ಗುರು: ಹಿಂದೂ ಸಂಪ್ರದಾಯದ ಶಿಕ್ಷಕ

ಗುರು (ಸಂಸ್ಕೃತ:गुरु,ಅಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ, ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು (ಶಿಕ್ಷಕ) ಈ ಬುದ್ಧಿವಂತಿಕೆಗಳನ್ನು ಬಳಸುವ ವ್ಯಕ್ತಿಯಾಗಿರುತ್ತಾನೆ.

ಸಂಸ್ಕೃತದಲ್ಲಿ ಗು ಅಂದರೆ ಅಂಧಕಾರ ಮತ್ತು ರು ಅಂದರೆ ಬೆಳಕು. ಅರಿವಿನ ಅಭಿವೃದ್ಧಿಯ ಒಂದು ಮೂಲತತ್ವವಾಗಿ ಇದು ಕಾಲ್ಪನಿಕತೆಯಿಂದ ನಿಜಸ್ಥಿತಿಯ ನಿರ್ಮಾಣಕ್ಕೆ, ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಇದರ ಮೂಲರೂಪದಲ್ಲಿ ಈ ’ಗುರು’ ಪರಂಪರೆಯ ತತ್ವವು ಭೂಮಿಯಲ್ಲಿಯ ಒಂದು ದೈವಿಕ ಮೂರ್ತರೂಪ(ಸಾಧು) ಎಂದಾಗುತ್ತದೆ. ’ಗುರು’ ಭೂಮಿಯ ಮೇಲಿರುವ ಅತಿಭೌತಿಕ ಹಾಗೂ ಉನ್ನತ ಶಕ್ತಿಯ ಕುರಿತಾದ ಅತ್ಯುನ್ನತ ಜ್ಞಾನವನ್ನು ಹೊಂದಿರುವ ಒಬ್ಬ ವ್ಯಕ್ತಿ ಎಂಬ ಅರ್ಥವನ್ನು ನೀಡುತ್ತದೆ. ತಂದೆ ತಾಯಂದಿರು, ಶಿಕ್ಷಕರು, ಕೆಲವು ಜ್ಞಾನಾರ್ಜನೆಗೆ ಸಹಾಯಕವಾಗುವಂತಹ ವಸ್ತುಗಳು (ಉದಾಹರಣೆಗೆ ಪುಸ್ತಕ)ಮತ್ತು ಪ್ರತಿ ವ್ಯಕ್ತಿಯಲ್ಲಿರುವ ಬೌದ್ಧಿಕ ಶಿಸ್ತು ಈ ಮೂಲತತ್ವವನ್ನು ಪ್ರತಿಬಿಂಬಿಸುವ ಇತರ ಕೊಂಡಿಗಳು ಎಂದು ಹೇಳಬಹುದಾಗಿದೆ. ಧಾರ್ಮಿಕ ಅರ್ಥದಲ್ಲಿ ಈ ಶಬ್ದವನ್ನು ಸಾಮಾನ್ಯವಾಗಿ ಹಿಂದು ಮತ್ತು ಸಿಖ್ಖ್ ಧರ್ಮದಲ್ಲಿ ಹಾಗೂ ಇನ್ನಿತರ ಕೆಲವು ಭಾರತೀಯ ಧರ್ಮಗಳಲ್ಲಿ ಹಾಗೂ ಕೆಲವು ಹೊಸ ಧಾರ್ಮಿಕ ಪಂಥದ ಚಳುವಳಿಗಳಲ್ಲಿ ಈ ಶಬ್ದವನ್ನು ಬಳಸಲಾಗುತ್ತದೆ. ಒಬ್ಬ ಉತ್ತಮ ಗುರುವನ್ನು ಪಡೆದುಕೊಳ್ಳುವುದು ಆತ್ಮಜ್ಞಾನವನ್ನು ಹೊಂದಲು ಒಂದು ಪೂರ್ವ ತಯಾರಿ ಎಂದು ಹೇಳಲಾಗುತ್ತದೆ. ಗುರು ನಾನಕ್, ಸಿಖ್ ಧರ್ಮದ ಸ್ಥಾಪಕರು ಹೇಳಿದರು: "ಸಾವಿರಾರು ಸೂರ್ಯ ಚಂದ್ರ ಹುಟ್ಟಿ ಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಇದನ್ನು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ತೊಡೆದುಹಾಕಲ್ಪಡುತ್ತದೆ." ಸಂಸ್ಕೃತದಲ್ಲಿ "ಗುರು" ಎಂಬ ಪದವನ್ನು ಹಿಂದುತ್ವದಲ್ಲಿ ದೈವಸ್ವರೂಪಿ ವ್ಯಕ್ತಿತ್ವದ ಬೃಹಸ್ಪತಿಗೆ ಹೇಳಲಾಗುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಗುರು ಅಥವಾ ಬೃಹಸ್ಪತಿಯು ಕಲಿಕೆಯ ಮೇಲೆ ಪ್ರಭಾವ ಬೀರುತ್ತಾರೆ ಎಂದು ನಂಬಲಾಗಿದೆ.[clarification needed] ಆದಾಗ್ಯೂ, ಹಿಂದಿಯಂತಹ ಹಲವಾರು ಭಾರತೀಯ ಭಾಷೆಗಳಲ್ಲಿ, ಪಾಶ್ಚಾತ್ಯರ Thursday ಬೃಹಸ್ಪತಿವಾರ ಅಥವಾ ಗುರುವಾರ (ವಾರ ಅಂದರೆ ಸಪ್ತಾಹದ ಒಂದು ದಿನ) ಎಂದು ಕರೆಯಲ್ಪಡುತ್ತದೆ.[ಸೂಕ್ತ ಉಲ್ಲೇಖನ ಬೇಕು] ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ, "ಗುರು" ಎಂಬ ಶಬ್ದವು ವ್ಯಾಪಕವಾಗಿ "ಶಿಕ್ಷಕ" ಎಂಬ ಸಾಮಾನ್ಯ ಅರ್ಥದ ಜೊತೆ ಬಳಸಲ್ಪಡುತ್ತದೆ. ಪಾಶ್ಚಾತ್ಯ ಬಳಕೆಯಲ್ಲಿ, ಗುರು ಎಂಬ ಶಬ್ದದ ಅರ್ಥವು ಅನುಯಾಯಿಗಳನ್ನು ಹೊಂದುವ ಸಾಮರ್ಥ್ಯ ಹೊಂದಿರುವ ಯಾವುದೇ ವ್ಯಕ್ತಿಗೂ ಕೂಡಾ ಬಳಸಬಹುದಾಗಿದೆ. ಅವರು ತತ್ವಶಾಸ್ತ್ರದ ಅಥವಾ ಯಾವುದಾದರೂ ಧಾರ್ಮಿಕ ಪಂಥಕ್ಕೆ ಸೇರಬೇಕೆಂದೇನಿಲ್ಲ. ಇನ್ನೂ ಹೆಚ್ಚಾಗಿ ಪಾಶ್ಚಾತ್ಯರು, ಒಬ್ಬ ವ್ಯಕ್ತಿಯು ಪ್ರಾಪಂಚಿಕವಾದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಜ್ಞಾನ,ನೈಪುಣ್ಯತೆಯನ್ನು ಹೊಂದಿದ್ದರೂ ಕೂಡ ’ಗುರು’ ಎಂಬ ಶಬ್ದವನ್ನು ಬಳಸುತ್ತಾರೆ. ಉದಾಹರಣೆಗೆ ’ವ್ಯವಹಾರ’ ಪ್ರಪಂಚಕ್ಕೆ ಕುರಿತಾದ ಉತ್ತಮ ಜ್ಞಾನ ಹೊಂದಿರುವ ವ್ಯಕ್ತಿಯನ್ನು ’ಗುರು’ ಎಂದು ಕರೆಯಲಾಗುತ್ತದೆ.(eg:management Guru)

ಶಬ್ದ ವ್ಯುತ್ಪತ್ತಿ

'ಗುರು' ಶಬ್ದವು ಗು ಮತ್ತು ರು ಅಕ್ಷರಗಳಿಂದ ರಚಿತವಾಗಲ್ಪಟ್ಟಿದೆ. "ಗುಕಾರೋಂಧಕಾರತ್ವಾತ್ ರುಕಾರೋ ತನ್ನಿವಾರಕಃ" ’ಗು’ ಎಂದರೆ ’ಅಂಧಕಾರ’ ಎಂದರ್ಥವಿದೆ. ’ರು’ ಎಂದರೆ ’ನಾಶಪಡಿಸುವವನು’ ಅಂದರೆ ಅಂಧಕಾರವನ್ನು ನಾಶ ಪಡಿಸುವವನು ಎಂದಾಗುತ್ತದೆ. ಅದ್ವಯಾ-ತಾರಕಾ ಉಪನಿಷದ್ ಪ್ರಕಾರ (ಪದ್ಯಪಾದ 16)[ಸೂಕ್ತ ಉಲ್ಲೇಖನ ಬೇಕು] ಗುರು ಎಂದರೆ ಆತ್ಮಾಂಧಕಾರವನ್ನು ಆಧ್ಯಾತ್ಮಿಕ ಬೆಳಕಿನಿಂದ ತೊಲಗಿಸುವ ವ್ಯಕ್ತಿ ಎಂದು ನಿರೂಪಿಸಲ್ಪಡುತ್ತಾನೆ.

The syllable gu means shadows
The syllable ru, he who disperses them,
Because of the power to disperse darkness
the guru is thus named.

— Advayataraka Upanishad 14—18, verse 5

’ಗುರು’ ಎಂಬ ನಾಮಪದದ ಅರ್ಥವು ಸಂಸ್ಕೃತದಲ್ಲಿ ’ಶಿಕ್ಷಕ’ ಅಥವಾ ಆಧ್ಯಾತ್ಮ ಬೋಧಕ ಎಂದಾಗುತ್ತದೆ. ಹಾಗೆಯೇ ಸಂಸ್ಕೃತದಿಂದ ಈ ಶಬ್ದವನ್ನು ತೆಗೆದುಕೊಂಡಿರುವ ಹಿಂದಿ, ಮರಾಠಿ, ಬೆಂಗಾಲಿ, ಗುಜರಾತಿ, ಕನ್ನಡ, ತೆಲುಗು ಮತ್ತು ನೇಪಾಲಿ ಭಾಷೆಗಳಲ್ಲಿಯೂ ಕೂಡ ಇದೇ ಅರ್ಥವನ್ನು ಇದು ನೀಡುತ್ತದೆ. ಅಲ್ಲದೆ ಸಂಸ್ಕೃತದಿಂದ ಪ್ರಭಾವಿತವಾಗಿರುವ ಇಂಡೋನೇಷಿಯನ್ ಮತ್ತು ಮಲಾಯ್ಸ್ ಭಾಷೆಗಳಲ್ಲಿಯೂ ಕೂಡ ಇದೇ ಅರ್ಥವನ್ನು ಇದು ನೀಡುತ್ತದೆ. ಒಂದು ನಾಮಪದವಾಗಿ ಈ ಶಬ್ದವು ಅರಿವಿನ (ಜ್ಞಾನ) ವಿತರಕ ಎಂಬ ಅರ್ಥವನ್ನು ನೀಡುತ್ತದೆ. ಒಂದು ಗುಣವಾಚಕದಂತೆ, ಇದು ’ಸಮೃದ್ಧ ವ್ಯಕ್ತಿತ್ವದ’ ಅಥವಾ ’ಪ್ರಭಾವಿ ವ್ಯಕ್ತಿತ್ವದ’ ಅಂದರೆ "ಜ್ಞಾನದಿಂದ ಸಮೃದ್ಧವಾಗಿರುವ’ " ಸಮೃದ್ಧ ಬುದ್ಧಿವಂತಿಕೆ, "ಆಧ್ಯಾತ್ಮಿಕ ಜ್ಞಾನದಿಂದ ಸಮೃದ್ಧವಾಗಿರುವ", "ಪವಿತ್ರಗ್ರಂಥಗಳ ಅರಿತುಕೊಳ್ಳುವಿಕೆ, ಉತ್ತಮ ಬರವಣಿಗೆ ಹಾಗೂ ಉನ್ನತ ಅರಿವು ಇರುವ ಸಮೃದ್ಧ ವ್ಯಕ್ತಿತ್ವದ," ಅಥವಾ "ಜ್ಞಾನ ಸಂಪತ್ತಿನ ಸಮೃದ್ಧತೆ ಇರುವ" ಎಂಬ ಅರ್ಥಗಳನ್ನು ನೀಡುತ್ತದೆ. ಈ ಶಬ್ದವು ತನ್ನ ಮೂಲವನ್ನು ಸಂಸ್ಕೃತದ ಗ್ರಿ ಯಲ್ಲಿ ಹೊಂದಿದೆ ಮತ್ತು ಶಬ್ದ ಗುರ್‌ ಗೆ ಸಂಬಂಧವನ್ನು ಹೊಂದಿದೆ, ಅದರ ಅರ್ಥ "ಮೇಲೇರಿಸು, ಮೇಲಕ್ಕೆ ಎತ್ತು, ಅಥವಾ ಒಂದು ಪ್ರಯತ್ನವನ್ನು ಮಾಡು’ ಎಂಬುದಾಗಿದೆ. ಸಂಸ್ಕೃತದ ಗುರು ಶಬ್ದವು ಲ್ಯಾಟಿನ್‌ನ ಗ್ರೇವಿಸ್ ’ಭಾರ;ಪ್ರಮುಖ, ತೂಕವಾಗಿರುವ, ಗಂಭೀರ ಮತ್ತು ಗ್ರೀಕ್‌ನ ಬ್ಯಾರಸ್ ’ಭಾರ’ ಶಬ್ದಗಳ ಜೊತೆ ಸಜಾತೀಯ ಸಂಬಂಧವನ್ನು ಹೊಂದಿದೆ. ಈ ಮೂರು ಶಬ್ದಗಳು ಪ್ರೋಟೋ-ಇಂಡೋ-ಯುರೋಪಿಯನ್ ಮೂಲದ *gʷerə- ದಿಂದ, ವಿಶಿಷ್ಟವಾಗಿ *gʷr̥ə- ದ ಜೀರೋ-ಗ್ರೇಡ್‌ನಿಂದ ತೆಗೆದುಕೊಳ್ಳಲಾಗಿದೆ. "ಗುರು" ಶಬ್ದದ ಒಂದು ಸಾಂಪ್ರದಾಯಿಕ ಪದ ವ್ಯುತ್ಪತ್ತಿಯು ಅಂಧಕಾರ ಮತ್ತು ಬೆಳಕಿನ ನಡುವಣ ಅನ್ಯೋನ್ಯ ಕ್ರಿಯೆಯಾಗಿದೆ. ಗುರುವನ್ನು "ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸುವ ವ್ಯಕ್ತಿ" ಎಂಬುದಾಗಿ ನೋಡಲಾಗುತ್ತದೆ. ಕೆಲವು ವಿಷಯಗಳಲ್ಲಿ ಇದು ಈ ಅಂಶಗಳು ( ಗು (गु) ಮತ್ತು ರು (रु) ಅನುಕ್ರಮವಾಗಿ ಅಂಧಕಾರ ಮತ್ತು ಬೆಳಕುಗಳಿಗೆ ಸಮಾನವಾಗಿ ನಿಲ್ಲುತ್ತದೆ. ರೀಂಡರ್ ಕ್ರೆನೊನ್‌ಬೊರ್ಗ್ ಪ್ರಕಾರ‍ ’ಗುರು ’ ಶಬ್ದಕ್ಕೂ ಅಂಧಕಾರ ಬೆಳಕು ಮುಂತಾದವುಗಳಿಗೆ ಏನೂ ಸಂಬಂಧವಿಲ್ಲ. ಅವನು ಇದನ್ನು ಜನಪದೀಯ ಪದವ್ಯುತ್ಪತ್ತಿ ಎಂಬುದಾಗಿ ವರ್ಣಿಸುತ್ತಾನೆ. "ಗುರು" ಶಬ್ದದ ಮತ್ತೊಂದು ಪದವ್ಯುತ್ಪತ್ತಿಯು ’ಗುರು ಗೀತಾ’ದಲ್ಲಿ ಕಂಡುಬಂದಿತು, ಗು ಅನ್ನು "ಗುಣಗಳನ್ನು ಮೀರಿ" ಮತ್ತು ರು ಅನ್ನು "ಆಕಾರ ರಹಿತ" ಎಂಬುದಾಗಿ ಒಳಗೊಂಡಿತು, "ಗುಣಗಳನ್ನು ಅತಿಶಯಿಸುವ ಪೃವೃತ್ತಿಯನ್ನು ಅನುಗ್ರಹಿಸುವವನನ್ನು ಗುರು ಎಂದು ಹೇಳಬಹುದು" ಎಂಬುದಾಗಿ ಅದು ಹೇಳಿತು. "ಗು" ಮತ್ತು "ರು" ಗಳ ಅರ್ಥವನ್ನು ಮರೆಮಾಚುವ ಮತ್ತು ಇದರ ತೊಡೆದುಹಾಕುವಿಕೆಯನ್ನು ಸೂಚಿಸುವ ಸೂತ್ರಗಳಿಗೆ ಗುರುತಿಸಲ್ಪಟ್ಟಿದೆ. ಪಾಶ್ಚಾತ್ಯ ರಹಸ್ಯವಾದ ಮತ್ತು ಧಾರ್ಮಿಕತೆಯ ವಿಜ್ಞಾನ , ಪಿರೆ ರಿಫಾರ್ಡ್‌ನು "ಅತೀಂದ್ರಿಯ" ಮತ್ತು "ವೈಜ್ಞಾನಿಕ" ಪದವ್ಯುತ್ಪತ್ತಿಗಳ ನಡುವೆ ಒಂದು ಭೇದವನ್ನು ಮಾಡುತ್ತಾನೆ, ’ಗುರು’ ಶಬ್ದದ ಮೊದಲಿನ ಪದವ್ಯುತ್ಪತ್ತಿಯ ಉದಾಹರಣೆಯನ್ನು ಎತ್ತಿ ಹೇಳುತ್ತ, ಅದರಲ್ಲಿ ವ್ಯುತ್ಪತ್ತಿಯು ಗು ("ಅಂಧಕಾರ") ಮತ್ತು ರು (’ಹೊರ ಹಾಕು’) ಎಂಬುದಾಗಿ ತೋರಿಸಲ್ಪಟ್ಟಿದೆ; ನಂತರ ಅವನು ’ತೂಕವಾಗಿರುವ’ ಅರ್ಥದ ಜೊತೆ ಗುರುವಿನಿಂದ ನಿದರ್ಶನವನ್ನು ನೀಡುತ್ತಾನೆ.

ಹಿಂದುತ್ವದಲ್ಲಿ (ಹಿಂದೂ ಧರ್ಮದಲ್ಲಿ) ಗುರು

ತರ್ಕಾತೀತ ಜ್ಞಾನವನ್ನು (ವಿದ್ಯಾ ) ತಿಳಿಸಿಕೊಡುವ ಒಬ್ಬ ಗುರುವನ್ನು ಹುಡುಕುವ ಮಹತ್ವಕ್ಕೆ ಹಿಂದೂಮತದಲ್ಲಿ ಪ್ರಾಧಾನ್ಯ ನೀಡಲಾಗಿದೆ. ಮುಖ್ಯ ಹಿಂದೂ ಪಠ್ಯಗಳಲ್ಲಿ ಒಂದಾದ, ಭಗವದ್ಗೀತೆಯು ದೇವರ ರೂಪದಲ್ಲಿ ಕೃಷ್ಣ ಮತ್ತು ಅವನ ಗೆಳೆಯ ಅರ್ಜುನ, ಒಂದು ದೊಡ್ಡ ಯುದ್ಧಕ್ಕೂ ಮುಂಚಿನ ರಣರಂಗದಲ್ಲಿ ಕೃಷ್ಣನನ್ನು ತನ್ನ ಗುರು ಎಂದುಒಪ್ಪಿಕೊಳ್ಳುವ ಒಬ್ಬ ಕ್ಷತ್ರೀಯ ರಾಜಕುಮಾರರ ನಡುವಿನ ಸಂವಾದವಾಗಿದೆ. ಈ ಸಂವಾದವು ಕೇವಲ ಹಿಂದುತ್ವದ ಆದರ್ಶಗಳನ್ನು ಸ್ಥೂಲ ವಿವರಣೆ ನೀಡುವುದು ಮಾತ್ರವಲ್ಲ, ಆದರೆ ಅವುಗಳ ಸಂಬಂಧವು ಗುರು-ಶಿಷ್ಯ ಪರಂಪರೆಯ ಒಂದು ಮಾದರಿ ಎಂದು ಪರಿಗಣಿಸಲ್ಪಟ್ಟಿದೆ. ಗೀತೆಯಲ್ಲಿ, ಕೃಷ್ಣನು ಒಬ್ಬ ಗುರುವನ್ನು ಹುಡುಕುವ ಮಹತ್ವದ ಕುರಿತು ಅರ್ಜುನನ ಬಳಿ ಮಾತನಾಡುತ್ತಾನೆ:

Acquire the transcendental knowledge from a Self-realized master by humble reverence, by sincere inquiry, and by service. The wise ones who have realized the Truth will impart the Knowledge to you.

ಈ ಮೇಲೆ ನಮೂದಿಸಲ್ಪಟ್ಟ ವಾಕ್ಯದಲ್ಲಿ, ಗುರು ಶಬ್ದವು ಹೆಚ್ಚು ಅಥವಾ ಕಡಿಮೆ ಪರ್ಯಾಯವಾಗಿ ಸದ್ಗುರು (ಪದಶಃ : ನಿಜವಾದ ಶಿಕ್ಷಕ ) ಮತ್ತು ಸತ್ಪುರುಷ ಎಂಬ ಅರ್ಥದ ಜೊತೆ ಬಳಸಲ್ಪಡುತ್ತದೆ. ಸ್ವಾಮಿಯನ್ನೂ ಕೂಡ ಹೋಲಿಸಿ ನೋಡಿ. ಒಬ್ಬ ಗುರುವಿನ ಅನುಯಾಯಿಯನ್ನು ಒಬ್ಬ ಶಿಷ್ಯ ಅಥವಾ ಚೇಲಾ ಎಂದು ಕರೆಯಲಾಗುತ್ತದೆ. ಅನೇಕ ವೆಳೆ ಒಬ್ಬ ಗುರುವು ಆಶ್ರಮದಲ್ಲಿ ಅಥವಾ ಒಂದು ಗುರುಕುಲ ದಲ್ಲಿ (ಗುರುವಿನ ವಾಸಸ್ಥಾನ) ಅವನ ಅನುಯಾಯಿಗಳ ಜೊತೆ ವಾಸಿಸುತ್ತಾನೆ. ಗುರುವಿನ ಸಂದೇಶವನ್ನು ಕೊಂಡೊಯ್ಯುವ ಅನುಯಾಯಿಯಿಂದ ವ್ಯಾಪಿಸಲ್ಪಡುವ ಒಬ್ಬ ಗುರುವಿನ ವಂಶಾವಳಿಯು ಗುರು ಪರಂಪರೆ ಅಥವಾ ಅನುಯಾಯಿಗಳ (ಶಿಷ್ಯರ) ಉತ್ತರಾಧಿಕಾರ ಎಂದು ಕರೆಯಲ್ಪಡುತ್ತದೆ. ಬಿಎಪಿಎಸ್ ಸ್ವಾಮಿನಾರಾಯಣ್ ಸಂಸ್ಥೆಯಂತಹ ಕೆಲವು ಹಿಂದೂ ಧಾರ್ಮಿಕ ಪಂಥಗಳು, ದೇವರ ಸಾಕಾರ ರೂಪದಂತೆ ಬದಲಾಯಿಸಲ್ಪಟ್ಟ ಒಬ್ಬ ಜೀವಂತ ಗುರುವಿನ ಜೊತೆ ಒಂದು ವೈಯುಕ್ತಿಕ ಸಂಬಂಧವು ಮೋಕ್ಷವನ್ನು ಸಾಧಿಸುವುದಕ್ಕೆ ಬಹಳ ಪ್ರಮುಖವಾಗಿದೆ. ಗುರು ಅಂದರೆ ಅವನ ಅಥವಾ ಅವಳ ಅನುಯಾಯಿಗಳನ್ನು ಜೀವನ್ಮುಕ್ತವಾಗುವಂತೆ ಮಾಡಲು ನಿರ್ದೇಶಿಸುವ ಒಬ್ಬ ವ್ಯಕ್ತಿ, ಈ ರೀತಿಯಾಗಿ ವಿಮೋಚನೆಗೊಂಡ ಆತ್ಮವು ಅವನ ಅಥವಾ ಅವಳ ಜೀವಿತಾವಧಿಯಲ್ಲಿ ಮೋಕ್ಷವನ್ನು ಸಾಧಿಸಲು ಸಮರ್ಥವಾಗುತ್ತದೆ.

  • "ಗು- ಎಂದರೆ ಗುಪ್ತ

ರು- ಎಂದರೆ ರೂಪ" = ಸಂಕ್ಷಿಪ್ತ ರೂಪದಲ್ಲಿ ವಿವರಣೆ ಈ ರೀತಿ ಯಾಗಿದೆ" ಈ ವಿಶ್ವದಲ್ಲಿ ಪಂಚಭೂತಗಳಲ್ಲಿ ಅವ್ಯಕ್ತವಾಗಿರುವ ಆ ದೇವರ ಸಾಕ್ಷಾತ್ ರೂಪವನ್ನು ನಾವು ಕಾಣಲು ಗುರುವು ನಮಗೆ ಒಳ್ಳೆಯ ಮಾರ್ಗದರ್ಶನ ಮಾಡುವವನೆ ನಿಜವಾದ ಗುರುವು. ನಾವು ಆ ದೇವರನ್ನು ಕಾಣಲು ಗುರುವಿನ ಮಾರ್ಗದರ್ಶನವು ಅನಿವಾರ್ಯವಿದೆ.

ಗುರುವಿನ ಪಾತ್ರ

ಗುರುವಿನ ಪಾತ್ರವು ವೇದಾಂತ , ಯೋಗ, ತಂತ್ರ ಮತ್ತು ಭಕ್ತಿ ಸ್ಕೂಲ್‌ಗಳಂತಹ ಹಿಂದೂ ಸಂಪ್ರದಾಯದ ಶಬ್ದಗಳ ಮೂಲ ಅರ್ಥದಲ್ಲಿ ಮುಂದುವರೆಯುತ್ತ ಹೋಗುತ್ತದೆ. ವಾಸ್ತವವಾಗಿ, ಭೂಮಿಯ ಮೇಲೆ ಒಬ್ಬ ಗುರುವು ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ನಿರ್ದೇಶಕ ಎಂಬುದು ಈಗ ಹಿಂದೂಮತದ ಒಂದು ಸಾಮಾನ್ಯ ಭಾಗವಾಗಿದೆ. ಕೆಲವು ಹೆಚ್ಚು ಮೋಡಿಯ ಸಂಪ್ರದಾಯಗಳಲ್ಲಿ ಗುರುವು ತನ್ನ ವಿದ್ಯಾರ್ಥಿಗಳಲ್ಲಿ ಸುಪ್ತ ಆಧ್ಯಾತ್ಮಿಕ ಜ್ಞಾನಗಳನ್ನು ಜಾಗೃತಗೊಳಿಸುತ್ತಾನೆ ಎಂಬುದಾಗಿ ನಂಬಲಾಗಿದೆ. ಈ ರೀತಿಯಾಗಿ ಮಾಡುವ ಕ್ರಿಯೆಯನ್ನು ಶಕ್ತಿಪಥ ಎಂದು ಕರೆಯುತ್ತಾರೆ. ಹಿಂದೂಮತದಲ್ಲಿ, ಗುರುವು ಸಾಧುವಿನ ಗುಣಗಳನ್ನು ಹೊಂದಿರುವ ಗೌರವಾನ್ವಿತ ವ್ಯಕ್ತಿ, ಅವನ ಅಥವಾ ಅವಳ ಅನುಯಾಯಿಗಳ ಮನಸ್ಸನ್ನು ಬೆಳಗಿಸುವ, ಒಬ್ಬ ವ್ಯಕ್ತಿಯು ಯಾರಿಂದ ಮೊದಲಿನ ಮಂತ್ರವನ್ನು ತೆಗೆದುಕೊಳ್ಳುತ್ತಾನೋ ಅಂತಹ ಶಿಕ್ಷಕ, ಮತ್ತು ವಿಧಿವತ್ತಾದ ನಡವಳಿಕೆ ಮತ್ತು ಧಾರ್ಮಿಕ ಅನುಷ್ಥಾನಗಳಲ್ಲಿ ನಿರ್ದೇಶನವನ್ನು ನೀಡುವ ಒಬ್ಬ ವ್ಯಕ್ತಿ ಎಂಬುದಾಗಿ ಪರಿಗಣಿಸಲಾಗಿದೆ. ವಿಷ್ಣು ಸ್ಮೃತಿ ಮತ್ತು ಮನು ಸ್ಮೃತಿಗಳು ಶಿಕ್ಷಕ, ತಾಯಿ ಮತ್ತು ತಂದೆಯನ್ನು ಒಬ್ಬ ವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರುವ ಅತಿ ಹೆಚ್ಚು ಪೂಜನೀಯ ವ್ಯಕ್ತಿಗಳು ಎಂಬುದಾಗಿ ಪರಿಗಣಿಸುತ್ತವೆ. ಹಿಂದೂ ಸಂಪ್ರದಾಯದಲ್ಲಿನ ಕೆಲವು ಪ್ರಭಾವಶಾಲಿ ಗುರು ಯಾರೆಂದರೆ ಆದಿ ಶಂಕರಾಚಾರ್ಯ, ಶ್ರೀ ಚೈತನ್ಯ ಮಹಾಪ್ರಭು, ಮತ್ತು ಶ್ರೀ ರಾಮಕೃಷ್ಣ. 20ನೆಯ ಶತಮಾನದಲ್ಲಿ ಯೋಗದ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋದ ಇತರ ಗುರುಗಳ ಹೆಸರುಗಳು ಈ ಕೆಳಗಿನಂತಿವೆ: ಶ್ರೀ ಅರಬಿಂದೋ ಘೋಷ್, ಶ್ರೀ ರಮಣ ಮಹರ್ಷಿ, ಸತ್ಯ ಸಾಯಿ ಬಾಬಾ, ಶ್ರೀ ಚಂದ್ರಶೇಖರೇಂದ್ರ ಸರಸ್ವತಿ (ಕಾಂಚಿಯ ಋಷಿ), ಸ್ವಾಮಿ ಶಿವಾನಂದ, ಪರಮಹಂಸ ಯೋಗಾನಂದ, ಸ್ವಾಮಿ ಚಿನ್ಮಯಾನಂದ, ಸ್ವಾಮಿ ವಿವೇಕಾನಂದ ಮತ್ತು ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ. ಹಿಂದೂ ಗುರುಗಳ ಯಾದಿಯನ್ನೂ ನೋಡಿ. ಭಾರತೀಯ ಸಂಸ್ಕೃತಿಯಲ್ಲಿ, ಗುರು ಅಥವಾ ಒಬ್ಬ ಶಿಕ್ಷಕ (ಆಚಾರ್ಯ)ರ ಜೊತೆಯಿಲ್ಲದ ಒಬ್ಬ ವ್ಯಕ್ತಿಯನ್ನು ಒಮ್ಮೆ ಅನಾಥ ಅಥವಾ ಅದೃಷ್ಟಹೀನ ವ್ಯಕ್ತಿ ಎಂಬಂತೆ ನೋಡಲಾಯಿತು. ಸಂಸ್ಕೃತದಲ್ಲಿ ಅನಾಥ ಎಂಬ ಶಬ್ದವು "ಒಬ್ಬ ಗುರುವನ್ನು ಹೊಂದಿಲ್ಲದ ವ್ಯಕ್ತಿ" ಎಂಬುದನ್ನು ಸೂಚಿಸುತ್ತದೆ. ಆಚಾರ್ಯನು ಜ್ಞಾನ ವನ್ನು (knowledge) ಶಿಕ್ಷಣ ದ (ಬೋಧನೆ,instruction) ಮೂಲಕ ನೀಡುವವನಾಗಿದ್ದಾನೆ. ಒಬ್ಬ ಗುರುವು ದೀಕ್ಷೆವಿಧಿ ಯನ್ನೂ ನೀಡುತ್ತಾನೆ, ದೀಕ್ಷೆ ಅಂದರೆ ಒಬ್ಬ ಗುರುವಿನ ಕೃಪೆಯಿಂದ ಅವನ ಅನುಯಾಯಿಯ ಆಧ್ಯಾತ್ಮಿಕ ಜಾಗೃತಿ ಎಂಬುದಾಗಿದೆ. ದೀಕ್ಷೆಯು ಒಬ್ಬ ಗುರುವಿನ ದೈವಿಕ ಶಕ್ತಿಗಳನ್ನು ಅವನ ಅನುಯಾಯಿಗಳ ಮೇಲೆ ಅನುಗ್ರಹಿಸುವ ಒಂದು ಪದ್ಧತಿ ಎಂಬುದಾಗಿ ಪರಿಗಣಿಸಲಾಗಿದೆ, ಆ ದೀಕ್ಷೆಯ ಮೂಲಕ ಅನುಯಾಯಿಯು ದೈವಿಕತೆಯ ಮಾರ್ಗದಲ್ಲಿ ನಿರಂತರವಾಗಿ ಪ್ರಗತಿಯನ್ನು ಹೊಂದುತ್ತಾನೆ. "ಗುರು" ಎಂಬ ವಿಷಯವು ಅತಿ ಹಳೆಯದಾದ ಉಪನಿಷತ್ತುಗಳ ಕಾಲದಿಂದಲೂ ಇತ್ತು ಎಂಬುದಾಗಿ ಕಂಡುಹಿಡಿಯಲಾಗಿದೆ, ಅಲ್ಲಿ ಭೂಮಿಯ ಮೇಲಿನ ದೈವಿಕತೆಯ ಶಿಕ್ಷಕ ಎಂಬ ಆಲೋಚನೆಯು ಮೊದಲಿನ ಬ್ರಾಹ್ಮಣ ಸಂಘಟನೆಗಳಿಂದ ಅಭಿವ್ಯಕ್ತಿಗೊಳ್ಳಲ್ಪಟ್ಟಿತು. ಗುರು ಎಂಬ ಶಬ್ದವು ಒಬ್ಬ ಸೌಂದರ್ಯದ ಕಲೋಪಾಸಕ ಅಥವಾ ಸೌಂದರ್ಯದ ಬಗೆಗೆ ಶಿಕ್ಷಣವನ್ನು ನೀಡುವ ಒಬ್ಬ ವ್ಯಕ್ತಿ ಎಂಬ ಅರ್ಥವನ್ನೂ ನೀಡುತ್ತದೆ. ಗುರುಗಳು ತಮ್ಮ ಅಧಿಕರಕ್ಕಾಗಿ ಮೂರ್ತಿಪೂಜೆಗೆ ಮೊರೆಹೋಗುವುದಿಲ್ಲ, ಅಥವಾ ಅವರು ದೇವರ ಇಚ್ಛೆಯನ್ನು ಪ್ರಕಟಿಸುವ ಧರ್ಮೋಪದೇಶಕರೂ ಅಲ್ಲ. ವಾಸ್ತವವಾಗಿ, ಹಿಂದೂಮತದ ಕೆಲವು ಪ್ರಕಾರಗಳಲ್ಲಿ ಒಮ್ದು ತಿಳುವಳಿಕೆಯಿದೆ, ಅದೇನೆಂದರೆ ಭಕ್ತರು ಗುರು ಮತ್ತು ದೇವರ ಜೊತೆ ತೋರಿಸಲ್ಪಟ್ಟರೆ, ಮೊದಲಿಗೆ ಭಕ್ತನು ಗುರುವಿಗೆ ಗೌರವವನ್ನು ತೋರಿಸುತ್ತಾನೆ ಏಕೆಂದರೆ ಗುರುವು ಅವನನ್ನು ದೇವರೆಡೆಗೆ ಕರೆದೊಯ್ಯುವ ಒಂದು ಸಾಧನವಾಗಿದ್ದಾನೆ. ಕೆಲವು ಸಂಪ್ರದಾಯಗಳು "ಗುರು, ದೇವರು ಮತ್ತು ಸ್ವಯಂ" (ಸ್ವಯಂ ಅಂದರೆ ಆತ್ಮ, ವ್ಯಕ್ತಿಯಲ್ಲ) ಇವು ಒಂದೇ ಎಂಬುದಾಗಿ ಹೇಳುತ್ತವೆ. ಭಾರತದಲ್ಲಿನ ಸಾಧುಗಳು ಮತ್ತು ಕವಿಗಳು ಗುರು ಮತ್ತು ದೇವರ ನಡುವಣ ಸಂಬಂಧದ ಬಗೆಗೆ ಈ ಕೆಳಗಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ:

ಕಬೀರ

Guru and God both appear before me. To whom should I prostrate?
I bow before Guru who introduced God to me.

ಬ್ರಹ್ಮಾನಂದ

It is my great fortune that I found Satguru, all my doubts are removed.
I bow before Guru. Guru's glory is greater than God's.

ಬ್ರಹ್ಮಾನಂದ ಪುರಾಣ

Guru is Shiva without his three eyes,
Vishnu without his four arms
Brahma without his four heads.
He is parama Shiva himself in human form

ಆದಿ ಶಂಕರ ರು ಅವರ ಗುರುಸ್ತೋತ್ರಮ್ ಅಥವಾ ಗುರುವಿನ ಶ್ಲೋಕ ಗಳನ್ನು ಈ ಕೆಳಗಿನ ಸಂಸ್ಕೃತ ಶ್ಲೋಕ ಗಳ ಜೊತೆ ಪ್ರಾರಂಭಿಸಿದರು, ಅವುಗಳು ವ್ಯಾಪಕವಾಗಿ ಹಾಡಲ್ಪಟ್ಟ ಭಜನೆಗಳಾದವು:

Guru Brahma, Guru Vishnu, Guru Devo Maheshwara.

Guru Sakshath Parambrahma, Tasmai Shri Gurave Namaha. (tr: Guru is the creator Brahma, Guru is the preserver Vishnu, Guru is the destroyer Siva. Guru is directly the supreme spirit — I offer my salutations to this Guru.)

ಸ್ವಾಮಿ ತ್ರಿಪುರಾರಿ ಹೇಳುತ್ತಾರೆ:

At first we shall see Sri Guru as saksad-hari, representing Krsna [God] in general and in this sense non-different from him. Only after some time as we advance will we begin to see him as representing a particular potency of Krsna, and this will be relative to one's developing innate serving tendency. Different disciples may see the same guru as representing different potencies.

ಗುರು-ಶಿಷ್ಯ ಪರಂಪರೆ

ಗುರು-ಶಿಷ್ಯ ಪರಂಪರೆಯಲ್ಲಿ ತತ್ವಬೋಧನೆಗಳ ಪ್ರಸರಣೆ ಗುರು ವಿನಿಂದ (ಅಧ್ಯಾಪಕ, गुरू) ’śiṣya’ನಿಗೆ (ಅನುಯಾಯಿ, िशष्य) ಮಾಡಲಾಗುತ್ತದೆ. ಈ ಸಂಬಂಧದಲ್ಲಿ, ಸೂಕ್ಷ್ಮ ಹಾಗೂ ಆಧೂನಿಕೃತ ಜ್ಞಾನವನ್ನು ವಿಧ್ಯಾರ್ಥಿಗಳು ಗೌರವ, ಬದ್ಧತೆ, ಭಕ್ತಿ ಹಾಗೂ ವಿಧೇಯತೆಗಳಿಂದ ಹಸ್ತಾಂತರಿಸಕೊಳ್ಳುತ್ತಾರೆ ಹಾಗೂ ಪಡೆಯುತ್ತಾರೆ. ಕ್ರಮೇಣ ವಿಧ್ಯಾರ್ಥಿಯು ತನ್ನ ಗುರು ಹೊಂದಿರುವ ಜ್ಞಾನದ ಪ್ರವೀಣನಾಗುತ್ತಾನೆ. ಗುರು ಹಾಗೂ ಅನುಯಾಯಿಯ ಮಧ್ಯದ ಸಂವಾದನೆಯು ಹಿಂದುತ್ವದ ಪ್ರಾಥಮಿಕ ಅಂಗ, ಉಪನಿಷತ್ಗಳ ಮೌಖಿಕ ಪರಂಪರೆಗಳಲ್ಲಿ ಇವು ಸ್ಥಾಪಿತವಾಗಿವೆ (c. 2000 BC). ಉಪನಿಷತ್ ಎಂಬ ಪದವು ಸಂಸ್ಕೃತ ಪದಗಳಿಂದ ದೊರಕಿದೆ ಉಪ (ಸಮೀಪ), ನಿ (ಕೆಳಗೆ) ಹಾಗೂ ಷಧ (ಕುಳಿತುಕೊಳ್ಳುವುದು) - "ಸಮೀಪದಲ್ಲಿ ಕೆಳಗೆ ಕುಳಿತುಕೊಳ್ಳುವುದು" ಆಧ್ಯಾತ್ಮಿಕ ಅಧ್ಯಾಪಕರಿಂದ ಬೋಧನೆ ಪಡೆಯಲು. ಈ ಸಂಬಂಧಗಳ ಉದಾಹರಣೆಯಲ್ಲಿ ಮಹಾಭಾರತದ ಕೃಷ್ಣ ಹಾಗೂ ಅರ್ಜುನ (ಭಗವದ್ ಗೀತ) ಮತ್ತು ರಾಮಾಯಣದ ರಾಮಾ ಹಾಗೂ ಹನುಮಾನರ ಸಂಬಂಧ ಒಳಗೊಂಡಿದೆ. ಉಪನಿಷತ್ಗಳಲ್ಲಿ, ಗುರು-ಶಿಷ್ಯ ಸಂಬಂಧ ಹಲವು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ (ಅಮರತೆಯ ಬಗೆಗಿನ ಪ್ರೆಶ್ನೆಗಳ ಉತ್ತರವನ್ನು ಒಬ್ಬ ಗಂಡ ತನ್ನ ಹೆಂಡತಿಯನ್ನು ನೀಡುತ್ತಾನೆ); ಸಾವಿನ ಬಗ್ಗೆ ಏನೆಲ್ಲ ವರ್ಣನೆಗಳನ್ನು ಹೊಂದ ಒಬ್ಬ ಹದಿಹರೆಹದ ಯುವಕನಿಗೆ ಯಮ ಜ್ಞಾನವನ್ನು ನೀಡುವುದು, ಇತ್ಯಾದಿ) ಕೆಲವು ಬಾರಿ ಸನ್ಯಾಸಿಯರು ಸ್ತ್ರೀಯರಾಗಿರುತ್ತಾರೆ ಹಾಗೂ ಕೆಲವು ಬಾರಿ ಬೋಧನೆಗಳನ್ನು ರಾಜರು ಬೇಡಿಕೊಂಡು ಬರುತ್ತಾರೆ. ವೇದಗಳಲ್ಲಿ, ಬ್ರಹ್ಮವಿಧ್ಯ ಅಥವಾ ಬ್ರಾಹ್ಮಣನ ಜ್ಞಾನವನ್ನು ಗುರುವಿನಿಂದ ಶಿಷ್ಯನಿಗೆ ಮೌಖಿಕವಾಗಿ ಪ್ರಸಾರಿಸಲಾಗುತ್ತದೆ. ಸಿಖ್ ಎಂಬ ಪದವು ಸಂಸ್ಕೃತದ ಶಿಷ್ಯ ಎಂಬ ಪದದಿಂದ ಬಂದಿದೆ.

ಗುರುಗಳ ವಿಂಗಡನೆ

ದೆವಲ ಸ್ಮೃತಿಯ ಪ್ರಕಾರ ಹನ್ನೊಂದು ವಿಧಗಳ ಗುರುಗಳಿದ್ದಾರೆ ಮತ್ತು ನಾಮ ಚಿಂತಾಮಣಿಯ ಪ್ರಕಾರ ಹತ್ತು ವಿಧಗಳ ಗುರುಗಳಿದ್ದಾರೆ.

ನೆದರ್ಲ್ಯಾಂಡ್‌ನಲ್ಲಿ ನವ-ಹಿಂದು ಚಳುವಳಿಗಳ ಬಗೆಗಿನ ಪುಸ್ತಕದಲ್ಲಿ ಕ್ರೆನನ್‌ಬೊರ್ಗ್ ಭಾರತದಲ್ಲಿ ನಾಲ್ಕು ತರಹದ ಗುರುಗಳ ಬಗೆಗಳನ್ನು ಗುರುತಿಸಿದ್ದಾರೆ:[dubious ]

  1. ಹಿಂದುಗಳ ಉಚ್ಚ ಜಾತಿಆಧ್ಯಾತ್ಮಿಕ ಸಲಹೆಗಾರ , ಇವರು ಪಾರಂಪರಿಕ ಅನುಷ್ಠಾನಗಳನ್ನು ನಿರ್ವಹಿಸುತ್ತಾರೆ ಹಾಗೂ ದೇವಸ್ಥಾನಕ್ಕೆ ಕೂಡಿರುವುದಿಲ್ಲ (ಹೀಗಾಗಿ ಸನ್ಯಾಸಿ ಅಲ್ಲ);
  2. ಜ್ಞಾನೋದಯವಾದ ಅಧ್ಯಾಪಕರು ತಮ್ಮ ಜ್ಞಾನೋದಯದ ಗಳಿಕೆಯ ಅನುಭವದಿಂದ ಅಧಿಕಾರವನ್ನು ಪಡೆಯುತ್ತಾರೆ. ಈ ತರಹದವರು ಭಕ್ತಿ ಚಳುವಳಿಗಳಲ್ಲಿ ಹಾಗೂ ತಂತ್ರಗಳಲ್ಲಿ ಕಂಡುಬರುತ್ತಾರೆ ಮತ್ತು ಇವರ ಅನುಯಾಯಿಗಳು ಪ್ರೆಶ್ನೆ ಕೇಳದ ವಿಧೆಯತ್ತರಾಗಿರಬೇಕು ಹಾಗೂ ಇವರಿಗೆ ಪಶ್ಚಿಮ ಅನುಯಾಯಿಗಳು ಕೂಡ ಇರಬಹುದು. ಪಶ್ಚಿಮರು ಕೂಡ ಇವರಂತೆ ಗುರುಗಳಾಗಬಲ್ಲರು, ಉದಾ, ಆಂಡ್ರ್ವಿ ಕೊಹೆನ್ ಹಾಗೂ ಐಸಾಕ್ ಶಾಪಿರೊ.
  3. ಅವತಾರ , ದೇವರ ಜೀವಂತರೂಪ, ದೇವರ-ಹೋಲಿಕೆಯ ಅಥವಾ ದೇವರ ಒಂದು ವಾದ್ಯ ಎಂದು ತನನ್ನು ಪರಿಗಣಿಸುವ ಗುರು ಅಥವಾ ಇತರರಿಂದ ಹೀಗೆ ಪರಿಗಣಿಸಲ್ಪಟ್ಟ ಗುರು.
  4. "ಗುರು" ಪುಸ್ತಕದ ರೂಪದಲ್ಲಿ ಅಂದರೆ ಸಿಖ್ ಧರ್ಮದ ಗುರು ಗ್ರಂಥ ಸಾಹಿಬ್;

ಗುರುವಿನ ಗುಣಲಕ್ಷಣಗಳು

ಹಲವು ಹಿಂದು ಧಾರ್ಮಿಕ ಪಂಥಗಳ ಗುರುಗಳಿಗೆ ಸದ್ಗುರುಗಳು ಎಂದು ಉಲ್ಲೇಖಿಸಲಾಗುತ್ತದೆ. ಉಪನಿಷತ್‌ಗಳಲ್ಲಿ, ಸದ್ಗುರುವಿನ ಐದು ಚಿನ್ಹೆಗಳನ್ನು ಉಲ್ಲೇಖಿಸಲಾಗಿದೆ.

In the presence of the satguru; Knowledge flourishes (Gyana raksha); Sorrow diminishes (Dukha kshaya); Joy wells up without any reason (Sukha aavirbhava); Abundance dawns (Samriddhi); All talents manifest (Sarva samvardhan).

ಭರತಜ್ಞ ಜಾರ್ಜ್ ಫಿಯುರ್‌ಸ್ಟೈನ್ ಅನುಸಾರ, ಬೋಧಕರನ್ನು ಪಾರಂಪರಿಕವಾಗಿ ಅತಿ ಗೌರವಾದರದಿಂದ ಸತ್ಕರಿಸಲಾಗುತಿತ್ತು, ಅವರಿಗೆ ವಿಪರೀತ ಅಧಿಕಾರವನ್ನು ಸಮ್ಮತಿಸಲಾಗಿತ್ತು ಹಾಗೂ ಅವರನ್ನು ಅತೀಂದ್ರಿಯ ವಾಸ್ತವಿಕತೆ ಗೆ ಹೋಲಿಸಲಾಗಿತ್ತು. ಈ ದೈವೀಭಾವನೆಯನ್ನು ಭಾಗಷಃ ಪ್ರತಿಯಾಗಿ ಸಮಾವಾಗಿಸಲು ಕೆಲವು ಹಿಂದೂ ಶಾಲೆಗಳು ನಿಜವಾದ ಗುರು ಅತೀಂದ್ರಿಯ ಸ್ವಯಂ ಎಂದು ಪ್ರಾಧಾನ್ಯ ನೀಡಲು ಆರಂಭಿಸಿದರು ಎಂದು ಅವರು ಬರೆಯುತ್ತಾರೆ. ಶಿವ ಸಂಹಿತ, ಹತ ಯೋಗದ ಬಗ್ಗೆ ಒಂದು ಅಂತ್ಯ ಮಧ್ಯಕಾಲೀನ ಬರಹ, ಗುರುವನ್ನು ವಿಮೋಚನೆಗೆ ಅಗತ್ಯವಿರುವ ಅಂಶವೆಂದು ಪವಿತ್ರವಾಗಿ ಗುರುತಿಸಲಾಗಿದೆ ಮತ್ತು ಅನುಯಾಯಿ ಅವನ/ಅವಳ ಆಸ್ತಿ ಹಾಗೂ ಪಶುಸಂಪತ್ತನ್ನು ಗುರುವಿಗೆ ದಿಕ್ಶಾ (ತೊಡಗಿಸುವಿಕೆ) ಎಂದು ನೀಡಬೇಕಾಗಿ ಪ್ರತಿಪಾದನೆ ಇದೆ.

ವಿಷ್ಣು ಸ್ಮೃತಿ ಹಾಗೂ ಮನು ಸ್ಮೃತಿ ಆಚಾರ್ಯರನ್ನು (ಅಧ್ಯಾಪಕ/ಗುರು) ತಂದೆ ಹಾಗೂ ತಾಯಿಯರೊಂದಿಗೆ ಅತಿ ಗೌರವಾರ್ಹ ವ್ಯಕ್ತಿಗಳೆಂದು ಪರಿಗಣಿಸಿದೆ. ತಂದೆ ಹಾಗೂ ತಾಯಿ ಮೊದಲ "ಗುರು", ಆಧ್ಯಾತ್ಮಿಕ ಗುರು ಎರಡನೆಯವರು. ಪರಮ ದೇವರಾಗಿರುವುದನ್ನು ಗ್ರಹಿಸಿಕೊಳ್ಳಲು ಒಬ್ಬ ಮನುಷ್ಯ ತನ್ನ ಸ್ವಯಂ ಅನ್ನು ವೇದಗಳ ರಹಸ್ಯಗಳನ್ನು ಅರಿತ ಗುರುವಿನ ಎದಿರು ಅರ್ಪಣೆ ಮಾಡಬೇಕು ಎಂದು ಮುಂಡಕ್ ಉಪನಿಷತ್ ಹೇಳುತ್ತದೆ. ಗುರುವಿನ ಪಾತ್ರದ ಸಂಬಂಧ ಸ್ವಾಮಿ ಶಿವಾನಂದರು ಕೇಳುತ್ತಾರೆ: "ಮನುಷ್ಯನ ವಿಕಸನದಲ್ಲಿ ಗುರುವಿನ ಪಾತ್ರದ ಪವಿತ್ರ ಪ್ರಾಮುಖ್ಯತೆ ಹಾಗೂ ಉನ್ನತ ಮಹತ್ವವನ್ನು ನೀವು ಈಗ ತಿಳಿದುಕೊಂಡಿರಾ? ಹಿಂದಿನ ಭಾರತ ಗುರು-ತತ್ವದ ದೀಪವನ್ನು ಜಾಗರೂಕವಾಗಿ ಆರೈಕೆ ಮಾಡುತಿತ್ತು ಹಾಗೂ ಸಜೀವವಾಗಿಟ್ಟಿತು, ಇದು ಕಾರಣವಿಲ್ಲದೆ ಇರಲಿಲ್ಲ. ಹಾಗಾಗಿ ಇದು ಕಾರಣವಿಲ್ಲದೆ ಅಲ್ಲ, ಭಾರತ ವರುಷಗಳು ಉರುಳುತ್ತಿದಂತೆ, ಕಾಲ ಕಳೆಯುತ್ತಿದಂತೆ, ಪುರಾತನ ಗುರುವಿನ ಪರಿಕಲ್ಪನೆಯ ಸ್ಮಾರಕೋತ್ಸವ ನಡೆಸಿ, ಗೌರವಿಸಿ, ಶ್ರದ್ಧಾಂಜಲಿಯನ್ನು ಮತ್ತೆ ಮತ್ತೆ ನೀಡುತ್ತದೆ ಮತ್ತು ಇದರ ನಂಬಿಕೆ ಹಾಗೂ ನಿಷ್ಠೆಯನ್ನು ಪುನಃ-ದೃಢಪಡಿಸುತ್ತದೆ. ಏಕೆಂದರೆ, ದುಖ: ಹಾಗೂ ಸಾವಿನ ಗುಲಾಮಗಿರಿಯನ್ನು ವೈಯುಕ್ತಿಕವಾಗಿ ಮೀರಲು ಮತ್ತು ಸತ್ಯ ಜ್ಞಾನದ ಅನುಭವ ಪಡೆಯಲು ಒಬ್ಬ ವ್ಯಕ್ತಿಗೆ ಗುರು ಏಕ ಮಾತ್ರ ಭರವಸೆ ಎಂದು ಭಾರತೀಯನಿಗೆ ತಿಳಿದಿದೆ." ಕೆಲವು ಪವಿತ್ರಗ್ರಂಥಗಳು ಹಾಗೂ ಗುರುಗಳು ಸುಳ್ಳು ಅಧ್ಯಾಪಕರ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ ಮತ್ತು ಅಧ್ಯಾತ್ಮಕ ಶೋಧಕನು ತನ್ನ ಗುರುವನ್ನು ಸ್ವೀಕರಿಸುವ ಮುನ್ನ ಅವನನ್ನು ಪರೀಕ್ಷಿಸಬೇಕೆಂದು ಸಲಹೆ ಕೂಡ ನೀಡಿವೆ. ಕೆಲವರು ಸುಳ್ಳು ಹಾಗೂ ನಿಜವಾದ ಗುರುಗಳ ವ್ಯತ್ಯಾಸವನ್ನು ಕಂಡು ಹಿಂಡಿಯಲು ಮಾನದಂಡಗಳನ್ನು ನೀಡಿದ್ದಾರೆ: * ಅದ್ವಯ ತಾರಕ ಉಪನಿಷತ್ ಹೇಳುತ್ತದೆ ನಿಜವಾದ ಗುರು ವೇದಗಳನ್ನು ನಿಪುಣವಾಗಿ ಅರಿತಕೊಂಡಿರುತ್ತಾನೆ, ವಿಷ್ಣುವಿನ ಭಕ್ತನಾಗಿರುತ್ತಾನೆ, ಅಸೂಯೆಯಿಂದ ಮುಕ್ತನಾಗಿರುತ್ತಾನೆ, ಯೋಗವನ್ನು ಬಲ್ಲವನಾಗಿರುತ್ತಾನೆ ಹಾಗೂ ಅದರಲ್ಲಿ ತಲ್ಲೀನನಾಗಿರುತ್ತಾನೆ, ಮತ್ತು ಯೋಗದ ಸ್ವಭಾವ ವನ್ನು ನಿರಂತರವಾಗಿ ಹೊಂದಿರುತ್ತಾನೆ. ಒಬ್ಬ ವ್ಯಕ್ತಿ ಗುರುಗಳತ್ತ ಭಕ್ತಿಭಾವದಿಂದ ಕೂಡಿದರೆ, ಸ್ವಯಂ ಜ್ಞಾನವನ್ನು ಹೊಂದಿದ್ದರೆ ಹಾಗೂ ಮೇಲಿನ ಗುಣಲಕ್ಷಣಗಳನ್ನು ಕೂಡ ಹೊಂದಿದ್ದರೆ, ಅವನನ್ನು ಗುರು ಎಂದು ನೇಮಿಸಬಹುದು.

  • ಮೈತ್ರಯನಿಯ ಉಪನಿಷತ್ ಸುಳ್ಳು ಅಧ್ಯಾಪಕರ ವಿರುದ್ಧ ಎಚ್ಚರಿಕೆ ನೀಡುತ್ತದೆ, ಸುಳ್ಳು ಅಧ್ಯಾಪಕರು ಮುಗ್ದರನ್ನು ಮೋಸ ಮಾಡಬಹುದು.
  • ಕುಲ-ಆರ್ನವ-ತಂತ್ರದ ಹೇಳಿಕೆಯ ಅನುಸಾರ, ಜಗದಲ್ಲಿ ಅನುಯಾಯಿಗಳ ಆಸ್ಥಿಯನ್ನು ದೋಚುವ ಗುರುಗಳು ಹೆಚ್ಚಾಗಿದ್ದರೂ ಅನುಯಾಯಿಗಳ ನೋವುಗಳನ್ನು ತೊಲಗಿಸುವ ಕೆಲವು ಗುರುಗಳು ಕೂಡ ಇದ್ದಾರೆ.
  • ಹಲವು ಅಸಮರ್ಥ ಗುರುಗಳು ಇರುವುದರಿಂದ ನಿಜವಾದ ಗುರು ಪವಿತ್ರಗ್ರಂಥಗಳ ಅರ್ಥವನ್ನು ಗ್ರಹಿಸಿಕೊಳ್ಳಬೇಕು, ಶುದ್ಧ ಚರಿತ್ರೆಯನ್ನು ಹೊಂದಿರಬೇಕು ಹಾಗೂ ಪಾಪಗಳಿಂದ ಮುಕ್ತನಾಗಿರಬೇಕು, ಮತ್ತು ಧನ ಹಾಗೂ ಪ್ರಸಿದ್ಧಿಯ ಆಸೆಯಿಲ್ಲದೆ ಅಸ್ವಾರ್ಥಿಯಾಗಿರಬೇಕು ಎಂದು ಸ್ವಾಮಿ ವಿವೇಕನಂದರು ಹೇಳಿದರು.
  • ಮೃಣಾಲಿನಿ ಮಾತ, ಯೋಗನಂದರ ನೇರ ಅನುಯಾಯಿ, ಒಮ್ಮೆ ಹೇಳಿದರು - ನಿಜವಾದ ಗುರು ನಮ್ರವಾಗಿರಬೇಕು (ಸ್ವಯಂ ಗ್ರಹಿಸಕೊಳ್ಳುವಿಕೆ ಸದಸ್ಯತ್ವ 1978, ಕ್ಯಾಸೆಟ್ ಸಂಖ್ಯೆ 2402)
  • ಒಂದು ಪ್ರವಚನದಲ್ಲಿ ಸತ್ಯ ಸಾಯಿ ಬಾಬಾ ಹೇಳುತ್ತಾರೆ (ಸತ್ಯ ಸಾಯಿ ಮಾತಾಡುತ್ತಾರೆ, vol I, p. 197), ಲೂಟಿ ಮಾಡಬಹುದೆಂದು ಶ್ರೀಮಂತ ಅನುಯಾಯಿಗಳ ಹುಡುಕಾಟವು ದುರಂತ ತಮಾಷೆಯಾಗಿದೆ, ಮತ್ತು ಸಂದೇಹ ನಿವಾರಿಣಿ ಎಂಬ ಕಿರುಪುಸ್ತಕದಲ್ಲಿ ಬರೆಯುತ್ತಾರೆ, ಗುರುಗಳನ್ನು ಹುಡುಕಿಕೊಂಡು ಹೋಗುವವರು ಮೊದಲು ಗುರುಗಳು ಬುದ್ಧಿವಂತಿಕೆಯ ಮಾತುಗಳನ್ನಾಡುತ್ತಾರೊ ಹಾಗೂ ಪ್ರವಚಿಸದನ್ನು ನಿಜಜೀವನದಲ್ಲಿ ಅನುಸರಿಸುತ್ತಾರೊ ಎಂದು ಪರೀಕ್ಷಿಸಬೇಕು.
  • ಆಚಾರ್ಯ ಎಕ್ಕಿರಾಲ ಭಾರದ್ವಾಜ ಅವರ ಸಾಯಿಬಾಬಾ ದ ಮಾಸ್ಟರ್ Archived 2011-09-06 ವೇಬ್ಯಾಕ್ ಮೆಷಿನ್ ನಲ್ಲಿ., ಶಿರಡಿ ಸಾಯಿಯ ಗುರುವಿನ ರೂಪದಲ್ಲಿ ಒಂದು ಆಳವಾದ ಅಧ್ಯಯನ ಆಗಿದೆ. ಸಂತರ ಜೀವನ ಚರಿತ್ರೆಯನ್ನು ಓದುವ ಪಥವನ್ನು ಅನುಸರಿಸಬೇಕೆಂದು ಇದರಲ್ಲಿ ಒತ್ತಿ ಹೇಳಲಾಗಿದೆ ಮತ್ತು ನಾವು ಗುರುವಿನ ಸೇವೆಗೆ ಸಿದ್ಧ ಹಾಗೂ ಸಮರ್ಥರಾದಾಗ ಈ ಸಂತರೆ ನಮಗೆ ಸರಿಯಾದ ಗುರುಗಳಿಗೆ ದಾರಿಯನ್ನು ತೋರಿಸುತ್ತಾರೆ. ಸೂಫಿ ಧರ್ಮ ಆಲಿಯಾಸ್‌ರ (ಸಂತರು) ಸುತ್ತ ಭ್ರಮಿಸುತ್ತದೆ, ಇದರ ಪ್ರಕಾರ ಒಬ್ಬ ಅನುಯಾಯಿ ಸುಫಿ-ಸಂತನೊಬ್ಬನ ಗೋರಿಯ ಬಳಿ ಕುಳಿತು ಪ್ರಾರ್ಥನೆ ಮಾಡುತ್ತಾನೆ, ಆ ಸಂತನು ಅನುಯಾಯಿಯ ಕನಸಿನಲ್ಲಿ ಬಂದು ಅವನಿಗೆ ಸರಿಯಾದ ಹಾಗೂ ಜೀವಂತ ಗುರುವನ್ನು ತೋರಿಸುವವರೆಗೂ ಈ ಪಾರ್ಥನೆ ಮುಂದುವರೆಸುತ್ತಾನೆ, ನಂತರ ಆ ಗುರುವಿನ ಬಳಿ ಹೋಗಿ ಅವನ ಸೇವೆಯನ್ನು ಮಾಡುತ್ತಾನೆ. ಗುರು-ಶಿಷ್ಯ ಪರಂಪರೆಯನ್ನು ಪ್ರವೇಶಿಸಲು ಇದು ಅತಿ ಸುರಕ್ಷಿತ ಹಾದಿ ಎಂದು ಸಮರ್ಥನೆ ನೀಡಲಾಗಿದೆ. ಆಚಾರ್ಯ ಎಕ್ಕಿರಾಲ ಭಾರದ್ವಾಜ ಅವರ ಗುರು ಚರಿತ್ರ Archived 2009-02-27 ವೇಬ್ಯಾಕ್ ಮೆಷಿನ್ ನಲ್ಲಿ. ಇದನ್ನು ಇನ್ನು ಹೆಚ್ಚು ವಿಸ್ತಾರವಾಗಿ ವಿವರಿಸುತ್ತದೆ.

ವಿಧಿವತ್ತಾದ ಅನುಷ್ಠಾನಗಳು

ಗುರು ಪುರ್ಣಿಮ ದ ದಿನದಂದು ಅನುಯಾಯಿ ಎಚ್ಚರಗೊಂಡು ಗುರುವಿಗೆ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾನೆ. ಗುರು ಪುರ್ಣಿಮ (ಅಥವಾ ಪೂರ್ಣಿಮ) ಆಚರಣೆಯ ಉದ್ದೇಶ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಎಷ್ಟು ಪ್ರಗತಿಯಾಗಿದ್ದಾನೆಂದು ನೋಡಲು ಕಳೆದು ಹೋದ ವರ್ಷವನ್ನು ಅವಲೋಕಿಸುವುದು, ಒಬ್ಬನ ಸಂಕಲ್ಪವನ್ನು ನವೀಕರಿಸುವುದು ಹಾಗೂ ಒಬ್ಬನ ಆಧ್ಯಾತ್ಮಿಕ ಪಥದ ಪ್ರಗತಿಯತ್ತ ಗಮನ ಹರಿಸುವುದು. ಗುರು ಪೂಜ (ಅಕ್ಷರಶಃ "ಗುರುವಿನ ಆರಾಧನೆ") ಇದು ಗುರುವಿಗೆ ಅರ್ಪಣೆಗಳನ್ನು ಮಾಡುವ ಮೂಲಕ ಹಾಗೂ ಅವರಿಂದ ಸ್ಫೂರ್ತಿಯನ್ನು ಬೇಡಿ ಆರಾಧಿಸುವ ವಾಡಿಕೆ. ಅನುಯಾಯಿಗಳು ಅಥವಾ ಚೆಲ ಮಾಡಿರುವ ಪ್ರತಿಜ್ಞೆಗಳು ಹಾಗೂ ಬದ್ಧತೆಗಳು ತನ್ನ ಶಕ್ತಿಯನ್ನು ಕಳೆದುಕೊಂಡಿದ್ದಲ್ಲಿ ಅವು ನವೀಕರಿಸಲ್ಪಡುತ್ತದೆ. ಗುರು ಭಕ್ತಿ (ಅಕ್ಷರಶಃ "ಗುರುವಿನ ಶ್ರದ್ಧೆ") ಅನ್ನು ಹಲವು ಶಾಲೆಗಳಲ್ಲಿ ಹಾಗೂ ಪಂಥಗಳಲ್ಲಿ ಪ್ರಮುಖ ಎಂದು ಪರಿಗಣಿಸಲಾಗಿದೆ.

ಆಧುನಿಕ ಹಿಂದುತ್ವದಲ್ಲಿ

ಮಹರ್ಷಿ ಮಹೇಶ ಯೋಗಿ (ಅಜ್ಞೇಯ ಧ್ಯಾನ), ಸಾಯಿ ಬಾಬಾ, A.C. ಭಕ್ತಿವೆದಾಂತ ಸ್ವಾಮಿ ಪ್ರಭುಪದ, ಬಾಲಯೋಗೆಶ್ವರ (ಇವರು "ಗುರು ಮಹಾರಾಜ ಜಿ", "ಮಹಾರಾಜಿ" ಹಾಗೂ "ಪ್ರೇಮ್ ರಾವತ್" ಎಂದು ಕೂಡ ಪರಿಚಿತರಿದ್ದಾರೆ) (ಡಿವೈನ್ ಲೈಟ್ ಮಿಷನ್) ಹಾಗೂ ರಜನೀಶ (ಸನ್ಯಾಸಿಗಳು), ಇವರೆಲ್ಲ ಉನ್ನತವಾಗಿ ಪ್ರಚಲಿತವಾದ ಪ್ರತಿನಿಧಿಗಳು.

ಬೌದ್ಧ ಧರ್ಮದಲ್ಲಿ ಗುರು

ತೆರವಾಡಾ ಬೌದ್ಧ ಸಂಪ್ರದಾಯದಲ್ಲಿ ಒಬ್ಬ ಶಿಕ್ಷಕನು ಮೌಲ್ಯವನ್ನು ಹೊಂದಿರುವ ಮತ್ತು ಯೋಗ್ಯವಾದ ಅಮೂಲ್ಯ ಘನತೆಯ ಗೌರವಾನ್ವಿತ ಮಾರ್ಗದರ್ಶಿಯಾಗಿರುತ್ತಾನೆ ಮತ್ತು ಈತನು ಜ್ಞಾನೋದಯ ಮಾರ್ಗದ ಸ್ಪೂರ್ತಿಯ ಮೂಲವಾಗಿರುತ್ತಾನೆ, ಆದರೂ ಒಬ್ಬ ಶಿಕ್ಷಕನನ್ನು ಸಾಮಾನ್ಯವಾಗಿ ಗುರು ಎಂದು ಪರಿಗಣಿಸಲಾಗುವುದಿಲ್ಲ ಅದರೆ ಆತನನ್ನು ಒಬ್ಬ ಆಧ್ಯಾತ್ಮಿಕ ಸ್ನೇಹಿತ ಅಥವಾ ಬೌದ್ಧರ ಕಲ್ಪನೆಯಲ್ಲಿ ಕಲ್ಯಾಣ-ಮಿತ್ತತಾ ಎಂದು ಗುರುತಿಸಲಾಗುತ್ತದೆ. ಟಿಬೇಟಿಯನ್ ಸಂಪ್ರದಾಯದಲ್ಲಿ ಗುರುವನ್ನು ಆಧ್ಯಾತ್ಮಿಕ ಸಾಧನೆಗೆ ಮತ್ತು ಕ್ರಮಿಸುವ ಮಾರ್ಗದ ತಳಹದಿಗೆ ಮೂಲ ಬೇರು ಆದ ಬುದ್ಧನ ರೂಪದಲ್ಲಿ ನೋಡಲಾಗುತ್ತದೆ. ಶಿಕ್ಷಕನಿಲ್ಲದೆ ಯಾವುದೇ ಅನುಭವ ಅಥವಾ ಅಂತರ್ದೃಷ್ಟಿ ಸಾಧ್ಯವಿಲ್ಲ ಎಂಬುದು ಪ್ರತಿಪಾದಿತ ಘೋಷಣೆಯಾಗಿದೆ. ಟಿಬೇಟಿಯನ್ ಪಠ್ಯಗಳಲ್ಲಿ ಗುರುವಿನ ಸಚ್ಚಾರಿತ್ರ್ಯತೆಯ ಗುಣಗಾನದ ಮೇಲೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿರುತ್ತದೆ. ಗುರುವಿನಿಂದ ಹರಸಲ್ಪಟ್ಟ ನಂತರ ಅನುಯಾಯಿಗಳು ಬೋಧಿಸತ್ವ ಅಥವಾ ಬುದ್ಧನ ಮೂರ್ತರೂಪಗಳು ಎಂದು ಗುರುತಿಸಲ್ಪಡುತ್ತಾರೆ, ಈ ಅನುಯಾಯಿಗಳು ನೈಜತೆಯ ಸತ್ಯ ಸ್ವರೂಪದ ಅನುಭವವನ್ನು ಪಡೆದುಕೊಳ್ಳುವ ಮಾರ್ಗದಲ್ಲಿ ಮುಂದುವರಿಯವಹುದು. ಅನುಯಾಯಿಗಳು ವಜ್ರಾಯಣ ಬೌದ್ಧ ಧರ್ಮದ ನಾಲ್ಕು ತಳಹದಿಯ ಅಂತಿಮ ಅನುಗ್ರಹವಾದ ಗುರುವಿಗೆ ಅದ್ಭುತ ಮೆಚ್ಚುಗೆಯನ್ನು ಮತ್ತು ಶ್ರದ್ಧೆಯನ್ನು ತೋರಿಸುತ್ತಾರೆ. ದಲಾಯಿ ಲಾಮಾ ಅವರು ಗುರುವಿನ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತ: "ಶಿಕ್ಷಣದಲ್ಲಿ ನಂಬಿಕೆ ಇಟ್ಟು ಗುರುವಿನ ಮೌಲ್ಯವನ್ನು ನಿರ್ಧರಿಸುವಾಗ: ಕುರುಡು ನಂಬಿಕೆಯನ್ನು ಇಡಬೇಡಿ ಅದರ ಜೊತೆಗೆ ಅಂಧ ವಿಮರ್ಶೆಯನ್ನು ಕೂಡ" ಎಂದು ಹೇಳಿದ್ದರು. ಅವರು ’ಬುದ್ಧನೊಂದಿಗೆ ಜೀವಿಸುವುದು’ ಎಂಬ ಪದ ಚೈನಾದ ಪದವಾದ huo fuo ನ ಭಾಷಾಂತರವಾಗಿತ್ತು ಎಂಬುದನ್ನು ಕೂಡ ಗುರುತಿಸಿದ್ದರು. ಟಿಬೇಟಿನಲ್ಲಿ ಅವರು ಕಾರ್ಯಕಾರಿಯಾದ ಪದವೆಂದರೆ ಅದು ಲಾಮಾ ಅಂದರೆ ಅದು "ಗುರು" ಎನ್ನುವ ಅರ್ಥ ಕೊಡುತ್ತದೆ ಎಂದು ಹೇಳಿದ್ದರು. ಒಬ್ಬ ಗುರು ಅವಶ್ಯವಾಗಿ ಬುದ್ಧನೇ ಆಗಿರಬೆಕೆಂದೇನೂ ಇಲ್ಲ ಆದರೆ ಆತನು ಜ್ಞಾನ ಸಂಪತ್ತಿನಿಂದ ತುಂಬಿರಬೇಕು. ಬಳಸಿಕೊಳ್ಳಲಾದ ವಜ್ರ ಎಂಬ ಪದವೂ ಕೂಡ ಬೋಧಕ ಎಂಬ ಅರ್ಥವನ್ನು ಕೊಡುತ್ತಿತ್ತು. ತಾಂತ್ರಿಕ ಶಿಕ್ಷಣವು ಗುರುವನ್ನು ಅಂತರ್ ಚಕ್ಷುವಿನ ಮೂಲಕ ನೋಡುವ ಮತ್ತು ಗುರುವನ್ನು ಭಜಿಸುವ ಮೂಲಕ ನಿವೇದನೆಯನ್ನು ಮಾಡಿಕೊಳ್ಳುವ ಗುರು ಯೋಗದ ಪ್ರಯೋಗಗಳನ್ನು ಒಳಗೊಂಡಿದೆ. ಗುರುವು ವಜ್ರ ಗುರು ಎಂದು ಪರಿಚಿತವಾಗಿದೆ (ಸಾಹಿತ್ಯಿಕವಾಗಿ ವಜ್ರ ()ಡೈಮಂಡ್ ಎಂದು ಕರೆಯಲಾಗಿದೆ). ವಿಧ್ಯಾರ್ಥಿಯು ನಿರ್ಧಿಷ್ಟವಾದ ತಂತ್ರವನ್ನು ಅಭ್ಯಾಸ ಮಾಡುವದಕ್ಕಿಂತ ಮುನ್ನ ಉಪಕ್ರಮ ಅಥವಾ ಕ್ರಿಯಾವಿಧಿಗಳ ಅಧಿಕೃತ ಸ್ಥಿತಿ ಬಹಳ ಅವಶ್ಯಕ. ಗುರು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಉಪಕ್ರಮಗಳನ್ನು ನೆರವೇರಿಸುವುದಿಲ್ಲ, ಆದರೆ ಗುರುವಿನ ವ್ಯಕ್ತಿತ್ವದಲ್ಲಿ ಅವರದೇ ಆದ ಬುದ್ಧನ ಸ್ವರೂಪಗಳು ಪ್ರತಿಬಿಂಬಿಸುತ್ತವೆ. ಅನುಯಾಯಿಗಳಿಗೆ ಗುರುವಿನೊಂದಿಗೆ ಆಧ್ಯಾತ್ಮಿಕ ಕೊಂಡಿಯನ್ನು ಉಳಿಸಿಕೊಂಡು ಹೋಗುವ ಸಮಯ ಅಥವಾ ಶಪಥ ಮತ್ತು ಒಡಂಬಡಿಕೆಯನ್ನು ಮಾಡಿಕೊಳ್ಳುವಂತೆ ಕೇಳಿಕೊಳ್ಳಲಾಗುತ್ತದೆ, ಮತ್ತು ಈ ಕೊಂಡಿಯನ್ನು ಮುರಿದುಕೊಂಡರೆ ಗಂಭೀರವಾದ ಅವನತಿ ಒದಗುತ್ತದೆ ಎಂದು ಕೂಡ ಹೇಳಲಾಗುತ್ತದೆ.

ಸಿಖ್ ಧರ್ಮದಲ್ಲಿ ಗುರು

ಸಿಖ್ ಧರ್ಮದಲ್ಲಿ ಗುರು (ಗುರುಮುಖಿ: ਗੁਰੂ) ಎನ್ನುವ ಶಿರೋನಾಮೆಯು ಮೂಲಭೂತವಾದ ಪದವಾಗಿದೆ. ವಾಸ್ತವವಾಗಿ, ಮೂಲ ಪದ್ಧತಿಯನ್ನು ಹಾಗೆಯೇ ಉಳಿಸಿಕೊಳ್ಳುವುದರ ಮೂಲಕ ಸಿಖ್ಖರು ಈ ಪದವನ್ನು ಒಂದು ಅಭೂತಪೂರ್ವವಾದ ಅಮೂರ್ತ ರೂಪಕ್ಕೆ ತೆಗೆದುಕೊಂಡು ಹೋದರು ಮತ್ತು ಯಾವುದೇ ಮಾಧ್ಯಮದ ಮೂಲಕ ತಿಳುವಳಿಕೆ ಅಥವಾ ಜ್ಞಾನವನ್ನು ತಿಳಿಹೇಳುವುದ್ದಕಾಗಿಯೂ ಇದನ್ನು ಬಳಸಿಕೊಂಡರು. ಸಿಖ್ ಧರ್ಮವನ್ನು ಸಂಸ್ಕೃತದ ಶಿಷ್ಯ ಅಥವಾ ಅನುಯಾಯಿ ಎಂಬ ಪದದಿಂದ ಪಡೆದುಕೊಳಲಾಗಿದೆ. ಒಬ್ಬ ದೇವನಲ್ಲಿ ಮತ್ತು ಹತ್ತು ಗುರುಗಳ ಶಿಕ್ಷಣದಲ್ಲಿ ನಂಬಿಕೆ ಇಡುವುದು ಸಿಖ್ ಧರ್ಮದ ಮೂಲ ನಂಬಿಕೆಗಳೆಂದು ಸಿಖ್ಖರ ಧರ್ಮ ಗ್ರಂಥವಾದ ಗುರು ಗ್ರಂಥ್ ಸಾಹಿಬ್‌ನಲ್ಲಿ ಹೇಳಲಾಗಿದೆ. ಸಿಖ್ಖರ ಮೊದಲ ಗುರುವಾದ ಶ್ರೀ ಗುರು ನಾನಕ್ ದೇವ್ ಅವರು ಭಾರತದಲ್ಲಿ ಅವರ ಕಾಲದಲ್ಲಿ ವ್ಯಾಪಕವಾಗಿ ಹರಡಿದ್ದ ಜಾತಿ ಪದ್ದತಿಯನ್ನು ವಿರೋಧಿಸಿದ್ದರು ಮತ್ತು ಅವರು ಹಿಂದುಗಳನ್ನು, ಮುಸ್ಲೀಮರನ್ನು ಮತ್ತು ಇತರ ಧರ್ಮದ ಜನರನ್ನು ಅನುಯಾಯಿಗಳಾಗಿ ಸ್ವೀಕರಿಸಿದ್ದರು. ಅವರ ಅನುಯಾಯಿಗಳು ಅವರನ್ನು ಗುರು ಎಂದು ಒಪ್ಪಿಕೊಂಡಿದ್ದರು (ಶಿಕ್ಷಕ). ಅವರು ಸಾವಿಗಿಂತ ಮುನ್ನ ಅವರ ಉತ್ತರಾಧಿಕಾರಿಯಾಗಿ ಮತ್ತು ಸಿಖ್ ಸಮೂದಾಯವನ್ನು ಮುನ್ನಡೆಸಿಕೊಂಡು ಹೋಗಲು ಒಬ್ಬ ಹೊಸ ಗುರುವನ್ನು ನಿಯೋಜಿಸಿದ್ದರು. ಈ ಪ್ರಕ್ರಿಯೆಯು ಮುಂದುವರಿದುಕೊಂಡು ಹೋಯಿತು ಮತ್ತು ಹತ್ತನೇಯ ಮತ್ತು ಕೊನೆಯ ಗುರುವಾದ ಗುರು ಗೋವಿಂದ ಸಿಂಗ್ (ಕ್ರಿ.ಶ. 1666–1708) ಅವರು ಸಿಖ್ ವ್ರತಾಚರಣೆಯನ್ನು ಕ್ರಿ.ಶ. 1699ರ ವರೆಗೆ ವಿಧಿವತ್ತಾಗಿ ನಡೆಸಿಕೊಂಡು ಹೋದರು.

ಕ್ರೈಸ್ತ ಧರ್ಮದಲ್ಲಿದ್ದಂತೆ ಗುರುಗಳು ಎಂದರೆ "ದೇವರ ಮಕ್ಕಳು" ಎಂಬ ಭಾವನೆ ಸಿಖ್ಖರಲ್ಲಿ ಇರಲಿಲ್ಲ.  ದೇವರು ನಮ್ಮೆಲ್ಲರ ತಂದೆ/ತಾಯಿ, ಮತ್ತು ನಾವೆಲ್ಲರೂ ದೇವರ ಮಕ್ಕಳು ಎಂದು ಸಿಖ್ ಧರ್ಮವು ಹೇಳುತ್ತದೆ.  ಗುರು ವಿಗೆ ಪ್ರಾಮುಖ್ಯತೆಯನ್ನು ನೀಡುವಲ್ಲಿ, ಜಗತ್ತಿನಲ್ಲಿರುವ ಯಾವುದೇ ವ್ಯಕ್ತಿಯನ್ನು ಭ್ರಮೆಯಲ್ಲಿ ಇರುವಂತೆ ಮಾಡಬೇಡಿ  ಎಂದು ಗುರು ನಾನಕ್ ಹೇಳುತ್ತಾರೆ. ಗುರುವಿಲ್ಲದೇ ಯಾರಿಗೂ ಮುಂದಿನ ದಡವನ್ನು ಸೇರಲು ಸಾಧ್ಯವಿಲ್ಲ.   
# Name Date of birth Guruship on Date of ascension Age
1 Guru Nanak 15 April 1469 20 August 1507 22 September 1539 69
2 Guru Angad 31 March 1504 7 September 1539 29 March 1552 48
3 Guru Amar Das 5 May 1479 26 March 1552 1 September 1574 95
4 Guru Ram Das 24 September 1534 1 September 1574 1 September 1581 46
5 Guru Arjan 15 April 1563 1 September 1581 30 May 1606 43
6 Guru Har Gobind 19 June 1595 25 May 1606 28 February 1644 48
7 Guru Har Rai 16 January 1630 3 March 1644 6 October 1661 31
8 Guru Har Krishan 7 July 1656 6 October 1661 30 March 1664 7
9 Guru Tegh Bahadur 1 April 1621 20 March 1665 11 November 1675 54
10 Guru Gobind Singh 22 December 1666 11 November 1675 7 October 1708 41
11 Guru Granth Sahib n/a 7 October 1708 n/a n/a

ಸಿಖ್ ಧರ್ಮದ ಹತ್ತು ಗುರುಗಳು ಇದ್ದಕ್ಕೆ ಪೂರಕವಾಗಿ ಅವರ ಧರ್ಮ ಗ್ರಂಥವಾದ ಗುರು ಗ್ರಂಥ ಸಾಹಿಬ್ ಅನ್ನು ಸಿಖ್ಖರ ಹನ್ನೊಂದನೇಯ ಶಾಶ್ವತ ಗುರುವನ್ನಾಗಿ ಮಾಡಲಾಯಿತು. ಅವೆರಡೂ ಜೊತೆಯಾಗಿ ಸಿಖ್ ಧರ್ಮದ ಹನ್ನೊಂದನೆಯ ಗುರುವನ್ನು ಸೃಷ್ಟಿಸಿದವು. ಮತ್ತು ಇಂದು ಸಿಖ್ ಮಕ್ಕಳನ್ನು ಕೆಲವೊಮ್ಮೆ ಗುರು ಎಂದು ಹೆಸರಿಸಲಾಗುತ್ತಿದೆ (ಗುರು ದರ್ಶನ್, ಗುರು ಮಂದಿರ್ ಇತ್ಯಾದಿ.)

ಉತ್ತರಾಧಿಕಾರ ಮತ್ತು ವಂಶಪರಂಪರೆ (ಪರಂಪರೆ)

ಪರಂಪರಾ ಎಂಬ ಪದವು (ಸಂಸ್ಕೃತದಲ್ಲಿ परमपरा) ಶಿಕ್ಷಕರ ಅತೀ ದೀರ್ಘ ಉತ್ತರಾಧಿಕಾರತ್ವ ಮತ್ತು ಬಾರತೀಯ ಸಾಂಪ್ರದಾಯಿಕ ಸಂಸ್ಕೃತಿಯಲ್ಲಿರುವ ಅನುಯಾಯಿಗಳ ಬಗ್ಗೆ ತಿಳಿಸುತ್ತದೆ.  ಹಿಂದೂ ಧರ್ಮದ ಅರ್ಥಕೋಶವು  ಪರಂಪರಾ ಎಂದರೆ "ಪ್ರಾರಂಭದ ಅಧಿಕೃತ ಉತ್ತರಾಧಿಕತ್ವದಲ್ಲಿನ ಆಧ್ಯಾತ್ಮಿಕ ಗುರುಗಳ ಸಾಲು: ಗುರುವಿನಿಂದ ಗುರುವಿಗೆ ವರ್ಗಾವಣೆಗೊಂಡ ಮೋಡಿಯಂತಹ ಶಕ್ತಿಯ ಸರಪಳಿ ಮತ್ತು ಅಧಿಕಾರಯುಕ್ತ ಮುಂದುವರಿಯುವಿಕೆ" ಎಂದು ಅರ್ಥೈಸುತ್ತದೆ.  ಈ ಪದದ ಸಾಹಿತ್ಯಿಕ ಅರ್ಥವು ಸಂಸ್ಕೃತದಲ್ಲಿ: ನಿರಂತತೆಗೆ ಯಾವುದೇ ತಡೆಯಾಗ ಉತ್ತರಾಧಿಕಾರತ್ವದ ಶ್ರೇಣಿ  ಎಂದಾಗುತ್ತದೆ.  ಎಲ್ಲಿ ಜ್ಞಾನವು  (ಯಾವುದೇ ವಿಭಾಗದಲ್ಲಿರಬಹುದು) ಉತ್ತರಾಧಿಕಾರತ್ವದ ಪೀಳಿಗೆಯ ಮೂಲಕ ಸಾರಗುಂದದೆ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುವುದೊ ಅಲ್ಲಿ ಗುರು (ಶಿಕ್ಷಕ) ಶಿಷ್ಯ (ಅನುಯಾಯಿ) ಪರಂಪರಾ  ಅಥವಾ ಗುರು ಪರಂಪರಾ ಉದ್ಭವಿಸುತ್ತದೆ.  ಇದು ಶಿಷ್ಯರು ಗುರುವಿನ ಕುಟುಂಬದ ಸದಸ್ಯರ ರೀತಿಯಲ್ಲಿ, ಅವರೊಂದಿಗೆಯೇ ಇದ್ದು ಕಲಿಯುಯುವ ಶಿಕ್ಷಣದ ಸಾಂಪ್ರದಾಯಿಕ, ಸ್ಥಳೀಯ ಸ್ವರೂಪವಾಗಿದೆ.  ಕಾರ್ಯಕ್ಷೇತ್ರವು ಅಧ್ಯಾತ್ಮಿಕತೆ, ಕಲಾತ್ಮಕತೆ (ಸಂಗೀತ ಅಥವಾ ನೃತ್ಯದಂತಹ ಕಲಾ  कला) ಅಥವಾ ಶೈಕ್ಷಣಿಕತೆಯನ್ನು ಒಳಗೊಂಡಿರಬಹುದು.  ಸಮಾಜ ಶಾಸ್ತ್ರದ ಪ್ರಾಧ್ಯಾಪಕ ಮತ್ತು 2005ರಿಂದ ರಾಧಾ ಸೊಆಮಿ ಸತ್ಸಂಗ್ ಬಿಯಸ್‌ನ ಸದಸ್ಯ ಮತ್ತು ವಿಮರ್ಶಕನಾದ ಡೇವಿಡ್ ಸಿ. ಲೇನ್ ಅವರು 1997ರಲ್ಲಿ ತಮ್ಮ ರಾಧಾ ಸೊಆಮಿ ಚಳುವಳಿಯಲ್ಲಿನ ಸಂಶೋಧನೆಯ ಆಧಾರದ ಮೇಲೆ ಕೆಲವು ಗುರುಗಳು ಮಾತ್ರ ದೋಷರಹಿತ ಮತ್ತು ಉತ್ತಮ-ದಾಖಲೆಯ ಮನೆತನವನ್ನು ಹೊಂದಿರುತ್ತಾರೆ, ಮತ್ತು ಅಲ್ಲಿ ಯಾವಾಗಲೂ ಹೆಚ್ಚಾಗಿ ತಾನೊಬ್ಬನೇ ಗುರುವಿನ ಸಮರ್ಥನೀಯ ಉತ್ತರಾಧಿಕಾರಿಯೆಂದು ಹಕ್ಕುಸಾಧನೆಯನ್ನು ಮಾಡುವುದರ ಮೂಲಕ ವಿವಿಧ ಅನುಯಾಯಿಗಳ ನಡುವೆ ಸಂಘರ್ಷಗಳು ನಡೆಯುತ್ತಿರುತ್ತವೆ ಎಂದು ವಾದಿಸಿದ್ದಾರೆ.[೧] 

ಪಾಶ್ಚಾತ್ಯ ಸಾಂಸ್ಕೃತಿಕ ದೃಷ್ಟಿಕೋನದಲ್ಲಿ ಗುರುವಿನ ಅವಲೋಕನ

ಸ್ಥಾಪಿತ ಧರ್ಮ್ಮಗಳ ಪರ್ಯಾಯವಾಗಿ, ಯುರೋಪ್ ಹಾಗೂ USA ನಲ್ಲಿನ ಭಾರತೀಯ ಮೂಲವಲ್ಲದ ಕೆಲವು ಜನರು ಜೀವನದ ಅರ್ಥದ ಬಗ್ಗೆ ಉತ್ತರಗಳನ್ನು ಹುಡುಕಲು ಮತ್ತು ತಿಳಿವಳಿಕೆ ಹಾಗೂ ವೇದಾಂತಗಳಿಂದ ಮುಕ್ತವಾದ ಹೆಚ್ಚು ನೇರ ಅನುಭವ ಪಡೆಯಲು ಭಾರತೀಯ ಆಧ್ಯಾತ್ಮಿಕ ಮಾರ್ಗದರ್ಶಿಗಳತ್ತ ಹಾಗೂ ಗುರುಗಳತ್ತ ನೋಡುವರು. ಹಲವು ಧಾರ್ಮಿಕ ಪಂಥಗಳ ಗುರುಗಳು ಪಶ್ಚಿಮ ಯುರೋಪ್ ಹಾಗೂ USAಗೆ ಪ್ರಯಾಣಿಸಿ ತಮ್ಮ ಅನುಯಾಯಿಗಳನ್ನು ಸ್ಥಾಪಿಸಿದ್ದಾರೆ. ಇವರಲ್ಲಿ ಮೊದಲಿಗ ಎಂದರೆ ಸ್ವಾಮಿ ವಿವೇಕಾನಂದ, ಇವರು 1893ರಲ್ಲಿ ಶಿಕಾಗೊದ ಇಲಿನಿಯೊಸ್‌ನ ವರ್ಲ್ಡ್ ಪಾಲಿಯಮೆಂಟ್ ಒಫ್ ರಿಲಿಜಿಯನ್ಸ್‌‌ನಲ್ಲಿ ಮಾತನಾಡಿದರು. 1960 ಹಾಗೂ 1970ರ ದಶಕಗಳಲ್ಲಿ ಪ್ರಮುಖವಾಗಿ ಹಲವು ಗುರುಗಳು ಪಶ್ಚಿಮ ಯುರೋಪ್ ಹಾಗೂ USAನಲ್ಲಿ ಯುವ ಅನುಯಾಯಿಗಳನ್ನು ಪಡೆದುಕೊಂಡರು. ಅಮೇರಿಕಾದ ಸಮಾಜಶಾಸ್ತ್ರಜ್ಞ ಡೆವಿಡ್ G. ಬ್ರೊಂಲೆರ ಅನುಸಾರ ಇದಕ್ಕೆ ಮುಖ್ಯ ಕಾರಣ 1965ರಲ್ಲಿ ಚೈನೀಸ್ ಎಕ್ಸಕ್ಲೂಷನ್ ಆಕ್ಟ್‌ನ (ಸಂಯುಕ್ತ ರಾಷ್ಟ್ರಗಳು) ರದ್ದುಗೊಳಿಸುವಿಕೆ, ಇದು USA ನಲ್ಲಿ ಏಷಿಯದ ಗುರುಗಳ ಪ್ರವೇಶವನ್ನು ಅನುಮತಿಸಿತು. ಡಚ್‌ನ ಭಾರತಜ್ಞ ಆಲ್‌ಬರ್ಟಿನ ನಗ್ಟೆರೆನ್‌ರ ಅನುಸಾರ, ಈ ರದ್ದುಗೊಳಿಸುವಿಕೆ ಹಲವು ಇತರ ಕಾರಣಗಳಲ್ಲಿ ಒಂದಾಗಿತ್ತು, ’ಪೂರ್ವದ’ ಕ್ಷೋಭೆಯ ಎಲ್ಲ ಕಾರಣಗಳಲ್ಲಿ ಇನ್ನು ಎರಡು ಪ್ರಮುಖ ಕಾರಣಗಳೆಂದರೆ: ಯುದ್ಧದ ನಂತರದ ಸಾಂಸ್ಕೃತಿಕ ತಳಿಗಳ ಬೆರಕೆ ಹಾಗೂ ಪಶ್ಚಿಮದ ಸ್ಥಾಪಿತ ಮೌಲ್ಯಳ ಬಗ್ಗೆ ಸಾಮಾನ್ಯ ಅಸಮಾಧಾನ. ಅಲ್‌ಬರ್ಟ ವಿಶ್ವವಿದ್ಯಾಲಯ ಹಾಗೂ ಕ್ರೆನನ್‌ಬೊರ್ಗ್‌ನ (1974) ಸಮಾಜಶಾಸ್ತ್ರಜ್ಞ ಸ್ಟಿಫನ್ A. ಕೆಂಟ್‌ರ ಅನುಸಾರ, 1970ರ ದಶಕದಲ್ಲಿ ಹಿಪ್ಪಿಗಳು ಸೇರಿ ಹಲವು ಯುವಜನರು ಗುರುಗಳತ್ತ ಸೆಳೆಯಲು ಕಾರಣ, ಮಾದಕ ಪದಾರ್ಥಗಳು ಅವರ ಅಸ್ತಿತ್ವವನ್ನು ತರ್ಕಾತೀತದತ್ತ ಒಯ್ಯದು ತೆರೆಯುತ್ತಿದೆ ಎಂದು ಅವರಿಗೆ ಅನಿಸತೊಡಗಿತು ಅಥವಾ ಈ ಮಾದಕ ಪದಾರ್ಥಗಳ ಬಳಕೆ ಮಾಡದೆ ಅವರು ಮೇಲ್ಮಟ್ಟ ವನ್ನೇರಲು ಬಯಸಿದರು. ಕೆಂಟ್‌ರ ಪ್ರಕಾರ, ಇದು USAನಲ್ಲಿ ಹಲವು ಬಾರಿ ಘಟಿಸಲು ಕಾರಣವೆಂದರೆ ಕೆಲವು ವಿಯಟ್‌ನಾಮ್ ಯುದ್ಧ ವಿರೋಧಿ ವಿದ್ರೋಹಿಗಳು ಹಾಗೂ ರಾಜಕೀಯ ಕಾರ್ಯಕರ್ತರು ಸಮಾಜವನ್ನು ರಾಜಕೀಯ ಹಾದಿಯಲ್ಲಿ ಬದಲಿಸುವ ಆಶೆಯಿಂದ ಬೆಸೊತ್ತು ಅಥವಾ ಮೋಹವಿಮೋಚನೆಗೊಂಡರು ಮತ್ತು ಅದರ ಬದಲಾಗಿ ಧಾರ್ಮಿಕ ಹಾದಿಯತ್ತ ತಿರುಗಿದರು. ಕೆಲವು ಗುರುಗಳು ಹಾಗೂ ಅವರ ನಾಯಕತ್ವದ ಗುಂಪುಗಳು ವಿರೋಧ ಪಕ್ಷಗಳನ್ನು ಆಕರ್ಷಿಸಿತು. ಈ ತರಹದ ಒಂದು ಗುಂಪಿನ ಉದಾಹರಣೆ ಎಂದರೆ 1966ರಲ್ಲಿ A.C. ಭಕ್ತಿವೆದಾಂತ ಸ್ವಾಮಿ ಪ್ರಭುಪದರು ಸ್ಥಾಪಿಸಿದ ಹರೆ ಕೃಷ್ಣ ಚಳುವಳಿ (ISKCON), ಇದರ ಹಲವು ಅನುಯಾಯಿಗಳು ಸ್ವ-ಇಚ್ಛೆಯಿಂದ ಆಗ್ರಹಪೂರ್ವಕವಾದ ಭಕ್ತಿ ಯೋಗದ ಸಂನ್ಯಾಸಿ ಜೀವನಶೈಲಿಯನ್ನು ಪೂರ್ಣ-ಕಾಲದ ಆಧಾರದ ಮೇಲೆ ಸ್ವೀಕರಿಸಿದರು, ಇದು ಆ ಸಮಯದ ಜನಪ್ರಿಯ ಸಂಪ್ರದಾಯಕ್ಕೆ ಪೂರ್ತಿಯಾಗಿ ವಿಭಿನ್ನವಾಗಿತ್ತು. ಕ್ರೆನನ್‌ಬರ್ಗ್‌ರ ಅನುಸಾರ (1984), ಜಿಸಸ್ ಹಿಂದು ಸೂತ್ರೀಕರಣ ಹಾಗೂ ಗುರುವಿನ ಗುಣಲಕ್ಷಣಗಳಿಗೆ ಸರಿಹೊಂದುತ್ತಾರೆ.'

ಪಶ್ಚಿಮದ ಗುರುಗಳು

ಪಾಶ್ಚಿಮಾತ್ಯ ದೇಶದಲ್ಲಿ ಪ್ರಸಿದ್ಧ ಸಂಸ್ಥೆಗಳ ಆಧ್ಯಾತ್ಮಿಕ ನಾಯಕರಾಗಿದ್ದುಕೊಂಡು ಶಿಷ್ಯರನ್ನು ಹೊಂದಿರುವ ಕೆಲವು ಆಧ್ಯಾತ್ಮಿಕ ಗುರುಗಳಲ್ಲಿ ಈ ಕೆಳಗಿನವರನ್ನು ಹೆಸರಿಸಬಹುದು.

  • ಅಮ್ಮ ಮಾತಾ ಅಮೃತಾನಂದಮಯಿ ದೇವಿ ಪಾರ್ಲಿಮೆಂಟ್‍ ಆಫ್‌ ದ ವರ್ಲ್ಡ್‌ ರಿಲಿಜನ್ಸ್‌, ಇಂಟರ್‌‌ನ್ಯಾಶನಲ್‌ ಅಡ್ವೈಸರಿ ಕಮಿಟಿಯ ಸದಸ್ಯೆ.
  • ತೆಂಜಿನ್‌ ಗ್ಯಾಸ್ಟೊ‌, 14ನೇ ದಲೈ ಲಾಮ
  • ಚೋಗ್ಯಾಮ್ ತ್ರುಂಗ್ಪಾ ರಿನ್ಪೊಚೆ ಒಬ್ಬ ಲಾಮ ( ಬುದ್ಧರ ಟಿಬೇಟಿಯನ್‌ ಧಾರ್ಮಿಕ ಗುರು).
  • Jetsunma Ahkon Lhamo

ಟಿಬೇಟಿನ ಭೌದ್ಧರ ಟುಲ್ಕುವಾಗಿ ಗುರುತಿಸಲ್ಪಟ್ಟ ಮತ್ತು ಗದ್ದುಗೆಗೇರಿದ ಮೊದಲ ಪಶ್ಚಿಮಾತ್ಯ ಮಹಿಳೆ.

  • ಜಿಡ್ಡು ಕೃಷ್ಣಮೂರ್ತಿ ಥಿಯೊಸೊಫಿಕಲ್‌ ಸೊಸೈಟಿ ಅಡ್ಯಾರ್‌ದಿಂದ ವಿಶ್ವಪ್ರಸಿದ್ಧ ಆಧ್ಯಾತ್ಮಿಕ ಶಿಕ್ಷಕನಾಗಿ ಬೆಳೆದರು. ಆದರೆ ಸಾರ್ವಜನಿಕವಾಗಿ 1929ರಲ್ಲಿ ಈ ಸಂಸ್ಥೆಯಿಂದ ಹೊರ ಬಂದರು.
  • ಟ್ರಾಸೆಂಡೆಂಟಲ್‌ ಮೆಡಿಟೇಶನ್‌(TM)ನ ಸ್ಥಾಪಕ ಮಹರ್ಷಿ ಮಹೇಶ್‌ ಯೋಗಿ, 1959ರ ಸಮಯದಲ್ಲಿ ಪಾಶ್ಚಿಮಾತ್ಯರಿಗೆ ತನ್ನ ಸಂದೇಶವನ್ನು ತಲುಪಿಸುವ ಕಾರ್ಯ ಕೈಗೊಂಡರು.
  • ಮೆಹರ್ ಬಾಬಾ , 1930ದಿಂದ 1950ರೊಳಗೆ ಹಲವಾರು ಬಾರಿ ಪಶ್ಚಿಮ ಭಾಗಗಳಲ್ಲಿ ಯಾತ್ರೆ ಮಾಡಿದರು ಮತ್ತು ಅನೇಕ ಪಾಶ್ಚಿಮಾತ್ಯ ಅನುಯಾಯಿಗಳನ್ನು ಹೊಂದಿದ್ದಾರೆ.
  • ಮುಕ್ತಾನಂದ
  • ನೀಮ್‌ ಕರೋಲಿ ಬಾಬ ಮಹರಾಜ್‌-ಜಿ ಎಂದೂ ಪ್ರಖ್ಯಾತರಾಗಿದ್ದಾರೆ. ರಾಮ‌ ದಾಸರ ಅನುಭವದ ನಂತರ 1960ರ ದಶಕದಲ್ಲಿ ಭಾರತದ ಮಹರಾಜ್‌-ಜಿ, ಅವರು "ಬಿ ಹಿಯರ್ ನೌ" ಎಂಬ ಪುಸ್ತಕದ ಮೂಲಕ ನೀಮ್‌ ಕರೋಲಿ ಬಾಬ ಅವರನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಿದರು.
  • ಪರಮ ಹಂಸ ಯೋಗಾನಂದ ಯುಎಸ್‍ಎನಲ್ಲಿ ನೆಲೆಸಿ ಆಟೋಬಯಾಗ್ರಫಿ ಆಫ್‌ ಎ ಯೋಗಿ ಎಂಬ ಪುಸ್ತಕವನ್ನು ಬರೆದರು.
  • 1965ರಲ್ಲಿ ನ್ಯೂಯಾರ್ಕ್‌ ನಲ್ಲಿ ಇಂಟರ್‌ನ್ಯಾಶನಲ್‌ ಸೊಸೈಟಿ ಫಾರ್‌ ಕೃಷ್ಣ ಕಾನ್ಶಿಯಸ್‌ನೆಸ್‌ನ್ನು ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ (ದ ಹರೆ ಕೃಷ್ಣರ ಬಗೆಗೆ) ಸ್ಥಾಪಿಸಿದರು. ಹಿಂದೂ ಧರ್ಮೇತರ ಎಂದು ಹೇಳಿಕೊಂಡರೂ ಐಸ್ಕಾನ್‌ (ಐಎಸ್‌ಕೆಸಿಒಎನ್‌), ಇದು ಹಿಂದೂಗಳ ಗೋವಿಂದ ವೈಷ್ಣವ ಪಂಥದ್ದಾಗಿದೆ.
  • ಪ್ರೇಮ್‌ ರಾವತ್‌ 1980ರಲ್ಲಿ ತನ್ನ ಹೆಸರಿನೊಂದಿಗಿದ್ದ "ಗುರು"ವನ್ನು ತೆಗೆಯುವವರೆಗೂ ಗುರು ಮಹರಾಜ್‌ ಜಿ ಎಂದು ಪರಿಚಿತರಾಗಿದ್ದರು.
  • ಓಶೊ( ಭಗವಾನ್‌ ಶ್ರೀ ರಜನೀಶ್) ತಾತ್ಕಾಲಿಕವಾಗಿ ಯುಎಸ್‍ಎನಲ್ಲಿ ನೆಲೆಸಿದರು.
  • ಸತ್ಯ ಸಾಯಿ ಬಾಬ ಎಂದಿಗೂ ಯುಎಸ್‌ಎ ಅಥವಾ ಯುರೋಪಿಗೆ ಹೋಗಲಿಲ್ಲ, ಆದರೆ ಬೃಹತ್ ಪ್ರಮಾಣದ ಅನುಯಾಯಿಗಳನ್ನು ಸಂಪಾದಿಸಿದ್ದಾರೆ.
  • ಸದ್ಗುರು ಜಗ್ಗಿ ವಾಸುದೇವ್ ರವರು ಈಶ ಫೌಂಡೇಶನ್ನಿನ ಮತ್ತು ಈಶ ಯೋಗ ಸೆಂಟರ್‌ ಸ್ಥಾಪಕರು. ಅವರು ಭಾರತ, ಯುಎಸ್‌ ಮತ್ತು ಲೆಬೆನಾನ್‌ನಲ್ಲಿ ಬಲಿಷ್ಠ ಸ್ವಯಂ ಸೇವಕ ಪಡೆಯನ್ನೇ ಹೊಂದಿದ್ದಾರೆ.
  • ಸಂತ ಶ್ರೀ ಆಸಾರಾಮ್‌ಜಿ ಬಾಪುರವರು ಶ್ರೀ ಯೋಗ್‌ ವೇದಾಂತ ಸೇವಾ ಸಮಿತಿಯ ಸ್ಥಾಪಕರು.
  • ಶ್ರೀ ಶ್ರೀ ರವಿ ಶಂಕರ್‌ರು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಸ್ಥಾಪಕರು.
  • ಶ್ರೀ ಅರಬಿಂದೋ
  • Thich Nhat Hanh, ವಿಯೆಟ್ನಾಂ ಮೂಲದಿಂದ ಬಂದ ಈಗ ಫ್ರಾನ್ಸ್‌ನಲ್ಲಿ ನೆಲೆಸಿರುವ ಬೌದ್ಧರ ಗುರು.
  • ಯುಎಸ್‌ ಮೂಲದ ರುಚಿರ ಆದಿ ಡ ಸಾಮ್ರಾಜ್‌, ಗುರು ಶಿಷ್ಯರ ಸಂಬಂಧವಾನ್ನಾದರಿಸಿದ ಹೊಸ ಸಂಪ್ರದಯದ ಆದಿದಮ್‌ನ್ನು ಸ್ಥಾಪಿಸಿದರು.
  • ಮಹಮ್ಮದ್‌‌ ರಹೀಮ್‌ ಬಾವಾ ಮುಹಯದ್ದೀನ್ ಇವರು ತನ್ನ ಜ್ಞಾನ ಮತ್ತು ಅನುಭವಗಳನ್ನು ಎಲ್ಲಾ ಕುಲ ಮತ್ತು ಧರ್ಮದ ಜನರೊಂದಿಗೆ ಮತ್ತು ಜಗತ್ತಿನ ಎಲ್ಲಾ ಭಾಗದಲ್ಲಿ ಹಂಚಿಕೊಂಡ ಶ್ರೀಲಂಕಾ ದ್ವೀಪದ ಒಬ್ಬ ಪರಮ ಪೂಜ್ಯ ಸೂಫಿ ಸಂತರು.

ಬಹಳ ವರ್ಷಗಳಿಂದ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ವಾಸವಿರುವ ನಿರ್ಮಲ ಶ್ರಿವಾತ್ಸವ ಸಹಜ ಯೋಗದ ಸ್ಥಾಪಕರು.

  • ಧರ್ಮೋಶಿಯನ್ ವಜ್ರಕಾರ್ಯನಾದ ರೆಜಿನಾಲ್ಡ್‌ ರೇ ಚೋಗ್ಯಾಮ್ ತ್ರೊಂಗ್ಪಾನನ ಹಿರಿಯ ಶಿಷ್ಯ.
  • ಸದ್ಗುರು ಸಿವಯ ಸುಬ್ರಮಣ್ಯಸ್ವಾಮಿ (1927–2001) ಇವರು ಕೌಐ ಆಧೀನಾಮ ಮತ್ತು ಹಿಂದೂಯಿಸಮ್‌ ಟುಡೇ ನಿಯತಕಾಲಿಕೆಯ ಸ್ಥಾಪಕರು.
  • ಸಿರಿಯೊ ಕರ್ರಪಾ ಇವರು ಕಿರ್ಪಾಲ್‌ ಸಿಂಗ್‌ನ ಮತ್ತು ಅಜೈಬ್‌ ಸಿಂಗ್‌ರ ಒಬ್ಬ ಉತ್ತರಾಧಿಕಾರಿ (ಸಂತ್ ಮಟ್ ಸಂಪ್ರದಾಯದವನು).
  • ಗುರುರಾಜ‌ ಆನಂದ ಯೋಗಿ Archived 2010-09-19 ವೇಬ್ಯಾಕ್ ಮೆಷಿನ್ ನಲ್ಲಿ., ರಾಜೇಶ್‌ ಆನಂದ Archived 2010-09-21 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಜಾಸ್ಮಿನಿ ಆನಂದ Archived 2012-07-01 ವೇಬ್ಯಾಕ್ ಮೆಷಿನ್ ನಲ್ಲಿ.ರವರು ಫೌಂಡೇಶನ್ ಫಾರ್‌ ಇಂಟರ್‌ನ್ಯಾಶನಲ್‌ ಸ್ಪಿರಿಚುವಲ್ ಅನ್‌ಫೊಲ್ಡ್‌ಮೆಂಟ್‌ನ ಸ್ಥಾಪಕರು ಮತ್ತು ಅದರ ನಾಯಕರುಗಳು.

ದೃಷ್ಟಿಕೋನಗಳು

ಗುರು ಮತ್ತು ಗುರು-ಶಿಷ್ಯ ಪರಂಪರೆಯು ಪಾಶ್ಚಿಮಾತ್ಯ ಜಾತ್ಯತೀತ ಶಿಷ್ಯರುಗಳು, ಧರ್ಮಶಾಸ್ತ್ರಜ್ಞರು, ಆರಾಧನಾ-ಪದ್ಧತಿಯ ವಿರೋಧಕರು ಮತ್ತು ನಂಬಿಕೆಯ ವಿರೋಧಿಗಳಿಂದ ಟೀಕೆಗೊಳಗಾಗಿದೆ ಮತ್ತು ವಿಮರ್ಶಿಸಲ್ಪಟ್ಟಿದೆ.

  • ಡಾ. ಡೇವಿಡ್‌ ಸಿ. ಲೇನ್‌ ಗುರುಗಳ ಮೌಲ್ಯವನ್ನು ತಿಳಿಸಲು ತನ್ನ ಪುಸ್ತಕವಾದ ಎಕ್ಸ್‌ಪೊಸಿಂಗ್‌ ಕಲ್ಟ್ಸ್‌: ವೆನ್‌ ದಿ ಸ್ಕೆಪ್ಟಿಕಲ್‌ ಮೈಂಡ್‌ ಕನ್‌ಫ್ರಂಟ್ಸ್‌ ದಿ ಮಿಸ್ಟಿಕಲ್‌ ‌ದಲ್ಲಿ ಏಳು ಅಂಶಗಳನ್ನೊಳಗೊಂಡ ಪಟ್ಟಿಯನ್ನು ಸೂಚಿಸುತ್ತಾನೆ. ಅವನ ಒಂದು ಅಂಶದಲ್ಲಿ ಆಧ್ಯಾತ್ಮಿಕ ಗುರುಗಳು ನೈತಿಕತೆಯ ಶ್ರೇಷ್ಠ ಮೌಲ್ಯಗಳನ್ನು ಹೊಂದಿರಬೇಕು ಮತ್ತು ಆ ಗುರುಗಳ ಅನುಯಾಯಿಗಳು ಒಖಾಮ್ ರೇಜರ್ ಅನ್ನು ಅನುಸರಿಸುತ್ತ ಮತ್ತು ಸಮಯ ಪ್ರಜ್ಞೆಯನ್ನು ಉಪಯೋಗಿಸಿಕೊಂಡು ಆಧ್ಯಾತ್ಮಿಕ ಶಿಕ್ಷಕರ ನಡತೆಯನ್ನು ಅರ್ಥವಿವರಣೆ ಮಾಡಬೇಕು ಮತ್ತು ನಿಷ್ಕಪಟವಾಗಿ ಅನೈತಿಕ ನಡವಳಿಕೆಯನ್ನು ವಿವರಿಸಲು ಅನಾವಶ್ಯಕವಾಗಿ ಒಗಟಾದ ವಿವರಣೆಗಳನ್ನು ಬಳಸಬಾರದು. ಲೇನ್‍ನ ಪ್ರಕಾರ ಮತ್ತೊಂದು ಅಂಶದಲ್ಲಿ ಗುರುವು ತನ್ನ ಬಗ್ಗೆ ದೊಡ್ಡದಾಗಿ ಹೇಳಿಕೊಳ್ಳುತ್ತಾನೆ, ಉದಾ: ತಾನೇ ದೇವರೆನ್ನುತ್ತಾನೆ. ತನ್ನ ಬಗ್ಗೆ ಹೆಚ್ಚು ಹೇಳಿಕೊಳ್ಳುತ್ತಾ ಹೋದಂತೆ ಅವನು ಕಡಿಮೆ ವಿಶ್ವಾಸಾರ್ಹನಾಗುತ್ತಾನೆ. ಡಾ.ಲೇನ್‌ನ ಐದನೇ ಅಂಶದಲ್ಲಿ ತನ್ನ ಬಗ್ಗೆ ತಾನೇ ಹೇಳಿಕೊಳ್ಳುವವರು ಒಳ್ಳೆಯ ವಂಶಪರಂಪರೆಯಿಂದ ಬಂದವರಿಗಿಂತ ಹೆಚ್ಚು ಅವಿಶ್ವಸನೀಯವೆನಿಸುತ್ತಾರೆ.
  • ಪೌರಾತ್ಯ ಸಂಪ್ರದಾಯದ ಗುರುಗಳು ಪಶ್ಚಿಮದಲ್ಲಿನವರಿಗೆ, ಅವರ ವಿಚಾರಧಾರೆಗಳನ್ನು ಅರ್ಥಮಾಡಿಕೊಳ್ಳುವುದು ಅವರ ವೇಷ ಭೂಷಣದಂತೆಯೇ ಕಷ್ಟಕರವಾಗಿ ಕಾಣುತ್ತದೆ, ಅಮೇರಿಕಾದ ಬಹಳ ಪ್ರಸಿದ್ಧ ಭಾರತಜ್ಞ ಡಾ. ಜಾರ್ಜ್‌ ಫಾಯುರ್‌ಸ್ಟೀನ್‌ ತನ್ನ ಡೀಪರ್‌ ಡೈಮೆನ್‌ಶನ್‌ ಆಫ್ ಯೋಗ: ಥಿಯರಿ ಆ‍ಯ್‌೦ಡ್‌ ಪ್ರಾಕ್ಟೀಸ್‌ ಪುಸ್ತಕದಲ್ಲಿನ ಅಂಡರ್‌ಸ್ಟಾಂಡಿಗ್‌ ದಿ ಗುರು ಲೇಖನದಲ್ಲಿ ಬರೆಯುವಂತೆ: "ಗುರುವಿನ ಅಥವಾ ಆಧ್ಯಾತ್ಮಿಕ ಶಿಕ್ಷಕನ ಸಾಂಪ್ರದಾಯಿಕ ಪಾತ್ರವನ್ನು ಪಾಶ್ಚಿಮದವರು ವಿಶಾಲವಾಗಿ ಅರ್ಥೈಸಿಕೊಂಡಿಲ್ಲ, ಯೋಗದ ಅಭ್ಯಾಸವನ್ನು ಕಲಿಸಿ ಕೊಡುವವರೂ ಅಥವಾ ಕೆಲವು ಪೂರ್ವ ಸಂಪ್ರದಾಯದ ಶಿಷ್ಯತ್ವವನ್ನು ಅನುಸರಿಸುವರು ಸಹ ಇದನ್ನು ಅರ್ಥೈಸಿಕೊಂಡಿಲ್ಲ. [...] ಆಧ್ಯಾತ್ಮಿಕ ಶಿಕ್ಷಕರು ಸ್ವಭಾವತಃ, ಸಂಪ್ರದಾಯ ಬದ್ಧವಾದ ಮೌಲ್ಯಗಳು ಮತ್ತು ಧ್ಯೇಯದ ಅನುಸರಣೆಯೆಂಬ ಪ್ರವಾಹದ ವಿರುದ್ಧವಾಗಿ ಈಜಲು ಕಲಿತಿರುತ್ತಾರೆ.

ಅವರು ಐಹಿಕ ಸಂಪತ್ತನ್ನು ಹೊಂದಲು ಅಥವಾ ಶೇಖರಿಸಲು ಅಥವಾ ಮಾರುಕಟ್ಟೆಯಲ್ಲಿ ಚರ್ಚಿಸಲು ಅಥವಾ ಮನುಷ್ಯರ ಅಹಂನ್ನು ಸಂತೋಷ ಪಡಿಸಲು ಆಸಕ್ತರಾಗಿರುವುದಿಲ್ಲ. ಅವರು ಶಿಷ್ಟಾಚಾರದ ಕುರಿತಾಗಿಯೂ ಇರುವುದಿಲ್ಲ. ಒಂದು ನಮೂನೆಯಲ್ಲಿ, ಅವರ ಸಂದೇಶಗಳು ತೀವ್ರ ಸ್ವಭಾವದವಾಗಿರುತ್ತದೆ, ನಮ್ಮ ಉದ್ದೇಶವನ್ನು ಅನ್ವೇಶಿಸಿಸುತ್ತವೆ, ನಮ್ಮ ಅಹಂನ ಭಾವೋದ್ರೇಕವನ್ನು ಇಲ್ಲವಾಗಿಸುತ್ತದೆ, ನಮ್ಮ ಆಧ್ಯಾತ್ಮಿಕ ಕುರುಡಿನಿಂದ ಹೊರಬರಲು ಸಹಾಯಕವಾಗುತ್ತದೆ, ನಮ್ಮ ಸುತ್ತಲಿನವರೊಂದಿಗೆ ಶಾಂತಿಯಿಂದಿರುವಂತೆ ಮಾಡುತ್ತದೆ, ಮತ್ತು ಕೊನೆಯದಾಗಿ ಮಾನವ ಸ್ವಾಭಾವದ ತಿರುಳಾದ ಆತ್ಮವನ್ನು ಅರಿಯಲು ಸಹಾಯಕವಾಗುತ್ತದೆ. ಸಂಪ್ರದಾಯ ಬದ್ಧವಾದ ಬದುಕಿನ ಅನುಸರಣೆಗಾಗಿ ತಮ್ಮ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಲು ಬಯಸುವವರಿಗೆ ಈ ರೀತಿಯ ಸಂದೇಶವು ಕ್ರಾಂತಿಕಾರಿ, ವಿನಾಶಕಾರಕ ಮತ್ತು ಗಾಢವಾಗಿ ಗೊಂದಲದ ಮೂಲಕ ಮಹತ್ತರ ಬದಲಾವಣೆಯನ್ನುಂಟು ಮಾಡುತ್ತದೆ." ಅವನ ಎನ್‌ಸೈಕ್ಲೊಪೀಡಿಕ್‌ ಡಿಕ್ಷನರಿ ಆಫ್ ಯೋಗ ದಲ್ಲಿ (1990), ಡಾ.ಫಾಯುರ್‌ಸ್ಟೀನ್‌ ಬರೆಯುವಂತೆ ಪಶ್ಚಿಮದಲ್ಲಿನ ಯೋಗ ದ ಆವದು, ಆಧ್ಯಾತ್ಮಿಕ ಶಿಷ್ಯತ್ವದ ಸೂಕ್ತತೆಯ ಮತ್ತು ಆಧ್ಯಾತ್ಮಿಕ ಅಧಿಕಾರದ ವಂಶಪಾರಂಪರತೆಯ ಬಗ್ಗೆ ಪ್ರಶ್ನೆಯು ಉದ್ಭವಿಸುತ್ತದೆ.

  • ಮನಃಶಾಸ್ತ್ರದ ಬ್ರಿಟಿಷ್‌ ಪ್ರಾಧ್ಯಾಪಕ ಆ‍ಯ್‌೦ಥೋನಿ ಸ್ಟೋರ್‌ನ ಫೀಟ್‌ ಆಫ್‌ ಕ್ಲೇ: ಎ ಸ್ಟಡಿ ಆಫ್‌ ಗುರೂಸ್‌ ಪುಸ್ತಕದಂತೆ, (ಅವನಿಂದ ಭಾಷಾಂತರಗೊಂಡ "revered teacher"‌) ಗುರು ಎಂಬ ಪದವನ್ನು ಯಾರು ವಿಶೇಷ ಜ್ಞಾನವನ್ನು ಹೊಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೋ ಹಾಗೂ ಅವರ ವಿಶೇಷ ಜ್ಞಾನದಿಂದ ಜನರು ಹೇಗೆ ಶಾಂತಿಯುತ ಜೀವನವನ್ನು ಸಾಗಿಸಲು ಅದು ಸಹಾಯಕವಾಗುತ್ತದೆ ಎಂಬುದನ್ನು ಹೇಳಿಕೊಳ್ಳುತ್ತಾರೋ ಅವರಿಗೆ ಈ ಶಬ್ದ ಸಂಬಂಧಿಸಿದ್ದು ಎಂದು ಹೇಳುತ್ತಾರೆ. ಗುರುಗಳು ಸಾಮಾನ್ಯವಾದ ಸ್ವಭಾವ ಲಕ್ಷಣಗಳನ್ನು (ಉದಾ: ಒಂಟಿಯಾಗಿ) ಹೊಂದಿರುತ್ತಾರೆ ಮತ್ತು ಕೆಲವೊಬ್ಬರು ಸ್ವಲ್ಪ ಮಟ್ಟಿಗಿನ ಸ್ಕ್ರಿಜೊಫಿನಿಯಾ ರೋಗದಿಂದ ಬಳಲುತ್ತಿರುತ್ತಾರೆ ಎಂದು ಎಂದು ವಾದಿಸಿತ್ತಾನೆ. ನಿರಂಕುಶವಾದ ಗುರುಗಳು, ಸಂಶಯಗ್ರಸ್ತ, ವಾಕ್ಪಟುತ್ವವುಳ್ಳವರು, ಅಥವಾ ಯಾರು ಅವರ ಅನುಯಾಯಿಗಳ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಾರೊ, ಅವರು ಹೆಚ್ಚು ಅವಿಶ್ವಾಸನೀಯ ಮತ್ತು ಅಪಾಯಕರವಾಗಿರುತ್ತಾರೆ ಎಂದು ಅವನು ವಾದಿಸುತ್ತಾನೆ. ಸ್ಟೊರ್‌, ನಕಲಿ ಗುರುಗಳನ್ನು ಗುರುತಿಸಲು ಐಲೀನ್‌ ಬಾರ್ಕರ್ಸ್‌ನ ಪಟ್ಟಿಯನ್ನು ಪರಾಮರ್ಶಿಸಲು‌ ತಿಳಿಸುತ್ತಾನೆ. ಅವನು ಕೆಲವು ಗುರುಗಳು ವೈಯಕ್ತಿಕವಾದ ದಿವ್ಯಜ್ಞಾನವನ್ನು ಹೊಂದಿರುವುದಾಗಿ ಆರೋಪಿಸಿಕೊಳ್ಳುತ್ತಾರೆ. ಮತ್ತು ಮುಕ್ತಿಗಾಗಿ ಹೊಸ ಆಧ್ಯಾತ್ಮಿಕ ದಾರಿಯನ್ನು ತಾವು ಹೇಳಿಕೊಡುವುದಾಗಿ ಹೇಳುತ್ತಾರೆ. ಸ್ಟೊರ್‌ ಬರೆದಿರುವ ಗುರುಗಳ ಕುರಿತಾದ ವಿಮರ್ಶಾ ಗ್ರಂಥವು ಗುರುವು ತನ್ನ ಶಿಷ್ಯ ಅಥವಾ ಶಿಷ್ಯೆಯ ಮೇಲಿನ ಅಧಿಕಾರಶಾಹಿ ಮನೋಭಾವದಿಂದ ಅವರನ್ನು ದುರ್ಬಳಕೆ ಮಾಡಿಕೊಳ್ಳಬಹುದಾದ ಸಂಭವನೀಯತೆಯ ಅಪಾಯವನ್ನೂ ವಿವರಿಸುತ್ತಾನೆ. ಆದಾಗ್ಯೂ ಸ್ಟೋರ್‌ ಆ ರೀತಿ ಮಾಡುವುದನ್ನು ನಿಗ್ರಹಿಸುವ, ನೈತಿಕವಾಗಿ ಶ್ರೇಷ್ಠವಾದ ಶಿಕ್ಷಕರಿರುವುದನ್ನು ನಿಜವೆಂದು-ಒಪ್ಪಿಕೊಳ್ಳುತ್ತಾನೆ. ಅವನು ವ್ಯಕ್ತಿ ಆದರ್ಶಿತ ನಂಬಿಕೆಯ ವ್ಯವಸ್ಥೆಯನ್ನು ಕೆಲವು ಗುರುಗಳು ಪ್ರೊತ್ಸಾಹಿಸುತ್ತಾರೆ ಮತ್ತು ಅವರು ಮನೊವ್ಯಾದಿಯಿಂದ ನರಳುತ್ತಿರುವ ಸಂದರ್ಭದಲ್ಲಿ ಅವರ ಮನಸಿಗೆ ತೋಚುವ ಕಲ್ಪನೆಗಳನ್ನು ಇತರರು ನಂಬುವಂತೆ ಮಾಡುತ್ತಾರೆ. ಸ್ಟೋರ್‌ ’ಗುರು’ ಎಂಬ ಪದವನ್ನು ವಿಭಿನ್ನ ವ್ಯಕ್ತಿಗಳಾದ ಜೀಸಸ್‌, ಮೊಹಮ್ಮದ್‌, ಬುದ್ಧ, ಗುರ್ಜಿಫ್‌, ರುಡಾಲ್ಫ್ ಸ್ಟೈನರ್, ಕಾರ್ಲ್ ಜಂಗ್‌, ಸಿಗ್ಮಂಡ್‌ ಫ್ರೈಡ್‌, ಜಿಮ್‌ ಜಾನ್ಸ್‌ ಮತ್ತು ಡೆವಿಡ್‌ ಕೊರೆಶ್‌ರಿಗೆ ಅನ್ವಯಿಸುತ್ತಾನೆ. ಬೆಲ್ಜಿಯಂನ ಭಾರತಜ್ಞ ಕೋಯನ್‌ರಾಡ್ ಎಲ್ಸ್ಟ್‌ನು ಪ್ರವಾದಿ ಎಂಬ ಪದವನ್ನು ತಪ್ಪಿಸಿ ಅದರ ಬದಲಾಗಿ ಅನೇಕರಿಗೆ ಗುರು ಎಂಬ ಪದವನ್ನು ಬಳಸಿದ್ದಕ್ಕಾಗಿ ಸ್ಟೋರ್ಸ್‌ನ ಪುಸ್ತಕವನ್ನು ಟೀಕಿಸುತ್ತಾನೆ. ಎಲ್ಸ್ಟ್‌ನು, ಸ್ಟೋರ್ಸ್‌‌ನ ವಾದವನ್ನು ಪಾಶ್ಚಾತ್ಯರ ಪರ ಹಾಗೂ ಕ್ರಿಶ್ಚಿಯನ್‌ರ ಪರ ಎಂದು ಪ್ರತಿಪಾದಿಸುತ್ತಾನೆ. ಒಬ್ಬ ಮನಶಾಸ್ತ್ರಜ್ಞ ಮತ್ತು ಬುದ್ಧ ಧರ್ಮ ಅನುಸರಿಸುವವರಾದ ರಾಬ್‌ ಪ್ರೀಸ್‌‌, ತನ್ನ ದಿ ನೋಬಲ್‌ ಇಂಪರ್‌ಫೆಕ್ಷನ್‌ ಪುಸ್ತಕದಲ್ಲಿ ಶಿಕ್ಷಕ/ಅನುಯಾಯಿ ಸಂಬಂಧವು ಅಮೂಲ್ಯವಾದದ್ದು ಮತ್ತು ಫಲಭರಿತವಾದ ಅನುಭವವಾಗಿದೆ, ಈ ವಿಧಾನವು ಆಧ್ಯಾತ್ಮಿಕ ಶಿಕ್ಷಕರಿಗೆ ಹಾಗೂ ಅದರ ಹಾನಿಗಳಿಗೆ ಸಂಬಂಧ ಪಟ್ಟುದುದಾಗಿದೆ. ಇದು ಸಂಭಾವ್ಯ ಸಾಧ್ಯ ಹಾನಿಯೆಂದರೆ ಪಾಶ್ಚಿಮಾತ್ಯರಲ್ಲಿನ ಗುರು/ಶಿಷ್ಯರ ನಡುವಿನ ಸರಳ ಗೌರವಯುತ ಸಂಬಂಧದ ಪರಿಣಾಮ, ಅದರೊಂದಿಗೆ ಪೂರ್ವದ ಶಿಕ್ಷಕರ ಪಾಶ್ಚಿಮಾತ್ಯ ಮನಃಶಾಸ್ತ್ರದ ಸ್ವಭಾವವನ್ನು ಅಥಮಾಡಿಕೊಳ್ಳುವಿಕೆಯ ಲೋಪದ ಫಲವಾಗಿದೆ.

ಪ್ರೀಸ್ ಹೆಚ್ಚಿನ ಪಾಶ್ಚಿಮಾತ್ಯ ಮನಃಶಾಸ್ತ್ರದ ದೃಷ್ಟಿಕೋನದಿಂದ ಗುರು/ಶಿಷ್ಯರ ಸಂಬಂಧದ ಬೆಳವಣಿಗೆ ವಿವರಿಸಲು ವರ್ಗಾವಣೆ/ದೀಕ್ಷೆಯನ್ನು ಪರಿಚಯಿಸುತ್ತಾನೆ. ಅವನು ಬರೆಯುತ್ತಾನೆ: "ಸರಳವಾಗಿ ಹೇಳುವುದಾದರೆ ದೀಕ್ಷೆ ಎಂಬುದು ಪ್ರಜ್ಞಾಪೂರ್ವಕವಲ್ಲದೆ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ತನ್ನೊಳಗಿನ ವಿಶೇಷ ಶಕ್ತಿಯನ್ನು ವರ್ಗಾವಣೆ ಮಾಡುವ ಕ್ರಿಯೆಯಾಗಿದೆ. " ಈ ಪರಿಕಲ್ಪನೆಯು ಬೆಳವಣಿಗೆಯಲ್ಲಿ ಪ್ರೀಸ್ ಬರೆಯುತ್ತಾನೆ, ನಾವು ಒಳಗಿನ ಗುಣಗಳನ್ನು ಇನ್ನೊಬ್ಬರಿಗೆ ವರ್ಗಾಯಿಸುವಾಗ, ಅ ಪರಿಣಾಮದ ಕಲ್ಪನೆ ಮಾಡುವಂತೆ ನಾವು ಆ ಮನುಷ್ಯನಿಗೆ ಶಕ್ತಿಯನ್ನು ಕೊಡಬಹುದು, ಶ್ರೇಷ್ಟವಾದ ಸಾಮರ್ಥ್ಯ ಮತ್ತು ಸ್ಪೂರ್ತಿಯನ್ನು ಹೊತ್ತೊಯ್ಯುವ ಸಾಮರ್ಥ್ಯದೊಂದಿಗೆ ಹೆಚ್ಚಿನ ಅಪಾಯವೂ ಇದೆ: "ಈ ಶಕ್ತಿಯನ್ನು ಬೇರೆಯವರಿಗೆ ಕೊಡುವಾಗ ಅವರು ನಮ್ಮ ಮೇಲೆ ನಿರ್ಧಿಷ್ಟವಾದ ಹಿಡಿತ ಮತ್ತು ಪ್ರಭಾವವನ್ನು ಹೊಂದುತ್ತಾರೆ.ನಾವು ಮೂಲವ್ಯಕ್ತಿಯ ಶಕ್ತಿಯಿಂದ ಸೂರೆಗೊಳ್ಳು ಅಥವಾ ಮಂತ್ರಮುಗ್ಧಗೊಂಡಾಗ ಇದನ್ನು ವಿರೋಧಿಸುವುದು ಕಷ್ಟವಾಗುತ್ತದೆ.

  • ಒಬ್ಬ ಕ್ಯೂಬೆಕ್‌ನ ಡಾಸನ್‌ ಕಾಲೇಜಿನ ಧಾರ್ಮಿಕ ಅಧ್ಯಯನಮಾಡಿದ ಪ್ರಾಧ್ಯಾಪಕನಾದ ಸೂಸನ್‌ ಜೆ ಪಾಲ್ಮರ‍್ ಪ್ರಕಾರ ಗುರು ಎಂಬ ಪದವು ಫ್ರಾನ್ಸ್‌ನಲ್ಲಿ ಹೆಚ್ಚು ನಕಾರಾತ್ಮಕ ಅರ್ಥವನ್ನು ಹೊಂದಿದೆ.
  • ಮನಃಶಾಸ್ತ್ರಜ್ಞ ಅಲೆಕ್ಸಾಂಡರ್‌ ಡ್ಯೂಶ್ಚ್‌‌ನು ಒಂದು ಸಣ್ಣ ಪಂಥವಾದ, 1972ರಲ್ಲಿ ಅಮೇರಿಕಾದ ಗುರು, ಬಾಬ ಅಥವಾ ಜೆಫ್‌ ಎಂದು ಕರೆಯಲ್ಪಡುವವನು ನ್ಯೂಯಾರ್ಕ್‌ನಲ್ಲಿ ಸ್ಥಾಪಿಸಲಾದ ದ ಫ್ಯಾಮಿಲಿ (ಫ್ಯಾಮಿಲಿ ಇಂಟರ್‌ನ್ಯಾಶನಲ್‌ನೊಂದಿಗೆ ಗೊಂದಲಗೊಳ್ಳಬೇಡಿ

) ಬಹಳ ಕಾಲ ಅಧ್ಯಯನ ನಡೆಸಿದನು. ಗುರುವು ಹೆಚ್ಚಾಗುತ್ತಿರುವ ಛಿದ್ರಮನಸ್ಕ ಸ್ವಭಾವವನ್ನು ಪ್ರದರ್ಶಿಸುತ್ತಿದ್ದನು. ಡ್ಯೂಶ್ಚ್‌ ಈ ಮನುಷ್ಯನ ಪ್ರಾಯಶಃ ಜ್ಯೂ ಜನಾಂಗದ ಅನುಯಾಯಿಯಾದವರು ವ್ಯಾಖ್ಯಾನಿಸುವಂತೆ ಗುರುವಿನ ರೋಗಿಷ್ಠ ಮನಸ್ಥಿತಿಯಲ್ಲಿರುವ ಅವನು ವಿವಿಧ ಹಿಂದೂ ದೇವರುಗಳ ಬಗೆಗೆ ಅಭಿಪ್ರಾಯಗಳನ್ನು ಮತ್ತು ತನ್ನ ನಡವಳಿಕೆಯನ್ನು ಪವಿತ್ರ ಹುಚ್ಚು , ಮತ್ತು ಅವನ ಕ್ರೂರ ವರ್ತನೆಯನ್ನು ಅವರು ಗಳಿಸಿದ ಶಿಕ್ಷೆಯೆನ್ನುವ ವಿವಿಧ ಹೇಳಿಕೆಗಳೊಂದಿಗೆ ಓಲಾಡುತ್ತಾನೆ, ಎಂದು ಅಭಿಪ್ರಾಯ ಪಡುತ್ತಾನೆ. 1976ರಲ್ಲಿ ಆ ಗುರುವು ಪಂಥವನ್ನು ವಿಸರ್ಜಿಸಿದಾಗ, ಜೆಫ್‌ನ ಹಿಂದಿನ ಜೀವನವನದ ಲೆಕ್ಕಾಚಾರಗಳನ್ನಾಧರಿಸಿ ಒಬ್ಬ ಲೇಖಕನಿಂದ ಅವನ ಮಾನಸಿಕ ಸ್ಥಿತಿಯು ದೃಡಗೊಳಿಸಲ್ಪಟ್ಟಿತು.

  • ನಿಜ್ಮೆಜೆನ್‌ನಲ್ಲಿನ ಕ್ಯಾಥೊಲಿಕ್‌ ಯುನಿವರ್ಸಿಟಿಯಲ್ಲಿ ಧಾರ್ಮಿಕ ಮನಃಶಾಸ್ತ್ರದ ಪ್ರಾಧ್ಯಾಪಕರಾಗಿರುವ ಜಾನ್ ವಾನ್‌ ಡರ್‌ ಲಾನ್ಸ್‌ನು (1933–2002) ಒಂದು ಪುಸ್ತಕದಲ್ಲಿ ಬರೆದನು. ನೆದರ್‌ಲ್ಯಾಂಡ್‌ ಮೂಲದ ಕ್ಯಾಥೋಲಿಕ್‌ ಸ್ಟಡಿ ಸೆಂಟರ್‌ ಫಾರ್‌ ಮೆಂಟಲ್‌ ಹೆಲ್ತ್‌ ಇದನ್ನು ಪ್ರಾಯೋಜಿಸಿತು.

ಗುರು ಮತ್ತು ಶಿಷ್ಯರ ಸಂಪರ್ಕದ ಅನುಪಸ್ಥಿತಿಯಲ್ಲಿ ಗುರುಗಳ ಅನುಯಾಯಿಗಳು ಮತ್ತು ಅವರ ಅವಲಂಬನೆಯಲ್ಲಿನ ಅಪಾಯಗಳ ಕುರಿತಾಗಿ ಬರೆದನು. ಅದೆಂದರೆ ವಿದ್ಯಾರ್ಥಿಗಳಿಂದ ಹೆಚ್ಚಿದ ಗುರುಗಳ ಮಾದರಿಯನ್ನಾಗಿಸುವ ಅವಕಾಶಗಳು( ಕಾಲ್ಪನಿಕ ಕಥೆಗಳನ್ನು ಹೆಣೆಯುವುದು ಮತ್ತು ವ್ಯಕ್ತಿಯಾರಾಧನೆ), (myth making and deification), ಮತ್ತು ಹೆಚ್ಚಾದ ತಪ್ಪಾದ ಅಧ್ಯಾತ್ಮಜ್ಞಾನದ ಕುರಿತಾಗಿ ಬರೆದನು. ಗುರುವಿನ ದೈವೀಕರಣವು ಪೌರಾತ್ಯ ಆಧ್ಯಾತ್ಮಿಕತೆಯ ಸಾಂಪ್ರದಾಯವಾಗಿದೆ. ಆದರೆ ಪೌರಾತ್ಯ ಸಾಂಸ್ಕೃತಿಕತೆಯಿಂದ ಕಳಚಿಕೊಂಡಾಗ ಮತ್ತು ಪಾಶ್ವಿಮಾತ್ಯರು ಅದನ್ನು ಅನುಸರಿಸಿದಾಗ, ಗುರುವಿನ ಪ್ರತ್ಯೇಕತೆ ಮತ್ತು ಅವನ ಪ್ರತಿನಿಧಿಸುವಿಕೆಯು ಕೊನೆಗೊಂಡಿತು. ಇದರ ಪರಿಣಾಮವಾಗಿ ಗುರು ಶಿಷ್ಯರ ನಡುವಿನ ಸಂಬಂಧವು ಮಿತಿಯಿಲ್ಲದಂತಾಗಿ ಕೊನೆಗೊಂಡಿತು ಮತ್ತು ವ್ಯಕ್ತಿಯಾರಾಧನೆಯು ಅಪಾಯವು ಎದುರಾಯಿತು ಎಂದು ಅವನು ವಾದಿಸುತ್ತಾನೆ.

  • ದ ಗುರು ಪೇಪರ್ಸ್‌ ಎಂಬ ಅವರ 1993ರಲ್ಲಿನ ಪುಸ್ತಕದಲ್ಲಿ, ಲೇಖಕರಾದ ಡಯಾನ ಅಲ್‌ಸ್ಟಡ್‌ ಮತ್ತು ಜೊಯಲ್‌ ಕ್ರಾಮರ್‌ ಗುರು ಶಿಷ್ಯ ಪರಂಪರೆಯನ್ನು ವಿರೋಧಿಸುತ್ತಾರೆ, ಏಕೆಂದರೆ ಅದರ ಘಟಿಸಿದ ಸೋಲನ್ನು ಅವರು ನೋಡಿದರು. ಗುರುವಿನ ಶಿಷ್ಯನ ಮೇಲಿನ ನಿರಂಕುಶಾಧಿಕಾರದಂತಹ ಕುಂದುಗಳನ್ನು ಒಳಗೊಂಡಿತ್ತು. ಇದನ್ನು ಗುರುಗಳು ಅವರ ದೃಷ್ಠಿಯಲ್ಲಿ ತನ್ನಲ್ಲಿ ಶರಣಾಗತನಾಗಲು ಉತ್ತೇಜನವೆಂದು ಭಾವಿಸಿದ್ದರು. ಅಲ್‌ಸ್ಟಡ್‌ ಮತ್ತು ಕ್ರಾಮರ್‌ರು ಪ್ರತಿಪಾದಿಸುವಂತೆ ಗುರುಗಳು ವೇಷಧಾರಿಗಳಾಗಿರಲು ಬಯಸುತ್ತಾರೆ.ಏಕೆಂದರೆ ಅವರುಗಳು ತಮ್ಮ ಶಿಷ್ಯರನ್ನು ಆಕರ್ಷಿಸಲು ಮತ್ತು ನಿರ್ವಹಿಸಲು ಬಯಸುತ್ತಾರೆ. ಗುರುಗಳು ತಮ್ಮನ್ನು ಸಾಮಾನ್ಯ ಜನರು ಮತ್ತು ಉಳಿದ ಗುರುಗಳಿಗಿಂತ ಶುದ್ಧ ಮತ್ತು ಶ್ರೇಷ್ಠ ಎಂದು ತೋರಿಸಿಕೊಳ್ಳಬೇಕಾಗುತ್ತದೆ.
  • 2003ರ ಡಚ್‌ ಪತ್ರಿಕೆಯಾದ ಡೆ ವೊಲ್ಕ್ಸ್‌ಕ್ರಂಟ್‌ನಲ್ಲಿ ಬರೆದ ಲೇಖನದಲ್ಲಿ ಪತ್ರಕರ್ತ ಸಚಾ ಕೆಸ್ಟರ್‌ನ ಪ್ರಕಾರ, ಗುರುವಿನ ಅನ್ವೇಷಣೆಯಲ್ಲಿ ಎಚ್ಚರ ಹೊಂದಿರಬೇಕಾದುದು ಅಗತ್ಯ, ಭಾರತದ ಅನೇಕ ಪವಿತ್ರ ಮಾನವರನ್ನು ಮತ್ತು ಸತ್ಯ ಸಾಯಿ ಬಾಬಾರನ್ನು ಕೆಸ್ಟರ್ ವಂಚಕರೆಂದು ಹೇಳುತ್ತಾರೆ. ಈ ಲೇಖನದಲ್ಲಿ ಅವನು ಕರ್ಮ ಕೋಲ ಪುಸ್ತಕದಲ್ಲಿನ ಕೆಲವು ಸಾಲುಗಳನ್ನು ಉಲ್ಲೇಖಿಸುತ್ತಾನೆ. "ಗುರುಗಳೆಂದು ಕರೆಸಿಕೊಳ್ಳಲು ಅರ್ಹರಾಗಲು ಕೆಲವು ಅರ್ಹತಾ ಯಾದಿ ಇರಬೇಕು. ’ಕರ್ಮ ಕೋಲ’ ಪುಸ್ತಕದ ಲೇಖಕಿ ಗೀತಾ ಮೆಹ್ತಾರಿಗೆ ಜರ್ಮನ್‌ ಅರ್ಥ ಶಾಸ್ತ್ರಜ್ಞೆಯೊಬ್ಬರು ಹೇಳುವ ಸಾಲುಗಳನ್ನು ಅವನು ಗೀತಾ ಮೆಹ್ತಾರ, "ಗುರುಗಳಿಗೆ ಗುಣಮಟ್ಟದ ನಿಯಂತ್ರಣವನ್ನು ಪ್ರಾರಂಭಿಸಬೇಕೆಂಬುದು ನನ್ನ ಅಭಿಪ್ರಾಯ. ಹಲವಾರು ಭಾರತದಲ್ಲಿನ ನನ್ನ ಗೆಳೆಯರು ಈ ವಿಷಯದಲ್ಲಿ ಎಡವಿದ್ದಾರೆ" ಎಂಬ ಮಾತನ್ನು ಉಲ್ಲೇಖಿಸುತ್ತಾನೆ. ಗೀತಾ ಮೆಹ್ತಾ ಅವರು "ಕೆಲವು ಪಾಶ್ಚಿಮಾತ್ಯರು ಆಧ್ಯಾತ್ಮವನ್ನು ನಂಬುವುದಿಲ್ಲ ಮತ್ತು ನಿಜವಾದ ಗುರುವನ್ನು ಲೇವಡಿ ಮಾಡುತ್ತಾರೆ" ಎಂಬ ಸುರನ್ಯಾ ಚಕ್ರವರ್ತಿಯ ವಿಮರ್ಶಾತ್ಮಕ ಹೇಳಿಕೆಯನ್ನೂ ಕೂಡಾ ಉಲ್ಲೇಖಿಸುತ್ತಾರೆ. ಆದರೆ ಚಕ್ರವರ್ತಿಯವರ ಹೇಳಿಕೆಯಂತೆ ಉಳಿದ ಕೆಲವು ಪಾಶ್ಚಿಮಾತ್ಯರಿಗೆ ಆಧ್ಯಾತ್ಮದ ಕುರಿತಾದ ನಂಬಿಕೆ ಇದೆ ಆದರೆ ಅವರೆಲ್ಲ ಕಪಟ ಗುರುಗಳ ಹಿಂದೆ ಬಿದ್ದಿದ್ದಾರೆ.

ಗುರುತಿಸಬಹುದಾದ ಹಗರಣಗಳು ಮತ್ತು ವಿವಾದಗಳು

ಕೆಲವು ಗುರು ಮತ್ತು ಅವರು ನಿರ್ಮಿಸಿದ ಗುಂಪಿನಿಂದ ನಡೆದ ಕೆಲವು ಹಗರಣಗಳು ಮತ್ತು ವಿವಾದಗಳು:

  • ಓಶೊನ( ಭಗವಾನ್‌ ಶ್ರೀ ರಜನೀಶ್‌) ಜೀವನ ಶೈಲಿ ಮತ್ತು ಅವನ ಇತ್ಯರ್ಥವಾಗದ 93 ರೋಲ್ಸ್‌ ರಾಯ್ಸ್ ಕಾರುಗಳ ಉಡುಗೊರೆ(ಅವನ ಶಿಷ್ಯರಿಂದ ಬಂದ ಉಡುಗೊರೆಗಳು‌), ಅವನ ಕೆಲವು ಅನುಯಾಯಿಗಳಿಂದ ಒರೆಗಾನ್‌ನ ದ ಡೆಲ್ಲಾಸ್‌ನಲ್ಲಿನ ಜೈವಿಕ ಭಯೋತ್ಪಾದನಾ ದಾಳಿ, ಈ ಗುಂಪಿನ ಯಶಸ್ವೀ ಪ್ರಯತ್ನದಿಂದಾಗಿ ಒರೆಗಾನ್‌ನ ಅಂಟೆಲೋಪ್‌ ಪಟ್ಟಣ ವಶ. ಅವನ ವಿಚಿತ್ರವಾದ ಬೋಧನೆಗಳು ಸಾಂಪ್ರದಾಯಿಕ ಶಿಷ್ಟಾಚಾರ ಮತ್ತು ಹಿಂದೂ ನಿಯಮಗಳಿಂದ ವಿರೋಧಕ್ಕೊಳಗಾಯಿತು. ಸ್ವಲ್ಪ ನಿಗ್ರಹದ ಜೊತೆಗೆ ಗುಂಪಿನ ಚಿಕಿತ್ಸಾ ವಿಧಾನದ ಸಭೆ ಮತ್ತು ಸ್ವೇಚ್ಚೆಯ ಲೈಂಗಿಕ ಸ್ವಾತಂತ್ರ್ಯವನ್ನು ಅವನು ಪ್ರಚೋದಿಸಿದನು.


  • ಜಪಾನಿನ ಗುರು ಶೊಕೊ ಅಸಹರರು ನಿರ್ಮಿಸಿದ ಓಂ ಶಿನ್‌ರಿಕ್ಯೋ ಇಂದಾದ ಟೋಕಿಯೊ ಸುರಂಗ ಮಾರ್ಗದ ಮೇಲೆ ಸರಿನ್‌ ಅನಿಲ ದಾಳಿ.

ಐಂಡಿಯಾ ಟುಡೇ ನಿಯತಕಾಲಿಕೆಯ ಮುಖಪುಟದಲ್ಲಿ ಪ್ರಕಟವಾದ ಸತ್ಯ ಸಾಯಿ ಬಾಬಾರ ಲೈಂಗಿಕ ನಿಂದನೆಯ ಆರೋಪವು ಮತ್ತು ಕೆಟ್ಟದಾದ ಪವಾಡಗಳು, ಬ್ರಿಟಿಷ್‌ ಪಾರ್ಲಿಮೆಂಟ್‌ ಮತ್ತು ಯುರೋಪಿಯನ್‌ ಪಾರ್ಲಿಮೆಂಟ್‌ನಲ್ಲಿನ ಪ್ರಶ್ನೆಗಳು, ಕೆನಡಾ, ಡೆನ್ಮಾರ್ಕ್‌ ಮತ್ತು ಆಸ್ಟ್ರೇಲಿಯಾಗಳಲ್ಲಿನ ಬಿಬಿಸಿ ಮತ್ತು ಡಾನಿಶ್‌ ರೇಡಿಯೊಗಳಲ್ಲಿನ ಟಿವಿಗಳಲ್ಲಿ ಪ್ರಸಾರವಾದ ವಿಮರ್ಶಾತ್ಮಕ ಸಾಕ್ಷ್ಯಚಿತ್ರಗಳು.

  • ಕರ್ಮಪ ವಿವಾದದಲ್ಲಿ ಟೆಬೇಟಿಯನ್ ಬೌದ್ಧಧರ್ಮದ 17ನೇ ಕರ್ಮಪಗಳಾಗುವ ಅಭ್ಯರ್ಥಿಗಳಿಂದಾದ ವಿವಿಧ ಅಧಿಕಾರದ ಪ್ರಸ್ತಾಪಗಳು, ಮತ್ತು ಪ್ರಪಂಚದಾದ್ಯಂತ ಅವರ ಅನುಯಾಯಿಗಳಲ್ಲಿ ಅನೇಕ ಗುಂಪುಗಳಾದವು, ಪ್ರತಿಯೊಂದು ಗುಂಪು ಇನ್ನೊಂದನ್ನು ಸುಳ್ಳು ಹೇಳುತ್ತಿದೆ ಮತ್ತು ತಪ್ಪು ಮಾಡುತ್ತಿದೆ ಎಂದು ಆರೋಪಿಸತೊಡಗಿದವು.

ಇದನ್ನೂ ನೋಡಿ

  • ಚರಿಸ್ಮಾಟಿಕ್ ವಿದ್ವಾಂಸ
  • ದರ್ಶನ
  • ಗುರು ಗೀತ
  • ಹಿಂದೂ ಸುಧಾರಣ ಚಳುವಳಿಗಳು
  • ಹಿಂದು ಗುರುಗಳ ಪಟ್ಟಿ
  • ಗುರು ಜೀವನ ವಿಧಾನ
  • ಧಾರ್ಮಿಕ ಮತಾಂತರ

ಉಲ್ಲೇಖಗಳು

ಹೆಚ್ಚಿನ ಓದಿಗಾಗಿ

  • ಅರ್ಜುನ್ ದೇವ್, ಗುರು,ಗುರು ಗ್ರಂಥ ಸಾಹಿಬ್ , ಅಮೃತ್‌ಸರ್-1604 ಕ್ರಿ.ಶ.,ರಾಗ್ ಭೈರೋ
  • ಅರಬಿಂದೋ, ಶ್ರೀ, ದ ಫೌಡೇಶನ್ ಆಫ್ ಇಂಡಿಯನ್ ಕಲ್ಚರ್, , ಪಾಂಡಿಚೇರಿ, 1959
  • ಬ್ರೌನ್,ಮಿಕ್ ದ ಸ್ಪಿರಿಚುವಲ್ ಟೂರಿಸ್ಟ್ ಬ್ಲೂಮ್ಸ್‌ಬರಿ ಪಬ್ಲಿಷಿಂಗ್, 1998 ISBN 1-58234-034-X
  • ವಾನ್ ದೇರ್ ಬ್ರಾಕ್, ಆ‍ಯ್‌ಂದ್ರೆ (2003). ಎನ್‌ಲೈಟ್‌ಮೆಂಟ್ ಬ್ಲೂಸ್: ಮೈ ಇಯರ್ಸ್ ವಿತ್ ಆ‍ಯ್‌ನ್ ಅಮೆರಿಕನ್ ಗುರು. ಮಾಂಕ್‌ಫಿಶ್ ಬುಕ್ ಪಬ್ಲಿಷಿಂಗ್ . ISBN 0-9726357-1-8
  • ಗಾರ್ಡನ್,ಮೇರಿ Archived 2005-02-05 ವೇಬ್ಯಾಕ್ ಮೆಷಿನ್ ನಲ್ಲಿ. ದ ಸರ್ಪಂತ್ ರೈಸಿಂಗ್: ಎ ಜರ್ನಿ ಆಫ್ ಸ್ಪಿರಿಚ್ಯುವಲ್ ಸೆಡೆಕ್ಷನ್ Archived 2005-02-05 ವೇಬ್ಯಾಕ್ ಮೆಷಿನ್ ನಲ್ಲಿ. - 2003 ISBN 1-877059-50-1 *ಗುಪ್ತಾ, ಡಾ. ಹರಿ ರಾಮ್. ಗುರುಮುಖ್ ನಿಹಾಲ್ ಸಿಂಗ್‌ರಿಂದ ಎ ಲೈಫ್-ಸ್ಕೆಚ್ ಆಫ್ ಗುರು ನಾನಕ್ ಇನ್ ಗುರು ನಾನಕ್,ಹಿಸ್ ಲೈಫ್,ಟೈಮ್ ಆ‍ಯ್‌೦ಡ್ ಟೀಚಿಂಗ್ಸ್ , ,ನವದೆಹಲಿ, 1981
  • ಥಾಮಸ್,ಫೋರ್ಸ್ಟ್‌ಥೊಯೆಫೆಲ್ ಆ‍ಯ್‌೦ಡ್ ಸ್ಯಾಂಟಿಯಾ ಆ‍ಯ್‌ನ್ ಹ್ಯುಮ್ಸ್ , ಎಡಿಶನ್ಸ್. ಗುರು ಇ ಅಮೆರಿಕಾ . ಆಲ್ಬನಿ, ನ್ಯೂಯಾರ್ಕ್: ಸನ್ನಿ ಮುದ್ರಣಾಲಯ, 2005
  • ಗುರುದೇವ್ ಸಿಂಗ್, ಜಸ್ಟೀಸ್, ಪರ್ಸ್‌ಸ್ಪೇಕ್ಟೀವ್ ಆನ್ ದ ಸಿಕ್ ಟ್ರೇಡಿಶನ್ . ಪಟಿಯಾಲಾ-1986
  • ಹೋಲ್ಟ್ಜೆ,

ಡಿ. (1995). ಫ್ರಾಮ್ ಲೈಟ್ ಟು ಸೌಂಡ್: ದ ಸ್ಪಿರಿಚ್ಯುವಲ್ ಪ್ರೊಗ್ರೆಶನ್ Archived 2005-11-05 ವೇಬ್ಯಾಕ್ ಮೆಷಿನ್ ನಲ್ಲಿ. . ಟೆಮೆಕುಲಾ, ಸಿಎ: ಮಾಸ್ಟರ್‌ಪಾತ್, ಇನ್‌ಕಾರ್ಪೊರೇಶನ್. ISBN 1-885949-00-6

  • ಇಸ್ಲಿವಾರಿ ಪ್ರಸಾದ್, ಡಾ. ದ ಮೊಘಲ್ ಎಂಪಾಯರ್ , ಅಲಹಾಬಾದ-1974
  • ಜೈನ್, ನಿರ್ಮಲ್ ಕುಮಾರ್, ಸಿಕ್ ರಿಲಿಜನ್ ಆ‍ಯ್‌೦ಡ್ ಫಿಲಾಸಫಿ . ನವದೆಹಲಿ- 1979
  • ಕಪೂರ್ ಸಿಂಗ್, ಪರಸರ್ಪ್ರಸ್ನಾ ಆರ್ ದ ಬೈಸಖಿ ಆಫ್ ಗುರು ಗೋಬಿಂದ್ ಸಿಂಗ್ (ಆ‍ಯ್‌ನ್ ಎಕ್ಸ್‌ಫೊಸಿಶನ್ ಆಫ್ ಸಿಕ್ಕಿಂ‍), ಜಲಂಧರ್-1959
  • ಕೊವೂರ್, ಅಬ್ರಹಾಂ ಡಾ. ಬೆಗನ್ ಗಾಡ್‌ಮೆನ್ ಶ್ರೀ ಅಶ್ವಿನ್ ಜೆ.ಶಾ ಜೈಕೊ ಪಬ್ಲಿಷಿಂಗ್ ಹೌಸ್‌ನಿಂದ ಪ್ರಕಟಣೆ , ಬಾಂಬೆ - 1976
  • ಮುಜುಮ್ದಾರ್, ಡಾ.ಆರ್.ಸಿ., ದ ಹಿಸ್ಟರಿ ಆ‍ಯ್‌೦ಡ್ ಕಲ್ಚರ್ ಆಫ್ ದ ಇಂಡಿಯನ್ ಹೌಸ್ , ಸಂಪುಟ. VI, ಬಾಂಬೆ-1960
  • ಮಂಗಲ್‌ವಾಡಿ, ವಿಶಾಲ್ ವರ್ಲ್ಡ್ ಆಫ್ ಗುರುಸ್ ವಿಕಾಸ್ ಪಬ್ಲಿಷಿಂಗ್‌ನಿಂದ ISBN 0-940895-03-X (1977) ಉದ್ಧರಣಗಳು
  • ಮ್ಯಾಕ್‌ಲಿಯೊಡ್ ಡಬ್ಲ್ಯೂ.ಎಚ್. (ಎಡಿಶನ್.). ದ ಬಿ40 ಜನಮ್ ಸಖಿ ,ಗುರು ನಾನಕ್ ದೇವ್ ವಿಶ್ವವಿದ್ಯಾಲಯ, ಅಮೃತ್‌ಸರ್, 1980
  • ಮೆಹ್ತಾ,ಗೀತ ಕರ್ಮ ಕೋಲಾ:ಮಾರ್ಕೆಟಿಂಗ್ ದ ಮಿಸ್ಟಿಕ್ ಈಸ್ಟ್ ಸಿಮೋನ್ ಮತ್ತು ಸ್ಚಸ್ಟರ್, ನ್ಯೂಯಾರ್ಕ್, ಎನ್‌ವೈ, 1979ರಲ್ಲಿ ಮೊದಲ ಪ್ರಕಟಣೆ ISBN 0-679-75433-4
  • ಸಿಸ್ಟರ್ ನಿವೇದಿತಾ, ದ ಮಾಸ್ಟರ್ ಆ‍ಯ್‌ಸ್ ಐ ಸಾ ಹಿಮ್ , ಕೋಲ್ಕತ್ತಾ:ಉದ್ಬೋಧನ್ ಆಫೀಸ್, 1993.
  • ಆಲ್ಸಿನ್, ಜಿ. (1999). ಮಾಸ್ಟರ್‌ಪತ್: ದ ಡಿವೈನ್ ಸೈನ್ಸ್ ಆಫ್ ಲೈಟ್ ಆ‍ಯ್‌೦ಡ್ ಸೌಂಡ್ , (ಸಂಪುಟ. 1). ಟೆಮೆಕ್ಯೂಲಾ,ಸಿಎ: ಮಾಸ್ಟರ್‌ಪಾತ್, ಇನ್‌ಕಾರ್ಪೋರೇಶನ್. ISBN 1-885949-01-4
  • ಪಡೋಕ್ಸ್, ಆ‍ಯ್‌೦ದ್ರೆ‍ ದ ತಾಂತ್ರಿಕ್ ಗುರು ಇನ್: ತಂತ್ರ ಇನ್ ಪ್ರ್ಯಾಕ್ಟೀಸ್ , ಡೇವಿಡ್ ಜೋರ್ಡನ್ ವೈಟ್‌ರಿಂದ ಪ್ರಕಟಣೆ, ಎಮ್‌ಎಲ್‌ಬಿಡಿ, ನವದೆಹಲಿ
  • ಸಿಂಗ್,ಕೆ. (1999). ನಾಮ್ ಆರ್ ವರ್ಲ್ಡ್ . ಬ್ಲಾಯಿನ್, ಡಬ್ಲ್ಯೂಎ: ರುಹಾನಿ ಸತ್ಸಂಗ್ ಬುಕ್. ISBN 0-942735-94-3
  • ಸಿಂಗ್,ಜೈದೇವಾ (ಎಡಿಶನ್.), Ïiva ಸೂತ್ರಾಸ್, ದ ಯೋಗಾ ಆಫ್ ಸುಪ್ರೀಮ್ ಐಡೆಂಟಿಟಿ , ಎಮ್‌ಎಲ್‌ಬಿಡಿ, ದೆಹಲಿ, 1979
  • ಸ್ವಾಮಿ ತೇಜಸಾನಂದ, ಎ ಶಾರ್ಟ್ ಲೈಫ್ ಆಫ್ ವಿವೇಕಾನಂದ , ಕೋಲ್ಕಾತ್ತಾ: ಅದ್ವೈತ ಆಶ್ರಮ್ ಪಬ್ಲಿಕೆಷನ್, 1999.
  • ಸ್ವಾಮಿ ಸತ್ಯಾನಂದ,ದೇವಿ ಮಂದಿರ್, "ಶ್ರೀ ಮಾ:ಗುರು ಆ‍ಯ್‌೦ಡ್ ಗಾಡೆಸ್" (ISBN 1-887472-78-9 )
  • ತಾರ್ಲೋ, ಲುನಾ ದ ಮದರ್ ಆಫ್ ಗಾಡ್ , ಎಸ್‌ಸಿಬಿ ಡಿಸ್ಟ್ರೀಬ್ಯುಟರ್ಸ್ (1997) ISBN 1-57027-043-0

ವಿಡಿಯೋ

  • ಅಂಡರ್‌ಸ್ಟ್ಯಾಂಡಿಂಗ್ ಹಿಂದೂ ಟ್ರೇಡಿಶನ್ಸ್ ಎಜುಕೇಶನಲ್ ವಿಡಿಯೋ ನೆಟ್‌ವರ್ಕ್, ಇನ್‌ಕಾರ್ಪೋರೇಶನ್. (2004)
  • ಒರಿಜನ್ಸ್ ಆಫ್ ಇಂಡಿಯ- ಹಿಂದೂ ಸಿವಿಲೈಸೇಶನ್ ಎಜುಕೇಶನಲ್ ವಿಡಿಯೋ ನೆಟ್‌ವರ್ಕ್, ಇನ್‌ಕಾರ್ಪೋರೇಶನ್. (2004)
  • ಮೆಡಿಟೇಶನ್ & ದ ಥಿಂಕಿಂಗ್ ಮಷಿನ್ ಕೄಷ್ಣಮೂರ್ತಿ (2004)
  • ಮೌರಿಜಿಯೊ ಬೆನಾಜೊ ಶಾರ್ಟ್ ಕಟ್ ಟು ನಿರ್ವಾಣ ನಿರ್ದೇಶಿಸಿಲ್ಪಟ್ಟಿತು (2004). ಭಾರತದ ಗೌರವಾನ್ವಿತ ಪೂಜ್ಯ ಗುರುಗಳನ್ನು ಸಂಧಿಸಿ ಮತ್ತು ದಲೈ ಲಾಮಾರ ಅನನ್ಯವಾದ ಹೆಜ್ಜೆಗುರುತಿನ ವಿಷೇಶವಾದ ಚಿತ್ರ ತೆಗೆದರು.
  • ದಲೈ ಲಾಮಾ ಆನ್ ಲೈಫ್ ಆ‍ಯ್‌೦ಡ್ ಎನ್‌ಲೈಟನ್‌ಮೆಂಟ್ (2004)]
  • ರಾಬರ್ಟ್ ಈಗಲ್‌ (ಬರಹಗಾರ ಮತ್ತು ನಿರ್ದೇಶಕ)ರಿಂದ ಗುರು ಬಸ್ಟರ್ಸ್ ಡಾಕ್ಯುಮೆಂಟರಿ (1995)[೨] Archived 2010-11-30 ವೇಬ್ಯಾಕ್ ಮೆಷಿನ್ ನಲ್ಲಿ.
  • ಡಾನ್ ಕೊಮೊರಿಂದ ಮಿಸ್ಟೀರಿಯಸ್ ಮಿರಾಕಲ್ಸ್, ಅಲಿಯೆನ್ಸ್ ಫ್ರಾಮ್ ಸ್ಪೇಸ್‌ಶಿಪ್ ಅರ್ತ್, ಎ ಸ್ಪಿರಿಚ್ಯೂವಲ್ ಒಡಿಸ್ಸಿ , (1977)

ಬಾಹ್ಯ ಕೊಂಡಿಗಳು

ಗುರು: ಶಬ್ದ ವ್ಯುತ್ಪತ್ತಿ, ಹಿಂದುತ್ವದಲ್ಲಿ (ಹಿಂದೂ ಧರ್ಮದಲ್ಲಿ) ಗುರು, ಗುರುವಿನ ಪಾತ್ರ 
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಗುರು]]

Tags:

ಗುರು ಶಬ್ದ ವ್ಯುತ್ಪತ್ತಿಗುರು ಹಿಂದುತ್ವದಲ್ಲಿ (ಹಿಂದೂ ಧರ್ಮದಲ್ಲಿ) ಗುರು ವಿನ ಪಾತ್ರಗುರು ಬೌದ್ಧ ಧರ್ಮದಲ್ಲಿ ಗುರು ಸಿಖ್ ಧರ್ಮದಲ್ಲಿ ಗುರು ಉತ್ತರಾಧಿಕಾರ ಮತ್ತು ವಂಶಪರಂಪರೆ (ಪರಂಪರೆ)ಗುರು ಪಾಶ್ಚಾತ್ಯ ಸಾಂಸ್ಕೃತಿಕ ದೃಷ್ಟಿಕೋನದಲ್ಲಿ ವಿನ ಅವಲೋಕನಗುರು ಇದನ್ನೂ ನೋಡಿಗುರು ಉಲ್ಲೇಖಗಳುಗುರು ಹೆಚ್ಚಿನ ಓದಿಗಾಗಿಗುರು ಬಾಹ್ಯ ಕೊಂಡಿಗಳುಗುರುಆತ್ಮಜ್ಞಾನಬೃಹಸ್ಪತಿಭಾರತವಿಕಿಪೀಡಿಯ:Citation neededಸಂಸ್ಕೃತ ಭಾಷೆಸಿಖ್ಖ್ ಧರ್ಮಹಿಂದಿಹಿಂದುಹಿಂದುತ್ವ

🔥 Trending searches on Wiki ಕನ್ನಡ:

ತಲಕಾಡುಸ್ತ್ರೀದಶಾವತಾರತ್ರಿಪದಿಭಾರತದ ಬ್ಯಾಂಕುಗಳ ಪಟ್ಟಿಅನುಪಮಾ ನಿರಂಜನಹಸ್ತಪ್ರತಿಕರ್ನಾಟಕ ವಿಧಾನ ಪರಿಷತ್ಸಮಾಜ ವಿಜ್ಞಾನಜೋಗಿ (ಚಲನಚಿತ್ರ)ಕುಂಬಳಕಾಯಿಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಮೋಕ್ಷಗುಂಡಂ ವಿಶ್ವೇಶ್ವರಯ್ಯಜಗತ್ತಿನ ಅತಿ ಎತ್ತರದ ಪರ್ವತಗಳುಕನ್ನಡಪ್ರಭಆವರ್ತ ಕೋಷ್ಟಕಹಯಗ್ರೀವಗರ್ಭಧಾರಣೆಕರ್ನಾಟಕದ ಅಣೆಕಟ್ಟುಗಳುಕನಕಪುರಉಗ್ರಾಣಸರ್ಪ ಸುತ್ತುಮಂತ್ರಾಲಯಸವದತ್ತಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಹಾಸನ ಜಿಲ್ಲೆಮಲಬದ್ಧತೆಸ್ತ್ರೀವಾದಕೊ. ಚನ್ನಬಸಪ್ಪಮಾಹಿತಿ ತಂತ್ರಜ್ಞಾನಚಾಣಕ್ಯಆವಕಾಡೊಕನ್ನಡದಲ್ಲಿ ಪ್ರವಾಸ ಸಾಹಿತ್ಯಕರ್ನಾಟಕ ಪೊಲೀಸ್ಜೋಡು ನುಡಿಗಟ್ಟುಹೊಯ್ಸಳ ವಿಷ್ಣುವರ್ಧನಪು. ತಿ. ನರಸಿಂಹಾಚಾರ್ಅದ್ವೈತಮಂಗಳ (ಗ್ರಹ)ಪುರಂದರದಾಸಆಸ್ಪತ್ರೆಬೆಂಕಿಕರ್ನಾಟಕದ ವಾಸ್ತುಶಿಲ್ಪಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಅಕ್ಬರ್ಛಂದಸ್ಸುಮಾನವನ ನರವ್ಯೂಹಮಧ್ವಾಚಾರ್ಯಸಾಮಾಜಿಕ ಸಮಸ್ಯೆಗಳುಪಾಂಡವರುಮಹಾತ್ಮ ಗಾಂಧಿನೇಮಿಚಂದ್ರ (ಲೇಖಕಿ)ಬೆಂಗಳೂರುರಾಶಿಭಾರತದ ರಾಜಕೀಯ ಪಕ್ಷಗಳುನಾಗಚಂದ್ರಕಾನೂನುಬಾಳೆ ಹಣ್ಣುತೆಲುಗುಹುಲಿಕನಕದಾಸರುಸಂಭೋಗದಿವ್ಯಾಂಕಾ ತ್ರಿಪಾಠಿಅರಿಸ್ಟಾಟಲ್‌ಆರೋಗ್ಯಜಾತಿಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಪೂರ್ಣಚಂದ್ರ ತೇಜಸ್ವಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಮೂಕಜ್ಜಿಯ ಕನಸುಗಳು (ಕಾದಂಬರಿ)ಗಣೇಶ ಚತುರ್ಥಿಕೊರೋನಾವೈರಸ್ಗುಣ ಸಂಧಿಭಾರತದ ಸಂವಿಧಾನಕರ್ಬೂಜಕದಂಬ ಮನೆತನ🡆 More