ಬಳ್ಳಾರಿ ಸಿದ್ದಮ್ಮ

ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಅದಕ್ಕೂ ಪೂರ್ವದಲ್ಲಿ ಮಹಿಳೆಯರು ಹೋರಾಟದ ಮುಂಚೂಣಿಯಲ್ಲಿದ್ದರು.

ಬಳ್ಳಾರಿ ಸಿದ್ದಮ್ಮ
ಜನನ೧೯೦೩
ದುಂಡಸಿ,ಹಾವೇರಿ ತಾಲೂಕು,ಧಾರವಾಢ
ಮರಣ೧೯೮೨
ರಾಷ್ಟ್ರೀಯತೆಭಾರತೀಯರು

ಪ್ರಭಾವಗಳು
  • ಗಾಂಧೀಜಿ

ಪ್ರಭಾವಿತರು
  • ಸುಬ್ಬಮ್ಮ,ಟಿ.ಸುನಂದಮ್ಮ

ಬಳ್ಳಾರಿ ಸಿದ್ದಮ್ಮ

ಭಾರತವು ಸಂಪ್ರದಾಯಸ್ಥ ಸಮಾಜದ ಬುನಾದಿಯ ಮೇಲೆ ನಿಂತಿದೆ. ಪುರುಷ ಪ್ರಧಾನ ಸಮಾಜವಾದುದರಿಂದ ಮಹಿಳೆಯನ್ನು ಅಬಲೆ, ಅಶಕ್ತಳು, ಬುದ್ದಿಗೇಡಿ ಎಂದೆಲ್ಲ ಹೀಗಳೆಯುವುದನ್ನು ನೋಡಿದ್ದೇವೆ. ಅದರೆ ಉಲ್ಲಾಳದ ರಾಣಿ ಅಬ್ಬಕ್ಕದೇವಿ,ಕಿತ್ತೂರುರಾಣಿ ಚನ್ನಮ್ಮ,ಒನಕೆ ಓಬವ್ವ, ಬೆಳವಾಡಿ ಮಲ್ಲಮ್ಮ, ಕೆಳದಿ ಮತ್ತು ಇಕ್ಕೇರಿ ಸಂಸ್ಥಾನದ ರಾಣಿ ಚನ್ನಮ್ಮಾಜಿ ಹೀಗೆ ಹಲವಾರು ವೀರ ವನಿತೆಯರು ಹೆಸರುವಾಸಿಯಾಗಿದ್ದಾರೆ. ಇದರ ಹತ್ತರಷ್ಟು ಮಹಿಳೆಯರು ಪರೋಕ್ಷವಾಗಿ ಪರೋಕ್ಷ ಹೋರಾಟ ಮಾಡಿದ್ದಾರೆ. ಆದರೆ ಅವರು ಬೆಳಕಿಗೆ ಬಾರದಿರಬಹುದು. ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಮಂದಿ ಹೋರಾಡಿದ್ದಾರೆ. ಕೆಲವರು ಬೆಳಕಿಗೆ ಬಂದರೆ ಮತ್ತೆ ಕೆಲವರು ಬೆಳಕಿಗೆ ಬರಲಿಲ್ಲ. ಕೆಲವರು ಕರ್ನಾಟಕ ಏಕೀಕರಣದಲ್ಲಿ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಸ್ವಾತಂತ್ರ್ಯಾನಂತರ ಫಲಾಪೇಕ್ಷೆಯಿಲ್ಲದೆ ತೆರೆಯ ಮರೆಗೆ ಸರಿದದ್ದೂ ಊಂಟು. ಅಂತಹವರಲ್ಲಿ ಪ್ರಮುಖ ಮಹಿಳೆ ಎಂದರೆ 'ಬಳ್ಳಾರಿ ಸಿದ್ದಮ್ಮ'ನವರು.

ಬಾಲ್ಯ

ಬಳ್ಳಾರಿ ಸಿದ್ದಮ್ಮನವರು ಬಳ್ಳಾರಿ ಜಿಲ್ಲೆ ಹಾವೇರಿ ತಾಲ್ಲೂಕಿನ ದುಂಡಸಿ ಗ್ರಾಮದ ಸಂಪ್ರದಾಯಸ್ಥ ಲಿಂಗಾಯತ ಸಮುದಾಯದ ಕುಟುಂಬದಲ್ಲಿ ೧೯೦೦ರಲ್ಲಿ ಜನಿಸಿದರು. ಇವರ ತಂದೆ ತಾಯಂದಿರು ಬಸೆಟಪ್ಪ ಮತ್ತು ಶಿವಮ್ಮ. ಬಸೆಟಪ್ಪ(ಬಸಪ್ಪ)ನವರು ಮಧ್ಯಮ ಪ್ರಮಾಣದ ವ್ಯಾಪಾರಸ್ಥರು. ಈಗಾಗಲೇ ತಿಳಿಸಿರುವಂತೆ ಸಂಪ್ರದಾಯಸ್ಥ ಸಮಾಜ ಇಂತಹ ಸಮಾಜದಲ್ಲಿ ಹೆಣ್ನುಮಕ್ಕಳನ್ನು ಶಾಲೆಗೆ ಕಳುಹಿಸುವ ಪದ್ದತಿ ಇರಲಿಲ್ಲ. ಅವರ ಕಲಿಕೆ ಏನಿದ್ದರೂ ಮನೆಯ ನಾಲ್ಕು ಗೋಡೇಗಳ ಮಧ್ಯೆ. ಸಿದ್ದಮ್ಮಳಿಗೆ ಕಲಿಯಬೇಕೆಂಬ ಇಚ್ಛೀಯಿದ್ದರೂ ತಂದೆತಾಯಂದಿರು ಅದಕ್ಕೆ ವಿರೋಧ ಮಾಡಿದರು.ಅದಕ್ಕೆ ವಿರೋಧ ಮಾಡಿದರು. ಕದ್ದುಮುಚ್ಚಿ ನಾಲ್ಕನೆಯ ಇಯತ್ತಿನ ತನಕ ವ್ಯಾಸಂಗ ಮಾಡಿದ್ದಾಯ್ತು. ಪ್ರಾಪ್ತ ವಯಸ್ಸಿಗೆ ಬರುತ್ತಲೇ ಬಳ್ಳಾರಿಯ ಮುರುಗಪ್ಪನವರೊಂದಿಗೆ ವಿವಾಹವಾಯ್ತು. ಸುಖ ದಾಂಪತ್ಯ ಮನೆಯಲ್ಲಿ ಯಾವುದಕ್ಕೊ ಕೊರತೆ ಇರಲಿಲ್ಲ.

ಗಾಂಧಿಯವರು ಪ್ರಭಾವ

ರಾಷ್ಟ್ರೀಯ ಆಂದೋಲನವು ಇಡೀ ದೇಶವನ್ನು ವ್ಯಾಪಿಸಿತು. ಅದರಲ್ಲೂ ಮಹಾತ್ಮ ಗಾಂಧಿಯವರು ಪ್ರಭಾವದಿಂದಾಗಿ ೧೯೨೦ರಲ್ಲಿ ಆಸಹಕಾರ ಚಳುವಳಿ,೧೯೩೦ರಲ್ಲಿ ಉಪ್ಪಿನ ಸತ್ಯಾಗ್ರಹಗಳು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಛನ್ನು ವಿದ್ಯಾವಂತರಲ್ಲದಿದ್ದರೂ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅವರ ಮನಸ್ಸು ತುಡಿಯುತ್ತಿತ್ತು. ತಿಲಕರ ಕೇಸರಿ, ಮರಾಠಿ ಪತ್ರಿಕೆಗಳು ಹಾಗು ನೌಕಳು ಪತ್ರಿಕೆಯು ಅವರ ಮೇಲೆ ಪ್ರಬಾವ ಬೀರಿತು. ಮಹಾತ್ಮ ಗಾಂಧೀಜಿಯವರನ್ನು ನೋಡಿರದಿದ್ದರೂ ಅವರ ಪ್ರಭಾವ ಮುರುಗಪ್ಪ ದಂಪತಿಗಳ ಮೇಲೆ ಬಿದ್ದಿತು. ಸಿದ್ದಮ್ಮನವರಿಗೆ ಗಾಂಧೀಜಿಯವರನ್ನು ನೋಡಬೇಕು, ಆ ಮಹಾತ್ಮನೊಂದಿಗೆ ಮಾತನಡಬೇಕು, ಅವರ ಎಲ್ಲಿ ಇರುತ್ತಾರೆ, ಎಲ್ಲಿ ಸಿಗುತ್ತಾರೆ ಎಂಬ ಕುತೂಹಲ. ಗಾಂಧೀಜಿಯವರನ್ನು ನೋಡಬೇಕೆಂದರೆ ವಾರ್ದಾದ ಅವರ ಆಶ್ರಮಕ್ಕೆ ಹೋದರೆ ಸಿಗುತ್ತಾರೆ ಎಂದು ತಿಳಿಯಿತು.ಅಲ್ಲಿಗೆ ಹೋಗಿ ಬರಲು ಹಣ ಬೇಕು. ಕೆಲವು ಕಾಲ ಅಲ್ಲಿಯೇ ತಂಗಬೇಕು. ಇವೇ ಮುಂತಾದ ಪ್ರಶ್ನೆಗಳು ಬಂದಾಗ ಉತ್ತರ ಸಿದ್ದಮ್ಮನವರಲ್ಲಿತ್ತು. ಮನಸ್ಸಿದ್ದರೆ ಮಹಾದೇವ.

ಗಾಂಧೀಜಿಯವರ ಆಶ್ರಮದಲ್ಲಿ ಸಿದ್ದಮ್ಮನವರು

ಗಾಂಧೀಜಿಯವರನ್ನು ನೋಡಲೇಬೇಕು ಅವರೊಂದಿಗೆ ಮಾತನಾಡಲೇಬೇಕು ಎಂಬ ಹಂಬಲದಿಂದ ಗುಜರಾತಿನ ವಾರ್ದಾಕ್ಕೆ ತೆರಳಿದರು ಸಿದ್ದಮ್ಮನವರು. ಗಾಂಧೀಜಿಯವರನ್ನು ನೋಡಿ ಅವರೊಂದಿಗೆ ಮಾತನಾಡಿದರು. ಗಾಂಧೀಜಿಯವರ ಪ್ರಭಾವ ಸಿದ್ದಮ್ಮನವರ ಮೇಲೆ ಬಿತ್ತು. ಆಶ್ರಮದಲ್ಲಿದ್ದ ಸಮಯದಲ್ಲಿ ಸ್ವಚ್ಛತಾ ಕೆಲಸ ಅಂದರೆ ಕಸಗುಡಿಸುವುದು, ಪಾತ್ರೆ ತೊಳೆಯುವುದು, ದವಸ ದಾನ್ಯಗಳಲ್ಲಿರುವ ಕಲ್ಲು, ಕಡ್ಡಿ ತೆಗೆಯುವುದು. ಹಿತಮಿತವಾದ ಭೋಜನ. ಬೆಳಿಗ್ಗೆ ನಿತ್ಯಕರ್ಮಗಳಾದ ಮೇಲೆ ದೇವರ ಪ್ರಾರ್ಥನೆ, ಭಜನೆ ಇವೇ ಮುಂತಾದವು ಕಡ್ಡಾಯವಾಗಿತ್ತು. ರಾಶ್ಟ್ರೇದ ನಾಯಕರಗಳಾದ ಸರ್ದಾರ್ ವಲ್ಲಭಬಾಯಿ ಪಟೇಲ್, ರಾಜಗೋಪಾಚಾರಿ, ಕಾಮರಾಜ್ ಇವರೇ ಮುಂತಾದವರನ್ನು ಕಾಣಾವ ಭಾಗ್ಯ ದೊರೆಯಿತು. ತಾನೂ ಅಂತಹ ನಾಯಕಿಯಾಗಬೇಕೆಂಬ ಹಂಬಲ ಸಿದ್ದಮ್ಮನವರಲ್ಲಿ ಮೂಡಿತು. ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳಬೇಕು ಎಂಬ ತೀರ್ಮಾನಿಸಿದರು. ಕರ್ನಾಟಕ ರಾಜ್ಯವು ಅಂದು ಹರಿದು ಹಂಚಿಹೋಗಿತ್ತು. ಒಂದೆಡೆ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ನಡೆಯುತ್ತಿದ್ದರೆ ಮತೋಂದೆಡೆ ಸ್ವಾತಂತ್ಯಕ್ಕಾಗಿ ಹೋರಾಟ ನಡೆಯುತ್ತಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಹಳೇ ಮೈಸೂರು ಭಾಗದಲ್ಲಿ ಓತಪ್ರೇತನವಾಗಿ ಬ್ರಿಟಿಷರ ಹಾಗೂ ಆಳರಸರ ವಿರುದ್ದ ಚಳುವಳಿ ನಡೆಯುತ್ತಿತ್ತು. ಕರ್ನಾಟಕದಲ್ಲಿ ರಾಷ್ಟ್ರೀಯ ಆಂದೋಲನದಲ್ಲಿ ಮಹಿಳೆಯರೂ ಕೂಡ ಭಾಗವಹಿಸಿ ಚಳುವಳಿ ಮಾಡಿರುವ ಕೆಲವರನ್ನು ಮಾತ್ರ ಇಲ್ಲಿ ಹೆಸರಿಸಬಹುದು.ಅವರುಗಳೆಂದರೆ- ೧. ಕಮಲಾದೇವಿ ಚಟ್ಟೋಪಾಧ್ಯಾಯ(ಮಂಗಳೂರು) ೨.ಉಮಾಬಾಯಿ ಕುಂದಪುರ(ಹುಬ್ಬಳ್ಳಿ) ೩.ಬಳ್ಲಾರಿ ಸಿದ್ದಮ್ಮ(ಹಾವೇರಿ) ೪.ನಾಗಮ್ಮ ಪಾಟೀಲ(ಹುಬ್ಬಳ್ಳಿ) ೫.ಯಶೋಧರಮ್ಮ ದಾಸಪ್ಪ(ಬೆಂಗಳೂರು)

ಇವರುಗಳಲ್ಲಿ ಯಶೋಧರಮ್ಮನವರು ಮತ್ತು ಬಳ್ಳಾರಿ ಸಿದ್ದಮ್ಮನವರು ಮುಂಚೂಯಲ್ಲಿದ್ದು ಚಳುವಳಿಗಾರರನ್ನು ಹರಿದುಂಬಿಸುತ್ತಿದ್ದರು. ಪೋಲಿಸರಿಗೆ ಹೆದರದೆ ಭಾಷಣ ಮಾಡುತ್ತಿದ್ದರು. ಪ್ರತಿಯೊಬ ವ್ಯಕ್ಥಿಗೂ ಜೀವನದಲ್ಲಿ ಒಂದು ಅವಕಾಶ ಸಿಗುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಇಲ್ಲದಿದ್ದರೆ ಅದು ಕೈತಪ್ಪಿ ಹೋಗುತ್ತದೆ. ಅಂತಹ ಒಂದು ಅವಕಾಶ ಸಿದ್ದಮ್ಮನವರಿಗೆ ಲಭಿಸಿತು. ಅವೇ ಮಂಢ್ಯ ಜಿಲ್ಲೆ, ಮದ್ದೂರು ತಾಲ್ಲೂಕು ಶಿವಪುರದಲ್ಲಿ ನಡೆದ ಧ್ವಜಸತ್ಯಾಗ್ರಹ. ಸಿದ್ದಮ್ಮನವರು ಬಳ್ಳಾರಿ ದಾವಣಗೆರೆ,ಚಿತ್ರದುರ್ಗ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಚಳುವಳಿಗಳು ಹರತಾಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಶ್ರೀಯುತರುಗಳಾದ ಎಸ್.ನಿಜಲಿಂಗಪ್ಪ, ಟಿ.ಸಿದ್ದಲಿಂಗಯ್ಯ, ಕೆ.ಎಸ್.ಪಾಲರು ಹಾಗೂ ಇನ್ನಿತರ ಮುಖಂಡರು ಚಳುವಳಿಯನ್ನು ಹಬ್ಬಿಸುತ್ತಿದ್ದರು. ಸಿದ್ದಮ್ಮನವರು ಈ ನಾಯಕರುಗಳಿಗೆ ಸಾತ್ ನೀಡುತ್ತಿದ್ದರು.

ಶಿವಪುರ ದ್ವಜಸತ್ಯಾಗ್ರಹದಲ್ಲಿ ಸಿದ್ದಮ್ಮನವರ

ಇಡೀ ರಾಜ್ಯದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ದ್ವಜವನ್ನು ಸಾರ್ವಜನಿಕವಾಗಿ ಧ್ವಜಾರೋಹಣ ಮಾಡಲು ಒಂದು ಸ್ವಾಗತ ಸಮಿತಿಯನ್ನು ರಚಿಸಿಕೊಂಡರು. ಇದೊಂದು ಭಾರೀ ಪ್ರಮಾಣದ ಸಭೆಯಾದುದರಿಂದ ಹೆಚ್ಚಾಗಿ ಹಣಕಾಸಿನ ಅಗತ್ಯವಿದ್ದಿತು. ಆ ಕಾರಣದಿಂದಾಗಿಯೇ ಸಾಹುಕಾರ್ ಚನ್ನಯ್ಯನವರನ್ನು ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರು. ಹೆಚ್.ಕೆ.ವೀರಣ್ನಗೌಡರು ಕಾರ್ಯದರ್ಶಿಗಲಳು ಕೊಪ್ಪದ ಜೋಗಿಗೌಡರನ್ನು ಖಜಾಂಚಿಯನ್ನಾಗಿಯೂ ಎಂ.ಎನ್.ಜೋಯಿಸ್ರವರನ್ನು ಜೆ.ಓ.ಸಿ.ಯನ್ನಾಗಿ ನೇಮಕ ಮಾಡಿರುವುದಗಿ ಪ್ರಕಟಿಸಿದರು. ಶಿವಪುರದಲ್ಲಿ ತಿರುಮಲೇಗೌಡರ ಜಾಗದಲ್ಲಿ ಧ್ವಜಾರೋಹಣ ಮಾಡಲು ತೀರ್ಮಾನಿಸಿದರು. ಸಭೆ ನಡೆಯುವ ಒಂದು ವಾರ ಮೊದಲೇ ಹೆಚ್.ಸಿ.ದಾಸಪ್ಪ, ಯಶೋಧರ ದಾಸಪ್ಪ, ಬಳ್ಳಾರಿ ಸಿದ್ದಮ್ಮ, ತಾಯಮ್ಮ ವೀರಣ್ಣಗೌಡ, ವೆಂಕಮ್ಮ ಸೀತಾರಾಮಯ್ಯ ಇಂದಿರಾಬಾಯಿ ಕೃಷ್ಣಮೂರ್ತಿ ಇನ್ನೂ ಮುಂತಾದ ನಾಯಕರು ಶಿವಪುರಕ್ಕೆ ಬಂದಿಳಿದರು. ಮಹಿಳೆಯರು ಒಂದೊಂದು ತಂಡಗಳನ್ನಾಗಿ ಮಾಡಿಕೊಂಡು ಹಳ್ಳಿಗಳಿಗೆ ತೆರಳಿ ಗ್ರಾಮಗಳ ಮಹಿಳೆಯರು ಚಳುವಳಿಯಲ್ಲಿ ಭಾಗವಹಿಸುವಂತೆ ಮಾಡುತ್ತಿದ್ದರು. ಸಿದ್ದಮ್ಮನವರು ಬಳ್ಳಾರಿಯಿಂದ ಶಿವಪುರದಂತಹ ಹಳ್ಳಿಗೆ ಬಂದು ಜನರನ್ನು ಹುರಿದುಂಬಿಸುತ್ತಿರುವುದನ್ನು ನೋಡಿದ ಜನ ಸ್ವಇಚ್ಛೆಯಿಂದ ಚಳುವಳಿಗೆ ಧುಮುಕಿದರು. ಹೆಚ್.ಕೆ.ವೀರಣ್ಣಗೌಡ, ಹೆಚ್.ಸಿ.ದಾಸಪ್ಪ, ಸಾಹುಕಾರ್ ಚನ್ನಯ್ಯ ಇನ್ನೂ ಮುಂತಾದವರು ಟಿ. ಸಿದ್ದಲಿಂಗಯ್ಯನವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದರು. ಇಂದಿನ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಶಿವಪುರದಲ್ಲಿ ೧೯೩೮ ಏಪ್ರಿಲ್ ೧೧, ೧೨ ಹಾಗೂ ೧೩ರಂದು ಕಾಂಗ್ರೆಸ್ ದ್ವಜವನ್ನು ಹಾರಿಸಲು ತೀರ್ಮಾನಿಸಿದರು.ಇದನ್ನು ಶಿವಪುರ ರಾಷ್ಟ್ರಕೂಟವೆಂದು ಕರೆದರು. ೧೯೩೮ ಏಪ್ರಿಲ್ ೧೧ನೇ ತಾರೀಖು ಶಿವಪುರದಲ್ಲಿ ಮೂವತ್ತು ಸಾವಿರ ಜನ ಸೇರಿದರು. ಜಿಲ್ಲಾ ಮ್ಯಾಜಿಸ್ಟ್ರೇಟರಾದ ಜಿ.ಎಂ.ಮೇಕ್ರಿಯವರು ಶಿವಪುರ ಸುತ್ತಮುತ್ತ ಧ್ವಜಾರೋಹಣ ಮಾಡದಂತೆ ನಿಷೇಧಾಜ್ನೆಯನ್ನು ಜಾರಿಗೆ ತಂದತು. ೧೧ನೇ ತಾರೀಖು ಟಿ. ಸಿದ್ದಲಿಂಗಯ್ಯನವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಟಿ ಸಿದ್ದಲಿಂಗಯ್ಯನವರು ಧ್ವಜಾರೋಹಣ ಮಾಡಲಾಗಿ ಅವರನ್ನು ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಕರೆದುಕೊಂಡು ಹೋದರು. ಸ್ತ್ರೀ ಮುಖಂಡರು ವೇದಿಕೆಯ ಮೇಲೆ ಕುಳಿತಿದ್ದರು. ಸಿದ್ದಲಿಂಗಯ್ಯನವರು ತರುವಾಯ ಹೆಚ್.ಸಿ.ದಾಸಪ್ಪನವರು, ಎಂ.ಎಸ್.ಜೋಯಿಸ್, ಯಶೋಧರ ದಾಸಪ್ಪನವರು, ನಂತರ ಬಳ್ಳಾರಿ ಸಿದ್ದಮ್ಮನವರು ಧ್ವಜಾರೋಹಣ ಮಾಡಿದರು. ಇವರುಗಳನ್ನು ಬಂಧಿಸಿ ಮಂಡ್ಯದ ಜಿಲ್ಲಾ ನ್ಯಾಯಾಲಯಕ್ಕೆ ಕರೆದೂಯ್ದರು. ಬಳ್ಳಾರಿ ಸಿದ್ದಮ್ಮನವರಿಗೆ ಶಿಕ್ಷೆಯಾಯಿತು. ಏಪ್ರಿಲ್ ೧೩ನೇ ತಾರೀಖು ಸಾಯಂಕಾಲ ರಾಷ್ಟ್ರಕೂಟ ಸಮಾಪ್ತ.

ವಿದುರಾಶ್ವತ್ಥ ಧ್ವಜಸತ್ಯಾಗ್ರಹದಲ್ಲಿ ಸಿದ್ದಮ್ಮನವರು

ಶಿವಪುರದಲ್ಲಿ ನಡೆದ ಧ್ವಜಸತ್ಯಾಗ್ರಹವು ಚಳುವಳಿಗಾರರಿಗೆ ಸ್ಫೂರ್ತಿಯಾಯಿತು. ತಮ್ಮ ತಮ್ಮ ಪಟ್ಟಣಗಳಲ್ಲಿ ಧ್ವಜಾರೋಹಣ ಮಾಡಲು ಜನ ಮುಂದಾದರು. ಅದೇರೀತಿ ಕೋಲಾರ ಜಿಲ್ಲೆ ಗೌರಿಬಿದನೂರಿನ ವಿದುರಾಶ್ವತ್ಥ ಎಂಬಲ್ಲಿ ಧ್ವಜಸತ್ಯಾಗ್ರಹ ಏರ್ಪಾಡಯಿತು. ಈಗಾಗಲೇ ತಿಳಿಸಿರುವಂತೆ ಶಿವಪುರ ರಾಷ್ಟ್ರಕೂಟದ ಪ್ರಭಾವದಿಂದಾಗಿ ಬಳ್ಳಾರಿ ಸಿದ್ದಮ್ಮನವರು ಸೇರಿದಂತೆ ಕೆಲವು ಮಹಿಳಾ ಮುಖಂಡರು ವಿದುರಾಶ್ವತ್ಥಕ್ಕೆ ಬಂದಿಳಿದು ಧ್ವಜಾರೋಹಣ ಮಾಡಿದರು. ಜಿಲ್ಲಾ ಮ್ಯಾಜಿಸ್ಟ್ರೇಟರ ಆಜ್ನೆಯಂತೆ ಪೋಲಿಸರು ಚಳುವಳಿಕಾರರ ಮೇಲೆ ಗುಂಡು ಹಾರಿಸಿದರು. ಕೆಲವರು ಅಸುನೀಗಿದರು. ಗರ್ಭಿಣಿ ಸ್ತ್ರೀಯೊಬ್ಬಳು ಈ ಗೋಲಿಬಾರ್ನಲ್ಲಿ ಅಸುನೀಗಿದಳು ಎಂದು ಸುಳ್ಳು ಸುದ್ದಿ ಹರಡಿತು. ಜನ ರೊಚ್ಚಿಗೆದ್ದು ದಾಂದಲೆ ನಡೆಸಿದರು. ಇದು ರಾಷ್ಟೀಯ ಸುದ್ದಿಯಾಯಿತು. ಮಹಾತ್ಮ ಗಾಂಧಿಯವರಿಗೆ ಈ ವಿಷ್ಯಯದ ಸತ್ಯಾಂಶವನ್ನು ತಿಳಿದು ಬರುವಂತೆ ಆಚಾರ್ಯ ಕೃಪಲಾನಿ ಮತ್ತು ಸರ್ದಾರ್ ವಲ್ಲಭಬಾತಯಿ ಪಟೇಲರನ್ನು ಕಳುಹಿಸಿಕೊಟ್ಟರು.

ಉಲ್ಲೇಖನೆಗಳು

Tags:

ಬಳ್ಳಾರಿ ಸಿದ್ದಮ್ಮ ಬಳ್ಳಾರಿ ಸಿದ್ದಮ್ಮ ಬಾಲ್ಯಬಳ್ಳಾರಿ ಸಿದ್ದಮ್ಮ ಗಾಂಧಿಯವರು ಪ್ರಭಾವಬಳ್ಳಾರಿ ಸಿದ್ದಮ್ಮ ಗಾಂಧೀಜಿಯವರ ಆಶ್ರಮದಲ್ಲಿ ಸಿದ್ದಮ್ಮನವರುಬಳ್ಳಾರಿ ಸಿದ್ದಮ್ಮ ಶಿವಪುರ ದ್ವಜಸತ್ಯಾಗ್ರಹದಲ್ಲಿ ಸಿದ್ದಮ್ಮನವರಬಳ್ಳಾರಿ ಸಿದ್ದಮ್ಮ ವಿದುರಾಶ್ವತ್ಥ ಧ್ವಜಸತ್ಯಾಗ್ರಹದಲ್ಲಿ ಸಿದ್ದಮ್ಮನವರುಬಳ್ಳಾರಿ ಸಿದ್ದಮ್ಮ ಉಲ್ಲೇಖನೆಗಳುಬಳ್ಳಾರಿ ಸಿದ್ದಮ್ಮಅಬ್ಬಕ್ಕದೇವಿಒನಕೆ ಓಬವ್ವ

🔥 Trending searches on Wiki ಕನ್ನಡ:

ಪಾಕಿಸ್ತಾನಕನ್ನಡ ಗುಣಿತಾಕ್ಷರಗಳುಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುಕೃಷ್ಣಾ ನದಿಕರ್ನಾಟಕ ಯುದ್ಧಗಳುಕನ್ನಡ ಕಾಗುಣಿತಚಂದ್ರಗುಪ್ತ ಮೌರ್ಯಜಾಗತಿಕ ತಾಪಮಾನ ಏರಿಕೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಯಜಮಾನ (ಚಲನಚಿತ್ರ)ನೇಮಿಚಂದ್ರ (ಲೇಖಕಿ)ಮೈಸೂರುಭಾರತದ ಬುಡಕಟ್ಟು ಜನಾಂಗಗಳುಕರ್ನಾಟಕಪ್ಯಾರಾಸಿಟಮಾಲ್ಶಾಲೆಪ್ರಾಥಮಿಕ ಶಾಲೆಕಲ್ಕಿಜ್ಯೋತಿಷ ಶಾಸ್ತ್ರಅಗಸ್ತ್ಯಎಕರೆಭಾರತ ಬಿಟ್ಟು ತೊಲಗಿ ಚಳುವಳಿಕರ್ಮಧಾರಯ ಸಮಾಸಮುಹಮ್ಮದ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಆರ್ಯಭಟ (ಗಣಿತಜ್ಞ)ಕಾಗೋಡು ಸತ್ಯಾಗ್ರಹಕ್ರೀಡೆಗಳುಕಂಪ್ಯೂಟರ್ಹನುಮಾನ್ ಚಾಲೀಸರಾಯಲ್ ಚಾಲೆಂಜರ್ಸ್ ಬೆಂಗಳೂರುಜವಾಹರ‌ಲಾಲ್ ನೆಹರುಜಶ್ತ್ವ ಸಂಧಿವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಗಣಗಲೆ ಹೂಹಾಸನಭಾರತದಲ್ಲಿ ತುರ್ತು ಪರಿಸ್ಥಿತಿಮಾಸಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ರಾಜಕೀಯ ಪಕ್ಷಜಾಗತೀಕರಣಬಿಳಿಗಿರಿರಂಗಚಂದ್ರಶೇಖರ ಪಾಟೀಲಅಕ್ಬರ್ಹಕ್ಕ-ಬುಕ್ಕಕೊಲ್ಲೂರು ಮೂಕಾಂಬಿಕಾ ದೇವಸ್ಥಾನಮುಪ್ಪಿನ ಷಡಕ್ಷರಿಶಬ್ದಮಣಿದರ್ಪಣಸಿದ್ಧರಾಮಯೋಗಹರಪ್ಪಸಾಹಿತ್ಯರಾಷ್ಟ್ರೀಯತೆಆಂಡಯ್ಯಮಲ್ಲಿಕಾರ್ಜುನ್ ಖರ್ಗೆರಾಮ ಮನೋಹರ ಲೋಹಿಯಾಕೇಂದ್ರ ಲೋಕ ಸೇವಾ ಆಯೋಗಸೀಬೆಶಿಶುನಾಳ ಶರೀಫರುಕನ್ನಡ ಸಂಧಿಸೂರ್ಯನೀನಾದೆ ನಾ (ಕನ್ನಡ ಧಾರಾವಾಹಿ)ಶೈಕ್ಷಣಿಕ ಮನೋವಿಜ್ಞಾನಕವಿಧೃತರಾಷ್ಟ್ರಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗ್ರಹಪದಬಂಧಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುತ್ರಿಪದಿಪ್ರೇಮಾಹದಿಬದೆಯ ಧರ್ಮಕಾಂಕ್ರೀಟ್ಭಾರತದ ಆರ್ಥಿಕ ವ್ಯವಸ್ಥೆಶ್ರೀ ರಾಘವೇಂದ್ರ ಸ್ವಾಮಿಗಳುಬಿ.ಜಯಶ್ರೀ🡆 More