ಹೊನ್ನೆ: ಸಸ್ಯದ ಜಾತಿಗಳು

ಹೊನ್ನೆ (Kino Tree) ಒಂದು ದೊಡ್ಡ ಪ್ರಮಾಣದ ಮುಖ್ಯ ಚೌಬೀನೆ ಮರ.

ಹೊನ್ನೆ
ಹೊನ್ನೆ: ಸಸ್ಯಶಾಸ್ತ್ರೀಯ ವರ್ಗೀಕರಣ, ವ್ಯಾಪ್ತಿ, ಸಸ್ಯದ ಗುಣಲಕ್ಷಣಗಳು ಮತ್ತು ವಿವರಗಳು
Conservation status
ಹೊನ್ನೆ: ಸಸ್ಯಶಾಸ್ತ್ರೀಯ ವರ್ಗೀಕರಣ, ವ್ಯಾಪ್ತಿ, ಸಸ್ಯದ ಗುಣಲಕ್ಷಣಗಳು ಮತ್ತು ವಿವರಗಳು
Vulnerable  (IUCN 2.3)
Scientific classification
ಸಾಮ್ರಾಜ್ಯ:
plantae
Division:
ಹೂ ಬಿಡುವ ಸಸ್ಯ
ವರ್ಗ:
ಮ್ಯಾಗ್ನೋಲಿಯೋಪ್ಸಿಡ
ಗಣ:
ಫಾಬಲ್ಸ್
ಕುಟುಂಬ:
ಫಾಬಸಿಯೆ(ಲೆಗುಮಿನೊಸೆ)
ಉಪಕುಟುಂಬ:
Faboideae
ಪಂಗಡ:
ದಾಲ್ಬರ್ಜಿಯೆ
ಕುಲ:
Pterocarpus
ಪ್ರಜಾತಿ:
P. marsupium
Binomial name
ಟೆರೋಕರ್ಪಸ್ ಮಾರ್ಸುಪಿಯಮ್(Pterocarpus marsupium)
Roxburgh

ಮಿಶ್ರಪರ್ಣಪಾತಿ ಅರಣ್ಯಗಳಲ್ಲಿ ೭೫ ರಿಂದ ೨೦೦ ಸೆ.ಮೀ. ಮಳೆ ಬೀಳುವ ಪ್ರದೇಶಗಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಇದು ಭಾರತ, ನೇಪಾಳ, ಶ್ರೀಲಂಕಾಗಳ ಮೂಲ(Native) ಮರ.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಲೆಗುಮಿನೋಸೆ ಕುಟುಂಬದಲ್ಲಿದೆ. ಸಸ್ಯಶಾಸ್ತ್ರೀಯ ಹೆಸರು: ಟೆರೊಕಾರ್ಪಸ್ ಮಾರ್ಸುಪಿಯಮ್ (Pterocarpus marsupium). ಕನ್ನಡದಲ್ಲಿ 'ಹನೆ', 'ಬಿಜಸಾಲ' ಎಂದೂ ತುಳು ಬಾಷೆಯಲ್ಲಿ ಬೇಂಗ ಎಂದೂ ಕರೆಯುತ್ತಾರೆ.

ವ್ಯಾಪ್ತಿ

ಭಾರತದ ಪರ್ಯಾಯದ್ವೀಪ ಭಾಗದ ಪರ್ಣಪಾತಿ ಕಾಡುಗಳ, ತೇವಮಯ ಪ್ರದೇಶಗಳಲ್ಲಿ ಬೆಳೆಯುತ್ತದೆ. ಹಿಮಾಲಯ ತಪ್ಪಲು ಪ್ರದೇಶ, ಮಹಾರಾಷ್ಟ್ರ, ಆಂಧ್ರ, ಒರಿಸ್ಸ ಈ ಪ್ರಾಂತ್ಯಗಳಲ್ಲಿಯೂ ಇದು ಕಂಡುಬರುತ್ತದೆ.

ಸಸ್ಯದ ಗುಣಲಕ್ಷಣಗಳು ಮತ್ತು ವಿವರಗಳು

ದೊಡ್ಡ ಪ್ರಮಾಣದ ಮರ. ಹರಡಿದ ಕೊಂಬೆಗಳು. ಅನುಕೂಲಕರ ವಾತಾವರಣದಲ್ಲಿ ಕಾಂಡ ನೇರವಾಗಿ ಬೆಳೆದು 30ಮೀ ಎತ್ತರ ಹಾಗೂ 3 ಮೀ ಸುತ್ತಳತೆಯನ್ನು ಪಡೆಯುವುದು. ತೊಗಟೆ ಮಂದ, ಬೂದುಬಣ್ಣ. ಸಣ್ಣ ಅಸಮರೂಪದ ಹೊಪ್ಪಳಿಕೆಗಳು ಕಂಡುಬರುತ್ತವೆ. ತೊಗಟೆ ದಪ್ಪವಾಗಿದ್ದು ಕೆತ್ತಿದಾಗ ಎಳೆಗೆಂಪು ಬಣ್ಣ ಕಾಣುತ್ತದೆ. ಹಳೆಯ ಮರಗಳಿಂದ ರಕ್ತ ಕೆಂಪಿನ ಬಂಧಕ ಅಂಟು (ರಾಳ) (Astringent Gum) ದೊರೆಯುತ್ತದೆ. ದಾರುವಿನಿಂದ ಉತ್ತಮ ಚೌಬೀನೆ ದೊರೆಯುತ್ತದೆ. ದಾರುವು ಗಡುಸಾಗಿದ್ದು, ಚೇಗು ಹಳದಿ ಮಿಶ್ರಿತ ಕಂದು ಬಣ್ಣದ್ದಾಗಿದೆ. ಒಳಭಾಗ ಕೆಲವು ಬಾರಿ ಕೆಟ್ಟಿರುವುದರಿಂದ ಕೊಯ್ಯುವಾಗ ಬೇರ್ಪಡಿಸಬೇಕು. ಚೌಬೀನೆ ಶಕ್ತಿಯುತ ಹಾಗೂ ಗಡುಸಿನದಾಗಿರುತ್ತದೆ. ಬಾಳಿಕೆ ಬರುತ್ತದೆ. ದಾರುವಿನ ಮೇಲೆ ನೀರು ಬಿದ್ದಲ್ಲಿ ಕಪ್ಪು ಬಣ್ಣದ ಕಲೆಯುಂಟಾಗುತ್ತದೆ. ಕೊಯ್ತಕ್ಕೂ ಮರಗೆಲಸಗಳಿಗೂ ಸುಲಭ. ಚೆನ್ನಾಗಿ ಹೊಳಪು ಕೊಡಬಹುದು. ಪದರ ಹಲಗೆಗೆ ಉಪಯುಕ್ತವಾದರೂ ಉರುಳೆಯಂತ್ರ (ರೋಡರ್) ದಿಂದ ತೆಗೆಯಲು ಕಷ್ಟ ತೆಳುವಾದ ಬಿಲ್ಲೆಯಾಗಿ ಕುಮಂತಿ (ಸ್ಲೈಸ್) ಉಪಯೋಗಿಸಬಹುದು.

ಏಪ್ರಿಲ್-ಮೇ ತಿಂಗಳುಗಳಲ್ಲಿ ಕೆಲವು ಕಾಲ ಎಲೆ ಇಲ್ಲದಿದ್ದು, ಮೇ-ಜೂನ್‌ನಲ್ಲಿ ಹೊಸ ಚಿಗುರು ಬಂದು, ಜೂನ್-ಆಗಸ್ಟ್ ತಿಂಗಳಲ್ಲಿ ಸುವಾಸಿತ ಹಳದಿಯ ಹೂಗೊಂಚಲುಗಳಿಂದ ಕೂಡಿರುವುವು. ಜನವರಿ-ಮಾರ್ಚಿನಲ್ಲಿ ಕಾಯಿ ಮಾಗುವುದು. 2-5 ಸೆಂಮೀ ವ್ಯಾಸದ ಕಂದುಬಣ್ಣದ ಚಪ್ಪಟೆಯ ರೆಕ್ಕೆಯುಳ್ಳ ಕಾಯಿಗಳು ಮರದಿಂದ ಜೋಲಾಡುತ್ತಿದ್ದು ದೊಡ್ಡಗಾಳಿ ಬಂದಾಗ ದೂರದವರೆಗೆ ಪ್ರಸಾರವಾಗುತ್ತವೆ.

ತಕ್ಕಮಟ್ಟಿಗೆ ಬಿಸಿಲನ್ನು ಅಪೇಕ್ಷಿಸುತ್ತದೆ. ಕತ್ತರಿಸಿದಾಗ ಚೆನ್ನಾಗಿ ಚಿಗುರುವುದು. ಸ್ವಾಭಾವಿಕ ಪುನುರುತ್ಪತ್ತಿ ಸಮರ್ಪಕವಾಗಿದ್ದರೂ ಸಸಿಗಳು ದೊಡ್ಡವಾಗಬೇಕಾದರೆ ಜಾನುವಾರು, ಬೆಂಕಿ ಕಾಟದಿಂದ ಕಾಪಾಡಬೇಕು. ಬೇರು ಸಸಿಗಳು ಹೇರಳವಾಗಿರುತ್ತವೆ. ಬೀಜಬಿತ್ತಿ ಸಸಿ ಬೆಳೆಸಬಹುದು.

ಉಪಯೋಗಗಳು

ಅತಿಮುಖ್ಯ ಚೌಬೀನೆ ಮರಜಾತಿಗಳಲ್ಲಿ ಇದೂ ಒಂದು. ಗೃಹ ನಿರ್ಮಾಣ, ದೋಣಿ ತಯಾರಿಕೆ ಮುಂತಾಗಿ ಮರಗೆಲಸಕ್ಕೆ ಉತ್ತಮ ಜಾತಿಯ ಮರ. ಇದರ ತೊಗಟೆಯಲ್ಲಿ ದೊರೆಯುವ ರಕ್ತ ಕೆಂಪಿನ ಬಂಧಕ ಅಂಟು (Astringent Gum) ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ.

ದಕ್ಷಿಣ ಭಾರತದಲ್ಲಿ, ಸಾಗುವಾನಿ, ಬೀಟೆ ಹೊರತು, ಅತಿಬಳಕೆಯಲ್ಲಿರುವ ಚೌಬೀನೆ ಇದಾಗಿದೆ. ಪೀಠೋಪಕರಣ, ಗಾಡಿಚಕ್ರ, ಗಣಿ ಆನಿಕೆ, ರೈಲ್ವೆ ಕೋಚು, ಸ್ಲೀಪರುಗಳು, ಕೊಳಗಗಳು, ವ್ಯವಸಾಯದ ಉಪಕರಣಗಳು ಹಾಗೂ ಕೆತ್ತನೆ ಕೆಲಸಗಳು ಮುಂತಾದವುಗಳಿಗೆ ಉಪಯುಕ್ತ. ತೊಗಟೆಯಿಂದ ಬಣ್ಣ ಬರುತ್ತದೆ. ಎಲೆಗಳು ಜಾನುವಾರುಗಳ ಮೇವಿಗೂ ಗೊಬ್ಬರಕ್ಕೂ ಉಪಯುಕ್ತ ಎನಿಸಿದೆ.

ಛಾಯಾಂಕಣ

ಆಧಾರ ಗ್ರಂಥಗಳು

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

ಹೊನ್ನೆ: ಸಸ್ಯಶಾಸ್ತ್ರೀಯ ವರ್ಗೀಕರಣ, ವ್ಯಾಪ್ತಿ, ಸಸ್ಯದ ಗುಣಲಕ್ಷಣಗಳು ಮತ್ತು ವಿವರಗಳು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಹೊನ್ನೆ ಸಸ್ಯಶಾಸ್ತ್ರೀಯ ವರ್ಗೀಕರಣಹೊನ್ನೆ ವ್ಯಾಪ್ತಿಹೊನ್ನೆ ಸಸ್ಯದ ಗುಣಲಕ್ಷಣಗಳು ಮತ್ತು ವಿವರಗಳುಹೊನ್ನೆ ಉಪಯೋಗಗಳುಹೊನ್ನೆ ಛಾಯಾಂಕಣಹೊನ್ನೆ ಆಧಾರ ಗ್ರಂಥಗಳುಹೊನ್ನೆಅರಣ್ಯನೇಪಾಳಪರ್ಣಪಾತಿಭಾರತಮರಮಳೆಶ್ರೀಲಂಕಾ

🔥 Trending searches on Wiki ಕನ್ನಡ:

ಆರೋಗ್ಯಯಶ್(ನಟ)ಲಕ್ಷ್ಮಿಕೃತಕ ಬುದ್ಧಿಮತ್ತೆವಡ್ಡಾರಾಧನೆಆಯುಷ್ಮಾನ್ ಭಾರತ್ ಯೋಜನೆಬಸವರಾಜ ಬೊಮ್ಮಾಯಿನಿರುದ್ಯೋಗಭಾರತದ ರಾಷ್ಟ್ರೀಯ ಚಿನ್ಹೆಗಳುಚಂದ್ರಗುಪ್ತ ಮೌರ್ಯಈಡನ್ ಗಾರ್ಡನ್ಸ್ಏಡ್ಸ್ ರೋಗಶ್ರೀ ಕೃಷ್ಣ ಪಾರಿಜಾತಜಗನ್ನಾಥ ದೇವಾಲಯರಾಮಾನುಜಉಪನಯನಗುಪ್ತ ಸಾಮ್ರಾಜ್ಯಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆದೂರದರ್ಶನಅಲಾವುದ್ದೀನ್ ಖಿಲ್ಜಿಕಾಂತಾರ (ಚಲನಚಿತ್ರ)ಅಲ್ಲಮ ಪ್ರಭುವರದಕ್ಷಿಣೆಇಂಡಿಯನ್‌ ಎಕ್ಸ್‌ಪ್ರೆಸ್‌ಮೈಸೂರುಕನ್ನಡದಲ್ಲಿ ಕಾದಂಬರಿ ಸಾಹಿತ್ಯಭಾರತದ ನದಿಗಳುಪಂಚತಂತ್ರಶಾಸಕಾಂಗಮಾನವನ ಚರ್ಮಮಾನವ ಹಕ್ಕುಗಳುಕನ್ನಡ ಗುಣಿತಾಕ್ಷರಗಳುಜೋಡು ನುಡಿಗಟ್ಟುಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಆಶಿಶ್ ನೆಹ್ರಾಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ದಿಕ್ಸೂಚಿಕರ್ನಾಟಕದ ವಾಸ್ತುಶಿಲ್ಪಹದಿಹರೆಯಗಾಳಿಪಟ (ಚಲನಚಿತ್ರ)ಕ್ಯುಆರ್ ಕೋಡ್ಈಸ್ಟ್‌ ಇಂಡಿಯ ಕಂಪನಿಭಾರತೀಯ ಶಾಸ್ತ್ರೀಯ ನೃತ್ಯಜಂಟಿ ಪ್ರವೇಶ ಪರೀಕ್ಷೆಮೊದಲನೇ ಅಮೋಘವರ್ಷದಲಿತಹಾಕಿಚಿನ್ನಚದುರಂಗಸ್ವರವಾಣಿವಿಲಾಸಸಾಗರ ಜಲಾಶಯಕುರುಬಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಶರಣಬಸವೇಶ್ವರ ದೇವಸ್ಥಾನ ಕಲಬುರಗಿಸಿಂಹಗೋವಿಂದ ಪೈಭಾರತದಲ್ಲಿ ಕೃಷಿಕಪ್ಪೆ ಅರಭಟ್ಟದುರ್ಯೋಧನಶೈಕ್ಷಣಿಕ ಮನೋವಿಜ್ಞಾನದ್ವಿರುಕ್ತಿಗುಡಿಸಲು ಕೈಗಾರಿಕೆಗಳುವಿಚ್ಛೇದನಕನಕದಾಸರುವಿಜಯಪುರ ಜಿಲ್ಲೆಯ ತಾಲೂಕುಗಳುಭೌಗೋಳಿಕ ಲಕ್ಷಣಗಳುಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಕರ್ಬೂಜಗ್ರಹಸಂಸ್ಕೃತ ಸಂಧಿಇಮ್ಮಡಿ ಪುಲಿಕೇಶಿಭಾರತದ ರಾಜಕೀಯ ಪಕ್ಷಗಳುವಿನಾಯಕ ಕೃಷ್ಣ ಗೋಕಾಕಭಾರತದ ಸ್ವಾತಂತ್ರ್ಯ ಚಳುವಳಿಪರಮಾಣುಕಂಪ್ಯೂಟರ್🡆 More