ಜಮಖಂಡಿ - ಬಾಗಲಕೋಟೆ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ.
ಈ ಪಟ್ಟಣ್ಣಕ್ಕೆ ಜಮಖಂಡಿ ಎಂಬ ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಾಚೀನ ದೇವಾಲಯ ಜಂಬುಕೇಶ್ವರ ಗುಡಿಗೂ ಈ ಪಟ್ಟಣದ ಹೆಸರಿಗೂ ನಂಟಿದೆ. ಈ ಗುಡಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. ೧೯೩೭ ರಲ್ಲಿ ಜಮಖಂಡಿಯಲ್ಲಿ ೨೨ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು.
ಜಮಖಂಡಿ | |
ರಾಜ್ಯ - ಜಿಲ್ಲೆ | ಕರ್ನಾಟಕ - ಬಾಗಲಕೋಟೆ |
ನಿರ್ದೇಶಾಂಕಗಳು | |
ವಿಸ್ತಾರ | 12.6 km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೦೧) - ಸಾಂದ್ರತೆ | ೫೭೮೮೭ - ೪,೫೯೪.೨೧ /ಕಿಮಿ2 (೧೧,೮೯೯ /ಚದರ ಮಿ)/ಚದರ ಕಿ.ಮಿ. |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ | - ೫೮೨ ೩೦೧ - +೯೧ (೦) ೮೩೫೩ - ಕೆಎ-೪೮/೨೯ |
ಭೌಗೋಳಿಕದಲ್ಲಿ ೧೫*x ೫೦ ಮತ್ತು ೧೭*x ೨೮ ಉತ್ತರ ಅಕ್ಷಾಂಶ ಮತ್ತು ೭೪*x ೫೪ ಮತ್ತು ೭೬*x ೨೮ ಪಶ್ಚಿಮ ರೇಖಾಂಶದಲ್ಲಿ ಬರುತ್ತದೆ.
೨೦೦೧ ರ ಜನಗಣತಿಯ ಪ್ರಕಾರ ಜಮಖಂಡಿ ಪಟ್ಟಣದ ಜನಸಂಖ್ಯೆ ೫೭.೮೮೭ ಇಲ್ಲಿನ ಸಾಕ್ಷರತೆ ಪ್ರಮಾಣ ೬೦%. ಪುರುಷರಲ್ಲಿ ೬೭%, ಮಹಿಳೆಯರಲ್ಲಿ ೫೨% ರಷ್ಟು ಸಾಕ್ಷರ ಪ್ರಮಾಣ ಇದೆ.
ಜಿ.ಬಿ.ಖಾಡೆ,ಪ್ರಮಖ ಸಾಹಿತಿ. ಡಾ.ಪ್ರಕಾಶ ಗ,ಖಾಡೆ,ಸಂಶೋಧಕ ಸಾಹಿತಿ.
ಟೀಪು ಸುಲ್ತಾನ್ ನನ್ನು ಯುದ್ಧದಲ್ಲಿ ಸೋಲಿಸಿ ಜಮಖಂಡಿ ಸಂಸ್ಥಾನವು ಪ್ರಸಿದ್ಧಿಗೆ ಬಂತು.ಹಾಗೆಯೆ ಕಿತ್ತೂರು ಚೆನ್ನಮ್ಮಳನ್ನು ಸೋಲಿಸಿದಾಗ "ನಿನ್ನ್ ರಾಜ್ಯದಲ್ಲಿ ಕತ್ತೆಗಳು ಮೇಯಲಿ" ಎಂದು ಅವಳು ಶಾಪವನ್ನು ನೀಡಿದಳಂತೆ. ಅದರಂತೆ ಈಗಲೂ ಜಮಖಂಡಿಯಲ್ಲಿ ಕತ್ತೆಗಳು ಹೆಚ್ಚಾಗಿ ಕಂಡುಬರುತ್ತವೆ. https://www.prajavani.net/artculture/art/jamakhandi-633849.html
"ದಾಮಿ೯ಕವಾಗಿ ತಾಲೂಕಿನ ಎಲ್ಲಾ ಜನರು ಸಹೋದರ ಮನೊಭಾವ ಹೊಂದಿದ್ದಾರೆ"
ಪ್ರಮುಖ ವಿದ್ಯಾಸಂಸ್ಥೆಗಳು
ಮುಖ್ಯ ಭಾಷೆ ಕನ್ನಡ
ಸಂಗೀತ ಮತ್ತು ಕಲೆ
'ಸ್ವತಂತ್ರ ಹೋರಾಟಗಾರರು ಮತ್ತು ಗಾಂಧೀವಾದಿಗಳು
ಜೋಳ, ಸಜ್ಜೆ, ಸೇಂಗಾ, ಸೂರ್ಯಪಾನ, ಉಳ್ಳಾಗಡ್ಡಿ(ಈರುಳ್ಳೆ). ಪ್ರಮುಖ ಆಹಾರ ಧಾನ್ಯ ಜೋಳ.ಜೊತೆಗೆ ಗೋಧಿ, ಬೇಳೆಕಾಳುಗಳು.ಕಬ್ಬು
ಜಮಖಂಡಿಯಿಂದ ೨೫ ಕಿಲೊಮೀಟರ ದೂರ ಹೋದರೆ ಹಳಿಂಗಳಿ ಎಂಬ ಐತಿಹಾಸಿಕ ಸ್ಥಳವಿದೆ. ಅಲ್ಲಿ ಪ್ರಾಚಿನ ಕಾಲದ ಜೈನ ಮುನಿಗಳ ೭೦೦ ಮುನಿಗಳ ಸಮಾಧಿ ಸ್ಥಳಗಳಿವೆ.
ಒಟ್ಟು ಫಲಿತಾಂಶ.'
ಮೈಸೂರು ವಿಧಾನಸಭೆ ಚುನಾವಣೆ- ೧೯೫೭- ೧೯೭೨ ಕರ್ನಾಟಕ ವಿಧಾನಸಭೆ ಚುನಾವಣೆ- ೧೯೭೮- ೨೦೦೮
30px ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)| ಭಾರತೀಯ ಜನತಾ ಪಕ್ಷ (BJP)| ಜನತಾ ದಳ(ಎಸ್)JD(S) | ಜನತಾ ದಳ(ಯು)JD(U)| ಪಕ್ಷೇತರ(IND)|
ಪ್ರಮುಖ ರಾಜಕಾರಣಿಗಳು
ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ
ಜಮಖ೦ಡಿ ಪಟ್ಟಣ ಸಾರಿಗೆ ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ.
ನಗರಕ್ಕೆ ಹತ್ತಿರವಾದ ಕಾರವಾರ ಹಾಗೂ ಗೋವಾ ಬಂದರುಗಳಿವೆ.
ಜಮಖಂಡಿಯಿಂದ ಬಿಜಾಪೂರವರೆಗೆ ಸುಮಾರು ೮೦ ಕಿಮಿ ಹೆದ್ದಾರಿ ಇದೆ
ಐತಿಹಾಸಿಕ ಪೊಲೊ ಮೈದಾನ
ವಾರ್ಡ್ ಗಳು ನಗರದಲ್ಲಿ ಒಟ್ಟು [-] ವಾರ್ಡ್ ಗಳು ಇರುತ್ತವೆ.
ಜಮಖ೦ಡಿಯ ಪ್ರಮುಖ ಬಡಾವಣೆಗಳು
ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ,ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ಜಮಖಂಡಿಯ ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯಗಳಿಗೆ, ಪರದೇಶಗಳಿಗೆ ರಫ್ತು ಆಗುತ್ತವೆ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. 'ಜವಾರಿ' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರುಗಳು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
[[[ಚಿತ್ರ:http://www.jamkhanditown.gov.in/sites/jamkhanditown.gov.in/files/ram.JPG Archived 2013-12-16 ವೇಬ್ಯಾಕ್ ಮೆಷಿನ್ ನಲ್ಲಿ.]]]== ಚಿತ್ರ ಗ್ಯಾಲರಿ == ಟೆಂಪ್ಲೇಟು:ಜಮಖ೦ಡಿ ಚಿತ್ರ ಗ್ಯಾಲರಿ
ಜಮಖಂಡಿ ತಾಲ್ಲೂಕು : ಲೇಖನದಲ್ಲಿ ಮಾಡಬೇಕಾದ ಕೆಲಸಗಳು | ಈ ಪಟ್ಟಿಯನ್ನು ಬದಲಿಸಿ | |
---|---|---|
ಜಮಖಂಡಿ ತಾಲ್ಲೂಕು/to do |
This article uses material from the Wikipedia ಕನ್ನಡ article ಜಮಖಂಡಿ ತಾಲ್ಲೂಕು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.