ಚಿತ್ರದುರ್ಗ

ಚಿತ್ರದುರ್ಗ ನಗರ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಕೇಂದ್ರ ನಗರ.

ಈ ನಗರವು ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು 200ಕಿಮೀ ದೂರದಲ್ಲಿದೆ.

ಚಿತ್ರದುರ್ಗ
ಚಿತ್ರದುರ್ಗ
ನಗರ
Population
 (2019)
 • Total೧,೭೫,೧೭೦
Websitehttp://www.chitradurgacity.gov.in/
ಚಿತ್ರದುರ್ಗ
ಚಿತ್ರದರ್ಗದ ಕೋಟೆ

ಹೆಸರಿನ ಮೂಲ

ಚಿತ್ರದುರ್ಗ ನಗರವು ಪುರಾಣದ ಪ್ರಕಾರ ಶ್ರೀಕೃಷ್ಣ ಜಾಂಬವತಿಯ ಪುತ್ರನಾದ ಚಿತ್ರಕೇತು ಆಳ್ವಿಕೆ ಮಾಡಿದ ಪ್ರದೇಶ. ಚಿತ್ರದುರ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಲುಬೆಟ್ಟಗಳಿಂದ ಹಾಗೂ ಹುಲ್ಲುಗಾವಲು ಗಳಿಂದ ಕೂಡಿದ ದುರ್ಗಮ ಪ್ರದೇಶವಾಗಿತ್ತು. ಅಂತಹ ದುರ್ಗಮ ಪ್ರದೇಶವನ್ನು ಚಿತ್ರಕೇತು ಆಳ್ವಿಕೆ ಮಾಡಿದ ಕಾರಣದಿಂದ ಚಿತ್ರದುರ್ಗ ಎಂದು ಹೆಸರು ಬರಲು ಕಾರಣವಾಗಿದೆ. ಬ್ರಿಟೀಷರ ಕಾಲದಲ್ಲಿ ಚಿತ್ತಲ್‍ದ್ರಗ್ ಅಧಿಕೃತ ಹೆಸರಾಗಿತ್ತು. ಇದ್ದರಿಂದ ಚಿತ್ರದುಗ೯ ಎಂದು ಕರೆಯುತ್ತಾರೆ ಇಲ್ಲಿ ಕಲ್ಲಿನ ಕೋಟೆ ಇದೆ

ಜನಸಂಖ್ಯಾ ವಿವರ

೨೦೧೧ರ ಜನಗಣತಿಯ ಪ್ರಕಾರ, ಚಿತ್ರದುರ್ಗ ನಗರದ ಜನಸಂಖ್ಯೆ ೧,೨೫,೧೭೦. ಇವರಲ್ಲಿ ಪುರಷರು ಸುಮಾರು ೫೧% ರಷ್ಟು ಇದ್ದರೆ, ಮಹಿಳೆಯರು ಸುಮಾರು ೪೯% ರಷ್ಟು ಇದ್ದಾರೆ. ಚಿತ್ರದುರ್ಗದ ಸರಾಸರಿ ಸಕ್ಷಾರತಾ ಪ್ರಮಾಣ ೭೯%, ರಾಷ್ಟ್ರೀಯ ಸರಾಸರಿಗಿಂತೆ(೫೯.೫%) ಹೆಚ್ಚಾಗಿದೆ. ಪುರುಷರ ಸಕ್ಷಾರತಾ ಪ್ರಮಾಣ ೮೦% ಮತ್ತು ಮಹಿಳೆಯರ ಸಕ್ಷಾರತಾ ಪ್ರಮಾಣ ೭೨%. ಚಿತ್ರದುರ್ಗದಲ್ಲಿ ಸುಮಾರು ೧೧% ರಷ್ಟು ಜನರು ೬ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.

ಆಡಳಿತ

ಚಿತ್ರದುರ್ಗ ನಗರದ ಆಡಳಿತವನ್ನು "ಚಿತ್ರದುರ್ಗ ನಗರ ಮುನ್ಸಿಪಲ್ ಕೌನ್ಸಿಲ್" ನೆಡೆಸುತ್ತದೆ.

ಐತಿಹಾಸಿಕ ಸ್ಥಳಗಳು

ಚಿತ್ರದುರ್ಗ ಕೋಟೆ

ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ಮತ್ತು ಚಿತ್ರದುರ್ಗದ ನಾಯಕರು ಸೇರಿದ ಹಲವು ರಾಜರು ಚಿತ್ರದುರ್ಗ ಕೋಟೆಯನ್ನು ಸುಮಾರು ೧೦ರಿಂದ ೧೮ನೇ ಶತಮಾನದವರೆಗೆ ಕಟ್ಟಿದರು.

ಚಂದ್ರವಳ್ಳಿ ಗುಹೆಗಳು

ಚತ್ರದುರ್ಗ, ಚೋಲಗುಡ್ಡ ಮತ್ತು ಕಿರುಬನಕಲ್ಲು ಗುಡ್ಡಗಳ ನಡುವೆ ಚಂದ್ರವಳ್ಳಿ ಗುಹೆಗಳಿವೆ. ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ದೇವಾಲಯ. JOGIMATTI

ಅಶೋಕ ಸಿದ್ದಾಪುರ :

ಅಶೋಕ ಸಿದ್ದಾಪುರ ಚಿತ್ರದುರ್ಗ ಜಿಲ್ಲೆಯ ಒಂದು ಪ್ರಮುಖ ಪುರಾತತ್ವ ಸ್ಥಳವಾಗಿದ್ದು, ಅಲ್ಲಿಂದ ಅಶೋಕ ಚಕ್ರವರ್ತಿಯ ಶಾಸನಗಳನ್ನು ಉತ್ಖನನ ಮಾಡಲಾಗಿದೆ. ರಾಮಾಯಣದಲ್ಲಿ ಉಲ್ಲೇಖಿಸಲಾದ ರಾಮಗಿರಿ ಎಂಬ ಗುಡ್ಡಗಾಡು ಹತ್ತಿರದಲ್ಲಿದೆ. ರಾವಣನು ಸೀತೆಯನ್ನು ಅಪಹರಿಸಿ ಮತ್ತೆ ಲಂಕಾಕ್ಕೆ ಪ್ರಯಾಣಿಸುತ್ತಿದ್ದಾಗ, ಪೌರಾಣಿಕ ಹದ್ದು ಜಟಾಯು ಇಲ್ಲಿ ಅವನೊಂದಿಗೆ ಹೋರಾಡಿದನೆಂದು ನಂಬಲಾಗಿದೆ. ಜಟಾಯು ಯುದ್ಧದಲ್ಲಿ ಪ್ರಾಣ ಕಳೆದುಕೊಂಡರು ಮತ್ತು ನಂತರ, ಜಟಾಯುವಿನ ಕೊನೆಯ ಆಚರಣೆಗಳನ್ನು ಪೂರ್ಣಗೊಳಿಸಿದ ನಂತರ, ರಾಮನು ಆ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪಿಸಿದನು. ರಾಮೇಶ್ವಾ ಎಂದು ಕರೆಯಲ್ಪಡುವ ದೇವಾಲಯ

ಹವಾಮಾನ

ಚಿತ್ರದುರ್ಗದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) 28.9
(84)
32.1
(89.8)
35.0
(95)
36.3
(97.3)
35.0
(95)
30.5
(86.9)
28.1
(82.6)
28.1
(82.6)
29.1
(84.4)
29.5
(85.1)
28.3
(82.9)
28.0
(82.4)
30.74
(87.33)
ಕಡಮೆ ಸರಾಸರಿ °C (°F) 16.8
(62.2)
18.9
(66)
21.1
(70)
22.6
(72.7)
22.3
(72.1)
21.4
(70.5)
20.9
(69.6)
20.5
(68.9)
20.3
(68.5)
20.3
(68.5)
18.2
(64.8)
16.6
(61.9)
19.99
(67.97)
ಸರಾಸರಿ ಮಳೆ mm (inches) 0
(0)
1
(0.04)
4.0
(0.157)
36
(1.42)
81
(3.19)
51
(2.01)
71
(2.8)
65
(2.56)
99
(3.9)
133
(5.24)
36
(1.42)
9
(0.35)
586
(23.087)
Source: Climate-data.org,

ಒನಕೆ ಓಬವ್ವ

ಚಿತ್ರದುರ್ಗ 
ಓಬವ್ವನ ಕಿಂಡಿ, ಚಿತ್ರದುರ್ಗದ ಕೋಟೆ.

ಒನಕೆ ಓಬವ್ವಳ ಸಾಹಸಗಾಥೆ ಕನ್ನಡ ನಾಡಿನ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿದೆ. ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ, ಹೈದರ-ಅಲಿಯ ಸೈನ್ಯವು ಕೋಟೆಯನ್ನು ಸುತ್ತುವರೆದಿತ್ತು. ಒಬ್ಬ ಮಹಿಳೆಯನ್ನು ಕೋಟೆಯ ಕಿಂಡಿಯಿಂದ ಒಳ ಹೊಗುವುದನ್ನು ಕಂಡ ಹೈದರ-ಅಲಿಯು ತನ್ನ ಸೈನ್ಯವನ್ನು ಆ ಕಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಆ ಭಾಗದ (ಹೆಸರು ಗೊತ್ತಿಲ್ಲ) ನ ಹಂಡತಿಯೇ ಓಬವ್ವ. ಅವಳು ಗಂಡನಿಗೆ ಊಟ ತರುತ್ತಾಳೆ. ಗಂಡನನ್ನು ಊಟಕ್ಕೆ ಕೂರಿಸಿ, ನೀರು ತರಲು ಹೋಗುತ್ತಾಳೆ. ಅಲ್ಲಿ ಹೈದರ-ಅಲಿಯ ಸೈನಿಕರನ್ನು ಕಿಂಡಿಯ ಮೂಲಕ ನುಸುಳುವದನ್ನು ಕಾಣುತ್ತಾಳೆ. ಎದೆಗುಂದದೆ ಕೈಯಲ್ಲಿದ್ದ ಒನಕೆಯಿಂದಲೇ ಒಳಗೆ ನುಗ್ಗುತ್ತಿರುವ ಒಬ್ಬೊಬ್ಬ ಸೈನಿಕರನ್ನು ಜಜ್ಜಿ ಕೊಲ್ಲುತ್ತಾಳೆ. ಸತ್ತವರನ್ನು ಸಂಶಯ ಬಾರದ ಹಾಗೆ ದೂರ ಎಳೆದು ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದ ಹುಡುಕುತ್ತ ಬರುತ್ತಾನೆ. ಅಲ್ಲಿ ರಕ್ತಸಿಕ್ತವಾದ ಒನಕೆಯನ್ನು ಕೈಯಲ್ಲಿ ಹಿಡಿದು ರಣಚಂಡಿಯ ಅವತಾರದಲ್ಲಿರುವ ಓಬವ್ವನನ್ನು ಸತ್ತು ಬಿದ್ದಿರುವ ನೂರಾರು ಹೈದರ-ಅಲಿಯ ಸೈನಿಕರನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಕೂಡಲೆ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ ಹಾಗೂ ನಾಯಕನ ಸೇನೆಯು ಕೋಟೆಯನ್ನು ಹೈದರ-ಅಲಿಯ ವಶಕ್ಕೆ ಹೋಗುವದನ್ನು ತಪ್ಪಿಸುತ್ತದೆ. ಓಬವ್ವನ ಸಮಯೋಚಿತ ಯುಕ್ತಿ ಮತ್ತು ಧೈರ್ಯವನ್ನು ಈಗಲೂ ಜನ ನೆನೆಯುತ್ತಾರೆ. ಈ ಘಟನೆಗೆ ಸಾಕ್ಷಿಯಾಗಿ ಈಗಲೂ ಆ ಕಿಂಡಿಯನ್ನು ಏಳು ಸುತ್ತಿನ ಕೋಟೆಯಲ್ಲಿ ಕಾಣಬಹುದು. ಅದು ಚಿತ್ರದುರ್ಗದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ .ಮತ್ತು ಚಿತ್ರದುಗದಲ್ಲಿ

ಗ್ಯಾಲರಿ

ಉಲ್ಲೇಖಗಳು‌‌

Tags:

ಚಿತ್ರದುರ್ಗ ಹೆಸರಿನ ಮೂಲಚಿತ್ರದುರ್ಗ ಜನಸಂಖ್ಯಾ ವಿವರಚಿತ್ರದುರ್ಗ ಆಡಳಿತಚಿತ್ರದುರ್ಗ ಐತಿಹಾಸಿಕ ಸ್ಥಳಗಳುಚಿತ್ರದುರ್ಗ ಹವಾಮಾನಚಿತ್ರದುರ್ಗ ಒನಕೆ ಓಬವ್ವಚಿತ್ರದುರ್ಗ ಗ್ಯಾಲರಿಚಿತ್ರದುರ್ಗ ಉಲ್ಲೇಖಗಳು‌‌ಚಿತ್ರದುರ್ಗಕರ್ನಾಟಕ ರಾಜ್ಯಬೆಂಗಳೂರು

🔥 Trending searches on Wiki ಕನ್ನಡ:

ರಾಮ ಮನೋಹರ ಲೋಹಿಯಾಗುರುರಾಜ ಕರಜಗಿರಾಜ್ಯಸಭೆಕರ್ನಾಟಕ ವಿಶ್ವವಿದ್ಯಾಲಯಜಿಪುಣಸಾಹಿತ್ಯರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಗುಲಾಬಿಭಾರತದ ಬಂದರುಗಳುಭೀಷ್ಮದಾಳಿಂಬೆಕದಂಬ ರಾಜವಂಶಭಾರತೀಯ ಶಾಸ್ತ್ರೀಯ ನೃತ್ಯಗ್ರಹಜೈನ ಧರ್ಮಮುಟ್ಟುರಾಧಿಕಾ ಗುಪ್ತಾಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಶಾತವಾಹನರುವಿಭಕ್ತಿ ಪ್ರತ್ಯಯಗಳುಶ್ಚುತ್ವ ಸಂಧಿಆದೇಶ ಸಂಧಿಅವರ್ಗೀಯ ವ್ಯಂಜನಮುಟ್ಟು ನಿಲ್ಲುವಿಕೆಪುರಂದರದಾಸನೀರುಹಿಂದೂ ಧರ್ಮಹೆಳವನಕಟ್ಟೆ ಗಿರಿಯಮ್ಮಕರ್ನಾಟಕ ಜನಪದ ನೃತ್ಯಪ್ಲಾಸ್ಟಿಕ್ಭಾರತೀಯ ಸ್ಟೇಟ್ ಬ್ಯಾಂಕ್ಚದುರಂಗಸಚಿನ್ ತೆಂಡೂಲ್ಕರ್ಸುಭಾಷ್ ಚಂದ್ರ ಬೋಸ್ಕಾಮಧೇನುಬಿ.ಎಸ್. ಯಡಿಯೂರಪ್ಪಭಾರತದ ಚುನಾವಣಾ ಆಯೋಗಭಾಷೆಶಿಂಶಾ ನದಿನರೇಂದ್ರ ಮೋದಿಗೋತ್ರ ಮತ್ತು ಪ್ರವರಬಾಗಿಲುಗೋಪಾಲಕೃಷ್ಣ ಅಡಿಗನಾಗವರ್ಮ-೧ಕನ್ನಡ ಕಾಗುಣಿತಹಾವುಹನುಮ ಜಯಂತಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದ್ವಿಗು ಸಮಾಸಕಲಬುರಗಿಗೌತಮ ಬುದ್ಧಹರಪ್ಪಸ್ವಚ್ಛ ಭಾರತ ಅಭಿಯಾನಒಗಟುಕರ್ನಾಟಕದ ನದಿಗಳುದ್ವಿರುಕ್ತಿಬಿ. ಎಂ. ಶ್ರೀಕಂಠಯ್ಯಕಲ್ಯಾಣಿಸಿಂಧೂತಟದ ನಾಗರೀಕತೆಶಿಕ್ಷಕಪಾಂಡವರುಮರಗುಪ್ತ ಸಾಮ್ರಾಜ್ಯಭಾರತದ ಜನಸಂಖ್ಯೆಯ ಬೆಳವಣಿಗೆಮಲ್ಲಿಕಾರ್ಜುನ್ ಖರ್ಗೆಬಾಲ್ಯ ವಿವಾಹಜಾನಪದಭೂತಾರಾಧನೆಭಾರತದ ವಿಜ್ಞಾನಿಗಳುಅಡಿಕೆಬಂಡಾಯ ಸಾಹಿತ್ಯಲೆಕ್ಕ ಪರಿಶೋಧನೆತಲಕಾಡುಸಂಖ್ಯಾಶಾಸ್ತ್ರಶಿವರಾಜ್‍ಕುಮಾರ್ (ನಟ)ಮಲೇರಿಯಾ🡆 More