ಮಾರನಕಟ್ಟೆ - ಬ್ರಹ್ಮಲಿಂಗೇಶ್ವರ

ಮಾರಣಕಟ್ಟೆ ಕ್ಷೇತ್ರವು ಕೊಲ್ಲೂರಿನಿಂದ ಎಂಟು ಮೈಲಿ ದೂರದಲ್ಲಿ ವಂಡ್ಸೆ ಮಾರ್ಗದಿಂದ ಕುಂದಾಪುರಕ್ಕೆ ಹೋಗುವ ರಸ್ತೆಯಲ್ಲಿ ಚಿತ್ತೂರು ಎಂಬ ಸ್ಥಳದಿಂದ ಒಂದು ಮೈಲಿ ದೂರದ ಒಳಹಾದಿಯಲ್ಲಿ ಹೋಗಬೇಕು.

ದೇವಾಲಯವಿರುವ ಸ್ಥಳ

ಇಲ್ಲಿ ಪ್ರಕೃತಿ ಸೌಂದರ್ಯವು ಅತ್ಯಂತ ರಮಣೇಯವಗಿದೆ. ದೇವಸ್ಥಾನದ ಸಮೀಪದಲ್ಲಿ "ಬ್ರಹ್ಮಕುಂಡ" ಎಂಬ ಸಣ್ಣ ನದಿಯು ಹರಿಯುತ್ತದೆ. ಭಕ್ತಾದಿಗಳ ಸ್ನಾನ ಸಂಧ್ಯಾವಂದನೆಗಳಿಗೆ ಉಪಯುಕ್ತವಾಗಿದೆ.

ದೇವಾಲಯದ ಇತಿಹಾಸ

ವೈವಸ್ವತ ಮನ್ವಂತರಾಂತ್ಯದಲ್ಲಿ ಇಪ್ಪತ್ತೆಂಟನೇ ದ್ವಾಪರಯುಗದ ಅಂತ್ಯದಲ್ಲಿ ಪತ್ನಿಸಹಿತನಾದ ಮೂಕಾಸುರನನ್ನು ಕೊಂದ ಮೂಕಾಂಬಿಕೆಯು ಎಲ್ಲಿ ವಾಸ ಮಾಡಿದಳೋ, ಅಂಥಾ ಪ್ರಸಿದ್ಧವಾದ ಕೋಲಪುರ ಕ್ಷೇತ್ರ ದಲ್ಲಿ ದೇವಿಯಿಂದ ಮೂಕಾಸುರನನ್ನು ಎಲ್ಲಿ ನಾಶಮಾಡ್ಲ್ಪಟ್ಟಿತ್ತೋ ಆ ಸ್ಥಳವೇ ಮಾರಣಕಟ್ಟೆ ಎಂದು ಪ್ರಸಿದ್ಧಿಯಾಗಲ್ಪಟ್ಟಿತು. ಮಾರನಕಟ್ಟೆ ಸ್ಥಳದಲ್ಲಿ ಮಣ್ಣಿನ ಪೀಠದಲ್ಲಿ ಬ್ರಹ್ಮಲಿಂಗವೆಂಬ ಹೆಸರಿನಿಂದ ಆ ಮೂಕಾಸುರ ನೆಂಬ ದೈತ್ಯನು ಬಲಿಷ್ಠನಾದ ಭೂತಾದಿಪತಿತ್ವವನ್ನು ಹೊಂದಿದವನಾದನು.

ಯಾವಾಗ ಮೂಕಾಸುರನು ಶ್ರೀದೇವಿಯಿಂದ ಯುದ್ಧದಲ್ಲಿ ಕೊಲ್ಲಲ್ಪಟ್ಟನೋ ಆ ಪ್ರಾಣೋತ್ಕ್ರ್ಮಣದ ಸಮಯದಲ್ಲಿ ಹಿಂದಿನ ಜನ್ಮದ ಪುಣ್ಯಾಂಶದ ಸುಕೃತದಿಂದ ಸದ್ಭುದ್ಧಿಯುಂಟಾಗತಕ್ಕಂಥಾದ್ದಾಯಿತು. ಅಚಲವಾದ ಸದ್ಭಕ್ತಿಯಿಂದ ಜಗಜ್ಜನನಿಯಾದ ಶ್ರೀದೇವಿಯನ್ನು ಸ್ತತಿಸುವವನಾಗಿ ದೇವಿಯನ್ನು ಕುರಿತು ಉದ್ಧಂಡ ನಮಸ್ಕಾರವನ್ನು ಮಾಡುವವನಾದನು. ಮೂಕಾಸುರನ ಸದ್ಭಕ್ತಿಗೆ ಮೆಚ್ಚಿದವಳಾದ ಶ್ರೀದೇವಿಯು "ಎಲೈ ಅಸುರನೇ ನಿನಗೆ ಕಲ್ಯಾಣವಾಗಲಿ ನಿನ್ನ ಮನಸ್ಸಿನಲ್ಲಿ ಏನನ್ನು ಕೇಳಬೇಕೊ ಆ ವರವನ್ನು ಕೇಳುವವನಾಗು" ಎಂದು ಕೇಳಿದಳು ಅದಕ್ಕೆ ಮೂಕಾಸುರನು ಈ ಪ್ರಕಾರ ಕೇಳುವವನಾದನು "ಎಲೈ ಅಂಬಿಕೆಯೇ ನೀನು ನನ್ನ ಮೇಲೆ ಸಂತುಷ್ಟಳಾಗಿ ವರವನ್ನು ಕೊಡುವವಳಾದರೆ ನಿನ್ನ ಸಮೂಪದಲ್ಲೆಯೇ ನಮ್ಮವರಿಂದ ಕೂಡಿದವರಾಗಿ ನಿನ್ನ ಸೇವೆಯನ್ನು ಮಾಡುವಂತೆ ಅನುಗ್ರಹಿಸುವಳಾಗು. ಎಲೈ ಮಹಾದೇವಿಯೇ ನೀನು ವರ ಕೊಡುವವಳಾದರೆ ನನ್ನ ಮನಸ್ಸಿನ ಅಪೇಕ್ಷೆಯಂತೆ ನಿನ್ನ ಚರಣ ಕಮಲ ಸೇವೆ ಮಾಡುವಂತೆಯೂ ನಿನ್ನಲ್ಲಿ ಅಚಂಚಲವಾದ ಭಕ್ತಿಯನ್ನು ಅನುಗ್ರಹಿಸುವವಾಳಾಗು" ಎಂದನು. ಶ್ರೀ ದೇವಿಯು ಮೂಕಾಸುರನ ಈ ಪ್ರಕಾರವಾದ ವಾಕ್ಯವನ್ನು ಕೇಳಿದವಳಾಗಿ ಅವನ ಭಕ್ತಿಗೆ ಮಚ್ಚಿದವಳಾಗಿ ಈ ಪ್ರಕಾರ ಹೇಳುವವಳಾದಳು "ದಾನವೇಂದ್ರನಾದ ಎಲೈ ಮೂಕನೇ ನೀನು ತಪೋಗುಣದಿಂದ ಕೂಡಿದವನಾದ್ದತರಿಂದ ಈ ಹೊತ್ತಿನಿಂದ ನನ್ನ ಸಮೂಪದಲ್ಲಿಯೇ ಭೂತಗಳಿಗೆಲ್ಲಾ ಒಡೆಯನಾಗಿ ವಾಸ ಮಾಡುವವನಾಗು. ನೀನು ಇಲ್ಲಿಯೇ ಮಾರಣಪಟ್ಟವನಾದ್ದರಿಂದ ಭೂತಗಣಗಳಿಗೆಲ್ಲಾ ಮೂಖ್ಯವಾಗಿ ಮಾರನಕಟ್ಟೆ ಬ್ರಹ್ಮನೆಂದು ಪ್ರಸಿದ್ದಿಯುಳ್ಳವನಾಗು ಮತ್ತು ನಿನ್ನ ಪರಿವಾರದವರೂ ಕೂಡ ಮಾರನಕಟ್ಟೆ ಗಣಗಳು ಎಂದು ಪ್ರಸಿದ್ಧರಾಗಲಿ. ಮತ್ತು ನಿನ್ನ ಮರಣವಾದ ಸ್ಥಳವು ಎತ್ತರವಾಗಿ ಕಟ್ಟೆಯಂತೆ ಇರುವುದರಿಂದಲು 'ಮಾರಣಕಟ್ಟೆ' ಎಂದು ಈ ಕಲಿಯಗದಲ್ಲಿ ಪ್ರಸಿದ್ದಿಯಾಗಲ್ಪಡಲಿ. ನನ್ನ ಶತ್ರುವಾದ ನೀನು ಯಾವ ಜಾಗದಲ್ಲಿ ಕಟ್ಟೆಯಂತೆ ಇರುವಲ್ಲಿ ಮರಣವನ್ನು ಹೊಂದಿದೆಯೋ ಆ ಸ್ಥಳವು ನಿನ್ನ ಪ್ರಾರ್ಥನೆ ಮೇರೆಗೆ ಕಲಿಯುಗದಲ್ಲಿ ಮಾರನಕಟ್ಟ್ಟೆ ಎಂದು ಪ್ರಸಿದ್ದಿ ಹೊಂದಲಿ. ಮತ್ತು ನಿನ್ನ ಸಹಾಯಕ್ಕಾಗಿ ಯಕ್ಷೇಶ್ವರಿಯನ್ನು ಚೌಂಡೇಶ್ವರಿಯನ್ನು ಕೊಡುವವಳಾಗುತ್ತೇನೆ. ಇವರಿಬ್ಬರ ಶಕ್ತಿಯಿಂದ ಕೂಡಿದವನಾಗಿಯೂ (ಸ್ವ) ನಿನ್ನವರಾದ ಗಣಗಳಿಂದ ಕೂಡಿದವನಾಗಿ ಸದರಿಸ್ಥಳದಲ್ಲಿ ವಾಸವನ್ನು ಮಾಡುವವನಾಗು. ಇಂದಿನಿಂದ ನೀನು ನನ್ನ ಸೇವಕನಾಗಿ ಈ ಕೋಲಾಪುರ ಸಮೀಪದಲ್ಲಿಯೇ ವಾಸ ಮಾಡುವವನಾಗಿ ನನ್ನ ಸಂತೋಷಕ್ಕಾಗಿ ಧರ್ಮಕರ್ಮಾದಿಗಳನ್ನು ಸದಾಕಾಲ ಮಾಡುವವನಾಗು. ಯಾರು ಸಜ್ಜನರ ವಸ್ತುಗಳನ್ನು ಅಪಹರಿಸುತ್ತಾರೋ ಅಂಥಾ ದುಷ್ಟರನ್ನು ಪೀಡಿಸಿ, ಸಜ್ಜನರ ಬೇಡಿಕೆಯನ್ನು ನೆರವೇರಿಸುವವನಾಗು. ಸಜ್ಜನರಿಗೆ ಅವರ ವಸ್ತುವನ್ನು ಸಿಕ್ಕುವಂತ ಮಾಡಿ, ಸಿಕ್ಕಿದ ಸೊತ್ತಿನ ಹತ್ತನೇ ಒಂದು ಪಾಲಿನಂತೆ ಸ್ವೀಕಾರ ಮಾಡಿದವನಾಗಿ ಅದರಿಂದ ಅನೇಕ ಸ್ತ್ಕಾರ್ಯಾದಿಗಳನ್ನು ಮಾಡುವವನಾಗು. ಸತ್ಯಾಸತ್ಯದ ಬಗ್ಗೆ ಯಾರು ಪ್ರಮಾಣ ಮಾಡುತ್ತಾರೋ ನನ್ನನ್ನು ನನ್ನ ಭಕ್ತರನ್ನು ಮತ್ತು ನಿನ್ನನ್ನೂ ಸಹ ಯಾರು ನಿಂದನೆಯನ್ನು ಮಾಡುತ್ತಾರೋ, ಅಂಥವರನ್ನು ಶಿಕ್ಷಿಸಿ ಅವರವರ ಅಪರಾದಕ್ಕೆ ತಕ್ಕಂತೆ ದಂಡವನ್ನು ಧನದ ರೋಪವಾಗಿ ವಸೂಲು ಮಾಡಿ ಆ ಹಣವನ್ನು ಸತ್ಕಾರ್ಯಾದಿಗಳಿಗೆ ವಿನಿಯೋಗಿಸುವವನಾಗು. ಯಾರು ಭೂತಾದಿಗಳಿಗೆ ಆವೇಶರಾದರು ಮತ್ತು ಯಾರು ಭಯಾದಿಗಳಿಂದ ಕೂಡಿದವರಾಗಿ ಯಾರು ನನ್ನನ್ನು ಪ್ರಾರ್ಥಿಸುತ್ತಾರೋ ಅವರನ್ನು ನೇನು ಸಂರಕ್ಷಿಸಿ ಶಕ್ತ್ಯಾನುಸಾರ ಅವರಿಂದ ಧನವನ್ನು ಸಂಗ್ರಹಿಸಿ ಧರ್ಮಾದಿ ಸತ್ಕಾರ್ಯವನ್ನು ಮಾಡುವವನಾಗು ಮತ್ತು ವಿವಾಹ ಕಾಲದಲ್ಲಿ ಪುತ್ರೋತ್ಸವ ಕಾಲದಲ್ಲಿ ಚಿನ್ನವನ್ನಾಗಲಿ, ಭೂಮಿಯನ್ನಾಗಲಿ, ಧನವನ್ನಾಗಲಿ ವ್ಯಾಪಾರ ಇತ್ಯಾದಿಗಳಲ್ಲಿ ಅವರಿಗೆ ವಿಘ್ನಾದಿ ತೊಂದರೆಗಳನ್ನು ನಿವಾರಣೆ ಮಾಡಿ ಅವರಿಂದ ಧನಾಧಿಗಳನ್ನು ತೆಗೆದುಕೊಂಡು ದೋಷಹರಿತ ಸತ್ಕಾರ್ಯಾದಿಗಳನ್ನು ನಡೆಸು. ಜನರಿಗೆಲ್ಲಾ ಸದ್ಭುದ್ದಿಯನ್ನುಂಟುಮಾಡಿ ನನ್ನ ಉತ್ಸವಾದಿ ಕಾರ್ಯಕಲಾಪಗಳಲ್ಲಿ ಬಂದು ಸೇವಾ ಕಾರ್ಯಾದಿಗಳನ್ನು ಮಾಡಿಸಿ ಮತ್ತು ನಿನ್ನ ಶಕ್ತಿಗಳಿಂದಲೂ ನರವೇರಿಸಿ ಅನನ್ಯವಾದ ಭಕ್ತಿಯಿಂದ ಸತ್ಕಾರ್ಯವನ್ನು ಮಾಡುವವನಾಗು. ಕಲಿಯುಗದ ಒಂದು ಪಾಲು ಕಳೆಯುವ ನಾಲ್ಕು ಸಾವಿರ ವರ್ಷಗಳ ಕಾಲದಲ್ಲಿ ನನ್ನ ದರ್ಷನಾಕಾಂಕ್ಷೆಯಾಗಿ ತೌಳವ ದೇಶದ ವೈಷ್ಣವ್ಯಾಗ್ರಣಿಯಾದ ಯತೀನ್ವಠನೊಬ್ಬನು ಈ ಕ್ಷೇತ್ರಕ್ಕೆ ಬರುವವನಾಗುತ್ತಾನೆ. ಕಲಿಯ ಪ್ರಾಬಲ್ಯದಿಂದ ಇನ್ನೂರ ಅರವತ್ತಾರು ವರ್ಷ ಕಾಲದಲ್ಲಿ ಸದ್ರಿ ಗ್ರಾಮದಲ್ಲಿ ಕ್ಷೇಮ ಡಾಮರಾ ದ್ಯೋತ ದ್ರವ್ಯಗಳಿಂದ ದರಿದ್ರತ್ವ ಉಂಟಾಗಿ ಕುಗ್ರಾಮವಾಗಿ ಗಣಗಳಿಂದ ಕೂಡಿದ ನೀನು ಸತ್ವಹೀನನಾಗತಕ್ಕಂಥವನಾಗುವಿ. ನೀನು ನಿತ್ಯವೂ ನನ್ನ ಆರಾಧನೆಯಿಂದ ಸಂತುಷ್ಟ ಮನಸ್ಸುಳ್ಳವನಾಗಿ ನನ್ನ ಸನ್ನಿಧಾನದಲ್ಲಿಯೇ ಇದ್ದಂತೆ ಭಾವನೆಯನ್ನು ಮಾಡೀಕೊಳ್ಳುವವನಾಗು ಹೀಗೆ ಕೆಲವು ಕಾಲಕ್ರಮೇಣ ನೀನು ಮೂಲಸ್ಥಳವಾದ ಮಾರಣಕಟ್ಟೆಯೆಂಬಲ್ಲಿ ಪೂರ್ವದಂತೆ ವಾಸ ಮಾಡಿದವನಾಗಿದ್ದು ನಿನ್ನ ಶಕ್ತಿಯಿಂದಲೂ ಮತ್ತು ನನ್ನ ಅನುಗೃಹ ಶಕ್ತಿಯಿಂದಲೂ ಮುಂಚಿನಂತೆಯೇ ಧರ್ಮ ಆಮೆಶ ವಚನಾದಿ ನಿಯಮವನ್ನು ಮಾಡುವವನಾಗು." ಶ್ರೀದೇವಿಯು ಮೂಕದೈತ್ಯನನ್ನು ಕುರಿತು ಈ ಪ್ರಕಾರ ಆಜ್ಞೆ ಮಾಡಿ ನಿಸರ್ಗವಾದ ಮೂಕಾಸುರ ಇತ್ಯಾದಿ ವರ್ಗದ ಮುಂಬಾಗದಲ್ಲಿಯೇ ಶಿವನಿಂದ ಕೂಡಿದವಳಾಗಿ ಕೋಲಾಪುರದ ಸರ್ವಾತ್ಮ ಸ್ವರೂಪವಾದ ದಿವ್ಯ ಲಿಂಗದಲ್ಲಿ ಐಕ್ಯಳಾದಳು. ಆ ಲಿಂಗದಲ್ಲಿ ಐಕ್ಯ ಹೊಂದಿದ ದಿನದಿಂದ ತ್ರಿಗುಣಾತ್ಮಕ ಶಕ್ತಿಯುಳ್ಳ ಮಹಾಲಕ್ಷ್ಮಿಯು ಶಕ್ತಿಯಿಂದಲೂ ಶಿವನಿಂದಲೂ ಕೂಡಿದವಳಾಗಿ ಮೂಕಾಸುರನನ್ನು ಕೊಂದವಳಾದ್ದರಿಂದ "ಮೂಕಾಂಬಿಕೆ" ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದವಳಾಗಿಯೂ ಭಕ್ತಾಧಿಗಳ ಇಷ್ಟಾರ್ಥವನ್ನು ಅನುಗ್ರಹಿಸುವುದಕ್ಕೆ ಕಾಮದೇನುವಿನಂತೆ ಇರತಕ್ಕವಳಾಗಿ ಪ್ರಸಿದ್ಧಿಯನ್ನು ಹೊಂದಿದಳು. ಮೂಕಾಸುರನು ಕೂಡಲೆ ತನ್ನ ಅಸುರೀ ಶರೀರ ಸ್ವಭಾವವನ್ನು ಬಿಟ್ಟವನಾಗಿ ಭೂತಪತಿಯಾದ "ಬ್ರಹ್ಮಲಿಂಗತ್ವ"ವನ್ನು ಪಡೆದು ದೇವಿಯ ಸಮೂಪದಲ್ಲಿಯೇ ರಾರಾಜಿಸುತ್ತ ತನ್ನ ಶಕ್ತಿಯಿಂದಲೂ ಶ್ರೀ ದೇವಿಯ ಅನುಗ್ರಹಶಕ್ತಿಯಿಂದಲೂ ನಾನಾ ಕರ್ಯಾತತ್ವರನಾಗುವವನಾದನು.

ಹೀಗೆ ಮೂಕಾಸುರನು ಅಸುರನಾದರೂ ಸಹ ಶ್ರೀ ದೇವಿಯಿಂದ ವರವನ್ನು ಪಡೆದು "ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿ" ಎಂದು ಹೆಸರು ಪಡೆದುಕೊಂಡನು.

ಸೇವೆಗಳು

ಬ್ರಹ್ಮಲಿಂಗೇಶ್ವರ ಸ್ವಾಮಿಗೆ ರಂಗ ಪೋಜೆಯ ಸೇವೆ, ಸಿಂಗಾರ ಹೋವಿನ ಪೋಜೆ, ಮಂಗಳಾರತಿ, ಹಲವು ಬಗೆಯ ಅಭಿಶೇಕ, ಬಯಲಾಟ- ಯಕ್ಷಗಾನದ ಸೇವೆಯೆಂದರೆ ಬಹಳ ಇಷ್ಟ.

ದೇವರಿಗೆ ಪ್ರಿಯವಾದದ್ದು

ಸೇವಂತಿಗೆ ಹೂ ಹಾಗು ಗಂಟೆಯ ಸದ್ದು ಈ ದೇವರಿಗೆ ಅಚ್ಚುಮೆಚ್ಚು. ನಂಬಿದವರ ಕೈ ಎಂದೂ ಬಿಡದೆ ಕಾಪಾಡಿ ಸಲಹುವನು ತಂದೆ ಬ್ರಹ್ಮಲಿಂಗೇಶ್ವರ ಸ್ವಾಮಿ ಎಂದು ಇವನ ಭಕ್ತರು ಹೇಳುತ್ತಾರೆ.

ಅಖಂಡ ದೀಪ

ಇವನು ಶ್ರೀ ವಿಷ್ಣುವಿಗೆ ಕೊಟ್ಟ ಅಕಂಡ ದೀಪವು ಇಂದಿಗೂ ಉರಿಯುತ್ತಲೇ ಇದೆ ಎಂದು ನಂಬಿದವರು ಹೇಳುತ್ತಾರೆ.

ಶ್ರೀ ಚಕ್ರ

ಶ್ರೀ ಆದಿ ಶಂಕರಾಚಾರ್ಯರು ಶ್ರೀ ಮೂಕಾಂಬಿಕಾ ದೇವಿಯ ಇಷ್ಟ ವಿಗ್ರಹವನ್ನು ಪಂಚಲೋಹಗಳಲ್ಲಿ ಪ್ರತಿಷ್ಟಾಪಿಸಿದ ನಂತರ ಮಾರನಕಟ್ಟೆ ಮಾರ್ಗವಾಗಿ ಬಂದು ಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ಸಹ "ಶ್ರೀ ಚಕ್ರ"ವನ್ನು ಸ್ಥಾಪಿಸಿ ಈ ಕ್ಷೇತ್ರವನ್ನು ಸದಾ ಜಾಗ್ರತಗೊಳಿಸಿದ್ದಾರೆ ಎಂಬ ಪ್ರತೇತಿ ಇದೆ.

ಶ್ರೀ ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಎಂಬ ಈ ಅಧ್ಯಾಯವು ಮಹಾಭೈರವೀ ಪುರಾಣಾಂತರ್ಗತವಾದುದ್ದು.


ಬ್ರ್ಮಹ್ಮ್ಲ ಲಿಂಗೇಶ್ವ ರ ದೇವರ ಭಜನೆಗಳು

ರಚನೆ;ನೀಲಕಂಠ ಮಡಿಖ್ಖ್ ಮಡಿಖೃಹೌಸ್,ಮಾರಣಕಟೆ

ತಂದೆಯು ನೀನೇ,
ಎಂದೂ ಭಜೆಸುವೇ ಶೀ ಬ್ರಹ್ಮಲಿಂಗ
ಮಂಗಲ ಮಹಿಮ ಮಾರಣಕಟೆಯಲಿ ನೆಲೆಸಿದ ಪ್ರಭುವೆ
                         ಶೀ ಬ್ರಹ್ಮ್ಮ್ಮ ಲಿಂಗ
ನೀ ಚೆಂತಾಮಣಿ ಭಕ್ತರ ಬಂದು ಪೊರೆಯೋ ಎನ್ನ
ಶ್ರೀ ಬ್ರಹ್ಮಲಿಂಗ ನಿಮರಲಕಾರ ದೇವನೇ
ನಮನು ರಕಿಸು ಶ್ರೀ ಬ್ರಹ್ಮ ಲಿಂಗ
ಕಲಿಯುಗದಲಿ ನಿನ ಭಜಿಸುವೆ ಕಾಪಾಡು ಪ್ರಭುವೇ ಬ್ರಹ್ಮಲಿಂಗ
ಕರುಣೆಯ ತೋರೋ ಕಾಮಿತ ಫಲದನೇ ಕೌಸ್ತು ಭದರನೇ ಬ್ರಹ್ಮಂಲಿಂಗ
ಬ್ರಹ್ಮ ಕಪಾಲವ ಕೈಯಲಿ ಹಿಡಿದ
ಚತುಮುಖ ಬ್ರಹ್ಮಲಿಂಗ
ದುಷ್ರರ ವಧಿಸುತ ಶಿಶರ ಪಾಲಿಸು ಎಂದು ಬೇಡುವೆ ಬ್ರಹ್ಮಲಿಂಗ ಜೈ
ಬ್ರಹ್ಮಲಿಂಗ ಜೈ ಬ್ರಹ್ಮಲಿಂಗ ಜೈ ಬ್ರಹ್ಮಲಿಂಗ ಜೈ
ಬ್ರಹ್ಮಲಿಂಗ ಜೈ ಬ್ರಹ್ಮಲಿಂಗ ಜೈ ಬ್ರಹ್ಮಲಿಂಗ ಜೈ
ಬ್ರಹ್ಮಲಿಂಗ ಜೈ ಬ್ರಹ್ಮಲಿಂಗ ಜೈ ಬ್ರಹ್ಮಲಿಂಗ ಜೈ

ತಂದೆ ಓ ತಂದೆ ಶ್ರೀ ಬ್ರಹ್ಮಲಿಂಗ
ಬಾ ಬಾ ಓಡಿ ಹೇ ಪ್ರಭುಲಿಂಗ
ಓ ನನ ತಂದೆ ಶ್ರೀ ಬ್ರಹ್ಮಲಿಂಗ

ಕಲು ಮುಳು ಬೆಟಾ ಹತಿ ನಿನಲಿ ಬಂದಿರುವೇ
ಪಾವನ ಚರಿತ ಕರುಣೆಯ ತೋರೋ ಶ್ರೀ ಬ್ರಹ್ಮಲಿಂಗನೇ
ನಿನಯ ನಾಮವ ಜಪಿಸುತ ಬಂದೆ ಶ್ರೀ ಬ್ರಹ್ಮಲಿಂಗನೇ
ನಿನ ನೋಡಿ ಆನಂದ ಪಟೇ ಕರುಣಾಕರನೇ
ಬ್ರಹ್ಮಲಿಂಗ ಜೈ ಬ್ರಹ್ಮಲಿಂಗ ಜೈ ಬ್ರಹ್ಮಲಿಂಗ ಜೈ
ಪಾಹಿ ಪಾಹಿ ಪ್ರಭುವೇ ದೇವ ಪಾಹಿ ಪಾಹಿ ಪ್ರಭುವೇ
ಪಾಹಿ ಪಾಹಿ ಪಾಹಿ ಪಾಹಿ ಪಾಹಿ ಪಾಹಿ

ಕಮಲ ನಾಭನೆ ಕಾಮೇತಾ ಫಲಧನೇ ಕಾಮದೇನುವೇ
ಬ್ರಹ್ಮಲಿಂಗ ಸ್ವಾಮಿ ದೇವ ಎಂದು ಹಾಡುವೇ
ಭಕರ ಬಂದು ಭವ ರೋಗ ಕಳೆಯೋ ಸ್ವಾಮಿ ಈಶನೇ
ನಿನ ನಂಬಿ ಬಂದೆ ನಾನು ಬ್ರಹ್ಮಲಿಂಗನೇ
ಪಾಹಿ ಪಾಹಿ ಪ್ರಭುವೇ ದೇವ ಪಾಹಿ ಪಾಹಿ ಪ್ರಭುವೇ
ಪಾಹಿ ಪಾಹಿ ಪಾಹಿ ಪಾಹಿ ಪಾಹಿ ಪಾಹಿ

ಸೂಯದಯದ ಸುಂದರ ವೇಳೆ
ಕೆಂಪು ಮೋಜಿನ ಕಿರಣದ ಮಾಲೆ
ಸ್ಸ್ವಾಮಿ ಸವೆಶ ಕರುಣಿಸು ಬ್ರಹ್ಮಲಿಂಗೇಶ
ಪೊರೆಯೋ ಎನ ಶ್ರೀ ಜಗದೀಶ ಕರುಣಿಸು ಎನಗೆ ಪ್ರಭು ಬ್ರಹ್ಮಲಿಂಗೇಶ

ಆನಂದ ರೂಪ ಅನುಗ್ರಹಿಸು ದೇವ
ನಿತಾ ಸ್ವರೂಪ ನಿಗುಣ ದಾಮ
ಸತಾಸ್ವರೂಪನೇ ಸೌಂದಯ ಪರಿತನೆ
ಸುಮಧುರ ಸಂಗೀತ ಸುಂದರ ಫ್ರೇಯನೇ
ಹೆರಣಾ ಗಭನೆ ಹೇಮ ಬೀಜನೆ,
ಸಾಮಗಾನನೆ,ಸಾಂಬಾ ರೂಪನೆ,
ಮಂಗಳ ಮಹಿಮನೆ,ಮಂಗಳಾ ಪಿಯನೇ,
ಈ ದರೆಯಲಿ ನಿನ್ನನೂ ನೋಡಿದೆ ದೇವನೆ

ಕಂಡೆನಾ ಬ್ರಹ್ಮಲಿಂಗನ ಬ್ರಹ್ಮಲಿಂಗನ ದಂಡಕಾರಣೈದಲಿ ನಿಂತ ಇವರ
                            ಕಂಡೆನಾ ಬ್ರಮಹ್ಮಲಿಂಗನ

ಈಶ ಮಹೇಶ ಶಿವಶಂಕರ ಲೋಕ ವಂದ್ಯತಾ ಭಾಸ್ಕರನ
ಬಾನಲಿ ತುಂಬಿಹ ಹುಣಿಮೆ ಚಂದ್ರನ ಶಿರದಲಿ ಇವನು ಧರಿಸಿಕೂಂಡಿಹನ
                           ಕಂಡೆನಾ ಬ್ರಹ್ಮಲಿಂಗನ

ಆಧಾರ

ಈ ಮೇಲ್ಕಂಡ ಮಾಹಿತಿಯನ್ನು "ಎಸ್. ಸುಬ್ರಹ್ಮಣ್ಯ ಐಯ್ಯರ್"ರವರ "ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ- ಶ್ರೀ ಬ್ರಹ್ಮಲಿಂಗೇಶ್ವರ ದೇವರು" ಎನ್ನುವ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶ್ರೀ ಕ್ಷೇತ್ರದ ವೆಬ್ಸೈಟ್ : http://maranakattetemple.in/ Archived 2022-12-24 ವೇಬ್ಯಾಕ್ ಮೆಷಿನ್ ನಲ್ಲಿ. ಹೆಚ್ಚಿನ ಮಾಹಿತಿಗಾಗಿ ಶ್ರೀ ಕ್ಷೇತ್ರದ ಅಧಿಕ್ರತ ಫೇಸ್ಬುಕ್ ಖಾತೆ : https://www.facebook.com/Maranakatte.ShriBrahmalingeshwaraTemple

ಉಲ್ಲೆಖನ

Tags:

ಮಾರನಕಟ್ಟೆ - ಬ್ರಹ್ಮಲಿಂಗೇಶ್ವರ ದೇವಾಲಯವಿರುವ ಸ್ಥಳಮಾರನಕಟ್ಟೆ - ಬ್ರಹ್ಮಲಿಂಗೇಶ್ವರ ದೇವಾಲಯದ ಇತಿಹಾಸಮಾರನಕಟ್ಟೆ - ಬ್ರಹ್ಮಲಿಂಗೇಶ್ವರ ಸೇವೆಗಳುಮಾರನಕಟ್ಟೆ - ಬ್ರಹ್ಮಲಿಂಗೇಶ್ವರ ದೇವರಿಗೆ ಪ್ರಿಯವಾದದ್ದುಮಾರನಕಟ್ಟೆ - ಬ್ರಹ್ಮಲಿಂಗೇಶ್ವರ ಅಖಂಡ ದೀಪಮಾರನಕಟ್ಟೆ - ಬ್ರಹ್ಮಲಿಂಗೇಶ್ವರ ಶ್ರೀ ಚಕ್ರಮಾರನಕಟ್ಟೆ - ಬ್ರಹ್ಮಲಿಂಗೇಶ್ವರ ಬ್ರ್ಮಹ್ಮ್ಲ ಲಿಂಗೇಶ್ವ ರ ದೇವರ ಭಜನೆಗಳುಮಾರನಕಟ್ಟೆ - ಬ್ರಹ್ಮಲಿಂಗೇಶ್ವರ ಆಧಾರಮಾರನಕಟ್ಟೆ - ಬ್ರಹ್ಮಲಿಂಗೇಶ್ವರ ಉಲ್ಲೆಖನಮಾರನಕಟ್ಟೆ - ಬ್ರಹ್ಮಲಿಂಗೇಶ್ವರ

🔥 Trending searches on Wiki ಕನ್ನಡ:

ವಚನಕಾರರ ಅಂಕಿತ ನಾಮಗಳುಭಾರತೀಯ ಮೂಲಭೂತ ಹಕ್ಕುಗಳುಕರ್ನಾಟಕದ ನದಿಗಳುಭಾರತೀಯ ಭಾಷೆಗಳುಯೋನಿಭಾರತದ ಮುಖ್ಯಮಂತ್ರಿಗಳುಸೂರ್ಯ (ದೇವ)ಹವಾಮಾನಲೆಕ್ಕ ಬರಹ (ಬುಕ್ ಕೀಪಿಂಗ್)ಕಾದಂಬರಿಗೂಗಲ್ಸ್ಕೌಟ್ ಚಳುವಳಿಸಿಂಧನೂರುರೋಮನ್ ಸಾಮ್ರಾಜ್ಯನಾಗಸ್ವರಮಾನಸಿಕ ಆರೋಗ್ಯಕನ್ನಡ ಸಾಹಿತ್ಯ ಪರಿಷತ್ತುಗಂಗ (ರಾಜಮನೆತನ)ರಾಮಾಯಣನೀನಾದೆ ನಾ (ಕನ್ನಡ ಧಾರಾವಾಹಿ)ಕೈವಾರ ತಾತಯ್ಯ ಯೋಗಿನಾರೇಯಣರುವಾಯು ಮಾಲಿನ್ಯರಾಧೆಹಾವಿನ ಹೆಡೆಲಗೋರಿನೀರಿನ ಸಂರಕ್ಷಣೆರಾಮಮೈಸೂರು ಸಂಸ್ಥಾನಕನ್ನಡ ಸಾಹಿತ್ಯ ಪ್ರಕಾರಗಳುಜಾತಿಗೋತ್ರ ಮತ್ತು ಪ್ರವರಪ್ರಾಥಮಿಕ ಶಿಕ್ಷಣರಾಹುಲ್ ಗಾಂಧಿಮಂಜುಳಕಲ್ಯಾಣಿಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಬೀಚಿದಶಾವತಾರಮೊದಲನೇ ಅಮೋಘವರ್ಷವಿಷ್ಣುಪಂಚ ವಾರ್ಷಿಕ ಯೋಜನೆಗಳುರಾಜಕೀಯ ಪಕ್ಷಕಿತ್ತೂರು ಚೆನ್ನಮ್ಮಕಾವ್ಯಮೀಮಾಂಸೆಅಸಹಕಾರ ಚಳುವಳಿತೆಲಂಗಾಣಎತ್ತಿನಹೊಳೆಯ ತಿರುವು ಯೋಜನೆಹೈದರಾಬಾದ್‌, ತೆಲಂಗಾಣಧರ್ಮಸ್ಥಳಜಲ ಮಾಲಿನ್ಯದಿವ್ಯಾಂಕಾ ತ್ರಿಪಾಠಿವ್ಯಂಜನಮಾರ್ಕ್ಸ್‌ವಾದಶಾತವಾಹನರುವಿಧಾನಸೌಧರವಿಚಂದ್ರನ್ಕರಗ (ಹಬ್ಬ)ವಿರಾಟ್ ಕೊಹ್ಲಿಸಂಗೊಳ್ಳಿ ರಾಯಣ್ಣಪಾಂಡವರುಚಂದ್ರಯಾನ-೩ಪ್ರಜಾವಾಣಿಕಾಮಸೂತ್ರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭಾರತದ ಸ್ವಾತಂತ್ರ್ಯ ಚಳುವಳಿರೈತ ಚಳುವಳಿಹಾಗಲಕಾಯಿದಾವಣಗೆರೆಕರ್ಣಯೋಗ ಮತ್ತು ಅಧ್ಯಾತ್ಮಕವಿರಾಜಮಾರ್ಗವ್ಯವಸಾಯಬ್ಯಾಂಕ್ಚೋಮನ ದುಡಿಇಂಡೋನೇಷ್ಯಾಹೆಚ್.ಡಿ.ಕುಮಾರಸ್ವಾಮಿ🡆 More