ಮಹಾಭಾರತ ಭಾನುಮತಿ

ಭಾನುಮತಿ ದುರ್ಯೋಧನನ ಪತ್ನಿ.

ಮೂಲತಃ ಮಹಾಕಾವ್ಯದಲ್ಲಿ ಹೆಸರಿಸದ ದುರ್ಯೋಧನನ ಹೆಂಡತಿಯ ಹೆಸರು ನಂತರದ ಆವೃತ್ತಿಗಳಲ್ಲಿ ಕಂಡುಬರುತ್ತದೆ. ಭಾನುಮತಿಗೆ ಲಕ್ಷ್ಮಣ ಕುಮಾರ, ಲಕ್ಷ್ಮಣ, ಕಾಲಕೇತು ಮತ್ತು ಲಕ್ಷ್ಮಿ ಎಂಬ ಮಕ್ಕಳಿದ್ದರು. ದುರ್ಯೋಧನನು ಅವಳನ್ನು ಅಪಾರವಾಗಿ ಪ್ರೀತಿಸುತ್ತಿದ್ದನೆಂದು ವಿವರಿಸಲಾಗಿದೆ.

ಭಾನುಮತಿ
ಭಾನುಮತಿ

ಮಹಾಭಾರತದಲ್ಲಿ ದುರ್ಯೋಧನನ ಹೆಂಡತಿಯನ್ನು ಮೂರು ಬಾರಿ ಉಲ್ಲೇಖಿಸಲಾಗಿದೆ. ಶಾಂತಿ ಪರ್ವ ಪುಸ್ತಕದಲ್ಲಿ, ದುರ್ಯೋಧನನು ಕರ್ಣನ ಸಹಾಯದಿಂದ ರಾಜ ಚಿತ್ರಾಂಗದೆಯ ಮಗಳನ್ನು ಅವಳ ಸ್ವಯಂವರದಿಂದ ಅಪಹರಿಸಿದನು. ನಂತರ ಆಕೆಯ ಅತ್ತೆಯಾದ ಗಾಂಧಾರಿಯು ಆಕೆಯ ಬಗ್ಗೆ ಮಾಡಿದ ವರ್ಣನೆಯನ್ನು ಸ್ತ್ರೀಪರ್ವ ಪುಸ್ತಕದಲ್ಲಿ ವಿವರಿಸಲಾಗಿದೆ.

ಮಹಾಭಾರತದಲ್ಲಿ ಭಾನುಮತಿಯನ್ನು ನೇರವಾಗಿ ಉಲ್ಲೇಖಿಸಲಾಗಿಲ್ಲ. ಶಲ್ಯ ಪರ್ವದಲ್ಲಿ, ದುರ್ಯೋಧನನು ತನ್ನ ಮನಗ ತಾರಯಿಯಾದ ಭಾನುಮತಿಯ ಬಗ್ಗೆ ವಿಶಾದ ವ್ಯಕ್ತ ಪಡಿಸುತ್ತಾನೆ. ಸ್ತ್ರೀಪರ್ವದಲ್ಲಿ, ಗಾಂಧಾರಿ (ದುರ್ಯೋಧನನ ತಾಯಿ) ತನ್ನ ಸೊಸೆಯನ್ನು ಉಲ್ಲೇಖಿಸುತ್ತಾಳೆ. ಶಾಂತಿ ಪರ್ವದಲ್ಲಿ ನಾರದ ಋಷಿಯು ದುರ್ಯೋಧನ ಮತ್ತು ಕರ್ಣರ ಸ್ನೇಹದ ಬಗ್ಗೆ ಒಂದು ಕಥೆಯನ್ನು ಹೇಳುತ್ತಾನೆ. ಇಲ್ಲಿ, ಕಳಿಂಗ ರಾಜ ಚಿತ್ರಾಂಗದನ ಮಗಳನ್ನು ಸ್ವಯಂವರದಿಂದ ಅಪಹರಿಸಲು ಕರ್ಣ ತನ್ನ ಸ್ನೇಹಿತನಿಗೆ ಸಹಾಯ ಮಾಡುತ್ತಾನೆ. ದುರ್ಯೋಧನನ ಹೆಂಡತಿಯ ಹೆಸರು ಮಹಾಕಾವ್ಯದಲ್ಲಿ ಇಲ್ಲದ ಕಾರಣ, ಅವಳ ಹೆಸರನ್ನು ಜಾನಪದ ಕಥೆಗಳಿಂದ ಒದಗಿಸಲಾಗಿದೆ.

ಮಹಾಭಾರತದಲ್ಲಿ ವಿವರಣೆ

ಮಹಾಭಾರತದ ಸ್ತ್ರೀಪರ್ವದಲ್ಲಿ, ದುರ್ಯೋಧನನ ತಾಯಿ ಗಾಂಧಾರಿಯು ತನ್ನ ಸೊಸೆಯನ್ನು ಕೃಷ್ಣನಿಗೆ ಈ ಕೆಳಗಿನ ರೀತಿಯಲ್ಲಿ ವಿವರಿಸುತ್ತಾಳೆ:

ಇಗೋ, ಮತ್ತೆ, ನನ್ನ ಮಗನ ಮರಣಕ್ಕಿಂತ ಹೆಚ್ಚು ನೋವಿನ ಈ ದೃಶ್ಯ. ಹತರಾದ ವೀರರ ಪಕ್ಕದಲ್ಲಿ ಈ ಮೇಳದ ಹೆಂಗಸರು ಅಳುತ್ತಿರುವ ದೃಶ್ಯ! ಓ ಕೃಷ್ಣಾ, ಲಕ್ಷ್ಮಣನ ತಾಯಿ, ದೊಡ್ಡ ಸೊಂಟದ ಮಹಿಳೆ, ಕಳಂಕಿತವಾದ ತನ್ನ ವಸ್ತ್ರಗಳನ್ನು ಹೊಂದಿರುವ, ದುರ್ಯೋಧನನ ಪ್ರಿಯ ಸಂಗಾತಿಯು, ಚಿನ್ನದ ಯಜ್ಞವೇದಿಕೆಯನ್ನು ಹೋಲುತ್ತಾಳೆ. ನಿಸ್ಸಂದೇಹವಾಗಿ, ಈ ಮಹಾನ್ ಬುದ್ದಿವಂತೆಯು, ತನ್ನ ಬಲಿಷ್ಠ ಶಸ್ತ್ರಸಜ್ಜಿತ ಅಧಿಪತಿಯು ಹಿಂದೆ ಜೀವಂತವಾಗಿದ್ದಾಗ, ತನ್ನ ಸ್ವಾಮಿಯ ಸುಂದರ ತೋಳುಗಳ ಅಪ್ಪುಗೆಯೊಳಗೆ ಆಟವಾಡುತ್ತಿದ್ದಳು! ಯುದ್ಧದಲ್ಲಿ ಕೊಲ್ಲಲ್ಪಟ್ಟ ನನ್ನ ಮಗ ಮತ್ತು ಮೊಮ್ಮಗನನ್ನು ನೋಡಿ ನನ್ನ ಈ ಹೃದಯವು ನೂರು ತುಣುಕುಗಳಾಗಿ ಏಕೆ ಒಡೆಯುವುದಿಲ್ಲ? — ಗಾಂಧಾರಿ, ಕಿಸಾರಿ ಮೋಹನ್ ಗಂಗೂಲಿ ಅವರಿಂದ ಅನುವಾದಿಸಲಾಗಿದೆ.

ಗಾಂಧಾರಿ ಮುಂದುವರೆಯುತ್ತಾಳೆ,

ಅಯ್ಯೋ, ಆ ದೋಷರಹಿತ ಮಹಿಳೆ ಈಗ ತನ್ನ ಮಗನ, ರಕ್ತದಿಂದ ಮುಚ್ಚಿದ ತಲೆಯ ವಾಸನೆಯನ್ನು ಅನುಭವಿಸುತ್ತಾಳೆ. ಈಗ ಮತ್ತೆ ಆ ಚೆಂದದ ತೊಡೆಯ ಹೆಂಗಸು ತನ್ನ ಕೈಯಿಂದ ದುರ್ಯೋಧನನ ದೇಹವನ್ನು ಮೆಲ್ಲನೆ ಉಜ್ಜುತ್ತಿದ್ದಾಳೆ. ಒಮ್ಮೊಮ್ಮೆ ತನ್ನ ಯಜಮಾನನಿಗೋಸ್ಕರವೂ ಮತ್ತು ಕೆಲವೊಮ್ಮೆ ಮಗನಿಗಾಗಿಯೂ ದುಃಖಪಡುತ್ತಾಳೆ. ಒಮ್ಮೊಮ್ಮೆ ತನ್ನ ಯಜಮಾನನ ಕಡೆ ನೋಡುತ್ತಾಳೆ, ಇನ್ನೊಂದು ಸಲ ಮಗನ ಕಡೆ ನೋಡುತ್ತಾಳೆ. ಇಗೋ, ಓ ಮಾಧವ, ತನ್ನ ಕೈಗಳಿಂದ ತನ್ನ ತಲೆಯನ್ನು ಹೊಡೆದು, ಅವಳು ತನ್ನ ವೀರ ಸಂಗಾತಿಯಾದ ಕುರುಗಳ ರಾಜನ ಎದೆಯ ಮೇಲೆ ಬೀಳುತ್ತಾಳೆ. ಕಮಲದ ತಂತುಗಳಂತಹ ಮೈಬಣ್ಣವನ್ನು ಹೊಂದಿರುವ ಅವಳು ಕಮಲದಂತೆ ಇನ್ನೂ ಸುಂದರವಾಗಿ ಕಾಣುತ್ತಾಳೆ. ದುರದೃಷ್ಟಕರ ರಾಜಕುಮಾರಿಯು ಈಗ ತನ್ನ ಮಗನ ಮುಖವನ್ನು ಮತ್ತು ಈಗ ತನ್ನ ಪ್ರಭುವಿನ ಮುಖವನ್ನು ಉಜ್ಜುತ್ತಾಳೆ.

ದುರ್ಯೋಧನನ ಜೊತೆ ಮದುವೆ

ದುರ್ಯೋಧನನ ಮದುವೆ ಮಹಾಭಾರತದ ಶಾಂತಿ ಪರ್ವದಲ್ಲಿ ಕಂಡುಬರುತ್ತದೆ. ಚಿತ್ರಾಂಗದೆಯ ಮಗಳ ಸ್ವಯಂವರದ ಕಥೆಯನ್ನು ಋಷಿಯಾದ ನಾರದನು ವಿವರಿಸುತ್ತಾನೆ. ಪಠ್ಯವು ಎಂದಿಗೂ ರಾಜಕುಮಾರಿಯ ಹೆಸರನ್ನು ಉಲ್ಲೇಖಿಸುವುದಿಲ್ಲ ಆದರೆ ಅವಳು ಸುಂದರಿ ಮತ್ತು ಸುಂದರಿ ಎಂದು ಹೇಳುತ್ತದೆ.

ಕಳಿಂಗದ ರಾಜ ಚಿತ್ರಾಂಗದನ ಮಗಳ ಸ್ವಯಂವರಕ್ಕೆ ದುರ್ಯೋಧನನನ್ನು ಆಹ್ವಾನಿಸಲಾಯಿತು. ದುರ್ಯೋಧನನು ತನ್ನ ಆತ್ಮೀಯ ಸ್ನೇಹಿತ ಕರ್ಣನನ್ನು ಕರೆದುಕೊಂಡು ರಾಜಪುರ ನಗರಕ್ಕೆ ಹೋದನು. ಶಿಶುಪಾಲ, ಜರಾಸಂಧ, ಭೀಷ್ಮಕ, ವಕ್ರ, ಕಪೋತರೋಮನ್, ನೀಲ, ರುಕ್ಮಿ, ಶೃಂಗ, ಅಶೋಕ, ಶತಧನ್ವಾನ್ ಮುಂತಾದ ಅನೇಕ ಪೌರಾಣಿಕ ಆಡಳಿತಗಾರರು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದ ಪ್ರಾರಂಭದ ನಂತರ, ಸುಂದರ ರಾಜಕುಮಾರಿಯು ತನ್ನ ದಾದಿ ಮತ್ತು ಅಂಗರಕ್ಷಕರಿಂದ ಸುತ್ತುವರಿದ ಕೈಯಲ್ಲಿ ಹಾರದೊಂದಿಗೆ ಅಖಾಡವನ್ನು ಪ್ರವೇಶಿಸಿದಳು. ಭಾಗವಹಿಸಿದವರ ಹೆಸರುಗಳು ಮತ್ತು ಅವರ ವಂಶಾವಳಿಯ ಬಗ್ಗೆ ತಿಳಿಸುತ್ತಿದ್ದಂತೆ, ಅವಳು ದುರ್ಯೋಧನನಿಂದ ದೂರ ಹೋದಳು. ದುರ್ಯೋಧನನು ಅವಳ ನಿರಾಕರಣೆಯಿಂದ ಆಘಾತಕ್ಕೊಳಗಾದನು ಮತ್ತು ಅದನ್ನು ಸ್ವೀಕರಿಸಲು ನಿರಾಕರಿಸುತ್ತಾನೆ. ಇದಕ್ಕೆ ಪರವಾಗಿ ತನ್ನ ಗೆಳೆಯನಾದ ಕರ್ಣನನ್ನು ಸೋಲಿಸಲು ಇತರ ದಾಳಿಕೋರರಿಗೆ ಸವಾಲು ಹಾಕುತ್ತಾ ಭಾನುಮತಿಯನ್ನು ತನ್ನ ರಥದ ಮೇಲೆ ಕರೆದೊಯ್ದನು. ಕರ್ಣ ತನ್ನ ಸ್ನೇಹಿತನನ್ನು ರಕ್ಷಿಸಲು ಉಳಿದ ದಾಳಿಕೋರರೊಂದಿಗೆ ಯಶಸ್ವಿಯಾಗಿ ಹೋರಾಡಿದನು. ಕರ್ಣನು ಹಿಂಬಾಲಿಸುವ ರಾಜರನ್ನು ಸುಲಭವಾಗಿ ಸೋಲಿಸಿದನು ಮತ್ತು ಕರ್ಣನ ಹೋರಾಟದ ಪರಾಕ್ರಮವನ್ನು ನೋಡಿದ ನಂತರ ಇತರ ರಾಜ ದಾಳಿಕೋರರು ತಮ್ಮ ಪ್ರಯತ್ನವನ್ನು ಕೈಚೆಲ್ಲಿದರು. ಹಸ್ತಿನಾಪುರವನ್ನು ತಲುಪಿದಾಗ, ದುರ್ಯೋಧನನು ವಿಚಿತ್ರವೀರ್ಯನಿಗಾಗಿ ಕಾಶಿಯ ಮೂವರು ರಾಜಕುಮಾರಿಯರನ್ನು ತನ್ನ ಮುತ್ತಜ್ಜ ಭೀಷ್ಮ ಅಪಹರಿಸಿದ ಉದಾಹರಣೆಯನ್ನು ನೀಡುವ ಮೂಲಕ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡನು. ಕೊನೆಗೆ ಆ ಸುಂದರಿ ಸಮ್ಮತಿಸಿ ದುರ್ಯೋಧನನನ್ನು ಮದುವೆಯಾದಳು.

ದುರ್ಯೋಧನನ ಮರಣದ ನಂತರ ಗಾಂಧಾರಿಯ ಪ್ರಸ್ತಾಪದೊಂದಿಗೆ ಭಾನುಮತಿಯ ಕಥೆ ಕೊನೆಗೊಳ್ಳುತ್ತದೆ. ಮಹಾಭಾರತದಲ್ಲಿ, ಅವಳು ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾದಳು ಎಂದು ಉಲ್ಲೇಖಿಸಲಾಗಿಲ್ಲ.

ಪ್ರಾದೇಶಿಕ ಕಥೆಗಳು ಮತ್ತು ಜಾನಪದ ಕಥೆಗಳು

ಮೂಲ ಮಹಾಭಾರತದಲ್ಲಿ ಭಾನುಮತಿ ಚಿಕ್ಕ ಪಾತ್ರವಾಗಿದ್ದರೂ, ಅವಳು ಅನೇಕ ಪ್ರಾದೇಶಿಕ ಕಥೆಗಳು ಮತ್ತು ಜಾನಪದ ಕಥೆಗಳಲ್ಲಿ ಕಾಣಿಸಿಕೊಳ್ಳುತ್ತಾಳೆ.

ಕರ್ಣನೊಡನೆ ದಾಳದ ಪಂದ್ಯ

ಈ ಕಥೆಯು ತಮಿಳಿನ ಜನಪ್ರಿಯ ಜಾನಪದ ಕಥೆಯಾಗಿದೆ ಮತ್ತು ಮಹಾಭಾರತದಲ್ಲಿ ಇದನ್ನುಉಲ್ಲೇಖಿಸಲಾಗಿಲ್ಲ. ಒಂದು ದಿನ, ದುರ್ಯೋಧನನು ಕರ್ಣನಿಗೆ ಭಾನುಮತಿಯನ್ನು ನೋಡಿಕೊಳ್ಳಲು ಮತ್ತು ಸಂಜೆಯ ಸಮಯದಲ್ಲಿ ಅವಳನ್ನು ಸತ್ಕಾರ ಮಾಡುವಂತೆ ವಿನಂತಿಸಿದನು. ಸಮಯ ಕಳೆಯಲು, ಕರ್ಣ ಮತ್ತು ಭಾನುಮತಿ ದಾಳದ ಆಟವನ್ನು ಆಡಲು ಪ್ರಾರಂಭಿಸಿದರು. ಆಟವು ಶೀಘ್ರದಲ್ಲೇ ಬಹಳ ಆಸಕ್ತಿದಾಯಕವಾಯಿತು. ಅವರಿಬ್ಬರು ಅಟದಲ್ಲಿ ಸಂಪೂರ್ಣವಾಗಿ ಮುಳುಗಿದರು. ಕ್ರಮೇಣ ಕರ್ಣ ಗೆಲ್ಲತೊಡಗಿದ. ಅಷ್ಟರಲ್ಲಿ ದುರ್ಯೋಧನನು ಬೇಗ ಹಿಂದಿರುಗಿ ಕೋಣೆಯನ್ನು ಪ್ರವೇಶಿಸಿದನು. ಪತಿ ಬರುವುದನ್ನು ನೋಡಿದ ಭಾನುಮತಿ ಕೂಡಲೇ ಎದ್ದು ನಿಂತಳು. ಬೆನ್ನಿನ ಬಾಗಿಲಿಗೆ ಮುಖಮಾಡಿದ ಕರ್ಣನು ಇದನ್ನು ಅರಿತುಕೊಳ್ಳದೆ ಅವಳು ಸೋತ ಕಾರಣದಿಂದಾಗಿ ಹೊರಡಲು ಅನುವಾದಳು ಎಂದು ತಪ್ಪಾಗಿ ಅರ್ಥೈಸಿಕೊಂಡನು.

ಗೆಳೆಯನ ಆಗಮನವನ್ನು ಅರಿಯದೆ ಕರ್ಣನು ಭಾನುಮತಿಯ ದುಪ್ಪಟ್ಟ ಹಿಡಿದು ತನ್ನೆಡೆಗೆ ಎಳೆದುಕೊಂಡನು. ಅವನ ಕ್ರಿಯೆಯು ಅವಳ ಮುತ್ತಿನ ಆಭರಣಗಳು ಚದುರಿಹೋಗುವಂತೆ ಮಾಡುತ್ತದೆ. ದುಪ್ಪಟ್ಟಾದ ಜೊತೆಗೆ ಅವಳ ಮುಸುಕು ಕೂಡ ಜಾರಿದ್ದರಿಂದ ಅರೆಬರೆ ಬಟ್ಟೆ ತೊಟ್ಟಂತೆ ಕಾಣುತ್ತಾಳೆ. ಆಗಿನ್ನೂ ಕರ್ಣನಿಗೆ ಅಷ್ಟಾಗಿ ಪರಿಚಯವಿಲ್ಲದ ಭಾನುಮತಿ ತನ್ನ ಗಂಡನ ಪ್ರತಿಕ್ರಿಯೆ ಹೇಗಿರಬಹುದೆಂಬ ಯೋಚನೆಯಲ್ಲಿ ತಬ್ಬಿಬ್ಬಾದಳು.

ಕರ್ಣನು ಭಾನುಮತಿಯ ದಿಗ್ಭ್ರಮೆಗೊಂಡ ದೃಷ್ಟಿಯನ್ನು ಕಂಡು ಹಿಂತಿರುಗಲು ತನ್ನ ಗೆಳೆಯ ದುರ್ಯೋಧನ ಇಬ್ಬರನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವುದರ ಅರಿವಾಯಿತು. ಅವನು ತನ್ನ ಸ್ನೇಹಿತನಿಂದ ಎದುರಿಸಬೇಕಾದ ಕ್ರೋಧ ಮತ್ತು ಅನಿವಾರ್ಯ ಶಿಕ್ಷೆಯನ್ನು ಪರಿಗಣಿಸಿ ಅವಮಾನ, ಮುಜುಗರ ಮತ್ತು ತಪ್ಪಿತಸ್ಥನಾಗಿ ನಿಂತನು. ದುರ್ಯೋಧನನು ತಕ್ಷಣವೇ ತಮ್ಮ ಮೇಲೆ ಅನುಚಿತ ಆರೋಪವನ್ನು ಹೊರಿಸುತ್ತಾನೆ ಎಂದು ಅವನಿಗೆ ಖಚಿತವಾಗಿತ್ತು. ಆದಾಗ್ಯೂ, ಅವರಿಬ್ಬರಿಗೂ ಆಶ್ಚರ್ಯವಾಗುವಂತೆ, ದುರ್ಯೋಧನನು ಕರ್ಣನ ಹಿಂದೆ ನೋಡಿದನು ಮತ್ತು ಅವನ ಹೆಂಡತಿಯನ್ನು ಉದ್ದೇಶಿಸಿ, "ನಾನು ಮಣಿಗಳನ್ನು ಸಂಗ್ರಹಿಸಬೇಕೇ ಅಥವಾ ನಾನು ಅವುಗಳನ್ನು ಪೋಣಿಸಬೇಕೆ?"

ಭಾನುಮತಿ ಮತ್ತು ಕರ್ಣ ಒಬ್ಬರನ್ನೊಬ್ಬರು ಆಘಾತದಿಂದ ನೋಡುತ್ತಿದ್ದರು. ಇಬ್ಬರೂ ದುರ್ಯೋಧನನನ್ನು ತಪ್ಪಾಗಿ ಗ್ರಹಿಸಿದ ರೀತಿಗೆ ನಾಚಿಕೆಪಡುತ್ತಾರೆ. ದುರ್ಯೋಧನನು ತನ್ನ ರಾಣಿಯ ಮೇಲೆ ಅವ್ಯಕ್ತವಾದ ನಂಬಿಕೆ ಮತ್ತು ಅಪಾರ ಪ್ರೀತಿಯನ್ನು ಹೊಂದಿದ್ದನು ಮತ್ತು ಅವನ ಸ್ನೇಹಿತ ಕರ್ಣನಲ್ಲಿ ಅವನ ನಂಬಿಕೆಯು ಇನ್ನೂ ಹೆಚ್ಚಿನದಾಗಿತ್ತು. ದುರ್ಯೋಧನನು ತನ್ನ ಸಹೋದರನೆಂದು ಪರಿಗಣಿಸಿದ ವ್ಯಕ್ತಿಯು ತನಗೆ ದ್ರೋಹ ಮಾಡುತ್ತಾನೆ ಎಂದು ಒಂದು ಕ್ಷಣವೂ ಅನುಮಾನಿಸಲಿಲ್ಲ ಮತ್ತು ಮೌನವಾಗಿ ಮುತ್ತುಗಳನ್ನು ವಿಶ್ವಾಸದಿಂದ ಎತ್ತಿಕೊಂಡನು. ಈ ಕಥೆಯು ವ್ಯಾಸ ಮಹಾಭಾರತದಲ್ಲಿಲ್ಲ, ಆದರೆ ಕರ್ಣ ಮತ್ತು ದುರ್ಯೋಧನರ ನಿಜವಾದ ಸ್ನೇಹವನ್ನು ಚರ್ಚಿಸುವಾಗ ಇದನ್ನು ಸಾಮಾನ್ಯವಾಗಿ ಹೇಳಲಾಗುತ್ತದೆ.

ಸುಪ್ರಿಯಾಳ ಮದುವೆ

ನಂತರದ ಕಥೆಗಳಲ್ಲಿ, ಭಾನುಮತಿಗೆ ಸುಪ್ರಿಯಾ ಎಂಬ ಸೇವಕಿ ಇದ್ದಳು. ಅವಳು ಭಾನುಮತಿಗೆ ತುಂಬಾ ಹತ್ತಿರವಾಗಿದ್ದಳು. ಕಥೆಯ ಪ್ರಕಾರ, ದುರ್ಯೋಧನ ಮತ್ತು ಕರ್ಣ ಭಾನುಮತಿಯನ್ನು ಅಪಹರಿಸಿದಾಗ, ಸುಪ್ರಿಯ ಕೂಡ ಅವರನ್ನು ಹಿಂಬಾಲಿಸಿದಳು. ನಂತರ, ಭಾನುಮತಿ ದುರ್ಯೋಧನನನ್ನು ತನ್ನ ಸಂಗಾತಿಯಾಗಿ ಸ್ವೀಕರಿಸಿದಾಗ, ಸುಪ್ರಿಯಾ ಕರ್ಣನನ್ನು ತನ್ನ ಪತಿಯಾಗಿ ಆರಿಸಿಕೊಂಡಳು.

ಇಂಡೋನೇಷಿಯಾದಲ್ಲಿ ಶಲ್ಯನ ಮಗಳು

ಇಂಡೋನೇಷ್ಯಾದ ಒಂದು ಜಾನಪದ ಕಥೆಯ ಪ್ರಕಾರ, ಭಾನುಮತಿಯು ಶಲ್ಯನ ಮಗಳು. ಕಥೆಯ ಪ್ರಕಾರ ಭಾನುಮತಿಯು ಅರ್ಜುನನನ್ನು ಮದುವೆಯಾಗಲು ಬಯಸಿದ್ದಳು ಆದರೆ ಅವಳು ತನ್ನ ತಂದೆಯ ಆಸೆಯಂತೆ ದುರ್ಯೋಧನನನ್ನು ಮದುವೆಯಾದಳು. ದುರ್ಯೋಧನನು ಅವನ ಅಳಿಯನಾಗಿದ್ದರಿಂದ, ಶಲ್ಯನು ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಪಕ್ಷವನ್ನು ಬೆಂಬಲಿಸಿದನು.

ಜನಪ್ರಿಯ ಸಂಸ್ಕೃತಿಯಲ್ಲಿ

  • ೧೮೫೭ ರಲ್ಲಿ, ಆಗ ೧೬ ವರ್ಷ ವಯಸ್ಸಿನ ಕಾಳಿಪ್ರಸನ್ನ ಸಿಂಹ ಅವರು ಬಂಗಾಳದ ಪ್ರದರ್ಶನದಲ್ಲಿ ಭಾನುಮತಿಯ ಪಾತ್ರವನ್ನು ನಿರ್ವಹಿಸಿದರು.
  • ಸೂರ್ಯಪುತ್ರ ಕರ್ಣ್ ದೂರದರ್ಶನ ಸರಣಿಯಲ್ಲಿ ಶುಭಿ ಅಹುಜಾರಿಂದ ಚಿತ್ರಿಸಲಾಗಿದೆ
  • ೨೦೧೮ ರ ದೂರದರ್ಶನ ಸರಣಿಯ ಕರ್ಣ್ ಸಾಂಗಿನಿಯಲ್ಲಿ ರವನೀತ್ ಕೌರ್ ಅವರಿಂದ ಚಿತ್ರಿಸಲಾಗಿದೆ

ಉಲ್ಲೇಖಗಳು

Tags:

ಮಹಾಭಾರತ ಭಾನುಮತಿ ಮಹಾಭಾರತದಲ್ಲಿ ವಿವರಣೆಮಹಾಭಾರತ ಭಾನುಮತಿ ದುರ್ಯೋಧನನ ಜೊತೆ ಮದುವೆಮಹಾಭಾರತ ಭಾನುಮತಿ ಪ್ರಾದೇಶಿಕ ಕಥೆಗಳು ಮತ್ತು ಜಾನಪದ ಕಥೆಗಳುಮಹಾಭಾರತ ಭಾನುಮತಿ ಜನಪ್ರಿಯ ಸಂಸ್ಕೃತಿಯಲ್ಲಿಮಹಾಭಾರತ ಭಾನುಮತಿ ಉಲ್ಲೇಖಗಳುಮಹಾಭಾರತ ಭಾನುಮತಿ

🔥 Trending searches on Wiki ಕನ್ನಡ:

ಗರ್ಭಧಾರಣೆಕಲ್ಯಾಣ್ಕೆ.ವಿ.ಸುಬ್ಬಣ್ಣಆತ್ಮಚರಿತ್ರೆಪ್ರಬಂಧಕರಾವಳಿ ಚರಿತ್ರೆಕ್ರೀಡೆಗಳುನೇಮಿಚಂದ್ರ (ಲೇಖಕಿ)ರತ್ನಾಕರ ವರ್ಣಿಭಾರತದಲ್ಲಿ ತುರ್ತು ಪರಿಸ್ಥಿತಿಪ್ರೇಮಾಕನ್ನಡ ವಿಶ್ವವಿದ್ಯಾಲಯಕನ್ನಡ ಗುಣಿತಾಕ್ಷರಗಳುತ್ರಿಪದಿಧರ್ಮಸ್ಥಳವಿರಾಮ ಚಿಹ್ನೆಪಿತ್ತಕೋಶಕಣ್ಣುಹೊಯ್ಸಳವಡ್ಡಾರಾಧನೆಕುಟುಂಬಇಂಕಾವಿಜಯಪುರಜೋಳಪರಮ ವೀರ ಚಕ್ರಉತ್ತರ (ಮಹಾಭಾರತ)ಉಮಾಶ್ರೀನೆಲ್ಸನ್ ಮಂಡೇಲಾಖಾಸಗೀಕರಣಭಾರತದ ರಾಷ್ಟ್ರೀಯ ಚಿನ್ಹೆಗಳುಕರಪತ್ರಶಿವಕುಮಾರ ಸ್ವಾಮಿಸಂಸ್ಕೃತವಾಣಿಜ್ಯ ಪತ್ರಭಾರತೀಯ ಮೂಲಭೂತ ಹಕ್ಕುಗಳುಭಾರತದ ಮುಖ್ಯ ನ್ಯಾಯಾಧೀಶರುಮಹಾವೀರಮಯೂರವರ್ಮಒನಕೆ ಓಬವ್ವತತ್ಪುರುಷ ಸಮಾಸಓಂ (ಚಲನಚಿತ್ರ)ಕರ್ನಾಟಕದ ಮುಖ್ಯಮಂತ್ರಿಗಳುಪಶ್ಚಿಮ ಘಟ್ಟಗಳುಮಹಾತ್ಮ ಗಾಂಧಿಭಾರತದಲ್ಲಿ ಬಡತನಕರ್ನಾಟಕದ ಅಣೆಕಟ್ಟುಗಳುಸಿದ್ಧಯ್ಯ ಪುರಾಣಿಕಚಂದ್ರಮಡಿವಾಳ ಮಾಚಿದೇವಬುದ್ಧಭಾರತದಲ್ಲಿ ಬ್ರಿಟಿಷ್ ಆಳ್ವಿಕೆಆಂಗ್‌ಕರ್ ವಾಟ್ವೀರಪ್ಪ ಮೊಯ್ಲಿಮನೋಜ್ ನೈಟ್ ಶ್ಯಾಮಲನ್ಹೆಣ್ಣು ಬ್ರೂಣ ಹತ್ಯೆಸಂಜು ವೆಡ್ಸ್ ಗೀತಾ (ಚಲನಚಿತ್ರ)ಶಿವಭಾರತೀಯ ವಿಜ್ಞಾನ ಸಂಸ್ಥೆವಿಷ್ಣುಕನ್ನಡ ಸಂಧಿಲಿಂಗ ವಿವಕ್ಷೆಭಾರತೀಯ ಸಶಸ್ತ್ರ ಪಡೆಕಾರ್ಖಾನೆ ವ್ಯವಸ್ಥೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಸುದೀಪ್ಕವಿಗಳ ಕಾವ್ಯನಾಮಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕನ್ನಡ ಅಕ್ಷರಮಾಲೆಗೋಪಾಲಕೃಷ್ಣ ಅಡಿಗಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಫ್ರೆಂಚ್ ಕ್ರಾಂತಿನಾಗಚಂದ್ರಮಕ್ಕಳ ದಿನಾಚರಣೆ (ಭಾರತ)ಅವ್ಯಯಸಾವಿತ್ರಿಬಾಯಿ ಫುಲೆಬಂಡವಾಳಶಾಹಿಮೈಸೂರು ರಾಜ್ಯಸಿದ್ದಲಿಂಗಯ್ಯ (ಕವಿ)🡆 More