್ಲೇಖ

Tags:

ನುಗ್ಗೆಕಾಯಿ ಅಡಿಗೆ ಮಾಡುವ ವಿಧಾನನುಗ್ಗೆಕಾಯಿ ಸೊಪ್ಪಿನ ಬಳಕೆನುಗ್ಗೆಕಾಯಿ ನುಗ್ಗೆ ಸೊಪ್ಪು-ಆಹಾರಾಂಶನುಗ್ಗೆಕಾಯಿ ಆಹಾರಾಂಶನುಗ್ಗೆಕಾಯಿ ನುಗ್ಗೆ ರಫ್ತಿನಲ್ಲಿ ವಿಶ್ವದಲ್ಲಿ ಭಾರತಕ್ಕೆ ನಂ.1 ನೇ ಸ್ಥಾನನುಗ್ಗೆಕಾಯಿ ಉಲ್ಲೇಖಗಳುನುಗ್ಗೆಕಾಯಿ ಉಲ್ಲೇಖನುಗ್ಗೆಕಾಯಿ

🔥 Trending searches on Wiki ಕನ್ನಡ:

ದೇಶಗಳ ವಿಸ್ತೀರ್ಣ ಪಟ್ಟಿಎ.ಪಿ.ಜೆ.ಅಬ್ದುಲ್ ಕಲಾಂಬಾಂಗ್ಲಾದೇಶಕುಂಬಳಕಾಯಿಕೂಡಲ ಸಂಗಮನೀರುವೀರಗಾಸೆಋಗ್ವೇದಆಮ್ಲಗಳು ಮತ್ತು ಪ್ರತ್ಯಾಮ್ಲಗಳುಭಗವದ್ಗೀತೆಕುಮಾರವ್ಯಾಸಧರ್ಮರಾಯ ಸ್ವಾಮಿ ದೇವಸ್ಥಾನಭಾರತ ಸಂವಿಧಾನದ ಪೀಠಿಕೆಜಯಚಾಮರಾಜ ಒಡೆಯರ್ಕಲಿಕೆಚನ್ನವೀರ ಕಣವಿಬೌದ್ಧ ಧರ್ಮವಿಷ್ಣುವರ್ಧನ್ (ನಟ)ಕೊರೋನಾವೈರಸ್ವಿವಾಹಕ್ಯಾನ್ಸರ್ಲಕ್ಷ್ಮೀಶಮಯೂರಶರ್ಮತೆನಾಲಿ ರಾಮಕೃಷ್ಣಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಜ್ಯೋತಿಬಾ ಫುಲೆಸಿದ್ಧಾಂತ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ದೂರದರ್ಶನರಾಜಕೀಯ ವಿಜ್ಞಾನವಚನ ಸಾಹಿತ್ಯವಾಲ್ಮೀಕಿಭೂಮಿ ದಿನಶ್ರವಣಬೆಳಗೊಳಯಮಗೋಲ ಗುಮ್ಮಟಕರ್ನಾಟಕ ಲೋಕಸೇವಾ ಆಯೋಗರಾಷ್ಟ್ರೀಯ ಸೇವಾ ಯೋಜನೆಜೋಡು ನುಡಿಗಟ್ಟುವಿಷ್ಣುಮ್ಯಾಕ್ಸ್ ವೆಬರ್ಕಲಿಯುಗಗದಗಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಝಾನ್ಸಿ ರಾಣಿ ಲಕ್ಷ್ಮೀಬಾಯಿಹಾಸನ ಜಿಲ್ಲೆಪಾಂಡವರುಭಾರತೀಯ ಕಾವ್ಯ ಮೀಮಾಂಸೆದೇವತಾರ್ಚನ ವಿಧಿಉತ್ತರ ಪ್ರದೇಶದಕ್ಷಿಣ ಕನ್ನಡ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತೀಯ ಜನತಾ ಪಕ್ಷಕವಿರಾಜಮಾರ್ಗಪಠ್ಯಪುಸ್ತಕಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಶಿವಕುಮಾರ ಸ್ವಾಮಿಸಿದ್ದರಾಮಯ್ಯತಾಳೀಕೋಟೆಯ ಯುದ್ಧರಾಮನಗರಕೈವಾರ ತಾತಯ್ಯ ಯೋಗಿನಾರೇಯಣರುಇಂಡಿಯನ್ ಪ್ರೀಮಿಯರ್ ಲೀಗ್ಪರಿಸರ ರಕ್ಷಣೆಸರ್ವಜ್ಞಸಂಗೊಳ್ಳಿ ರಾಯಣ್ಣಯೋನಿಸಹಾಯಧನರಾಮ ಮನೋಹರ ಲೋಹಿಯಾಕ್ರಿಶನ್ ಕಾಂತ್ ಸೈನಿ1935ರ ಭಾರತ ಸರ್ಕಾರ ಕಾಯಿದೆಆಗಮ ಸಂಧಿಕಬ್ಬುಹಾವೇರಿ🡆 More