ಹುಣಸೂರು ಕೃಷ್ಣಮೂರ್ತಿ

ಕಲ್ಯಾಣ ಕರ್ನಾಟಕದ 'ಪ್ರೇಮಕವಿ' •04 ಗೀತೆ ರಚನೆಗಳು •900 ಕವಿತೆಗಳು •250 ಜನ್ಮ ದಿನದ ಕವಿತೆಗಳು •150 ಸ್ನೇಹ ಸಂಬಂಧದ ಕವಿತೆಗಳು •50 Romantic poems

ಹುಣಸೂರು ಕೃಷ್ಣಮೂರ್ತಿ
ಹುಣಸೂರು ಕೃಷ್ಣಮೂರ್ತಿ

ಬಿರುದುಗಳು "ಸಿಂಗಲ್ ಪ್ರಾಸದ ಸಿಂಪಲ್ ಸಾಹಿತ್ಯಗಾರ' "ಪ್ರೇಮಕವಿ" "ಕವಿತೆಯ ಮಾಂತ್ರಿಕ" "Romantic poet"


ಸಿಂಗಲ್ ಪ್ರಾಸದ ಸಿಂಪಲ್ ಸಾಹಿತ್ಯಗಾರ ಎಂದೆ ಪ್ರಖ್ಯಾತ ಪಡೆದಿರುವ ಇವರು ಕಲ್ಯಾಣ ಕರ್ನಾಟಕದ ಮೂಲದವರಾಗಿರುತ್ತಾರೆ. ಹನುಮಂತರಾಯ ಪಾಟೀಲ್(H.K.PATIL) ಇವರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಉಸ್ಕಿಹಾಳ ಎಂಬ ಗ್ರಾಮದಲ್ಲಿ 12/06/1998 ರಲ್ಲಿ ಕನಕರಾಯ ಪಾಟೀಲ್,ರೇಣುಕಮ್ಮ ನವರ 2ನೇ ಮಗನಾಗಿ ಜನಿಸಿದರು. ಇವರು ತಮ್ಮ ಬಾಲ್ಯ ಶಿಕ್ಷಣವನ್ನು ತಮ್ಮ ಊರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ಮುಗಿಸಿದರು, ನಂತರದಲ್ಲಿ 6,7ನೇ ತರಗತಿಯನ್ನು ಪಕ್ಕದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾರಲದಿನ್ನಿ ಯಲ್ಲಿ ಮುಗಿಸುತ್ತಾರೆ, ಹಾಗೂ ತಮ್ಮ ಪ್ರೌಢ ಶಾಲಾ ಶಿಕ್ಷಣವನ್ನು ಸಹ ಅದೇ ಮಾರಲದಿನ್ನಿ ಪ್ರೌಢ ಶಾಲೆ ಯಲ್ಲಿ ಮುಗಿಸುತ್ತಾರೆ. ಇವರು ಲಿಂಗಸಗೂರಿನಲ್ಲಿ ತಮ್ಮ ಪಿಯುಸಿ ಯನ್ನು VCBES ವಳಬಳ್ಳಾರಿ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆ ಯಲ್ಲಿ ಮುಗಿಸುತ್ತಾರೆ. ನಂತರದಲ್ಲಿ ತಮ್ಮ ಪದವಿ ಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಲಿಂಗಸುಗೂರು ನಲ್ಲಿ ಆಂಗ್ಲ (English) ವಿಷಯದಲ್ಲಿ ಬಿ.ಎ.ಪದವಿಯನ್ನು ಪಡೆದು ಕೊಂಡಿರುತ್ತಾರೆ. ಇವರು ಪ್ರಸ್ತುತ JSS ಕಾಲೇಜ್ ನಲ್ಲಿ BEd ಪ್ರಶಿಕ್ಷಣಾರ್ಥಿ ಯಾಗಿ ಅಭ್ಯಾಸ ಮಾಡುತ್ತಿದ್ದಾರೆ. ಇವರು ತಮ್ಮ ಶಿಕ್ಷಣ ದೊಂದಿಗೆ ಕವನ ಕವಿತೆಗಳಿಗೆ ಹೆಚ್ಚು ಹೊತ್ತು ಕೊಡುತ್ತಿದ್ದರು ಇವರು ಸಣ್ಣ ಸಣ್ಣ ಸಾಲುಗಳನ್ನು ಗೀಚುತ್ತ 900 ಕ್ಕಿಂತ ಹೆಚ್ಚು ಕವಿತೆಗಳನ್ನು ಬರೆದಿದ್ದಾರೆ, ಅದರಲ್ಲಿ 450 ಪ್ರೇಮ ಕವಿತೆಗಳು ಹಾಗೂ 250 ಜನ್ಮ ದಿನದ ಕವಿತೆಗಳು ಮೂಡಿಬಂದಿವೆ ಆದ್ದರಿಂದ ಇವರನ್ನ "ಪ್ರೇಮ ಕವಿ" ಎಂದು ಕೂಡ ಕರೆಯುತ್ತಾರೆ.ಇವರು 4 ಹಾಡುಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ. ಮೊದಲಿಗೆ ಯರ್ರಾಬಿರ್ರಿ ಚಿತ್ರದ ನಟ ರೂರಲ್ ಸ್ಟಾರ್ ಅಂಜನ್ ರವರಿಗೆ, 2ನೇ ಸಾಹಿತ್ಯ ಶ್ರೀ ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರು ವಿಧಾನಸಭಾ ಕ್ಷೇತ್ರ ಮಸ್ಕಿ ಇವರಿಗೆ ಅಭಿಮಾನವನ್ನು ಸಾಹಿತ್ಯವನ್ನು ಬರೆದು ಹಾಡಿನ ಮೂಲಕ ವ್ಯಕ್ತ ಪಡಿಸಿದ್ದಾರೆ. 3ನೇ ಗೀತೆಯನ್ನು ಕನ್ನಡ ರಾಜ್ಯೋತ್ಸವ ದ ಕುರಿತು ಬರೆದಿದ್ದಾರೆ. ಹೀಗೆ ಹಲವಾರು ಗೀತೆಗಳಿಗೆ ಸಾಹಿತ್ಯ ವನ್ನು ಬರೆದಿದ್ದಾರೆ. ಇವರು ಬರೆದಿರುವ ಕೆಲವು ಸಾಹಿತ್ಯಕ್ಕೆ "Romantic poet" ಎಂಬ ಬಿರುದು ಕೂಡ ಇವರಿಗಿದೆ. ಓದುಗಾರರಿಂದ ಇವರ ಕವನಗಳಿಗೆ ತುಂಬಾ ಪ್ರತಿಕ್ರಿಯೆಗಳು ದೊರಕುತ್ತಿವೆ. ಇವರ ಕವನಗಳು ಓದಲು ಇಂಪಾಗಿರುತ್ತವೆ. ಮನಸ್ಸಿಗೆ ಮುದವನ್ನು ನೀಡುತ್ತವೆ. ಇವರ ಸಾಹಿತ್ಯದ ಪಯಣ ಮುಗಿಲೆತ್ತರಕ್ಕೆ ಹೋಗುತಿದೆ...

ಆರಂಭಿಕ ಜೀವನ

ತಂದೆ ಎಂ.ರಾಜಾರಾವ್ ಲೋಕೋಪಯೋಗಿ ಇಲಾಖೆ ಯಲ್ಲಿ ಸೇವೆ ಸಲ್ಲಿಸುತ್ತಿದರು. ತಾಯಿ ಪದ್ಮಾವತಮ್ಮ, ಮನೆಯಲ್ಲಿ ಪುರಾಣ ಪುಣ್ಯ ಕತೆಗಳ ವಾತಾವರಣ ,ಅಜ್ಜ ಮದ್ವಾಚಾರ್ ಶ್ರೇಷ್ಠ ಸಂಸ್ಕೃತ ವಿದ್ವಾಂಸರು. ಬಾಲ್ಯದಲ್ಲಿಯೇ ಶ್ಲೋಕ, ಕಥೆ, ಜನಪದ ಸಾಹಿತ್ಯ ಇವರ ನಿತ್ಯ ಮಂತ್ರವಾಗಿತ್ತು. ಅದೇ ಮುಂದೆ ಸಾಹಿತ್ಯ ಕ್ಷೇತ್ರ ಪ್ರವೇಶಿಸಲು ಪರೋಕ್ಷ ಕಾರಣವೂ ಆಯಿತು. ಹುಣಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಮೈಸೂರಿನ ಶಾರದಾ ವಿಲಾಸ್ ಶಾಲೆ ಸೇರಿದರು. ಒಮ್ಮೆ ವಿಲಿಯಂ ಷೇಕ್ಸ್‌ಪಿಯರ್ "ಒಥೆಲೋ" ನಾಟಕದಲ್ಲಿ "ಇಯಾಗೋ ಪಾತ್ರ ನಿರ್ವಹಿಸುತ್ತಿದ್ದಾಗ ನೋಡಲು ಮುಂಬೈನ ಖ್ಯಾತ ತಂತ್ರಜ್ಞ ಕಪಾಡಿಯ ಆಗಮಿಸಿದ್ದರು, ಅವರು ಹುಣಸೂರರ ಅಭಿನಯ ಮೆಚ್ಚಿ ತಮ್ಮ ಜೊತೆ ಮುಂಬೈಗೆ ಕರೆದೊಯ್ದು " ಸಿಂಹಳ ಸುಂದರಿ" ಎಂಬ ಮೂಕಿ ಚತ್ರದಲ್ಲಿ ಅವಕಾಶ ನೀಡಿದರು. ಆಗ ಹುಣಸೂರರಿಗೆ ಕೇವಲ ಹತ್ತು ವರ್ಷ.

ವೃತ್ತಿ ಜೀವನ

ಮುಂದೆ ಮೈಸೂರಿಗೆ ಹಿಂತಿರುಗಿ ಬಸವಯ್ಯ ಶಾಲೆಯಲ್ಲಿ ಶಿಕ್ಷಣ ಮುಂದುವರೆಸಿದರೂ ಅವರಿಗೆ ಚಿತ್ರರಂಗದ ಆಕರ್ಷಣೆ ತಪ್ಪಿಸಿಕೊಳ್ಳಲಾಗಲಿಲ್ಲ. ಹದಿನಾಲ್ಕನೇ ವರ್ಷಕ್ಕೆ ಮತ್ತೆ ಮುಂಬೈಗೆ ತೆರಳಿ ಅಲ್ಲಿನ "ಮುಂಬಯಿ ಟಾಕೀಸ್ " ಸೇರಿ ಚಿತ್ರ ರಂಗದ ಎಲ್ಲಾ ಅನುಭವ ಪಡೆದರು. ಮತ್ತೆ ಕನ್ನಡ ನಾಡಿಗೆ ಹಿಂತಿರುಗಿ "ಚಂದ್ರಕಲಾ ನಾಟಕ ಮಂಡಳಿ" ಸೇರಿದರು. ಪೀರ್ ಸಾಹೇಬರ ಆಕಸ್ಮಿಕ ನಿದನದಿಂದ "ಗುಬ್ಬಿ" ಕಂಪನಿಗೆ ಬಂದ ಹುಣಸೂರರು ಹಲವಾರು ನಾಟಕಗಳನ್ನು ರಚಿಸಿದರು. ಅದರಲ್ಲಿ "ರಾಜಾ ಗೋಪಿಚಂದ್" ಅಪಾರ ಜನಮನ್ನಣೆ ಪಡೆಯಿತು. "ಸಂಸಾರ ನೌಕೆ" ಚಿತ್ರದ ಸಹ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಹುಣಸೂರರು ೧೯೪೫ರಲ್ಲಿ ಗುಬ್ಬಿ ವೀರಣ್ಣನವರ "ಹೇಮರೆಡ್ಡಿ ಮಲ್ಲಮ್ಮ" ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಚಿತ್ರ ಸಾಹಿತಿಯಾದರು. ಇಲ್ಲಿಂದ ಮುಂದೆ "ಹುಣಸೂರರ ಯುಗ" ವೇ ಆರಂಭವಾಯಿತು ೫೦ರ ದಶಕದ ಬಹುತೇಕ ಚಿತ್ರಗಳು ಇವರ ಲೇಖನಿಯಿಂದಲೀ ಮೂಡಿಬಂದವು, "ಜಗನ್ಮೋಹಿನಿ" ಯಂತೂ ದಿಗ್ವಿಜಯ ಸಾಧಿಸಿತು, ನಾಗ ಕನ್ನಿಕಾ, ಶ್ರೀ ಶ್ರೀನಿವಾಸ ಕಲ್ಯಾಣ, ಚಂಚಲ ಕುಮಾರಿ, ದಲ್ಲಾಳಿ, ಗಂದರ್ವ ಕನ್ಯೆ, ಕನ್ಯಾದಾನ, ರಾಜ ವಿಕ್ರಮ, ನಳ ದಮಯಂತಿ, ಮಹಾನಂದ ಮುಂತಾದ ಚಿತಗಳು ಇವರ ಸಾಹಿತ್ಯದಿಂದ ಸಂಪನ್ನಗೊಂಡವು. ೧೯೫೮ರಲ್ಲಿ "ನಂದಿ ಪಿಕ್ಚರ್ಸ್" ಲಾಂಛನದಲ್ಲಿ ಕೆ, ಎಂನಾಗಣ್ಣನವರು ನಿರ್ಮಿಸಿದ "ಶ್ರೀ ಕೃಷ್ಣ ಗಾರುಡಿ" ಚಿತ್ರದ ಮೂಲಕ ಹುಣಸೂರರು ನಿರ್ದೇಶಕರಾದರು. ಬೆಳ್ಳಾವೆ ನರಹರಿ ಶಾಸ್ತ್ರಿಗಳ ನಾಟಕವನ್ನು ಅದಾರಿಸಿದ ಚಿತ್ರ ಕೇವಲ ಪೌರಾಣಿಕ ಕತೆಯಷ್ಟೇ ಆಗದೆ ಸ್ವಾತಂತ್ರೋತ್ತರ ಭಾರತದ ಆಶಯದ ಅಭಿವ್ಯಕ್ತಿಯನ್ನಾಗಿಯೇ ಮಾಡುವಲ್ಲಿ ಹುಣಸೂರರು ಹೊಸ ಹಾದಿ ಹಿಡಿದರು."ಆಶಾ ಸುಂದರಿ" ಹುಣಸೂರರು ನಿರ್ದೇಶಿಸಿದ ಎರಡನೆಯ ಚಿತ್ರ. ಸಲಿಂಗ ಕಾಮದಂತಹ ಸೂಕ್ಷ್ಮವಸ್ತುವನ್ನು ಭಾರತೀಯ ಚಿತ್ರರಂಗಕ್ಕೆ ಆ ಕಾಲದಲ್ಲಿಯೇ ತಂದವರು ಹುಣಸೂರರು. ಹುಣಸೂರರ ಪ್ರತಿಭೆಯ ವಿರಾಟ್ ಸ್ವರೂಪವನ್ನು ಅನಾವರಣ ಮಾಡಿದ ಮೊದಲ ಚಿತ್ರ "ವೀರ ಸಂಕಲ್ಪ" ಅದುವರೆಗಿನ ಕನ್ನಡ ಚಿತ್ರರಂಗದ ಸ್ವರೂಪಕ್ಕಿಂತ ತೀರಾ ವಿಭಿನ್ನವಾಗಿ ಮೂಡಿಬಂದ ಈ ಚಿತ್ರ ಅವರೇ ಕರೆದುಕೊಂಡಂತೆ "ವಿಶ್ವಾಮಿತ್ರ ಸೃಷ್ಟಿ" ಯಾಗಿತ್ತು. ವಿಜಯನಗರದ ಪತನ ಸಂದರ್ಭದಲ್ಲಿ ಬಂದ "ಎಚ್ಹಮನಾಯಕ " ಎಂಬ ಸ್ವಾಮಿ ಭಕ್ತನ ಕತೆ ಆಧರಿಸಿದ ಚಿತ್ರದ ನಾಯಕನ ಪಾತ್ರವನ್ನು ಸ್ವತಃ ಹುಣಸೂರರೆ ನಿರ್ವಹಿಸಿದ್ದರು.ಉಜ್ವಲ ಸಂಭಾಷಣೆ, ಸಶಕ್ತ ಗೀತೆಗಳಿಂದ ಶ್ರೀಮಂತವಾದ ಹಲವಾರು ಪ್ರತಿಭಾವಂತ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿತು.

ಸಾಹಿತ್ಯ

ಗೌತಮ ಬುದ್ಧ ಧರ್ಮರತ್ನಾಕರ, ರಾಜಾಗೋಪಿಚಂದ್ ಮುಂತಾದ ನಾಟಕಗಳನ್ನು ಬರೆದರು. ಅವರ ಸಂಭಾಷಣೆ ಶೈಲಿ ಜನಮೆಚ್ಚುಗೆ ಪಡೆಯಿತು. ಪ್ರೇಕ್ಷಕರನ್ನು ನೇರವಾಗಿ ಮುಟ್ಟುವಂತಹ ಆಡು ಭಾಷೆಯ ಮಾತುಗಳು ಜನಪ್ರಿಯವಾಗುತ್ತಿದ್ದಂತೆಯೇ ಹುಣಸೂರು ಕೃಷ್ಣಮೂರ್ತಿಯವರು ಬರವಣಿಗೆಯತ್ತಲೇ ತಮ್ಮ ಗಮನ ಕೇಂದ್ರೀಕರಿಸಿದರು. ನಿರ್ಮಾಪಕ-ನಿರ್ದೇಶಕರುಗಳಾದ ಡಿ.ಶಂಕರ್ ಸಿಂಗ್ ಮತ್ತು ಬಿ.ವಿಠಲಾಚಾರ್ಯ ಇವರ ಬರವಣಿಗೆಯಲ್ಲಿನ ಸತ್ವವನ್ನು ಅರಿತರು. ಹುಣಸೂರು ಕೃಷ್ಣಮೂರ್ತಿ ಅವರ ಎಲ್ಲ ಚಿತ್ರಗಳಿಗೂ ಸಂಭಾಷಣೆ ಹಾಗೂ ಹಾಡುಗಳನ್ನು ಬರೆಯತೊಡಗಿದರು. ಸರಳ-ಸುಂದರ-ಆಡುಭಾಷೆಯ ಮಾತು-ಹಾಡುಗಳು ಪ್ರೇಕ್ಷಕರಿಗೆ ಮೋಡಿಮಾಡಿತು. ಭಕ್ತಿಪ್ರಧಾನ, ಜಾನಪದ, ಐತಿಹಾಸಿಕ, ಸಾಮಾಜಿಕ ಯಾವುದೇ ಆಗಿರಲಿ, ಆ ಪ್ರಕಾರಕ್ಕೆ ಒಪ್ಪುವಂಥ-ಜನಸಾಮಾನ್ಯರ ಮನಸ್ಸಿಗೆ ಮುಟ್ಟುವಂಥ ಸಾಹಿತ್ಯ ಇವರ ಲೇಖನದಿಂದ ಮೂಡಿಬಂದಿತು. ಜಗನ್ಮೋಹಿನಿ, ರತ್ನಮಂಜರಿ, ಕನ್ಯಾದಾನ, ವೀರಸಂಕಲ್ಪ, ಬೂತಯ್ಯನ ಮಗ ಅಯ್ಯು, ಭಕ್ತಸಿರಿಯಾಳ, ಭಕ್ತಜ್ಞಾನದೇವ ಮತ್ತು ಭಕ್ತ ಕುಂಬಾರ, ಬಬ್ರುವಾಹನ, ಸತ್ಯಹರಿಶ್ಚಂದ್ರ ಎರಡು ವರ್ಷ ಸತತವಾಗಿ ಪ್ರದರ್ಶಿತವಾದ 'ಬಂಗಾರದ ಮನುಷ್ಯ' ಹೀಗೆ ಅನೇಕ ಚಿತ್ರಗಳಿಗೆ ಹಾಡು-ಮಾತು ಬರೆದರು. ಕೆ.ಎಂ,ಹುಣಸೂರು , ಗೌತಮ ಹೀಗೆ ವಿಭಿನ್ನ ಹೆಸರುಗಳಲ್ಲಿಯೂ ಇವರು ಗೀತರಚನೆ ಮಾಡಿರುವ ಇವರು ಬೊಂಬೆಯಾಟವಯ್ಯ.......ಮಾನವ ಮೂಳೆ ಮಾಂಸದ ತಡಿಕೆ....... ಶಿವ ಶಿವ ಎಂದರೆ ಭಯವಿಲ್ಲ...ಮುಂತಾದ ಭಕ್ತಿ ಪ್ರದಾನ, ಗಿಲ್ ಗಿಲ್ ಗಿಲಕ್ಕ.....ಸಿಟ್ಯಾಕೋ ಸಿಡುಕ್ಯಾಕೋ ನನ್ನ ಜಾಣ.......ಮಾದರಿಯ ಜಾನಪದ ಛಾಯೆಯ ಗೀತೆ, ಬಾಳ ಬಂಗಾರ ನೀನು...... ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವರ್ಯಾರೋ.....ಮುಂತಾದ ಭಾವಗೀತಾತ್ಮಕ ರಚನೆಗಳನ್ನು ರಚಿದ್ದಾರೆ. ಕುಲದಲ್ಲಿ ಕೀಳ್ಯಾವುದೋ........ ನಗು ನಗುತಾ ನಲೀ ನಲೀ .... ಮುಂತಾದ ಸಾರ್ವತ್ರಿಕ ಮೌಲ್ಯ ಸಾರುವ ಗೀತೆಗಳನ್ನೂ ರಚಿಸಿದ್ದಾರೆ. ಸರಳ ಆಡು ಮಾತಿನ ಸಂಭಾಷಣೆಗಳನ್ನು ಬೆಳ್ಳಿ ತೆರೆಗೆ ತಂದ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ.ಎಲ್ಲ ಕ್ಷೇತ್ರಗಳಲ್ಲೂ ಕನ್ನಡಕ್ಕೆ ಅವರು ಅಡಿಪಾಯ ಹಾಕಿ ಕೊಟ್ಟರು.

ಪ್ರಶಸ್ತಿಗಳು

೧೯೬೫ರಲ್ಲಿ ಹುಣಸೂರರು ನಿರ್ದೇಶಿಸಿದ ಸತ್ಯಹರಿಶ್ಚಂದ್ರ ಮತ್ತು "ಮದುವೆ ಮಾಡಿನೋಡು" ಚಲನಚಿತ್ರಗಳಿಗೆ ರಾಷ್ಟ್ರಪ್ರಶಸ್ತಿಗೆ ದೊರೆತಿದೆ. ರಾಜ್ಯಸರ್ಕಾರವು ಚಲನಚಿತ್ರ ನಿರ್ದೇಶಕರ ಸೇವೆಯನ್ನು ಗುರುತಿಸಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪಡೆದ ಸಾಹಿತಿಗಳಲ್ಲಿ ಹುಣಸೂರು ಕೃಷ್ಣಮೂರ್ತಿ ಮೊದಲನೆಯವರು.

ಮರಣ

1989ರ ಜನವರಿ 13ರಂದು ಹುಣಸೂರು ಕೃಷ್ಣಮೂರ್ತಿ ತಮ್ಮ 75ನೇ ವಯಸ್ಸಿನಲ್ಲಿ ವಿಧಿವಶರಾದರು.

ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಚಿತ್ರಗಳು

  1. ಶಿವ ಕೊಟ್ಟ ಸೌಭಾಗ್ಯ-೧೯೮೫-ನಿದೇ೯ಶಕ
  2. ಶಿವಕನ್ಯ-೧೯೮೪-ನಿದೇ೯ಶಕ
  3. ಭಕ್ತಜ್ಞಾನದೇವ-೧೯೮೧-ನಿದೇ೯ಶಕ
  4. ಎಡೆಯೂರು ಸಿದ್ದಲಿ೦ಗೇಶ್ವರ-೧೯೮೧-ನಿದೇ೯ಶಕ
  5. ಕುರುಬರ ಲಕ್ಕ-೧೯೮೧-ನಿದೇ೯ಶಕ
  6. ಶಿವಮಹಿಮಾ-೧೯೮೧-ನಿದೇ೯ಶಕ
  7. ಸಿದ್ದಲಿ೦ಗೇಶ್ವರಮಹಿಮಾ-೧೯೮೧-ನಿದೇ೯ಶಕ
  8. ಭಕ್ತಸಿರಿಯಾಳ-೧೯೮೦-ನಿದೇ೯ಶಕ
  9. ಗುರುಸಾವ೯ಭೌಮ ಶ್ರೀ ರಾಘವೇ೦ದ್ರ ಕರುಣೆ-೧೯೮೦-ನಿದೇ೯ಶಕ
  10. ಬಬ್ರುವಾಹನ -೧೯೭೭-ನಿದೇ೯ಶಕ
  11. ವೀರ ಸಿ೦ಧೂರ ಲಕ್ಷ್ಮ ಣ-೧೯೭೭-ನಿದೇ೯ಶಕ
  12. ಮ೦ತ್ರಶಕ್ತಿ-೧೯೭೫-ನಿದೇ೯ಶಕ
  13. ಭಕ್ತಕು೦ಬಾರ-೧೯೭೪-ನಿದೇ೯ಶಕ
  14. ಜಗ ಮೆಚ್ಚಿದ ಮಗ-೧೯೭೨-ನಿದೇ೯ಶಕ
  15. ವಿಷಕನ್ಯ-೧೯೭೧-ನಿದೇ೯ಶಕ
  16. ಅಡ್ಡದಾರಿ-೧೯೬೮-ನಿದೇ೯ಶಕ
  17. ದೇವರಗೆದ್ದ ಮಾನವ-೧೯೬೭-ನಿದೇ೯ಶಕ
  18. ಶ್ರೀ ಕನ್ನಿಕಾ ಪರಮೇಶ್ವರಿ ಕಥೆ-೧೯೬೬-ನಿದೇ೯ಶಕ
  19. ಮದುವೆ ಮಾಡಿನೋಡು-೧೯೬೫-ನಿದೇ೯ಶಕ
  20. ಸತ್ಯ ಹರಿಶ್ಚಂದ್ರ-೧೯೬೫-ನಿದೇ೯ಶಕ
  21. ವೀರಸ೦ಕಲ್ಪ-೧೯೬೪-ನಿದೇ೯ಶಕ
  22. ರತ್ನಮಂಜರಿ -೧೯೬೨-ನಿದೇ೯ಶಕ
  23. ಮೇರಾ ಸುಹಾಗ್-೧೯೬೧-ನಿದೇ೯ಶಕ(ಹಿ೦ದಿ)
  24. ಆಶಾಸು೦ದರಿ-೧೯೬೦-ನಿದೇ೯ಶಕ
  25. ರಾಮಸು೦ದರಿ-೧೯೬೦-ನಿದೇ೯ಶಕ
  26. ಶ್ರೀ ಕೃಷ್ಣಗಾರುಡಿ-೧೯೫೮-ನಿದೇ೯ಶಕ

ಉಲ್ಲೇಖಗಳು

Tags:

ಹುಣಸೂರು ಕೃಷ್ಣಮೂರ್ತಿ ಆರಂಭಿಕ ಜೀವನಹುಣಸೂರು ಕೃಷ್ಣಮೂರ್ತಿ ವೃತ್ತಿ ಜೀವನಹುಣಸೂರು ಕೃಷ್ಣಮೂರ್ತಿ ಸಾಹಿತ್ಯಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿಗಳುಹುಣಸೂರು ಕೃಷ್ಣಮೂರ್ತಿ ಮರಣಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಚಿತ್ರಗಳುಹುಣಸೂರು ಕೃಷ್ಣಮೂರ್ತಿ ಉಲ್ಲೇಖಗಳುಹುಣಸೂರು ಕೃಷ್ಣಮೂರ್ತಿ

🔥 Trending searches on Wiki ಕನ್ನಡ:

ಮಲ್ಲಿಕಾರ್ಜುನ ಜ್ಯೋತಿರ್ಲಿಂಗಭಾರತದ ಪಂಚಾಯತ್ ರಾಜ್ ವ್ಯವಸ್ಥೆಶಿವರಾಮ ಕಾರಂತಆರ್ಯಭಟ (ಗಣಿತಜ್ಞ)ರಾಷ್ಟ್ರೀಯತೆಹೊನಗೊನ್ನೆ ಸೊಪ್ಪುಕರ್ಬೂಜಎರಡನೇ ಮಹಾಯುದ್ಧಸತಿಭರತನಾಟ್ಯಭಾರತದ ಸಂಯುಕ್ತ ಪದ್ಧತಿಶ್ರವಣಬೆಳಗೊಳಸಂಗೊಳ್ಳಿ ರಾಯಣ್ಣಲೋಹಭಾರತದ ರಾಷ್ಟ್ರಗೀತೆರಮ್ಯಾಗೋಳದೇವತಾರ್ಚನ ವಿಧಿಪ್ರಧಾನ ಖಿನ್ನತೆಯ ಅಸ್ವಸ್ಥತೆಅಷ್ಟಾಂಗ ಯೋಗಕುಟುಂಬಚಂಪೂಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕರ್ನಾಟಕ ಪೊಲೀಸ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಛಂದಸ್ಸುಬಿಲ್ಹಣಜನ್ನಭಾರತದಲ್ಲಿ ಪಂಚಾಯತ್ ರಾಜ್ಗೂಳಿಪಶ್ಚಿಮ ಘಟ್ಟಗಳುರಂಗಭೂಮಿವಸಾಹತುಸಾಮ್ರಾಟ್ ಅಶೋಕರಾಜಸ್ಥಾನ್ ರಾಯಲ್ಸ್ಜೀವನಇಟಲಿಭಾರತದ ಸಂವಿಧಾನತ್ರಿಕೋನಮಿತಿಯ ಇತಿಹಾಸರಾಮಕೃಷ್ಣ ಪರಮಹಂಸಶ್ರೀವಿಜಯನಗರ ಸಾಮ್ರಾಜ್ಯಭಾರತೀಯ ರೈಲ್ವೆಸೂರ್ಯ (ದೇವ)ನೀತಿ ಆಯೋಗತ್ಯಾಜ್ಯ ನಿರ್ವಹಣೆಭಾರತದ ರೂಪಾಯಿಗೋವಿಂದ ಪೈಮುಖ್ಯ ಪುಟನವೋದಯಗಣರಾಜ್ಯೋತ್ಸವ (ಭಾರತ)ಕನ್ನಡ ಸಾಹಿತ್ಯ ಪ್ರಕಾರಗಳುಗರ್ಭಪಾತಭಾರತದ ಮುಖ್ಯಮಂತ್ರಿಗಳುಶಂಕರ್ ನಾಗ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗನಿರುದ್ಯೋಗಕಲ್ಯಾಣ ಕರ್ನಾಟಕಚಪಾತಿಸಮಾಜಶಾಸ್ತ್ರರಾಮ್ ಮೋಹನ್ ರಾಯ್ಡಿ.ವಿ.ಗುಂಡಪ್ಪವಾಯು ಮಾಲಿನ್ಯಮೈಸೂರುಕೊಡವರುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ವಾದಿರಾಜರುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕೆಂಪು ರಕ್ತ ಕಣಸಗಟು ವ್ಯಾಪಾರಜ್ಞಾನಪೀಠ ಪ್ರಶಸ್ತಿಆಟಿಸಂಕುವೆಂಪು೧೭೮೫ಅಜಿಮ್ ಪ್ರೇಮ್‍ಜಿವಚನಕಾರರ ಅಂಕಿತ ನಾಮಗಳುರಾಷ್ಟ್ರಕವಿ🡆 More