ಧಾರವಾಡ: ಭಾರತದ ಕರ್ನಾಟಕ ರಾಜ್ಯದ ನಗರ

ಧಾರವಾಡ ಕರ್ನಾಟಕ ರಾಜ್ಯದ ಒಂದು ನಗರ; ಧಾರವಾಡ ನಗರ ಧಾರವಾಡ ಜಿಲ್ಲೆಯ ಕೇಂದ್ರಸ್ಥಳ.

ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಧಾರವಾಡ ನಗರ, ಹುಬ್ಬಳ್ಳಿ ವಾಣಿಜ್ಯ ನಗರವಾದರೆ ಧಾರವಾಡ ಶೈಕ್ಷಣಿಕ ಜಿಲ್ಲೆ, ಧಾರವಾಡ ಅತಿ ತಂಪು ವಾತಾವರಣ ಹೊಂದಿರುವ ನಗರ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಆಕಾಶವಾಣಿ, ಕಾನೂನು ವಿಶ್ವವಿದ್ಯಾಲಯ, ಹೈಕೋರ್ಟ್, ನೈರುತ್ಯ ರೈಲ್ವೆ ಘಟಕ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಐ ಐ ಟಿ ,ಮುಂತಾದವುಗಳ ಆಗರ ಧಾರವಾಡ, ಧಾರವಾಡ’ದ ಮೂಲ ರೂಪ ‘ದಾರವಾಡ’. ಬಹಳಷ್ಟು ಚರ್ಚಿತವಾಗಿರುವ ಧಾರವಾಡ ಗ್ರಾಮದ ನಿಪ್ಪತ್ತಿಯು ಸಹ ವ್ಯಕ್ತಿನಾಮದ್ದಾಗಿರುವ ಸಾಧ್ಯತೆ ಹೆಚ್ಚಿದೆ. ಧಾರವಾಡ ಜಿಲ್ಲಾ ಗೆಝೆಟಿಯರ್‍ದಲ್ಲಿ ವಿಜಯನಗರದ ರಾಮರಾಜನ ಕಾಲದ ಧಾರರಾವ್ ಎಂಬುವನು ೧೪೦೩ರಲ್ಲಿ ಕೋಟೆ ಕಟ್ಟಿಸಿದ್ದರ ನಿಮಿತ್ತ ಈ ಊರಿಗೆ ಧಾರವಾಡ ಎಂಬ ಹೆಸರು ಬಂದಿತೆಂದು ತಿಳಿಸುತ್ತದೆ. ಆದರೆ ಕ್ರಿ.ಶ.೧೧೧೭ ಧಾರವಾಡ ಶಾಸನದಲ್ಲಿಯೇ ‘ದಾರವಾಡ’ ಎಂಬ ಹೆಸರು ಬಳಕೆಗೊಂಡಿದೆ

ಧಾರವಾಡ
ಧಾರವಾರ
ಪೇಢ ನಗರಿ, ಹುಬ್ಬಳ್ಳಿ-ಧಾರವಾಡ ನಗರ, ಧಾರನಗರಿ, ವಿದ್ಯಾ ಕಾಶಿ, ಸಾಂಸ್ಕೃತಿಕ ನಗರಿ, Karnataka India mandya dharwad......Schoolಕರ್ನಾಟಕದ ಶಿಕ್ಷಣ ಕೇಂದ್ರ, ಕರ್ನಾಟಕದ ಆಕ್ಸ್‌ಫರ್ಡ್
ಧಾರವಾಡ: ಇತಿವೃತ್ತ, ಚರಿತ್ರೆ, ತಾಲೂಕುಗಳು
ಧಾರವಾಡ: ಇತಿವೃತ್ತ, ಚರಿತ್ರೆ, ತಾಲೂಕುಗಳು
ಧಾರವಾಡ: ಇತಿವೃತ್ತ, ಚರಿತ್ರೆ, ತಾಲೂಕುಗಳು
ಧಾರವಾಡ: ಇತಿವೃತ್ತ, ಚರಿತ್ರೆ, ತಾಲೂಕುಗಳು
ಧಾರವಾಡ: ಇತಿವೃತ್ತ, ಚರಿತ್ರೆ, ತಾಲೂಕುಗಳು
ಧಾರವಾಡ: ಇತಿವೃತ್ತ, ಚರಿತ್ರೆ, ತಾಲೂಕುಗಳು
ಮೇಲಿನಿಂದ ಪ್ರದಕ್ಷಿಣಾಕಾರವಾಗಿ : ಕರ್ನಾಟಕ ವಿಶ್ವವಿದ್ಯಾಲಯದ ಗಡಿಯಾರ ಗೋಪುರ, ಧಾರವಾಡ, SDM ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಮಂಜುಶ್ರೀ ಬ್ಲಾಕ್), SDM ಆಸ್ಪತ್ರೆ ಒಳರೋಗಿಗಳ ಬ್ಲಾಕ್, ಕರ್ನಾಟಕ ಕಾಲೇಜು, ಕರ್ನಾಟಕ ವಿಜ್ಞಾನ ಕೃಷಿ ವಿಶ್ವವಿದ್ಯಾಲಯ, IIIT ಧಾರವಾಡ
ಧಾರವಾಡ is located in Karnataka
ಧಾರವಾಡ
ಧಾರವಾಡ
ಧಾರವಾಡ is located in India
ಧಾರವಾಡ
ಧಾರವಾಡ
Coordinates: 15°27′30″N 75°00′30″E / 15.458333°N 75.008333°E / 15.458333; 75.008333
ದೇಶಧಾರವಾಡ: ಇತಿವೃತ್ತ, ಚರಿತ್ರೆ, ತಾಲೂಕುಗಳು ಭಾರತ
ರಾಜ್ಯಕರ್ನಾಟಕ
ಜಿಲ್ಲೆಧಾರವಾಡ ಜಿಲ್ಲೆ
ತಾಲ್ಲೂಕುಧಾರವಾಡ
Government
 • Typeಮಹಾನಗರ ಪಾಲಿಕೆ
 • Bodyಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
ಭಾಷೆ
 • ಅಧಿಕೃತಕನ್ನಡ
Time zoneUTC+೫:೩೦ (IST)
ಪಿನ್ ಕೋಡ್
580 xxx
ದೂರವಾಣಿ ಕೋಡ್೦೮೨೪
Vehicle registrationಕೆಎ 25, ಕೆಎ 63
Websitewww.dharwad.nic.in

ಇತಿವೃತ್ತ

  • ಇದಕ್ಕೆ ಸಹಾಯಕವಾಗಿ ಕ್ರಿ.ಶ.೧೧೨೫ ನರೇಂದ್ರ ಮತ್ತು ೧೧೪೮ ಧಾರವಾಡ ಶಾಸನಗಳಲ್ಲೂ ಕ್ರಮವಾಗಿ ದಾರವಾಡ ಮತ್ತು ಧಾರವಾಡ ಬಳಕೆಗೊಂಡಿವೆ. ಅಲ್ಲದೆ ೧೪೦೩ರಲ್ಲಿ ರಾಮರಾಯ ವಿಜಯನಗರವನ್ನು ಆಳುತ್ತಿರಲಿಲ್ಲ. ಇವೆಲ್ಲ ಕಾರಣಗಳಿಂದ ಈ ವಾದವನ್ನು ಒಪ್ಪಲಿಕ್ಕಾಗದು.

ಡಾ. ಪಿ.ಬಿ. ದೇಸಾಯಿ ಧಾರವಾಡ ಪದವು ಸಂಸ್ಕೃತದ ‘ದ್ವಾರ’ದಿಂದ ‘ದಾರ’ ಮತ್ತು ‘ವಾಟ’ ದಿಂದ ‘ವಾಡ’ ಬಂದಿದೆ ಎನ್ನುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ವಾದವನ್ನು ಒಪ್ಪುವುದಿಲ್ಲ. ಸಾಮಾನ್ಯವಾಗಿ ಊರ ಹೆಸರನ್ನು ಇಷ್ಟರಮಟ್ಟಿಗೆ ಸಂಸ್ಕೃತ ಭೂಯಿಷ್ಠವಾಗಿ ಇಡುವುದು ಅಸಂಭವ.

  • ಅಲ್ಲದೆ ಅಲ್ಲಿ ಸುಂಕವನ್ನು ಆಕರಿಸಲಾಗುತ್ತಿತ್ತು ಎಂಬ ಕಾರಣಕ್ಕೆ ಇದೊಂದೇ ಪ್ರದೇಶದ ಮೂಲಕ ಎರಡು ವಿಶಾಲ ಪ್ರದೇಶಗಳ ಸುಂಕವನ್ನು ಆಕರಿಸಲಾಗುತ್ತಿತ್ತೆಂದಲ್ಲ. ಸುಂಕ ಸಂಗ್ರಹ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿತ್ತು ಎಂಬ ಡಾ. ಕಲಬುರ್ಗಿ ಅವರ ವಿಚಾರಗಳನ್ನು ಒಪ್ಪುವಂತಹದ್ದೆ.
  • ಡಾ. ಎಂ.ಎಂ. ಕಲಬುರ್ಗಿ ಅವರು ಧಾರವಾಡ ಪದದ ಪೂರ್ವಪದದ ಅಂತ್ಯ ‘ರ’ ಕಾರವುಳ್ಳ ಈ ಪದವು ಜನಾಂಗಿ ಸೂಚಿಯಾಗಿದೆ ಎಂದು ತಿಳಿಸುತ್ತಾ ದಾಯರ, ದಾರರ, ದಾವರ ಇವುಗಳಲ್ಲಿ ಒಂದರ ಸವೆದ ರೂಪ ‘ದಾರ’ ಎಂದು ತಿಳಿಸುತ್ತಾರೆ. ಹೀಗಾಗಿ ದಾಯರು, ದಾರರು, ದಾವರು ಇವುಗಳಲ್ಲಿ ಒಂದು ಜನಾಂಗದ ನೆಲೆ ಆಗಿರಬಹುದೆನ್ನುತ್ತಾರೆ. ಇನ್ನು ಉತ್ತರ ಪದ ‘ವಾಡ’ ದ್ರಾವಿಡದ ‘ಬಾಡ’ದಿಂದ ಬಂದಿರುವ ಸಾಧ್ಯತೆಯನ್ನು ತಿಳಿಸುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವ ದಾಯರ, ದಾರರ, ದಾವರ ಎನ್ನುವ ಜನಾಂಗಗಳಿದ್ದವು ಎನ್ನುವುದರ ಬಗ್ಗೆ ನಮಗೆ ಯಾವುದೇ ರೀತಿಯ ಕುರುಹುಗಳಿಲ್ಲ. ಹೀಗಾಗಿ ಧಾರವಾಡದ ಮೂಲ ತಿಳಿಸುವ ಅವರ ಜನಾಂಗ ನಿಷ್ಠೆ ಅಭಿಪ್ರಾಯ ಸರಿಯೆನಿಸುವುದಿಲ್ಲ. ಆದ್ದರಿಂದ ಧಾರವಾಡ ಗ್ರಾಮನಾಮದ ನಿಷ್ಪತ್ತಿಯನ್ನು ಜನಾಂಗವಾಚಿಗಿಂತ ವ್ಯಕ್ತಿವಾಚಿಯಲ್ಲಿ ಹುಡಕಲು ಆಧಾರ ಒಂದು ದೊರೆಯುತ್ತದೆ.
  • ‘ಸಾಮಾನ್ಯವಾಗಿ ಇಂದಿಗೂ ಜನಬಳಕೆಯಲ್ಲಿ ಮೇಲೆ, ಮ್ಯಾಲೆ ಎಂಬ ಪದಬಳಕೆಯುಂಟು. ಮೇಲೆ ಗ್ರಾಂಥಿಕವಾದರೆ, ಮ್ಯಾಲೆ ಮೌಖಿಕವಾದದು. ಅದರಂತೆ ದೇರಣ್ಣ> ದ್ಯಾವಣ್ಣ, ದೇಮಪ್ಪ> ದ್ಯಾಮಪ್ಪ ನಾಮಗಳ ಬಳಕೆಯುಂಟು, ಇಂಥ ಯಾವುದೋ ವ್ಯಕ್ತಿಯೋರ್ವನ ಹೆಸರೇ ಧಾರವಾಡ ಗ್ರಾಮಕ್ಕೆ ಆದಿಯಾಗಿರಬೇಕು. ಇದಕ್ಕೆ ಸಹಾಯಕವಾಗಿ ಸುಮಾರು 9ನೇ ಶತಮಾನದ ಧಾರವಾಡದ ಒಂದು ವೀರಗಲ್ಲು ಶಾಸನದಲ್ಲಿ ದೇರಣ್ಣ ಎಂಬ ವ್ಯಕ್ತಿಯ ಉಲ್ಲೇಖ ಕಂಡುಬರುತ್ತದೆ. ಪ್ರಾಯಶಃ ಆತನೇ ವೀರಮರಣ ಹೊಂದಿದ ವ್ಯಕ್ತಿಯಾಗಿರಬೇಕು. ಶಾಸನ ಅಧಿಕ ತ್ರುಟಿತವಿದೆ. ಆ ದೇರಣ್ಣ ಹೆಸರು ಧಾರವಾಡದ ಮೂಲ ನಿಷ್ಪತ್ತಿಯಾಗಿರಬೇಕು. ಅಂದರೆ ಧಾರವಾಡ ಪದದ ನಿರ್ದಿಷ್ಟ ಪದವಾಗಿರಬೇಕು.
  • ಇನ್ನು ವಾರ್ಗಿಕ ಡಾ. ಎಂ.ಎಂ. ಕಲಬುರ್ಗಿಯವರು ತಿಳಿಸುವಂತೆ ಬಾಡದಿಂದಲೇ ಬಂದಿರಬೇಕು. ದೇರಣ್ಣಬಾಡ> ದ್ಯಾರಣ್ಣಬಾಡ> ದಾರನಬಾಡ> ದಾರವಾಡ> ಧಾರವಾಡ ಆಗಿರುವ ಸಾಧ್ಯತೆ ಹೆಚ್ಚಾಗಿದೆ’. ಭಾಷಾ ಹಿನ್ನೆಲೆಯಲ್ಲಿ ಇದು ಸರಿಯಾದ ಕ್ರಮವಾಗಿದೆ. ಇನ್ನು ಧಾರವಾಡವನ್ನು ಸಂಸ್ಕೃತಿ ನೆಲೆಯಲ್ಲಿ ತುಂತುಪುರಿ, ಧಾರಾನಗರಿ ಎಂದು ಹೆಸರಿಸಿದ್ದುಂಟು. ಮುಸ್ಲಿಂ ಆಡಳಿತ ಕಾಲದಲ್ಲಿ ‘ನಸ್ರತಾಬಾದ್’, ಬ್ರಿಟಿಷರ ಆಡಳಿತದಲ್ಲಿ ‘ಧಾರವಾರ’ ಎಂದು ಕರೆಸಿಕೊಂಡಿತ್ತು ಈಗ ಮತ್ತೆ ಧಾರವಾಡ ಆಗಿದೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವಂತೆ ಗ್ರಾಮನಾಮದ ಪೂರ್ವಪದದ ಅಂತ್ಯದಲ್ಲಿ ಲಾ.ಳ.ಬ್ಬೆ.ಕ್ಕ ಇವು ಬಂದಿದ್ದರೆ ಅವು ಸ್ತ್ರೀವಾಚಿ ಸ್ಥಳನಾಮಗಳಾಗಿರುತ್ತವೆ.

ಚರಿತ್ರೆ

  • ಪುರಾಣ ಕಾಲದಲ್ಲಿ ಪಾಂಡವರು ಹಾನಗಲ್ ನಲ್ಲಿ ವಾಸ್ತವ್ಯ ಹೂಡಿದ್ದರು ಎಂಬಲ್ಲಿಂದ ಧಾರವಾಡದ ಚರಿತ್ರೆ ಪ್ರಾರಂಭವಾಗುತ್ತದೆ. ತಾಮ್ರ ಶಾಸನಗಳ ಪ್ರಕಾರ ಧಾರವಾಡವು ಬನವಾಸಿ ಯ ಕದಂಬರ ಆಳ್ವಿಕೆ ಒಳಪಟ್ಟಿತ್ತು ಎಂದು ತಿಳಿದು ಬರುತ್ತದೆ.ಅನಂತರದ ಚರಿತ್ರೆಯಂತೆ ಕ್ರಿ.ಶ. ಏಳನೆಯ ಶತಮಾನದಲ್ಲಿ ಚಾಲುಕ್ಯ ರು, ಕ್ರಿ.ಶ. ಒಂಭತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟ ರು, ಹನ್ನೆರಡನೆಯ ಶತಮಾನದಲ್ಲಿ ದೇವಗಿರಿಯ ಯಾದವರು ಆಳ್ವಿಕೆ ಮಾಡಿದರು.೧೨ ನೇ ಶತಮಾನದ ವರೆಗೆ ಧಾರವಾಡ ಜಿಲ್ಲೆ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದಿತು. ನಂತರ ವಿಜಯನಗರ ಸಾಮ್ರಾಜ್ಯದ ಭಾಗವಾಯಿತು.
  • ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಕೈ ಸೇರಿದ ಮೇಲೆ ಧಾರವಾಡ ಜಿಲ್ಲೆಯ ಪ್ರಾಮುಖ್ಯತೆ ಹೆಚ್ಚಿತು. ಇದಕ್ಕೆ ಮುಖ್ಯ ಕಾರಣ ಆದಿಲ್ ಶಾಹಿ ಸುಲ್ತಾನರು ಇಲ್ಲಿ ಕಟ್ಟಿಸಿದ ಕೋಟೆ -ಮಣ್ಣಕಿಲ್ಲೆ- ಇದಕ್ಕೆ ಆಗಿನ ಕಾಲದಲ್ಲಿ ನಜರತಾಬಾದ್ ಎಂಬ ಹೆಸರಿತ್ತು. ಆದಿಲ್ ಶಾಹಿ ಸುಲ್ತಾನರ ನಂತರ ಧಾರವಾಡ ಜಿಲ್ಲೆ ಸ್ವಲ್ಪ ಕಾಲ ಮುಘಲ್ ಸಾಮ್ರಾಜ್ಯದ ಕೈಯಲ್ಲಿದ್ದು ನಂತರ ಅನುಕ್ರಮವಾಗಿ ಮರಾಠರು, ಹೈದರ್ ಅಲಿ ಮತ್ತು ಟೀಪು ಸುಲ್ತಾನ್ ಹಾಗೂ ಬ್ರಿಟಿಷರ ಕೈ ಸೇರಿತು. ಮುಂಬಯಿ ಸರ್ಕಾರದ ಆಡಳಿತದಲ್ಲಿದ್ದ ಧಾರವಾಡ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು.
  • ಕರ್ನಾಟಕದಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿ ಸಂಘಟನೆ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತುಸ್ಥಾಪಿಸಿ, ರಾಜ್ಯಾದಂತ್ಯ ಕರ್ನಾಟಕ ಏಕೀಕರಣ ಹೋರಾಟದ ಪರವಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿದವರು ಅನ್ನದಾನಯ್ಯ ಪುರಾಣಿಕ. ಹುಬ್ಬಳ್ಳಿಯಲ್ಲಿ ಕರ್ನಾಟಕ ಏಕೀಕರಣದ ಕುರಿತು ಅಂತಿಮ ತೀರ್ಮಾನ ಮಾಡಲು ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕೆ.ಪಿ.ಸಿ.ಸಿ ಸಭೆ ನೆಡೆಯುವಾಗ, ಇವರು ನೆಡೆಸಿದ ಬೃಹತ್ ವಿದ್ಯಾರ್ಥಿ ಮೆರವಣಿಗೆ, ಕೆಪಿಸಿಸಿ ಸಭೆಯು ಕರ್ನಾಟಕ ಏಕೀಕರಣದ ಪರವಾಗಿ ನಿರ್ಧಾರ ಮಾಡಲು ಪ್ರಮುಖ ಕಾರಣವಾಗಿತ್ತು.

ತಾಲೂಕುಗಳು

ಧಾರವಾಡ ಜಿಲ್ಲೆಯು 8 ಕಂದಾಯ ತಾಲೂಕುಗಳನ್ನು ಹೊಂದಿದೆ

  • ಧಾರವಾಡ ತಾಲೂಕು
  • ಅಳ್ನಾವರ ತಾಲೂಕು
  • ಹುಬ್ಬಳ್ಳಿ ಗ್ರಾಮೀಣ ತಾಲೂಕು
  • ಹುಬ್ಬಳ್ಳಿ ಶಹರ ತಾಲೂಕು
  • ಕುಂದಗೋಳ ತಾಲೂಕು
  • ನವಲಗುಂದ ತಾಲೂಕು
  • ಅಣ್ಣಿಗೇರಿ ತಾಲೂಕು
  • ಕಲಘಟಗಿ ತಾಲೂಕು

ಪ್ರಮುಖ ವ್ಯಕ್ತಿಗಳು

ಕರ್ನಾಟಕಕ್ಕೆ ಧಾರವಾಡ ಜಿಲ್ಲೆಯ ಪ್ರಮುಖ ಕೊಡುಗೆ ಇಲ್ಲಿ ಹುಟ್ಟಿ ಬೆಳೆದಿರುವ ಅನೇಕ ಸಂಗೀತಗಾರರು ಮತ್ತು ಸಾಹಿತಿಗಳು. ಧಾರವಾಡದ ಕೆಲವು ಪ್ರಮುಖ ಗಣ್ಯ ವ್ಯಕ್ತಿಗಳನ್ನು ಕೆಳಗೆ ಕಾಣಿಸಲಾಗಿದೆ. ಧಾರವಾಡದ ಮುರುಘಾ ಮಠ ಮತ್ತು ಲಿಂ.ಮೃತ್ಯುಂಜಯ ಸ್ವಾಮಿಗಳು ಹಾಗೂ ದಿ. ಮಹಾಂತಪ್ಪಗಳು ವಿಶ್ವ ಪ್ರಸಿದ್ಧ. ಇಲ್ಲಿದ್ದು ವಿದ್ಯಾಭ್ಯಾಸ ಮಾಡಿದವರಲ್ಲಿ ಹಲವಾರು ಜನರು ಗಣ್ಯವ್ಯಕ್ತಿಗಳು, ಸಾಹಿತಿಗಳು, ಅಧಿಕಾರಿಗಳು ಆಗಿದ್ದಾರೆ. ಸಂಗೀತ-ಕಲೆ-ಶಿಕ್ಷಣ-ಭಕ್ತಿಯ ನಿರಂತರ ದಾಸೋಹ ಈ ಮಠದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ನಡೆಯುತ್ತಿರುವುದು ಇಲ್ಲಿ ವಿಶೇಷವಾಗಿದೆ.

ಸಂಗೀತಗಾರರು

ಹಿಂದುಸ್ತಾನಿ ಸಂಗೀತ ಪದ್ಧತಿ ಧಾರವಾಡದಲ್ಲಿ ಆಳವಾಗಿ ಬೇರೂರಿದೆ. ಧಾರವಾಡದಿಂದ ಅನೇಕ ಗಣ್ಯ ಹಿಂದುಸ್ತಾನಿ ಸಂಗೀತಗಾರರು ಬೆಳಕಿಗೆ ಬಂದಿದ್ದಾರೆ.

ಸಾಹಿತಿಗಳು

ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ. ಧಾರವಾಡ ಜಿಲ್ಲೆಯಲ್ಲಿ ಜನಿಸಿದ ಅಥವಾ ನೆಲೆಸಿದ ಮಹತ್ವದ ಸಾಹಿತಿಗಳ ಹೆಸರುಗಳನ್ನು ಇಲ್ಲಿ ಕೊಡಲಾಗುತ್ತಿದೆ:

ಶಿಕ್ಷಣ ತಜ್ಞರು

  • ಪ್ರೊ.ಡಿ.ಸಿ.ಪಾವಟೆ

ಮೂಲತಃ ಬೆಳಗಾವಿ ಜಿಲ್ಲೆಯವರಾದ ಶ್ರೀ ಡಿ.ಸಿ. ಪಾವಟೆಯವರು ಗಣಿತ ಶಾಸ್ತ್ರದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ Rangler ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಇವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು.

  • ನಡಕಟ್ಟಿ
  • ಶಿವಶಂಕರ ಹಿರೇಮಠ

ಕಂಪ್ಯೂಟರ್ ವಿಜ್ಞಾನ ಉದ್ಯಮಿಗಳು

  • ಉಮೇಶ ವೈದ್ಯಮಠ

ಸಾಮಾಜಿಕ ಕಾರ್ಯಕರ್ತರು

  • ಶ್ರೀ ಬಿ ಡಿ ಹಿರೇಮಠ (ಸಾಮಾಜಿಕ ಚಟುವಟಿಕೆಗಳು,ಹೈಕೋರ್ಟ್)
  • ಶ್ರೀ ಹರ್ಷವರ್ಧನ್ ಶೀಲವಂತ್ (ಪರಿಸರವಾದಿ)
  • ಶ್ರೀ ಕಿರಣ್ ಹಿರೇಮಠ (ಸಾಮಾಜಿಕ ಚಟುವಟಿಕೆಗಳು)
  • ಶ್ರೀ ದತ್ತ ಕುಲಕರ್ಣಿ (ಸಾಮಾಜಿಕ ಚಟುವಟಿಕೆಗಳು, ಐ ಐ ಟಿ)
  • ಶ್ರೀ ಬಸವರಾಜ ಎಚ್ ಕೊರವರ (ಸಾಮಾಜಿಕ ಚಟುವಟಿಕೆಗಳು, ಜನಜಾಗೃತಿ ಸಂಘ)

ಕಲಾಕಾರರು

ಧಾರವಾಡದಲ್ಲಿ ಬೆಳೆದ ಸಿನೆಮಾ ತಾರೆಯರು ದಾಮಿನಿ, ಸುರೇಶ ಹೆಬ್ಳೀಕರ್ ಲೀನಾ ಚಂದಾವರ್ಕರ ಮತ್ತು ಮಮತಾ ಕುಲಕರ್ಣಿ. 'ಕುಂಚ ಬ್ರಹ್ಮ' ಹಾಲಭಾವಿಯವರು ಪ್ರಸಿದ್ಧ ಕಲಾವಿದರಾಗಿದ್ದಾರೆ.

'ರಂಗಭೂಮಿ ಕಲಾವಿದರು'

  • ಎನ್ ಬಸವರಾಜ (ಗುಡಗೇರಿ) ಗುಬ್ಬಿವಿರಣ್ಣ ಪ್ರಶಸ್ತಿ ವಿಜೇತ
  • ಎಮ್.ಎಸ್.ಕೊಟ್ರೇಶ್ (ಪ್ರಸ್ತುತ ಕನ್ನಡ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ.)
  • ಶ್ರೀಮತಿ. ನಾಗರತ್ನಮ್ಮ. ಹೊಸಮನಿ
  • ಯಶವಂತ ಸರದೆಶಪಾಂಡೆ (ಆಲ್ ದಿ ಬೆಸ್ಟ್ ಪ್ರಸಿಧಿ)
  • ಮಾಲತಿ ಸರದೆಶಪಾಂಡೆ ‍
  • ಶ್ರೀಕೃಷ್ಣ ಸಂಪಗಾಂವಕರ್
  • ಅವಿನಾಶ್ ಕಾಮತ್ (ಪ್ರಸ್ತುತ ಮುಂಬಯಿ ಕನ್ನಡ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ.)
  • ಬಸವರಾಜ ಮನಸೂರ

ಚಿತ್ರ ಕಲಾವಿದರಲ್ಲಿ ಪ್ರಮುಖರು-

  • ಎಂ ಆರ್ ಬಾಳಿಕಾಯಿ
  • ಸಿ ಡಿ ಜೆಟ್ಟೆಣ್ಣವರ
  • ಎಂ ಜೆ ಬಂಗ್ಲೇವಾಲೇ
  • ಶೇಖರ ಬಳ್ಳಾರಿ.
  • ಸತೀಶ ಪೂಜಾರಿ
  • ಶಂಕರ್ ಕೆ ವಿ.
  • ವಿಜಯಲಕ್ಶ್ಮಿ ಯಾವಗಲ್
  • ಸುನಿಲ್ ಪುರಾನಿಕ್

ಜನಸಂಖ್ಯೆ

೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೧೮,೪೭,೦೨೩ ಆಗಿದ್ದು, ಇದರಲ್ಲಿ ಪುರುಷರು ೯,೩೭,೨೦೬ ಮತ್ತು ಮಹಿಳೆಯರು ೯,೦೯,೮೧೭ ಆಗಿದೆ. ಜಿಲ್ಲೆಯ ವಿಸ್ತೀರ್ಣ ೪೨೬೦ ಕಿ.ಮೀ ವಿಸ್ತೀರ್ಣ ಹೊಂದಿದ್ದು ಜನಸಾಂದ್ರತೆ ೪೩೪ ಪ್ರತೀ ಕಿ.ಮೀ,ಗೆ ಇರುತ್ತದೆ.

ಚಾರಿತ್ರಿಕ ಘಟನೆಗಳು

ಧಾರವಾಡ ನಗರದ ಕೆಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಾರಿತ್ರಿಕ ಘಟನೆಗಳು ಇಂತಿವೆ:

  • ೧೮೧೮---ಬ್ರಿಟಿಷ್ ಆಡಳಿತ ಪ್ರಾರಂಭ.
  • ೧೮೨೪---ಧಾರವಾಡ ಜಿಲ್ಲಾ ಕಲೆಕ್ಟರ ಥ್ಯಾಕರೆ ಕಿತ್ತೂರು ಕಿತ್ತೂರು ಚೆನ್ನಮ್ಮಇವಳ‍ ವಿರುದ್ಧ ನಡೆಸಿದ ದಾಳಿಯಲ್ಲಿ ಗುಂಡೇಟಿನಿಂದ ಮೃತನಾದನು.
  • ೧೮೨೬---ಪ್ರಥಮ ಮರಾಠಿ ಶಾಲೆ ಪ್ರಾರಂಭ.
  • ೧೮೩೦---ಸಿವಿಲ್ ಆಸ್ಪತ್ರೆ ನಿರ್ಮಾಣ
  • ೧೮೩೧---ಪ್ರಥಮ ಕನ್ನಡ ಶಾಲೆಯ ಪ್ರಾರಂಭ
  • ೧೮೩೬---ಬಾಸೆಲ್ ಮಿಶನ್ ಆಗಮನ
  • ೧೮೪೦---ಕ್ಯಾಥೋಲಿಕ್ ಚರ್ಚ ನಿರ್ಮಾಣ
  • ೧೮೪೪---ಮಾನಸಿಕ ಆರೋಗ್ಯ ಕೇಂದ್ರದ ಸ್ಥಾಪನೆ
  • ೧೮೪೮---ಸರಕಾರಿ ಇಂಗ್ಲಿಷ್ ಶಾಲೆಯ ಸ್ಥಾಪನೆ
  • ೧೮೪೯---ಶ್ರೀ ಗುರುನಾಥರಾವ ಪಾಠಕ ಇವರಿಂದ ‘ಸಂಸ್ಕೃತ ಪಾಠಶಾಲೆ’ಯ ಸ್ಥಾಪನೆ
  • ೧೮೫೬---ನಗರಪಾಲಿಕೆ ಪ್ರಾರಂಭ
  • ೧೮೬೧---ವೆಂಕಟ ರಂಗೊ ಕಟ್ಟಿ ಇವರಿಂದ ಕನ್ನಡದ ಪ್ರಥಮ ಮಾಸಿಕ ‘ಜ್ಞಾನಬೋಧಕ’ ಪ್ರಾರಂಭ
  • ೧೮೬೩---ಬಾಸೆಲ್ ಮಿಶನ್ ಹಾಯ್‍ಸ್ಕೂಲ್ ಪ್ರಾರಂಭ
  • ೧೮೬೫--- ಗಂಡುಮಕ್ಕಳ ಟ್ರೇನಿಂಗ ಕಾಲೇಜಿನಿಂದ ‘ವಾರಪತ್ರಿಕೆ’ ಪ್ರಾರಂಭ
  • ೧೮೬೮---ಪ್ರಥಮ ಹೆಣ್ಣು ಮಕ್ಕಳ ಶಾಲೆ ಪ್ರಾರಂಭ
  • ೧೮೭೯---ಕರ್ನಾಟಕ ಸಂಗೀತ ಶಾಲೆಯ ಪ್ರಾರಂಭ
  • ೧೮೮೯---ರಾ.ಹ.ದೇಶಪಾಂಡೆಯವರಿಂದ ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಾರಂಭ
  • ೧೮೯೨---ಪರಿವ್ರಾಜಕ ಸ್ವಾಮಿ ವಿವೇಕಾನಂದರ ಭೇಟಿ
  • ೧೮೯೫---ಹೆಣ್ಣುಮಕ್ಕಳ ಟ್ರೇನಿಂಗ ಕಾಲೇಜ ಪ್ರಾರಂಭ
  • ೧೮೯೬---ವಾಗ್ಭೂಷಣ ಪತ್ರಿಕೆಯ ಪ್ರಾರಂಭ
  • ೧೯೦೨---ಥಿಯಾಸೊಫಿಕಲ್ ಸೊಸಾಯಿಟಿ ಪ್ರಾರಂಭ
  • ೧೯೦೭---ಲೋಕಮಾನ್ಯ ತಿಲಕರಿಂದ ಸಾರ್ವಜನಿಕ ಭಾಷಣ
  • ೧೯೧೪---ಕರ್ನಾಟಕ ಪ್ರಾಚ್ಯ ಸಂಶೋಧನಾ ಕೇಂದ್ರ ಪ್ರಾರಂಭ
  • ೧೯೧೫---ಲೋಕಮಾನ್ಯ ತಿಲಕರಿಂದ ಸಾರ್ವಜನಿಕ ಭಾಷಣ
  • ೧೯೧೭---ಕರ್ನಾಟಕ ಕಾಲೇಜ ಸ್ಥಾಪನೆ
  • ೧೯೨೦---ಮಹಾತ್ಮಾ ಗಾಂಧೀಜಿಯವರಿಂದ ಧಾರವಾಡದ ಭೆಟ್ಟಿ
  • ೧೯೨೧---ಕರ್ನಾಟಕ ಶಿಕ್ಷಣ ಸಮಿತಿಯ ಕಾಲೇಜ ಪ್ರಾರಂಭ : ಜಕಣಿ ಭಾವಿಯ ಹತ್ತಿರ ಪೋಲೀಸ ಗೋಳೀಬಾರ, ಮೂವರು ಖಿಲಾಫತ್ ಚಳುವಳಿಗಾರರ ಮರಣ ; ಲಾಲಾ ಲಜಪತರಾಯ ಇವರ ಭೆಟ್ಟಿ
  • ೧೯೨೨---ಕರ್ನಾಟಕ ಲಿಂಗಾಯತ ಶಿಕ್ಷಣ ಸಮಿತಿಯ ಪ್ರಾರಂಭ
  • ೧೯೨೭---ಸೈಮನ್ ಕಮಿಶನ್ ವಿರುದ್ಧ ಪ್ರತಿಭಟನೆ, ಚಳುವಳಿ
  • ೧೯೨೮---ಶ್ರೀ ನಾಡಿಗೇರ ಅವರಿಂದಮಲ್ಲಸಜ್ಜನ ವ್ಯಾಯಾಮಶಾಲೆಯ ಪ್ರಾರಂಭ
  • ೧೯೩೦---ಉಪ್ಪಿನ ಸತ್ಯಾಗ್ರಹ:ರಂಗನಾಥ ದಿವಾಕರ‍ರ ಬಂಧನ. ಹುಕ್ಕೇರಿಕರ ರಾಮರಾವ, ಡಿ.ಪಿ.ಕರಮರಕರ, ನಾರಾಯಣರಾವ ಕಬ್ಬೂರ ಇವರಿಂದ ಬ್ರಿಟಿಷ್ ಧ್ವಜ ಅವರೋಹಣ.
  • ೧೯೩೩---ಪ್ರಸಿದ್ಧ ನಾಟಕಕಾರ ಶ್ರೀರಂಗ‍ರಿಂದ ‘ಕರ್ನಾಟಕ ನಾಟ್ಯ ವಿಲಾಸಿ ಹವ್ಯಾಸಿ ನಾಟಕ ಸಮಾಜ’ ಸ್ಥಾಪನೆ.
  • ೧೯೩೬---ಆಲೂರು ವೆಂಕಟರಾಯ‍ರಿಂದ ದಸರಾ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸುವದರ ಪ್ರಾರಂಭ
  • ೧೯೩೮---ಬೆಟಗೇರಿ ಕೃಷ್ಣಶರ್ಮರಿಂದ ‘ಜಯಂತಿ’ ಮಾಸಪತ್ರಿಕೆ ಹಾಗು ಗೆಳೆಯರ ಗುಂಪಿನಿಂದ ಜೀವನ ಮಾಸಪತ್ರಿಕೆಯ ಪ್ರಾರಂಭ; ಸುಭಾಷಚಂದ್ರ ಭೋಸ ಇವರ ಭೆಟ್ಟಿ
  • ೧೯೩೯--- ಸುಭಾಷಚಂದ್ರ ಭೋಸ ಇವರ ಮರು ಭೆಟ್ಟಿ
  • ೧೯೪೦---ವೀರ ಸಾವರಕರ ಇವರ ಭೆಟ್ಟಿ
  • ೧೯೪೨---ಚಲೇಜಾವ್ ಚಳುವಳಿ ಪ್ರಾರಂಭ; ವಿಮಲಾ ಗುಳವಾಡಿ ಹಾಗು ಶಿನೋಳಕರ ಎನ್ನುವ ಬಾಲಕಿಯರಿಂದ ಜಿಲ್ಲಾಕಚೇರಿಯ ಮೇಲೆ ತ್ರಿವರ್ಣಧ್ವಜದ ಆರೋಹಣ!
  • ೧೯೪೪---ಕರ್ನಾಟಕ ಶಿಕ್ಷಣ ಸಮಿತಿಯ ಕಲಾ ಕಾಲೇಜ ಪ್ರಾರಂಭ
  • ೧೯೪೭---ಒಕ್ಕಲುತನದ ಕಾಲೇಜ ಪ್ರಾರಂಭ; ಜನತಾ ಶಿಕ್ಷಣ ಸಮಿತಿ ಪ್ರಾರಂಭ
  • ೧೯೪೯---ಕರ್ನಾಟಕ ವಿಶ್ವವಿದ್ಯಾಲಯ
  • ೧೯೭೪---ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಇವರು ಸಪ್ತಾಪುರದಲ್ಲಿ ಈಗಿರುವ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದರು.
  • ೧೯೮೬---ಕೃಷಿ ವಿಶ್ವವಿದ್ಯಾಲಯ, ಧಾರವಾಡ

ರಾಜಕೀಯ

ಧಾರವಾಡ: ಇತಿವೃತ್ತ, ಚರಿತ್ರೆ, ತಾಲೂಕುಗಳು 
ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ

ಧಾರವಾಡ ಜಿಲ್ಲೆಯಲ್ಲಿ ಒಟ್ಟು ೭ ವಿಧಾನಸಭಾ ಕ್ಷೇತ್ರಗಳಿವೆ.

  • ಧಾರವಾಡ (ಇಂದಿನ ಶಾಸಕರು :ಅಮೃತ ದೇಸಾಯಿ )
  • ಹುಬ್ಬಳ್ಳಿ -ಧಾರವಾಡ ಪಶ್ಛಿಮ (ಇಂದಿನ ಶಾಸಕರು: ಅರವಿಂದ ಬೆಲ್ಲದ)
  • ಹುಬ್ಬಳ್ಳಿ -ಧಾರವಾಡ ಮಧ್ಯ (ಇಂದಿನ ಶಾಸಕರು: ಜಗದೀಶ ಶೆಟ್ಟರ್)
  • ಹುಬ್ಬಳ್ಳಿ -ಧಾರವಾಡ ಪೂರ್ವ (ಇಂದಿನ ಶಾಸಕರು:ಪ್ರಸಾದ ಅಬ್ಬಯ್ಯ )
  • ಕಲಘಟಗಿ (ಇಂದಿನ ಶಾಸಕರು: ಸಿ.ಎಂ. ನಿಂಬಣ್ಣವರ )
  • ಕುಂದಗೋಳ (ಇಂದಿನ ಶಾಸಕರು: ಕುಸುಮಾ ಶಿವಳ್ಳಿ )
  • ನವಲಗುಂದ (ಇಂದಿನ ಶಾಸಕರು: ಶಂಕರ ಪಾಟೀಲ ಮುನೇನಕೊಪ್ಪ)-

ವಿಧಾನ ಪರಿಷತ್ತ ಸದಸ್ಯರು.

  • ಬಸವರಾಜ ಹೊರಟ್ಟಿ ( ಶಿಕ್ಷಕರ ಕ್ಷೇತ್ರ )
  • ಶ್ರೀನಿವಾಸ ಮಾನೆ. (ಸ್ಥಳಿಯ ಸಂಸ್ಠೆ)
  • ಪ್ರದೀಪ ಶೆಟ್ಟರ್
  • ಎಸ್.ವಿ. ಸಂಕನೂರ

ಧಾರವಾಡ ಜಿಲ್ಲೆಯವರೆ ಆದ ಶ್ರೀ ಸೋಮಪ್ಪ ರಾಯಪ್ಪ ಬೊಮ್ಮಾಯಿಯವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ಧಾರವಾಡ ಜಿಲ್ಲೆಯವರೇ.

ಇವನ್ನೂ ನೋಡಿ

ಮಂದಿರಗಳು

  • ಭಗವಾನ್ ಸರಹುನಾಥ್ ಮಂದಿರ, ನುಗ್ಗಿಕೇರಿ (Lord Sarahunaath Temple)
  • ಭಗವಾನ್ ಸರಹುನಾಥ್ ಮಂದಿರ, ಮದಿಹಾಳ (Lord Sarahunaath Temple)

ಬಾಹ್ಯ ಸಂಪರ್ಕಗಳು

Tags:

ಧಾರವಾಡ ಇತಿವೃತ್ತಧಾರವಾಡ ಚರಿತ್ರೆಧಾರವಾಡ ತಾಲೂಕುಗಳುಧಾರವಾಡ ಪ್ರಮುಖ ವ್ಯಕ್ತಿಗಳುಧಾರವಾಡ ಚಾರಿತ್ರಿಕ ಘಟನೆಗಳುಧಾರವಾಡ ರಾಜಕೀಯಧಾರವಾಡ ಇವನ್ನೂ ನೋಡಿಧಾರವಾಡ ಬಾಹ್ಯ ಸಂಪರ್ಕಗಳುಧಾರವಾಡಕರ್ನಾಟಕ

🔥 Trending searches on Wiki ಕನ್ನಡ:

ಹನುಮಾನ್ ಚಾಲೀಸತಾಳಗುಂದ ಶಾಸನಚಿನ್ನರಾಷ್ಟ್ರೀಯ ಉತ್ಪನ್ನಕನ್ನಡದ ಉಪಭಾಷೆಗಳುಯಕೃತ್ತುಸಾವಿತ್ರಿಬಾಯಿ ಫುಲೆಚಿಕ್ಕಬಳ್ಳಾಪುರಪಠ್ಯಪುಸ್ತಕಮಂಗಳಮುಖಿದಾಸ ಸಾಹಿತ್ಯಪ್ರಾಚೀನ ಈಜಿಪ್ಟ್‌ಮಂಕುತಿಮ್ಮನ ಕಗ್ಗಕರ್ನಾಟಕದ ಅಣೆಕಟ್ಟುಗಳುಸಂಸ್ಕೃತಪರಿಸರ ರಕ್ಷಣೆತತ್ತ್ವಶಾಸ್ತ್ರದ್ರಾವಿಡ ಭಾಷೆಗಳುಶೈಕ್ಷಣಿಕ ಮನೋವಿಜ್ಞಾನಕನ್ನಡದಲ್ಲಿ ಸಾಂಗತ್ಯಕಾವ್ಯತಮ್ಮಟಕಲ್ಲು ಶಾಸನವಚನಕಾರರ ಅಂಕಿತ ನಾಮಗಳುಹಲ್ಮಿಡಿಅರ್ಥ ವ್ಯವಸ್ಥೆಬಸವೇಶ್ವರಮಾನವ ಸಂಪನ್ಮೂಲ ನಿರ್ವಹಣೆಅಲಾವುದ್ದೀನ್ ಖಿಲ್ಜಿಮೂಕಜ್ಜಿಯ ಕನಸುಗಳು (ಕಾದಂಬರಿ)ಮಿಂಚುಮ್ಯಾಕ್ಸ್ ವೆಬರ್ಕನಕದಾಸರುಚಂಪೂರಾಷ್ಟ್ರಕೂಟನಯಸೇನಹವಾಮಾನಜೀವಕೋಶಕರ್ನಾಟಕದ ಸಂಸ್ಕೃತಿಕಾರ್ಮಿಕರ ದಿನಾಚರಣೆಕಾಂತಾರ (ಚಲನಚಿತ್ರ)ಅಷ್ಟ ಮಠಗಳುಗೋಪಾಲಕೃಷ್ಣ ಅಡಿಗಗೌತಮ ಬುದ್ಧಅನುಶ್ರೀಸಿದ್ದರಾಮಯ್ಯಹಲ್ಮಿಡಿ ಶಾಸನಕನ್ನಡದಲ್ಲಿ ಪ್ರವಾಸ ಸಾಹಿತ್ಯಎಕರೆವರ್ಗೀಯ ವ್ಯಂಜನಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಕೆಂಬೂತ-ಘನಮಂಜುಳಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗೋಕಾಕ್ ಚಳುವಳಿಸಾಮ್ರಾಟ್ ಅಶೋಕಒಡೆಯರ್ಯೇಸು ಕ್ರಿಸ್ತಕನ್ನಡ ಅಭಿವೃದ್ಧಿ ಪ್ರಾಧಿಕಾರಭಾರತದ ವಿಶ್ವ ಪರಂಪರೆಯ ತಾಣಗಳುವ್ಯಾಪಾರರಾಜಕೀಯ ವಿಜ್ಞಾನಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಧರ್ಮಆದಿವಾಸಿಗಳುಗುರುರಾಜ ಕರಜಗಿಚಂದ್ರಶ್ರೀಪಾದರಾಜರುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕೂಡಲ ಸಂಗಮತ್ರಿವೇಣಿಹನುಮಂತಗಾದೆ ಮಾತುದಿಕ್ಕುಭಾರತೀಯ ಸಂಸ್ಕೃತಿಮಾರುಕಟ್ಟೆ🡆 More