ಶೇಷಾದ್ರಿ ಅಯ್ಯರ್: ಮೈಸೂರಿನ ದಿವಾನರು

ಸರ್ ಕೆ.

ಶೇಷಾದ್ರಿ ಅಯ್ಯರ್ (ತಮಿಳು: குமரபுரம் சேஷாத்திரி ஐயர்) ಅವರು ೧೮೮೩ ರಿಂದ ೧೯೦೧ ರವರೆಗೆ ಮೈಸೂರು ದಿವಾನರಾಗಿ ಸೇವೆ ಸಲ್ಲಿಸಿ ಮೈಸೂರು ರಾಜ್ಯದಲ್ಲಿ ಅತಿಹೆಚ್ಚು ಸಮಯ ಅಧಿಕಾರದಲ್ಲಿದ್ದ ದಿವಾನರೆಂಬ ಹೆಸರಿಗೆ ಪಾತ್ರರಾಗಿದ್ದವರು. ೧೮೮೧ ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಕೈಯಿಂದ ಮರಳಿ ಒಡೆಯರ್ ಕುಟುಂಬದ ಪುನಃ ಸ್ಥಾಪನೆಯಾದ ನಂತರ ಮೈಸೂರು ರಾಜ್ಯದ ಎರಡನೆಯ ದಿವಾನರಾಗಿದ್ದರು. ಅವರನ್ನು "ಆಧುನಿಕ ಬೆಂಗಳೂರಿನ ನಿರ್ಮಾಪಕ" ಎಂದು ಪರಿಗಣಿಸಲಾಗಿದೆ.ಇವರೊಬ್ಬ ಸಮರ್ಥ ವಕೀಲರಾಗಿದ್ದರು. 'ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ ಸರಕಾರ' ಒಡೆಯರ್ ರಾಜಪರಿವಾರಕ್ಕೆ ತಾನು ಹಿಂದೆ ಕಸಿದುಕೊಂಡಿದ್ದ ರಾಜ್ಯದ ಎಲ್ಲಾ ಅಧಿಕಾರವನ್ನು ಮತ್ತೆ ಒಪ್ಪಿಸಿ ಆಗಿನ ರಾಜರನ್ನು ಸಿಂಹಾಸನವನ್ನೇರಲು ಆದೇಶ ನೀಡಿದ್ದು, ೧೮೮೧ ರಲ್ಲಿ. ಆ ಸಮಯದಲ್ಲಿ ನೇಮಿಸಲ್ಪಟ್ಟ ದಿವಾನರಲ್ಲಿ 'ಶೇಷಾದ್ರಿ ಅಯ್ಯರ್' ಎರಡನೆಯವರು. ಬೆಂಗಳೂರನ್ನು ಆಧುನಿಕರಣಮಾಡಲು ಪ್ರಯತ್ನಿಸಿ ಸಫಲರಾದ ಇವರನ್ನು "ಆಧುನಿಕ ಬೆಂಗಳೂರಿನ ನಿರ್ಮಾಪಕ" ಎಂದು ಪರಿಗಣಿಸಲಾಗಿದೆ

ಸರ್ ಕುಮಾರಪುರಂ ಶೇಷಾದ್ರಿ ಅಯ್ಯರ್
ಶೇಷಾದ್ರಿ ಅಯ್ಯರ್: ಜನನ ಮತ್ತು ಆರಂಭಿಕ ಜೀವನ, ವೃತ್ತಿಜೀವನ, ಸಾಧನೆ

ಮೈಸೂರು ರಾಜ್ಯದ ದಿವಾನರು
ಅಧಿಕಾರ ಅವಧಿ
೧೨ ಫೆಬ್ರವರಿ ೧೮೮೩ – ೧೮ ಮಾರ್ಚ್ ೧೯೦೧
Monarch ಹತ್ತನೇ ಚಾಮರಾಜ ಒಡೆಯರು,
ನಾಲ್ವಡಿ ಕೃಷ್ಣರಾಜ ಒಡೆಯರು
ಪೂರ್ವಾಧಿಕಾರಿ ಸಿ.ವಿ ರಂಗಾಚಾರ್ಲು
ಉತ್ತರಾಧಿಕಾರಿ ಟಿ.ಆರ್.ಎ. ತಂಬು ಚೆಟ್ಟಿ
ವೈಯಕ್ತಿಕ ಮಾಹಿತಿ
ಜನನ (೧೮೪೫-೦೬-೦೧)೧ ಜೂನ್ ೧೮೪೫
ಪಾಲ್ಘಾಟ್‌, ಕೇರಳ
ಮರಣ ೧೩ ಸೆಪ್ಟೆಂಬರ್‌ ೧೯೦೧ ( ೫೬ ವರ್ಷ)
ಮೈಸೂರು
ಸಂಗಾತಿ(ಗಳು) ಧರ್ಮಸಮವರ್ಧಿನಿ (೧೮೬೫-೧೯೦೧)
ಅಭ್ಯಸಿಸಿದ ವಿದ್ಯಾಪೀಠ ಪ್ರಸಿಡೆನ್ಸಿ ಕಾಲೇಜು, ಮದರಾಸು
ಉದ್ಯೋಗ ಆಡಳಿತಜ್ಞ, ಸಾರ್ವಜನಿಕ ಸೇವೆ

ಜನನ ಮತ್ತು ಆರಂಭಿಕ ಜೀವನ

ಅನಂತಕೃಷ್ಣ ಅಯ್ಯರ್ ಹಾಗೂ ಅವರ ಎರಡನೆಯ ಪತ್ನಿ ವೆಂಕಟಲಕ್ಷ್ಮಿಯವರಿಗೆ ಶೇಷಾದ್ರಿ ಅಯ್ಯರ್‌ ಅವರು ೧೮೪೫ ಜೂನ್‌ ೧ರಂದು ಕೇರಳದ ಪಾಲ್ಘಾಟ್‌ ಸಮೀಪದ ಕುಮಾರಪುರಂನಲ್ಲಿ ಜನಿಸಿದರು. ಮೂಲತಃ ತಮಿಳುನಾಡಿನ ತಂಜಾವೂರು ಜಿಲ್ಲೆಯ ಗಣಪತಿ ಅಗ್ರಹಾರದವರಾದವರು. ಇವರ ಪೂರ್ವಿಕರಾದ ಗೌರಿ ಶೇಷಾದ್ರಿ ಅಯ್ಯರ್ ಎಂಬುವರು ೨೦೦ ವರ್ಷಗಳ ಹಿಂದೆ ೧೭೮೪ ರಲ್ಲಿ ಕುಮಾರಪಟ್ಣಂಗೆ ವಲಸೆ ಬಂದಿದ್ದರು. ಜನಿಸಿದ ಕೆಲವೇ ತಿಂಗಳುಗಳಲ್ಲೇ ತಮ್ಮ ತಂದೆ ಅನಂತಕೃಷ್ಣರವರನ್ನು ಕಳೆದುಕೊಂಡರು. ಬಳಿಕ ಅನಂತಕೃಷ್ಣ ಅಯ್ಯರ್‌ ಅವರ ಮೊದಲ ಪತ್ನಿ ನಾರಾಯಣಿಯವರ ಪುತ್ರ ವೆಂಕಟ ಸುಬ್ರಹ್ಮಣ್ಯ ಅಯ್ಯರ್, ಅಂದರೆ ಶೇಷಾದ್ರಿ ಅಯ್ಯರ್ ಅವರ ಮಲ ಅಣ್ಣ ಇವರ ಪೋಷಣೆಯ ಹೊಣೆಯನ್ನು ಹೊತ್ತರು. ತನ್ನ ನಾಲ್ಕನೇ ವರ್ಷದಿಂದ ಹನ್ನೊಂದನೇ ವರ್ಷದವರೆಗೆ ಖಾಸಗಿಯಲ್ಲಿಯೇ ಪಂಡಿತರಿಂದ ಸಂಸ್ಕೃತ, ತಮಿಳು ಹಾಗೂ ವೇದಾಧ್ಯಯನವನ್ನು ಕೊಚ್ಚೀನಿನಲ್ಲಿ ನಡೆಸಲಾಯ್ತು. ನಂತರ ಕೊಚಿನ್ ನ ಫ್ರೀ ಚರ್ಚ್ ಮಿಷನ್ ನ ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆದು. ತಮ್ಮ ಹೈಸ್ಕೂಲ್‌ ಶಿಕ್ಷಣವನ್ನು ತಿರುವನಂತಪುರದಲ್ಲಿ ಪಡೆದ ಇವರು ೧೮೬೩ರಲ್ಲಿ ಮೆಟ್ರಿಕ್‌ ಪರೀಕ್ಷೆಯಲ್ಲಿ ಇಡೀ ಮದ್ರಾಸ್‌ ಪ್ರಾಂತ್ಯಕ್ಕೆ ಮೊದಲಿಗರಾಗಿ ತೇರ್ಗಡೆಯಾದರು.ಇದಕ್ಕಾಗೆ ಇವರು ಕಾನ್ನೋಲಿ ವಿಧ್ಯಾರ್ಥಿ ವೇತನಕ್ಕೆ ಆಯ್ಕೆಯಾದರು. ಮದರಾಸಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ, ವಿಶ್ವವಿದ್ಯಾಲಯಕ್ಕೇ ಮೊದಲಿಗರಾಗಿ ೧೮೬೬ರಲ್ಲಿ ತಮ್ಮ ಬಿ.ಎ. ಪದವಿ ಪಡೆದುಕೊಂಡರು.

ವೃತ್ತಿಜೀವನ

ಬಿ.ಎ. ಪದವಿ ಮುಗಿಸಿ ಮದರಾಸ್ ನಲ್ಲಿ ಕೆಲಸಮಾಡುತ್ತಿರುವಾಗಲೇ ಆ ಸಮಯದಲ್ಲಿ ಮಮೈಸೂರು ದೀವಾನಾರಾಗಿದ್ದ ಸಿ.ವಿ.ರಂಗಾಚಾರ್ಲುರವರಿಗೆ ಪರಿಚಿತರಾದರು. ೧೮೬೮ ರಲ್ಲಿ ಮೈಸೂರ್ ಸಾಮ್ರಾಜ್ಯದ ಕಾರ್ಯಕಲಾಪಗಳನ್ನು ನೋಡಿಕೊಳ್ಳಲು ರಂಗಾಚಾರ್ಲುರವರು ಶೇಷಾದ್ರಿ ಅಯ್ಯರ್ ರವರನ್ನು ಮೈಸೂರಿಗೆ ಕರೆಸಿಕೊಂಡರು. ರಂಗಾಚಾರ್ಲುರವರು ಆ ಸಂದರ್ಭದಲ್ಲಿ ಆಡಳಿತಕ್ಕೆ ಸಂಬಂಧಿಸಿದಂತೆ ಸೂಕ್ತ ತರಬೇತಿಯನ್ನು ನೀಡಿದರು. ಬಳಿಕ ಶೇಶಾದ್ರಿ ಅಯ್ಯರ್ ರವರು ಮೈಸೂರು ಸಂಸ್ಥಾನದಲ್ಲಿ ಹಲವು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದರು. ಈ ಮಧ್ಯದಲ್ಲೇ ೧೮೭೪ರಲ್ಲಿ ಮದ್ರಾಸ್ ವಿಸ್ವವಿದ್ಯಾಲಯದಿಂದ ನ್ಯಾಯ ಶಾಸ್ತ್ರದಲ್ಲಿ ಬಿ.ಎಲ್. ಪದವಿಯನ್ನು ಪಡೆದರು.

ರಂಗಾಚಾರ್ಲು ಅವರ ಕರೆಯ ಮೇರೆಗೆ ಮೈಸೂರಿಗೆ ಆಗಮಿಸಿದ ಅಯ್ಯರ್ ಮೊದಲು ಅಷ್ಟಗ್ರಾಮವಿಭಾಗದ ಶಿರಸ್ತೆದಾರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ತಮ್ಮ ದಕ್ಷತೆಯಿಂದ ಬಹಳ ಒಳ್ಳೆಯ ಹೆಸರು ಪಡೆದು ಕ್ಷಿಪ್ರವಾಗಿ ಮುಂಬಡ್ತಿಯನ್ನು ಪಡೆಯುತ್ತಾ ಹೋದರು.

ನಿರ್ವಹಿಸಿದ ಹುದ್ದೆಗಳು

  • ಮೈಸೂರ್ ಸಂಸ್ಥಾನದ ಅಷ್ಟಗ್ರಾಮ್ ಡಿವಿಶನ್ ನ ಶಿರಸ್ತೆದಾರ
  • ಕಾನೂನು ಕಾರ್ಯದರ್ಶಿ
  • ಪ್ರಧಾನ ಶಿರಸ್ತೆದಾರ
  • ಕೋರ್ಟ್ ಆಫ್ ದ ಜುಡಿಶಿಯಲ್ ಕಮೀಶನರ್.
  • ಉಪ ಜಿಲ್ಲಾಧಿಕಾರಿ
  • ಮೈಸೂರಿನ ಜಿಲ್ಲಾಧಿಕಾರಿ'
  • ಜಿಲ್ಲಾ ನ್ಯಾಯಾಧೀಶ
  • ತುಮಕೂರು ನ ಸೆಶನ್ ಜಡ್ಜ್ ಆಫ್ ಅಷ್ಟಗ್ರಾಮ್ ಡಿವಿಶನ್'

ಬಳಿಕ ೧೯೮೩ರಲ್ಲಿ ರಂಗಾಚಾರ್ಲುರವರ ನಿಧನದ ಬಳಿಕ ದಿವಾನ ಹುದ್ದೆಯನ್ನು ಸ್ವೀಕರಿಸಿದರು.

ಸಾಧನೆ

ರೈಲ್ವೆಕ್ಷೇತ್ರ

ಇವರು ೧೮೮೩ ರಲ್ಲಿ ಬೆಂಗಳೂರು ಮತ್ತು ಗುಬ್ಬಿಯಲ್ಲಿ ,೧೮೮೯ ರಲ್ಲಿ ಬೆಂಗಳೂರು,ಹಿಂದೂಪುರ,ಹರಿಹರ ಮತ್ತು ಕೆಜಿಎಫ್ ಹಾಗೂ ೧೮೮೯ ರಲ್ಲಿ ಮೈಸೂರು ಮತ್ತು ನಂಜನಗೂಡು,ಬೇಲೂರು ಮತ್ತು ಶಿವಮೊಗ್ಗಗಳಲ್ಲಿ ರೈಲು ಮಾಗ೯ಗಳನ್ನು ನಿಮಿ೯ಸದ್ದಾರೆ.

ವಿದ್ಯುತ್ ಕ್ಷೇತ್ರ

೧೯೦೦ ರಲ್ಲಿ ಶಿವನ ಸಮುದ್ರದಲ್ಲಿ ವಿದ್ಯುತ್ ಉತ್ಪಾದಿಸಲು ಯೋಜನೆ ಕಾಯಾ೯ರಂಭ ಮಾಡಿತು.ವಿದ್ಯುತ್ ಅನ್ನು ಮೊದಲ ಕೆಜಿಎಫ್ ಗೆ ೧೯೦೨ ರಲ್ಲಿ ಪೂರೈಸಲಾಯಿತು.ಬಳಿಕ ೧೦೯೫ ರಲ್ಲಿ ಬೆಂಗಳೂರು ನಗರಕ್ಕೆ ಪೂರೈಸಲಾಯಿತು.ದೇಶದಲ್ಲೇ ಮೋದಲ ವಿದ್ಯುತ್ ಸಂಪರ್ಕ ಪಡೆದ ನಗರ ಎಂಬ ಖ್ಯಾತಿ ಬೆಂಗಳೂರಿಗಿದೆ.ಖಾಸಗಿಯಾಗಿ ಮೊದಲ ವಿದ್ಯುತ್ ಅನ್ನು ೧೮೮೭ ಗೋಕಾಕ್ ಜಲಪಾತದಲ್ಲಿ ಉತ್ಪಾದಿಸಲಾಯಿತು.ಆದರೆ ಸಕಾ೯ರಿ ಸ್ವಾಮ್ಯದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಿದ್ದು ಶಿವನ ಸಮುದ್ರಲ್ಲಿ ೧೯೦೦ ಆಗಸ್ಟ್ ೧೦ ರಂದು.

ನೀರಾವರಿಕ್ಷೇತ್ರ

ಬೆಂಗಳೂರು ನಗರಕ್ಕೆ ಹೆಸರುಘಟ್ಟದ ಕೆರೆಯಿಂದ ನೀರು ಪೂರೈಸಲಾಯಿತು.ಚಿತ್ರದುಗ೯ದ ಹಿರಿಯೂರಿನಲ್ಲಿಮಾರಿ ಕಣಿವೆ ಜಲಾಶಯವನ್ನು ೩೯ ಲಕ್ಷ ವೆಚ್ಛದಲ್ಲಿ ನಿಮಿ೯ಸಿದರು.ಹೇಮಾವತಿ ನದಿಗೆ ಮತ್ತು ಭದ್ರಾವತಿ ಪಟ್ಟಣ ಸೇರಿದಂತೆ ಅನೇಕ ಕಡೆ ಸೇತುವೆಗಳನ್ನು ಹಾಗೂ ೨೫ ಕೆರೆಗಳನ್ನು ನಿಮಿ೯ಸಲಾಯಿತು.

ಮೈಸೂರು ರಾಜ್ಯದಲ್ಲಿ ಸೇವೆ

೧೮೭೪ ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಎಲ್. ಪದವಿಯನ್ನು ಪಡೆದರು. ೧೮೮೧ ರಿಂದ ೧೮೮೩ ರವರೆಗೆ ಅವರು ಮೈಸೂರಿನಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ೧೮೮೩ ರಲ್ಲಿ, ರಂಗಚಾರ್ಲುವಿನ ಅವಧಿಯು ಅಂತ್ಯಗೊಂಡಿತು,ಶೇಷಾದ್ರಿ ಅಯ್ಯರ್ ಮೈಸೂರು ದಿವಾನ್ ಆಗಿ ನೇಮಕಗೊಂಡರು.೧೮೮೩ ರಲ್ಲಿ ಮೈಸೂರು ದಿವಾನ್ ಆಗಿ ಹದಿನೆಂಟು ವರ್ಷಗಳ ಕಾಲ ಮೈಸೂರು ಆಡಳಿತ ನಡೆಸಿದರು.ಮೈಸೂರು ಸಿವಿಲ್ ಸರ್ವಿಸ್ನಲ್ಲಿ ಕಂದಾಯ ಕಮಿಷನರ್ ಆಗಿ ಕೆಲಸ ಮಾಡಿದ್ದಾರೆ. ಅವರು ೧೮೮೧ ರಿಂದ ೧೮೯೧ ರವರೆಗೆ ಶೇಷಾದ್ರಿ ಅಯ್ಯರ್ ಅವರ ಖಾಸಗಿ-ಕಾರ್ಯದರ್ಶಿಯಾಗಿದ್ದರು. ಅವರು ರಾಜರ ಸಂಸ್ಥಾನದ ಸುದೀರ್ಘ ಸೇವೆ ಸಲ್ಲಿಸಿದ ದಿವಾನರಾಗಿದ್ದಾರೆ. ಕರ್ನಾಟಕದ ಕೋಲಾರ ಚಿನ್ನದ ಕ್ಷೇತ್ರಗಳು ಅವರ ಅವಧಿಯಲ್ಲಿ ಸ್ಥಾಪಿಸಲ್ಪಟ್ಟವು. ಅವರು ೧೮೮೯ ರಲ್ಲಿ ಲಾಲ್ಬಾಗ್ನಲ್ಲಿ ಪ್ರಸಿದ್ಧ ಗ್ಲಾಸ್ ಹೌಸ್ ಅನ್ನು ಹಾಗು ೧೯೦೦ ರಲ್ಲಿ ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ನಿಮಿ೯ಸಿದರು.

ಶೇಷಾದ್ರಿ ಅಯ್ಯರ್: ಜನನ ಮತ್ತು ಆರಂಭಿಕ ಜೀವನ, ವೃತ್ತಿಜೀವನ, ಸಾಧನೆ
ಬೆಂಗಳೂರಿನ ಕಬ್ಬನ್‌ ಪಾರ್ಕಿನಲ್ಲಿರುವ ಶೇಷಾದ್ರಿ ಅಯ್ಯರ್‌ ಅವರ ಪ್ರತಿಮೆ

ವೈವಾಹಿಕ ಜೀವನ

೧೮೬೫ ರಲ್ಲಿ ಶೇಷಾದ್ರಿ ಅಯ್ಯರ್ ಧರ್ಮಸಮವರ್ಧಿನಿ ಅವರನ್ನು ವಿವಾಹವಾದರು. ದಂಪತಿಗೆ ನಾಲ್ಕು ಗಂಡು ಮಕ್ಕಳು (ಕೆ. ಎಸ್. ಡೋರೆಸ್ವಾಮಿ ಅಯ್ಯರ್,ಕೆ.ಎಸ್.ಕೃಷ್ಣ ಐಯರ್,ಕೆ. ಎಸ್. ವಿಶ್ವನಾಥ ಅಯ್ಯರ್ ಮತ್ತು ಕೆ.ಎಸ್. ರಾಮಸ್ವಾಮಿ ಅಯ್ಯರ್) ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದರು. ೧೩ ಸೆಪ್ಟೆಂಬರ್ ೧೯೦೧ ರಂದು ಶೇಷಾದ್ರಿಯವರ ಮರಣದ ಮೊದಲು ಕೆಲವೇ ದಿನಗಳಲ್ಲಿ ಧರ್ಮಸಮವರ್ಧಿನಿ ನಿಧನರಾದರು.

ಶೇಷಾದ್ರಿ ಅಯ್ಯರ್: ಮೈಸೂರಿನ ದಿವಾನರು

Tags:

ಶೇಷಾದ್ರಿ ಅಯ್ಯರ್ ಜನನ ಮತ್ತು ಆರಂಭಿಕ ಜೀವನಶೇಷಾದ್ರಿ ಅಯ್ಯರ್ ವೃತ್ತಿಜೀವನಶೇಷಾದ್ರಿ ಅಯ್ಯರ್ ಸಾಧನೆಶೇಷಾದ್ರಿ ಅಯ್ಯರ್ ವೈವಾಹಿಕ ಜೀವನಶೇಷಾದ್ರಿ ಅಯ್ಯರ್ ಉಲ್ಲೇಖಗಳುಶೇಷಾದ್ರಿ ಅಯ್ಯರ್ಮೈಸೂರು ಸಂಸ್ಥಾನ

🔥 Trending searches on Wiki ಕನ್ನಡ:

ಆಂಗ್‌ಕರ್ ವಾಟ್ಹಿಂದೂ ಧರ್ಮಮಾಲಿನ್ಯದೆಹಲಿಅಶೋಕನ ಶಾಸನಗಳುಭಾರತದಲ್ಲಿ ಕೃಷಿವಾಲಿಬಾಲ್ಎನ್ ಸಿ ಸಿಕೋವಿಡ್-೧೯ಸಮಾಜಶಾಸ್ತ್ರಚಿನ್ನಗೋತ್ರ ಮತ್ತು ಪ್ರವರಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಬಾಲಕಾರ್ಮಿಕತಾಪಮಾನಸಂಭೋಗಕೈಗಾರಿಕೆಗಳುಇಮ್ಮಡಿ ಪುಲಿಕೇಶಿಭಾರತೀಯ ಸ್ಟೇಟ್ ಬ್ಯಾಂಕ್ಮಾರಾಟ ಪ್ರಕ್ರಿಯೆಕನ್ನಡ ರಾಜ್ಯೋತ್ಸವಪುರಂದರದಾಸಕರ್ನಾಟಕ ವಿಧಾನ ಸಭೆಆಮದು ಮತ್ತು ರಫ್ತುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮಾನವನ ನರವ್ಯೂಹಸಂಗನಕಲ್ಲುರಚಿತಾ ರಾಮ್ರತನ್ಜಿ ಟಾಟಾದಿಕ್ಕುರಾಷ್ಟ್ರೀಯ ಸೇವಾ ಯೋಜನೆಹಣ್ಣುಸಿಮ್ಯುಲೇಶನ್‌ (=ಅನುಕರಣೆ)ಚೀನಾಗರ್ಭಪಾತಕ್ಯಾರಿಕೇಚರುಗಳು, ಕಾರ್ಟೂನುಗಳುಜೋಗಿ (ಚಲನಚಿತ್ರ)ಪಾಲುದಾರಿಕೆ ಸಂಸ್ಥೆಗಳುರಾಮಾಚಾರಿ (ಕನ್ನಡ ಧಾರಾವಾಹಿ)ಮೀರಾಬಾಯಿದುಂಬಿಕರ್ನಾಟಕ ಹೈ ಕೋರ್ಟ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುದ್ವೈತ ದರ್ಶನಗ್ರಹಪ್ರವಾಸೋದ್ಯಮತಾಳಗುಂದ ಶಾಸನವಾಟ್ಸ್ ಆಪ್ ಮೆಸ್ಸೆಂಜರ್ಭಾರತೀಯ ಸಂವಿಧಾನದ ತಿದ್ದುಪಡಿಕೆ. ಎಸ್. ನಿಸಾರ್ ಅಹಮದ್ಭಾರತೀಯ ಮೂಲಭೂತ ಹಕ್ಕುಗಳುಕರ್ನಾಟಕದ ವಾಸ್ತುಶಿಲ್ಪಪಾಂಡವರುಎ.ಪಿ.ಜೆ.ಅಬ್ದುಲ್ ಕಲಾಂಜಾತ್ಯತೀತತೆರಂಗಭೂಮಿಶಬ್ದ ಮಾಲಿನ್ಯರಾಷ್ತ್ರೀಯ ಐಕ್ಯತೆಹಂಪೆಶ್ರೀ. ನಾರಾಯಣ ಗುರುಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಅಡೋಲ್ಫ್ ಹಿಟ್ಲರ್ಸರ್ವೆಪಲ್ಲಿ ರಾಧಾಕೃಷ್ಣನ್ಅಲಂಕಾರಸಂಗೊಳ್ಳಿ ರಾಯಣ್ಣಜಾತಿಹಿಂದೂ ಮಾಸಗಳುದಿಕ್ಸೂಚಿಆಂಗ್ಲತುಂಗಭದ್ರಾ ಅಣೆಕಟ್ಟುRX ಸೂರಿ (ಚಲನಚಿತ್ರ)ಭಾರತದ ಸ್ವಾತಂತ್ರ್ಯ ದಿನಾಚರಣೆವ್ಯವಹಾರ ಪ್ರಕ್ರಿಯೆ ನಿರ್ವಹಣೆಕನ್ನಡದಲ್ಲಿ ಸಣ್ಣ ಕಥೆಗಳುಶಿಕ್ಷಣ🡆 More