ಪಾಟೀಲ ಪುಟ್ಟಪ್ಪ

ಪಾಟೀಲ ಪುಟ್ಟಪ್ಪ (೧೯೨೧ ಜನವರಿ ೧೪ - ಮಾರ್ಚ್ ೧೬, ೨೦೨೦) ಭಾರತೀಯ ಬರಹಗಾರ, ಅನುಭವಿ ಪತ್ರಕರ್ತ ಮತ್ತು ಹುಬ್ಬಳ್ಳಿ ಮೂಲದ ಕಾರ್ಯಕರ್ತರಾಗಿದ್ದರು.

ಕನ್ನಡ ದಿನಪತ್ರಿಕೆ ವಿಶ್ವವಾಣಿ ಸ್ಥಾಪಕ-ಸಂಪಾದಕರಾಗಿದ್ದರು.ಪುಟ್ಟಪ್ಪ, 1940 ಮತ್ತು 1950 ರ ದಶಕದ ಅಂತ್ಯದಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದ ಪ್ರದೇಶಗಳನ್ನು ಏಕೀಕರಿಸುವಂತೆ ಒತ್ತಾಯಿಸಿ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದರು. ಅವರು ಧಾರವಾಡ ಮೂಲದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದರು. ಅವರು ರಾಜ್ಯಸಭೆಯಲ್ಲಿ ಎರಡು ಅವಧಿಗೆ ರಾಜ್ಯವನ್ನು ಪ್ರತಿನಿಧಿಸಿದರು (1962 ರಿಂದ 1974). ಅವರು ಕನ್ನಡ ಭಾಷಾ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು, ನಂತರ ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂದು ಮರುನಾಮಕರಣ ಮಾಡಲಾಯಿತು.2003 ರಲ್ಲಿ ಬೆಳಗಾವಿಯಲ್ಲಿ ನಡೆದ 70 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.1949 ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಪಾಟೀಲ್ ಪುಟ್ಟಪ್ಪ
ಜನನ(೧೯೨೧-೦೧-೧೪)೧೪ ಜನವರಿ ೧೯೨೧
ಹಲಗೆರಿ, ಭಾರತ
ಮರಣ16 March 2020(2020-03-16) (aged 101)
ಕಿಮ್ಸ್ ಹುಬ್ಬಳ್ಳಿ
ವೃತ್ತಿಬರಹಗಾರ ಮತ್ತು ಪತ್ರಕರ್ತ
ವಿದ್ಯಾಭ್ಯಾಸಲಾಸ್ ಏಂಜಲೀಸ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಯುಸಿಎಲ್ಎ ಸ್ಕೂಲ್ ಆಫ್ ಜರ್ನಲಿಸಂ
ಸಾಹಿತ್ಯ ಚಳುವಳಿಕನ್ನಡ ಭಾಷಾ ಚಳುವಳಿ
ಪ್ರಮುಖ ಪ್ರಶಸ್ತಿ(ಗಳು)ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ

ಬಾಲ್ಯ ಮತ್ತು ಶಿಕ್ಷಣ

ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಜನಿಸಿದರು. ಓದಿದ್ದು ಕುರುಬಗೊಂಡ,ಬ್ಯಾಡಗಿ, ಹಾವೇರಿ, ಧಾರವಾಡ‍ದಲ್ಲಿ.

  • ಕರ್ನಾಟಕ ಕಾಲೇಜಿನಲ್ಲಿ ಪದವಿ. ಬೆಳಗಾವಿಯಲ್ಲಿ ಕಾನೂನು ಅಧ್ಯಯನ.
  • ಮುಂಬಯಿಯಲ್ಲಿ, ಹುಬ್ಬಳ್ಳಿಯಲ್ಲಿ ಪತ್ರಿಕೆಗಳಲ್ಲಿ ಕೆಲಸ. ೧೯೪೫ರಲ್ಲಿ ವಕೀಲಿ ವೃತ್ತಿಗಾಗಿ ಮುಂಬಯಿಗೆ ತೆರಳಿದ್ದರು.
  • ೧೯೪೯ರಲ್ಲಿ ಕೆಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ‍ದಲ್ಲಿ ಸ್ನಾತಕೋತ್ತರ ಪದವಿ.
  • ಅಮೆರಿಕೆಯಿಂದ ಮರಳಿದ ನಂತರ ನವಯುಗ ಮಾಸಪತ್ರಿಕೆಯ ಸಂಪಾದಕತ್ವ.
  • ೧೯೫೪ರಲ್ಲಿ ಪ್ರಪಂಚ ಪತ್ರಿಕೆಯ ಸ್ಥಾಪನೆ.
  • ೧೯೬೨‍ರಿಂದ ೧೯೭೪‍ರವರೆಗೆ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು.
  • ಕನ್ನಡ ಕಾವಲು ಸಮಿತಿಯ ಅಧ್ಯಕ

ಸಂಪಾದಕರಾಗಿ

೧೯೪೭ರಲ್ಲಿ ವಿಶಾಲ ಕರ್ನಾಟಕ, ೧೯೫೨ರಲ್ಲಿ ನವಯುಗ, ೧೯೫೪ರಲ್ಲಿ ಪ್ರಪಂಚ ಸಾಪ್ತಾಹಿಕ, ೧೯೫೬ರಲ್ಲಿ ಸಂಗಮ ಮಾಸಿಕ, ೧೯೫೯ರಲ್ಲಿ ವಿಶ್ವವಾಣಿ ದೈನಿಕ, ೧೯೬೧ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, ೧೯೬೪ರಲ್ಲಿ ಸ್ತ್ರೀ ಮಾಸಿಕ ಮುಂತಾದ ಹಲವಾರು ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದರು.

ಪುಟ್ಟಪ್ಪನವರ ಕೃತಿಗಳು

  • ನಮ್ಮ ದೇಶ ನಮ್ಮ ಜನ
  • ನನ್ನದು ಈ ಕನ್ನಡ ನಾಡು
  • ಕರ್ನಾಟಕದ ಕಥೆ
  • ಪಾಪು ಪ್ರಪಂಚ
  • ಶಿಲಾಬಾಲಿಕೆ ನುಡಿದಳು ಕಥಾಸಂಕಲನ
  • ಗವಾಕ್ಷ ತೆರೆಯಿತು
  • ಸಾವಿನ ಮೇಜವಾನಿ
  • ಸರ್ ಸಿದ್ದಪ್ಪ ಕಂಬಳಿ, ಹೊಸಮನಿ ಸಿದ್ದಪ್ಪನವರು- ಜೀವನ ಚರಿತ್ರೆ ;
  • ನನ್ನೂರು ಈ ನಾಡು,
  • ಹೊಸದನ್ನ ಕಟ್ಟೋಣ,
  • ಬದುಕುವ ಮಾತು-ಪ್ರಬಂಧ ಸಂಕಲನಗಳು

ಪ್ರಶಸ್ತಿಗಳು

  • ನಾಡೋಜ ಪ್ರಶಸ್ತಿ - ಕನ್ನಡ ವಿಶ್ವವಿದ್ಯಾಲಯ
  • ನೃಪತುಂಗ ಪ್ರಶಸ್ತಿ - 2008, ಸಾಹಿತ್ಯ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಪರಿಷತ್
  • ವುಡೆ ಪ್ರಶಸ್ತಿ - 2010

ನಿಧನ

ಪಾಟೀಲ ಪುಟ್ಟಪ್ಪನವರು ೧೬ಮಾರ್ಚ್ ೨೦೨೦ರ ಸೋಮವಾರದಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೧೦೧ ವರ್ಷ ವಯಸ್ಸಾಗಿತ್ತು.,

ಹೊಸಸಂಪರ್ಕಕೊಂಡಿಗಳು

ಉಲ್ಲೇಖಗಳು

Tags:

ಪಾಟೀಲ ಪುಟ್ಟಪ್ಪ ಬಾಲ್ಯ ಮತ್ತು ಶಿಕ್ಷಣಪಾಟೀಲ ಪುಟ್ಟಪ್ಪ ಸಂಪಾದಕರಾಗಿಪಾಟೀಲ ಪುಟ್ಟಪ್ಪ ಪುಟ್ಟಪ್ಪನವರ ಕೃತಿಗಳುಪಾಟೀಲ ಪುಟ್ಟಪ್ಪ ಪ್ರಶಸ್ತಿಗಳುಪಾಟೀಲ ಪುಟ್ಟಪ್ಪ ನಿಧನಪಾಟೀಲ ಪುಟ್ಟಪ್ಪ ಹೊಸಸಂಪರ್ಕಕೊಂಡಿಗಳುಪಾಟೀಲ ಪುಟ್ಟಪ್ಪ ಉಲ್ಲೇಖಗಳುಪಾಟೀಲ ಪುಟ್ಟಪ್ಪಜನವರಿ ೧೪೧೯೨೧

🔥 Trending searches on Wiki ಕನ್ನಡ:

ಕರ್ನಾಟಕದ ಜಾನಪದ ಕಲೆಗಳುಬಿರಿಯಾನಿವೇದವ್ಯಾಸಋಗ್ವೇದವಿಷ್ಣುಸಂಸ್ಕೃತ ಸಂಧಿಕರ್ಣಭಾರತದಲ್ಲಿನ ಚುನಾವಣೆಗಳುಬೆಳಗಾವಿಜನಪದ ಕಲೆಗಳುಮಡಿವಾಳ ಮಾಚಿದೇವಮಾಧ್ಯಮಪ್ರಜಾಪ್ರಭುತ್ವದಾಳಿಂಬೆಕೃಷಿಶಕ್ತಿದೇವನೂರು ಮಹಾದೇವಕಾನೂನುಎಚ್.ಎಸ್.ವೆಂಕಟೇಶಮೂರ್ತಿಭಾರತದ ವಿಜ್ಞಾನಿಗಳುಲಕ್ಷ್ಮೀಶತೀರ್ಥಹಳ್ಳಿರಾಮಕೇದಾರನಾಥತುಂಬೆಗಿಡವಿವಾಹವೃತ್ತಪತ್ರಿಕೆಪು. ತಿ. ನರಸಿಂಹಾಚಾರ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಅಶ್ವಗಂಧಾಅಂಬಿಗರ ಚೌಡಯ್ಯಜೋಡು ನುಡಿಗಟ್ಟುಇಂದಿರಾ ಗಾಂಧಿವಚನ ಸಾಹಿತ್ಯಚನ್ನವೀರ ಕಣವಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪನಿರ್ವಹಣೆ ಪರಿಚಯಬಂಗಾರದ ಮನುಷ್ಯ (ಚಲನಚಿತ್ರ)ಕನ್ನಡ ವ್ಯಾಕರಣವಾಸ್ತುಶಾಸ್ತ್ರಕನ್ನಡ ರಂಗಭೂಮಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಗಾಳಿಪಟ (ಚಲನಚಿತ್ರ)ಮಂತ್ರಾಲಯಅಂಕಗಣಿತಹಳೇಬೀಡುಶೂನ್ಯ ಛಾಯಾ ದಿನಭಾರತೀಯ ನದಿಗಳ ಪಟ್ಟಿಉತ್ತರ ಕರ್ನಾಟಕಸಾಯಿ ಪಲ್ಲವಿಹನುಮಂತಕೆ. ಸುಧಾಕರ್ (ರಾಜಕಾರಣಿ)ಹಲಸುಆದೇಶ ಸಂಧಿಶ್ರೀ ರಾಘವೇಂದ್ರ ಸ್ವಾಮಿಗಳುಭಾರತ ಬಿಟ್ಟು ತೊಲಗಿ ಚಳುವಳಿಇತಿಹಾಸಬಿಳಿ ಎಕ್ಕಕರ್ನಾಟಕದ ಜಿಲ್ಲೆಗಳುಜೂಜುಪ್ರಿಯಾಂಕ ಗಾಂಧಿಕಾರ್ಮಿಕ ಕಾನೂನುಗಳು2ನೇ ದೇವ ರಾಯದೇವರ/ಜೇಡರ ದಾಸಿಮಯ್ಯಅಮಿತ್ ಶಾಜಾಗತಿಕ ತಾಪಮಾನಚಂದ್ರಶೇಖರ ವೆಂಕಟರಾಮನ್ಪ್ರತಿಷ್ಠಾನ ಸರಣಿ ಕಾದಂಬರಿಗಳುಸ್ವಾಮಿ ವಿವೇಕಾನಂದನವಿಲುಗರುಡ ಪುರಾಣಭೀಮಾ ತೀರದಲ್ಲಿ (ಚಲನಚಿತ್ರ)ನಾಮಪದವರ್ಗೀಯ ವ್ಯಂಜನಉತ್ತರ ಪ್ರದೇಶಕಾಂತಾರ (ಚಲನಚಿತ್ರ)ದಾಸ ಸಾಹಿತ್ಯಯಕ್ಷಗಾನವಾಣಿವಿಲಾಸಸಾಗರ ಜಲಾಶಯ🡆 More