2003 ಮಾರ್ಚ್ 20ರಂದು ಪ್ರಾರಂಭಗೊಂಡ ಬಹುರಾಷ್ಟ್ರಗಳ ಸೇನಾ ತುಕಡಿಗಳು ಇರಾಕಿನ ನೆಲವನ್ನು ವಶಪಡಿಸಿಕೊಳ್ಳುವ ಸೇನಾಕಾರ್ಯಾಚರಣೆಯನ್ನು ಇರಾಕ್ ಯುದ್ಧ ಎಂದು ಕರೆಯಲಾಗುತ್ತದೆ (ಇದನ್ನು ಇರಾಕ್ ಆಕ್ರಮಣ, ಎರಡನೇ ಗಲ್ಫ್ ಯುದ್ಧ , ಹಾಗೂ ಆಪರೇಷನ್ ಇರಾಕ್ ವಿಮೋಚನಾ ಕಾರ್ಯಾಚರಣೆ ಎಂದೂ ಕರೆಯಲಾಗುತ್ತದೆ). ಅಮೇರಿಕಾದ ಅಧ್ಯಕ್ಷ ಜಾರ್ಜ್.ಡಬ್ಲ್ಯು.ಬುಷ್ ಅವರ ಮುಂಚೂಣಿಯ ಅಮೇರಿಕಾ ಹಾಗೂ ಟೋನಿ ಬ್ಲೇರ್ ಮುಖಂಡತ್ವದ ಇಂಗ್ಲೆಂಡ್ ಈ ಕಾರ್ಯಾಚರಣೆಯ ಮುಂದಾಳತ್ವ ವಹಿಸಿಕೊಂಡಿದ್ದವು. ಹೀಗೆ ವಿಮೋಚನೆಯ ಹೆಸರಿನಲ್ಲಿ ಇರಾಕಿನ ನೆಲದ ಮೇಲೆ ಕಾಲೂರಿದ ಸೇನೆಯನ್ನು ಇತ್ತೀಚೆಗೆ ತೆರವುಗೊಳಿಸಲಾಯಿತು. ಅಮೇರಿಕಾದ ಕಟ್ಟಕಡೆಯ ಸೇನಾ ತುಕುಡಿ 2010 ಆಗಸ್ಟ್ 19ರಂದು ಇರಾಕಿನಿಂದ ಕಾಲ್ತೆಗಿಯಿತು. ಆಗಸ್ಟ್ 31ರಂದು ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಯುದ್ಧ ಕೊನೆ ಘೋಷಿಸಿದರು. ಹಾಗಿದ್ದೂ, ಸುಮಾರು 50 ಸಾವಿರದಷ್ಟು ಅಮೇರಿಕಾದ ಸೇನೆ ಇಂದಿಗೂ ಇರಾಕಿನಲ್ಲಿ ಬೀಡು ಬಿಟ್ಟಿದ್ದು ದೇಶ ನಿರ್ಮಾಣಕ್ಕೆ “ಸಲಹೆ ಹಾಗೂ ಸಹಕಾರ” ನೀಡುತ್ತಿದೆ. ದಾಳಿಗೆ ಪೀಠಿಕೆ ಎಂಬಂತೆ ಅಮೇರಿಕಾ ಹಾಗೂ ಇಂಗ್ಲೆಂಡ್ ರಾಷ್ಟ್ರಗಳು ಇರಾಕ್ ಮೇಲೆ ಸುರಿಮಳೆಗೈದವು. ಇರಾಕ್ ಸಮೂಹನಾಶಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು ಇದರಿಂದಾಗಿ ತಮ್ಮ ರಾಷ್ಟ್ರಗಳ ಸುರಕ್ಷತೆಗೆ ಆತಂಕ ಎದುರಾಗಿದೆ ಎಂಬುದು ಅವುಗಳು ತಮ್ಮ ಸಮ್ಮಿಶ್ರ/ಪ್ರಾಂತೀಯ ಸೇನಾ ಕಾರ್ಯಾಚರಣೆಗೆ ಅವರು ನೀಡಿದ ಕಾರಣವಾಗಿತ್ತು. 2002ರಲ್ಲಿ ಠರಾವು 1441ನ್ನು ಜಾರಿಗೊಳಿಸಿದ ವಿಶ್ವಸಂಸ್ಥೆಯ ರಕ್ಷಣಾ ಸಮಿತಿ ಇರಾಕ್ ರಾಷ್ಟ್ರ ವಿಶ್ವಸಂಸ್ಥೆಯ ಶಸ್ತ್ರಾಸ್ತ್ರ ಪರೀಕ್ಷಕರಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಬೇಕು ಮತ್ತು ಆಮೂಲಕ ಪಾಶ್ಚಾತ್ಯ ರಾಷ್ಟ್ರಗಳ ಆಪಾದನೆಯಂತೆ ತಾನು ಸಮೂಹನಾಶಕ ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲ ಎಂಬುದನ್ನು ಸಾಬೀತು ಪಡಿಸಬೇಕು ಎಂದು ಇರಾಕ್ ರಾಷ್ಟ್ರಕ್ಕೆ ಆದೇಶ ನೀಡಿತು. ಅಂತೆಯೇ, ಇರಾಕ್ ಕೂಡ ತಪಾಸಣೆಗಾಗಿ ಬಂದ ’ವಿಶ್ವಸಂಸ್ಥೆಯ ಮೇಲ್ವಿಚಾರಣೆ, ಪರಿಶೀಲನೆ ಹಾಗೂ ಪರಿವೀಕ್ಷಣಾ ಆಯೋಗ(UNMOVIC)’ಕ್ಕೆ ಎಲ್ಲಾ ಬಗೆಯ ಸಹಕಾರ ನೀಡಿತು. ಆದರೆ ಅಲ್ಲಿ ಯಾವುದೇ ಬಗೆಯ ಸಮೂಹನಾಶಕ ಶಸ್ತ್ರಾಸ್ತ್ರಗಳು ಕಂಡುಬರಲಿಲ್ಲ. ವಿಶ್ವಸಂಸ್ಥೆಯ ನಿಶ್ಯಸ್ತ್ರ ಕಾಯಿದೆಯನ್ನು ಇರಾಕ್ ಉಲ್ಲಂಘಿಸಿದೆಯೇ ಎಂಬುದರ ಕುರಿತ ಪರಿಶೀಲನೆ ಪೂರ್ಣ ಪ್ರಮಾಣದಲ್ಲಿ ನಡೆಯಲೇ ಇಲ್ಲ. ಆದರೆ ಈ ಸಂದರ್ಭದಲ್ಲಿ ಮುಖ್ಯ ಶಸ್ತ್ರಾಸ್ತ್ರ ಪರಿವೀಕ್ಷಕರಾಗಿದ್ದ ಹ್ಯಾನ್ಸ್ ಬ್ಲಿಕ್ಸ್, ಇರಾಕ್ ರಾಷ್ಟ್ರ ಈ ನಿಟ್ಟಿನಲ್ಲಿ ’ಕ್ರಿಯಾತ್ಮಕ’ ಸಹಕಾರ ನೀಡಿತ್ತಾದರೂ ಅದು “ಷರತ್ತುರಹಿತ”ವಾಗಿರಲಿಲ್ಲ ಹಾಗೂ “ತಕ್ಷಣ”ವಾಗಿರಲಿಲ್ಲ ಎಂಬರ್ಥದಲ್ಲಿ ವಿಶ್ವಸಂಸ್ಥೆಯ ರಕ್ಷಣಾ ಸಮಿತಿಗೆ ವರದಿ ಸಲ್ಲಿಸಿದ್ದರು. ಸಮೂಹನಾಶಕ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ ಇರಾಕ್ ನೀಡಿದ ಹೇಳಿಕೆಗಳನ್ನು ಆ ಕ್ಷಣದಲ್ಲಿ ಪರಿಶೀಲಿಸಲಿಲ್ಲವಾದರೂ ಇರಾಕಿನ ನಿಶ್ಯಸ್ತ್ರೀಕರಣ ಕಾರ್ಯಾಚರಣೆ “ವರ್ಷಗಳಲ್ಲ, ವಾರಗಳಲ್ಲೂ ಅಲ್ಲ ಆದರೆ ತಿಂಗಳಲ್ಲಿಯೇ” ಪೂರ್ಣಗೊಳ್ಳಲಿದೆ ಎಂದು ಘೋಷಿಸಲಾಯಿತು. ಇರಾಕ್ ಮೇಲೆ ಪಾಶ್ಚಾತ್ಯ ರಾಷ್ಟ್ರಗಳು ದಾಳಿ ನಡೆಸಿದ ಆನಂತರದಲ್ಲಿ ತನ್ನ ಹೇಳಿಕೆಯನ್ನು ಬಿಡುಗಡೆಗೊಳಿಸಿದ ಅಮೇರಿಕಾ ಮೂಲದ ಇರಾಕ್ ಸರ್ವೇ ಗ್ರೂಪ್, ಇರಾಕ್ 1991ರಲ್ಲಿಯೇ ತನ್ನ ಅಣ್ವಸ್ತ್ರ, ರಾಸಾಯನಿಕ ಹಾಗೂ ಜೈವಿಕ ಕಾರ್ಯಕ್ರಮಗಳನ್ನು ಬರಕಾಸ್ತುಗೊಳಿಸಿತ್ತು, ದಾಳಿ ಮಾಡಿದ ಸಂದರ್ಭದಲ್ಲಿ ಅಂತಹ ಯಾವುದೇ ಪ್ರಯತ್ನಗಳಿಗೂ ಇರಾಕ್ ಕೈಹಾಕಿರಲಿಲ್ಲ, ಆದರೆ ತನ್ನ ಮೇಲಿನ ನಿರ್ಬಂಧ ತೆರವುಗೊಂಡ ಬಳಿಕ ಅಂತದ್ದೊಂದು ಪ್ರಯತ್ನಕ್ಕೆ ಇರಾಕ್ ಕೈ ಹಾಕುವ ಉದ್ದೇಶ ಹೊಂದಿತ್ತು ಎಂದು ಅಭಿಪ್ರಾಯಪಟ್ಟಿತು. 1991ರಲ್ಲಿ ಸಮೂಹನಾಶಕ ಶಸ್ತ್ರಾಸ್ತ್ರಗಳ ತಯಾರಿಕೆಗೆ ಇರಾಕ್ ಕೈ ಹಾಕಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಅಳುದುಳಿದ ರಾಸಾಯನಿಕ ಶಸ್ತ್ರಾಸ್ತ್ರಗಳ ಅವಶೇಷಗಳು ದೊರೆತರೂ ಅವು ಇರಾಕ್ ಮೇಲಿನ ಅಮೇರಿಕಾದ ಆಪಾದನೆಗೆ ಪೂರಕವಾದಂಥವುಗಳಾಗಿರಲಿಲ್ಲ. ಈ ನಡುವೆ ಇರಾಕಿನ ಅಧ್ಯಕ್ಷ ಸದ್ದಾಂ ಹುಸೇನ್ ಅಲ್-ಖೈದಾ ಉಗ್ರರಿಗೆ ಆಶ್ರಯ ನೀಡಿದ್ದಾರೆ ಎಂದೂ ಕೆಲವು ಅಮೇರಿಕಾದ ಅಧಿಕಾರಿಗಳು ದೂರಿದ್ದರು. ಆದರೆ ಆ ಕುರಿತು ಯಾವ ಸಾಕ್ಷಿಯೂ ಅವರಿಗೆ ಲಭ್ಯವಾಗಲಿಲ್ಲ. ಆ ನಂತರ, ಪ್ಯಾಲಿಸ್ತೇನ್ ಆತ್ಮಾಹುತಿ ಬಾಂಬರ್ಗಳ ಕುಟುಂಬಗಳಿಗೆ ಇರಾಕ್ ಆರ್ಥಿಕ ಸಹಾಯ ಮಾಡುತ್ತಿದೆ, ಇರಾಕ್ ಸರ್ಕಾರದ ಆಳ್ವಿಕೆಯಲ್ಲಿ ಮಾನವ ಹಕ್ಕು ಉಲ್ಲಂಘನೆ ಮಿತಿಮೀರಿದೆ ಎಂಬ ಆಪಾದನೆಗಳ ಜೊತೆ ಇರಾಕಿನಲ್ಲಿ ಹಾದಿ ತಪ್ಪಿರುವ ಪ್ರಜಾಪ್ರಭುತ್ವಕ್ಕೆ ಮತ್ತೊಮ್ಮೆ ಬನಾದಿ ಹಾಕುವ ಮಹತ್ತರ ಉದ್ದೇಶಗಳನ್ನು ಈ ಆಕ್ರಮಣ ಒಳಗೊಂಡಿದೆ ಎಂದೆಲ್ಲಾ ಸಬೂಬು ಹೇಳಲಾಯಿತು. ಈ ದಾಳಿಯ ನಂತರ ಇರಾಕನ್ನು ಸಂಪೂರ್ಣವಾಗಿ ಕೈವಶ ಮಾಡಿಕೊಳ್ಳಲಾಯಿತು ಹಾಗೂ ಅದರ ಅಧ್ಯಕ್ಷ ಸದ್ದಾಂ ಹುಸೇನ್ ಅವರನ್ನೂ ಬಂಧಿಸಲಾಯಿತು. ಇರಾಕಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ಬಳಿಕ ಇರಾಕ್ ಸರ್ಕಾರ ಸದ್ದಾಂ ಹುಸೇನ್ ಅವರಿಗೆ ಮರಣ ದಂಡನೆ ಜಾರಿಗೊಳಿಸಿತು. ಇರಾಕ್ ಮೇಲೆ ಆಕ್ರಮಣ ನಡೆಸಿದ ಮಿತ್ರಕೂಟಕ್ಕೆ ಎದುರಾದ ಪ್ರತಿರೋಧ ಹಾಗೂ ಇನ್ನಿತರ ಪ್ರಾಂತೀಯ ಪಂಗಡಗಳ ನಡುವಿನ ಹಣಾಹಣಿ ಇರಾಕಿನ ದಂಗೆಗೆ ಹಾದಿ ಮಾಡಿಕೊಟ್ಟಿತು. ಹಾಗೆಯೇ ಇರಾಕಿನ ಶಿಯಾ ಹಾಗೂ ಸುನ್ನಿ ಎಂಬ ಎರಡು ಪ್ರಬಲ ಸಮುದಾಯಗಳ ನಡುವಿನ ಕಂದಕವನ್ನು ಇನ್ನಷ್ಟು ಹಿಗ್ಗಿಸಿದ್ದಲ್ಲದೇ ಅಲ್-ಖೈದಾದ ಹೊಸ ಪಂಗಡವೊಂದು ಚಿಗುರೊಡೆಯಲು ವೇದಿಕೆ ಸಿದ್ಧಪಡಿಸಿಕೊಟ್ಟಿತು. 2008ರಲ್ಲಿ ಬಿಡುಗಡೆಯಾದ ಯುಎನ್ಹೆಚ್ಸಿಆರ್ ವರದಿಯ ಪ್ರಕಾರ ಈ ಯುದ್ಧದದಲ್ಲಿ2 million ಹೊರದೇಶ (ಸಿಐಎ ಅಂದಾಜು ಪ್ರಕಾರ) ಹಾಗೂ2.7 million ಇರಾಕ್ ಸೇರಿದಂತೆ ನಿರಾಶ್ರಿತರಾದವರ ಸಂಖ್ಯೆ 4.7 ಮಿಲಿಯನ್ (ಒಟ್ಟು ಜನಸಂಖ್ಯೆಯ ಶೇ.16ರಷ್ಟು). 2007ರಲ್ಲಿ, ಇರಾಕಿನ ಭ್ರಷ್ಟಾಚಾರ ನಿಗ್ರಹ ಘಟಕದ ವರದಿಯ ಪ್ರಕಾರ, ಇರಾಕಿನ ಶೇ.35ರಷ್ಟು ಮಕ್ಕಳು ಅಥವಾ ಐದು ಮಿಲಿಯನ್ಗೂ ಹೆಚ್ಚಿನ ಮಕ್ಕಳು ಅನಾಥರಾಗಿದ್ದಾರೆ. ಇರಾಕಿನ ಬಹುತೇಕ ಮಂದಿ ಅತ್ಯಂತ ಕಳಪೆ ಹಾಗೂ ಅಸಮರ್ಪಕ ನೀರಿನ ಸಂಪನ್ಮೂಲಗಳನ್ನೇ ಅವಲಂಬಿಸಿದ್ದು ಇರಾಕ್ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ದುರ್ಬರ ಮಾನವೀಯ ಸಂದರ್ಭವನ್ನು ಎದುರಿಸುತ್ತಿದೆ ಎಂದು ರೆಡ್ಕ್ರಾಸ್ ಸಂಸ್ಥೆ 2008 ಮಾರ್ಚ್ ತಿಂಗಳ ತನ್ನ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ. ಇರಾಕಿನ ಆರ್ಥಿಕ ಬೆಳವಣಿಗೆಯ ಸೂಚ್ಯಂಕಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿವೆ ಎಂದು 2008 ಜೂನ್ ತಿಂಗಳಲ್ಲಿ ಅಮೇರಿಕಾದ ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದರು. 2008ರ ವಿಫಲ ರಾಷ್ಟ್ರಗಳ ಸೂಚ್ಯಂಕದಲ್ಲಿ ಇರಾಕ್ ಈ ಮೊದಲು ಐದನೇ ಸ್ಥಾನದಲ್ಲಿತ್ತು ಹಾಗೂ 2009ರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿತ್ತು. ಪಾಶ್ಚಾತ್ಯ ರಾಷ್ಟ್ರಗಳು ಸೇನೆಯನ್ನು ಹಿಂಪಡೆಯುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಸಂತಸ ವ್ಯಕ್ತವಾಗುತ್ತಿದ್ದಂತೆಯೇ ರಾಷ್ಟ್ರದ ರಕ್ಷಣೆಯ ಹೊಣೆಗಾರಿಕೆಗೆ ಇರಾಕಿನ ಸೇನೆ ಹೆಗಲು ನೀಡಿತ್ತು. 2008ರ ಅಂತಿಮ ಭಾಗದಲ್ಲಿ ಅಮೇರಿಕಾ ಹಾಗೂ ಇರಾಕಿ ಸರ್ಕಾರಗಳು ಸಹಿ ಹಾಕಿದ ಸ್ಟೇಟಸ್ ಆಫ್ ಫೋರ್ಸಸ್ ಒಡಂಬಡಿಕೆ 2012 ಜನವರಿ 1 ರಿಂದ ಜಾರಿಗೆ ಬರಲಿದೆ. ಇದರ ಜೊತೆಗೇ ಇರಾಕ್ ಸರ್ಕಾರ ಅಮೇರಿಕಾದೊಂದಿಗೆ “ಸ್ಟ್ರಟಜಿಕ್ ಫ್ರೇಮ್ವರ್ಕ್ ಒಪ್ಪಂದ” ಮಾಡಿಕೊಂಡಿದ್ದು ಆಮೂಲಕ ಸಾಂವಿಧಾನಿಕ ಹಕ್ಕುಗಳು, ರಕ್ಷಣೆಗೆ ಸಂಬಂಧಿಸಿದ ಆತಂಕಗಳು, ಶಿಕ್ಷಣ, ಇಂಧನ ಅಭಿವೃದ್ಧಿ ಹಾಗೂ ಇನ್ನಿತರ ವಲಯಗಳಿಗೆ ಸಂಬಂಧಿಸಿದಂತೆ ಅಮೇರಿಕಾದ ಸಹಕಾರ ಪಡೆದುಕೊಳ್ಳಲಿದೆ. 2009ರ ಫೆಬ್ರುವರಿಯ ಕೊನೆಯ ಭಾಗದಲ್ಲಿ ಅಮೇರಿಕಾದ ಹೊಸ ಅಧ್ಯಕ್ಷ ಬಾರಕ್ ಒಬಾಮ ಮುಂದಿನ 18 ತಿಂಗಳಲ್ಲಿ ಇರಾಕಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸೇನೆಯನ್ನು ಹಿಂಪಡೆಯುವುದಾಗಿಯೂ, ಸರಿಸುಮಾರು 50 ಸಾವಿರ ಸೇನೆ ಅಲ್ಲಿಯೇ ಇದ್ದು ಹೊಸ ಇರಾಕಿನ ಹೊಸ ಸರ್ಕಾರಕ್ಕೆ “ಸಲಹೆ ನೀಡುವುದರ ಜೊತೆಗೆ ಇರಾಕಿನ ಸೇನೆಗೆ ತರಬೇತಿ ನೀಡಲು ಮತ್ತು ಗುಪ್ತಚರ ಹಾಗೂ ವಿಚಕ್ಷಣಾ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ” ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದರು. ಇರಾಕಿನಲ್ಲಿರುವ ಅಮೇರಿಕಾದ ಮುಖ್ಯ ಸೇನಾ ಕಮಾಂಡರ್ ಜನರಲ್ ರೇ ಒಡಿರ್ನೊ, ಇಂಗ್ಲೆಂಡಿನ ಸೇನೆ 2009 ಏಪ್ರಿಲ್ 30ರಂದೇ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ಅಮೇರಿಕಾದ ಎಲ್ಲಾ ಸೇನಾ ತುಕುಡಿಗಳು 2011ರ ಹೊತ್ತಿಗೆ ಇರಾಕ್ ಬಿಟ್ಟು ಹೊರ ನಡೆಯುತ್ತವೆ ಎಂದಿದ್ದರು. ಸೇನೆಯನ್ನು ಹಿಂಪಡೆಯುವ ಅಮೇರಿಕಾದ ನಿರ್ಧಾರವನ್ನು ಇರಾಕಿನ ಹೊಸ ಪ್ರಧಾನಿ ನೂರಿ-ಅಲ್-ಮಲಿಕಿ ಅವರು ಸ್ವಾಗತಿಸಿದ್ದರು. 31 August 2010ರಂದು ಓವಲ್ನ ಕಚೇರಿಯಲ್ಲಿ ಮಾತನಾಡಿದ ಅಧ್ಯಕ್ಷ ಒಬಾಮ ಅವರು, “ಇರಾಕಿನಲ್ಲಿ ನಡೆಯುತ್ತಿದ್ದ ಸೇನಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಆಪರೇಷನ್ ಇರಾಕಿ ಫ್ರೀಡಮ್ ಸಂಪೂರ್ಣಗೊಂಡಿದ್ದು ಇರಾಕಿನ ಜನತೆ ತಮ್ಮ ದೇಶ ರಕ್ಷಣೆಯ ನೊಗಕ್ಕೆ ಹೆಗಲು ನೀಡಲಿದ್ದಾರೆ” ಎಂದು ಘೋಷಿಸಿದ್ದರು. ಇರಾಕಿನಲ್ಲಿ ತೊಡಗಿಸಿಕೊಂಡ ಅಮೇರಿಕಾದ ಕಾರ್ಯಾಚರಣೆಯ ಹೆಸರನ್ನು 2010 ಸೆಪ್ಟೆಂಬರ್ 1ರಲ್ಲಿ “ಆಪರೇಷನ್ ಇರಾಕಿ ಫ್ರೀಡಮ್” ನಿಂದ “ಆಪರೇಷನ್ ನ್ಯೂ ಡಾನ್” ಎಂದು ಬದಲಾಯಿಸಲಾಯಿತು.
ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯು.ಬುಷ್ ಅವರು 2001 ಜನವರಿಯಲ್ಲಿ ತಾವು ಅಧ್ಯಕ್ಷರಾಗಿ ಗದ್ದುಗೆ ಏರಿದ ಹತ್ತೇ ದಿನಗಳಲ್ಲಿ ತಮ್ಮ ಸಹಾಯಕರಿಗೆ ಇರಾಕಿನ ಆಡಳಿತವನ್ನು ಬುಡಮೇಲು ಮಾಡುವ ಹಾದಿ ಹುಡುಕಲು ನಿರ್ದೇಶನ ನೀಡಿದ್ದರು ಎಂದು ಅಂದಿನ ಅಮೇರಿಕಾದ ಖಾಜಾಂಚಿ ಕಾರ್ಯದರ್ಶಿಯಾಗಿದ್ದ ಪೌಲ್ ಒ’ನೇಲ್ ಅವರು ಬಹಿರಂಗಪಡಿಸಿದ್ದರು. “ಸದ್ದಾಂ ನಂತರದ ಇರಾಕಿನ ಯೋಜನೆಗಳು” ಎಂಬ ಶೀರ್ಷಿಕೆ ಹೊಂದಿದ್ದ ರಹಸ್ಯ ಜ್ಞಾಪನಾಪತ್ರವೊಂದನ್ನು 2001ರ ಜನವರಿ ಹಾಗೂ ಫೆಬ್ರುವರಿಯಲ್ಲಿ ಚರ್ಚಿಸಲಾಗಿತ್ತು ಹಾಗೂ 2001 ಮಾರ್ಚ್ 5ರ ದಿನಾಂಕ ಹೊಂದಿರುವ “ಇರಾಕಿನ ತೈಲಕ್ಷೇತ್ರಗಳ ಗುತ್ತಿಗೆಗೆ ವಿದೇಶಿ ಗುತ್ತಿಗೆದಾರರು” ಎಂಬ ಹೆಸರಿನ ಪೆಂಟಗನ್ನ ದಾಖಲೆಯೊಂದು ಇರಾಕಿನ ನೆಲದಲ್ಲಿರುವ ಪೆಟ್ರೋಲಿಯಂ ನಿಕ್ಷೇಪಗಳನ್ನು ಒಳಗೊಂಡ ನಕಾಶೆಯೊಂದನ್ನು ಒಳಗೊಂಡಿತ್ತು.
ಇರಾಕ್ ತನ್ನ ಸಮೂಹನಾಶಕ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಈ ಕ್ಷಣವೇ ನಿಲ್ಲಿಸಬೇಕು ಎಂದು ಅಮೇರಿಕಾದ ಅಧ್ಯಕ್ಷ ಬುಷ್ ಅವರು ಇರಾಕ್ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಇರಾಕಿನ ನಿಶ್ಯಸ್ತ್ರೀಕರಣ ಕಾರ್ಯ 2002-03ರಲ್ಲಿ ಉಲ್ಬಣಗೊಂಡಿತ್ತು. ವಿಶ್ವಸಂಸ್ಥೆ ರಕ್ಷಣಾ ಸಮಿತಿಯ ಸಹಕಾರದೊಂದಿಗೆ ವಿಶ್ವಸಂಸ್ಥೆಯ ಶಸ್ತ್ರಾಸ್ತ್ರ ಪರಿವೀಕ್ಷಕರಿಗೆ ತನ್ನ ಶಸ್ತ್ರಾಗಾರವನ್ನು ಪರಿಶೋಧಿಸಲು ಷರತ್ತುರಹಿತವಾಗಿ ಅನುಕೂಲ ಮಾಡಿಕೊಡಬೇಕು ಎಂದೂ ಅಮೇರಿಕಾದ ಅಧ್ಯಕ್ಷರು ಇರಾಕ್ಗೆ ಆದೇಶ ನೀಡಿದ್ದರು. ಗಲ್ಫ್ ಯುದ್ಧದ ಬಳಿಕ ಇರಾಕ್ ಈ ಬಗೆಯ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವ ಅಥವಾ ಸಂಪಾದಿಸುವ ಕಾರ್ಯಕ್ಕೆ ಕೈ ಹಾಕದಂತೆ ವಿಶ್ವಸಂಸ್ಥೆ ನಿರ್ಬಂಧ ಹೇರಿತ್ತು ಮತ್ತು ಸಂದರ್ಭ ಬಂದರೆ ಶಸ್ತ್ರಾಸ್ತ್ರ ತಪಾಸಣಾಕಾರರಿಗೆ ಅನುವು ಮಾಡಿಕೊಟ್ಟು ತನ್ನ ನಿರ್ದೋಷಿತ್ವವನ್ನು ಸಾಬೀತು ಪಡಿಸುವ ಹೊಣೆಗಾರಿಕೆಯೂ ಇರಾಕ್ ಮೇಲಿತ್ತು. 1999ರ ಶಸ್ತ್ರಾಸ್ತ್ರ ಶೋಧನೆಯ ಸಂದರ್ಭದಲ್ಲಿ ಇರಾಕ್, ವಿಶ್ವಸಂಸ್ಥೆಯ ಶಸ್ತ್ರಾಸ್ತ್ರ ಪರಿಶೋಧಕರ ಜೊತೆ ಅಮೇರಿಕಾದ ಗೂಢಾಚಾರರೂ ಬಂದಿದ್ದು, ತನ್ನ ಹಾಗೂ ವಿಶ್ವಸಂಸ್ಥೆಯ ಅಧಿಕಾರಿಗಳ ನಡುವೆ ನಡೆದ ಮಾತುಕತೆಯ ಮಾಹಿತಿಯನ್ನು ಹಾಗೂ ಇನ್ನಿತರ ಮಾಹಿತಿಗಳನ್ನು ನೇರವಾಗಿ ಅಮೇರಿಕಾಕ್ಕೆ ರವಾನಿಸುತ್ತಿದ್ದಾರೆ ಎಂದು ಆಪಾದಿಸಿತ್ತು. ಇದನ್ನು ನ್ಯೂಯಾರ್ಕ್ ಟೈಮ್ಸ್ ಹಾಗೂ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಗಳೂ ಅನುಮೋದಿಸಿದ್ದವು. 2002ರಲ್ಲಿ ಶಸ್ತ್ರಾಸ್ತ್ರ ಪರಿವೀಕ್ಷಣಕಾರರಿಗೆ ಸಹಕರಿಸದಿದ್ದರೆ ಸೇನಾ ಕಾರ್ಯಾಚರಣೆ ನಡೆಸಬೇಕಾದೀತು ಎಂದು ಅಮೇರಿಕಾದ ಅಧ್ಯಕ್ಷ ಜಾರ್ಜ್ ಬುಷ್ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರು. ವಿಶ್ವಸಂಸ್ಥೆ ರಕ್ಷಣಾ ಸಮಿತಿ ಠರಾವು 1441ಕ್ಕೆ ಅನುಗುಣವಾಗಿ ಇರಾಕ್ ಮನಸ್ಸಿಲ್ಲದ ಮನಸ್ಸಿನಿಂದ 2002ರಲ್ಲಿ ಮತ್ತೊಮ್ಮೆ ಶಸ್ತ್ರಾಸ್ತ್ರ ಪರಿವೀಕ್ಷಣಕಾರರಿಗೆ ತನ್ನ ದೇಶದ ಬಾಗಿಲು ತೆರೆಯಿತು. ಆದರೆ ಈ ತಪಾಸಣೆಯಲ್ಲೂ ಪರಿವೀಕ್ಷಣಾ ತಂಡಕ್ಕೆ ಇರಾಕಿನಲ್ಲಿ ಯಾವುದೇ ಬಗೆಯ ಸಮೂಹನಾಶಕ ಶಸ್ತ್ರಾಸ್ತ್ರಗಳು ದೊರೆಯಲಿಲ್ಲ. ಇರಾಕ್ ಮೇಲೆ ಆಕ್ರಮಣ ಮಾಡುವುದಕ್ಕಿಂತ ತುಸು ಮುಂಚೆ ಶಸ್ತ್ರಾಸ್ತ್ರ ಪರಿವೀಕ್ಷಣಾ ತಂಡದ ಮುಖ್ಯಸ್ಥ ಹ್ಯಾನ್ಸ್ ಬ್ಲಿಕ್ಸ್, ತಪಾಸಣೆಯಲ್ಲಿ ಇರಾಕ್ ಸಹಕರಿಸುತ್ತಿದೆ ಹಾಗೂ ಸಹಕಾರ ಇದೇ ರೀತಿಯಲ್ಲಿ ಮುಂದುವರಿದರೆ ಇರಾಕ್ ನಿಶ್ಯಸ್ತ್ರೀಕರಣವಾದ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಖಚಿತವಾಗಿ ಹೇಳಲಾಗುವುದು ಎಂದು ವಿಶ್ವಸಂಸ್ಥೆ ರಕ್ಷಣಾ ಸಮಿತಿಗೆ ವರದಿ ಮಾಡಿದ್ದರು.
ಭಯೋತ್ಪಾದನೆಯ ಮೇಲೆ ಜಾಗತಿಕವಾಗಿ ಯುದ್ಧ ಸಾರಿದ ಸಂದರ್ಭದಲ್ಲಿ ಜಾರ್ಜ್ ಟೆನೆಟ್ ಅವರ ನೇತೃತ್ವದ ಸೆಂಟ್ರಲ್ ಇಂಟಲಿಜೆನ್ಸ್ ಏಜನ್ಸಿ (ಸಿಐಏ) ಅಫಘಾನಿಸ್ತಾನದ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿ ಇನ್ನಿಲ್ಲದ ಮಾನ್ಯತೆ ಪಡೆಯಿತು. ಆದರೆ ರಹಸ್ಯ ಸಭೆಯೊಂದರಲ್ಲಿ ಸಿಐಏ ಮುಖ್ಯಸ್ಥ ಟೆನೆಟ್ ಅಲ್-ಕೈದಾ ಹಾಗೂ ಇರಾಕ್ ನಡುವೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ಅಮೇರಿಕಾದ ಅಧ್ಯಕ್ಷ ಬುಷ್ ಅವರಿಗೆ ವಿಷದವಾಗಿ ವಿವರಿಸಿದ್ದರು. ಆದರೆ ಉಪಾಧ್ಯಕ್ಷ ಡಿಕ್ ಚಿನೆ ಹಾಗೂ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್ ರಂಫೆಲ್ಡ್ ಸಿಐಏ ಹಾಗೂ ಟೆನೆಟ್ ಅವರನ್ನು ನಿರ್ಲಕ್ಷಿಸಿ ಆ ಎಲ್ಲಾ ಮಾಹಿತಿಗಳ ಮರುಪರಿಶೀಲನೆಗೆ ರಹಸ್ಯವಾಗಿ ಚಾಲನೆ ನೀಡಿದರು. ಈ ರಹಸ್ಯ ಕಾರ್ಯಕ್ರಮದ ಅಂಗವಾಗಿ ರಕ್ಷಣಾ ಉಪಕಾರ್ಯದರ್ಶಿ ಪೌಲ್ ವೂಲ್ಫ್ವಿಟ್ಜ್ ಅವರು ಡಾಗ್ಲಾಸ್ ಫೀತ್ ಅವರ ನೇತೃತ್ವದಲ್ಲಿ ’ವಿಶೇಷ ಯೋಜನೆಗಳ ಕಚೇರಿ’ (ಒಎಸ್ಪಿ) ಎಂಬ ಹೆಸರಿನ ಪೆಂಟಗಾನ್ನ ಘಟಕವೊಂದನ್ನು ಸ್ಥಾಪಿಸಿದರು. ಇದರ ಮುಖ್ಯ ಕಾರ್ಯವೆಂದರೆ ಸಿಐಏ ಈವರೆಗೆ ನಡೆಸಿದ ಸಾಂಪ್ರದಾಯಿಕ ಗೂಢಾಚಾರಿಕೆಗೆ ತದ್ವಿರುದ್ಧವಾಗಿ ಇರಾಕ್ಗೆ ಸಂಬಂಧಿಸಿದ ಮಾಹಿತಿಗಳನ್ನು ಅಮೇರಿಕಾದ ಅಧ್ಯಕ್ಷರಿಗೆ ಒದಗಿಸುವುದು. ಹೀಗೆ ಒಎಸ್ಪಿ ಒದಗಿಸಿದ ಅರೆಬೆಂದ ಮಾಹಿತಿಗಳ ಸತ್ಯಾಸತ್ಯತೆಯನ್ನು ಸರಿಯಾಗಿ ಪರಿಶೀಲಿಸದೇ ನೇರವಾಗಿ ಸ್ವೀಕರಿಸುತ್ತಿದ್ದ ಚೀನೆ ಅವರು ಅದನ್ನೇ ನೇರವಾಗಿ ಸಾರ್ವಜನಿಕರ ಮುಂದಿಡುತ್ತಿದ್ದರು. ಇನ್ನು ಕೆಲವು ಸಂದರ್ಭಗಳಲ್ಲಿ ಸ್ವತಃ ಚೀನೆ ಅವರ ಕಚೇರಿ ಮಾಧ್ಯಮಗಳಿಗೆ ಕೆಲವು ಮಾಹಿತಿಗಳನ್ನು ಸೋರಿಕೆ ಮಾಡಿತ್ತು. ಹೀಗೆ ಸೋರಿಕೆಯಾದ ಸುದ್ಧಿ ದಿ ನ್ಯೂಯಾರ್ಕ್ ಟೈಮ್ಸ್ ರೀತಿಯ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಗುತ್ತಿತ್ತು. ಸಂಡೇ ಪೊಲಿಟಿಕಲ್ ಟಾಕ್ ಶೋಗಳಲ್ಲಿ ಆಗಾಗ್ಗೆ ಕಾಣಿಸಿಕೊಂಡು ಗುಪ್ತಚರ ಮಾಹಿತಿಗಳ ಕುರಿತು ಚರ್ಚಿಸುತ್ತಿದ್ದ ಚೀನೆ ಅವರು ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗಳ ವರದಿಗಳನ್ನು ಉದಾಹರಿಸಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಗಲ್ಫ್ ಯುದ್ಧಕ್ಕಿಂತ ಮೊದಲು.550 short tons (500 t) 1990ರಲ್ಲಿ, ಇರಾಕ್ ಸರ್ಕಾರ ದಕ್ಷಿಣ ಬಾಗ್ದಾದ್ನಲ್ಲಿರುವ ತುವೈತಾ ನ್ಯೂಕ್ಲಿಯರ್ ಕಾಂಪ್ಲೆಕ್ಸ್ನಲ್ಲಿ 20 kilometres (12 mi)ರಷ್ಟು ಯುರೇನಿಯಮ್ನ ಹಳದಿಕೇಕ್ಗಳನ್ನು ಶೇಖರಿಸಿಟ್ಟಿತ್ತು. ಇರಾಕ್ ನೈಜರ್ನಿಂದ ಯುರೇನಿಯಮ್ನ ಹಳದಿ ಕೇಕ್ಗಳನ್ನು ಕೊಳ್ಳುತ್ತಿದೆ ಎಂಬ ವರದಿಗಳು (ನಂತರ ಈ ವರದಿಗಳು ನಕಲಿ ಎಂದು ತಿಳಿದು ಬಂದಿತು) ಬಂದ ಕಾರಣ ಆ ಕುರಿತು ತನಿಖೆ ನಡೆಸಲು ಸಿಐಏ 2002ರ ಫೆಬ್ರುವರಿ ತಿಂಗಳ ಕೊನೆಯ ಭಾಗದಲ್ಲಿ ಮಾಜಿ ರಾಯಭಾರಿ ಜೋಸೆಫ್ ವಿಲ್ಸನ್ ಅವರನ್ನು ಇರಾಕ್ಗೆ ಕಳುಹಿಸಿಕೊಟ್ಟಿತು. ತನಿಖೆ ನಡೆಸಿ ಹಿಂದಿರುಗಿದ ವಿಲ್ಸನ್ ಅವರು ಇರಾಕ್ ಹಳದಿಕೇಕ್ಗಳನ್ನು ಶೇಖರಿಸುತ್ತಿದೆ ಎಂಬುದು “ಸ್ಪಷ್ಟವಾದ ಸುಳ್ಳು” ಎಂದು ಸಿಐಏಗೆ ವರದಿಯೊಪ್ಪಿಸಿದರು. ಆದರೂ ಬುಷ್ ಸರ್ಕಾರ ಇರಾಕ್ ಹೆಚ್ಚುವರಿ ಹಳದಿ ಕೇಕ್ಗಳನ್ನು ಶೇಖರಿಸುತ್ತಿದೆ ಎಂಬುದಾಗಿ ಆಪಾದನೆ ಮಾಡುತ್ತಲೇ ಇತ್ತು. ನಂತರ ಈ ಆಪಾದನೆಗಳನ್ನೇ ತನ್ನ ಆಕ್ರಮಣದ ಸಮರ್ಥನೆಗೆ ಬಳಸಿಕೊಳ್ಳತೊಡಗಿತು. ಅದರಲ್ಲೂ 2003ರ ಜನವರಿಯಲ್ಲಿ ನಡೆದ ಸ್ಟೇಟ್ ಆಫ್ ಯೂನಿಯನ್ ಸಭೆಯಲ್ಲಿ ಬುಷ್ ಅವರು ಬ್ರಿಟಿಷ್ ಗುಪ್ತಚರ ಮಾಹಿತಿಯನ್ನು ಉದಾಹರಿಸಿ ಇರಾಕ್ ಯುರೇನಿಯಮ್ ಸಂಗ್ರಹದಲ್ಲಿ ತೊಡಗಿದೆ ಎಂದು ನೇರವಾಗಿ ಆಪಾದಿಸಿದರು.
ಇದಕ್ಕೆ ಪ್ರತಿಕ್ರಿಯೆ ಎಂಬಂತೆ ನ್ಯೂಯಾರ್ಕ್ ಟೈಮ್ಸ್ನ 2003 ಜೂನ್ ತಿಂಗಳ ಆವೃತ್ತಿಯಲ್ಲಿ ಆಪ್-ಎಡ್ (ಸಂಪಾದಕೀಯ ಪುಟದ ವಿರುದ್ಧವಾದ ಪುಟ) ಪುಟದಲ್ಲಿ ವಿಲ್ಸನ್ ಅಮೇರಿಕಾದ ಅಧ್ಯಕ್ಷರ ನಿಲುವನ್ನು ವಿರೋಧಿಸಿ ಲೇಖನ ಬರೆದರು. ತಾವು ಸ್ವತಃ ತನಿಖೆ ನಡೆಸಿದ್ದು ಇರಾಕ್ ಯುರೇನಿಯಮ್ ಹಳದಿ ಕೇಕ್ಗಳನ್ನು ಸಂಗ್ರಹಿಸುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ವಿಲ್ಸನ್ ಆ ಲೇಖನದಲ್ಲಿ ಒತ್ತಿ ಹೇಳಿದ್ದರು. ವಿಲ್ಸನ್ ಅವರ ಆಪ್-ಎಡ್ ಲೇಖನದ ಬಳಿಕ ವಿಲ್ಸನ್ ಅವರ ಮಡದಿ ವ್ಯಾಲರಿ ಪ್ಲಾಮ್ ಅವರು ಸಿಐಏ ವಿಶ್ಲೇಷಕಿ ಎಂಬ ಸಂಗತಿಯನ್ನು ಅಂಕಣಕಾರರೊಬ್ಬರು ಬಹಿರಂಗಪಡಿಸಿದರು. ನಂತರ ಮಾಹಿತಿ ಸೋರಿಕೆಯಾದದ್ದನ್ನು ನ್ಯಾಯಾಲಯ ತನಿಖೆಗೆ ಒಳಪಡಿಸಲಾಯಿತು. 2005 ಮೇ 1ರಂದು ದಿ ಸಂಡೇ ಟೈಮ್ಸ್ ಪತ್ರಿಕೆಯಲ್ಲಿ “ಡೌನಿಂಗ್ ಸ್ಟ್ರೀಟ್ ಮೆಮೊ” ಪ್ರಕಟಗೊಂಡಿತು. ಅದರಲ್ಲಿ ಇರಾಕ್ ಯುದ್ಧಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದ ಬ್ರಿಟಿಷ್ ಸರ್ಕಾರ, ರಕ್ಷಣಾ ಸಚಿವಾಲಯ ಹಾಗೂ ಬ್ರಿಟಿಷ್ ಗುಪ್ತಚರ ಇಲಾಖೆಯ ಅಧಿಕಾರಿಗಳ ನಡುವೆ 2002 ಜೂನ್ 23ರಂದು ನಡೆದ ರಹಸ್ಯ ಸಭೆಯ ಸಾರಾಂಶ ನೀಡಲಾಗಿತ್ತು. ಮಾತ್ರವಲ್ಲ ಈ ವರದಿಯಲ್ಲಿ ಆ ಸಂದರ್ಭದ ಅಮೇರಿಕಾದ ನೀತಿಯ ಕುರಿತಾದ ರಹಸ್ಯ ದಾಖಲಾತಿಗಳನ್ನೂ ಪ್ರಕಟಪಡಿಸಲಾಯಿತು. “ಸೇನಾ ಕಾರ್ಯಾಚರಣೆಯ ಮೂಲಕ ಸದ್ದಾಂ ಹುಸೇನ್ ಅವರನ್ನು ನಿರ್ಮೂಲನೆಗೊಳಿಸುವುದು ಹಾಗೂ ಆ ಕಾರ್ಯವನ್ನು ಸಮೂಹ ನಾಶಕ ಶಸ್ತ್ರಾಸ್ತ್ರಗಳು ಹಾಗೂ ಭಯೋತ್ಪಾದನೆಯ ನೆಪ ಹೇಳುವುದು ಬುಷ್ ಅವರ ಯೋಜನೆಯಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಗುಪ್ತಚರ ಮಾಹಿತಿಗಳನ್ನು, ಅಂಕಿ-ಅಂಶಗಳನ್ನು ನೀತಿಗೆ ಪೂರಕವಾಗುವಂತೆ ತಿರುಚಲಾಗಿದೆ” ಎಂದು ಸೂಚನೆಯನ್ನು ಬಹಿರಂಗಪಡಿಸಿತ್ತು. ಸಿಐಏ ಇರಾಕಿನ ವಿದೇಶಾಂಗ ಮಂತ್ರಿಯಾಗಿದ್ದ ನಜಿ ಸಾಬ್ರಿ ಅವರನ್ನು ಸಂಪರ್ಕಿಸಿತು. ಅದಾಗಲೇ ಫ್ರಾನ್ಸ್ನ ಏಜೆಂಟ್ ಆಗಿ ಹಣಗಳಿಸುತ್ತಿದ್ದ ನಜಿ ಸಾಬ್ರಿ, ಸದ್ದಾಂ ಸುನ್ನಿ ಬುಡಕಟ್ಟುಗಳಲ್ಲಿ ವಿಷಕಾರಿ ಅನಿಲಗಳನ್ನು ಅಡಗಿಸಿಟ್ಟಿರುವುದು ಹಾಗೂ ಅಣ್ವಸ್ತ್ರ ಕಾರ್ಯಕ್ರಮ ಹಮ್ಮಿಕೊಳ್ಳುವ ಇರಾದೆ ಹೊಂದಿದ್ದಾಗಿಯೂ ಆದರೆ ಈಗ ಆ ಕಾರ್ಯಕ್ರಮ ನಿಷ್ಕ್ರಿಯಗೊಂಡಿರುವುದಾಗಿಯೂ ಸಿಐಏಗೆ ತಿಳಿಸಿದರು. ಅದರ ಜೊತೆ, ಯಾವುದೇ ಬಗೆಯ ಜೈವಿಕ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲಾಗುತ್ತಿಲ್ಲ ಅಥವಾ ಶೇಖರಿಸಲಾಗುತ್ತಿಲ್ಲವಾದರೂ ಆ ನಿಟ್ಟಿನಲ್ಲಿ ಸಂಶೋಧನೆ ನಡೆದಿದೆ ಎಂಬ ಸಂಗತಿಗಳನ್ನೂ ನಜಿ ಸಾಬ್ರಿ ಸಿಐಏ ಕಿವಿಗೆ ಹಾಕಿದರು. 2002 ಸೆಪ್ಟೆಂಬರ್ 18ರಂದು ಸಿಡ್ನಿ ಬ್ಲುಮೆತಾಲ್ ಹಾಗೂ ಜಾರ್ಜ್ ಟೆನೆಟ್ ಅವರು, ಇರಾಕ್ ಯಾವುದೇ ಬಗೆಯ ಸಮೂಹನಾಶಕ ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲ ಎಂಬ ಸಂಗತಿಯನ್ನು ನಜಿ ಸಾಬ್ರಿ ಅವರೇ ಹೇಳಿದ್ದಾರೆ ಎಂಬುದಾಗಿ ಬುಷ್ ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಆದರೆ ಸದ್ದಾಂ ಹುಸೇನ್ರ ಆಂತರಿಕ ವಲಯದಿಂದ ಬಂದ ಹಾಗೂ ಸಿಐಏಯ ಹಿರಿಯ ಅಧಿಕಾರಿಗಳು ಅನುಮೋದಿಸಿದ ಈ ಮಾಹಿತಿಯನ್ನು ಒಪ್ಪಿಕೊಳ್ಳಲು ಬುಷ್ ತಯಾರಿರಲಿಲ್ಲ. ಈ ಮಾಹಿತಿಯ ಕುರಿತು ಕಾಂಗ್ರೆಸ್ನೊಂದಿಗೆ ಯಾವ ಚರ್ಚೆಯನ್ನೂ ನಡೆಸಲಿಲ್ಲ. ಅಥವಾ ಸಿಐಏ ಏಜೆಂಟ್ಗಳೇ ಸದ್ದಾಂ ಈ ಬಗೆಯ ಶಸ್ತ್ರಾಸ್ತ್ರಗಳನ್ನು ಹೊಂದಿರಬಹುದೇ ಎಂದು ಪರೀಕ್ಷೆ ನಡೆಸತೊಡಗಿದರು.
2002 ಸೆಪ್ಟೆಂಬರ್ ತಿಂಗಳಲ್ಲಿ ಬುಷ್ ಆಡಳಿತ, ಸಿಐಏ ಹಾಗೂ ಡಿಐಏಗಳು ವಿಶ್ವಸಂಸ್ಥೆ ಪರಿವೀಕ್ಷಣಾ ಕಾರ್ಯಕ್ರಮದ ಅಂಗವಾಗಿ ನಿಷೇಧಿಸಲಾದ ಅಲ್ಯುಮಿನಿಯಂ ಟೂಬ್ಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಸಂಗ್ರಹಿಸಲು ಇರಾಕ್ ಪ್ರಯತ್ನಿಸುತ್ತಿದೆ ಮತ್ತು ಆ ಮೂಲಕ ಅಣುಬಾಂಬ್ ತಯಾರಿಕೆಗೆ ಅವಶ್ಯವಿರುವ ಯುರೇನಿಯಮ್ ಅನ್ನು ರಹಸ್ಯವಾಗಿ ಶೇಖರಿಸುತ್ತಿದೆ ಎಂದು ಘೋಷಿಸಿದವು. ಆದರೆ ಈ ವಿಶ್ಲೇಷಣೆಯನ್ನು ಅಮೇರಿಕಾದ ಇಂಧನ ಇಲಾಖೆ (ಡಿಒಇ) ಹಾಗೂ ಐಎನ್ಆರ್ ಅಲ್ಲಗಳೆದವು. ಅಮೆರಿದ ಸರ್ಕಾರದ ಮಟ್ಟದಲ್ಲಿಯೇ ಎದುರಾದ ಈ ವಿರೋಧವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಬೇಕು. ಇದನ್ನು ಈ ಬಗೆಯ ಗ್ಯಾಸ್ ಸೆಂಟ್ರಿಫ್ಯೂಜ್ ಹಾಗೂ ಅಣ್ವಸ್ತ್ರ ಕಾರ್ಯಕ್ರಮಗಳ ಕುರಿತು ಡಿಒಇ ಹೊಂದಿದ ಪ್ರಾವೀಣ್ಯತೆಯ ಹಿನ್ನೆಲೆಯಲ್ಲಿ ಗಮನಿಸಬೇಕು. ಇರಾಕ್ ಸಂಗ್ರಹಿಸಿದ ಟ್ಯೂಬ್ಗಳು ಸೆಂಟ್ರಿಫ್ಯೂಜ್ಗಳ ತಯಾರಿಕೆಗೆ ಇರಾಕ್ ಸಂಗ್ರಹಿಸಿದ ಟ್ಯೂಬ್ಗಳನ್ನು ಅಣ್ವಸ್ತ್ರಗಳ ಹೆಚ್ಚುವರಿ ಸುಧಾರಣೆಗೆ ಬಳಸಬಹುದೇ ವಿನಾ ಹೊಸ ಅಣ್ವಸ್ತ್ರ ತಯಾರಿಕೆಗೆ ಇವುಗಳಿಂದ ಯಾವ ರೀತಿಯ ಪ್ರಯೋಜನಗಳೂ ಇಲ್ಲ ಎಂದು ಡಿಒಇ ಹಾಗೂ ಐಎನ್ಆರ್ ಸ್ಪಷ್ಟಪಡಿಸಿದವು. 2002ರಲ್ಲಿ ಇನ್ಸ್ಟಿಟ್ಯೂಟ್ ಫಾರ್ ಸೈನ್ಸ್ ಅಂಡ್ ಸೆಕ್ಯುರಿಟಿ ಬಿಡುಗಡೆಗೊಳಿಸಿದ ವರದಿ ಕೂಡ ಡಿಒಇ ಹಾಗೂ ಐಎನ್ಆರ್ ಸಂಸ್ಥೆಗಳು ವ್ಯಕ್ತಪಡಿಸಿದ ಅಭಿಪ್ರಾಯವನ್ನೇ ಅನುಮೋದಿಸಿತ್ತು. ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಕಾಲಿನ್ ಪಾವೆಲ್ ವಿಶ್ವಸಂಸ್ಥೆಯಲ್ಲಿ ಮಂಡಿಸಲಿದ್ದ ವರದಿಯಲ್ಲಿದ್ದ ತಪ್ಪು ಗ್ರಹಿಕೆಗಳನ್ನು ತಿದ್ದಲು ಡಿಒಇ ಮಾಡಿದ ಪ್ರಯತ್ನವನ್ನೆಲ್ಲಾ ಸರ್ಕಾರ ವಿಫಲಗೊಳಿಸಿತು. ಹಾಗೂ ಇರಾಕ್ ಯುದ್ಧಕ್ಕಿಂತ ಕೊಂಚ ಮೊದಲು ವಿಶ್ವಸಂಸ್ಥೆಯ ರಕ್ಷಣಾ ಸಮಿತಿಯಲ್ಲಿ ಮಾಡಿದ ಭಾಷಣದಲ್ಲಿ ವಿದೇಶಾಂಗ ಕಾರ್ಯದರ್ಶಿಯಾದ ಕಾಲಿನ್ ಪಾವೆಲ್, ಇರಾಕಿನ ಸಂಗ್ರಹದಲ್ಲಿರುವ ಅಲ್ಯೂಮಿನಿಯಂ ಟ್ಯೂಬ್ಗಳನ್ನು ಪ್ರಸ್ತಾಪಿಸುತ್ತಾ ಸೆಂಟ್ರಿಫ್ಯೂಜ್ ಕಾರ್ಯಕ್ರಮಗಳಲ್ಲಿ ಅವುಗಳ ಬಳಕೆಯ ಕುರಿತು ತಜ್ಞರಲ್ಲಿ ಭಿನ್ನಾಭಿಪ್ರಾಯಗಳಿದ್ದಾಗ್ಯೂ ಟ್ಯೂಬ್ಗಳ ನಿರ್ದಿಷ್ಟತೆ ಅತ್ಯಂತ ಸಂಕೀರ್ಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಂತರ ಪಾವೆಲ್ ಇರಾಕ್ ಕುರಿತು ತಾವು ವಿಶ್ವಸಂಸ್ಥೆಯಲ್ಲಿ ಪ್ರಸ್ತುತ ಪಡಿಸಿದ ದಾಖಲೆಗಳು ತಜ್ಞರಿಂದ ಅಲ್ಲಗಳೆಯಲ್ಪಟ್ಟಿದ್ದವು ಎಂಬುದನ್ನು ಒಪ್ಪಿಕೊಂಡಿದ್ದರು. ಮಾತ್ರವಲ್ಲ ತಾವು ಕೆಲವು ಸಂದರ್ಭಗಳಲ್ಲಿ “ಉದ್ದೇಶಪೂರ್ವಕವಾಗಿ ಹಾದಿ ತಪ್ಪಿಸುವ” ಮಾಹಿತಿಗಳ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾಗಿಯೂ ಒಪ್ಪಿಕೊಂಡಿದ್ದರು. ವಿಶ್ವಸಂಸ್ಥೆಯ ಅಧ್ಯಕ್ಷೀಯ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ, 2008ರಲ್ಲಿ, ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾದ ಬರಾಕ್ ಒಬಾಮ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅಧ್ಯಕ್ಷ ಬುಷ್ ಅವರು “ನನ್ನ ಅಧ್ಯಕ್ಷೀಯ ಅವಧಿಯಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ಪ್ರಮಾದವೆಂದರೆ ಇರಾಕಿನ ವಿಷಯದಲ್ಲಾದ ಗುಪ್ತಚರ ಇಲಾಖೆಯ ವೈಫಲ್ಯ” ಎಂದು ಒಪ್ಪಿಕೊಂಡಿದ್ದರು. 2009 ಡಿಸೆಂಬರ್ನಲ್ಲಿ, ಮಾಜಿ ಪ್ರಧಾನಿ ಟೋನಿ ಬ್ಲೇರ್, ಇರಾಕ್ ಸಮೂಹ ನಾಶಕ ಶಸ್ತ್ರಾಸ್ತ್ರಗಳನ್ನು ಹೊಂದಿತ್ತೋ ಇಲ್ಲವೋ ಅದು ಬೇರೆ ಪ್ರಶ್ನೆ, ಆದರೆ ತಾವೆಂದಿಗೂ “ಸದ್ದಾಂ ಅವರನ್ನು ಇರಾಕಿನಿಂದ ನಿರ್ಮೂಲನೆಗೊಳಿಸಿದ್ದು ಸರಿ” ಎಂದೇ ಭಾವಿಸುವುದಾಗಿ ಹೇಳಿದ್ದರು.
2002ರ ಸಮಯದಲ್ಲಿ ಇರಾಕಿನ ವಿಮಾನ ಹಾರಾಟ ನಿಷೇಧಿತ ಸ್ಥಳದಲ್ಲಿ ಬ್ರಿಟಿಷ್ ಮತ್ತು ಅಮೇರಿಕಾದ ವಿಮಾನಗಳು ಫಿರಂಗಿಗಳನ್ನು ಹೆಚ್ಚು ಬಳಸಿ ಗಸ್ತು ತಿರುಗುವುದನ್ನು ಹೆಚ್ಚು ಮಾಡಿದವು ಮತ್ತು ಆಗಸ್ಟ್ನಲ್ಲಿ "ಪೂರ್ಣ ಪ್ರಮಾಣದ ಆಕ್ರಮಣವನ್ನಾರಂಭಿಸಿದವು". ಒಕ್ಕೂಟದ ಕಮಾಂಡರಾದ ಟಾಮಿ ಫ್ರಾಂಕ್ಸ್ ಇರಾಕಿನ ವಾಯು ರಕ್ಷಣಾದಳದ ಆಕ್ರಮಣದ ಮೊದಲೇ "ನಾಶ"ಗೊಳಿಸಲು ಬಾಂಬ್ ದಾಳಿಯನ್ನು ಆರಂಭಿಸಿದರು. ಅಕ್ಟೋಬರ್ 2002ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ಸೆನೆಟ್ ಇರಾಕ್ ವಿರುದ್ಧ ಅಮೇರಿಕಾ ಸಂಯುಕ್ತ ಸಂಸ್ಥಾನದ ಸೈನ್ಯ ಬಲ ಉಪಯೋಗದ ಕುರಿತು ಜಂಟಿ ಮಸೂದೆಯನ್ನು ಸುಮಾರು 75 ಸೆನೆಟ್ ಸದಸ್ಯರು ಗುಪ್ತ ಅಧಿವೇಶನದಲ್ಲಿ ಮತ ಚಲಾಯಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಇರಾಕ್ ಪೂರ್ವ ಸಮುದ್ರದೆಡೆಯಿಂದ ಅಮೇರಿಕಾದ ಮೇಲೆ ಜೈವಿಕ ಅಥವಾ ರಾಸಾಯನಿಕ ಅಸ್ತ್ರವನ್ನು ವಾಯುಮಾರ್ಗದಲ್ಲಿ ಮಾನವೇತರ ಯಂತ್ರದಿಂದ ಚಲಾಯಿತ ವಾಯು ಮಾರ್ಗದ ವಾಹನದಿಂದ ಪ್ರಯೋಗಿಸುವ ಭಯ (ಯುಎವಿಗಳು) ಇದ್ದಿದ್ದರಿಂದ ಅದನ್ನು ಗುಪ್ತ ಅಧಿವೇಶನದ ಮೂಲಕ ನಿರ್ಧರಿಸಲಾಯಿತು. ಫೆಬ್ರವರಿ 5, 2003, ಕೊಲಿನ್ ಪೊವೆಲ್ ಯುಎನ್ ರಕ್ಷಣಾ ಸಮಿತಿಗೆ ತನ್ನ ಇರಾಕಿ ಡಬ್ಲುಎಮ್ಡಿ ಕಾರ್ಯಕ್ರಮದ ಪ್ರದರ್ಶನದಲ್ಲಿ, ಯುಎವಿಗಳು ಯುಎಸ್ನ ವಿರುದ್ಧವಾಗಿ ಯುದ್ಧ ಪ್ರಾರಂಭಿಸಲು ಸಿದ್ಧವಿದೆ ಎನ್ನುವುದಕ್ಕೆ ಇನ್ನಷ್ಟು ಸಾಕ್ಷ್ಯಗಳನ್ನು ಒದಗಿಸಿದ, ಆ ಸಮಯದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ಸೈನ್ಯ ಮತ್ತು ಸುದ್ಧಿ ಸಮುದಾಯಗಳ ನಡುವೆ ಇರಾಕಿ ಯುಎವಿಗಳು ಖಚಿತವಾಗಿವೆಯೆಂಬ ಸಿಐಎ ನಿರ್ಣಯಗಳ ಬಗೆಗೆ ಜೋರಾದ ವಿವಾದಗಳುಂಟಾದವು, ಮತ್ತು ಇತರ ಗುಪ್ತವಾರ್ತಾ ವಿಭಾಗಗಳು ಇರಾಕ್ ಯಾವುದೇ ಯುಎವಿ ಆಕ್ರಮಣಗಳನ್ನು ಮಾಡುವುದಿಲ್ಲ ಎಂದು ಸಲಹೆ ನೀಡಿದವು, ಅವರಲ್ಲಿ ಕೆಲವರು ರಕ್ಷಣೆಯನ್ನು ಬಯಸುತ್ತಿದ್ದಾರೆ ಮತ್ತು ಸ್ಥಳಾನ್ವೇಷಣೆ ಮಾಡಲು ಇಚ್ಛಿಸುತ್ತಿದ್ದಾರೆ ಎಂದು ಹೇಳಿದರು. ಪರಿಷತ್ತು ದ್ವಿಪಕ್ಷದ ಬೆಂಬಲದೊಂದಿಗೆ ಅಮೇರಿಕಾ ಸಂಯುಕ್ತ ಸಂಸ್ಥಾನ ಕಾನೂನಿನಡಿಯಲ್ಲಿ ಬುಷ್ ಆಡಳಿತದ ಅಮೇರಿಕಾ ಸಂಯುಕ್ತ ಸಂಸ್ಥಾನ ಆಕ್ರಮಣದ ಕಾನೂನಿನ ಆಧಾರವನ್ನೊದಗಿಸಿ ಜಂಟಿ ಗೊತ್ತುವಳಿಯನ್ನು ಅಕ್ಟೋಬರ್ 11, 2002ರಲ್ಲಿ ಅಂಗೀಕರಿಸಿದವು. ಗೊತ್ತುವಳಿಯು ಸಂಯುಕ್ತ ಸಂಸ್ಥಾನಗಳ ಸಂವಿಧಾನದಿಂದ ಅಧಿಕಾರವನ್ನು ನೀಡಿತು ಮತ್ತು ಸಂಯುಕ್ತ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರಿಗೆ ಸೈನ್ಯವನ್ನು ಸಂಯುಕ್ತ ಸಂಸ್ಥಾನಗಳ ಹಿಂಸೆಯ ವಿರುದ್ಧ ನಿಯಂತ್ರಿಸಲು ಅಧಿಕಾರ ನೀಡಿತು. 1998ರ ಇರಾಕ್ ಸ್ವತಂತ್ರ ಕಾಯ್ದೆಯನ್ನುಲ್ಲೇಖಿಸಿ ಇದು ಹುಸೇನ್ರ ಸರ್ವಾಧಿಕಾರವನ್ನುರುಳಿಸಿ ಪ್ರಜಾಸತ್ತೀಯ ಸರ್ಕಾರವನ್ನು ರಚಿಸುವುದು ಸಂಯುಕ್ತ ಸಂಸ್ಥಾನಗಳ ನಿಯಮವಾಗಬೇಕೆಂದು ಗೊತ್ತುವಳಿಯು ಪುನರುಚ್ಚರಿಸಿತು. ಯುಎನ್ನ ಮುಖ್ಯ ಆಯುಧಗಳ ತನಿಖಾಧಿಕಾರಿ ಹಾನ್ಸ್ ಬ್ಲಿಕ್ಸ್ ಜನವರಿ 2003ರಲ್ಲಿ "ಇರಾಕ್ ಸಹಜವಾಗಿ ಸಮ್ಮತಿಯನ್ನು ನೀಡಿದ್ದಂತೆ ಕಾಣುತ್ತಿಲ್ಲ—ಇವತ್ತಿಗೂ ಸಹ ನೀಡಿಲ್ಲ—ಅದರ ನಿಶ್ಯಸ್ತ್ರೀಕರಣವು ಶಾಂತಿಯಿಂದ ಜೀವಿಸಲು ಮತ್ತು ಪ್ರಪಂಚದ ವಿಶ್ವಾಸವನ್ನು ಗಳಿಸಲಿಕ್ಕಾಗಿಯೇ ಆಗಿದೆ" ಎಂದು ಗುರುತಿಸಿದನು. ಅವನು ಗಮನಿಸಿದ ಇನ್ನಿತರ ಅಂಶಗಳೆಂದರೆ 1,000 short tons (910 t) ರಾಸಾಯನಿಕಗಳು ವಿವರಣೆ ನೀಡಲಾಗದಂತಿದ್ದು, ಇರಾಕಿನ ವಿಎಕ್ಸ್ ನರ್ವ್ ಎಜೆಂಟ್ ಕಾರ್ಯಕ್ರಮದ ಮಾಹಿತಿಯು ದೊರೆಯಲಿಲ್ಲ, ಮತ್ತು "ಯಾವುದೇ ಮನಗಾಣಿಸುವ ಸಾಕ್ಷ್ಯಗಳನ್ನು" 8,500 litres (1,900 imp gal; 2,200 US gal)ನ್ನು ನಾಶಗೊಳಿಸಲು ಆಯ್೦ಥ್ರಾಕ್ಸ್ನ್ನು ಬಳಸಿಲ್ಲ ಎಂದು ಘೋಷಿಸಿದನು.
ಫೆಬ್ರವರಿ 3, 2003ರಲ್ಲಿ ವಿದೇಶಾಂಗ ಖಾತೆಯ ಕಾರ್ಯದರ್ಶಿ ಕೊಲಿನ್ ಪೊವೆಲ್ ಯುಎನ್ಗಿಂತ ಮೊದಲು ಬಂದು ಇರಾಕಿನ ಅಸಾಂಪ್ರದಾಯಿಕ ಅಸ್ತ್ರಗಳನ್ನು ಅವಿತಿಟ್ಟಿರುವ ಬಗ್ಗೆ ಅಮೇರಿಕಾದ ಸಾಕ್ಷ್ಯವನ್ನು ಪ್ರದರ್ಶಿಸಿದರು. ಫ್ರೆಂಚ್ ಸರ್ಕಾರವೂ ಸಹ ಸದ್ದಾಮ್ ಆಯ್೦ಥ್ರಾಕ್ಸ್ ಮತ್ತು ಬೊಟುಲಿಸಮ್ ವಿಷಕಾರಿ ,ಮತ್ತು ವಿಎಕ್ಸ್ಗಳನ್ನುಂಟುಮಾಡುವ ವಸ್ತುಗಳ ಸಂಗ್ರಹವನ್ನು ಹೊಂದಿದ್ದರೆಂದು ನಂಬಿತ್ತು. ಬ್ಲಿಕ್ಸ್ ಮಾರ್ಚ್ನಲ್ಲಿ ತನಿಖೆಯಲ್ಲಿ ಪ್ರಗತಿಯಾಗಿದೆ ಮತ್ತು ಡಬ್ಲುಎಮ್ಡಿಯ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿದನು. 2003ರ ಪ್ರಾರಂಭದಲ್ಲಿ, ಅಮೇರಿಕಾ ಸಂಯುಕ್ತ ಸಂಸ್ಥಾನ, ಬ್ರಿಟಿಷ್, ಮತ್ತು ಸ್ಪ್ಯಾನಿಷ್ ಸರ್ಕಾರಗಳು ಇರಾಕ್ಗೆ ಮೊದಲಿನ ಸೈನ್ಯದ ಬೆದರಿಕೆಯಲ್ಲಿ ಮಂಡಿಸಿದ ಗೊತ್ತುವಳಿಗಳನ್ನು ಅನುಮೋದಿಸಲು ಗಡುವು ನೀಡುವ "ಹದಿನೆಂಟನೇ ಗೊತ್ತುವಳಿ"ಯನ್ನು ಮಂಡಿಸಿದವು. ಯುಎನ್ ರಕ್ಷಣಾ ಸಮಿತಿಯ ಮೇಲಿನ ಬೆಂಬಲದ ಕೊರತೆಯಿಂದ ಗೊತ್ತುವಳಿಯನ್ನು ಹಿಂಪಡೆಯಲಾಯಿತು. ಅಂತರಾಷ್ಟ್ರೀಯ ಸಮುದಾಯದ ರಕ್ಷಣೆಯ ಅಪಾಯದಿಂದಾಗಿ ಮತ್ತು ರಾಜನೀತಿಯು ನಿಶ್ಯಸ್ತ್ರೀಕರಣದ ಬೆಂಬಲದಿಂದಾಗಿ ಉತ್ತರ ಅಟ್ಲಾಂಟಿಕ್ ಒಡಂಬಡಿಕೆ ಸಂಸ್ಥೆ (ನ್ಯಾಟೋ)ಸದಸ್ಯರಾದ ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ಮತ್ತು ನ್ಯಾಟೋ ಸದಸ್ಯರಲ್ಲದ ರಷ್ಯಾಗಳು ಇರಾಕಿನಲ್ಲಿ ಸೈನ್ಯದ ಹಸ್ತಕ್ಷೇಪವನ್ನು ವಿರೋಧಿಸಿದವು. ಜಾರ್ಜ್ ಡಬ್ಲು ಬುಷ್ ಮತ್ತು ಟೋನಿ ಬ್ಲೈರ್ ಜನವರಿ 31, 2003ರಂದು ಶ್ವೇತ ಭವನದಲ್ಲಿ ಸಮಾಲೋಚಿಸಿದರು. ಉದ್ದೇಶಪೂರ್ವಕವಾಗಿ ಈ ಮಾತುಕತೆಯ ರಹಸ್ಯ ಟಿಪ್ಪಣಿಯನ್ನು ಬುಷ್ ಆಡಳಿತವು ಇರಾಕ್ ಆಕ್ರಮಣವನ್ನು ನಿರ್ಧರಿಸಿವೆ ಎಂದು ತಿಳಿಸಲು ಪ್ರದರ್ಶಿಸಿದರು. U-2 ಸ್ಪೈಪ್ಲೇನ್ಗೆ ಯುಎನ್ ಬಣ್ಣಗಳನ್ನು ಹಚ್ಚಿ ಇರಾಕಿನಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಹಾರಿಸಿ ಇರಾಕಿ ಸೈನ್ಯದಿಂದ ಅದನ್ನು ಹೊಡೆದುರುಳಿಸುವಂತೆ ಮಾಡಿ, ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಬ್ರಿಟನ್ನ ಆಕ್ರಮಣಕ್ಕೆ ಒಂದು ಕಾರಣವನ್ನೊದಗಿಸುವುದು ಬುಷ್ನ ಉಪಾಯವಾಗಿತ್ತು. ಬುಷ್ ಮತ್ತು ಬ್ಲೇರ್ರು ಯುಎನ್ನ ಆಯುಧಗಳ ತನಿಖಾದಳದವರು ಡಬ್ಲುಎಮ್ಡಿಯನ್ನು ಪತ್ತೆ ಮಾಡದಿದ್ದರೂ ಆಕ್ರಮಣ ಮಾಡುವ ರಹಸ್ಯ ಒಪ್ಪಂದವನ್ನು ಮಾಡಿಕೊಂಡರು, ಬ್ಲೇರ್ ಬ್ರಿಟಿಷ್ ಹೌಸ್ ಆಫ್ ಕಾಮನ್ಸ್ಗೆ ಕೊಟ್ಟ ಹೇಳಿಕೆಯಲ್ಲಿ ಇದನ್ನು ನಿರಾಕರಿಸಿದನು, ನಂತರ ಇರಾಕಿನ ಸರ್ಕಾರಕ್ಕೆ ನಿಶ್ಯಸ್ತ್ರಗೊಳಿಸಿಕೊಳ್ಳಲು ಕೊನೆಯ ಅವಕಾಶ ನೀಡಲಾಯಿತು. ಎಚ್ಚರಿಕೆ ಪತ್ರದಲ್ಲಿ ಬುಷ್ನ ಹೇಳಿಕೆಯ ತಾತ್ಪರ್ಯವೆಂದರೆ:
“ | The start date for the military campaign was now pencilled in for 10 March. This was when the bombing would begin. | ” |
ಬುಷ್ ಬ್ಲೇರ್ಗೆ ಹೇಳುವಂತೆ "ಇರಾಕ್ ಯುದ್ಧದ ನಂತರ ಇದು ಎರಡು ವಿವಿಧ ಧರ್ಮಗಳ ಮತ್ತು ಜನಾಂಗದ ಪರಸ್ಪರ ವಿನಾಶಕ ಯುದ್ಧವಾಗಿ ಪರಿಣಮಿಸುತ್ತದೆ".
ಅಕ್ಟೋಬರ್ 2002ರಲ್ಲಿ ಯುಎಸ್ನ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಇರಾಕಿನ ವಿರುದ್ಧದ ಪೂರ್ವಭಾವಿ ಸೈನ್ಯಕಾರ್ಯಾಚರಣೆಯ ವಿರುದ್ಧ ಎಚ್ಚರಿಸಿದರು. ಯುಕೆಯಲ್ಲಿ ಲೇಬರ್ ಪಕ್ಷದ ಸಮ್ಮೇಳನದಲ್ಲಿ ಹೀಗೆ ಹೇಳುತ್ತಾನೆ: "ಇಂದಿನ ಪೂರ್ವಭಾವಿ ಕಾರ್ಯಾಚರಣೆಯನ್ನು ಹೇಗೇ ಸಮರ್ಥಿಸಿಕೊಂಡರೂ ಭವಿಷ್ಯದಲ್ಲಿ ಸ್ವಾಗತಾರ್ಹವಲ್ಲದ ಪರಿಣಾಮಗಳುಂಟಾಗುತ್ತದೆ. ನಾನಿದನ್ನು ಲಕ್ಷಿಸುವುದಿಲ್ಲ, ಏಕೆಂದರೆ ನಾನಿದನ್ನು ಮಾಡಿದ್ದೇನೆ. ಈ ರೀತಿಯ ಕಾರ್ಯಾಚರಣೆಗಾಗಿ ನಾನು ಆದೇಶ ನೀಡಿದ್ದೇನೆ. ನಿಮ್ಮ ಬಾಂಬುಗಳು ಮತ್ತು ಆಯುಧಗಳು ಎಷ್ಟೇ ನಿಖರವಾಗಿದ್ದರೂ ಅವು ಅಮಾಯಕ ಜನರನ್ನು ಕೊಲ್ಲುತ್ತದೆ."
ಜನವರಿ 20, 2003ರಂದು ಫ್ರೆಂಚ್ ವಿದೇಶಾಂಗ ಕಾರ್ಯದರ್ಶಿ ಡಾಮಿನಿಕ್ಯೂ ಡಿ ವಿಲೇಪಿನ್ "ಸೈನ್ಯದ ಹಸ್ತಕ್ಷೇಪವು ಅತ್ಯಂತ ಕೆಟ್ಟ ಪರಿಹಾರವೆಂದು ನಾವು ನಂಬುತ್ತೇವೆ" ಎಂದು ಘೋಷಿಸುತ್ತಾನೆ. ಅದಲ್ಲದೆ ಯುದ್ಧ ವಿರೋಧಿ ಗುಂಪುಗಳು ಪ್ರಂಪಂಚದಾದ್ಯಂತ ಸಾರ್ವಜನಿಕ ಪ್ರತಿಭಟನೆಯನ್ನು ಮಾಡುತ್ತವೆ. ಫ್ರೆಂಚ್ ಶಿಕ್ಷಣಕಾರ ಡಾಮಿನಿಕ್ಯೂ ರೈನಿಯೆ ಪ್ರಕಾರ ಜನವರಿ 3 ಮತ್ತು ಎಪ್ರಿಲ್ 12, 2003ರ ನಡುವೆ36 million ಫೆಬ್ರವರಿ 15, 2003ರಂದು ನಡೆದ ದೊಡ್ಡ ಮತ್ತು ಹೆಚ್ಚು ಫಲಕಾರಿಯಾದ ಬಹಿರಂಗ ಪ್ರದರ್ಶನವನ್ನೊಳಗೊಂಡಂತೆ, ಪ್ರಪಂಚದಾದ್ಯಂತ ಜನರು 3,000ಕ್ಕೂ ಹೆಚ್ಚು ಇರಾಕಿ ಯುದ್ಧದ ವಿರುದ್ದದ ಚಳುವಳಿಗಳಲ್ಲಿ ಭಾಗವಹಿಸಿದರು. ಇರಾಕನ್ನು ರಕ್ಷಿಸಲು "ಅನೇಕ ನೂರು ಸಾವಿರ ಸೈನಿಕರನ್ನು" ಬಳಸಿಕೊಳ್ಳಲಾಯಿತು ಎಂದು ಫೆಬ್ರವರಿ 2003ರಂದು ಅಮೇರಿಕಾ ಸಂಯುಕ್ತ ಸಂಸ್ಥಾನ ಸೈನ್ಯದ ಮುಖ್ಯ ಜನರಲ್ ಎರಿಕ್ ಶಿನ್ಸೆಕಿ ಪರಿಷತ್ತಿನ ಸೈನ್ಯದ ಸೇವಾ ಸಮಿತಿಗೆ ಹೇಳಿದನು. ಎರಡು ದಿನಗಳ ನಂತರ ಅಮೇರಿಕಾ ಸಂಯುಕ್ತ ಸಂಸ್ಥಾನ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್ ರಮ್ಸ್ಫಿಲ್ಡ್ ಯುದ್ದವನ್ನು ಗೆಲ್ಲಲು ಬೇಕಾಗುವ ಸೈನ್ಯಕ್ಕಿಂತ ಯುದ್ಧಾನಂತರದ ಒಪ್ಪಂದಗಳಿಗಾಗಿ ಕಡಿಮೆ ಸೈನ್ಯವು ಸಾಕಾಗುತ್ತದೆ, ಮತ್ತು "ಅನೇಕ ಸಾವಿರ ಅಮೇರಿಕಾ ಸಂಯುಕ್ತ ಸಂಸ್ಥಾನ ಸೈನ್ಯಗಳನ್ನು ಬಳಸಿಕೊಳ್ಳುತ್ತದೆನ್ನುವ ಯೋಚನೆಯು ಸರಿಯಾದುದಲ್ಲ." ಸಹಾಯಕ ರಕ್ಷಣಾ ಕಾರ್ಯದರ್ಶಿ ಪೌಲ್ ವೂಲ್ಫೊವಿಜ್ ಶಿನೆಸ್ಕಿಯ ಅಂದಾಜನ್ನು "ಗಡಿ ಮೀರಿದ್ದು" ಎಂದರು, ಏಕೆಂದರೆ ಬೇರೆ ದೇಶಗಳು ಸೈನ್ಯವನ್ನು ವಶಪಡಿಸಿಕೊಳ್ಳುವಲ್ಲಿ ಭಾಗವಹಿಸುತ್ತಿವೆ. ಮಾರ್ಚ್ 2003, ಹಾನ್ಸ್ ಬ್ಲಿಕ್ಸ್ ವರದಿಯಂತೆ ಇರಾಕಿನಲ್ಲಿ "ಇದುವರೆಗೂ ಯಾವುದೇ ನಿಷೇಧಿತ ಚಟುವಟಿಕೆಯ ಸುಳಿವು ಸಿಕ್ಕಿಲ್ಲ", ಆದರೆ ತನಿಖೆ ಮುಂದುವರೆಯುತ್ತದೆ. ತನಿಖೆಯ ಮೂಲಕ ತಿಳಿದು ಬಂದ ನಿಶ್ಯಸ್ತ್ರೀಕರಣಗೊಳ್ಳಲು ತೆಗೆದುಕೊಳ್ಳುವ ಸಮಯವೆಂದರೆ "ತಿಂಗಳುಗಳು". ಆದರೆ ಅಮೇರಿಕಾ ಸಂಯುಕ್ತ ಸಂಸ್ಥಾನ ಸರ್ಕಾರವು "ರಾಯಭಾರವು ವಿಫಲಗೊಂಡಿದೆ " ಎಂದು ಘೋಷಿಸಿತು, ಮತ್ತು ಇದು ಇರಾಕನ ಡಬ್ಲುಎಮ್ಡಿಯನ್ನು ತೊಲಗಿಸಲು ಒಕ್ಕೊಟ ದೇಶಗಳ "ಇಚ್ಚೆಯ ಸಮ್ಮಿಶ್ರಣ"ದೊಂದಿಗೆ ಮುಂದುವರೆಯುವುದು. ಅಮೇರಿಕಾ ಸಂಯುಕ್ತ ಸಂಸ್ಥಾನ ಸರ್ಕಾರ ಯುಎನ್ ಆಯುಧಗಳ ತನಿಖಾಧಿಕಾರಿಗಳಿಗೆ ಬಾಗ್ದಾದ್ನ್ನು ತಕ್ಷಣ ತೊರೆಯುವಂತೆ ಅದೇಶ ನೀಡಲಾಯಿತು. ಅದು ಇರಾಕಿನ ವಿರುದ್ಧ ಯುದ್ಧವನ್ನು ಹೂಡುವುದು ಮತ್ತು ಯುದ್ಧ ಪೂರ್ವದ ಬುಷ್ ಬೋಧನೆಯ ಸುತ್ತಲಿನ ಅತ್ಯಂತ ಗಂಬೀರವಾದ ಕಾನೂನಿನ ಪ್ರಶ್ನೆಯಾಗಿತ್ತು. ಸೆಪ್ಟೆಂಬರ್ 16, 2004, ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯಾದ ಕೋಫಿ ಅನ್ನಾನ್ ಆಕ್ರಮಣದ ಕುರಿತು , "ಇದು ವಿಶ್ವಸಂಸ್ಥೆ ಹಕ್ಕುಪತ್ರದ ಅನುರೂಪತೆಯಲಿಲ್ಲ ಎಂದು ನಾನು ಸೂಚಿಸಿದ್ದೆ. ನಮ್ಮ ಮತ್ತು ಹಕ್ಕುಪತ್ರದ ದೃಷ್ಠಿಯಲ್ಲೂ ಸಹ ಇದು ಕಾನೂನು ಬಾಹಿರ." ನವೆಂಬರ್ 2008 ಲಾರ್ಡ್ ಬಿಂಗಮ್, ಮಾಜಿ ಬ್ರಿಟಿಷ್ ಲಾರ್ಡ್ ಸದಸ್ಯರು ವಿವರಿಸುವಂತೆ ಅಂತರಾಷ್ಟ್ರೀಯ ಕಾನೂನಿನ ಭಂಗವಾಗಿದೆ, ಮತ್ತು ಬ್ರಿಟನ್ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನಗಳು "ಪ್ರಪಂಚದ ಶಾಂತಿ-ಪಾಲಕ"ರಂತೆ ವರ್ತಿಸುತ್ತಿದ್ದಾರೆ. ಅವರ ಪ್ರಕಾರ ಯುದ್ಧಾನಂತರದ ಆಕ್ರಮಣದ ಬ್ರಿಟನ್ನ ದಾಖಲೆಯಂತೆ "ಇರಾಕಿನ್ನು ಆಕ್ರಮಿಸಿದ ಶಕ್ತಿಯಾಗಿದೆ". ಅಬು ಗರಿಬ್ನಲ್ಲಿರುವ ಇರಾಕಿ ಬಂಧನದಲ್ಲಿರುವವರ ಸಂಬಂಧವಾಗಿ, ಬಿಂಗಮ್ ಹೀಗೆ ಹೇಳುತ್ತಾರೆ: "ಬುಷ್ ಆಡಳಿತದಲ್ಲಿನ ಉನ್ನತ ಅಧಿಕಾರಿಗಳಿಗೆ ಅಂತರಾಷ್ಟ್ರೀಯ ಕಾನೂನಿನ ಬಗೆಗೆ ಕಾಳಜಿಯಿರಲಿಲ್ಲ, ಇದು ತತ್ವಪ್ರತಿಪಾದಕರನ್ನು ಭಂಗಗೊಳಿಸುತ್ತದೆ." ಜುಲೈ 2010, ಯುಕೆಯ ಸಹಾಯಕ ಪ್ರಧಾನಿ ನಿಕ್ ಕ್ಲೆಗ್, ಸಂಸತ್ತಿನ ವ್ಯವಹಾರಿಕ ಪಿಎಮ್ಕ್ಯೂಗಳ ಅಧಿವೇಶನದಲ್ಲಿ, ಇರಾಕ್ನ ಆಕ್ರಮಣವನ್ನು ಕಾನೂನು ಬಾಹಿರವೆಂದು ನಿಂದಿಸಿದರು.
ಜುಲೈ 10, 2002ರಂದು ಕೇಂದ್ರೀಯ ಸುದ್ಧಿ ಸಂಸ್ಥೆಯ ಆಕ್ರಮಣ ತಂಡವು ಇರಾಕಿನ್ನು ಮೊದಲ ಬಾರಿಗೆ ಪ್ರವೇಶಿಸಿತು. ಈ ತಂಡವು ಕೇಂದ್ರೀಯ ಸುದ್ಧಿ ಸಂಸ್ಥೆಯ ವಿಶೇಷ ಚಟುವಟಿಕಾ ವಿಭಾಗ ಮತ್ತು ನಂತರ ಅಮೇರಿಕಾ ಸಂಯುಕ್ತ ಸಂಸ್ಥಾನದ ಸೈನ್ಯದ ಗಣ್ಯರಾದ ಜಂಟೀ ವಿಶೇಷ ಕಾರ್ಯಗಳ ಕಮಾಂಡ್(ಜೆಎಸ್ಒಸಿ)ಗಳನ್ನೊಳಗೊಂಡಿತ್ತು. ಒಟ್ಟಿಗೆ ಅವರು ಸಾಂಪ್ರದಾಯಿಕ ಸೈನ್ಯದ ಆಕ್ರಮಣವನ್ನಾರಂಭಿಸಿದರು. ಇದು ಅನೇಕ ಇರಾಕಿ ಮಿಲಿಟರಿ ವಿಭಾಗಗಳನ್ನು ಆಕ್ರಮಣದ ಬದಲಿಗೆ ಮನವೊಲಿಸುವ ಪ್ರಯತ್ನವಾಗಿತ್ತು, ಮತ್ತು ಅತ್ಯಂತ ಹೆಚ್ಚು ಅಪಾಯಕಾರಿಯಾದ ಸ್ಥಳಾನ್ವೇಷಣೆ ನಿಯೋಗಗಳೊಂದಿಗೆ ಎಲ್ಲಾ ಪ್ರಾಥಮಿಕ ನಾಯಕತ್ವದ ಗುರಿಯನ್ನು ಗುರುತಿಸುವುದಾಗಿತ್ತು. ಮುಖ್ಯವಾಗಿ ಪೆಶ್ಮರ್ಗದ ಕರ್ದಿಯವರನ್ನು ಆಕ್ರಮಣದ ಉತ್ತರದ ಸೇನಾಮುಖವನ್ನಾಗಿಸಿದರು. ಈ ಎರಡೂ ಸೈನ್ಯಗಳೂ ಸೇರಿ ಆಕ್ರಮಣದ ಮೊದಲೇ ಇರಾಕಿ ಕರ್ದಿಸ್ಥಾನ್ನಲ್ಲಿ ಅನ್ಸರ್ ಅಲ್ ಇಸ್ಲಾಮ್ನ್ನು ಸೋಲಿಸಿದರು ಮತ್ತು ನಂತರ ಉತ್ತರದಲ್ಲಿ ಇರಾಕಿ ಸೈನ್ಯವನ್ನು ಸೋಲಿಸಲಾಯಿತು. ಅನ್ಸರ್ ಅಲ್ ಇಸ್ಲಾಮ್ನ ವಿರುದ್ಧದ ಯುದ್ಧವು ಅನೇಕ ಬಂದುಕೋರರ ಸಾವಿಗೆ ಕಾರಣವಾಯಿತು ಮತ್ತು ಸರ್ಗತ್ನ ರಾಸಾಯನಿಕ ಯುದ್ಧಾಸ್ತ್ರಗಳನ್ನು ನಿವಾರಿಸಲು ಸಾಧ್ಯವಾಯಿತು. ಮಾರ್ಚ್ 20, 2003ರ ಬೆಳಗ್ಗಿನ ಜಾವ 5:34 ಬಾಗ್ದಾದ್ ಸಮಯದಲ್ಲಿ (9:34 p.m., ಮಾರ್ಚ್ 19 ಇಎಸ್ಟಿ) ಸೈನ್ಯವು ಇರಾಕ್ನ ಮೇಲೆ ಆಕ್ರಮಣವನ್ನು ಆರಂಭಿಸಿತು. ಅಮೇರಿಕಾ ಸಂಯುಕ್ತ ಸಂಸ್ಥಾನ ಸೈನ್ಯದ ಜನರಲ್ ಟಾಮೀ ಪ್ರಾಂಕ್ಸ್ "ಆಪರೇನ್ ಇರಾಕಿ ಲಿಬರೇಶನ್" ಎನ್ನುವ ಹೆಸರಿನಲ್ಲಿ ನಂತರ, "ಆಪರೇಶನ್ ಇರಾಕಿ ಫ್ರೀಡಮ್" ಎನ್ನುವ ಹೆಸರಿನಲ್ಲಿ, ಯುಕೆಯ ಸಂಕೇತವಾದ ಆಪರೇಶನ್ ಟೇಲಿಕ್, ಮತ್ತು ಆಸ್ಟ್ರೇಲಿಯನ್ ಸಂಕೇತವಾದ ಆಪರೇಶನ್ ಫಾಲ್ಕೋನರ್ ಎನ್ನುವ ಹೆಸರಿನಲ್ಲಿ 2003ರ ಇರಾಕ್ನ ಆಕ್ರಮಣವನ್ನಾರಂಭಿಸಿತು. ಉತ್ತರದಲ್ಲಿ ಕುರ್ದಿಯವರ ಪೆಶ್ಮರ್ಗ ದಳದೊಂದಿಗೆ ಸಮ್ಮಿಶ್ರ ದಳವೂ ಸೇರಿಕೊಂಡಿತು. ಸುಮಾರು ನಲವತ್ತು ಇತರ ಸರ್ಕಾರಗಳು "ಇರಾಕ್ ವಿರುದ್ಧದ ಯುಎಸ್-ನಾಯಕತ್ವದ ಸಮ್ಮಿಶ್ರ ಸೇನೆಯು ," ತಂಡ, ಉಪಕರಣ, ಸೇವೆ, ರಕ್ಷಣೆ ಮತ್ತು ವಿಶೇಷ ದಳವನ್ನು ಒದಗಿಸಿದವು, ವಿಶೇಷ ದಳದ ಸಂಯುಕ್ತ ಸಂಸ್ಥಾನದ 248,000 ಸೈನಿಕರು, ಬ್ರಿಟೀಷರ 45,000 ಸೈನಿಕರು, ಆಸ್ಟ್ರೇಲಿಯಾದ 2,000 ಸೈನಿಕರು ಮತ್ತು 194 ಪೋಲಿಷ್ ಸೈನಿಕರನ್ನು ಜಿಆರ್ಒಎಮ್ ಕುವೈತ್ನ ಆಕ್ರಮಣಕ್ಕಾಗಿ ಕಳುಹಿಸಿ ಕೊಟ್ಟರು. ಆಕ್ರಮಣ ದಳದಲ್ಲಿ 70,000ಕ್ಕೂ ಹೆಚ್ಚಿನ ಇರಾಕಿನ ಕರ್ದರ ಬಂಡುಕೋರ ತಂಡವನ್ನೊಳಗೊಂಡಿತ್ತು. ಆಕ್ರಮಣದ ಉದ್ದೇಶಗಳೆಂದರೆ; ಹುಸೇನ್ ಪ್ರಭುತ್ವವನ್ನು ಕೊನೆಗೊಳಿಸುವುದು; ಸಿಗುವ ಎಲ್ಲಾ ಸಾಮೂಹಿಕ ಶಸ್ತ್ರಾಸ್ತ್ರಗಳನ್ನು ನಾಶ ಮಾಡುವುದು; ಸಿಗುವ ಇಸ್ಲಾಮಿನ ಬಂಡುಕೋರರನ್ನು ಹೊರಹಾಕುವುದು; ಬಂಡುಕೋರರ ನೆಲೆಯ ಬಗೆಗೆ ಗುಪ್ತ ಸುದ್ಧಿಯನ್ನು ಪಡೆಯುವುದು; ಲೋಕೋಪಕಾರಿ ಸಹಾಯವನ್ನು ವಿಸ್ತರಿಸುವುದು; ಇರಾಕ್ನ ಪೆಟ್ರೋಲಿಯಮ್ ಸ್ಥಾವರಗಳನ್ನು ರಕ್ಷಿಸುವುದು; ಮತ್ತು ಪ್ರತಿನಿಧಿಗಳನ್ನು ಆಯ್ಕೆಮಾಡಲು ಸಹಕರಿಸುವುದು ಮತ್ತು ಸರ್ಕಾರವನ್ನು ಇತರ ಮಧ್ಯ ಪೂರ್ವ ರಾಷ್ಟ್ರಗಳಿಗೆ ಮಾದರಿಯಾಗುವಂತೆ ಸರ್ಕಾರವನ್ನು ರಚಿಸುವುದು. ಅಮೇರಿಕಾ ಸಂಯುಕ್ತ ಸಂಸ್ಥಾನ, ಬ್ರಿಟಿಷ್ ಮತ್ತು ಇತರ ಬಣಗಳು ನೀರೀಕ್ಷಿಸಿದಷ್ಟಲ್ಲದಿದ್ದರೂ ಆಕ್ರಮಣವು ನಿರ್ಣಾಯಕವಾಗಿದ್ದು ಪ್ರಮುಖವಾದ ವಿರೋಧಗಳನ್ನು ನಾಶಗೊಳಿಸುದವು. ಇರಾಕಿನ ಪ್ರಭುತ್ವವು ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಯುದ್ಧಗಳೆರಡನ್ನೂ ಒಂದೇ ಭಾರಿಗೆ ಎದುರಿಸಬೇಕಾಯಿತು, ಸಾಂಪ್ರದಾಯಿಕ ಪಡೆಗಳಿಗೆ ತನ್ನ ಗಡಿಯನ್ನು ಬಿಟ್ಟುಕೊಡಬೇಕಾಯಿತು, ದೊಡ್ಡ ಪ್ರಮಾಣದ ಸೈನ್ಯವನ್ನು ಹೊಂದಿದ್ದರೂ ಸಹ ನಾಗರಿಕ ಮತ್ತು ಅರೆಸೈನಿಕ ವಸ್ತ್ರವನ್ನು ಧರಿಸಿ ಸಣ್ಣ ಪ್ರಮಾಣದ ದಾಳಿಗಳನ್ನು ಮಾಡಲಾಯಿತು. ಇದು ತತ್ಕಾಲಿಕ ಯಶಸ್ಸನ್ನು ಒದಗಿಸಿದರೂ ಅಮೇರಿಕಾ ಸಂಯುಕ್ತ ಸಂಸ್ಥಾನ ಸೈನ್ಯಕ್ಕೆ ಅನಿರೀಕ್ಷಿತ ಸವಾಲುಗಳನ್ನುಂಟುಮಾಡಿತು. ರಾಯಲ್ ನೌಕಾದಳ, ಪೋಲಿಷ್ ನೌಕಾದಳ, ಮತ್ತು ರಾಯಲ್ ಆಸ್ಟ್ರೇಲಿಯನ್ ನೌಕಾದಳದ ಬೆಂಬಲದೊಂದಿಗೆ ಸಮ್ಮಿಶ್ರ ಗುಂಪುಗಳು ತೈಲಬಾವಿಗಳನ್ನು ಮತ್ತು ಪ್ರಮುಖವಾದ ಬಂದರುಗಳನ್ನು ರಕ್ಷಿಸಲು ಅಲ್-ಫಾ ಪೆನಿನ್ಸುಲದ ಮೇಲೆ ವೈಮಾನಿಕ ಮತ್ತು ನೀರು ಮತ್ತು ಭೂಮಿಗಳಿಂದಲೂ ಕೂಡ ದಾಳಿಮಾಡಿದರು. ಬ್ರಿಟಿಷ್ ಸೈನ್ಯದ 16 ವೈಮಾನಿಕ ದಾಳಿಯ ಸೇನಾತುಕಡಿ ದಕ್ಷಿಣದ ಇರಾಕ್ ತೈಲಭಾವಿಗಳನ್ನು ರಕ್ಷಿಸುತ್ತಿರುವಾಗ, 3 ಕಮಾಂಡೊ ಸೇನಾತುಕಡಿ ಮತ್ತು ಪೋಲಿಷ್ ವಿಶೇಷ ಸೈನಿಕ ಘಟಕದ ಜಿಆರ್ಒಎಮ್ಗಳನ್ನೊಳಗೊಂಡ ಸಂಯುಕ್ತ ಸಂಸ್ಥಾನಗಳ ನೌಕಾದಳದ 15ನೇ ಯುದ್ಧೋದ್ದೇಶದ ನೌಕಾಘಟಕವು ಉಮ್ ಕ್ಯುಸರ್ ಪ್ರದೇಶವನ್ನು ದಾಳಿಮಾಡಿದರು. ನಾಶ ಮಾಡುವುದನ್ನು ತಡೆಯಲು ಪೋಲಿಷ್ ಕಮಾಂಡೊಗಳು ಕಡಲಕರೆಯಾಚೆಯ ಎಣ್ಣೆ ಬಾವಿಗಳನ್ನು ವಶಪಡಿಸಿಕೊಂಡರು.
ಭಾರಿ ಆಯುಧಗಳನ್ನೊಳಗೊಂಡ ಅಮೇರಿಕಾ ಸಂಯುಕ್ತ ಸಂಸ್ಥಾನದ 3ನೇ ಪದಾತಿಸೈನ್ಯದ ವಿಭಾಗವು ಪಶ್ಚಿಮದ ಮರುಭೂಮಿಯ ಮೂಲಕ ಪಶ್ಚಿಮ ಮತ್ತು ನಂತರ ಉತ್ತರದೆಡೆಗೆ ಬಾಗ್ದಾದ್ನತ್ತ ಸಾಗಿದರು, ಆ ಸಮಯದಲ್ಲಿ 1ನೇ ಯುದ್ಧೋದ್ದೇಶದ ನೌಕಾದಳವು ಹೆದ್ದಾರಿ 1ರ ಮೂಲಕ ದೇಶದ ಮಧ್ಯಭಾಗದಲ್ಲಿ ಪೂರ್ವದೆಡೆಗೆ ಸಾಗಿದರು, ಮತ್ತು 1 (ಇಂಗ್ಲೆಂಡ್) ಆರ್ಮರ್ಡ್ ವಿಭಾಗವು ಪೂರ್ವ ಮಾರ್ಶ್ಲ್ಯಾಂಡಿನ ಮೂಲಕ ಉತ್ತರಾದೆಡೆಗೆ ಸಾಗಿದರು. ಅಮೇರಿಕಾ ಸಂಯುಕ್ತ ಸಂಸ್ಥಾನದ 1ನೇ ನೌಕಾ ವಿಭಾಗವು ಪ್ರಮುಖ ರಸ್ತೆಗಳು ಸೇರುವ ಜಾಗ ಮತ್ತು ಹತ್ತಿರದ ಟಾಲಿಲ್ ವಾಯುಪಡೆಯ ನೆಲೆಯನ್ನು ವಶಪಡಿಸಿಕೊಳ್ಳಲು ನಸರಿಯಾದ ಮೇಲೆ ದಾಳಿ ಮಾಡಿದರು. ಸಂಯುಕ್ತ ಸಂಸ್ಥಾನಗಳ ಸೈನ್ಯದ 3ನೇ ಪದಾತಿ ದಳದ ವಿಭಾಗವು ವಾಯುನೆಲೆಯ ಸುತ್ತಲಿನ ಇರಾಕಿ ದಳದ ಭದ್ರವಾದ ಸೈನ್ಯವನ್ನು ಸೋಲಿಸಿದರು ಮತ್ತು ಪಶ್ಚಿಮದ ಬಳಸು ದಾರಿಯ ಮೂಲಕ ನಗರವನ್ನು ದಾಟಿ ಪಶ್ಚಿಮ ಇರಾಕಿನ ಮೂಲಕ ಸಾಗಿದರು. 101ನೇ ವಾಯುಗಾಮಿ ವಿಭಾಗದ ಸಹಾಯದೊಂದಿಗೆ 3ನೇಯ ಪದಾತಿ ದಳದ ವಿಭಾಗವು ನಸರಿಯಾ ಮತ್ತು ಟಾಲಿಲ್ ವಾಯುನೆಲೆಗಳನ್ನು ರಕ್ಷಿಸಿ ನಜಾಫ್ ಮತ್ತು ಕರ್ಬಾಲಗಳನ್ನು ಉತ್ತರದಿಂದ ದಾಳಿಮಾಡಿದರು, ಆದರೆ ಮರಳ ಬಿರುಗಾಳಿಯಿಂದಾಗಿ ಅಲ್ಲೇ ನೆಲೆನಿಂತರು ಮತ್ತು ವಿತರಣಾಜಾಲವು ಸುರಕ್ಷಿತವಾಗಿದೆಯೆಂದು ಖಾತರಿಪಡಿಸಿಕೊಂಡರು. ಬಾಗ್ದಾದ್ನ್ನು ಪ್ರವೇಶಿಸಲು ಪ್ರಮುಖವಾದ ಕರ್ಬಾಲ ಕಣಿವೆಯನ್ನು ನಂತರ ಯುಫ್ರೇಟಿಸ್ ನದಿಯ ಸೇತುವೆಯನ್ನು ವಶಪಡಿಸಿಕೊಂಡರು,ಮತ್ತು ಅಮೇರಿಕಾದ ಪಡೆಗಳು ಕಣಿವೆಯ ಮೂಲಕ ಬಾಗ್ದಾದ್ದನ್ನು ತಲುಪಿದರು. ಮಧ್ಯ ಇರಾಕಿನಲ್ಲಿ 1ನೇ ನೌಕಾ ವಿಭಾಗವು ಪೂರ್ವ ಬಾಗ್ದಾದ್ನ ಮೇಲೆ ದಾಳಿಮಾಡಿದರು ಮತ್ತು ಬಾಗ್ದಾದ್ನ್ನು ವಶಪಡಿಸಿಕೊಳ್ಳಲು ತಯಾರಿ ನಡೆಸಿದರು . ಉತ್ತರದಲ್ಲಿ, ಒಐಎಫ್-1 ತಾಲಿಬಾನ್ ಸರ್ಕಾರದ ಅಫ್ಘಾನಿಸ್ತಾನವನ್ನು ವರ್ಷದ ಮೊದಲು ಆಕ್ರಮಿಸಿದ್ದ ವಿಶೇಷ ಪಡೆಯನ್ನು ತನ್ನ ವಿಶೇಷ ಕಾರ್ಯಾಚರಣೆಗೆ ಬಳಸಿಕೊಂಡಿತು. ಇರಾಕಿ ಸೈನ್ಯವು ಅಮೇರಿಕಾ ಸಂಯುಕ್ತ ಸಂಸ್ಥಾನದ ಸೈನ್ಯದ ಪ್ರತಿಯೊಂದು ದಾಳಿಯನ್ನು ಸೆದೆಬಡಿದಿತು, ಕೆಲವೊಮ್ಮೆ ಆತ್ಮಹತ್ಯಾದಾಳಿಯ ಮೂಲಕ ಫೆದಾಯೀನ್ ಸದ್ದಾಮ್ ಬಲಗೊಂಡನು, ನಾಗರಿಕರೊಂದಿಗೆ ಬೆರೆತುಹೋಗುವ ಮೊದಲು ಇರಾಕಿ ಸೈನ್ಯವು ತೀವ್ರ ಪ್ರತಿರೋಧವನ್ನೊಡ್ಡಿತು. ಎಪ್ರಿಲ್ 9ರಂದು ಬಾಗ್ದಾದ್ನಲ್ಲಿ ಅಧ್ಯಕ್ಷ ಹುಸೇನ್ರ 24 ವರ್ಷಗಳ ಆಡಳಿತವು ನೆಲಕ್ಕುರುಳಿತು. ಅಮೇರಿಕಾ ಸಂಯುಕ್ತ ಸಂಸ್ಥಾನದ ಪಡೆಗಳು ವಜಾಗೊಂಡಿದ್ದ ಬಾತ್ ಪಕ್ಷದ ಮಂತ್ರಿಗಳನ್ನು ವಶಪಡಿಸಿಕೊಂಡರು ಮತ್ತು ಸೂತ್ರಧಾರ ಹುಸೇನರ ಕಬ್ಬಿಣದ ಪ್ರತಿಮೆಯನ್ನು, ಆ ಘಟನೆಯ ಬಗೆಗಿನ ಛಾಯಾಚಿತ್ರಗಳನ್ನು ಮತ್ತು ವಿಡಿಯೋಗಳನ್ನು ನಾಶಗೊಳಿಸಿದರು, ಆ ನಂತರ ಇದು ವಿವಾದಕ್ಕೊಳಗಾಯಿತು. ಶಿಯಾ ಜನರ ಮುಲ್ಲಾ ಆಗಿದ್ದ ಅಲ್-ಸದರ್ನಿಗಾಗಿ ಉದ್ರಿಕ್ತ ಜನರು ಪ್ರಾರ್ಥಿಸುತ್ತಿದ್ದ ಕುರಿತಾದ ಯಾವುದೇ ಛಾಯಾಚಿತ್ರ, ವೀಡಿಯೋ ಅಥವಾ ಹತ್ತಿರದಿಂದ ತೆಗೆದ ದೃಶ್ಯಾವಳಿಗಳಿರಲಿಲ್ಲ. ನವೆಂಬರ್ 2008, ಇರಾಕಿ ಪ್ರತಿಭಟನಾಕಾರರು ಅದೇ ರೀತಿಯಲ್ಲಿ ಜಾರ್ಜ್ ಡಬ್ಲು ಬುಷ್ನ ಪ್ರತಿಕೃತಿಯನ್ನು ದಹಿಸಿದರು. ಬಾಗ್ದಾದ್ನ ಹಠಾತ್ ಪತನದೊಂದಿಗೆ ಆಕ್ರಮಣಕಾರರ ಕಡೆಗೆ ವ್ಯಾಪಕವಾದ ಕರುಣೆಯು ಹರಿದುಬಂದಿತು, ಆದರೆ ನಾಗರಿಕರಲ್ಲಿ ಅವ್ಯವಸ್ಥೆಯುಂಟಾಯಿತು ಅದರೊಂದಿಗೆ ಜನರ ಮತ್ತು ಸರ್ಕಾರದ ಕಟ್ಟಡಗಳಲ್ಲಿ ಕಳ್ಳತನ ಮತ್ತು ಅಪರಾಧ ಕೃತ್ಯಗಳು ಹೆಚ್ಚಾದವು. ಇರಾಕಿ ಬಂಡಾಯಕ್ಕೆ ಯುದ್ಧಸಾಮಾಗ್ರಿಗಳನ್ನೊದಗಿಸುವ ಮೂಲವಾಗಿದ್ದ ಪೆಂಟಗಾನ್, 250,000 short tons (230,000 t) (ಒಟ್ಟು 650,000 short tons (590,000 t)) ಗೋಲಂದಾಜು ಇಲಾಖೆಯನ್ನು ದೋಚಲಾಯಿತು. ಹುಸೇನರ ತವರೂರಾದ ಟಿಕ್ರಿಟ್ ಸ್ವಲ್ಪ ಪ್ರತಿರೋಧದ ನಂತರ ಅಮೇರಿಕಾ ಸಂಯುಕ್ತ ಸಂಸ್ಥಾನದ ನೌಕಾಪಡೆಗಳ ಟಾಸ್ಕ್ ಫೋರ್ಸ್ ಟೊಪೋಲಿಯ ಆಕ್ರಮಣಕ್ಕೆ ಶರಣಾದ ನಂತರ ಎಪ್ರಿಲ್ 15ರಂದು ಸಮ್ಮಿಶ್ರ ಪಡೆಗಳು ಆಕ್ರಮಣವು ಮುಕ್ತಾಯವಾಯಿತೆಂದು ಘೋಷಿಸಿದವು. ಅಮೇರಿಕಾ ಸಂಯುಕ್ತ ಸಂಸ್ಥಾನದ ವಾಯು ಮತ್ತು ಪದಾತಿದಳದವರಿಂದ ಯುದ್ಧದಲ್ಲಿ (ಮಾರ್ಚ್ 19-ಏಪ್ರಿಲ್ 30), 9,200 ಇರಾಕಿ ಯೋಧರು ಮತ್ತು 7,299 ನಾಗರಿಕರು ಕೊಲ್ಲಲ್ಪಟ್ಟರು. ಸಮ್ಮಿಶ್ರ ಪಡೆಗಳು ಅಮೇರಿಕಾ ಸಂಯುಕ್ತ ಸಂಸ್ಥಾನದ ಸೈನಿಕರು 139 ಸೈನಿಕರು ಮತ್ತು 33 ಯುಕೆ ಸೈನಿಕರು ಸಾವನಪ್ಪಿದರು.
ಇರಾಕ್ ವಶಪಡಿಸಿಕೊಳ್ಳಲು ಕಾರಣವಾದ ಆಕ್ರಮಣದ ಸ್ವಲ್ಪ ಕಾಲದ ನಂತರ, ಬಹುರಾಷ್ಟ್ರೀಯ ಒಕ್ಕೂಟವು ಗ್ರೀನ್ ವಲಯದಲ್ಲಿ ಆಧಾರಿತವಾಗಿ ಒಂದು ಪ್ರಜಾಪ್ರಭುತ್ವ ಸರ್ಕಾರದ ಸ್ಥಾಪನೆಯಾಗುವವರೆಗೆ ಇರಾಕಿನಲ್ಲಿ ಕೊಆಲಿಷನ್ ಪ್ರೊವಿಷನ್ ಅಥಾರಿಟಿ (ಸಿಪಿಎ) سلطة الائتلاف الموحدةಯನ್ನು ಉಚ್ಛ್ರಾಯ ಕಾಲದ ಸರ್ಕಾರ ನಿರ್ಮಾಣ ಆಗುವವರೆಗೆ ಜಾರಿಯಲ್ಲಿರುವಂತೆ ನಿರ್ಮಿಸಲಾಯಿತು. ಯುನೈಟೆಡ್ ನೇಷನ್ಸ್ ಸೆಕ್ಯೂರಿಟಿ ಕೌನ್ಸಿಲ್ ಮಸೂದೆ 1483 (ಮೇ 22, 2003) ಮತ್ತು ಯುದ್ಧದ ಸೂತ್ರಗಳನ್ನು ಉಲ್ಲೇಖಿಸುತ್ತ ಸಿಪಿಎ ಇರಾಕ್ ಸರ್ಕಾರದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಅಧಿಕಾರದಲ್ಲಿ ತನ್ನ ಅಧಿಕಾರವನ್ನು ಎಪ್ರಿಲ್ 21, 2003ರಂದು ಸಿಪಿಎಯ ಪ್ರಾರಂಭದ ಅವಧಿಯಿಂದ ಜೂನ್ 28, 2004ರಂದು ಅದರ ವಿಭಜನೆಯಾಗುವವರೆಗೆ ಅಧಿಕಾರವನ್ನು ಚಲಾಯಿಸುತ್ತಿತ್ತು. ಸಿಪಿಎಯು ಮೂಲಭೂತವಾಗಿ ಮುಂಚಿನ ಅಮೇರಿಕಾ ಸಂಯುಕ್ತ ಸಂಸ್ಥಾನ ಸೈನಿಕ ಅಧಿಕಾರಿ ಜಯ್ ಗಾರ್ನರ್ ಅವರಿಂದ ಮುಖಂಡತ್ವವನ್ನು ವಹಿಸಿಕೊಳ್ಳಲ್ಪಟ್ಟಿತ್ತು, ಆದರೆ ಅವರ ನೇಮಕಾತಿಯು ಕೇವಲ ಮೇ 11, 2003 ರವರೆಗೆ, ಅಂದರೆ ಅಧ್ಯಕ್ಷ ಬುಷ್ ಎಲ್. ಪೌಲ್ ಬ್ರೆಮೆರ್ ಅನ್ನು ನೇಮಕ ಮಾಡುವವರೆಗೆ ಮಾತ್ರ ಮುಂದುವರೆಯಲ್ಪಟ್ಟಿತು. ಬೆರ್ಮೆರ್ ಜುಲೈ 2004 ರವರೆಗೆ ಸಿಪಿಎಯು ಸ್ಥಗಿತವಾಗುವವರೆಗೆ ಕಾರ್ಯನಿರ್ವಹಿಸಿದರು. ಆಕ್ರಮಣದ-ನಂತರ ಇರಾಕ್ನಲ್ಲಿ ಬಹುರಾಷ್ಟ್ರೀಯ ಸೈನ್ಯಗಳಿಂದ ನಿರ್ಮಿಸಲ್ಪಟ್ಟ ಇನ್ನೊಂದು ಗುಂಪಾಗಿ 1,400-ಸದಸ್ಯರ ಅಂತರಾಷ್ಟ್ರೀಯ ಇರಾಕ್ ಸರ್ವೆ ಗ್ರೂಪ್ ಗುರುತಿಸಿಕೊಂಡಿತ್ತು. ಅದು ಇರಾಕ್ನ ಸಮೂಹ ನಾಶಕ ಆಯುಧ (ಡಬ್ಲುಎಮ್ಡಿ)ಗಳನ್ನು ಕಂಡುಹಿಡಿಯುವುದಕ್ಕೆ ಒಂದು ನಿಯೋಗವನ್ನು ನೇಮಿಸಿತು. 2004ರಲ್ಲಿ ಐಎಸ್ಜಿಯ ಡ್ಯುಲ್ಫರ್ ವರದಿಯು ಇರಾಕ್ ಡಬ್ಲ್ಯೂಎಮ್ಡಿ ಯೋಜನೆಯನ್ನು ಹೊಂದಿಲ್ಲ ಎಂಬುದಾಗಿ ಹೇಳಿತು.
ಮೇ 1, 2003ರಂದು, ಅಧ್ಯಕ್ಷ ಬುಷ್ ಸ್ಯಾನ್ ಡಿಯಗೋ, ಕ್ಯಾಲಿಫೋರ್ನಿಯಾದ ಕೆಲವು ಮೈಲಿಗಳ ದೂರದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುಎಸ್ಎಸ್ ಅಬ್ರಾಹಮ್ ಲಿಂಕನ್ ವಿಮಾನ ಕ್ಯಾರಿಯರ್ಗೆ ಒಂದು ಅನಿರೀಕ್ಷಿತ ಭೇಟಿ ಮಾಡಿದರು. ಈ ಅನಿರೀಕ್ಷಿತ ಭೇಟಿಯಲ್ಲಿ ಬುಷ್ ’ಮಿಷನ್ ಅಕಂಪ್ಲಿಷ್ಡ್’ ಎಂಬ ಜನಪ್ರಿಯ ಭಾಷಣದಲ್ಲಿ ಪರ್ಯವಸಾನಗೊಂಡಿತು. ವಿಮಾನದ ಡೆಕ್ನಲ್ಲಿ ನಾವಿಕರು ಮತ್ತು ಏರ್ಮೆನ್ಗಳು ಬರುವುದಕ್ಕೂ ಮುಂಚೆ ದೂರದರ್ಶನದಲ್ಲಿ ರಾಷ್ಟ್ರೀಯವಾಗಿ ಬಿತ್ತರವಾಗಿಸಲ್ಪಟ್ಟ ಈ ಭಾಷಣದಲ್ಲಿ, ಬುಷ್ ಇರಾಕಿನ ಸಾಂಪ್ರದಾಯಿಕ ಬಲಗಳ ವಿಫಲದ ಕಾರಣದಿಂದಾಗಿ ಪರಿಣಾಮಕಾರಿಯಾಗಿ ತಮ್ಮ ಜಯವನ್ನು ಘೋಷಿಸಿದರು. ಆದಾಗ್ಯೂ, ಮುಂಚಿನ ಅಧ್ಯಕ್ಷ ಹುಸೇನ್ ಇವರು ದೀರ್ಘ ಕಾಲದವರೆಗೆ ಅಧಿಕಾರದಲ್ಲಿದ್ದರು ಮತ್ತು ಕೆಲವು ಪ್ರತಿಬಂಧಕ ತುಕಡಿಗಳು ಹಾಗೆಯೇ ಉಳಿದುಕೊಂಡಿದ್ದವು.
ಅಧ್ಯಕ್ಷ ಬುಷ್ ಅವರು ಭಾಷಣ ನೀಡಿದ ನಂತರ, ಒಕ್ಕೂಟದ ಸೈನ್ಯಗಳು ಅಮೇರಿಕಾ ಸೇನೆಯ ವಿರುದ್ಧ ಅಲ್ಲಲ್ಲಿ ಆಕ್ರಮಣವನ್ನು ಮಾಡುತ್ತಿದ್ದವು. ಅದರಲ್ಲೂ ’ಸುನ್ನಿ ಟ್ರಿಯಾಂಗಲ್’ನಲ್ಲಿ ದಾಳಿ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಂಡುಬಂದಿತು. ಪ್ರಾಥಮಿಕ ಹಂತದಲ್ಲಿ ಇರಾಕಿ ಬಂಡಾಯಗಾರರಿಗೆ ಇರಾಕ್ ಸೈನ್ಯ ಮತ್ತು ರಿಪಬ್ಲಿಕನ್ ಗಾರ್ಡ್ಗಳು ಆಯುಧಗಳನ್ನು ರಹಸ್ಯ ಸ್ಥಳಗಳಿಂದ ಪೂರೈಕೆ ಮಾಡುತ್ತಿದ್ದರು. ಪ್ರಾಥಮಿಕವಾಗಿ, ಇರಾಕಿನ ಪ್ರತಿರೋಧಕತೆಯು (ಒಕ್ಕೂಟದಲ್ಲಿ "ಪ್ರತಿ-ಇರಾಕಿ ಬಲಗಳು" ಎಂಬುದಾಗಿ ವಿವರಿಸಲ್ಪಟ್ಟಿದೆ) ದೊಡ್ದ ಪ್ರಮಾಣದಲ್ಲಿ ಆತ್ಮಹತ್ಯಾದಳ ಮತ್ತು ಹುಸೇನ್/ಬಾತ್ ಪಕ್ಷದ ನಿಷ್ಠಾವಂತರಿಂದ ಹೊರಗುಳಿಯಲ್ಪಟ್ಟಿತ್ತು. ಆದರೆ ಅದರ ಸ್ವಲ್ಪ ಸಮಯದ ನಂತರವೇ ಧಾರ್ಮಿಕ ತೀವ್ರವಾದಿಗಳು ಮತ್ತು ಇರಾಕಿಗಳು ಬಂಡಾಯಕ್ಕೆ ನೀಡಲ್ಪಟ್ಟ ಆಕ್ರಮಣದಿಂದಾಗಿ ಸಿಟ್ಟಿಗೆದ್ದರು. ಬಾಗ್ದಾದ್, ಆಲ್ ಅನ್ಬರ್, ಮತ್ತು ಸಲಾಹ್ ಆದ್ ದಿನ್ ಇವು ಹೆಚ್ಚಿನ ಸಂಖ್ಯೆಯ ಆಕ್ರಮಣಗಳನ್ನು ಹೊಂದಿದ ಮೂರು ಪ್ರಾಂತಗಳಾಗಿದ್ದವು. ಆ ಮೂರು ಪ್ರಾಂತಗಳು ಜನಸಂಖ್ಯೆಯ 35% ವನ್ನು ಹೊಂದಿದ್ದವು, ಆದರೆ ಯುಎಸ್ನ ಮಿಲಿಟರಿ ಮರಣಗಳ 73%ಕ್ಕೆ ಜವಾಬ್ದಾರಿಯಾಗಿದ್ದವು (ಡಿಸೆಂಬರ್ 5, 2006ರವರೆಗೆ) ಮತ್ತು ಅದಕ್ಕೂ ಹೆಚ್ಚಿನ ಪ್ರತಿಶತದ ಇತ್ತೀಚಿನ ಅಮೇರಿಕಾ ಸಂಯುಕ್ತ ಸಂಸ್ಥಾನ ಮಿಲಿಟರಿ ಮರಣಗಳಿಗೆ ಕಾರಣವಾಗಿದ್ದವು (ಸುಮಾರು 80%.) ಬಂಡಾಯಗಾರರು ಗೋರಿಲ್ಲಾ ತಂತ್ರಗಳನ್ನು ಬಳಸುತ್ತಿದ್ದರು: ಸಣ್ಣ ಫಿರಂಗಿಗಳು, ಮಿಸೈಲ್ಗಳು, ಆತ್ಮಹತ್ಯಾ ದಾಳಿಗಳು, ಸ್ನಿಪ್ಪರ್ಗಳು, ಸುಧಾರಿತ ಸ್ಪೋಟಕ ಸಾಧನಗಳು (ಇಐಡಿ ಗಳು), ಕಾರ್ ಬಂಬ್ಗಳು, ಸ್ಮಾಲ್ ಆರ್ಮ್ಸ್ ಫೈರ್ (ಸಾಮಾನ್ಯವಾಗಿ ಆಕ್ರಮಣಕಾರಿ ರೈಫಲ್ಗಳ ಜೊತೆಗೆ), ಮತ್ತು ಆರ್ಪಿಜಿಗಳು (ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ಗಳು), ಹಾಗೆಯೇ ಪೆಟ್ರೋಲಿಯಮ್, ನೀರು, ಮತ್ತು ವಿದ್ಯುತ್ ಮೂಲಭೂತ ಸೌಕರ್ಯಗಳ ವಿರುದ್ಧ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದರು.
ಆಕ್ರಮಣ-ನಂತರದ ಇರಾಕ್ ಏಕೀಕರಣ ಪ್ರಯತ್ನಗಳು ಹುಸೇನ್ ಪ್ರಭುತ್ವದ ಅವನತಿಯ ನಂತರದಲ್ಲಿ ಪ್ರಾರಂಭವಾಗಲ್ಪಟ್ಟಿತು. ಯುನೈಟೆಡ್ ನೇಷನ್ಸ್ಗಳ ಜೊತೆಗೆ ಏಕಿಕರಣ ರಾಷ್ಟ್ರಗಳು ತಮ್ಮನ್ನು ತಾವು ಒಕ್ಕೂಟ-ಅಲ್ಲದ ಬಲಗಳಿಂದ ರಕ್ಷಿಸಿಕೊಳ್ಳುವುದಕ್ಕೆ, ಹಾಗೆಯೇ ಅಂತರಿಕ ವಿಭಜನೆಗಳನ್ನು ಹಿಮ್ಮೆಟ್ಟಿಸುವುದಕ್ಕೆ ಒಂದು ಸ್ಥಿರವಾದ, ಅನುವರ್ತನಶೀಲ ಪ್ರಜಾಪ್ರಭುತ್ವದ ರಾಷ್ಟ್ರವನ್ನು ನಿರ್ಮಿಸುವುದಕ್ಕೆ ಕಾರ್ಯವನ್ನು ಪ್ರಾರಂಭಿಸಿದವು. ಅದೇ ಸಮಯದಲ್ಲಿ, ಒಕ್ಕೂಟ ಮಿಲಿಟರಿ ಸೇನೆಗಳು ಟೈಗ್ರಿಸ್ ರಿವರ್ ಪೆನಿನ್ಸುಲಾ ಮತ್ತು ಸುನ್ನಿ ಟ್ರಯಾಂಗಲ್ನ ಸುತ್ತಮುತ್ತ ಹಲವಾರು ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು. ಒಂದೇ ರೀತಿಯ ಕಾರ್ಯಾಚರಣೆಗಳ ಸರಣಿಗಳು ಸುನ್ನಿ ಟ್ರಯಾಂಗಲ್ನಲ್ಲಿ ಬೇಸಗೆಯ ಅವಧಿಯುದ್ದಕ್ಕೂ ಪ್ರಾರಂಭಿಸಲ್ಪಟ್ಟವು. 2003ರ ಕೊನೆಯ ಅವಧಿಯ ಕಡೆಗೆ, ಬಂಡಾಯಗಾರ ಆಕ್ರಮಣಗಳ ತೀವ್ರತೆ ಮತ್ತು ಅಂತರವು ಹೆಚ್ಚಾಗುವುದಕ್ಕೆ ಪ್ರಾರಂಭವಾಯಿತು. ಗೋರಿಲ್ಲಾ ಆಕ್ರಮಣಗಳಲ್ಲಿನ ತೀಕ್ಷ್ಣವಾದ ಮುನ್ನುಗ್ಗುವಿಕೆಯು ಬಂಡಾಯಗಾರರ ಪ್ರಯತ್ನಗಳಿಗೆ ಪ್ರತೀಕಾರವನ್ನು ಮಾಡಿದವು, ಅವುಗಳು ರಾಮ್ದಾನ್ನ ಮುಸ್ಲಿಮ್ ಪವಿತ್ರ ತಿಂಗಳಿನ ಜೊತೆಗೆ ಪ್ರಾರಂಭವಾಗಲ್ಪಟ್ಟ ಕಾರಣದಿಂದ "ರಾಮ್ದಾನ್ ಅಫೆನ್ಸೀವ್" ಎಂಬುದಾಗಿ ಕರೆಯಲ್ಪಟ್ಟವು. ಈ ಆಕ್ರಮಣವನ್ನು ಶಮನ ಮಾಡುವುದಕ್ಕಾಗಿ, ಒಕ್ಕೂಟ ಬಲಗಳು ವಾಯು ಸೇನೆ ಮತ್ತು ಫಿರಂಗಿ ದಳವನ್ನು ಹೊಂಚುದಾಳಿಯ ಸ್ಥಳಗಳು ಮತ್ತು ಸಣ್ಣ ಬಲಗಳನ್ನು ಸ್ಥಾಪಿಸುವ ಸ್ಥಾನಗಳಿಂದ ಸಂಶಯಾಸ್ಪದ ಸೆದೆಬಡಿಯುವಿಕೆಯ ಮೂಲಕದ ಆಕ್ರಮಣದ ಕೊನೆಯ ನಂತರದಿಂದ ಮೊದಲ ಬಾರಿಗೆ ಬಳಸಿಕೊಂಡಿತು. ಪ್ರಮುಖ ಮಾರ್ಗಗಳು, ಗಸ್ತು ದಳಗಳು, ಸೈನಿಕ ದಾಳಿಗಳ ಕಣ್ಗಾವಲು ಬಂಡಾಯಗಾರರು ಒಳಗೆ ಅಡಿಯಿಡಿಸಿದ್ದಾರೆ ಎಂಬ ಸಂಶಯಕ್ಕೆ ಎಡೆಮಾಡಿತು. ಅದಕ್ಕೆ ಜೊತೆಯಾಗಿ, ಹುಸೇನ್ರ ಹುಟ್ಟು ಸ್ಥಳ ಆಲ್-ಔಜಾವನ್ನು ಒಳಗೊಂಡಂತೆ ಎರಡು ಹಳ್ಳಿಗಳು ಮತ್ತು ಅಬು ಹಿಷ್ಮಾದ ಸಣ್ಣ ನಗರಗಳು ಮೊನೆಯುಳ್ಳ ವೈರ್ಗಳಿಂದ ಸುತ್ತುವರೆಯಲ್ಪಟ್ಟಿದ್ದವು ಮತ್ತು ಜಾಗರೂಕತೆಯಿಂದ ಮೇಲ್ವಿಚಾರಣೆ ನಡೆಸಲ್ಪಟ್ಟಿದ್ದವು. ಆದಾಗ್ಯೂ, ಯುದ್ಧಕ್ಕೂ-ಮುಂಚಿನ ಮಟ್ಟಗಳಿಗೆ ಮೂಲಭೂತ ಸೇವೆಗಳನ್ನು ಪುನಃಸ್ಥಾಪಿಸುವುದರಲ್ಲಿನ ವಿಫಲತೆ, ಒಂದು ದಶಕಕ್ಕೂ ಮೀರಿದ ನಿರ್ಬಂಧಗಳು, ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಯು.ಕೆ ಬಾಂಬ್ ದಾಳಿಗಳು, ಭ್ರಷ್ಟಾಚಾರ, ಮತ್ತು ಮೂಲಭೂತ ಸೌಕರ್ಯಗಳ ಅವನತಿಯು ಪ್ರಮುಖ ನಗರಗಳನ್ನು ಕಾರ್ಯನಿರ್ವಹಿಸುವುದಕ್ಕೆ ಅಸಮರ್ಪಕವಾಗುವ ಸ್ಥಿತಿಗೆ ಕೊಂಡೊಯ್ದವು, ಇದು ಐಪಿಎ ಸರ್ಕಾರದಲ್ಲಿ ಸ್ಥಳೀಯ ಉಗ್ರತೆಗೆ ಕಾರಣವಾಯಿತು.
2003ರ ಬೇಸಗೆಯ ಅವಧಿಯಲ್ಲಿ, ಅಂತರಾಷ್ಟ್ರೀಯ ಸೇನೆಗಳು ಮುಂಚಿನ ಅಧಿಪತ್ಯದ ಉಳಿದ ಮುಖಂಡರುಗಳ ಅವನತಿಯ ಮೇಲೆ ತಮ್ಮ ಗಮನವನ್ನು ಹರಿಸಿದವು. ಜುಲೈ 22ರಂದು, ಅಮೇರಿಕಾ ಸಂಯುಕ್ತ ಸಂಸ್ಥಾನ 101ನೆಯ ಏರ್ಬೋರ್ನ್ ವಿಭಾಗ ಮತ್ತು ಟಾಸ್ಕ್ ಸೇನೆ 20ರ ಸೈನಿಕರಿಂದ ನಡೆಸಲ್ಪಟ್ಟ ಒಂದು ದಾಳಿಯು ಹುಸೇನ್ರ ಒಬ್ಬ ಮೊಮ್ಮಗನ ಜೊತೆಗೆ ಅವರ ಮಕ್ಕಳನ್ನು (ಉದಯ್ ಮತ್ತು ಕ್ಯುಸೇಯ್) ಹತ್ಯೆಗೈಯ್ಯಲಾಯಿತು. ಒಟ್ಟಾರೆಯಾಗಿ, ಮುಂಚಿನ ಅಧಿಪತ್ಯದ 300ಕ್ಕೂ ಹೆಚ್ಚು ಪ್ರಮುಖ ಮುಖಂಡರುಗಳು ಹಾಗೆಯೇ ಹಲವಾರು ಇತರ ಕಾರ್ಯಕಾರಿ ಅಧಿಕಾರಿಗಳು ಮತ್ತು ಮಿಲಿಟರಿ ಅಧಿಕಾರಿಗಳು ಕೊಲ್ಲಲ್ಪಟ್ಟರು ಅಥವಾ ಸೆರೆಹಿಡಿಯಲ್ಪಟ್ಟರು. ಹೆಚ್ಚು ಪ್ರಮುಖವಾಗಿ, ಸದ್ದಾಂ ಹುಸೇನ್ರು ಡಿಸೆಂಬರ್ 13, 2003ರಂದು ಆಪರೇಷನ್ ರೆಡ್ ಡಾನ್ನಲ್ಲಿ ಟಿಕ್ರಿಟ್ ಸಮೀಪದ ಒಂದು ಫಾರ್ಮ್ನಲ್ಲಿ ತಮ್ಮನ್ನು ತಾವೇ ಸೆರೆಯಾಗಿಸಿಕೊಂಡರು. ಅಮೇರಿಕಾ ಸಂಯುಕ್ತ ಸಂಸ್ಥಾನ ಸೈನ್ಯದ 4ನೆಯ ಪದಾತಿ ದಳದ ವಿಭಾಗದಿಂದ ಮತ್ತು ಟಾಸ್ಕ್ ಫೋರ್ಸ್ 121ರ ಸದಸ್ಯರುಗಳಿಂದ ಕಾರ್ಯಾಚರಣೆಯು ನಡೆಸಲ್ಪಟ್ಟಿತ್ತು. ಸದ್ದಾಮ್ರ ಇರುವಿಕೆಯ ಬಗೆಗಿನ ಸುಳಿವುಗಳು ಅವರ ಕುಟುಂಬದ ಸದಸ್ಯರುಗಳು ಮತ್ತು ಮುಂಚಿನ ಬೆಂಗಾವಲುದಾರರಿಂದ ತಿಳಿದು ಬಂದಿತು.
ಹುಸೇನ್ರ ಸೆರೆಹಿಡಿಯುವಿಕೆಯ ನಂತರ ಮತ್ತು ಬಂಡಾಯಗಾರ ಆಕ್ರಮಣಗಳ ಇಳಿಕೆಯ ನಂತರ, ಕೆಲವರು ಅಂತರಾಷ್ಟ್ರೀಯ ಸೇನೆಗಳು ಬಂಡಾಯದ ವಿರುದ್ಧ ಹೋರಾಟದಲ್ಲಿ ನಿರತವಾಗಿವೆ ಎಂಬುದಾಗಿ ನಿರ್ಣಯಿಸಿದರು. ತಾತ್ಕಾಲಿಕ (ಹಂಗಾಮಿ) ಸರ್ಕಾರವು ದೇಶವನ್ನು ಕಾವಲು ಕಾಯುವ ಉದ್ದೇಶವನ್ನು ಹೊಂದಿದ ಹೊಸ ಇರಾಕಿ ಸುರಕ್ಷಣಾ ಸೇನೆಗಳ ತರಬೇತಿಯನ್ನು ಪ್ರಾರಂಭಿಸಿತು, ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನ ಇರಾಕಿನ ಭವಿಷ್ಯದ ಎಣ್ಣೆ ಆದಾಯಗಳ ವಿರುದ್ಧ ಸಾಲದ ರೂಪದಲ್ಲಿ ಪುನರ್ನಿರ್ಮಾಣಕ್ಕೆ$20 billion ಬೇಕಾದ ಹಣವನ್ನು ನೀಡುವುದಾಗಿ ಭರವಸೆ ನೀಡಿತು. ಎಣ್ಣೆಯ ಆದಾಯವೂ ಕೂಡ ಶಾಲೆಗಳ ಪುನರ್ನಿರ್ಮಾಣ ಮತ್ತು ವಿದ್ಯುತ್ ಮತ್ತು ಮೂಲಭೂತ ಸೌಕರ್ಯಗಳ ನವೀಕರಣ ಕೆಲಸಗಳಲ್ಲಿ ಬಳಸಲ್ಪಟ್ಟಿತು. ಹುಸೇನ್ರನ್ನು ಸೆರೆಹಿಡಿದ ಸ್ವಲ್ಪ ಸಮಯದ ನಂತರ, ಒಕ್ಕೂಟದ ತಾತ್ಕಾಲಿಕ ಅಧಿಕಾರಿಗಳು ಘಟಕವನ್ನು ತೊರೆದರು ಮತ್ತು ಚುನಾವಣೆಗಳಿಗೆ ಪ್ರಚೋದನೆ ನೀಡಲು ಪ್ರಾರಂಭಿಸಿದರು ಮತ್ತು ಒಂದು ಇರಾಕಿ ಮಧ್ಯಾವಧಿ ಸರ್ಕಾರವನ್ನು ನಿರ್ಮಿಸುವುದಕ್ಕೆ ಪ್ರಾರಂಭಿಸಿದವು. ಇದರಲ್ಲಿ ಹೆಚ್ಚು ಪ್ರಮುಖವಾದವರೆಂದರೆ ಶಿಯಾ ಕ್ಲೆರಿಕ್ ಗ್ರ್ಯಾಂಡ್ ಆಯೊತೊಲ್ಲಾಹ್ ಅಲಿ ಆಲ್-ಸಿಸ್ತಾನಿ. ಒಕ್ಕೂಟದ ತಾತ್ಕಾಲಿಕ ಅಧಿಕಾರಿಗಳು ಆ ಸಮಯದಲ್ಲಿ ಪ್ರಜಾಪ್ರಭುತ್ವ ಚುನಾವಣೆಗಳಿಗೆ ಅನುಮತಿ ನೀಡುವುದನ್ನು ವಿರೋಧಿಸಿದರು. ಬಂಡಾಯಗಾರರು ತಮ್ಮ ಕಾರ್ಯಚಟುವಟಿಕೆಗಳಲ್ಲಿ ಮತ್ತೆ ಅಡಿಯಿರಿಸಿದರು. ಎರಡು ಅತ್ಯಂತ ಹೆಚ್ಚು ಪ್ರತಿಭಟನೆಯ (ದೊಂಬಿಯ) ಪ್ರದೇಶಗಳೆಂದರೆ ಫಾಲ್ಲುಜಾಹ್ನ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಶಿಯಾದ ಕೆಲವು ಪ್ರದೇಶಗಳು, ಬಾಗ್ದಾದ್ನ ನಗರಗಳ ಕೆಲವು ವಿಭಾಗಗಳು (ಸದ್ರ ನಗರ) ಮತ್ತು ದಕ್ಷಿಣದಲ್ಲಿ ಬಸ್ರಾ ಇತ್ಯಾದಿಗಳು.
2004ರ ಪ್ರಾರಂಭವು ಹಿಂಸಾಚಾರದಲ್ಲಿ ತುಲನಾತ್ಮಕವಾದ ಶಮನದ ಮೂಲಕ ಗುರುತಿಸಲ್ಪಟ್ಟಿತು. ಬಂಡಾಯಗಾರ ಬಲಗಳು ಈ ಸಮಯದಲ್ಲಿ ಬಹುರಾಷ್ಟ್ರೀಯ ಸೇನೆಗಳ ತಂತ್ರಗಾರಿಕೆಗಳು ಮತ್ತು ಒಂದು ಹೊಸ ಆಕ್ರಮಣಕಾರಿ ಯೋಜನೆಯ ಅಧ್ಯಯನದ ಮೂಲಕ ಪುನಃನಿರ್ಮಾಣವಾಗಲ್ಪಟ್ಟವು. ಆದಾಗ್ಯೂ, ಹಿಂಸಾಚಾರವು 2004ರ ಇರಾಕ್ ಸ್ಪ್ರಿಂಗ್ ಫೈಟಿಂಗ್ ಸಮಯದಲ್ಲಿ ಮಧ್ಯ ಪೂರ್ವ ಹಾಗೆಯೇ ಇರಾಕಿನಲ್ಲಿನ ಅಲ್-ಕಾಯ್ದಾ (ಒಂದು ಸಂಯೋಜಿತ ಅಲ್-ಕಾಯ್ದಾ ಗುಂಪು)ಗಳಲ್ಲಿನ ವಿದೇಶಿ ಹೋರಾಟಗಾರರ ಜೊತೆಗೆ ಹೆಚ್ಚಾಗಲ್ಪಟ್ಟಿತು, ಅಲ್-ಕಾಯ್ದಾವು ಅಬು ಮುಸಬ್-ಅಲ್-ಜಾರ್ಕವಿಯಿಂದ ಬಂಡಾಯಗಾರತೆಯನ್ನು ಮುನ್ನಡೆಸುವುದಕ್ಕೆ ಸಹಾಯ ಮಾಡುವ ಸಂಘಟನೆಯಾಗಿದೆ. ಬಂಡಾಯಗಾರತ್ವವು ಬೆಳೆದಂತೆಲ್ಲಾ ಅಲ್ಲಿ ಒಕ್ಕೂಟ ಸೇನೆಗಳಿಂದ ಹೊಸ ಇರಾಕಿ ಸುರಕ್ಷತಾ ಸೇನೆಗಳ ಕಡೆಗೆ ಒಂದು ಭಿನ್ನವಾದ ಬದಲಾವಣೆಯು ಪ್ರಾರಂಭವಾಯಿತು, ನಂತರದ ಕೆಲವು ತಿಂಗಳುಗಳಲ್ಲಿ ನೂರಾರು ಇರಾಕಿನಾಗರಿಕರು ಮತ್ತು ಪೋಲೀಸ್ರು ಒಂದು ವ್ಯಾಪಕವಾದ ಬಾಂಬ್ ದಾಳಿಯಲ್ಲಿ ಕೊಲ್ಲಲ್ಪಟ್ಟರು. ಆಳವಾದ ಬೇರುಗಳನ್ನು ಹೊಂದಿದ ಮತ್ತು ರಾಷ್ಟ್ರೀಯತಾವಾದಿ ಮತ್ತು ಇಸ್ಲಾಮ್ವಾದಿ ಈ ಎರಡೂ ಪ್ರೇರಣೆಗಳನ್ನು ಹೊಂದಿದ ಒಂದು ಸಂಘಟಿತ ಸುನ್ನಿ ಬಂಡಾಯವು ಇರಾಕಿನುದ್ದಕ್ಕೂ ಹೆಚ್ಚು ಪ್ರಭಾವಶಾಲಿಯಾಗಿ ಬೆಳೆಯಿತು. ಶಿಯಾ ಮಹ್ಡಿ ಸೈನ್ಯವೂ ಕೂಡ ಇರಾಕಿ ಸೈನ್ಯಗಳಿಂದ ನಿಯಂತ್ರಣವನ್ನು ವಾಪಸು ಪಡೆದುಕೊಳ್ಳುವ ಒಂದು ಪ್ರಯತ್ನದಲ್ಲಿ ಒಕ್ಕೂಟ ಉದ್ದೇಶಿಗಳ ಮೇಲೆ ಆಕ್ರಮಣಗಳನ್ನು ಪ್ರಾರಂಭಿಸಿದವು. ಇರಾಕಿನ ದಕ್ಷಿಣ ಭಾಗ ಮತ್ತು ಕೇಂದ್ರ ಭಾಗಗಳು ನಗರ ಗೋರಿಲ್ಲಾ ಯುದ್ಧದಲ್ಲಿ ಸ್ಪೋಟವನ್ನು ಪ್ರಾರಂಭಿಸಿದರು, ಬಹುರಾಷ್ಟ್ರೀಯ ಸೇನೆಗಳು ನಿಯಂತ್ರಣವನ್ನು ಕಾಯ್ದಿರಿಸಿಕೊಳ್ಳುವುದಕ್ಕೆ ಪ್ರಯತ್ನವನ್ನು ನಡೆಸಿದವು ಮತ್ತು ಒಂದು ಪ್ರತಿ ಆಕ್ರಮಣಕ್ಕೆ ತಯಾರಿಯನ್ನು ನಡೆಸಿದವು. ಹಿಂದೆಂದಿಗಿಂತ ಹೆಚ್ಚು ಆತಂಕಕಾರಿಯಾದ ಹೋರಾಟವು ಮಾರ್ಚ್ 31, 2004ರಂದು ಪ್ರಾರಂಭವಾಗಲ್ಪಟ್ಟಿತು, ಫಾಲ್ಲುಜಾಹ್ನಲ್ಲಿ ಇರಾಕಿ ಬಂಡಾಯಗಾರರು ಹೊಂಚು ಹಾಕಿ ಕುಳಿತಿದ್ದರು, ನಾಲ್ಕು ಅಮೇರಿಕಾ ಸಂಯುಕ್ತ ಸಂಸ್ಥಾನ ಖಾಸಗಿ ಮಿಲಿಟರಿ ಕಂಟ್ರಾಕ್ಟರ್ಗಳಿಂದ ನಡೆಸಲ್ಪಟ್ಟ ಬೆಂಗಾವಲು ದಳವು ಒಂದು ಬ್ಲ್ಯಾಕ್ವಾಟರ್ ಯುಎಸ್ಎಗೆ ಬೆಂಗಾವಲಾಗಿ ಹೋಗಲ್ಪಟ್ಟಿತು, ಅವು ಆಹಾರ ಪೂರೈಕೆದಾರರ ಯೂರೆಸ್ಟ್ ಬೆಂಬಲ ಸೇವೆಗಳನ್ನು ನೀಡುತ್ತಿದ್ದವು. ನಾಲ್ಕು ಶಸ್ತ್ರಸಜ್ಜಿತ ಕಂಟ್ರಾಕ್ಟರ್ಗಳು, ಸ್ಕಾಟ್ ಹೆಲ್ವೆನ್ಸ್ಟನ್, ಜೆರ್ಕೋ ಜೊವ್ಕೊ, ವೆಸ್ಲೇ ಬ್ಯಾಟಲೊನಾ, ಮತ್ತು ಮೈಕೆಲ್ ಟೀಗ್ ಇವರುಗಳು ಗ್ರೇನೇಡ್ಗಳಿಂದ ಮತ್ತು ಸ್ಮಾಲ್ ಆರ್ಮ್ಸ್ ಫೈರ್ಗಳಿಂದ ಕೊಲ್ಲಲ್ಪಟ್ಟರು. ಕಾಲಾನಂತರದಲ್ಲಿ, ಅವರ ದೇಹವು ಸ್ಥಳೀಯ ಜನರ ಮೂಲಕ ಅವರ ವಾಹನಗಳಿಂದ ಬಲವಂತವಾಗಿ ಎಳೆಯಲ್ಪಟ್ಟರು, ಹೊಡೆಯಲ್ಪಟ್ಟರು, ಕೋಪದಿಂದ ಭುಗಿಲೇಳಲ್ಪಟ್ಟರು, ಮತ್ತು ಅವರ ಸುಡಲ್ಪಟ್ಟ ಶವಗಳನ್ನು ಯುಫಾರೇಟ್ಸ್ ಬ್ರಿಜ್ ಕ್ರಾಸಿಂಗ್ಗೆ ತೂಗುಹಾಕಿದರು. ಆ ಘಟನೆಯ ಫೋಟೋಗಳು ಜಗತ್ತಿನಾದ್ಯಂತದ ನ್ಯೂಸ್ ಏಜೆನ್ಸಿಗಳಿಗೆ ಬಿಡುಗಡೆ ಮಾಡಲ್ಪಟ್ಟವು, ಅಮೇರಿಕಾ ಸಂಯುಕ್ತ ಸಂಸ್ಥಾನನಲ್ಲಿ ನೀಚತನ ಮತ್ತು ನೈತಿಕ ಹಿಂಸಾಚಾರಗಳಿಗೆ ಕಾರಣವಾದವು ಮತ್ತು ನಗರದ ಅಯಶಸ್ವಿ "ಸಮಾಧಾನಗೊಳಿಸುವಿಕೆ" ಒಂದು ಪ್ರಯತ್ನವನ್ನು ನಡೆಸಿದವು: ಎಪ್ರಿಲ್ 2004ರಲ್ಲಿ ಫಾಲ್ಲುಜಾಹ್ನ ಮೊದಲ ಯುದ್ಧ.
ಆಕ್ರಮಣವು ನವೆಂಬರ್ 2004ರಲ್ಲಿ ಹಿಂದೆಂದಿಗಿಂತ ನಿರ್ದಯವಾದ ಯುದ್ಧದಲ್ಲಿ ಮತ್ತೆ ಮುಂದುವರೆಯಲ್ಪಟ್ಟಿತು: ಫಾಲ್ಲುಜಾಹ್ನ ಎರಡನೆಯ ಯುದ್ಧವು ಅಮೇರಿಕಾ ಸಂಯುಕ್ತ ಸಂಸ್ಥಾನ ಮಿಲಿಟರಿಯಿಂದ ಈ ರೀತಿಯಾಗಿ ವರ್ಣಿಸಲ್ಪಟ್ಟಿತು, "ವಿಯೆಟ್ನಾಮ್ನಲ್ಲಿನ ಹ್ಯೂ ನಗರದ ಯುದ್ಧದ ನಂತರದ ಅತ್ಯಂತ ಘೋರವಾದ ನಗರ ಯುದ್ಧ (ಅವು ಒಳಗೊಂಡಿದ್ದ ನಗರಗಳು)." ಆಕ್ರಮಣದ ಸಮಯದಲ್ಲಿ, ಅಮೇರಿಕಾ ಸಂಯುಕ್ತ ಸಂಸ್ಥಾನ ಸೇನೆಗಳು ಬಂಡಾಯಗಾರರ ಗಮನವನ್ನು ಬೇರೆ ಕಡೆ ತಿರುಗಿಸುವುದಕ್ಕಾಗಿ ವೈಟ್ ಪಾಸ್ಪರಸ್ ಅನ್ನು ಬೆಂಕಿ ಹಚ್ಚುವ ಆಯುಧವಾಗಿ ಬಳಸಿಕೊಂಡರು. 46-ದಿನಗಳ ಯುದ್ಧವು ಒಕ್ಕೂಟಕ್ಕೆ ಜಯವನ್ನು ತಂದುಕೊಟ್ಟಿತು, ಅದರಲ್ಲಿ ಸರಿಸುಮಾರು 1,350 ಬಂಡಾಯಗಾರರ ಜೊತೆಗೆ 95 ಅಮೇರಿಕಾ ಸಂಯುಕ್ತ ಸಂಸ್ಥಾನ ಸೈನಿಕರು ಮರಣಹೊಂದಲ್ಪಟ್ಟರು. ಫಾಲ್ಲುಜಾಹ್ ನಗರವು ಯುದ್ಧದ ಸಮಯದಲ್ಲಿ ಸಂಪೂರ್ಣವಾಗಿ ನಾಶಹೊಂದಲ್ಪಟ್ಟಿತು, ಆದಾಗ್ಯೂ ನಾಗರಿಕರು ಯುದ್ಧವು ಪ್ರಾರಂಭವಾಗುವುದಕ್ಕೆ ಮುಂಚೆಯೇ ಅಲ್ಲಿಂದ ತಮ್ಮ ನೆಲೆಗಳನ್ನು ಬೇರೆಡೆಗೆ ಸಾಗಿಸಿದ್ದ ಕಾರಣದಿಂದ ನಾಗರಿಕ ದುರ್ಘಟನೆಗಳು ಕಡಿಮೆ ಪ್ರಮಾಣದಲ್ಲಿದ್ದವು. ಆ ವರ್ಷದ ಮತ್ತೊಂದು ಮಹತ್ವದ ಘಟನೆಯೆಂದರೆ ಅಬು ಗ್ರೈಬ್ನಲ್ಲಿ ಖೈದಿಗಳ ಕಿರುಕುಳದ ವ್ಯಾಪಕ ಬಹಿರಂಗ, ಅದು ಎಪ್ರಿಲ್ 2004ರಲ್ಲಿ ಅಂತರಾಷ್ಟ್ರೀಯ ಮಾಧ್ಯಮ ಗಮನವನ್ನು ತನ್ನೆಡೆಗೆ ಸೆಳೆದುಕೊಂಡಿತು. ಅಬು ಗ್ರೈಬ್ ಖೈದಿಗಳ ಕಿರುಕುಳದ ಮೊದಲ ವರದಿಗಳು, ಹಾಗೆಯೇ ಅಮೇರಿಕಾ ಸಂಯುಕ್ತ ಸಂಸ್ಥಾನ ಮಿಲಿಟರಿ ಅಧಿಕಾರಿಗಳು ಇರಾಕಿ ಖೈದಿಗಳನ್ನು ಮೂದಲಿಸುತ್ತಿರುವ ಮತ್ತು ಕಿರುಕುಳ ಕೊಡುತ್ತಿರುವುದನ್ನು ತೋರಿಸುತ್ತಿರುವ ಛಾಯಾಚಿತ್ರಗಳು ಒಂದು 60 ನಿಮಿಷಗಳ II ಸುದ್ದಿ ಮಾಹಿತಿ (ಎಪ್ರಿಲ್ 28) ಮತ್ತು ಸೇಯ್ಮುರ್ ಎಮ್. ಹರ್ಶ್ರ ದಿ ನ್ಯೂಯಾರ್ಕರ್ ನಲ್ಲಿನ ಲೇಖನದ (ಎಪ್ರಿಲ್ 30ರಂದು ಆನ್ಲೈನ್ನಲ್ಲಿ ಪ್ರಕಟಪಡಿಸಲ್ಪಟ್ಟಿತು) ಕಾರಣದಿಂದ ಸಾರ್ವಜನಿಕರ ಗಮನಕ್ಕೆ ಬಂದವು. ಮಿಲಿಟರಿ ಸುದ್ದಿಗಾರ ಥಾಮಸ್ ರಿಕ್ಸ್ ಹೇಳಿದ್ದೇನೆಂದರೆ ಈ ಪ್ರಕಟಣೆಗಳು ಸಾರ್ವಜನಿಕರ ದೃಷ್ಟಿಯಲ್ಲಿ, ಅದರಲ್ಲೂ ಮುಖ್ಯವಾಗಿ ಇರಾಕ್ ಜನರ ದೃಷ್ಟಿಯಲ್ಲಿ ನೈತಿಕ ಸಮರ್ಥನೆಗಳನ್ನು ಹೊಂದುವುದಕ್ಕೆ ಬಿಡುಗಡೆ ಮಾಡಲ್ಪಟ್ಟವು, ಮತ್ತು ಅದು ಯುದ್ಧದಲ್ಲಿ ಒಂದು ಅತ್ಯಂತ ಮಹತ್ವದ ತಿರುವಾಗಿತ್ತು (ಬದಲಾವಣೆಯಾಗಿತ್ತು).
ಜನವರಿ 31ರಂದು, ಇರಾಕಿ ನಾಗರಿಕರು ಒಂದು ಸ್ಥಿರ ಸಂವಿಧಾನವನ್ನು ನಿರ್ಮಿಸುವುದರ ಉದ್ದೇಶದಿಂದ ಇರಾಕಿ ಪರಿವರ್ತನಾ ಸರ್ಕಾರವನ್ನು ಆಯ್ಕೆ ಮಾಡಿದರು. ಆದಾಗ್ಯೂ ಕೆಲವು ಹಿಂಸಾಚಾರ ಮತ್ತು ವ್ಯಾಪಕವಾದ ಸುನ್ನಿ ಬಹಿಷ್ಕರಣಗಳು ಘಟನೆಯನ್ನು ನಾಶಪಡಿಸಿದವು. ಫೆಬ್ರವರಿ 4ರಂದು, ಪೌಲ್ ವೊಲ್ಫೊವಿಟ್ಜ್ ಇವರು 15,000 ಅಮೇರಿಕಾ ಸಂಯುಕ್ತ ಸಂಸ್ಥಾನ ತುಕಡಿಗಳ ಕೆಲಸದ ಪ್ರವಾಸಗಳು ಚುನಾವಣೆಗೆ ಭದ್ರತೆಯನ್ನು ನೀಡುವ ಉದ್ದೇಶದಿಂದ ಮುಂದೆ ಹಾಕಲ್ಪಟ್ಟಿದೆ, ಮುಂದಿನ ತಿಂಗಳಿನಲ್ಲಿ ಇರಾಕಿನಿಂದ ಹೊರಹೋಗಲ್ಪಡುತ್ತದೆ ಎಂಬುದಾಗಿ ಘೋಷಣೆ ಮಾಡಿದರು. ಫೆಬ್ರವರಿಯಿಂದ ಎಪ್ರಿಲ್ವರೆಗಿನ ಅವಧಿಯು ನವೆಂಬರ್ ಮತ್ತು ಜನವರಿಯ ಹತ್ಯಾಕಾಂಡಗಳಿಗೆ ಹೋಲಿಸಿ ನೋಡಿದಾಗ ತುಂಬಾ ಶಾಂತಿಯುತ ಅವಧಿಗಳಾಗಿದ್ದವು, ಈ ಅವಧಿಯಲ್ಲಿ ಬಂಡಾಯಗಾರರ ಆಕ್ರಮಣಗಳು ಮುಂಚಿನ ಪ್ರತಿದಿನ 70ರ ಸರಾಸರಿಯಿಂದ ಪ್ರತಿದಿನ 30ರ ಸರಾಸರಿಯವರೆಗೆ ಇಳಿಯಲ್ಪಟ್ಟವು. ಬಂಡಾಯಕ್ಕೆ ಒಂದು ತ್ವರಿತವಾದ ಕೊನೆಯ ಇಂಗಿತಗಳು ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನ ತುಕಡಿಗಳ ಹಿಂತೆಗೆದುಕೊಳ್ಳುವಿಕೆಯು ಮೇ ತಿಂಗಳಿನಲ್ಲಿ ಕಾರ್ಯರೂಪಕ್ಕೆ ಬಂದವು, ಮೇ ತಿಂಗಳು ಆಕ್ರಮಣದ ನಂತರದಿಂದ ಇರಾಕಿನ ಅತ್ಯಂತ ನಿರ್ದಯ ಹತ್ಯಾಕಂಡದ ತಿಂಗಳಾಗಿತ್ತು. ಆತ್ಮಹತ್ಯಾ ಬಾಂಬರ್ಗಳು, ಇರಾಕಿ ಸುನ್ನಿ ಅರಬ್ರು, ಸಿರಿಯನ್ನರು, ಮತ್ತು ಸೌದಿಗಳನ್ನು ಇರಾಕಿನ ಟೋರ್ ಮೂಲಕ ನಿರಾಶೆಗೊಳಿಸಿತು ಎಂದು ಭಾವಿಸಲ್ಪಟ್ಟಿದೆ. ಆತ್ಮಹತ್ಯಾ ಬಾಂಬರ್ಗಳ ಗುರಿಗಳು ಅನೇಕ ವೇಳೆ ಶಿಯಾ ಒಂದುಗೂಡುವಿಕೆಗಳು ಅಥವಾ ಶಿಯಾದ ನಾಗರಿಕ ಕೇಂದ್ರೀಕೃತ ಪ್ರದೇಶಗಳಾಗಿದ್ದವು. ಅದರ ಪರಿಣಾಮವಾಗಿ, ಆ ತಿಂಗಳಿನಲ್ಲಿ 700ಕ್ಕೂ ಹೆಚ್ಚಿನ ಇರಾಕಿನಾಗರಿಕರು, ಹಾಗೆಯೇ 79 ಅಮೇರಿಕಾ ಸಂಯುಕ್ತ ಸಂಸ್ಥಾನ ಸೈನಿಕರು ಮೃತಪಟ್ಟರು. ಅಮೇರಿಕಾ ಸಂಯುಕ್ತ ಸಂಸ್ಥಾನ ಸೇನೆಗಳು ಸಿರಿಯನ್ ಗಡಿಯನ್ನು ವಶಪಡಿಸಿಕೊಳ್ಳುವುದಕ್ಕೆ ಪ್ರಯತ್ನ ನಡೆಸಿದ ಕಾರಣದಿಂದ 2005ರ ಬೇಸಗೆಯು ಬಾಗ್ದಾದ್ನಗರದ ಸುತ್ತಮುತ್ತ ಮತ್ತು ನಾರ್ತ್ವೆಸ್ಟರ್ನ್ ಇರಾಕಿನಲ್ಲಿನ ಟಾಲ್ ಅಫಾರ್ನಲ್ಲಿ ಯುದ್ಧಗಳನ್ನು ಕಂಡಿತು. ಇದು ಯುಫಾರೇಟ್ಸ್ನ ಕಣಿವೆಯ ಸಣ್ಣ ನಗರಗಳಲ್ಲಿ ರಾಜಧಾನಿ ಮತ್ತು ಆ ಗಡಿ ಪ್ರದೇಶಗಳ ನಡುವೆ ಶರತ್ಕಾಲದಲ್ಲಿ ಯುದ್ಧಗಳಿಗೆ ಕಾರಣವಾಯಿತು. ಅಕ್ಟೋಬರ್ 15ರಂದು ಒಂದು ಹೊಸ ಜನಮತ ಸಂಗ್ರಹವು ನಡೆಸಲ್ಪಟ್ಟಿತು. ಅದರಲ್ಲಿ ಇರಾಕ್ ಸಂವಿಧಾನವು ಊರ್ಜಿತಗೊಳ್ಳಲ್ಪಟ್ಟಿತು. ಒಂದು ಇರಾಕಿ ರಾಷ್ಟ್ರೀಯ ಅಸೆಂಬ್ಲಿಯು ಸುನ್ನಿಗಳು ಹಾಗೆಯೇ ಕುರ್ಡ್ಸ್ ಮತ್ತು ಶಿಯಾ ಈ ಎಲ್ಲರ ಭಾಗವಹಿಸುವಿಕೆಯ ಜೊತೆಗೆ ಡಿಸೆಂಬರ್ನಲ್ಲಿ ಆಯ್ಕೆ ಮಾಡಲ್ಪಟ್ಟಿತು. ಬಂಡಾಯಗಾರ ಆಕ್ರಮಣಗಳು 2005ರಲ್ಲಿ 34,131 ದಾಖಲಿತ ಘಟನೆಗಳ ಜೊತೆಗೆ ಹೆಚ್ಚಾಗಲ್ಪಟ್ಟವು, ಅದು ಹಿಂದಿನ ವರ್ಷದಲ್ಲಿ ಒಟ್ಟು 26,496 ಇತ್ತು.
2006ರ ಪ್ರಾರಂಭವು ಸರ್ಕಾರ ನಿರ್ಮಾಣದ ಮಾತುಕತೆಗಳು, ಪಂಥಾಭಿಮಾನಿಗಳ ಹಿಂಸಾಚಾರದ ಬೆಳವಣಿಗೆ ಮತ್ತು ನಿರಂತರವಾದ ಒಕ್ಕೂಟ-ವಿರೋಧಿ ಆಕ್ರಮಣಗಳಿಂದ ದಾಖಲಿಸಲ್ಪಟ್ಟಿತು. ಫೆಬ್ರವರಿ 22, 2006ರಂದು ಇರಾಕಿನ ನಗರ ಸಮರ್ರಾದಲ್ಲಿ ಆಲ್-ಅಸ್ಕರಿ ಮಸೀದಿ ಬಾಂಬಿಂಗ್ನ್ನು ಅನುಸರಿಸುತ್ತ ಪಂಥಾಭಿಮಾನಿಗಳ ಹಿಂಸಾಚಾರವು ಒಂದು ಹೊಸ ಹಂತಕ್ಕೆ ವಿಸ್ತರಿಸಲ್ಪಟ್ಟಿತು. ಶಿಯಾ ಇಸ್ಲಾಮ್ನ ಪವಿತ್ರ ಸ್ಥಳಗಳಲ್ಲಿ ಒಂದಾದ ಮಸೀದಿಯಲ್ಲಿನ ಆಸ್ಪೋಟನೆಯು ಆಲ್-ಕಾಯ್ದಾ ಮೂಲಕ ಇರಿಸಲ್ಪಟ್ಟ ಒಂದು ಬಾಂಬ್ನಿಂದ ಉಂಟಾಗಲ್ಪಟ್ಟಿತು ಎಂಬುದಾಗಿ ನಂಬಲ್ಪಟ್ಟಿತು. ಸ್ಪೋಟದಲ್ಲಿ ಯಾವುದೇ ಹಾನಿಗಳು ಸಂಭವಿಸದಿದ್ದರೂ ಕೂಡ, ಮಸೀದಿಯು ತೀವ್ರವಾಗಿ ಹಾನಿಗೊಳಗಾಗಲ್ಪಟ್ಟಿತು ಮತ್ತು ಬಾಂಬ್ ದಾಳಿಯು ನಂತರದ ದಿನಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು. ಫೆಬ್ರವರಿ 23ರಂದು ಬುಲೆಟ್ಗಳ ತೂತುಗಳನ್ನು ಹೊಂದಿದ 100ಕ್ಕೂ ಹೆಚ್ಚಿನ ಮೃತ ದೇಹಗಳು ಕಂಡುಬಂದವು, ಮತ್ತು ಸರಿಸುಮಾರು 165 ಜನರು ಕೊಲ್ಲಲ್ಪಟ್ಟರು ಎಂಬುದಾಗಿ ತಿಳುಯಲ್ಪಟ್ಟಿದೆ. ಈ ಆಕ್ರಮಣದ ಪರಿಣಾಮವಾಗಿ ಬಾಗ್ದಾದ್ನಲ್ಲಿ ಪ್ರತಿ ದಿನದ ಸರಾಸರಿ ನರಹತ್ಯಾ ಪ್ರಮಾಣವು ಮೂರು ಪಟ್ಟು ದಾಟಿತು, ಅಂದರೆ 11ರಿಂದ 33 ಮರಣಗಳು ಪ್ರತಿ ದಿನ ಆಗಲ್ಪಟ್ಟಿತು ಎಂಬುದಾಗಿ ಯುಎಸ್ ಮಿಲಿಟರಿಯು ಅಂದಾಜು ಮಾಡಿತು. 2006ರಲ್ಲಿ ವಿಶ್ವಸಂಸ್ಥೆಯು ಇರಾಕಿನಲ್ಲಿನ ವಾತಾವರಣವನ್ನು ಒಂದು "ಅಸೈನಿಕ ಯುದ್ಧದ-ತರಹದ ಸನ್ನಿವೇಶ" ಎಂಬುದಾಗಿ ವರ್ಣಿಸಿತು. ಮಾರ್ಚ್ 6ರಂದು, 502ನೆಯ ಇನ್ಫ್ಯಾಂಟ್ರಿ ಆಳ್ವಿಕೆಯ ಐದು ಅಮೇರಿಕಾ ಸಂಯುಕ್ತ ಸಂಸ್ಥಾನ ಸೈನ್ಯದ ಸೈನಿಕರು, 14-ವರ್ಷ-ವಯಸ್ಸಿನ ಇರಾಕ್ ಹುಡುಗಿ ಅಬೀರ್ ಹಮ್ಜಾ ಆಲ್-ಜುನಾಬಿಯನ್ನು ಮಾನಭಂಗ ಮಾಡಿದರು ಮತ್ತು ನಂತರ ಅವಳನ್ನು, ಅವಳ ತಂದೆ, ಅವಳ ತಾಯಿ ಫಾಕ್ರಿಯಾ ತಾಹಾ ಮುಹಾಸೆನ್ ಮತ್ತು ಅವಳ ಆರು-ವರ್ಷ-ವಯಸ್ಸಿನ ಸಹೋದರಿಯನ್ನು ಕೊಲೆಗೈಯ್ದರು. ಸೈನಿಕರು ನಂತರ ದುಷ್ಕೃತ್ಯದ ಸಾಕ್ಷ್ಯವನ್ನು ರಹಸ್ಯವಾಗಿಡುವುದಕ್ಕೆ ಆ ಹುಡುಗಿಯ ದೇಹವನ್ನು ಸುಟ್ಟು ಹಾಕಿದರು. ಅವರಲ್ಲಿ ನಾಲ್ಕು ಸೈನಿಕರು ಮಾನಭಂಗ ಮತ್ತು ಹತ್ಯೆಯ ಆಪಾದನೆಯಲ್ಲಿ ಸೆರೆಯಾಳಾದರು ಮತ್ತು ಐದನೆಯ ಸೈನಿಕನು ಯುದ್ಧ ದುಷ್ಕೃತ್ಯದಲ್ಲಿ ಭಾಗವಹಿಸಿದ್ದಕ್ಕಾಗಿ ಕಡಿಮೆ ದುಷ್ಕೃತ್ಯಗಳಿಗಾಗಿ ಬಂಧಿಯಾಗಲ್ಪಟ್ಟನು, ಅದು ಮಹುಮುದಿಯಾಹ್ ಹತ್ಯೆಗಳು ಎಂದು ಕರೆಯಲ್ಪಟ್ಟಿತು. ಇರಾಕಿನ ಪ್ರಸ್ತುತದ ಸರ್ಕಾರವು ಮೇ 20, 2006ರಂದು ಇರಾಕಿ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರುಗಳ ಅನುಮೋದನೆಯನ್ನು ಪಡೆದುಕೊಂಡು ಅಧಿಕಾರವನ್ನು ವಹಿಸಿಕೊಂಡಿತು. ಇದು ಡಿಸೆಂಬರ್ 2005ರಲ್ಲಿನ ಸಾಮಾನ್ಯ ಚುನಾವಣೆಯನ್ನು ಅನುಸರಿಸಿತು. ಸರ್ಕಾರವು ಇರಾಕಿ ಪರಿವರ್ತನಾ ಸರ್ಕಾರದ ತರುವಾಯದ ಸರ್ಕಾರವಾಗಿತ್ತು, ಅದು ಒಂದು ಸ್ಥಿರ ಸರ್ಕಾರದ ಸ್ಥಾಪನೆಯಾಗುವವರೆಗೆ ಕಛೇರಿಯಲ್ಲಿ ಒಂದು ಸುರಕ್ಷೆಯನ್ನು ತೆಗೆದುಕೊಳ್ಳುವ ಸಾಮರ್ಥ್ಯದಲ್ಲಿ ಮುಂದುವರೆಯಿತು.
ಐಎಸ್ಜಿಯು ಸಹ-ಅಧ್ಯಕ್ಷರುಗಳಾದ ಸ್ಟೇಟ್ನ (ಗಣರಾಜ್ಯ) ಮುಂಚಿನ ಕಾರ್ಯದರ್ಶಿ ಜೇಮ್ಸ್ ಬೇಕರ್ ಮತ್ತು ಮುಂಚಿನ ಯುಎಸ್ ಪ್ರತಿನಿಧಿ (ಪ್ರಜಾಪ್ರಭುತ್ವ) ಲೀ ಹ್ಯಾಮಿಲ್ಟನ್ ಇವರುಗಳಿಂದ ನಡೆಸಲ್ಪಟ್ಟಿತ್ತು. ಇರಾಕ್ ಅಧ್ಯಯನ ಗುಂಪಿನ ವರದಿಯು ಡಿಸೆಂಬರ್ 6, 2006ರಂದು ಬಿಡುಗಡೆ ಮಾಡಲ್ಪಟ್ಟಿತು. ಪ್ರಮುಖ ಯುಎಸ್ ಪಕ್ಷಗಳಿಂದ ನಿರ್ಮಾಣವಾಗಲ್ಪಟ್ಟ ಇರಾಕ್ ಅಧ್ಯಯನ ಗುಂಪು ಮುಂಚಿನ ಸ್ಟೇಟ್ನ ಯುಎಸ್ ಕಾರ್ಯದರ್ಶಿ ಜೇಮ್ಸ್ ಬೇಕರ್ ಮತ್ತು ಮುಂಚಿನ ಪ್ರಜಾಪ್ರಭುತ್ವ ಕಾಂಗ್ರೆಸ್ಮನ್ ಲೀ ಹ್ಯಾಮಿಲ್ಟನ್ ಇವರುಗಳಿಂದ ನಡೆಸಲ್ಪಟ್ಟಿತು. ಅಂತಿಮವಾಗಿ ಹೇಳಿದ್ದೇನೆಂದರೆ "ಇರಾಕಿನಲ್ಲಿನ ಸನ್ನಿವೇಶವು ಮೃತ್ಯುಲೋಕವಾಗಿದೆ ಮತ್ತು ನಾಶವಾಗಲ್ಪಟ್ಟಿದೆ" ಮತ್ತು "ಯುಎಸ್ ಸೇನೆಗಳು ಒಂದು ನಿರೀಕ್ಷಿತ ಕೊನೆಯಿಲ್ಲದ ಒಂದು ಕಾರ್ಯಾಚರಣೆಯಲ್ಲಿ ಬಂಧಿಯಾಗಲ್ಪಟ್ಟವು ಎಂಬಂತೆ ಕಂಡುಬಂದಿತು." ವರದಿಯ 79 ಶಿಫಾರಸುಗಳು ಇರಾನ್ ಮತ್ತು ಸಿರಿಯಾದ ಜೊತೆಗಿನ ಹೆಚ್ಚಾಗುತ್ತಿರುವ ರಾಜತಾಂತ್ರಿಕ ಮಾಪನಗಳು ಮತ್ತು ಇರಾಕಿ ತುಕಡಿಗಳನ್ನು ತರಬೇತಿ ಮಾಡುವ ತೀವ್ರತರವಾದ ಪ್ರಯತ್ನಗಳನ್ನು ಒಳಗೊಂಡಿದ್ದವು. ಡಿಸೆಂಬರ್ 18 ರಂದು, ಒಂದು ಪೆಂಟಾಗನ್ ವರದಿಯು ಬಂಡಾಯಗಾರರ ಆಕ್ರಮಣಗಳು ಒಂದು ವಾರದಲ್ಲಿ ಸರಾಸರಿಯಾಗಿ 960 ಇರಲ್ಪಟ್ಟಿದ್ದವು, ಇವು 2005ರಲ್ಲಿ ವರದಿಗಳು ಪ್ರಾರಂಭವಾದ ನಂತರದಿಂದ ನಡೆದ ಅತ್ಯಂತ ಹೆಚ್ಚಿನ ಆಕ್ರಮಣಗಳಾಗಿದ್ದವು. ಒಕ್ಕೂಟ (ಸಮ್ಮಿಶ್ರ) ಸೇನೆಗಳು ಇರಾಕಿ ಸರ್ಕಾರಕ್ಕೆ ಯುದ್ಧದ ನಂತರ ಮೊದಲ ಬಾರಿಗೆ ವಿಧ್ಯುಕ್ತವಾಗಿ ನಿಯಂತ್ರಣವನ್ನು ವರ್ಗಾವಣೆ ಮಾಡಿದವು. ಮಿಲಿಟರಿ ಫಿರ್ಯಾದಿಗಳು ಎಂಟು ಯುಎಸ್ ಹಡಗುಗಳನ್ನು ನವೆಂಬರ್ 2005, 10ರಂದು ಹಾದಿಥಾದಲ್ಲಿ 24 ಇರಾಕಿ ನಾಗರಿಕರನ್ನು ಕೊಲೆಗೈಯ್ದ ಬಗ್ಗೆ ದಾವೆಯನ್ನು ಹೂಡಿತು. ಅವರಲ್ಲಿ 10 ಮಹಿಳೆಯರು ಮತ್ತು ಉಳಿದವರು ಮಕ್ಕಳಾಗಿದ್ದರು. ನಾಲ್ಕು ಅಧಿಕಾರಿಗಳೂ ಈ ಘಟನೆಗೆ ಸಂಬಂಧಿತವಾಗಿ ಕರ್ತವ್ಯದ ಲೋಪದ ಆಪಾದನೆ ಮಾಡಲ್ಪಟ್ಟರು. ಸದ್ದಾಮ್ ಹುಸೇನ್ರು ಒಂದು ವರ್ಷದ-ದೀರ್ಘ ವಿಚಾರಣೆಯ ನಂತರ ಮಾನವತ್ವದ ವಿರುದ್ಧದ ದುಷ್ಕೃತ್ಯಗಳಲ್ಲಿ ಅಪರಾಧಿ ಎಂಬುದಾಗಿ ಕಂಡುಬಂದಿದ್ದರಿಂದ ಡಿಸೆಂಬರ್ 30, 2006ರಂದು ಗಲ್ಲು ಶಿಕ್ಷೆಗೆ ಒಳಪಟ್ಟರು.
ಜನವರಿ 10, 2007ರಲ್ಲಿ, ಯುಎಸ್ನ ಸಾರ್ವಜನಿಕರನ್ನು ದೂರದರ್ಶನದ ಮಾಧ್ಯಮದ ಮೂಲಕ ಸಂಬೋಧಿಸಿ, ಬುಷ್ ಇರಾಕ್ಗೆ ಇನ್ನು 21,500 ಸೈನಿಕರನ್ನು ರವಾನಿ ಮಾಡುವ ಹೇಳಿಕೆಯನ್ನು ನೀಡಿದರು. ಹಾಗೆಯೇ ಇರಾಕಿಗಳಿಗೆ ಉದ್ಯೋಗ ನೀಡುವ ಯೋಜನೆಯನ್ನು ಈ ಮೂಲಕ ಘೋಷಿಸಿದರು. ಅಲ್ಲದೆ ಹೆಚ್ಚಿನ ಪುನರ್ ನಿರ್ಮಾಣ ಕಾರ್ಯ ಮತ್ತು $1.2 billion ಹಲವಾರು ಕಾರ್ಯಕ್ರಮಗಳನ್ನು ಇದು ಒಳಗೊಂಡಿತ್ತು. ಜನವರಿ 23, 2007ರಲ್ಲಿ, 2007ರ ರಾಷ್ಟ್ರ ಸಂಯುಕ್ತ ಸಂಬೋಧನೆಯಲ್ಲಿ, ಬುಷ್ "ಇರಾಕ್ಗೆ ಬಲಪಡಿಸುವುದಕ್ಕೆ 20,000ಕ್ಕಿಂತ ಹೆಚ್ಚು ಅಧಿಕೃತ ಸೈನಿಕರನ್ನು ಹಾಗೂ ನೌಕಾ ಸಿಬ್ಬಂದಿಗಳನ್ನು ನಿಯೋಗಿಸಲಾಗುವುದು" ಎಂದು ಘೋಷಿಸಿದರು. ಫೆಬ್ರುವರಿ 10, 2007ರಂದು, ಡೆವಿಡ್ ಪ್ಯಾಟ್ರೂಸ್ರನ್ನು ಬಹು-ರಾಷ್ಟ್ರೀಯ ದಳ- ಇರಾಕ್ (ಎಮ್ಎನ್ಎಫ್-I)ನ ನಾಯಕರಾಗಿ ನೇಮಿಸಲಾಗಿತ್ತು, ಜನರಲ್ ಜಾರ್ಜ್ ಕೇಸಿರ ಬದಲಿಯಾಗಿ ಇವರಿಗೆ ದೊರೆತ, ದೇಶದಲ್ಲಿ ಎಲ್ಲ ಸಂಯೋಜನಾ ದಳಗಳ ಉಸ್ತುವಾರಿ ವಹಿಸಿಕೊಳ್ಳುವ ನಾಲ್ಕು-ನಕ್ಷತ್ರಗಳ ಹುದ್ದೆ ಇದಾಗಿತ್ತು. ಅವರ ಹೊಸ ಪದವಿಯಲ್ಲಿ, ಪ್ಯಾಟ್ರೂಸ್ ಇರಾಕಿನ ಎಲ್ಲ ದಳಗಳ ವುಸ್ತುವಾರಿ ವಹಿಸಿಕೊಂಡರು ಹಾಗೂ ಅವರನ್ನು ಬುಷ್ ಆಡಳಿತದಿಂದ ರೂಪರೇಖಿತ ಹೊಸ "ಕ್ಷೋಭೆ" ಸೇನಾವ್ಯವಸ್ಥೆಯಲ್ಲಿ ನಿಯೋಜಿಸಿದರು. 2007 ಪ್ರತಿಭಟನೆಕಾರ ಕ್ಲೋರಿನ್ ಬಾಂಬುದಾಳಿಯಲ್ಲಿ ಕೂಡ ತೀಕ್ಷ್ಣ ಬೆಳವಣಿಗೆ ಕಂಡಿತು. ಮೇ 10, 2007ರಂದು, 144 ಇರಾಕಿ ಸಂಸತ್ತಿನ ಶಾಸನಕಾರರು ವಾಪಸಾತಿಗೆ ವೇಳಾಪಟ್ಟಿಯನ್ನು ನಿಗದಿಪಡಿಸಲು ಸಂಯುಕ್ತ ರಾಷ್ಟ್ರಗಳನ್ನು ಆಹ್ವಾನಿಸುತ್ತಾ ಒಂದು ಆಡಳಿತದ ಮನವಿಗೆ ಸಹಿ ಹಾಕಿದರು. ಜೂನ್ 3, 2007ರಂದು, ಇರಾಕಿನಲ್ಲಿ ಸಂಯೋಜನಾ ಕಾರ್ಯಾಚರಣೆಗಳ ವಿಶ್ವಸಂಸ್ಥೆ ಭದ್ರತಾ ಮಂಡಳಿ ಆಜ್ಞೆಯ ಅಧಿಕೃತ ವಿಸ್ತರಣೆಗಳನ್ನು ಬೇಡುವ ಮುನ್ನ ಇರಾಕಿ ಸರ್ಕಾರ ಸಂಸತ್ತಿನೊಂದಿಗೆ ಸಮಾಲೋಚಿಸಲು ಇರಾಕಿ ಸಂಸತ್ತು 85ರಿಂದ 59 ಮತಗಳನ್ನು ಹಾಕಿತು. ಇದಲ್ಲದೆ, ಡಿಸೆಂಬರ್ 18, 2007ರಂದು ಇರಾಕಿ ಸಂಸತ್ತಿನ ಮನ್ನಣೆ ಇಲ್ಲದೆ ಆಜ್ಞೆಯನ್ನು ನವೀಕರಿಸಲಾಗಿತ್ತು.
ಸಂಯೋಜನಾ ದಳಗಳ ಸತತ ವಾಪಸಾತಿಯಿಂದ ಸಂಯುಕ್ತ ಸಂಸ್ಥಾನ ಸೈನ್ಯದ ಮೇಲೆ ಒತ್ತಡ ಅಧಿಕಗೊಂಡಿತು. 2007ರ ಆರಂಭದಲ್ಲಿ ಬ್ರಿಟೀಷ್ ಪ್ರಧಾನ ಮಂತ್ರಿ ಬ್ಲೇರ್ ಸಿನ್ಬಾದ್ ಕಾರ್ಯಾಚರಣೆಯನ್ನು ಬ್ರಿಟೀಷ್ ಸೈನ್ಯವು ಬಸ್ರಾ ಗವರ್ನರ್ ಪ್ರಾಂತದಿಂದ ವಾಪಸಾತಿ ಪಡೆಯಲು ಆರಂಭಿಸುವುದು ಮತ್ತು ಭದ್ರತೆಯನ್ನು ಇರಾಕಿಗಳಿಗೆ ವಹಿಸುವುದು ಎಂದು ಘೋಷಿಸಿದರು. ಜುಲೈನಲ್ಲಿ ಡಾನಿಷ್ ಪ್ರಧಾನ ಮಂತ್ರಿ ಆಂಡರ್ಸ್ ಫೊ ರಾಸ್ಮುಸ್ಸೇನ್ರು ಕೂಡ ಇರಾಕಿನಿಂದ 441 ಡಾನಿಷ್ ಸೈನ್ಯಗಳ ವಾಪಸಾತಿಯನ್ನು ಘೋಷಿಸಿದರು. ಕೇವಲ ಒಂಬತ್ತು ಸೈನಿಕರ ತಂಡ ನಾಲ್ಕು ವೀಕ್ಷಣೆಯ ಹೆಲಿಕಾಪ್ಟರುಗಳ ಜೊತೆ ನಿರ್ವಹಣೆಯಲ್ಲಿದ್ದರು.
ಸೆಪ್ಟೆಂಬರ್ 10, 2007ರಂದು, ಪ್ಯಾಟ್ರೂಸ್ ಕಾಂಗ್ರೆಸ್ಗೆ ಮಾಡಿದ ಒಂದು ಭಾಷಣದಲ್ಲಿ, "ಮುಂದಿನ ಬೇಸಿಗೆಯವರೆಗೆ ಕಡಲಿನ ತಂಡದಿಂದ [ಸೆಪ್ಟೆಂಬರ್ನಲ್ಲಿ] ಆರಂಭಗೊಂಡು ಸುಮಾರು 30,000 ಸಂಯುಕ್ತ ಸಂಸ್ಥಾನ ಸೈನ್ಯ ದಳಗಳು ವಾಪಸಾತಿ ಮಾಡುವ ಎದುರುನೋಡುತ್ತಿದ್ದೇವೆ." ಸೆಂಪ್ಟೆಂಬರ್ 14, ಬುಷ್ ಇರಾಕಿನಿಂದ ದಳಗಳ ಒಂದು ಸೀಮಿತ ವಾಪಸಾತಿಯನ್ನು ಸಮರ್ಥಿಸಿದರು. 5,700 ಸಿಬ್ಬಂದಿ 2007ರ ಕ್ರಿಸ್ಮಸ್ವರೆಗೆ ಮನೆಗೆ ಹಿಂದಿರುಗುತ್ತಾರೆ, ಹಾಗೂ ಜುಲೈ 2008ರವರೆಗೆ ಇನ್ನು ಸಾವಿರಾರು ಜನರು ಹಿಂದಿರುಗುವ ಅಪೇಕ್ಷೆಯಿದೆ ಎಂದು ಬುಷ್ ಹೇಳಿದ್ದರು. 2007ರ ಆರಂಭದಲ್ಲಿ ಕ್ಷೋಭೆಯ ಮುಂಚೆಯೆ ಈ ಯೋಜನೆ ಸೈನ್ಯದ ಸಂಖ್ಯೆಯನ್ನು ತನ್ನ ಮಟ್ಟಕ್ಕೆ ಹಿಂದಿರುಗಿಸುವಂತಿತ್ತು.
ಮಾರ್ಚ 2008ರವರೆಗೆ, ಪೆಂಟಗನ್ ವರದಿಯ ಅನುಸಾರ ಇರಾಕಿನಲ್ಲಿ ಹಿಂಸೆ 40-80%ರಷ್ಟು ಕಡಿಮೆಗೊಂಡಿದೆ ಎಂದು ವರದಿಯಾಗಿದೆ. ಆ ನಿರ್ಧರಿಸುವಿಕೆಗಳ ಬಗ್ಗೆ ಸ್ವತಂತ್ರ ವರದಿಗಳು ಪ್ರೆಶ್ನೆಗಳನ್ನುಂಟುಮಾಡಿದವು. ಒಬ್ಬ ಇರಾಕಿ ಮಿಲಿಟರಿ ವಕ್ತಾರರ ಹೇಳಿಕೆಯ ಅನುಸಾರ ಸೈನ್ಯ ಕ್ಷೋಭೆ ಯೋಜನೆಯ ಆರಂಭದ ಸಮಯದಿಂದ ಬಾಗ್ದಾದ್ನಲ್ಲಿ ಪೌರರ ಹತ್ಯೆಗಳ ಸಂಖ್ಯೆ ಹಿಂದಿನ ನಾಲ್ಕು ವಾರಗಳಲ್ಲಿ 1,440ರಿಂದ 265ಗೆ ಇಳಿಯಿತು. ಇರಾಕಿ ಒಳಪ್ರದೇಶ ಮಂತ್ರಿಮಂಡಲ ಹಾಗೂ ಆಸ್ಪತ್ರೆ ಅಧಿಕಾರಿಗಳ ಆರಂಭದ ದಿನನಿತ್ಯ ವರದಿಗಳ ಆಧಾರದ ಮೇಲೆ, ಇದೇ 28-ದಿವಸಗಳ ಅವಧಿಯಲ್ಲಿ ನ್ಯೂ ಯಾರ್ಕ್ ಟೈಮ್ಸ್ 450ಕ್ಕಿಂತ ಹೆಚ್ಚು ಇರಾಕಿ ಪೌರರ ಹತ್ಯೆಯಾಗಿದೆ ಎಂಬುದರ ಕುರಿತಾಗಿ ಅಂಕಿಅಂಶ ನೀಡಿದರು. ಐತಿಹಾಸಿಕವಾಗಿ, ಎನ್ವೈಟಿ ಯಿಂದ ತಾಳೆನೋಡಿದ ದಿನನಿತ್ಯ ಸಂಖ್ಯೆಗಳು ಒಟ್ಟು ಸಾವುಗಳ ಸಂಖ್ಯೆಯ 50% ಕಡಿಮೆ ಅಂದಾಜು ಮಾಡಲಾಗಿತ್ತು ಅಥವಾ ವಿಶ್ವಸಂಸ್ಥೆಯ ಅಧ್ಯಯನವನ್ನು ಹೋಲಿಸಿದಾಗ ಹೆಚ್ಚಾಗಿತ್ತು, ಇರಾಕಿ ಆರೋಗ್ಯ ಮಂತ್ರಿಮಂಡಲ ಹಾಗೂ ಶವಾಗಾರದ ಸಂಖ್ಯೆಗಳ ಮೇಲೆ ಇವು ಆಧಾರವಾಗಿದ್ದವು. ಬಾಗ್ದಾದ್ನಲ್ಲಿ ಸಂಯುಕ್ತ ಸಂಸ್ಥಾನ ಕದನದ ಸಾವುಗಳ ಪ್ರಮಾಣ ಹಿಂದಿನ ಅವಧಿಗೆ ಹೋಲಿಸಿದರೆ ಭದ್ರತಾ ಕಾರ್ಯಾಚರಣೆಯಲ್ಲಿನ "ಕ್ಷೋಭೆ"ಯ ಮೊದಲ ಏಳು ವಾರಗಳಲ್ಲಿ ಪ್ರತಿನಿತ್ಯ ಸುಮಾರು 3.14ಕ್ಕೆ ದ್ವಿಗುಣವಾಯಿತು. ಇರಾಕ್ನ ಉಳಿದ ಕಡೆಯಲ್ಲಿ ಇದರ ಪ್ರಮಾಣ ಸ್ವಲ್ಪ ಕಡಿಮೆಯಾಯಿತು.
ಆಗಸ್ಟ್ 14, 2007ರಂದು, ಇಡೀ ಯುದ್ಧದಲ್ಲೇ ಭಯಂಕರ ಎಂದು ಪರಿಗಣಿಸಲಾದ ದಾಳಿ ಸಂಭವಿಸಿತು. ಕತಾನಿಯಾದ ಉತ್ತರ ಇರಾಕಿನಲ್ಲಿ ಸಂಘಟಿತವಾದ ಆತ್ಮಾಹುತಿ ಬಾಂಬುಗಳ ಸರಣಿಯ ದಾಳಿಯಿಂದ ಸುಮಾರು 800ಕ್ಕೂ ಹೆಚ್ಚು ಪೌರರ ಹತ್ಯೆಯಾಯಿತು. ಆಸ್ಫೋಟಗಳಲ್ಲಿ 100ಕ್ಕಿಂತ ಹೆಚ್ಚು ಮನೆಗಳು ಹಾಗೂ ಅಂಗಡಿಗಳು ಧ್ವಂಸಗೊಂಡವು. ಸಂಯುಕ್ತ ಸಂಸ್ಥಾನ ಅಧಿಕಾರಿಗಳು ಇದನ್ನು ಅಲ್-ಕೈದಾಗೆ ಆರೋಪಿಸುತ್ತಾರೆ. ದಾಳಿಗೊಳಪಟ್ಟ ಗ್ರಾಮಸ್ಥರು ಮುಸ್ಲಿಮ್ ಅಲ್ಲದ ಯಾಜಿದಿ ಜನಾಂಗೀಯ ಅಲ್ಪಸಂಖ್ಯಾತರಾಗಿದ್ದರು. ದುವಾ ಖಲೀಲ್ ಅಸ್ವದ್ ಎಂಬ ಹದಿಹರಯದ ಹುಡುಗಿ ಒಬ್ಬ ಸುನ್ನಿ ಅರಬ್ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತ ಇಸ್ಲಾಮ್ ಧರ್ಮಕ್ಕೆ ಸೇರಿದ್ದ ಕಾರಣ ಅವಳನ್ನು ಯಜಿದಿ ಸಮುದಾಯದವರು ಆ ಹಿಂದಿನ ವರ್ಷ ಕಲ್ಲಲ್ಲಿ ಹೊಡೆದು ಸಾಯಿಸಿದ ಮೇಲೆ ಎರಡೂ ಪಂಗಡದ ನಡುವೆ ತೀವೃ ವೈಷಮ್ಯಕ್ಕೆ ಕಾರಣವಾಗಿತ್ತು. ಆ ಹುಡುಗಿಯನ್ನು ಕೊಂದಿದ್ದನ್ನು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಇಂಟರ್ನೆಟ್ಗೆ ಹಾಕಲಾಗಿತ್ತು. ಸೆಪ್ಟೆಂಬರ್ 13, 2007ರಂದು ಅಬ್ದುಲ್ ಸತ್ತಾರ್ ಅಬು ರಿಷಾ ಎಂಬುವಾತ ರಮೇದಿ ನಗರದಲ್ಲಿ ಬಾಂಬ್ ದಾಳಿಯಲ್ಲಿ ಮೃತಪಟ್ಟ. ಆತ ಅಮೇರಿಕಾ ಸಂಯುಕ್ತ ಸಂಸ್ಥಾನದ ಅತ್ಯಂತ ಪ್ರಮುಖ ಸ್ನೇಹಿತನಾಗಿದ್ದ, ಏಕೆಂದರೆ ಆತ ಅಲ್-ಕೈದಾವನ್ನು ವಿರೋಧಿಸುತ್ತಿದ್ದ ಇರಾಕಿನ ಸುನ್ನಿ ಪಂಗಡಗಳ "ಅನ್ಬರ್ ಅವೇಕನಿಂಗ್" ಎಂಬ ಸಂಘದ ನಾಯಕನಾಗಿದ್ದ. ಈ ದಾಳಿಯ ಹೊಣೆಯನ್ನು ಕೊನೆಗೆ ಅಲ್-ಕೈದಾ ಹೊತ್ತುಕೊಂಡಿತು. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಎಂಬ ಹೆಸರಿನಲ್ಲಿ ಅಂತರ್ಜಾಲದಲ್ಲಿ ಪ್ರಕಟಿಸಿದವರು ಅಬು ರಿಷಾನನ್ನು "ಬುಷ್ರ ಕೆಲವು ನಾಯಿಗಳಲ್ಲೊಬ್ಬ" ಎಂದು ಮತ್ತು ಆ ಗುರುವಾರದ ದಾಳಿಯು "ಒಂದು ವೀರತನದ ದಾಳಿಯಾಗಿದ್ದು ಅದನ್ನು ಮಾಡಲು ಒಂದು ತಿಂಗಳಿಗಿಂತ ಹೆಚ್ಚಿನ ಸಿದ್ಧತೆ ಬೇಕಾಯಿತು" ಎಂದು ಹೇಳಿದ್ದರು.
ಅಮೇರಿಕಾ ಸಂಯುಕ್ತ ಸಂಸ್ಥಾನದ ಪಡೆಯಲ್ಲಿ ಸಾವು ನೋವು ಸಂಭವಿಸುವುದು ಮೇ 2007ರ ನಂತರದಲ್ಲಿ ಗಮನಾರ್ಹವಾಗಿ ಕಡಿಮೆಯಾಯಿತು ಮತ್ತು ಆ ಸಂಯುಕ್ತ ಪಡೆಗಳ ಮೇಲಿನ ಆಕ್ರಮಣವೂ ಮೊದಲ ಅಮೇರಿಕಾದ ಆಕ್ರಮಣದ ಮೊದಲ ವರ್ಷದಿಂದ ಅಲ್ಲಿಯವರೆಗೆ ಅತ್ಯಂತ ಕೆಳ ಮಟ್ಟಕ್ಕೆ ಇಳಿದಿತ್ತು. ಇವು ಮತ್ತು ಇನ್ನಿತರ ಧನಾತ್ಮಕ ಬೆಳವಣಿಗೆಗಳು ಕ್ಷೋಬೆಯ ಕಾರಣದಿಂದಾಗಿ ಎಂದು ಅನೇಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಪೆಂಟಗಾನ್ ಮತ್ತು ಇತರೆ ಅಮೇರಿಕಾ ಸಂಯುಕ್ತ ಸಂಸ್ಥಾನದ ಗವರ್ನಮೆಂಟ್ ಅಕೌಂಟೆಬಿಲಿಟಿ ಆಫೀಸ್(GAO) ನಂತಹ ಇತರ ಏಜೆನ್ಸಿಗಳ ಅಂಕಿ ಅಂಶಗಳ ಪ್ರಕಾರ ಇರಾಕಿನ ನಾಗರೀಕರ ಮೇಲಿನ ದಾಳಿಗಳು ಫೆಬ್ರುವರಿಯಿಂದ ಮೊದಲಿನಂತೆಯೇ ಮುಂದುವರೆದವು. ಅದಲ್ಲದೇ ಜನಾಂಗೀಯ ಹಿಂಸೆಯಲ್ಲಿ ಯಾವುದೇ ಗ್ರಹಿಸಬಲ್ಲ ದೋರಣೆ ಕಾಣಲಿಲ್ಲವೆಂದು ಸಹಾ ಜಿಎಒ ಹೇಳಿತು. ಆದರೆ, ಈ ವರದಿ ಕಾಂಗ್ರೆಸ್ಗೆ ಹೋದ ವರದಿಗೆ ವಿರುದ್ಧವಾಗಿತ್ತು. ಅದರ ಪ್ರಕಾರ ನಾಗರೀಕರ ಸಾವಿನ ಮಟ್ಟದಲ್ಲಿ ಮತ್ತು ಜನಾಂಗೀಯ ಹಿಂಸೆಯೂ ಡಿಸೆಂಬರ್ 2006 ರಿಂದ ಕಡಿಮೆಯಾಗಿತ್ತು. 2007 ರ ಅಂತ್ಯದ ಹೊತ್ತಿಗೆ ಅಮೇರಿಕಾ ಸಂಯುಕ್ತ ಸಂಸ್ಥಾನ ಸೇನೆಯ ದಾಳಿ ಕಡಿಮೆ ಆಗುತ್ತಿದ್ದಂತೆ ಇರಾಕಿನಲ್ಲಿ 2006 ರಲ್ಲಿ ಆಗುತ್ತಿದ್ದ ಹಿಂಸೆಯೂ ಕಡಿಮೆಯಾಗತೊಡಗಿತು. ಇರಾಕ್ನಲ್ಲಿ ಅಮೇರಿಕಾದ ಸೇನೆ ಹಿಂದೆ ಸರಿದಿದ್ದುದು ಇರಾಕಿನ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಿತು ಎಂಬುದನ್ನು ಯುದ್ಧಭೂಮಿಯ ವರದಿಗಳು ಅಲ್ಲಗಳೆದವು. ಬಾಗ್ದಾದ್ ನಲ್ಲಿನ ಜನಜೀವನವು 2007–08 ರಲ್ಲಿ ಉತ್ತಮಗೊಂಡಿತು. ಇದಕ್ಕೆ ಮುಖ್ಯ ಕಾರಣ ಬಾಗ್ದಾದ್ಗಾಗಿ ಶಿಯಾ ಮತ್ತು ಸುನ್ನಿಗಳ ನಡುವೆ 2006–07 ರಲ್ಲಿ ನಡೆದ ಯುದ್ಧದಲ್ಲಿ ಶಿಯಾ ಪಂಗಡದವರು ಗೆದ್ದರು, ಮತ್ತು ಅವರು ಸೆಪ್ಟೆಂಬರ್ 2008 ರ ಹೊತ್ತಿಗೆ ಈ ರಾಜಧಾನಿಯ ಸುಮಾರು ನಾಲ್ಕನೇ ಮೂರು ಭಾಗದ ಮೇಲೆ ಹಿಡಿತ ಸಾಧಿಸಿದ್ದರು. ಈ ಬದಲಾವಣೆಗಳು ಜನಾಂಗೀಯ ಬದಲಾವಣೆಗಳು ಸ್ಥಿರವೆಂದು ಕಂಡುಬಂದವು; ತಮ್ಮ ಮನೆಗಳನ್ನು ಮರಳಿ ಪಡೆಯಲು ಪ್ರಯತ್ನಿಸಿದ ಸುನ್ನಿಗಳನ್ನು ಕೊಲೆಗೈಯ್ಯಲಾಯಿತು. ಈ ಮೂಲಕ ಅಮೇರಿಕಾ ಸಂಯುಕ್ತ ಸಂಸ್ಥಾನದ ಆಕ್ರಮಣದ ವಿರುದ್ಧವಾಗಿದ್ದ ಮೊದಲು ಸದ್ದಾಂ ಹುಸೇನನಿಂದ ಬೆಂಬಲಿತಗೊಂಡಿದ್ದ ಸುನ್ನಿ ಸಮುದಾಯದ ಹೋರಾಟ ಹೆಚ್ಚಾಗಿ ಕೊನೆಗೊಂಡಿತು. ದ ಇಂಡೆಪೆಂಡೆಂಟ್ ಪ್ರಕಾರ ಸುನ್ನಿಗಳು ಬಹುವಾಗಿ ಸೋತು ಹೋಗಿದ್ದರು ಮತ್ತು ಅದಕ್ಕೆ ಅಮೇರಿಕಾ ಸಂಯುಕ್ತ ಸಂಸ್ಥಾನ ಸೈನ್ಯಕ್ಕಿಂತ ಹೆಚ್ಚಾಗಿ ಶಿಯಾ ಆಡಳಿತದ ಇರಾಕಿ ಸರ್ಕಾರ ಮತ್ತು ಶಿಯಾ ನಾಗರೀಕ ಸೈನ್ಯವೇ ಕಾರಣವಾಗಿತ್ತು. ಬಾಗ್ದಾದ್ನ ಸುತ್ತಮುತ್ತಲಿನ ಪ್ರದೇಶವನ್ನು ಜನಾಂಗೀಯವಾಗಿ ಶಿಯಾಗಳು ಮತ್ತು ಸುನ್ನಿಗಳ ನಾಗರೀಕ ಸೈನಿಕರು ಶುದ್ಧಗೊಳಿಸಿಬಿಟ್ಟಿದ್ದರು ಮತ್ತು ರಾಷ್ಟ್ರದ ಯಾವುದೇ ನಗರದಲ್ಲಿ ಈ ಎರಡೂ ಜನಾಂಗದವರು ಇದ್ದರೋ ಅಲ್ಲೆಲ್ಲಾ ಜನಾಂಗೀಯ ಹಿಂಸೆ ಪ್ರಾರಂಭವಾಗಿ ಹೋಯಿತು. ಬಾಗ್ದಾದ್ನ ಸುತ್ತಮುತ್ತಲ ನಗರ ಪ್ರದೇಶದಲ್ಲಿ ಕಂಡುಬಂದ ಬೆಳಕಿನ ಪ್ರಸಾರದ ಉಪಗ್ರಹ ಚಿತ್ರಣ ಅಧ್ಯಯನದ ಮೂಲಕ ಅಳೆಯಲಾಗಿದ್ದು ಅದು ಈ ಅಂದಾಜನ್ನು ಬೆಂಬಲಿಸಿತು. ಜನಾಂಗೀಯ ಶುದ್ಧೀಕರಣದ ಕಾರಣಕ್ಕಾಗಿ ಬಾಗ್ದಾದ್ನಲ್ಲಿ ಹಿಂಸೆ ಕಡಿಮೆಯಾಯಿತು ಎಂದು ಈ ಅಂಕಿಅಂಶಗಳು ಹೇಳುತ್ತಿದ್ದವು ಮತ್ತು ದಾಳಿ ತಾರಕಕ್ಕೇರುತ್ತಿದ್ದಂತೆಯೇ ಜನಾಂಗೀಯ ಹಿಂಸೆಗಳು ಸಹಾ ತಾರಕಕ್ಕೇರಿದವು. ಜಾನ್ ಅಗ್ನಿವ್ ಎಂಬ ಜನಾಂಗೀಯ ಹಿಂಸೆಯ ಕುರಿತ ಪರಿಣತ ಮತ್ತು ಈ ಪ್ರೊಜೆಕ್ಟ್ನ ಮುಖ್ಯಸ್ಥ ಹೀಗೆ ಹೇಳಿದ್ದಾನೆ:"ಈ ದಾಳಿಯು ನಿಜವಾಗಿ ಕುದುರೆ ಓಡಿ ಹೋದ ಮೇಲೆ ಲಾಯಕ್ಕೆ ಬಾಗಿಲು ಹಾಕಿದಂತೆ ಆಗಿತ್ತು. " ತನಿಖಾ ವರದಿಗಾರ ಬಾಬ್ ವುಡ್ವರ್ಡ್ ಅಮೇರಿಕಾ ಸಂಯುಕ್ತ ಸಂಸ್ಥಾನ ಸರ್ಕಾರದ ಮೂಲಗಳನ್ನು ಉಲ್ಲೇಖಿಸುತ್ತಾ, ಅಮೇರಿಕಾ ಸಂಯುಕ್ತ ಸಂಸ್ಥಾನ "ದಾಳಿ" 2007–2008 ರ ಹಿಂಸೆಗೆ ಪ್ರಾಥಮಿಕ ಕಾರಣವಾಗಿರಲಿಲ್ಲ. ಅದರ ಬದಲಾಗಿ, ಆ ದೃಷ್ಠಿಯಿಂದ ನೋಡಿದಾಗ, ಅಮೇರಿಕಾ ಸಂಯುಕ್ತ ಸಂಸ್ಥಾನ ಸೈನ್ಯ ಮತ್ತು ಗುಪ್ತದಳದ ಅಧಿಕಾರಿಗಳ ರಹಸ್ಯ ತಂತ್ರಗಳಾದ ಹಾಲಿ ಮತ್ತು ಮಾಜಿ ದಂಗೆಕೋರರನ್ನು ಕಂಡುಹಿಡಿದು, ಅವರನ್ನೇ ಗುರಿಮಾಡಿ ಅವರನ್ನು ಕೊಲ್ಲುವ ಮೂಲಕ ಹಿಂಸೆಯನ್ನು ಕಡಿಮೆಗೊಳಿಸಲಾಯಿತು ಎಂದು ಹೇಳಬಹುದು. ಬಸ್ರಾ ಬಳಿಯ ಶಿಯಾ ಜನಾಂಗ ಪ್ರದೇಶದಲ್ಲಿ ಬ್ರಿಟಿಷ್ ಸೈನ್ಯವು ಭದ್ರತೆಯನ್ನು ಇರಾಕಿ ಸೈನ್ಯಕ್ಕೆ ಬಿಟ್ಟುಕೊಟ್ಟಿತು. ಆಕ್ರಮಣದ ನಂತರದಲ್ಲಿ ಸ್ಥಳೀಯ ಆಡಳಿತಕ್ಕೆ ಮರಳಿ ಒಪ್ಪಿಸಬೇಕಾದ ಹದಿನೆಂಟು ಪ್ರಾಂತ್ಯಗಳ ಪೈಕಿ ಬಸ್ರಾ ಒಂಬತ್ತನೆಯದಾಗಿತ್ತು.
ಇರಾಕ್ ಪಾರ್ಲಿಮೆಂಟಿನ ಸದಸ್ಯರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಸದಸ್ಯರು ತಮ್ಮ ರಾಷ್ಟ್ರದ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ಮೊತ್ತಮೊದಲ ಭಾರಿಗೆ ವಿರೋಧಿಸಿದರು. ವಿದೇಶೀ ಸೇನಾಬಲವನ್ನು ಇರಾಕಿಗೆ ಒದಗಿಸುವಂತೆ ಯು.ಎನ್. ಮ್ಯಾಂಡೇಟ್ಗೆ ಸಲ್ಲಿಸಿದ ಬೇಡಿಕೆಯ ಕಾಲಾವಧಿಯು 2008ರ ಕೊನೆಯಲ್ಲಿ ಕೊನೆಗೊಳ್ಳುವುದರಿಂದ ಮತ್ತೆ ಈ ಕಾಲಾವಧಿಯ ವಿಸ್ತರಣೆಗೆ ಬೇಡಿಕೆ ಸಲ್ಲಿಸುವುದಕ್ಕಾಗಿ ಸಂಸತ್ತಿನ ಅನುಮತಿ ಪಡೆಯಲು ಇರಾಕ್ ಸರಕಾರಕ್ಕೆ ಅಗತ್ಯವಾದ ಶಾಸನ ರಚನೆಗೆ ಸಂಬಂಧಿಸಿದ ವಿಧಾಯಕ ಮನವಿಗೆ 275 ಜನ ಶಾಸಕರಲ್ಲಿ 144 ಜನ ಶಾಸಕರು ಸಹಿ ಹಾಕಿದರು. ಅಲ್ಲದೆ ಇವರು ವಿದೇಶೀ ಸೈನಿಕದಳವನ್ನು ಹಿಂದೆಗೆದುಕೊಳ್ಳುವಂತೆ ಮತ್ತು ವಿದೇಶೀ ಸೈನಿಕಬಲದ ಭದ್ರತೆಯ ಬಗ್ಗೆ ನಿಗಧಿತ ವೇಳಾಪಟ್ಟಿಯನ್ನು ನಿಷ್ಕ್ರಿಯಗೊಳಿಸುವಂತೆ ಕರೆ ನೀಡಿತ್ತು. ಯುಎಸ್ನ ಅಧಿಕೃತ ಯುಎನ್ ಭದ್ರತಾ ಸಮಿತಿ ಇರಾಕಿನಲ್ಲಿ ನಿಯೋಜಿಸಿದ ಸೈನಿಕಪಡೆಯನ್ನು "ಇರಾಕ್ ಸರಕಾರವು ಕೋರಿಕೆ ಸಲ್ಲಿಸಿದರೆ ಮಾತ್ರ" ವಜಾಗೊಳಿಸಬಹುದಿತ್ತು." ಇರಾಕಿನ ಕಾನೂನಿನ ಪ್ರಕಾರ ಸಭಾಪತಿಯು ಬಹುಪಾಲು ಶಾಸಕರ ಬೇಡಿಕೆಯ ಮೇರೆಗೆ ತನ್ನ ತೀರ್ಮಾನವನ್ನು ಕೊಡಬೇಕಾಗುತ್ತದೆ. 59% ಜನ ಶಾಸಕರು ತಮ್ಮ ಮತಗಳನ್ನು ಯುಎಸ್ಗೆ ನೀಡಿ ಭದ್ರತಾ ವ್ಯವಸ್ಥೆಯ ಬಗೆಗಿನ ನಿಗಧಿತ ವೇಳಾಪಟ್ಟಿಯನ್ನು ಹಿಂತೆಗೆದುಕೊಳ್ಳಲು ತಮ್ಮ ಅನುಮೋದನೆ ನೀಡಿದರು. 2007ರ ಮಧ್ಯದಲ್ಲಿ ರಕ್ಷಣಾತ್ಮಕ "ನಾಗರಿಕ ಸೈನಿಕಪಡೆ"ಯನ್ನು ರಚಿಸಲು ಇರಾಕಿನ ಸನ್ನಿಗಳನ್ನು ಸೇರಿಸಿಕೊಳ್ಳುವ ಸಂದರ್ಭದಲ್ಲಿ ಒಕ್ಕೂಟವು ಒಂದು ವಿವಾದಾತ್ಮಕ ಯೋಜನೆಯನ್ನು ಆರಂಭಿಸಿತು. ಈ ರಕ್ಷಕ ಸೈನಿಕಪಡೆಯು ತಮ್ಮ ನೆರೆಯ ಹಲವಾರು ಸನ್ನಿ ಅನುಯಾಯಿಗಳಿಗೆ ನೆರವು ನೀಡಲು ಮತ್ತು ಇಸ್ಲಾಮಿಗಳಿಂದ ಅವರನ್ನು ರಕ್ಷಿಸುವ ಉದ್ದೇಶದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ.
2007ರಲ್ಲಿ ಇರಾಕಿನ ಕುರ್ದಿಸ್ತಾನದವರು ತಮ್ಮ ಪವಿತ್ರಸ್ಥಳವನ್ನು [ದೇವಾಲಯವನ್ನು] ಉಗ್ರಗಾಮಿ ಕುರ್ದಿಸ್ ಪ್ರತ್ಯೇಕತಾವಾದಿ ಪರ್ಟಿ ಫಾರ್ ಫ್ರೀ ಲೈಫ್ ಇನ್ ಕುರ್ದಿಸ್ತಾನ್[ಪೆಜಕ್] ಗುಂಪುಗಳಿಗೆ ನೀಡಿದುದರಿಂದ ಇರಾನ್ ಮತ್ತು ಇರಾಕಿನ ಕುರ್ದಿಸ್ತಾನ್ ಜನರ ಮಧ್ಯೆ ಘರ್ಷಣೆಯು ತೀವ್ರಗೊಳ್ಳಲಾರಂಭಿಸಿತು. ವರದಿಗಳ ಪ್ರಕಾರ, ಆಗಸ್ಟ್ 16ರಿಂದ ಇರಾನಿನ ಇರಾಕಿನ ಕುರ್ದಿಸ್ತಾನ್ನಲ್ಲಿನ ತನ್ನ ಪೆಜಕ್ ಸ್ಥಾನದಿಂದ ಹೊರಬರಲಾರಂಭಿಸಿತು. ಆಗಸ್ಟ್ 23ರಂದು ಅನೇಕ ಕುರ್ದಿಸ್ ಗ್ರಾಮಗಳನ್ನು ಆಕ್ರಮಣ ಮಾಡಿ ಹಲವಾರು ನಾಗರಿಕರನ್ನು ಹಾಗೂ ಸೈನಿಕರ ಹತ್ಯೆಗೆ ಕಾರಣವಾದ, ಆಪಾದಿತ ಗಡಿಯ ಮೇಲೆ ನಡೆದ ಇರಾನಿನ ಸೈನಿಕ ತುಕಡಿಯ ಅನಿರೀಕ್ಷಿತ ದಾಳಿಯಿಂದಾಗಿ ಈ ಘರ್ಷಣೆಗಳು ಮತ್ತೂ ತೀವ್ರಗೊಂಡವು. ಒಕ್ಕೂಟಗಳು ತಮ್ಮ ಸೈನ್ಯಬಲವನ್ನು ಇರಾಕಿನಲ್ಲಿ ಕಾರ್ಯಗತಗೊಂಡಿರುವ ಇರಾನಿನ ಕುಡ್ ಪಡೆಗಳನ್ನು ಗುರಿಯಾಗಿರಿಸಿಕೊಂಡು ಸಂಶಯಿತ ಸದಸ್ಯರನ್ನು ಬಂಧಿಸುವ ಅಥವಾ ಕೊಲ್ಲುವ ಕಾರ್ಯದಲ್ಲಿ ತೊಡಗಿದರು. ಬುಷ್ರ ಆಡಳಿತ ಮತ್ತು ಒಕ್ಕೂಟದ ನಾಯಕರು "ಇರಾಕಿನ ಬಂಡಾಯಗಾರರಿಗೆ ಮತ್ತು ಉಗ್ರಗಾಮಿಗಳಿಗೆ ಇಎಫ್ಪಿ ಸಾಧನಗಳ ಸಹಿತ ಇತರ ಶಸ್ತ್ರಾಸ್ತ್ರಗಳನ್ನು ಇರಾನ್ ಒದಗಿಸಿಕೊಡುತ್ತಿದೆ" ಎಂದು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟರೂ ಇಂದಿನವರೆಗೆ ಈ ಆರೋಪದ ಬಗ್ಗೆ ಸ್ಪಷ್ಟ ದಾಖಲೆ ಅಥವಾ ಸಾಕ್ಷ್ಯವೊದಗಿಸಲು ಇವರು ವಿಫಲರಾದರು. 2007ರ ಶರತ್ಕಾಲದಲ್ಲಿ ಬುಷ್ ಆಡಳಿತ ವರ್ಗದಿಂದ ಇನ್ನೂ ಹೆಚ್ಚಿನ ದಂಡನೆಗಳು ಇರಾನಿನ ಸಂಘಟನೆಗಳ ಮೇಲೆ ಘೋಷಿಸಲ್ಪಟ್ಟವು. 2007ರ ನವಂಬರ್ 21ರಲ್ಲಿ ಇರಾಕಿನ ರಕ್ಷಣಾಪಡೆಗಳ ತರಬೇತುದಾರನ ಸ್ಥಾನದಲ್ಲಿದ್ದ ಲಿಫ್ಟೆನೆಂಟ್ ಜನರಲ್ ಜೇಮ್ಸ್ ಡುಬಿಕ್ ಇರಾಕ್ಗೆ ಆಯುಧಗಳು, ಸ್ಪೋಟಕಗಳನ್ನು ಸರಬರಾಜು ಮಾಡುವ ಮತ್ತು ಉಗ್ರವಾದಿಗಳನ್ನು ತರಬೇತುಗೊಳಿಸುವುದನ್ನು ನಿಲ್ಲಿಸಲು ಇರಾನ್ ಮಾಡಿದ ಪ್ರತಿಜ್ಞೆಯನ್ನು ಎತ್ತಿಹಿಡಿದು ಇರಾಕಿನಲ್ಲಿ "ಹಿಂಸಾಚಾರವನ್ನು ಇಳಿಸುವಲ್ಲಿ ಇರಾನ್ನ ಪಾತ್ರ" ದ ಬಗ್ಗೆ ಇರಾನ್ನ್ನು ಪ್ರಶಂಸಿಸಿದನು.
ಇರಾಕಿನ ಕುರ್ದಿಸ್ತಾನದಲ್ಲಿ ನಡೆದ ಪಿಕೆಕೆ ಉಗ್ರವಾದಿಗಳಿಂದ ನಡೆದ ಗಡಿ ಮೇಲಿನ ದಾಳಿಗಳು ಮುಂದುವರೆದು ಇದು ಟರ್ಕಿ ಸೈನಿಕರಿಗೆ ಬಹಳಷ್ಟು ಕಿರುಕುಳ ನೀಡಲಾರಂಭಿಸಿತು. ಇದರಿಂದ ನ್ಯಾಟೋದ ಸದಸ್ಯತ್ವ ಪಡೆದ ಟರ್ಕಿ, ಮತ್ತು ಇರಾಕಿನ ಕುರ್ದಿಸ್ತಾನ್ನಲ್ಲಿ ಆಕಸ್ಮಿಕ ದುರ್ಘಟನೆಗಳು ಸಂಭವಿಸಿ ಎರಡೂ ಕಡೆಗಳಲ್ಲಿ ಘರ್ಷಣೆಗಳು ಮುಂದುವರೆದುವು. ಪಿಕೆಕೆ ನಾಯಕನೊಂದಿಗಿನ ಸಂದರ್ಶನದಲ್ಲಿ ಆತನು "ಟರ್ಕಿ ತಮ್ಮಲ್ಲುಂಟಾದ ಘರ್ಷಣೆಗಳ ಸಮಸ್ಯೆಯಿಂದ ಬಂದಿರುವುದಲ್ಲ, ಬದಲಿಗೆ ಈ ಜನರಿಗೆ ತಮ್ಮ ದೇಶದ ಸುಭದ್ರತೆ ಬೇಕಾಗಿಲ್ಲ" ಎಂದು ಹೇಳಿದನು.. 2007 ಆರಂಭವಾಗುತ್ತಿದ್ದಂತೆ, ಉಗ್ರವಾದಿಗಳ "ಹಾಟ್ ಪರ್ಸ್ಯೂಟ್" ನಲ್ಲಿ ಇರಾಕ್ ಕುರ್ದಿಸ್ತಾನದ ಗಡಿಯನ್ನು ದಾಟುವ ಮೂಲಕ, ಹಾಗೆಯೇ ಇರಾಕಿನ ಕುರ್ದಿಸ್ ಭಾಗಳಿಂದ ಹೊರಬಂದು ಮೌಂಟ್ ಕುಡಿ ಭಾಗದಲ್ಲಿ ವಿಮಾನದಳವನ್ನು ಬಳಸಿ ಪಿಕೆಕೆ ಮೂಲವನ್ನೇ ಆಕ್ರಮಣಮಾಡುವ ಮೂಲಕ ಟರ್ಕಿ ಸೈನ್ಯವು ತನ್ನ ಹಕ್ಕನ್ನು ಸಮರ್ಥಿಸಿಕೊಂಡಿತು. ಇರಾಕ್ ಕುರ್ದಿಸ್ತಾನದಲ್ಲಿ ಪಿಕೆಕೆಯನ್ನು ಬೆನ್ನಟ್ಟಲು ತನ್ನ ಸೈನ್ಯಕ್ಕೆ ಅನುಮತಿಯನ್ನು ಕೊಡುವ ಮೂಲಕ ಟರ್ಕಿ ಪಾರ್ಲಿಮೆಂಟ್ ತನ್ನ ನಿರ್ಣಯವನ್ನು ಅನುಮೋದಿಸಿತು. ನವಂಬರ್ನಲ್ಲಿ ಟರ್ಕಿಯ ಶಸ್ತ್ರಸಜ್ಜಿತ ವಿಮಾನಗಳು ಇರಾಕಿನ ಉತ್ತರಭಾಗಗಳನ್ನು ಆಕ್ರಮಣ ಮಾಡಿದುವು. ಟರ್ಕಿಯ ಈ ಆಕ್ರಮಣಗಳಲ್ಲಿ ಗಡಿಯಲ್ಲಿನ ಘರ್ಷಣೆಗಳು ಬುಗಿಲೆದ್ದಾಗ ನಡೆದ ವಿಮಾನದಳದ ಆಕ್ರಮಣವು ಮೊದಲನೆಯದು. ಡಿಸೆಂಬರಿನ ಮಧ್ಯಭಾಗದಲ್ಲಿ ನಡೆದ ಇನ್ನೊಂದು ಸರಣಿ ಆಕ್ರಮಣವು ಕ್ವಾಂಡಿಲ್, ಝಾಪ್, ಅವಶಿನ್ ಮತ್ತು ಹಾಕುರ್ಕ್ ಭಾಗಗಳಲ್ಲಿ ಪಿಕೆಕೆಯನ್ನು ಗುರಿಯಾಗಿಸಿ ನಡೆಸಿದ್ದಾಗಿತ್ತು. ಇತ್ತೀಚೆಗಿನ ಆಕ್ರಮಣಗಳ ಸರಣಿಯಲ್ಲಿ ಸುಮಾರು 50 ಯುದ್ಧವಿಮಾನಗಳು ಮತ್ತು ಫಿರಂಗಿಗಳನ್ನು ಬಳಸಲಾಗಿದ್ದು ಈ ಅಕಮಣದಿಂದ ಓರ್ವ ನಾಗರಿಕ ಕೊಲ್ಲಲ್ಪಟ್ಟು ಇಬ್ಬರು ಗಾಯಗೊಂಡಿದ್ದಾರೆಂದು ಕುರ್ದಿಸ್ ಅಧಿಕಾರಿಗಳು ವರದಿ ನೀಡಿದ್ದಾರೆ. ಇದಕ್ಕೂ ಮಿಗಿಲಾಗಿ, ಯುಎಸ್ ಮಿಲಿಟರಿಯಿಂದ ಇರಾಕಿನ ರಕ್ಷಣಾ ಸೈನ್ಯಕ್ಕೆ ನೀಡಲಾದ ಶಸ್ತ್ರಾಸ್ತ್ರಗಳನ್ನು ಟರ್ಕಿ ಅಧಿಕಾರೀ ವರ್ಗ ಅಲ್ಲಿ ಬಳಕೆಯಾದ ನಂತರದಲ್ಲಿ ಸ್ವಾಧೀನಪಡಿಸಿಕೊಂಡರು.
2007ರ ಸೆಪ್ಟೆಂಬರ್ 17ರಂದು ಇರಾಕ್ ಸರಕಾರವು ಯುಎಸ್ ರಕ್ಷಣಾ ಸಂಸ್ಥೆ ಬ್ಲಾಕ್ವಾಟರ್ ಯುಎಸ್ಎಯು ಸ್ಟೇಟ್ ಡಿಪಾರ್ಟ್ಮೆಂಟ್ ಮೋಟಾರ್ಕ್ಯಾಡ್ ಸಮೀಪ ಸಂಭವಿಸಿದ ಅಗ್ನಿ ಅನಾಹುತದೊಡನೆ ಉಂಟಾದ ಬಾಂಬ್ ಸ್ಪೋಟ ನಡೆಸಿ ಓರ್ವ ಮಹಿಳೆ ಮತ್ತು ಒಂದು ಮಗುವನ್ನೂ ಕೂಡಿ ಒಟ್ಟು ಎಂಟು ಜನ ನಾಗರಿಕರನ್ನು ಕೊಂದುದರಲ್ಲಿ ಶಾಮೀಲಾಗಿರುವುದರಿಂದ, ಇದಕ್ಕೆ ನೀಡಿದ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿತು. ಅಪಾದಿತ ಕೈಗಳ ಹೆಚ್ಚಿನ ತನಿಖೆಯು ಮುಂದುವರೆದು ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆಯಲ್ಲಿ ತೊಡಗಿರುವ ವ್ಯಾಪಾರಿ ಸಂಸ್ಥೆಗಳೂ ತನಿಖೆಗೊಳಪಡುತ್ತಿವೆ. 1,000 ಜನ ಉದ್ಯೋಗಿಗಳನ್ನು ಹೊಂದಿರುವ ಮತ್ತು ಹೆಲಿಕಾಪ್ಟರ್ಗಳ ತಂಡ ಹೊಂದಿರುವ ಬ್ಲಾಕ್ ವಾಟರ್ ಇಂದಿನ ದಿನಗಳಲ್ಲಿ ಅತ್ಯುತ್ತಮ ಸಾಧನೆಗಳಿಂದ ಗುರುತಿಸಲ್ಪಡುವ ಇರಾಕಿನ ಸಂಸ್ಥೆಗಳಲ್ಲಿ ಒಂದು. ಈ ಗುಂಪು ಕಾನೂನು ಬದ್ಧವಾಗಿ ಮುಂದುವರೆಯುವುದೇ ಇಲ್ಲವೇ ಎಂಬುದು ಇನ್ನೂ ಚರ್ಚೆಯಲ್ಲೇ ಉಳಿದಿದೆ.
ಅಮೇರಿಕಾ ಸಂಯುಕ್ತ ಸಂಸ್ಥಾನ ಅಧಿಕಾರಿಗಳು ಮತ್ತು ಸ್ವತಂತ್ರ ಬುದ್ಧಿಜೀವಿಗಳು 2008ರ ವರ್ಷಪೂರ್ತಿ ಪ್ರಮುಖ ಅಂಕಿಅಂಶಗಳ ಮೂಲಕ ಸುರಕ್ಷತೆಗೆ ಕ್ರಮಕೈಗೊಂಡು ಸುಧಾರಣೆ ತರಲು ಪ್ರಾರಂಭಿಸಿದರು. 2008 ಡಿಸೆಂಬರ್ನಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ರಕ್ಷಣಾ ಇಲಾಖೆ ನೀಡಿರುವ ವರದಿ ಪ್ರಕಾರ ಜನವರಿ 2007ರಲ್ಲಿ ಗಲಭೆ ಆರಂಭವಾಗುವುವ ಮೊದಲಿಗಿಂತ "ಎಲ್ಲಾ ಮಟ್ಟದಲ್ಲೂ ಹಿಂಸೆ"ಯ ಪ್ರಮಾಣವು 80%ರಷ್ಟು ಕಡಿಮೆಯಾಗಿದೆ, ಮತ್ತು ದೇಶದಲ್ಲಿನ ಸಾವಿನ ಪ್ರಮಾಣವು ಯದ್ಧ ಪೂರ್ವಕ್ಕಿಂತ ಕಡಿಮೆಯಾಗಿದೆ. 2007ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಸೈನ್ಯ ಪಡೆಗಳ ಗಾಯಾಳುಗಳ ಸಂಖ್ಯೆ 904, ಆದರೆ 2008ರಲ್ಲಿ ಗಾಯಾಳುಗಳ ಸಂಖ್ಯೆ 314 ಎಂಬುದನ್ನು ಕೂಡ ಗಮನಿಸಿದ್ದಾರೆ. ಬ್ರೂಕಿಂಗ್ ಇನ್ಸ್ಟಿಟ್ಯೂಶನ್ ಪ್ರಕಾರ 2007 ಜನವರಿಯಲ್ಲಿ ಇರಾಕಿನ 3,500 ಜನರು ಮರಣ ಹೊಂದಿದ್ದರೆ 2008 ನವೆಂಬರ್ನಲ್ಲಿ 490 ಜನರು ಮರಣ ಹೊಂದಿದರು, ಆದರೆ 2008ರ ಮಧ್ಯದ ನಂತರ ಕೆಲವೊಂದು ಕಡೆಗಳಲ್ಲಿ ಸಮ್ಮಿಶ್ರ ಪಡೆಗಳ ವಿರುದ್ದ ನಡೆದ ದಾಳಿಯಲ್ಲಿ ಪ್ರತಿವಾರವು ಸುಮಾರು 200ರಿಂದ 300 ಜನ ಸಾವನ್ನಪ್ಪುತ್ತಿದ್ದರು, 2007ರ ಬೇಸಿಗೆ ಕಾಲದಲ್ಲಿ ಗರಿಷ್ಠ 1,600 ಜನ ಮರಣ ಹೊಂದಿದ್ದಾರೆ. 2008ರ ದ್ವಿತೀಯಾರ್ಧದಲ್ಲಿ ಇರಾಕಿ ಸಂರಕ್ಷಣಾ ಪಡೆಗಳು ಪ್ರತಿ ತಿಂಗಳು ಸುಮಾರು 100 ಜನರನ್ನು ಸಾಯಿಸಿದರು, 2007ರ ಬೇಸಿಗೆಲ್ಲಿ ಗರಿಷ್ಠ 200ರಿಂದ 300 ಜನರು ಸಾವನ್ನಪ್ಪಿದರು. ಈ ನಡುವೆ ಇರಾಕಿ ಸೈನಿಕ ಪಡೆಗಳು ಬಲವನ್ನು ಹೆಚ್ಚಿಸಿಕೊಂಡು ಶಿಯಾ ಸೈನಿಕರ ವಿರುದ್ಧ ನಿರಂತರ ಆಕ್ರಮಣ ನಡೆಸುತ್ತಾ ಬಂದಿತು, ಕಾರ್ಯಾಚರಣೆಗೆ ಅನುವು ಮಾಡಿಕೊಡುವುದಕ್ಕಿಂತ ಮೊದಲೆ ಪ್ರಧಾನ ಮಂತ್ರಿ ನ್ಯೂರಿ-ಅಲ್-ಮಲಿಕಿ ಇದನ್ನು ಟೀಕಿಸಿದ್ದನು. ಇದು ಮಾರ್ಚ್ನಲ್ಲಿ ಬಸ್ರಾದಲ್ಲಿ ಮೆಹ್ದಿ ಆರ್ಮಿ ವಿರುದ್ಧ ನಡೆದ ಕಾರ್ಯಾಚರಣೆಯ ಜೊತೆಗೆ ಪ್ರಾರಂಭವಾಯಿತು, ದೇಶದ ಶಿಯಾ ಪ್ರದೇಶದ ಕೆಳ ಮತ್ತು ಮೇಲಿನ ಎರಡು ಕಡೆ ಹೋರಾಟ ಆರಂಭವಾಯಿತು, ಮುಖ್ಯವಾಗಿ ಬಾಗ್ದಾದ್ನ ಸದ್ರ್ ನಗರ ಪ್ರಾಂತ್ಯದಲ್ಲಿ. ಅಕ್ಟೋಬರ್ನಿಂದ, ಬ್ರಿಟಿಷ್ ಅಧಿಕಾರಿ ಬಸ್ರಾದ ಅಧಿಕಾರ ವಹಿಸಿಕೊಂಡು ಈ ರೀತಿ ಹೇಳಿದರು, ಕಾರ್ಯಾಚರಣೆಯಿಂದ ನಗರವು "ಸುರಕ್ಷಿತವಾಗಿದೆ" ಮತ್ತು ಕೊಲೆಯ ಪ್ರಮಾಣವನ್ನು ಇಂಗ್ಲೇಂಡಿನ ಮೆಂಚೆಸ್ಟರ್ಗೆ ಹೋಲಿಸಬಹುದು. 2008ರಲ್ಲಿ ಇರಾಕ್ ದೇಶದದಲ್ಲಿ ನಡೆಸುತ್ತಿದ್ದ ಸ್ಪೋಟಕಗಳಲ್ಲಿ ಸುಮಾರು ಕಾಲು ಭಾಗದಷ್ಟು ಕಡಿಮೆಯಾಗಿತ್ತು ಇದು ಇರಾಕಿನ ಬದಲಾದ ಪಾಲಿಸಿಯನ್ನು ಸೂಚಿಸುತ್ತದೆ ಎಂದು ಅಮೇರಿಕಾ ಸಂಯುಕ್ತ ಸಂಸ್ಥಾನದ ಸೈನ್ಯವು ಹೇಳಿದೆ. ಜಾಗೃತಿ ಚಳವಳಿಯ ಸದಸ್ಯರು ಯುಎಸ್ ಮಿಲಿಟರಿಯಿಂದ ಇರಾಕ್ ಕಂಟ್ರೋಲ್ಗೆ ಮರ್ಗಾಯಿಸಲ್ಪಟ್ಟ ಮೇಲೆ ಸನ್ನಿ ಭೂಪ್ರದೇಶಗಳ ಅಭಿವೃದ್ಧಿಯು ಮುಂದುವರಿಯಲಾರಂಭಿಸಿತು. ಮೇ ತಿಂಗಳಲ್ಲಿ ಇರಾಕಿ ಸೈನ್ಯವು ಸಮ್ಮಿಶ್ರ ಪಡೆಗಳ ಬೆಂಬಲದಿಂದ ಹೊರಬಂದು ಇರಾಕಿನಲ್ಲಿರುವ ಆಲ್-ಕೈದಾದ ಉಕ್ಕಿನ ಕೋಟೆಯಾದ ಮಸೂಲ್ ವಿರುದ್ಧ ಆಕ್ರಮಣ ಆರಂಭಿಸಿತು. ಸಾವಿರಾರು ಜನರನ್ನು ಸೆರೆಯಲ್ಲಿಟ್ಟುಕೊಂಡರೂ ಮಸೂಲ್ನಲ್ಲಿ ದೀರ್ಘಕಾಲದ ಸುರಕ್ಷತಾ ಸುಧಾರಣೆ ತರುವಲ್ಲಿ ಈ ಆಕ್ರಮಣವು ವಿಫಲವಾಯಿತು. ಅದೇ ವರ್ಷದ ಕೊನೆಯಲ್ಲಿ ನಗರವು ಪ್ರಮುಖ ಪ್ಲ್ಯಾಶ್ಪಾಯಿಂಟ್ ಆಗಿ ಉಳಿಯಿತು.
ಪ್ರಾದೇಶಿಕ ವ್ಯಾಪ್ತಿಯಲ್ಲಿ ಫೆಬ್ರವರಿ 21ರಂದು ಟರ್ಕಿಯು ಉತ್ತರ ಇರಾಕಿನ ಕ್ವಾಂಡೀಲ್ ಬೆಟ್ಟಗಳ ಮೇಲೆ ದಾಳಿಮಾಡಿದ್ದರಿಂದ ಟರ್ಕಿ ಮತ್ತು ಪಿಕೆಕೆ ನಡುವೆ ಮುಂದುವರೆಯುತ್ತಿರುವ ಸಂಘರ್ಷಣೆಯು ತೀವ್ರವಾಯಿತು. ಒಂಭತ್ತು ದಿನಗಳ ಧೀರ್ಘಕಾಲದ ಕಾರ್ಯಾಚರಣೆಯಲ್ಲಿ ಸುಮಾರು 10,000 ಟರ್ಕಿ ಪಡೆಗಳು ಉತ್ತರ ಇರಾಕಿನೊಳಗೆ 25ಕಿಮೀ ಮುಂದುವರೆದರು. 1995ರಿಂದ ನಡೆಯುತ್ತಿದ್ದ ಸಂಘರ್ಷದಲ್ಲಿ ಇದು ಟರ್ಕಿಯವರು ನಡೆಸಿದ ಬೃಹತ್ಪ್ರಮಾಣದ ಮೊದಲ ನೆಲ ದಾಳಿಯಾಗಿದೆ.
ದಾಳಿ ಪ್ರಾರಂಭವಾದ ಕೂಡಲೇ ಇರಾಕಿ ಸಚಿವ ಸಂಪುಟ ಮತ್ತು ಕುರ್ದಿಸ್ತಾನದ ಪ್ರಾದೇಶಿಕ ಸರ್ಕಾರಗಳು ಟರ್ಕಿಯ ಈ ಕಾರ್ಯವನ್ನು ಖಂಡಿಸಿ ಆ ಪ್ರದೇಶದಿಂದ ಶೀಘ್ರವಾಗಿ ಟರ್ಕಿಯ ಪಡೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹ ಪಡಿಸಿದರು. ಫೆಬ್ರವರಿ 29ರಂದು ಟರ್ಕಿಯ ಪಡೆಗಳು ವಾಪಸಾದವು. ಕರ್ದ್ ಜನಾಂಗ ಮತ್ತು ಕಿರ್ಕುಕ್ ನಗರದ ಭವಿಷ್ಯವು ಇರಾಕಿ ರಾಜಕೀಯದಲ್ಲಿ ವಿವಾದಾತ್ಮಕ ವಿಷಯವಾಗಿ ಉಳಿದಿದೆ. ಈ ಘಟನೆಗಳನ್ನು ಎದುರಿಸುವಾಗ ಯುಎಸ್ ಅಧಿಕಾರಿಗಳು ಬಹಳ ಜಾಗೃತರಾಗಿ ಮತ್ತು ಆಶಾವಾದದಿಂದಲೇ ಸ್ವಾಗತಿಸಿ ಅದನ್ನು ಅವರು 2008ರ ಉದ್ದಕ್ಕೂ ನಡೆದ ಸಂಧಾನಾತ್ಮಕ ಸಮಾಲೋಚನೆಯಿಂದ ನಡೆದ "ಯು. ಎಸ್-ಇರಾಕ್ ಸೈನಿಕ ಸ್ಥಿತಿಗತಿಯ ಒಪ್ಪಂದ" ದಲ್ಲಿ ಸಾಕಾರಗೊಂಡ "ಪರಿವರ್ತನೆ" ಎಂದು ವಿವರಿಸಿದರು. ಡಿಸೆಂಬರ್ 2008ರಲ್ಲಿ ದಾಳಿಯ ನಾಯಕ, ಯುಎಸ್ ಸೈನ್ಯಾಧಿಪತಿ ರೈಮಂಡ್ ಟಿ ಒಡಿರ್ನೋ "ಸೈನಿಕ ಭಾಷೆಯಲ್ಲಿ ಪರಿವರ್ತನೆಗಳು (ಟ್ರಾನ್ಶಿಶನ್ಸ್) ಅತ್ಯಂತ ಗಂಭೀರವಾದ ಸಮಯ" ಗುರುತಿಸಿದನು.
ಮಾರ್ಚ್ ತಿಂಗಳ ಕೊನೆಗೆ, ಬಂಡುಕೋರರ ವಶದಿಂದ ಬಸ್ರಾ ಪಟ್ಟಣವನ್ನು ರಕ್ಷಿಸಿಕೊಳ್ಳಲು ಇರಾಕಿ ಸೈನ್ಯವು ಸಮ್ಮಿಶ್ರ ಪಡೆಗಳ ವಾಯುದಳದ ಬೆಂಬಲದಿಂದ "ಸೈನಿಕ ದಾಳಿ" ಆರಂಭಿಸಿದರು. ಇದೊಂದು ಪ್ರಮುಖವಾದ ಕಾರ್ಯಾಚರಣೆಯಾಗಿದ್ದರೂ ಇರಾಕಿ ಸೈನ್ಯವು ಸಾಂಪ್ರದಾಯಿಕ ಸಮ್ಮಿಶ್ರ ಪಡೆಗಳ ಭೂಸೈನ್ಯದ ನೆರವನ್ನು ನೇರವಾಗಿ ಪಡೆದುಕೊಳ್ಳಲಿಲ್ಲ. ಈ ಪ್ರದೇಶದ ಮೇಲೆ ಹೆಚ್ಚು ನಿಯಂತ್ರಣ ಹೊಂದಿದ್ದ ಮಹ್ದಿ ಸೈನ್ಯವು ಈ ಆಕ್ರಮಣವನ್ನು ವಿರೋಧಿಸಿತು. ಹೋರಾಟವು ಸದರ್ ಪಟ್ಟಣ, ಅಲ್ ಕುಟ್, ಅಲ್ ಹಿಲಾ ಮತ್ತು ಇತರೆ ಪಟ್ಟಣಗಳನ್ನೊಳಗೊಂಡು ಇರಾಕ್ನ ಇತರೆ ಸ್ಥಳಗಳಿಗೂ ಶೀಘ್ರವಾಗಿ ಹರಡಿತು. ಹೋರಾಟವು ಬಸ್ರಾ ಪಟ್ಟಣದಲ್ಲಿ ನಡೆಯುತ್ತಿರುವಾಗ ಬಂಡುಕೋರರಿಂದ ಪ್ರಬಲವಾದ ವಿರೋಧ ವ್ಯಕ್ತವಾದ್ದರಿಂದ ಇರಾಕಿನ ಸೈನಿಕ ಆಕ್ರಮಣವು ನಿಧಾನವಾಗುತ್ತ ಸಾಗಿತು, ತೀವ್ರವಾದ ಹೋರಾಟದ ಫಲವಾಗಿ ಸದ್ರಿಸ್ಟ್ಗಳು ಸಮಾಲೋಚನೆ ಒಪ್ಪಿಕೊಂಡರು. ಮಾರ್ಚ್ 31, 2008ರಂದು ಇರಾಕ್ ರೆವಲ್ಯೂಷನರಿ ಗಾರ್ಡ್ ಕಾಪ್ಸ್ನ ಕ್ವಾಡ್ಸ್ ಬ್ರಿಗೇಡ್ ಕಮಾಂಡರ್ ಬ್ರಿಗೇಡಿಯರ್ ಜನರಲ್ ಕ್ವಾಸೀಮ್ ಸುಲೈಮಾನಿ ಮತ್ತು ಇರಾನಿನ ಸರ್ಕಾರದ ನಡುವೆ ಮಧ್ಯಸ್ಥಿಕೆ ವಹಿಸಿ ಅಲ್-ಸದರ್ ಅನುಯಾಯಿಗಳಿಗೆ ತಾತ್ಕಾಲಿಕವಾಗಿ ಶಸ್ತ್ರತ್ಯಾಗ ಮಾಡುವಂತೆ ಹೇಳಿದರು. ಬಂಡುಕೋರರು ತಮ್ಮ ಶಸ್ತ್ರಾಸ್ತ್ರ ತ್ಯಾಗಮಾಡಿದರು. ಮೇ 12, 2008ರಿಂದ "ತಮ್ಮ ದಿನನಿತ್ಯದ ಜೀವನದಲ್ಲಿ ಗಮನಾರ್ಹವಾದ ಬೆಳವಣಿಗೆಗಳಾಗಿವೆ ಎಂದು ಬಸ್ರಾದ ಜನರು ತುಂಬಾ ಸಂತೋಷದಿಂದ ಹೇಳಿದ್ದಾರೆ" ಎಂದು ದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. "ಮಹಿಳೆಯರು, ಕ್ರಿಶ್ಚಿಯನ್ನರು, ಸಂಗೀತಗಾರರು,ಮದ್ಯ ಮಾರಾಟಗಾರರು ಮತ್ತು ಪಾಶ್ಚಿಮಾತ್ಯರಿಗೆ ಸಹಕರಿಸುತ್ತಿದ್ದಾರೆ ಎಂಬ ಸಂಶಯ ಬಂದವರ ಮೇಲೆ ದಾಳಿ ಮಾಡುತ್ತಿದ್ದ ಇಸ್ಲಾಂ ಬಂಡುಕೋರರ ಮುಖ್ಯ ಕಛೇರಿಗಳು, ಮತ್ತು ಬಾಂಬ್ ಹಾಕುವವರು ಮತ್ತು ಇಂತಹ ಕೆಲಸಕ್ಕೆ ಸಹಾಯ ನೀಡುತ್ತಿದ್ದವರ ವಿರುದ್ಧ ಸರ್ಕಾರವು ಹಿಡಿತ ಸಾಧಿಸಿತು", ಒಂದು ವರದಿಯ ಪ್ರಕಾರ ಇದನ್ನು ಇರಾಕಿ ಸೈನ್ಯವು ಬಿಟ್ಟರೆ ಈ ಅರಾಜಕತೆ ಪುನರಾರಂಭಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಪ್ರಶ್ನಿಸಿದಾಗ ಒಬ್ಬ ನಿವಾಸಿಯು ಈ ರೀತಿ ಹೇಳಿದ್ದಾನೆ "ಕೇವಲ ಒಂದು ದಿನ ಮಾತ್ರ". ಜನವರಿಯಲ್ಲಿ ರಸ್ತೆಗಳ ಮೇಲೆ ನಡೆದಿದ್ದ ಬಾಂಬ್ ದಾಳಿಯು 114 , ಆದರೆ ಎಪ್ರಿಲ್ ತಿಂಗಳ ಕೊನೆಗೆ ಹೆಚ್ಚಾಗುತ್ತಾ ಸಾಗಿ 250ಕ್ಕೆ ತಲುಪಿತು, ಮೇ 2007ರಲ್ಲಿ ಅತಿ ಹೆಚ್ಚು ದಾಳಿ ನಡೆದವು.
2008ನೇ ಆಗಸ್ಟ್ 8ರಂದು ಯುಎಸ್ ಕಾಂಗ್ರೆಸ್ನ ಮುಂದೆ ಮಾತನಾಡಿದ ಜನರಲ್ ಡೇವಿಡ್ ಪೇಟ್ರಿಯಸ್ "ನಾನು ಹಲವು ಭಾರಿ ಗಮನಿಸಿದ ಅಂಶವೇನೆಂದರೆ, ನಾವು ಯಾವುದೇ ಮೂಲೆಗಳಿಗೆ ತಿರುಗಲಿಲ್ಲ, ಸುರಂಗದ ಕೊನೆಯಲ್ಲಿ ನಾವು ಯಾವುದೇ ಬೆಳಕನ್ನು ಕಾಣಲಿಲ್ಲ" (ಇದುವರೆಗೂ ನಮಗೆ ಯುದ್ಧದಲ್ಲಿ ಯಾವುದೇ ಪ್ರಮುಖವಾದ ತಿರುವು ಸಿಕ್ಕಿಲ್ಲ ಮತ್ತು ಇನ್ನೂ ಅಂತಿಮ ಫಲಿತಾಂಶ ಸಿಕ್ಕಿಲ್ಲ) ಎಂದು ಹೇಳುವುದರೊಂದಿಗೆ ಸೈನ್ಯದ ತುಕಡಿಗಳನ್ನು ಹಿಂತೆಗೆದುಕೊಳ್ಳುವಲ್ಲಿ ನಿಧಾನಿಸಲು ಒತ್ತಾಯಿಸಿದನು. ಅಲ್ಲದೆ, ಈ ಹೇಳಿಕೆಗಳನ್ನು ಅಧ್ಯಕ್ಷ ಬುಶ್ ಮತ್ತು ಹಿಂದಿನ ವಿಯಟ್ನಾಂ-ಇರಾದ ಜನರಲ್ ವಿಲಿಯಮ್ ವೆಸ್ಟ್ಮೋರ್ಲ್ಯಾಂಡ್ರಿಗೂ ತಿಳಿಸಿದನು. ಹೆಚ್ಚಿನ ಜನರು ಇದನ್ನು ಮುಂದುವರಿಸುವಲ್ಲಿ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರೆ ಎಂದು ಸೆನೇಟ್ ಪ್ರಶ್ನಿಸಲಾಗಿ, "ಜನರಿಗೆ ಹೆಚ್ಚಿನ ಅಭಿಪ್ರಾಯಗಳನ್ನು ಹೇಳುವ ಹಕ್ಕನ್ನು ನೀಡುವ ಸಲುವಾಗಿ ನಾವು ಹೋರಾಡುತ್ತೇವೆ" ಎಂದು ಪೆಟ್ರಿಯಸ್ ನುಡಿದನು. ಆಗಿನ ಸೆನೆಟ್ ಕಮಿಟಿ ಅಧ್ಯಕ್ಷ ಜೋ ಬಿಡನ್ ಪ್ರಶ್ನಿಸಿದಾಗ, ರಾಯಭಾರಿ ಕ್ರೂಕರ್ ಇದನ್ನು ಒಪ್ಪಿಕೊಂಡು ಇರಾಕ್ನಲ್ಲಿರುವ ಅಲ್-ಕೈದಾ ಸಂಘಟನೆಗಿಂತ ಅಫ್ಘಾನ್-ಪಾಕಿಸ್ತಾನ್ ಗಡಿಯಲ್ಲಿ ಓಸಾಮ ಬಿನ್ ಲಾಡೆನ್ ನಡೆಸುತ್ತಿರುವ ಅಲ್-ಕೈದಾ ಸಂಘಟನೆ ಹೆಚ್ಚು ಪ್ರಮಖವಾಗಿದೆ ಎಂದು ಹೇಳಿದರು. ಎರಡೂ ಪಕ್ಷಗಳ ಶಾಸಕರು ಮತ್ತು ತೈಲ ಉದ್ಯಮದಲ್ಲಿ ಬಿಲಿಯನ್ಗಟ್ಟಲೆ ಡಾಲರ್ ಸಂಪಾದಿಸುವ ಯುಎಸ್ನ ಕಂದಾಯ ಪಾವತಿದಾರರು ಇರಾಕಿನ ಸಂಪೂರ್ಣ ಭಾರವನ್ನು ಹೊತ್ತಿದ್ದಾರೆ ಎಂದು ದೂರಿದರು.
ಇರಾಕ್ ತನ್ನ ಸೈನ್ಯಕ್ಕಾಗಿ ಎಂ-16 ಮತ್ತು ಎಂ-4 ರೈಫಲ್ಸ್ ಮತ್ತು ಇತರೆ ಉಪಕರಣಗಳನ್ನು ಪಡೆದುಕೊಂಡು ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ತನ್ನ ಎಕೆ-47ರೈಫಲ್ ನೀಡಿ ಯುದ್ಧ ಉಪಕರಣಗಳನ್ನು ಖರೀದಿ ಮಾಡುವಲ್ಲಿ ಪ್ರಮುಖ ಸ್ಥಾನದಲ್ಲಿದೆ. 2008ರಲ್ಲಿ ಇರಾಕ್ ಒಂದೇ $12.5 billion$34 billionಕ್ಕಿಂತ ಹೆಚ್ಚು ಅಮೇರಿಕಾ ಸಂಯುಕ್ತ ಸಂಸ್ಥಾನದ ಆಯುಧಗಳನ್ನು ವಿದೇಶಗಳಿಗೆ ಮಾರಾಟ ಮಾಡಿದೆ (F-16 ಯುದ್ಧ ವಿಮಾನಗಳನ್ನು ಬಿಟ್ಟು). 36 F-16ನಂತಹ ಉತ್ಕೃಷ್ಟ ದರ್ಜೆಯ ಆಯುಧ ವ್ಯವಸ್ಥೆಯನ್ನು ಇರಾಕ್ ಖರೀದಿ ಮಾಡಲು ಪ್ರಯತ್ನಿಸಿತು. ಕಾಂಗ್ರೆಸ್ 24 ಅಮೇರಿಕಾದ ಯುದ್ಧ ಹೆಲಿಕಾಫ್ಟರ್ನ್ನು ಇರಾಕ್ಗೆ ಮಾರಾಟ ಮಾಡಲು ಒಪ್ಪಿಕೊಂಡಿದ್ದನ್ನು ಪೆಂಟಗಾನ್ ಪ್ರಕಟಿಸಿತು, ಇದರ ಅಂದಾಜು ಮೊತ್ತ $2.4 ಬಿಲಿಯನ್ಗಳು. ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ ಟ್ಯಾಂಕ್ಗಳು, ಹೆಲಿಕಾಪ್ಟರ್, ಸಶಸ್ತ್ರ ವಾಹನಗಳು, ಸಾಗಾಣಿಕ ವಿಮಾನಗಳು ಮತ್ತು ಇತರೆ ವಿಧದ ಯುದ್ಧರಂಗದ ಸಾಧನಗಳು ಮತ್ತು ಸೇವೆಗಳನ್ನು ಸುಮಾರು $10 billion ಪ್ರಮಾಣದಲ್ಲಿ ಖರೀದಿ ಮಾಡವ ಯೋಜನೆಯಿದೆ ಎಂದು ಇರಾಕ್ ಪ್ರಕಟಿಸಿತು. ಬೇಸಿಗೆ ಕಾಲದ ನಂತರ ಇರಾಕಿ ಸರ್ಕಾರವು ಸುಮಾರು 400ಕ್ಕಿಂತ ಹೆಚ್ಚು ಸಶಸ್ತ್ರ ವಾಹನಗಳು ಮತ್ತು ಇತರೆ ಉಪಕರಣಗಳನ್ನು ಖರೀದಿಸಲು ಕೋರಿಕೆ ಸಲ್ಲಿಸಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ ಇದರ ಅಂದಾಜು ಮೊತ್ತ $3 billion ಮತ್ತು ಆರು C-130J ಸಾಗಾಣಿಕ ವಿಮಾನಗಳ ಮೊತ್ತ ಸುಮಾರು$1.5 billion 2005ರಿಂದ 2008ವರೆಗೆ, ಸಂಯುಕ್ತ ಸಂಸ್ಥಾನವು ಇರಾಕಿನ ಜೊತೆಗೆ ಸುಮಾರು $20 ಬಿಲಿಯನ್ ಮೊತ್ತದ ಶಸ್ತ್ರಾಸ್ತ್ರ ಮಾರಾಟಕ್ಕೆ ಒಪ್ಪಂದ ಮಾಡಿಕೊಂಡಿತು.
ಡಿಸೆಂಬರ್ 4, 2008ರಂದು ಯುಎಸ್-ಇರಾಕ್ ಸ್ಟೇಟಸ್ ಆಫ್ ಪೋರ್ಸ್ ಅಗ್ರಿಮೆಂಟ್ ಇರಾಕಿ ಸರ್ಕಾರದಿಂದ ಒಪ್ಪಿಗೆ ಪಡೆದುಕೊಂಡಿತು. ಜೂನ್ 30, 2009ರಿಂದ ಅಮೇರಿಕಾ ಸಂಯುಕ್ತ ಸಂಸ್ಥಾನದ ಹೋರಾಟ ಪಡೆಗಳು ಇರಾಕಿ ನಗರಗಳಿಂದ ಹಿಂದೆ ಸರಿಯಬೇಕು, ಮತ್ತು ಡಿಸೆಂಬರ್ 31, 2011ರಿಂದ ಎಲ್ಲಾ ಅಮೇರಿಕಾ ಸಂಯುಕ್ತ ಸಂಸ್ಥಾನ ಪಡೆಗಳು ಇರಾಕ್ನಿಂದ ಸಾಂಪೂರ್ಣವಾಗಿ ಹೊರಹೋಗಬೇಕು ಎಂಬುದನ್ನು ಒಳಗೊಂಡಿತ್ತು. ಈ ಒಡಂಬಡಿಕೆಯು ಸಾಧ್ಯವಿರುವ ಎಲ್ಲಾ ಸಮಾಲೋಚನೆಗಳನ್ನು ಒಳಗೊಂಡಿದ್ದು ಹಿಂದೆಗೆದುಕೊಳ್ಳುವುದರಲ್ಲಿನ ನಿಧಾನತೆ, 2009ರ ಮಧ್ಯದಲ್ಲಿ ಯೋಜಿಸಿದ ಜನಮತಸಂಗ್ರಹ ಕಾರ್ಯಕ್ರಮವನ್ನೂ ಒಳಗೊಂಡಿದೆ. ಬಂಧಿತರನ್ನು 24ಗಂಟೆಗಳಿಂದಲೂ ಹೆಚ್ಚು ಸಮಯ ವಶದಲ್ಲಿಟ್ಟುಕೊಳ್ಳಬೇಕಾಗುವುದರಿಂದ ಈ ಒಪ್ಪಂದಕ್ಕೆ ಅಪರಾಧಕ್ಕೆ ಸಂಬಂಧಪಟ್ಟ ಎಲ್ಲಾ ಖರ್ಚು-ವೆಚ್ಚಗಳ ಅಗತ್ಯ ಮತ್ತು ಹೋರಾಟಕ್ಕೆ ಸಂಬಂಧಪಟ್ಟ ಮನೆ ಮತ್ತು ಕಟ್ಟಡಗಳನ್ನು ಹುಡುಕಲು ವಾರಂಟ್(ಅಧಿಕಾರ ಪತ್ರ)ನ ಅಗತ್ಯವೂ ಇದೆ. .
ಅಮೇರಿಕಾ ಸಂಯುಕ್ತ ಸಂಸ್ಥಾನದ ಸೈನ್ಯದ ಪರವಾಗಿ ಕೆಲಸ ಮಾಡುತ್ತಿದ್ದರೆ ಕಂಟ್ರಾಕ್ಟರ್ಗಳು ಇರಾಕಿನ ಅಪರಾಧ ಕಾನೂನಿನ ಶಿಕ್ಷೆಗೊಳಗಾಗುತ್ತಿದ್ದರು, ಕಂಟ್ರಾಕ್ಟರ್ಗಳು ಸ್ಟೇಟ್ ಡಿಪಾರ್ಟ್ಮೆಂಟ್ ಮತ್ತು ಇತರೆ ಅಮೇರಿಕಾ ಸಂಯುಕ್ತ ಸಂಸ್ಥಾನದ ಎಜೆನ್ಸಿಗಳಿಗೆ ಕೆಲಸ ಮಾಡುತ್ತಿದ್ದರೆ ಇದು ಅನ್ವಯಸುತ್ತಿರಲಿಲ್ಲ. ಒಂದು ವೇಳೆ ಯುಎಸ್ ಸೈನ್ಯವು ಕರ್ತವ್ಯದಲ್ಲಿರದಿರುವಾಗ, ಯಾವುದೇ ಅನಿಶ್ಚಿತ "ಗಂಭೀರ ಅನಾಲೋಚಿತ ಘಾತುಕಕೃತ್ಯ" ಎಸಗಿದರೆ ಮತ್ತು ಸೈನ್ಯವು ಕರ್ತವ್ಯದಲ್ಲಿರಲಿಲ್ಲ ಎಂದು ಯುಎಸ್ ಪ್ರಮಾಣೀಕರಿಸಿದರೆ, ಅಂತಹವರು ಯುಎಸ್-ಇರಾಕ್ ಜಂಟಿ ಕಮಿಟಿ ನಿರ್ಧರಿಸುವ ಅನಿರ್ಧರಿತ ವಿಧಿವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಕೆಲವು ಅಮೇರಿಕನ್ನರು "ಲೋಪದೋಷ"ವನ್ನು ಚರ್ಚಿಸಿದ್ದಾರೆ ಮತ್ತು, ಕೆಲವು ಇರಾಕ್ ಪ್ರಜೆಗಳು ಈ ಒಪ್ಪಂದದ ಕೆಲವು ಭಾಗಗಳು ಇನ್ನೂ ರಹಸ್ಯವಾಗಿಯೇ ಉಳಿದಿದೆ ಎಂದು ನಂಬುತ್ತಾರೆ. 2011ರ ನಂತರದಲ್ಲಿ ಉಳಿದ ಇರಾಕ್ ಸೈನ್ಯದ ಜೊತೆ "ಹತ್ತು ಹಲವು ಸಾವಿರಗಳಷ್ಟು ಅಮೇರಿಕಾ ತುಕಡಿ" ಗಳನ್ನು ನೋಡಲು ನಾನು ನಿರೀಕ್ಷಿಸುತ್ತಿದ್ದೇನೆ ಎಂದು ಯುಎಸ್ ರಕ್ಷಣಾಪಡೆಯ ಸೆಕ್ರೆಟರಿ ರಾಬರ್ಟ್ ಗೇಟ್ಸ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.
ಈ ಒಪ್ಪಂದದ ಪ್ರಕಾರ, ಭೂಮಿಯ ಸ್ವಾಧೀನತೆಯು ಕಾನೂನುಬದ್ಧಗೊಳ್ಳುವುದರಿಂದ ಮತ್ತು ಸ್ವಾಮ್ಯತೆಯ ವಿಧಿಗಳು ಸುಧೀರ್ಘವಾಗುವುದರಿಂದ ಇರಾಕಿನ ಹಲವು ಗುಂಪುಗಳು ಎಸ್ಓಎಫ್ಎ ಒಡಂಬಡಿಕೆಯನ್ನು ಪ್ರತಿಭಟಿಸಿದ್ದಾರೆ. ಹಲವು ಹತ್ತು ಸಾವಿರ ಇರಾಕ್ ಜನರು ಐದು ವರ್ಷಗಳ ಹಿಂದೆ ಸದ್ದಾಂ ಹುಸೇನ್ರ ಪ್ರತಿಮೆಯನ್ನು ಸೀಳಲು ಕಾರ್ಯವನ್ನು ಏರ್ಪಡಿಸಿದ ಬಾಗ್ದಾದ್ ಚೌಕದ ಕೇಂದ್ರದಲ್ಲಿ ಜಾರ್ಜ್ ಡಬ್ಲ್ಯೂ ಬುಷ್ರ ಪ್ರತಿಕೃತಿಯನ್ನು ಸುಟ್ಟರು. ಕೆಲವು ಇರಾಕ್ ಜನರು 2011ರ ಸಮಯದಲ್ಲಿ ಯುಎಸ್ ಸಂಪೂರ್ಣವಾಗಿ ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳುತ್ತದೆ ಎಂಬ ಸಂಶಯದ ಆಶಾಭಾವವನ್ನು ವ್ಯಕ್ತಪಡಿಸಿದರು. 2008ರ ಡಿಸೆಂಬರ್ 4 ರಂದು ಇರಾಕಿನ ಅಧ್ಯಕ್ಷೀಯ ಸಮಿತಿಯು ಭದ್ರತಾ ಒಪ್ಪಂದವನ್ನು ಅನುಮೋದಿಸಿತು.} ಗ್ರಾಂಡ್ ಅಯಟೊಲ್ಲಾ ಆಲಿ ಹುಸ್ಸೇನಿ ಆಲ್ ಸಿಸ್ಟಾನಿಸ್ನ ಪ್ರತಿನಿಧಿಯೊಬ್ಬ ಅನುಮೋದಿಸಲ್ಪಟ್ಟ ಒಪ್ಪಂದದ ಪ್ರತಿಯ ಬಗ್ಗೆ ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದನು ಹಾಗೂ ಇರಾಕ್ ಸರಕಾರವು ಆಕ್ರಮಣಕಾರ(ಒಕ್ಕಲುಗಾರ)ರ ಸೈನ್ಯವನ್ನು ಇರಾಕಿನ ಒಳಗೂ ಹೊರಗೂ ವರ್ಗಾಯಿಸುವುದನ್ನು ನಿಯಂತ್ರಿಸುವ ಯಾವುದೇ ಅಧಿಕಾರವನ್ನು ಹೊಂದಿಲ್ಲ, ಯಾವುದೇ ಸಾಗಾಣಿಕೆ [ಹಡಗಿನಲ್ಲಿ ತುಂಬುವುದು] ಮಾಡುವ ಮತ್ತು ಇರಾಕಿನ್ಯಾಯಾಲಯದಲ್ಲಿ ಅಪರಾಧಿ ವಿಚಾರಣೆಯ ನಿರ್ವಹಣೆಯಲ್ಲಿ ಭಾಗವಹಿಸಲು ಬೇಕಾದ ಎಲ್ಲಾ ಕಾನೂನು ವಿನಾಯಿತಿಯನ್ನು ನೀಡುವ ಹಕ್ಕನ್ನು ಈ ಒಪ್ಪಂದವು ನೀಡುವ ಹಕ್ಕನ್ನು ಪಡೆದಿದೆ ಎಂದು ಹೇಳಿದನು. ಅವನು, ದೇಶದಲ್ಲಿ ಆಕ್ರಮಣಕಾರರು ಇರುವವರೆಗೆ ಇರಾಕಿನ ಯಾವುದೇ ಕಾನೂನುಗಳು ಪರಿಪೂರ್ಣವಾಗದು, ಆದರೆ, ಅಂತಿಮವಾಗಿ ಇರಾಕ್ ಜನರೇ ಜನಮತಸಂಗ್ರಹದ ಆಧಾರದ ಮೇಲೆ ಈ ಒಪ್ಪಂದವನ್ನು ನಿರ್ಣಯಿಸಬೇಕಾಗುತ್ತದೆ. ಶುಕ್ರವಾರದ ಪ್ರಾರ್ಥನೆಯ ಬಳಿಕ ಸಾವಿರಾರು ಇರಾಕ್ ಜನರು ವಾರಕ್ಕೊಮ್ಮೆ ಸಭೆಸೇರಿ ಬಾಗ್ದಾದ್ ಮತ್ತು ವಾಶಿಂಗ್ಟನ್ ನಡುವಿನ ಭದ್ರತಾ ಒಪ್ಪಂದವನ್ನು ಪ್ರತಿಭಟಿಸಿ ಇಸ್ರೇಲಿ ವಿರುದ್ಧದ ಘೋಷಣೆಗಳನ್ನು ಕೂಗತೊಡಗಿದರು. ಒಬ್ಬ ಪ್ರತಿಭಟನೆಗಾರ ಅಂತಿಮವಾಗಿಯೂ, ಮಧ್ಯಂತರ ಭದ್ರತಾ ಒಪ್ಪಂದವು ಅನುಮೋದನೆಗೊಂಡರೂ, ಮುಂದಿನ ವರ್ಷ ಇರಾಕ್ ಜನರು ಇದನ್ನು ಜನಮತಗಳಿಸುವ ಮೂಲಕ ಮುರಿಯಲಿದ್ದಾರೆ ಎಂದು ನುಡಿದನು.
2009 ಜನವರಿ 1ರಂದು ಅಮೇರಿಕಾವು ಹಸಿರು ವಲಯವನ್ನು ಸಂಪೂರ್ಣವಾಗಿ ತನ್ನ ಕೈವಶ ಮಾಡಿಕೊಂಡಿತು. ಮತ್ತು ಸದ್ದಾಂ ಹುಸೇನ್ರ ಅಧ್ಯಕ್ಷೀಯ ಅರಮನೆಯನ್ನು ಈ ಸಂಭ್ರಮಾಚರಣೆ ಘಳಿಗೆಯಲ್ಲಿ ಇರಾಕ್ ಸರ್ಕಾರಕ್ಕೆ ನೀಡಲಾಯಿತು. ಇರಾಕ್ ದೇಶದ ಪರಮಾಧಿಕಾರವನ್ನು ಪುನರ್ವಶ ಮಾಡಿಕೊಂಡು ಪ್ರಧಾನ ಮಂತ್ರಿ ಅಧಿಕಾರವನ್ನು ಮರಳಿಸಲಾಯಿತು ಎಂದು ಬಣ್ಣಿಸಲಾಯಿತು. ಇರಾಕ್ ಪ್ರಧಾನ ಮಂತ್ರಿ ನೌರಿ ಅಲ್-ಮಲಿಕ್, ಜನವರಿ 1ನೇ ತಾರೀಖನ್ನು ರಾಷ್ಟ್ರೀಯ ‘ಸಾರ್ವಭೌಮತ್ವ ದಿನ’ ಎಂದು ಘೋಷಿಸಿದ್ದಾರೆ. ಈ ಅರಮನೆಯನ್ನು ಇರಾಕಿಗಳ ಸಾರ್ವಭೌಮತ್ವದ ಗುರುತಾಗಿ ಮತ್ತು ಅಧಿಕಾರದ ಪುನರ್ವಶದ ಕುರುಹಾಗಿ ನೋಡಬಹುದು. ಇದರಿಂದ ಎಲ್ಲ ಇರಾಕಿಗಳಿಗೂ ನೈಜ ಸಂದೇಶವನ್ನು ರವಾನಿಸಿದಂತಾಗಿದ್ದು, ಇರಾಕಿ ಸಾರ್ವಭೌಮತ್ವವು ಸ್ವಾಭಾವಿಕ ಸಾಮಾಜಿಕ ಸ್ಥಾನಮಾನವನ್ನು ಮರಳಿಪಡೆಯಿತು ಎಂದು ಅಲ್ ಮಲಿಕ್ ಬಣ್ಣಿಸಿದ್ದಾರೆ. ಹಲವಾರು ಸಂಗತಿಗಳು ಮತ್ತು ಅಮೇರಿಕಾ ಲೆಡ್ನ ಗುಂಪಿನ ಏಕಾಏಕಿ ದಾಳಿಯು ಇರಾಕಿನಾಗರಿಕರ ಸಾವಿಗೆ ಕಾರಣ ಎಂದು ಆರೋಪಿಸಿದ ವರದಿಯನ್ನು ಅಮೇರಿಕಾ ಮಿಲಿಟರಿ ಪಡೆಯು ತಿರಸ್ಕರಿಸಿತು. ಯುಎಸ್ ಪ್ರಾಯೋಜಿತ ಅವೇಕನಿಂಗ್ ಕೌನ್ಸಿಲ್ಗಳು ಮತ್ತು ಷಿಯಾ ಪಂಥದ ಧರ್ಮಗುರುವಾದ ಮುಕ್ತಾದ ಅಲ್-ಸಾದರ್ ಎಂಬಾತ ತನ್ನ ಸೈನಿಕ ಪಡೆಗೆ ಹೋರಾಟವನ್ನು ಹತ್ತಿಕ್ಕಲು ತಿಳಿಸಿದನು.
2009 ಜನವರಿ 31ರಂದು, ಇರಾಕ್ ಪ್ರಾಂತೀಯ ಚನಾವಣೆಯನ್ನು ಮಾಡಿತು. ಆದರೆ ಚುನಾವಣೆಗೆ ಸ್ಪರ್ಧಿಸಿದ ಪ್ರಾಂತೀಯ ಅಭ್ಯರ್ಥಿಗಳು ರಾಜಕೀಯವಾಗಿ ಕೊಲೆಗಳನ್ನು ಮಾಡಿದವರು ಮತ್ತು ಕೊಲೆಗೆ ಯತ್ನಿಸಿದ ಪ್ರಕರಣವನ್ನು ಎದುರಿಸುತ್ತಿದ್ದವರು ಮತ್ತು ಚುನಾವಣೆಗೆ ಸಂಬಂಧಪಟ್ಟಂತೆ ಮತ್ತಿತರ ಹಿಂಸಾಚಾರ ಪ್ರಕರಣಗಳು ನಡೆದಿದ್ದವು. ಇರಾಕಿ ಮತದಾರರು ಮತದಾನ ಮಾಡದೇ ವಾಪಸಾಗಿ ಇಟ್ಟುಕೊಂಡಿದ್ದ ಮೂಲ ಆಕಾಂಕ್ಷೆಯನ್ನು ಮುಟ್ಟಲು ವಿಫಲವಾದರು ಮತ್ತು ಇರಾಕಿನ ಇತಿಹಾಸದಲ್ಲಿ ಕಡಿಮೆ ಮತದಾನವಾಯಿತು. ಆದರೆ ಅಮೇರಿಕಾ ರಾಯಬಾರಿ ರೈನ್ ಕ್ರೂಕರ್, ದೊಡ್ಡ ಪ್ರಮಾಣದಲ್ಲಿ ಮತದಾರರು ವಾಪಸಾಗಿದ್ದಾರೆ ಎಂದು ವಿವರಿಸಿದ. ಹೀಗೆ ಮತದಾನದಿಂದ ಹಿಂದೆ ಬಂದವರಲ್ಲಿ ಕೆಲ ಗುಂಪು ಇದನ್ನು ಸ್ವಾತಂತ್ರ್ಯರಹಿತ ಮತ್ತು ಮೋಸ ಎಂದು ದೂರಿದರು. ಅಂಚೆ ಮತದಾನದ ನಂತರ ವಿಧಿಸಲಾಗಿದ್ದ ಕರ್ಫ್ಯೂವನ್ನು ಹಿಂತೆಗೆದುಕೊಳ್ಳಲಾಯಿತು. ಕೆಲ ಗುಂಪುಗಳು ಬೆದರಿಕೆಗಳನ್ನು ಹಾಕಿದರೂ ಸಹ ಚುನಾವಣೆ ಫಲಿತಾಂಶ ವಿರುದ್ಧವಾಗಿ ಬೇಸರಗೊಂಡರು.
2009 ಫೆಬ್ರವರಿ 27ರಂದು ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅಮೇರಿಕಾದ ಉತ್ತರ ಕಾರೋಲಿನಾದಲ್ಲಿ ಏರ್ಪಡಿಸಿದ್ದ ಮೆರೈನ್ ಕಾರ್ಪ್ಸ್ ಬೇಸ್ ಕ್ಯಾಂಪ್ ಲೇಜ್ಯೂನ್ ಕಾರ್ಯಕ್ರಮದಲ್ಲಿ, ಇರಾಕಿನಲ್ಲಿ ಅಮೇರಿಕಾದ ಯುದ್ಧ ಕಾರ್ಯಾಚರಣೆಯು 2010ರ ಆಗಸ್ಟ್ 31ರಂದು ಮುಗಿಯಲಿದೆ ಎಂದು ಘೋಷಿಸಿದರು. 2011ರ ಕೊನೆವರೆಗೆ ಸದ್ಯ ಅಲ್ಲಿರುವ 50000 ಗುಂಪಿನ ಟ್ರಾನ್ಸಿಶನಲ್ ಫೋರ್ಸು (ಬದಲಾವಣೆ ಪಡೆ) ಇರಾಕಿನ ರಕ್ಷಣಾ ಪಡೆಗಳನ್ನು ತರಬೇತುಗೊಳಿಸಿ, ಉಗ್ರಗಾಮಿತ್ವದ ವಿರುದ್ಧದ ಕಾರ್ಯಾಚರಣೆ ಎದುರಿಸುವ ಬಗೆ ಮತ್ತು ಉಳಿದ ರೀತಿಯ ಬೆಂಬಲಕ್ಕೆ ಸಜ್ಜುಗೊಳಿಸುತ್ತದೆ ಎಂದು ತಿಳಿಸಿದರು. ಯುದ್ಧತಂತ್ರವನ್ನು ಕೈಬಿಟ್ಟು ಇರಾಕ್ ಜವಾಬ್ದಾರಿಯಲ್ಲಿ ಸಂಪೂರ್ಣ ಬದಲಾವಣೆಯನ್ನು ತರುವುದು ಅಮೇರಿಕಾದ ಉದ್ದೇಶವಾಗಿದೆ. ಇದರಿಂದ ಇರಾಕ್ ಸ್ವತಂತ್ರ ದೇಶವಾಗುತ್ತದೆ ಎಂದು ಒಬಾಮಾ ಭಾಷಣದಲ್ಲಿ ತಿಳಿಸಿದ್ದರು. ಒಗ್ಗಟ್ಟಿಲ್ಲದ ಸೈನಿಕ ಪಡೆಯನ್ನು ನೀಡಿದರೂ ಸಹ ಇರಾಕ್ ಜನರು ಮತ್ತು ಸರ್ಕಾರವು ಸ್ವಾಭಿಮಾನದ ಸ್ಥಿತಿಸ್ಥಾಪಕತ್ವ ಕಂಡುಕೊಂಡಿದ್ದನ್ನು ಶ್ಲಾಘಿಸಿದರು. ಆದರೆ ಅಮೇರಿಕಾ 2010ರಲ್ಲಿ ತನ್ನ ಸೈನ್ಯವನ್ನು ತಟಸ್ಥಗೊಳಿಸಿದಾಗ ಮತ್ತು 2011ರಲ್ಲಿ ಸೈನ್ಯವನ್ನು ಹಿಂತೆಗೆದುಕೊಂಡಾಗ ಈ ಮೊದಲು ರಾಜಿಗೆ ಒಪ್ಪದ ಕೆಲ ಇರಾಕಿಗಳು ಶಾಂತತೆಯಿಂದ ಇರುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದು ಬಿಟ್ಟು ಹತ್ಯೆಗಳನ್ನು ನಡೆಸಿದರೆ ಮಧ್ಯಪ್ರವೇಶಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ. ಒಬಾಮಾ ಭಾಷಣಕ್ಕೆ ಹಿಂದಿನ ದಿನದಂದು ಇರಾಕಿನ ಪ್ರಧಾನಮಂತ್ರಿ ನೌರಿ ಅಲ್-ಮಲಿಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಮೇರಿಕಾ ಸೈನ್ಯಪಡೆಯ ನಿರ್ಗಮನ ಸನ್ನಿಹಿತವಾದ್ದರಿಂದ ಇರಾಕ್ ಸರ್ಕಾರ ಯಾವುದೇ ಗಾಬರಿ ಪಡುವುದು ಬೇಡ. ಮತ್ತು ಇರಾಕ್ ರಕ್ಷಣಾ ಸೈನಿಕ ಪಡೆ ಮತ್ತು ಪೊಲೀಸ್ ವ್ಯವಸ್ಥೆಯನ್ನು ನಿಯಮಬದ್ಧವಾಗಿ ಅಮೇರಿಕಾದ ಸೈನಿಕ ಪಡೆಯ ಸಹಾಯದಿಂದ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದ್ದರು.
2009 ಏಪ್ರಿಲ್ 9ರಂದು, ಬಾಗ್ದಾದ್ನ ಸರ್ವಸಂಘಟನೆಗಳ ಒಕ್ಕೂಟದ ಪಥನದ ಆರನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲು ಮುಂದಾದಾಗ ಹತ್ತು ಸಾವಿರದಷ್ಟು ಇರಾಕಿ ಜನರ ತಂಡವು ನಗರದ ಪಥನವನ್ನು ಗುರುತಿಸಲು ಮತ್ತು ಈ ಒಕ್ಕೂಟದ ತಂಡವನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇರಾಕಿಗಳ ಜನಸಂದಣಿಯು ಸಾದರ್ ನಗರದ ಸ್ಲಂ ಪ್ರದೇಶದಿಂದ ಈಶಾನ್ಯ ಬಾಗ್ದಾದ್ನ ಉದ್ದದವರೆಗೂ ಹರಡಿಕೊಂಡಿತ್ತು. ಇದರ ವಿಸ್ತೀರ್ಣವು 5 ಕಿ.ಮೀ (3 ಮೈಲಿ)ವರೆಗೆ ಇತ್ತು. ಪ್ರತಿಭಟನಾಕಾರರು ಮಾಜಿ ಅಮೇರಿಕಾ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ರ ಮತ್ತು ಸದ್ದಾಂ ಹುಸೇನ್ರ ಪ್ರತಿಕೃತಿಯನ್ನು ದಹಿಸಿದರು. ಅವರು ಸದ್ದಾಂನ[ಸೂಕ್ತ ಉಲ್ಲೇಖನ ಬೇಕು] ಕ್ರೂರ ಕಿರುಕುಳದ ಕಾನೂನಿಂದ ರೋಸಿಹೋಗಿದ್ದರು. ಈ ಜನಸಂದಣಿಯಲ್ಲಿ ಸುನ್ನಿ ಮುಸ್ಲಿಂರು ಸಹ ಭಾಗವಹಿಸಿದ್ದರು. ಪೊಲೀಸರು ಹೇಳುವ ಪ್ರಕಾರ, ಹಲವಾರು ಸುನ್ನಿಗಳುಸನ್ಸ್ ಆಫ್ ಇರಾಕ್ನ ನಾಯಕನೂ ಸೇರಿದಂತೆ ಅವರ ಪ್ರಮುಖ ನಾಯಕರನ್ನೊಳಗೊಂಡಂತೆ ಭಾಗವಹಿಸಿದ್ದರು.
2009 ಏಪ್ರಿಲ್ 30ರಂದು, ಇಂಗ್ಲೆಂಡ್ ತನ್ನ ಯುದ್ಧ ಕಾರ್ಯಾಚರಣೆಯನ್ನು ವಿಧ್ಯುಕ್ತವಾಗಿ ಅಂತ್ಯಗೊಳಿಸಿತು. ಇಂಗ್ಲೆಂಡ್ ಪ್ರಧಾನಮಂತ್ರಿ ಗೋರ್ಡನ್ ಬ್ರೌನ್, ಇರಾಕ್ ಕಾರ್ಯಾಚರಣೆಯನ್ನು ಇಂಗ್ಲೆಂಡ್ ಸೈನ್ಯದ ಪ್ರಯತ್ನದಿಂದ ಸಾಧ್ಯವಾದ ‘ಯಶಸ್ಸಿನ ಕಥೆ’ ಎಂದು ಬಣ್ಣಿಸಿದರು. ಬ್ರಿಟನ್, ಅಮೇರಿಕಾ ಸೈನಿಕರ ಪಡೆಯಿಂದ ಬಾಸ್ರಾವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ ಎಂದು ಬಣ್ಣಿಸಿದರು.
ಜೂನ್ ಕೊನೆ ತಿಂಗಳಿನಲ್ಲಿ ಅಮೇರಿಕಾ ಸೈನ್ಯವು ತನ್ನ ಪಡೆಯನ್ನು ಹಿಂಪಡೆಯಿತು. ಇರಾಕಿಗೆ ಅಧಿಕಾರವನ್ನು ಹಸ್ತಾಂತರಿಸುವಾಗ 38 ಕಾರ್ಯಾಚರಣೆ ಕೇಂದ್ರ ಸಮೇತ ನೀಡಿದರು. 2009 ಜೂನ್ 29ರಂದು ಬಾಗ್ದಾದ್ನಲ್ಲಿ ಸಹ ಅಮೇರಿಕಾ ತನ್ನ ಸೈನ್ಯವನ್ನು ಹಿಂಪಡೆಯಿತು. 2009 ನವೆಂಬರ್ 30ರಂದು ಇರಾಕಿನ ಗೃಹ ಮಂತ್ರಿ ಕಚೇರಿ ವರದಿ ಪ್ರಕಾರ, ಇರಾಕಿನಲ್ಲಿ ನಾಗರಿಕರ ಸಾವಿನ ಸಂಖ್ಯೆಯ ಪ್ರಮಾಣವು ನವೆಂಬರ್ 2003ರ ದಾಳಿಗೆ ಹೋಲಿಸಿದರೆ ಸಾಕಷ್ಟು ಕಡಿಮೆಯಾಗಿದೆ.
2009ರ ಜೂನ್ 30 ಮತ್ತು ಡಿಸೆಂಬರ್ 11ರಂದು, ಇರಾಕಿನ ಎಣ್ಣೆ ಸಚಿವಾಲಯವು ಅಂತಾರಾಷ್ಟ್ರೀಯ ಆಯಿಲ್ ಕಂಪನಿಗಳಿಗೆ ಇರಾಕಿನ ಹಲವಾರು ಆಯಿಲ್ ಕ್ಷೇತ್ರಗಳನ್ನು ಒಪ್ಪಂದದ ಮೂಲಕ ನೀಡಿತು. ಇದರಲ್ಲಿ ಜಯ ಸಾಧಿಸಿದ ಆಯಿಲ್ ಕಂಪನಿಯು ಇರಾಕಿನ ಮಂತ್ರಿಮಂಡಲದ ಜಂಟಿ ಖಾತೆಯಲ್ಲಿ ವ್ಯವಹರಿಸುತ್ತದೆ ಮತ್ತು ಕಾಲಮಿತಿ ಒಪ್ಪಂದದ ಕರಾರಿಗಿಂತ ಹೆಚ್ಚಿನ ಆಯಿಲ್ (ಪೆಟ್ರೋಲಿಯಂ) ಉತ್ಪನ್ನವನ್ನು ಪಡೆಯಬೇಕಾದರೆ ಪ್ರತಿ ಬ್ಯಾರೆಲ್ಗೆ ಸರಿಸುಮಾರು 1.40 ಡಾಲರ್ ಹಣವನ್ನು ನಿಗದಿಪಡಿಸಲಾಗಿದೆ. ಉತ್ಪಾದನೆ ಪ್ರಾರಂಭವಾಗಿ ಇರಾಕಿನ ಪೆಟ್ರೋಲಿಯಂ ಖಾತೆಯು ತನ್ನ ಗುರಿ ಮುಟ್ಟಿದಾಗ ಈ ಶುಲ್ಕವನ್ನು ಒಮ್ಮೆಯಷ್ಟೇ ತುಂಬಬೇಕಾಗುತ್ತದೆ. ಆಯಿಲ್ ಕ್ಷೇತ್ರದಲ್ಲಿ ಮಜ್ನೂನ್ ಫೀಲ್ಡ್, ಹಾಲ್ಫಯಾ ಫೀಲ್ಡ್, ವೆಸ್ಟ್ ಕ್ವಾರ್ನಾ ಫೀಲ್ಡ್ ಮತ್ತು ರುಮೈಲಾ ಫೀಲ್ಡ್ ಜತೆ ದೊಡ್ಡ ಒಪ್ಪಂದವೇರ್ಪಟ್ಟಿತು. ಈಸ್ಟ್ ಬಾಗ್ದಾದ್ ಫೀಲ್ಡ್ವು, ಸಾದರ್ ನಗರದ ಭಾಗದಲ್ಲಿ ಸ್ಥಾಪಿಸಲ್ಪಟ್ಟಿತು. ಅದೂ ಯಾವುದೇ ಆಹ್ವಾನವಿಲ್ಲದೇ ಮತ್ತು ಇರಾಕ್ ಪೆಟ್ರೋಲಿಯಂ ಇಲಾಖೆಯು ಇದನ್ನು ಆಯಿಲ್ ಉತ್ಪಾದನಾ ಸಂಸ್ಥೆಯಾಗಿ ಪರಿಗಣಿಸಿತು. ಪೆಟ್ರೋಲಿಯಂ ಮಂತ್ರಿ ಹುಸೇನ್ ಅಲ್-ಶಹ್ರಿಸ್ತನಿ, ಪೆಟ್ರೋಲಿಯಂ ಉತ್ಪನ್ನಗಳನ್ನು ಹೆಚ್ಚು ಉತ್ಪಾದಿಸಿ ಇರಾಕಿಗರಿಗೆ ಸ್ಕೂಲ್, ಏರ್ಪೋರ್ಟ್, ಮನೆಗಳು, ಆಸ್ಪತ್ರೆಗಳು ಸೇರಿದಂತೆ ಮುಂತಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಇರಾಕಿನ ಸಾರ್ವಜನಿಕ ಟಿವಿ ಸಂದರ್ಶನದಲ್ಲಿ ಹೇಳಿಕೆ ನೀಡಿದರು. ಇರಾಕಿನ ಆಯಿಲ್ ದ್ರವ್ಯರಾಶಿಯು ಸಂಸ್ಕರಿಸದ 43 billion ಬ್ಯಾರೆಲ್ಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಹಾಗೆಯೇ ಇದರಲ್ಲಿ ದೊಡ್ಡ ಗುಣಮಟ್ಟದ ಸ್ವಾಭಾವಿಕ ಅನಿಲವಿರುತ್ತದೆ.
2010 ಫೆಬ್ರವರಿ 17ರಂದು ಅಮೇರಿಕಾದ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್, 2010 ಸೆಪ್ಟೆಂಬರ್ 1ರಂದು ಆಪರೇಷನ್ ಇರಾಕಿ ಫ್ರೀಡಮ್ (ಇರಾಕಿಗರ ಸ್ವಾತಂತ್ರ್ಯ ಕಾರ್ಯಾಚರಣೆ) ಹೆಸರನ್ನು ಹೊಸ ನಾಗರಿಕತೆ ಪುನಾರಂಭ ಎಂಬ ಹೆಸರಿನಿಂದ ಕರೆಯಲಾಗುವುದು ಎಂದು ಘೋಷಿಸಿದರು. ಜೂನ್ 20ರಂದು ಇರಾಕಿನ ಸೆಂಟ್ರಲ್ ಬ್ಯಾಂಕ್ ಮೇಲೆ ಬಾಂಬ್ ದಾಳಿ ನಡೆದು 15 ಜನರು ಸಾವನ್ನಪ್ಪಿದರು. ಮತ್ತು ಬಾಗ್ದಾದ್ನ ಹೆಚ್ಚಿನ ಕೆಳನಗರಗಳು ಸ್ಥಬ್ಧವಾದವು. ಈ ದಾಳಿಯನ್ನು ಇರಾಕಿನ ಇಸ್ಲಾಮಿಕ್ ರಾಜ್ಯವನ್ನಾಗಿ ತೆಗೆದುಕೊಂಡು ಹೋಗಲು ನಡೆಸಲಾಗಿದೆ ಎಂದು ಸಮರ್ಥಿಸಿಕೊಳ್ಳಲಾಯಿತು. ಇದೇ ರೀತಿ ಮತ್ತೊಂದು ದಾಳಿಯು ಇರಾಕಿನ ಬ್ಯಾಂಕ್ ಆಫ್ ಟ್ರೇಡ್ ಕಟ್ಟಡದ ಮೇಲೆ ನಡೆಯಿತು. ಈ ಸಂದರ್ಭದಲ್ಲಿ 26 ಜನ ಮೃತಪಟ್ಟರೆ, 52 ಜನ ಗಾಯಗೊಂಡಿದ್ದರು. 2010 ಆಗಸ್ಟ್ ಕೊನೆಯಲ್ಲಿ, ದಂಗೆಕೋರರಿಂದ ಮತ್ತೊಂದು ಭಾರಿ ದೊಡ್ಡ ದಾಳಿ ನಡೆಯಿತು. ಈ ಸಂದರ್ಭದಲ್ಲಿ 12 ಕಾರುಗಳಲ್ಲಿ ಬಾಂಬ್ ಇಟ್ಟು ಮೋಸಲ್ನಿಂದ ಬಾಸ್ರಾವರೆಗೆ ಒಂದಾದ ಮೇಲೊಂದರಂತೆ ಆಸ್ಫೋಟಿಸಲಾಯಿತು. ಈ ಸಂದರ್ಭದಲ್ಲಿ ಕನಿಷ್ಠ ಪಕ್ಷ 51 ಜನರು ಮೃತಪಟ್ಟಿದ್ದರು. ಈ ದಾಳಿಯು ಕಾಕತಾಳೀಯವೆಂಬಂತೆ ಅಮೇರಿಕಾ ತನ್ನ ಯುದ್ಧತಂತ್ರಾ ತಂಡವನ್ನು ವಾಪಸ್ ಕರೆಸಿಕೊಳ್ಳಲು ಯೋಜಿಸಿತ್ತು.
ಅಮೇರಿಕಾದ ಯುದ್ಧ ಸೇನಾಪಡೆಯು 2010, ಆಗಸ್ಟ್ 19ರ ಬೆಳಗಿನ ಜಾವ ಇರಾಕ್ ಅನ್ನು ಬಿಟ್ಟು ಹೊರಟಿತು. ಬೆಂಗಾವಲಿನ ಅಮೇರಿಕಾ ಸೈನ್ಯವು ಇರಾಕಿನಿಂದ ಕುವೈತ್ಗೆ ಹೋಗಿ ಕೆಲಕಾಲ ನೆಲೆಸಿತು. ಮತ್ತು ಎನ್ಬಿಸಿ ಸುದ್ದಿ ವಾಹಿನಿಯು ಅಮೇರಿಕಾ ರಕ್ಷಣಾ ಸೈನ್ಯ ಪಡೆಯು ಗಡಿಯನ್ನು ದಾಟಿದ ನೇರಪ್ರಸಾರವನ್ನು ಬಿತ್ತರಿಸಿತು. ಇದರಿಂದ ಎಲ್ಲ ಯುದ್ಧ ಸೈನ್ಯದಳವು ದೇಶದಿಂದ ಹೊರ ನಡೆದಂತೆ ಆಯಿತು. ಉಳಿದ ಹೆಚ್ಚುವರಿ 50 ಸಾವಿರ ಸೈನ್ಯ ಪಡೆಯು ಇರಾಕ್ ಮಿಲಿಟರಿಯನ್ನು ಬಲಪಡಿಸಲು ಸಹಾಯಕವಾಗುವಂತೆ ಇಟ್ಟುಕೊಳ್ಳಲಾಯಿತು. ಈ ತಂಡವು 2011 ಡಿಸೆಂಬರ್ 31ರಂದು ಇರಾಕ್ ಹಾಗೂ ಅಮೇರಿಕಾ ಸರ್ಕಾರದ ನಡುವಿನ ಒಪ್ಪಂದದ ಅವಧಿ ಮುಗಿಯುವುದರಿಂದ ನಿರ್ಗಮಿಸುತ್ತದೆ. 2010 ಆಗಸ್ಟ್ 31ರಂದು, ಒಬಾಮಾ ಘೋಷಣೆ ಮಾಡಿದಂತೆ, ಓವಲ್ ಕಛೇರಿಯಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಮತ್ತೆ ಮಾತು ಮುಂದುವರೆಸಿದ ಒಬಾಮಾ ಮುಂದಿನ ವರ್ಷದಲ್ಲಿ ಆಫ್ಘಾನಿಸ್ತಾನದ ಕಾರ್ಯಾಚರಣೆಯನ್ನೂ ಸ್ಥಗಿತಗೊಳಿಸಲಾಗುತ್ತದೆ. ಮೃದು ಧೋರಣೆಯ ಅಧಿಕಾರವನ್ನು ಹೊಂದುವುದು ಅಮೇರಿಕಾದ ನೀತಿಯಾಗಿದೆ. ಯುದ್ಧದ ಪರಿಣಾಮವು ಅಮೇರಿಕಾ ಆರ್ಥಿಕ ಪರಿಸ್ಥಿತಿ ಮೇಲೆ ಬೀರುತ್ತಿರುವುದೂ ಕಾರಣವಾಗಿದೆ.
The United States has paid a huge price to put the future of Iraq in the hands of its people. We have sent our young men and women to make enormous sacrifices in Iraq, and spent vast resources abroad at a time of tight budgets at home. We have persevered because of a belief we share with the Iraqi people—a belief that out of the ashes of war, a new beginning could be born in this cradle of civilization. Through this remarkable chapter in the history of the United States and Iraq, we have met our responsibility. Now, it is time to turn the page.
— President Obama's Address on Iraq, August 31, 2010
ಇದೇ ದಿನ ಇರಾಕಿನ ಬಾಗ್ದಾದ್ನಲ್ಲಿ ಸದ್ದಾಂ ಹುಸೇನ್ರ ಹಳೆಯ ಮನೆಯಲ್ಲಿ ಒಂದಾದ ಅಲ್ ಫಾ ಪ್ಯಾಲೆಸ್ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಾರಂಭಕ್ಕೆ ಆಗಮಿಸಿದ್ದ ಕೆಲ ಗಣ್ಯ ಅಧಿಕಾರಿಗಳು ಟಿವಿ ಕ್ಯಾಮೆರಾಗಳ ಎದುರು ಮಾತನಾಡಿದ್ದರು. ಅವರೆಲ್ಲ ಅಮೇರಿಕಾದ ಯುದ್ಧ ಕುರಿತಾದ ಹೇಳಿಕೆಯಲ್ಲಿರುವ ಗೊಂದಲವನ್ನು ಮರೆಮಾಚುವ ಧ್ವನಿಯಲ್ಲಿ ಮಾತನಾಡಿದ್ದರು. ಉಪಾಧ್ಯಕ್ಷ ಜೊ ಬಿಡನ್, ಇರಾಕಿನ ಹೊಸ ಸರ್ಕಾಕ ರಚನೆಯ ಕಾರ್ಯವಿಧಾನದಲ್ಲಿ ಕೊರತೆ ಕಂಡುಬರುತ್ತಿದ್ದರ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದರು. ಇರಾಕಿನಾಗರಿಕರಿಗೆ ಸರ್ಕಾರದ ಬಗ್ಗೆ ನಿರೀಕ್ಷೆಗಳಿದ್ದರಿಂದ ಅದರ ಪರಿಣಾಮ ಮತ ಚಲಾಯಿಸಿದೇ ಇರುವಂತೆ ಮಾಡಿತು ಎಂದು ತಿಳಿಸಿದರು. ಜನರಲ್ ರಾಯ್ ಓಡಿಯರ್ನೋ, ಹೊಸ ಶಾಖೆ ಆರಂಭವಾಗಿದ್ದು, ಇರಾಕ್ ಜನತೆಯೊಂದಿಗಿನ ಬದ್ಧತೆ ಮುಗಿದಿದ್ದು, ಅವರಿಗೆ ಯಾವುದೇ ಅಡಚಣೆ ಇರುವುದಿಲ್ಲ ಎಂದು ಈ ಮೊದಲು ರಮಾಡಿಯಲ್ಲಿ ಹೇಳಿದ್ದರು. ರಮಾಡಿಯೊಂದಿಗೆ ಮಾತನಾಡುವಾಗ ಗೇಟ್ಸ್ ಹೇಳಿದುದೆಂದರೆ, ಅಮೇರಿಕಾ ಸೈನ್ಯ ಪಡೆಯು ಇರಾಕಿನಲ್ಲಿ ಅಸಾಮಾನ್ಯವಾದದ್ದನ್ನು ಸಾಧಿಸಿದ ಅನುಭವ ಹೊಂದಿದ್ದಾರೆ. ಆದರೆ ಇದೆಲ್ಲ ಹೇಗೆ ಸಾಧ್ಯವಾಯಿತು ಎಂಬುದನ್ನು ಎಚ್ಚರಿಕೆಯಿಂದ ಹೆಚ್ಚು ಸಮಯ ಯೋಚಿಸಬೇಕಿದ್ದು, ನನ್ನ ಪ್ರಕಾರ ಉಳಿದ ಭಾಗವನ್ನು ನೋಡಬೇಕಿದೆ. ಏಳು ವರ್ಷದ ಯುದ್ಧ ನಿಮಗೆ ಅವಶ್ಯಕತೆ ಇತ್ತಾ ಎಂಬಾ ಪತ್ರಕರ್ತರ ಪ್ರಶ್ನೆಗೆ, ಉತ್ತರಿಸಿದ ಗೇಟ್ಸ್, ಇದು ನಿಜವಾಗಿಯೂ ಅನಿವಾರ್ಯವಾಗಿತ್ತು, ಐತಿಹಾಸಿಕ ದೃಷ್ಟಿಕೋನದಿಂದ ನೋಡಿದಾಗ ಇಲ್ಲಿ ನಡೆದಿರುವುದನ್ನು ನೋಡಬಹುದಾಗಿದೆ. ಇರಾಕ್ ಯುದ್ಧವು ನಿಗೂಢವಾಗಿದ್ದು, ಹೇಗೆ ಪ್ರಾರಂಭವಾಯಿತು ಎಂಬುದು ತಿಳಿಯದಂತಾಗಿದೆ. ಸದ್ದಾಂ ಹುಸೇನ್ರ ಶಸ್ತ್ರಾಸ್ತ್ರಗಳಿಂದ ಪ್ರಪಂಚವನ್ನೇ ನಾಶಮಾಡಬಹುದು ಎಂದು ಚಿಂತಿಸಿದ್ದ, ಇದನ್ನು ಖಚಿತವಾಗಿ ಹೇಳುತ್ತಿರಲಿಲ್ಲ. ಇಲ್ಲಿ ಯುದ್ಧ ನಡೆದು ಇಷ್ಟೆಲ್ಲಾ ಗೊಂದಲಗಳು ನಿರ್ಮಾಣವಾಗಲೂ ಇದೂ ಒಂದು ಕಾರಣವಿರಬಹುದು ಎಂದು ಗೇಟ್ಸ್ ಹೇಳಿದರು. ಇದೇ ದಿನ ಜನರಲ್ ರೆ ಓಡಿಯರ್ನೋ ಅವರನ್ನು ಇರಾಕಿನ ಅಮೇರಿಕಾ ಸೈನ್ಯಪಡೆಯ ಕಮಾಂಡರ್ ಲಾಯ್ಡ್ ಆಯ್ಸ್ಟಿನ್ ಜಾಗಕ್ಕೆ ವರ್ಗಾಯಿಸಲಾಯಿತು. ಆದಾಗ್ಯೂ, ಅಧಿಕೃತ ನಿಖರವಾದ ಘೋಷಣೆಗಳು ಹೊರಬಿದ್ದರೂ ಸಹ ಕೆಲವು ಗೊಂದಗಳಾಗಿ ಅದರ ಬಗೆಗೆ ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ಪತ್ರಿಕಾ ಮಾಧ್ಯಮಗಳಿಗೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಪತ್ರಿಕಾ ಪ್ರಕಟಣೆಯೊಂದು ಬಂದಿತ್ತು. ಅದರಲ್ಲಿ ಇರಾಕಿನ ಯುದ್ಧತಂತ್ರಗಳು ಇನ್ನೂ ಮುಗಿದಿಲ್ಲ ಮತ್ತು ನಾವು ವಿಚಾರಮಾಡದೇ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ, ಈ ಆದೇಶವು ಮೇಲಧಿಕಾರಿಗಳಿಂದ ಅಧಿಕೃತ ಮಾಹಿತಿ ಬರುವವರೆಗೂ ಏನನ್ನೂ ಹೇಳುವುದಿಲ್ಲ ಎಂದು ಬರೆಯಲಾಗಿತ್ತು. 2010 ಸೆಪ್ಟೆಂಬರ್ 7ರಂದು ಎರಡು ಅಮೇರಿಕಾ ಸೈನ್ಯ ಪಡೆಗಳನ್ನು ಕೊಲ್ಲಲಾಯಿತು ಮತ್ತು 9 ಮಂದಿ ಗಾಯಗೊಂಡಿದ್ದರು. ಇದು ಇರಾಕ್ ಮಿಲಿಟರಿ ಪ್ರದೇಶದಲ್ಲಿ ನಡೆದ ಘಟನೆಯಾಗಿತ್ತು. ಈ ಪ್ರಕರಣವನ್ನು ಇರಾಕ್ ಮತ್ತು ಅಮೇರಿಕಾ ಮಿಲಿಟರಿ ಪಡೆಗಳು ತನಿಖೆ ನಡೆಸಿದರು. ಆದರೆ ಇಲ್ಲಿ ಇರಾಕಿನ ಸೈನಿಕರು ಬಹಿರಂಗವಾಗಿ ಅಮೇರಿಕಾ ಸೈನ್ಯ ಪಡೆಯ ಮೇಲೆ ಗುಂಡು ಹಾರಿಸಿದ್ದರು ಎಂದು ನಂಬಲಾಗಿತ್ತು.
13 ಬಿಲಿಯನ್ ಡಾಲರ್ ಮೌಲ್ಯದ ಅಮೇರಿಕಾದ ಶಸ್ತ್ರಾಸ್ತ್ರಗಳನ್ನು ಪಡೆದು ಇರಾಕ್ ರಕ್ಷಣಾ ಸಚಿವಾಲಯವು ದೇಶದ ಸಾಂಪ್ರದಾಯಿಕ ಪಡೆಯನ್ನು ಆಧುನಿಕಗೊಳಿಸುವುದರೊಂದಿಗೆ ಅಮೇರಿಕಾದ ಶಸ್ತ್ರಾಸ್ತ್ರಗಳು ಮತ್ತು ಸೈನ್ಯದ ಉಪಕರಣಗಳ ದೊಡ್ದ ಗ್ರಾಹಕನಾಯಿತು. ಈ ಯೋಜನೆಯ ಅಮೇರಿಕಾ ಸಂಯುಕ್ತ ಸಂಸ್ಥಾನ ಸೈನ್ಯದ ಪ್ರಮುಖ ಯುದ್ಧ ಟ್ಯಾಂಕರ್ M-1 ಖರೀದಿಸುವುದನ್ನೊಳಗೊಂಡಿತ್ತು. ಇರಾಕ್ 140 ಟ್ಯಾಂಕ್ಗಳನ್ನು ಖರೀದಿಸಲು ಬಯಸಿದೆ, ಮತ್ತು ಇರಾಕಿ ಸಿಬ್ಬಂದಿಗಳಿಗೆ ಅದರ ತರಬೇತಿಯನ್ನು ಈಗಾಗಲೇ ನೀಡುತ್ತಿದೆ. ಅದಲ್ಲದೆ $13 ಬಿಲಿಯನ್ ಖರೀದಿಗೆ, ಇರಾಕಿಗಳು 18 F-16 ಫಾಲ್ಕನ್ ಫೈಟರ್ ಜೆಟ್ಗಳನ್ನು $3 ಕಾರ್ಯಕ್ರಮದ ಭಾಗವಾಗಿ ಮತ್ತು ವಿಮಾನ ತರಬೇತಿ ಮತ್ತು ನಿರ್ವಹಣೆಯನ್ನೂ ಅವರು ಬಯಸಿದ್ದರು. ಕಾಂಗ್ರೆಸ್ ಸಮ್ಮತಿಸಿದರೆ ಮೊದಲ ವಿಮಾನವು 2013ರ ವಸಂತ ಋತುವಿನಲ್ಲಿ ಬರುತ್ತದೆ. ಈ ಯೋಜನೆಯಡಿಯಲ್ಲಿ 10 ಪೈಲಟ್ಗಳು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ತರಬೇತಿಯನ್ನು ಪಡೆಯುತ್ತಾರೆ.
ಇರಾಕಿನ ವರದಿಯ ಪ್ರಕಾರ ನೂರಾರು ಸುನ್ನಿ ಅವೇಕನಿಂಗ್ ಕೌನ್ಸಿಲ್ನ ಸದಸ್ಯರು ನಿಷ್ಠೆಯನ್ನು ಬದಲಿಸಿ ಇರಾಕಿ ಬಂಡಾಯ ಅಥವಾ ಅಲ್ ಕೈದಾವನ್ನು ಸೇರಬಹುದು.
ವಿಕಿಲೀಕ್ಸ್ 391,832 ವರ್ಗೀಕರಿಸಿದ ಇರಾಕ್ ಯುದ್ಧದ ಬಗೆಗಿನ ಅಮೇರಿಕಾ ಸಂಯುಕ್ತ ಸಂಸ್ಥಾನದ ಸೈನ್ಯದ ದಾಖಲೆಗಳನ್ನು ಬಹಿರಂಗಪಡಿಸಿತು.
ಸಮ್ಮಿಶ್ರ ಪಡೆಗಳ ಸಾವಿನ ಮಾಹಿತಿಯನ್ನು ಮೇಲಿನ ಪಟ್ಟಿಯಲ್ಲಿ ಕಾಣಬಹುದು. ಇರಾಕ್ ಯುದ್ಧದ ದುರ್ಘಟನೆಯನ್ನು ನೋಡಿ, ಅವು ಎರಡೂ ದೇಶಗಳ ದರ್ಘಟನೆಯ ಒಕ್ಕೂಟ ರಾಷ್ಟ್ರದ ಜನರ ಸಂಖ್ಯೆಗಳು, ಗುತ್ತಿಗೆದಾರರು, ಇರಾಕೇತರ ನಾಗರಿಕರು, ಪತ್ರಕರ್ತರು, ಮಾಧ್ಯಮ ಸಹಾಯಕರು, ಚಿಕಿತ್ಸಕರು, ಗಾಯಾಳುಗಳ ಸಂಖ್ಯೆಗಳನ್ನೊಳಗೊಂಡಿದೆ. ಮುಖ್ಯ ಲೇಖನವೂ ಅಂಕೆ ಸಂಖ್ಯೆಗಳ ಅಂದಾಜು ಮತ್ತು ನೈಜ ಸಂಖ್ಯೆಗಳ ವಿವರಣೆ ಮತ್ತು ಅಂದಾಜು ಮಾಡಿದ ಮಾಹಿತಿಗಳನ್ನೊಳಗೊಳ್ಳುತ್ತದೆ. ದುರ್ಘಟನೆಯ ಸಂಖ್ಯೆಗಳು, ವಿಶೇಷವಾಗಿ ಇರಾಕಿನ ಸಾವು ನೋವಿನ ಸಂಖ್ಯೆಯು ವಿವಾದಕ್ಕೊಳಗಾಗಿದೆ. ಈ ವಿಭಾಗವು ವಿವರವಾದ ಸ್ಥೂಲ ಸಮೀಕ್ಷೆಯನ್ನೊಳಗೊಂಡಿದೆ. ಮಾಧ್ಯಮ, ಸಮ್ಮಿಶ್ರ ಸರ್ಕಾರಗಳು ಮತ್ತಿತರರಿಂದ ಸಾವುನೋವಿನ ಸಂಖ್ಯೆಯನ್ನು ಕಂಡುಹಿಡಿಯುವ ಅನೇಕ ಪ್ರಯತ್ನಗಳಾಗಿವೆ. ಈ ಕೆಳಗಿನ ಪಟ್ಟಿಯು ಕೆಲವು ಅಂದಾಜುಗಳನ್ನು ಪಟ್ಟಿಮಾಡುತ್ತದೆ.
ಮೂಲ | ಇರಾಕಿ ದುರ್ಘಟನೆಗಳು | ಮಾರ್ಚ್ 2003 ರಿಂದ ... |
---|---|---|
ಇರಾಕ್ ಕೌಟುಂಬಿಕ ಆರೋಗ್ಯ ಸಮೀಕ್ಷೆ | 151,000 ಹಿಂಸಾತ್ಮಕ ಸಾವುಗಳು. | ಜೂನ್, 2006. |
ಲ್ಯಾನ್ಸೆಟ್ ಸಮೀಕ್ಷೆ | 654,965 ರಲ್ಲಿ 601,027 ರಷ್ಟು ಹಿಂಸಾತ್ಮಕ ಸಾವುಗಳು | ಜೂನ್, 2006. |
ಅಭಿಪ್ರಾಯ ಸಂಶೋಧನಾ ವ್ಯವಹಾರಿಕ ಸಮೀಕ್ಷೆ | 1,033,000 ಸಂಘರ್ಷಣೆಯಿಂದಾದ ಹಿಂಸಾತ್ಮಕ ಸಾವುಗಳು | ಆಗಸ್ಟ್ 2007 |
ಅಸೋಸಿಯೆಟೆಡ್ ಪ್ರೆಸ್ | 110,600 ಹಿಂಸಾತ್ಮಕ ಸಾವುಗಳು | ಏಪ್ರಿಲ್ 2009 |
ಇರಾಕ್ ಬಾಡಿ ಕೌಂಟ್ | 94,902–103,549 ಸಂಘರ್ಷಣೆಯಿಂದಾದ ನಾಗರಿಕರ ಹಿಂಸಾತ್ಮಕ ಸಾವುಗಳು | ಡಿಸೆಂಬರ್ 2009 |
ವಿಕಿಲೀಕ್ಸ್. ವರ್ಗೀಕೃತ ಇರಾಕ್ ಯುದ್ಧದ ಲಾಗ್ಸ್ | 109,032 ಹಿಂಸಾತ್ಮಕ ಸಾವುಗಳು | ಜನವರಿ2004ರಿಂದ ಡಿಸಂಬರ್ 2009 |
ಬುಷ್ ಆಡಳಿತದ ಇರಾಕ್ ಯುದ್ಧದ ತಾರ್ಕಿಕ ವಿವರಣೆಯು ಸಂಯುಕ್ತ ಸಂಸ್ಥಾನಗಳ ಒಳ ಮತ್ತು ಹೊರಗಡೆಯ ಅನೇಕ ಪ್ರಸಿದ್ಧ ಮತ್ತು ವ್ಯವಹಾರಿಕ ಮೂಲಗಳಿಂದ ಟೀಕೆಗೊಳಗಾಯಿತು, ಅನೇಕ ಅಮೇರಿಕಾ ಸಂಯುಕ್ತ ಸಂಸ್ಥಾನದ ಪ್ರಜೆಗಳು ವಿಯೆಟ್ನಾಂ ಯುದ್ಧದೊಂದಿಗೆ ಹೋಲಿಸಿ ನೋಡುತ್ತಾರೆ. ಸಾರ್ವಜನಿಕ ಭದ್ರತಾ ಕೇಂದ್ರದ ಪ್ರಕಾರ 2001ರಿಂದ 2003ರ ಸಂಯುಕ್ತ ಸಂಸ್ಥಾನಕ್ಕೆ ಇರಾಕಿನ ಅಪಾಧನೆಯ ಭೀತಿಯ ಸಮಯದಲ್ಲಿ ಬುಷ್ ಆಡಳಿತವು ಒಟ್ಟು 935 ತಪ್ಪು ಹೇಳಿಕೆಗಳನ್ನು ನೀಡಿತು. ಆಕ್ರಮಣದ ಸಿದ್ಧಾಂತ ಪ್ರತಿಪಾದಕರು ಮತ್ತು ವಿರೋಧಿಗಳು ಮೊಕದ್ದಮೆಯ ಯುದ್ಧ ಪ್ರಯತ್ನದೊಂದಿಗೆ ಇನ್ನಿತರ ಸಾಲುಗಳನ್ನು ಟೀಕಿಸಿದರು. ಪ್ರಮುಖವಾಗಿ ಟೀಕಾಕಾರರು ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಅದರ ಆಕ್ರಮಣಕಾರರು ಕಾರ್ಯಾಚರಣೆಗೆ ಸಾಕಷ್ಟು ತಂಡವನ್ನು ಮೀಸಲಿಡಲಿಲ್ಲ, ಆಕ್ರಮಣಾನಂತರದ ಇರಾಕ್ನ ಬಗೆಗೆ ಸಾಕಷ್ಟು ಯೋಜನೆಗಳನ್ನು ರೂಪಿಸಲಿಲ್ಲ, ಮತ್ತು ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಕ್ಕಾಗಿ ಮತ್ತು ಅನುಮತಿಸದಿರುವುದಕ್ಕಾಗಿ ದೂಷಿಸುತ್ತಾರೆ. ಯುದ್ಧವು ನಡೆಯುತ್ತಿರುವಾಗ ಟೀಕಾಕಾರರೂ ಸಹ ಹೆಚ್ಚಿದ ಸಾವು ಮತ್ತು ಹಣದ ವಿನಿಯೋಗದ ವಿರುದ್ಧ ನಿಂದಿಸಿದರು. ಎಹ್ರೆನ್ ವಟಾಡ ಇರಾಕಿನಲ್ಲಿ ಸೇವೆ ಸಲ್ಲಿಸಲು ವಿರೋಧಿಸಿದ ಪ್ರಥಮ ಅಮೇರಿಕಾ ಸಂಯುಕ್ತ ಸಂಸ್ಥಾನದ ಕೋರ್ಟ್ ಮಾರ್ಶಲ್ ಆಗಿದ್ದಾನೆ, ಇದು ತಪ್ಪು ವಿಚಾರಣೆಯಲ್ಲಿ ಕೊನಗೊಂಡಿತು, ಏಕೆಂದರೆ ಜಡ್ಜ್ ಅಡ್ವೊಕೇಟ್ ಜನರಲ್ನ ತಂಡವು ಪ್ರಶ್ನೆಯನ್ನು ನ್ಯಾಯಬದ್ಧವಾಗಿದೆಯೋ ಇಲ್ಲವೊ ಎಂದು ಪರಿಗಣಿಸಲಿಲ್ಲ. ಸಂಯುಕ್ತ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಅದೇಶದ ಪ್ರಕಾರ ವಟಾಡ ತನ್ನ ಐದು ಆರೋಪಗಳಲ್ಲಿ ಮೂರಕ್ಕೆ ಡಬಲ್ ಜಿಯೋಪಾರ್ಡಿಯನ್ನು ಎದುರಿಸಬೇಕಾಗಿಲ್ಲ ಆದರೆ ಉಳಿದ ಎರಡು ಆರೋಪಗಳಲ್ಲಿನ ಕಂಡಕ್ಟ್ ಅನ್ಬಿಕಮಿಂಗ್ ಆಯ್ನ್ ಆಫೀಸರ್ ಆರೋಪವು ಮುಂದುವರೆಯಬಹುದು. ಅನೇಕ ಸೈನಿಕರು ವಿಶೇಷವಾಗಿ ಆಡಳಿತದ ಪ್ರಕಾರ ಇರಾಕಿನ ಡಬ್ಲುಎಮ್ಡಿಗಳು ಸುಳ್ಳೆಂದು ತಿಳಿದ ನಂತರ ಆಕ್ರಮಣವನ್ನು ವಿರೋಧಿಸಿದರು. ಯುದ್ಧದ ವಿರುದ್ಧದ ಇರಾಕ್ ಪರಿಣತ ಎಂದು ತನ್ನನ್ನು ಕರೆದುಕೊಳ್ಳುವ ಸಂಘಟನೆಯು ತಕ್ಷಣ 1,000ಕ್ಕೂ ಹೆಚ್ಚಿನ ಸೈನಿಕರು ಮತ್ತು ಪರಿಣತರ ಸದಸ್ಯತ್ವವನ್ನು ಪಡೆದುಕೊಂಡಿತು. ಜನವರಿ 2006ರಲ್ಲಿ 1,000 ಸೈನಿಕರು (ಆಯ್ನ್ ಅಪೀಲ್ ಫಾರ್ ರಿಡ್ರೆಸ್) ಬೇಡಿಕೆಗೆ ಸಹಿ ಹಾಕಿದರು, ಅದನ್ನು "ಎಲ್ಲಾ ಅಮೇರಿಕಾದ ಸೈನ್ಯ ಮತ್ತು ಸೈನಿಕ ನೆಲೆಗಳನ್ನು ಇರಾಕಿನಿಂದ ಹಿಂಪಡೆಯಲು" ಕಾಂಗ್ರೆಸ್ಗೆ ಸಲ್ಲಿಸಲಾಯಿತು. ಫೆಬ್ರವರಿ 2006ರಲ್ಲಿ ಜೂಗ್ಬಿ ಮತದಾನವು 72 ಪ್ರತಿಶತದಷ್ಟು ಇರಾಕ್ನಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರು ಒಂದು ವರ್ಷದೊಳಗೆ ಅಮೇರಿಕಾ ಸಂಯುಕ್ತ ಸಂಸ್ಥಾನವು ಇರಾಕಿನಿಂದ ಹೊರಬರುವಂತೆ ಮತಚಲಾಯಿಸಿರುವುದನ್ನು ಬಹಿರಂಗಗೊಳಿಸಿತು. ಕ್ಯಾಮಿಲೊ ಮೆಜಿಯಾರ ದ ರೋಡ್ ಫ್ರಂ ಆರ್ ರಮಾಂಡಿ ಮತ್ತು ಕರ್ಲ್ ಮಿರ್ರರ ಸೋಲ್ಜರ್ಸ್ ಆಯ್೦ಡ್ ಸಿಟಿಜನ್ಸ್: ಆಯ್ನ್ ಓರಲ್ ಹಿಸ್ಟರಿ ಆಫ್ ಆಪರೇಶನ್ ಇರಾಕಿ ಫ್ರೀಡಮ್ ಫ್ರಂ ದಿ ಬ್ಯಾಟಲ್ಫೀಲ್ದ್ ಟು ದಿ ಪೆಂಟಗಾನ್ ನ್ನೊಳಗೊಂಡಂತೆ ಅನೇಕ ಪುಸ್ತಕಗಳು GI ವಿರೋಧವನ್ನು ವಿವರಿಸಿದರು. ಮುಂಚಿನ ಸಿಐಎ ಅಧಿಕಾರಿಯು ಇರಾಕ್ ಯುದ್ಧಕ್ಕೆ ಕಾರಣವಾದ ಪ್ರಾಥಮಿಕ ಇಂಟೆಲಿಜೆನ್ಸ್ನ ಮತ್ತೊಂದು ವಿಮರ್ಶೆಯನ್ನು ನೀಡಿದರು, ಅವರು ಸ್ಪೆಷಲ್ ಯೋಜನೆಗಳ ಕಛೇರಿಯನ್ನು ಯುಎಸ್ನ ರಾಷ್ಟ್ರೀಯ ಭದ್ರತೆಗೆ ಮತ್ತು ಜಾಗತಿಕ ಶಾಂತಿಗೆ ಒಂದು ಭೀತಿಯನ್ನು ಉಂಟುಮಾಡುವ ಅಪಾಯಕರವಾದ ಆದರ್ಶವಾದಿಗಳ ಒಂದು ಗುಂಪು ಎಂಬುದಾಗಿ ವರ್ಣಿಸಿದರು, ಮತ್ತು ಆ ಗುಂಪು ಇಂಟೆಲಿಜೆನ್ಸ್ನಲ್ಲಿಯೇ ಇತ್ತು ಮತ್ತು ಅದು ಸದ್ದಾಮ್ರನ್ನು ನಿರ್ಮೂಲನ ಮಾಡುವಲ್ಲಿ ತನ್ನ ಕಾರ್ಯಸೂಚಿಗಳನ್ನು ಬದಲಾಯಿಸಿತು. ಕಾಲಾನಂತರದಲ್ಲಿ, 2008ರಲ್ಲಿ , ಸಾರ್ವಜನಿಕ ಸಮಗ್ರತೆಯ ಪಕ್ಷಾವಲಂಬಿಯಲ್ಲದ ಕೇಂದ್ರವು ಜಾರ್ಜ್ ಡಬ್ಲು ಬುಷ್ ಅವರಿಂದ ಮತ್ತು ಅವರ ಆಡಳಿತದಲ್ಲಿನ ಇತರ ಆರು ಮೇಲ್ಮಟ್ಟದ ಅಧಿಕಾರಿಗಳಿಂದ ನೀಡಲ್ಪಟ್ಟ 935 ತಪ್ಪು ಹೇಳಿಕೆಗಳನ್ನು ಪಟ್ಟಿ ಮಾಡಿತು, ಅದರಲ್ಲಿ ಅದು ಇರಾಕಿನ ಆಕ್ರಮಣದಲ್ಲಿ ಬೆಂಬಲವನ್ನು ನೀಡುವುದರ ಸಲುವಾಗಿ 9/11 ಆಕ್ರಮಣಗಳನ್ನು ಅನುಸರಿಸುತ್ತ ಎರಡು ವರ್ಷಗಳ ಅವಧಿಯಲ್ಲಿ ಒಂದು "ತಪ್ಪು ಮಾಹಿತಿಗಳ ಜಾಗರೂಕತೆಯಿಂದ ಮಾಡಲ್ಪಟ್ಟ ಯೋಜನೆಗಳು" ಎಂಬುದಾಗಿ ವರ್ಣಿಸಿತು. ಯು.ಕೆ.ಗೆ ಯುದ್ಧದ ಆರ್ಥಿಕ ವೆಚ್ಚವು £4.5 ಬಿಲಿಯನ್ಗಿಂತ ಹೆಚ್ಚಾಗಲ್ಪಟ್ಟಿತು,$845 billion ಮತ್ತು ಯುಎಸ್ಗೆ $845 billion ಗಿಂತ ಹೆಚ್ಚಾಗಲ್ಪಟ್ಟಿತು, ಯುಎಸ್ನ ಆರ್ಥಿಕ ವ್ಯವಸ್ಥೆಗೆ ತಗುಲಿದ ವೆಚ್ಚವು $3 trillion ಆಗಿತ್ತು ಎಂದು ಅಂದಾಜಿಸಲಾಯಿತು. ವಿಮರ್ಶೆಗಳು ಈ ಕೆಳಗಿನವುಗಳನ್ನು ಒಳಗೊಳ್ಳುತ್ತವೆ:
ಅಧ್ಯಕ್ಷ ಬರಾಕ್ ಒಬಾಮಾ 2009 ರಲ್ಲಿ ಅಧಿಕಾರವನ್ನು ಪ್ರಾರಂಭಿಸಿದ ನಂತರ, ಕೆಲವು ಯುದ್ಧ-ವಿರೋಧಿ ಗುಂಪುಗಳು ಯುದ್ಧವು ಮುಂದುವರೆಯುತ್ತಿದ್ದರೂ ಕೂಡ ಪ್ರತಿಭಟನೆಯನ್ನು ನಿಲ್ಲಿಸುವುದಕ್ಕೆ ನಿರ್ಧರಿಸಿದವು. ಅವರಲ್ಲಿ ಕೆಲವರು ಪ್ರತಿಭಟನೆಯನ್ನು ನಿಲ್ಲಿಸುವುದಕ್ಕೆ ನಿರ್ಧಾರ ಮಾಡಿದರು ಏಕೆಂದರೆ ಹೊಸ ಅಧ್ಯಕ್ಷರಿಗೆ ಆಡಳಿತವನ್ನು ಸ್ಥಾಪಿಸುವುದಕ್ಕೆ ಸಮಯವನ್ನು ನೀಡಬೇಕು ಎಂಬುದಾಗಿ ಅವರು ಭಾವಿಸಿದರು, ಮತ್ತು ಇತರರು ಒಬಾಮಾ ಯುದ್ಧವನ್ನು ನಿಲ್ಲಿಸುತ್ತಾರೆ ಎಂಬ ನಂಬಿಕೆಯಿಂದ ಪ್ರತಿಭಟನೆಯನ್ನು ನಿಲ್ಲಿಸಿದರು. ಇರಾಕಿನಲ್ಲಿ 2004 ರವರೆಗೆ ಇದ್ದ ಯುಎಸ್ನಿಂದ ನಡೆಸಲ್ಪಟ್ಟ ಮಧ್ಯಂತರ ಸರ್ಕಾರ, ಸಮ್ಮಿಶ್ರ ಹಂಗಾಮಿ ಅಧಿಕಾರವು ಇರಾಕಿನ ಅಭಿವೃದ್ಧಿಗಾಗಿ ಇರುವ ನಿಧಿಯಿಂದ $8,800,000,000 ಹಣವನ್ನು ವಿನಿಯೋಗ ಮಾಡಿತು ಎಂಬುದಾಗಿ ಒಂದು ಸಿಎನ್ಎನ್ ವರದಿಯು ಟಿಪ್ಪಣಿ ಮಾಡಿತು. ಇನ್ಸ್ಪೆಕ್ಟರ್ ಜನರಲ್ರ ಒಂದು ವರದಿಯು ಹೇಳಿದ್ದೇನೆಂದರೆ "ಸಮ್ಮಿಶ್ರ ಹಂಗಾಮಿ ಅಧಿಕಾರಿಗಳ ತೀವ್ರವಾದ ಅಸಮರ್ಥತೆಗಳು ಮತ್ತು ಅಸಮರ್ಪಕವಾದ ಆಡಳಿತಗಳು ಹಣವು ಅಸಮರ್ಪಕವಾಗಿ ವಿನಿಯೋಗವಾಗಲ್ಪಟ್ಟಿದೆ ಎಂಬುದಕ್ಕೆ ಯಾವುದೇ ಖಾತರಿಯನ್ನು ನೀಡುವುದಿಲ್ಲ," ಎಂಬುದಾಗಿ ಇರಾಕ್ ಪುನರ್ನಿರ್ಮಾಣದ ಸ್ಪೆಷಲ್ ಇನ್ಸ್ಪೆಕ್ಟರ್ ಜನರಲ್ನ ಆಫೀಸ್ನ ಡೈರೆಕ್ಟರ್ ಸ್ಟೌರ್ಟ್ ಡಬ್ಲು. ಬೊವೆನ್ ಜ್ಯೂನಿಯರ್ ಹೇಳಿದರು. "ಸಿಪಿಎಯು ಹಣಗಳು ಒಂದು ಪಾರದರ್ಶಕ ರೀತಿಯಲ್ಲಿ ಬಳಸಲ್ಪಟ್ಟಿವೆ ಎಂಬುದನ್ನು ತಿಳಿಯುವುದಕ್ಕೆ ಸಮರ್ಪಕವಾದ ಆಡಳಿತಾತ್ಮಕ, ಆರ್ಥಿಕ ಮತ್ತು ಕರಾರಿನ ನಿಯಂತ್ರಣಗಳನ್ನು ಅನುಷ್ಠಾನಗೊಳಿಸಲಿಲ್ಲ ಮತ್ತು ಆಚರಣೆಗೆ ತರಲಿಲ್ಲ."
.]]
ಡಿಸೆಂಬರ್ 2007 ರಲ್ಲಿ, ಇರಾಕ್ ಸರ್ಕಾರವು ಇರಾಕಿನಲ್ಲಿ5 million ಅನಾಥರು ಇದ್ದಾರೆ ಎಂಬುದಾಗಿ ವರದಿ ಮಾಡಿತು - ದೇಶದ ಮಕ್ಕಳ ಸಂಖ್ಯೆಯ ಸರಿಸುಮಾರು ಅರ್ಧದಷ್ಟು ಅನಾಥರಿದ್ದಾರೆ ಎಂಬುದಾಗಿ ವರದಿ ಮಾಡಿತು. ಇರಾಕಿನ ಆರೋಗ್ಯವು 1950ರ ದಶಕದ ನಂತರದಿಂದ ಕಂಡುಬಂದಿಲ್ಲದ ಮಟ್ಟಕ್ಕೆ ನಶಿಸಲ್ಪಟ್ಟಿತು ಎಂಬುದಾಗಿ ಯು.ಎನ್. ಜನಸಂಖ್ಯಾ ವಿಭಾಗದ ಮುಂಚಿನ ನಿರ್ದೇಶಕ ಮತ್ತು ಇರಾಕಿನ ತಜ್ಞ ಜೋಸೆಫ್ ಕ್ಯಾಮಿ ಹೇಳಿದರು. 1991 ರ ಪರ್ಷಿಯನ್ ಗಲ್ಫ್ ಯುದ್ಧಕ್ಕೂ ಮುಂಚೆ ಆರೋಗ್ಯ ರಕ್ಷಣೆಯನ್ನು ಉಲ್ಲೇಖಿಸುತ್ತ ಅವರು ಹೇಳಿದರು, "ಅವರು ಯುದ್ಧದಲ್ಲಿ ಮುಂಚೂಣಿಯಲ್ಲಿದ್ದರು". "ಈಗ ಅವರು ದೇಶವನ್ನು ಹೆಚ್ಚು ಹೆಚ್ಚಾಗಿ ಉಪ-ಸಹಾರನ್ ಆಫ್ರಿಕಾ ಎಂಬಂತೆ ಕಾಣುತ್ತಿದ್ದಾರೆ." ಅಪೌಷ್ಟಿಕತೆಯ ಪ್ರಮಾಣಗಳು ಯುಎಸ್ನಿಂದ ನಡೆಸಲ್ಪಟ್ಟ-ಆಕ್ರಮಣಕ್ಕೂ ಮುಂಚೆ ಇದ್ದ 19% ರಿಂದ ನಾಲ್ಕು ವರ್ಷಗಳ ನಂತರ ಒಂದು ರಾಷ್ಟ್ರೀಯ ಸರಾಸರಿ 28% ಕ್ಕೆ ತಲುಪಿತು. ಇರಾಕ್ ಮಕ್ಕಳಲ್ಲಿ ಕೆಲವು 60–70% ಮಕ್ಕಳು ಮಾನಸಿಕ ಸಮಸ್ಯೆಗಳಿಂದ ನರಳುತ್ತಿದ್ದಾರೆ. 68% ಇರಾಕ್ ಜನರು ಸುರಕ್ಶಿತ ಕುಡಿಯುವ ನೀರಿನ ಸೌಲಭ್ಯವನ್ನು ಹೊಂದಿಲ್ಲ. ಉತ್ತರ ಭಾಗದ ಇರಾಕಿನಲ್ಲಿ ಕಾಲರಾ ಪಿಡಗು ಕುಡಿಯುವ ನೀರಿನ ಕಳಪೆ ಗುಣಮಟ್ಟದ ಪರಿಣಾಮ ಎಂಬುದಾಗಿ ತಿಳಿಯಲ್ಪಟ್ಟಿದೆ. ಸರಿಸುಮಾರು ಇರಾಕಿನ ಡಾಕ್ಟರ್ಗಳಲ್ಲಿ ಅರ್ಧದಷ್ಟು ಡಾಕ್ಟರ್ಗಳು 2003 ರ ನಂತರದಿಂದ ದೇಶವನ್ನು ತೊರೆದರು.
ಸಂಪೂರ್ಣವಾಗಿ ಇರಾಕ್ ಯುದ್ಧದ ಕಾಲದಲ್ಲಿ ಯುದ್ಧ ಮಾಡುತ್ತಿದ್ದ ಎಲ್ಲ ಪಕ್ಷಗಳಲ್ಲಿಯೂ ಮಾನವ ಹಕ್ಕುಗಳ ಉಲ್ಲಂಘನೆ ಉಂಟಾಗಿದೆ.
ಜನವರಿ 2007ರ ಬಿಬಿಸಿ ವರ್ಲ್ಡ್ ಸರ್ವೀಸ್ 25 ದೇಶಗಳಲ್ಲಿನ 26,000ಕ್ಕೂ ಹೆಚ್ಚು ಜನರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಜಾಗತಿಕ ಜನಸಂಖ್ಯೆಯ 73% ಜನರು ಇರಾಕ್ ಯುದ್ಧವನ್ನು ಅಮೇರಿಕ ನಿರ್ವಹಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೇರಿಕಾ ಸಂಯುಕ್ತ ಸಂಸ್ಥಾನ ತನ್ನ ಸೇನೆಯನ್ನು ಇರಾಕಿನಿಂದ ವಾಪಸ್ ಕರೆಸುತ್ತದೆ ಎಂದು ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಜನ ನಂಬಿದ್ದರು ಎಂದು 2007ರ ಸಪ್ಟೆಂಬರಿನಲ್ಲಿ ಬಿಬಿಸಿ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದಿದೆ. 2004 , ಎಪ್ರಿಲ್ ಯುಎಸ್ಎ ಟುಡೇ/ಸಿಎನ್ಎನ್/ಗಾಲ್ಅಪ್ ಸಮೀಕ್ಷೆಯ ಪ್ರಕಾರ, ಕೇವಲ ಮೂರನೇ ಒಂದು ಭಾಗದಷ್ಟು ಇರಾಕಿ ಜನ ಹೀಗೆ ನಂಬಿದ್ದಾರೆ, "ಅಮೇರಿಕನ್ನರ ಆಕ್ರಮಣ ಅವರ ದೇಶಕ್ಕೆ ಕೆಟ್ಟದಕ್ಕಿಂತ ಒಳ್ಳೆಯದನ್ನು ಮಾಡುತ್ತಿದೆ ಮತ್ತು ಹೆಚ್ಚಿನ ಬೆಂಬಲ ತಕ್ಷಣ ಮಿಲಿಟರಿಯನ್ನು ಹಿಂತೆಗೆದುಕೊಂಡರೆ ಅವರು ಇನ್ನೂ ಅಪಾಯಕ್ಕೀಡಾಗುತ್ತಾರೆ ಎಂದು ಅವರು ಹೆದರಿದರು." 2006ರಲ್ಲಿ ಯು.ಕೆ. ಮತ್ತು ಕೆನಡದ ಹೆಚ್ಚಿನ ಜನರು ಇರಾಕಿನಲ್ಲಿನ ಯುದ್ಧ "ನ್ಯಾಯವಾಗಿಲ್ಲ" ಎಂದು ಹೇಳಿದ್ದು ಕಂಡುಬಂದಿದೆ ಮತ್ತು ಯು.ಕೆ. ಸರ್ಕಾರ ಇರಾಕಿನಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ಕಾರ್ಯಾಚರಣೆಗೆ ಅನುಮೋದನೆ ನೀಡಿದ್ದನ್ನು ಯು.ಕೆ.ಯಲ್ಲಿ ಟೀಕಿಸಲಾಗಿತ್ತು. ಅರಬ್ ಅಮೇರಿಕಾದ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಇರಾಕಿನ ಆಕ್ರಮಣದ ನಾಲ್ಕು ವರ್ಷಗಳ ನಂತರ, ಈಜಿಪ್ಟಿನ 83% ಜನರು ಇರಾಕಿನಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ಧೋರಣೆಯ ಬಗ್ಗೆ ಋಣಾತ್ಮಕ ದೃಷ್ಟಿಕೋನವನ್ನು ಹೊಂದಿದ್ದರು; ಸೌದಿ ಅರೇಬಿಯಾದ 68% ಜನರು ಋಣಾತ್ಮಕ ಧೋರಣೆಯನ್ನು ಹೊಂದಿದ್ದರು; ಜೋರ್ಡಾನ್ ಜನಸಂಖ್ಯೆಯ 96% ಜನರು ಋಣಾತ್ಮಕ ಧೋರಣೆಯನ್ನು ಹೊಂದಿದ್ದರು; ಯುನೈಟೆಡ್ ಅರಬ್ ಎಮಿರೆಟ್ಸ್ ಜನಸಂಖ್ಯೆಯ 70% ಜನರು ಮತ್ತು ಲೆಬನೀಸ್ ಜನಸಂಖ್ಯೆಯ 76% ಭಾಗ ಸಹ ಋಣಾತ್ಮಕ ದೃಷ್ಟಿಯನ್ನು ಹೊಂದಿರುವುದಾಗಿ ಹೇಳಿತು. 2006ರಲ್ಲಿ ದಿ ಪಿವ್ ಗ್ಲೋಬಲ್ ಅಟ್ಟಿಟ್ಯೂಡ್ಸ್ ಪ್ರಾಜೆಕ್ಟ್ ಹೀಗೆ ವರದಿ ಮಾಡಿದೆ, ಹುಸೇನ್ರನ್ನು ಅಧಿಕಾರದಿಂದ ಇಳಿಸುವ ಮತ್ತು ಇರಾಕ್ ಯುದ್ಧದ ಮೊದಲು ಪ್ರಪಂಚ ಸುರಕ್ಷಿತವಾಗಿತ್ತು ಎಂದು ನೆದರ್ಲ್ಯಾಂಡ್ಸ್, ಜರ್ಮನಿ, ಜೊರ್ಡಾನ್, ಫ್ರಾನ್ಸ್, ಲೆಬನಾನ್, ಚೀನಾ, ಸ್ಪೈನ್, ಇಂಡೋನೇಷಿಯ, ಟರ್ಕಿ, ಪಾಕಿಸ್ತಾನ, ಮತ್ತು ಮೊರೊಕೊಗಳಲ್ಲಿನ ಹೆಚ್ಚಿನ ಜನರು ನಂಬಿದ್ದರು. ಹುಸೇನ್ರ ಹೊರತಾಗಿ ವಿಶ್ವ ಹೆಚ್ಚು ಸುರಕ್ಷಿತವಾಗಿದೆ ಎಂದು ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಭಾರತದಲ್ಲಿ ಅನೇಕರು ನಂಬಿದರು.
This article is outdated.(September 2010) |
ಹೆಚ್ಚಿನ ಇರಾಕಿ ಜನರು ಅಮೇರಿಕಾ ಸಂಯುಕ್ತ ಸಂಸ್ಥಾನ ದಾಳಿಯನ್ನು ವಿರೋಧಿಸಿರುವುದಾಗಿ 2005ರಿಂದ 2007ರವರೆಗಿನ ಸಮೀಕ್ಷೆಗಳು ತೋರಿಸಿವೆ.
ಇರಾಕ್ ಯುದ್ಧ "ಭಯೋತ್ಪಾದಕತೆಯ ಮೇಲಿನ ಯುದ್ಧದ ಕೇಂದ್ರಬಿಂದುವಾಗಿದೆ" ಎಂದು ಹಿಂದಿನ ಅಧ್ಯಕ್ಷ ಜಾರ್ಜ್ ಡಬ್ಲು. ಬುಶ್ ಒಂದೇ ಸಮನೆ ಉಲ್ಲೇಖಿಸಿದ್ದಾರೆ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನ ಇರಾಕಿನ ಹೊರಬಂದರೆ, "ಭಯೋತ್ಪಾದಕರು ಇಲ್ಲಿಗೆ ನಮ್ಮನ್ನು ಹಿಂಬಾಲಿಸುತ್ತಾರೆ" ಎಂದು ಅವರು ತರ್ಕಿಸಿದ್ದಾರೆ. ಯುದ್ಧದ ಇತರ ಪ್ರತಿಪಾದಕರು ಈ ಸಮರ್ಥನೆಗೆ ಕ್ರಮವಾಗಿ ಧ್ವನಿಗೂಡಿಸಿದರು. ಈ ಬಿಕ್ಕಟ್ಟು ಹೆಚ್ಚಿದಂತೆ, ಇರಾಕ್ ಮತ್ತು ವಿರೋಧಿ-ಯುಎಸ್ ಭಯೋತ್ಪಾದನೆಯ ವಿರುದ್ಧದ ಹೋರಾಟದ ನಡುವಿನ ಸಂಬಂಧದ ಬಗ್ಗೆ ಅಮೇರಿಕಾ ಸಂಯುಕ್ತ ಸಂಸ್ಥಾನ ಕಾಂಗ್ರೆಸ್ ಸದಸ್ಯರು, ಅಮೇರಿಕಾ ಸಂಯುಕ್ತ ಸಂಸ್ಥಾನ ಜನತೆ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನ ಸೇನೆಗಳೂ ಸಹ ಪ್ರಶ್ನಿಸಲು ಪ್ರಾರಂಭಿಸಿದರು. ನಿರ್ದಿಷ್ಟವಾಗಿ, ಸುದ್ಧಿ ಸಂಗ್ರಾಹಕ ಪರಿಣತರ ನಡುವೆ ಒಂದು ಹೊಂದಾಣಿಕೆ ವಿಕಾಸಗೊಂಡಿತು ಇದರಿಂದ ಇರಾಕ್ ಯುದ್ಧ ಭಯೋತ್ಪಾದನೆಯನ್ನು ಹೆಚ್ಚಿಸಿತು. ಭಯೋತ್ಪಾದನಾ ಪ್ರತಿರೋಧ ನಿಪುಣ ರೋಹನ್ ಗುಣರತ್ನ ಇರಾಕಿನ ಆಕ್ರಮಣ ಒಂದು "ಅವಶ್ಯ ಪ್ರಮಾದ" ದಂತೆ ಎಂದು ಬಾರಿಬಾರಿಗೆ ಹೇಳಿದ್ದಾರೆ. ಇರಾಕಿನ ಉದ್ಯೋಗ ಜಿಹಾದಿಗಳಿಗೆ "ಒಂದು ಪರಾಕ್ರಮಿ ಜಾಗತಿಕ ಹೊಸ ಸೇರ್ಪಡೆ ನಿಮಿತ್ತ" ಆಗಿದೆ ಮತ್ತು ಅದು ಅಲ್-ಕೈದಾ ಮತ್ತು ಅಲ್ಲಿ "ವಿರುದ್ಧವಾಗಿ ಸ್ಫೂರ್ತಿಪಡೆದ ದಂಗೆಕೋರರ ಹಿಂಸಾಚಾರ" ಎಂದು 2004ರಲ್ಲಿ ಲಂಡನ್ನಿನ ಸಂಪ್ರದಾಯಬದ್ಧ ಯುದ್ಧತಂತ್ರ ಅಧ್ಯಯನಗಳ ಅಂತರಾಷ್ಟ್ರೀಯ ಸಂಸ್ಥೆ ತೀರ್ಮಾನಿಸಿದೆ. ಇರಾಕಿನ ಯುದ್ಧ ಭಯೋತ್ಪಾದಕರ ಒಂದು ಹೊಸ ಪೀಳಿಗೆಯನ್ನು ಬೆಳೆಸಲು ಆಧಾರವಾಗಿದೆ ಎಂದು 2005, ಜನವರಿಯ ವರದಿಯಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ನ್ಯಾಷನಲ್ ಇಂಟೆಲಿಜೆನ್ಸ್ ಕೌನ್ಸಿಲ್ ತೀರ್ಮಾನಿಸಿದೆ; ದೇಶಗಳ ನಡುವಿನ ಬೆದರಿಕೆಗಳಿಗೆ ರಾಷ್ಟ್ರೀಯ ಇಂಟೆಲಿಜೆನ್ಸ್ ಅಧಿಕಾರಿ ಡೇವಿಡ್ ಬಿ. ಲಾ ವರದಿ ಹೀಗೆ ನಿರ್ಣಯಿಸಿದೆ ಹೇಳಿದ್ದಾರೆ, ಇರಾಕಿನಲ್ಲಿನ ಯುದ್ಧ "ಒಂದು ಮೂಲ ತರಬೇತಿ, ಮೂಲ ನೇಮಕಾತಿಗಳ ಜೊತೆ ಆತಂಕವಾದಿಗಳನ್ನು ಒದಗಿಸಿದೆ ಅವರಿಗೆ ತಾಂತ್ರಿಕ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಒಂದು ಒಳ್ಳೆಯ ಅವಕಾಶ. ಆದರೂ ಸಹ, ಭವಿಷ್ಯ ಘಟನಾವಳಿಗಳಲ್ಲಿ ಕಾಲಾನಂತರ ಸಾಯದೇ ಇರುವ ಕೆಲವು ಜೆಹಾದಿಗಳು ಅಲ್ಲಿರುವ ಸಂಭವವಿದೆ, ಅಂದರೆ, ಮನೆ ಎಲ್ಲಿದ್ದರೂ ಮನೆಗೆ ಹೋಗು, ಮತ್ತು ಆದ್ದರಿಂದ ವಿವಿಧ ಇತರ ದೇಶಗಳಲ್ಲಿ ಚೆಲ್ಲಾಪಿಲ್ಲಿಯಾದರು." ಈ ಸಮಯದಲ್ಲಿ ಇರಾಕ್ ಅಂತರಾಷ್ಟ್ರೀಯ ಭಯೋತ್ಪಾದನಾ ಚಟುವಟಿಕೆಯ ಅಯಸ್ಕಾಂತವಾಗಿದೆ" ಎಂದು ಕೌನ್ಸಿಲ್ನ ಅಧ್ಯಕ್ಷ ರಾಬರ್ಟ್ ಎಲ್. ಹಚಿಂಗ್ಸ್ ಹೇಳಿದ್ದಾರೆ. ಎಲ್ಲ 16 ಅಮೇರಿಕಾ ಸಂಯುಕ್ತ ಸಂಸ್ಥಾನ ಇಂಟೆಲಿಜೆನ್ಸ್ ಏಜೆನ್ಸಿಗಳ ತೀರ್ಪುಗಳನ್ನು ಪರಿಗಣಿಸಿ ಮತ್ತು 2006ರ ನ್ಯಾಷನಲ್ ಇಂಟೆಲಿಜೆನ್ಸ್ ಎಸ್ಟಿಮೇಟ್ ಹೀಗೆ ತೀರ್ಮಾನಿಸುತ್ತದೆ, "ಇರಾಕ್ ಸಂಘರ್ಷ ಜೆಹಾದಿಗಳ 'ಆಕರ್ಷಣೆಯ ಕೇಂದ್ರವಾಗಿದೆ', ಮುಸ್ಲಿಂ ಪ್ರಪಂಚದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ಒಳಗೊಳ್ಳುವಿಕೆಯ ಆಳವಾದ ಹಗೆತನದ ಬಿತ್ತುವಿಕೆ ಮತ್ತು ಜಾಗತಿಕ ಜೆಹಾದಿಗಳ ಚಳುವಳಿಗೆ ಬೆಂಬಲಿಗರನ್ನು ಬೆಳೆಸುತ್ತದೆ."
ಕೆಲವು ಮಿಲಿಟರಿ ಇಂಟೆಲಿಜೆನ್ಸ್ ವಿಶ್ಲೇಷಕರು ಯಾವುದೇ ನಿಶ್ಚಿತ ಪುರಾವೆಗಳಿಲ್ಲ ಎಂದು ತೀರ್ಮಾನಿಸಿದರೂ, ಇರಾನ್ ತರಬೇತಿ, ಶಸ್ತ್ರಾಸ್ತ್ರಗಳು, ಹಣ ಮತ್ತು ಇಂಟಲಿಜೆನ್ಸ್ಗಳನ್ನು ಇರಾಕಿನ ಷಿಯಾ ಪಂಥಿ ದಂಗೆಕೋರರಿಗೆ ಒದಗಿಸಲಾಗಿದೆ ಮತ್ತು ಇರಾನಿನ ಸುಮಾರು 150 ಇಂಟಲಿಜೆನ್ಸ್ ಏಜೆಂಟರು, ಜೊತೆಗೆ ಇರಾನಿನ ರೆವಲ್ಯೂಷನರಿ ಗಾರ್ಡ್ಗಳು ಯಾವುದೇ ಸಮಯದಲ್ಲಾದರೂ ಇರಾಕಿನಲ್ಲಿ ಸಕ್ರಿಯರಾಗಿದ್ದರು ಎಂದು ಹೇಳಲಾಗಿದೆ. ಇರಾನಿನ ಕುದ್ಸ್ ಸೇನೆಯ ಸದಸ್ಯರು ಇರಾನಿನ ಕ್ರಾಂತಿಕಾರಿ ಗಾರ್ಡ್ಗಳು ಸ್ಫೋಟಕಗಳ ತಾಂತ್ರಿಕತೆಯಲ್ಲಿ ಕಝಾಲಿ ಟೆರರ್ ನೆಟ್ವರ್ಕ್ನಲ್ಲಿ ತರಬೇತಿ ಪಡೆದ ಸದಸ್ಯರನ್ನು ಹೊಂದಲು ಯೋಚಿಸಿತು ಮತ್ತು ಶಸ್ತ್ರಗಳು, ಯುದ್ಧದಲ್ಲಿ ಉಪಯೋಗಿಸುವ ಉಪಕರಣಗಳು, ಮಿಲಿಟರಿ ಸಲಹೆಗಾರರನ್ನೂ ಸಹ ಒದಗಿಸಲಾಯಿತು. ದಂಗೆಕೋರರು ಉಪಯೋಗಿಸಿದ ಹಲವಾರು ಸ್ಫೋಟಕ ವಸ್ತುಗಳು, ಸುಧಾರಿತ ಸ್ಫೋಟಕಗಳು (ಆಯ್ಇಡಿಗಳು) ಮತ್ತು ಬೇಧನಾ ಕವಚಗಳನ್ನು (ಇಎಫ್ಪಿಗಳು) ಇರಾನಿಯರು ತಯಾರಿಸಿದ್ದಾರೆ ಅಥವಾ ವಿನ್ಯಾಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. 2008, ಜನವರಿಯಲ್ಲಿ ಇರಾನಿಯರು ತಯಾರಿಸಿದ ಶಸ್ತ್ರಾಸ್ತ್ರಗಳನ್ನು ಗುರುತಿಸಲು ಮಲ್ಟಿ-ನ್ಯಾಷನಲ್ ಫೋರ್ಸ್ - ಇರಾಕ್ (ಎಮ್ಎನ್ಎಫ್ಆಯ್) ಟಾಸ್ಕ್ ಫೋರ್ಸ್ ಟ್ರಾಯ್ ಅನ್ನು ನೇಮಿಸಿತು. 2008, ಜುಲೈನಲ್ಲಿ ಇದು ವರದಿಯನ್ನು ಕೊಟ್ಟಿತು. 4,600 ಶಸ್ತ್ರಾಸ್ತ್ರಗಳ ಗೋಪ್ಯಸ್ಥಳಗಳು ಪತ್ತೆಯಾದವು, ಕೇವಲ 98 ಶಸ್ತ್ರಾಸ್ತ್ರಗಳು ಕೇವಲ ಒಂದಾದರೂ ಇರಾನಿನವರು ತಯಾರಿಸಿದ ಶಸ್ತ್ರಾಸ್ತ್ರವನ್ನು ಒಳಗೊಂಡಿತ್ತು ಇವು ಸ್ವಾಧೀನ ಪಡಿಸಿಕೊಂಡ ಶಸ್ತ್ರಾಸ್ತ್ರಗಳ ಒಟ್ಟೂ ಸಂಖ್ಯೆಯ ಒಂದೂವರೆ ಪ್ರತಿಶತಕ್ಕಿಂತ ಕಡಿಮೆಯಾಗಿದ್ದವು. ಇರಾನಿಯರು ತಯಾರಿಸಿದ ಯಾವುದೇ ಶಸ್ತ್ರಾಸ್ತ್ರಗಳು ಕರ್ಬಲ ಅಥವಾ ಬಸ್ರದಲ್ಲಿ ಪತ್ತೆಯಾಗಲಿಲ್ಲ ಮತ್ತು ಕಂಡುಬಂದ 350 ಬೇಧನಾ ಆಯುಧ ಗಳಲ್ಲಿ (ಇಎಫ್ಪಿಗಳು) ಯಾವುದೂ ಇರಾನೀ ಮೂಲದ್ದಾಗಿರಲಿಲ್ಲ. ಆದರೂ ಇರಾನ್ ದಂಗೆಕೋರರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಎಂದು ಆರೋಪಿಸಲಾಗಿದೆ, "ಇರಾಕಿನಲ್ಲಿ ಕಂಡುಬಂದ ಯುದ್ಧದಲ್ಲಿ ಉಪಯೋಗಿಸುವ ಇರಾನಿನ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿರುವ ಸಂಭವವಿದೆ" ಎಂದು ಇರಾನಿನ ಶಸ್ತ್ರಾಸ್ತ್ರಗಳ ಬಗ್ಗೆ ಯುಎಸ್ನ ಅಧಿಕೃತ ಹೇಳಿಕೆಗಳನ್ನು ಎಮ್ಎನ್ಎಫ್ಆಯ್ ವರದಿ ಟೀಕಿಸಿದೆ. ಹೆಸರು ತಿಳಿಯದ ಎರಡು ಅಮೇರಿಕಾ ಸಂಯುಕ್ತ ಸಂಸ್ಥಾನ ಅಧಿಕಾರಿಗಳ ಪ್ರಕಾರ, ಕರ್ಬಲ ಪ್ರಾಂತೀಯ ಕೇಂದ್ರ ಕಾರ್ಯಾಲಯದ ದಾಳಿಯ ಸಾಧ್ಯತೆಗಳನ್ನು ಪೆಂಟಗಾನ್ ಪರೀಕ್ಷಿಸುತ್ತಿದೆ, ಇದರಲ್ಲಿ ಅಮೇರಿಕಾದ ಮೂಲದ ಒಳಸೇರಲು ದಂಗೆಕೋರರು ಐದು ಅಮೇರಿಕಾ ಸಂಯುಕ್ತ ಸಂಸ್ಥಾನ ಸೈನಿಕರನ್ನು ಕೊಂದರು, ಮೂವರು ಗಾಯಗೊಂಡರು, ಮತ್ತು ಮೂರು ಹಮ್ವಿಗಳನ್ನು ನಾಶಪಡಿಸುವಲ್ಲಿ ಇರಾನಿನವರು ಬೆಂಬಲಿಸಿದ್ದರು. ಇರಾಕಿನ ಪ್ರಧಾನ ಮಂತ್ರಿಗಳಾದ ನೌರಿ-ಅಲ್-ಮಲಿಕಿ ಅವರು ಒಂದು ಭಾಷಣದಲ್ಲಿ ಹೀಗೆ ಹೇಳಿದ್ದಾರೆ,31 January 2007 ಇರಾಕಿನಲ್ಲಿನ ಸಮ್ಮಿಶ್ರ ಸೇನೆಯ ವಿರುದ್ಧದ ದಾಳಿಗೆ ಇರಾನ್ ಅನುಮೋದಿಸಿತ್ತು ಮತ್ತು ಉತ್ತರ ಇರಾಕಿ ನಗರ ಇರ್ಬಿಲ್11 Januaryನಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಮೂಲಕ ಇರಾನಿನ ಐದು ಅಧಿಕಾರಿಗಳನ್ನು ಸೆರೆಹಿಡಿಯುವ ಸಂಬಂಧವಾಗಿ ದಾಳಿಯು ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ಸ್ ಕಾರ್ಪ್ಸ್ನ ಕೊಡ್ಸ್ ಸೇನೆಯ ಮೂಲಕ ಅಪರಾಧ ಮಾಡಿದ್ದಾಗಿರಬಹುದು ಎಂದು ಕೆಲವು ಇರಾಕಿ ಜನರು ಅನುಮಾನಿಸುತ್ತಾರೆ.
ಅಮೇರಿಕಾ ಸಂಯುಕ್ತ ಸಂಸ್ಥಾನ ಕುರಿತಾದದ್ದು:
ಸಾಮಾನ್ಯ
| ಒಳಸಂಚುಗಳು:
ಪಟ್ಟಿಗಳು:
2003–ಇಲ್ಲಿಯವರೆಗಿನ ಯುದ್ಧಗಳ ಪಟ್ಟಿ ಟೆಂಪ್ಲೇಟು:Portal box |
This article uses material from the Wikipedia ಕನ್ನಡ article ಇರಾಕ್ ಯುದ್ಧ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.