ಪ್ರೊ.
ಜೆ. ಆರ್. ಲಕ್ಷ್ಮಣ್ ರಾವ್, ಎಂದು ಸಾಹಿತ್ಯಲೋಕದಲ್ಲಿ ಸುಪ್ರಸಿದ್ದರಾದ ಅವರ ಪೂರ್ಣ ಹೆಸರು, ಜಗಳೂರು , ರಾಘವೇಂದ್ರರಾವ್ ಲಕ್ಷ್ಮಣ ರಾವ್ ಎಂದು. ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿರುವ ಇವರು ಹಲವು ವರ್ಷಗಳ ಕಾಲ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಮೈಸೂರು ನಗರದ ಸರಸ್ವತಿಪುರಂನ ೧೨ನೇ ಮೇನ್ ರಸ್ತೆಯಲ್ಲಿನ ಸ್ವಗ್ರಹದಲ್ಲಿ ವಾಸಮಾಡುತ್ತಿದ್ದರು. ರಾಷ್ಟ್ರಕವಿ ಕುವೆಂಪು ರವರ ಪ್ರಭಾವ, ಪ್ರೊ.ಜಿ.ಪಿ.ರಾಜರತ್ನಂ ಪ್ರೇರಣೆಯಿಂದ ತಮ್ಮ ಸಾಹಿತ್ಯ ಜೀವನದಲ್ಲಿ ಬಹಳ ಸಾಧನೆಯನ್ನು ಮಾಡಿದ ವ್ಯಕ್ತಿ. ತತ್ವಶಾಸ್ತ್ರ,ಇಂಗ್ಲಿಷ್,ಕನ್ನಡ, ವೈಜ್ಞಾನಿಕ ಆತ್ಮಕಥೆಗಳಲ್ಲಿ ಬಹಳ ಆಸಕ್ತರು. ಅತ್ಯುತ್ತಮ ವಾಗ್ಮಿಯೆಂದು ಹೆಸರು ಮಾಡಿದ್ದರು.
ಜೆ.ಆರ್.ಲಕ್ಷ್ಮಣರಾವ್ (ಜೆ.ಆರ್.ಎಲ್.) | |
---|---|
ಜನನ | ೨೧, ಜನೇವರಿ, ೧೯೨೧ |
ಮರಣ | ೨೯ ಡಿಸೆಂಬರ್ ೨೦೧೭ |
ವೃತ್ತಿ | ಜನಪ್ರಿಯ ವಿಜ್ಞಾನ ಲೇಖಕರು |
ಭಾಷೆ | ಕನ್ನಡ |
ರಾಷ್ಟ್ರೀಯತೆ | ಭಾರತೀಯ |
ಪೌರತ್ವ | ಭಾರತೀಯ |
ಬಾಳ ಸಂಗಾತಿ | ಶ್ರೀಮತಿ.ಜೀವು ಬಾಯಿ. |
ಮಕ್ಕಳು | ೧. ಬೃಂದ ೨. ವಿದ್ಯಾ ೩. ಅನಿಲ್ ಕುಮಾರ್ ೪. ಅನುರಾಧ |
ಲಕ್ಷ್ಮಣರಾಯರು, ೧೯೨೧ ಜನವರಿ ೨೧ರಂದು ರಾಘವೇಂದ್ರ ರಾವ್ ಮತ್ತು ನಾಗಮ್ಮನವರ ಮಗನಾಗಿ, ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸ ಜಗಳೂರಿನಲ್ಲಿ ನಡೆಯಿತು. ದಾವಣಗೆರೆಯಲ್ಲಿ ಪ್ರೌಢಶಾಲಾಭ್ಯಾಸ, ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ಕಾಲೇಜ್ (ಇಂದಿನ ಯುವರಾಜ ಕಾಲೇಜ್) ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ. ಎಸ್ಸಿ, ಎಮ್ಮೆಸ್ಸಿ. ತುಮಕೂರು ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಬೆಂಗಳೂರಿನ ಸೇಂಟ್ರೆಲ್ ಕಾಲೇಜ್, ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜ್, ಮೈಸೂರು ಮಹಾರಾಣಿ ಕಾಲೇಜ್, ಹಾಗೂ ಯುವರಾಜ ಕಾಲೇಜುಗಳಲ್ಲಿ ಉಪನ್ಯಾಸಕ, ಪ್ರಾಧ್ಯಪರಾಗಿ ಸೇವೆಸಲ್ಲಿಸಿದರು.
ಪ್ರೊ.ಲಕ್ಷ್ಮಣರಾವ್ ಜೀವು ಬಾಯಿ ದಂಪತಿಗಳಿಗೆ ಬೃಂದಾ ನಾಗರಾಜ್, ವಿದ್ಯಾಶಂಕರ್, ಅನುರಾಧ ರಾವ್, ಎಂಬ ಹೆಣ್ಣುಮಕ್ಕಳೂ ಹಾಗೂ ಅನಿಲ್ ಕುಮಾರ್ ಎಂಬ ಮಗನೂ ಇದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಶಾಖೆಯಿಂದ ಹೊರತಂದ ಇಂಗ್ಲಿಷ್ - ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ಕೆಲಸಮಾಡಿದರು.
ಸಾಮಾನ್ಯ ವಿಜ್ಞಾನ, ವಿಜ್ಞಾನದ ಇತಿಹಾಸ, ತತ್ಚಶಾಸ್ತ್ರ ಅವರ ಅಭಿರುಚಿಯ ಕ್ಷೇತ್ರಗಳು. ಸಂಗೀತ ಶಾಸ್ತ್ರ, ಭೂಗೋಳ ಶಾಸ್ತ್ರವನ್ನು ಅಧ್ಯಯನ ಮಾಡಿದ ಜಿ. ಆರ್.ಎಲ್, ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ - ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ನಿವೃತ್ತರಾದರು. ಇವರ ವಿಜ್ಞಾನ ವಿಚಾರ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ. ಇವರು ೧೪ ಕೃತಿಗಳನ್ನು ರಚಿಸಿದ್ದಾರೆ. ಆಹಾರ, ವಿಜ್ಞಾನಿಗಳೊಡನೆ ರಸ ನಿಮಿಷಗಳು, ಪರಮಾಣುಗಳು, ಲೂಯಿ ಪಾಶ್ಚರ್, ಗೆಲಿಲಿಯೋ ಇವರ ಪ್ರಮುಖ ಕೃತಿಗಳು.
ತಮ್ಮ ಸಂಗೀತಾಸಕ್ತ ಗೆಳೆಯರ ಜೊತೆ ಸೇರಿ, ಮೈಸೂರಿನಲ್ಲಿ 'ಗಾನ ಭಾರತಿ' ಎಂಬ ಸಂಗೀತ ಸಂಸ್ಥೆಯನ್ನು ಸ್ಥಾಪಿಸಿದರು.
ಪ್ರೊ. ಲಕ್ಷ್ಮಣರಾಯರ ಹೆಂಡತಿ ಜೀವು ಬಾಯಿಯವರು, (೯೦ ವರ್ಷ), ಮೈಸೂರು ವಿಶ್ವವಿದ್ಯಾಲಯದ ಬಿ.ಎ. ಪದವೀಧರೆ. ಅವರು, ಮಹಾನ್ ವಿಜ್ಞಾನಿ ಚಾರ್ಲ್ ಡಾರ್ವಿನ್ ಜೀವನ ಚರಿತ್ರೆಯನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. 'ಲಿಯೋಪಾಲ್ಡ್ ಇನ್_ಫ಼ೆಲ್ಡ್' ರವರ ಆತ್ಮ ಕಥನ, "ಕ್ವೆಸ್ಟ್" ಎಂಬ ಇಂಗ್ಲೀಷ್ ಕೃತಿಯನ್ನು ಕನ್ನಡದಲ್ಲಿ 'ಶೋಧ' ಎನ್ನುವ ಹೆಸರಿನಲ್ಲಿ ರಚಿಸಿದ್ದಾರೆ.
ಜೆ.ಆರ್.ಎಲ್. ರವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅವರು ಚೇತರಿಸಿಕೊಳ್ಳದೆ ೨೯, ಡಿಸೆಂಬರ್ ೨೦೧೭ ರ ಬೆಳಗಿನ ಜಾವ ನಿಧನರಾದರು. ಚಾಮುಂಡಿ ಬೆಟ್ಟದ ಅಡಿಯಲ್ಲಿರುವ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರಗಳು ಜರುಗಿದವು
This article uses material from the Wikipedia ಕನ್ನಡ article ಜೆ. ಆರ್. ಲಕ್ಷ್ಮಣರಾವ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.