ಸ್ವರ್ಣಯುಗ (ಸುವರ್ಣಯುಗ) ಪದವು ಗ್ರೀಕ್ ಪುರಾಣಗಳಿಂದ ಬರುತ್ತದೆ, ವಿಶೇಷವಾಗಿ ಹೆಸಿಯಡ್ನ ಕೃತಿಯಿಂದ.
ಇದು ಐದು ಯುಗಗಳಾದ್ಯಂತ ಜನರ ಸ್ಥಿತಿಯ ಕಾಲಕ್ರಮೇಣವಾದ ಅವನತಿಯ ವಿವರಣೆಯ ಭಾಗವಾಗಿದೆ.
ಸ್ವರ್ಣಯುಗವು ಮೊದಲಿನಿಂದಲೂ ಇದ್ದ ಶಾಂತಿ, ಸಾಮರಸ್ಯ, ಸ್ಥಿರತೆ ಮತ್ತು ಸಮೃದ್ಧಿಯ ಅವಧಿಯನ್ನು ಸೂಚಿಸುತ್ತದೆ. ಈ ಯುಗದಲ್ಲಿ ಶಾಂತಿ ಮತ್ತು ಸಾಮರಸ್ಯಗಳು ಪ್ರಚಲಿತವಾಗಿದ್ದವು, ಜನರು ತಮ್ಮ ಆಹಾರಕ್ಕಾಗಿ ಕೆಲಸ ಮಾಡಬೇಕಾಗಿರಲಿಲ್ಲ, ಏಕೆಂದರೆ ಭೂಮಿಯು ಹೇರಳವಾಗಿ ಆಹಾರವನ್ನು ಒದಗಿಸುತ್ತಿತ್ತು. ಜನರು ಬಹಳ ವಯಸ್ಸಿನವರೆಗೆ ಯುವರೂಪದಿಂದಿಗೆ ಬಾಳುತ್ತಿದ್ದರು. ಅಂತಿಮವಾಗಿ ಶಾಂತಿಯಿಂದ ಸಾಯುತ್ತಿದ್ದರು, ಮತ್ತು ಅವರ ಆತ್ಮಗಳು ಸಂರಕ್ಷಕರಾಗಿ ಇರುತ್ತಿದ್ದವು.
ದಕ್ಷಿಣ ಏಷ್ಯಾ ಉಪಖಂಡದ ಧಾರ್ಮಿಕ ಮತ್ತು ತತ್ತ್ವಶಾಸ್ತ್ರೀಯ ಸಂಪ್ರದಾಯಗಳಲ್ಲಿ ಹೋಲುವ ಪರಿಕಲ್ಪನೆಗಳಿವೆ. ಉದಾಹರಣೆಗೆ, ವೈದಿಕ ಅಥವಾ ಪ್ರಾಚೀನ ಹಿಂದೂ ಸಂಸ್ಕೃತಿಯು ಇತಿಹಾಸವನ್ನು ಆವರ್ತಕವೆಂದು, ಸರತಿಯಾಗಿ ಬರುವ ಅಂಧಕಾರ ಮತ್ತು ಸುವರ್ಣ ಯುಗಗಳಿಂದ ಕೂಡಿದ್ದೆಂದು ಕಂಡಿತು. ಕಲಿ ಯುಗ (ಕಬ್ಬಿಣದ ಯುಗ), ದ್ವಾಪರ ಯುಗ (ಕಂಚಿನ ಯುಗ), ತ್ರೇತಾಯುಗ (ಬೆಳ್ಳಿ ಯುಗ) ಮತ್ತು ಸತ್ಯಯುಗಗಳು (ಸ್ವರ್ಣಯುಗ) ನಾಲ್ಕು ಗ್ರೀಕ್ ಯುಗಗಳಿಗೆ ಅನುರೂಪವಾಗಿವೆ. ಅದೇ ರೀತಿಯ ನಂಬಿಕೆಗಳು ಪ್ರಾಚೀನ ಮಧ್ಯಪ್ರಾಚ್ಯ ಮತ್ತು ಪ್ರಾಚೀನ ವಿಶ್ವದಾದ್ಯಂತ ಕೂಡ ಇವೆ.
This article uses material from the Wikipedia ಕನ್ನಡ article ಸ್ವರ್ಣಯುಗ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.