ಲಕ್ಷದ್ವೀಪ

ಲಕ್ಷದ್ವೀಪ (ಮಲಯಾಳಂನಲ್ಲಿ ̲ ലക്ഷദ്വീപ്) ಭಾರತದ ಕೇಂದ್ರಾಡಳಿತ ಪ್ರದೇಶವಾಗಿದೆ.

ಇದು 36 ದ್ವೀಪಗಳ ದ್ವೀಪಸಮೂಹವಾಗಿದ್ದು, ಪಶ್ಚಿಮಕ್ಕೆ ಅರೇಬಿಯನ್ ಸಮುದ್ರ ಮತ್ತು ಪೂರ್ವಕ್ಕೆ ಲಕ್ಕಾಡಿವ್ ಸಮುದ್ರದ ನಡುವಿನ ಸಮುದ್ರ ಗಡಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಭಾರತದ ಮಲಬಾರ್ ಕರಾವಳಿಯಿಂದ 200 ರಿಂದ 440 ಕಿಮೀ (120 ರಿಂದ 270 ಮೈಲ್) ಇದೆ.

ಲಕ್ಷದ್ವೀಪ
ಕೇಂದ್ರಾಡಳಿತ ಪ್ರದೇಶ
Location of ಲಕ್ಷದ್ವೀಪ
Government
 • Administratorರಾಜೇಂದ್ರ ಕುಮಾರ್
 • Rank7th
Population
೬೦,೫೯೫
 • Rank7th
Websitelakshadweep.nic.in

ಲಕ್ಷದ್ವೀಪ ಎಂಬ ಹೆಸರಿನ ಅರ್ಥ "ಒಂದು ಲಕ್ಷ ದ್ವೀಪಗಳು" ( Lakṣadvīpa; ನೂರು ಸಾವಿರ ದ್ವೀಪಗಳು) ಮಲಯಾಳಂ ಮತ್ತು ಸಂಸ್ಕೃತದಲ್ಲಿ, ಲಕ್ಕಾಡಿವ್ ದ್ವೀಪಗಳು ಕೇವಲ ನೂರಕ್ಕೂ ಹೆಚ್ಚು ದ್ವೀಪಗಳ ದ್ವೀಪಸಮೂಹದ ಒಂದು ಭಾಗವಾಗಿದೆ. ಜೆಸೇರಿ ಪ್ರಾಂತ್ಯದಲ್ಲಿ ಪ್ರಾಥಮಿಕ ಮತ್ತು ವ್ಯಾಪಕವಾಗಿ ಮಾತನಾಡುವ ಸ್ಥಳೀಯ ಭಾಷೆಯಾಗಿದೆ. ಈ ದ್ವೀಪಗಳು ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿದೆ ಮತ್ತು ಅವುಗಳ ಒಟ್ಟು ಮೇಲ್ಮೈ ವಿಸ್ತೀರ್ಣ ಸರಿಸುಮಾರು 32 ಕಿಮೀ2 (12 ಚದರ ಮೈಲ್) ಆಗಿದೆ. ಆವೃತ ಪ್ರದೇಶವು ಸುಮಾರು 4,200 ಕಿಮೀ2 (1,600 ಚದರ ಮೈಲ್) ಅನ್ನು ಒಳಗೊಂಡಿದೆ, ಪ್ರಾದೇಶಿಕ ಜಲ ಪ್ರದೇಶ 20,000 ಕಿಮೀ2 (7,700 ಚದರ ಮೈಲ್) ಮತ್ತು ವಿಶೇಷ ಆರ್ಥಿಕ ವಲಯ ಪ್ರದೇಶ 400,000 ಕಿಮೀ2 (150,000 ಚದರ ಮೈಲ್). ಈ ಪ್ರದೇಶವು 10 ಉಪವಿಭಾಗಗಳೊಂದಿಗೆ ಒಂದೇ ಭಾರತೀಯ ಜಿಲ್ಲೆಯನ್ನು ರೂಪಿಸುತ್ತದೆ. ಕವರಟ್ಟಿ ಕೇಂದ್ರಾಡಳಿತ ಪ್ರದೇಶದ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಈ ಪ್ರದೇಶವು ಕೇರಳ ಹೈಕೋರ್ಟ್‌ನ ವ್ಯಾಪ್ತಿಗೆ ಬರುತ್ತದೆ. ಈ ದ್ವೀಪಗಳು ಲಕ್ಷದ್ವೀಪ-ಮಾಲ್ಡೀವ್ಸ್-ಚಾಗೋಸ್ ದ್ವೀಪಗಳ ಗುಂಪಿನ ಉತ್ತರದ ತುದಿಗಳಾಗಿವೆ, ಅವುಗಳು ವಿಶಾಲವಾದ ಸಮುದ್ರದೊಳಗಿನ ಪರ್ವತ ಶ್ರೇಣಿಯ ಮೇಲ್ಭಾಗಗಳಾಗಿವೆ, ಚಾಗೋಸ್-ಲಕ್ಷದ್ವೀಪ್ ರಿಡ್ಜ್. ಲಕ್ಷದ್ವೀಪವು ಮೂಲತಃ 36 ದ್ವೀಪಗಳನ್ನು ಒಳಗೊಂಡಿತ್ತು; ಆದಾಗ್ಯೂ, ಸಮುದ್ರದ ಸವೆತದಿಂದಾಗಿ ಪಾರಾಲಿ 1 ದ್ವೀಪವು ನೀರಿನಲ್ಲಿ ಮುಳುಗಿರುವುದರಿಂದ, 35 ದ್ವೀಪಗಳು ಉಳಿದಿವೆ.

ಲಕ್ಷದ್ವೀಪ
'ಬಂಗಾರಂ ಎನ್ನುವ ಚಿಕ್ಕ ದ್ವೀಪದಲ್ಲಿ ಜನರೇ ಇರಲಿಲ್ಲ. ಆದರೆ ಈಗ ಪ್ರರ್ಯಟಕರು ಈಗ ಹೆಚ್ಚಾಗಿ ಬರುತ್ತಿದ್ದಾರೆ'

ಚಾರಿತ್ರಿಕತೆ

  • ಸ್ಥಳೀಯ ಬರಹಗಳ ಪ್ರಕಾರ 'ಚೇರ ಸಾಮ್ರಾಜ್ಯದ ಕೊನೆಯ ಅರಸು ಚೇರಮನ್ ಪೆರುಮಾಳ್' ಕಾಲದಲ್ಲಿ ಇಲ್ಲಿ ಜನವಸತಿ ಆರಂಭವಾಗಿತ್ತು.ಮೊದಲು ಅಮಿನಿ, ಕಾಲ್ ಪೇನಿ,ಆಂಡ್ರೋಟ್, ಕವರಟ್ಟಿ, ಮತ್ತು ಅಗಾಟ್ಟಿ, ದ್ವೀಪಗಳಲ್ಲಿ ಕೇರಳದಿಂದ ಬಂದು ನೆಲೆಸಿದ ಜನರಿದ್ದರು.
  • ಪುರಾತತ್ವ ಇಲಾಖೆಯ ದಾಖಲೆಗಳ ಪ್ರಕಾರ ಇಲ್ಲಿ ಕ್ರಿ.ಶಕ ೫-೬ ನೆಯ ಶತಮಾನದಲ್ಲಿ ಬೌದ್ಧಧರ್ಮ ಪ್ರಚಲಿತದಲ್ಲಿತ್ತು.
  • ಕ್ರಿ.ಶ. ೬೬೧ ರಲ್ಲಿ, 'ಉಬೇದುಲ್ಲ' ಎಂಬ ಅರಬ್ ಇಲ್ಲಿಗೆ ಇಸ್ಲಾಂ ಧರ್ಮವನ್ನು ತಂದನು.
  • ೧೧ ಶತಮಾನದಲ್ಲಿ ಚೋಳರು ಆಧಿಪತ್ಯ ನಡೆಸಿದರು. ಅವರ ನಂತರ ದ್ವೀಪಗಳು, 'ಕಣ್ಣಾನೂರಿನ ಅರಸರ ಆಡಳಿತ'ಕ್ಕೆ ಒಳಗಾಯಿತು. ೧೩೪೩ ರಲ್ಲಿ ಅರಬ್ ಯಾತ್ರಿ,ಇಬ್ನ್ ಬಟೂಟಾ ಎಂಬುವನು ಎಂಬುವನು ಇಲ್ಲಿಗೆ ಬಂದಿದ್ದ ಎಂದು ಸ್ಥಳೀಯರು ಹೇಳುತ್ತಾರೆ.
  • ಪೋರ್ಚುಗೀಸರು ಇಲ್ಲಿ ೧೪೯೮ ರಲ್ಲೇ ಆಗಮಿಸಿದ್ದರು. ಅವರು ಇಲ್ಲಿ ತೆಂಗಿನನಾರಿನ ಉತ್ಪಾದನೆ ಪ್ರಾರಂಭಿಸಿದರು. ಆದರೆ ಸ್ಥಳೀಯರು ೧೫೪೫ ರಲ್ಲಿ ಅವರನ್ನು ಓಡಿಸಿದ್ದರು.
  • ೧೭ ನೆಯ ಶತಮಾನದಲ್ಲಿ ಕಣ್ಣೂರಿನ 'ಆಲಿ ರಜಾ ಅರಕ್ಕಲ್ ಭೀವಿ'ಗೆ ಈ ದ್ವೀಪಗಳು ಕೊಳತ್ತಿರಿ ರಾಜರಿಂದ ಕಾಣಿಕೆಯಾಗಿ ಸಿಕ್ಕಿತು. ಅಮಿನ್ ದೀವಿ ದ್ವೀಪಗಳು, ೧೭೮೭ ರಲ್ಲಿ ಟಿಪ್ಪುಸುಲ್ತಾನ ವಶಕ್ಕೆ ಬಂದವು. ಅವರ ಬಳಿಕ ಬ್ರಿಟಿಷರ ಸಮಯದಲ್ಲಿ ಅವು, ದಕ್ಷಿಣ ಕೆನರಾ ಭಾಗವಾಯಿತು.ಉಳಿದ ದ್ವೀಪಗಳನ್ನು ಕಣ್ಣಾನೂರಿನ ಅರಕ್ಕಲ್ ಮನೆತನ ಆಳುತ್ತಿತ್ತು. ಅರಕ್ಕಲ್ ರಾಜರು, ಕಪ್ಪ ಕೊಡದ ಕಾರಣ, ಬ್ರಿಟಿಷರು ಈ ದ್ವೀಪಗಳನ್ನು ವಶಪಡಿಸಿಕೊಂಡು ಮದ್ರಾಸ್ ಪ್ರೆಸಿಡೆನ್ಸಿಯ ಮಲಬಾರ್ ಜಿಲ್ಲೆಗೆ ಸೇರಿಸಿದರು.

ಅತ್ಯಂತ ಚಿಕ್ಕದಾದುದು. ಮುಖ್ಯವಾಗಿ 12 ಹವಳ ದ್ವೀಪಗಳು, 3 ಹವಳದ ರೀಫ್‌ಗಳು ಹಾಗು 5 ಆಳವಿರದ ಸಾಗರತಳದ ಪ್ರದೇಶಗಳಿಂದ ನಿರ್ಮಿತವಾಗಿರುವ ಈ ದ್ವೀಪ ಸಮೂಹದ ಒಟ್ಟು ವಿಸ್ತೀರ್ಣ 32 ಚದುರ ಕಿ.ಮಿ.ಗಳಷ್ಟು. ಇದಲ್ಲದೆ ಇನ್ನೂ ಹಲವಾರು ಪುಟ್ಟ ಜನನಿಬಿಡ ದ್ವೀಪಗಳಿವೆ. ಜನರಿರುವ ದ್ವೀಪಗಳು ಒಟ್ಟು 11.

ಲಕ್ಷದ್ವೀಪ 
ದ್ವೀಪಗಳ ನಕ್ಷೆ
  • ಅಗಟ್ಟಿ
  • ಅಮಿನಿ
  • ಅನ್ಡ್ರೊಟ್
  • ಬಂಗಾರಂ
  • ಬಿತ್ರ
  • ಚೆತ್ಲಾತ್
  • ಕದ್ಮತ್
  • ಕಲ್ಪೇನಿ
  • ಕವರತ್ತಿ
  • ಕಿಲ್ತಾನ್
  • ಮಿನಿಕಾಯ್

ಐತಿಹ್ಯ

ಈಗ ಪ್ರಚಲಿತದಲ್ಲಿರುವ 'ಲಕ್ಷದ್ವೀಪ,' ಒಂದು ಕಾಲದಲ್ಲಿ 'ಲಖದೀವ್','ಮಿನಿಕೋಯ್' ಮತ್ತು 'ಅಮಿನ್ ದಿವಿ' ದ್ವೀಪಗಳು ಎಂದು ಕರೆಯಲಾಗುತ್ತಿದ್ದ, ಅರಬ್ಬೀ ಸಮುದ್ರದ ನಡುವೆ ಇರುವ ಒಂದು ದ್ವೀಪ ಸಮೂಹವಾಗಿತ್ತು. ಭಾರತದೇಶದ ಅತಿ ಚಿಕ್ಕ ಕೇಂದ್ರಾಡಳಿತ ಪ್ರದೇಶ. ಲಕ್ಷದ್ವೀಪದ ಒಟ್ಟು ಭೂ ವಿಸ್ತೀರ್ಣ ೩೨ ಚದರ ಕಿ.ಮೀ.ಗಳು. ಇವು ೪,೨೦೦ ಚ. ಕಿ; ಮೀ. ವಿಸ್ತೀರ್ಣದ ಜಲಭಾಗದ ಮಧ್ಯೆ ಇವೆ. ಭಾರತದ ಪಶ್ಚಿಮ ತೀರದಿಂದ ಈ ದ್ವೀಪಗಳು ೨೦೦ ರಿಂದ ೪೪೦ ಕಿ.ಮಿ ನಷ್ಟು ದೂರದಲ್ಲಿವೆ. ಈ ದ್ವೀಪ ಸಮುದಾಯವನ್ನು ಒಂದು ಜಿಲ್ಲೆಯಾಗಿ ಪರಿಗಣಿಸಲಾಗಿದ್ದು, ಇದನ್ನು ೧೦ ತಾಲೂಕುಗಳನ್ನಾಗಿ ವಿಂಗಡಿಸಲಾಗಿದೆ. ಲಕ್ಷದ್ವೀಪದ ರಾಜಧಾನಿ ಕವರಟ್ಟಿ. 'ಕೇರಳ ಹೈಕೋರ್ಟ್' ನ ಪರಿಧಿಯಲ್ಲಿ ಬರುತ್ತದೆ. ಸ್ವಾತಂತ್ರ್ಯಪೂರ್ವದ ಕಾಲದಲ್ಲಿ ಇದು 'ಮದ್ರಾಸ್ ಪ್ರೆಸಿಡೆನ್ಸಿ' ಅಂಗವಾಗಿತ್ತು. ೧೯೫೬ ರಲ್ಲಿ ಕೇಂದ್ರಾಡಳಿತ ಪ್ರದೇಶವಾಯಿತು. ಒಟ್ಟು ೩೯ ದ್ವೀಪಗಳಿವೆ; ೧೦ ರಲ್ಲಿ ಮಾತ್ರ ಜನವಸತಿ ಇದೆ. ೨೦೧೧ ರ ಜನಗಣತಿ ಪ್ರಕಾರ, ಇಲ್ಲಿನ ಜನಸಂಖೆ ೬೪,೪೨೯ ಹೆಚ್ಚು ಜನ ಮುಸಲ್ಮಾನರು.'ಸುನ್ನಿ ಪಂಥದ ಶಫಿ ಸಮುದಾಯ'ಕ್ಕೆ ಸೇರಿದ್ದಾರೆ. ಅವರೆಲ್ಲಾ ಮಲಯಾಳಂ ಭಾಷೆಯಲ್ಲಿ ವ್ಯವಹರಿಸುತ್ತಾರೆ ಮಿನಿಕೋಯ್ ದ್ವೀಪದಲ್ಲಿ ಮಾಹ್ಲ್ (ಮಾಹಿ) ಭಾಷೆ ಬಳಕೆಯಲ್ಲಿದೆ. ಆದಿವಾಸಿಗಳಿಲ್ಲದ ದ್ವೀಪ ಸಮುದಾಯ ಪ್ರದೇಶ. ಕ್ರಿ.ಪೂ.೧೫೦೦ ರಲ್ಲಿ, ಇಲ್ಲಿ ಜನ ವಾಸಿಸಲು ಆರಂಭಿಸಿದರು. ಪುರಾತನ ಕಾಲದ ನಾವಿಕರು ಹೇಳುವ ಕಥೆಗಳ ಪ್ರಕಾರ, ಕ್ರಿ.ಪೂ. ೬ ನೆಯ ಶತಮಾನದ ಜಾತಕ ಕಥೆಗಳಲ್ಲಿ ಈ ದ್ವೀಪಗಳ ಉಲ್ಲೇಖವಿದೆ. ಪುರಾತನ ಗ್ರೀಕ್ ನಾವಿಕರ 'ಸಮುದ್ರೀಯ ಭೂಪಟ' ಮತ್ತು ದಾಖಲೆಗಳಲ್ಲಿ ಈ ದ್ವೀಪಗಳ ಉಲ್ಲೇಖವಿದೆ. ಈ ದ್ವೀಪಕ್ಕೆ ಅವರು ಬಂದಿರಬಹುದು. 'ಪಾಥಿತ್ರಪ್ಪತ್ತು' ಎಂಬ ಸಂಗಮ ಸಾಹಿತ್ಯದಲ್ಲಿ ಈ ದ್ವೀಪಗಳು ಚೇರ ಸಾಮ್ರಾಜ್ಯಕ್ಕೆ ಸೇರಿದವು, ಎಂದು ಹೇಳಲಾಗಿದೆ. ೭ ನೆಯ ಶತಮಾನದ ಪಲ್ಲವ ಶಿಲಾಬರಹಗಳಲ್ಲಿ 'ದ್ವೀಪ ಲಕ್ಷಮ್' ಪಲ್ಲವರಿಗೆ ಸೇರಿದೆ ಎಂಬ ಉಲ್ಲೇಖವಿದೆ.

ಉಲ್ಲೇಖಗಳು

Tags:

ಅರೇಬಿಯನ್ ಸಮುದ್ರಕೇಂದ್ರಾಡಳಿತ ಪ್ರದೇಶಗಳುದ್ವೀಪಸಮೂಹಪಶ್ಚಿಮಪೂರ್ವಮಲಬಾರ್ ಕರಾವಳಿಮಲಯಾಳಂ

🔥 Trending searches on Wiki ಕನ್ನಡ:

ಭಾರತದಲ್ಲಿ ತುರ್ತು ಪರಿಸ್ಥಿತಿಒಂದೆಲಗಪೂಜಾ ಕುಣಿತಹೆಚ್.ಡಿ.ದೇವೇಗೌಡಲಕ್ಷ್ಮಿಡಾಪ್ಲರ್ ಪರಿಣಾಮಸಂಭೋಗಒಲಂಪಿಕ್ ಕ್ರೀಡಾಕೂಟಕಾರಡಗಿಜೀವಕೋಶಪ್ರೇಮಾಸಿಂಧನೂರುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕನ್ನಡ ಛಂದಸ್ಸುಶ್ರೀಕೃಷ್ಣದೇವರಾಯರಾಯಲ್ ಚಾಲೆಂಜರ್ಸ್ ಬೆಂಗಳೂರುಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಕಬ್ಬುಭಾರತೀಯ ಸಂಸ್ಕೃತಿತಂತ್ರಜ್ಞಾನದ ಉಪಯೋಗಗಳುಸಹಕಾರಿ ಸಂಘಗಳುಕಾರ್ಮಿಕರ ದಿನಾಚರಣೆಸಾರಾ ಅಬೂಬಕ್ಕರ್ಗೋಕಾಕ್ ಚಳುವಳಿಐಹೊಳೆವಾಯು ಮಾಲಿನ್ಯಭಾರತದ ಮಾನವ ಹಕ್ಕುಗಳುಅಲ್-ಬಿರುನಿಶಿವನ ಸಮುದ್ರ ಜಲಪಾತಮಧ್ವಾಚಾರ್ಯವಿಷ್ಣುಹೊಯ್ಸಳ ವಾಸ್ತುಶಿಲ್ಪಮಾಸರಾವಣಎಳ್ಳೆಣ್ಣೆಕನ್ನಡ ರಾಜ್ಯೋತ್ಸವಕೈಗಾರಿಕೆಗಳುಬಿ.ಎಸ್. ಯಡಿಯೂರಪ್ಪದಾಳಿಂಬೆಹೈನುಗಾರಿಕೆಬ್ಲಾಗ್ಬೆಂಗಳೂರು ಗ್ರಾಮಾಂತರ ಜಿಲ್ಲೆಕುಟುಂಬವಚನಕಾರರ ಅಂಕಿತ ನಾಮಗಳುಮಹಾಕವಿ ರನ್ನನ ಗದಾಯುದ್ಧವಿದುರಾಶ್ವತ್ಥಕನ್ನಡ ಗಣಕ ಪರಿಷತ್ತುಕರ್ನಾಟಕ ಹೈ ಕೋರ್ಟ್ಕನ್ನಡ ಅಭಿವೃದ್ಧಿ ಪ್ರಾಧಿಕಾರನಾಥೂರಾಮ್ ಗೋಡ್ಸೆಕಾಗೋಡು ಸತ್ಯಾಗ್ರಹ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಶಿಂಶಾ ನದಿಹೊಯ್ಸಳ ವಿಷ್ಣುವರ್ಧನಮಂಜುಳಸವರ್ಣದೀರ್ಘ ಸಂಧಿಕರ್ನಾಟಕ ವಿಧಾನ ಸಭೆತೆಂಗಿನಕಾಯಿ ಮರಸಿದ್ದರಾಮಯ್ಯಭಾರತೀಯ ಶಾಸ್ತ್ರೀಯ ನೃತ್ಯನಯನತಾರಜಯಚಾಮರಾಜ ಒಡೆಯರ್ತೆರಿಗೆಖೊಖೊಟೊಮೇಟೊಚೆನ್ನಕೇಶವ ದೇವಾಲಯ, ಬೇಲೂರುಚಂದ್ರಶೇಖರ ವೆಂಕಟರಾಮನ್ವೆಂಕಟೇಶ್ವರಅಕ್ಬರ್ಕರ್ನಾಟಕ ಸರ್ಕಾರಶಿವಪ್ಪ ನಾಯಕಕನ್ನಡ ಸಾಹಿತ್ಯ ಪ್ರಕಾರಗಳುರಾಜ್ಯಪಾಲಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಹಾಸನ🡆 More